Tuesday, April 22, 2014

                                                                                                raveeshpiksp@gmail.com        
raveeshpiksp@gmail.com 


    ಏಪ್ರಿಲ್  ೨೪  ಅಣ್ಣಾವ್ರ  ಜನ್ಮ  ದಿನ ,   ಅವರು  ಚಿರಾಯುವಾಗಲಿ
ಡಾ . ರಾಜ್ ಕುಮಾರ್ - ಭಾರತ ದೇಶದಲ್ಲಿಯೇ ಚಲನ ಚಿತ್ರ ನಟನೆಗೆ ಡಾಕ್ಟರೇಟ್ ಪದವಿ ಪಡೆದವರಲ್ಲಿ ( ಮೈಸೂರು ವಿಶ್ವವಿದ್ಯಾನಿಲಯದಿಂದ ) ಮೊದಲಿಗರು   . ಡಾ . ರಾಜ್ ಕುಮಾರ್ - ಅಮೇರಿಕಾ ದೇಶದಿಂದ ಕೊಡಲ್ಪಡುವ ಉನ್ನತ ಪ್ರಶಸ್ತಿ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ರಷ್ಯಾ ಮತ್ತು ಬ್ರಿಟನ್ ಪ್ರಧಾನಮಂತ್ರಿಗಳಿಗೆ ಹೊರತಪಡಿಸಿ ನಟನೆಗೆ ಪಡೆದವರಲ್ಲಿ ಜಗತ್ತಿನಲ್ಲೇ ಇವರೊಬ್ಬರು   . ಡಾ . ರಾಜ ಕುಮಾರ್ - ದೇಶದಲ್ಲಿ ಒಂದೇ ಭಾಷೆಯಲ್ಲಿ ಸುಮಾರು   ೫೦ ವರ್ಷಗಳ ಕಾಲ ನಟನೆ ಮಾಡಿದ ಅದ್ಬುತವಾದ ವ್ಯಕ್ತಿತ್ವ  . ಡಾ . ರಾಜ್ ಕುಮಾರ್ - ಬದುಕಿದ್ದಾಗಲೇ ರಾಜ್ಯದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಏಕೈಕ ಕಲಾವಿದ    . ಡಾ . ರಾಜ ಕುಮಾರ್ - ರಾಜ್ಯದಲ್ಲಿ ಸುಮಾರು ೫೦೦೦ ಅಭಿಮಾನಿ ಸಂಘ ಹೊಂದೊದ್ದ ಅದ್ಬತವಾದ ನಾಯಕ ನಟ  . ಡಾ . ರಾಜ್ ಕುಮಾರ್ - ನಟನೆ ಮತ್ತು ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ದೇಶದಲ್ಲಿಯೇ ಏಕೈಕ ವ್ಯಕ್ತಿ  . ಡಾ . ರಾಜ್ ಕುಮಾರ್ - ಪ್ರಥಮ ಚಿತ್ರದಲ್ಲಿಯೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ  . ಡಾ . ರಾಜ್ ಕುಮಾರ್   - ಕನ್ನಡ ಚಿತ್ರ ರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಏಕೈಕ ತಾರೆ  . ಡಾ . ರಾಜ ಕುಮಾರ್ - ಹತ್ತಕ್ಕೂ ಹೆಚ್ಚು ಬಿರುದಾವಳಿಯನ್ನು ಪಡೆದಿರಿವ ಭಾರತ ದೇಶದ ಏಕೈಕ ನಟ ( ರಸಿಕರರಾಜ , ಗಾನಗಂಧರ್ವ , ಕನ್ನಡ ಕಣ್ಮಣಿ , ವರಪುತ್ರ , ವರನಟ , ಪದ್ಮಭೂಷಣ , ನಟಸಾರ್ವಬೌಮ , ಕೆಂಟುಕಿ ಕರ್ನಲ್ , ಡಾಕ್ಟರೇಟ್ ಮುಂತಾದವುಗಳು ) ೧೦ . ಡಾ . ರಾಜ ಕುಮಾರ್ - ಕನ್ನಡದಲ್ಲಿ ಪದ್ಮಭೂಷಣ ಪ್ರಶ್ತಿ ಪಡೆದ ಕನ್ನಡ ತಾಯಿಯ ಹೆಮ್ಮೆಯ ಪುತ್ರ  ೧೧ . ಡಾ . ರಾಜಕುಮಾರ್ - ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ರಾಜ್ಯ ಪ್ರಶಸ್ತಿ , ೧೦ ಫಿಲ್ಮ ಫೇರ್ ಅವಾರ್ಡ , ಹಾಡುಗಾರಿಕೆಗೆ ಪ್ರಶಸ್ತಿ ಪಡೆದ ಏಕೈಕ ನಟ  ೧೨ . ಒಂದೇ ವರ್ಷದಲ್ಲಿ ೧೪ ಚಲನಚಿತ್ರಗಳಿಗೆ ನಾಯಕ ನಟನಾದ ಏಕೈಕ ನಟ  ೧೩ . ಡಾ . ರಾಜ್ - ಆಂದ್ರದಿಂದ ನೀಡುವ NTR award ಪಡೆದ ಇತರೆ ಭಾಷೆಯ ಪ್ರಥಮ ನಟ  ೧೪ . ಡಾ . ರಾಜಕುಮಾರ್ - ಕನ್ನಡ ಚಲನಚಿತ್ರರಂಗದ ಹಿತಿಹಾಸದಲ್ಲಿ ಸುದೀರ್ಘವಾಗಿ ಓಡಿದ ಬಂಗಾರದಮನುಷ್ಯ ಚಿತ್ರದ ನಾಯಕ ನಟ  ೧೫ . ಡಾ . ರಾಜಕುಮಾರ್ - ಇವರ ಚಿತ್ರಗಳ ಸಕ್ಸಸ್ ರೇಟ್ ೯೫ , ಇದು ದೇಶದಲ್ಲಿಯೇ ಪ್ರಥಮ  ೧೬ . ಅಭಿಮಾನಿಗಲಿಂದ ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಸಿಕೊಳ್ಳುವ ಏಕೈಕ ನಟರು 


raveeshpiksp@gmail.com 

ತುಮಕೂರು ಜಿಲ್ಲೆಯ ಒಂದು ಶಾಪಗ್ರಸ್ತ ತಾಲ್ಲೂಕು ಕೇಂದ್ರ ಎಂದರೆ ಅದು ಚಿಕ್ಕನಾಯಕನ ಹಳ್ಳಿ ಎಂದು ಹೇಳಿದರೂ ಅದು ಅತಿಶಯೋಕ್ತಿಯೇನಲ್ಲ, ಕಾರಣ ನನ್ನ ಊರು ಹೆಸರಿಗೆ ತಾಲ್ಲೂಕು ಕೇಂದ್ರವಾದರೂ ಯಾವುದೇ ಸವಲತ್ತು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕು ಕೇಂದ್ರ. ಬೀದರ್ -ಶ್ರೀರಂಗಪಟ್ಟಣ ರಾಹೆ ಹಾದುಹೋಗಿದ್ದರೂ, ಯಾವುದೇ ರೀತಿಯಲ್ಲಿಯೂ ಏಳಿಗೆಯನ್ನು ಕಾಣಲಾರದ ಪರಿಸ್ಥಿತಿಯಲ್ಲಿ ಇದೆ ನನ್ನ ಊರು, ಮುಖ್ಯವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಮೂಲ ಸೌಕರ್ಯಗಳಂತೂ ಮರಿಚಿಕೆಯೇ ಸರಿ, ಚಿ ನಾ ಹಳ್ಳಿಯಲ್ಲಿ ಹಳೆಯ ಬಸ್ ನಿಲ್ದಾಣದಿಂದ ನೆಹರೂ ವೃತ್ತದ ವರೆಗೆ ಇರುವ ನಾಲ್ಕು ವ್ಯಾಪಾರ ನಡೆಸುವ ಮಂದಿಯಿಂದ ಊರು ಕಾಣುತ್ತದೆಯೇ ಹೋರತು ಮತ್ತೇನನ್ನು ಕಾಣದ ಅಸಹಜ ವ್ಯವಸ್ಸೆಗೆ ಊರು ಮೂಕ ಸಾಕ್ಷಿಯಾಗಿದೆ, ಚಿಕ್ಕನಾಯಕನ ಹಳ್ಳಿಯ ಇಂದಿನ ಪರಿಸ್ಥಿತಿಯ ಬಗ್ಗೆ ಕೆಳಗಿನಂತೆ ಕೆಲವು ನ್ಯೂನ್ಯತೆಗಳನ್ನು ನೋಡಬಹುದು . ಕೆ ಎಸ್ ಆರ್ ಟಿ ಸಿ ನಿಲ್38;ಾಣವಿದೆ ಆದರೆ ಬಸ್ಸುಗಳು ಅಲ್ಲಿ ಹೋಗಲ್ಲ . ಸರ್ಕಾರಿ ಆಸ್ಪತ್ರೆ ಇದೆ ಚಿಕಿತ್ಸೆಗೆ ಜನರು ಹೋಗಲ್ಲ, ಕಾರಣ ವೈದ್ಯರಿಲ್ಲ . ಕ್ರೀಡಾಂಗಣವಿದೆ ಆದರೆ ಅಲ್ಲಿ ಆಟ ಆಡಲು ಬಿಡಲ್ಲ .ವಾಯುವಿಹಾರಕ್ಕೆ ಉದ್ಯಾನವನವೇ ಇಲ್ಲ . ತಾಲ್ಲೂಕು ಕೇಂದ್ರವಾದರೂ ಯು ಜಿ ಡಿ ವ್ಯವಸ್ಥೆ ಇಲ್ಲ, ಈಗಲೂ ಊರಿನಲ್ಲಿ ಕೆಲವು ಅನಿಷ್ಠ ಪದ್ದತಿಗಳ ಮುಂದುವರಿಕೆ . ಕೊಳಾಯಿಗಳಿವೆ ೧೫ ದಿನಕ್ಕೋಮ್ಮೆಯೂ ನೀರು ಬರೊಲ್ಲ . ರಸ್ತೆಗಳಿವೆ ಆದರೆ ಡಾಮರಿಕರಣ ಕಂಡಿಲ್ಲ . ಪೋಲೀಸ್ ಠಾಣೆ ಇದೆ, ಆದರೆ ಪ್ರಕರಣ ದಾಖಲಿಸಲ್ಲ . ಪುರಸಭೆ ಇದೆ ಆದರೆ ಒತ್ತುವರಿ ತಗೆಸೊಲ್ಲ ೧೦. ಸರ್ಕಾರಿ ಕಾಲೇಜು ಇದೆ, ಆದರೆ ಬೋದಕರು ಮತ್ತು ವಿದ್ಯಾರ್ಥಿಗಳೇ ಇಲ್ಲ ೧೧. ಉತ್ತಮ ಪ್ರಾಕೃತಿಕ ಪ್ರವಾಸಿ ತಾಣಗಳಿವೆ ಆದರೆ ಅಭಿವೃದ್ದಿ ಇಲ್ಲ ೧೨. ಓದುವ ಮಕ್ಕಳಿದ್ದಾರೆ ಆದರೆ ಐಟಿಐ, ಟಿಸಿಎಚ್, ಬಿಎಡ್ ಗಳಿಲ್ಲ ೧೩. ಅತ್ಯಂತ ಹೆಚ್ಚು ಕೊಬರಿ ಬೆಳೆಯುವ ನಾಡು ಆದರೆ ಮಾರುಕಟ್ಟೆ ಇಲ್ಲ (ನಮ್ಮ ರಾಜಕಾರಣಿಗಲ ಔದಾರ್ಯದಿಂದ ;ುಳಿಯಾರಿಗೆ ವರ್ಗಾವಣೆಯಾಯಿತು) ೧೪.ಶಿಕ್ಷಣದ ಬಗ್ಗೆ ಅಹವಾಲು ಸ್ವೀಕರಿಸಲು ಅಧಿಕಾರಿಗಳಿಲ್ಲ (ನಮ್ಮ ರಾಜಕಾರಣಿಗಳ ಔದಾರ್ಯದಿಂದ ಮಧುಗಿರಿಗೆ ಸ್ಥಳಾಂತರವಾಯಿತು) ೧೫.ಖಾಸಗೀ ಬಸ್ ನಿಲ್ದಾಣದಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ. ೧೬. ಜನರು ಕೂಲಿಗಾಗಿ ಬೆಂಗಳೂರು, ತುಮಕೂರು ಕಡೆ ಹೋಗುತ್ತಾರೆ ಆದರೆ ಊರಿಗೆ ಒಂದು ಉದ್ಯಮ ತರುವ ತಾಕತ್ತು ನಮ್ಮಲಿಲ್ಲ ೧೭. ಕೆ ಎಸ್ ಆರ್ ಟಿ ಸಿ ಡಿಪೋವನ್ನು ಚಿಕ್ಕನಾಯಕನ ಹಳ್ಳಿಗೆ ನೀಡಿದರೂ ನಮ್ಮ ರಾಜಕಾರಣಿಗಳ ಔದಾರ್ಯದಿಂದ ಅದು ಹಿಂದೆ ತುರುವೇಕೆರೆಗೂ, ತಿಪಟೂರಿಗೂ, ಈಗ ಹುಳಿಯಾರಿಗೂ ಸ್ಥಳಾಂತರವಾಗಿದೆ( ಇದು ಮಾಹಿತಿ) ಹೀಗೆ ಪಟ್ಟಿ ಮಾಡುತಾತಾ ಹೋದಲ್ಲಿ ಅದು ಹನುಮಂತನ ಬಾಲ ಬೆಳೆದ ಹಾಗೆ ಬೆಳೆಯುತ್ತಲೇ ಹೋಗುತ್ತವೆ, ನಮ್ಮ ಜನಪ್ರತಿನಿಧಿಗಳಿಗೆ ರೀತಿಯ ಅವ್ಯವಸ್ಥೆ ಕಣ್ಣಿಗೆ ರಾಚುವ ರೀತಿಯಲ್ಲಿ ಇದ್ದರೂ ತಾವು ಮೌನದಿಂದ ಕೇವಲ ನಗುಮುಖದಿಂದ ಮಾತನಾಡಿಸುವುದೇ ಊರಿನ ಅಭಿವೃದ್ದಿ ಎಂದುಕೊಂಡಿರುವುದು, ;ಮ್ಮ ಪಿರಪಿತ್ೃಗಳಿಗೆ ಇಲ್ಲದ ಇಚ್ಚಾಶಕ್ತಿ, ಇಷ್ಟಾದರೂ ನಮಗೇಕೆ ಬೇಕು ಎನ್ನು ನನ್ನೂರಿನ ಸತ್ ಪ್ರಜೆಗಳು, ಅಬ್ಬಾ ಚಿಕ್ಕನಾಯಕನಹಳ್ಳಿ ನಿನಗೆ ಜೈ, ಜೈ, ಜೈ


