Saturday, January 22, 2011

ಚಿ.ನಾ.ಹಳ್ಳಿ ಬಂದ್ ಯಶಸ್ವಿ: ಜನ ಸಾಮಾನ್ಯರ ಪರದಾಟ
ಚಿಕ್ಕನಾಯಕನಹಳ್ಳಿ,ಜ.22: ರಾಜ್ಯದ ಬಿ.ಜೆ.ಪಿ ನೀಡಿದ್ದ ದಿಢೀರ್ ಬಂದ್ನಿಂದಾಗಿ ಕಾರ್ಯಕರ್ತರು ರೊಚಿಗೆದ್ದು ಬಸ್ ಒಂದಕ್ಕೆ ಕಲ್ಲು ಹೊಡೆದೆದ್ದಲ್ಲದೆ, ಆರು ಆಟೋಗಳಿಗೆ ಹಾನಿ ಮಾಡಿದ್ದಾರೆ, ವ್ಯಾಪಾರಸ್ಥರಿಗೆ, ಶಾಲಾ-ಕಾಲೇಜು ಮಕ್ಕಳಿಗೆ, ವಿವಿಧ ಕ್ಷೇತ್ರದ ನೌಕರರಿಗೆ ತೊಂದರೆಯಾಗಿರುವುದಲ್ಲದೆ ಬಂದ್ನ ವಿಷಯ ತಿಳಿಯದ ವಾಹನ ಚಾಲಕರು ಜನರನ್ನು ಪ್ರಾಯಣದ ಮಧ್ಯೆದಲ್ಲಿ ಇಳಿಸಿ ಪ್ರಯಾಣಿಕರು ತಿಂಡಿ ಊಟಕ್ಕೆ ಪರದಾಡುವಂತಹ ಸ್ಥಿತಿ ನಿಮರ್ಾಣವಾಯಿತು.
ಮುಂಜಾನೆಯಿಂದ ಆರಂಭಗೊಂಡ ಬಂದ್ನಿಂದ ಬಿ.ಜೆ.ಪಿ. ಕಾರ್ಯಕರ್ತರು ಬಿ.ಎಚ್.ರಸ್ತೆಯಲ್ಲಿ ಒಂದು ಸುತ್ತು ಪ್ರದಕ್ಷಣೆ ಬಂದು, ಹೊಟೇಲ್, ಪೆಟ್ಟಿಗೆ ಅಂಗಡಿಗಳನ್ನು ಬಂದ್ ಮಾಡಿಸಿದರು. ನಂತರ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಕಾರ್ಯದಶರ್ಿ ಸುರೇಶ್ ಹಳೇಮನೆ, ಜಿ.ಪಂ.ಸದಸ್ಯ ಪಂಚಾಕ್ಷರಯ್ಯ ಮಾಜಿ ಅಧ್ಯಕ್ಷರುಗಳಾದ ರಾಜಣ್ಣ, ಶ್ರೀನಿವಾಸಮೂತರ್ಿ ಹಾಗೂ ಬಿ.ಜೆ.ಪಿ ಮುಖಂಡರುಗಳಾದ ಮೈಸೂರಪ್ಪ, ತಮ್ಮಡಿಹಳ್ಳಿ ಸೋಮಶೇಖರ್ ಸೇರಿದಂತೆ ಹಲವರು ಮೆರವಣಿಗೆ ನಡೆಸಿದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ, ರಾಜ್ಯ ಪಾಲರು ಸಕರ್ಾರದ ಪ್ರತಿನಿಧಿಯಂತೆ ನಡೆಯಬೇಕಾಗಿತ್ತು ಆದರೆ ದುರಾದೃಷ್ಟವಶಾತ್ ವಿರೋಧ ಪಕ್ಷದ ನಾಯಕರಂತೆ ವತರ್ಿಸುತ್ತಿರುವುದು ಸಂವಿಧಾನಕ್ಕೆ ಅಪಮಾನವೆಸಗಿದಂತೆ ಎಂದರಲ್ಲದೆ, ರಾಜ್ಯಪಾಲರಾದ ಹಂಸರಾಜ್ ಭಾರಧ್ವಜ್ ಹಂಸದ ರೀತಿ ಒಳ್ಳೆಯದನ್ನು ತೆಗೆದುಕೊಳ್ಳಬೇಕು, ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳುತ್ತದೆ ಎಂದರು.
ಬಂದ್ನಿಂದ ಪರದಾಡಿದ ಜನ ಸಾಮಾನ್ಯರ ಅಳಲು: ಬೆಳಗ್ಗೆ ದಿಡೀರ್ ಬಂದ್ನಿಂದ ಹಲವು ಊರುಗಳಿಂದ ತಮ್ಮ ಕೆಲಸ ಕಾರ್ಯಗಳಿಗೆ ಬಂದಿದ್ದ ಜನಸಾಮಾನ್ಯರು ವಾಹನಗಳಿಗಾಗಿ ಕಾಯುತ್ತಾ ಬಸ್ಸ್ಟಾಪ್ನಲ್ಲೇ ಕುಳಿತರು. ತಮ್ಮ ಊರುಗಳಿಗೆ ವಾಪಾಸ್ ಆಗಲು ಆಗದೆ ಪರದಾಡುತ್ತಿದ್ದ ಜನರನ್ನು ಪತ್ರಿಕೆ ಸಂದಶರ್ಿಸಿದಾಗ ಇವರ ಕುಚರ್ಿ ಉಳಿಸಿಕೊಳ್ಳುವುದಕ್ಕಾಗಿ ಬಂದ್ನ ನೆಪವೊಡ್ಡಿ ಜನರಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತಿದ್ದಾರೆ'. ತಮ್ಮ ಸಂಬಂಧಿಕರೊಬ್ಬರ ತಿಥಿಗಾಗಿ ಧವಸ ದಾನ್ಯಗಳನ್ನು ಬೇರೊಂದು ಸ್ಥಳಕ್ಕೆ ಕೊಂಡೊಯ್ಯಬೇಕಿತ್ತು ಆದರೆ ಬಂದ್ನಿಂದಾಗಿ ಇಲ್ಲೇ ವಾಸ್ತವ್ಯ ಹೂಡಬೇಕಾಗಿದೆ, ಇದರಿಂದ ನನ್ನ ಬರುವಿಕೆಗಾಗಿ ಕಾಯುತ್ತಿರುವ ಸಂಬಂದಿಕರು ತಿಥಿಗಾಗಿ ಪರದಾಡುತ್ತಿದ್ದಾರೆ ಎಂದು ರಂಗನಾಥ್ ಎಂಬ ವ್ಯಕ್ತಿ ಹೇಳಿದರೆ, ಸೊಪ್ಪನ್ನು ಮಾರಲು ಪಟ್ಟಣಕ್ಕೆ ಹೋಗಬೇಕಾಗಿತ್ತು ಆದರೆ ಬಂದ್ ನಿಂದ ಇಲ್ಲೇ ವಾಸ್ತವ್ಯ ಹೂಡಿದ್ದು ಸೊಪ್ಪ ಸಂಜೆ ವೇಳೆಗೆ ಒಣಗುತ್ತದೆ ನಮ್ಮ ಜೀವನ ನಡೆಯುವುದೇ ಈ ಸೊಪ್ಪಿನಿಂದ ಇದಕ್ಕೆಲ್ಲ ಯಾರು ಹೊಣೆಗಾರರೆಂದು ಮೊಹಬೂಬಿರವರು ಪ್ರಶ್ನಿಸಿದರು.
ಇದೇ ಸಮಯದಲ್ಲಿ ಬಂದ್ನ ವಿಷಯ ತಿಳಿಯದ ಆಟೋ ಚಾಲಕನೊಬ್ಬ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಕಿಡಿಗೇಡಿಗಳು ಆಟೋವನ್ನು ಜಖಂಗೊಳಿಸಿದ್ದಾರೆ. ಇದರ ವಿರುದ್ದ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತು ಕನರ್ಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಸಾರ್ವಜನಿಕರಿಗೆ ಬಂದ್ನ ಬಗ್ಗೆ ಮುಂಚಿತವಾಗಿ ಸರಿಯಾದ ಮಾಹಿತಿ ನೀಡದೆ ಏಕಾಏಕಿ ಬಂದ್ ಏರ್ಪಡಿಸಿದ್ದಾರೆ, ಇದರಿಂದ, ಸಾರ್ವಜನಿಕ ಆಸ್ತಿಯ ನಷ್ಠಕ್ಕೆ ಯಾರು ಜವಾಬ್ದಾರಿಯಾಗುತ್ತಾರೆಂದು ಸಕರ್ಾರದ ವಿರುದ್ದ ಕಿಡಿಕಾರಿದರು.

ಮಹಿಳೆಯರು ಕೌಟಂಬಿಕವಾಗಿ ನೆಮ್ಮದಿಯಿಂದಿದ್ದರೆ ಜೀವನ ಮೌಲ್ಯ ಅರ್ಥ ಪೂರ್ಣ
ಚಿಕ್ಕನಾಯಕನಹಳ್ಳಿ,ಜ.22: ಮಹಿಳೆಯರು ಸಾಮಾಜಿಕವಾಗಿ ಕುಟುಂಬಗಳಲ್ಲಿ ಶಾಂತಿ ಮತ್ತು ನೆಮ್ಮದಿ ಜೀವನ ಹೊಂದಿದಾಗ ಮಾತ್ರ ಜೀವನದ ಮೌಲ್ಯ ಅರ್ಥಪೂರ್ಣವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಹೇಳಿದರು.
ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ನಡೆದ ಮಹಿಳೆಯರ ಕೌಂಟುಂಬಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆಯ ಕಾನೂನು ಅರಿವು ನೆರವು ಕಾರ್ಯಗಾವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರ ಮೇಲೆ ನಡೆಯುತ್ತಿರುವ ಕೌಟುಂಬಿಕ ಹಿಂಸೆ ತಡೆಯಲು ಮಹಿಳೆಯರು ಕಾನೂನಿನ ಅರಿವು ತಿಳಿಯುವುದು ಒಳಿತು ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಹಿಳೆಯರು ಕಾನೂನು ಅರಿವು ಪಡೆಯುವುದು ಬಹುಮುಖ್ಯ ಕುಟುಂಬದಲ್ಲಿ ಮಹಿಳೆಯರ ಪಾತ್ರ ಜವಾಬ್ದಾರಿಯುತವಾಗಿದ್ದು ಸಮಾಜದ ಪಿಡುಗುಗಳಾದ ವರದಕ್ಷಿಣೆ, ಬಾಲ ಕಾಮರ್ಿಕತೆ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ಮುಂತಾದ ಮೂಡನಂಭಿಕೆಯನ್ನು ತೊರೆದು ಕಾನೂನಿನ ಅರಿವು ಪಡೆಯಲು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ ಕೈಸರ್ ಮಾತನಾಡಿ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಯಾರು ಸಹಾ ಸಮಸ್ಯೆಗೆ ಹೆದರದೇ ಸಮಸ್ಯೆಯನ್ನು ಹೆದರಿಸಿ ಬದುಕಬೇಕು ಎಂದ ಅವರು ಕಾನೂನಿನ ಅರಿವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತೆ ಹೇಳಿದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಎನ್.ಶೀಲ, ವಕೀಲರಾದ ಗೋಪಾಲಕೃಷ್ಣ, ಮಹಾಲಿಂಗಯ್ಯ, ಹೆಚ್.ಎಸ್.ಚಂದ್ರಶೇಖರಯ್ಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ, ಟಿ.ದಯಾನಂದ್, ಕೆ.ಎಲ್.ಭಾಗ್ಯಲಕ್ಷ್ಮೀ, ನಾರಾಯಣರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಂ.ಎಸ್.ಮಹದೇವಮ್ಮ ಪ್ರಾಥರ್ಿಸಿದರೆ,ಕೆ.ಎಂ.ರಾಜಶೇಖರಪ್ಪ ಸ್ವಾಗತಿಸಿ, ಕೆ.ಎಂ.ಷಡಾಕ್ಷರಿ ನಿರೂಪಿಸಿ, ಕೆ.ಸಿ.ವಿಶ್ವನಾಥ್ ವಂದಿಸಿದರು.

ಮಹಿಳೆಯರನ್ನು ಕೆ.ಕೆ.ಜಿ.ಬ್ಯಾಂಕ್ ಆಥರ್ಿಕವಾಗಿ ಸಬಲಗೊಳಿಸುತ್ತಿದೆ
ಚಿಕ್ಕನಾಯಕನಹಳ್ಳಿ,ಜ.22: ಮಹಿಳೆ ಸಾಮಾಜಿಕ, ಆಥರ್ಿಕ ಹಾಗೂ ರಾಜಕೀಯದ ಎಲ್ಲಾ ಕ್ಷೇತ್ರಗಳಲ್ಲಿ ಪುರಷರಿಗಿಂತ ಮೇಲುಗೈ ಸಾಧಿಸುತ್ತಿದ್ದು ಮಹಿಳೆಯರು ಸಬಲೆಯಾಗಿ ಪ್ರತಿ ಕ್ಷೇತ್ರದಲ್ಲೂ ಮುನ್ನುಗುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪನಿದರ್ೇಶಕರಾದ ಚಿದಾನಂದ್ ತಿಳಿಸಿದರು.
ತಾಲೂಕಿನ ಕಂದಿಕೆರೆಯ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ನೂತನ ಕಟ್ಟಡದ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡುವ ಸಲುವಾಗಿ ನಮ್ಮ ಇಲಾಖೆ ಸ್ತ್ರೀ ಶಕ್ತಿ ಭವನವನ್ನು ಎಲ್ಲಾ ತಾಲೂಕುಗಳಲ್ಲಿ ಸ್ಥಾಪಿಸಲಾಗಿದೆ ಎಂದರು.
ನಬಾಡರ್್ನ ಸಹಾಯಕ ವ್ಯವಸ್ಥಾಪಕ ಜಿ.ಅನಂತಕೃಷ್ಣ ಮಾತನಾಡಿ ಕೋರ್ ಬ್ಯಾಂಕಿಂಗ್ನ ಅನುಕೂಲಗಳ ಬಗ್ಗೆ ಮಾತನಾಡುತ್ತ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಸಾಲ ಸೌಲಭ್ಯ ನೀಡುವಲ್ಲಿ ನಮ್ಮ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಲೋಹಿತಬಾಹಿ ಮಾತನಾಡಿ ಬ್ಯಾಂಕ್ ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಸಾಕಷ್ಟು ಸಾಲ ಸೌಲಭ್ಯ ನೀಡಿದೆ ಆದರೆ ಖಾತೆದಾರರು ಸರಿಯಾದ ವೇಳೆಗೆ ನೀಡಿರುವ ಸಾಲವನ್ನು ಮರುಪಾವತಿ ಮಾಡಬೇಕೆಂದು ಕೋರಿದರು.
ಕಾವೇರಿ ಕಲ್ಪತರು ಬ್ಯಾಂಕ್ ಮ್ಯಾನೇಜರ್ ಪಿ.ಎನ್.ಸ್ವಾಮಿ ಮಾತನಾಡಿ ಕಂದಿಕೆರೆಯ 180ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ 2.50ಕೋಟಿಗೂ ಹೆಚ್ಚು ಸಾಲ ನೀಡಿದ್ದು ಗ್ರಾಮೀಣ ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯೆ ಉಮಾದೇವಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷ ಜಯಣ್ಣ, ತಾ.ಪಂ.ಮೇನೇಜರ್ ನರಸಿಂಹಯ್ಯ, ಪಿಡಿ.ಓ ಶಿವಕುಮಾರ್, ವ್ಯವಸ್ಥಾಪಕ ಆರ್.ಎಮ್.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೆ.ಮಾಧವ್ ಸ್ವಾಗತಿಸಿ, ಕೆ.ಜಿ.ಪ್ರಭಾಕರ್ ನಿರೂಪಿಸಿ, ಚಂದ್ರಶೇಖರ್ ವಂದಿಸಿದರು.

ನವಚೇತನ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಜ.22: ನವಚೇತನ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭವನ್ನು ಇದೇ 24ರ ಸೋಮವಾರ ಬೆಳಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಸಮಾರಂಭವನ್ನು ಸಂಘದ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ನ.ಪ.ಸ.ಸಂ.ಅಧ್ಯಕ್ಷ ಸಿ.ಪಿ.ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿ.ಕೇ.ಸ.ಬ್ಯಾಂಕ್ನ ಅಧ್ಯಕ್ಷ ಕೆ.ಎನ್.ರಾಜಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ.ಬಿ.ಕೆ.ರವಿ ಸಹಾಕರ ಸಂಘಗಳ ಉಪನಿದರ್ೇಶಕ ರಂಗಸ್ವಾಮಿ, ನವಚೇತನ ಪ.ಸ.ಸಂ. ಮಾಜಿ ಅಧ್ಯಕ್ಷರಾದ ಸಿ.ಎಸ್.ರಾಜಣ್ಣ, ಚಿ.ನಿ.ಪುರಷೋತ್ತಮ್ ಉಪಸ್ಥಿತರಿರುವರು.

