ಎಸ್.ಎಸ್.ಎಲ್.ಸಿ ಪರೀಕ್ಷೆ : ತಾಲ್ಲೂಕಿಗೆ 74.08 ಫಲಿತಾಂಶ
ಚಿಕ್ಕನಾಯಕನಹಳ್ಳಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ತಾಲೂಕಿನ ಒಟ್ಟು ಫಲಿತಾಂಶ ಶೇ.74.8ರಷ್ಟು ಬಂದಿದ್ದು, ತಾಲ್ಲೂಕಿನ ಶೆಟ್ಟಿಕೆರೆ ಜನತಾ ಪ್ರೌಢಶಾಲೆಯ ಎಚ್.ಆರ್.ಧನಂಜಯ್ಕುಮಾರ್ 611(97.76%) ಹಾಗೂ ಬಡಕೆಗುಡ್ಲು ಸಕರ್ಾರಿ ಪ್ರೌಡಶಾಲೆಯ ಲಕ್ಷ್ಮೀದೇವಿ.ಎಸ್ 611(97.76%) ಸಮನಾಗಿ ಅಂಕ ಪಡೆದು ತಾಲ್ಲೂಕಿಗೆ ಮೊದಲಿಗರಾಗಿದ್ದಾರೆ.
ತಾಲೂಕಿನ ಸಕರ್ಾರಿ ಪ್ರೌಢಶಾಲೆಗಳು ಶೇ.78.37 ಪಡೆದಿದ್ದರೆ, ಅನುದಾನಿತ ಶಾಲೆಗಳು ಶೇ.68.71 ಪಡೆದಿದ್ದು, ಅನುದಾನ ರಹಿತ ಪ್ರೌಢಶಾಲೆಗಳು ಶೇ.81.43 ರಷ್ಟು ಪಡೆದಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲೇ ಅತ್ಯಂತ ಹೆಚ್ಚು ಅಂಕ ಪಡೆದವರು: ತಾಲ್ಲೂಕಿನ ಬಡಕೆಗುಡ್ಲು ಸಕರ್ಾರಿ ಪ್ರೌಡಶಾಲೆಯ ವಿದ್ಯಾಶ್ರೀ-609(97.44), ಚಿ.ನಾ.ಹಳ್ಳಿ ರೋಟರಿ ಶಾಲೆಯ ಮಹೇಂದ್ರಸಿಂಗ್ ರಾಥೋಡ್-608(97.28%), ಹುಳಿಯಾರು ಕೆಂಕೆರೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪೂನಮ್-608(97.28), ನವೋದಯ ಪ್ರೌಢಶಾಲೆಯ ಸ್ಪೂತರ್ಿ.ಎಚ್.ಜಿ-606(96.96), ಮೇಲನಹಳ್ಳಿ ಮೊರಾಜರ್ಿ ವಸತಿ ಶಾಲೆಯ ಲಕ್ಷ್ಮೀ.ಆರ್.ಎಂ-605(96.80%), ಚಿ.ನಾ.ಹಳ್ಳಿ ರೋಟರಿ ಪ್ರೌಢಶಾಲೆಯ ಧನುಶ್.ಎನ್.ನಾಯಕ್-603(96.48), ಚಿ.ನಾ.ಹಳ್ಳಿ ಸಕರ್ಾರಿ ಪ್ರೌಢಶಾಲೆಯ ದಿಲೀಪ್.ಬಿ.ಗೌಡ-603(96.48), ಬರಗೂರು ಸಕರ್ಾರಿ ಪ್ರೌಢಶಾಲೆಯ ವಿಜಯ್ಕುಮಾರ್.ಬಿ.ಎಸ್.