Wednesday, November 23, 2011



ಜಾತಿ ಗಣತಿಯಲ್ಲಿ  ನೈಜ, ಪೂರ್ಣ ಹಾಗೂ ನಿಖರ ಮಾಹಿತಿಗೆ ಒತ್ತು ನೀಡಿ: ಸಿ.ಟಿ.ಎಂ.

ಚಿಕ್ಕನಾಯಕನಹಳ್ಳಿ,ನ.23 : ಸಕರ್ಾರಿ ಸೌಲಭ್ಯ ವಂಚಿತ ಫಲಾನುಭವಿಗಳಿಗೆ, ಸೌಲಭ್ಯವನ್ನು ದೊರಕಿಸಿಕೊಡಲು ಕೇಂದ್ರ ಸಕರ್ಾರ ಚಿಂತಿಸಿ ಜಾತಿಗಣತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗಣತಿ ಕಾರ್ಯ ನೆರವೇರಿಸುವವರು ಜನಸಾಮಾನ್ಯರಲ್ಲಿ ನೇರವಾಗಿ ಸಂಪರ್ಕ ಬೆಳೆಸಿಕೊಂಡು ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿ ಎಂದು ತಾಲೂಕು ನೋಡಲ್ ಅಧಿಕಾರಿ  ಸಿ.ಟಿ.ಮುದ್ದುಕುಮಾರ್ ತಿಳಿಸಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ನಡೆದ ಸಾಮಾಜಿಕ ಆಥರ್ಿಕ ಮತ್ತು ಜಾತಿಗಣತಿ 2011 ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ ಬಂದ 10 ವರ್ಷಗಳ ನಂತರ ಜನಗಣತಿ ಕಾರ್ಯಕ್ರಮ ಆರಂಭವಾಗಿ ದೇಶದ ಜನತೆಯ ಗಣತಿ ದೊರಕಿತು,  ಅದೇ ರೀತಿಯ ದೇಶದಲ್ಲೇ ಪ್ರಥಮ ಬಾರಿಗೆ ಜಾತಿಗಣತಿ ಕಾರ್ಯ ಆರಂಭವಾಗಿದ್ದು ಅತಿ ಜಾಗರೂಕತೆಯಿಂದ  ಗಣತಿ ಕಾರ್ಯವನ್ನು ಆರಂಭಿಸಿ ಉತ್ತಮವಾಗಿ ಗಣತಿ ಮಾಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.
 ಈ ಮೊದಲು  ಜನಗಣತಿ ಕಾರ್ಯವನ್ನು ಶಿಕ್ಷಕರಿಗೆ ವಹಿಸಲಾಗಿತ್ತು, ಈಗ ಜಾತಿಗಣತಿ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತರಿಗೆ ವಹಿಸಿದ್ದು ಈಗ ನಡೆಯುತ್ತಿರುವ 3 ದಿನಗಳ ತರಬೇತಿಗೆ ಆಗಮಿಸಿ ಅಲ್ಲಿ ತಿಳಿಸುವ ಮಾಹಿತಿಯೊಂದಿಗೆ ಜನಸಾಮಾನ್ಯರಲ್ಲಿ ವಿನಯದಿಂದ ಚಚರ್ೆಗೆ ಅವಕಾಶ ನೀಡದೆ ಗಣತಿಕಾರ್ಯ ಯಶಸ್ವಿಗೊಳಿಸಿ ಎಂದು ಹೇಳಿದರು.
ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮಾತನಾಡಿ ಗಣತಿಕಾರ್ಯದ ತರಬೇತಿ ಪಡೆದವರಿಗೆ,  ಅವರು ಕೆಲಸ ನಿರ್ವಹಿಸುವ ಭಾಗದಲ್ಲೇ  ಗಣತಿಕಾರ್ಯ ನಡೆಸಲು ಸೂಚಿಸಲಾಗುವುದು, ಇದಕ್ಕಾಗಿ ಸೂಪರ್ವೈಸರ್ಗಳನ್ನು ನೇಮಿಸಲಾಗುವುದು ಕಾರ್ಯ ನಡೆಸುವಾಗ ಸಂಶಯಗಳು ಎದುರಾದಲ್ಲಿ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳು, ಸೆಕ್ರೆಟರಿಗಳನ್ನು ಸಂಪಕರ್ಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಪೂರ್ಣಮಾಹಿತಿ ಪಡೆಯದೇ ಗಣತಿಕಾರ್ಯ ಮುಂದುವರೆಸಬೇಡಿ ಎಂದರು. ಗಣತಿ ಕಾರ್ಯವನ್ನು ನಿಗದಿತ ದಿನಾಂಕದೊಳಗೆ ಪೂರ್ಣಗೊಳಿಸಿ ಎಂದರು.
ತುಮಕೂರು ತಾ.ಪಂ. ಇ.ಓ ವೆಂಕಟೇಶಯ್ಯ ಮಾತನಾಡಿ ಗಣತಿಕಾರ್ಯ ಆರಂಭಿಸಿದಾಗ ಸಾರ್ವಜನಿಕರ ವಿರುದ್ದವಾಗಿ ನಡೆದುಕೊಳ್ಳದೆ ಅವರು ಕೊಡುವ ಮಾಹಿತಿ ಪಡೆದು ಗಣತಿಕಾರ್ಯವನ್ನು ಯಶಸ್ವಿಗೊಳಿಸಿ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಗಣತಿಕಾರ್ಯದ ಮೇಲ್ವಿಚಾರಕ ಗುರುಸಿದ್ದಪ್ಪ, ವೇಣುಗೋಪಾಲ್, ಚಂದ್ರಶೇಖರ್ ಜಯಣ್ಣ ಮುಂತಾದವರಿದ್ದರು.

Tuesday, November 22, 2011





ತಾಲ್ಲೂಕಿನ ಅಭಿವೃದ್ದಿಗಾಗಿ ನಮ್ಮಗಳ ಸಹಕಾರ ಇದ್ದೇ ಇರುತ್ತದೆ : ಸಿ.ಬಿ.ಎಸ್ 
ಚಿಕ್ಕನಾಯಕನಹಳ್ಳಿ,ನ.22 : ಚುನಾವಣೆ ಬಂದಾಗ ಮಾತ್ರ ರಾಜಕಾರಣ ಮಾಡುತ್ತೇವೆ ಹೊರತು,  ತಾಲ್ಲೂಕಿನ ಕೀತರ್ಿ ಹೆಚ್ಚುವಂತಹ ಯಾವುದೇ ಕೆಲಸಕ್ಕೆ ಪ್ರೋತ್ಸಾಹ ಹಾಗೂ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ಇದ್ದೇ ಇರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿ ಲಕ್ಷ ದೀಪೋಪತ್ಸವದ ಅಂಗವಾಗಿ ಶ್ರೀ ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ  ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,  ಇಂತಹ ಟೂನರ್ಿಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ, ಆಗಲೇ ಟೂನರ್ಿಗಳು ಯಶಸ್ವಿಯಾಗುವುದು. ಕ್ರೀಡೆಯಿಂದ ದೈಹಿಕವಾಗಿ ಶಕ್ತಿ ತುಂಬುತ್ತದಲ್ಲದೆ ಕ್ರೀಡಾಸ್ಫಧರ್ಿಯ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದ ಅವರು ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಶ್ರೀ ಮೃತ್ಯುಂಜಯದೇಶಿಕೇಂದ್ರ ಶ್ರೀಗಳು ಮಾತನಾಡಿ ಕ್ರೀಡೆಯು ಮುಂದುವರಿದಂತೆ ಕ್ರೀಡಾಭಿಮಾನಿಗಳು ಹೆಚ್ಚಬೇಕು ಆಗಲೇ ಕ್ರೀಡೆಗೆ ಪ್ರೋತ್ಸಾಹ ಹೆಚ್ಚಿದಂತೆ, ಆಂಗ್ಲರ ಕ್ರಿಕೆಟ್ಟಿನಿಂದ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಇವುಗಳ ಬೆಳೆಸಬೇಕಾದರೆ ಪ್ರೋತ್ಸಾಹಕರೊಂದಿಗೆ ಇದರ ಅಭಿಮಾನಿಗಳು ಹೆಚ್ಚಬೇಕು ಎಂದರು.
ಬೆಂಗಳೂರು ವಲಯದ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ ಮಾತನಾಡಿ ಕ್ರೀಡೆಗೆ ಜಾತಿ, ಮತ, ಅಂತಸ್ಥು ಇಲ್ಲದೆ ಗುರುತಿಸುವಂತಹದು ಅದನ್ನು ಸರಿಯಾಗಿ ಬಳಸಿಕೊಂಡು ತಮ್ಮ ಭವಿಷ್ಯಕ್ಕೂ ದಾರಿ ಮಾಡಿಕೊಳ್ಳಿ ಎಂದ ಅವರು ಕಬಡ್ಡಿ, ಖೋ-ಖೋ ಇಂತಹ ಗ್ರಾಮೀಣ ಆಟಗಳು ಹೆಚ್ಚಿಗೆ ಖಚರ್ಿಲ್ಲದೆ ನಡೆಯುವಂತಹ ಆಟಗಳು ಇವುಗಳನ್ನು ಉಳಿಸಿ ಬೆಳಸಬೇಕಾಗಿದೆ ಎಂದರು.
  ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಮಾತನಾಡಿ ರಾಜ್ಯಮಟ್ಟದ ಕ್ರೀಡೆಯು ನಡೆಯುತ್ತಿದ್ದು  ಮುಂದಿನ ಬಾರಿ  ರಾಷ್ಟ್ರಮಟ್ಟದ ಕ್ರೀಡೆ ನಡೆಯಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಲಾ.ಬ.ಶಾ.ಕ್ರೀ.ಸಂಘದ ಗೌರವಾಧ್ಯಕ್ಷ ಆದರ್ಶಕುಮಾರ್, ಬಿಜೆಪಿ ಪ್ರಧಾನ ಕಾರ್ಯದಶರ್ಿ ಸುರೇಶ್ಹಳೇಮನೆ, ಸಿ.ಡಿ.ಪಿ.ಓ ಅನೀಸ್ ಖೈಸರ್ ಉಪಸ್ಥಿತರಿದ್ದರು.


