Sunday, December 12, 2010

ದೈನಂದಿನ ಕ್ರಿಯೆಗಳನ್ನು ಸ್ವತಃ ಮಾಡಿಕೊಳ್ಳಲಾಗದವರೂ ವಿಕಲ ಚೇತನರು: ಅನೀಸ್ ಕೈಸರ್
ಚಿಕ್ಕನಾಯಕನಹಳ್ಳಿ,ಡಿ.9: ವಿಕಲ ಚೇತನರನ್ನು ಸ್ವಾವಲಂಭಿಗಳನ್ನಾಗಿಸಿ ಅವರ ಬದುಕನ್ನು ಹಸನು ಮಾಡಿಕೊಂಡು ಉತ್ತಮ ಜೀವನ ನಡೆಸಲು ಹುರಿದುಂಬಿಸುವುದೇ ವಿಶ್ವ ಅಂಗವಿಕಲ ದಿನಾಚರಣೆಯ ಉದ್ದೇಶವೆಂದು ಸಿ.ಡಿ.ಪಿ.ಓ. ಅನೀಸ್ ಕೈಸರ್ ತಿಳಿಸಿದರು.
ಪಟ್ಟಣದ ಸಿ.ಡಿ.ಪಿ.ಓ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗಗಳು ಊನವಾಗಿದ್ದು ಯಾವುದೇ ವ್ಯಕ್ತಿ ತನ್ನ ವಯಸ್ಸಿಗನುಗುಣವಾಗಿ ತನ್ನ ದೈನಂದಿನ ಕ್ರಿಯೆಗಳನ್ನು ಸ್ವತಃ ಮಾಡಿಕೊಳ್ಳಲು ಅಸಮರ್ಥರಾಗುತ್ತಾರೋ ಅಂತಹವರನ್ನು ವಿಕಲಚೇತನರೆಂದು ಕರೆಯುತ್ತೇವೆ ಎಂದರಲ್ಲದೆ, ಅಧಿನಿಯಮ 1995 ರ ಪ್ರಕಾರ ಅಂಗವಿಕಲತೆಯನ್ನು ಚಲನ ದೋಷವುಳ್ಳವರು ಅಥವಾ ದೈಹಿಕ ವಿಕಲ ಚೇತನರು, ದೃಷ್ಟಿ ದೋಷವುಳ್ಳವರು, ವಾಕ್ ಶ್ರವಣ ದೋಷವುಳ್ಳವರು, ಬುದಿಮಾಂದ್ಯತೆ. ಕುಷ್ಠರೋಗ ನಿವಾರಿತ ವಿಕಲ ಚೇತನರು, ಬಹುವಿಧ ವಿಕಲಚೇತನರು ಮತ್ತು ಮಾನಸಿಕ ಅಸ್ವಸ್ಥರು ಈ ರೀತಿ ವಗರ್ಿಕರಿಸಬಹುದಾಗಿದೆ ಎಂದು ತಿಳಿಸಿದರು.
ವಿಕಲ ಚೇತನಕ್ಕೆ ಸಾಮಾನ್ಯ ಕಾರಣಗಳು ತಾಯಿಗೆ ಪೌಷ್ಠಿಕಂಶದ ಕೊರತೆ (ಅಪೌಷ್ಠಿಕತೆ) ಗಭರ್ಾವಸ್ಥೆಯಲ್ಲಿ ಸೋಂಕುಗಳು, ಸೋದರ ಸಂಬಂಧಿ ವಿವಾಹ, ತಂದೆ ತಾಯಿ ರಕ್ತ ಹೊಂದಾಣಿಕೆಯಿಲ್ಲದ ಪ್ರಸಂಗ, ಗಭರ್ಾವಸ್ಥೆಯಲ್ಲಿ ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ, ಖಾಯಿಲೆಗಳು, ತಾಯಿ ಮಾದಕ ವ್ಯಸನಿಯಾಗಿದ್ದಲ್ಲಿ, ಅಪಘಾತಗಳು, ಅವಧಿ ಪೂರ್ವ ಜನನಗಳು, ಕಾರಣವಾಗಿರುತ್ತದೆ ಎಂದು ತಿಳಿಸಿದರು.
ವಿಕಲ ಚೇತನ್ಯವನ್ನು ತಡೆಗಟ್ಟಲು ಗಭರ್ಾವಸ್ಥೆಯಲ್ಲಿ ಇದ್ದಾಗಲೇ ತಾಯಿ ವೇಳೆಗೆ ಸರಿಯಾಗಿ ಆಹಾರವನ್ನು ಸೇವಿಸಿ ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿದಲ್ಲಿ ವಿಕಲ ಚೇತನ ಮಕ್ಕಳು ಜನಿಸುವುದನ್ನು ತಡೆಗಟ್ಟಬಹುದು, ಮಗು ಹುಟ್ಟಿದ ಕೂಡಲೇ ತಾಯಿ ಮಗುವಿಗೆ ಎದೆಹಾಲನ್ನು ಕುಡಿಸುವುದರಿಂದ ಅದರಲ್ಲಿರುವ ಕೊಲೆಸ್ಟ್ರಾಲ್ ಅಂಶ ದಿಂದಾಗಿ 6 ಮಾರಕ ರೋಗಗಳನ್ನು ತಡೆಗಟ್ಟುಲು ಸಾಧ್ಯ, ಆದುದರಿಂದ ಎಲ್ಲ ತಾಯಂದಿರು ಮಕ್ಕಳಿಗೆ ತಪ್ಪದೇ ಎದೆ ಹಾಲನ್ನು ಕುಡಸಬೇಕೆಂದರು.
ವಿಕಲ ಚೈತನ್ಯರನ್ನು ಪ್ರಾರಂಭದಲ್ಲಿ ಗುರುತಿಸಿ ವಿಕಲ ಚೈತನ್ಯತೆಯನ್ನು ತಡೆಗಟ್ಟುವುದು, ಅಂಗವಿಕಲತೆ ತಡೆಗಟ್ಟುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ನಿವಾರಣಾತ್ಮಕ ಶಸ್ತ್ರ ಚಿಕಿತ್ಸೆ ಸಾಧನ ಸಲಕರಣೆಗಳನ್ನು ಒದಗಿಸುವುದು, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ತಿಳಿಸಿದರು. ವಿಕಲ ಚೈತನ್ಯರಿಗೆ ವಿಶೇಷ ಶಾಲೆಗಳು, ಸಮನ್ವಯ ಶಿಕ್ಷಣ ವಿದ್ಯಾಥರ್ಿ ವೇತನ ಅಥವಾ ಪ್ರೋತ್ಸಾಹ ಧನವನ್ನು ಶಿಕ್ಷಣದಲ್ಲಿ ನಿಯಮಗಳ ಸಡಿಲಿಕೆ, ಶಬ್ದ, ಗ್ರಂಥಾಲಯ, ವಿಶೇಷ ತರಬೇತಿ ಕೇಂದ್ರಗಳು, ಪುಸ್ತಕಳ ಸರಬರಾಜು, ಸಕರ್ಾರಿ ಹುದ್ದೆಗಳಲ್ಲಿ ಮೀಸಲಾತಿ ಸಾಧನ ಉದ್ಯೋಗಕ್ಕೆ ಪ್ರೋತ್ಸಾಹ ಆಧಾರ, ಓಊಈಆಅ ಯೋಜನೆಗಳು, ಸಾದನ ಸಲಕರಣೆಗಳ ವಿತರಣೆ (ರಿಯಾಯಿತಿ ದರದಲ್ಲಿ) ಪೋಷಣಾ ಭತ್ಯೆ ಯೋಜನೆ, ಗುರುತಿನ ಚೀಟಿ, ಬುದ್ದಿ ಮಾಂಧ್ಯ ಮಕ್ಕಳ ಪೋಷಕರಿಗೆ ವಿಮಾ ಯೋಜನೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳ ಪ್ರೋತ್ಸಾಹ ಧನ, ರಾಜ್ಯ ಪ್ರಶಸ್ತಿಗಳು, ಸ್ವಯಂ ಸೇವಾ ಸಂಸ್ಥೆಗಳ ನೆರವುಗಳ ಬಗ್ಗೆ ಸಮಗ್ರವಾಗಿ ತಿಳಿಸಿದರು.
ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ ನವರು ಉದ್ಘಾಟನಾ ನುಡಿಗಳನ್ನು ಆಡುತ್ತಾ ತಾಯಿ ತನ್ನ ಮಗುವನ್ನು ಗಭರ್ಾವಸ್ಥೆಯಲ್ಲಿದ್ದಾಗಲೇ ಉತ್ತಮ ಆರೈಕೆ ಮಾಡಿ ವಿಕಲ ಚೈತನ್ಯವನ್ನು ತಡೆಗಟ್ಟುವಂತೆ ಶ್ರಮಿಸಿ ಉತ್ತಮ ಮಕ್ಕಳನ್ನು ಪಡೆದು ಸತ್ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು.
ದೊರೆಮುದ್ದಯ್ಯ ನವರು ಪುರಸಭಾ ಸದಸ್ಯರು ಮಾತನಾಡುತ್ತಾ ವಿಕಲ ಚೈತನ್ಯರು ಎಂದು ದ್ರೃತಿಗೆಡದೆ ಸಕರ್ಾರದ ಸವಲತ್ತುಗಳನ್ನು ಪಡೆದು ಉತ್ತಮ ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು
ಸಪ್ತಕೋಟಿ ಪಂಚಾಕ್ಷರಿ ಮಂತ್ರದ ಜಪಯಜ್ಞ
ಚಿಕ್ಕನಾಯಕನಹಳ್ಳಿ,ಡಿ.09: ಗುರು ಮರುಳ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಪ್ರಯುಕ್ತ ಸಪ್ತಕೋಟಿ ಪಂಚಾಕ್ಷರಿ ಮಹಾ ಮಂತ್ರದ ಜಪಯಜ್ಞ ಕಾರ್ಯಕ್ರಮವನ್ನು ಇದೇ 13ರಿಂದ 19 ರವರಗೆ ಏರ್ಪಡಿಸಲಾಗಿದೆ ಎಂದು ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ.
ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಜಪಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಏಳು ದಿವನಗಳ ಕಾಲ ದಿನದ 24 ಗಂಟೆ ಸತತವಾಗಿ ಭಜನೆ ಮತ್ತು ಪಂಚಾಕ್ಷರಿಯ ಮಂತ್ರದೊಡನೆ ಏಕದಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
75 ವರ್ಷದ ನಿ. ನೌಕರರು ಸಂಘದಲ್ಲಿ ಹೆಸರನ್ನು ನೊಂದಾಯಿಸಿ
ಚಿಕ್ಕನಾಯಕನಹಳ್ಳಿ.ಡಿ.09: ತಾಲ್ಲೂಕು ನಿವೃತ್ತ ನೌಕರರ ಸಂಘದ 26 ನೇ ವರ್ಷದ ವಾಷರ್ಿಕ ಸಮಾರಂಭವನ್ನು ಇದೇ 19 ನೇ ತಾರೀಖಿನ ಭಾನುವಾರದಂದು ಹುಳಿಯಾರಿನ ಶ್ರೀ ಸೀತಾರಾಮ ಕಲ್ಯಾಣ ಪ್ರತಿಷ್ಟಾನ ದಲ್ಲಿ ಏರ್ಪಡಿಸಲಾಗಿದ್ದು, 75ವರ್ಷ ತುಂಬಿದ ಸಂಘದ ಸದಸ್ಯರು ತಮ್ಮ ಜನ್ಮ ದಿನಾಂಕವಿರುವ ದಾಖಲೆಗಳನ್ನು ಕೂಡಲೇ ಚಿಕ್ಕನಾಯಕನಹಳ್ಳಿ ನಿವೃತ್ತ ನೌಕರರು ಸಂಘದ ಪ್ರಧಾನ ಕಾರ್ಯದಶರ್ಿಗಳಾದ ಸಿ.ಡಿ. ರುದ್ರಮುನಿ ಯವರನ್ನು ಹಾಗೂ ಹುಳಿಯಾರು ಭಾಗದ ನಿವೃತ್ತ ನೌಕರರು ಸಂಘದ ಉಪಾಧ್ಯಕ್ಷರಾದ ಸಿ ರಾಮಯ್ಯ ಇವರನ್ನು 12ರ ಒಳಗೆ ಸಂಪಕರ್ಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಚಿ.ನಾ.ಹಳ್ಳಿ: ಜಾತಿ ಮತ್ತು ದುಡ್ಡಿನ ಲೆಕ್ಕಾಚಾರದಲ್ಲಿ ಟಿಕೇಟ್ ಹಂಚಿಕೆಯ ಕಸರತ್ತು
ಚಿಕ್ಕನಾಯಕನಹಳ್ಳಿ,ಡಿ.10: ಸ್ಥಳೀಯ ಸಂಸ್ಥೆಗಳಾದ ಜಿ.ಪಂ. ಹಾಗೂ ತಾ.ಪಂ.ಗಳ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರು ಮುಖವಾಗಿದೆ.
ಚುನಾವಣಾ ಕಣದಲ್ಲಿ ನೆಲೆ ನಿಲ್ಲಲು ಅವಣಿಸುತ್ತಿರುವ ಉರಿಯಾಳುಗಳು ತಮ್ಮ ಬೆಂಬಲಿಗರನ್ನು ಬೆನ್ನಿಗೆ ಕಟ್ಟಿಕೊಂಡು ಮಿರಿ ಮಿರಿ ಬಟ್ಟೆತೊಟ್ಟು ಓಡಾಡುತ್ತಿದ್ದಾರೆ. ಇದನ್ನು ನಿರ್ಧರಿಸಬೇಕಾದ ಮತದಾರ ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಒದ ಕೈಗೆ ತುತ್ತು ಬಾಯಿಗೆ ಬರುವ ಮುನ್ನ ಕೈಚಾರಿತೇನೊ ಎಂಬ ದುಗುಡದಿಂದ ಗೊಂದಲದಲ್ಲಿ ದಲ್ಲಿ ಸಿಕ್ಕಿರುವ ಮಹಾ ಪ್ರಭು ಹೊಲದಲ್ಲಿನ ಬೆಳೆಯಲ್ಲಿ ಸಿಕ್ಕಷ್ಟು ಮನೆಗೆ ತರಲು ಚಳಿಯನ್ನೂ ಲೆಕ್ಕಿಸಿದೆ ಹಗಲಿರುಳು ಶ್ರಮಿಸುತ್ತಿದ್ದಾನೆ,
ತಾಲೂಕಿನಲ್ಲಿ 5 ಜಿ.ಪಂ.ಕ್ಷೇತ್ರಗಳು, 19 ತಾ.ಪಂ. ಕ್ಷೇತ್ರಗಳಿವೆ. ಇವುಗಳಲ್ಲಿ ತಮ್ಮ ಪಕ್ಷ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ತಾಲೂಕಿನ ಹಿಡಿತವನ್ನು ಕೈಗೆತ್ತಿಕೊಳ್ಳಬೇಕೆಂಬ ಹಂಬಲದಿಂದ ಹಲವು ಕಸರತ್ತುಗಳ ಮೂಲಕ ಪ್ರಯತ್ನಿಸುತ್ತಿರುವ ಪಕ್ಷಗಳ ನಾಯಕರು, ಇನ್ನಿಲ್ಲದ ಲೆಕ್ಕಾಚರದಲ್ಲಿ ತೊಡಗಿದ್ದಾರೆ. ಜೆ.ಡಿ.ಯು. ಎನ್ನುವುದಕ್ಕಿಂತ ಜೆ.ಸಿ.ಎಂ. ಬೆಂಬಲಿಗರು ಬಿ.ಜೆ.ಪಿ.ಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂಬ ಪುಕಾರು ದಟ್ಟವಾಗಿದ್ದು, ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಹೊಂದಾಣಿಕೆಯ ಮಾತುಗಳು ರಾಜ್ಯ ಮಟ್ಟದಲ್ಲಿ ಕೇಳಿ ಬರುತ್ತಿರುವುದರಿಂದ ಟಿಕೇಟ್ ಆಕಾಂಕ್ಷಿಗಳು ಸ್ವಲ್ಪ ಮಟ್ಟಿನ ಗೊಂದಲದಲ್ಲಿದ್ದಾರೆ.
ಈ ಚುನಾವಣೆ ವಿಶೇಷವಾಗಿ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ಕುಮಾರ್ಗೆ ಪ್ರತಿಷ್ಠೆಯ ಕಣವಾಗಿದೆ, ಕಾರಣ ಈ ಇಬ್ಬರು ನಾಯಕರಲ್ಲಿ ತಾಲೂಕಿನಲ್ಲಿ ಯಾರು ಹೆಚ್ಚು ಜನಪ್ರಿಯರು ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಬೇಕಾಗಿದೆ. ಈ ಚುನಾವಣೆಯಲ್ಲಿ ಯಾರು ತಮ್ಮ ಬೆಂಬಲಿಗರನ್ನು ಹೆಚ್ಚು ಗೆಲ್ಲಿಸಿಕೊಳ್ಳುತ್ತಾರೊ ಅವರು ಮುಂದಿನ ವಿಧಾನ ಸಭೆಯ ಮೆಟ್ಟಿಲು ಹತ್ತಲು ಸಹಕಾರಿಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿವೆ. ಒಟ್ಟನಲ್ಲಿ ಜೆ.ಸಿ.ಎಂ. ಹಾಗೂ ಕೆ.ಎಸ್.ಕೆ.ಗೆ ಜಿದ್ದಾಜಿದ್ದು ಆರಂಭಗೊಂಡಿದೆ.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ದೃಷ್ಠಿಯನ್ನಿಟ್ಟು ಕೊಂಡು ನೋಡುವುದಾದರೆ ಇಬ್ಬರೂ ಸಮ ಬಲರೇ, ಕಾರಣ ಮಾಧುಸ್ವಾಮಿ ಹಂದನಕೆರೆ, ಕಂದೀಕೆರೆ, ಶೆಟ್ಟೀಕೆರೆ ಭಾಗಗಳಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿದ್ದರೆ, ಕೆ.ಎಸ್.ಕಿರಣ್ಕುಮಾರ್ ಹುಳಿಯಾರು, ಹೊಯ್ಸಲಕಟ್ಟೆ, ಬುಕ್ಕಾಪಟ್ಟಣದ ಕಡೆ ಫೆಮಸ್. ಈಗಾಗಿ ಇವರಿಬ್ಬರ ಬಲವನ್ನು ನಿರ್ಧರಿಸುವಲ್ಲಿ ಈ ಚುನಾವಣೆ ನಿಣರ್ಾಯಕ ಪಾತ್ರ ವಹಿಸಲಿದೆ.
ಸ್ಥಳೀಯ ಜೆ.ಡಿ.ಎಸ್. ನಾಯಕ ಸಿ.ಬಿ.ಸುರೇಶ್ ಬಾಬು ಕ್ಷೇತ್ರದಲ್ಲಿ ಜನರಿಗೆ ನೇರವಾಗಿ ದೊರೆಯದಾದಾಗ ಕ್ಷಪಿಸಿದ್ದು ಬಿಟ್ಟರೆ ಅವರು ಕ್ಷೇತ್ರಕ್ಕೆ ಬಂದು ''ಅಣ್ಣ, ಅಕ್ಕ, ಬರ್ದರ್'' ಎಂದು ಹೆಗಲ ಮೇಲೆ ಕೈ ಹಾಕಿದ ತಕ್ಷಣ ಎಲ್ಲವನ್ನು ಮರೆತು 'ಬಾಬಣ್ಣ' ಎಂದು ಜನ ಗುಂಪು ಗುಂಪಾಗಿ ಹಿಂಬಾಲಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಇಲ್ಲಿನ ಕಾಂಗ್ರೆಸಿಗರನ್ನು ಅನಾಥರನ್ನಾಗಿಸಿರುವ ಮೇಲ್ಮಟ್ಟದ ನಾಯಕರು, ಈ ಚುನಾವಣೆಯನ್ನು ಹೇಗೆ ಎದುರಿಸುತ್ತಾರೆ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಹಾಗೇ ಉಳಿದಿದೆ. ಹಾಗಂತ ಆಕಾಂಕ್ಷಿಗಳೇನು ಕಡಿಮೆಯಾಗಿಲ್ಲ, ಟಿಕೇಟ್ ಆಕಾಂಕ್ಷಿಗಳು ಅಷ್ಟೇ, ಮೊದಲು ಜೆ.ಡಿ.ಎಸ್.ನಲ್ಲಿ ಟ್ರೈ ಮಾಡೋಣ ಅಲ್ಲಿ ಸಿಗದಿದ್ದರೆ ಕಾಂಗ್ರೇಸ್ ಇದ್ದೇ ಇದೆಯಲ್ಲಾ ಎಂಬ ಮನೋಭಾವನೆಯವರು ಹೆಚ್ಚಾಗಿದ್ದಾರೆ. ಎರಡು ಪಕ್ಷಗಳಲ್ಲಿ ಅಜರ್ಿ ಸಲ್ಲಿಸಿರುವ ಉದಾಹರಣೆ ಇಲ್ಲದಿಲ್ಲ. ಈ ಮಾತನನ್ನು ಕೇಳಿದ ಕೆಲವು ಕಾರ್ಯಕರ್ತರು ಜೆ.ಡಿ.ಎಸ್. ಜೊತೆ ಹೊಂದಾದರೆ ನಮ್ಮ ಕೈ ಸ್ವಲ್ಪ ಬೆಚ್ಚಗಾಗುತ್ತದೆ ಎಂದು ಆಸೆಗಣ್ಣಿನಿಂದ ನೋಡುವವರು ಇದ್ದಾರೆ. ಆದರೆ ನಿಷ್ಠಾವಂತ ಬೆರಳೆಣಿಕೆಯಷ್ಟು ಕಾಂಗ್ರೆಸಿಗರು ಇದಕ್ಕೆ ಹೊರತಾದವರೂ ಇದ್ದಾರೆ. ಆದರೆ ರಾಜ್ಯ ನಾಯಕರು ಪಕ್ಷಗಳ ಹೊಂದಾಣಿಕೆಯಲ್ಲಿ ಏನು ನಿಲುವು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಟಿಕೆಟ್ ಆಕಾಂಕ್ಷಿಗಳ ಗಮನ ನೆಟ್ಟಿದೆ.
ಜೆ.ಡಿ.ಎಸ್, ಕಾಂಗ್ರೆಸ್ ಈಗಾಗಲೇ ಒಂದೊಂದು ಸುತ್ತಿನ ಕಾರ್ಯಕರ್ತರ ಸಭೆ ಕರೆದು ಅಜರ್ಿಗಳನ್ನು ಪಡೆದಿವೆ, ಜೆ.ಸಿ.ಎಂ.ಬೆಂಬಲಿಗರು ಇದೇ 11ರಂದು ಒಂದೆಡೆ ಸೇರಲಿದ್ದಾರೆ, ಬಿ.ಜೆ.ಪಿ.ಯವರು ಪಟ್ಟಿಯನ್ನೇನು ಸಿದ್ದಗೊಳಿಸಿಕೊಂಡಿದ್ದಾರೆ ಆದರೆ ಎರಡು ಪಟ್ಟಿ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ, ಇದರಲ್ಲಿ ಹೈಕಮಾಂಡ್ ಯಾರ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲಾ ಪಕ್ಷಗಳು ಜಾತಿ ಲೆಕ್ಕಾಚಾರದಲ್ಲಿ ಹಾಗೂ ವ್ಯಕ್ತಿಗತವಾಗಿ ಅಬ್ಯಾಥರ್ಿಗಳೆಷ್ಟು ತೂಗುತ್ತಾರೆ ಎಂಬುದರ ಮೇಲೆ ಟಿಕೇಟ್ ನೀಡಲು ಮುಂದಾಗುತ್ತಿದ್ದಾರೆ.
ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಶೆಟ್ಟೀಕೆರೆ ಕ್ಷೇತ್ರ: ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದು, ಈ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಗೋಡೆಕೆರೆ ನಿಜಾನಂದಮೂತರ್ಿ, ಎಚ್.ಬಿ.ಎಸ್.ನಾರಾಯಣಗೌಡ, ಸಾಸಲು ಸತೀಶ ಅಜರ್ಿ ಸಲ್ಲಿಸಿದ್ದಾರೆ, ಜೆ.ಡಿ.ಎಸ್.ನಿಂದ ತಾ.ಪಂ. ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಭೈರವ ಮೈನ್ಸ್ನ ಸಿ.ಡಿ.ಸುರೇಶ್ ಕೇಳುತ್ತಿದ್ದಾರೆ. ಜೆ.ಸಿ.ಎಂ.ಬೆಂಬಲಿಗರ ಬಣದಿಂದ ತಾ.ಪ0.ಮಾಜಿ ಅಧ್ಯಕ್ಷ ಎಚ್.ಎಂ.ಸುರೇಂದ್ರಯ್ಯ, ಟಿ. ಶಂಕರಲಿಂಗಪ್ಪ ಆಕಾಂಕ್ಷಿಗಳಾಗಿದ್ದಾರೆ. ಬಿ.ಜೆ.ಪಿ.ಯಿಂದ ಬಿ.ಎನ್.ಶಿವಪ್ರಕಾಶ್, ಗಣಿ ಉದ್ಯಮಿ ಪಂಚಾಕ್ಷರಿ ಪೈಪೋಟಿಯಲಿದ್ದಾರೆ.
ಕಂದೀಕೆರೆ ಕ್ಷೇತ್ರ: ಅನುಸೂಚಿತ ಜಾತಿಗೆ ಮೀಸಲಿದ್ದು ಜೆ.ಡಿ.ಎಸ್.ನಿಂದ ತೀರ್ಥಪುರದ ಕುಮಾರ್, ನಿವೃತ್ತ ಶಿಕ್ಷಕ ಶಿವಣ್ಣ, ಪೈಪೋಟಿಯಲಿದ್ದು ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್ರವರ ಹೆಸರೂ ಕೇಳಿ ಬರುತ್ತಿದೆ. ಜೆ.ಸಿ.ಎಂ.ಬೆಂಬಲಿಗರ ಗುಂಪಿನಲ್ಲಿ ಲೋಹಿತಾ, ಸಾಲ್ಕಟ್ಟೆ ಚಂದ್ರಣ್ಣ, ಹೊಸಕೆರೆ ಮಲ್ಲಿಕಾರ್ಜನ್ ಮುಂಚೂಣಿಯಲಿದ್ದಾರೆ, ಕಾಂಗ್ರೇಸ್ನಲ್ಲಿ ವಕೀಲ ಪರಮೇಶ್ ಅಜರ್ಿ ಹಾಕಿಕೊಂಡಿದ್ದಾರೆ, ಬಿ.ಜೆ.ಪಿ.ಯಿಂದ ಬೇವಿನಹಳ್ಳಿ ಚನ್ನಬಸವಯ್ಯ, ಆಲದಕಟ್ಟೆ ರಂಗನಾಯ್ಕ, ಬೆಳ್ಳಾರದ ಈರಣ್ಣ, ಅಜ್ಜಿಗುಡ್ಡೆ ಸಣ್ಣಯ್ಯನ ಹೆಸರು ಕೇಳಿ ಬರುತ್ತಿದೆ.
ಹಂದನಕೆರೆ ಕ್ಷೇತ್ರ: ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದ್ದು, ಈ ಕ್ಷೇತ್ರದಲ್ಲಿನ ಎಲ್ಲಾ ಪಕ್ಷಗಳ ಗಟ್ಟಾನುಗಟಿ ನಾಯಕರುಗಳು ತಮ್ಮ ಧರ್ಮಪತ್ನಿಯನ್ನು ನಿಲ್ಲಿಸಲು ಕಸರತ್ತು ನಡೆಸುತ್ತಿದ್ದು, ಜೆ.ಡಿ.ಎಸ್.ನಿಂದ ಜಿ.ಪಂ. ಮಾಜಿ ಅಧ್ಯಕ್ಷ ರಘುನಾಥ್ರವರ ಪತ್ನಿ ಲಕ್ಷ್ಮಿ, ಕುದುರೆ ರಾಜಣ್ಣನವರ ಪತ್ನಿ, ತಾ.ಪಂ.ಸದಸ್ಯೆ ಜಾನಮ್ಮ ರಾಮಚಂದ್ರಯ್ಯ,ನವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ, ಕಾಂಗ್ರೆಸ್ನಿಂದ ಸೋರಲಮಾವು ಕೃಷ್ಣಮೂತರ್ಿಯವರ ಪತ್ನಿಯ ಹೆಸರು ಕೇಳಿ ಬರುತ್ತಿದೆ. ಜೆ.ಸಿ.ಎಂ.ಬೆಂಬಲಿಗರ ಬಣದಿಂದ ಚೆನ್ನಪ್ಪನ ಪಾಳ್ಯದ ಚೆನ್ನಪ್ಪನ ಪತ್ನಿ, ಮಲ್ಲಿಗೆರೆ ರಾಜಣ್ಣನ ಪತ್ನಿ ಪೈಪೋಟಿಯಲ್ಲಿದ್ದಾರೆ. ಬಿ.ಜೆ.ಪಿ.ಯಿಂದ ಬರಗೂರು ಬಸವರಾಜು ಪತ್ನಿ ಶುಭಾ, ಮತ್ತಿಘಟ್ಟ ಆನಂದಕುಮಾರ್ ರವರ ಪತ್ನಿ ವಸಂತಮ್ಮನ ಹೆಸರು ಚಾಲ್ತಿಯಲ್ಲಿದೆ.
ಹುಳಿಯಾರು ಕ್ಷೇತ್ರ: ಕಾಂಗ್ರೆಸ್ನಿಂದ ರಮಾದೇವಿ, ಜೆ.ಡಿ.ಎಸ್.ನ ಮಂಜುಳ ಗವಿರಂಗಯ್ಯ, ಹೊಸಹಳ್ಳಿ ಪಾಳ್ಯದ ರಾಜಮ್ಮ, ಬಿಂದು ರಮೇಶ್ಬಾಬು ಮಧ್ಯೆ ಪೈಪೋಟಿ ಇದೆ, ಬಿ.ಜೆ.ಪಿ.ಯಿಂದ ಕೆ.ಎಸ್.ಕಿರಣ್ಕುಮಾರ್ರವರ ಪತ್ನಿ ಕವಿತಾ ರವರ ಹೆಸರು ಜನ ಸಾಮಾನ್ಯರಲ್ಲಿ ದಟ್ಟವಾಗಿದೆ ಆದರೆ ಕಿರಣ್ ಈ ಬಗ್ಗೆ ಮೌನವಹಿಸಿದ್ದು, ಜಿ.ಪಂ. ಮಾಜಿ ಸದಸ್ಯ ಶಿವರಾಮಯ್ಯನವರ ಪತ್ನಿ ಹೆಸರು ಚಾಲ್ತಿಯಲ್ಲಿದೆ. ಜೆ.ಸಿ.ಎಂ. ಬೆಂಬಲಿಗರ ಬಣದಲ್ಲಿ ಈ ಕ್ಷೇತ್ರದ ಮಟ್ಟಿಗೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದು ಉಪ್ಪಾರ ಜಾತಿಗೆ ಆದ್ಯತೆ ಕೊಡತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಹೊಯ್ಸಿಲಕಟ್ಟೆ ಕ್ಷೇತ್ರ: ಬಿ.ಸಿ.ಎಂ.(ಎ) ಮಹಿಳೆಗೆ ಮೀಸಲಿದ್ದು, ಕಾಂಗ್ರೆಸ್ನಿಂದ ಕ್ಯಾತಲಿಂಗಮ್ಮ, ಬಿ.ಜೆ.ಪಿಯಿಂದ ನಿಂಗಮ್ಮನ ಹೆಸರು ಕೇಳಿ ಬರುತ್ತಿದೆ. ಜೆ.ಡಿ.ಎಸ್.ನಿಂದ ಜಯಲಕ್ಷ್ಮಿ ಚಿಕ್ಕಣ್ಣ, ರಾಜಮ್ಮ ರಾಮಣ್ಣನ ಹೆಸರು ಕೇಳಿ ಬರುತ್ತಿದೆ. ಜೆ.ಸಿ.ಎಂ. ಬೆಂಬಲಿಗರ ಬಣದಲ್ಲಿ ಅಬ್ಯಾಥರ್ಿಗಳ ಆಯ್ಕೆ ಕಸರತ್ತು ನಡೆದಿದೆ.