-600(96.00) ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ತಾಲೂಕಿನಲ್ಲಿ ಅತ್ಯಂತ ಹೆಚ್ಚು, ಅತ್ಯಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳು, ಪಟ್ಟಣದ ನವೋದಯ ಆಂಗ್ಲ ಪ್ರೌಢಶಾಲೆ, ಪಟ್ಟಣದ ದಿವ್ಯ ಪ್ರಭಾ ಪ್ರೌಢಶಾಲೆ ಹಾಗೂ ಮೊರಾಜರ್ಿ ಪ್ರೌಢಶಾಲೆ ಮೇಲನಹಳ್ಳಿ ಶಾಲೆಗಳು ಶೇ.100 ಅಂಕ ಪಡೆದಿದ್ದರೆ, ತಾಲೂಕಿನಲ್ಲೇ ಅತ್ಯಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳೆಂದರೆ ಸಕರ್ಾರಿ ಪ್ರೌಢಶಾಲೆಗಳ ಪೈಕಿ ಗೋಡೆಕೆರೆ ಸ.ಪ.ಪೂ.ಕಾಲೇಜ್ ಶೇ.47.17 ಪಡೆದಿದ್ದರೆ, ಅನುದಾನರಹಿತ ಶಾಲೆಗಳಲ್ಲಿ ಗೂಬೆಹಳ್ಳಿ ರಾಮಾಂಜನೇಯ ಪ್ರೌಢಶಾಲೆ ಶೇ.4. ಪಡೆದು ಇಡೀ ತಾಲೂಕಿಗೆ ಅತ್ಯಂತ ಕಳಪೆ ದಜರ್ೆಯ ಶಾಲೆ ಎನಿಸಿಕೊಂಡಿದೆ, ಅನುದಾನಿತ ಶಾಲೆಗಳಲ್ಲಿ ದೊಡ್ಡರಾಂಪುರದ ಮಾರಮ್ಮದೇವರ ಶಾಲೆ ಶೇ.34.48 ಪಡೆದು ಕೊನೆಯ ಸ್ಥಾನವನ್ನು ಪಡೆದಿದೆ.
ಕನ್ನಡ-125, ಇಂಗ್ಲೀಷ್-97, ಸಮಾಜ-99, ವಿಜ್ಞಾನ-92, ಗಣಿತ-93, ಹಿಂದಿ-100 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಅಂಕ ಪಡೆದು ತಾಲ್ಲೂಕಿಗೆ ಕೀತರ್ಿ ತಂದಿದ್ದಾರೆ.
ತಾಲ್ಲೂಕಿನ ಹಂದನಕೆರೆ ಹೋಬಳಿಯ ಹೊಸಕೆರೆ ಗ್ರಾಮದ ವಕೀಲ ಹೆಚ್.ಎಸ್.ಜ್ಞಾನಮೂತರ್ಿಯವರ ಮಗಳಾದ ಹೆಚ್.ಜಿ.ಸ್ಪೂತರ್ಿ ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಟ್ಯೂಷನ್ಗೆ ಹೋಗದೆ ಹೆಚ್ಚಿನ ಅಂಕ ಪಡೆದಿದ್ದೇನೆ, ಈಗ ಪಡೆದಿರುವ ಅಂಕಗಳಿಗಿಂತ ಹೆಚ್ಚಿನ ಅಂಕ ಬರುತ್ತದೆ ಎಂದು ನಿರೀಕ್ಷಿಸಿದ್ದೆ ಎಂದರು.
ಶಾಲೆಯ ಶಿಕ್ಷಕರು ಹಾಗೂ ಪೋಷಕರ ಸಹಕಾರದೊಂದಿಗೆ ಹೆಚ್ಚಿನ ಅಂಕ ಪಡೆಯಲು ನೆರವಾಯಿತು, ಹೊಸಕೆರೆಯಲ್ಲಿರುವ ನಮ್ಮ ಮನೆಯಿಂದ ಬೆಳಗ್ಗೆ 7ಕ್ಕೆ ಮನೆಯಿಂದ ಹೊರಡುತ್ತಿದ್ದೆ ಶಾಲೆಯಲ್ಲಿಯೇ ಸ್ಪೆಷಲ್ ಕ್ಲಾಸ್ ನೀಡುತ್ತಿದ್ದರು ನಂತರ ಶಾಲೆ ಮುಗಿದ ನಂತರ ತಂದೆಯೊಂದಿಗೆ ರಾತ್ರಿ 7ಕ್ಕೆ ಮನೆ ಸೇರಿ ಓದುತ್ತಿದ್ದೆ ಎಂದ ಅವರು ಮುಂದಿನ ದಿನಗಳಲ್ಲಿ ವೈದ್ಯನಾಗುವ ಆಸೆ ಹೊಂದಿದ್ದೇನೆ ಎಂದರು.