ಬಡತನ ರೇಖೆಗಳಿಗಿಂತ ಕೆಳೆಗಿರುವ ಹೆಣ್ಣುಮಕ್ಕಳಿಗೆ ಉಚಿತ ಟೈಲರಿಂಗ್ ತರಬೇತಿ 
ಚಿಕ್ಕನಾಯಕನಹಳ್ಳಿ,ನ.22 : ಬಡತನ ರೇಖೆಗಳಿಗಿಂತ ಕೆಳೆಗಿರುವ ಹೆಣ್ಣುಮಕ್ಕಳಿಗೆ ತರಬೇತಿ ಶಿಕ್ಷಣ ನೀಡಿ ಅವರಿಗೆ ದೊಡ್ಡ-ದೊಡ್ಡ ಗಾಮರ್ೆಂಟ್ಸ್ಗಳಲ್ಲಿ ಕೆಲಸ ನೀಡವ ಉದ್ದೇಶವನ್ನು ಅಹೆಡ್ ಸಂಸ್ಥೆ ಹೊಂದಿದೆ ಎಂದು ಪ್ರೊಸಲ್ಯೂಷನ್ಸ್ ನಿದರ್ೇಶಕ ಜಿ.ಎಚ್.ಸೋಮಶೇಖರ್ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ಅಮ್ರಿತ್ ಸಿದ್ದ ಉಡುಪುಗಳ ಹೊಲಿಗೆ ತರಬೇತಿ ಶಿಕ್ಷಣ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೆಣ್ಣುಮಕ್ಕಳು ತಮ್ಮ ಜೀವನದ ಆಥರ್ಿಕತೆಯನ್ನು ಸುಧಾರಿಸಲು ಉದ್ಯೋಗದ ಅವಶ್ಯಕತೆ ಇದೆ, ಅವರಿಗಾಗಿ ಸಂಸ್ಥೆಯು 30 ದಿನಗಳ ಉಚಿತ ತರಬೇತಿ ಹಾಗೂ ಊಟದ ಸೌಲಭ್ಯವನ್ನು ಕೂಡ ಒದಗಿಸುತ್ತದೆ ಎಂದ ಅವರು ರಾಜ್ಯದ 25 ಕೇಂದ್ರಗಳಲ್ಲಿ ಆರಂಭಿಸಲಾಗಿರುವ ಸಂಸ್ಥೆಯು ಪ್ರತಿ ಕೇಂದ್ರದಲ್ಲೂ ಒಂದು ಸಾವಿರ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸುವ ಗುರಿ ಹೊಂದಿದೆ. ಈ ಸೌಲಭ್ಯವು ಹೆಂಗಸರಿಗೆ ಮಾತ್ರವಲ್ಲದೆ ಗಂಡಸರಿಗೂ ತರಬೇತಿ ನೀಡಲಿದೆ ಆದರೆ ಹೆಂಗಸರಿಗೆ ಹೆಚ್ಚಿನ ಆಧ್ಯತೆ ಇದೆ, ಅವರಿಗೆ ತರಬೇತಿ ನೀಡಿ ಬೆಂಗಳೂರು, ತುಮಕೂರು ಇನ್ನಿತರ ಸ್ಥಳಗಳಲ್ಲಿ ಉದ್ಯೋಗ ಕೊಡಿಸುವ ವಿಶ್ವಾಸ ವ್ಯಕ್ತಪಡಿಸದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತರಬೇತಿ ಪಡೆದವರು ಉದ್ಯೋಗ ಪಡೆದ ಮೇಲೆ ದುಡಿಯುತ್ತೇನೆಂಬ ಅಹಃನಿಂದ  ಬೀಗಬಾರದು, ಪ್ರತಿಯೊಬ್ಬರು ಇನ್ನಬ್ಬರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಕೆಲಸ ನಿರ್ವಹಿಸಬೇಕು ಎಂದ ಅವರು ಈ ತರಬೇತಿಯಿಂದಾಗಿ ತಾಲ್ಲೂಕಿನ ಹಲವರಿಗೆ ಉದ್ಯೋಗ ದೊರಕುವ ಭರವಸೆ ಇದೆ ಎಂದರು.
ಸಮಾರಂಭದಲ್ಲಿ ಪ್ರಸೊಲ್ಯೂಷನ್ ನಿದರ್ೇಶಕ ಚಂದ್ರಶೇಖರ್, ಪುರಸಭಾ ಸದಸ್ಯರಾದ ರವಿ(ಮೈನ್ಸ್), ರಾಜಣ್ಣ, ಎಂ.ಎನ್.ಸುರೇಶ್, ಸಿ.ಪಿ.ಚಂದ್ರಶೇಖರಶೆಟ್ಟರು, ಸಿ.ಡಿ.ಪಿ.ಓ ಅನೀಸ್ಖೈಸರ್  ಮುಂತಾದವರು ಉಪಸ್ಥಿತರಿದ್ದರು.




ದಾಸಶ್ರೇಷ್ಠ ಕನಕದಾಸರ ಜಯಂತ್ಯೋತ್ಸವ 
ಚಿಕ್ಕನಾಯಕನಹಳ್ಳಿ,ನ.22 : ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 29ರ ಮಂಗಳವಾರ ಬೆಳಗ್ಗೆ 9ಕ್ಕೆ ತಾಲ್ಲೂಕಿನ ಹಂದನಕೆರೆ ಹೋಬಳಿಯ ಪಾಪನಕೊಣ ಗ್ರಾಮದಲ್ಲಿ  ಏರ್ಪಡಿಸಲಾಗಿದೆ ಎಂದು ಕನಕ ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ಪಿ.ಆರ್.ಗಂಗಾಧರಯ್ಯ ತಿಳಿಸಿದ್ದಾರೆ.
ಶ್ರೀ ಕನಕ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಶ್ರೀ ಈಶ್ವರಾನಂದಪುರಿಸ್ವಾಮಿಗಳು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ.ಗ್ರಾ.ಸಂಘದ ಗೌರವಾಧ್ಯಕ್ಷ ಪಿ.ಆರ್.ಗಂಗಾಧರ್, ಜಿಲ್ಲಾ ಜಿ.ಪಂ.ಯೋಜನಾ ನಿದರ್ೇಶಕ ಆಂಜನಪ್ಪ, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯರಾದ ಎನ್.ಜಿ.ಮಂಜುಳ, ಕುರುಬ ಜನಾಂಗದ ರಾಜ್ಯ ಸಮಿತಿ ಉಪಾಧ್ಯಕ್ಷೆ ಮಂಜುಳ ನಾಗರಾಜು, ಮಹಾನಗರಪಾಲಿಕೆ ನಾಗರಾಜು, ಎಂ.ಶಿವರಾಜು, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ತುರುವೇಕೆರೆ ಕು.ಸಂಘದ ಹೆಚ್.ಕೆ.ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಜಿ.ಪಂ.ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ, ಬಿಜೆಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕುರುಬರ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಕೊಟಿಗೆಮನೆ ನ್ಯೂಸ್ನೆಟ್ನ ಸಿ.ಗುರುಮೂತರ್ಿ ಜೆ.ಡಿ.ಎಸ್.ಮುಖಂಡ ಎನ್.ಜಿ.ಶಿವಣ್ಣ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಹಶೀಲ್ದಾರ್ಗಳಾದ  ಎನ್.ಆರ್.ಉಮೇಶ್ಚಂದ್ರ, ವಿಜಯ್ಕುಮಾರ್, ನಿವೃತ್ತ ಸಹಕಾರ ಸಂಘದ ಎಸ್.ಡಿ.ಜಯಕುಮಾರ್, ಸಿ.ಪಿ.ಐ ಕೆ.ಪ್ರಭಾಕರ್ ಮುಂತಾದವರು ಉಪಸ್ಥಿತರಿರುವರು.

ುರಸಭಾ ಮುಖ್ಯಾಧಿಕಾರಿಯಾಗಿ ಟಿ.ಆರ್.ವೆಂಕಟೇಶಶೆಟ್ಟಿ
ಚಿಕ್ಕನಾಯಕನಹಳ್ಳಿ,ನ.22 : ಪಟ್ಟಣದ ಪುರಸಭಾ ಮುಖ್ಯಾಧಿಕಾರಿಯಾಗಿ ಟಿ.ಆರ್.ವೆಂಕಟೇಶಶೆಟ್ಟಿ ಅಧಿಕಾರ ವಹಿಸಿದ್ದಾರೆ.
ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪರವರು ವಗರ್ಾವಣೆಗೊಂಡಿದ್ದು ಅವರ ಸ್ಥಾನಕ್ಕೆ ಟಿ.ಆರ್.ವೆಂಕಟೇಶಶೆಟ್ಟಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ, ಇವರು ಈ ಹಿಂದೆ ತುರುವೇಕೆರೆ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಾಗಿದ್ದರು.
ಚಿಕ್ಕ ವಯಸ್ಸಿನಲ್ಲೇ ವೇದಿಕೆ ಧೈರ್ಯ ತುಂಬಿದರೆ ಉತ್ತಮ : ಸಿ.ಬಿ.ಎಲ್ 
ಚಿಕ್ಕನಾಯಕನಹಳ್ಳಿ,ನ.22 :  ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವೇದಿಕೆಯ ಧೈರ್ಯ ತುಂಬಿದರೆ ಮುಂದೆ ಉನ್ನತ ಸ್ಥಾನಗಳನ್ನು ಏರಿದಾಗ ಅವರಿಗೆ ಈ ವೇದಿಕೆ ಉತ್ತಮ ದಾರಿಯಾಗಿ ರೂಪುಗೊಳ್ಳುತ್ತದೆ ಎಂದು ಪತ್ರಕರ್ತ ಸಿ.ಬಿ.ಲೋಕೇಶ್ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳು  ದೇಶದ ಆಸ್ತಿ ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸಬೇಕು. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದ ಅವರು ತಾಲ್ಲೂಕು ಮಟ್ಟ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟಕ್ಕೆ ಸ್ಪಧರ್ೆಸಿ ತಾಲ್ಲೂಕಿಗೆ ಕೀತರ್ಿ ತರಲೇಂದು ಆಶಿಸಿದರು.
ಪುರಸಭಾ ಅಧ್ಯಕ್ಷರಾದ ದೊರೆಮುದ್ದಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ  ಪ್ರತಿಭೆಯು ಮಕ್ಕಳ ವಿಕಾಸಕ್ಕೆ ಪೂರಕವಾದ ವೇದಿಕೆಯಾಗಿದೆ, ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಉಜ್ವಲವಾಗಿ ಬೆಳೆಯಲಿ ಎಂದು ಹೇಳಿದರು. 
  ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್ ಮಾತನಾಡಿ  ಸಕರ್ಾರ ಶಿಕ್ಷಣಕ್ಕಾಗಿ ಅನೇಕಾನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಕಾರ್ಯಕ್ರಮಗಳು ಪ್ರಯೋಜನವಾಗುತ್ತಿಲ್ಲ, ಮಕ್ಕಳು ಇಂತಹ ಪ್ರತಿಭಾ ಕಾರಂಜಿಯ ಮೂಲಕ ಪಠ್ಯವನ್ನು ಆಧರಿಸಿಕೊಂಡು ಕಲಾತ್ಮಕತೆಯನ್ನು ಬೆಳೆಸಿಕೊಳ್ಳಲು ಹಾಗೂ ಅವರ ಪ್ರತಿಭೆಯ ಹೊರಹೊಮ್ಮಿಸಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
 ವೇದಿಕೆಯಲ್ಲಿ ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ,  ಸಿ.ಆರ್.ಪಿ.ದುರ್ಗಯ್ಯ ಶಾಲಾ ಮುಖ್ಯೋಪಾಧ್ಯಾಯಿನಿ  ಚೇತನ, ಮುಂತಾದವರು ಉಪಸ್ಥಿತರದ್ದರು.
ಸಮಾರಂಭದಲ್ಲಿ  ಮಲ್ಲಿಕಾಜರ್ುನ್ ಪ್ರಾಥರ್ಿಸಿ, ದುರ್ಗಯ್ಯ ಸ್ವಾಗತಿಸಿದರೆ ವಿಜಯ್ಕುಮಾರ್ ನಿರೂಪಿಸಿ ಪಾಂಡುರಂಗಯ್ಯ ವಂದಿಸಿದರು.  