ಚಿಕ್ಕನಾಯಕನಹಳ್ಳಿ,ಡಿ.11: ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಕ್ರಿಯೆಗಳು ಬಿರುಸಿನಿಂದ ಸಾಗುತ್ತಿದ್ದು ಚುನಾವಣೆ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಟಿಕೇಟ್ ಹಂಚಿಕೆಯಲ್ಲಿ ಮಾದಿಗರಿಗೆ ಹೆಚ್ಚು ಅವಕಾಶ ಕಲ್ಪಿಸಬೇಕೆಂದು ಜೆ.ಸಿ.ಪುರ ಗ್ರಾಪಂ ಸದಸ್ಯೆ ಬಿ.ಎನ್.ಶಶಿಕಲಾ ಮನವಿ ಮಾಡಿದ್ದಾಋಎ.
ರಾಜ್ಯದಲ್ಲಿ 98ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮಾದಿಗರಿದ್ದು, ಈ ಮತಗಳ ಆಧಾರದ ಮೇಲೆ ಚುನಾವಣಾ ಕಣಕ್ಕಿಳಿದರೆ ಅರ್ಧ ಬಾಗದಷ್ಟು ಜನಪ್ರತಿನಿಧಿಗಳಾಗಿ ಹೊರಹೊಮ್ಮುಬಹುದು, ಪಕ್ಷ ಯಾವುದೇ ಇರಲಿ ಚುನಾವಣೆಗೆ ನಿಲ್ಲಿ ಅವಕಾಶವಿದ್ದರೆ ಪಕ್ಷೇತರರಾಗಿ ನಿಂತು ಮಾದಿಗರು ಮುಂದೆ ಬರಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕ್ರೀಡೆಯಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.
ಚಿಕ್ಕನಾಯಕನಹಳ್ಳಿ,ಡಿ.11: ಯುವಕರು ಕ್ರೀಡಾ ಮನೋಭಾವನೆಯನ್ನು ಬೆಳಸಿಕೊಂಡು ಜೀವನ ನಿರ್ವಹಣೆಯ ಕೌಶಲ್ಯವನ್ನು ಕಲಿಯಬೇಕೆಂದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಮುಕ್ತಾಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ನಡೆಸಿದ ನೆಹರು ಯುವ ಕೇಂದ್ರ ಹಾಗೂ ಶ್ರೀರಂಗ ಯುವ ಸಂಘದ ಕಾರ್ಯದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಶಿಕ್ಷಣದ ಜೊತೆಗೆ ಕ್ರೀಡೆಯ ಅವಶ್ಯಕತೆ ಇದ್ದು ಗ್ರಾಮೀಣ ಪ್ರದೇಶದ ಯುವಕರು ಹೆಚ್ಚಿನ ರೀತಿಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಮತ್ತು ಮಹಿಳೆಯರು ಕ್ರೀಡೆಗಳಲ್ಲಿ ಚಿನ್ನದ ಪದಕ ಪಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು. ವೇದಿಕೆಯಲ್ಲಿ ನೆಹರು ಯುವ ಕೇಂದ್ರದ ಡಿಸೋಜಾ, ಮುಖ್ಯ ಶಿಕ್ಷಕ ಸಂತೋಷ್, ಗ್ರಾ.ಪಂ.ಸದಸ್ಯರಾದ ದಿನೇಶ್, ಶಿವಕುಮಾರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಈಶ್ವರಯ್ಯ ಸ್ವಾಗತಿಸಿದರೆಎ ಸಿ.ಎ.ಕುಮಾರಸ್ವಾಮಿ ನಿರೂಪಿಸಿ ಲೋಕೇಶ್ ವಂದಿಸಿದರು.
ಮನುಷ್ಯ ಜೀವಿಸುವುದಕ್ಕಾಗಿ ಹಾಕಿಕೊಂಡ ನೀತಿ ನಿಯಮವೇ ಧರ್ಮ
ಚಿಕ್ಕನಾಯಕನಹಳ್ಳಿ,ಡಿ.11: ವ್ಯಕ್ತಿ ತನ್ನ ಚಾರಿತ್ರ್ಯವನ್ನು ಬಿಟ್ಟು ಜೀವನ ನಡೆಸಲು ಮುಂದಾಗಬಾರದು, ತನ್ನ ಚಾರಿತ್ರ್ಯ ಬಿಟ್ಟು ಬಾಳಿದರೆ ಮನುಷ್ಯ ಇದ್ದೂ ಸತ್ತಂತೆ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಸುಹಾಸಿನಿ ಹೇಳಿದರು.
ಪಟ್ಟಣದಲ್ಲಿ ಕಾನೂನು ಸೇವಾ ಸಮಿತಿಯ ವತಿಯಿಂದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಪ್ರಸಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನ ಮನಸ್ಸಿಗೆ ಶಾಂತಿ ದೊರಕಿದರೆ ವಿಶ್ವದಲ್ಲಿ ಅಶಾಂತಿ ದೂರವಾಗಿ ಶಾಂತಿ ನೆಲಸಲು ಸಹಕಾರಿಯಾಗುತ್ತದೆ ಎಂದ ಅವರು ಸಮಯ ದೊರಕುವುದು ಬಹಳ ಕಡಿಮೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಬಹುದು ಎಂದರು.
ಸಿ.ಡಿ.ಪಿ.ಒ ಅನೀಸ್ ಖೈಸರ್ ಮಾತನಾಡಿ ಧರ್ಮ ಎಂಬುದು ಮನುಷ್ಯನು ಹಾಕಿಕೊಂಡಿರುವ ನೀತಿ ನಿಯಮದ ಜೀವನ ಕ್ರಿಯೆ ಎಂದ ಅವರು ಮನುಷ್ಯ ಮನುಷ್ಯನಿಗೆ ಸಹಾಯ ಮಾಡಬೇಕು ಮತ್ತು ಮನುಷ್ಯನು ಶಾಂತಿ ಸಹಬಾಳ್ವೆಗಾಗಿ ಒಬ್ಬರಿಗೊಬ್ಬರೂ ಅರಿತುಕೊಂಡು ಬಾಳಬೇಕು ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶೆ ಶೀಲಾ, ವಕೀಲರಾದ ಗೋಪಾಲಕೃಷ್ಣ, ಮಹಾಲಿಂಗಯ್ಯ, ಜ್ಞಾನಮೂತರ್ಿ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ. ಡಿ.12: ಮಕ್ಕಳು ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಭಾಗವಹಿಸಿ ಆಸಕ್ತಿಯಿಂದ ಪಾಲ್ಗೊಂಡು ವೇದಿಕೆಗಳನ್ನು ಬಳಸಿಕೊಂಡರೆ ಅವರ ಮುಂದಿನ ಗುರಿ ತಲುಪಲು ಸಹಾಯಕವಾಗಲಿದೆ ಎಂದು ತಹಸೀಲ್ದಾರ್ ಟಿ.ಸಿ. ಕಾಂತರಾಜು ಮಾತನಾಡುತ್ತ
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ಮಾತನಾಡುತ್ತಾ ಎಲ್ಲಾ ತೀಪರ್ುಗಾರರು ನಿಷ್ಪಕ್ಷಪಾತವಾಗಿ ಪ್ರತಿಭೆಯನ್ನು ಗುತರ್ಿಸಿ ಯಾವುದೇ ಮಗುವಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಮತ್ತು ಸ್ಪಧರ್ಿಗಳಿಗೆ ಸೋಲು ಗೆಲುವು ಮುಖ್ಯವಲ್ಲ ಭಾಗವಿಸುವ ಸಾಮಥ್ರ್ಯ ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಪ್ರ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಪರಶಿವಮೂತರ್ಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಪಠ್ಯೇತರ ಚಟುವಟಿಕೆಗಳ ವೇದಿಕೆ ಅಗತ್ಯವಾಗಿದೆ. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಧೈರ್ಯದ ಜೊತೆಗೆ ಸವರ್ಾಂಗೀಣ ಮುಖಿಯಾಗಿ ಬೆಳವಣಿಗೆಯಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಇ.ಓ ದಯಾನಂದ್ ತಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ. ಸುರೇಶ್, ಸಂಘಟನಾ ಕಾರ್ಯದಶರ್ಿ ಶಾಂತಮ್ಮ, ಉಪಧ್ಯಕ್ಷ ನಟರಾಜು, ನಿದರ್ೇಶಕ ರಾಜಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಿಕಾಜರ್ುನ್ ಪ್ರಾಥರ್ಿಸಿದರೆ, ಎನ್. ಮೂತರ್ಿಸ್ವಾಗತಿಸಿದರು, ಪ್ರಕಾಶ್ ವಂದಿಸಿ, ದುರ್ಗಯ್ಯ ನಿರೂಪಿಸಿದರು.

Wednesday, December 8, 2010



: ಕೆ.ಎಸ್.ಕೆ.ವಿರುದ್ದ ಆರೋಪ ಮಾಡಲು ಟಿ.ಬಿ.ಜೆ.ಯವರಿಗೆ ನೈತಿಕ ಹಕ್ಕಿಲ್ಲ: ಸುರೇಶ್ ಹಳೇಮನೆ
ಚಿಕ್ಕನಾಯಕನಹಳ್ಳಿ,ಡಿ.6: ನಮ್ಮ ತಾಲೂಕನ್ನು ಸದಾ ಮಲತಾಯಿ ಧೋರಣೆಯಲ್ಲೇ ಅಭಿವೃದ್ಧಿಯಿಂದ ದೂರ ಮಾಡಿದ ಟಿ.ಬಿ.ಜಯಚಂದ್ರರವರಿಗೆ ನಮ್ಮ ಮಾಜಿ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲವೆಂದು ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರು ಹಾಗೂ ಶಿರಾ ವಿಧಾನಸಭಾ ಸದಸ್ಯರು ಆದ ಟಿ ಬಿ ಜಯಚಂದ್ರ ರವರು ತಮ್ಮ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಬಿ ಜೆ ಪಿ ಮಾಜಿ ಶಾಸಕರೊಬ್ಬರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ಹರಿಯುತ್ತದೆಂದು ಸುಳ್ಳು ಹೇಳಿದ್ದಾರೆ ಆ ತರಹದ ಯಾವುದೇ ಪ್ರಯತ್ನ ನಡೆದಿಲ್ಲ ಚೀಫ್ ಎಂಜಿನಿಯರ್ ರವರು ಸಕರ್ಾರಕ್ಕೆ ವರದಿಯನ್ನು ಮಾತ್ರ ನೀಡಿದ್ದಾರೆ, ನಾನು ಸದನದ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನ ಸಮಿತಿಯ ಅಧ್ಯಕ್ಷನಾಗಿರುವುದರಿಂದ ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಸತ್ಯವನ್ನು ಅನಾವರಣಗೊಳಿಸಿದ್ದು ಈ ರೀತಿ ನೀರಾವರಿ ವಿಷಯಗಳನ್ನು ಬಹಿರಂಗಪಡಿಸಬಾರದು ಆದರೆ ನಾನು ಈಗಾಗಲೆ ಕಳ್ಳಂಬೆಳ್ಳ ಶಿರಾ ಕೆರೆಗೆ ಹೇಮಾವತಿ ನೀರನ್ನು ಹರಿಸಿ ಅನುಭವಸ್ಥನಾಗಿದ್ದೇನೆ. ಹಾಗೆಯೇ ಚಿಕ್ಕನಾಯಕನಹಳ್ಳಿಗೂ ನೀರನ್ನು ಹರಿಸಲು ಸಕರ್ಾರದೊಳಗೆ ಗೌಪ್ಯವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದಿದ್ದಾರಲ್ಲದೆ, ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ ಈ ಮಾತುಗಳನ್ನಾಡಿರುವ ಜಯಚಂದ್ರ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಮ್ಮೆಯೂ ಚಿಕ್ಕನಾಯಕನಹಳ್ಳಿಯಲ್ಲಿಯೇ ಇದ್ದ ಅವರ ಕಛೇರಿಗೆ ಬಾರದ, ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸದೆ ಚಿಕ್ಕನಾಯಕನಹಳ್ಳಿಯ ಪ್ರಗತಿ ಕಾರ್ಯಗಳನ್ನು ಸದಾ ಕಡೆಗಣಿಸುತ್ತಲೇ ಬಂದಿರುವ ಇವರಿಂದ ನಾವು ಹೇಳಿಸಿಕೊಳ್ಳಬೇಕಾದ್ದು ಏನು ಇಲ್ಲವೆಂದಿದ್ದಾರೆ.
ಈಗಾಗಲೇ ನೀರಾವರಿ ಬಗ್ಗೆ ಬಿ ಜೆ ಪಿ ಸ್ಪಷ್ಟ ನಿಲುವನ್ನು ತಳೆದಿದ್ದು, ಈ ಯೋಜನೆ ಅನುಷ್ಟಾನಗೊಳ್ಳುತ್ತದೆಂಬ ಧೃಡ ವಿಶ್ವಾಸವಿರುವಾಗ ಅದನ್ನು ನಾನೇ ಮಾಡಿದೆನೆಂದು ಹೇಳಿಕೊಳ್ಳಲು ಜಯಚಂದ್ರರವರು ಈ ರೀತಿಯ ಕೆಳಮಟ್ಟದ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿರುವುದು ನಾಚಿಕೆಗೇಡಿನ ವಿಷಯ. ತಮ್ಮದೇ ಸಕರ್ಾರವಿದ್ದು, ತಾವೇ ಸಚಿವರಾಗಿದ್ದು, ಸಾಧಿಸಲಾಗದ್ದನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಸಾಧಿಸುತ್ತೇನೆ ಎಂದು ಹೇಳುತ್ತಲೇ ಭಾ ಜ ಪಾ ವಿರುದ್ದ ಅಪಪ್ರಚಾರ ಮಾಡುತ್ತಿರುವ ಜಯಚಂದ್ರರವರು ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ. ನಮ್ಮ ಪಕ್ಷದ ಮಾಜಿ ಶಾಸಕರ ಬಗ್ಗೆ ಮಾತನಾಡುವ ಸಾಹಸಕ್ಕೆ ಇನ್ನು ಮುಂದೆ ಮುಂದಾದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇನ್ನು ಒಂದು ಅಂಶ ನೆನಪಿರಲಿ ಸದನದ ಸಮಿತಿ ಅಧ್ಯಕ್ಷರಾಗಿ ಪಡೆದವೆಂದು ಹೇಳುತ್ತಿರುವ ವಿಷಯವನ್ನು ಸಕರ್ಾರದಿಂದ ಪಡೆಯಲು ಸಾಮಾನ್ಯ ವ್ಯಕ್ತಿಯಾದರೆ ಸಾಕು, ಮಾಹಿತಿ ಹಕ್ಕಿನಡಿ ಪಡೆಯಬಹುದು. ಅದನ್ನು ಹೇಳಲು ಇಷ್ಟೊಂದು ದೊಡ್ಡ ಡೌಲು-ಡಂಗೂರ ಅವಶ್ಯಕತೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪದರ್ಿಸುವ ಉಮೇದಿನಲ್ಲಿ ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸುವ ಮಾತನಾಡುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ನಮ್ಮ ಪಕ್ಷ ಸಮರ್ಥವಾಗಿದೆ ಎಂದು ಸುರೇಶ್ ಹಳೇಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಡುಗಾಡು ಸಿದ್ದರಿಗೆ ನಿವೇಶನ ಒದಗಿಸಲು ಶ್ರಮಿಸುವೆ: ಪುರಸಭಾ ಅಧ್ಯಕ್ಷ ರಾಜಣ್ಣ
ಚಿಕ್ಕನಾಯಕನಹಳ್ಳಿ,ಡಿ.8: ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ 53ನೇ ಪರಿನಿವರ್ಾಣ ದಿನವನ್ನು ಪಟ್ಟಣದ ಕೇದಿಗೆಹಳ್ಳಿ ಗುಂಡುತೋಪಿನ ಶ್ರಮಿಕ ವರ್ಗದ ಬಿಡಾರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪುರಸಭಾ ಅಧ್ಯಕ್ಷ ಸಿ.ಜಿ.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ರವರು ದಲಿತರ ಉದ್ದಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದು, ಅವರ ಪರಿನಿವರ್ಾಣ ದಿನವನ್ನು ಜಾಗೃತಿ ವೇದಿಕೆ ಈ ಬಿಡಾರದಲ್ಲಿ ಹಮ್ಮಿಕೊಂಡಿರುವುದು ಸಮಂಜಸವಾಗಿದ್ದು, ಇಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸಿಕೊಂಡು ಬಂದಿರುವ ಈ ಜನಕ್ಕೆ ಶಾಶ್ವತವಾಗಿ ನಿವೇಶನವನ್ನು ನೀಡುವ ಜವಬ್ದಾರಿ ಪುರಸಭೆಯ ಮೇಲಿದ್ದು, ಶೀಘ್ರ ಇವರಿಗೆ ನಿವೇಶನವನ್ನು ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪುರಸಭಾ ಸದಸ್ಯ ಹಾಗೂ ಜಾಗೃತಿ ವೇದಿಕೆ ಸಂಚಾಲಕ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ಸುಡುಗಾಡು ಸಿದ್ದರು ಎಂಬ ಪರಿಶಿಷ್ಟ ಜಾತಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಜನರು ಹಲವು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರು ಚಳಿ, ಮಳೆ, ಬಿಸಲುಗಳಲ್ಲಿ ನೊಂದಿದ್ದಾರೆ, ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಜಲಾವೃತಗೊಂಡಿದ್ದ ಈ ಸ್ಥಳದಲ್ಲೇ ವಾಸಿಸಿದ್ದು ಸಾವಲಾಗಿತ್ತು. ಕನಿಷ್ಟ ಮಟ್ಟದ ಸವಲತ್ತುಗಳಿಲ್ಲದೆ ಬೇಸತ್ತು ಹೋಗಿರುವ ಈ ಜನಕ್ಕೆ ಪುರಸಭೆಯ ವತಿಯಿಂದ ಶೀಘ್ರ ನಿವೇಶನ ಕೊಡಬೇಕೆಂದು ಒತ್ತಾಯಿಸಿದರು.
ಈ ಭಾಗದ ಪುರಸಭಾ ಸದಸ್ಯೆ ಧರಣಿ ಲಕ್ಕಪ್ಪ ಮಾತನಾಡಿ, ಈ ಜನರಿಗೆ ನಿವೇಶನ ಕೊಡಿಸಲು ಯಾವುದೇ ರೀತಿಯ ರಾಜಕೀಯವನ್ನು ಮಧ್ಯೆ ತರದೆ ಇವರ ಕಷ್ಟಕ್ಕೆ ಸ್ಪಂದಿಸುವುದು ಮಾನವೀಯತೆ ಗುಣ ಎಂದರು.
ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಇವರ ಕಷ್ಟಕ್ಕೆ ಪುರಸಭೆಯವರು ಶೀಘ್ರ ಸ್ಪಂದಿಸಬೇಕು, ಕಾನೂನು ಕಟ್ಟಲೆಗಳನ್ನೇ ಮುಂದು ಮಾಡಿಕೊಂಡು ಹೋಗದೆ, ಮಾನವೀಯ ನೆಲಗಟ್ಟಿನಲ್ಲಿ ಯೋಚಿಸಿ ಸುಡುಗಾಡು ಸಿದ್ದರಿಗೆ ಅನುಕೂಲ ಮಾಡಿಕೊಂಡಬೇಕೆಂದರು.
ಸವಿತ ಸಮಾಜದ ಮುಖಂಡ ಸುಬ್ರಹ್ಮಣ್ಯ ಮಾತನಾಡಿ ಈ ಜನರಿಗೆ ವಸತಿಯದೊಂದೆ ಸಮಸ್ಯೆಯಲ್ಲ, ಗುಡಿಸಲಿನಲ್ಲಿ ವಾಸಿಸುತ್ತಿರವುದರಿಂದ ಇವರ ಜೀವಕ್ಕೆ ಸಂಚಾಕರವಿದೆ ಎಂದರಲ್ಲದೆ, ಇತ್ತೀಚೆಗೆ ಇಲ್ಲಿಯ ಹೆಣ್ಣು ಮಕ್ಕಳೊಬ್ಬಳ ಮೇಲೆ ಅತ್ಯಾಚರವೆಸೆಗಿದ ಘಟನೆಯೂ ನಡೆದಿದೆ ಇಂದಿನ ನಾಗರೀಕ ಸಮಾಜದಲ್ಲಿ ಇನ್ನೂ ಈ ರೀತಿಯ ಅಮಾನವೀಯ ಘಟನೆಗಳು ನಡೆಯುತ್ತಿರುವುದು ನಾಚಿಗೆಗೇಡಿನ ವಿಷಯವೆಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರುಗಳಾದ ರುಕ್ಮಿಣಮ್ಮ, ಎಂ.ಎಸ್.ರವಿಕುಮಾರ್, ಡಿ.ಎಸ್.ಎಸ್.ಮುಖಂಡರುಗಳಾದ ಲಿಂಗದೇವರು, ಹೊಸಕೆರೆ ಮಲ್ಲಿಕಾರ್ಜನಯ್ಯ, ಬೋರವೆಲ್ ತಿಮ್ಮಯ್ಯ, ತಾ.ಕ.ರ.ವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ.ಡಿ.07: ಕೃಷಿ ಬಗ್ಗೆ ರೈತರು ಹೆಚ್ಚು ಒತ್ತು ನೀಡಿ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರಗಳನ್ನು ರೈತರು ಉಪಯೋಗಿಸದ ನಂತರ ಒಳ್ಳೆಯ ಇಳುವರಿ ಹಾಗೂ ಸಮೃದ್ಧವಾದ ಬೆಳೆಯಿಂದ ಉತ್ತಮ ಆಹಾರ ದೊರಕುವುದು ಎಂದು ಶಾಸಕ ಸಿ.ಬಿ. ಸುರೇಶ್ಬಾಬು ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಉತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸಮಸ್ಯೆಗಳನ್ನು ಹೊತ್ತು ಬರುವ ರೈತರುಗಳ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ, ಕೃಷಿ ಇಲಾಖೆಯಲ್ಲಿ ಸಲಕರಣೆಗಳನ್ನು ರೈತರಿಗೆ ಕಾಲಕಾಲಕ್ಕೆ ಒದಗಿಸುವುದಲ್ಲದೆ ಸಕರ್ಾರದಿಂದ ಬಂದಂತಹ ಸಾಮಾಗ್ರಿಗಳು ನೇರವಾಗಿ ರೈತರಿಗೆ ಸಿಗುವಂತೆ ಹಾಗೂ ಫಲಾನುಭವಿಗಳಿಗೆ ದೊರೆಯಬೇಕಾದ ಸೌಲಭ್ಯವನ್ನು ಅಧಿಕಾರಿಗಳು ದೊರೆಯುವಂತೆ ಮಾಡಬೇಕು ಮತ್ತು ರೈತರ ಅಭಿವೃದ್ಧಿಗೆ ಸಕರ್ಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ|| ಶಶಿಧರ್ ಮಾತನಾಡಿ ಕಾಡುಗಳನ್ನು ಬೆಳೆಸಿ ನಾಡನ್ನು ಉಳಿಸಿ ಕಾಡಿನ ನಾಶದಿಂದ ಪಕ್ಷಿ ಪ್ರಪಂಚ ನಾಶವಾಗುತ್ತಿದೆ ಇದರಿಂದ ಮರಗಳಲ್ಲಿ ಗೂಡು ಕಟ್ಟುವ ಜೇನಿನಗೂಡುಗಳು ಸಹ ಕಡಿಮೆಯಾಗುತ್ತಿದು ಜೇನುಕೃಷಿಯು ಸಹ ನಾಶವಾಗುತ್ತಿದೆ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿ ಆಹಾರ ಪದಾರ್ಥವನ್ನು ಆಮದು ಮಾಡಿಕೊಳ್ಳುಂತಹ ಪರಿಸ್ಥಿತಿ ಬರುವಂತಾಗಿದೆ. ಕಾಡಿಲ್ಲದೆ ಮಳೆಯಿಲ್ಲ ಮಳೆಯಿಲ್ಲದೇ ಬೆಳೆಯಿಲ್ಲ ಬೆಳೆಯಿಲ್ಲದೆ ರೈತರಿಗೆ ಬದುಕಿಲ್ಲ ಇದರಿಂದಾಗಿ ರೈತರು ಕೃಷಿಯನ್ನು ಬಿಟ್ಟು ಹೊರಗಡೆ ಕೂಲಿ ಕೆಲಸಗಳಿಗಾಗಿ ವಲಸೆ ಹೋಗುತ್ತಿದ್ದಾರೆ ಹಾಗೂ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ ಇದಕ್ಕೆಲ್ಲ ಕಾರಣ ಕಾಡು ಮುಖ್ಯ, ಕಾಡನ್ನು ಬೆಳೆಸಿ ಕೃಷಿಯನ್ನು ಉಳಿಸಿ ಕೃಷಿಯಿಂದ ರೈತರ ಸುಖವಾದ ಜೀವನ ಮತ್ತೆ ಸಿಗುವಂತಾಗಲಿ ಎಂದ ಅವರು ರೈತರು ಉಳುಮೆ ಮಾಡಬೇಕಾದರೆ ಕಬ್ಬಿಣದ ನೇಗಿಲಿನಿಂದ ಆಳವಾದ ಉಳುಮೆ ಮಾಡಿದರೆ ಮಣ್ಣಿನ ಫಲವತ್ತತೆ ಹೆಚ್ಚಾಗಿ ಬೆಳೆಯು ಉತ್ತಮವಾಗಿ ಬಂದು ಇಳುವರಿಯು ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಬೆಳೆಸಿಕೊಂಡು ಬಂದಂತಹ ಮರಗಳಿಂದ ಮಳೆ ಬೆಳೆ ಚೆನ್ನಾಗಿ ಆಗುತ್ತಿತ್ತು ಬೆಳೆದಂತಹ ಬೆಳೆಗಳಿಂದ ನಮ್ಮ ಹಿರಿಯರು ಆರೋಗ್ಯವಾಗಿದ್ದರು. ಈಗ ಅವರು ಬೆಳಸಿದಂತಹ ಮರಗಳನ್ನು ನಾಶ ಮಾಡಿ ನಾವು ಉಳಿಸಿದಂತಹ ಪರಿಸರವೆಷ್ಟು ಎಂಬುದನ್ನು ನಾವೆ ಊಹೆ ಮಾಡಬೇಕು. ಕೃಷಿಯಲ್ಲಿ ಹೆಚ್ಚು ಲಾಭ ಮಾಡಬೇಕಾದರೆ ಹೈನುಗಾರಿಕೆ ಬೇಕು.
ವೇದಿಕೆಯಲಿ ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ಶಿವಲಿಂಗಯ್ಯ, ತಾಲ್ಲೂಕು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಚಂದ್ರಶೇಖರ್, ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ಲೋಕೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ರಘುನಾಥ್, ಪುರಸಭಾ ಅಧ್ಯಕ್ಷ ರಾಜಣ್ಣ, ಉಪಾಧಕ್ಷೆ ಕವಿತಾಚನ್ನಬಸವಯ್ಯ, ಪುರಸಭಾ ಸದಸ್ಯ ಸಿ.ಎಸ್. ರಮೇಶ್, ತಾ.ಪಂ. ಸದಸ್ಯ ದಾಸೇಗೌಡರು, ಶಿವಕುಮಾರ್, ಕಮಲಾನಾಯಕ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಲಿಂಗದೇವರು ಪ್ರಾಥರ್ಿಸಿದರೆ, ರೈತಗೀತೆಯನ್ನು ನಿವರ್ಾಣೇಶ್ವರ ಬಾಲಿಕಾ ಪ್ರೌಢಶಾಲೆಯ ಮಕ್ಕಳಿಂದ ನೆರವೇರಿಸಲಾಯಿತು ರಂಗಸ್ವಾಮಿ ಸ್ವಾಗತಿಸಿದರೆ ಶ್ಯಾಮಸುಂದರ್ ನಿರೂಪಿಸಿ ಬಸಪ್ಪ ಭಾಗವತ್ ವಂದಿಸಿದರು.