Monday, April 21, 2014


ಎ.ಟಿ.ಎಂ.ನಲ್ಲೇ ಬಿಟ್ಟು ಹೋಗಿದ್ದ ಹಣವನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ತಲುಪಿಸಿ ಪ್ರಮಾಣಿಕತೆ ಮೆರೆದ ಹೇಮಂತ್ಕುಮಾರ್
ಚಿಕ್ಕನಾಯಕನಹಳ್ಳಿ,ಏ.21: ಬ್ಯಾಂಕ್ ಡಿಸ್ಪೆಂನ್ಸರ್(ಹಣ ನೀಡುವ ಯಂತ್ರ)ನಲ್ಲಿ ಎಟಿಎಂ ಮೂಲಕ ಹಣ ಪಡೆಯಲು ಹೋಗಿದ್ದ ವ್ಯಕ್ತಿಗೆ ಹಣ ದಕ್ಕದೆ ನಂತರ ಬಂದ ವ್ಯಕ್ತಿಗೆ ಹಣ ಸಿಕ್ಕಿತ್ತು.ಹಣ ಪಡೆದ ವ್ಯಕ್ತಿ ಬ್ಯಾಂಕ್ ವ್ಯವಸ್ಥಾಪಕ ಎಚ್.ಡಿ.ಶಂಕರ್ಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
  ಕಂಪ್ಯೂಟರ್ ಇಂಟರ್ನೆಟ್ ಮುಂತಾದ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಗ್ರಾಹಕರಿಗೆ ಡಿಸ್ಪೆಂಸರ್ ಲೋಪದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ರಿತಿಯಲ್ಲಿ ಎಟಿಎಂ ಯಂತ್ರ ತಂದಿರುವ ಅವಾಂತರ ಇದು.
  ಏ.16ರಂದು ಬೆಳಗ್ಗೆ 7.10ರ ಸಮಯದಲ್ಲಿ ಹಣಕಾಸಿನ ಅಗತ್ಯತೆ ಮೇರೆಗೆ ಎಟಿಎಂ ಖಾತೆದಾರ ಶೆಟ್ಟಿಕೆರೆ ಗೇಟ್ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆವರಣದಲ್ಲಿರುವ ಎಟಿಎಂಗೆ ಬಂದ ವ್ಯಕ್ತಿಗಳು ಹಣ ತೆಗೆಯಲು ಸಿಕ್ರೇಡ್ ಕೋಡ್ ನಮೂದಿಸಿ ಹಣ ಪಡೆಯಲು ಮುಂದಾಗಿದ್ದಾರೆ.ಆದರೆ ತಾಂತ್ರಿಕ ದೋಷದಿಂದಾಗಿ ಹಣ ಬಾರದೆ ಇದ್ದ ಕಾರಣ ಪಕ್ಕದಲ್ಲೇ ಇದ್ದ  ಇನ್ನೊಂದು ಡಿಸ್ಪೆಂನ್ಸರ್ ನಿಂದ ಹಣ ತೆಗೆದುಕೊಂಡು ಹೋಗಿದ್ದಾರೆ.ಕೈಕೊಟ್ಟ ಡಿಸ್ಪೆಂನ್ಸರ್ ಯಂತ್ರ ನಂತರ ರೂ.7600 ಹಣ ಹಾಚೆ ಹಾಕಿದೆ.
  ಇದೇ ಸಮಯದಲ್ಲಿ ಸರಿಯಾಗಿ.ಹೇಮಂತ್ಕುಮಾರ್ ಎಂಬುವರು ಹಣ ತೆಗೆಯಲು ಎಟಿಎಂ ಒಳಗೆ ಪ್ರವೇಶಿಸಿದ ಸಂದರ್ಭದಲ್ಲಿ ಸದರಿ ಹಣವನ್ನು ಕಂಡು ಹಣವನ್ನು ತೆಗೆದುಕೊಂಡು ಬ್ಯಾಂಕ್ ಮೇನೇಜರ್ ಕಾಣಲು ಹೋಗಿದ್ದರು ಆದರೆ ವ್ಯವಸ್ಥಾಪಕರು ಇಲ್ಲದ ಕಾರಣ ಹಣವನ್ನು ತಾವೇ ಇಟ್ಟುಕೊಂಡು ಸೋಮವಾರ ವ್ಯವಸ್ಥಾಪಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
 ಈ ಸಂಬಂಧ ಎಸ್.ಬಿ.ಎಂ. ವ್ಯವಸ್ಥಾಪಕ ಎಚ್.ಡಿ.ಶಂಕರ್ ವಿಚಾರನೆ ನಡೆಸಿದ್ದಾರೆ, ನಂತರದಲ್ಲಿ  ಮಾತನಾಡಿದ ವ್ಯವಸ್ಥಾಪಕ ಎಚ್.ಡಿ.ಶಂಕರ್,   ವಿವಿಧ ಬ್ಯಾಂಕ್ಗಳ ಎಟಿಎಂ ಕಾಡರ್್ ಬಳಸುವ ಸಂದರ್ಭದಲ್ಲಿ  ಬ್ಯಾಟರಿ ಬ್ಯಾಕಪ್ ನಿಂದ ಹಣ ತಡವಾಗಿ ಬರುವ ಸಾಧ್ಯತೆ ಇದ್ದು ಗ್ರಾಹಕರು ಆತುರಪಡದೆ ಕಾಯಬೇಕು ಎಂದರು. ಹಣದ ವ್ಯತ್ಯಯಕ್ಕೆ ಕಾಡರ್್ದಾರರೇ ಕಾರಣರಾಗುತ್ತಾರೆ. ಒಂದು ವೇಳೆ ಗ್ರಾಹಕರು ದೂರುನೀಡಿದರೆ ಪತ್ತೆಹಚ್ಚಲು ಪ್ರಯತ್ನಿಸಲಾಗುವುದು. ಈ ಹಣವನ್ನು ಸೆಂಟ್ರೀ ಡೆಪಾಸಿಟ್ ಅಕೌಂಟ್ನಲ್ಲಿ ಹಿಡಲಾಗುವುದು. ಬಾಂಬೆಯಲ್ಲಿ ಇರುವ ಸ್ವಿಥ್ ಸೆಂಟರ್ ಮಾಹಿತಿ ಪಡೆದು ಹಣವನ್ನು ಗ್ರಾಹಕರಿಗೆ ಹಿಂತಿರುಗಿಸಲಾಗುವುದು ಎಂದರು. ಎಟಿಎಂನಿಂದ ಹಣ ಪಡೆಯುವ ಗ್ರಾಹಕರು ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದರು.
  


ಚಿಕ್ಕನಾಯಕನಹಳ್ಳಿ,ಏ.21 : ಭೂ ಹೊದಿಕೆ ಮತ್ತು ಬಳಕೆಯ ಸಾಂಪ್ರದಾಯಿಕ ಜ್ಞಾನವನ್ನು ಹಾಳು ಮಾಡಿಕೊಂಡಿರುವುದರಿಂದ ಜಲಕ್ಷಾಮ ಆವರಿಸಿದೆ.ಬಯಲು ನಾಡಿನಲ್ಲಿ ಬೀಳುತ್ತಿರುವ ಶೇ.35ರಷ್ಟು ಮಳೆನೀರು ಮಾತ್ರ ಕೃಷಿಗೆ ಬಳಕೆಯಾಗುತ್ತಿದೆ.ಉಳಿದ ಶೇ.65ಭಾಗ ಪೋಲಾಗುತ್ತಿದೆ ಎಂದು ಪರಿಸರವಾದಿ ಪ್ರೊ.ಸಿ.ಯತಿರಾಜ್ ಆತಂಕ ವ್ಯಕ್ತಪಡಿಸಿದರು.