Friday, November 18, 2011




ಕನಕ ಏಕಶಿಲಾ ವಿಗ್ರಹ, ಶ್ರೀ ಲಕ್ಷ್ಮೀದೇವಾಲಯ ನೂತನ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಶಂಕಸ್ಥಾಪನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ನ.18 : ಶ್ರೀ ಕನಕ ಏಕಶಿಲಾ ವಿಗ್ರಹ, ಶ್ರೀ ಲಕ್ಷ್ಮೀದೇವಾಲಯ ನೂತನ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಶಂಕಸ್ಥಾಪನಾ ಮಹೋತ್ಸವ ಸಮಾರಂಭವನ್ನು ಇದೇ 21ರ ಸೋಮವಾರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ ಎಂದು ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿಸ್ವಾಮೀ ಹೇಳಿದರು.
ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲೇ ಅತ್ಯಂತ ಎತ್ತರವಾದ ಹಾಗೂ ಇದೇ ಮೊದಲ ಬಾರಿಗೆ ಕನಕದಾಸರ ಏಕಶಿಲಾ ಮೂತರ್ಿಯ ಕೆತ್ತನೆ ನಡೆಯುತ್ತಿದ್ದು 30ಜನ ಶಿಲ್ಪಿಗಳು ಕೆತ್ತನೆಯಲ್ಲಿ ತಲ್ಲೀನರಾಗಿದ್ದಾರೆ. ಈಗಾಗಲೇ ಕೆತ್ತನೆಯ ಶೇ.75ರಷ್ಟು ಕೆಲಸ ಮುಗಿದಿದೆ. ಏಕಶಿಲಾ ವಿಗ್ರಹವು 35ಅಡಿ ಎತ್ತರ ಇದ್ದು, 8ಅಡಿ ದಪ್ಪ, 14 ಅಡಿ ಅಗಲ ಇದೆ, 15 ಅಡಿ ಕಲ್ಲಿನ ಮೇಲೆ 35 ಅಡಿ ಎತ್ತರದಶಿಲೆ, 15 ಅಡಿ ಕೆಳಗೆ ವಿಶೇಷ ಪೀಠ ಜ್ಞಾನ ಇರುವುದು. ಈ ಏಕಶಿಲಾ ವಿಗ್ರಹಕ್ಕೆ 8ರಿಂದ 10ಕೋಟಿಯಷ್ಟು ವೆಚ್ಚ, ಲಕ್ಷ್ಮೀ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಶಾಲಾ ಕಟ್ಟಡದ ಶಂಕುಸ್ಥಾಪನೆ ನಡೆಯಲಿದೆ.
ಸಮಾರಂಭದಲ್ಲಿ ಕಾಗಿನೆಲೆ ಕ್ಷೇತ್ರದ ನಿರಂಜನಾನಂದಪುರಿಸ್ವಾಮಿ, ಶಾಖಾಮಠದ ಶಿವಾನಂದಪುರಿಸ್ವಾಮಿ, ತಿಂಥಣಿ ಶಾಖಾಮಠದ ಸಿದ್ದರಾಮಾನಂದಪುರಿಸ್ವಾಮಿ,  ರಾಮಾನುಜ ಮಠದ ರಾಮಾಜುಜಜೀಯರ್ ಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಾಕ್ಷ  ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ,  ಹೆಚ್.ಎಂ.ರೇವಣ್ಣ, ಸಚಿವ ವತರ್ೂರು ಪ್ರಕಾಶ್, ಎಂ.ಎಲ್.ಸಿ ಜಿ.ಎಚ್.ತಿಪ್ಪಾರೆಡ್ಡಿ, ಸಂಸದರಾದ ಜನಾರ್ದನಸ್ವಾಮಿ, ಎಚ್.ವಿಶ್ವನಾಥ್, ಶಾಸಕ ಸಿ.ಬಿ.ಸುರೇಶ್ಬಾಬು, ವಿಧಾನ ಪರಿಷತ್ ಸದಸ್ಯರಾದ ಗಾಯಿತ್ರಿ ಶಾಂತೇಗೌಡ,  ಡಾ.ಹುಲಿನಾಯ್ಕರ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ರಘುನಾಥರಾವ್ ಮಲ್ಕಾಪುರ, ಕಾರ್ಯದಶರ್ಿ ರಾಮಚಂದ್ರಪ್ಪ  ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕನಕ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಉದಯಶಂಕರ್ ಒಡೆಯರ್, ಕೃಷಿ ಬ್ಯಾಂಕ್ನ ಕೆ.ಜಗದೀಶ ಒಡೆಯರ್ ಉಪಸ್ಥಿತರಿದ್ದರು.

Thursday, November 17, 2011




ಗ್ರಾ.ಪಂ ಇಲಾಖಾ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳು 
ಚಿಕ್ಕನಾಯಕನಹಳ್ಳಿ,ನ.17 : ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖಾ ನೌಕರರ ಸಂಘದ ನೂತನ ಅಧ್ಯಕ್ಷರನ್ನಾಗಿ ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಕಾರ್ಯದಶರ್ಿ ಅಡವೀಶ್ಕುಮಾರ್ರವರನ್ನು ಆಯ್ಕೆಮಾಡಲಾಗಿದೆ.
ಸಂಘದ ನೂತನ ಕಾರ್ಯದಶರ್ಿಯನ್ನಾಗಿ ಹೊಯ್ಸಳಕಟ್ಟೆ ಗ್ರಾ.ಪಂ.ಕಾರ್ಯದಶರ್ಿ ನೀಲಕಂಠಯ್ಯರವರನ್ನು, ಹಾಗೂ ಖಜಾಂಚಿಯಾಗಿ ಗೋಡೆಕೆರೆ ಕಾರ್ಯದಶರ್ಿ ಸೀತಾರಾಮುರವರನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಗ್ರಾ.ಪಂ ಪಿ.ಡಿ.ಓ ಮತ್ತು ಕಾರ್ಯದಶರ್ಿಗಳು ಹಾಜರಿದ್ದರು.

ರೈತರ ಜಮೀನು ರಕ್ಷಿಸಲು ರಸ್ತೆಗಿಳಿಯಲಿರುವ ಮಠಾಧೀಶರು
ಚಿಕ್ಕನಾಯಕನಹಳ್ಳಿ,ನ.17 : ತಾಲ್ಲೂಕಿನ ಸೋಮಲಾಪುರದಿಂದ ದುಗಡಿಹಳ್ಳಿಯವರೆಗೆ ರೈತರ ಜಮೀನುಗಳಲ್ಲಿ ಹಾದುಹೋಗುವಂತೆ ಸವರ್ೆ ಕಾರ್ಯ ಮಾಡಿರುವುದನ್ನು ಖಂಡಿಸಿ ರಸ್ತೆ ತಡೆ ಚಳುವಳಿಯನ್ನು ಇದೇ 21ರ ಸೋಮವಾರ ಬೆಳಗ್ಗೆ 9 ಗಂಟೆಗೆ ಪಟ್ಟಣದ ನೆಹರು ಸರ್ಕಲ್ನಲ್ಲಿ ನಡೆಯಲಿದೆ.
ರಾಜ್ಯ ರೈತ ಸಂಘ , ಹಸಿರು ಸೇನೆ, ರೈತ ಹೋರಾಟ ಸಮಿತಿ ವತಿಯಿಂದ ಚಳುವಳಿ ಹಮ್ಮಿಕೊಂಡಿದ್ದು ಕಾಗಿನೆಲೆ ಗುರುಪೀಠಶಾಖಾ ಮಠದ ಈಶ್ವರಾನಂದಪುರಿಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ, ಬಾಚೀಹಳ್ಳಿ ಇಂಜನಿಯರ್ ವೇದಾನಂದಮೂತರ್ಿ ಉಪಸ್ಥಿತರಿರುವರು.

Wednesday, November 16, 2011

Tuesday, November 15, 2011



ಪ್ರತಿಭೆಗಳನ್ನು ಗುರುತಿಸಿದರೆ ದೇಶದ ಪ್ರತಿಭಾವಂತ ಮಕ್ಕಳಾಗುತ್ತಾರೆ 
ಚಿಕ್ಕನಾಯಕನಹಳ್ಳಿ,ನ.15 : ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಆ ಪ್ರತಿಭೆಗಳ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕರಿಸಿಬೇಕೆಂದು ಎಂದು ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ ತಿಳಿಸಿದರು.
ಪಟ್ಟಣದ ಕೆ.ಎಂ.ಪಿ.ಜಿ.ಎಸ್ ಶಾಲೆಯಲ್ಲಿ ಶಿಶು ಅಭಿವೃದ್ದಿ ಯೋಜನೆ ವತಿಯಿಂದ ನಡೆದ ಮಕ್ಕಳ ದಿನಾಚರಣೆ ಹಾಗೂ ಕನಕದಾಸ ಜಯಂತಿ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭೆಗಳನ್ನು ಗುರುತಿಸಿದರೆ ಮುಂದೆ ಆ ಮಕ್ಕಳು ಪ್ರತಿಭಾವಂತ ಮಕ್ಕಳಾಗಿ ದೇಶದ ಉನ್ನತಿಗೆ ಮುಂದಾಗುವರು ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಮ್ಮರವರು ಮಾತನಾಡಿ ಮಕ್ಕಳು ನೆಹರೂರವರ ಗುಣಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು. ವಿಜೇತರಾದ ಮಕ್ಕಳಿಗೆ ಪುರಸಭಾ ಸದಸ್ಯರಾದ ಸಿ.ಎಲ್.ಕೃಷ್ಣಮೂತರ್ಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ನಾಗರತ್ನ ಸ್ವಾಗತಿಸಿದರೆ ತುಳಸಿ ನಿರೂಪಿಸಿ ಪುಟ್ಟಮ್ಮ ವಂದಿಸಿದರು.

Monday, November 14, 2011




.ನಾನು ಎಂಬ ಅಹಂಕಾರ ಬಿಟ್ಟಾಗಲೇ ಜೀವನ ಸಾಮರಸ್ಯದಿಂದ ಕೂಡಿರುವುದು  ಸಿ.ಬಿ.ಎಸ್ 
ಚಿಕ್ಕನಾಯಕನಹಳ್ಳಿ,ನ.14: ಕನಕದಾಸರ ನುಡಿಮುತ್ತಿನಂತೆ ನಾನು ಎಂಬ ಅಹಂಕಾರ ಬಿಟ್ಟು ನಾವು ಎಂಬ ಭಾವನೆ ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಜೀವಿಸುವವರು ಸಾಮರಸ್ಯ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಆಡಳಿತ ಹಾಗೂ ಕನಕ ಯುವಕ ಸಂಘದ ವತಿಯಿಂದ ನಡೆದ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು  ಮಹಾನ್ ವ್ಯಕ್ತಿಗಳ ಜಯಂತ್ಯೋತ್ಸವನ್ನು ನಾವುಗಳು  ಆಚರಿಸದರೆ ಸಾಲದು ಅವರ ಆದರ್ಶ, ಮಾರ್ಗದರ್ಶನ ಅರಿತು ಎಲ್ಲಾ ಸಮಾಜದವರು ಒಂದಾಗಿ ಬಾಳಬೇಕು ಆಗಲೇ ಜೀವನವು ಉತ್ತಮವಾಗಿರುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಡಾ.ಡಿ.ಎನ್.ಯೋಗಿಶ್ ಕನಕದಾಸರು ಕವಿ, ಕಲಿಯೂ, ಸಂತರೂ, ಕೀರ್ತನಾಕಾರರೂ ಹಾಗೂ ಯೋಧ ಪುರುಷರಾಗಿದ್ದರು ಅವರು ಯಾವ ಮತಕ್ಕೂ ಅಂಟಿಕೊಳ್ಳದ ಮಧ್ಯಕಾಲದ ಕನ್ನಡ ಸಾಹಿತ್ಯ ಲೋಕದ ಮೇರುಕವಿಯಾಗಿದ್ದರು. ಶೂದ್ರ ಪಂಗಡದಲ್ಲಿ ಜನಿಸಿದ್ದರೂ ಸಾಮಾಜಿಕ ಪ್ರತಿರೋಧ ಮೆಟ್ಟಿ ನಿಂತರು, 12ನೇ ಶತಮಾನದ ವಚನಕಾರರು ವಚನ ಸಾಹಿತ್ಯವನ್ನು ಆಯ್ಕೆಮಾಡಿಕೊಂಡರೆ ದಾಸರು  ಭಕ್ತಿ, ಸಂಗೀತ, ಸಾಹಿತ್ಯವನ್ನು ಕೀರ್ತನೆಗಳ ಮೂಲಕ ಜಗತ್ತಿಗೆ ಸಾರಿ ಭಕ್ತಕನಕದಾಸರಾದರು.  ಗುರು ಧೀಕ್ಷೆ ದೊರೆಯದ ಕನಕರು ಸರಳವಾದ ಭಕ್ತಿಶರಣಾಗತಿ ಮಾರ್ಗ ಅನುಸರಿಸಿದ ಅವರ ಕಿರ್ತನೆಗಳಲ್ಲಿ, ಶರಣಾಗತಿ ಧರ್ಮ ಅಡಗಿದ್ದು ಕೀರ್ತನೆಗಳು ಸರಳ ಜನಪದ ಶೈಲಿಯಲ್ಲಿವೆ ಎಂದರು.
ಸನ್ಮಾನ ಸ್ವೀಕರಿಸಿ ಸಾಹಿತಿ ಅಬ್ದುಲ್  ಹಮೀದ್ ಮಾತನಾಡಿ ದಾಸರ ಬಗ್ಗೆ ದಂತ ಕಥೆಗಳಿವೆ, ಇವರ ಬಗ್ಗೆ ಸರಿಯಾದ ಮಾಹಿತಿ ನೀಡುವವರಿಲ್ಲ, ದಾಸ ಸಾಹಿತ್ಯದಲ್ಲಿ ಮಾನವ ಕುಲ ಒಂದೇ ಎಂದು ಸಾರಿದವರು ಕನಕರು. ಅವರ ಕೀರ್ತನೆಗಳನ್ನು ಇತರ ಭಾಷೆಗಳಿಗೆ ಅನುವಾದಿಸಲು ಸಾಹಿತ್ಯಾ ಪ್ರೋತ್ಸಾಹಕರು ಸಹಕರಿಸಬೇಕು ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ 16ನೇ ಶತಮಾನದ ಮಧ್ಯಭಾಗದಲ್ಲೇ ಸಮಾಜದ ಬದಲಾವಣೆಗೆ ಪ್ರಯತ್ನಿಸಿದವರು ಕನಕದಾಸರು, ಇವರ ಜಯಂತ್ಯೋತ್ಸವವನ್ನು ಸಕರ್ಾರಿ ಕಾರ್ಯಕ್ರಮವನ್ನಾಗಿಸಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮುಂತಾದವರು ಮಾತನಾಡಿದರು.
ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದೊಂದಿಗೆ ವೀರಗಾಸೆ, ಡೊಳ್ಳುಕುಣಿತ, ಪಾಳೆಗಾರರ, ಕನಕದಾಸರ, ಸಂಗೊಳ್ಳಿರಾಯಣ್ಣರ ಛದ್ಮವೇಷಗಳ ಹಾಗೂ   ಜಾನಪದ ಕಲಾ ತಂಡಗಳೊಂದಿಗೆ ತಾಲ್ಲೂಕು ಅಧಿಕಾರಿಗಳು, ಜನಪ್ರತಿನಿಧಿಗಳು ವಿವಿಧ ಸಂಘಗಳ ಸದಸ್ಯರು, ಸಾರ್ವಜನಿಕರು, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯರುಗಳಾದ ಲೋಹಿತಾಬಾಯಿ, ಜಾನಮ್ಮರಾಮಚಂದ್ರಯ್ಯ, ಪಂಚಾಕ್ಷರಯ್ಯ, ಎನ್.ಜಿ.ಮಂಜುಳ,  ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಐ ಕೆ.ಪ್ರಭಾಕರ್, ಕನ್ನಡ ಸಂಘದ ವೇದಿಕೆ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಭಾಜಪ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಮುಂತಾದವರಿದ್ದರು.
ಸಮಾರಂಭದಲ್ಲಿ ಬರಸಿಡ್ಲಹಳ್ಳಿ ಪ್ರೌಡಶಾಲಾ ಮಕ್ಕಳು ರೈತಗೀತೆ ಹಾಡಿದರು. ಸುಮುಖ ಮಹಿಳಾ ತಂಡ ಪ್ರಾಥರ್ಿಸಿ,  ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರೆ, ಬಸವರಾಜು ನಿರೂಪಿಸಿ, ಸುರೇಶ್ ವಂದಿಸಿದರು.