ಗ್ರಾಮಸ್ಥರೇ ಒಟ್ಟಾಗಿ ರಸ್ತೆಗೆ ಡಾಂಬರು ಹಾಕಿ ರಸ್ತೆ ಉಬ್ಬು ನಿಮರ್ಾಣ
ಚಿಕ್ಕನಾಯಕನಹಳ್ಳಿ ಕಡೆಯಿಂದ ಕೆ.ಬಿ.ಕ್ರಾಸ್ ಕಡೆಗೆ ವೇಗವಾಗಿ ತೆರಳುತ್ತಿದ್ದ ಟಾಟಾಎಸಿ ವಾಹನ ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಹೋದ ಸಂದರ್ಭದಲ್ಲಿ ಎದುರಿನಿಂದ ಬಂದ ಟ್ಯಾಂಕರ್ ಲಾರಿಗೆ ಟಾಟಾ ಎ.ಸಿ ಡಿಕ್ಕಿ ಹೊಡೆಯಿತು ಇದರಿಂದ ಚಾಲಕನ ಪಕ್ಕ ಕುಳಿತಿದ್ದ ಪ್ರಯಾಣಿಕರಿಗೆ ತೀವ್ರ ಗಾಯಗೊಂಡು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ಏಳು ಮಂದಿಯಿದ್ದರು ಇವರು ಗಾಮರ್ೆಂಟ್ಸ್ ಕಾಮರ್ಿಕರಾಗಿದ್ದಾರೆ. ಬೆಳಗ್ಗೆ 8.30ರ ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತರಬೇನಹಳ್ಳಿಯ ಗ್ರಾಮಸ್ಥರು ಮಾತನಾಡಿ, ಗ್ರಾಮದ ಮೂಲಕ ಹಾದು ಹೋಗಿರುವ ಚಾಮರಾಜನಗರ ಮಾರ್ಗ ಜೇವಗರ್ಿ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿವೆ, ಇತ್ತೀಚೆಗೆ ರಸ್ತೆಯನ್ನು ದುರಸ್ತಿಗೊಳಿಸಿರುವುದರಿಂದ, ಅಸ್ಥಿತ್ವದಲ್ಲಿದ್ದ ರಸ್ತೆಯ ಉಬ್ಬುಗಳನ್ನು ತೆರವುಗೊಳಿಸಲಾಗಿದೆ ಇದರಿಂದ ವಾಹನ ಸವಾರರು ಅತಿ ವೇಗದ ಚಾಲನೆ ಮಾಡುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ ಆದ ಕಾರಣ ನಾವೇ ಮುಂದಾಗಿ ರಸ್ತೆಯ ಉಬ್ಬುಗಳನ್ನು ನಿಮರ್ಿಸಿದ್ದೇವೆ, ಇಲಾಖೆಯವರು ಇತ್ತ ಗಮನ ಹರಿಸಿ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿಮರ್ಾಣ ಮಾಡಬೇಕು ಹಾಗೂ ರಸ್ತೆಯ ತಿರುವುಗಳ ಬಗ್ಗೆ ಸೂಚನ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ಆಕ್ರೋಶಕಗೊಂಡ ಗ್ರಾಮಸ್ಥರು ಹಮ್ಸ್ ನಿಮರ್ಾಣ : ಈ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸುತ್ತಿರುವುದರಿಂದ ತರಬೇನಹಳ್ಳಿ ಗ್ರಾಮಸ್ಥರು ಒಟ್ಟಾಗಿ ರಸ್ತೆ ತಡೆ ನಡೆಸಿದರು. ನಂತರ ಬೇರೆ ಕಡೆ ರಸ್ತೆ ನಿಮರ್ಾಣಕ್ಕೋಸ್ಕರ ಡಾಂಬರ್ ಸಾಗಿಸುತ್ತಿದ್ದ ವಾಹನವನ್ನು ಗ್ರಾಮಸ್ಥರು ತಡೆದು ಡಾಂಬರ್ ಮಿಶ್ರಣವನ್ನು ರಸ್ತೆಯಲ್ಲಿ ಸುರಿಸಿ ಗ್ರಾಮಸ್ಥರೇ ರಸ್ತೆ ದಿಬ್ಬವನ್ನು ನಿಮರ್ಿಸಿದ್ದು ವಿಶೇವಾಗಿತ್ತು.