Friday, January 21, 2011

ದಾಸ್ಯ ಗುಲಾಮಗಿರಿಯ ಬದ್ದ ವೈರಿ ವಿವೇಕಾನಂದ
ಚಿಕ್ಕನಾಯಕನಹಳ್ಳಿ,ಜ.21: ಕಾಲೇಜು ಮಟ್ಟದಲ್ಲಿನ ಯುವಕರ ಚಲ, ಹುಮ್ಮಸ್ಸಿನ ಹೋರಾಟವನ್ನು ನಮ್ಮ ದೇಶವನ್ನು ಕಟ್ಟುವುದಕ್ಕಾಗಿ ಉಪಯೋಗಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಯುವಕರಿಗೆ ಕರೆ ನೀಡಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕೇವಲ ಮಾತಿನಿಂದ ಈಡೀ ವಿಶ್ವವನ್ನೇ ಗೆದ್ದ ಸ್ವಾಮಿ ವಿವೇಕಾನಂದರು, ಮೊದಲು ತಮ್ಮನ್ನು ತಾನು ಗೆಲ್ಲುತ್ತಿದ್ದರು ಈ ರೀತಿ ಯುವಕರು ತಮ್ಮ ಸ್ವಂತಿಕೆ ಗೆಲ್ಲಲು ಮುಂದಾಗಬೇಕು ಯುವಕರು ಮುಂದಿನ ಗುರಿಗಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು ಎಂದ ಅವರು ಅಭಾವಿಪ ದೇಶ ಭಕ್ತ ವಿದ್ಯಾಥರ್ಿ ಸಂಘಟನೆಯಾಗಿದ್ದು ಸಂಘಟನೆಯ ಶಿಸ್ತು ಉತ್ತಮ ಕೆಲಸಕ್ಕೆ ಉಪಯೋಗವಾಗುತ್ತಿದೆ ಎಂದರು
ಉಪನ್ಯಾಸಕ ರವೀಶ್ ಮಾತನಾಡಿ ಕೇವಲ ಪರೀಕ್ಷೆಗಳ ಅಂಕಗಳಿಗಾಗಿ ಮಾತ್ರ ಶಿಕ್ಷಣವಲ್ಲ, ಸಮಾಜ ಅಭಿವೃದ್ದಿಗೆ ಪೂರಕವಾಗುವಂತಹ ಶಿಕ್ಷಣವನ್ನು ವಿದ್ಯಾಥರ್ಿಗಳು ಪಡೆಯಬೇಕು ಎಂದ ಅವರು, ಭಯೋತ್ಪಾದನೆಯಂತಹ ಹೀನ ಕೃತ್ಯಗಳಿಗೆ ಯುವಕರು ಒಳಗಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳು ಮಡಿಕೊಳ್ಳುತ್ತಿದ್ದಾರೆ ಇದರಿಂದ ದೇಶದ ಕೀತರ್ಿ, ಸಾಂಸ್ಕೃತಿಕತೆ ಹಾಳಾಗುವುದಲ್ಲದೆ ದೇಶದ ಕೀತರ್ಿಗೂ ಮಂಕು ಬಳಿದಂತಾಗುತ್ತದೆ ಎಂದರು. ವಿವೇಕಾನಂದರಂತಹ ಮಹಾನ್ ದಾರ್ಶನಿಕರು ಮತ್ತೊಮ್ಮೆ ಹುಟ್ಟಿ ಬರಬೇಕೆಂದ ಅವರು, ಭಾರತವನ್ನು ಎಲ್ಲಾ ದೇಶಗಳು ಕೀಳರಿಮೆಯಿಂದ ಕಾಣುತ್ತಿದ್ದ ಸಮಯದಲ್ಲಿ ತನ್ನ ಜಾಣ್ಮೆಯಿಂದಲೇ ದೇಶದ ಕೀತರ್ಿಯನ್ನು ಬೆಳಗುತ್ತಿದ್ದರು ಎಂದರು. ವಿವೇಕಾನಂದರು ದಾಸ್ಯ, ಗುಲಾಮಗಿರಿಯನ್ನು ಕಿತ್ತೊಗೆಯಲು ಸ್ವತಂತ್ರಕ್ಕಾಗಿ ಹೋರಾಡುವ ವ್ಯಕ್ತಿಯನ್ನು ತಯಾರಿ ಮಾಡುಲು ಹಂಬಲಿಸುತ್ತಿದ್ದರು ಎಂದರು.
ನಗರ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸಾವಿರಾರು ವಿದ್ಯಾಥರ್ಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ತು.ಹಾ.ಒ.ಅಧ್ಯಕ್ಷ ಶಿವನಂಜಪ್ಪ ಹಳೇಮನೆ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ. ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್, ಪ್ರಾಂಶುಪಾಲ ಶಿವಕುಮಾರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಭಾವಿಪ ಕಾರ್ಯಕರ್ತರಾದ ನಗರ ಸಹ ಕಾರ್ಯದಶರ್ಿ ದಿಲೀಪ್ ಸ್ವಾಗತಿಸಿದರೆ, ವಿಜಯ್ ನಿರೂಪಿಸಿ, ಮನೋಹರ್ ವಂದಿಸಿ, ಕಾರ್ಯರ್ತರಾದ ರವಿ, ಮಧು, ಜಯರಾಜ್, ನವೀನ್, ಗುರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.21: 2010-11ನೇ ಸಾಲಿನ ಸಕರ್ಾರಿ, ಖಾಸಗಿ, ಅನುದಾನ, ಅನುದಾನ ರಹಿತ ಪ್ರೌಡಶಾಲಾ ವಿದ್ಯಾಥರ್ಿಗಳಿಗೆ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಶಾಲೆಯಿಂದಾ 2 ವಿದ್ಯಾಥರ್ಿಗಳ 1 ತಂಡ ಈ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವುದು ಹಾಗೂ ಈ ಪರೀಕ್ಷಾ ಕಾರ್ಯಕ್ಕೆ ಒಬ್ಬರು ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿ ನಿಯೋಜಿಸಲು ಎಲ್ಲಾ ಪ್ರೌಡಶಾಲೆಗಳ ಮುಖ್ಯ ಶಿಕ್ಷಕರಿಗೆ ತಿಳಿಸಿದ್ದಾರೆ.
ಸಾಕ್ಷಾರ ಮಿತ್ರರಿಗೆ ತರಬೇತಿ
ಚಿಕ್ಕನಾಯಕನಹಳ್ಳಿ,ಜ.21: ತಾಲೂಕಿನಲ್ಲಿರವ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಕ್ಷರ ಭಾರತ್ 2012ನ್ನು ಅನುಷ್ಠಾನ ಗೊಳಿಸಲು ಇದೇ 25ರಂದು ಬೆಳಗ್ಗೆ 10 ಗಂಟೆಗೆ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಲಾಗಿದೆ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ದಯಾನಂದ್ ತಿಳಿಸಿದ್ದಾರೆ.
ಜಿಲ್ಲಾ ಲೋಕ ಶಿಕ್ಷಣ ಸಮಿತಿ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿಯವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅಧ್ಯಕ್ಷರುಗಳು ಶಿಬಿರದಲ್ಲಿ ಭಾಹವಹಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಚಿ.ತಾ.ಮೂ.ಗೆಳೆಯರ ಒಕ್ಕೂಟದ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.21: ಬೆಂಗಳೂರಿನ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಒಕ್ಕೂಟ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 23ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಂಗಣದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದು ಬಿ.ಬಿ.ಎಂ.ಪಿ ಸೂಪರಿಟೆಂಡೆಂಟ್ ಎಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ಸಮಾರಂಭ ಉದ್ಘಾಟಿಸಿಲಿದ್ದು ಚಿ.ನಾ.ಹಳ್ಳಿ ತಾ.ಮೂ.ಗೆ.ಬಳಗದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಸುಜಯ ಮಹಲಿಂಗಪ್ಪ, ವಕೀಲ ಎಸ್.ಹನುಮಂತಯ್ಯ, ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್. ಎಚ್.ಎಸ್.ಶಿವಲಿಂಗಯ್ಯ, ಕ.ಪ್ರ.ಜನತಾದಳ ಕಾರ್ಯದಶರ್ಿ ರಮೇಶ್ಬಾಬು, ಚಾಟರ್್ರ್ಡ್ ಅಕೌಂಟೆಂಟ್ ಹೆಚ್.ಸಿ.ಗುರುದತ್, ಸಿವಿಲ್ ಗುತ್ತಿಗೆದಾರ ಸಿ.ಎನ್.ಎಸ್.ಮೂತರ್ಿ, ಸಬ್ರಿಜಿಸ್ಟಾರ್ ಶ್ರೀದೇವಿರಾಮಯ್ಯ, ಆಕರ್ಿಟೆಕ್ಟ್ ಉದಯ್ಕುಮಾರ್, ವಿಜ್ಞಾನಿ ಎಸ್.ಎನ್.ರಾಮಯ್ಯ ಉಪಸ್ಥಿತರಿರುವರು.
ಕುಷ್ಠರೋಗ ಕಂಡುಬಂದರೆ ಉಚಿತ ಚಿಕಿತ್ಸೆಗಾಗಿ ಆರೋಗ್ಯಾಧಿಕಾರಿಗಳನ್ನು ಸಂಪಕರ್ಿಸಲು ಮನವಿ
ಚಿಕ್ಕನಾಯಕನಹಳ್ಳಿ.ಜ.21: ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ ಇದು ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಕಡಿತ, ನವೆ ಇಲ್ಲದ ಮಚ್ಚೆಗಳೇ ಕುಷ್ಠರೋಗ ಇರಬಹುದು. ಇದು ಮೈಕೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ಕ್ರಿಮಿಯಿಂದ ಬರುತ್ತದೆ. ಇದು ಪಾಪಕರ್ಮಗಳಿಂದ ಬರುವುದಿಲ್ಲ ಮತ್ತು ವಂಶ ಪಾರಂಪರ್ಯವಲ್ಲ, ಜನ್ಮತ ಯಾರೂ ಕುಷ್ಟರೋಗಿಗಳಾಗಿ ಹುಟ್ಟುವುದಿಲ್ಲ. ಈ ರೋಗವು ಯಾರಿಗಾದರೂ ಯಾವ ವಯಸ್ಸಿನಲ್ಲಾದರೂ ಬರಬಹುದು. ಕುಷ್ಠರೋಗದ ಲಕ್ಷಣಗಳು ಕಂಡು ಬಂದ ಮೇಲೆಯಾದರೂ ಚಿಕಿತ್ಸೆ ಪಡೆಯದೇ ಹೋದಲ್ಲಿ ಅಂಗವಿಕಲತೆ ಉಂಟಾಗಬಹುದೇ ಹೊರತು ರೋಗದಿಂದ ಅಂಗವಿಕಲತೆ ಬರುವುದಿಲ್ಲ ಕುಷ್ಠರೋಗದ ಬಗ್ಗೆ ಸಲಹೆ ಮತ್ತು ಉಚಿತ ಚಿಕಿತ್ಸೆಗಾಗಿ ನಿಮ್ಮ ಹತ್ತಿರದ ಸಕರ್ಾರಿ ಆಸ್ಪತ್ರೆಗಳಲ್ಲಿ ಮತ್ತು ಸಿಬ್ಬಂದಿ ವರ್ಗದವರನ್ನು ಸಂಪಕರ್ಿಸಬಹದು ಎಂದು ತಾಲೂಕು ಆರೋಗ್ಯಾಧಿಕಾರಿಗಳ ಸಂಪಕರ್ಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿ ಕೊಂಡಿರುತ್ತಾರೆ.

Thursday, January 20, 2011

ಪುರಸಭಾ ಆಡಳಿತ ಪಕ್ಷದ ಸದಸ್ಯನಿಗೆ ಕಪಾಳ ಮೋಕ್ಷ
ಚಿಕ್ಕನಾಯಕನಹಳ್ಳಿ,ಜ.19: ಇಲ್ಲಿನ ವಿರೋಧ ಪಕ್ಷದ ಸದಸ್ಯರೊಬ್ಬರು ಆಡಳಿತ ಪಕ್ಷದ ಸದಸ್ಯರಿಗೆ ಕಪಾಳ ಮೋಕ್ಷ ಮಾಡಿದ ಪೂರ್ಣ ಸರಿಹೊಂದಿಸುಅಪರೂಪದ ಘಟನೆ ನಡೆಯಿತು.
ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಂತಹ ಅಪರೂಪದ ಘಟನೆ ಕಪ್ಪು ಚುಕ್ಕಿಯಾಗಿ ಉಳಿಯಿತು. ಸಭೆಯ ಅಜಾಂಡಾದಲ್ಲಿ ಸೇರ್ಪಡೆಯಾಗದಿರುವ ಆಶ್ರಯದ ಸಮಿತಿಯ ಹಕ್ಕು ಮತ್ತು ಜವಬ್ದಾರಿಯ ಬಗ್ಗೆ ಬಂದ ವಿಷಯದ ಮೇಲೆ ವಿರೋಧ ಪಕ್ಷವಾದ ಕಾಂಗ್ರೆಸ್ನ ಸಿ.ಬಸವರಾಜು ಮಾತನಾಡುತ್ತಾ, ನಾವು ಚುನಾಯಿತರಾಗುವ ಮುನ್ನ ಜನರಿಗೆ ಸೈಟ್ ಕೊಡಿಸುತ್ತೇವೆ, ಮನೆ ಕೊಡಿಸುತ್ತೇವೆ ಎಂದೆಲ್ಲಾ ಭರವಸೆ ನೀಡಿ ಗೆದ್ದು ಬಂದಿರುತ್ತೇವೆ. ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಜವಬ್ದಾರಿ ನಮ್ಮದು, ಆದರೆ ಆಶ್ರಯ ಸಮಿತಿಯಲ್ಲಿ ನಮ್ಮ ಮಾತು ನಡೆಯದಿದ್ದರೆ ಹೇಗೆ ?. ಆ ಸಮಿತಿಯಲ್ಲಿ ಶಾಸಕರು ತಹಶೀಲ್ದಾರ್ ಪುರಸಭಾ ಅಧ್ಯಕ್ಷರು ಅಷ್ಟೇ ಜನರು ನಿಧರ್ಾರ ತೆಗೆದುಕೊಂಡರೆ ಹೇಗೆ ನಮ್ಮ ಮಾತಿಗೂ ಅಲ್ಲಿ ಬೆಲೆ ಇರಬೇಕು, ಆಗಾಗಿ ಆಶ್ರಯ ಸಮಿತಿ ಸಭೆ ಸೇರುವುದಕ್ಕಿಂತ ಮೊದಲು ಶಾಸಕರು ಮತ್ತು ಪುರಸಭಾ ಅಧ್ಯಕ್ಷರು ಸದಸೆರೆಲ್ಲರ ಸಭೆ ಕರೆದು ಸಭೆಯಲ್ಲಿ ಪ್ರತಿ ವಾಡರ್್ಗೆ ಇಂತಿಷ್ಟು ಸೈಟ್ಗಳೆಂದು ಎತ್ತಿಡಿ, ನಾವು ಫಲಾನುಭವಿಗಳ ಪಟ್ಟಿ ಕೊಡುತ್ತೇವೆ, ನಮ್ಮ ಈ ಸಭೆಯಲ್ಲಿ ಸಿದ್ದ ಪಡಿಸಿದ ಪಟ್ಟಿಯನ್ನು ಪುರಸಭಾಧ್ಯಕ್ಷರು ಆಶ್ರಯ ಸಮಿತಿಯ ಸಭೆಯಲ್ಲಿ ಮಂಡಿಸಲಿ ಸಭೆ ಅದಕ್ಕೆ ಅನುಮೋದನೆ ನೀಡಿದರೆ ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಂತಾಗುತ್ತದೆ ಎಂದು ಕಾಂಗ್ರೆಸ್ನ ಸದಸ್ಯ ಸಿ.ಬಸವರಾಜು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ ಹಾಗೂ ಕೆಲವು ಆಡಳಿತ ಪಕ್ಷದ ಸದಸ್ಯರು ಸಭೆಯ ಗಮನಕ್ಕೆ ತಂದರು ಈ ಸಂದರ್ಭದಲ್ಲಿ ಜೆ.ಡಿ.ಯುನ ಸದಸ್ಯ ಸಿ.ಡಿ.ಚಂದ್ರಶೇಖರ್ ತನ್ನ ಕುಚರ್ಿಯಿಂದ ಎದ್ದು ಬಂದು ನೇರ ಅಧಿಕಾರಿ ವರ್ಗ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದ ಟೇಬಲ್ ಬಳಿ ಬಂದು, ಎಲ್ರಿ ಕೊಡ್ರಿ ಇಲ್ಲಿ ಆಶ್ರಯ ಸಮಿತಿ ನಡಾವಳಿ ಪುಸ್ತಕವನ್ನು ಎನ್ನುತ್ತಲೆ ಪುಸ್ತಕವನ್ನು ತೆಗೆದು ಎತ್ತಿ ತೋರಿಸಿದರು. ಮತ್ತೋರ್ವ ಕಾಂಗ್ರೆಸ್ ಸದಸ್ಯ ಸಿ.ಪಿ ಮಹೇಶ್ ಈ ಪುಸ್ತಕದಲ್ಲಿ ಸಮಿತಿಯಲ್ಲಿದ್ದವರ್ಯಾರು ಸಹಿಯನ್ನೇ ಹಾಕಿಲ್ಲ ನೋಡಿ ಎಂದು ತೋರಿಸಿದರು.
ಈ ಸಮಯಕ್ಕೆ ಸರಿಯಾಗಿ ಅಧ್ಯಕ್ಷರ ಟೇಬಲ್ ಬಳಿ ಇದ್ದ ಇನ್ನೊಂದು ನಡಾವಳಿ ಪುಸ್ತಕವನ್ನು ಕೈಗೆತ್ತಿಕೊಂಡ ಆಡಳಿತ ಪಕ್ಷದ ಸದಸ್ಯ ಎಂ.ಎನ್.ಸುರೇಶ್ ಈ ಪುಸ್ತಕದಲ್ಲಿ ಸಹಿ ಇದೆ ನೋಡಿ ಎನ್ನುತ್ತಾ ಇನ್ನೊಂದು ಪುಸ್ತಕವನ್ನು ಎತ್ತಿ ತೋರಿಸುತ್ತಾ ರೀ ಅಧ್ಯಕ್ಷಕರೆ ಸದಸ್ಯರಿಗೆ ಸರಿಯಾಗಿ ಮಾಹಿತಿ ಕೊಡಿ ಎನ್ನುವ ಮಾತು ಪ್ರೆಸ್ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ರಕರ್ತರಾದಿಯಾಗಿ ಮುಂದೆ ಕುಳಿತಿದ್ದವರಿಗೆ ಕೇಳಿಸಿದ ಮಾತು.
ಆದರೆ ವಿರೋಧ ಪಕ್ಷದವರ ಕಡೆ ಕುಳಿತಿದ್ದ ನಾಮಿನಿ ಸದಸ್ಯರೊಬ್ಬರು ಕುರಿ ಕಾಯೋರಿಗೆ ಅಧ್ಯಕ್ಷಗಿರಿ ಕೊಟ್ರೆ ಹೀಗೆ ಎಂದು, ಸುರೇಶ್ ಹೇಳಿದರು ಎಂದು ಚಿತಾವಣೆ ಮಾಡಿ ಸಿ.ಬಸವರಾಜು ಸಿಟ್ಟಿಗೇಳುವಂತೆ ಮಾಡಿದರು. ಈ ಹಂತದಲ್ಲಿ ಕುಪಿತರಾದ ಸಿ.ಬಸವರಾಜು ನಿನ್ನ ಅಧ್ಯಕ್ಷ ಮಾಡಿದವರು ಕುರಿಕಾಯೋರು ಗೊತ್ತಾ! ನಮಗೆ ಆದೇಶ ನೀಡಲು ಬರುತ್ತೀಯ ಎನ್ನುತ್ತಲೇ ಸುರೇಶ್ ಮೇಲೆ ಎರಗಿ ಕಪಾಳಕ್ಕೆ ಒಂದು ತಟ್ಟೆ ಬಿಟ್ರು, ಈ ಸಂದರ್ಭದಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷದವರು ಕೆಲಕಾಲ ವಾದ ವಿವಾದ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ಎರಡೂ ಪಕ್ಷದವರನ್ನು ಸಮಾಧಾನ ಪಡಿಸಿದರು. ಈ ಸಭೆಯ ಅಜಾಂಡದಲ್ಲಿ ಇಲ್ಲದ ವಿಷಯ ಚಚರ್ಿಸೋದು ಬೇಡ ಮುಂದಿನ ದಿನ ಈ ವಿಷಯವಾಗಿ ಚಚರ್ಿಸೋಣ ಎಂದು ಎಲ್ಲರನ್ನು ಸಮಾಧಾನಿಸಿ ಸಭೆ ನಡೆಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್ ವಿರೋಧ ಪಕ್ಷದ ಬಾಬು ಸಾಹೇಬ್, ನಾಮಿನಿ ಸದಸ್ಯರುಗಳು ಇಂತಹ ದುರ್ಘಟನೆಗೆ ಸಾಕ್ಷಿಯಾಗಿದ್ದರು.


Tuesday, January 18, 2011

Monday, January 17, 2011





ಕುವೆಂಪುರವರಿಗೆ ಶಿಕ್ಷಣ, ವಿವಾಹ, ಕೆಲಸ, ಎಲ್ಲವನ್ನು ನೀಡಿದ್ದು ರಾಮಕೃಷ್ಣಾಶ್ರಮ: ವಿರೇಶನಂದಜೀ.
ಚಿಕ್ಕನಾಯಕನಹಳ್ಳಿ,ಜ.17: ರಾಷ್ಟ್ರ ಕವಿ ಕು.ವೆಂ.ಪು.ರವರಿಗೆ ವಿದ್ಯಾಭ್ಯಾಸವನ್ನು ಕೊಡಿಸಿ, ಕೆಲಸಕ್ಕೆ ಸೇರಿಸಿದ್ದು, ಅವರ ವಿವಾಹವನ್ನು ಮಾಡಿಸಿದ್ದು ಮೈಸೂರಿನ ರಾಮಕೃಷ್ಣಾಶ್ರಮದ ಸ್ವಾಮಿ ಸಿದ್ದೇಶ್ವರಾನಂದರು ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಸ್ವಾಮಿ ವಿರೇಶನಂದಜೀರವರು ತಿಳಿಸಿದರು.
ಪಟ್ಟಣದ ಬಿ.ಆರ್.ಸಿ. ಸಭಾಂಗಣದಲ್ಲಿ ತಾಲೂಕು ಕಾಸಾಪ, ಪತ್ರಕರ್ತರ ಸಂಘ ಮತ್ತು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜು ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು-ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಕಂಡಂತೆ ರಾಮಕೃಷ್ಣ ವಿವೇಕನಂದರು ಎಂಬ ವಿಷಯವಾಗಿ ಮಾತನಾಡಿದರು.
ಕುಪ್ಪಳಿಯಿಂದ ಮೈಸೂರಿಗೆ ವಿದ್ಯಾಭ್ಯಾಸದ ಸಲುವಾಗಿ ಬಂದ ಪುಟ್ಟಪ್ಪ ಎಂಬ ಬಾಲಕನ ಮೈತುಂಬಾ ಗಾಯಗಳೆದ್ದು ವ್ರಣವಾಗಿದ್ದು, ದೇಹಕ್ಕೆ ಆರೈಕೆ ನೀಡಿ, ಅವರ ವ್ಯಕ್ತಿತ್ವವನ್ನು ರೂಪಿಸಿ ಕೊನೆಗೆ ಸ್ವಾಮಿಜಿಗಳೇ ತಮ್ಮ ಭಕ್ತರ ಮನೆಯ ಮಗಳೊಂದಿಗೆ ಮದುವೆ ಮಾಡಿಸಿದ್ದು ಸ್ವಾಮಿ ಸಿದ್ದೇಶ್ವರನಂದರು ಎಂದರು, ರಾಮಕೃಷ್ಣಾಶ್ರಮ ಧರ್ಮವನ್ನು ಬೋಧಿಸುತ್ತದೆ ಹೊರತು ಮತವನ್ನಲ್ಲ ಎಂದ ಅವರು, ಧರ್ಮದ ಹೆಸರಿನಲ್ಲಿ ಮೋಸವಾಗಿದೆಯೇ ಹೊರತು ಧರ್ಮವೇ ಮೋಸವಲ್ಲ, ಧರ್ಮವು ಬುದ್ದಿ ಹಾಗೂ ಹೃದಯದ ಸಂಸ್ಕಾರಕ್ಕೆ ಹೆಸರಾಗಿದೆ.
ಭಾರತೀಯರು ಸರ್ವಧರ್ಮ ಸಮನ್ವತೆಯಿಂದ ಕೂಡಿದ್ದು ಅವರ ಆಧ್ಮಾತ್ಮಿಕ ಸಂಸ್ಕೃತಿಯನ್ನು ಬೇರ್ಪಡಿವುದು ಅಸಾಧ್ಯವಾಗಿದೆ, ಅಮೇರಿಕ, ಜಪಾನ್ ವಾಣಿಜ್ಯ ಮತ್ತು ತಾಂತ್ರಿಕತೆಯನ್ನು ಬಿಡುವುದಿಲ್ಲವೋ, ಭಾರತ ಧರ್ಮದ ಸಂಸ್ಕೃತಿಯನ್ನು ಮರೆತು ದೂರವಾಗುವುದಿಲ್ಲ ಎಂದರು. ಕುವೆಂಪುರವರು ವಿವೇಕಾನಂದರ ಬಗ್ಗೆ ತಿಳಿಸಿದಂತೆ ಕಷ್ಟಗಳೇ ನಮ್ಮನ್ನು ರೂಪಿಸುವುದು, ಕೇವಲ ಮೋಜಿಗಾಗಿ, ಶೋಕಿಗಾಗಿ ನೈತಿಕ ಮಟ್ಟದಿಂದ ಕುಸಿಯುತ್ತಿರುವ ಯುವಕರು ವೈಚಾರಿಕತೆ, ಆದರ್ಶಗಳನ್ನು ರೂಪಿಸಿಕೊಂಡು ಸ್ವಪ್ರಯತ್ನದಿಂದ ಹೋರಾಡುವ ಮನೋಭಾವ ಬೆಳಸಿಕೊಳ್ಳಬೇಕೆಂದರು.
ಎಲ್ಲಿ ಅಪಾರವಾದ ಪ್ರೀತಿ ಇರುತ್ತದೆಯೋ ಅಲ್ಲಿ ಉತ್ಸಾಹದ ಮನಸ್ಸಿರುತ್ತದೆ ಇದು ರಾಮಕೃಷ್ಣರು ವಿವೇಕಾನಂದರಿಗೆ ನೀಡಿ ಅವರ ಗುರಿಗೆ ದಾರಿಯಾಗಲು ಮುಖ್ಯ ಕಾರಣ ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ರಾಮಕೃಷ್ಣ ಆಶ್ರಮದಲ್ಲಿನ ಸಮಯ ಪ್ರಜ್ಞೆ ಹಾಗೂ ಆಧ್ಮಾತ್ಮಿಕ ವಾತಾವರಣ ಅನುಕರಣೀಯ ಮಠದ ಒಡನಾಟ ಇಟ್ಟು ಕೊಂಡವರ ಜೀವನ ಶೈಲಿ ವಿಶೇಷವಾಗಿರುತ್ತದೆ ಎಂದ ಅವರು, ವಿವೇಕಾನಂದರ ಆದರ್ಶಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಬೇಕು, ಉತ್ತಮ ರಾಷ್ಟ್ರ ನಿಮರ್ಾಣದ ಅನುಷ್ಠಾನಕ್ಕಾಗಿ ವಿವೇಕಾನಂದರು ಸಾಕಷ್ಟು ಶ್ರಮಿಸಿದರು. ಯುವಕರ ಪಡೆಯನ್ನು ಕಟ್ಟಿ ಉತ್ತಮ ದೇಶ ನಿಮರ್ಾಣದ ಗುರಿ ಹೊಂದಿದವರು ವಿವೇಕಾನಂದರು ಅವರ ಆದರ್ಶವನ್ನು ಮೈಗೂಡಿಸಿಕೊಂಡ ಕುವೆಂಪುರವರು ರಾಷ್ಟ್ರಕವಿಯ ಹಿರಿಮೆಗೆ ಪಾತ್ರರಾದರು ಎಂದರು.
ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ, ಮಲ್ಲಿಕಾಜರ್ುನ ಡಿ.ಇಡಿ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್, ಬಿ.ಆರ್.ಸಿ ಎನ್.ಎಸ್.ಸುಧಾಕರ್ ಮಾತನಾಡಿದರು.
ಸಮಾರಂಭದಲ್ಲಿ ತಾಲೂಕಿನ ಕೀರ್ತಯನ್ನು ಬೆಳಗಿಸಿದ ಪ್ರತಿಭಾವಂತ ವಿದ್ಯಾಥರ್ಿನಿಯರಾದ ಆರ್.ಭವ್ಯ, ಜ್ಯೋತಿ, ಆರ್.ವೀಣಾ, ಕರಣಾರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಲಿಂಗರಾಜು ನಿರೂಪಿಸಿ, ಚಿದಾನಂದ್ ವಂದಿಸಿದರು.