Sunday, November 13, 2011

Saturday, November 12, 2011

Friday, November 11, 2011



ಕನಕದಾಸರ ಜಯಂತ್ಯೋತ್ಸವ ಅಂಗವಾಗಿ ಗೀತಗಾಯನ ಹಾಗೂ ಚಿತ್ರಕಲಾ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ನ.11 : ಭಕ್ತ ಕನಕ ಜಯಂತ್ಯೋತ್ಸವದ ಅಂಗವಾಗಿ ಶ್ರೀ ಕನಕದಾಸರ ಗೀತಗಾಯನ ಸ್ಪಧರ್ೆ ಹಾಗೂ ಕನಕದಾಸರ ಚಿತ್ರಕಲಾ ಸ್ಪದರ್ೆಯನ್ನು ಇದೇ 13ರ ಭಾನುವಾರ ಬೆಳಗ್ಗೆ 9ಗಂಟೆಗೆ ಏರ್ಪಡಿಸಲಾಗಿದೆ.
ಸ್ಫದರ್ೆಯನ್ನು ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಹೊಯ್ಸಳ ಶಿಲ್ಪ ಕೇಂದ್ರ ಮತ್ತು ಜಕಣ ಶಿಲ್ಪ ಗುರುಕುಲ ಇವರ ಸಹಯೋಗದೊಂದಿಗೆ ಪಟ್ಟಣದ ಹೊಸಬಾಗಿಲು ಮೂಲೆಯ ಶ್ರೀ ಗುರುಸಿದ್ದರಾಮೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದು ಸ್ಫದರ್ೆಯಲ್ಲಿ ಪ್ರಾಥಮಿಕ, ಪ್ರೌಡಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಲಾಗಿದೆ. 
 ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಬಿಜೆಪಿ ಮಹಿಳಾ ಮುಖಂಡರಾದ ಮಂಜುಳನಾಗರಾಜು, ಲೇಖಕ ಎಂ.ದೇವಾಜರ್ುನ, ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ, ಜಿ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.

Thursday, November 10, 2011



ನೇಕಾರರಿಗೆ ವಿವಿಧ ರೀತಿಯ ಯೋಜನೆಗಳು 
ಚಿಕ್ಕನಾಯಕನಹಳ್ಳಿ,ನ.10 : ಸುವರ್ಣ ವಸ್ತ್ರನೀತಿ ಯೋಜನೆಯಡಿ ಕೈಮಗ್ಗದಲ್ಲಿ ಕೆಲಸ ನಿರ್ವಹಿಸುವವರಿಗೆ ಆಥರ್ಿಕವಾಗಿ ಸಹಾಯ ಮಾಡಲು ಸುಮಾರು 2 ಲಕ್ಷರೂಗಳು ಸಾಲ ನೀಡಲಿದ್ದು ಅದರಲ್ಲಿ 1 ಲಕ್ಷರೂ ಸಬ್ಸಿಡಿಯಾಗಿ ಹಾಗೂ 1ಲಕ್ಷ ಸಾಲದ ರೂಪದಲ್ಲಿ ನೀಡವುದಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ತೀಮರ್ಾನಿಸಲಾಗಿದೆ ಎಂದು ಜವಳಿ ಸಚಿವ ವತರ್ೂರ್ ಪ್ರಕಾಶ್ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ರೇವಣ ಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ನಡೆದ ಕೇಂದ್ರ ಪುರಸ್ಕೃತ ಸಮಗ್ರ ಕೈಮಗ್ಗ ಅಭಿವೃದ್ದಿ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ, ಸಮುದಾಯ ಭವನದ ಭೂಮಿಪೂಜೆ ಹಾಗೂ ಉಲ್ಕಾಡರ್ಿಂಗ್ ಕಟ್ಟಡ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರಮುಖವಾಗಿ ಜವಳಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರಿಕೆಯು ಜವಳಿ ಕ್ಷೇತ್ರದಲ್ಲಿ ಉತ್ತಮ ಚಟುವಟಿಕೆಯೊಂದಿದೆ ಆದರೆ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವರ ಆಥರ್ಿಕವಾಗಿ  ಹಿಂದುಳಿದಿದ್ದಾರೆ, ಅವರಿಗೆ ನೆರವಾಗಲು ಇಲಾಖೆ ಶ್ರಮಿಸುತ್ತದೆ. ತುಮಕೂರು ಜಿಲ್ಲೆಯಲ್ಲಿ ಪ್ರಮುಖವಾಗಿ ಉಣ್ಣೆ ಕೈಮಗ್ಗ ನೇಕಾರಕೆಯ ಸಾಂಪ್ರದಾಯಿಕ ಕಸುಬಾಗಿ ನಡೆಯುತ್ತಿದ್ದು ಇವರಿಗೆ ನಿರಂತರ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ನಿಗಮ ಕೇಂದ್ರಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿವೆ. ವಿದ್ಯುತ್ ಮಗ್ಗ ನೇಕಾರರಿಗಾಗಿ ಕೇಂದ್ರ ಸಕರ್ಾರದಿಂದ ತಾಂತ್ರಿಕತೆ ಉನ್ನತೀಕರಣ ಯೋಜನೆ ಜಾರಿಯಲ್ಲಿದ್ದು, ಜಾಗತಿಕ ಮಾರುಕಟ್ಟೆಗೆ ಹೊಂದುವಂತಹ ಉತ್ಪನ್ನಗಳ ತಯಾರಿಕೆಗೆ ಅವಶ್ಯವಿರುವ ಆಧುನಿಕ ಮಗ್ಗಗಳನ್ನು ಅಳವಡಿಸಿಕೊಳ್ಳುವ ನೇಕಾರರಿಗೆ ಆಥರ್ಿಕ ಸೌಲಭ್ಯವನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆ. ಯುವಕ ಯುವತಿಯರಿಗಾಗಿ ಇಲಾಖೆ ವತಿಯಿಂದ ಜವಳಿ ವಲಯದ ಸಿದ್ದ ಉಡುಪು ತಯಾರಿಕೆಗಾಗಿ ವಿವಿಧ ಕೋಸರ್್ಗಳಲ್ಲಿ ತರಬೇತಿಯನ್ನು ನೀಡಲು ತಾಲ್ಲೂಕು ಮಟ್ಟದಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುತ್ತದೆ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೆಚ್ಚಿನ ಸ್ಥಾನ ನೀಡುವುದಾಗಿ ತಿಳಿಸಿದರು. 
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ನೇಕಾರರು ಆಥರ್ಿಕವಾಗಿ ಹಿಂದುಳಿದಿದ್ದಾರೆ ಅವರ ಉತ್ಪನ್ನಕ್ಕೆ  ಸಚಿವರು ಉತ್ತಮ ಬೆಲೆ ನೀಡಿ ಅವರ ಸಂಕಷ್ಟವನ್ನು ತೀರಿಸಬೇಕು ಎಂದ ಅವರು ತಾಲ್ಲೂಕಿನ ಬಗ್ಗೆ ಹೆಚ್ಚು ಒತ್ತು ನೀಡಬೇಕೆಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಯ್ಯ, ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಸ್ವಾಗತಿಸಿದರು.

ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ನ.10 : ಕಲಿ, ಸಂತ, ಕೀರ್ತನಕಾರ, ಸಮಾಜಸೇವಕ, ಕವಿಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 14ರ ಸೋಮವಾರ  ಮಧ್ಯಾಹ್ನ 12ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕು ಆಡಳಿತ, ಕನಕ ಯುವಕ ಸಂಘದವರ ಸಂಯುಕ್ತಾಶ್ರಯದಲ್ಲಿ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅದ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಸಿದ್ದಗಂಗಾ  ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಡಿ.ಎನ್.ಯೋಗಿಶ್ ವಿಶೇಸ ಉಪನ್ಯಾಸ ನೀಡಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.
 ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ.ಸಿ.ಎಲ್.ಪ್ರಹ್ಲಾದ್(ವೈದ್ಯಕೀಯ ಸೇವೆ)  ಶಿವಶಂಕರ್(ಶೈಕ್ಷಣಿಕ ಸೇವೆ),  ಎಸ್.ಚಂದ್ರಶೇಖರ್(ಸಾವಯುವ ಕೃಷಿ), ಶಾರದಮ್ಮ(ಸಾಮಾಜಿಕ ಸೇವೆ), ಅಬ್ದುಲ್ ಹಮೀದ್(ಸಾಹಿತ್ಯ) ಸಾಧಕರಿಗೆ ಸನ್ಮಾನಿಸಲಾಗುವುದು.