  
  ತಾಲ್ಲೂಕಿನ ಕಂದಿಕೆರೆ ಹೋಬಳಿ ಕಣಿವೆ ಕ್ರಾಸ್ ಬಳಿ ರಮೇಶ್ ತೊಟದಲ್ಲಿ ಸೃಜನ ಹಾಗೂ ತಾಲ್ಲೂಕು ವಿಜ್ಞಾನ ಕೇಂದ್ರ ಸಂಯುಕ್ತವಾಗಿ ಆಯೋಜಿಸಿರುದ್ದ ಸಿರಿಧಾನ್ಯಬೆಳೆ ಮಹತ್ವ ಕುರಿತಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಇದನ್ನು ಸರಿಯಾಗಿ ಬಳಸಿಕೊಳ್ಳಲು ಮುಚ್ಚಿಗೆ ಹೊದಿಕೆ ಮತ್ತು ಸರಿ ಹೊಂದುವ ಬೆಳೆ ವಿನ್ಯಾಸ ಅಳವಡಿಸಿಕೊಳ್ಳುವುದೊಂದೆ ಸರಿಯಾದ  ದಾರಿ ಎಂದರು.
ಅಂತರ್ಜಲದ ಅಪವ್ಯಯದಿಂದ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿ,ತಾಲ್ಲೂಕು ತಾಲ್ಲೂಕುಗಳಲ್ಲಿ ಜಲಸಂಘರ್ಷ ಶುರುವಾಗಲಿ,ಬಯಲು ನಡಿಗೆ ಒಗ್ಗುವ ಸರಿಯಾದ ಬೆಳೆ ವಿನ್ಯಾಸ ನೀರು ನಿರ್ವಹಣೆ ಕ್ರಮವನ್ನು ಅನುಸರಿದರೆ ಬೀಳುವ ಮಳೆಯಲ್ಲಿ ಸಮೃದ್ಧಿ ಕಾಣಬಹುದು ಎಂದರು.
ಇಂದಿನ ಕೃಷಿ ಅಧೊಗತಿಗೆ ಕೃಷಿ ವಿಜ್ಞಾನಿಗಳು ಹಾಗೂ ಇಲಾಖೆಗಳು ಕಾರಣ.ಇಲಾಖೆಯ ಸಲಹೆಯಂತೆ ರೈತರು ಅಡಿಕೆ ಮತ್ತು ತೆಂಗು ಬೆಳೆಗಳನ್ನು ಹಾಕಿದ್ದಾರೆ.ತೊಟ ಉಳಿಸಿಕೊಳ್ಳಲು ಅಂತರ್ಜಲದ ವಿಪರೀತ ಬಳಕೆಗೆ ತೊಡಗಿದ್ದಾರೆ.ರಾಜಕಾರಣಿಗಳು ಶಾಶ್ವತ ನೀರಾವರಿ ಅಂಥ ಸಮುದ್ರಕ್ಕೆ ಹೋಗುವ ನೀರನ್ನು ಬಯಲುನಾಡಿಗೆ ಹರಿಸುತ್ತೇವೆ ಅನ್ನುತ್ತಾರೆ. ಅವು ನೀರಿನ ದಾಹ ಮತ್ತು ಸಂಘರ್ಷ ಹೆಚ್ಚಿಸುತ್ತವೆ. ಆದರೆ ನಮಗೆ ನಿರಾವರಿ ಯೋಜನೆಗಳು ಬೇಡ ಬದಲಿಗೆ ಬಿದ್ದ ಮಳೆನೀರನ್ನು ಭೂಮಿಗೆ ಇಂಗಿಸಿ ಭವಿಷ್ಯದ ನೀರಿನ ನಿಧಿ ಭದ್ರಪಡಿಸಿಕೊಳ್ಳುವ ಯೋಜನೆಗಳು ಬೇಕು ಎಂದು ಅಭಿಪ್ರಾಯಪಟ್ಟರು.
  ಕಾಡು ಕೃಷಿ ಪ್ರತಿಪಾದಕ ಡಾ.ಖಾದರ್ ಮಾತನಾಡಿ,ತೋಟ ಹೊಲಗಳಲ್ಲಿ ಉಳಿವ ತ್ಯಾಜ್ಯವನ್ನು ಬೆಂಕಿ ಹಾಕಿ ಸುಡುವ ಪರಿಪಾಟ ರೈತರಲ್ಲಿದೆ ಅದು ತಪ್ಪು.ಕೃಷಿ ಉಳಿಕೆಗಳುನ್ನು ಭೂ ಹೊದಿಕೆಯನ್ನಾಗಿ ಪರಿವತರ್ಿಸುವುದರಿಂದ ಅಂತರ್ಜಲ ಹಾವಿಯಾಗದಂತೆ ತಡೆಯಬಹುದು ಮತ್ತು ಕೋಟ್ಯಾಂತರ ಸೂಕ್ಷ್ಮಾಣುಗಳ ವೃದ್ಧಿಗೂ ಕಾರಣವಾಗುತ್ತದೆ ಆದ್ದರಿಂದ ಉಳಿಕೆಗೆ ಬೆಂಕಿ ಹಾಕಬೇಡಿ. ಕಾಡು ಮತ್ತು ಗುಡ್ಡಗಳಿಗೆ ಬೆಂಕಿ ಹಾಕುವುದು ಅಕ್ಷಮ್ಯ ಅಪರಾಧ ಎಂದರು
  ಬಯಲು ನಾಡಿನ ಕೃಷಿಗೆ ಸಿರಿಧಾನ್ಯಗಳಾದ ಹಾರ್ಕ,ನವಣೆ ಸಾವೆ,ಸಜ್ಜೆ,ರಾಗಿ,ಕೊರಲೆ,ಹುರುಳಿ ಅಲಸಂದೆ ಮುಂತಾದವುಗಳು ಸೂಕ್ತವಾಗಿವೆ ರೈತರು ಉದಾಸೀನ ಮಾಡದೆ ಸಿರಿಧಾನ್ಯಗಳ ಬಿತ್ತನೆಗೆ ಮುಂದಾಗಿ ಎಂದರು.
  ಕಾರ್ಯಕ್ರಮದಲ್ಲಿ ಗ್ರೀನ್ ಇನೋವೇಟೀವ್ ಫೌಂಡೇಷನ್ನ ಚಮದ್ರಶೇಖರ್ ಬಾಳೆ, ವಿಜ್ಞಾನ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್,ರಾಮಕೃಷ್ಣಪ್ಪ,ಸೃಜನ ಕಾರ್ಯದಶರ್ಿ ಇಂದಿರಮ್ಮ, ಕಂದಿಕೆರೆ ವಲಯ ಕೃಷಿ ಅಧಿಕಾರಿ ನಾಗರಾಜು,ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಮೇಶ್ ಮುಂತಾದವರು ಇದ್ದರು.

Thursday, April 17, 2014

ಕುಪ್ಪೂರು ಬಳಿ ಬೀಡುಬಿಟ್ಟಿರುವ ಆನೆಗಳು 
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಣೆಕಟ್ಟೆ ಬಳಿ ಇರುವ ಹಳ್ಳದ ಬಳ್ಳಾರಿ ಜಾಲಿಯ ಪೊದೆಯಲ್ಲಿ ಬೀಡುಬಿಟ್ಟಿರುವ ಎರಡು ಆನೆಗಳು ಸುತ್ತಮುತ್ತಲ ತೋಟಗಳಲ್ಲಿ ಸಂಚರಿಸುತ್ತಿವೆ.
ಚಿಕ್ಕನಾಯಕನಹಳ್ಳಿ : ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಹೊರಟ ಆನೆಗಳ ಹಿಂಡಿನಿಂದ ಬೇರ್ಪಟ್ಟ ಎರಡು ಆನೆಗಳು ಮೊನ್ನೆ ತಾಲ್ಲೂಕಿನ ಬುಕ್ಕಾಪಟ್ಟಣ ಹಾಗೂ ಬೋರನಕಣಿವೆಯಲ್ಲಿ ತಂಗಿದ್ದು ರಾತ್ರಿ ಚಿಕ್ಕಬಿದರೆ ಮಾರ್ಗವಾಗಿ ಕುಪ್ಪೂರು ಬಳಿಯ ಹಳ್ಳದ ಬಳ್ಳಾರಿ ಜಾಲಿಯ ಪೊದೆಗಳಲ್ಲಿ ಎರಡು ಆನೆಗಳು ಬೀಡುಬಿಟ್ಟಿವೆ.
  ತಾಲ್ಲೂಕಿನ ಬೋರನಕಣಿವೆ ಜಲಾಶಯದ ಮಾರ್ಗವಾಗಿ ಚಿಕ್ಕಬಿದರೆ, ಅಣೆಕಟ್ಟೆ ಮೂಲಕ ಕುಪ್ಪೂರು ಸುತ್ತಮುತ್ತಾ ಆನೆಗಳು ಗುರುವಾರ ಬೆಳಗಿನ ಜಾವ ತಿರುಗಾಡುತ್ತಿದು ಅರಣ್ಯ ಇಲಾಖೆಯ ಸಿಬ್ಬಂದಿಯು ಆನೆಗಳನ್ನು ಓಡಿಸಲು ಹರಸಾಸಹ ಪಡುತ್ತಿದ್ದಾರೆ, ಆನೆಗಳನ್ನು ನೋಡಿದ ಜನರು ಶಿಳ್ಳೆ ಮತ್ತು ಕೇಕೇ ಹಾಕುತ್ತಿರುವುದಕ್ಕೆ ಆನೆಗಳು ಬೆದುರುವ ಸಂಭವವಿರುವುದರಿಂದ ಜನರನ್ನು ನಿಯಂತ್ರಿಸಲು ಶ್ರಮ ಪಡುತ್ತಿದ್ದಾರೆ.
ಬಿಸಿಲಿರುವುದರಿಂದ ಬಳ್ಳಾರಿ ಜಾಲಿಯ ಪೊದೆಯಲ್ಲಿ ಬೀಡುಬಿಟ್ಟಿರುವ ಆನೆಗಳು ಯಾವುದೇ ಸಮಯದಲ್ಲಾದರೂ ಕದಲಬಹುದು ಎಂಬ ಕಾರಣದಿಂದ ಜನರನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು ಸಂಜೆಯಾದ ನಂತರ ಸ್ಥಳದಿಂದ ಕದಲುವ ಸಂಭವವಿದೆ ಎಂದು ವಲಯ ಅರಣ್ಯಾಧಿಕಾರಿ ಮಾರುತಿ ತಿಳಿಸಿದ್ದಾರೆ. ಆನೆಗಳನ್ನು ನಿಯಂತ್ರಿಸಲು ಸ್ಥಳ್ಕದಲ್ಲೇ ಅರಣ್ಯ ಇಲಾಖಾ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಚಿ.ನಾ.ಹಳ್ಳಿ ಲೋಕಸಭಾ ಚುನಾವಣೆ ಶಾಂತಿಯುತ ಮತದಾನ

ಚಿಕ್ಕನಾಯಕನಹಳ್ಳಿ ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 222ನೇ ವಾಡರ್್ನ ಮತಗಟ್ಟೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬ ಪತ್ನಿ ಬಬಿತಾರವರೊಂದಿಗೆ ಮತಚಲಾಯಿಸಿ, ಹೆಬ್ಬೆಟ್ಟಿನ ಶಾಹಿ ತೋರಿಸುತ್ತಿರುವುದು.






ಚಿಕ್ಕನಾಯಕನಹಳ್ಳಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರದ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಪತ್ನಿ ತ್ರಿವೇಣಿ, ಮಗ ಅಭಿಗ್ನರೊಂದಿಗೆ ಮತ ಚಲಾಯಿಸಿದರು.

ಚಿಕ್ಕನಾಯಕನಹಳ್ಳಿ ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿಯವರು ಅಬುಜಿಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 207ರಲ್ಲಿ ತಮ್ಮ ಮತಚಲಾಯಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ತಮ್ಮ ಮತಚಲಾಯಿಸಿದರು.