Tuesday, December 7, 2010






ಕೆ.ಎಸ್.ಕೆ.ವಿರುದ್ದ ಆರೋಪ ಮಾಡಲು ಟಿ.ಬಿ.ಜೆ.ಯವರಿಗೆ ನೈತಿಕ ಹಕ್ಕಿಲ್ಲ: ಸುರೇಶ್ ಹಳೇಮನೆ
ಚಿಕ್ಕನಾಯಕನಹಳ್ಳಿ,ಡಿ.6: ನಮ್ಮ ತಾಲೂಕನ್ನು ಸದಾ ಮಲತಾಯಿ ಧೋರಣೆಯಲ್ಲೇ ಅಭಿವೃದ್ಧಿಯಿಂದ ದೂರ ಮಾಡಿದ ಟಿ.ಬಿ.ಜಯಚಂದ್ರರವರಿಗೆ ನಮ್ಮ ಮಾಜಿ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲವೆಂದು ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರು ಹಾಗೂ ಶಿರಾ ವಿಧಾನಸಭಾ ಸದಸ್ಯರು ಆದ ಟಿ ಬಿ ಜಯಚಂದ್ರ ರವರು ತಮ್ಮ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಬಿ ಜೆ ಪಿ ಮಾಜಿ ಶಾಸಕರೊಬ್ಬರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ಹರಿಯುತ್ತದೆಂದು ಸುಳ್ಳು ಹೇಳಿದ್ದಾರೆ ಆ ತರಹದ ಯಾವುದೇ ಪ್ರಯತ್ನ ನಡೆದಿಲ್ಲ ಚೀಫ್ ಎಂಜಿನಿಯರ್ ರವರು ಸಕರ್ಾರಕ್ಕೆ ವರದಿಯನ್ನು ಮಾತ್ರ ನೀಡಿದ್ದಾರೆ, ನಾನು ಸದನದ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನ ಸಮಿತಿಯ ಅಧ್ಯಕ್ಷನಾಗಿರುವುದರಿಂದ ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಸತ್ಯವನ್ನು ಅನಾವರಣಗೊಳಿಸಿದ್ದೇನೆ ಹಾಗೂ ಈ ರೀತಿ ನೀರಾವರಿ ವಿಷಯಗಳನ್ನು ಬಹಿರಂಗಪಡಿಸಬಾರದು ಆದರೆ ನಾನು ಈಗಾಗಲೆ ಕಳ್ಳಂಬೆಳ್ಳ ಶಿರಾ ಕೆರೆಗೆ ಹೇಮಾವತಿ ನೀರನ್ನು ಹರಿಸಿ ಅನುಭವಸ್ಥನಾಗಿದ್ದೇನೆ. ಹಾಗೆಯೇ ಚಿಕ್ಕನಾಯಕನಹಳ್ಳಿಗೂ ನೀರನ್ನು ಹರಿಸಲು ಸಕರ್ಾರದೊಳಗೆ ಗೌಪ್ಯವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದಿದ್ದಾರಲ್ಲದೆ, ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ ಈ ಮಾತುಗಳನ್ನಾಡಿರುವ ಜಯಚಂದ್ರ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಮ್ಮೆಯೂ ಚಿಕ್ಕನಾಯಕನಹಳ್ಳಿಯಲ್ಲಿಯೇ ಇದ್ದ ಅವರ ಕಛೇರಿಗೆ ಬಾರದ, ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸದೆ ಚಿಕ್ಕನಾಯಕನಹಳ್ಳಿಯ ಪ್ರಗತಿ ಕಾರ್ಯಗಳನ್ನು ಸದಾ ಕಡೆಗಣಿಸುತ್ತಲೇ ಬಂದಿರುವ ಇವರಿಂದ ನಾವು ಹೇಳಿಸಿಕೊಳ್ಳಬೇಕಾದ್ದು ಏನು ಇಲ್ಲವೆಂದಿದ್ದಾರೆ.
ಈಗಾಗಲೇ ನೀರಾವರಿ ಬಗ್ಗೆ ಬಿ ಜೆ ಪಿ ಸ್ಪಷ್ಟ ನಿಲುವನ್ನು ತಳೆದಿದ್ದು, ಈ ಯೋಜನೆ ಅನುಷ್ಟಾನಗೊಳ್ಳುತ್ತದೆಂಬ ಧೃಡ ವಿಶ್ವಾಸವಿರುವಾಗ ಅದನ್ನು ನಾನೇ ಮಾಡಿದೆನೆಂದು ಹೇಳಿಕೊಳ್ಳಲು ಜಯಚಂದ್ರ ಈ ರೀತಿಯ ಕೆಳಮಟ್ಟದ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿರುವುದು ನಾಚಿಕೆಗೇಡಿನ ವಿಷಯ. ತಮ್ಮದೇ ಸಕರ್ಾರವಿದ್ದು, ತಾವೇ ಸಚಿವರಾಗಿದ್ದು, ಸಾಧಿಸಲಾಗದ್ದನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಸಾಧಿಸುತ್ತೇನೆ ಎಂದು ಹೇಳುತ್ತಲೇ ಭಾ ಜ ಪಾ ವಿರುದ್ದ ಅಪಪ್ರಚಾರ ಮಾಡುತ್ತಿರುವ ಜಯಚಂದ್ರರವರು ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ. ನಮ್ಮ ಪಕ್ಷದ ಮಾಜಿ ಶಾಸಕರ ಬಗ್ಗೆ ಮಾತನಾಡುವ ಸಾಹಸಕ್ಕೆ ಇನ್ನು ಮುಂದೆ ಮುಂದಾದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇನ್ನು ಒಂದು ಅಂಶ ನೆನಪಿರಲಿ ಸದನದ ಸಮಿತಿ ಅಧ್ಯಕ್ಷರಾಗಿ ಪಡೆದವೆಂದು ಹೇಳುತ್ತಿರುವ ವಿಷಯವನ್ನು ಸಕರ್ಾರದಿಂದ ಪಡೆಯಲು ಸಾಮಾನ್ಯ ವ್ಯಕ್ತಿಯಾದರೆ ಸಾಕು, ಮಾಹಿತಿ ಹಕ್ಕಿನಡಿ ಪಡೆಯಬಹುದು. ಅದನ್ನು ಹೇಳಲು ಇಷ್ಟೊಂದು ದೊಡ್ಡ ಡೌಲು-ಡಂಗೂರ ಅವಶ್ಯಕತೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪದರ್ಿಸುವ ಉಮೇದಿನಲ್ಲಿ ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸುವ ಮಾತನಾಡುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ನಮ್ಮ ಪಕ್ಷ ಸಮರ್ಥವಾಗಿದೆ ಎಂದು ಸುರೇಶ್ ಹಳೇಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನ್ನ ಆಹಾರ ನೀಡುತ್ತಿರುವುದು ಕನರ್ಾಟಕ ಮಣ್ಣು : ಹಿರಣ್ಣಯ್
ಚಿಕ್ಕನಾಯಕನಹಳ್ಳಿ,ಡಿ.07: ಕಳೆದ ಅರವತ್ತು ವರ್ಷಗಳಿಂದ ರಂಗಭೂಮಿಯ ಮೂಲಕ ರಾಜಕಾರಣಿಗಳನ್ನು, ಭ್ರಷ್ಠ ಅಧಿಕಾರಿಗಳನ್ನು ಟೀಕಿಸುತ್ತಾ ಬಂದಿದ್ದರು, ಇದರಿಂದ ಯಾವುದೇ ಸುಧಾರಣೆಯಾಗಲಿಲ್ಲ ಎಂದು ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ವಿಷಾದಿಸಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಟ್ಟಡದ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ರಂಗಭೂಮಿ ಅಂದು-ಇಂದು ಎಂಬ ವಿಷಯದಲ್ಲಿ ಮೇಲ್ಕಂಡಂತೆ ಮಾತನಾಡುತ್ತ ಅಂದು ರಂಗಭೂಮಿಯ ಕಲಾದವಿದರು ಸಮಾಜದ ನೈತಿಕತೆಯ ಅದಃಪತನದಲ್ಲ್ಲಿ ಮುಳುಗಿಹೋಗಿದ್ದಾರೆ ಎಂಬ ಭಾವನೆಯಿಂದ ಯಾರು ರಂಗಭೂಮಿ ಕಲಾವಿದರನ್ನು ಪುರಸ್ಕರಿಸುತ್ತಿರಲಿಲ್ಲ. ರಂಗಕಲಾವಿದರಿಗೆ ಊರುಗಳಲ್ಲಿ ಬಾಡಿಗೆ ಮನೆಯಲ್ಲಾಗಲಿ ಹೆಣ್ಣು ಕೊಡುವಾಗ ಹತ್ತಾರು ಬಾರಿ ಯೋಚಿಸುತ್ತಿದ್ದರು. ನಾಟಕಕಾರರಿರಿಗೆ ಗೌರವ ಮತ್ತು ಸ್ವಾತಂತ್ರ್ಯ ಇವುಗಳಿಂದ ವಂಚಿತರಾಗಿದ್ದರು. ಇಂದಿನ ರಂಗಭೂಮಿಯಲ್ಲಿ ಪ್ರಶಸ್ತಿಗಳು ಚೀಪ್ ರೇಟ್ ಗಳಾಗಿದ್ದು, ಪಾತ್ರಗಳಿಗೆ ಅರ್ಥ ತುಂಬುವಲ್ಲಿ ವಿಫಲವಾಗಿದ್ದರೂ ಎಲ್ಲವೂ ಹತ್ತಿರವಾಗಿದ್ದು ರಂಗ ಭೂಮಿಗೆ ಅಂಟಿರುವ ಗ್ರಹಣ ದೂರವಾಗಬೇಕಾದರೆ ಕಲಾವಿದನಿಂದ ಏಕಾಗ್ರತೆ, ನಿಷ್ಠೆ, ಅರ್ಪಣೆ, ತಪಸ್ಸು, ತ್ಯಾಗ, ಸ್ವಾತಂತ್ರ್ಯ ಎಲ್ಲವನ್ನೂ ಮೈಗೂಡಿಸಿಕೊಂಡರೆ ಮಾತ್ರ ಮೃತ್ಯು ಕೂಪದಿಂದ ರಂಗಭೂಮಿ ಹೊರಬರಲು ಸಾಧ್ಯವಾಗುತ್ತದೆ. ಶಾಸಕಾಂಗ, ಕಾಯರ್ಾಂಗ ಮತ್ತುನ್ಯಾಯಂಗ ಇವುಗಳಲ್ಲಿ ರಾಷ್ಟ್ರ ಪ್ರಜ್ಞೆ ಕಣ್ಣು ತೆರೆಯುವಂತೆ ಮಾಡುವಲ್ಲಿ ಮಾಧ್ಯಮ ಮತ್ತು ರಂಗಭೂಮಿಗಳು ಮಹತ್ತರ ಕೆಲಸ ನಿರ್ವಹಿಸಬೇಕಾಗಿದೆ ಎಂದರು . ಕನ್ನಡ ನಾಡು, ನನಗೆ ಅಕ್ಷರ, ಅನ್ನ, ಆಶ್ರಯ, ಎಲ್ಲವನ್ನು ನೀಡಿರುವಾಗ ಪರಭಾಷೆಯಲ್ಲಿ ಪ್ರದರ್ಶನ ನೀಡುವ ಅವಶ್ಯಕತೆ ನನಗಿಲ್ಲ ಎಂದು ನಟ ರತ್ನಾಕರ ಡಾ|| ಮಾಸ್ಟರ್ ಹಿರಣ್ಣಯ್ಯ ಅವರ ಅಂತರಾಳದ ಮಾತನ್ನು ಬಹಿರಂಗ ಪಡಿಸಿದರು
ತಹಶೀಲ್ದಾರ್ ಟಿ.ಸಿ. ಕಾಂತರಾಜು ಕನ್ನಡ ನಾಡನ್ನರಸಿ ಬರುವ ಪರಭಾಷಿಗರಿಗೆ ಕನ್ನಡ ಭಾಷಾಜ್ಞಾನ ಬೆಳೆಯುವಂತೆ ನಾವುಗಳು ಸಹಕರಿಸುವುದರ ಮೂಲಕ ನಿತ್ಯವೂ ಕನ್ನಡ ರಾಜ್ಯೋತ್ಸವ ಬೆಳಗುವಂತೆ ಆಗಬೇಕು. ಕಪಟ, ವಂಚನೆಯನ್ನರಯದ ಚಿಕ್ಕನಾಯಕನಹಳ್ಳಿ ಜನತೆ ಆಥರ್ಿಕವಾಗಿ ಹಿಂದುಳಿದಿದ್ದು ಇಲ್ಲಿ ಕಬ್ಬಿಣ ಅದಿರು ಕಾಖರ್ಾನೆ ಸ್ಥಾಪನೆ ಕೈಗೊಂಡರೆ ಇಲ್ಲಿನ ಸಾವಿರಾರು ಕುಟುಂಬಗಳು ಆಥರ್ಿಕವಾಗಿ ಸಧೃಡವಾಗಲು ಸಾಧ್ಯವಾಗುತ್ತದೆ ಮತ್ತು ಇಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾದರೆ ಸಕರ್ಾರ ನೀಡುವ ಎಲ್ಲಾ ಸೌಲಭ್ಯ ಸಿಗುವಲ್ಲಿ ಉತ್ಸುಕನಾಗಿ ಕೆಲಸ ನಿರ್ವಹಿಸುವುದಾಗಿ ಹೇಳಿದರು, ಭೃಷ್ಠಾಚಾರ, ಮೂಢನಂಬಿಕೆ ವಿರುದ್ದ ಸಾಮಾಜಿಕ ಕಳಕಳಿಯಿಂದ ನಿದರ್ಾಕ್ಷಿಣ್ಯ ಮನಸ್ಸುಳ್ಳ ನಟ ರತ್ನಾಕರ ಡಾ|| ಮಸ್ಟರ್ ಹಿರಣ್ಣಯ್ಯ ಇವರಿಂದ ಸನ್ಮಾನ ಸ್ವೀಕರಿಸಿರುವುದು ನನ್ನ ಭಾಗ್ಯವಾಗಿದ್ದು ಇದರಿಂದ ನಾನು ನಿಷ್ಠರವಾದರೂ ಪ್ರಾಮಾಣಿಕವಾಗಿ ಪ್ರಗತಿಪರ ಕೆಲಸ ನಿರ್ವಹಿಸುವಂತೆ ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ ಈ ಸನ್ಮಾನ ಎಂದರು.
ಬಾಬು ಹಿರಣ್ಣಯ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ನಾವಿಂದು ಮರೆಯಲಾಗದಂತಹ ಚಿಕ್ಕನಾಯಕನಹಳ್ಳಿ ನನ್ನ ತವರೂರು ನನ್ನ ತಾಯಿ ಇಲ್ಲಿಯವರೆ, ಅವರಿಲ್ಲದಿದ್ದರೆ ನಾವ್ಯಾರು ಇರುತ್ತಿರಲಿಲ್ಲ ನನ್ನ ತಾಯಿ ರಂಗಭೂಮಿ ಹಿಂದೆ ನಿಂತು ಪ್ರೋತ್ಸಾಹಿಸಿ ನಮಗೆ ಹೆಸರು, ಕೀತರ್ಿ ತಂದುಕೊಡುವಲ್ಲಿ ಸಾಹಿತ್ಯ ಹಾಗೂ ರಂಗಭೂಮಿಗೆ ಅವರ ಸೇವೆ ಅನನ್ಯವಾದದ್ದು ನನ್ನ ತಾಯಿಯೇ ಸರ್ವ ಶ್ರೇಷ್ಠರು ಎಂದು ಏಳಿಗೆಯ ಯಶಸ್ಸಿನ ಮಹತ್ವ ಹಾಗೂ ತಾಯಿಯ ಪ್ರೇಮವನ್ನು ಪ್ರದಶರ್ಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ಹಿರಿಯ ಸಾಹಿತಿ ಎಂ. ವಿ. ನಾಗರಾಜ ರಾವ್ ಅವರ 4 ಕಾದಂಬರಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತ ಟಿವಿ, ವೀಡಿಯೋ ಮೊಬೈಲ್ ಗಳು ಮಕ್ಕಳ ಬೆಳವಣಿಗೆಗೆ ಮಾರಕವಾಗಿದ್ದು ಕೆಟ್ಟ ಸಂಸ್ಕೃತಿಯಲ್ಲಿ ಮುಳುಗಿ ಹೋಗಿರುವಂತಹ ಸಮಾಜಕ್ಕೆ ಆತ್ಮ ವಿಮಶರ್ೆ ಅವಶ್ಯಕವಾಗಿದೆ. ಆ ತರಹದ ವಿಮಶರ್ೆಗಳನ್ನು ನಾಟಕ ಕಂಪನಿಗಳು ಸಮಾಜ ತಿದ್ದುವ ಕೆಲಸ ಮಾಡಿಕೊಂಡು ಬರುತ್ತಿರುವ ಕಲಾವಿದರ ಸಹಕಾರಕ್ಕೆ ಸಕರ್ಾರಗಳು ಮಾಶಾಸನ ನೀಡುವಲ್ಲಿ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಂ.ವಿ.ನಾಗರಾಜ್ ರಾವ್ ವಹಿಸಿದ್ದರು. ಕ್ಷೇತ್ರ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್, ಇನ್ನರ್ ವ್ಹೀಲ್ ಅಧ್ಯಕ್ಷೆ ನಾಗರತ್ನರಾವ್, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್, ಬೆಂಗಳೂರು ಶಿಕ್ಷಣ ಆಯುಕ್ತ ಕಛೇರಿಯ ಉಪನಿದರ್ೇಶಕ ಪಾಲಾಕ್ಷಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಪ್ರಿಯಾ ಪ್ರಾಥರ್ಿಸಿದರು ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಸಿ.ಎ.ಕುಮಾರ್ಸ್ವಾಮಿ ನಿರೂಪಿಸಿ, ಎಸ್.ಸಿ.ನಟರಾಜ್ ವಂದಿಸಿದರು.