ಅಧಿಕಾರಿಗಳ ಅಜ್ಞಾನದಿಂದ ನೂರಾರು ಯುವಕರು ಉದ್ಯೋಗದಿಂದ ವಂಚಿತ
ಚಿಕ್ಕನಾಯಕನಹಳ್ಳಿ,ಜ.17: ಅಧಿಕಾರಿಗಳ ಅಜ್ಞಾನದಿಂದ ಪಟ್ಟಣದ ನೂರಾರು ವಿದ್ಯಾಥರ್ಿಗಳು ಗ್ರಾಮೀಣ ಖೋಟಾದಡಿ ಉದ್ಯೊಗ ಅವಕಾಶದಿಂದ ವಂಚಿತವಾಗುತ್ತಿರುವ ಅಂಶ ಕಳೆದ 10 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಚಿಕ್ಕನಾಯಕನಹಳ್ಳಿಪಟ್ಟಣದಲ್ಲಿ 1995-96ರವರೆಗೆ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮಾಡಿದ ಎಲ್ಲಾ ವಿದ್ಯಾಥರ್ಿಗಳಿಗೂ ಗ್ರಾಮೀಣ ಖೋಟಾದ ಸವಲತ್ತು ಸಿಗುತ್ತದೆ, ಆದರೆ 1996ರ ನಂತರ ಇಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಈ ಸವಲತ್ತು ಸಿಗುವುದಿಲ್ಲ ಕಾರಣ ಚಿಕ್ಕನಾಯಕನಹಳ್ಳಿಯನ್ನು ನಗರ ಪ್ರದೇಶವೆಂದು ಸಕರ್ಾರ ಘೋಷಣೆ ಮಾಡಿದೆ. ಆದರೆ ಕೆಲವು ಅಧಿಕಾರಿಗಳು ಈ ಆದೇಶವನ್ನು ತಪ್ಪಾಗಿ ಅಥರ್ೈಸಿಕೊಂಡು ಕಳೆದ 10 ವರ್ಷಗಳಿಂದ ಗ್ರಾಮೀಣ ವಿದ್ಯಾಥರ್ಿ ಖೋಟಾವನ್ನು ಇಲ್ಲಿಯ ವಿದ್ಯಾಥರ್ಿಗಳಿಗೆ ದೊರಕದಂತೆ ಮಾಡಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ನಗರ ಪ್ರದೇಶವೆಂದು 1995ರಲ್ಲಿ ಘೋಷಣೆಯಾಗಿದೆ ಆದ್ದರಿಂದ ನಿಮಗೆ ಗ್ರಾಮೀಣ ಪ್ರದೇಶವೆಂದು ಕೊಡಲು ಬರುವುದಿಲ್ಲವೆಂದು ಹೇಳಿ ನೂರಾರು ವಿದ್ಯಾಥರ್ಿಗಳಿಗೆ ಅನ್ಯಾಯವೆಸಗಿದ್ದಾರೆ.
ಎಷ್ಟೋ ವಿದ್ಯಾಥರ್ಿಗಳು ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ನಾವು 1995ಕ್ಕಿಂತ ಹಿಂದೆ ಇಲ್ಲಿ ಓದಿದವರು, ನಮಗೆ ಈ ಆದೇಶ ಅನ್ವಯವಾಗುವುದಿಲ್ಲವೆಂದು ತಿಳಿಸಿದರೂ ಅಥೈಸಿಕೊಳ್ಳದ ಅಧಿಕಾರಿಗಳು ಬೇಜವಬ್ದಾರಿಯಿಂದ ವತರ್ಿಸಿ ಉದ್ಯೋಗಾಂಕ್ಷಿಗಳಿಗೆ ಉತ್ಸಾಹಕ್ಕೆ ತಣ್ಣೀರ್ರೆಚಿದ್ದಾರೆ.
ಈ ವಿಷಯವನ್ನು ಜಿ.ಆರ್.ಶ್ರೀನಿವಾಸ ಎಂಬವರು ಹೈಕೋಟರ್್ನಲ್ಲಿ ಪ್ರಶ್ನಿಸಿದ್ದರಿಂದ, ಹೈಕೋಟರ್್ನ ನ್ಯಾಯ ಮೂತರ್ಿ ಎನ್.ಕುಮಾರ್ ಈ ವಿಷಯವಾಗಿ ತೀಪರ್ುನೀಡಿ, 1995-96ಕ್ಕಿಂತ ಹಿಂದೆ ಒಂದರಿಂದ ಹತ್ತನೇ ತರಗತಿಯವರೆಗೆ ಚಿಕ್ಕನಾಯಕನಹಳ್ಳಿಯಲ್ಲಿ ಓದಿದ್ದರೆ ಅವರಿಗೆ ಗ್ರಾಮೀಣ ವಿದ್ಯಾಥರ್ಿ ಖೋಟಾ ನೀಡಬಹುದೆಂದು ಕಳೆದ ಡಿಸೆಂಬರ್6 ರಂದು ಆದೇಶ ನೀಡಿದ್ದಾರೆ.
ಈ ಆದೇಶ ಈಗಿನ ಉದ್ಯೋಗಾಕ್ಷಿಗಳಿಗೆ ಅನುಕೂಲವಾಗುತ್ತದೆ, ಆದರೆ ಇಲ್ಲಿಯವರೆಗೆ ಇದರಿಂದ ನೊಂದವರಿಗೆ ಅಧಿಕಾರಿಗಳು ಏನು ಪರಿಹಾರ ನೀಡುತ್ತಾರೆ. . . .?
30 ವರ್ಷಗಳಿಂದ ರಾತ್ರಿ ಸಮಯದಲ್ಲಿ ಬೆಳಕನ್ನೇಕಾಣದ ಬೀದಿ ಇಲ್ಲಿದೆ.
ಚಿಕ್ಕನಾಯಕನಹಳ್ಳಿ,ಜ.17: ಪಟ್ಟಣದ ಎಸ್.ಬಿ.ಎಂ. ಕಟ್ಟಡದ ಪಕ್ಕದ ಬೀದಿಯಲ್ಲಿ ಕಳೆದ 30 ವರ್ಷಗಳಿಂದ ಬೀದಿ ದೀಪದ ವ್ಯವಸ್ಥೆಯೇ ಇಲ್ಲವೆಂದರೆ, ಇದು ಪುರಸಭೆಯವರಿಗೆ ನಾಚಿಕೆಯಾಗಬೇಕಾದ ವಿಷಯ.
ಇಲ್ಲಿಯ ನಿವಾಸಿಗಳು ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ, ಈ ರಸ್ತೆ ಪಟ್ಟಣದ ಹೃದಯದ ಭಾಗದಲ್ಲಿದೆ, ಅಷ್ಟೇ ಅಲ್ಲ ನಿಮರ್ಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣಕ್ಕೆ ಕೂಗಳತೆಯಷ್ಟು ದೂರು, ಪಟ್ಟಣದ ಹೆಸರಾಂತ ಅಭಿಯಂತರ ದೊರೆಸ್ವಾಮಿ ಇಲ್ಲಿಯ ನಿವಾಸಿ, ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕೀ ಪೋಸ್ಟ್ನಲ್ಲಿರುವ ಲಕ್ಷ್ಮಣಪ್ಪ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಇಲ್ಲಿಯ ನಿವಾಸಿ. ಇವರೆಲ್ಲಾ ಹತ್ತಾರು ಭಾರಿ ಈ ವಿಷಯವನ್ನು ಪುರಸಭೆಯವರ ಗಮನಕ್ಕೆ ತಂದರು ಇಲ್ಲಿಗೆ ಬೀದಿ ದೀಪದ ವ್ಯವಸ್ಥೆ ಆಗಿಲ್ಲ, ಇನ್ನೊಂದು ವಿಶೇಷವೆಂದರೆ ಈ ವಾಡರ್್ನ ಸದಸ್ಯೆ ಈಗಿನ ಪುರಸಭಾ ಉಪಾಧ್ಯಕ್ಷೆ, ಅವರಿಗೂ ಇಲ್ಲಿಯ ಜನ ತಮ್ಮ ಬೇಡಿಕೆಯನ್ನು ಅನೇಕ ಭಾರಿ ಸಲ್ಲಿಸಿದರೂ ಇದುವರೆಗೆ ಪ್ರಯೋಜನವಾಗಿಲ್ಲವೆಂಬುದು ಖೇದಕರ.
ಈ ಬೀದಿಯ ಹಿಂಬದಿಯ ಬೀದಿ, ಇತ್ತೀಚೆಗೆ ನಿಮರ್ಾಣಗೊಂಡದ್ದು. ಕಳೆದ 10 ವರ್ಷಗಳ ಹಿಂದೆ ಈ ಪ್ರದೇಶ ಜನ ನಿಭೀಡ ಪ್ರದೇಶ. ಇತ್ತೀಚೆಗಷ್ಟೇ ಇಲ್ಲಿ ಹೊಸ ಮನೆಗಳು ನಿಮರ್ಾಣವಾಗಿದ್ದು ಇವರಿಗೆ ಬೀದಿ ದೀಪದ ವ್ಯವಸ್ಥೆ ದೊರೆತಿದೆ, ಆದರೆ ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿರುವ ದೊರೆಸ್ವಾಮಿಯವರ ಬೀದಿಗೆ ದೀಪದ ವ್ಯವಸ್ಥೆ ಇಲ್ಲವೆಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪುರಸಭೆಯವರು ತಕ್ಷಣವೇ ಅಲ್ಲಿಗೆ ಬೀದಿ ದೀಪ ಅಳವಡಿಸಿ ತಮ್ಮ ಮಯರ್ಾದೆಯನ್ನು ಕಾಪಾಡಿಕೊಳ್ಳುವರೇ ? ಕಾದು ನೋಡಬೇಕು.



Friday, January 14, 2011

ಪಲ್ಸ್ ಪೊಲೀಯೊ ಯಶಸ್ವಿಗೆ ಸಕಲ ಸಿದ್ದತೆ: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ.ಜ.14: ಇದೇ 23 ಹಾಗೂ ಫೆಬ್ರವರಿ 27 ಈ ಎರಡು ದಿನಗಳು ಪೊಲೀಯೋ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗುವುದು, ಈ ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇದರ ಯಶಸ್ವಿಗೆ ಸಾರ್ವಜನಿಕರು, ಸಕರ್ಾರಿ ಇಲಾಖೆಗಳು, ಸಂಘಸಂಸ್ಥೆಗಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕೆಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕೋರಿದರು.
ಪಲ್ಸ್ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನೂರಕ್ಕೆ ನೂರರಷ್ಟು ಪೋಲಿಯೋ ಹನಿಯನ್ನು ಹಾಕಿಸಲು ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು, ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಾಗರೀಕರು ಸಹಕರಿಸಬೇಕೆಂದು ಕೋರಿದ ಅವರು, ಅಂಗನವಾಡಿ ಕೇಂದ್ರದ ಸಿಬ್ಬಂದಿ, ಬೆಸ್ಕಾಂನವರು ಹಾಗೂ ಲಸಿಕೆಗೆ ಸರಬರಾಜು ಮಾಡುವ ಆರೋಗ್ಯ ಇಲಾಖೆಯವರು, ವಾಕ್ಸನ್ ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ವಾಹನಗಳನ್ನು ಹೊಂದಿರುವ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರಲಾಯಿತು. ವಾಹನಗಳು 22ರ ಸಂಜೆಯೇ ತಾಲೂಕು ಆರೋಗ್ಯಾಧಿಕಾರಿಗಳ ಬಳಿ ಹಾಜರಾಗುವಂತೆ ತಿಳಿಸಲಾಯಿತು.
ಯಾವ ಅಂಗನವಾಡಿ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಬೂತ್ಗಳನ್ನು ಸ್ಥಾಪಿಸಲಾಗುವುದೋ ಅಂತಹ ಕೇಂದ್ರಗಳಲ್ಲಿ ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಒಬ್ಬರು ಖಡ್ಡಾಯವಾಗಿ ಹಾಜರಿದ್ದರು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ನಡೆಸಬೇಕೆಂದು ಸಭೆಯಲ್ಲಿ ತೀಮರ್ಾನಿಸಲಾಯಿತು.
ತಾ.ಪಂ. ಇ.ಓ, ನಡೆಯುವ ಪಲ್ಸ್ ಪೋಲಿಯೋ ಬೂತ್ಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಊಟದ ತೊಂದರೆಯಾಗುವುದರಿಂದ ಗ್ರಾಮ ಪಂಚಾಯತಿಯವರು ಈ ಜವಬ್ಚಾರಿಯನ್ನು ಹೊತ್ತು ಆಹಾರ ಸರಬರಾಜು ಮಾಡುವಂತೆ ತೀಮರ್ಾನಿಸಲಾಯಿತು.
ಬೂತ್ ಹಾಗೂ ಮನೆಗಳ ಸವರ್ೆ ಕಾರ್ಯ ನಿರ್ವಹಣೆಯಲ್ಲಿ ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಆಶಾ ಕಾರ್ಯಕತರ್ೆಯರ ನಿಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆ ನಿವಾರಣೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಶಿಶು ಅಭಿವೃದ್ದಿ ಅಧಿಕಾರಿಗಳು ಚಚರ್ಿಸಿ ತೀಮರ್ಾನ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಲೆಯ ಮಕ್ಕಳನ್ನು ಸೇರಿಸಿ ಪಲ್ಸ್ ಪೋಲಿಯೋ ಬಗ್ಗೆ ಜಾಗೃತಿ ಜಾಥಾವನ್ನು ಮಾಡಲು ಮತ್ತು ಪ್ರತಿ ಹೋಬಳಿ ಮಟ್ಟದ ಶಾಲೆಗಳಲ್ಲೂ ಬಿ.ಇಓ ರವರ ಅನುಮತಿ ಪಡೆದು ಶಾಲಾ ಮಕ್ಕಳಿಂದ ಜಾಥಾ ಕಾರ್ಯಮಾಡಿ ಜಾಗೃತಿ ಮೂಡಿಸಲು ತೀಮರ್ಾನಿಸಲಾಯಿತು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಅಗತ್ಯ ಕರ ಪತ್ರಗಳನ್ನು ಮುದ್ರಿಸಿ ಸರಬರಾಜು ಮಾಡುವ ಜವಬ್ದಾರಿಯನ್ನು ಪುರಸಭೆಗೆ ವಹಿಸಲಾಯಿತು ಮತ್ತು ಸ್ಕೌಟ್ಸ್ ಗೈಡ್ಸ್ ವಿದ್ಯಾಥರ್ಿಗಳನ್ನು ಬಳಸಿಕೊಳ್ಳುವಂತೆ ತೀಮರ್ಾನಿಸಲಾಯಿತು.
ಸಭೆಯಲ್ಲಿ ಡಾ.ಶಿವಕುಮಾರ್,


ಚಿಕ್ಕನಾಯಕನಹಳ್ಳಿ,ಜ.14: ರಾಷ್ಟ್ರಕವಿ ಕುವೆಂಪು-ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇದೇ 17ರಸೋಮವಾರ ತಾ.ಕಸಾಪ, ಹಾಗೂ ಪತ್ರಕರ್ತರ ಸಂಘ ಮತ್ತು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜು ಇವರಗಳ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಬಿ.ಆರ್.ಸಿ ಸಭಾಂಗಣದಲ್ಲಿ ಏರ್ಪಡಿಸಿದ್ದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀ ವಿರೇಶಾನಂದಜೀ ಕುವೆಂಪು ಕಂಡಂತೆ ರಾಮಕೃಷ್ಣ-ವಿವೇಕಾನಂದರು ಎಂಬ ವಿಷಯವಾಗಿ ಮಾತನಾಡಲಿದ್ದಾರೆ.
ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಎಂ.ವಿ.ರಾಜಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ, ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಮಾರಂಭದಲ್ಲಿ ತಾ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮತ್ತು ಬಿ.ಆರ್.ಸಿ ಎನ್.ಎಸ್.ಸುಧಾಕರ್ರವರು ಪ್ರತಿಭಾ ಸನ್ಮಾನವನ್ನು ನಡೆಸಿಕೊಡಲಿದ್ದಾರೆ.