ಚಿಕ್ಕನಾಯಕನಹಳ್ಳಿ : ಲೋಕಸಭಾ ಚುನಾವಣೆಯ ಮತದಾನ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು ನವಿಲೆ ಗ್ರಾಮದ 201ನೇ ಬೂತ್ನಲ್ಲಿ ಮತಯಂತ್ರ ಕೆಟ್ಟುಹೋದ ಪರಿಣಾಮ 15 ನಿಮಿಷ ತಡವಾಗಿ ಮತದಾನ ಪ್ರಾರಂಭವಾಯಿತು.
ಮೇಲನಹಳ್ಳಿ ಮತ್ತು ನವಿಲೆ ಸೇರಿದಂತೆ ಅಲ್ಲಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆದ ವರದಿಗಳು ಬಂದಿವೆ. ಸಂಜೆ 5ಗಂಟೆಯವರೆಗೆ ಶೇ.60ರಷ್ಟು ಮತದಾನವಾಗಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ 222ನೇ ಮತಗಟ್ಟೆಯಲ್ಲಿ ಪತ್ನಿ ಬಬಿತಾರೊಂದಿಗೆ ಮತ ಚಲಾಯಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿದರು. ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಜಿ ಅಬೂಜಿಹಳ್ಳಿ ಸಕರ್ಾರಿ ಪ್ರಾಥಮಿಕ ಶಾಲೆ ಹಾಗೂ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಕುಪ್ಪೂರು ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಮನಹಳ್ಳಿ ಮತಗಟ್ಟೆಯ ಗುಂಗುರಪೆಂಟೆಯ 78 ಮತದಾರರಲ್ಲಿ ಒಬ್ಬರು ಮತಚಲಾಯಿಸಿದ್ದಾರೆ, ಉಳಿದವರು ಮತದಾನ ಬಹಿಷ್ಕರಿಸಿ ತಮಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಮತದಾನದಿಂದ ದೂರ ಉಳಿದಿದ್ದಾರೆ. ತಾಲ್ಲೂಕಿನ ಕೆಲವು ಕಡೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದವರೊಂದಿಗೆ ಮಾತಿನ ಚಕಮಕಿ ನಡೆದಿದೆ.


















Friday, April 11, 2014

ಮನುಷ್ಯತ್ವ ಇಲ್ಲದ ಮೋದಿ, ಭ್ರಷ್ಟಾಚಾರಕ್ಕೆ ಹೆಸರಾಗಿರುವ ಬಿಜೆಪಿ 


 ಚಿಕ್ಕನಾಯಕನಹಳ್ಳಿ,ಏ.10: ರಾಷ್ಟ್ರ ಮಟ್ಟದಲ್ಲಿ  ಮನುಷ್ಯತ್ವ ಇಲ್ಲದ ಮೋದಿ, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಹೆಸರಾಗಿರುವ  ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ ನಂತವರ ನೇತೃತ್ವದಲ್ಲಿ  ಅನಾಚಾರ, ದೂರಾಚರಗಳಿಗೆ ಪ್ರಸಿದ್ದರಾಗಿರುವ ಹಾಲಪ್ಪ, ಲಕ್ಷ್ಮಣಸವದಿ, ಸಿ.ಸಿ.ಪಾಟೀಲ, ರೇಣುಕಾಚಾರ್ಯರಂತಹವರೇ ತುಂಬಿರುವ ಕೋಮುವಾದಿ ಬಿ.ಜೆ.ಪಿ. ಒಂದಡೆಯಾದರೆ, ಜೆ.ಡಿ.ಎಸ್.ನಲ್ಲಿ ದೇವೇಗೌಡ, ಕುಮಾರಸ್ವಾಮಿ ಮೇಲೆ ವಿಶ್ವಾಸವನ್ನು ಕಳೆದುಕೊಂಡಿರುವ ನಾಯಕರೇ ತುಂಬಿರುವ ಪಕ್ಷ, ಇವರೆಡನ್ನೂ ಧಿಕ್ಕರಿಸಿ.  ರೈತರ, ಬಡವರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್. ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಎಸ್.ಪಿ.ಮುದ್ದಹನುಮೇಗೌಡರ ಪರ ಸಿ.ಎಂ.ಸಿದ್ದರಾಮಯ್ಯ ಪ್ರಚಾರ ಭಾಷಣ ಮಾಡಿದರು. ಕೋಮುವಾದವನ್ನೇ ಅಜಂಡಾ ಮಾಡಿಕೊಂಡಿರುವ ಬಿ.ಜೆ.ಪಿ, ಈಗ ಹೊರಡಿಸಿರುವ ತನ್ನ ಪ್ರಣಾಳಿಕೆಯಲ್ಲಿ  ಹಿಂದೆ ಜನಸಂಘ ಹೊರಡಿಸುತ್ತಿದ್ದ ಅಂಶಗಳನ್ನೇ  ಪುನರ್ ಮುದ್ರಣ ಮಾಡಿಸಿದಂತಿದೆ ಎಂದು ಸಿದ್ದರಾಮಯ್ಯ ವ್ಯಂಗವಾಡಿದರು.
ಮೋದಿಗೆ ಮತ ನೀಡಿದರೆ ಗುಜರಾತಿನಲ್ಲಿ 2002ರಲ್ಲಿ ನಡೆದ ಕೋಮು ದಳ್ಳುರಿ ಇಡೀ ರಾಷ್ಟ್ರದಲ್ಲಿ ಆರಂಭಗೊಳ್ಳುತ್ತದೆ, ಅಲ್ಲಿ ಅಷ್ಟು ನರಮೇದ ಆದ್ರೂ ಪಶ್ವಿತಾಪ ಪಡದ ಮೋದಿ ಈ ದೇಶದ ಪ್ರಧಾನಿ ಆಗಬಾರದು ಎಂದರಲ್ಲದೆ, ರಾಷ್ಟ್ರದಲ್ಲಿರುವ 82 ಕೋಟಿ ಮತದಾರರು ದೇಶದ ಭವಿಷ್ಯವನ್ನು ನಿಧರ್ಾರಿಸುವಾಗ ಈ ಅಂಶಗಳನ್ನು ಗಮನದಲ್ಲಿಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ರಕ್ತದಲ್ಲಿ ಭ್ರಷ್ಟಾಚಾರ ಇದೆ ಎಂದು ಮೈಸೂರಿನಲ್ಲಿ ಮೋದಿ ಹೇಳುವಾಗ ಪಕ್ಕದಲ್ಲೇ ಭ್ರಷ್ಟಚಾರದ ಸಲುವಾಗಿ ಜೈಲಿಗೆ ಹೋದ ಯಡಿಯೂರಪ್ಪ, 14 ಸಾವಿರ ಕೋಟಿ ರೂಗಳ ಹಗರಣದ ಆರೋಪ ಹೊತ್ತಿರುವ ಅನಂತಕುಮಾರ್ ಪಕ್ಕದಲ್ಲೇ ಕುಳಿತ್ತಿದ್ದರೂ ಮೋದಿಯ ಕಣ್ಣಿಗೆ ಕಾಣಲಿಲ್ಲವೆ ಎಂದು ಪ್ರಶ್ನಿಸಿದರು.
ಕನರ್ಾಟಕವನ್ನು ರಾಷ್ಟ್ರದಲ್ಲೇ ನಂ.1 ರಾಜ್ಯವನ್ನಾಗಿ ಮಾಡುವ ಕನಸು ನನ್ನದು ಅದನ್ನು ನನಸಾಗಿಸಲು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದರು, ಗ್ರಾಮಾಂತರ ಪ್ರದೇಶದಲ್ಲಿ ಎಷ್ಟು ಕುಟುಂಬಗಳು ತುತ್ತು ]ಅನ್ನಕ್ಕಾಗಿ ಕಾಯುತ್ತಿದ್ದ ದಿನಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ ಅದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ತಂದೆ, ಮಕ್ಕಳ ಅಪೌಷ್ಠಕತೆ ನಿವಾರಿಸಲು ಹಾಲು ವಿತರಣೆ ಮಾಡಿದೆ, ಅಹಿಂದ ವರ್ಗದವರು ವಿವಿಧ ನಿಗಮ ಮಂಡಳಿಗಳಲ್ಲಿ ತೆಗೆದುಕೊಂಡ ಸಾಲ ಮನ್ನ ಮಾಡಿದ್ದರಿಂದ ಇದರ ಉಪಯೋಗವನ್ನು 10 ಲಕ್ಷ ಜನ ಪಡೆದುಕೊಂಡರು, ರೈತರಿಗೆ ಬಡ್ಡಿ ರಹಿತ 3 ಲಕ್ಷ ರೂಗಳ ಸಾಲವನ್ನು ವಿತರಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು.
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಅಬ್ಯಾಥರ್ಿಗೆ ಮತ ನೀಡಿದರೆ ಅದು ಬಿ.ಜೆ.ಪಿ. ಅಬ್ಯಾಥರ್ಿಯ ಗೆಲುವಿಗೆ ಸಹಕರಿಸಿದಂತೆ ಆದ್ದರಿಂದ ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಎಸ್.ಪಿ.ಮುದ್ದು ಹನುಮೇಗೌಡರಿಗೆ ಮತನೀಡಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಿ, ಯಾವುದೇ ಗಾಳಿ ಸುದ್ದಿಗೆ ಕಿವಿಕೊಡದೆ ರಾಜ್ಯ ಸಕರ್ಾರವನ್ನು ಮುಂದೆ ನಾಲ್ಕು ವರ್ಷಗಳ ಕಾಲ ಸುಭದ್ರವಾಗಿ ಮುನ್ನಡೆಸುವ ಅವಕಾಶವನ್ನು ಕಲ್ಪಿಸಿಕೊಡುವಂತೆ ಕೋರಿದರು.
ರಾಜ್ಯವನ್ನು ರೋಗಮುಕ್ತ, ಗುಡಿಸಲು ಮುಕ್ತ, ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಸಕರ್ಾರವನ್ನು ನಡೆಸುವಂತೆ ರಾಜ್ಯದ ಜನತೆ ಆಶೀರ್ವದಿಸಬೇಕು ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ರಾಷ್ಟ್ರಕ್ಕೆ ಶಿಕ್ಷಣ ಕಾಯಿದೆ, ಉದ್ಯೋಗ ಕಾಯಿದೆ, ಮಾಹಿತಿ ಹಕ್ಕು ಕಾಯಿದೆಯಂತಹ ಜನೋಪಯೋಗಿ ಅಸ್ತ್ರಗಳನ್ನು ಜನತೆ ನೀಡಿರುವ ಸಕರ್ಾರ, 96 ಕೋಟಿ ಜನತೆಯ ಕೈಗೆ ಮೊಬೈಲ್ ಕೊಡಿಸುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.
  ಸಿದ್ದರಾಮಯ್ಯನವರ ನೇತೃತ್ವದ ಸಕರ್ಾರ ಕೈಗಾರಿಕಾ ಕ್ಷೇತ್ರದಲ್ಲಿ ರಾಷ್ಟ್ರಕ್ಕೆ ಎರಡನೇ ಸ್ಥಾನಕ್ಕೆ ತಂದಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ ಎಂದರು.
ಬಹಿರಂಗ ಸಭೆಯಲ್ಲಿ ಜಿಲ್ಲಾ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಚಿಕ್ಕನಾಯಕನಹಳ್ಳಿಯ ಇತಿಹಾಸದಲ್ಲಿ 1978ರಲ್ಲಿ ಇಂದಿರಾಗಾಂಧಿ ಪಟ್ಟಣಕ್ಕೆ ಬಂದಾಗ ಸೇರಿದಷ್ಟೇ ಜನಸ್ತೋಮ ಇಂದು ಸಿದ್ದರಾಮಯ್ಯ ಪಟ್ಟಣಕ್ಕೆ ಬಂದಾಗಲೂ ಸೇರಿರುವುದು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆ  ಸಿಕ್ಕಿರುವ ಬೆಂಬಲ ಎಂದರು. 
  ಸಭೆಯಲ್ಲಿ ಅಬ್ಯಾಥರ್ಿ ಎಸ್.ಪಿ.ಮುದ್ದುಹನುಮೇಗೌಡ, ಹಿರಿಯ ಕಾಂಗ್ರೆಸ್ ಮುಖಂಡರಾದ ಎಂ.ವಿ.ರಾಜಶೇಖರನ್, ನಟ ಶಶಿಕುಮಾರ್, ಎಂ.ಆರ್.ಸೀತಾರಾಂ ಮಾತನಾಡಿದರು. ಷಫಿ ಅಹಮದ್, ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಜೇಂದ್ರ, ಸಾಸಲು ಸತೀಶ್, ಸಿ.ಬಸವರಾಜು, ಸೀಮೆಣ್ಣೆ ಕೃಷ್ಣಯ್ಯ, ಬಿ.ಲಕ್ಕಪ್ಪ, ಭಕ್ತರಾಮೇಗೌಡ, ಎಚ್.ಬಿ.ನಾರಾಯಣಗೌಡ, ಸಿ.ಕೆ.ಗುರುಸಿದ್ದಯ್ಯ, ಎ.ಪಿ.ಎಂ.ಸಿ.ಸದಸ್ಯ ಯಳನಡು ಸಿದ್ದರಾಮಯ್ಯ, ಪುರಸಭಾ ಸದಸ್ಯರುಗಳಾದ ಸಿ.ಪಿ.ಮಹೇಶ್, ರೇಣುಕಮ್ಮ ಗುರುಮೂತರ್ಿ,  ಧರಣಿ ಲಕ್ಕಪ್ಪ, ಸಾದರಹಳ್ಳಿ ಮಲ್ಲಿಕಾರ್ಜನಯ್ಯ, ಸಿ.ಎಲ್.ರವಿಕುಮಾರ್, ಕೆ.ಜಿ.ಕೃಷ್ಣೇಗೌಡ,  ಬಾಬು ಸಾಹೇಬ್, ತೀರ್ಥಪುರ ವಾಸು,ಘನ್ನಿಸಾಬ್, ಮಹಮದ್ ಪೀರ್ಸಾಬ್, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಸೇರಿದಂತೆ ಹಲವರಿದ್ದರು.