Friday, December 3, 2010


ಗಣಿತದ ಪ್ರಮೇಯಕ್ಕೂ ರಾಗಿ ಬಳಸಿಕೊಂಡ ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಡಿ.03: ಗಣಿತದ ನಿಯಮಗಳು, ತತ್ವಗಳು ಹಾಗೂ ಸಿದ್ದಾಂತಗಳ ನಿರೂಪಣೆಯಲ್ಲಿ ಪ್ರಮೇಯಗಳನ್ನು ತಾಕರ್ಿಕ ವಿಧಾನಗಳ ಮೂಲಕ ಕಾರ್ಯ ಕಾರಣ ಸಂಬಂದ ಕಲ್ಪಿಸಿ ಸಾಧಿಸುವುದು ವಿದ್ಯಾಥರ್ಿಗಳ ಮೇಧಾ ಶಕ್ತಿಗೊಂದು ಸವಾಲೇ ಸರಿ.
ಆದರೆ ಪ್ರಮೇಯಗಳ ಅತಃ ಸತ್ವವನ್ನು ವಿದ್ಯಾಥರ್ಿಗಳಿಗೆ ಸರಳವಾಗಿ ಅಥರ್ೈಸುವ ನಿಟ್ಟಿನಲ್ಲಿ ಪ್ರಾಯೋಗಿಕ ಸಾಧನಾ ವಿಧಾನಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.
ಚಿಕ್ಕನಾಯಕನಹಳ್ಳಿ ಸಕರ್ಾರಿ ಪ್ರೌಡಶಾಲೆಯ ಗಣಿತ ಶಿಕ್ಷಕ ಎಂ. ಮಂಜುನಾಥಾಚಾರ್ರವರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ವಿಶ್ವ ವಿಖ್ಯಾತ ಪೈಥಾಗೊರಸ್ ಪ್ರಮೇಯವನ್ನು ಸ್ಥಳೀಯ ಮುಖ್ಯ ಬೆಳೆ ಆಹಾರ ಧಾನ್ಯವಾದ ರಾಗಿ ಬಳಸಿ ಪ್ರಾಯೋಗಿಕವಾಗಿ ಸಾಧಿಸುವ ಕ್ರಿಯಾ ಶೀಲ ಮಾದರಿ ತಯಾರಿಸಿದ್ದಾಎ. ಈ ಮಾದರಿಯನ್ನು ವಿದ್ಯಾಥರ್ಿಗಳು ತಿಪಟೂರು ತಾಲೂಕು ಕೆರಗೋಡಿ ರಂಗಾಪುರದಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದಶರ್ಿಸಿ ವೀಕ್ಷಕರ ಗಮನ ಸೆಳೆದಿದ್ದಾರೆ.
ಲಂಭಕೋನ ತ್ರಿಭುಜದ ವಿಕರ್ಣದ ಮೇಲಿನ ವರ್ಗದಳತೆಯ ರಾಗಿ ಪ್ರಮಾಣ ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತದಳತೆಯ ರಾಗಿ ಪ್ರಮಾಣಕ್ಕೆ ಸರಿ ಸಮಾನಾಗಿ ತಾಳೆಯಾಗುವುದು ಈ ಮಾದರಿಯ ವಿಶೇಷ.
ಡಾ.ಹಿರಣ್ಣಯ್ಯನವರಿಂದ ರಂಗಭೂಮಿ ಅಂದು-ಇಂದು ಉಪನ್ಯಾಸ
ಚಿಕ್ಕನಾಯಕನಹಳ್ಳಿ,ಡಿ.03: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಂಗಭೂಮಿ ಅಂದು -ಇಂದು ವಿಷಯದ ಬಗ್ಗೆ ಡಾ.ಮಾಸ್ಟರ್ ಹಿರಣ್ಣಯ್ಯರವರಿಂದ ಉಪನ್ಯಾಸ ಮತ್ತು ತಹಶೀಲ್ದಾರ್ ಟಿ.ಸಿ.ಕಾಂತರಾಜುರವರಿಗೆ ಗೌರವಾಭಿನಂದನೆಯನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಇದೇ 5ರ ಭಾನುವಾರ ಬೆಳಿಗ್ಗೆ 11ಗಂಟೆಗೆ ಬಿ.ಆರ್.ಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಕೃಷಿ ಅಧಿಕಾರಿ ದಾನಪ್ಪ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ಉಪಸ್ಥಿತರಿರುವರು
ಇದೇ ಸಂದರ್ಭದಲ್ಲಿ ಎಂ.ವಿ.ನಾಗರಾಜ್ರಾವ್ರವರ ಪುನರ್ ಮಿಲನ. ನಲ್ಲ ಅಪರಾಧಿ ನಾನಲ್ಲ, ಉಲ್ಲಂಘನ, ಹಸಿರು ಹೊಲದಲ್ಲಿ ಕೆಂಪು ಹೂವು ಎಂಬ ಕಾದಂಬರಿಗಾಳನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ಮತ್ತು ಬಿ.ಇ.ಓ ಸಾ.ಚಿ.ನಾಗೇಶ್ ಬಿಡುಗಡೆ ಮಾಡಲಿದ್ದಾರೆ ಎಂದು ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ.

ಶೆಟ್ಟೀಕೆರೆಯಲ್ಲಿ ಜನಸ್ಪಂದನ
ಚಿಕ್ಕನಾಯಕನಹಳ್ಳಿ,ಡಿ.03: ಇದೇ 4ರ ಶನಿವಾರ ಬೆಳಗ್ಗೆ 11ಕ್ಕೆ ಶೆಟ್ಟಿಕೆರ ಹೋಬಳಿಯಲ್ಲಿ ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಶೆಟ್ಟಿಕೆರೆ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಜನಸ್ಪಂದನ ಸಭೆಯನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಿಮೆ ದರದಲ್ಲಿ ಅಕ್ಕಿ ಗೋಧಿ ವಿತರಣೆ
ಚಿಕ್ಕನಾಯಕನಹಳ್ಳಿ,ಡಿ.03: ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಸಗಟು ಮಳಿಗೆಗಳ ಮೂಲಕ ರಾಜ್ಯದ ಎಲ್ಲಾ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯವನ್ನು ಇದೇ ತಿಂಗಳ 6ಮತ್ತು 7ರಂದು ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ತಾಲೂಕಿನ ಸಕರ್ಾರಿ ನೌಕರರು, ಸಾರ್ವಜನಿಕ ಉದ್ದಿಮೆಗಳ ನೌಕರರು, ಪೌರಾಡಳಿತ ಸಂಸ್ಥೆಯ ಉದ್ಯೋಗಿಗಳು, ಖಾಸಗಿ ಅನುದಾನಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ಸೈನಿಕ, ಅರೆಸೈನಿಕ, ಪಡೆಯ ಸಿಬ್ಬಂದಿಗಳು, ಗೃಹ ರಕ್ಷಕ ದಳದ ಸಿಬ್ಬಂದಿಗಳು, ಎ.ಪಿ.ಎಲ್ ಪಡಿತರ ಚೀಟಿದಾರರು, ಸ್ವಾತಂತ್ರ ಹೋರಾಟಗಾರರು, ಅಧಿಕೃತ ಪತ್ರಕರ್ತರು, ಕಲಾವಿದರು, ಕ್ರೀಡಾಪಟುಗಳು, ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಅಂಗವಿಕಲರು ತಮ್ಮ ಸಂಸ್ಥೆಯ ಮುಖ್ಯಸ್ಥರು ನೀಡಿರುವ ಭಾವಚಿತ್ರ ಸಹಿತ ಗುರುತಿನ ಪತ್ರದ ದೃಡೀಕೃತ ಪ್ರತಿಯನ್ನು ನೀಡಿ 13ರೂ ನಂತೆ 50 ಕೆ.ಜಿ.ಅಕ್ಕಿಯನ್ನು. 9.50 ರೂ ನಂತೆ 50 ಕೆ.ಜಿ.ಗೋಧಿಯನ್ನು ಆಹಾರ ನಾಗರೀಕ ಸರಬರಾಜು ನಿಗಮ ಸಗಟು ಮಳಿಗೆಯಲ್ಲಿ ಪಡೆಯಬುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Wednesday, December 1, 2010



ರೋಟರಿ ಶಾಲೆಯಲ್ಲಿ ಜಿಟಲ್ ಕ್ಲಾಸ್ ರೂಂ'' ವ್ಯವಸ್ಥೆ
ಚಿಕ್ಕನಾಯಕನಹಳ್ಳಿ,ಡಿ.01: ರೋಟರಿ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಂ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಶಾಲೆಯ ಆಡಳಿತ ಮಂಡಳ ಅಧ್ಕಕ್ಷ ಎಸ್.ಎ.ನಭಿ ತಿಳಿಸಿದ್ದಾರೆ.
ಪಟ್ಟಣದ ರೋಟರಿ ಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಲಾ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವಲ್ಲಿ ನಮ್ಮ ಶಾಲೆ ಮುಂಚೂಣಿಯಲ್ಲಿದ್ದು ನಮ್ಮ ಶಾಲೆಯ ಆಯ್ದ ತರಗತಿಯ ಮಕ್ಕಳು ಇನ್ನು ಮುಂದೆ ಪವರ್ ಪಾಯಿಂಟ್ ಶಿಕ್ಷಣವನ್ನು ಪಡೆಯಲಿದ್ದಾರೆ.
ಈ ವ್ಯವಸ್ಥೆಯನ್ನು 3.60 ಲಕ್ಷರೂಗಳ ಅಂದಾಜಿನಲ್ಲಿ ಜಾರಿಗೆ ತರಲಾಗುತ್ತಿದೆ, ಅನಿಮೇಷಿಯನ್ ತಂತ್ರಜ್ಞಾನದ ಮೂಲಕ ಪಾಠ ಭೋದಿಸುವ ವ್ಯವಸ್ಥೆ ಇದಾಗಿದ್ದು ಈಗಾಗಲೇ ಈ ಬಗ್ಗೆ ತರಬೇತಿಯನ್ನು ನಮ್ಮ ಶಾಲೆಯ ಮುಖೋಪಾಧ್ಯಾಯರು ಪಡೆದಿದ್ದಾರೆ ಎಂದರು.
ಪ್ರತಿಬಾ ಕಾರಂಜಿ, ಮೆಟ್ರಿಕ್ ಮೇಳ ಹಾಗೂ ವಿಜ್ಞಾನ ಸಮಾವೇಶದಲ್ಲಿ ನಮ್ಮ ಶಾಲೆ ಪ್ರಥಮ ಸ್ಥಾನದಲ್ಲಿರುವ ನಮ್ಮ ಮಕ್ಕಳು, ಶಿಕ್ಷಣ ಇಲಾಖೆ ಏರ್ಪಡಿಸುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸ್ಪಧರ್ೆಯಲ್ಲಿ ನಮ್ಮ ಶಾಲೆ ಮುಂದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಮಂಡಳಿಯ ಕಾರ್ಯದಶರ್ಿ ಡಾ.ಸಿ.ಎಂ.ಸುರೇಶ್, ಸದಸ್ಯರಾದ ಎಂ.ವಿ.ನಾಗರಾಜ್ರಾವ್, ಮರುಳಾರಾದ್ಯ, ಎಂ.ಎಲ್.ಮಲ್ಲಿಕಾಜರ್ುನಯ್ಯ, ಮುಖ್ಯೋಪಾಧ್ಯಾಯಿನಿ ಸೌಮ್ಯ, ಗಣಿತ ಶಿಕ್ಷಕ ಪಾಂಡು ಹಾಜರಿದ್ದರು.
ಮಕ್ಮಲ್ ಟೋಪಿ ನಾಟಕ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಡಿ.01: ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಲಿಯವರಿಂದ ನಡೆಯುವ ಮಕ್ಮಲ್ ಟೋಪಿ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭವನ್ನು ಇದೇ 5ರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪದವಿ ಪೂರ್ವ ಕಾಲೇಜಿನ ಒಳಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಪುರಸಭಾಧ್ಯಕ್ಷ ರಾಜಣ್ಣ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ರವಿಪ್ರಸಾದ್, ಸಾಹಿತಿ ಆರ್.ಬಸವರಾಜು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಮತ್ತು ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷೆ ಅಹಲ್ಯಾ ಸಾಂಬಮೂತರ್ಿರವರಿಗೆ ಸನ್ಮಾನಿಸಲಾಗುವುದು.
ಅನರ್ಹ ಪಡಿತರ ಚೀಟಿ ಹೊಂದಿರುವವರಿಗೆ ಅಂತಿಮ ಅವಕಾಶ
ಚಿಕ್ಕನಾಯಕನಹಳ್ಳಿ,ಡಿ.01: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಮತ್ತು ಅನರ್ಹ ಪಡಿತರ ಚೀಟಿ ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಪಡಿತರ ಚೀಟಿ ಹೊಂದಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬಹುದೆಂದು ನ್ಯಾಯಾಲಯ ಆದೇಶಿಸಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಕಾನೂನು ಬಾಹಿರವಾಗಿ ಎರಡು ಪಡಿತರ ಚೀಟಿಗಳನ್ನು ಹೊಂದಿರುವವರು ಹಾಗೂ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದರೆ ಈ ವಿಷಯ ಪ್ರಕಟಗೊಂಡ ಎರಡು ವಾರಗಳ ಒಳಗಾಗಿ ಸಂಬಂದಿಸಿದ ತಾಲೂಕು ಅಥವಾ ಉಪನೀದರ್ೇಶಕರ ಕಛೇರಿಗೆ ಹಿಂದಿರುಗಿಸಬೇಕು ತಪ್ಪಿದಲ್ಲಿ ಇದೇ ಅಂತಿಮ ಗಡುವಾಗಿದ್ದು ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಬೋಗಸ್ ಪಡಿತರ ಚೀಟಿ ಹೊಂದಿರುವುದು ಸಾಬೀತಾದಲ್ಲಿ ಅಂತಹ ವ್ಯಕ್ತಿಗೆ ಅಗತ್ಯ ವಸ್ತುಗಳ ಕಾಯ್ದೆಯನ್ವಯ 7 ವರ್ಷಗಳ ತನಕ ಸೆರವಾಸ ವಿಧಿಸಲಾಗುವುದು ಈ ವಿಷಯಕ್ಕೆ ಸಂಬಂದಿಸಿದಂತೆ ಗ್ರಾಹಕರ ಸಹಾಯವಾಣಿ 1800-425-9339ಕ್ಕೆ ದೂರು ನೀಡಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Monday, November 29, 2010



ಕಸಬ್ನನ್ನು ಶೀಘ್ರ ಗಲ್ಲಿಗೇರಿಸಿ ಎಬಿವಿಪಿ ಒತ್ತಾಯ
ಚಿಕ್ಕನಾಯಕನಹಳ್ಳಿ,ನ,29: ಮುಂಬೈ ಬಾಂಬ್ ಸ್ಪೋಟ ನಡೆದು ಎರಡು ವರ್ಷ ಕಳೆದರೂ ಉಗ್ರ ಕಸಬ್ಗೆ ಗಲ್ಲು ಶಿಕ್ಷೆ ನೀಡದಿರುವುದಕ್ಕೆ ವ್ಯವಸ್ಥೆಯ ವಿರುದ್ದ ಬೇಸರ ವ್ಯಕ್ತಪಡಿಸಿರುವ ಅಭಾವಿಪ ತಾಲೂಕು ಘಟಕ ಕಸಬ್ನನ್ನು ಶೀಘ್ರ ಗಲ್ಲಿಗೇರಿಸುವಂತೆ ಆಗ್ರಹಿಸಿದೆ.
ಪಟ್ಟಣದ ನೆಹರು ಸರ್ಕಲ್ನಲ್ಲಿ ನಡೆದ ಮುಂಬೈ ಬಾಂಬ್ ಸ್ಪೋಟದ ಕರಾಳ ದಿನದ ನೆನಪು ಮತ್ತು ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ನೂರಾರು ದೀಪಗಳನ್ನು ಹಚ್ಚಿ ಮೌನ ಆಚರಣೆಯ ಮೂಲಕ ಅಭಾವಿಪ ಕಾರ್ಯಕರ್ತರು ವೀರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಈ ಕರಾಳ ದಿನ ಮತ್ತೆ ಮರುಕಳಿಸಬಾರದೆಂಬ ಉದ್ದೇಶದಿಂದ ಮತ್ತು ಭಯೋತ್ಪಾದನೆಯನ್ನು ದೇಶಾದ್ಯಂತ ಹತ್ತಿಕ್ಕಲು ಯುವಶಕ್ತಿ ಮುಂದಾಗಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಮುಖಂಡರಾದ ಸಿ.ಡಿ.ಚಂದ್ರಶೇಖರ್, ಮಿಲ್ಟ್ರಿಶಿವಣ್ಣ ಮಾತನಾಡಿ ಉಗ್ರ ಕಸಬ್ಗೆ ಗಲ್ಲು ಶಿಕ್ಷೆ ನೀಡುವುದಕ್ಕೆ ಮತ್ತು ದೇಶದ ಸೈನಿಕರ ಸೌಕರ್ಯದ ಕೊರತೆಯ ಬಗ್ಗೆ ವಿಷಾದಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಎ.ಬಿ.ವಿ.ಪಿ ಹಿರಿಯ ಕಾರ್ಯಕರ್ತ ರಾಕೇಶ್, ರಕ್ಷಣಾ ವೇದಿಕೆ ಅಧ್ಯಕ್ಷ ಗುರುಮೂತರ್ಿ, ಎಸ್.ಐ ಶಿವಕುಮಾರ್, ಎ.ಬಿ.ವಿ.ಪಿ ಕಾರ್ಯಕರ್ತರಾದ ಮನು, ದಿಲೀಪ್, ರವಿ. ಮಧು, ದರ್ಶನ್, ನಂದನ್, ಜಗದೀಶ್, ನವೀನ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು

ಹಾಲಿನ ಬೆಲೆ ಹೆಚ್ಚಳಕ್ಕೆ ಗ್ರಾಹಕರು ಸ್ಪಂದಿಸಿ: ಹಳೇಮನೆ
ಚಿಕ್ಕನಾಯಕನಹಳ್ಳಿ,ನ.29: ಹಾಲು ಉತ್ಪಾದಕರ ಮನೆಬಾಗಿಲಿಗೆ ಕೆ.ಎಂ.ಎಫ್ ನೀಡುವ ಸವಲತ್ತುಗಳನ್ನು ಸಂಘಗಳ ಮೂಲಕ ಕೊಂಡೊಯ್ಯುವ ಕೆಲಸಕ್ಕೆ ನಮ್ಮ ತಂಡ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಜಿಲ್ಲಾ ಹಾಲೂ ಒಕ್ಕೂಟದ ಅಧ್ಯಕ್ಷರಾಗಿ ಎರಡನೇಬಾರಿಗೆ ಆಯ್ಕೆಯಾದ ತಮಗೆ ಅಭಿಮಾನಿಗಳು ಹಾಗೂ ಹಿತೈಷಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮೊದಲ ಬಾರಿ ಅಧ್ಯಕ್ಷನಾಗಿದ್ದಾಗ ಕೇವಲ 470 ಸಂಘಗಳು ಇದ್ದವು ಇದನ್ನು ಅರಿತು ಸಂಘಗಳನ್ನು ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಹೆಚ್ಚು ಸಂಘಗಳನ್ನು ಸ್ಥಾಪಿಸಲು ಗುರಿಯನ್ನು ಹೊಂದಲಾಯಿತು ಎಂದರು.
ಈಗ ಜಿಲ್ಲೆಯಲ್ಲಿ 856 ಸಂಘಗಳಾಗಿವೆ, ಈ ಎಲ್ಲಾ ಸಂಘಗಳು ಲಾಭದಲ್ಲಿ ನಡೆಯುತ್ತಿದ್ದು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಘಗಳಿಗೆ ಒತ್ತು ನೀಡುತ್ತೇನೆ ಎಂದ ಅವರು ಜಿಲ್ಲೆಯಲ್ಲಿ ಕೇವಲ 3ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 5ಲಕ್ಷ ಲೀಟರ್ ಹಾಲನ್ನು ಹೊಂದಲು ತೀಮರ್ಾನಿಸಿಲಾಗಿದೆ, ಇದಕ್ಕಾಗಿ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದರು. ಹಾಲಿನ ಉತ್ಪಾದನೆಯಿಂದ ಉತ್ಪಾದಕರಿಗೆ ಆಗುತ್ತಿರುವ ಲಾಭ ನಷ್ಟಗಳ ಅರಿವು ಜನರಿಗೆ ತಿಳಿದಿದ್ದು ಹಾಲಿನ ಬೆಲೆಯಲ್ಲಿ ಆಗುವ ಏರುಪೇರುಗಳಿಗೆ ಜನರು ಸಹಕರಿಸಬೇಕು ಎಂದರು.
ರಾಜ್ಯದಲ್ಲೇ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಪ್ರಥಮವಾಗಿ ನಂದಿನಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿದ್ದು ಪ್ರತಿಯೊಬ್ಬರು ಸಹಕರಿಸಿ ಬೆಂಬಲಿಸಿದರೆ ಹೆಚ್ಚಿನ ಸಂಘದ ಅಸ್ಥಿತ್ವಕ್ಕೆ ಪ್ರಾಮುಖ್ಯತೆ ನೀಡುತ್ತೇನೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಿ.ಅಶೋಕ್ ಮಾತನಾಡಿ ಹಾಲು ಒಕ್ಕೂಟವು 300ಕೋಟಿ ಲಾಭದಿಂದ ರೈತರಿಗೆ ಹಲವಾರು ಯೋಜನೆ ತಂದಿದ್ದು ಆಥರ್ಿಕವಾಗಿ ಸಹಕಾರಿಯಾಗಿದೆ ಮತ್ತು ಹಾಲಿನ ಹೆಚ್ಚಿನ ಉತ್ಪಾದನೆಗೆ ರೈತರಿಗೆ ಪಶುವೈದ್ಯ ಸೇವೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಂ.ಹಾ.ಉ, ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ತು.ಹಾ.ಒ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಹಾ.ಒ. ಉಪ ವ್ಯವಸ್ಥಾಪಕ ನಿಜಲಿಂಗಪ್ಪ, ನಿದರ್ೇಶಕ ತ್ರಯಂಬಕ, ಸುಭ್ರಾಯ್ಭಟ್, ಮಹೇಂದ್ರ, ಜಿ.ರಾಜು, ಸೋಮರಾಜ್, ಬಸಪ್ಪ, ಯರಗುಂಟಪ್ಪ, ಬುದ್ದಿಪ್ರಸಾದ್ ಉಪಸ್ಥಿತರಿದ್ದರು.
ಅಪಘಾತ ಒಬ್ಬನ ಸಾವು
ಚಿಕ್ಕನಾಯಕನಹಳ್ಳಿ,ನ.29: ರಸ್ತೆ ಅಪಘಾತದಲ್ಲಿ ಜಾಣೇಹಾರ್ನ ತಿಮ್ಮಯ್ಯ(55) ಎಂಬಾತ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಲಾರಿಯ ಚಕ್ರಕ್ಕೆ ಸಿಕ್ಕಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ತಿಮ್ಮಯ್ಯ ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳದಿದ್ದಾನೆ. ಪ್ರಕರಣವನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿದ್ದಾರೆ.





Sunday, November 28, 2010



ವಿಜ್ಞಾನ ಸಮಾವೇಶದಲ್ಲಿ ಚಿ.ನಾ.ಹಳ್ಳಿಗೆ ಸಿಂಹಪಾಲ
ಚಿಕ್ಕನಾಯಕನಹಳ್ಳಿ,ನ.28: 18ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ನಡೆದ ಭೂ ಸಂಪನ್ಮೂಲ ಸಮೃದ್ದಿಗಾಗಿ ಬಳಸಿ ಭವಿಷ್ಯಕ್ಕಾಗಿ ಉಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಿನ 6ತಂಡಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ ಎಂದು ತಾ.ವಿ.ಕೇಂದ್ರ ಕಾರ್ಯದಶರ್ಿ ಎಂ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಗ್ರಾಮೀಣ ಕಿರಿಯರ ವಿಭಾಗದಲ್ಲಿ ಚಿಕ್ಕಬಿದರೆ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕುಮಾರಿ ಆಶಾ ತಂಡ, ದಿವ್ಯಪ್ರಭ ಶಾಲೆಯ ದೀಪರಾಜಕುಮಾರ್ ತಂಡ, ನವೋದಯ ಶಾಲೆಯ ಸಿ.ಎಮ್.ಜಯಂತ್ ತಂಡ, ಅಂಭೇಡ್ಕರ್ ಪ್ರೌಡಶಾಲೆಯ ಹೆಚ್.ಎನ್.ಕಾವ್ಯ ತಂಡ, ರೋಟರಿ ಪ್ರೌಡಶಾಲೆಯ ಕುಮಾರಿ ಭವ್ಯ ತಂಡ, ಜೆ.ಸಿ.ಪುರ ಮೊರಾಜರ್ಿ ಶಾಲೆಯ ರಂಗಸ್ವಾಮಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರನ್ನೆಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್. ಜಿಲ್ಲಾ ವಿಜ್ಞಾನ ಕೇಂದ್ರ ಕಾರ್ಯದಶರ್ಿ ರಾಮಕೃಷ್ಣ, ತಾಲೂಕು ವಿಜ್ಞಾನ ಕೇಂದ್ರ ಅಧಕ್ಷ್ಷೆ ಎನ್.ಇಂದಿರಮ್ಮ, ಕಾರ್ಯದಶರ್ಿ ಎಂ.ಎಸ್.ಈಶ್ವರಪ್ಪ ಅಭಿನಂದಿಸಿದ್ದಾರೆ.