Thursday, January 13, 2011

ರಾಜ್ಯದ ವಿಧಾನ ಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲ
ಚಿಕ್ಕನಾಯಕನಹಳ್ಳಿ,ಜ.13: ಸಕರ್ಾರವನ್ನು ರಚಿಸಿ, ಸಕರ್ಾರದ ಹಲವು ಯೋಜನೆಗಳಿಂದ ಕೋಟ್ಯಾಂತರ ಹಣವನ್ನು ಲೂಟಿ ಮಾಡಿ ತಮ್ಮ ಸ್ಚಂತಕ್ಕೆ ಮತ್ತು ಚುನಾವಣೆ ಸಮಯದಲ್ಲಿ ಬಳಸಿ ಇಂತಿಷ್ಟು ಹಣವೆಂದು ಹಂಚುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ್ನು ಬಹಿರಂಗವಾಗಿ ರಾಜ್ಯದ ಲೂಟಿಕೋರ ಪಕ್ಷಗಳು ಹರಾಜು ಮಾಡುತ್ತಿದ್ದಾರೆ ಎಂದು ಜೆ.ಡಿ.ಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ಯಾದವ್ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ನಡೆದ ಜನತಾದಳ ಸಂಯುಕ್ತ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ನಂತೆ ಜನತೆಗೆ ತಲಾ ಇಂತಿಷ್ಟು ಹಣವೆಂದು ನಿಗದಿ ಪಡಿಸಿ ಇಲ್ಲಿನ ಪ್ರಜೆಗಳನ್ನು ಓಟಿಗಾಗಿ ಕೊಂಡುಕೊಳ್ಳುತ್ತಿದ್ದಾರೆ, ಇದರಿಂದ ರಾಜ್ಯದಲ್ಲಿ ಪ್ರಜಾತಂತ್ರ ಮತ್ತು ಲೋಕತಂತ್ರ ವ್ಯವಸ್ಥೆಯು ಬದಲಾವಣೆಯಾಗಿ ಹಣ ನೀಡಿದವನಿಗೆ ಮಾತ್ರ ಓಟು ಎಂಬ ವಾತಾವರಣ ಸೃಷ್ಟಿಯಾಗಿದೆ, ಅನ್ಯಾಯ ಎದರಿಸುವಂತಹ ನಾಯಕರಾದ ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಯಂತಹ ಹಲವರ ನಾಯಕರ ಸಿದ್ದಾಂತ ಎಲ್ಲೆಡೆ ಪಸರಿಸಿ ರಾಜಕೀಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಒಂದು ಕಾಲದಲ್ಲಿ ಇತ್ತು, ಆದರೆ ಇತ್ತಿಚಿನ ದಿನಗಳಲ್ಲಿ ರಾಜಕೀಯಕ್ಕೆ ಲೂಟಿಕೋರರ ಆಗಮನವಾಗುತ್ತಾ ರಾಜ್ಯದ ಜನತೆಗೆ ಕಷ್ಟದ ದಿನಗಳು ಎದುರಾಗುತ್ತಿವೆ ಎಂದ ಅವರು ಸುಂದರವಾದ ಕನರ್ಾಟಕ ರಾಜ್ಯ ಈಡೀ ದೇಶಕ್ಕೆ ರಾಜಕೀಯವಾಗಿ ಮಾದರಿಯಾಗಿತ್ತು. ಆದರೆ ಈಗ ಈ ರಾಜ್ಯ ಸಂಪತ್ತನ್ನು ಲೂಟಿ ಮಾಡುವುದಕ್ಕೆ ಮಾದರಿಯಾಗಿದೆ ಎಂದ ಅವರು ಕನರ್ಾಟಕದ ಪರಂಪರೆಯನ್ನು ಹೊಸ ಅಧ್ಯಯನದಿಂದ ರೂಪಿಸಲು ಜೆ.ಡಿ.ಯು ಪಕ್ಷಕ್ಕೆ ಸಹಕರಿಸಬೇಕು ಎಂದರು.
ಜೆ.ಡಿ.ಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ ಈ ಸಭೆ ಕನರ್ಾಟಕದಲ್ಲಿ ಹೊಸ ದಿಕ್ಕನ್ನು ನೀಡಲಿದ್ದು, ತತ್ವ ಸಿದ್ದಾಂತಗಳನ್ನು ಬಿಟ್ಟು ರಾಜಕಾರಣ ಮಾಡುತ್ತಿರುವ ನಾಯಕರಿಲ್ಲದ ಪಕ್ಷಗಳಿಗೆ ಸವಾಲಾಗಿದೆ ಎಂದ ಅವರು ವಿಧಾನಸಭೆಗಳಲ್ಲಿ ವಿರೋದ ಪಕ್ಷಗಳಿಲ್ಲದೆ ಆಡಳಿತ ಪಕ್ಷಗಳು ಏನು ಮಾಡಿದರೂ ಕೇಳುವವರಿಲ್ಲದಂತಾಗಿದೆ ಎಂದರು. ಮಾಧುಸ್ವಾಮಿಯವರಿಗೆ ರಾಜ್ಯವನ್ನು ರಕ್ಷಣೆ ಮಾಡುವ ಸಮಥ್ರ್ಯವಿದೆ ಎಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗಣಿ ಉದ್ಯಮದಲ್ಲಿ ಬಳ್ಳಾರಿಗೆ ಸಮಾನಾಗಿರುವ ತಾಲೂಕು, ಜನರ ಕಷ್ಟಗಳನ್ನು ಕೇಳದೆ, ಜನತೆಗೆ ಸೇವೆ ಮಾಡದೆ, ಮನೆ ಮನೆಗೆ ಹೋಗಿ ತಮ್ಮ ಪರವಾಗಿ ಪ್ರಚಾರಮಾಡದೆ ಕೇವಲ ಹಣದ ಮೇಲೆ ಚುನಾವಣೆ ನಡೆಯುತ್ತಿದ್ದು ಎಂದರಲ್ಲದೆ, ರಾಜಕೀಯ ವ್ಯಾಪಾರವಾಗಿದೆ ಎಂದರು. ಜನರ ತಮ್ಮ ಓಟುಗಳನ್ನು ರಾಜಕೀಯ ಪಕ್ಷಗಳಿಗೆ ನಿಡದೆ, ಅಬ್ಯಾಥರ್ಿಗಳು ನೀಡುವ ಹಣ, ಹೆಂಡಕ್ಕೆ ಇಂತಿಷ್ಟು ಎಂಬಂತೆ ಹಂಚಿಕೆಯಾಗಿದೆ. ಈ ರೀತಿ ಹಂಚಿಕೆಯಾದರೂ ಜೆ.ಡಿ.ಯು ತಾಲೂಕಿನಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದು ಮುಂದೆ ತಾಲೂಕಿನಾದ್ಯಂತ ಜೆ.ಡಿ.ಯು ಪಕ್ಷ ಮೊದಲ ಸ್ಥಾನವನ್ನು ಅಲಂಕರಿಸಲಿದೆ ಎಂದರು.
ಮಧ್ಯಮ ಕುಟುಂಬದಿಂದ ಬಂದು 3ಬಾರಿ ಶಾಸಕನಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮ ಪಟ್ಟರೂ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷ ಸ್ಥಾನ ಉಳಿಸಿಕೊಳ್ಳದಿದ್ದರೆ ರಾಜಕೀಯದಲ್ಲಿ ಇದೇ ನನ್ನ ಕೊನೇ ಹೋರಾಟವಾಗಿರುತ್ತಿತ್ತು ಎಂದ ಅವರು, ಜೆ.ಡಿ.ಎಸ್, ಬಿ.ಜೆ.ಪಿ ಕಾಲ ಮುಗಿಯುವ ಸಂದರ್ಭ ಬಂದಿದ್ದು ಕಾಂಗ್ರೆಸ್ ಆಗಲೇ ಮುಳುಗಿ ಹೋಗಿರುವ ಹಡಗಾಗಿದೆ, ತಾಲೂಕು ಮತ್ತು ರಾಜ್ಯದ ಆಡಳಿತ ಕೆಳಸ್ಥರಕ್ಕೆ ಹೋಗಿದೆ. ತಾಲೂಕಿನಿಂದಲೇ ಜೆ.ಡಿ.ಯು ಪಕ್ಷ ಅಸ್ಥಿತ್ವಗೊಳಿಸಿ ಹೋರಾಟಕ್ಕೆ ಮುಂದಾಗುತ್ತದೆ ಪಕ್ಷ, ಈ ರೀತಿಯಾಗಿ ಬಾಣದ ದಿಕ್ಕನ್ನು ರಾಜ್ಯಾದ್ಯಂತ ವಿಸ್ತರಿಸಿ ರೈತ ಪರವಾಗಿ ರಾಜ್ಯ ಕಟ್ಟಲಿದೆ ಎಂದರು.
ಸಮಾರಂಭದಲ್ಲಿ ಜೆ.ಡಿ.ಯು.ನ ಜಿ.ಪಂ.ಸದಸ್ಯೆ ಲೋಹಿತಾ ಬಾಯಿ ಮತ್ತು ತಾ.ಪಂ.ಸದಸ್ಯರುಗಳಾದ ಚಿಕ್ಕಮ್ಮ, ನಿರಂಜನಮೂತರ್ಿ, ಸುಮಿತ್ರ, ಲತಾ, ಶಶಿಧರ್, ಸಾವಿತ್ರಿರವರನ್ನು ಸನ್ಮಾನಿಸಲಾಯಿತು, ಚುನಾವಣೆಗಳಲ್ಲಿ ಸ್ಪಧರ್ಿಸಿದ್ದ ಅಬ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೇಣುಕಮೂತರ್ಿ ಸ್ವಾಗತಿಸಿದರೆ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ನಿರೂಪಿಸಿ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ವಂದಿಸಿದರು.

ಕುಪ್ಪೂರು ಮಠದಲ್ಲಿ 6 ಲಕ್ಷರೂಗಳ ಬೆಳ್ಳಿ ಆಭರಣ ಕಳ್ಳತನ
ಚಿಕ್ಕನಾಯಕನಹಳ್ಳಿ,ಜ.13: ತಾಲೂಕಿನ ಸುಪ್ರಿಸಿದ್ದ ಕ್ಷೇತ್ರವಾದ ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಗುರುವಾರ ನಸುಕಿನಲ್ಲಿ ಕಳ್ಳತನ ನಡೆದಿದ್ದು ಮಠದ ಗರ್ಭಗುಡಿಯಲ್ಲಿದ್ದ ಸುಮಾರು 15 ಕೆ.ಜಿ.ಬೆಳ್ಳಿ ಆಭರಣಗಳು ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳರು ದೋಚಿದ್ದಾರೆ.
ಮಠದ ಕಟ್ಟಡದಲ್ಲಿನ ಕರೆಂಟ್ ಕಟ್ಮಾಡಿ, ಮಠದ ಆವರಣದಲ್ಲಿರುವ ಕೊಠಡಿಯಲ್ಲಿ ಮಲಗಿದ್ದವರು ಹೊರಬಾರದಂತೆ ಹೊರಗಿನಿಂದ ಬೋಲ್ಟ್ಗಳನ್ನು ಭದ್ರ ಪಡಿಸಿ, ಮಠದ ಮೇಲ್ಚಾವಣಿಯ ಹೆಂಚನ್ನು ತೆಗೆದು ಗರ್ಭಗುಡಿಯಲ್ಲಿನ ಬೊಲ್ಟ್ನ್ನು ಬಲವಾದ ಅಸ್ತ್ರದಿಂದ ಮೀಟಿ ಬೀಗ ಹೊಡೆದು ಸುಮಾರು 5 ಕೆ.ಜಿ.ತೂಕದ ಶ್ರೀ ಮರಳಸಿದ್ದೇಶ್ವರರ ಮುಖ ಪದ್ಮ ನಾಗಭಾರಣ ಸಮೇತ, ಒಂದು ಕೆ.ಜಿ.ತೂಕದ ಮೂರು ಜೊತೆ ಪಾದುಕೆ, ಕಳಸ, ಪಾನ್ ಬಟ್ಲು, ಪಂಚಾರತಿ, ಬೆಳ್ಳಿಕಾಯಿನ್, ಬೆಳ್ಳಿ ರುದ್ರದೇವರು, ಎರಡು ರೇಣುಕರ ವಿಗ್ರಹ, ಗಣಪತಿ ವಿಗ್ರಹ, ನಟರಾಜನ ನಾಟ್ಯ ವಿಗ್ರಹ, ಆರತಿ ತಟ್ಟೆ, 108 ಬೆಳ್ಳಿ ರುದ್ರಾಕ್ಷಿ, 12 ಬೆಳ್ಳಿ ಭಿಲ್ವ ಪತ್ರೆ ಸೇರಿದಂತೆ ಸುಮಾರು 6 ಲಕ್ಷರೂಗಳ ಬೆಳ್ಳಿಯ ಆಭರಣಗಳು ಹಾಗೂ ಎರಡು ಕಾಣಿಕೆ ಹುಂಡಿಯನ್ನು ಹೊತ್ತು ಹೊಯ್ದಿದ್ದಾರೆ.
ಸ್ಥಳಕ್ಕೆ ಎಸ್.ಪಿ. ಡಾ.ಹರ್ಷ, ಕುಣಿಗಲ್ ಎ.ಎಸ್.ಪಿ. ಶಶಿಕುಮಾರ್, ಸಿ.ಪಿ.ಐ.ರವಿಪ್ರಸಾದ್, ಬೆರಳಚ್ಚು ತಜ್ಞರು, ಶ್ವಾನ ದಳ ತನಿಖೆ ನಡೆಸಿದರು.
ಹಂದನಕೆರೆ ಪಿ.ಎಸ್.ಐ. ರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ದೇವಾಲಯಗಳ ಕಳ್ಳತನ ಹೆಚ್ಚುತ್ತಿದ್ದು, ಪಟ್ಟಣದ ಪಂಚಮುಖಿ ದೇವಾಸ್ಥಾನದಲ್ಲಿನ ಕಾಣಿಕೆ ಹುಂಡಿ ಕಳವು, ಸೊರಲಮಾವು, ತಮ್ಮಡಿಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನದ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುವವರ ತಂಡವೇ ಇಲ್ಲಿಗೆ ಬಂದಿರ ಬಹುದೆಂಬ ಅನುಮಾನಗಳಿವೆ.

Wednesday, January 12, 2011

Monday, January 10, 2011


ನೂತನ ಬಿ.ಸಿ.ಎಂ. ವಿಸ್ತರಣಾಧಿಕಾರಿಗಳ ಕಛೇರಿಗೆ ಚಾಲನೆ:ಚಿಕ್ಕನಾಯಕನಹಳ್ಳಿ,ಜ.10: ಪ್ರತಿ ತಾಲೂಕುಗಳಲ್ಲೂ ಬಿ.ಸಿ.ಎಂ. ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿಯನ್ನು ಪ್ರತ್ಯೇಕವಾಗಿ ಸ್ಥಾಪಿಸುವಂತೆ ಸಕರ್ಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಈ ತಾಲೂಕಿನಲ್ಲಿ ಕಛೇರಿ ಆರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ ತಿಳಿಸಿದರು.ಪಟ್ಟಣದ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಹಾಸ್ಟೆಲ್ನಲ್ಲಿ ತಾಲೂಕು ವಿಸ್ತರಣಾಧಿಕಾರಿಗಳ ಕಛೇರಿ ಆರಂಭದ ಅಂಗವಾಗಿ ದಿ.ದೇವರಾಜ ಅರಸ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ವಿಸ್ತರಣಾಧಿಕಾರಿಗಳ ಕಛೇರಿ ತಾ.ಪಂ.ಯ ಕಟ್ಟಡದಲ್ಲಿ ನಡೆಯುತ್ತಿದ್ದ ಈ ಕಛೇರಿ ಇನ್ನು ಮುಂದೆ ಪ್ರತ್ಯೇಕವಾದ ಕಟ್ಟಡದಲ್ಲಿ ನಡೆಯಲಿದೆ ಎಂದ ಅವರು, ನಮ್ಮ ಇಲಾಖೆಯಲ್ಲಿ ಈ ಬೇಡಿಕೆ ಕಳೆದ 20 ವರ್ಷಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಈಡೇರುವ ಕಾಲ ಬಂದಿದೆ ಎಂದರು. ಏಪ್ರಿಲ್ ತಿಂಗಳ ಆರಂಭದಿಂದ ಈ ಕಛೇರಿಗೆ ಡ್ರಾಯಿಂಗ್ ಪವರ್ ಬರಲಿದೆ. ಗುಮಾಸ್ತರು ಸೇರಿದಂತೆ ಕಛೇರಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಬಿ.ಸಿ.ಎಂ.ವಿಸ್ತರಣಾಧಿಕಾರಿ ವನಮಾಲಾ ಭೂಮ್ಕರ್, ಮೆಟ್ರಿಕ್ ನಂತರ ವಿದ್ಯಾಥರ್ಿನಿಲಯದ ನಿಲಯ ಪಾಲಕಿ ಭಾನುಮತಿ, ಜೆ.ಸಿ.ಪುರ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಮೇಲ್ವಿಚಾರಕ ದೇವರಾಜಯ್ಯ, ತಾಲೂಕಿನ ವಿವಿಧ ಹಾಸ್ಟೆಲ್ಗಳ ಮೇಲ್ವಿಚಾರಕರುಗಳಾದ ಅಶ್ವತ್ಥ್ನಾರಾಯಣ, ಶಿವಮೂತರ್ಿ, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿ.ನಾ.ಹಳ್ಳಿಯ ಜೆ.ಡಿ.ಯು.ಸಭೆಗೆ ಶರದ್ಯಾದವ್ಚಿಕ್ಕನಾಯಕನಹಳ್ಳಿ,ಜ.10: ಇಲ್ಲಿನ ಜನತಾದಳ(ಸಂಯುಕ್ತ) ಕಾರ್ಯಕರ್ತರ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶರದ್ಯಾದವ್, ರಾಜ್ಯ ಘಟಕದ ಅಧ್ಯಕ್ಷರಾದ ಎಸ್.ಪಿ. ನಾಡಗೌಡ ಅವರು ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಚಿ.ನಾ.ಹಳ್ಳಿಯ ನವೋದಯ ಪ್ರಥಮ ದಜರ್ೆ ಕಾಲೇಜ್ನ ಆವರಣದಲ್ಲಿ ಇದೇ 13ರ ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿರುವ ಈ ಸಭೆಯಲ್ಲಿ, ಈ ಸಲದ ಜಿ.ಪಂ ಹಾಗೂ ತಾ.ಪಂ. ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರನ್ನು ಅಭಿನಂದಿಸುವುದರ ಜೊತೆಗೆ ಜಯಶೀಲರಾದ ಸದಸ್ಯರನ್ನು ಸನ್ಮಾನಿಸಲಾಗುವುದು ಹಾಗೂ ಸ್ಪಧಿಸಿದ್ದ ಪಕ್ಷದ ಎಲ್ಲಾ ಅಭ್ಯಾಥರ್ಿಗಳು ಹಾಗೂ ತಾಲೂಕು ಮಟ್ಟದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, January 8, 2011



ಹಾಲು ಉತ್ಪದಾಕರಿಗೆ ಸಿಮ್ ಕಾಡರ್್ ವಿತರಣೆ
ಚಿಕ್ಕನಾಯಕನಹಳ್ಳಿ,ಜ.08: ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಏರ್ಟೆಲ್ ದೂರಸಂಪರ್ಕ ಕಂಪನಿಯ ಸಿಮ್ ವಿತರಣೆ ಮತ್ತು ಅಜೋಲಾ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಇದೇ 10ರಂದು ಏರ್ಪಡಿಸಲಾಗಿದೆ.
ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಅಧ್ಯಕ್ಷತೆ ವಹಿಸಲಿದ್ದು ತು.ಹಾ.ಒ.ಕಾರ್ಯನಿವರ್ಾಹಕ ನಿದರ್ೇಶಕ ಡಾ.ಕೆ.ಸ್ವಾಮಿ ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತು.ಹಾ.ಒ ವ್ಯವಸ್ಥಾಪಕರಾದ ಜಿ.ಎಂ.ಚಂದ್ರಪ್ಪ, ಡಿ.ಅಶೋಕ್, ಸುರೇಶ್ನಾಯಕ್ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಉಪ ವ್ಯವಸ್ಥಾಪಕರಾದ ಡಾ.ಸುಬ್ರಾಯ್ಭಟ್, ಮಂಜುನಥ್, ಎನ್.ಬಸಪ್ಪ, ಯರಗುಂಟಪ್ಪ, ಶ್ರೀನಿವಾಸ್, ಸಿದ್ದಲಿಂಗಮೂತರ್ಿ, ಬುದ್ದಿಪ್ರಸಾದ್ ಉಪಸ್ಥಿತರಿರುವರು.

Friday, January 7, 2011







ಪ್ರತಿಬಾ ಕಾರಂಜಿಯಲ್ಲಿ ತಾಲೂಕಿನಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾಥರಿಗಲುಚಿಕ್ಕನಾಯಕನಹಲ್ಲಿ
,ಜ.05: 2010-11ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ ತಾಲೂಕಿನ ಶಾಲೆಗಳಿಂದ ವಿದ್ಯಾಥರ್ಿಗಳು ಪ್ರಥಮ ಸ್ಥಾನಗಳಿಸಿ ವಿಜೇತರಾಗಿದ್ದಾರೆ.ಹುಳಿಯಾರಿನ ಉದರ್ು ಶಾಲೆ ಆರ್ಬೀನಾ ಬಾಬು ಭಾಷಣ ಸ್ಫದರ್ೆ, ಗೋಡೆಕೆರೆ ಸಕರ್ಾರಿ ಪ್ರೌಡಶಾಲೆ ಛದ್ಮವೇಷ ಸ್ಪಧರ್ೆ, ಕುಪ್ಪೂರು ವಿವೇಕಾನಂದ ಪ್ರೌಡಶಾಲೆ ಪವನ್ ಕ್ಲೇ ಮಾಡೆಲಿಂಗ್, ಗೋಡೆಕೆರೆ ಸಕರ್ಾರಿ ಪ್ರೌಡಶಾಲೆ ಸಿ.ಶಿವರಾಜು ಮಿಮಿಕ್ರ, ಚಿನಾಹಳ್ಳಿ ಡಿವಿಪಿ ಶಾಲೆ ಪ್ರಮೋದ್ ಸಿ.ಎನ್. ಚಿತ್ರಕಲೆ, ಹುಳಿಯಾರು ಉದರ್ುಶಾಲೆ ಹಬೀಬುಲ್ಲಾ ಗಝಲ್, ಚಿನಾಹಳ್ಳಿ ನಿರ್ವಣೇಶ್ವರ ಪ್ರೌಡಶಾಲೆ ಜಾನಪದ ನೃತ್ಯ, ಸ್ಪದರ್ೆಯಲ್ಲಿ ವಿಜೇತರಾಗಿದ್ದಾರೆ.
ಸಾಂಸ್ಕೃತಿಕ ತಾಲೂಕು ಚಿಕ್ಕನಾಯಕನಹಳ್ಳಿ : ಸಿ.ಬಿ.ಲೋಕೇಶ್ಚಿಕ್ಕನಾಯಕನಹಳ್ಳಿ,ಜ.05: ಕಲೆಯ ತವರೂರಾಗಿರುವ ನಮ್ಮ ತಾಲ್ಲೂಕು ಜನಪದ ಹಾಗೂ ಯಕ್ಷಗಾನ ಕಲಾವಿದರ ಬೀಡಾಗಿದೆ ಎಂದು ಪತ್ರಕರ್ತ ಸಿ.ಬಿ. ಲೋಕೆಶ್ ಬಣ್ಣಿಸಿದ್ದಾರೆ.ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ದೇವಾಂಗ ಸಂಘದವರು ಆಯೋಜಿಸಿದ್ದ ಹೊಸವರ್ಷದ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನೇಕಾರರು ಆಥರ್ಿಕ ಸಂಕಷ್ಟಗಳಲ್ಲಿದ್ದರೂ ಧಾಮರ್ಿಕ ಕಾರ್ಯಕ್ರಮಗಳು ಹಾಗೂ ಕಲಾ ಪ್ರದರ್ಶನಗಳಿಗೆ ಎಂದೂ ಬಡತನ ಮಾಡದೆ ಸಾಂಸ್ಕೃತಿಕವಾಗಿ ಉತ್ಸವಗಳು, ಯಕ್ಷಗಾನದ ಬಯಲು ನಾಟಕ, ಯುವ ವೀರಗಾಸೆಗಳನ್ನು ಸಂಘದವರೆಲ್ಲ ಸೇರಿ ಒಟ್ಟಾಗಿ ಕೂಡಿ ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ನೆರವೇರಿಸುತ್ತಿರುವುದರಿಂದಲೇ ತಾಲೂಕು ಕಲೆಯ ಬೀಡಾಗಿದೆ ಎಂದ ಅವರು, ನಮ್ಮೂರಿನ ಬನಶಂಕರಮ್ಮ ಅಮ್ಮನವರ ಉತ್ಸವ ಸಣ್ಣ ಮಕ್ಕಳ ಮೇಲೆ ಕಳಸವನ್ನು ಹೊರಿಸಿ ಮೆರವಣಿಗೆ ಹೋಗುವುದು ಉತ್ತಮ ಸಾಂಪ್ರದಾಯಕವಾಗಿದ್ದು ಇದರಿಂದ ಮಕ್ಕಳಿಗೆ ದೇವರ ಬಗ್ಗೆ ಭಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು. ದೇವಾಂಗ ಸಂಘದ ಕಾರ್ಯದಶರ್ಿ ಸಿ.ಎ.ಕುಮಾರಸ್ವಾಮಿ ಮಾತನಾಡಿ ನೇಕಾರರ ಬದುಕು ಅತ್ಯಂತ ದುಸ್ತರವಾಗಿದ್ದುಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಜೀವನೋಪಾಯ ಕೂಲಿ ಕೊಡುವಂತಹ ಪರಿಸ್ಥಿತಿ ಬಂದಿದೆ.ಬನದ ಹುಣ್ಣಿಮೆ ಶ್ರೀ ಬನಶಂಕರಿ ಅಮ್ಮನವರ ಜನ್ಮ ದಿನವಾಗಿದ್ದ ಈ ದಿನವನ್ನು ದೇವಾಂಗ ಜನಾಂಗದವರು ಬಹಳ ವಿಜೃಂಭಣೆಯಿಂದ ನಡೆಸಲು ಇದೇ 19ರ ಬುಧವಾರ ಮುಂಜಾನೆ ಕೆರೆ-ಬಾವಿಯಿಂದ ಅಮ್ಮನವರ ಕಳಸವನ್ನು ವೀರಮಕ್ಕಳೊಂದಿಗೆ ಕರೆತರುತ್ತಾರೆ ವಿವಿಧ ಭಜನಾ ತಂಡಗಳ ಜನಪದ ತಂಡಗಳು ಮೆರವಣಿಗೆಯೊಂದಿಗೆ ದೇವಾಲಯವನ್ನು ತಲುಪುತ್ತವೆ ನಂತರ ಸುಮಂಗಲಿಯರಿಂದ ಸಹಸ್ರ ಕುಂಕುಮಾರ್ಚನೆ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಮಧ್ಯಾಹ್ನ 12.00 ಗಂಟೆಗೆ ಅಮ್ಮನವರನ್ನು ರಥದಲ್ಲಿ ಕೂರಿಸಿ ಮೆರವಣಿಗೆಯನ್ನು ಮಾಡಲಾಗುತ್ತದೆ. ದೇವಾಲಯಕ್ಕೆ ತಲುಪಿದ ನಂತರ ವೀರ ಮಕ್ಕಳಿಂದ ಅಲಗುಸೇವೆ ಕಾರ್ಯಕ್ರಮವನ್ನು ಏರ್ಪಡಿಸಿದೆ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶೇಷಪ್ಪ ಸಿ.ಜಿ. ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದರು, ಎಸ್ ಶಂಕರಪ್ಪನವರು ಪ್ರಾಥರ್ಿಸಿದರೆ , ಸಿ.ಟಿ. ಜಯಕೃಷ್ಣ ಸ್ವಾಗತಸಿ, ಎಂ. ಬನಶಂಕರಯ್ಯನವರು ವಂದಿಸಿದರು.