Wednesday, April 9, 2014



ಶ್ರೀ ರಾಮನವಮಿ ಅಂಗವಾಗಿ ಏಳು ದಿನಗಳ ಕಾಲ ಭಜನಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಏ.09 : ಪಟ್ಟಣದ ಬನಶಂಕರಿ ದೇವಾಲಯದಲ್ಲಿ ರಾಮನವಮಿಯ ಅಂಗವಾಗಿ ಶ್ರೀ ರಾಮನ ಛಾಯಾಚಿತ್ರ ಪ್ರತಿಷ್ಠಾಪಿಸಿ, ಪೂಜೆ, ನವಗ್ರಹ ಸ್ಥಾಪನೆ, ಹೋಮ, ಹವನದೊಂದಿಗೆ ಪ್ರತಿದಿನ ವಿಶೇಷ ಪೂಜೆ ಹಾಗೂ ಏಳು ದಿನಗಳ ಕಾಲ ಅಖಂಡ ಶ್ರೀ ರಾಮ ಭಜನೆ ನಡೆಯಲಿದೆ.
ಶ್ರೀ ರಾಮ ಸಪ್ತಾಹ ಸಮಿತಿ ವತಿಯಿಂದ ಪ್ರತಿ ವರ್ಷ ಶ್ರೀ ರಾಮನವಮಿಯಂದು ಆರಂಭವಾಗುವ ಶ್ರೀ ರಾಮ ಭಜನೆ ಏಳುದಿನಗಳ ಕಾಲ ನಡೆಯುತ್ತಿದೆ, ಆರಂಭ ದಿನದಂದು ಪಾನಕ, ಫಲಹಾರ ನೀಡಲಾಯಿತು. ಭಜನೆಯು ಏಪ್ರಿಲ್ 14ರವರೆಗೆ ನಡೆಯಲಿದ್ದು, ಬನಶಂಕರಿ ದೇವಾಲಯದ ಮುಂಭಾಗದಲ್ಲಿ ಹಾಕಿರುವ ವಿದ್ಯುದ್ದೀಪ ಮತ್ತು ಅಲಂಕೃತವಾದ ಭವ್ಯ ಚಪ್ಪರ ಹಾಕಲಾಗಿದ್ದು ಅಖಂಡ ಭಜನೆ ಮಾಡುವ ಭಕ್ತರಿಗೆ ಪ್ರತಿನಿತ್ಯ ಅನ್ನಸಂತರ್ಪಣೆ ಸೇವೆ ನಡೆಯುತ್ತದೆ.
ಭಜನಾ ಕಾರ್ಯಕ್ರಮದ ಭಕ್ತರಾದ ಸಿ.ಜಿ.ದಯಾನಂದ್ ಮಾತನಾಡಿ 1944ರಿಂದಲೂ ಶ್ರೀ ರಾಮನವಮಿ ಆಚರಿಸಿಕೊಂಡು ಬರುತ್ತಿದ್ದು 70ವರ್ಷಗಳಿಂದಲೂ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುತ್ತಿದೆ,  ಭಜನೆಯಲ್ಲಿ ನಿತ್ಯ ಐವತ್ತಕ್ಕೂ ಹೆಚ್ಚು ಜನ ಶ್ರೀ ರಾಮನ ಭಜನೆ ಪಾಲ್ಗೊಳ್ಳುತ್ತಿದ್ದಾರೆ. ಈ  ಏಳು ದಿನಗಳ ಭಜನಾ ಕಾರ್ಯಕ್ರಮದ ನಂತರ ಶ್ರೀರಾಮ ದೇವರ ಮತ್ತು ಚೌಡೇಶ್ವರಿ ಹಾಗೂ ಬನಶಂಕರಿ ಅಮ್ಮನವರ ಉತ್ಸವದೊಂದಿಗೆ ಓಕುಳಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್, ಶಿಕ್ಷಕ ಚಿ.ನಿ.ಪುರುಷೋತ್ತಮ್, ಶ್ರೀ ರಾಮ ಸಪ್ತಾಯ ಸಮಿತಿ ಕಾರ್ಯಕಾರಿ ಮಂಡಳಿಯ ಕೆ.ಎಂ.ಕುಮಾರ್, ರಂಗನಾಥ್, ಮಲ್ಲಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಟ್ಟಣದ ಧಮರ್ಾವರ ಬೀದಿಯ ಶ್ರೀ ರಾಮ ಮಂದಿರ ದೇವಾಲಯ ಹಾಗೂ ಹಳೆಯೂರು ಆಂಜನೇಯಸ್ವಾಮಿ ದೇವಸ್ಥಾನ, ಹಳ್ಳಿಕಾರರ ಬೀದಿಯ ಶ್ರೀ ರಾಮ ಭಜನಾ ಮಂದಿರ, ಮಹಾಲಕ್ಷ್ಮಿ ಬಡಾವಣೆಯ ಶ್ರೀ ಆಂಜನೇಯಸ್ವಾಮಿ, ಜೋಗಿಹಳ್ಳಿ ಶ್ರೀ ಆದಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಶ್ರೀ ರಾಮನವಮಿ ಅಂಗವಾಗಿ ಪಾನಕ ಫಲಹಾರ ವಿತರಿಸಲಾಯಿತು.



ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ
ಚಿಕ್ಕನಾಯಕನಹಳ್ಳಿ : ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ ಎಂದು ಸ್ವೀಪ್ ಸಮಿತಿಯ ಸದಸ್ಯರಾದ ನಟರಾಜ್ ತಿಳಿಸಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಇಲಾಖಾ ಸಭಾಂಗಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಮತ ಚಲಾಯಿಸುವ ಬಗ್ಗೆ ಮತದಾರರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಶೇ 50ರಿಂದ 60 ರಷ್ಟು ಮತದಾನವಾಗುತ್ತಿದೆ, ವಿಧಾನಸಭೆ, ಜಿ.ಪಂ, ತಾ.ಪಂ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗುತ್ತಿದೆ ಎಂಬ ವರದಿಯ ಆಧಾರದ ಮೇಲೆ ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾರರು ಮತಗಟ್ಟೆಯ ಕಡೆ ಬಂದು ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದರಲ್ಲದೆ ಅಂಗನವಾಡಿ ಕಾರ್ಯಕರ್ತರು ಯಾವುದೇ ಪಕ್ಷ, ಅಭ್ಯಥರ್ಿಯ ಪರವಾಗಿ ಕೆಲಸ ಮಾಡದೆ ಜಾಗೃತಿಯಿಂದ ಇರಬೇಕು, ಅಂಗನವಾಡಿ ಕೇಂದ್ರಗಳಲ್ಲಿ 1ಸಾವಿರದಿಂದ 2 ಸಾವಿರ ಜನಸಂಖ್ಯೆಯ ಮತದಾರರು ಇರುವುದರಿಂದ ಇವರಲ್ಲಿ ಕೆಲವರು ಮತದಾನದ ಬಗ್ಗೆ ತಿರಸ್ಕಾರ ಭಾವನೆ ಇರುವುದರಿಂದ ಅವರಲ್ಲಿ ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪ್ರಜಾಪ್ರಭುತ್ವದ ಬಗ್ಗೆ ತಿಳುವಳಿಕೆಯನ್ನು ನೀಡಿ ಆಯಾ ಅಂಗನವಾಡಿ ಕೇಂದ್ರಗಳಲ್ಲಿ ಬೀದಿನಾಟಕ ಹಾಗೂ ರಂಗೋಲಿ ಸ್ಪಧರ್ೆಯಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿ ಎಂದು  ಸಲಹೆ ನೀಡಿದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಮತದಾರರು ತಾವು ಯಾರಿಗೂ ಮತ ಹಾಕಬಾರದೆಂಬ  ಅಭಿಪ್ರಾಯ ಹೊಂದಿರುತ್ತಾರೆ, ಅಂತಹವರು ಮತ ಯಂತ್ರಗಳ ನೋಟಾ ಎಂಬ ಬಟನ್ ಒತ್ತುವುದರಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದರು. 
ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ, ಮಹದೇವಮ್ಮ, ಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.