ಮಹಿಳೆಯರಿಗೆ ವಿಪುಲ ಅವಕಾಶವಿದೆ ಬಳಸಿಕೊಳ್ಳಲು ಮುಂದೆ ಬನ್ನಿ
ಚಿಕ್ಕನಾಯಕನಹಳ್ಳಿನ.28: ಮಹಿಳೆಯರು ವಿದ್ಯಾವಂತರಾಗಿ ಎಲ್ಲಾ ರಂಗಗಳಲ್ಲಿಯೂ ಪ್ರವೇಶಿಸಿ ಜನರ ಕಷ್ಟ ಸುಖಗಳಿಗೆ ಬಾಗಿಯಾಗಿ ಆಥರ್ಿಕವಾಗಿ ಸಬಲರಾಗಬೇಕು ಎಂದು ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಭಸವಯ್ಯ ಕರೆ ನೀಡಿದರು.
ಪಟ್ಟಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳೆಯರು ಸಂಘಟಿತರಾಗಿ ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಇರುವಿಕೆಯನ್ನು ಸಾದರ ಪಡಿಸಿ ಪುರಷರಿಗೆ ಸರಿಸಮನಾಗಿ ಬದುಕುವಂತೆ ತಿಳಿಸಿದ ಅವರ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ರಚನೆಯಾಗಿ ಇಂದು ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಸಮಾರಂಭಗಳಿಗೆ ಹಾಜರಾಗಿ ಸಮಾಜದ ಹಲವು ವಿಷಯಗಳ ಬಗ್ಗೆ ಚಚರ್ಿಸಿ ಅನ್ಯೂನ್ಯತೆಯಿಂದ ಬಾಳಿ ಸಬಲರಾಗುವಂತೆ ಮತ್ತು ಮಹಿಳೆಯರು ಸ್ವಸಹಾಯ ಸಂಘಗಳಿಗೆ ನೆರವಾಗುವಂತೆ ಬ್ಯಾಂಕಿನ ವ್ಯವಹಾರವನ್ನು ತಿಳಿದುಕೊಂಡು ಆಥರ್ಿಕವಾಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ಮಹಿಳೆಯರು ತಮ್ಮ ಹಕ್ಕು ಮತ್ತು ರಕ್ಷಣೆಗಾಗಿ ಸಂಘಟಿತರಾಗಲು ಹೋರಾಟ ಕೆಲವೊಮ್ಮೆ ಅನಿವಾರ್ಯವಾಗಬಹುದು ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯರು ಸಂಘಟಿತರಾಗಿ ಕೀಳರಿಮೆ ತೊರೆದು ಸಮಾಜದಲ್ಲಿ ಆಥರ್ಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣ ಹೊಂದಬೇಕಾಗುತ್ತದೆ ಎಂದ ಅವರು ಮಹಿಳೆ ಮತ್ತು ಪುರುಷರ ಅನುಪಾತದಲಿ ವ್ಯತ್ಯಾಸದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದು ಮೂಢನಂಬಿಕೆ, ಸ್ತ್ರೀ ಬ್ರೂಣ ಹತ್ಯೆ, ಬಾಲ್ಯ ವಿವಾಹ, ಹೆಣ್ಣುಮಕ್ಕಳ ಶಾಲೆ ಬಿಡುವಿಕೆ, ಇಂತಹ ಸಾಮಾಜಿಕ ಪಿಡುಗು ನಿವಾರಣೆಗಾಗಿ ಮಹಿಳೆಯರು ಹೋರಾಟಕ್ಕೆ ಮುಂದಾಗಬೇಕು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರ್ವತಯ್ಯ ಮಾತನಾಡಿ ತೊಟ್ಟಿಲು ತೂಗುವ ಕೈಗಳು ದೇಶವನ್ನು ಆಳಿದರೆ ಮಾಜಿ ಪ್ರಧಾನಿ ಇಂಧಿರಾಗಾಂಧಿಯಂತೆ ದಿಟ್ಟ ಹೆಜ್ಜೆಗಳನ್ನು ಇಟ್ಟು ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಾರೆ, ಮತ್ತು ಇಂಧಿರಗಾಂಧಿಯವರ 20 ಅಂಶಗಳ ಕಾರ್ಯಕ್ರಮದಲ್ಲಿ ಸಮಗ್ರ ಶಿಶು ಅಭಿವೃದ್ದಿ ಯೋಜನೆಯು ಒಂದಾಗಿದ್ದು ಮಹಿಳೆಯರು ಅಧಿಕಾರ ಹಿಡಿದರೆ ಸ್ವಾರ್ಥಕ್ಕಾಗಿ ಶ್ರಮಿಸದೆ ಇಂದಿರಾಗಾಂಧಿಯವರಂತೆ ದೇಶದ ಒಳಿತಿಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ತುಳಸಿ ಪ್ರಾಥರ್ಿಸಿದರೆ ನಾಗರತ್ನ ಸ್ವಾಗತಿಸಿ, ಮಹದೇವಮ್ಮ ವಂದಿಸಿದರು.
29ರಂದು ಗೋಡೆಕೆರೆ ಲಕ್ಷ ದಿಪೋತ್ಸವ
ಚಿಕ್ಕನಾಯಕನಹಳ್ಳಿ,ನ.28: ಗುರುಸಿದ್ದರಾಮೇಶ್ವರ ಸ್ವಾಮಿಯವರ ಕಾತರ್ಿಕ ಮಾಸದ ಲಕ್ಷದೀಪೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನು ಇದೇ 29ರ ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಗೋಡೆಕೆರಯಲ್ಲಿ ಹಮ್ಮಿಕೊಂಡಿದ್ದು ಮೃಂತ್ಯುಂಜಯ ದೇಶೀಕೇಂದ್ರ ಸ್ವಾಮಿ ಮತ್ತು ಸಿದ್ದರಾಮದೇಶೀಕೇಂದ್ರ ಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಕುಶಾಲ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಬಿ.ಜೆ.ಪಿ ಮುಖಂಡ ಅರುಣ್ಸೋಮಣ್ಣ, ಮಾಜಿ ಗ್ರಾ.ಪಂ.ಅಧ್ಯಕ್ಷ ಪಂಚಾಕ್ಷರಿ, ಟೂಡಾ ಆಯುಕ್ತ ಎನ್.ಆರ್.ಆದರ್ಶಕುಮಾರ್, ಜಿ. ಪಂ. ಯೋಜನಾಧಿಕಾರಿ ಜಿ.ಎಂ.ಸಿದ್ದರಾಮಣ್ಣ ಜಿ.ಪಂ.ಸದಸ್ಯೆ ಸುಶೀಲ ಸುರೇಂದ್ರಯ್ಯ ಉಪಸ್ಥಿತರಿರುವರು.

ದೇಶದ ಅಭಿವೃದ್ದಿಗೆ ಪ್ರತಿಯೊಬ್ಬರೂ ಸೇವೆ ಸಲ್ಲಿಸಬೇಕು: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ನ.26: ಸಂಸ್ಥೆಗಳ ಮುಖ್ಯವಾದ ಕೆಲಸ ಸೇವೆ, ಸಂಸ್ಥೆಗಳ ಸೇವೆಯಿಂದ ದೇಶದ ಹೆಮ್ಮೆ ಮತ್ತು ಕೀತರ್ಿಯನ್ನು ಬೆಳಗಿಸಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಪಟ್ಟಣದ ಬಿ.ಸಿ.ಎಂ ಹಾಸ್ಟಲ್ನಲ್ಲಿ ಬಿ.ಸಿ.ಎಂ ಮತ್ತು ಇನ್ನರ್ವೀಲ್ ಕ್ಲಬ್ವತಿಯಿಂದ ನಡೆದ ಉಚಿತ ಬೆಡ್ಶೀಟ್ ಮತ್ತು ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲವರಿಗೆ ಹುಟ್ಟಿನಿಂದಲೇ ಸೇವೆಯ ಗುಣ ಆವರಿಸಿರುತ್ತದೆ ಅಂತವರು ಸೇವೆಯ ಮಹತ್ವವನ್ನು ಇತರರಿಗೆ ತಿಳಿಸಿ ಅವರನ್ನು ಸೇವೆಯ ಕಡೆ ವಾಲುವಂತೆ ನೋಡಿಕೊಳ್ಳಬೇಕು ಮತ್ತು ಶ್ರದ್ದೆಯಿಂದ ಸೇವೆ ಸಲ್ಲಿಸಿ ಉತ್ತಮ ಪ್ರಜೆಗಳಾಗಲು ಕರೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸೇವೆ ಸಲ್ಲಿಸುವ ರೀತಿ ಮಹತ್ವದ್ದು ಆದರೆ ಸೇವೆಗೆ ತಕ್ಕಂತೆ ಪ್ರತಿಫಲ ದೊರಕಿದಾಗ ಸೇವೆ ಸಲ್ಲಿಸುವವರು ಮುಂದೆ ಬರುತ್ತಾರೆ, ಅದೇ ರೀತಿ ಹಾಸ್ಟಲ್ಗೆ ಇನ್ನರ್ವೀಲ್ ಕ್ಲಬ್ ವತಿಯಿಂದ ನೀಡಿರುವ ಕೊಡುಗೆ ಸಾರ್ಥಕವಾಗಲು ವಿದ್ಯಾಥರ್ಿನಿಯರೆಲ್ಲ ಉತ್ತಮ ಅಂಕಗಳನ್ನು ತೆಗೆದು ಒಳ್ಳೆಯ ಕೆಲಸಗಳನ್ನು ಪಡೆದು ಈ ಸಮಾಜ ಸೇವೆ ಸಲ್ಲಿಸಬೇಕು ಎಂದರು.
ಜಿಲ್ಲಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಸಮುದಾಯದ ಸಹಭಾಗಿತ್ವವಿದ್ದರೆ ಪ್ರತಿಯೊಬ್ಬರಿಗೂ ಸಹಾಯವಾಗಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಅದಕ್ಕಾಗಿ ಶ್ರದ್ದೆಯಿಂದ ಉತ್ತಮ ಜ್ಞಾನ ಪಡೆದು ಶೈಕ್ಷಣಿಕವಾಗಿ ಹಾಗೂ ಸಮಾಜಿವಕಾಗಿ ಸಮಾಜವನ್ನು ಅಭಿವೃದ್ದಿಪಡಿಸಬೇಕು ಎಂದರು.
ಸಮಾರಂಭದಲ್ಲಿ ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್, ಕಾರ್ಯದಶರ್ಿ ತೇಜಾವತಿ ನರೇಂದ್ರ, ತಾ.ಪಂ.ಸದಸ್ಯ ಸಿ.ಡಿ.ರುದ್ರೇಶ್, ವನಮೂಲ ಭೂಮ್ಕರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಭಾನಾಮತಿ ನಿರೂಪಿಸಿದರೆ ದೇವರಾಜಪ್ಪ ವಂದಿಸಿದರು.





Friday, November 26, 2010



ದುರ್ಬಲ ಹಾಗೂ ತುಳಿತಕ್ಕೊಳಗಾದವರು ಕಾನೂನಿನ ನೆರವು ಪಡೆದು ಅನ್ಯಾಯದ ವಿರುದ್ದ ಧ್ವನಿ ಎತ್ತುವಂತಾಗಬೇಕು: ಡಿ.ಜೆ.
ಚಿಕ್ಕನಾಯಕನಹಳ್ಳಿ.ನ.26: ಕಾನೂನಿನ ಅಜ್ಞಾನ ಕ್ಷಮಾರ್ಹವಾದುದಲ್ಲ, ಇದರ ವಿರುದ್ದ ನಾವು ಸಮರೋಪಾದಿಯಲ್ಲ್ಲಿ ಹೋರಾಟ ಕೈಗೊಳ್ಳಬೇಕು ಅದಕ್ಕಾಗ್ತಿ ಅನಕ್ಷರಸ್ಥರನ್ನು ಅಂಧಕಾರದಿಂದ ಬೆಳಕಿನಡೆಗೆ ಸಾಗಿಸುವ ಒಂದು ಸಾಧನವೇ ಕಾನೂನು ದಿನಾಚರಣೆ ಎಂದು ಜಿಲ್ಲಾ ನ್ಯಾಯಾಧಿಶರಾದ ಜೆ.ವಿ.ಅಂಗಡಿ ಹಿರೇಮಠ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿರುವ ಬಿ.ಆರ್.ಸಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾನೂನಿನ ಅರಿವಿಲ್ಲದವರಿಗೆ ಅದರ ಅರಿವು ಅವಶ್ಯಕವಾಗಿದ್ದು ಸಮಾಜದ ದರ್ಬಲ ವರ್ಗದವರಿಗೆ ನ್ಯಾಯದ ಬಾಗಿಲು ಮುಕ್ತವಾಗಿ ತೆರೆಯಲು ಮತ್ತು ಭಾರತದ ಎಲ್ಲಾ ನಾಗರೀಕರಿಗೂ ನ್ಯಾಯ, ಸ್ವಾತಂತ್ರ್ಯದ ಸಮಾನತೆಯನ್ನು ನೀಡಲು ಕಾನೂನಿನ ಅರಿವು ಮುಖ್ಯವಾಗಿದ್ದು ಯಾವುದೇ ಶುಲ್ಕವಿಲ್ಲದೆ ಮುಫತ್ತಾಗಿ ನ್ಯಾಯ ಪಡೆಯುವಂತಾಗಬೇಕು ಎಂಬ ದೃಷ್ಠಿಯಿಂದ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾನೂನು ಸಾಕ್ಷರತೆ ಸಾಧಿಸುವುದು ಸುಲಭದ ಮಾತಾಗಿರದೆ ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ಈ ಮೂರು ಅಂಗಗಳು ಪೂರಕವಾಗಿ ಕಾರ್ಯ ನಿರ್ವಹಿಸುವುದು ಅವಶ್ಯಕವಾದುದು ಎಂದರು. ಜನರಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ಅವರ ಹಕ್ಕುಗಳನ್ನು ತಿಳಿಸಬೇಕು, ಕಾನೂನಿನ ಮೂಲಕ ತಮಗೆ ಬೇಕಾದ ಸೌಲಭ್ಯವನ್ನು ಪಡೆಯುಂತಹ ಶಕ್ತಿಯನ್ನೊದಗಿಸುವುದು ಈ ಕಾರ್ಯಕ್ರಮದ ಪ್ರಥಮ ಹೆಜ್ಜೆ, ನಮ್ಮ ಸಮಾಜವು ಹತ್ತು ಹಲವು ವರ್ಗಗಳನ್ನೊಳಗೊಂಡಿದ್ದು ಅವರ ಹಕ್ಕುಗಳು ದಿನನಿತ್ಯ ಚ್ಯುತಿಗೊಳ್ಳುತ್ತಿದ್ದರೂ ಅನಕ್ಷರಸ್ಥರು ಮತ್ತು ದುರ್ಬಲ ವರ್ಗದವರು ಅದರ ವಿರುದ್ದ ದನಿಯೆತ್ತುವುದಿಲ್ಲ ಎಂದು ವಿಷಾದಿಸಿದ ಅವರು, ಸಮಾಜದ ದುರ್ಬಲ ಹಾಗೂ ತುಳಿತಕ್ಕೊಳಗಾಗಿರರುವ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ವಿಶಾಲವಾದ ಧ್ಯೇಯವನ್ನೊಳಗೊಂಡಿದ್ದು ಆ ಮೂಲಕ ಸಮಾಜದಲ್ಲಿ ಅವರ ಸ್ಥಾನ, ಹಕ್ಕುಗಳನ್ನು ಪಡೆದು ಸಮಜದಲ್ಲಿ ಕಾನೂನಿನ ಅರಿವು ಮೂಡಿಸಿ ನ್ಯಾಯ ಒದಗಿಸಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶರುಗಳಾದ ಜಿ.ಎಂ.ಶೀನಪ್ಪ, ಎನ್.ಶೀಲಾ, ಎ.ಜಿ.ಶಿಲ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ವಕೀಲರಾದ ಹೆಚ್.ಎಸ್.ಜ್ಞಾನಮೂತರ್ಿ, ಮಹಲಿಂಗಯ್ಯ, ಜಿ.ಎಸ್.ಚನ್ನಬಸಪ್ಪ, ಸಿ,ಕೆ.ಸೀತಾರಾಮಯ್ಯ, ಸಿ.ಪಿ.ಐ ರವಿಪ್ರಸಾದ್, ಸಹಾಯಕ ಸಕರ್ಾರಿ ಅಭಿಯೋಜಕ ಆರ್.ಟಿ.ಆಶಾ, ಎ.ಪಿ.ಡಿ.ಪಿ.ಒ ಪರಮೇಶ್ವರಪ್ಪ, ಸುಮಂಗಲ ಹಿರೇಮಠ್ ಉಪಸ್ಥಿತರಿದ್ದರು.

Thursday, November 25, 2010




ಅಕ್ಕಮಹಾದೇವಿ ಸಂಘದ ಭವನದ ನಿಮರ್ಾಣ ಸಹಾಯರ್ಥ 'ಮಕ್ಮಲ್ ಟೋಪಿ' ನಾಟಕ
ಚಿಕ್ಕನಾಯಕನಹಳ್ಳಿ,ನ.25: ಅಕ್ಕಮಹಾದೇವಿ ಮಹಿಳಾ ಸಮಾಜದ ಸಮುದಾಯ ಭವನ ಕಟ್ಟಡದ ಸಹಾಯಾರ್ಥವಾಗಿ ಮಕ್ಮಲ್ ಟೋಪಿ ಎಂಬ ಹಾಸ್ಯಬರಿತ ನಾಟಕ ಪ್ರದರ್ಶನವನ್ನು ಡಿಸೆಂಬರ್ 5ರ ಭಾನುವಾರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದು ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ತಿಳಿಸಿದರು.
ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಸ್ಯರತ್ನಕರ ಡಾ.ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ ಮಿತ್ರ ಮಂಡಳಿಯವರ ಸಹಾಯದೊಂದಿಗೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಾಟಕ ಹಮ್ಮಿಕೊಂಡಿದ್ದು ಸಂಘ ಸ್ಥಾಪನೆಯಾಗಿ 10ವರ್ಷವಾಗಿದ್ದು ಅದರ ನೆನಪಿಗಾಗಿ ಮತ್ತು ಸಮುದಾಯ ಭವನ ಕಟ್ಟಲು ಕಟ್ಟಡದ ಸಹಾಯಾರ್ಥವಾಗಿ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಆಧರಿಸಿ ಈ ನಾಟಕ ಏರ್ಪಡಿಸಿದ್ದು ನಾಟಕದ ಪ್ರವೇಶ ದರ 100ರೂ ಎಂದು ತಿಳಿಸಿದ್ದಾರೆ.
ಗೋಷ್ಟಿಯಲ್ಲಿ ಸಂಘದ ಕಾರ್ಯದಶರ್ಿ ಭಾರತಿ ನಟರಾಜು, ವೀಣಾಶಂಕರ್. ಪುಷ್ಪ, ಯಶೋಧ, ಅಹಲ್ಯ ಉಪಸ್ಥಿತರಿದ್ದರು.

ನೀರಾವರಿಗೆ ಹೋರಾಟಕ್ಕೆ ತಡ ಮಾಡಿದರೆ, ಈ ಪ್ರದೇಶ ಮರುಭೂಮಿಯಾಗುತ್ತದೆ: ಪರಮಶಿವಯ್ಯ
ಚಿಕ್ಕನಾಯಕನಹಳ್ಳಿ,ನ.25: ಪ್ರತಿ ಜೀವಕ್ಕೂ ಜೀವಿಸಲು ಬೇಕಾದ ನೀರಾವರಿಗೆ ಸಕರ್ಾರ ಅಷ್ಟಾಗಿ ಗಮನ ನೀಡುತ್ತಿಲ್ಲ, ನನ್ನ ಉಸಿರುರುವವರಗೆ ನೀರಾವರಿಗಾಗಿ ನಿರಂತರವಾಗಿ ಶ್ರಮಿಸುತ್ತೇನೆ ಎಂದು ನೀರಾವರಿ ತಜ್ಞ ಪರಮಶಿವಯ್ಯ ಹೇಳಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ನಡೆದ ಅಹೆಡ್ ಸಂಸ್ಥೆಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು 1ಕೋಟಿ ಹೆಕ್ಟೇರ್ಗೆ ನೀರಿನ ಅವಶ್ಯಕತೆ ಇದ್ದು, ಈಗ ಕೇವಲ 25ಲಕ್ಷ ಎಕ್ಟೇರ್ಗೆ ಮಾತ್ರ ನೀರಾವರಿ ಬಿಡುಗಡೆಯಾಗಿದೆ ಇದರಿಂದ ರೈತರಿಗೆ ತುಂಬ ತೊಂದರೆಯಾಗಿ ಮುಂದೊಂದು ದಿನ ಈ ಪ್ರದೇಶ ಮರುಭೂಮಿಯಾಗುತ್ತದೆ ಎಂದ ಅವರು, ಜನಸಾಮಾನ್ಯರು ಕೇವಲ ಸಭೆ, ಸಮಾರಂಬಗಳಿಗೆ ಮಾತ್ರ ಬಂದು ಭಾಷಣಗಳಿಗೆ ಚಪ್ಪಾಳೆ ತಟ್ಟುತ್ತಾ ತಮ್ಮ ಕೆಲಸವನ್ನು ಮರೆತಿದ್ದಾರೆ ಇದರಿಂದ ಅವರ ಜೀವನೋಪಾಯಕ್ಕೆ ತೊಂದರೆ ಉಂಟಾಗಿದ್ದು, ಜೀವಿಸಲು ಬೇಕಾಗಿರುವ ನೀರಿಗಾಗಿ ಹೋರಾಟದ ಅಗತ್ಯವಾಗಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಪಿ.ರವಿಪ್ರಸಾದ್ ಮಾತನಾಡಿ ಪ್ರತಿಯೊಂದು ಸಂಘ ಸಂಸ್ಥೆಗಳು ತಮ್ಮ ಸೇವೆಯಲ್ಲಿ ಕೆಲಸ ನಿರ್ವಹಿಸುವಾಗ ಪಾರದರ್ಶಕತೆ ಮುಖ್ಯವಾಗಿದ್ದು ಸಂಘ ಸಂಸ್ಥೆಗಳ ಉದ್ದೇಶ ಉತ್ತಮ ಕಾರ್ಯ ನಿರ್ವಹಿಸಿ ರಾಷ್ಟ್ರದ ಸೇವೆಗಾಗಿ ಯುವಕರು ಮುಂದೆ ಬರಬೇಕು ಎಂದರು.
ಅಹೆಡ್ ಸಂಸ್ಥೆಯ ಅಧ್ಯಕ್ಷ ಸಿದ್ದರಾಮೇಗೌಡ ಮಾತನಾಡಿ ಹಳ್ಳಿಗಾಡಿನ ಜನರಿಗೆ ಉತ್ತಮ ಸವಲತ್ತು ನೀಡುವ ದೂರದೃಷ್ಟಿ ಉದ್ದೇಶ ನಮ್ಮ ಸಂಸ್ಥೆ ಹೊಂದಿದೆ, ನಮ್ಮ ಸಂಸ್ಥೆಯ ಉತ್ತಮ ಕೆಲಸಕ್ಕಾಗಿ ಸಹಕರಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಎಸ್.ಬಿ.ಎಂ. ಶಾಖೆ ವ್ಯವಸ್ಥಾಪಕ ಶಂಕರ್, ಪರಮೇಶ್ವರಪ್ಪ, ಪದ್ಮ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರಭುಸ್ವಾಮಿ ಸ್ವಾಗತಿಸಿ ವಂದಿಸಿದರು.





ಚಿಕ್ಕನಾಯಕನಹಳ್ಳಿ,ನ.25: ಅಕ್ಕಮಹಾದೇವಿ ಮಹಿಳಾ ಸಮಾಜದ ವತಿಯಿಂದ ಮಕ್ಮಲ್ ಟೋಪಿ ಎಂಬ ಹಾಸ್ಯಬರಿತ ನಾಟಕ ಪ್ರದರ್ಶನವನ್ನು ಡಿಸೆಂಬರ್ 5ರ ಭಾನುವಾರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದು ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ತಿಳಿಸಿದರು.
ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾಸ್ಯರತ್ನಕರ ಡಾ.ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ ಮಿತ್ರ ಮಂಡಳಿಯಿಂವರ ಸಹಾಯದೊಂದಿಗೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಾಟಕ ಹಮ್ಮಿಕೊಂಡಿದ್ದು ಸಂಘ ಸ್ಥಾಪನೆಯಾಗಿ 10ವರ್ಷವಾಗಿದ್ದು ಅದರ ನೆನಪಿಗಾಗಿ ಮತ್ತು ಸಮುದಾಯ ಭವನ ಕಟ್ಟಲು ಕಟ್ಟಡದ ಸಹಾಯಾರ್ಥವಾಗಿ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನಸಾಮಾನ್ಯರ ಸ್ಥಿತಿಗತಿಗಳನ್ನು ಆಧರಿಸಿ ಈ ನಾಟಕ ಏರ್ಪಡಿಸಿದ್ದು ನಾಟಕದ ಪ್ರವೇಶದರ 100ರೂ ಎಂದು ತಿಳಿಸಿದ್ದಾರೆ.
ಗೋಷ್ಟಿಯಲ್ಲಿ ಸಂಘದ ಕಾರ್ಯದಶರ್ಿ ಭಾರತಿ ನಟರಾಜು, ವೀಣಾಶಂಕರ್. ಪುಷ್ಪ, ಯಶೋಧ, ಅಹಲ್ಯ ಉಪಸ್ಥಿತರಿದ್ದರು.