Wednesday, November 9, 2011


ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ
ಚಿಕ್ಕನಾಯಕನಹಳ್ಳಿ,ನ.09 : ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಇದೇ 10ರ ಗುರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್ ಉದ್ಘಾಟನೆ ನೆರವೇರಿಸಲಿದ್ದು ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲ ಅಧ್ಯಕ್ಷತೆ ವಹಿಸಲಿದ್ದು ಅಡಿಷನಲ್ ಸಿವಿಲ್ ನ್ಯಾಯಾಧೀಶರಾದ ಎ.ಜಿ.ಶಿಲ್ಪಾ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಸಹಾಯಕ ಸಕರ್ಾರಿ ಅಭಿಯೋಜಕರಾದ ಕೆ.ಎಲ್.ಭಾಗ್ಯಲಕ್ಷ್ಮೀ,  ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದಶರ್ಿ ರಾಜಶೇಖರಪ್ಪ ಹಾಗೂ ವಿವಿಧ ಸೇವಾ ಕೇಂದ್ರದ  ವಕೀಲರುಗಳು ಉಪಸ್ಥಿತರಿರುವರು.

ಸಿ.ಬಿ.ಎಸ್ ಹುಟ್ಟುಹಬ್ಬದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಹಾಗೂ ಆರೋಗ್ಯ ತಪಾಸಣಾ ಶಿಬಿರ 
ಚಿಕ್ಕನಾಯಕನಹಳ್ಳಿ,ನ.09 : ಸಿ.ಬಿ.ಸುರೇಶ್ಬಾಬುರವರ 41ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ಫೆ.16 2012ರಂದು ಉಚಿತ ಸಾಮೂಹಿಕ ವಿವಾಹ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು ಎಂದು ಸುರೇಶ್ಬಾಬು ಅಭಿಮಾನಿ ಬಳಗ ತಿಳಿಸಿದೆ.
ಪಟ್ಟಣದ ಪುರಸಭಾ ಸಭಾ ಭವನದಲ್ಲಿ ಏರ್ಪಡಿಸಿದ್ದ ಸುರೇಶ್ಬಾಬುರವರ ಜನ್ಮದಿನಾಚಾರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಅಂಗವಿಕಲ, ಅಂತಜರ್ಾತಿ, ವಿಧವಾ ವಿವಾಹವಾಗುವರಿಗೆ ವಿಶೇಷ ಆಧ್ಯತೆ ನೀಡಲಾಗುವುದು, ಹಾಗೂ 500ಕ್ಕೂ ಹೆಚ್ಚಿನ ಜೋಡಿಗಳಿಗೆ ವಿವಾಹ ನಡೆಸಲು ತಿಮರ್ಾನಿಸಲಾಗಿದ್ದು  ತಾಲ್ಲೂಕಿನ ಗ್ರಾ.ಪಂ. ಹಾಗೂ ತಾ.ಪಂ ಸದಸ್ಯರುಗಳು, ವಿವಾಹವಾಗಲಿಚ್ಚಿಸುವವರಿಗೆ ಕರೆತಂದು ಪ್ರೋತ್ಸಾಹಿಸಲು ಕರೆ ನೀಡಿದ ಅವರು ಅಭಿಮಾನಿ ಬಳಗ ಉಚಿತ ಸಾಮೂಹಿಕ ವಿವಾಹ ಹಾಗೂ ಆರೋಗ್ಯ ಶಿಬಿರ ನಡೆಸಲು ಇಚ್ಚಿಸಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆರವರು ವಿಶೇಷ ಆಹ್ವಾನಿತರಾಗಿರುವರು ಹಾಗೂ ಎಲ್ಲಾ ಸಮುದಾಯದ ಸ್ವಾಮೀಜಿಗಳನ್ನು ಆಹ್ವಾನಿಸಿ ವಧುವರರಿಗೆ ಆಶೀರ್ವಚನ ಕೊಡಿಸಲಾಗುವುದು. ಉಚಿತ ಸಾಮೂಹಿಕ ವಿವಾಹಕ್ಕೆ ಸಿದ್ದತೆಗೊಳ್ಳಲು ಅನುಕೂಲವಾಗಲು ಮೂರು ತಿಂಗಳ ಮುಂಚಿತವಾಗಿಯೇ ಮಾಹಿತಿ ನೀಡಲು ಈ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.
ಸಭೆಯಲ್ಲಿ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು. ತಾ.ಪಂ, ಗ್ರಾ.ಪಂ.ಸದಸ್ಯರು, ಮುಖಂಡರು, ಸಮಾಜಸೇವಕರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿಗೆ ಇಂದು ಸಚಿವ ವತರ್ೂರು ಪ್ರಕಾಶ್ ಆಗಮನ
ಚಿಕ್ಕನಾಯಕನಹಳ್ಳಿ,ನ.09 : ಕೇಂದ್ರ ಪುರಸ್ಕೃತ ಸಮಗ್ರ ಕೈಮಗ್ಗ ಅಭಿವೃದ್ದಿ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಹಾಗೂ  ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿಲು ಜವಳಿ ಸಚಿವ ವತರ್ೂರು ಪ್ರಕಾಶ್ ಚಿ.ನಾ.ಹಳ್ಳಿ ಪಟ್ಟಣದ ಕನಕ ಭವನಕ್ಕೆ ಇಂದು ಆಗಮಿಸಲಿದ್ದಾರೆ.

Tuesday, November 8, 2011


ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯನ್ನು ಸಿ.ಬಿ.ಐ ಗೆ ವಹಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ,ನ.08 : ಸುಪ್ರೀಂ ಕೋಟರ್್ ಸ್ವಯಂ ದೂರು ದಾಖಲಿಸಿಕೊಂಡು ತುಮಕೂರು ಜಿಲ್ಲೆಯಲ್ಲಿ ನಡೆದಿರುವಂತಹ ಅಕ್ರಮ ಗಣಿಗಾರಿಕೆಯನ್ನು ಸಿ.ಬಿ.ಐಗೆ ವಹಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಇದೇ 19ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಕನರ್ಾಟಕ ದಲಿತ ಪರಿಸರ ಮತ್ತು ಮೀಸಲಾತಿ ರಕ್ಷಣಾ ಸಮಿತಿ ಧರಣಿ ನಡೆಸಲಿದೆ ಎಂದು ಸಮಿತಿ ಅಧ್ಯಕ್ಷ ನಾರಾಯಣ್ ತಿಳಿಸಿದ್ದಾರೆ. 
ಸಿ.ಇ.ಸಿ  ತಂಡ ಈವರೆವಿಗೆ ತನಿಖೆ ನಡೆಸಿದ್ದರೂ ವಿವಿಧ ಅರಣ್ಯ ಪ್ರದೇಶಗಳಲ್ಲಿ ನಡೆದಿರುವ ಗಣಿ ಅದಿರು ಲೂಟಿಯನ್ನು ಸಾಕಷ್ಟು ಪತ್ತೆ ಹಚ್ಚಿಲ್ಲ. ಕಂಪನಿಗಳ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದ ಅದಿರು ಲೂಟಿ ನಡೆದಿದೆ, ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆದು ಅದಿರನ್ನು ಲೂಟಿ ಮಾಡಿ ಅದರ ಮೇಲೆ ತ್ಯಾಜ್ಯ ವಸ್ತುಗಳನ್ನು ಹಾಗೂ ಹೊರ ಮಣ್ಣನ್ನು, ಹುಲ್ಲು ಹೆಪ್ಪುಗಳಿಂದ ಹೊದಿಕೆ ಮಾಡಿದೆ, ಸಿ.ಇ.ಸಿ ತಂಡಗಳು ಇದನ್ನು ವ್ಯಾಪಕವಾಗಿ ಪತ್ತೆ ಹಚ್ಚಿರುವುದಿಲ್ಲ, ಹಾಗೂ ಗಣಿ ಕಂಪನಿಗಳು, ಮಾಲೀಕರು, ಮ್ಯಾನೇಜರ್ಗಳಲ್ಲದೆ ಗಣಿ ಮಾಫಿಯಾದ ವ್ಯಕ್ತಿಗಳು, ಏಜೆಂಟರುಗಳು ವಿವಿಧ ಗುತ್ತಿಗೆದಾರರು, ದಲ್ಲಾಳಿಗಳು, ವಹವಾಟುದಾರರು, ಮೇಸ್ತ್ರಿಗಳು,  ಹಲವರು ನೇರವಾಗಿ ಗಣಿ ಮಾಫಿಯಾದಲ್ಲಿ ಭಾಗಿಯಾಗಿದ್ದು ಇಲ್ಲಿನ ಅಕ್ರಮ  ಗಣಿಗಾರಿಕೆಯನ್ನು ಸಿ.ಬಿ.ಐಗೆ ವಹಿಸಿದರೆ ಪರಿಣಾಮಕಾರಿಯಾಗಿ ತನಿಖೆಯಾಗುತ್ತದಲ್ಲದೆ ಅಕ್ರಮ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡು ಸಕರ್ಾರದ ಬೊಕ್ಕಸಕ್ಕೆ ಸಷ್ಟವಾಗಿರುವ ಹಣ ಪೂರೈಕೆಯಾಗುತ್ತದೆಯಾದ್ದರಿಂದ ಜಿಲ್ಲೆಯ ಎಲ್ಲಾ ಗಣಿಗಾರಿಕೆ ಅಕ್ರಮಗಳ ತನಿಖೆಯನ್ನು ಸಿ.ಬಿ.ಐಗೆ ವಹಿಸಿ ಗಣಿ ಮಾಫಿಯಾದಲ್ಲಿ ಭಾಗಿಯಾದ ವ್ಯಕ್ತಿ ಹಾಗೂ ಸಕರ್ಾರದ ಇಲಾಖಾಧಿಕಾರಿಗಳನ್ನು ಶಿಕ್ಷೆಗೊಳಪಡಿಸಿಬೇಕೆಂಬುದರ ಬಗ್ಗೆ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಮಿತಿಯ ಪ್ರಧಾನ ಕಾರ್ಯದಶರ್ಿ ಕೆ.ಎನ್.ರಂಗಸ್ವಾಮಿ, ಕಾರ್ಯದಶರ್ಿ ಪಿ.ಕೃಷ್ಣಮೂತರ್ಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Monday, November 7, 2011


ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ನ.07 : ಕೇಂದ್ರ ಪುರಸ್ಕೃತ ಸಮಗ್ರ ಕೈಮಗ್ಗ ಅಭಿವೃದ್ದಿ ಯೋಜನೆಯ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ, ಸಮುದಾಯ ಭವನದ ಭೂಮಿಪೂಜೆ ಹಾಗೂ ಉಲ್ ಕಾಡರ್ಿಂಗ್ ಮಿಲ್  ಕಟ್ಟಡ ಉದ್ಘಾಟನಾ ಸಮಾರಂಭವನ್ನು ಇದೇ  10ರ ಗುರುವಾರ  ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ.
ಸಮಾರಂಭವನ್ನು ಪಟ್ಟಣದ ಕನಕ ಭವನದಲ್ಲಿ ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ  ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದು  ಜವಳಿ ಸಚಿವ ವತರ್ೂರು ಪ್ರಕಾಶ್ ಭೂಮಿ ಪೂಜೆ ಹಾಗೂ ಕಾರ್ಯಕ್ರಮದ ಉದ್ಘಾಟನೆ ಮತ್ತು  ಸಂಸದ ಜಿ.ಎಸ್.ಬಸವರಾಜು ಉಲ್ ಕಾಡರ್ಿಂಗ್ ಮಿಲ್ ಕಟ್ಟಡದ ಉದ್ಘಾಟನೆ ನೆರವೇರಿಸುವರು.  
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಮಗ್ಗಗಳ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯ ಎಂ.ಆರ್.ಹುಲಿನಾಯ್ಕರ್ ಸಹಾಯಧನ ಹಾಗೂ ಜಿಲ್ಲಾ ಡಿ.ಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಚೆಕ್ ವಿತರಣೆ ಮಾಡುವರು. 
ಜಿಲ್ಲಾ ಪಂಚಾಯತ್ ಅಧ್ಯಕ್ಷ ಡಾ.ರವಿ.ಬಿ.ನಾಗರಾಜಯ್ಯ ಕಂಬಳಿಗಳ ವಿತರಣೆ ಮಾಡಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಪ್ರಮಾಣ ಪತ್ರ ವಿತರಣೆ ಮಾಡುವರು. ಇದೇ ಸಂದರ್ಭದಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಟ.ಆರ್.ಸುರೇಶ್ರವರಿಗೆ ಸನ್ಮಾನಿಸಲಾಗುವುದು.