Tuesday, April 8, 2014

ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ : ಮಾಳವಿಕ ಅವಿನಾಶ್

ಚಿಕ್ಕನಾಯಕನಹಳ್ಳಿ,ಏ.07 : ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಅನುಕೂಲವಾಗುವಂತಹ  ಅಡುಗೆ ಅನಿಲ, ಶೌಚಾಲಯ ಬಳಕೆ, ವಿದ್ಯುತ್, ನೀರು, ಶಾಲಾ ಮಟ್ಟದಲ್ಲಿಯೇ ಮಹಿಳೆಯರಿಗೆ ತಮ್ಮ ಆತ್ಮ ರಕ್ಷಣೆಗೆ ತರಬೇತಿ, ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುವವರಿಗೆ ವಿಶೇಷ ಯೋಜನೆ ಸೇರಿದಂತೆ ಇನ್ನಿತರ ಹಲವು ಜನಪರ ಕಾರ್ಯಕ್ರಮಗಳಿಗೆ  ವಿಶೇಷ ಆದ್ಯತೆ ನೀಡಿದೆ ಎಂದು ಕಿರುತರೆ ಚಿತ್ರನಟಿ ಮಾಳವಿಕ ಅವಿನಾಶ್ ಹೇಳಿದರು. 
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಬಿಜೆಪಿ ಮಹಿಳೆಯರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬದುಕು ಜಟಕಾಬಂಡಿ ಕಾರ್ಯಕ್ರಮದ ಮೂಲಕ ಹಲವು ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ, ಅದೇ ರೀತಿ ದೇಶಾದ್ಯಂತ ಮಹಿಳೆಯರ ಸಮಸ್ಯೆ ನಿವಾರಿಸಲು ನರೇಂದ್ರಮೋದಿ ಗುಜರಾತ್ನಲ್ಲಿ ಜಾರಿಗೆ ತಂದಿರುವ 'ಬೇಟಿಬಚಾವ್ ನಾರಿಅದಾಲತ್' ಕಾರ್ಯಕ್ರಮ, ಮಹಿಳೆಯರ ಸಮಸ್ಯೆಯನ್ನು ತಾಲ್ಲೂಕು ಮಟ್ಟದಲ್ಲಿ ಬಗೆಹರಿಸುವ ಕಾರ್ಯಕ್ರಮವನ್ನು ರಾಷ್ಟ್ರಾದ್ಯಂತ ಜಾರಿಗೆ ತರಲು ನರೇಂದ್ರಮೋದಿ ದೇಶದಲ್ಲಿ ಪ್ರಧಾನಿಯಾಗಬೇಕು, ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಅತ್ಯಾಚಾರ ಪ್ರಕರಣ ಹಾಗೂ ರಾಷ್ಟ್ರಾದ್ಯಂತ ಇರುವ ಭ್ರಷ್ಠಾಚಾರವನ್ನು ತೊಲಗಿಸಲು ಬಿಜೆಪಿ ಸಕರ್ಾರದ ನರೇಂದ್ರಮೋದಿ ಪ್ರಧಾನಮಂತ್ರಿಯಾಗಲೇ ಬೇಕು ಎಂದರಲ್ಲದೆ ಎಲ್ಲಾ ಜನಾಂಗಕ್ಕೂ ಅನುಕೂಲವಾಗುವಂತಹ ಭಾಗ್ಯಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸಕರ್ಾರ ರಾಜ್ಯದಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರೆಂದು ನಮ್ಮಗಳ ಮಧ್ಯೆ ಭೇದ ತರುತ್ತಿದ್ದಾರೆ ಎಂದರು.
ದೆಹಲಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರವಾದರೂ ಪ್ರದಾನಮಂತ್ರಿ ಮನಮೋಹನಸಿಂಗ್ ಮಾತನಾಡದೆ ಮೌನಮೋಹನಸಿಂಗ್ ರೀತಿಯಿದ್ದರು ಅಲ್ಲದೆ ರಾಜ್ಯದಲ್ಲಿ ಇದೇ ಪ್ರಕರಣ ಮುಂದುವರೆದಾಗ ರಾಜ್ಯದ ಮುಖ್ಯಮಂತ್ರಿಯೂ ಮೌನ ವಹಿಸಿದ್ದರು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಹೆಣ್ಣುಮಕ್ಕಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲು ಕೇಂದ್ರದಲ್ಲಿ ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬರಬೇಕಿದೆ ಎಂದರು.
ಬಿ.ಜೆ.ಪಿ.ಯಾ ಸೋಷಿಯಲ್ ಮೀಡಿಯಾ ವಕ್ತಾರೆ ಲತಾ ಭಾರಧ್ವಾಜ್ ಮಾತನಾಡಿ, ರಾಜ್ಯದಲ್ಲಿ 236 ಲಕ್ಷ ಮಹಿಳಾ ಮತದಾರರಿದ್ದಾರೆ, ಇಷ್ಟು ಜನ ಸಂಖ್ಯೆ ಇರುವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಶೇ33% ರಷ್ಟು ನೀಡುತ್ತಿದ್ದೇವೆ ಎಂದು ಮೋದಿ, ಮಹಿಳಾ ದಿನಾಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಹೆಣ್ಣು ಮಕ್ಕಳಿಗೆ ಬಿಜೆಪಿ ಪಕ್ಷ ಹೆಚ್ಚು ಗೌರವ ನೀಡುತ್ತದೆ, ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಹೆಣ್ಣುಮಕ್ಕಳ ಅಭಿವೃದ್ದಿಗೆ ಶ್ರಮಿಸಿದೆ, ಶೇ 50%ರಷ್ಟು ಮೀಸಲಾತಿ ನೀಡಿದೆ, ಹೆಣ್ಣು ಮಕ್ಕಳು ತಮ್ಮ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಪ್ರಚಾರ ಮಾಡಿ ಅಭ್ಯಥರ್ಿ ಜಿ.ಎಸ್.ಬಸವರಾಜು ಗೆಲುವಿಗೆ ಶ್ರಮಿಸಿ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ತಮ್ಮ ರಾಜಕೀಯ ಜೀವನದಲ್ಲಿ ಅತ್ಯಂತ ಬದ್ಧತೆಯ ಸಂಸತ್ ಪಟುಗಳಾಗಿ ಅಟಲ್ ಬಿಹಾರಿ ವಾಜಪೇಯಿ ಎಲ್.ಕೆ.ಅಡ್ವಾಣಿಯವಂತಹವರ ಜೊತೆಯಲ್ಲಿ ಕೆಲಸ ಮಾಡಿದ್ದೇನೆ, ಯುಪಿಯ ಸಕರ್ಾರದಲ್ಲಿ 7.5ಲಕ್ಷ ಕೋಟಿ ರೂ ಹಗರಣ ನಡೆದಿದ್ದರೂ ನಮ್ಮ ಪ್ರಧಾನಮಂತ್ರಿಗಳು ಚಕಾರವೆತ್ತುತ್ತಿಲ್ಲ 2ಜಿ ಹಗರಣ 2.75ಲಕ್ಷ ಕೋಟಿ, ಕಲ್ಲಿದ್ದಲೂ ಹಗರಣ 1.75 ಲಕ್ಷ ಕೋಟಿ 25ಸಾವಿರ, ಕಾಮನ್ವೆಲ್ತ್ ಹಗರಣದಲ್ಲಿ ಮಂತ್ರಿಗಳು,ಅಧಿಕಾರಿಗಳು ಭಾಗಿಯಾಗಿರುತ್ತಾರೆ ಇದರಿಂದ ಕೆಲವರು ಕೇಂದ್ರ ಮಂತ್ರಿಗಳು ಜೈಲಿಗೂ ಹೋಗಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ದೇಶ ರಕ್ಷಣೆಗೆ ಬಿಜೆಪಿ ಬದ್ಧವಾಗಿದ್ದು ಪಾಕಿಸ್ತಾನ ನಮ್ಮ ದೇಶದ ಮೇಲೆ ನಿರಂತರ ದಾಳಿ ನಡೆಸಿ ನಮ್ಮ ಸೈನಿಕರ ಹತ್ಯೆ ಮಾಡುತ್ತಿದ್ದರೂ ಇದರ ಬಗ್ಗೆ ಪ್ರಧಾನಮಂತ್ರಿಗಳಾಗಲಿ, ಗೃಹ ಸಚಿವರಾಗಲಿ ನಮ್ಮ ಸೈನಿಕರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಿಲ್ಲ ಎಂದು ವಿಷಾಧಿಸಿದ ಅವರು, ನೀರಾವರಿ ಸಲುವಾಗಿ ನಡೆಸುತ್ತಿರುವ ಹೋರಾಟದಲ್ಲಿ ಜಿ.ಎಸ್.ಬಸವರಾಜು, ಕಂದಿಕೆರೆ, ಹಂದನಕೆರೆಗಳಿಗೆ ನೀರು ತರಲು ಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಪ್ರೇಮಾಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕವಿತಾಕಿರಣ್ಕುಮಾರ್, ಕಾರ್ಯದಶರ್ಿ ನಾಗರತ್ನಮ್ಮ, ತಾಲ್ಲೂಕು ಅಧ್ಯಕ್ಷೆ ಮಾಲಾ, ರಾಜ್ಯ ಪ್ರಧಾನ ಕಾರ್ಯದಶರ್ಿ ನಂದೀಶ್,  ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ತಾ.ಪಂ.ಅಧ್ಯಕ್ಷ ಕೆಂಕೆರೆ ನವೀನ್, ಸದಸ್ಯ ಸೀತಾರಾಮಯ್ಯ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಮುಖಂಡರುಗಳಾದ ಮಿಲ್ಟ್ರಿಶಿವಣ್ಣ, ಶ್ರೀನಿವಾಸಮೂತರ್ಿ, ಬುಳ್ಳೇನಹಳ್ಳಿ ಶಿವಪ್ರಕಾಶ್ ಮುಂತಾದವರಿದ್ದರು.


ರಾಜ್ಯದಲ್ಲಿ ಬಿಜೆಪಿ ಸಕರ್ಾರ ಬಡವರ ಪರ ಕೆಲಸ ಮಾಡಲಿಲ್ಲ : ಎಂ.ಡಿ.ಲಕ್ಷ್ಮೀನಾರಾಯಣ್

ಚಿಕ್ಕನಾಯಕನಹಳ್ಳಿ,ಏ.07 : ರಾಜ್ಯದಲ್ಲಿ ಬಿಜೆಪಿ ಸಕರ್ಾರ ಆಡಳಿತ ನಡೆಸಿದಾಗ ಬಡವರ ಪರ ಕೆಲಸ ಮಾಡಲಿಲ್ಲ ಆದರೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸಕರ್ಾರ, ಜಾತಿಯತೆಯಲ್ಲಿ ಸಮಾನತೆ ತೋರಿಸುತ್ತಾ ಬಡವರ ಪರವಾಗಿ ಆಡಳಿತ ನಡೆಸುತ್ತಿದೆ, 1ರೂಗೆ 1ಕೆಜಿ ಅಕ್ಕಿಯ ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯ ಯೋಜನೆ ಸೇರಿದಂತೆ ನೇಕಾರರ ಸಮುದಾಯಕ್ಕೆ ವಿಶೇಷವಾಗಿ ಮೀಸಲು ಕಾರ್ಯಕ್ರಮಗಳು ಹಾಗೂ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗುತ್ತಿದೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದರು.
ಪಟ್ಟಣದ ಬನಶಂಕರಿ ಪ್ರಾರ್ಥನ ಮಂದಿರದಲ್ಲಿ ದೇವಾಂಗ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೇರುವುದಕ್ಕೂ ಮುನ್ನ ಯಡಿಯೂರಪ್ಪನವರಿಗೆ 30ದಿನದೊಳಗೆ 15ಪ್ರಶ್ನೆಗೆ ಉತ್ತರ ನೀಡುವಂತೆ ತಿಳಿಸಿದ್ದೆನು ಆದರೆ ಅವರು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿಲ್ಲವಾದ್ದರಿಂದ  ಹಾಗೂ ಕಾಂಗ್ರೆಸ್ ಪಕ್ಷ ಬಡವರ ಪರ ಕೆಲಸ ಮಾಡುತ್ತಿರುವ ತತ್ವ ಆದರ್ಶಗಳನ್ನು ನಂಬಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದಾಗಿ ಹೇಳಿದರಲ್ಲದೆ, ರಾಜ್ಯದಲ್ಲಿ ನರೇಂದ್ರಮೋದಿಯ ಹವಾ ಎದ್ದಿರುವುದು ಕೃತಕವಾಗಿದ್ದು ಬಿಜೆಪಿ ಪಕ್ಷ ವೈಟ್ಕಾಲರ್ ಪಕ್ಷವಾಗಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಮುಖಂಡರುಗಳಾದ ಸಿ.ಬಸವರಾಜು, ಚಂದ್ರಶೇಖರ್, ಕೆ.ಜಿ.ಕೃಷ್ಣೆಗೌಡ, ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಘನ್ನಿಸಾಬ್, ರೇವಣ್ಣ ಒಡೆಯರ್ ಮುಂತಾದವರು ಉಪಸ್ಥಿತರಿದ್ದರು.