ರಾಗಿ ರಾಮಾಯಣದ ಮೂಲಕ ಸಾಮಾಜಿಕ ನ್ಯಾಯವನ್ನು ಕಟ್ಟಿಕೊಟ್ಟವರು ಕನಕ ದಾಸರು: ಪ್ರೊ.ಎಸ್.ಜಿ.ಎಸ್.
ಚಿಕ್ಕನಾಯಕನಹಳ್ಳಿ,ನ.25: ಭೋಗಕ್ಕೆ ಬೆನ್ನು ತಿರುಗಿಸಿ ಬಡತನದ ಕಡೆ ಮುಖ ಮಾಡಿದ ಕನಕ ದಾಸರ ಪ್ರಜ್ಞೆಯನ್ನು ಅರಿಯುವ ಮೂಲಕ ಜಯಂತೋತ್ಸವವನ್ನು ಆಚರಿಸಬೇಕೆಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ ಹಾಗೂ ಕನಕ ಯುವಕ ಸಂಘ ಸಂಯುಕ್ತವಾಗಿ ಆಚರಿಸಿದ 523ನೇ ಕನಕ ಜಯಂತೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶ್ರೀಮಂತಿಕೆಯ ಸಂಭ್ರಮಾಚರಣೆಯನ್ನು ಬದಿಗಿಟ್ಟು ಸಂಕಟದಲ್ಲಿರುವ ಜನರಿಗೆ ಬೆಂಬಲವಾಗಿ ನಿಂತ ಕನಕದಾಸರು, ರಾಮಧಾನ್ಯ ಚರಿತೆಯ ಮೂಲಕ ಶ್ರೀಮಂತ ಹಾಗೂ ಬಡವರ ಮಧ್ಯೆದಲ್ಲಿನ ಗಟ್ಟಿತನವನ್ನು ಪ್ರದಶರ್ಿಸಿದ್ದಾರೆ. ಆ ಕಾರಣಕ್ಕಾಗಿಯೇ ರಾಮಧಾನ್ಯ ಚರಿತೆಯನ್ನು ರಾಗಿ ರಾಮಯಣ ಎನ್ನುತ್ತಾರೆ ಎಂದರು.
ಜನರಲ್ಲಿ ಸಾಮಾಜಿಕ ನ್ಯಾಯವನ್ನು ತಮ್ಮ ಸಾಹಿತ್ಯದ ಮೂಲಕ ಜಾಗೃತಿಯನ್ನು ಉಂಟು ಮಾಡಿದ ಹೋರಾಟಗಾರ, ಅವರ ಆಶಯಗಳನ್ನು ಈಡೇರಿಸುವಲ್ಲಿ ಹಿಂದುಳಿದವರೆಲ್ಲಾ ಎಲ್ಲರೂ ಒಂದಾಗಬೇಕೆಂದರು. ಇಂದಿಗೂ ಸಾಮಾಜಿಕ ನ್ಯಾಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದು, ಹಾವನೂರು ವರದಿಯಲ್ಲಿ ಗುರುತಿಸದೆ ನೂರಾರು ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತಿವೆ. 1931ರಲ್ಲಿ ಜಾತಿಗಣತಿ ನಡೆದಿದ್ದು ಬಿಟ್ಟರೆ ಇಲ್ಲಿಯವರೆಗೂ ಜಾತಿ ಗಣತಿ ನಡೆದಿಲ್ಲವೆಂದರು.
ಇಂದಿನ ವ್ಯವಸ್ಥೆ ಒಳಗೆ ಪ್ರಜಾಪ್ರಭುತ್ವ ನೈತಿಕ ಅಧಃಪತನವಾಗುತ್ತಿದ್ದು, ವೈಯಕ್ತಿಕ ಕಾರಣಗಳಿಗಾಗಿ ಜಾತಿ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಹಿಂದುಳಿದ ಜಾತಿಗಳನ್ನು ಒಟ್ಟುಗೂಡಿಸಿಕೊಂಡು ಕರೆದುಕೊಂಡು ಹೋಗುವ ಜವಬ್ದಾರಿ ಹಿರಿಯಣ್ಣನಂತಿರುವ ಕುರುಬ ಜನಾಂಗ ತನ್ನ ಹೊಣೆಗಾರಿಕೆಯನ್ನು ಅರಿಯಬೇಕು, ಸಣ್ಣಪುಟ್ಟ ಜಾತಿಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡು ಅವರಿಗೆ ಸಾಮಾಜಿಕ ನ್ಯಾಯವನ್ನು ಒದಿಗಿಸಕೊಡಬೇಕೆಂದರು.
ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಜಾತಿ ವಿನಾಶಕ್ಕೆ ನಾಂದಿ ಹಾಡಬೇಕಾಗಿರುವ ಈ ಸಂದರ್ಭದಲ್ಲಿ ಇದರ ಹೊಣೆಗಾರಿಕೆಯನ್ನು ವಹಿಸಕೊಳ್ಳುವವರು ಯಾರೆಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಪ್ರಸ್ಥಾವಿಕವಾಗಿ ಮಾತನಾಡಿ ಕನಕದಾಸರು ತಮ್ಮ ಕೀರ್ಥನೆಗಳಿಂದ ಅಷ್ಟೇ ಅಲ್ಲ ಒಡಪುಗಳ ಮೂಲಕ ಅಂದಿನ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಟ್ಟ ಶ್ರೇಷ್ಠ ಸಂತ ಅವರನ್ನು ಸಾರ್ವಜನಿಕವಾಗಿ ಸ್ಮರಿಸಿಕೊಳ್ಳುವಂತಹ ಕಾರ್ಯವನ್ನು ಸಕರ್ಾರ ಮಾಡಿದ್ದು ಕನಕ ದಾಸರ ಆಶಯಗಳಿಗೆ ಕೊಟ್ಟ ಗೌರವ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಆಡಳಿತದ ವತಿಯಿಂದ ಸಾಹಿತಿ ಎಂ.ವಿ.ನಾಗರಾಜ್ ರಾವ್, ಶಿಕ್ಷಕ ಹಾಗೂ ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ, ಶಿಲ್ಪಿ ವಿಶ್ವನಾಥ್, ದಲಿತ ಮಹಿಳೆ ರುಕ್ಮಿಣಮ್ಮನವರನ್ನು ಸನ್ಮಾನಿಸಲಾಯಿತು, ಕನಕ ಯುವಕ ಸಂಘ ಗವಿರಂಗಯ್ಯ, ರೇವಣ್ಣ ಒಡೆಯರ್, ಗವಿಸಿದ್ದಯ್ಯ, ರತ್ನಕಂಬಳಿ ನೇಕಾರ ಬಸವರಾಜು ರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿದರು.
ಸಮಾರಂಭದಲ್ಲಿ ಕಮಲ ಬಸವರಾಜು ಪ್ರಾಥರ್ಿಸಿದರೆ, ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರು, ಕೆಂಬಾಳ್ ರಮೇಶ್ ನಿರೂಪಿಸಿದರು, ಉಪನ್ಯಾಸಕ ಕಣ್ಣಯ್ಯ ಕನಕ ವಿದ್ಯಾಭಿವೃದ್ದಿ ನಿಧಿಯ ವರದಿ ನೀಡಿದರು, ಸುಮುಖ ಮಹಿಳಾ ಭಜನಾ ಮಂಡಳಿಯವರು ಸಾಮೂಹಿಕ ಗೀತೆ ಹಾಡಿದರೆ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಂದಿಸಿದರು.


Tuesday, November 23, 2010





ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಗಮನ ಬಿಟ್ಟು ಸಕರ್ಾರ ಉರುಳಿಸುವ ದೃಷ್ಟಿಯಲ್ಲಿರುವ ಶಾಸಕರು
ಚಿಕ್ಕನಾಯಕನಹಳ್ಳಿ,ನ.23: ಪ್ರಜಾಪ್ರಭುತ್ವ ವ್ಯವಸ್ಥೆಯ ಜನಾಂದೋಲನ ನೀತಿಯ ವಿರುದ್ದ ಶಾಸಕರು ತಮ್ಮ ಕರ್ತವ್ಯ ಮರೆತು ಬಿಜೆಪಿ ಸಕರ್ಾರ ಉರುಳಿಸುವ ದೃಷ್ಟಿಯಿಂದ ನಿರಂತರವಾಗಿ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಶಿವಪ್ರಸಾದ್ ಹೇಳಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ಏರ್ಪಡಿಸಿದ್ದ ಸ್ಪಂದನ ಜನಸ್ಪಶರ್ಿ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು 40 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದು ಪ್ರತಿ ಗ್ರಾಮಗಳಲ್ಲಿ ಹಲವು ಜನಪರ ಕಾರ್ಯಗಳನ್ನು ಏರ್ಪಡಿಸಿ ಶೇಕಡ 80ರಷ್ಟು ಯೋಜನೆಗಳನ್ನು ಮನೆ ಬಾಗಿಲಿಗೆ ಬರುವಂತೆ ಮಾಡಿದ್ದಾರೆ, ಈ ಸಾಧನೆಗಳನ್ನೆಲ್ಲಾ ವಿರೋದ ಪಕ್ಷದವರು ಮರೆತು ಸಕರ್ಾರ ಉರುಳಿಸಿ ಹಿಂಬಾಗಿಲಿನಿಂದ ಬರುವ ಪ್ರಯತ್ನ ನಡೆಸುತ್ತಿದ್ದಾರೆ., ಇಂತಹ ಗುಂಪಿನೊಂದಿಗೆ ಕೈ ಜೋಡಿಸಿರುವ ಶಾಸಕರು ಕ್ಷೇತ್ರದಲ್ಲಿ ಹರಾಜಕತೆ ಉಂಟು ಮಾಡಿ ಜನಸಾಮಾನ್ಯರ ಸಮಸೈಯನ್ನು ಅತಿರೇಕಕ್ಕೆ ಎಡೆಮಾಡಿಕೊಟ್ಟಿದ್ದಾರೆ, ಇದರಿಂದ ತಾಲೂಕು ಬಿಜೆಪಿ ಘಟಕ ಪ್ರತಿವಾರ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಸಂಕಷ್ಟ ಜನರ ನೆರವಿಗೆ ಬಂರಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಂಕರಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗೋಡೆಕೆರೆ ಜಗದೀಶ್ ಸ್ವಾಗತಿಸಿದರೆ ಸುರೇಶ್ಹಳೇಮನೆ ನಿರೂಪಿಸಿ, ಕವಿತಾಕಿರಣ್ಕುಮಾರ್ ವಂದಿಸಿದರು.

ಕನಕದಾಸರ ಜಯೋತ್ಯೋತ್ಸವ ಆಚರಣೆ
ಚಿಕ್ಕನಾಯಕನಹಳ್ಳಿ,ನ.23: ಕಲಿ, ಸಂತ, ಕೀರ್ತನಕಾರ, ಸಮಾಜ ಸೇವಕ, ಕವಿ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 24ರ ಬುಧವಾರ ಮಧ್ಯಾಹ್ನ 12ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ವಿಶೇಷ ಉಪನ್ಯಾಸ ನೀಡಲಿದ್ದು ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಸಾಧಕರಿಗೆ ಸನ್ಮಾನಿಸಲಿದ್ದು ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ಶಿವಯೋಗಿಸ್ವಾಮಿ, ಎಂ.ಆರ್.ಹುಲಿನಾಯ್ಕರ್, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಇ.ಓ ದಯಾನಂದ್, ಸಿ.ಪಿ.ಐ ರವಿಪ್ರಸಾದ್, ಬಿ.ಇ.ಓ ಸಾ.ಚಿ.ನಾಗೇಶ್, ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ, ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ರಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ ಉಪಸ್ಥಿತರಿರುವರು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.

ಉಚಿತ ಬೆಡ್ಶೀಟ್ ಹಾಗೂ ಪುಸ್ತಕ ಕೊಡುಗೆ ಸಮಾರಂಭ
ಚಿಕ್ಕನಾಯಕನಹಳ್ಳಿ.ನ.23: ಉಚಿತ ಬೆಡ್ಶೀಟ್ ವಿತರಣೆ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮವನ್ನು ಇದೇ 25ರ ಗುರುವಾರ ಮಧ್ಯಾಹ್ನ 12.45ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಇನ್ನರ್ವೀಲ್ ಕ್ಲಬ್ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಏರ್ಪಡಿಸಿದ್ದು ಬಿ.ಸಿ.ಎಂ. ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾಥರ್ಿ ನಿಲಯದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ 319ರ ಇನ್ನರ್ವೀಲ್ ಚೇರ್ಮನ್ ರೇಣು ಅಯ್ಯರ್ ವಿದ್ಯಾಥರ್ಿನಿಯರಿಗೆ ಬೆಡ್ಶೀಟ್ ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ಇ.ಓ ಎನ್.ಎಂ ದಯಾನಂದ್, ಉಪಸ್ಥಿತರಿರುವರು.


Sunday, November 21, 2010



ಶಾಸಕರುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಸಿ.ಎಂ.ರವರಿಗೆ, ಶಾಸಕರ ಬೆಲೆ ಏನು ಎಂಬುದನ್ನು ತೋರಿಸಲು ಹೋಗಿದ್ದೆವು: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ನ.21: ನಮ್ಮ ಪತ್ರಗಳಿಗೆ ಮಾನ್ಯತೆ ನೀಡದ ಮುಖ್ಯಮಂತ್ರಿಗಳು, ನಮ್ಮ ಕ್ಷೇತ್ರಗಳಿಗೆ ನೀಡುವ ಅನುದಾನ ನೀಡುವಲ್ಲಿ ಅನುಸರಿಸುತ್ತಿದ್ದ ತಾರತಮ್ಯ ನೀತಿ ಹಾಗೂ ಅತಿಯಾದ ಸ್ವಜನ ಪಕ್ಷಪಾತದಿಂದ ರೋಸಿ ಹೋಗಿದ್ದೇವೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರಿಗೆ ಯಾವುದೇ ಮಾನ್ಯತೆಯನ್ನು ನೀಡದೆ ನಮ್ಮನ್ನೆಲ್ಲಾ ನಿರ್ಲಕ್ಷಿಸುವ ಜೊತೆಗೆ ವಿಧಾನ ಸಭಾ ಕ್ಷೇತ್ರಗಳಿಗೆ ನೀಡುವ ಅನುದಾನವನ್ನು ಸಮರ್ಪಕವಾಗಿ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಈ ಸಕರ್ಾರ, ರಾಜ್ಯದ ಅಭಿವೃದ್ದಿಯನ್ನು ಕಡೆಗಣಿಸಿ ಸ್ವಹಿತಾಸಕ್ತಿಗೋಸ್ಕರ ಸಾಕಷ್ಟು ಅವ್ಯವಹಾರಗಳನ್ನು ಮಾಡುತ್ತಿರುವು ರಾಜ್ಯ ಮಟ್ಟದ ಬಿ.ಜೆ.ಪಿ. ನಾಯಕರು, ಹಗರಣಗಳ ಸರಮಾಲೆಯಲ್ಲಿ ಸುತ್ತಿಕೊಂಡಿದ್ದಾರೆ, ಈ ಹಗರಣಗಳನ್ನು ನಮ್ಮ ಜೆ.ಡಿ.ಎಸ್. ಬಯಲೆಗೆಳೆಯುತ್ತಿರುವ ಭರಾಟೆಗೆ ಬಿ.ಜೆ.ಪಿ. ನಾಯಕರು ಧೂಳಿಪಟವಾಗಿತ್ತಿದ್ದಾರೆ. ಇದರ ಹೊಡೆತವನ್ನು ತಾಳಲಾರದೆ ಆ ಪಕ್ಷದ ನಾಯಕರು ದಿಕ್ಕುತೋಚದೆ ಪರದಾಡುತ್ತಿದ್ದಾರೆ ಎಂದರಲ್ಲದೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸಿ.ಎಂ.ರವರು ತಕ್ಷಣ ಕೆಳಗಿಳಿಯಬೇಕೆಂದರು.
ಪಕ್ಕದ ಮಹಾರಾಷ್ಟ್ರದಲ್ಲಿನ ರೀತಿಯಲ್ಲಿಯೇ ಇಲ್ಲಿಯೂ ನಡೆಯಬೇಕು, ಹಗರಣಗಳ ಬಗ್ಗೆ ಮೇಲ್ಮಟ್ಟದಲ್ಲಿ ನೀತಿಪಾಠ ಮಾಡುವ ಬಿ.ಜೆ.ಪಿ.ನಾಯಕರಿಗೆ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಗರಣಗಳ ಬಗ್ಗೆ ಮಾಹಿತಿ ಇಲ್ಲವೆ ? ಎಂದು ಪ್ರಶ್ನಿಸಿದರಲ್ಲದೆ, ಕಾಂಗ್ರೆಸ್ಗೆ ಒಂದು ನೀತಿ ಬಿ.ಜೆ.ಪಿ.ಗೆ ಒಂದು ನೀತಿಯಾ ಎಂದರು.
ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿಯವರು ಬಿ.ಜೆ.ಪಿ.ನಾಯಕರ ಹಗರಣಗಳನ್ನು ಬಯಲು ಮಾಡಲು ಸಮಿತಿಯೊಂದನ್ನು ರಚಿಸಿದ್ದು ಆ ಸಮಿತಿಯಲ್ಲಿದ್ದ ನನಗೆ, ನಮ್ಮ ನಾಯಕರು ವಹಿಸಿದ್ದ ಜವಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಕ್ಷೇತ್ರಕ್ಕೆ ಬರುವುದು ತಡವಾದರೂ ಪ್ರತಿ ದಿವಸ ಕ್ಷೇತ್ರದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಸದಾ ಮಾಹಿತಿ ಪಡೆಯುತ್ತಿದ್ದೆ ಎಂದರು.
ಬೋರನಕಣಿವೆ ಜಲಾಶಯದ ಗೇಟ್ ದುರಸ್ತಿ ಸಲುವಾಗಿ ಲಕ್ಕವಳ್ಳಿಯಿಂದ ಇಂಜಿನಿಯರ್ರವರನ್ನು ಕರೆಸಿ ಅದರ ದುರಸ್ಥೆಗೆ ಮುಂದಾಗಿರುವುದಲ್ಲದೆ, ತಾಲೂಕಿನ ಕೆರೆಗಳಲ್ಲಿನ ಏರಿಗಳನ್ನು ಸರಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಅದನ್ನು ಸರಿ ಪಡಿಸಲು ಅಧಿಕಾರಿಗಳು ಕೇಳುವ ಅನುದಾನವನ್ನು ನೀಡಲು ಸಕರ್ಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ, ಇದರಿಂದ ಸಾಕಷ್ಟು ಅನಾನುಕೂಲಗಳಾಗುತ್ತಿದೆ ಎಂದರು.
ಸಕರ್ಾರ ತಾಲೂಕಿಗೆ ಯಾವ ರೀತಿಯ ಹಣವನ್ನು ಬಿಡುಗಡೆ ಮಾಡದ ಪರಿಣಾಮ, ತಾಲೂಕಿನಲ್ಲಿ ಆಗುತ್ತಿರುವ ಅತಿವೃಷ್ಟಿಗೆ ತಾಲೂಕು ಆಡಳಿತದಿಂದ ಸಹಕಾರ ನೀಡಲಾಗುತ್ತಿಲ್ಲ ಎಂದರು.
ಸ್ಥಳೀಯ ಬಿ.ಜೆ.ಪಿ. ತಾಲೂಕು ಕಛೇರಿ ಆವರಣದಲ್ಲಿ ನಡೆಸಲು ಉದ್ದೇಶಿಸಿರುವ ಸ್ಪಂದನ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಯಿಸಿದ ಶಾಸಕರು, ಈ ರೀತಿಯ ಕಾರ್ಯಕ್ರಮಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿಲ್ಲವೆಂದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಜಿ.ರಾಜಣ್ಣ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಜಿ.ಪಂ.ಸದಸ್ಯ ರಘುನಾಥ್, ತಾ.ಪಂ.ಸದಸ್ಯ ಕೆ.ಟಿ.ಗೋವಿಂದಪ್ಪ, ಪುರಸಭಾ ಸದಸ್ಯರುಗಳಾದ ದೊರೆಮುದ್ದಯ್ಯ, ರವಿ, ಎಂ.ಎನ್.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Saturday, November 20, 2010


ಕನಕ ದಾಸರ ಜಯಂತ್ಯೋತ್ಸವದಂದು ವಿವಿಧ ರೀತಿಯ ಮೆರವಣಿಗೆ, ವೇಷಗಾರಿಕೆ
ಚಿಕ್ಕನಾಯಕನಹಳ್ಳಿ,ನ.20: ತಾಲೂಕು ಮಟ್ಟದ ಭಕ್ತ ಕನಕ ದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇದೇ 24ರ ಬುಧವಾರ ಮಧ್ಯಾಹ್ನ 12-30ಕ್ಕೆ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಅಂದು ಬೆಳಗ್ಗೆ 9ಗಂಟೆಗೆ ನಡೆಯುವ ವೈಭವದ ಉತ್ಸವವು ನಡೆಯಲಿದ್ದು ಉತ್ಸವದ ಜೊತೆಗೆ ಮಹಿಳಾ ವೀರಗಾಸೆ ಕುಣಿತ, ಯುವಕರ ತಂಡದ ದೊಳ್ಳು ಕುಣಿತ, ಕೋಲಾಟ ಕುಣಿತ, ಗಾರುಡಿಗನ ಕುಣಿತ, ನಾಸಿಕ್ ಡೋಲು ವಾದ್ಯ, ಪಾಳೇಗಾರರ ವೇಷ, ಪಟ ಕುಣಿತ, ಕನಕದಾಸರ ವೇಷಗಾರಿಕೆ ಮತ್ತು ಸ್ಥಬ್ದ ಚಿತ್ರಗಳೊಂದಿಗೆ ವೇದಿಕೆಯವರೆವಿಗೂ ಉತ್ಸವ ಹಮ್ಮಿಕೊಳ್ಳಲಾಗಿದೆ.


ಮಾಧ್ಯಮದಂತೆ ಕೆಲಸ ನಿರ್ವಹಿಸುವ ಬ್ಯಾಂಕ್ ಶಾಖೆಗಳು
ಚಿಕ್ಕನಾಯಕನಹಳ್ಳಿ,ನ.20: ಬ್ಯಾಂಕ್ ಒಂದು ಮಾಧ್ಯಮವಿದ್ದಂತೆ ಕೆಲಸ ನಿರ್ವಹಿಸಿ ಎಲ್ಲರಿಗೂ ಸಮನಾಗಿ ಸೌಲಭ್ಯಗಳನ್ನು ನೀಡುವ ಒಂದು ಸಹಾಯ ಕೇಂದ್ರ ಎಂದು ಬ್ಯಾಂಕ್ ಇನ್ಸ್ಪೆಕ್ಟರ್ ಸತೀಶ್ ಹೇಳಿದರು.
ಪಟ್ಟಣದ ಕೆನರ ಬ್ಯಾಂಕ್ ಆವರಣದಲ್ಲಿ ನಡೆದ ಪೌಂಡರ್ಸ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೋಷಕರು ಉಳಿತಾಯ ಮಾಡುವುದರಲ್ಲದೇ ಮಕ್ಕಳಿಗೂ ಉಳಿತಾಯದ ಬಗ್ಗೆ ತಿಳಿಸಬೇಕು ಅದಕ್ಕಾಗಿ ಬ್ಯಾಂಕ್ಗಳ ಖಾತೆಗಳನ್ನು ತೆರೆಯಿಸಿ ಮಕ್ಕಳೇ ಹಣವನ್ನು ಸಂದಾಯಿಸಲು ತಿಳಿಸಬೇಕು ಎಂದ ಅವರು ಮಕ್ಕಳಿಗಾಗಿ ಶಿಕ್ಷಣ ಸಾಲವನ್ನು ಬ್ಯಾಂಕ್ ನೀಡಲಿದ್ದು ಅದನ್ನು ಉಪಯೋಗಿಸಿಕೊಳ್ಳಲು ತಿಳಿಸಿದರು.
ಬ್ಯಾಂಕ್ ಇನ್ಸ್ಪೆಕ್ಟರ್ ಈರಣ್ಣನಾಯಕ ಮಾತನಾಡಿ ಮಕ್ಕಳ ಖಾತೆಗಳನ್ನು ಅವರ ಪಿ.ಯು.ಸಿ ವಿದ್ಯಾಭ್ಯಾಸ ಮುಗಿಯುವವರೆಗೂ ಅವರು ಪಡೆದಿರುವ ಲೋನ್ ಹಣದಲ್ಲಿ ಮಕ್ಕಳು ಹಣ ಬಿಡುಗಡೆ ಮಾಡಲು ಅರ್ಹರಲ್ಲ ಅದಕ್ಕಾಗಿ ಪಿಯುಸಿ ವಿದ್ಯಾಭ್ಯಾಸ ಮುಗಿಯಬೇಕು ಎಂದರು.
ಸಮಾರಂಭದಲ್ಲಿ ಮ್ಯಾನೇಜರ್ ನಾಗರಾಜ್ ಉಪಸ್ಥಿತರಿದ್ದರು

ಕಾಮ ಕ್ರೋದ ಗೆಲ್ಲುವ ಶಕ್ತಿ ಸಾಹಿತ್ಯಕ್ಕಿದೆ
ಚಿಕ್ಕನಾಯಕನಹಳ್ಳಿ,ನ.20: ಸಜ್ಜನರ ಸಂಘ ಮತ್ತು ಸಾಹಿತ್ಯದ ವ್ಯಾಸಾಂಗವು ಜೀವನದಲ್ಲಿ ಸಿಗುವ ಉತ್ತಮ ಮೌಲ್ಯ, ಈ ಎರಡೂ ಕಾಮ, ಕ್ರೋದ, ಮತ್ಸರಗಳನ್ನು ತೊರೆಯುವ ಒಂದು ಸಿಹಿ ಸಾಧನ ಎಂದು ಸಾಹಿತಿ ಆರ್.ಬಸವರಾಜು ಹೇಳಿದರು.
ಪಟ್ಟಣದ ತೀ.ನಂ.ಶ್ರೀ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಂಥಾಲಯಕ್ಕೆ ಬರುವ ಓದುಗರು ಕೇವಲ ಪತ್ರಿಕೆಗಳನ್ನು ಮಾತ್ರ ಓದದೆ ಸಾಹಿತ್ಯದ ಪುಸ್ತಕವನ್ನು ಓದಿ ಅದರಲ್ಲಿನ ಸಿಹಿಯನ್ನು ಅರಿತು ಜ್ಞಾನವೆಂಬ ಜ್ಯೋತಿ ಬೆಳಗಿಸಬೇಕು, ಅಲ್ಲದೆ ಜ್ಞಾನ ಮತ್ತು ವ್ಯಕ್ತಿಯ ಕ್ರಿಯೆಗಳು ಸಂಗಮವಾದಾಗ ವ್ಯಕ್ತಿತ್ವ ವಿಕಸನವಾಗಿ ಜೀವನದ ಮೌಲ್ಯ ಬೆಳಕಿಗೆ ಆಗಮಿಸಿ ಜ್ಞಾನವು ಶಾಶ್ವತವಾಗಿ ಉಳಿಯುತ್ತದೆ ಎಂದ ಅವರು ಸಾಹಿತ್ಯವನ್ನು ಬೆಳಸಿಕೊಂಡವರು ನೀತಿ ನಿಯಮದ ಜೊತೆಗೆ ತನ್ನದೇ ಆದ ಆದರ್ಶಗಳನ್ನು ಪಾಲಿಸುವಲ್ಲಿ ಮಗ್ನರಾಗಿ ಸಾಹಿತ್ಯದ ನವರಸ ಸಂಗಮವನ್ನು ಎಲ್ಲೆಡೆ ಹರಿಸಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ 30 ವರ್ಷಗಳ ಹಿಂದೆ ಸ್ಥಾಪಿತವಾದ ಗ್ರಂಥಾಲಯ ಇಂದು ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಜ್ಞಾನವನ್ನು ನೀಡುತ್ತಿದೆ, ವಿಶ್ವೇಶ್ವರಯ್ಯನಂತಹ ಮಹಾನ್ ವ್ಯಕ್ತಿಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಜ್ಞಾನವಿದ್ದರೆ ನಾವೂ ಮಣ್ಣಾದ ಮೇಲೂ ಜ್ಞಾನ ಬಳಕೆಗೆ ಬರುತ್ತದೆ ಎಂದು ಸಾರಿದವರು ಅವರು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮಾತನಾಡಿ ಗ್ರಂಥಾಲಯವು ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕ ಇಲ್ಲಿ ಎಲ್ಲಾ ರೀತಿಯ ಪುಸ್ತಕ ಭಂಡಾರಗಳು ದೊರೆಯುವುದರಿಂದ ವಿದ್ಯಾಥರ್ಿಗಳಿಗೆ ಸ್ಮಧರ್ಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಉಪಯೋಗವಾಗುವುದರಿಂದ ಗ್ರಂಥಾಲಯಕ್ಕೆ ಉತ್ತಮ ಪುಸ್ತಕಗಳು ಲಭ್ಯವಾಗಬೇಕು ಎಂದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಜಿ.ರಂಗಯ್ಯ, ಗ್ರಂಥಾಲಯ ಸಹಾಯಕ ಬಸವರಾಜು ಉಪಸ್ಥಿತರಿದ್ದರು.