ತಾಲ್ಲೂಕಿಗೆ ಹೆಚ್ಚಿನ ನಿವೇಶನದ ಅನುದಾನ ನೀಡಲು ವಿ.ಸೋಮಣ್ಣನವರಲ್ಲಿ ಮನವಿ 
ಚಿಕ್ಕನಾಯಕನಹಳ್ಳಿ,ನ.07 : ತಾಲ್ಲೂಕು ನಂಜುಂಡಪ್ಪನವರ ವರದಿಯಲ್ಲಿ ಹಿಂದುಳಿದ ತಾಲ್ಲೂಕು ಎಂದು ಉಲ್ಲೇಖವಾಗಿದೆ, ಈಗ ರಾಜ್ಯ ಸಕರ್ಾರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು ತಾಲ್ಲೂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನ ರಹಿತರಿದ್ದು ಸಕರ್ಾರದ ವತಿಯಿಂದ ಅತಿ ಹೆಚ್ಚಿನ ವಸತಿ ಸೌಲಭ್ಯ ಒದಗಿಸಿಕೊಡಬೇಕೆಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರೀ ಶಿವಣ್ಣ ವಸತಿ ಸಚಿವ ವಿ.ಸೋಮಣ್ಣನವರಲ್ಲಿ ವಿನಂತಿಸಿಕೊಂಡರು.
ಹೊಸದುರ್ಗ ತಾಲ್ಲೂಕಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನಿಮಿತ್ತ ಮಾರ್ಗ ಮಧ್ಯದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸಚಿವರಲ್ಲಿ ವಿನಂತಿಸಿದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಹ ವಸತಿ ಹೀನ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ತಂದರೆ ಸಹಕರಿಸುವದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಕಾರ್ಯದಶರ್ಿ ಕೆ.ಎನ್.ಶಂಕರಯ್ಯ, ಪುರಸಭಾ ನಾಮಿನಿ ಸದಸ್ಯ ಲಕ್ಷ್ಮಯ್ಯ, ಮಾಳಿಗೆಹಳ್ಳಿ ಪ್ರಸಾದ್, ರೋಜೆಗೌಡ, ಸಿ.ಬಿ.ಲಿಂಗಯ್ಯ, ಸುಂದರೇಶ್ , ಮಧು ನವಿಲೆ ಮುಂತಾದವರಿದ್ದರು.

Saturday, November 5, 2011





ಕ್ರೀಡೆಗೆ ಜಾತಿ ಮತ ತೋರದೆ ಪ್ರತಿಭೆಗಳಿಗೆ  ಪ್ರೋತ್ಸಾಹ ನೀಡಿ
ಚಿಕ್ಕನಾಯಕನಹಳ್ಳಿ,ನ.05 : ಕ್ರೀಡೆಗೆ ಜಾತಿ ಮತದಲ್ಲಿನ ಬೇದ ಭಾವ ತೋರದೆ ಕ್ರೀಡಾ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿ ಅವರ ಭವಿಷ್ಯಕ್ಕೆ ದಾರಿಯಾಗಬೇಕು ಎಂದು ಕುಪ್ಪೂರು ಮಠದ ಪೀಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕನಕ ಯುವಕರ ಬಳಗ ಹಾಗೂ ಬ್ಲೂ ಬಾಯ್ಸ್ ಯೂತ್ ಕ್ಲಬ್ನ ವತಿಯಿಂದ ನಡೆದ ರಾಜ್ಯಮಟ್ಟದ ಕ್ರಿಕೆಟ್ ಟೂನರ್ಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲಾ, ಕ್ರೀಡೆ, ವಿಜ್ಞಾನ ಇನ್ನಿತರ ಕ್ಷೇತ್ರಗಳಲ್ಲಿ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕೆ ಹೊರತು ಅವರ ಭವಿಷ್ಯದ ದಾರಿಗೆ ಮುಳ್ಳಾಗಬಾರದು ಎಂದು ಸಲಹೆ ನೀಡಿದರು.
ಕೆಪಿಸಿಸಿ ಸದಸ್ಯ ಸಂತೋಷ್ ಜಯಚಂದ್ರ ಮಾತನಾಡಿ ಕ್ರೀಡೆಯಲ್ಲಿ ಗೆಲುವು ಸೋಲು ಅನಿವಾರ್ಯ ಅದರ ಬಗ್ಗೆ ಯೋಚಿಸದೆ ಆಟವನ್ನು ಮನಸ್ಪೂತರ್ಿಯಿಂದ ಆಡಲು ಕರೆ ನೀಡಿದರು.
ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಕ್ರೀಡಾಪಟು ಮುದ್ದುರಾಮಯ್ಯನವರ ನೆನಪಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಟೂನರ್ಿಯನ್ನು ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದು ಅವರು ರಾಜ್ಯಮಟ್ಟದ ಕುಸ್ತಿಪಟುವಾಗಿ ತಾಲ್ಲೂಕಿಗೆ ಹೆಸರು ತಂದಿದ್ದರು, ಅವರಂತೆ ಯುವ ಪ್ರತಿಭೆಗಳು ಹೊರಹೊಮ್ಮಿ ತಾಲ್ಲೂಕಿಗೆ ಉತ್ತಮ ಹೆಸರು ತರಲು ಆಶಿಸಿದರು.


ಸಮಾರಂಭದಲ್ಲಿ ಕಂಬಳಿ ಸೊಸೈಟಿ ಸದಸ್ಯ ಸಿ.ಎಂ.ಬೀರಲಿಂಗಯ್ಯ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ, ಜಯಣ್ಣ, ವಾಸು ಉಪಸ್ಥಿತರಿದ್ದರು.

ಹಿಂದು ಮುಸ್ಲಿಂ ಸೌಹಾರ್ಧತೆಗೆ ಸಹಕರಿಸಿ
ಚಿಕ್ಕನಾಯಕನಹಳ್ಳಿ,ನ.05 : ಹಿಂದು, ಮುಸ್ಲಿಂ ಸೌಹಾರ್ಧತೆಗೆ ದಕ್ಕೆ ತರುವ ಕಿಡಿಗಳ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಿ.ಪಿ.ಐ ಕೆ.ಪ್ರಭಾಕರ್ ತಿಳಿಸಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬಕ್ರಿದ್ ಹಬ್ಬದ ಬಗ್ಗೆ ಕೆರೆದಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ತಾಲ್ಲೂಕಿನ ಹಿಂದು ಮುಸ್ಲಿಂ ಭಾಂದವ್ಯದ  ಬಗ್ಗೆ ನಾನು 10 ವರ್ಷಗಳಿಂದಲೂ ಪತ್ರಿಕೆಗಳಲ್ಲಿ ಓದಿ ತಿಳಿದಿರುವೆ, ಈ ಭಾಂದವ್ಯದ ಬಗ್ಗೆ ಯಾರೂ ಅಡ್ಡಿಪಡಿಸಬಾರದು, ಅಂತಹ ಘಟನೆಗಳು ನಡೆಯುವ ಬಗ್ಗೆ ತಿಳಿದು ಬಂದರೆ ಸಾರ್ವಜನಿಕರು ನಮಗೆ ತಿಳಿಸಿ ಸಹಕರಿಸಬೇಕೆಂದು ಕೋರಿದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ತಾಲ್ಲೂಕಿನಲ್ಲಿ ನಡೆಯುವ ತಾತಯ್ಯನಗೋರಿ ಜಾತ್ರೆ ಹಾಗೂ ಆಂಜನೇಯನ ಜಾತ್ರೆಯಲ್ಲಿ ಹಿಂದು, ಮುಸ್ಲಿಂರು ಅಣ್ಣತಮ್ಮಂದಿರಂತೆ ಒಟ್ಟುಗೂಡಿ ಜಾತ್ರೆಯನ್ನು ಯಶಸ್ವಿಯಾಗಿಸುತ್ತಾರೆ ಇದು ಈಗೆ ಮುಂದುವರೆಯಬೇಕೆಂದು ಆಶಿಸಿದರು.
ಸಭೆಯಲ್ಲಿ ಎಸ್.ಐ ಚಿದಾನಂದಮೂತರ್ಿ, ತಾತಯ್ಯನ ಗೋರಿ ಕಮಿಟಿ ಕಾರ್ಯದಶರ್ಿ ಗನ್ನಿಸಾಬ್, ಸಿ.ಕೆ.ಮಹಮದ್, ಮಹಮದ್ ಇಕ್ಬಾಲ್, ಪುರಸಭಾ ಸದಸ್ಯರಾದ ರಂಗಸ್ವಾಮಯ್ಯ, ದೊಡ್ಡಯ್ಯ, ಕರವೇ ಅಧ್ಯಕ್ಷ ಸಿ.ಟಿ. ಗುರುಮೂತರ್ಿ,   ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಕೆ.ಜಿ.ಕೃಷ್ಣೆಗೌಡ, ದಯಾನಂದ್ ಹಾಗೂ ಪೋಲಿಸ್ ಸಿಬ್ಬಂದಿ  ಉಪಸ್ಥಿತರಿದ್ದರು.

Friday, November 4, 2011




ಚಿಕ್ಕನಾಯಕನಹಳ್ಳಿ,ನ.04 : ಅನುಭವ ಹೊಂದಿದವರ ಹಿತನುಡಿಗಳಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಇತರರು ತಿಳಿದುಕೊಂಡರೆ ಲೋಕಜ್ಞಾನದ ಜೊತೆಗೆ ಸಮಾಜದಲ್ಲಿ ಹೇಗೆ ಬಾಳಬೇಕೆಂಬ ಅರಿವು ಮೂಡುತ್ತದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ದೇವಾಂಗ ಬೀದಿಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ನೂತನ ದೇವಾಲಯದ ಪ್ರಾರಂಭೋತ್ಸವದ ಧಾಮರ್ಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಧಾಮರ್ಿಕ ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಅನುಭವದ ಮಾತುಗಳು ವ್ಯಕ್ತವಾಗುವುದಲ್ಲದೆ ಮನಷ್ಯರು ಮನುಷ್ಯರಂತೆ ಜೀವಿಸಲು ಬೇಕಾದ ಅನೇಕ ಗುಣಗಳು ಇರುತ್ತವೆ ಎಂದ ಅವರು ಉಳ್ಳವರು ದೇವಸ್ಥಾನಗಳ ಜೀಣರ್ೋದ್ದಾರಕ್ಕೆ ಶ್ರಮಿಸಬೇಕು ಆಗಲೇ ಮುಂದಿನ ತಲೆಮಾರಿಗೆ ದೇವಸ್ಥಾನಗಳು, ಮಠಮಾನ್ಯಗಳು, ದಾಸೋಹ, ಶೈಕ್ಷಣಿಕ ಇನ್ನಿತರ ಉತ್ತಮ ಕೆಲಸಗಳನ್ನು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ  ಎಂದರು.
ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ  ಸಿ.ಟಿ.ವರದರಾಜು ಮಾತನಾಡಿ ನಮ್ಮ ತಾಲ್ಲೂಕು ಕಲಾರಂಗವಾಗಿ ಹೆಸರುವಾಸಿಯಾಗಿರುವುದು ದೇವಸ್ಥಾನಗಳ ನಿಮರ್ಾಣದಿಂದಲೇ, ಈ ದೇವಸ್ಥಾನಗಳಿಂದ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಉನ್ನತ ಭಾವನೆ ಎಲ್ಲರಲ್ಲಿ ಮೂಡಿ ಕಲಾ ಪ್ರಕಾರ ಮೈಗೂಡುತ್ತದೆ ಎಂದರು.
ಸಮಾರಂಭದಲ್ಲಿ ಹಂಪಿ ಹೇಮಕೂಟ ಗಾಯಿತ್ರಿ ಪೀಠಾಧ್ಯಕ್ಷ ದಯಾನಂದಪುರಿಸ್ವಾಮಿ, ದೇವಾಂಗ ಸೇವಾ ಸಮಾಜದ ಕೆ.ಜೆ.ವೆಂಕಟರಮಣಪ್ಪ, ಪುರಸಭಾ ಸದಸ್ಯ ಕೃಷ್ಣಮೂತರ್ಿ, ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕೋದಂಡರಾಮಯ್ಯ , ಸಿ.ಟಿ.ರಂಗನಾಥ್, ಚಿಕ್ಕನಾರಾಯಣಸ್ವಾಮಿ, ಸಿ.ಟಿ.ಶ್ರೀನಿವಾಸ್, ಸಿ.ಎ.ಕುಮಾರಸ್ವಾಮಿ, ಹಾಗೂ ಹಲವರು ಗಣ್ಯರು ಉಪಸ್ಥಿತರಿದ್ದರು.