Tuesday, January 4, 2011








ಜಿ.ಪಂ.ನಲ್ಲಿ ಜೆ.ಡಿ.ಎಸ್, ಬಿ.ಜೆ.ಪಿ.ಸಮಪಾಲ, ತಾ.ಪಂ.ನಲ್ಲಿ ಜೆ.ಡಿ.ಎಸ್.ಮುನ್ನಡೆ, ಬಿ.ಜೆ.ಪಿ.ಮತ್ತು ಜೆ.ಡಿ.ಯು.ಸಮಪಾಲ
ಚಿಕ್ಕನಾಯಕನಹಳ್ಳಿ,ಜ.04: ತಾಲೂಕಿನಲ್ಲಿ ಚುನಾವಣಾ ಫಲಿತಾಂಶವನ್ನು ನಿರೀಕ್ಷೆಗೂ ಮೀರಿದಂತೆ ನೀಡಿದ ಜನತೆ ಪಕ್ಷಗಳ ಭವಿಷ್ಯವನ್ನು ಬಿಚ್ಚಿಟ್ಟಿದ್ದು 5 ಜಿ.ಪಂಗಳ ಪೈಕಿ ಜೆ.ಡಿ.ಎಸ್.ಹಾಗೂ ಬಿ.ಜೆ.ಪಿ ತಲಾ ಎರಡು ಸ್ಥಾನಗಳನ್ನು ಪಡೆದರೆ, ಜೆ.ಡಿ.ಯು ಒಂದು ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಗಿದೆ. ತಾ.ಪಂ.ಯಲ್ಲಿ ಜೆ.ಡಿ.ಎಸ್ ಮೊದಲನೇ ಸ್ಥಾನ ಪಡೆದರೆ ಬಿಜೆಪಿ ಮತ್ತು ಜೆ.ಡಿ.ಯು ಸಮವಾಗಿದ್ದು, ಕಾಂಗ್ರೆಸ್ ತಾಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ಸ್ಥಾನ ಪಡೆಯದೇ ಶೂನ್ಯ ಫಲಿತಾಂಶ ಪಡೆಯುವ ಮೂಲಕ ಇತಿಹಾಸದಲ್ಲೇ ಎನ್ನೆಂದು ಕಂಡರಿಯದ ರೀತಿಯಲ್ಲಿ ನೆಲಕಚ್ಚಿದೆ.
ತಾಲೂಕಿನ 19 ತಾ.ಪಂ ಕ್ಷೇತ್ರಗಳ ಪೈಕಿ ಜೆ.ಡಿ.ಎಸ್ 7, ಬಿ.ಜೆ.ಪಿ 6, ಜೆ.ಡಿ.ಯು 6ಸ್ಥಾನಗಳನ್ನು ಹಂಚಿಕೊಂಡಿವೆ.
ಜಿ.ಪಂ.ಕ್ಷೇತ್ರಗಳಲ್ಲಿ ಸ್ಫದರ್ಿಸಿದ್ದ ಅಭ್ಯಥರ್ಿಗಳು ಪಡೆದ ಮತಗಳ ವಿವರ: ಶೆಟ್ಟಿಕೆರೆ ಕ್ಷೇತ್ರ: ಒಟ್ಟು 20618 ಮತ ಚಲಾಚಣೆಯಾಗಿದ್ದು ಹೆಚ್.ಬಿ.ಪಂಚಾಕ್ಷರಯ್ಯ ಬಿ.ಜೆ.ಪಿ ಕ್ಷೇತ್ರದಿಂದ ಸ್ಫದರ್ಿಸಿದ್ದು 5501 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ, ಬಿ.ಎನ್.ಶಿವಪ್ರಕಾಶ್(ಪಕ್ಷೇತರ) 4949, ಟಿ.ಶಂಕರಲಿಂಗಪ್ಪ(ಜೆ.ಡಿ.ಯು)3832 ಬಿ.ಲಕ್ಕಪ್ಪ (ಕಾಂಗ್ರೆಸ್)3376, ಸತೀಶ್ ಸಾಸಲು(ಜೆ.ಡಿ.ಎಸ್)2422, ಬಿ.ನಾಗರಾಜು(ಪಕ್ಷೇತರ) 401, ಟಿ.ಆರ್.ಮಹೇಶ್(ಪಕ್ಷೇತರ) 137 ಮತಗಳನ್ನು ಪಡೆದಿದ್ದಾರೆ.
ಹುಳಿಯಾರು ಕ್ಷೇತ್ರ: ಒಟ್ಟು 20751 ಮತಗಳು ಚಲಾಚಣೆಯಾಗಿದ್ದು ಎನ್.ಜಿ.ಮಂಜುಳ(ಜೆ.ಡಿ.ಎಸ್) 7189ಮತಗಳನ್ನು ಪಡೆದು ಜಯಶೀಲರಾದರೆ, ಎಸ್.ಹೆಚ್.ಲತಾ (ಬಿ.ಜೆ.ಪಿ) 5335, ರೇಣುಕಾದೇವಿ.ವೈ.ಎಂ.(ಜೆ.ಡಿಯು) 3747, ಹೆಚ್.ಡಿ.ರಮಾದೇವಿ (ಕಾಂಗ್ರೆಸ್)3566, ಎನ್.ಪಿ.ಚಂದ್ರಕಲಾ(ಪಕ್ಷೇತರ) 914 ಮತಗಳನ್ನು ಪಡೆದುಕೊಂಡಿದ್ದಾರೆ.
ಹೊಯಿಸಲಕಟ್ಟೆ ಕ್ಷೇತ್ರ: ಒಟ್ಟು 17836 ಮತಗಳು ಚಲಾವಣೆಯಾಗಿದ್ದು ನಿಂಗಮ್ಮ (ಬಿ.ಜೆ.ಪಿ) 7082 ಮತಗಳನ್ನು ಪಡೆದು ಜಯಶೀಲರಾದರೆ, ಜಯಲಕ್ಷ್ಮೀ(ಜೆ.ಡಿ.ಎಸ್)5653, ಜ್ಯೋತಿ (ಕಾಂಗ್ರೆಸ್)1975, ಭಾರತಮ್ಮ (ಜೆ.ಡಿ.ಯು)3126, ಮತಗಳನ್ನು ಪಡೆದಿದ್ದಾರೆ.
ಕಂದಿಕೆರೆ ಕ್ಷೇತ್ರ: ಒಟ್ಟು 21388 ಮತಗಳು ಚಲಾವಣೆಯಾಗಿದ್ದು ಜಿ.ಲೋಹಿತಾಬಾಯಿ (ಜೆ.ಡಿ.ಯು) 9517 ಮತಗಳನ್ನು ಪಡೆದು ಜಯಶೀಲರಾದರೆ, ಈರಯ್ಯ (ಜೆ.ಡಿ.ಎಸ್)7930, ಸಿ.ರಂಗಾನಾಯ್ಕ(ಬಿಜೆಪಿ) 2286, ಜಿ.ಪರಮೇಶ್ವರಯ್ಯ(ಕಾಂಗ್ರೆಸ್)1655 ಮತಗಳನ್ನು ಪಡೆದಿದ್ದಾರೆ.
ಹಂದನಕೆರೆ ಕ್ಷೇತ್ರ: ಒಟ್ಟು 20,975 ಮತಗಳು ಚಲಾವಣೆಯಾಗಿದ್ದು ಜಾನಮ್ಮ ರಾಮಚಂದ್ರಯ್ಯ(ಜೆಡಿಎಸ್) 7531ಮತಗಳನ್ನು ಪಡೆದು ಜಯಶೀಲರಾದರೆ, ಎ.ಎಸ್.ಅನುಸೂಯಮ್ಮ(ಜೆಡಿಯು)5842, ಯಶೋಧಬಸವರಾಜು(ಬಿಜೆಪಿ)5260, ಜಯಲಕ್ಷ್ಮಮ್ಮ(ಕಾಂಗ್ರೆಸ್)1019, ಬಿ.ವಿ.ಮರುಳಮ್ಮ(ಪಕ್ಷೇತರ)991,ಪ್ರೇಮಲತಾ(ಬಿ.ಎಸ್.ಪಿ)332 ಮತಗಳನ್ನು ಪಡೆದುಕೊಂಡಿದ್ದಾರೆ.
ತಾ.ಪಂ.ಕ್ಷೇತ್ರಗಳಲ್ಲಿ ಸ್ಪಧರ್ಿಸಿದ್ದ ಅಭ್ಯಥರ್ಿಯ ಮತಗಳ ವಿವರ: ಶೆಟ್ಟಿಕೆರೆ ಕ್ಷೇತ್ರ: ಒಟ್ಟು 5550 ಮತಗಳು ಚಲಾವಣೆಯಾಗಿದ್ದು ಎ.ಬಿ.ರಮೇಶ್ಕುಮಾರ್(ಬಿಜೆಪಿ) 1557 ಮತಗಳನ್ನು ಪಡೆದು ಜಯಶೀಲರಾದರೆ, ಎ.ಬಿ.ಮಹೇಶ್(ಜೆಡಿಎಸ್)1514, ಎಸ್.ಬಿ.ರಾಜಶೇಖರಪ್ಪ(ಜೆಡಿಯು)1346, ಎಸ್.ಎಂ.ನಿಂಗಪ್ಪ(ಕಾಂಗ್ರೆಸ್) 531, ಎಸ್.ಜಿ.ಮಹೇಶ್(ಪಕ್ಷೇತರ) 175, ಉಮೇಶ್ ಎಸ್.ಆರ್(ಪಕ್ಷೇತರ)59, ಜಿ.ಟಿ.ವೆಂಕಟೇಶ್ 368 ಮತಗಳನ್ನು ಪಡೆದಿದ್ದಾರೆ.
ಹೊನ್ನೇಬಾಗಿ ಕ್ಷೇತ್ರ: ಒಟ್ಟು 5265 ಮತಗಳು ಚಲಾವಣೆಯಾಗಿದ್ದು ಹೆಚ್.ಆರ್.ಶಶಿಧರ(ಜೆಡಿಯು) 2634 ಮತಗಳನ್ನು ಪಡೆದು ಜಯಶೀಲರಾದರೆ , ಪ್ರಸನ್ನಕುಮಾರ್ ಹೆಚ್.ಜಿ.(ಬಿಜೆಪಿ)1157, ಶಂಕರಯ್ಯ(ಜೆಡಿಎಸ್) 867, ನಾಗರಾಜು ಹೆಚ್.ಟಿ(ಕಾಂಗ್ರೆಸ್) 607 ಮತಗಳನ್ನು ಪಡೆದಿದ್ದಾರೆ.
ಮತಿಘಟ್ಟ ಕ್ಷೇತ್ರ: ಒಟ್ಟು 5825 ಮತಗಳು ಚಲಾವಣೆಯಾಗಿದ್ದು ಎ.ನಿರಂಜನಮೂತರ್ಿ(ಜೆ.ಡಿಯು)2010 ಮತಗಳನ್ನು ಪಡೆದು ಜಯಶೀಲರಾದರೆ, ತಿಮ್ಮಯ್ಯ(ಜೆ.ಡಿ.ಎಸ್)1962, ಡಿ.ದೇವರತ್ನಯ್ಯ(ಬಿ.ಜೆ.ಪಿ)1567, ಕೆ.ಮಹದೇವಯ್ಯ(ಕಾಂಗ್ರೆಸ್ ಐ)194, ರಾಜಣ್ಣ (ಬಿ.ಎಸ್.ಪಿ)92 ಮತಗಳನ್ನು ಪಡೆದಿದ್ದಾರೆ.
ಹಂದನಕೆರೆ ಕ್ಷೇತ್ರ : ಒಟ್ಟು 5597 ಮತಗಳು ಚಲಾವಣೆಗೊಂಡಿದ್ದು ಡಿ.ಶಿವರಾಜು(ಜೆ.ಡಿ.ಎಸ್)2193 ಮತಗಳನ್ನು ಪಡೆದು ಜಯಶೀಲರಾದರೆ , ಎಂ.ಲಿಂಗರಾಜು(ಜೆ.ಡಿ.ಯು)1845, ಹೆಚ್.ಎನ್.ರಾಮನಾಥ(ಬಿಜೆಪಿ)1298, ಸಿದ್ದಪ್ಪ(ಕಾಂಗ್ರೆಸ್ ಐ) 261 ಮತಗಳನ್ನು ಪಡೆದಿದ್ದಾರೆ.
ದಸೂಡಿ ಕ್ಷೇತ್ರ: ಒಟ್ಟು 4237 ಮತಗಳು ಚಲಾವಣೆಗೊಂಡಿದ್ದು ಆರ್.ಪಿ.ವಸಂತಯ್ಯ(ಬಿ.ಜೆಪಿ)2162 ಮತ ಪಡೆದು ಜಯಶೀಲರಾದರೆ ಡಿ.ಬಿ.ರಮೇಶ್(ಜೆ.ಡಿ.ಎಸ್)965, ಎಂ.ಎಲ್.ನಿಂಗಪ್ಪ(ಜೆ.ಡಿ.ಯು)596, ಆರ್.ಶ್ರೀನಿವಾಸಮೂತರ್ಿ(ಪಕ್ಷೇತರ)113, ಆರ್.ಪಿ.ವಸಂತಯ್ಯ (ಬಿ.ಜೆ.ಪಿ)2162, ಡಿ.ಎಸ್.ಶಾಂತಕುಮಾರ್(ಕಾಂಗ್ರೆಸ್)401 ಮತಗಳನ್ನು ಪಡೆದಿದ್ದಾರೆ.
ಹುಳಿಯಾರು ಕ್ಷೇತ್ರ ಒಟ್ಟು 6292 ಮತಗಳು ಚಲಾವಣೆಯಾಗಿ ಬಿಬಿಫಾತಿಮ(ಜೆಡಿಎಸ್) 2147ಮತಗಳನ್ನು ಪಡೆದು ಜಯಶೀಲರಾದರೆ ಹೆಚ್.ಆರ್.ಚಂದ್ರಕಲಾ(ಜೆಡಿಯು) 1461, ವೀಣಾಧನುಷ್(ಕಾಂಗ್ರೆಸ್)1325, ರುಕ್ಸನಬಾನು(ಬಿಜೆಪಿ)1228, ಪವರ್ೀನ್(ಪಕ್ಷೇತರ) 84, ಹಸೀನಾಬಾನು(ಪಕ್ಷೇತರ) 47 ಮತಗಳನ್ನು ಪಡೆದಿದ್ದಾರೆ.
ತಿಮ್ಲಾಪುರ ಕ್ಷೇತ್ರ: ಒಟ್ಟು 5912 ಮತಗಳು ಚಲಾವಣೆಯಾದರೆ ಹೆಚ್.ಜಯಣ್ಣ(ಜೆಡಿಯು)1805 ಮತಗಳನ್ನು ಪಡೆದು ಜಯಶೀಲರಾದರೆ , ಟಿ.ಆರ್.ರಮೇಶ್(ಜೆಡಿಎಸ್) 1460, ಟಿ.ವಿ.ಚಂದ್ರಶೇಖರಯ್ಯ(ಬಿಜೆಪಿ) 1039, ಹೆಚ್.ಆರ್.ಕೃಷ್ಣಮೂತರ್ಿ(ಪಕ್ಷೇತರ) 887, ಎನ್.ಪಿ.ಕುಮಾರಸ್ವಾಮಿ(ಕಾಂಗ್ರೆಸ್) 589, ಹೆಚ್.ಚಂದ್ರಯ್ಯ(ಪಕ್ಷೇತರ) 132 ಮತಗಳನ್ನು ಪಡೆದಿದ್ದಾರೆ,
ಗಾಣಧಾಳು ಕ್ಷೇತ್ರ: ಒಟ್ಟು 4006 ಮತಗಳು ಚಲಾವಣೆಗೊಂಡಿದ್ದು ಜಿ.ಆರ್.ಸೀತರಾಮಯ್ಯ 1358(ಬಿಜೆಪಿ) ಮತ ಪಡೆದು ಜಯಶೀಲರಾದರೆ ಆರ್.ಉದಯ್ಕುಮಾರ್(ಜೆಡಿಎಸ್)1176, ಹೆಚ್.ಕೆ.ರಾಮಲಿಂಗಪ್ಪ(ಜೆಡಿಯು) 931, ಹೆಚ್.ಜಿ.ವಿಶ್ವನಾಥ್(ಕಾಂಗ್ರೆಸ್) 541 ಮತಗಳನ್ನು ಪಡೆದಿದ್ದಾರೆ.
ತಿಮ್ಮನಹಳ್ಳಿ ಕ್ಷೇತ್ರ : ಒಟ್ಟು 4724 ಮತಗಳು ಚಲಾವಣೆಗೊಂಡಿದ್ದು ಕೆ.ಎಸ್.ಸುಮಿತ್ರ(ಜೆಡಿಯು) 1680 ಮತಗಳನ್ನು ಪಡೆದು ಜಯಶೀಲರಾದರೆ ಕರಿಯಮ್ಮ(ಜೆಡಿಎಸ್) 1388, ಪುಟ್ಟಗಂಗಮ್ಮ(ಕಾಂಗ್ರೆಸ್) 1111, ಲಲಿತಮ್ಮ(ಬಿಜೆಪಿ) 545 ಮತಗಳನ್ನು ಪಡೆದಿದ್ದಾರೆ.
ಕಂದಿಕೆರೆ ಕ್ಷೇತ್ರ : ಒಟ್ಟು 5054 ಮತಗಳು ಚಲಾಚಣೆಗೊಂಡರೆ ವೈ.ಎಂ.ಉಮಾದೇವಿ 1764 ಮತಗಳನ್ನು ಪಡೆದು ಜಯಶೀಲರಾದರೆ ರೇಣುಕಮ್ಮ(ಜೆಡಿಯು) 1653, ಕ್ಯಾತಲಿಂಗಮ್ಮ(ಕಾಂಗ್ರೆಸ್) 1150, ಪಾರ್ವತಮ್ಮ(ಬಿಜೆಪಿ) 487 ಮತಗಳನ್ನು ಪಡೆದಿದ್ದಾರೆ.
ಮಾಳಿಗೆಹಳ್ಳಿ ಕ್ಷೇತ್ರ: ಒಟ್ಟು 5272 ಮತಗಳು ಚಲಾವಣೆಗೊಂಡು ಚಂದ್ರಕಲಾ ಎಂ.ಎಸ್(ಜೆಡಿಎಸ್) 2055 ಮತಗಳನ್ನು ಪಡೆದು ಜಯಶೀಲರಾದರೆ, ಲತಾ(ಜೆಡಿಎಸ್) 2101, ನಿರ್ಮಲ ಶಿವಾನಂದಯ್ಯ(ಬಿಜೆಪಿ) 903, ಎನ್.ಸಿ.ಮಧು(ಕಾಂಗ್ರೆಸ್) 213 ಮತಗಳನ್ನು ಪಡೆದಿದ್ದಾರೆ.
ಕುಪ್ಪೂರು ಕ್ಷೇತ್ರ: ಒಟ್ಟು 5387 ಮತ ಚಲಾವಣೆಗೊಂಡರೆ ಟಿ.ಡಿ.ಚಿಕ್ಕಮ್ಮ(ಜೆಡಿಯು) 1905 ಮತಗಳನ್ನು ಪಡೆದು ಜಯಶೀಲರಾದರು, ಕೆ.ಪಿ.ಪ್ರೇಮಲೀಲ(ಜೆಡಿಎಸ್) 1671, ಸುವರ್ಣಮ್ಮ ಎಸ್.ಬಿ(ಬಿಜೆಪಿ) 1379, ಪಿ.ಸುಜಾತ(ಕಾಂಗ್ರೆಸ್) 432 ಮತಗಳನ್ನು ಪಡೆದಿದ್ದಾರೆ.
ಜಯಚಾಮರಾಜಪುರ ಕ್ಷೇತ್ರ: ಒಟ್ಟು 5459 ಮತ ಚಲಾವಣೆಗೊಂಡು ಎಂ.ಎಂ.ಜಗದೀಶ್(ಬಿಜೆಪಿ) 2092 ಮತ ಪಡೆದು ಜಯಶೀಲರಾದರೆ ಎಂ.ಪಿ.ಪ್ರಸನ್ನಕುಮಾರ್(ಜೆಡಿಯು) 2028, ಬಿ.ದಯಾನಂದಮೂತರ್ಿ(ಜೆಡಿಎಸ್)652, ಶೇಖರಯ್ಯ(ಕಾಂಗ್ರೆಸ್) 604, ಕೆ.ಎಂ.ಸತೀಶ್ಬಾಬು(ಬಿಎಸ್ಪಿ) 83 ಮತಗಳನ್ನು ಪಡೆದಿದ್ದಾರೆ.
ಬರಗೂರು ಕ್ಷೇತ್ರ: ಒಟ್ಟು 5487 ಮತ ಚಲಾವಣೆಗೊಂಡು ಕೆ.ಆರ್.ಚೇತನಗಂಗಾಧರ(ಜೆ.ಡಿ.ಎಸ್) 2380 ಮತಗಳನ್ನು ಪಡೆದು ಜಯಶೀಲರಾದರೆ ನೇತ್ರಾವತಿ ಹೆಚ್.ಡಿ(ಬಿಜೆಪಿ) 1011, ಶ್ರೀದೇವಿ(ಜೆ.ಡಿ.ಯು) 1941, ಶಾರದಮ್ಮ(ಕಾಂಗ್ರೆಸ್ ಐ) 155 ಮತಗಳನ್ನು ಪಡೆದಿದ್ದಾರೆ.
ದೊಡ್ಡೆಣ್ಣೆಗೆರೆ ಕ್ಷೇತ್ರ: ಒಟ್ಟು 5352 ಮತ ಚಲಾವಣೆಗೊಂಡು ಬಿ.ಸಿ.ಹೇಮಾವತಿ(ಜೆ.ಡಿ.ಎಸ್) 1754 ಮತಗಳನ್ನು ಪಡೆದು ಜಯಶೀಲಾದರೆ ಪುಷ್ಪಾವತಿ(ಜೆ.ಡಿ.ಯು) 1632, ಬಿ.ಜಿ.ಲೀಲಾವತಿ(ಬಿ.ಜೆ.ಪಿ)983, ಎಸ್.ಗೀತಶಿವಕುಮಾರ್(ಕಾಂಗ್ರೆಸ್) 502, ಚಂದ್ರಮ್ಮ ಡಿ.ಬಿ.ಬಸವರಾಜು(ಪಕ್ಷೇತ್ರ)369, ಮಂಜಮ್ಮ(ಬಿ.ಎಸ್.ಪಿ)59, ಲಕ್ಷ್ಮೀದೇವಿ(ಪಕ್ಷೇತರ)53 ಮತಗಳನ್ನು ಪಡೆದಿದ್ದಾರೆ.
ಯಳನಡು ಕ್ಷೇತ್ರ: ಒಟ್ಟು 5787 ಮತ ಚಲಾವಣೆಗೊಂಡಿದ್ದು ಜಯಲಕ್ಷ್ಮೀ(ಬಿಜೆಪಿ) 1920 ಮತಗಳನ್ನು ಪಡೆದು ಜಯಶೀಲರಾದರೆ ತಾರಾಮಣಿಯಾದವ್(ಜೆಡಿಎಸ್) 1596, ವೈ.ಆರ್.ಲತಾಮಣಿ(ಕಾಂಗ್ರೆಸ್) 926, ಕೆ.ವಿಜಯಲಕ್ಷ್ಮಮ್ಮ (ಜೆಡಿಯು) 780, ಹೆಚ್.ಆರ್.ಜ್ಯೋತಿ(ಪಕ್ಷೇತರ) 565 ಮತಗಳನ್ನು ಪಡೆದಿದ್ದಾರೆ.
ಕೆಂಕೆರೆ ಕ್ಷೇತ್ರ: ಒಟ್ಟು 4756 ಮತ ಚಲಾವಣೆಗೊಂಡಿದ್ದು ಕೆ.ಎಂ.ನವೀನ್(ಬಿಜೆಪಿ) 2266 ಮತಗಳನ್ನು ಪಡೆದು ಜಯಶೀಲರಾದರೆ ಶಿವಕುಮಾರ್(ಜೆಡಿಯು) 1130, ಕೆ.ಆರ್.ಚನ್ನಬಸವಯ್ಯ(ಜೆಡಿಎಸ್)1126, ಎಂ.ನಾಗರಾಜು(ಕಾಂಗ್ರೆಸ್) 234 ಮತಗಳನ್ನು ಪಡೆದಿದ್ದಾರೆ.
ಹೊಯಿಸಲಕಟ್ಟೆ ಕ್ಷೇತ್ರ: ಒಟ್ಟು 5025 ಮತ ಚಲಾವಣೆಗೊಂಡಿದ್ದು ಎ.ಜಿ.ಕವಿತಾ(ಜೆಡಿಎಸ್) 1834 ಮತಗಳನ್ನು ಪಡೆದು ಜಯಶೀಲರಾದರೆ ಚಂದ್ರಪ್ರಭ (ಬಿಜೆಪಿ)1625, ಎಂ.ಪಿ.ಲಕ್ಷ್ಮೀದೇವಿ(ಕಾಂಗ್ರೆಸ್) 874, ಮೀನಾಕ್ಷಮ್ಮ(ಜೆಡಿಯು) 692 ಮತಗಳನ್ನು ಪಡೆದಿದ್ದಾರೆ.
ತೀರ್ಥಪುರ ಕ್ಷೇತ್ರ: ಒಟ್ಟು 6563 ಮತ ಚಲಾವಣೆಗೊಂಡಿದ್ದು ಲತ.ಎಂ.ಇ(ಜೆಡಿಯು) 3036 ಮತಗಳನ್ನು ಪಡೆದು ಜಯಶೀಲರಾದರೆ, ಕೆ.ಬಿ.ಮಂಜುಳ(ಜೆಡಿಎಸ್) 2290,ಲಕ್ಷ್ಮೀದೇವಮ್ಮ(ಬಿಜೆಪಿ) ಎಂ.ಕೆ 783, ಧನಲಕ್ಷ್ಮೀ(ಕಾಂಗ್ರೆಸ್) 454 ಮತಗಳನ್ನು ಪಡೆದಿದ್ದಾರೆ.