Saturday, April 5, 2014


 ನನ್ನ ರಾಜಕೀಯ ಶಕ್ತಿ ಕುಂದಿಲ್ಲ : ಜೆ.ಸಿ.ಮಾಧುಸ್ವಾಮಿ 
ಚಿಕ್ಕನಾಯಕನಹಳ್ಳಿ,ಏ.05 : ಇನ್ನೂ ನನ್ನ ರಾಜಕೀಯ ಶಕ್ತಿ ಕುಂದಿಲ್ಲ, ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈಗಾಗಲೆ ಶಕ್ತಿಯಾಗಿ ಬೆಳೆದಿದ್ದೇವೆ, ವಿಧಾನಸಭೆ ಚುನಾವಣೆಯಲ್ಲಿ 50ಸಾವಿರಕ್ಕೂ ಹೆಚ್ಚು ಮತ ಪಡೆದು ಗುಂಪಾಗಿ ಬೆಳೆದಿದ್ದೇವೆ, ಈ ಮೂಲಕ ಕಾರ್ಯಕರ್ತರ ಹಿತವನ್ನು ಕಾಯುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಮಾಜಿ ಶಾಸಕ ಜೆ.ಸಿ.ಎಂ ಅಭಿಮಾನಿಗಳ ಬಳಗ ಸಭೆಯಲ್ಲಿ ಮಾತನಾಡಿ ಅನಿವಾರ್ಯ ಕಾರಣದಿಂದ ಹಾಗೂ ಕಾರ್ಯಕರ್ತರ ಹಿತದೃಷ್ಠಿಯಿಂದ ಬಿಜೆಪಿಗೆ ಸೇರುವುದು ಅನಿವಾರ್ಯವಾಗಿದೆ, ಒಮ್ಮೆ ಕಾಂಗ್ರೆಸ್ಗೆ ಹೋಗಬೇಕೆಂಬ ತೀಮರ್ಾನ ತೆಗೆದುಕೊಂಡಿದ್ದು ಕೆಲವು ಕಾಂಗ್ರೆಸ್ ನಾಯಕರು ಅಡಚಣೆ ಮಾಡಿದುದರಿಂದ ಕಾಂಗ್ರೆಸ್ಗೆ ಹೋಗಲಿಲ್ಲ, ನಂತರ ಸಂಸದ ಅನಂತ್ಕುಮಾರ್ ಹಾಗೂ ಜಗದೀಶ್ ಶೆಟ್ಟರ್ ದೂರವಾಣಿಯ ಮುಖಾಂತರ ಸಂಪಕರ್ಿಸಿದರು, ಆಕಸ್ಮಿಕವಾಗಿ ಸಿದ್ದಗಂಗಾ ಮಠಾಧೀಶ್ವರರಾದ ಡಾ.ಶಿವಕುಮಾರಸ್ವಾಮಿಗಳ ಹುಟ್ಟುಹಬ್ಬಕ್ಕೆ ಶುಭ ಕೋರಲು ಹೋದಾಗ ಆಕಸ್ಮಿಕವಾಗಿ ಭೇಟಿಯಾದೆವು, ಆಗ ರಾಜಕೀಯದ ಬಗ್ಗೆ ಚಚರ್ೆ ನಡೆದು 5ನೇ ತಾರೀಖಿನವರೆಗೆ ಸಮಯ ನೀಡಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀಮರ್ಾನ ತೆಗೆದುಕೊಳ್ಳುವುದಾಗಿ ಹೇಳಿದ ನಂತರ ಇಂದು ಕಾರ್ಯಕರ್ತರೊಂದಿಗೆ ಸಭೆಯಲ್ಲಿ ತೀಮರ್ಾನ ಕೈಗೊಳ್ಳುತ್ತೇನೆ, ಕಾರ್ಯಕರ್ತರ ಅಭಿಪಾಯದಂತೆ ಬಿಜೆಪಿ ಪಕ್ಷ ಸೇರುತ್ತೇನೆ ಎಂದು ಹೇಳಿದರು.
 ನನ್ನನ್ನು ಪಕ್ಷಾಂತರಿ ಎಂದು ಕರೆಯಬೇಡಿ ಎಂದ ಅವರು ಕೆಜೆಪಿಗೆ ಹೋಗಬೇಕಾದರೆ ಕಾರ್ಯಕರ್ತರ ಅಭಿಪ್ರಾಯ ಪಡೆದೇ ನಾನು ಯಡಿಯೂರಪ್ಪನವರ ಸಮ್ಮುಖದಲ್ಲಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾದೆನು, ಅದೇ ರೀತಿ ಈಗಲೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಬಿಜೆಪಿಗೆ ಸೇರುತ್ತಿದ್ದೇನೆ ಕಾರ್ಯಕರ್ತರು ಬಿಜೆಪಿ ಸದಸ್ಯತ್ವ ಪಡೆದು ರಾತ್ರಿ ಹಗಲು ಬಿಜೆಪಿ ಅಭ್ಯಥರ್ಿ ಜಿ.ಎಸ್.ಬಸವರಾಜುರವರಿಗೆ ಕೆಲಸ ಮಾಡಿ ಅತಿ ಹೆಚ್ಚು ಮತವನ್ನು ಬಸವರಾಜುರವರಿಗೆ ಹಾಕಿಸಿ ನಮ್ಮ ಶಕ್ತಿಯನ್ನು ತೋರಿಸಿ ಎಂದ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿ ಯಾವುದೇ ಷರತ್ತುಗಳಿಲ್ಲದೆ ಎಲ್ಲರೂ ಬಿಜೆಪಿಗೆ ಸೇರಿ ಎಂದು ಕರೆ ನೀಡಿದರು.
ದೇಶದ ಬದಲಾವಣೆಯ ಗಾಳಿ ಬೀಸುತ್ತಿರುವುದರಿಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ದಿ ಕಾರ್ಯಗಳ ರೀತಿಯಲ್ಲಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ನಾವೆಲ್ಲರೂ ನರೇಂದ್ರ ಮೋದಿಯವರಿಗೆ ಬೆಂಬಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ನಾವೆಲ್ಲರೂ ಬಿಜೆಪಿಗೆ ಹೋಗುತ್ತಿರುವುದರಿಂದ ಮೂಲಕಾರ್ಯಕರ್ತರಿಗೆ ಸ್ವಲ್ಪ ಇರುಸು ಮುರುಸುವಾಗುವುದರಲ್ಲಿ ಅನುಮಾನವಿಲ್ಲ ಆದ್ದರಿಂದ ಅವರ ಜೊತೆಗೂಡಿ ಏನೇ ಬಿನ್ನಾಭಿಪ್ರಾಯವಿದ್ದರೂ ಬದಿಗೊತ್ತಿ ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಮಾಜಿ ಶಾಸಕ ಜೆಸಿಎಂ ಅಭಿಮಾನಿಗಳ ಸಭೆಗೆ ಬಿಜೆಪಿ ಲೋಕಸಭಾ ಅಭ್ಯಥರ್ಿ ಜಿ.ಎಸ್.ಬಸವರಾಜು ಬೇಟಿ ನೀಡಿದರು. ತಮ್ಮನ್ನು ಬೆಂಬಲಿಸುವಂತೆ ಕೋರಿದರು. 
ಸಭೆಯಲ್ಲಿ ಜಿ.ಪಂ.ಸದಸ್ಯ ಲೋಹಿತಬಾಯಿ, ಜಿಲ್ಲಾ ಹಾಲು ಒಕ್ಕೂಟದ ನಿದರ್ೇಶಕ ಶಿವನಂಜಪ್ಪ ಹಳೆಮನೆ, ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ತಾ.ಪಂ.ಉಪಾಧ್ಯಕ್ಷ ಹೊಸಳ್ಳಿ ಜಯಣ್ಣ, ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್, ನಿರಂಜನಮೂತರ್ಿ, ಲತಾಕೇಶವಮೂತರ್ಿ,  ಎ.ಪಿ.ಎಂ.ಸಿ ಅಧ್ಯಕ್ಷ ಶಿವರಾಜ್, ಕೆ.ಜಿ.ಪಿ ಅಧ್ಯಕ್ಷ ಹೆಚ್.ಎಂ.ಸುರೇಂದ್ರಯ್ಯ, ಜಿ.ಪಂ.ಮಾಜಿ ಸದಸ್ಯ ಶಿವರಾಂ, ಯಳನಡು ಮಲ್ಲಿಕಾಜರ್ುನಯ್ಯ,  ಮತ್ತಿತರರು ಉಪಸ್ಥಿತರಿದ್ದರು.


ತುಮಕೂರು ಲೋಕಸಭಾ ಚುನಾವಣಾ ವೀಕ್ಷಕ ನಾನಿವಾಲಿ ತಾಲ್ಲೂಕಿಗೆ ಭೇಟಿ
ಚಿಕ್ಕನಾಯಕನಹಳ್ಳಿ,ಏ.05: ಶನಿವಾರ ತುಮಕೂರು ಲೋಕಸಭಾ ಚುನಾವಣಾ ವೀಕ್ಷಕ ನಾನಿವಾಲಿ ತಾಲ್ಲೂಕಿಗೆ ಭೇಟಿ ನೀಡಿ ಹಾಲುಗೊಣ, ಜೆ.ಸಿ.ಪುರ, ತರಬೇನಹಳ್ಳಿ, ಮತಿಘಟ್ಟ ಹಾಗೂ ಪಟ್ಟಣದ ಸಕರ್ಾರಿ ಸ್ವತಂತ್ರ ಪೂರ್ವ ಕಾಲೇಜಿನಲ್ಲಿದ್ದ ಮೆಸ್ಟರಿಂಗ್ ಹಾಗೂ ಡಿಮೆಸ್ಟಂಗ್ ಸ್ಥಳ ಹಾಗೂ ಮತಪೆಟ್ಟಿಗೆ ಭದ್ರತಾ ಕೊಠಡಿಯನ್ನು ಪರಿಶೀಲಿಸಿದರು.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ರೂಟ್ಮ್ಯಾಪ್ ಹಾಗೂ ಸೆಕ್ಟರ್ ಮ್ಯಾಪ್ ವೀಕ್ಷಿಸಿದರು. ನಂತರ ಚುನಾವಣಾ ಇ.ವಿ.ಎಮ್ ತರಬೇತಿ ಸ್ಥಳಕ್ಕೆ ತೆರಳಿ ಅಧಿಕಾರಿಗಳು ಉತ್ತಮ ತರಬೇತಿಯನ್ನು ಪಡೆದು ಚುನಾವಣೆಯನ್ನು ಶಾಂತಿಯುತ ಮತದಾನ ನಡೆಯುವಂತೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು.
ಪೋಲಿಸರು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಘಟ್ಟೆಗಳಿಗೆ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಿ ಮತದಾನ ಶಾಂತಿಯುತವಾಗಿ ನಡೆಸಲು ಬೇಕಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಚುನಾವಣಾ ವೀಕ್ಷಕ ಇ.ಪ್ರಕಾಶ್, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣನಾಯ್ಕ್, ಸಿಡಿಪಿಓ ಅನೀಸ್ಖೈಸರ್ ಮತ್ತಿತರರು ಉಪಸ್ಥಿತರಿದ್ದರು. 

ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಿ : ಗೋವಿಂದರಾಜು
ಚಿಕ್ಕನಾಯಕನಹಳ್ಳಿ,ಏ.05 : ಗ್ರಾ.ಪಂ. ಪಿಡಿಓಗಳು ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಳದಲ್ಲಿದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಸಲಹೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ತರಬೇತಿ ಸಭಾಂಗಣದಲ್ಲಿ ಪಿಡಿಓ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದಶರ್ಿಗಳ ಸಭೆಯಲ್ಲಿ ಮಾತನಾಡಿ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ 15.5 ಕೋಟಿ ಬಿಡುಗಡೆಯಾಗಿದ್ದು ತಾಲ್ಲೂಕಿಗೆ 3ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲೆಲ್ಲಿ ಬೋರ್ವೆಲ್ಗಳ ಅವಶ್ಯಕತೆ ಇದೆಯೋ ಅಲ್ಲಿ ಮಾತ್ರ ಹೊಸ ಕೊಳವೆ ಬಾವಿಗಳನ್ನು ಕೊರೆಸಿ ಎಂದು ಸಲಹೆ ನೀಡಿದ ಅವರು ಹಳೆ ಕೊಳವೆ ಬಾವಿಗಳನ್ನು ರೀಬೋರ್ ಮಾಡಿಸಿ ಇದರಿಂದ ಹಣ ಉಳಿತಾಯವಾಗುವುದು. ಪಿಡಿಓಗಳು ವಾಟರ್ಮನ್ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು, ಪ್ರತಿ ಸೋಮವಾರ ವಾಟರ್ಮನ್ಗಳ ಸಭೆ ಕರೆದು ಮಾಹಿತಿ ಪಡೆದು, ಹಳ್ಳಿಗಳಲ್ಲಿ 5ರಿಂದ 6ಗಂಟೆ ವಿದ್ಯುತ್ ಇರುವುದರಿಂದ ಅಷ್ಟರೊಳಗೆ ಸಿಸ್ಟನ್ಗಳನ್ನು ತುಂಬಿಸಿದರೆ ಮಾತ್ರ ನೀರಿನ್ನು ಸರಬರಾಜು ಮಾಡಲು ಸಾಧ್ಯ, ಕೆಲವು ಕಡೆ ನೀರು ಪೋಲಾದರೂ ಯಾರೂ ಗಮನ ಹರಿಸುವುದಿಲ್ಲ ಆದ್ದರಿಂದ ವಾಟರ್ಮನ್ಗಳು ಹಾಗೂ ಕಾರ್ಯದಶರ್ಿಗಳು ಗಮನ ಹರಿಸಿ ಎಂದರು. ಪಿಡಿಓಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳನ್ನು ಪ್ರವಾಸ ಮಾಡಿದರೆ ಮಾತ್ರ ನೀರಿನ ಸಮಸ್ಯೆ ತಿಳಿದುಕೊಂಡು ಸಮಸ್ಯೆ ಬಗೆಹರಿಸಲು ಪರಿಹಾರ ಕಂಡುಕೊಳ್ಳಬಹುದು ಎಂದರು.
ಚುನಾವಣೆ ಇರುವುದರಿಂದ ಪಿಡಿಓಗಳು, ಕಾರ್ಯದಶರ್ಿಗಳು ಎಚ್ಚರದಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಬೀದಿ ನಾಟಕದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು, ಜಿಲ್ಲೆಯಲ್ಲಿ 49ಸಾವಿರ ಹೊಸ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.  
ಪಿಡಿಓಗಳು ಗ್ರಾಮ ಪಂಚಾಯ್ತಿ ಹಣದಲ್ಲಿ ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಿ ರಸ್ತೆ, ಮಣ್ಣು ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ ಎಂದು ಸಲಹೆ ನೀಡಿದರು, ಕಳೆದ ವರ್ಷ ಅತಿ ಕಡಿಮೆ ಮತದಾನವಾಗಿರುವ ಸ್ಥಳಗಳಲ್ಲಿ ಮತದಾನದ ಬಗೆಗಿನ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ, ಜಿ.ಪಂ. ಎಇಇ ಮಲ್ಲಿಕಾಜರ್ುನ್ ಹಾಗೂ ಪಿಡಿಓಗಳು ಹಾಗೂ ಕಾರ್ಯದಶರ್ಿಗಳು ಉಪಸ್ಥಿತರಿದ್ದರು.

Friday, April 4, 2014


ಅಧಿಕಾರಿಗಳ ನಿರ್ಲಕ್ಷ್ಯ: ಹಸಿವು, ನೀರಡಿಕೆಯಿಂದ ಪ್ರಾಣ ಬಿಟ್ಟ ಚಿರತೆ.
ಚಿಕ್ಕನಾಯಕನಹಳ್ಳಿ,ಏ.04  : ಅರಣ್ಯ ಇಲಾಖಾ ಅಧಿಕಾರಿಗಳ ನಿರ್ಲಕ್ಷತನದಿಂದ 4ವರ್ಷದ ಚಿರತೆ ಆಹಾರ ಮತ್ತು ಕುಡಿಯಲು ನೀರಿಲ್ಲದೆ ಒತ್ತಡದಿಂದ ಹೃದಯಾಘಾತವಾಗಿ  ಸಾವನಪ್ಪಿದೆ.  
ಬುಧವಾರ ರಾತ್ರಿ ಹೊನ್ನೆಬಾಗಿ ಗೊಲ್ಲರಹಳ್ಳಿ ಬಳಿ ತೋಟಕ್ಕೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಬಂದಿದ್ದ ಚಿರತೆ ತೋಟದಲ್ಲಿ ಹಂದಿ ಹಿಡಿಯಲು ಹಾಕಿದ್ದ ತಂತಿ ಉರುಳಿಗೆ ಸಿಲುಕಿ, ಉರುಳನ್ನು ಬಿಡಿಸಿಕೊಳ್ಳಲಾಗದೆ ಒದ್ದಾಡಿ ಹಸಿವು ಬಾಯಾರಿಕೆಯಿಂದ ಚಿರತೆ ಸಾವನ್ನಪ್ಪಿದೆ.
ಮರಣೋತ್ತರ ಪರೀಕ್ಷೆಯ ನಂತರ ಈ ವಿಷಯವನ್ನು  ವೈದ್ಯರು ದೃಢೀಕರಣ ಪಡಿಸಿದ್ದಾರೆ. ಶವಪರೀಕ್ಷೆಯ ನಂತರ ಚಿರತೆಯನ್ನು ಅರಣ್ಯ ಇಲಾಖೆ ಕಛೇರಿಯ ಹಿಂಭಾಗದಲ್ಲಿ ದಹನ ಮಾಡಲಾಯಿತು. 
ರೈತ ಪಳನಿಸ್ವಾಮಿಯ ಜಮೀನನಲ್ಲಿ ಉರುಳಿಗೆ ಸಿಲುಕಿಕೊಂಡ ಚಿರತೆ ಸಾವನ್ನಪ್ಪಿದ ಹಿನ್ನಲೆಯಲ್ಲಿ ರೈತನ ಮೇಲೆ ಅಧಿಕಾರಿಗಳು ಕೇಸು ದಾಖಲಿಸಲು ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ ಎಂಬ ಮಾಹಿತಿ ಗ್ರಾಮಸ್ಥರಲ್ಲಿ ವ್ಯಕ್ತವಾಗುತ್ತಿದೆ.. 
ಗುರುವಾರ ಬೆಳಿಗ್ಗೆ  ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರೂ, ಅವರು ಶೀಘ್ರ ಕಾರ್ಯಪ್ರವೃತ್ತರಾಗಿ ಚಿರತೆಯನ್ನು ಉರುಳಿನಿಂದ ಬಿಡಿಸಿ ಶುಶ್ರೂಷೆ ಮಾಡದೆ ಚಿರತೆಯ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾಗಿದೆ. 
 ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜನರನ್ನು ನಿಯಂತ್ರಿಸಿದ್ದರು ಆದರೆ ಗುರುವಾರ ರಾತ್ರಿ 7.30ರ ಸುಮಾರಿನಲ್ಲಿ ಚಿರತೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎನ್ನಲಾಗಿದೆ. 
ಚಿ.ನಾ.ಹಳ್ಳಿ ವಲಯ ಅರಣ್ಯ ಅಧಿಕಾರಿ ಮಾರುತಿ ಮಾತನಾಡಿ,  ಚಿರತೆಯನ್ನು ಬೋನಿಗೆ ಹಾಕಲು ಬೆಂಗಳೂರಿನ ಬೆನ್ನೇರುಘಟ್ಟದ ವನ್ಯ ಪ್ರಾಣಿ ತಜ್ಞರಿಗೆ ದೂರವಣಿ ಮುಖಾಂತರ ಮಾಹಿತಿ ನೀಡಲಾಗಿತ್ತು ಆದರೆ ಅವರು ಸ್ಥಳಕ್ಕೆ ಆಗಮಿಸುವುದರೊಳಗೆ ಚಿರತೆ ಹೃದಯಾಘಾತದಿಂದ ಸಾವನ್ನಪ್ಪಿದೆ, ಬನ್ನೇರುಘಟ್ಟದ ಚೇತನ್, ತುಮಕೂರಿನಿಂದ ಎಸಿಎಫ್ ಅಮರ್ನಾಥ್, ತಿಪಟೂರಿನ ಇ,ಎಫ್ ನಾಗೇಂದ್ರರಾವ್ ಹಾಗೂ ಸಿಬ್ಬಂದಿ ಆಗಮಿಸಿದರೂ ಏನೂ ಪ್ರಯೋಜನವಾಗಲಿಲ್ಲ. 
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಗುಡ್ಡಗಾಡು ಪ್ರದೇಶದ ಜನರು ಪ್ರಾಣಿಗಳನ್ನು ಬೇಟೆಯಾಡಲು ತಂತಿ ಮುಖಾಂತರ ಉರುಳನ್ನು ಹಾಕಿ ಮೊಲ, ನವಿಲು, ಹಂದಿಗಳಂತಹ ಪ್ರಾಣಿಗಳನ್ನು ಹಿಡಿಯಲು ಹಾಕುವ ಉರುಳಿಗೆ ಚಿರತೆ, ಹುಲಿ ಹಾಗೂ ಇತರೆ ಪ್ರಾಣಿಗಳು ಸಿಲುಕಿ ಕಾಡು ಪ್ರಾಣಿಗಳು ನಾಶವಾಗುತ್ತಿದೆ, ಇದರ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಮಾಹಿತಿ ಕೊಡುವ ಮೂಲಕ ಅವರಿಗೆ ಜಾಗೃತಿ ಮೂಡಿಸಬೇಕೆಂದರು.


 ವಿಶ್ವಕರ್ಮ ಜನಾಂಗದ ಅಭಿವೃದ್ದಿಗಾಗಿ
ಚಿಕ್ಕನಾಯಕನಹಳ್ಳಿ,ಏ.04 : ವಿಶ್ವಕರ್ಮ ಜನಾಂಗದ ಅಭಿವೃದ್ದಿಗಾಗಿ ಬೆಂಗಳೂರಿನಲ್ಲಿ ಎರಡು ಎಕರೆ ಜಮೀನನ್ನು ತೆಗೆದುಕೊಂಡಿದ್ದು ಇದರಲ್ಲಿ ವಿಶ್ವಕರ್ಮ ಜನಾಂಗದ ಮಕ್ಕಳಿಗೆ ವಿದ್ಯಾಥರ್ಿನಿಲಯ ಸ್ಥಾಪಿಸಿ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ವಿಶ್ವಕರ್ಮ ರಾಜ್ಯಾಧ್ಯಕ್ಷ ಬಿ.ಉಮೇಶ್ ತಿಳಿಸಿದರು.
ಪಟ್ಟಣದ ಕಾಳಿಕಾಂಬ ದೇವಾಲಯದಲ್ಲಿ ವಿಶ್ವಕರ್ಮ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯಾಧ್ಯಕ್ಷನಾಗಿ 4ವರ್ಷದ ಅವಧಿಯಲ್ಲಿ ಜನಾಂಗದ ಅಭಿವೃದ್ದಿಗಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಲಾಗಿದೆ ರಾಜ್ಯಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ನನ್ನನ್ನು ಬೆಳೆಸಿದ ಜನಾಂಗದವರಿಗೆ ಕೃತಜ್ಞತೆ ಸಲ್ಲಿಸಿದ ಅವರು ತುಮಕೂರು ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯಥರ್ಿ ಎ.ಕೃಷ್ಣಪ್ಪರವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತಾಲ್ಲೂಕಿನಲ್ಲಿ ಸಣ್ಣ ಪುಟ್ಟ ಜನಾಂಗಗಳು ರಾಜಕೀಯ ಪ್ರಾತಿನಿಧ್ಯ ಪಡೆದು ಮುಂದೆ ಬರುವಂತೆ ಸಲಹೆ ನೀಡಿದ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ವಿಶ್ವಕರ್ಮ ಜನಾಂಗದ ಅಭಿವೃದ್ದಿಗೆ ಹೆಚ್ಚಿನದಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಜನಾಂಗದ ಗೋಪಾಲಾಚಾರ್, ದೇವರಾಜು, ಸಿ.ಯತಿರಾಜು ಉಪಸ್ಥಿತರಿದ್ದರು