ಸಕರ್ಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಸಾಹಿತ್ಯ ಪ್ರಗತಿ ಹೊಂದುತ್ತಿದೆ
ಚಿಕ್ಕನಾಯಕನಹಳ್ಳಿ,ನ.04 : ಸಕರ್ಾರಿ ಶಾಲೆಗಳಲ್ಲಿ ಮಾತ್ರ ಕನ್ನಡದ ಭಾಷೆ, ಸಾಹಿತ್ಯ, ಕನ್ನಡ ಅಭಿಮಾನ ಪ್ರಗತಿ ಹೊಂದುತ್ತಿದೆ  ಎಂದು ಹೆಸರಾಂತ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆ ಮುಂಭಾಗದಲ್ಲಿ ಬಯಲು ಸಭಾಂಗಣಕ್ಕೆ ಮೇಲ್ಛಾವಣಿ ಕಾರ್ಯಕ್ರಮದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು ಕನ್ನಡ ಉಳಿಸಿ ಬೆಳೆಸುತ್ತಿರುವುದು ಕನ್ನಡ ಶಾಲೆಗಳು, ಕವಿಗಳು, ಸಾಹಿತಿಗಳು ಸಕರ್ಾರಿ ಶಾಲೆಗಳಲ್ಲಿ ಓದಿರುವುದೇ ಇದಕ್ಕೆ ಉದಾಹರಣೆಯಾಗಿದೆ ಎಂದ ಅವರು ಸಿನಿಮಾಗಳಲ್ಲಿ ವಿಕಾರ ಚಿತ್ರಗೀತೆಗಳು ಬರುತ್ತಿವೆ ಇದು ಬದಲಾಗಿ ಸಾಹಿತ್ಯ ಜಾನಪದ ಗೀತೆಗಳು ಮತ್ತೆ ಸೃಷ್ಠಿಯಾಗಬೇಕು ಆಗ ಈಗಿನ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಒಲವು ಹೆಚ್ಚಾಗುತ್ತದೆ ಎಂದರು.
ಕುಪ್ಪೂರು ಗದ್ದಿಗೆ ಮಠದ ಪೀಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಕಾತರ್ಿಕ ಮಾಸದಲ್ಲಿ ಪೂತರ್ಿ ದೀಪಾವಳಿ ಆಚರಿಸುವ ಹಾಗೆ ಕನ್ನಡ ಭಾಷೆಗೆ ಇನ್ನಷ್ಟು ಮೆರುಗುಗೊಳಿಸಲು ರಾಜ್ಯೋತ್ಸವವನ್ನು ನವಂಬರ್ 1ರಂದು ಮಾತ್ರವಲ್ಲದೆ ನಿತ್ಯವೂ ಆಚರಿಸಬೇಕು  ಎಂದ ಅವರು ನಮ್ಮ ಸ್ವಾಭಿಮಾನ ಭಾಷೆ ಕನ್ನಡವಾಗಿರಬೇಕು, ಖಾಸಗಿ ಶಾಲೆಗಳಿಂದ ಕನ್ನಡತನಕ್ಕೆ ದಕ್ಕೆಯಾಗುವ ಸ್ಥಿತಿ ಸಂಭವಿಸಿದೆ ಇದು ಬದಲಾಗಬೇಕಾಗಿದೆ ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಯ್ಯ, ಬಿಜೆಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ) ಉಪಸ್ಥಿತರಿದ್ದರು.

Thursday, November 3, 2011


ಕೊಳಚೆ ನೀರನ್ನು ಜನರಿಗೆ ಕುಡಿಸುತ್ತಿರುವ ಪುರಸಭೆಯವರ ವಿರುದ್ದ ಕ.ರ.ವೇ.ಹೋರಾಟ

ಚಿಕ್ಕನಾಯಕನಹಳ್ಳಿ,ನ.03 : ಜೋಗಿಹಳ್ಳಿ ಗೇಟ್ನ 2ನೇ ವಾಡರ್್ ಹಳ್ಳದಲ್ಲಿ ಪಟ್ಟಣದ ತ್ಯಾಜ್ಯ ವಿಲೇವಾರಿಗಳನ್ನು ಹಾಕುವುದರಿಂದ ಹಳ್ಳದ ನೀರಿನ ಜೊತೆಗೆ ಅಲ್ಲಿನ ತ್ಯಾಜ್ಯ ವಿಲೇವಾರಿ, ಸತ್ತ ಪ್ರಾಣಿಗಳು, ಹಾಗೂ ಮಲಿನಕಾರಿ ವಸ್ತುಗಳು ಹಳ್ಳದ ನೀರಿನಲ್ಲಿ ಸೇರಿ ಪಟ್ಟಣದ ಕೆರೆಗೆ ವಿಲೀನಗೊಳ್ಳುತ್ತಿದೆ , ಪಟ್ಟಣದ ಜನತೆ ಈ ನೀರನ್ನೇ ಕುಡಿಯಲು ಬಳಸುವುದರಿಂದ ಅನಾರೋಗ್ಯ ಹೆಚ್ಚಾಗುತ್ತಿದೆ ಇದರ ಬಗ್ಗೆ ಪುರಸಭೆ ಶೀಘ್ರ ಗಮನ ಹರಿಸಬೇಕೆಂದು ಕನರ್ಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪರವರಿಗೆ ಮನವಿ ಕೊಟ್ಟು ಮಾತನಾಡಿದ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭೆಯವರು ಪಟ್ಟಣದ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಊರಿನಿಂದ ಹೊರಕ್ಕೆ ಹಾಕುವ ಕಡೆಗೆ ಗಮನಹರಿಸಬೇಕು.  ಸುತ್ತಮುತ್ತಲಿನ ಚರಂಡಿಯ ನೀರು ಹರಿದು ಕೆರೆಯನ್ನು ಸೇರುತ್ತಿದೆ ಹಾಗೂ ಕೆರೆಯ ಸಮೀಪದಲ್ಲೇ ಪಟ್ಟಣದ ಕಸದ ರಾಶಿಗಳಿದ್ದು ಅವುಗಳು ಮಳೆಯ ಜೊತೆ ಹರಿದು ಕೆರೆಗೆ ಸೇರಿ ಕೆರೆಯ ನೀರು ಮಲಿನಗೊಳ್ಳುತ್ತಿದೆ ಇದರಿಂದ ಮಾನವನ ಆರೋಗ್ಯಕ್ಕೆ ಹಾನಿಕಾರವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಇದರ ಬಗ್ಗೆ ಪುರಸಭೆ ಗಮನಹರಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದ ಅವರು,   ಪಟ್ಟಣದ ಹೃದಯಭಾಗವಾದ ನೆಹರು ವೃತ್ತದಲ್ಲಿ ಪ್ರಯಾಣಿಕರು ಹಾಗೂ ಯಾತ್ರಿಕರು ಸದಾ ತಿರುಗಾಡುವ ಪ್ರದೇಶ ಇಲ್ಲಿನ ಸ್ವಚ್ಛತೆಯ ದೃಷ್ಠಿಯಿಂದ ಸಾರ್ವಜನಿಕ ಶೌಚಾಲಯ ನಿಮರ್ಿಸುವುದು ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ನಂಜುಂಡಪ್ಪ, ವಿಶ್ವನಾಥ್, ಸಿ.ಎಚ್.ರೂಪೇಶ್, ಗಿರೀಶ್, ನಾಗರಾಜು, ಭಾಸ್ಕರ್, ಸುಬ್ರಹ್ಮಣ್ಯ(ಸುಪ್ರೀಂ), ಮನ್ಸರ್ಪಾಷ, ನವೀನ್, ಎಸ್.ಆರ್.ಉಮೇಶ್, ಜಾಕಿರ್, ಮಧು ಹಾಜರಿದ್ದರು.

ಕನ್ನಡ ತನವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳವಂತೆ-ಕರೆ.
ಚಿಕ್ಕನಾಯಕನಹಳ್ಳಿ,ನ.03 ; ಕನ್ನಡ ಭಾಷೆ ಬೆಳೆಗುವ ದಿಸೆಯಲ್ಲಿ ಕನ್ನಡದ ಭವ್ಯ ಪರಂಪರೆ ಉಳಿಸಲು ಎಲ್ಲಾ ಹಂತಗಳಲ್ಲಿ ಕನ್ನಡತನವನ್ನು ವಿಜೃಂಬಿಸಬೇಕೆಂದು ತಹಶೀಲ್ದಾರ್ ಎನ್.ಆರ್. ಉಮೇಶ್ಚಂದ್ರ ಕರೆ ನೀಡಿದರು.
ಅವರು ತಾಲೂಕು ಕ್ರೀಡಾಂಗಣದಲ್ಲಿ 56ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಧ್ವಜಾ ರೋಹಣ ನೆರವೇರಿಸಿ ಮಾತನಾಡಿ, ಕನ್ನಡನಾಡಿನ ನೆಲ, ಜಲ, ಪುಣ್ಯಭೂಮಿ, ಇಲ್ಲಿ ಬೆಲೆಬಾಳುವ ನೈಸಗರ್ಿಕ ಸಂಪತ್ತನ್ನು ಹೊಂದಿದೆ.  ಐತಿಹಾಸಿಕ ಸ್ಥಳಗಳನ್ನು,   ಸಾಹಿತ್ಯ ಪರಂಪರೆಯನ್ನು ಹೊಂದಿರುವ ನಾಡು ಎಂದರು.
  ವಚನ ಸಾಹಿತ್ಯ, ದಾಸ ಸಾಹಿತ್ಯ ನಮ್ಮ ಸಾಹಿತ್ಯದ ಮೇರು ಕೃತಿಗಳಾದರೆ,  8 ಜ್ಞಾನ ಪೀಠ ಪ್ರಶಸ್ತಿ ಪಡೆಯುವಲ್ಲಿ ಕನ್ನಡ ನಾಡಿನ ಭವ್ಯ ಸಂಸ್ಕೃತಿ ಸರ್ವಶ್ರೇಷ್ಠವಾದದ್ದು ಕನ್ನಡತನ ಉಳಿಸಲು ಪ್ರತಿ ನಾಗರೀಕರು ಸಹಕರಿಸುವಂತೆ ಮನವಿ ಮಾಡಿದರು.
 ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಕನ್ನಡ ಭಾಷೆ ಅತ್ಯಂತ ಸರಳ ಸಮೃದ್ದವೂ ಅಗಿದ್ದು ಇಂತಹ  ಭಾಷೆಯನ್ನು ನಮ್ಮ ಉಸಿರು ಎಂದು ಬಾವಿಸಿ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
 ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಯಾಗದೆ ಕುವೆಂಪು ಹೇಳಿದಂತೆ ಬಾರಿಸು ಕನ್ನಡ ಡಿಂ ಡಿಂಮವ  ಓ ಕನರ್ಾಟಕ ಹೃದಯಶಿವಾ ಎಂಬಂತೆ ಪ್ರತಿ ಜನಮನರ ಹೃದಯದಲ್ಲಿ ಕನ್ನಡ ತನ ಬೆಳೆಸಿ ಕಟ್ಟುವ ಕಾರ್ಯ ನಡೆಯಬೇಕು ಎಂದರು.
 ಶಾಸಕ ಸಿ.ಬಿ. ಸುರೇಶ್ ಬಾಬು ಸಮಾರಂಭದಾಧ್ಯಕ್ಷತೆ ವಹಿಸಿ ಮಾತನಾಡುತ್ತ ಕನ್ನಡ ಭಾಷೆ ಅತ್ಯಂತ ಶೇಷ್ಠವಾಗಿದ್ದು ಸುಲಭವಾಗಿ ಕಲಿಯ ಬಲ್ಲ ಸರಳ ಭಾಷೆ ಇದಾಗಿದೆ. ನಮ್ಮ ನಾಡಗುಡಿ ಕಟ್ಟುವ ಕೆಲಸದಲ್ಲಿ ಬಾಗಿಯಾಗಿರುವ ಹಿರಿಯ ಚೇತನಗಳನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಯುವ ಕೆಲಸದಲ್ಲಿ ಶ್ರೀಮಂತಗೊಳಿಸಬೇಕಾಗಿದ್ದು ಯಾರಲ್ಲೂ ಕೀಳಿರಿಮೆಯ ಮನೋಭಾವ ಬೆಳೆಯದ ರೀತಿಯಲ್ಲಿ ಮಾತೃ ಭಾಷೆಯ ಬಗ್ಗೆ ಮನದಂಗದಲ್ಲಿ  ಸಾರ್ವಭೌಮ ಭಾಷೆಯಾಗಿ ವಿಜೃಂಬಿಸುವಂತೆ ಕರೆ ನೀಡಿದರು. 
ಈ ಸಂದರ್ಭದ್ಲಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.  ಸಮಾರಂಭದಲ್ಲಿ ಜಿ.ಪಂ. ಸದಸ್ಯ ಲೋಹಿತಾಬಾಯಿ, ಹಿರಿಯ ಸಾಹಿತಿ ಎಂ.ವಿ.ನಾಗರಾಜ್ರಾವ್ ಉಪಸ್ಥಿತರಿದ್ದರು. 
ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ಸ್ವಾಗತಿಸಿದರು ತಿಮ್ಮರಾಜು ವಂದಿಸಿದರು.
ಇಂದು ಪುಟ್ಟರಾಜ ಗಾವಾಯಿ ಶಿಷ್ಯವೃಂದದವರಿಂದ ಸುಗಮ ಸಂಗೀತ ಕಾರ್ಯಕ್ರ
ಚಿಕ್ಕನಾಯಕನಹಳ್ಳಿ,ನ.03 : ಶ್ರೀ ಪುಟ್ಟರಾಜು ಗಾವಾಯಿರವರ ಶಿಷ್ಯವೃಂದದವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ 56ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇಂದು ಸಂಜೆ 6ಕ್ಕೆ ಏರ್ಪಡಿಸಲಾಗಿದೆ.   ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಅಧ್ಯಕ್ಷತೆ ವಹಿಸಲಿದ್ದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಕನ್ನಡ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಸಿಪಿಐ ಕೆ.ಪ್ರಭಾಕರ್, ಟಿ.ಎ.ಪಿ.ಸಿ.ಎಂ.ಎಸ್ ನಿದರ್ೇಶಕ ಹೆಚ್.ಬಿ.ಪ್ರಕಾಶ್ ಉಪಸ್ಥಿತರಿರುವರು.  