Wednesday, November 17, 2010





ವಿದ್ಯಾಥರ್ಿ ವೇತನಕ್ಕಾಗಿ ಎಬಿವಿಪಿ ಹೋರಾಟ
ಚಿಕ್ಕನಾಯಕನಹಳ್ಳಿ,ನ,17:
ಡಿ.ಇಡಿ ಮುಗಿಸಿಕೊಂಡು ಪದವಿ ಓದುತ್ತಿರುವ ಪರಿಶಿಷ್ಟ ಜಾತಿ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಮಂಜೂರು ಮಾಡಬೇಕು ಎಂದು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತಹಶೀಲ್ದಾರ್ರವರಿಗೆ ಮನವಿ ಪತ್ರವನ್ನು ಸಲ್ಲಿಸಿತು.
ಮನವಿ ಪತ್ರ ನೀಡಿ ಮಾತನಾಡಿದ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಡಿಗ್ರಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಹಾಸ್ಟಲ್ ಸೌಲಭ್ಯವನ್ನು ರದ್ದುಗೊಳಿಸಿದ್ದು, ವಿದ್ಯಾಥರ್ಿ ವೇತನವನ್ನು ಮಂಜೂರ ಮಾಡುವುದಿಲ್ಲವೆಂದು ಆದೇಶ ನೀಡಿರುವುದು ಖಂಡನೀಯವಾಗಿದ್ದು ಪರಿಶಿಷ್ಟ ಜಾತಿ ವಿದ್ಯಾಥರ್ಿಗಳ ವಿದ್ಯಾ ಅಭ್ಯಾಸಕ್ಕೆ ಒತ್ತು ನೀಡಬೇಕಾದ ಸಕರ್ಾರ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದ ಅವರು ಡಿ.ಇಡಿ ಮುಗಿಸಿದವರಿಗೆ ಪ[ದವಿತರಗತಿಗೆ ಪ್ರವೇಶ ನೀಡಿ ವಿದ್ಯಾಥರ್ಿ ವೇತನವನ್ನು ತಡೆಹಿಡಿದಿರುವುದು ಕೊಟ್ಟು ಡಿಡೀರ್ ಅಂತ ಹಾಸ್ಟಲ್ನಿಂದ ಹೊರ ಹಾಕುತ್ತಿರುವುದು ನ್ಯಾಯಸಮ್ಮತವಾಗಿಲ್ಲ ಮತ್ತು ಡಿಗ್ರಿ ವಿದ್ಯಾಥರ್ಿಗಳಿಗೆ ಮುಂದಿನ ತಿಂಗಳು ಸೆಮಿಷ್ಟರ್ ಪರೀಕ್ಷೆಯಿದ್ದು ದೂರದ ಊರುಗಳಿಂದ ಓದಲು ಬಂದಿರುವ ವಿದ್ಯಾಥರ್ಿಗಳಿಗೆ ತೊಂದರೆಯಾಗಿರುವುದನ್ನು ಅಧಿಕಾರಿಗಳು ಸರಿಪಡಿಸಿಕೊಡಬೇಕು ಇಲ್ಲದಿದ್ದರೆ ಎ.ಬಿ.ವಿ.ಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವಿ ಪತ್ರದ ಹೇಳಿದ್ದಾರೆ.
ಈ ಸಂದರ್ಬದಲ್ಲಿ ನಗರ ಕಾರ್ಯದಶರ್ಿ ಮನೋಹರ್, ಸಹ ಕಾರ್ಯದಶರ್ಿ ದಿಲೀಪ್ ಮತ್ತು ಕಾರ್ಯಕರ್ತರುಗಳಾದ ಜಗದೀಶ್, ರವಿ, ದರ್ಶನ್ ಉಪಸ್ಥಿತರಿದ್ದರು.

ಯವುಳ್ಳ ಧರ್ಮಕ್ಕೆ ಜಯ ಶತಸಿದ್ದ
ಚಿಕ್ಕನಾಯಕನಹಳ್ಳಿ,ನ,17: ಧರ್ಮದ ಭಾವನೆ ಬಹಳ ಸೂಕ್ಷ್ಮ, ಧರ್ಮವು ವ್ಯಕ್ತಿ ಮತ್ತು ಸಮಾಜದ ನಡುವೆ ಇರುವ ಮಾನವೀಯ ಮೌಲ್ಯ, ಅಲ್ಲದೆ ದಯವೇ ಧರ್ಮದ ಮೂಲವಾಗಿರುವಾಗ ಧರ್ಮಕ್ಕೆ ಎಂದಿಗೂ ಜಯವಿರುತ್ತದೆ ಎಂದು ತಮ್ಮಡಿಹಳ್ಳಿ ವಿರಕ್ತಮಠ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಹೇಳಿದರು.
ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ನಡೆದ ಪಂಚಮುಖಿ ಗಣಪತಿ ದೇವಾಯಲದ ಪ್ರತಿಷ್ಠಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮಕ್ಕೆ ಎಂದು ಸಾವಿಲ್ಲ. ದೊಡ್ಡ ದೊಡ್ಡ ಸಾಮ್ರಾಜ್ಯಗಳು ಮಣ್ಣಿನಲ್ಲಿ ಹೂತು ಹೋದರೂ ಅವರ ಧರ್ಮವನ್ನು ಇಂದಿಗೂ ಪಾಲಿಸುತ್ತಿದ್ದಾರೆ, ಧರ್ಮವನ್ನು ವೇದಿಕೆ ಮುಖಾಂತರ ಎಂದೂ ಬೆಳೆಯದೇ ಅನುಷ್ಟಾನದ ಮುಖಾಂತರ ಬೆಳೆಸಿದಾಗ ಧರ್ಮದ ಅರ್ಥ ಎಲ್ಲರಿಗೂ ತಿಳಿಯುತ್ತದೆ ಎಂದ ಅವರು ಸ್ವಾರ್ಥ, ಅಹಂಕಾರ ತೊರೆದಾಗ ಮಾತ್ರ ಧರ್ಮದ ವೈಶಿಷ್ಟ್ಯ ತಿಳಿದು ಗೆಲುವು ಸಂಪಾದಿಸುತ್ತಾರೆ ಎಂದು ಹೇಳಿದರು.
ಬನಶಂಕರಿ ನಾಗರೀಕ ಬಳಗದ ಅಧ್ಯಕ್ಷ ಸಿ.ಟಿ.ವರದರಾಜು ಮಾತನಾಡಿ ಚೋಳರ ಕಾಲದಲ್ಲಿ ಕಟ್ಟುತ್ತಿದ್ದ ಪಂಚಮುಖಿ ದೇವಸ್ಥಾನ ಈಗ ಕಟ್ಟಿರುವುದು ಬನಶಂಕರಿ ನಾಗರೀಕರ ಬಳಗದ 17ವರ್ಷಗಳ ಕನಸು ಈಡೇರಿದಂತಾಗಿದೆ, ದೇವಸ್ಥಾನ ಕಟ್ಟುವುದಕ್ಕೋಸ್ಕರ ಭಕ್ತಾಧಿಗಳಿಂದ ಮತ್ತು ಆಥರ್ಿಕ ವ್ಯವಾಹರಗಳ ಮೂಲಕ ಸಂಗ್ರಹಿಸಿದ ಹಣದಲ್ಲಿ ದೇವಸ್ಥಾನ ಕಟ್ಟಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ರಾಜಣ್ಣ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಪುರಸಭಾ ಸದಸ್ಯರುಗಳಾದ ಸಿ.ಕೆ.ಕೃಷ್ಣಮೂತರ್ಿ, ಈಶ್ವರ್ಭಾಗವತ್, ರುಕ್ಮಿಣಮ್ಮ, ಲಕ್ಷ್ಮಯ್ಯ, ಬಿಜೆಪಿ ಮುಖಂಡ ಮೈಸೂರಪ್ಪ, ಶೇಷಪ್ಪ, ಅನ್ವರ್ಪಾಷ ಉಪಸ್ಥಿತರಿದ್ದರು.


ಪರಂಪರಾ ತಾಣಗಳನ್ನು ರಕ್ಷಿಸುವ ಮೂಲಕ ಪರಂಪರೆಯನ್ನು ಉಳಿಸಿ
ಚಿಕ್ಕನಾಯಕನಹಳ್ಳಿ,ನ.14: ಹಿರಿಯರು ಮಾಡಿ ಬಿಟ್ಟಿರುವ ಪರಂಪರಾ ತಾಣಗಳನ್ನು ಇಂದಿನ ಯುವಕರು ರಕ್ಷಿಸಿ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಮೀಸಲಿಡಬೇಕು ಎಂದು ಪರಂಪರಾಕೂಟದ ಜಿಲ್ಲಾ ಸಂಚಾಲಕ ಡಾ. ಡಿ.ಎನ್.ಯೋಗಿಶ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಪರಂಪರಾ ಕೂಟದ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಹಿರಿಕರು ರೂಢಿಸಿಕೊಂಡು ಬಂದಿರುವ ಎಲ್ಲಾ ರೀತಿಯ ಪರಂಪರೆಯನ್ನು ರಕ್ಷಿಸುವ ಮಹತ್ತರ ಕಾರ್ಯಕ್ರಮವನ್ನು ಪರಂಪರಾಕೂಟ ಹಮ್ಮಿಕೊಂಡಿದ್ದು ಪರಂಪರಾ ತಾಣಗಳ ಸಂರಕ್ಷಿಸುವುದರಲ್ಲಿ ಕಾಲೇಜು ವಿದ್ಯಾಥರ್ಿಗಳ ಪಾತ್ರ ಬಹು ಮುಖ್ಯ ಎಂದ ಅವರು, ನಮ್ಮ ತಾಲೂಕಿನ ಪ್ರಮುಖ ಪರಂಪರಾ ತಾಣಗಳಾದ ಶುಕ್ರವಾರದ ಬಾಗಿಲು, ನೀರುಬಾಗಿಲು, ವೆಂಕಟರಮಣ ದೇವಸ್ಥಾನ, ಪ್ರಸನ್ನರಾಮೇಶ್ವರ ದೇವಾಲಯ, ಶೆಟ್ಟಿಕೆರೆಯ ಯೋಗ ಮಾಧವರಾಯ ದೇವಾಲಯಗಳು ಈ ಭಾಗದ ಪರಂಪರಾಕೂಟದ ತಾಣಗಳಾಗಿವೆ, ಇವುಗಳನ್ನು ಯಾವ ರೀತಿಯಲ್ಲಿ ರಕ್ಷಿಸಬೇಕು ಎಂಬುದನ್ನು ವಿವರವಾಗಿ ತಿಳಿಸಿದರು.
ಪ್ರಾಧ್ಯಾಪಕ ಡಿ.ಎನ್.ಈರಪ್ಪನಾಯಕ ಮಾತನಾಡಿ ನಮ್ಮ ಸಂಸ್ಕೃತಿಯ ಪರಂಪರಾ ತಾಣಗಳ ಬಗ್ಗೆ ವಿದೇಶೀಯರಿಗೆ ಇರುವಷ್ಟು ಗೌರವ ಭಾವನೆಗಳು ನಮ್ಮ ಭಾರತೀಯರಲ್ಲಿ ಇಲ್ಲ ಎಂದು ವಿಷಾದಿಸಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಕನ್ನಡಿಗರು ತಮ್ಮ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳಸಿಕೊಂಡು ಕನ್ನಡ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಹರಡಬೇಕು ಎಂದರು.
ಸಮಾರಂಭದಲ್ಲಿ ಪ್ರಾಧ್ಯಾಪಕ ಟಿ.ವಿ.ರವೀಂದ್ರಶರ್ಮ, ಪರಂಪರಾ ಕೂಟದ ಸಂಚಾಲಕ ಸಿ.ಜಿ.ಸುರೇಶ್, ಉಪನ್ಯಾಸಕ ಸಿ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.
ಸಮಾರಂಬದಲ್ಲಿ ಅಶ್ವಿನಿ ಅಣ್ಣಪ್ಪ ಪ್ರಾಥರ್ಿಸಿದರೆ ಜಿ.ಸುಧಾ ಸ್ವಾಗತಿಸಿ, ಪ್ರತಿಭಾ ನಿರೂಪಿಸಿದರು.


ಶಾಸಕರ ಅನುಪಸ್ಥಿತಿಯ ವಿರುದ್ದ ವಿನೂತನ ಪ್ರತಿಭಟನೆ: ತಾ.ಬಿ.ಜೆ.ಪಿ.
ಚಿಕ್ಕನಾಯಕನಹಳ್ಳಿ,ನ.17: ತಾಲೂಕಿನಲ್ಲಿ ಹೆಚ್ಚು ಮಳೆಯಾಗಿ ಹಲವು ಮನೆಗಳು ಬಿದ್ದರೂ ತಾಲೂಕಿನಲ್ಲಿರುವ ಹಲವು ಕೆರೆಗಳ ಏರಿ ಹೊಡೆದಿವೆ, ಬೋರನಕಣಿವೆ ಜಲಾಶಯದ ಗೇಟ್ ಮುರಿದು ನೀರು ಪೊಲಾಗುತ್ತಿದ್ದರೂ ಆ ಬಗ್ಗೆ ಗಮನ ಹರಿಸದೆ ಹಾಗೂ ಕ್ಷೇತ್ರದ ಜನತೆಯ ಸಮಸ್ಯೆಗಳ ಬಗ್ಗೆ ನಿಗಾವಹಿಸದೇ ಕ್ಷೇತ್ರದಿಂದ 2ತಿಂಗಳುಗಳಿಂದ ದೂರವಿರುವುದನ್ನು ವಿರೋಧಿಸಿ ತಾಲೂಕಿನ ಅಭಿವೃದ್ದಿಗಾಗಿ ಬಿಜೆಪಿ ಘಟಕ ಇದೇ 22ರ ಸೋಮವಾರ ಜನರಿಂದ ಅಹವಾಲು ಪಡೆಯುವ 'ಸ್ಪಂದನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ ಮಿಲ್ಟ್ರಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಾಸಕರ ಅನುಪಸ್ಥಿತಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಬಿ.ಜೆ.ಪಿ. ಈ ರೀತಿಯ ಹೊರಾಟವನ್ನು ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ರಾಜ್ಯ ಉಪಾಧ್ಯಕ್ಷ ಅಶ್ವಥ್ನಾರಯಣ್ ಮತ್ತು ಜಿಲ್ಲಾಧ್ಯಕ್ಷ ಶಿವಪ್ರಸಾದ್ ಆಗಮಿಸುವರು ಎಂದರು.
ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ ಹಳೇಮನೆ ಮಾತನಾಡಿ, ತಾಲೂಕಿನ ಆಡಳಿತ ಕಡೆ ಜವಾಬ್ದಾರಿ ಇಲ್ಲದೆ ಮತ್ತು ಜನರ ಸಮಸ್ಯೆಗಳನ್ನು ಕೇಳದೆ ತಾಲೂಕಿನಿಂದ ಕಣ್ಮರೆಯಾಗಿರುವ ಶಾಸಕ ಸಿ.ಬಿ.ಸುರೇಶ್ಬಾಬು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ತಾಲೂಕಿನಲ್ಲಿ ನಡೆಯುತ್ತಿರುವ ದುರಾಡಳಿತದ ವಿರುದ್ದ ಈ ಹಿಂದೆ ಪತ್ರಿಕಾಗೋಷ್ಟಿಯನ್ನು ಕರೆದು, ಪತ್ರಿಕೆ ಮೂಲಕ ಶಾಸಕರಿಗೆ ತಿಳಿಸಿದರೂ ಯಾವ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಭಾಗವಹಿಸಿದೆ ತಾಲ್ಲೂಕನ್ನು ಕಡೆಗಣಿಸುತ್ತಿದ್ದಾರೆ ಇದರಿಂದ ತಾಲೂಕಿನ ಜನತೆಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದರು. ಈ ಸಮಸ್ಯೆ ಬಗೆಹರಿಸಲು ತಾಲೂಕು ಬಿಜೆಪಿ ಘಟಕ ತಾಲೂಕು ಕಛೇರಿ ಆವರಣದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಪ್ರತಿ ಸೋಮವಾರ 'ಸ್ಪಂದನ' ಎಂಬ ಕಾರ್ಯಕ್ರಮ ಹಮ್ಮಿಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿ ಸಂಬಂದಪಟ್ಟ ಇಲಾಖೆಗೆ ಕಳುಹಿಸಲಾಗುವುದು ಎಂದರು. ಈ ರೀತಿಯ ಪ್ರತಿಭಟನೆ ಶಾಸಕರ ಅನುಪಸ್ಥಿತಿಯನ್ನು ಎಚ್ಚರಿಸಿದಂತಾಗುತ್ತದೆ ಬಿಜೆಪಿ ಘಟಕ ಈ ಮುಖಾಂತರ ತಾಲೂಕಿನ ಅಭಿವೃದ್ದಿಗಾಗಿ ಹೋರಾಟ ಮಾಡುತ್ತಿದೆ ಎಂದರು.
ಈ ಗೋಷ್ಟಿಯಲ್ಲಿ ಜೆ.ಸಿಪುರ ಘಟಕ ಬಿಜೆಪಿ ಮುಖಂಡ ಸುಂದರ್, ಪರಮೇಶ್ ಉಪಸ್ಥಿತರಿದ್ದರು.


ಈ ಭೂಮಿ ಇರುವವರೆಗೂ ಕನಕನ ಸಾಹಿತ್ಯ ಉಳಿಯುವಂತೆ ಮಾಡಬೇಕು
ಚಿಕ್ಕನಾಯಕನಹಳ್ಳಿ,ನ.17: ಕನಕದಾಸರ ಸಾಹಿತ್ಯವನ್ನು ಮಕ್ಕಳಿಗೆ ತಿಳಿಸಲು ಈ ಸ್ಪಧರ್ೆಗಳನ್ನು ಏರ್ಪಡಿಸಿ ಅದರ ಮೂಲಕ ಹೊಸ ಪ್ರತಿಭೆಗಳನ್ನು ಹೊರತರುತ್ತಿರುವ ಕನಕ ಯುವಕ ಸಂಘದವರ ಕಾರ್ಯ
ಶ್ಲಾಘನೀಯವದದ್ದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರ ಕಂಬಳಿ ಸೊಸೈಟಿ ಆವರಣದಲ್ಲಿ ನಡೆದ ಕನಕದಾಸರ ಚಿತ್ರಕಲಾ ಮತ್ತು ಕನಕ ಕೀರ್ತನಾ ಗಾಯನ ಸ್ಪಧರ್ೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಜಯಂತ್ಯೋತ್ಸವ ಸಕರ್ಾರಿ ಕಾರ್ಯಕ್ರಮವಾದ್ದರಿಂದ ಜಯಂತಿಯಂದು ತಾಲೂಕು ಕಛೇರಿಯಿಂದ ಕನಕದಾಸರ ಭಾವಚಿತ್ರದೊಂದಿಗೆ ವಿಜೃಂಭಣೆಯ ಮೆರವಣಿ ಏರ್ಪಡಿಸಲಾಗೆ ಎಂದ ಅವರು ಕನಕದಾಸರ ಜಯಂತಿಯನ್ನು ಆಚರಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು.
ಸಂಪಾದಕ ಎಚ್.ಎಸ್.ರಾಮಣ್ಣ ಮಾತನಾಡಿ ಪ್ರತಿಯೊಬ್ಬರೂ ಹೇಗೆ ಭೂಮಿಯನ್ನು ದೇವರಂತೆ ಕಂಡು ಪೂಜಿಸುತ್ತಾರೋ ಹಾಗೆ ಈ ಭೂಮಿ ಇರುವವರೆಗೂ ಕನಕದಾಸರ ಸಾಹಿತ್ಯವನ್ನು ಜನರು ಅರ್ಥಮಾಡಿಕೊಂಡು ಅವರ ತತ್ವವನ್ನು ಪಾಲಿಸಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮಕ್ಕಳಿಗಾಗಿ ಕೀರ್ತನೆ ಮತ್ತು ಚಿತ್ರಕಲಾ ಸ್ಪಧರ್ೆಯನ್ನು ಏರ್ಪಡಿಸಿದ್ದು ಕನಕದಾಸರ ಜೀವನ ಮತ್ತು ಅವರ ಸಾಹಿತ್ಯವನ್ನು ಈಗಿನ ಮಕ್ಕಳಿಗೆ ಈ ಸ್ಪಧರ್ೆಗಳ ಮೂಲಕ ತಿಳಿಸಿ ಮಕ್ಕಳ ಮುಖಾಂತರ ಎಲ್ಲರಿಗೂ ಅವರ ಗಾಯನಗಳನ್ನು ಹರಿದಾಡುವಂತೆ ಮತ್ತು ದಾಸರ ಜಯಂತಿಯನ್ನು ಸಾಹಿತ್ಯದ ಮೂಲಕ ಆಚರಿಸಲು ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ರಾಜಣ್ಣ, ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಕನರ್ಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗಿರೀಶ್ ಸ್ವಾಗತಿಸಿದರೆ ಗಂಗಾಧರ್ ವಂದಿಸಿದರು.