Monday, January 3, 2011

Sunday, January 2, 2011


ಮತ ಎಣಿಕೆಗೆ ಸಕಲ ಸಿದ್ದತೆ, ಪಟ್ಟಣದಲ್ಲಿ ಬಿಗಿ ಬಂದುಬಸ್ತು
ಚಿಕ್ಕನಾಯಕನಹಳ್ಳಿ,ಜ.02: ತಾಲೂಕಿನ ಚುನಾವಣಾ ಕ್ಷೇತ್ರಗಳ ಮತ ಎಣಿಕೆಗಾಗಿ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜಿನ 7ಕೊಠಡಿಗಳಲ್ಲಿ ಮತಎಣಿಕೆ ನಡೆಯಲಿದ್ದು 3ಕೊಠಡಿ ಜಿ.ಪಂ ಕ್ಷೇತ್ರ, 4ಕೊಠಡಿ ತಾ.ಪಂ ಕ್ಷೇತ್ರಗಳಿಗೆ ಮೀಸಲಿಡಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜ್ ತಿಳಿಸಿದ್ದಾರೆ.
ಜನವರಿ 4ರ ಮಂಗಳವಾರ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಕಾರ್ಯಕ್ರಮ ನಡೆಯಲಿದ್ದು 100ಜನ ಪೋಲಿಸ್ ಸಿಬ್ಬಂದಿ ಮತ್ತು 100 ಮಂದಿ ಎಣಿಕೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಅಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಕಾನೂನು ಸುವ್ಯವಸ್ಥೆಗೆ ಅಗತ್ಯವಿರುವ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಮಧ್ಯ ಮಾರಟವನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕಾರ್ಯ ಮಧ್ಯಾಹ್ನ 12ರ ಹೊತ್ತಿಗೆಲ್ಲಾ ಮುಗಿಯುವ ನಿರೀಕ್ಷಿ ಇದೆ ಎಂದರು.
ಜಿ.ಪಂ.ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಕೊಠಡಿ : ಜಿ.ಪಂ ಕ್ಷೇತ್ರಗಳಿಗೆ 3ಕೊಠಡಿ ಮೀಸಲಿಟ್ಟಿದ್ದು 1ನೇ ಕೊಠಡಿ ಹೇಮಾವತಿಯಲ್ಲಿ ಹುಳಿಯಾರು ಮತ್ತು ಹೊಯ್ಸಳಕಟ್ಟೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 2ನೇ ಕೊಠಡಿ
ಘಟ್ಟಪ್ರಭ ಕಂದಿಕೆರೆ , ಹಂದನಕೆರೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 3ನೇ ಕೊಠಡಿ ವೇದಾವತಿಯಲ್ಲಿ ಶಟ್ಟಿಕೆರೆ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ತಾ.ಪಂ.ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಕೊಠಡಿ : 4ನೇ ಕೊಠಡಿ ಶರಾವತಿಯಲ್ಲಿ ತಾ.ಪಂ.ನ 6ಕ್ಷೇತ್ರಗಳಾದ ಹುಳಿಯಾರು, ಯಳನಡು, ತಿಮ್ಲಾಪುರ, ಕೆಂಕೆರೆ, ಗಾಣದಾಳು, ಹೊಯ್ಸಲಕಟ್ಟೆ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ.
5ನೇ ಕೊಠಡಿ ನೇತ್ರಾವತಿಯಲ್ಲಿ 6ಕ್ಷೇತ್ರಗಳಾದ ತಿಮ್ಮನಹಳ್ಳಿ, ತೀರ್ಧಪುರ, ಕಂದಿಕೆರೆ, ಮಾಳಿಗೆಹಳ್ಳಿ, ಹೊನ್ನೆಬಾಗಿ, ಜೆ.ಸಿ.ಪುರ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
6ನೇ ಕೊಠಡಿ ಕೃಷ್ಣದಲ್ಲಿ ಶೆಟ್ಟಿಕೆರೆ ಮತ್ತು ಕುಪ್ಪೂರು ಈ 2ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
7ನೇ ಕೊಠಡಿ ಮಲಪ್ರಭದಲ್ಲಿ 5ಕ್ಷೇತ್ರಗಳಾದ ಮತಿಘಟ್ಟ, ಬರಗೂರು, ಹಂದನಕೆರೆ, ಡಿ.ವೈ.ಗೆರೆ, ದಸೂಡಿ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ.
ಎ.ಬಿ.ವಿ.ಪಿ. ತಾಲೂಕು ಕಛೇರಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಜ.02: ಆಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲೂಕು ಘಟ್ಟದ ನೂತನ ಕಛೇರಿ ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಉದ್ಘಾಟಿಸಿದರು.
ಪಟ್ಟಣದ ಚಿಕ್ಕ ಆಂಜನೇಯ ಸ್ವಾಮಿ ಬಳಿ ಉದ್ಘಾಟನೆಗೊಂಡ ಅಭಾವಿಪ ಕಛೇರಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತು.ಹಾ.ಒಕ್ಕೂಟದ ಅದ್ಯಕ್ಷ ಶಿವನಂಜಪ್ಪ ಹಳೇಮನೆ, ಅಭಾವಿಪ ಸಂಘಟನೆಯು ಹೆಚ್ಚು ಪ್ರಚಲಿತವಾಗಿ ವಿದ್ಯಾಥರ್ಿಗಳ ಸಮಸ್ಯೆಗಳನ್ನು ನಿವಾರಿಸಲು ಹೋರಾಡಬೇಕು, ಚಿಕ್ಕದಾಗಿ ಸ್ಥಾಪಿತವಾಗಿರುವ ಕಛೇರಿ ಅತಿ ಎತ್ತರಕ್ಕೆ ಬೆಳೆಯಬೇಕೆಂದು ಆಶಿಸಿದರು.
ಸಮಾರಂಭದಲ್ಲಿ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್, ಮಾರಸಂದ್ರ ಸಿದ್ದರಾಮಯ್ಯ, ಕಾರ್ಯಕರ್ತರುಗಳಾದ ರಾಕೇಶ್, ನವೀನ್, ಚಂದನ್ ಉಪಸ್ಥಿತರಿದ್ದರು.

Thursday, December 30, 2010

Sunday, December 26, 2010


ಕೃಷಿ ಅಭಿವೃದ್ದಿಗೆ ಬ್ಯಾಂಕ್ಗಳು ಹೆಚ್ಚು ಆಥರ್ಿಕ ಸೌಲಭ್ಯ ನೀಡಲು ಬದ್ದ
ಚಿಕ್ಕನಾಯಕನಹಳ್ಳಿ,ಡಿ.26: ಕೃಷಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ ಒಂದು ಉದ್ಯಮವೆಂದು ತಿಳಿದು ಉಳುಮೆ ಮಾಡಿದರೆ ಉತ್ತಮ ಫಸಲು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಕೆನರಾ ಬ್ಯಾಂಕ್ ಉಪಪ್ರಬಂಧಕ ರವೀಂದ್ರ ಭಂಡಾರಿ ಹೇಳಿದರು.
ತಾಲೂಕಿನ ಅಣೇಕಟ್ಟೆಯಲ್ಲಿ ನಡೆದ ಧರಿತ್ರಿ ಕೃಷಿಕರ ಕೂಟ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಾಹಿತಿ ಸಂಗ್ರಹಣೆ, ತರಬೇತಿ, ಮಾರುಕಟ್ಟೆಯು ಬ್ಯಾಂಕ್ನೊಂದಿಗಿನ ಸಂಬಂಧವಾಗಿದ್ದು, ಕೃಷಿಕರ ಒಕ್ಕೂಟ, ಕೇಂದ್ರವಾಗಿ ಪರಿವರ್ತನೆಯಾಗಿ ಸಂಘಟನೆಯ ಮುಖೇನ ಕೆಲಸ ನಿರ್ವಹಿಸಿದರ ಯಶಸ್ವಿಯಾಗುತ್ತದೆ ಎಂದ ಅವರು ಜನಪರ ಕಾರ್ಯಗಳಿಗೆ ಕೆನರಾ ಬ್ಯಾಂಕ್ ಸದಾ ಸಹಕಾರ ನೀಡುವುದೆಂದು ತಿಳಿಸಿದರು.
ನಬಾಡರ್್ ಸಹಾಯಕ ಪ್ರಬಂಧಕ ಅನಂತಕೃಷ್ಣ ಮಾತನಾಡಿ ಕೃಷಿಕರ ಕೂಟಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು, ಮಾಸಿಕ ಸಭೆಗಳನ್ನು ನಡೆಸಲು, ನಬಾಡರ್್ನಿಂದ ಹತ್ತು ಸಾವಿರ ರೂಗಳನ್ನು ಪ್ರತಿವರ್ಷ ನೀಡಲಾಗುವುದು ಮತ್ತು ನಬಾಡರ್್ ಸಂಸ್ಥೆಯು ರೈತರ ಏಳ್ಗೆಗಾಗಿಯೇ ಇರುವ ಒಂದು ಸಕರ್ಾರಿ ಸಂಸ್ಥೆಯಾಗಿದ್ದು ಯಾವುದೇ ಸಹಾಯ ಬೇಕಾದಲ್ಲಿ ತಮ್ಮನ್ನು ಸಂಪಕರ್ಿಸಲು ಕೋರಿದರು.
ಅಕ್ಷಯ ಕಲ್ಪ ಸಂಸ್ಥೆ ನಿದರ್ೇಶಕ ಡಾ.ಜಿ.ಎನ್.ಎಸ್.ರೆಡ್ಡಿ ಮಾತನಾಡಿ ರೈತರು ಮಾರುಕಟ್ಟೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಬಾಡರ್್ನಿಂದ ದೊರಕುವ ಉಗ್ರಾಣ ಸಹಾಯಧನವನ್ನು ಉಪಯೋಗಿಸಿಕೊಳ್ಳಬೇಕು ಎಂದ ಅವರು ಕೇವಲ ಸೆಮಿನಾರ್ ರೈತರಾಗದೆ ಕ್ರಿಯೆಯ ರೈತರಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಧರಿತ್ರಿ ಕೃಷಿಕರ ಕೂಟದ ಮುಖ್ಯ ಸಂಚಾಲಕ ನಂಜಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಸತೀಶ್, ವೀರಣ್ಣ ಉಪಸ್ಥಿತರಿದ್ದರು.
ಕೃಷಿ ವಿಸ್ತರಣಾಧಿಕಾರಿ ಮನೋಜ್ನಾಯಕ್ ಸ್ವಾಗತಿಸಿದರೆ, ಸಂಚಾಲಕ ರಘುರಾಂ ನಿರೂಪಿಸಿ, ನವಿಲೆರಘು ವಂದಿಸಿದರು.

ವಿಕಲಚೇತನಿರಿಗೆ ಉಚಿತ ಕೃತಕ ಉಪಕರಣಗಳ ಜೊಡಣೆ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.26: ಮುಂಗೈ ಮತ್ತು ಕಾಲಿಲ್ಲದವರಿಗಾಗಿ ಕೃತಕವಾಗಿ ಕಾಲುಗಳು, ಪೋಲಿಯೋ ಪೀಡಿತರಿಗೆ ಕ್ಯಾಲಿಪರ್ಸಗಳನ್ನು ರೋಟರಿ ಸಂಸ್ಥೆ ಉಚಿತವಾಗಿ ಇದೇ ಜನವರಿ 3 ರಿಂದ 9ರವರಗೆ ನೀಡುವುದು ಎಂದು ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ತಿಳಿಸಿದ್ದಾರೆ.
ರೋಟರಿ ಬೆಂಗಳೂರು ಪೀಣ್ಯಾ ಮತ್ತು ಜೈಪುರ ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿವತಿಯಿಂದ ಈ ಕಾರ್ಯಕ್ರಮ ಏರ್ಪಡಿಸಿದ್ದು ಉಚಿತವಾಗಿ ಪೋಲಿಯೋ ಕರೆಕ್ಟಿವ್ ಸರ್ಜರಿಗೆ ನೋಂದಾವಣೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ 9886732338ಗೆ ಸಂಪಕರ್ಿಸಲು ಕೋರಿದ್ದಾರೆ.


Saturday, December 25, 2010

ಜೆ.ಡಿ.ಎಸ್, ಬಿ.ಜೆ.ಪಿ. ಸಿಂಹಪಾಲಿಗಾಗಿ ಹೋರಾಟ. ಜೆ.ಡಿ.ಯು, ಕಾಂಗ್ರೆಸ್ ಸ್ಥಾನ
ಹೆಚ್ಚಿಸಿಕೊಳ್ಳುವ ಹಠ.