ಹೇಮಾವತಿ ನೀರು ಶೀಘ್ರ ಚಿ.ನಾ.ಹಳ್ಳಿಗೆ : ಸಚಿವ ಟಿ.ಬಿ.ಜಯಚಂದ್ರ
ಚಿಕ್ಕನಾಯಕನಹಳ್ಳಿ17:-ತಾಲ್ಲೂಕಿನ 22ಕೆರೆಗಳಿಗೆ ಹೇಮಾವತಿ ನೀರು ಶೀಘ್ರವಾಗಿ ಹರಿಸುವುದು ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡುವುದು ನನ್ನ ಆದ್ಯ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಗೋಡೆಕೆರೆ ದೇವಾಲಯಕ್ಕೆ ಇರುವಷ್ಟು ಜಾಗದಲ್ಲೇ ಒಂದು ಉತ್ತಮ ಪ್ರವಾಸಿ ತಾಣವನ್ನಾಗಿಸಲು ಅಭಿವೃದ್ದಿ ಪಡಿಸಲು ಈ ಕೂಡಲೇ ಮುಜುರಾಯಿ ಇಲಾಖೆಯ ಸಚಿವರೊಂದಿಗೆ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚಚರ್ಿಸಿ ಇನ್ನು ಹೆಚ್ಚಿನ ಅನುದಾನ ನೀಡಿ ಕ್ಷೇತ್ರವನ್ನು ಜಿಲ್ಲೇಯಲ್ಲೆ ಒಂದು ಉತ್ತಮ ಧಾಮರ್ಿಕ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ದಿವ್ಯಸಾನಿದ್ಯವಹಿಸಿದ್ದ ಸ್ಥಿರಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಗೋಡೆಕೆರೆ ಸಿದ್ದರಾಮೇಶ್ವರರ ಕ್ಷೇತ್ರ ಭೂಸುಕ್ಷೇತ್ರವಾಗಿದ್ದು ಕಾಯಕ ಯೋಗಿ ಸಿದ್ದರಾಮೇಶ್ವರರ ತಪೋಭೂಮಿಯಾಗಿದೆ, ಈ ಕ್ಷೇತ್ರದಲ್ಲಿ ಯಾತ್ರಿಭವನವಾಗಬೇಕಾಗಿದ್ದು ಸಕರ್ಾರದಿಂದ ಸುಮಾರು 10ಕೋಟಿಗಳಷ್ಟು ಹಣವನ್ನು ಮಂಜೂರು ಮಾಡುವಂತೆ ತಿಳಿಸಿದ ಅವರು, ಶ್ರೀಸಿದ್ದರಾಮೇಶ್ವರರಬಗ್ಗೆ ವಿವರಿಸಿದರು.
ದಿವ್ಯಸಾನಿದ್ಯವಹಿಸಿದ್ದ ಚರಪಟ್ಟಾಧ್ಯಕ್ಷರಾದ ಶ್ರೀ ಮೃತ್ಯುಂಜಯದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಗೋಡೆಕೆರೆ ಕ್ಷೇತ್ರವನ್ನು ಒಂದು ಧಾಮರ್ಿಕ ಪವಿತ್ರ ಯಾತ್ರಾಸ್ಥಳವನ್ನಾಗಿಸ ಬೇಕು ಸಮಾಜ ಸುಧಾರಕ, ಜನರಿಗೆ ಕಾಯಕವನ್ನು ಮಾಡಲು ತಿಳಿಸಿದ ಹಾಗೂ ಜನರ ಉದ್ದಾರಕ್ಕಾಗಿ ಕೆರೆ ಕಟ್ಟೆ ಬಾವಿಗಳನ್ನು ನಿಮರ್ಿಸಿದಂತಹ ಸಿದ್ದರಾಮೇಶ್ವರರು ನಮಗೆ ಆದರ್ಶರಾಗಿದ್ದು ಅವರ ಕ್ಷೇತ್ರದ ಅಭಿವೃದ್ದಿ ಎಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಸಂಸದ ಜಿ.