Saturday, November 13, 2010


ಮಕ್ಕಳ ದಿನಾಚರಣೆಯ ಈ ದಿನ, ಬೀದಿ ಮಕ್ಕಳ ಬಗ್ಗೆಯೂ ಆಲೋಚಿಸಿ.
ಚಿಕ್ಕನಾಯಕನಹಳ್ಳಿ : ತುತ್ತು ಅನ್ನಕ್ಕಾಗಿ ಹೊಟ್ಟೆ ತುಂಬಿಸಿಕೊಳ್ಳವ ಹಂಬಲದಿಂದ ಶಾಲೆ ಬಿಟ್ಟು ಸಾಕು ಪ್ರಾಣಿ, ಮತ್ತು ನಿಜರ್ೀವ ವಸ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಚಿಕ್ಕ ಪುಟ್ಟ ಪ್ರತಿಭೆಗಳನ್ನು ಬಳಸಿ, ಊರೂರು ಅಲೆದು ಹಣ ಸಂಪಾದಿಸಿ ಜೀವನವನ್ನು ಕಳೆಯುವ ಸಾವಿರಾರು ಮಕ್ಕಳಿಗೆ ಇನ್ನೂ ಸಹ ಮಕ್ಕಳ ದಿನಾಚರಣೆ ಕಾಣುವ ಸೌಭಾಗ್ಯವಿಲ್ಲ.
ದಿ.ಮಾಜಿ ಪ್ರದಾನಿ ಜವಹಾರ್ಲಾಲ್ ನೆಹರು ರವರ ಜನ್ಮ ದಿನಾಚರಣೆಯನ್ನು ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಭವ್ಯ ಭಾರತದ ಸತ್ ಪ್ರಜೆಗಳನ್ನು ರೂಪಿಸಲು ಹೊರಟಿರುವ ಸಕರ್ಾರ, ಶಾಲೆಗೆ ಮಕ್ಕಳನ್ನು ಕರೆತರಲು ಪ್ರಾಥಮಿಕ ಮತ್ತು ಪ್ರೌಡಶಾಲೆಗಳಿಗೆ ಮಧ್ಯ್ಯಾಹ್ನದ ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಪ್ರೌಡಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದರೂ, ಬಡತನದಿಂದ ಹಾಗೂ ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳು ಶಾಲೆ ಬಿಟ್ಟು ಚಿಕ್ಕ ವಯಸಿನಲ್ಲೇ ಬೀದಿ ಬೀದಿ ಅಲೆದು ದುಡಿಮೆಗೆ ಇಳಿಯುವ ಪ್ರವೃತ್ತಿ ತಪ್ಪಿಲ್ಲ.
ಇಂದು ಬಡತನದ ಹಿನ್ನೆಲೆ ಇರುವ ಕುಟುಂಬಗಳ ಮಕ್ಕಳು ತಾತ್ಕಾಲಿಕವಾಗಿ ಉದರ ಪೊಷಣೆ ಮಾಡಿಕೊಳ್ಳಲು ಬೀದಿಗಿಳಿದು ಚಿಕ್ಕಾಸು ದುಡಿಯುವ ಆಲೋಚನೆಯನ್ನು ಮಾಡುವುದು ಒಂದು ಕಡೆಯಾದರೆ, ಇನ್ನು ಕೆಲವು ಮಕ್ಕಳು ಮಾಂಸಖಂಡಗಳು ಬಲಿಯುವ ಮೊದಲೇ ಹಲವು ಕಾಖರ್ಾನೆ, ಅಂಗಡಿಗಳಲ್ಲಿ ದುಡಿಯುವ ಅನಿವಾರ್ಯತೆಗಳು ಎದುರಾಗಿದೆ. ಇದರಿಂದಾಗಿ ಬಡವರ ಮಕ್ಕಳನ್ನು ಕರೆದು ಕೆಲಸ ನೀಡುವ ಸಾಹುಕಾರರು, ಕಡಿಮೆ ಸಂಬಳಕ್ಕೆ ಎಲ್ಲಾ ಕೆಲಸವನ್ನು ಮಾಡಿಸಿಕೊಳ್ಳುವುದರ ಜೊತೆಗೆ ದೈಹಿಕ ಹಿಂಸೆಯನ್ನು ನೀಡುವ ಕೀಳು ಮನೋಭಾವ ಇನ್ನೂ ಹೋಗಿಲ್ಲ. ಬಾಲಕಾಮರ್ಿಕ ನಿಷೇಧ ಕಾಯಿದೆ ಇವರನ್ನು ಏನು ಮಾಡಲಾಗಿಲ್ಲ.
ವಿದ್ಯಾಬ್ಯಾಸ ಮಾಡಿದರೆ ಸಕರ್ಾರಿ ನೌಕರಿಯೇ ಸಿಗಬೇಕು ಎಂಬ ಆಲೋಚನೆ ದೂರವಾಗಿ, ಸಮಾಜಕ್ಕೆ ಮಾರಕವಾಗದಂತಹ ಯಾವುದೇ ಕ್ಷೇತ್ರವಾದರೂ ಸರಿಯೇ ಬದುಕು ರೂಪಿಸಿಕೊಳ್ಳುವಂತಹ ಶಿಕ್ಷಣವನ್ನು ಪಡೆಯುವುದು ಮುಖ್ಯ ಎಂಬುದನ್ನು ಮನಗಾಣದ ಹಲವರು, ಬಾಲ್ಯದಲ್ಲೇ ಮಕ್ಕಳಿಗೆ ಕಾಸಿನ ರುಚಿ ತೋರಿಸಿ ಬುದ್ದಿ ಬರುವ ಮೊದಲೇ ದುಡಿಮೆಗೆ ಇಳಿಸಿ, ಇದರಿಂದ ನಿನ್ನ ಜೀವನಕ್ಕೆ ಒಂದು ದಾರಿಯಾಗುತ್ತದೆ ಹೋಗು ಎಂಬ ಭ್ರಮೆಯನ್ನು ತುಂಬುವ ಬೇಜವಬ್ದಾರಿ ತಂದೆ-ತಾಯಿಗಳು ತಮ್ಮ ನಿಲುವನ್ನ ಮಕ್ಕಳಿಗೆ ತುಂಬವುದರ ಮೂಲಕ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಲು ಮುಂದಾಗುತ್ತಾರೆ, ಇಂತಹ ಕೆಟ್ಟ ನಿಲುವುಗಳನ್ನು ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದು ಶಿಕ್ಷಣ ಆಸಕ್ತರ ಆಲೋಚನೆಯಾಗಿದೆ. ಇದು ಅವರದಷ್ಟೇ ಅಭಿಪ್ರಾಯವಲ್ಲ ದೇಶಪ್ರೇಮಿಗಳೆಲ್ಲರ ನಿಧರ್ಾರ.
ಇಷ್ಟೇ ಅಲ್ಲದೆ ಜೀವನವೆಂದರೇನು ಎಂದು ತಿಳಿಯದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ಕ್ರಿಯೆಗಳು ಮಕ್ಕಳ ಮೇಲೆ ಬಹಳ ಅಗಾಧವಾಗಿ ಪರಿಣಾಮ ಬೀರುತ್ತಿದ್ದು ಇದರಿಂದ ಕೊಲೆ, ಕಳ್ಳತನದಂತಹ ಪ್ರಕರಣಗಳು ಹೆಚ್ಚಾದಾಗ ಮಕ್ಕಳು ಭೂಗತಲೋಕ ಕಡೆ ತಿರುಗಿ ಪಾತಕಲೋಕದ ದಿಗ್ಗಜರಾಗಿ ರಾಷ್ಟ್ರಗಳನ್ನು ನಡುಗಿಸಿದಾಗ ಇದೇ ಸಕರ್ಾರ ಅವರನ್ನು ಹಿಡಿಯಲು ಅಥವಾ ಶೂಟೌಟ್ ಮಾಡಲು ಲಕ್ಷಾಂತರ ರೂಗಳನ್ನು ಖಚರ್ು ಮಾಡುವುದರ ಜೊತೆಗೆ ಎಷ್ಟೋ ಜೀವಗಳು ಕಾಣದಂತೆ ಮಾಯವಾಗಿ ಬಿಡುತ್ತವೆ.
ಕನಿಷ್ಠ ಮಕ್ಕಳಿಗೆ ಸರಿ ತಪ್ಪುಗಳನ್ನು ನಿರ್ಣಯಿಸುವಷ್ಟು ಲೋಕ ಜ್ಞಾನವನ್ನು ಕಲಿಸುವ ಕೆಲಸ ಬಾಲ್ಯದಲ್ಲಾಗದಿದ್ದರೆ ಇನ್ನೆಂದೂ ಆಗುವುದಿಲ್ಲ, ಅಂತಹ ಪೋಷಕರಿಂದ ನಿರೀಕ್ಷೆ ಮಾಡುವುದು ತಪ್ಪು.
ಹಣವುಳ್ಳವರು ತಮ್ಮ ಮಕಳ ಭವಿಷ್ಯವನ್ನು ಉಜ್ವಲವಾಗಿಸಲು ಯೋಚಿಸಿದರೆ, ತಮ್ಮ ಹೊಟ್ಟೆ ಪಾಡಿಗಾಗಿ ಹಾಗೂ ಚಟಗಳನ್ನು ತೀರಿಸಿಕೊಳ್ಳಲು ತಮ್ಮ ಮಕ್ಕಳನ್ನು ಬೀದಿಗೆ ಬಿಟ್ಟು ಕುಡಿತದ ಅಮಲಿನಲ್ಲಿ ಮಕ್ಕಳ ಜೀವನವನ್ನು ಹೊಸಿಕಿ ಹಾಕುವ ಪೋಷಕರಿಗೆ ಏನನ್ನ ಬೇಕು, ಭಾರತ ಮಾತೆ ನೀನೇ ಹೇಳು.........

..ಎ.ಪಿ.ಎಲ್. ಪಡಿತರದಾರರಿಗೆ ಕಡಿಮೆ ದರದಲ್ಲಿ ಅಕ್ಕಿ,ಗೋಧಿ
ಚಿಕ್ಕನಾಯಕನಹಳ್ಳಿ,ನ.12: ನವಂಬರ್ ತಿಂಗಳಿಗೆ ತಾಲೂಕಿನ ಭಾವಚಿತ್ರ ಸೆರೆಹಿಡಿದ ಎಎವೈ, ಬಿಪಿಎಲ್, ಎಪಿಎಲ್, ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಲು ಅಕ್ಕಿ, ಗೋಧಿ, ಸಕ್ಕರೆ ಹಂಚಿಕೆ ನೀಡಿಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಅಂತ್ಯೋದಯ ಕಾಡರ್ುದಾರರಿಗೆ ಕಾಡರ್್1ಕ್ಕೆ 3ರೂನಂತೆ 29ಕೆ.ಜಿ ಅಕ್ಕಿ, 2ರೂನಂತೆ 6 ಕೆ.ಜಿಗೋಧಿ, 13-5ನಂತೆ 1 .ಕೆ.ಜಿ ಸಕ್ಕರೆ, ಅಕ್ಷಯ ಮತ್ತು ನೆಮ್ಮದಿದಾರ ಕಾಡರ್ುದಾರರಿಗೆ ಯುನಿಟ್ ಪದ್ದತಿಯಂತೆ ಅಕ್ಕಿ1 ಕೆ.ಜಿಗೆ 3ರೂ, ಗೋದಿ 1 ಕೆ.ಜಿಗೆ 3ರೂನಂತೆ ಸಕ್ಕರೆ 1 ಕೆ.ಜಿಗೆ 13.50ನಂತೆ ಮತ್ತು ಎಪಿಎಲ್ ಪಡಿತರದಾರರಿಗೆ ಕಾಡರ್್1ಕ್ಕೆ 9.40ರೂನಂತೆ 9.50ಕೆ.ಜಿ ಅಕ್ಕಿ, 7.20ರೂನಂತೆ 2.5ಕೆ.ಜಿ.ಗೋಧಿ ಮತ್ತು ಸಕ್ಕರೆ ಹಂಚಿಕೆ ಇರುವುದಿಲ್ಲವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಿಮೆ ದರದಲ್ಲಿ ಅಕಿ ಗೋದಿ: ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಸಗಟು ಮಳಿಗೆಗಳ ಮೂಲಕ ರಾಜ್ಯದ ಎಲ್ಲಾ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದ್ದು ಎಪಿಎಲ್ ಪಡಿತರದಾರರು ಇದರ ಸದುಪಯೋಗಪಡಿಸಿಕೊಳ್ಳಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸಕರ್ಾರಿ ನೌಕರರು, ಸಾರ್ವಜನಿಕ ಉದ್ದಿಮೆಗಳ ನೌಕರರು, ಪೌರಾಡಳಿತ ಸಂಸ್ಥೆಯ ಹಾಗೂ ಖಾಸಗಿ ಅನುದಾನಿ, ಅನುದಾನರಹಿತ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ಸೈನಿಕ, ಅರೆಸೈನಿಕ ಪಡೆಯ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ, ಗ್ರಾಮೀಣ ಭಾಗದ ಎಪಿಎಲ್ ಪಡಿತರ ಚೀಟಿದಾರರು, ಸ್ವಾತಂತ್ರ ಹೋರಾಟಗಾರರು, ಅಧಿಕೃತ ಪತ್ರಕರ್ತರು, ಕಲಾವಿದರು, ಕ್ರೀಡಾಪಟುಗಳು ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಅಂಗವಿಕಲರು, ತಮ್ಮ ಎಪಿಎಲ್ ಪಡಿತರ ಚೀಟಿ ಅಥವಾ ವೃತ್ತಿ ಸಂಬಂದಿತ ಸಂಸ್ಥೆಯ ಮುಖ್ಯಸ್ಥರು ನೀಡಲಾದ ಭಾವಚಿತ್ರ ಸಹಿತ ಗುರುತಿನ ಚೀಟಿಯ ದೃಡೀಕೃತ ಪ್ರತಿಯನ್ನು ನೀಡಿ ಪ್ರತೀ ಕೆ.ಜಿ ಅಕ್ಕಿಗೆ 13ರೂನಂತೆ ಗರಿಷ್ಟ 50ಕೆ.ಜಿ ಮತ್ತು ಪ್ರತೀ ಕೆ.ಜಿ.ಗೋಧಿಗೆ 9.50ರೂನಂತೆ ಗರಿಷ್ಟ 50ಕೆ.ಜಿ.ಯನ್ನು ಕನರ್ಾಟಕ ಆಹಾರ ನಾಗರೀಕ ಸರಬರಾಜು ನಿಗಮ ಸಗಟು ಮಳಿಗೆ ಗೋದಾಮಿನಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ನ.14: ತಾಲೂಕು ಮಟ್ಟದ ಟಿ.ಎಲ್.ಎಂ. ಹಾಗೂ ಮೆಟ್ರಿಕ್ ಮೇಳ

ಚಿಕ್ಕನಾಯಕನಹಳ್ಳಿ,ನ.12: ತಾಲೂಕು ಮಟ್ಟದ ಟಿ.ಎಲ್.ಎಂ ಮತ್ತು ಮೆಟ್ರಿಕ್ ಮೇಳವನ್ನು ಇದೇ 14ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾಧ್ಯಕ್ಷ ರಾಜಣ್ಣ ಮೆಟ್ರಿಕ್ ಮೇಳದ ಉದ್ಘಾಟನೆ ನೆರವೇರಿಸಲಿದ್ದಾರೆ.
ಡಯಟ್ ಪ್ರಾಂಶುಪಾಲ ಪ್ರಭಾಕರ್ ಟಿ.ಎಲ್.ಎಂ ಉದ್ಘಾಟನೆ ನೆರವೇರಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ದಯಾನಂದ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.





Wednesday, November 10, 2010



ಮಕ್ಕಳ ಪ್ರತಿಭೆ ಹೊರಹೊಮ್ಮಲು ಶಿಕ್ಷಕರ ಪಾತ್ರ ಮಹತ್ವವಾದದ್ದು
ಚಿಕ್ಕನಾಯಕನಹಳ್ಳಿ,ನ.10: ಮಕ್ಕಳ ಪ್ರತಿಭೆ ಹೊರಹೊಮ್ಮವಂತೆ ಹಾಗೂ ವ್ಯವಹಾರದ ಜ್ಞಾನ ತಿಳಿಯುವಂತೆ ಶಿಕ್ಷಕರು ಉತ್ತಮ ತರಬೇತಿಯನ್ನು ನೀಡಿ ಮಕ್ಕಳ ಭವಿಷ್ಯಕ್ಕೆ ದಾರಿಯಾಗಬೇಕು, ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಹೇಳಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ಭಾಷಾ ವಿಜ್ಞಾನ ಗಣಿತ ಮೇಳ ಹಾಗೂ ಮಕ್ಕಳ ಸಂತೆಯ ವಿಚಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಸಂತೆ ಮೇಳದಿಂದ ಮಕ್ಕಳು ಗಣಿತಾಭ್ಯಾಸ ಕಲಿತು ಮುಂದೆ ಅವರು ನಿರ್ವಹಿಸುವ ವ್ಯವಹಾರಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಲಿದೆ ಎಂದರು.
ತುಮಕೂರು ಡಿ.ಡಿ.ಪಿ.ಐ ಕಚೇರಿಯ ಶಿಕ್ಷಣಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ಉತ್ತಮ ವಿದ್ಯಾಭ್ಯಾವನ್ನು ಮಾಡುವ ಮೂಲಕ ಸೃಜನಶೀಲರಾಗಬೇಕು. ಕೆಲ ಮಕ್ಕಳಿಗೆ ಬರೀ ಓದುವದು ಮಾತ್ರ ತಿಳಿದಿದ್ದು ವ್ಯವಹಾರದ ಜ್ಞಾನವಿರುವುದಿಲ್ಲ ಅಂತಹ ಮಕ್ಕಳಿಗೆ ವ್ಯವಹಾರದ ಕಲಿಕೆಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದ ಅವರು ಪ್ರತಿಯೊಬ್ಬ ವಿದ್ಯಾಥರ್ಿಯು ಸಾಂಸ್ಕೃತಿಕ, ವಿಜ್ಞಾನ, ಗಣಿತ, ಕಲೆಯ ಎಲ್ಲ ವಿಚಾರದಲ್ಲೂ ಮುಂದಿರಬೇಕು ಎಂದರು.
ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳು ವಿದ್ಯಾಬ್ಯಾಸದಿಂದ ಲೋಕದ ಆಗು ಹೋಗುಗಳನ್ನು ತಿಳಿದುಕೊಂಡು ವ್ಯವಹಾರ ಕಲಿಯಬೇಕು ಮತ್ತು ತಮ್ಮ ಬುದ್ದಿಶಕ್ತಿಯಿಂದ ವ್ಯವಹಾರದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಒಳ್ಳೆಯ ವಿಚಾರದಲ್ಲಿ ಸ್ಪೂತರ್ಿ ತುಂಬಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ವಿವಿದ ಶಾಲೆಗಳಿಂದ ಬಂದಿರುವ ಮಕ್ಕಳಿಗೆ ಇಂತಹ ಸಂತೆ ಕಾರ್ಯಕ್ರಮದಿಂದ ಪರಸ್ಪರ ಪರಿಚಯಿಸಿಕೊಂಡು ವಿದ್ಯಾಭ್ಯಾಸಕ್ಕೆ ಮತ್ತು ವ್ಯವಹಾರಕ್ಕೆ ವೇದಿಕೆಯಾಗುತ್ತದೆ ಮತ್ತು ಪೋಷಕರು ತಮ್ಮ ಮನೆಗಳಲ್ಲಿ ಕೆಲವೊಂದು ವಸ್ತುಗಳನ್ನು ತರಿಸಿಕೊಳ್ಳುವ ಮೂಲಕ ಮಕ್ಕಳಿಗೆ ವ್ಯವಹಾರದ ಜ್ಞಾನವನ್ನು ಕಲಿಸಬಹುದು ಎಂದ ಅವರು ವ್ಯವಹಾರದಲ್ಲಿ ಮೇಲು ಮತ್ತು ಕೀಳರಿಮೆ ಇರದೆ ಎಲ್ಲರೂ ಒಂದೇ ರೀತಿಯ ಕೆಲಸ ಮಾಡುವುದರಿಂದ ಉತ್ತಮ ಭಾವನೆಯನ್ನು ಹೊಂದಬೇಕು ಎಂದರು.
ಮಕ್ಕಳ ಸಂತೆಯಲ್ಲಿ ಕಸಬಾ ಹೋಬಳಿಯ 35 ಶಾಲಾ ಮಕ್ಕಳು ಭಾಗವಹಿಸಿದ್ದರು.
ಸಮಾರಮಂಭದಲ್ಲಿ ಅಕ್ಷರ ದಾಸೋಹ ಅಧಿಕಾರಿ ತಿಮ್ಮರಾಜು, ಬಿ.ಆರ್.ಸಿ ಸುಧಾಕರ. ರಾ.ಪ್ರಾ.ಶಿ.ಸಂ ಉಪಾಧ್ಯಕ್ಷೆ ಶೋಭಬಸವರಾಜ, ಪತ್ರಕರ್ತ ಸಿ.ಬಿ.ಲೋಕೇಶ್, ಸಿ.ಆರ್.ಪಿ ಶಶಿಕಲ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿವಕುಮಾರ್ ಸ್ವಾಗತಿಸಿದರೆ ವಿಶ್ವೇಶ್ವರಯ್ಯ ನಿರೂಪಿಸಿ, ಸಿ.ಕೆ.ಪಾಂಡುರಂಗಯ್ಯ ವಂದಿಸಿದರು.


Tuesday, November 9, 2010

ಪರಂಪರಾಕೂಟ ಮತ್ತು ಕನ್ನಡ ರಾಜ್ಯೋತ್ಸವದ ಉದ್ಘಾಟನೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ನ.09: ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಪರಂಪರಾಕೂಟದ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇದೇ 11ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಏರ್ಪಡಿಸಲಾಗಿದೆ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಸಿ.ಜಿ.ಸುರೇಶ್ ತಿಳಿಸಿದ್ದಾರೆ.
ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಪರಂಪರಾಕೂಟದ ಜಿಲ್ಲಾ ಸಂಚಾಲಕ ಡಾ.ಡಿ.ಎನ್.ಯೋಗಿಶ್ ಉದ್ಘಾಟನೆ ನೆರವೇರಿಸಲಿದ್ದು, ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇತಿಹಾಸ ಸಹ ಪ್ರಾಧ್ಯಾಪಕರಾದ ಈರಪ್ಪನಾಯಕ ಡಿ.ಎನ್, ರವೀಂದ್ರವರ್ಮ, ಪರಂಪರಾಕೂಟದ ಸಂಚಾಲಕ ಸಿ.ಜಿ.ಸುರೇಶ್ ಉಪಸ್ಥಿತರಿರುವರು.

Monday, November 8, 2010

Saturday, November 6, 2010





ತಾಲೂಕು ಬಂಜಾರ ಸಂಘದ ಅಧ್ಯಕ್ಷರಾಗಿ ಜಿ.ರಘುನಾಥ್ರ
ಚಿಕ್ಕನಾಯಕನಹಳ್ಳಿ,ನ.04: ತಾಲೂಕು ಬಂಜಾರ ಸಂಘದ ಅಧ್ಯಕ್ಷರಾಗಿ ಜಿ.ರಘುನಾಥ್ರವರು ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ಬಿ.ಸಿ.ನಾಗರಾಜಪ್ಪ, ಪ್ರಧಾನ ಕಾರ್ಯದಶರ್ಿಯಾಗಿ ರಾಮಚಂದ್ರನಾಯ್ಕ, ಖಜಾಂಚಿಯಾಗಿ ಮೂತರ್ಿನಾಯ್ಕ, ಉಪಾಧ್ಯಕ್ಷರಾಗಿ ಮೋತಿನಾಯ್ಕ, ನಾಗರಾಜನಾಯ್ಕ, ಕುಮಾರನಾಯ್ಕ, ಉಮ್ಲನಾಯ್ಕ, ಕರಿಯಾನಾಯ್ಕ, ಪುಟ್ಟೀಬಾಯಿ ಮತ್ತು ಸಂಘಟನಾ ಕಾರ್ಯದಶರ್ಿಯಾಗಿ ಜನಾರ್ಧನನಾಯ್ಕ, ಶಶಿಧರನಾಯ್ಕ, ಲಕ್ಮೀನರಸಿಂಹಸ್ವಾಮಿ, ಜಗದೀಶನಾಯ್ಕ, ಜಂಟಿ ಕಾರ್ಯದಶರ್ಿಯಾಗಿ ರಾಮಕೃಷ್ಣನಾಯ್ಕ, ರಮೇಶನಾಯ್ಕ, ವೇದಮೂತರ್ಿನಾಯ್ಕ ಹಾಗೂ ಕಾನೂನು ಸಲಹೆಗಾರರಾಗಿ ಚಿಕ್ಕಣ್ಣ, ಶಂಕರ್ನಾಯ್ಕ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಪ್ರಕಟಣೆಯಲ್ಲಿ ತಿಳಿ

ಕನಕ ಜಯಂತಿ: ಪೂರ್ವ ಭಾವಿ ಸಭೆ
ಚಿಕ್ಕನಾಯಕನಹಳ್ಳಿ,ನ.06: ತಾಲೂಕು ಮಟ್ಟದ ಭಕ್ತ ಕನಕದಾಸರ ಜಯಂತೋತ್ಸವ ಆಚರಣೆಗಾಗಿ ಇದೇ 7ರ ಭಾನುವಾರ ಬೆಳಿಗ್ಗೆ 11ಕ್ಕೆ ಕನಕ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಇದೇ 24ರಂದು ಆಚರಿಸುವ ಕನಕ ದಾಸರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದ್ದು, ತಾಲೂಕಿನ ಎಲ್ಲಾ ಗುರು ಮಠಗಳ ಗುರುಗಳು, ಗೌಡರು, ಬಳಗ ಬಂಡಾರಿಗಳು, ಕನಕ ಸಂಘಗಳ ಎಲ್ಲಾ ಪದಾಧಿಕಾರಿಗಳು, ನೌಕರ ಬಂಧುಗಳು, ರಾಜಕೀಯ ಮುಖಂಡರುಗಳು, ಸ್ಥಳೀಯ ಸಂಸ್ಥೆಗಳ ಎಲ್ಲಾ ಬಂಧುಗಳು, ಯುವಕ ಮಿತ್ರರು ಹಾಗೂ ಸಮಾಜದ ಬಂಧುಗಳು ಆಗಮಿಸಿ ತಮ್ಮೆಗಳೆಲ್ಲರ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.



ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ಬಿ.ಶಿವನಂಜಪ್ಪನವರಿಗೆ ಅಭಿನಂದನಾ ಸಮಾರಂಭ

ಚಿಕ್ಕನಾಯಕನಹಳ್ಳಿ,ನ.06: ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಬಿ.ಶಿವನಂಜಪ್ಪ ಹಳೇಮನೆರವರಿಗೆ ಅಭಿನಂದನಾ ಸಮಾರಂಭವನ್ನು ಪಟ್ಟಣದ ಡಿ.ಸಿ.ಸಿ ಬ್ಯಾಂಕ್ ಕಟ್ಟಡದ ಮೇಲೆ ಇದೇ 8ರ ಸೋಮವಾರ ಏರ್ಪಡಿಲಾಗಿದೆ.
ಸಮಾರಂಭವನ್ನು ಮಧ್ಯಾಹ್ನ 12ಗಂಟೆಗೆ ಏರ್ಪಡಿಸಿದ್ದು ನಂ.ಹಾ.ಉ.ಪ.ಸ.ಸಂ. ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ ಅಧ್ಯಕ್ಷತೆ ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ರಾಜ್ಯ ಹಾಲು ಮಹಾಮಂಡಳಿ ನಿದರ್ೇಶಕ ಹೆಚ್.ಕೆ.ರೇಣುಕಪ್ರಸಾದ್, ಮುಖ್ಯ ಅತಿಥಿಗಳಾಗಿ ತುಮಕೂರು ಹಾಲು ಒಕ್ಕೂಟ ವ್ಯವಸ್ಥಾಪಕ ಡಿ.ಅಶೋಕ್, ಉಪ ವ್ಯವಸ್ಥಾಪಕ ಡಾ.ಸುಬ್ರಯಭಟ್, ಪಶುವೈಧ್ಯ ರಾಜು, ವಿಸ್ತರಣಾಧಿಕಾರಿಗಳಾದ ಎನ್.ಬಸಪ್ಪ, ಎ.ಪಿ.ಯರಗುಂಟಪ್ಪ ಮತ್ತು ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಕಾರ್ಯದಶರ್ಿ ಮತ್ತು ಸದಸ್ಯರುಗಳು ಉಪಸ್ಥಿತರಿರುವರು.