(ಕೆ.ಎನ್.ಎನ್)
ಚಿಕ್ಕನಾಯಕನಹಳ್ಳಿ,ಡಿ.25: ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಮತದಾರನನ್ನು ಓಲೈಸುವ ಅಂತಿಮ ಪ್ರಯತ್ನವಾಗಿ ಆಮೀಷಕ್ಕೆ ಇಡು ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ. ಇದರಿಂದಾಗಿ ಕ್ಷಣ ಕ್ಷಣಕ್ಕೂ ಅಬ್ಯಾಥರ್ಿಗಳ ಪರವಾದ ವಾತಾವರಣ ಬದಲಾಗುತ್ತಿದೆ.
ನಾಮಪತ್ರ ಅಂತಿಮಗೊಂಡು ನಿಜವಾದ ಅಬ್ಯಾಥರ್ಿಗಳು ಯಾರೆಂಬುದು ಸ್ಪಷ್ಟವಾದ ಐದಾರು ದಿನಗಳ ತನಕ ಒಂದು ರೀತಿಯ ಅಲೆ ನಿಮರ್ಾಣವಾಗಿದ್ದರೆ, ಶುಕ್ರವಾರದಿಂದ ಅದರ ಸ್ವರೂಪವೇ ಬದಲಾಗುತ್ತಿದೆ. ಕೊನೆಯ ಎರಡು ದಿನಗಳಲ್ಲಿ ಚುನಾವಣೆಯ ತಂತ್ರಗಳು ವಿಭಿನ್ನರೀತಿಯಾಗಿರುವುದರಿಂದ ಮತದಾರರ ಒಲವು ಯಾವ ಕಡೆ ಎಂಬುದನ್ನು ಸುಲಭವಾಗಿ ಅಥರ್ೈಸುವುದು ಕಷ್ಟ ಸಾಧ್ಯವೇ ಸರಿ.
ಅಬ್ಯಾಥರ್ಿಗಳ ಹಾಗೂ ಅವರ ಬೆಂಬಲಿಗರ ಹಲವಾರು ತಂತ್ರಗಾರಿಕೆಗಳ ನಡುವೆಯೂ, ಮತದಾರ ತಾನು ಯಾರಿಗೆ ಓಟು ನೀಡಬೇಕೆಂಬ ಗುಟ್ಟನ್ನು ಆತ್ಮೀಯವಾಗಿ ಮಾತಿಗೆಳೆದಾಗ ಮಾತ್ರ ಸೂಕ್ಷ್ಮವಾಗಿ ತಿಳಿಸ ಬಲ್ಲ. ಕೆಲಸಕ್ಕಾಗಿ ಪತ್ರಿಕೆ ಗ್ರಾಮಸ್ಥರಿಂದ ಪಡೆದ ವಿವರಣೆಗಳನ್ನು ವಿಶ್ಲೇಷಿಸಿದಾಗ ದೊರೆತ ಮಾಹಿತಿ ಇಂತಿದೆ.
ತಾಲೂಕಿನಲ್ಲಿನ ಐದು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪೈಕಿ ಬಿ.ಜೆ.ಪಿ ಹಾಗೂ ಜೆ.ಡಿ.ಎಸ್. ಸಿಂಹಪಾಲನ್ನು ಪಡೆಯುವುದಾಕ್ಕಾಗಿ ಶತಾಯಗಥಾಯ ಹೋರಾಡುತ್ತಿದ್ದರೆ, ಕಾಂಗ್ರೆಸ್ ಹಾಗೂ ಜೆ.ಡಿ.ಯು ತಲಾ ಎರಡು ಕ್ಷೇತ್ರಗಳನ್ನು ಪಡೆಯಲೇ ಬೇಕೆಂದು ಹಠ ಹಿಡಿದಿವೆ. ನಡುವೆ ಜೆ.ಡಿ.ಯು ಹಾಗೂ ಬಂಡಾಯ ಅಬ್ಯಾಥರ್ಿ ಬಲ ಮೇಲುಗೈ ಆದರೆ ಇದರಿಂದ ಬಿ.ಜೆ.ಪಿ.ಗೆ ಸಹಿಸಿಕೊಳ್ಳುವುದು ಕಷ್ಟವಾದರೆ, ಕಾಂಗ್ರೆಸ್ ಬಲಿಷ್ಟವಾದಷ್ಟು ಜೆ.ಡಿ.ಎಸ್.ಗೆ ಪೆಟ್ಟು ಗ್ಯಾರಂಟಿ.
ಮಾಜಿ ಸಿ.ಎಂ. ಕುಮಾರಸ್ವಾಮಿ ಗರಡಿಯಲ್ಲಿ ಚೆನ್ನಾಗಿ ಪಳಗಿರುವ ಶಾಸಕ ಸಿ.ಬಿ.ಸುರೇಶ್ ಬಾಬು, ಇತ್ತೀಚೆಗಂತೂ ತಂತ್ರಗಾರಿಕೆ ರೂಪಿಸುವಲ್ಲಿ ಸಿದ್ದ ಹಸ್ತರಾಗಿರುವಂತಿದೆ. ತಮ್ಮ ಯಾವುದೇ ನಡೆಯನ್ನು ಬಿಟ್ಟುಕೊಡದೆ ಚುನಾವಣಾ ತಂತ್ರಗಳನ್ನು ರಾತ್ರಿ ಕಾಯರ್ಾಚರಣೆಗೆ ಮೀಸಲಿಟ್ಟಿದ್ದಾರೆ. ಬಿ.ಜೆ.ಪಿ. ಕಿರಣ್ಕುಮಾರ್ ರವರು ತಮ್ಮ ಅನುಭವದ ಜೊತೆಗೆ ಸಂಸದ ಜಿ.ಎಸ್.ಬಸವರಾಜು ರವರೊಂದಿಗೆ ಒಂದು ರೌಂಡ್ ಬಂದಿದ್ದಾರೆ ಮತದಾರರ ಆಸೆ ಆಮೀಷಗಳನ್ನು ಪೂರೈಸಲು ಸನ್ನದ್ದರಾಗಿದ್ದಾರೆ ಹಣವನ್ನು ಸ್ಪಲ್ಪ ಧಾರಳವಾಗಿಯೇ ಕೈ ಬಿಡುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಜೆ.ಡಿ.ಯು. ಜೆ.ಸಿ.ಮಾಧುಸ್ವಾಮಿ ಪಕ್ಷಕ್ಕಿಂತ ನಾಯಕತ್ವಕ್ಕೆ ಬೆಲೆ ಕೊಡಿ, ಬೆಂಗಳೂರಿನಲ್ಲಿರುವ ಜನರು ಬೇಕೇ, ಕ್ಷೇತ್ರದಲ್ಲಿ ವಾಸ್ತವ್ಯ ಇರುವ ನಾಯಕರು ಬೇಕೊ ಆರಿಸಿಕೊಳ್ಳಿ ಎಂಬ ಭಾವನಾತ್ಮಕ ಮಾತುಗಳಿಂದ ಜನರನ್ನು ತಮ್ಮ ಪರವಾಗಿ ಎಳೆದುಕೊಳ್ಳುವ ಜೊತೆಗೆ ತಮ್ಮ ಕೈಲಾದ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರೆ. ಕಾಂಗ್ರೆಸ್ನಲ್ಲಿ ಈಗ ಒಂದಿಷ್ಟು ಚೇತರಿಕೆಯ ವಾತಾವರಣ ಮೂಡಿದೆ, ಹೊಯ್ಸಳಕಟ್ಟೆ, ಹುಳಿಯಾರು, ಕಂದಿಕೆರೆ ಜಿ..ಕ್ಷೇತ್ರಗಳಲ್ಲಿ ಪದೇ ಪದೇ ಕಾಣಸಿಗುತ್ತಿರುವ ಜಯಚಂದ್ರ ರವರ ಮಗ ಸಂತೋಷ ಇಲ್ಲಿಯೇ ಗಿರಿಕಿ ಹೊಡೆಯುತ್ತಿದ್ದಾರೆ. ಸಿ.ಬಸವರಾಜು, ಸೀಮೆಣ್ಣೆ ಕೃಷ್ಣಯ್ಯ ತಮ್ಮ ಕೈಲಾದಷ್ಟು ಕಾರ್ಯಕರ್ತರನ್ನು ಹುರುದುಂಬಿಸುತ್ತಿದ್ದಾರೆ.
ಜಿ.ಪಂ. ಕ್ಷೇತ್ರಗಳ ಪೈಕಿ ಶೆಟ್ಟೀಕೆರೆ ಕ್ಷೇತ್ರಕ್ಕೆ ಎಲ್ಲಿಲ್ಲದ ಮಹತ್ವ ಯಾಕೆಂದರೆ ತಾಲೂಕಿನ ಗಣಿ ಪ್ರದೇಶದಲ್ಲಿನ ಶೇ.80ರಷ್ಟು ಖನಿಜ ಇರುವುದು ಪ್ರದೇಶದ ವ್ಯಾಪ್ತಿಯಲ್ಲಿಯೇ, ಈಗಾಗಿ ಇಲ್ಲಿ ಐದು ಜನ ಅಬ್ಯಾಥರ್ಿಗಳು. ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆಯಲು ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಯು, ಜೆ,ಡಿ.ಎಸ್ ಹಾಗೂ ಬಂಡಾಯ ಬಿ.ಜೆ.ಪಿ. ಅಬ್ಯಾಥರ್ಿ. ಇಲ್ಲಿ ಬಿ.ಜೆ.ಪಿ.ಯವರ ಕಾಲನ್ನು ಜೆ.ಡಿ.ಯು ಹಾಗೂ ಬಂಡಾಯ ಬಿ.ಜೆ.ಪಿ. ಅಬ್ಯಾಥರ್ಿ ಎಳೆಯುತ್ತಿದ್ದರೆ, ಕಾಂಗ್ರೆಸ್ನವರ ಕಾಲನ್ನು ಜೆ.ಡಿ.ಎಸ್.ನವರು ಎಳೆಯುತ್ತಿದ್ದಾರೆ.
ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಆರಂಭದಿಂದ ಇಲ್ಲಿಯವರೆಗೂ ಗೆದ್ದಿರುವವರು ಲಿಂಗಾಯಿತರೇ ಹೆಚ್ಚು, ಇಲ್ಲಿ ಹಿಂದುಳಿದ ವರ್ಗಗಳ ಮತಗಳೂ ನಿಣರ್ಾಯಕವಾದವು ಎಂಬುದನ್ನು ಇತ್ತೀಚಗಷ್ಟೇ ಅರಿತಿರುವುದರಿಂದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಹಿಂದುಳಿದವರನ್ನು ಕಣಕ್ಕಿಳಿಸಿದ್ದಾರೆ. ಜೆ.ಡಿ.ಎಸ್. ಸಾಸಲು ಸತೀಶ್ ಇಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಬಿ.ಲಕ್ಕಪ್ಪನವರಿಗೆ ತೊಡರಗಾಲು ಆಗುತ್ತಾರೆಯೇ ಹೊರತು ಗೆಲ್ಲುವ ಅವಕಾಶಗಳು ಕಡಿಮೆ. ಜೆ.ಡಿ.ಯುನ ಶಂಕರಲಿಂಗಯ್ಯನಿಗೆ ಹಿಂದೆ ಸೋತಿದ್ದಾರೆಂಬ ಅನುಕಂಪ ಹಾಗೂ ಜೆ.ಸಿ.ಎಂ. ಪ್ರಭಾವಳಿ ಕೆಲಸ ಮಾಡಬೇಕಿದೆ. ಸದ್ಯಕ್ಕೆ ಇಲ್ಲಿ ಕಾಂಗ್ರೆಸ್ನ ಬಿ.ಲಕ್ಕಪ್ಪ ಹಾಗೂ ಪಕ್ಷೇತರ ಅಬ್ಯಾಥರ್ಿ ಬಿ.ಎನ್.ಶಿವಪ್ರಕಾಶ್ಗೆ ನೇರ ಹಣಾಹಣಿ ಇದ್ದರೂ, ಬಿ.ಜೆ.ಪಿ. ಅಬ್ಯಾಥರ್ಿ ಪಂಚಾಕ್ಷರಯ್ಯ ಪ್ರಬಲ ಅಬ್ಯಾಥರ್ಿಯೇ, ಮೂವರು ಲಿಂಗಾಯಿತರು ಓಟಗಳನ್ನು ಹಂಚಿಕೊಳ್ಳಲಿದ್ದು, ಹಿಂದುಳಿದವರ ಪೈಕಿ ಇಬ್ಬರಿದ್ದು ಉಳಿದ ಜಾತಿಯವರು ಯಾರ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಯಾರೇ ಗೆದ್ದರೂ ಅಲ್ಪ ಮತಗಳ ಅಂತರದಲ್ಲೇ. ಚುನಾವಣೆಯ ದಿನ ಯಾರ್ಯಾರ ಬೆಂಬಲಕ್ಕೆ ಯಾರ್ಯಾರು ಪಾಂಪ್ಲೇಟ್ ಹಿಡಿದು ನಿಲ್ಲುತ್ತಾರೆ ಎಂಬುದರ ಮೇಲೂ ಒಂದು ಕಣ್ಣಿದೆ.
ಕಂದಿಕೆರೆ ಕ್ಷೇತ್ರದಲ್ಲಿ ನಾಲ್ಕು ಪಕ್ಷಗಳು ಸ್ಪಧರ್ಿಸಿವೆ ಇಲ್ಲಿ ಪಕ್ಷೇತರರಿಲ್ಲ, ಬಂಡಾಯದ ಬಿಸಿಯೂ ಕಡಿಮೆ. ಇಲ್ಲಿ ಆರಂಭದಲ್ಲಿ ಕಾಂಗ್ರೆಸ್ನ ಪರಮೇಶ್ವರಯ್ಯ ವೀಕ್ ಎಂಬಂತೆಯೇ ಇತ್ತು, ಆದರೆ ಸಂತೋಷ ಜಯಚಂದ್ರ ಅಖಾಡಕ್ಕಿಣದ ಮೇಲೆ ಸ್ವಲ್ಪ ಚೇತರಿಕೆ ಕಂಡಿದೆ, ಬಿ.ಜೆ.ಪಿ.ಪಕ್ಷದ ಆಲದಕಟ್ಟೆ ಸಿ.ರಂಗನಾಯ್ಕ ಬೆಂಗಳೂರಿನಿಂದ ಧುತ್ತನೆ ಬಂದು ನಿಂತಿರುವದರಿಂದ ಸ್ಥಳೀಯರೇ ಆದರೂ ಇವರು ಕ್ಷೇತ್ರದ ಜನರಿಗೆ ಹೊರಗಿನಂತೆ ಕಾಣುತ್ತಿದ್ದಾರೆ. ಇಲ್ಲಿ ಜೆ.ಡಿ.ಯು ಹಾಗೂ ಜೆ.ಡಿ.ಎಸ್.ಗೆ ನೇರ ಸ್ಪಧರ್ೆ. ಜೆ.ಡಿ.ಎಸ್. ಹೀರಯ್ಯ ಕ್ಷೇತ್ರಕ್ಕೆ ಹೊಸಬ, ಶಾಸಕ ಸಿ.ಬಿ.ಸುರೇಶ್ ಬಾಬು ರವರ ಬೆಂಬಲ ಪ್ರಬಲವಾಗಿ ಕೆಲಸ ಮಾಡಿದರೆ ಉಂಟು ಇಲ್ಲದಿದ್ದರೆ, ಜೆ.ಡಿ.ಯು. ಅಬ್ಯಾಥರ್ಿ ಲೋಹಿತಾ ಬಾಯಿಗೆ ಅವಕಾಶ ಹೆಚ್ಚು. ಲೋಹಿತಾ ಇಷ್ಟು ಪ್ರಬಲವಾಗಲು ಕಾರಣ ಅಬ್ಯಾಥರ್ಿಯ ಭಾವ ಸಿಂಗದಹಳ್ಳಿ ರಾಜ್ಕುಮಾರ್ಗೆ ಕ್ಷೇತ್ರದಲ್ಲಿರುವ ನೆಟ್ ವಕರ್್ ಹಾಗೂ ಕಳೆದ ಜಿ.ಪಂ.ಗಳಲ್ಲಿ ಸೋತಿದ್ದಾರೆಂಬ ಸಿಂಪತಿ ಚೆನ್ನಾಗಿ ಕೆಲಸ ಮಾಡಿತ್ತಿರುವುದರಿಂದ ಲೋಹಿತಾ ಬಾಯಿಯ ಗೆಲುವನ್ನು ತಡೆಯುವುದು ಬೇರೆ ಅಬ್ಯಾಥರ್ಿಗಳಿಗೆ ಕಷ್ಟ ಸಾಧ್ಯ.
ಹಂದನಕೆರೆ ಜಿ.ಪಂ. ಕ್ಷೇತ್ರದಲ್ಲಿ ಆರು ಜನ ಸ್ಪಧರ್ೆಯಲ್ಲಿದ್ದು, ಜೆ.ಡಿ.ಎಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಯು ತ್ರಿಕೋನ ಸ್ಪಧರ್ೆ ಇದೆ. 40 ಮತಗಟ್ಟೆಗಳ ಪೈಕಿ 25 ಮತಗಟ್ಟೆಗಳಲ್ಲಿ ಜೆ.ಡಿ.ಎಸ್. ಜಾನಮ್ಮ ರಾಮಚಂದ್ರಯ್ಯ, ಯಶೋಧ ಬಸವರಾಜು ನೇರ ಹಣಾಹಣಿಯಲ್ಲಿದ್ದಾರೆ, ಉಳಿದ 15 ರಲ್ಲಿ ಜೆ.ಡಿ.ಯು. .ಎಸ್. ಅನುಸೂಯಮ್ಮ ಪ್ರಬಲರಾಗಿದ್ದಾರೆ. ಯಾವ್ಯಾವ ಮತಗಟ್ಟೆಗಳಲ್ಲಿ ಯಾರ್ಯಾರು ಯಾರ್ಯಾರ ಸೀರೆಯ ಸೆರಗು ಹಿಡಿದು ಎಳೆದಾಡುತ್ತಾರೊ ಹೇಳುವುದು ಕಷ್ಟ.
ಹೊಯ್ಸಳಕಟ್ಟೆ ಜಿ.ಪಂ.ಕ್ಷೇತ್ರದಲ್ಲಿ ನಾಲ್ಕು ಪಕ್ಷಗಳಿಂದ ನಾಲ್ಕು ಅಬ್ಯಾಥರ್ಿಗಳು ಸ್ಪಧರ್ೆಯಲ್ಲಿದ್ದಾರೆ ಇದರಲ್ಲಿ ಆರಂಭದಲ್ಲಿ ಜೆ.ಡಿ.ಎಸ್ನ ಜಯಲಕ್ಷ್ಮಿ, ಬಿ.ಜೆ.ಪಿ. ನಿಂಗಮ್ಮ ನವರ ಬೆಂಬಲಿಗರುಗಳು ನಮ್ಮಿಬ್ಬರಲ್ಲಿ ಯಾರು ಬೇಕಾದರೂ ಗೆಲ್ಲ ಬಹುದೆಂದು ಅಂದುಕೊಂಡಿದ್ದರು, ಆದರೆ ಈಗ ಕಾಂಗ್ರೆಸ್ನ ಸಂತೋಷ ಜಯಚಂದ್ರ ಲವಲವಿಕೆಯಿಂದ ಓಡಾಡುತ್ತಿರುವುದು ಜೆ.ಡಿ.ಯು. ವರಿಷ್ಠ ಮಾಧುಸ್ವಾಮಿ ಜನರನ್ನು ತಮ್ಮ ಮಾತಿನ ಮೋಡಿಗೆ ಎಳೆದುಕೊಂಡಿರುವುದರಿಂದ ಜಯಲಕ್ಷ್ಮಿ ಮತ್ತು ನಿಂಗಮ್ಮ ಹೆಚ್ಚು ತ್ರಾಸು ಪಡಬೇಕಿದೆ.
ಹುಳಿಯಾರು ಜಿ.ಪಂ. ಕ್ಷೇತ್ರದಲ್ಲಿ 5 ಜನ ಮಹಿಳೆಯರಲ್ಲಿ ಹೊರೆ ಹೊತ್ತಿರುವ ಎನ್.ಜಿ. ಮಂಜುಳ ನಾನು ಮುಂದು ಎಂದರೆ, ಕಮಲ ಹಿಡಿದಿರುವ ಮಹಿಳೆ ಎಸ್.ಎಚ್.ಲತಾ ನಾನೇನು ಕಮ್ಮಿ ಇಲ್ಲ ಎನ್ನುತ್ತಿದ್ದಾರೆ, ರೇಣುಕಾದೇವಿ ಬಾಣ ಹಿಡಿದು ಯಾರಿಗೆ ಹೊಡೆಯಲಿ ಎನ್ನುತ್ತಿದ್ದಾರೆ, ರಮಾದೇವಿ ಓಟದಲ್ಲಿ ಸ್ವಲ್ಪ ಮುಂದಿರುವ ಇಬ್ಬರ ಪೈಕಿ ಯಾರಿಗೆ ಕೈ ಕೊಡಲಿ ಎನ್ನುತ್ತಿದ್ದಾರೆ. ಬಾಣದ ಹೊಡೆತದಿಂದ ಹಾಗೂ ಕೈ ಕೆಲಸದವರಿಂದ ಮಂಜುಳ ಹಾಗೂ ಲತಾ ಇಬ್ಬರಲ್ಲಿ ಜಯಲಕ್ಷ್ಮಿ ಯಾರ ಕೈ ಹಿಡಿಯುತ್ತಾರೆ ನೋಡಬೇಕಿದೆ.
ತಾ.ಪಂ. ಕ್ಷೇತ್ರಗಳ ಪಕ್ಷವಾರು ವಿಶ್ಲೇಷಣೆ: 19 ತಾ.ಪಂ. ಕ್ಷೇತ್ರಗಳ ಪೈಕಿ ಜೆ.ಡಿ.ಎಸ್. ಏಳು ಕ್ಷೇತ್ರಗಗಳಲ್ಲಿ, ಜೆ.ಡಿ.ಯು. ಐದು ಕ್ಷೇತ್ರಗಳಲ್ಲಿ, ಬಿ.ಜೆ.ಪಿ. ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮೂರು ಸ್ಥಾನಗಳಲ್ಲಿ ಮುಂದಿವೆ.
ಶುಕ್ರವಾರ ರಾತ್ರಿ ಹಾಗೂ ಶನಿವಾರ ನಡೆಯುವ ಚುನಾವಣಾ ತಂತ್ರಗಳನ್ನು ಯಾವ್ಯಾವ ಪಕ್ಷಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೂ ಫಲಿತಾಂಶ ನಿಂತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ

Thursday, December 23, 2010





ಬೆರಳ ತುದಿಯಲ್ಲಿ ಜ್ಞಾನ ಹೊಂದಿರುವವರ ಜೊತೆ ಗ್ರಾಮೀಣ ವಿದ್ಯಾಥರ್ಿಗಳು ಸ್ಪಧರ್ಿಸಬೇಕಿದೆ.
ಚಿಕ್ಕನಾಯಕನಹಳ್ಳಿ,ಡಿ.19: ಅಕ್ಷರ ಜ್ಞಾನ ಅಹಂಕಾರವಾಗಬಾರದು, ಅಂತಃಕರಣ, ಆತ್ಮವಿಶ್ವಾಸ, ತಿಳುವಳಿಕೆಯನ್ನು ಹೆಚ್ಚಿಸುವಂತಹದಾಗಬೇಕು ಎಂದು ಸಾಹಿತಿ ಪ್ರೊ.ಮ.ಲ.ನ.ಮೂತರ್ಿ ಅಭಿಪ್ರಾಯಪಟ್ಟರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಢಶಾಲೆಯ ವಾಷರ್ಿಕೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದರು. ಜ್ಞಾನದೊಂದಿಗೆ ವಿಧೇಯತೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಾಗ ಅಕ್ಷರ ಸಂಸ್ಕೃತಿಗೆ ಶ್ರೇಷ್ಠತೆ ಬರುತ್ತದೆ ಎಂದರು.
ಗ್ರಾಮೀಣ ವಿದ್ಯಾಥರ್ಿಗಳು ನಗರಗಳ ವಿದ್ಯಾಥರ್ಿಗಳೊಂದಿಗೆ ಸ್ಪಧರ್ೆ ಮಾಡುವಂತಹ ಸ್ಥಿತಿ ಇರುವ ಈ ಹೊತ್ತಿನೊಳಗೆ ನಗರದವರು ಬೆರಳ ತುದಿಯಲ್ಲಿ ಜ್ಞಾನ ಕೋಶವನ್ನು ಕಂಪ್ಯೂಟರ್ಗಳ ಮೂಲಕ ಕ್ಷಣಾರ್ಧದಲ್ಲಿ ಪಡೆಯುತ್ತಾರೆ, ಅದೇ ಗ್ರಾಮೀಣ ವಿದ್ಯಾಥರ್ಿಗಳು ಹತ್ತಾರು ಪುಸ್ತಕಗಳನ್ನು ಹುಡುಕಿ ಗುರುಗಳ ಕೃಪೆಗೆ ಒಳಗಾಗಿ ಪಡೆಯುವಂತಹ ಸ್ಥಿತಿ ಇದೆ, ಇದರಿಂದ ಗ್ರಾಮೀಣ ವಿದ್ಯಾಥರ್ಿಗಳು ದೃತಿಗೆಡದೆ ಇಂಟರ್ನೆಟ್ ಲೋಕವನ್ನು ತಾವು ಪರಿಚಯಿಸಿಕೊಂಡು ಜ್ಞಾನದ ದೀವಿಗೆ ನಮ್ಮ ವಿದ್ಯಾಥರ್ಿಗಳ ಕೈಬೆರಳಿಗೂ ಬರುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ಪೋಷಕರು ಹಾಗೂ ಶಾಲೆಯ ಆಡಳಿತ ವರ್ಗ ಹೊಂದುವುದು ಅವಶ್ಯವಾಗಿದೆ ಎಂದರು.
ಗ್ರಾಮೀಣ ಶಿಕ್ಷಕರು ಇನ್ನು ಬೆತ್ತ ಹಿಡಿದು ಬೋಧಿಸುವದನ್ನು ಬಿಟ್ಟು ಚಿತ್ತಹಿಡಿದು ಕಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಶಾಸಕ ಹಾಗೂ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಪೋಷಕರು ಮಕ್ಕಳ ಓದಿನ ಕಡೆ ಹೆಚ್ಚು ಒತ್ತು ಕೊಟ್ಟಾಗ ಮಕ್ಕಳಿಗೆ ವಿದ್ಯಾಭ್ಯಾಸದ ಪ್ರಾಮುಖ್ಯತೆ ಅರಿವಾಗುತ್ತದೆ, ಆದ್ದರಿಂದ ಪೋಷಕರು ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳ ಬಗ್ಗೆಯೂ ನಿಗಾ ಇಡುವುದು ಅವಶ್ಯ, ವಾಷರ್ಿಕೋತ್ಸವದಂತಹ ಸಂದರ್ಭದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪೋಷಕರು ಆಗಮಿಸಿ ತಮ್ಮ ಮಕ್ಕಳನ್ನು ಉತ್ತೇಜಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉನ್ನತ ದಜರ್ೆಯಲ್ಲಿ ಉತ್ತೀರ್ಣರಾದ ವಿದ್ಯಾಥರ್ಿಗಳಿಗೆ ಎ.ಪಿ.ಎಂ.ಸಿ.ಅಧ್ಯಕ್ಷ ಸಿ.ಬಸವರಾಜು ಬೆಳ್ಳಿ ಪದಕ ವಿತರಿಸಿದರು. ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಿವಿಧ ದತ್ತಿ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದಶರ್ಿ ಸಿ.ಎಸ್.ನಟರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ, ಪ್ರೊ.ಮ.ಲ.ನ.ಮೂತರ್ಿ,ಕೆ.ಜಿ.ಮಲ್ಲಿಕಾರ್ಜನಯ್ಯ, ನಿದರ್ೇಶಕರುಗಳಾದ ಜಿ.ತಿಮ್ಮಯ್ಯ, ಸಿ.ಪಿ.ಚಂದ್ರಶೇಖರ್ ಶೆಟ್ಟಿ, ಸಿ.ಎನ್.ಚಂದ್ರಶೇಖರ್ ಗುಪ್ತ, ಸಿ.ಎಂ.ರಂಗಸ್ವಾಮಿ, ಸಿ.ಬಿ.ರೇಣುಕಸ್ವಾಮಿ, ಕಣ್ಣಯ್ಯ, ರಮೇಶ್ಬಾಬು, ಪರಶಿವಮೂತರ್ಿ ಉಪಸ್ಥಿತರಿದ್ದರು.
ಶಾಲೆಯ ಎಚ್.ಎಂ, ಎಂ.ಎಲ್.ಮಲ್ಲಿಕಾರ್ಜನಯ್ಯ ಸ್ವಾಗತಿಸಿದರು, ಎಂ.ಕೆ.ಗಂಗಾಧರಯ್ಯ, ವೇಣುಗೋಪಾಲ್ ನಿರೂಪಿಸಿದರು.