ಎಸ್.ಬಸವರಾಜು 12ನೇ ಶತಮಾನದ ಶಿವಶರಣರಲ್ಲಿ ನಾಲ್ಕನೇಯವರು ಶ್ರೀ ಸಿದ್ದರಾಮೇಶ್ವರರು ಇವರು ಸಮಾಜಕ್ಕಾಗಿ ಕಾಯಕವನ್ನು ಮಾಡಲು ತಿಳಿಸಿದಂತವರು ಇವರು ಕಲ್ಯಾಣದ ಕ್ರಾಂತಿಯ ನಂತರ ಸಂಚಾರ ಕೈಗೊಂಡರು, ನಾಡಿನೆಲ್ಲೇಡೆ ಸಂಚರಿಸಿ ಭಕ್ತಿಯೊಂದಿಗೆ ಕಾಯಕದ ಬಗ್ಗೆ ತಿಳಿಸಿದಂತವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿಯೂ ಸುಮಾರು 4ಕಡೆಗಳಲ್ಲಿ ಇವರ ತಪೋಭೂಮಿಇದ್ದು ಇವರು ಈ ಮಾರ್ಗವಾಗಿ ಸೊಲ್ಲಪುರಕ್ಕೆ ಹೋದರು ಎಂದು ಹೇಳುತ್ತಾರೆ ಇಂತಹ ಮಹಾಪುರುಷರು ತಪ್ಪಸ್ಸು ಮಾಡಿದ ಈ ಕ್ಷೇತ್ರವು ಸುಮಾರು 48ಎಕರೆ ಪ್ರದೇಶವಿದ್ದು ಇದನ್ನು ಒಂದು ಯಾತ್ರಾಸ್ಥಳವನ್ನಾಗಿಸ ಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಿದ್ದರು, ಈ ಸಂದರ್ಭದಲ್ಲಿ ಎಂ.ಎಲ್.ಸಿ. ಎಂ.ಡಿ ಲಕ್ಷ್ಮೀನಾರಾಯಣ, ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಎಸ್.ಆರ್.ಎಲ್.ಪಿ.ಎಸ್.ನ ಅಪರ ಅಭಿಯಾನ ನಿದರ್ೇಶಕ ಎನ್.ಆರ್.ಆದರ್ಶಕುಮಾರ್, ತಹಸೀಲ್ದಾರ್ ಗಂಗೇಶ್, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಜಿ.ಪಂ.ಸದಸ್ಯರಾದ ನಾರಾಯಣ್, ಕಲ್ಲೇಶ್, ಮಾಜಿ ತಾ.ಪಂ.ಅದ್ಯಕ್ಷ ಎಂ.ಎಂ.ಜಗದೀಶ್, ದೇವಾಲಯದ ಕನ್ವಿನಿಯರ್ ಸಿದ್ದರಾಮಯ್ಯ, ದಿನೇಶ್, ಆರಾಧ್ಯ, ಸೇರಿದಂತೆ ಹಲವರುಇದ್ದರು.
ಕಾರ್ಯಕ್ರಮ ನಡೆದ ನಂತರ ತುಮಕೂರಿನ ಶ್ರೀರಾಜರಾಜೇಶ್ವರಿ ನೃತ್ಯಕಲಾತಂಡದವರಿಂದ ಸಾಸ್ಕೃತಿಕ ಕಾರ್ಯಕ್ರಮವನ್ನು ಆಯೊಜಿಸಲಾಗಿತ್ತು, ಸಮಾರಂಭದಲ್ಲಿ ಉಪನ್ಯಾಸಕ ಪ್ರೊ.ಬಸವರಾಜು ಎಲ್ಲರನ್ನೂ ಸ್ವಾಗತಿಸಿದರೆ ಶಿಕ್ಷಕ ದಿಬ್ಬದಹಳ್ಳಿ ಶ್ಯಾಮಸುಂದರ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶ್ರೀಸಿದ್ದರಾಮೇಶ್ವರರ ಸೂರ್ಯಮಂಡಲೋತ್ಸವವನ್ನು ನಡೆಸಲಾಯಿತು.