ರಾಜ್ಯದ ಅಭಿವೃದ್ದಿಗೆ ಸಿ.ಎಂ.ಸದಾನಂದಗೌಡ ಒತ್ತು ನೀಡದಿದ್ದರೆ ಅವರ ಮೇಲೂ ತಿರುಗಿ ಬೀಳುತ್ತೇನೆ: ಎಚ್.ಡಿ.ಕೆ.
ಚಿಕ್ಕನಾಯಕನಹಳ್ಳಿ,ನ.02 : ವೇದಿಕೆ ಹಾಗೂ ಮಾಧ್ಯಮಗಳಲ್ಲಿ ನಾನು ಉತ್ತಮ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ದಿಗೆ ಮುಂದಾಗದಿದ್ದರೆ ಮುಖ್ಯಮಂತ್ರಿ ಸದಾನಂದಗೌಡರ ಮೇಲೂ ಜೆ.ಡಿ.ಎಸ್ ಪಕ್ಷ ತಿರುಗಿ ಬೀಳುತ್ತದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಎಚ್ಚರಿಸಿದ್ದಾರೆ.
ತಾಲ್ಲೂಕಿನ ಕಾಮಲಾಪುರದಲ್ಲಿ ನಡೆದ ಸಕರ್ಾರಿ ಪ್ರಾಥಮಿಕ ಪಾಠಶಾಲೆ ಹಾಗೂ ಸಕರ್ಾರಿ ಪ್ರೌಡಶಾಲಾ ಕಟ್ಟಡಗಳ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,  ಹಣ ಲೂಟಿ ಮಾಡುವವರು ಹಾಗೂ ಅನುಭವವಿಲ್ಲದವರು ರಾಜ್ಯದ ರಾಜಕಾರಣದ ಚುಕ್ಕಾಣಿ ಹಿಡಿದು ಅಭಿವೃದ್ದಿಯನ್ನು ಮರೆತಿದ್ದಾರೆ. ಪ್ರತಿಯೊಬ್ಬರಿಗೆ ಅಗತ್ಯವಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳದೆ ಲೋಡ್ ಶೆಡ್ಡಿಂಗ್ ಹೆಚ್ಚಿಸಿದ್ದಾರೆ. ನಾನು ಮುಖ್ಯಮಂತ್ರಿಯಾದ 20 ತಿಂಗಳಲ್ಲಿ ಯಾವ ಸಂದರ್ಭದಲ್ಲೂ ಲೋಡ್ ಶೆಡ್ಡಿಂಗ್ ಆಗಿರಲಿಲ್ಲ,  ಈಗಿನ ಬಿಜೆಪಿ ಸಕರ್ಾರ  ರಾಯಚೂರಿನಲ್ಲಿರುವ 8 ವಿದ್ಯುತ್ ಶಕ್ತಿ ಘಟಕಗಳಷ್ಟೇ ಅಲ್ಲದೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಮೂಲಕ ಜನತೆಯ 800 ಕೋಟಿ ಹಣ ಲೂಟಿ ಮಾಡುತ್ತಿದ್ದಾರೆ ಎಂದರಲ್ಲದೆ,  ಅನುಭವವಿಲ್ಲದವರಿಗೆ ರಾಜ್ಯದ ಅಭಿವೃದ್ದಿ ಹೇಗೆ ಮಾಡಬೇಕೆಂಬುದನ್ನು ಕೇವಲ ಐದು ವರ್ಷಗಳಲ್ಲಿ ಸಾಬೀತುಪಡಿಸುತ್ತೇನೆ, ಇಲ್ಲವಾದರೆ ರಾಷ್ಟ್ರ ರಾಜಕಾರಣದಲ್ಲಿ  ಒಂದು ಕ್ಷಣವೂ ಸಹ ಮುಂದುವರೆಯುವುದಿಲ್ಲ ಎಂದು ಸವಾಲು ಹಾಕಿದ ಅವರು ಗ್ರಾಮಗಳ ಸುವರ್ಣ ಗ್ರಾಮೋದಯಕ್ಕಾಗಿ ಗ್ರಾಮ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಆಲಿಸಿ ಭಾಗ್ಯಲಕ್ಷ್ಮೀ ಯೋಜನೆಗಳಂತಹವುಗಳನ್ನು ಜಾರಿಗೊಳಿಸದೆ ಆದರೆ ನಾನು ತಂದ ಯೋಜನೆಗಳಿಗೆ ಬಿಜೆಪಿ ಸಕರ್ಾರ ಅಡೆತಡೆಯೊಡ್ಡುತ್ತಿದೆ, ಭಾಗ್ಯಲಕ್ಷ್ಮೀ ಯೋಜನೆಗಳಲ್ಲಿ ಪ್ರತಿಯೊಬ್ಬರಿಗೂ ಯಾವ ನಿಬಂಧನೆಗಳಿಲ್ಲದೆ ಇದರ ಪಲಾಪೇಕ್ಷೇ ನೀಡಿದೆ ಎಂದರು.
 ಬಿಜೆಪಿ ಸಕರ್ಾರ ಈ ಯೋಜನೆ ಪಡೆಯಲು  ಎಸ್.ಎಸ್ಎಲ್.ಸಿ ಅಂಕಪಟ್ಟಿ, ಬಿ.ಪಿ.ಎಲ್ ರೇಷನ್ ಕಾಡರ್್ಗಳನ್ನು ಹೊಂದಿರಲೇಬೇಕೆಂಬ ನಿಯಮ ಜಾರಿಗೊಳಿಸಿದೆ ಇದೇ ರೀತಿ ನಾನು ಜಾರಿಗೊಳಿಸಿದ ಹಲವಾರು ಯೋಜನೆಗಳಿಗೆ ತಡೆಯೊಡ್ಡುತ್ತಿದೆ ಎಂದ ಅವರು ಯಡಿಯೂರಪ್ಪನವರನ್ನು  ಬಂಧಿಸಿದಾಗ ನಾನು ಮರುಕಪಟ್ಟಿದ್ದನ್ನು ಮಾಧ್ಯಮಗಳು ಯಡಿಯೂರಪ್ಪನವರ ಜೊತೆ ಒಂದಾಗಲು ವೇದಿಕೆ ಸಿದ್ದವಾಗುತ್ತಿದೆ ಎಂಬಂತಹ ವರದಿಗಳು ಮೂಡಿಸಿದವು,  ಯಡಿಯೂರಪ್ಪನವರ ಜೊತೆ ಯಾವುದೇ ಕಾರಣಕ್ಕೂ ಒಂದಾಗಿ ರಾಜಕೀಯ ಮಾಡುವ ಅವಶ್ಯಕತೆ ನನಗಿಲ್ಲ, ನನ್ನ ಬಗ್ಗೆ ಇದ್ದ ಅನುಮಾನಗಳಿಗೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವ ಮೂಲಕವೇ ನಾನು ನಿದರ್ೋಷಿ ಎಂದು ಸಾಬೀತು ಪಡಿಸಿದ್ದೆ ಆದರೆ ಅದಕ್ಕೆ ನ್ಯಾಯಾಲಯದ ತೀಪರ್ು ಬರುವವರೆಗೂ ಕಾಯಬೇಕಾಯಿತು ನಾನು ಮತ್ತು ನನ್ನ ಕುಟುಂಬದವರು ಎಂದಿಗೂ ಸಹ ರಾಜ್ಯದ ಜನತೆಗೆ ಮೋಸ ಮಾಡಿಲ್ಲ ರಾಜ್ಯಕ್ಕೆ ಹಾಗೂ ರಾಜ್ಯದ ಜನತೆಗೆ ಮೋಸ ಮಾಡುತ್ತಿರುವವರು ಬಿಜೆಪಿ ಸಕರ್ಾರ ಎಂದು ಕಿಡಿಕಾರಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ  ಕುಮಾರಣ್ಣನವರು 20 ತಿಂಗಳ ತಮ್ಮ ಮುಖ್ಯಮಂತ್ರಿ ಅಧಿಕಾರದ ಅವಧಿಯಲ್ಲಿ ಸಾಮಾನ್ಯರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೆ ದಿನದ 24 ಗಂಟೆಯೂ ಜನಸಾಮಾನ್ಯರಲ್ಲಿ ಬೆರತು ಕಾರ್ಯನಿರ್ವಹಿಸುತ್ತಿದ್ದರು ಎಂದರು.
ಸಮಾರಂಭದಲ್ಲಿ ಜಿ.ಪಂ.ಅಧ್ಯಕ್ಷ ಡಾ.ರವಿ ನಾಗರಾಜಯ್ಯ, ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ,  ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ,ತಾ.ಪಂ.ಉಪಾಧ್ಯಕ್ಷೆ  ಬಿಬಿ ಪಾತೀಮ, ತಾ.ಪಂ.ಸದಸ್ಯೆ ಲತಾ, ಉಪಸ್ಥಿತರಿದ್ದರು