ಗೋಡೆಕೆರೆ ಸಿದ್ದರಾಮೇಶ್ವರಸ್ವಾಮಿ ಜಾತ್ರೆಗೆ ತೆಪ್ಪೋತ್ಸವದ ಮೂಲಕ ಚಾಲನೆ
ದಲಿತರನ್ನು ಕಡೆಗಣಿಸುತ್ತಿರುವ ತಹಶೀಲ್ದಾರ್ : ಆರೋಪ
ಚಿಕ್ಕನಾಯಕನಹಳ್ಳಿ16: ಇಲ್ಲಿನ ತಹಸೀಲ್ದಾರ್ರವರು ದಲಿತರನ್ನು ಕಡೆಗಣಿಸುತ್ತಿದ್ದಾರೆ, ಯಾವುದೇ ಸಕರ್ಾರಿ ಕಾರ್ಯಕ್ರಮಗಳಿಗೆ ದಲಿತ ಮುಖಂಡರನ್ನು ಆಹ್ವಾನಿಸುವುದಿಲ್ಲ, ಅದೇ ರೀತಿ ಮಾಧ್ಯಮದವರನ್ನು ದೂರವಿಟ್ಟು ಸಭೆಗಳನ್ನು ನಡೆಸುತ್ತಾರೆ ಎಂದು ದಲಿತ ಮುಖಂಡರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆಯುತ್ತಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಭೆಯ ಮುನ್ನ ದಲಿತ ಮುಖಂಡರು ತಹಸೀಲ್ದಾರ್ರವರ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಲಿಂಗದೇವರು, ಕಂದಾಯ ಇಲಾಖೆಯ ಅನುಭವವಿಲ್ಲದ ಈಗಿನ ತಹಶೀಲ್ದಾರ್ ರವರು, ಈ ಬಾರಿಯ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಗೂ ಗೈರುಹಾಜರಾಗಿದ್ದರು, ದಲಿತರನ್ನು ಈ ಹಿಂದಿನ ತಹಸೀಲ್ದಾರ್ಗಳು ದಲಿತರನ್ನು ಕಡೆಗಣಿಸದೇ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಕಾರ್ಯಗಳನ್ನು ಮಾಡುತ್ತಿದ್ದರು, ಅದರೆ ಇಂದಿನ ತಹಸೀಲ್ದಾರ್ ದಲಿತರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಇವರು ಬಸವಜಯಂತಿ ಆಚರಣೆಗೆ ದಲಿತ ಮುಖಂಡರಿಗೆ ಯಾವುದೇ ಆಹ್ವಾನ ನೀಡಿಲ್ಲ, ಮಹಾನ್ ಮಾನವತಾವಾದಿ ಬಸವಣ್ಣನವರ ಜಯಂತಿಯನ್ನು ನಾಮಕಾವಸ್ಥೆಗೆ ಎಂಬಂತೆ ಆಚರಣೆ ಮಾಡಿದರು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮದ್ಯಪ್ರವೇಶಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಪ್ರತಿಭಟನಾಕಾರರನ್ನು ಮನವೊಲಿಸಿ ಪ್ರತಿಭಟನೆಯನ್ನು ನಿಲ್ಲಿಸಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಸಭೆಯಲ್ಲಿ ದಲಿತರ ಸಮಸ್ಯೆಗಳಾದ ಬಿಪಿಎಲ್ ಕಾಡರ್್ವಿತರಣೆ, ಸ್ಮಶಾನದ ಸಮಸ್ಯೆಗಳು, ಪಿಂಚಣಿ ವ್ಯವಸ್ಥೆ, ಹಾಗೂ ಗ್ರಾಮಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ, ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿದ್ದ ಅನುದಾನಗಳ ಬಗ್ಗೆ ಚಚರ್ಿಸಲಾಯಿತು.
ಸಭೆಯಲ್ಲಿ ದಲಿತ ಮುಖಂಡ ಮಲ್ಲಿಕಾಜರ್ುನ್ಮಾತನಾಡಿ ಮೂರು ತಿಂಗಳಿಗೊಮ್ಮೆ ನಡೆಯ ಬೇಕಿದ್ದ ಸಭೆ ವರ್ಷಕ್ಕೊಮ್ಮೆ ನಡೆಯುವಂತಾಗಿದ್ದು ಇದನ್ನು ಕೂಡಲೇ ತಹಸೀಲ್ದಾರ್ಗಮನಹರಿಸಿ ಮೂರು ತಿಂಗಳಿಗೊಮ್ಮೆ ಸಭೆ ಕರೆಯುವಂತೆ ಒತ್ತಾಯಿಸಿದರು. ನಂತರ ಸಭೆಯಲ್ಲಿ ಜೂನ್ ತಿಂಗಳ 6ನೇತಾರಿಖಿನಂದು ನಡೆಸಲು ಸಭೆಯಲ್ಲಿ ತೀರ್ಮನಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ಗಂಗೇಶ್, ಜಿ.ಪಂ.ಸದಸ್ಯ ಮಹಾಲಿಂಗಯ್ಯ, ದಲಿತ ಮುಖಂಡರುಗಳಾದ ಬೇವಿನಹಳ್ಳಿ ಚನ್ನಬಸವಯ್ಯ, ಮಲ್ಲಿಕಾಜರ್ುನ್, ಬೆಳಿಗೆಹಳ್ಳಿರಾಜು, ಗಿರಿಯಪ್ಪ, ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
No comments:
Post a Comment