ಅಳಿಯನನ್ನು ಆರಿಸುವಾಗ ನೀಡುವಷ್ಟೇ ಪ್ರಾಮುಖ್ಯತೆಯನ್ನು ಆಳುವವರನ್ನು ಆರಿಸುವಾಗಲು ನೀಡಿ: ದೊರೆಸ್ವಾಮಿ

ಚಿಕ್ಕನಾಯಕನಹಳ್ಳಿ,ಡಿ.23: ಪ್ರಜಾ ಪ್ರತಿನಿಧಿ ಪ್ರಭುತ್ವ ಎನ್ನುವುದಕ್ಕಿಂತ ಪಕ್ಷ ಪ್ರತಿನಿಧಿ ಪ್ರಭುತ್ವ ಎನ್ನುವುದು ಹೆಚ್ಚು ಸೂಕ್ತ ಎಂದು ಗಾಂಧಿವಾದಿ ಡಾ.ಎಚ್.ಎಸ್.ದೊರೆಸ್ವಾಮಿ ವಿಶ್ಲೇಷಿಸಿದರು.
ತಾಲೂಕಿನ ಕುಪ್ಪೂರು ಶ್ರೀ ಮರಳಸಿದ್ದೇಶ್ವರ ಗದ್ದಿಗೆ ಮಠದ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಭಾವೈಕ್ಯತಾ ಸಮಾರಂಭದಲ್ಲಿ 'ಶ್ರೀ ಕುಪ್ಪೂರು ಮರುಳಸಿದ್ದ ಶ್ರೀ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜನ ಸೇವೆ ಮಾಡುವ ಮೂಲಕ ಚುನಾವಣೆಗೆ ಅವಕಾಶವನ್ನು ಕೋರುವ ಕಾಲ ಒಂದಿತ್ತು ಆಗ ಪ್ರಜಾಪ್ರಭುತ್ವಕ್ಕೆ ಅರ್ಥವಿತ್ತು ಆದರೆ ಇಂದು ಈ ವ್ಯವಸ್ಥೆ ಇಲ್ಲ, ಯಾರ ಬಳಿ ಹೆಚ್ಚು ಹಣವಿದೆ ಅಂತವರಿಗೆ ಪಕ್ಷಗಳು ಮಣೆ ಹಾಕುತ್ತಿವೆ, ಪಕ್ಷಗಳು ಕಳುಹಿಸುವ ಪ್ರತಿನಿಧಿಗೆ ಮತದಾರರು ಓಟು ಹಾಕುವಂತಾಗಿದೆ ಎಂದ ಅವರು, ಕೆಲವು ರಾಜಕೀಯ ಪಕ್ಷಗಳ ನೇತಾರರು ದುಡ್ಡಿನ ಹಿಂದೆ ಬಿದ್ದು ಬಿ ಫಾರಂಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಮತದಾರರು ಬಹು ದಿನಗಳಿಗೆ ಒಮ್ಮೆ ಸಿಗುವ ಅವಕಾಶವನ್ನು ಸಮರ್ಥವಾಗಿ ಸದುಪಯೋಗ ಪಡಿಸಿಕೊಳ್ಳುವುದು ಕರ್ತವ್ಯವಾಗಿರುವುದರಿಂದ ಮತದಾನ ಮಾಡುವ ಮುಂಚೆ ತಮ್ಮ ಮಗಳಿಗೆ ವರನನ್ನು ನೋಡುವಾಗ ಪೂವರ್ಾಪರ ತಿಳಿದುಕೊಂಡು, ಯೋಚಿಸಿ ಮಗಳನ್ನು ಕೋಡುವ ರೀತಿಯಲ್ಲೇ ಮತದಾನ ಮಾಡುವಾಗಲೂ ಸಮರ್ಥವಾದ ಅಬ್ಯಾಥರ್ಿಯನ್ನೇ ಹುಡಕಿ ಮತದಾನ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಮಾತನಾಡಿ ಇಂದಿನ ಸಮಾಜದಲ್ಲಿ ನುಡಿ ವೀರರ ಸಂಖ್ಯೆಯೇ ಹೆಚ್ಚುತ್ತಿದ್ದು ನಡೆ ವೀರರು ಇಲ್ಲವಾಗುತ್ತಿದ್ದರೆ ಎಂದರಲ್ಲದೆ, ಮಠಗಳು ಜಾತಿಯ ಕೇಂದ್ರಗಳಾಗತ್ತಿವೆ ಇದರಿಂದ ಜನರಲ್ಲಿ ಭಾವನಾತ್ಮಕ ಕಂದಕಗಳು ಹೆಚ್ಚುತ್ತಿವೆ ಎಂದರು.
ಗುರು ಸನ್ಮಾರ್ಗ ತೋರ ಬೇಕು, ಭಕ್ತ ಮೋಕ್ಷವನ್ನು ಬೇಡಬೇಕು, ಆದರೆ ಇಂದು ಇದು ತಿರು-ಮುರುವಾಗುತ್ತಿದ್ದು, ಗುರು ಹಣವನ್ನು ಬೇಡುತ್ತಿದ್ದಾನೆ, ಭಕ್ತ ಗುರುವನ್ನು ಅಡ್ಡದಾರಿ ಹಿಡಿಸುತ್ತಿದ್ದಾನೆ ಎಂದರು.
ಸಮಾರಂಭದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಧರ್ಮ ರಕ್ಷಕರಾಗಿರುವ ಗುರುಗಳು ಭಕ್ತನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸಬೇಕು, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಸಮಾರಂಭದಲ್ಲಿ ಯಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ, ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ, ಯಸಳೂರು ಮಠದ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮಿ ಮಾತನಾಡಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಹಾಜರಿದ್ದರು.
ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉಪಸ್ಥಿತರಿದ್ದರು.

Wednesday, December 22, 2010

Tuesday, December 21, 2010



ಕೆರೆಗೆ ಹಾರವಾದ ಆಟೋ, ಪ್ರಯಾಣಿಕರು ಪಾರು, ಸ್ಥಳದಲ್ಲಿದ್ದವರ ಸಹಕಾರದಿಂದ ತಪ್ಪಿದ ಭಾರಿ ಅನಾಹುತ:
ಚಿಕ್ಕನಾಯಕನಹಳ್ಳಿ,ಡಿ.21: ತಾಲೂಕಿನ ನವಿಲೆ ಕೆರೆಗೆ ಎರಡು ಆಟೋಗಳು ಮುಖಾಮುಖಿ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದ್ದು ಇದರಿಂದ 6 ಜನಕ್ಕೆ ತೀವ್ರತರತರವಾಗಿ ಪೆಟ್ಟು ಬಿದ್ದಿದ್ದು ಇದರಲ್ಲಿ ಇಬ್ಬರು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಿದ್ದಾರೆ. ಆಟೋದಲ್ಲಿ 12 ಜನರಿದ್ದರು ಎಂಬುದಾಗಿ ಪ್ರತ್ಯಕ್ಷ ದಶರ್ಿ ಪತ್ರಿಕೆಗೆ ತಿಳಿಸಿದ್ದಾರೆ.
ಕುಪ್ಪೂರು ಕಡೆಯಿಂದ ಬಂದ ಲಗೇಜ್ ಆಟೋ, ಚಿ.ನಾ.ಹಳ್ಳಿ ಕಡೆಯಿಂದ ಬಂದ ಪ್ಯಾಸೆಂಜರ್ ಆಟೋಕ್ಕೆ ನವಿಲೆ ಏರಿಯ ಮೇಲೆ ಮುಖಾಮುಖಿ ಢಿಕ್ಕಿ ಹೊಡೆದು ಎರಡು ಆಟೋಗಳು ನವಿಲೆ ಕೆರೆಗೆ ಬಿದ್ದಿವೆ. ಇದರಿಂದ ಆಟೋದಲ್ಲಿದ್ದ 12 ಜನರು ನೀರಿನೊಳಗೆ ಬಿದ್ದಿದ್ದು ತಕ್ಷಣವೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದವರು ಹಾಗೂ ಹೋಲದಲ್ಲಿ ಕೆಲಸ ಮಾಡುತ್ತಿದ್ದವರು ತಕ್ಷಣ ಕಾರ್ಯ ಪ್ರವೃತ್ತರಾಗಿ ನೀರಿನಲ್ಲಿ ಬಿದ್ದವರನ್ನು ದಡಕ್ಕೆ ತಂದು ಆಟೋ ಒಂದರಲ್ಲಿ ಕೆಲವರನ್ನು, ನಂತರ ಸಕರ್ಾರಿ ಬಸ್ನಲ್ಲಿ ಉಳಿದವರನ್ನು ತಕ್ಷಣವೇ ಚಿ.ನಾ.ಹಳ್ಳಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದರಲ್ಲಿ ಹಾಸನದಿಂದ ಕಪ್ಪೂರು ಜಾತ್ರೆಗೆಂದು ಬಂದಿದ್ದ ಹೇಮ ಹಾಗೂ ಚಿ.ನಾ.ಹಳ್ಳಿಯ ಸರ್ವಮಂಗಳ ಎಂಬುವವರಿಗೆ ತೀವ್ರವಾದ ಪೆಟ್ಟಾಗಿದ್ದು ಪ್ರಜ್ಞಾಹೀನರಾಗಿದ್ದರು. ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ನೀಡಿದ ಎರಡು ಗಂಟೆ ಕಳೆದರೂ ಪ್ರಜ್ಞೆ ಬಾರದ ಹಿನ್ನೆಲೆಯಲ್ಲಿ ಇವರನ್ನು ಹೆಚ್ಚನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಲಾಯಿತು. ಅಪಘಾತಕ್ಕೆ ಇಡಾಗಿದ್ದ ಲಗೇಜ್ ಆಟೋ ಮಾಲೀಕರಾದ ಚಟ್ಟಸಂದ್ರದ ಮೈಲಾರಲಿಂಗಾಚಾರ್ ಹಾಗೂ ಅವರ ಮಗ ಹರೀಶ್ ಇಬ್ಬರಿಗೂ ಗಾಯಗಳಾಗಿದ್ದು ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ ನವಿಲೆ, ಮಾರಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿಮಾನವೀಯತೆ ಮೆರೆದು ಗಾಯಳುಗಳನ್ನು ಸಾಗಿಸುವುದರಿಂದ ಮೊದಲಗೊಂಡು ಜೆ.ಸಿ.ಬಿ.ಯನ್ನು ತಂದು ಆಟೋಗಳನ್ನು ಎತ್ತುವ ತನಕ ಎಲ್ಲ ಕಾರ್ಯದಲ್ಲೂ ಗ್ರಾಮಸ್ಥರ ಸಹಕಾರದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿತ್ತು.
ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ತಿಪಟೂರು ಉಪವಿಭಾಗಾಧಿಕಾರಿ ಪಾಟೀಲ್, ತಹಶೀಲ್ದರ್ ಟಿ.ಸಿ.ಕಾಂತರಾಜು, ಸ್ಥಳಕ್ಕೆ ಭೇಟಿ ನೀಡಿದ್ದರು. ಚಿ.ನಾ.ಹಳ್ಳಿ ಪಿ.ಎಸ್.ಐ. ಶಿವಕುಮಾರ್ ಪ್ರಕರಣ ದಾಖಲಿಸಿದ್ದಾರೆ.
ಖಚಿತತೆಗಿಂತ ರೋಚಕತೆಗೆ ಒತ್ತು ನೀಡಿದ ಟಿ.ವಿ.ಮಾಧ್ಯಮ: ಘಟನೆ ನಡೆದು ಸ್ವಲ್ಪ ಹೊತ್ತಿಗೆ ಸುದ್ದಿ ಚಾನಲ್ಗಳು ಸುದ್ದಿಯನ್ನು ಬ್ರೇಕ್ ಮಾಡುವ ಭಾರಟೆಯಲ್ಲಿ ಬದುಕಿದ್ದಗಾಯಳುಗಳನ್ನು ತಮ್ಮ ಸುದ್ದಿ ಪ್ರಸಾರದ ಮೂಲಕ ಸಾಯಿಸಿದರಲ್ಲದೆ, ಆಸ್ಪತ್ರೆಯಲ್ಲಿದ್ದವರನ್ನು ಕಾಣೆಯನ್ನಾಗಿಸಿದರು. ಇದರಿಂದ ಗಾಬರಿಗೊಂಡ ಜನರ ದಂಡೇ ಘಟನೆಯ ಸ್ಥಳಕ್ಕೆ ಧಾವಿಸಿದ್ದರು. ಸ್ಥಳಕ್ಕೆ ಆಗಮಿಸಿದ ಜನರು ಸಂಪೂರ್ಣ ವಿಷಯವನ್ನು ಗ್ರಹಿಸಿದ ಮೇಲೆ ಸುದ್ದಿಯನ್ನು ಖಚಿತವಾಗಿ ಬಿತ್ತರಿಸದ ಟಿ.ವಿ.ಯವರನ್ನು ಶಪಿಸುತ್ತಿದ್ದರು. ರೋಚಕ ಸುದ್ದಿಯನ್ನು ಕೊಡುವ ಆತುರದಲ್ಲಿ ತಪ್ಪು ಸುದ್ದಿಯನ್ನು ನೀಡುವುದು ಎಷ್ಟು ಸರಿ ಎಂದು ಸ್ಥಳದಲ್ಲಿದ್ದ ಪತ್ರಿಕೆಯ ವರದಿಗಾರರನ್ನು ಪ್ರಶ್ನಿಸುತ್ತಾ ು ವಿಮಶರ್ೆ ಮಾಡುತ್ತಿದ್ದರು.

ಚಿ.ನಾ.ಹಳ್ಳಿ: 5 ಜಿ.ಪಂ. ಕ್ಷೇತ್ರಗಳಿಗೆ ಅಂತಿಮವಾಗಿ 26 ಅಭ್ಯಥರ್ಿ ಕಣದಲ್ಲಿದ್ದಾರೆ
ಚಿಕ್ಕನಾಯಕನಹಳ್ಳಿ,ಡಿ.15: ತಾಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ 49 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಈ ಪೈಕಿ 26 ಜನರು ಅಂತಿಮವಾಗಿ ಕಣದಲ್ಲಿ ಉಳಿದು 23 ಜನರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಹುಳಿಯಾರು ಕ್ಷೇತ್ರದಲ್ಲಿ 5, ಹೊಯ್ಸಳಕಟ್ಟೆಯಿಂದ 4, ಹಂದನಕೆರೆ 6, ಕಂದೀಕೆರೆ 4 ಹಾಗೂ ಶೆಟ್ಟೀಕೆರೆ ಕ್ಷೇತ್ರದಿಂದ 7 ಅಬ್ಯಾಥರ್ಿಗಳು ಕಣದಲ್ಲಿ ಉಳಿದಿದ್ದಾರೆ.
ಶೆಟ್ಟೀಕೆರೆ ಕ್ಷೇತ್ರದಿಂದ ಕಾಂಗೈನಿಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಬಿ.ಜೆ.ಪಿಯಿಂದ ಎಚ್.ಬಿ.ಪಂಚಾಕ್ಷರಯ್ಯ, ಜೆ.ಡಿ.ಯು ನಿಂದ ಟಿ.ಶಂಕರಲಿಂಗಪ್ಪ, ಜೆ.ಡಿ.ಎಸ್ನಿಂದ ಎಸ್.ಎನ್.ಸತೀಶ್, ಪಕ್ಷೇತರರಾಗಿ ಬಿ.ಎನ್.ಶಿವಪ್ರಕಾಶ್, ಬಿ.ನಾಗರಾಜು, ಟಿ.ಆರ್.ಮಹೇಶ್ ಅಂತಿಮವಾಗಿ ಕಣದಲ್ಲಿದ್ದಾರೆ.
ಕಂದಿಕೆರೆ ಕ್ಷೇತ್ರದಲ್ಲಿ ಜೆ.ಡಿ.ಯುನ ಜಿ.ಲೋಹಿತಾ ಬಾಯಿ, ಕಾಂಗ್ರೆಸ್ನಿಂದ ಜಿ.ಪರಮೇಶ್ವರಯ್ಯ, ಬಿ.ಜೆ.ಪಿಯಿಂದ ಸಿ.ರಂಗನಾಯ್ಕ, ಜೆ.ಡಿ.ಎಸ್ನಿಂದ ಈರಯ್ಯ, ಅಂತಿಮ ಕಣದಲ್ಲಿದ್ದಾರೆ.
ಹಂದನಕೆರೆ: ಕ್ಷೇತ್ರದಲ್ಲಿ ಬಿ.ಎಸ್.ಪಿಯಿಂದ ಪ್ರೇಮಲತ, ಕಾಂಗ್ರೆಸ್ನಿಂದ ಜಯಲಕ್ಷ್ಮಮ್ಮ, ಜೆ.ಡಿ.ಎಸ್ನಿಂದ ಜಾನಮ್ಮ, ಬಿ.ಜೆ.ಪಿಯಿಂದ ಯಶೋದ ಬಸವರಾಜು, ಜೆ.ಡಿ.ಯು.ನಿಂದ ಎ.ಎಸ್.ಅನುಸೂಯಮ್ಮ, ಪಕ್ಷೇತರರಾಗಿ ಮರುಳಮ್ಮ ಕಣದಲ್ಲಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಜ್ಯೋತಿ, ಬಿ.ಜೆ.ಪಿಯಿಂದ ನಿಂಗಮ್ಮ, ಜೆ.ಡಿ.ಎಸ್ನಿಂದ ಜಯಲಕ್ಷ್ಮೀ, ಜೆ.ಡಿ.ಯು ನಿಂದ ಭಾರತಮ್ಮ, ಕಣದಲ್ಲಿದ್ದಾರೆ..
ಹುಳಿಯಾರು: ಕ್ಷೇತ್ರದಲ್ಲಿ ಜೆ.ಡಿ.ಎಸ್ನಿಂದ ಎನ್.ಜಿ.ಮಂಜುಳ, ಬಿ.ಜೆ.ಪಿಯಿಂದ ಎಸ್.ಎಚ್.ಲತಾ, ಕಾಂಗ್ರೆಸ್ನಿಂದ ಎಚ್.ಡಿ.ರಮಾದೇವಿ, ಜೆ.ಡಿ.ಯು ನಿಂದ ವೈ.ಎಮ್.ರೇಣುಕಾದೇವಿ, ಪಕ್ಷೇತರರಾಗಿ ಚಂದ್ರಕಲಾ ಕಣದಲ್ಲಿದ್ದಾರೆ.

ಜನಪದ ಕಲಾವಿದರು ಸಂಘಟಿತರಾದರೆ ಮಾತ್ರ ಕಲೆ ಉಳಿಯಲು ಸಾಧ್ಯ: ಎಂ.ಎಸ್.ಚಂದ್ರಪ್ಪ
ಚಿಕ್ಕನಾಯಕನಹಳ್ಳಿ,ಡಿ.18: ಜಾನಪದ ಕಲಾವಿದರು ಸಂಘಟಿತರಾಗಿ ಜನರಿಂದ ದೂರವಾಗುತ್ತಿರುವ ಜಾನಪದ ಕಲೆಗಳನ್ನು ಬೆಳಸಲು ಸಹಕಾರ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಎಂ.ಎಸ್. ಚಂದ್ರಪ್ಪನವರು ಹೇಳಿದರು.
ಪಟ್ಟಣದ ಬನಶಂಕರಿ ದೇವಾಲಯದ ಶ್ರೀ ರಾಮಮಂದಿರದಲ್ಲಿ ನಡೆದ ಚಿಗುರು ಹಾಗೂ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಚಿಕ್ಕವಯಸ್ಸಿನಿಂದಲೇ ಕಲೆಗಳನ್ನು ಮೈಗೂಡಿಸಿಕೊಂಡು. ಪರಂಪರಾನುಗತವಾಗಿ ಉಳಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳಸಬೇಕು ಮತ್ತು ಶ್ರೀರಂಗ ಕ್ರೀಡಾ ಸಾಂಸ್ಕೃತಿಕ ಯುವ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಾಲೂಕು ಅಶಕ್ತ ಕಲಾವಿದರಿಗೆ ನೀಡುತ್ತಿರುವ ಮಾಸಾಶನ ಹಾಗೂ ಇಲಾಖಾ ವತಿಯಿಂದ ಸಕರ್ಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಜಾನಪದ ಕಲಾವಿದರ ಸಂಘದ ಅಧ್ಯಕ್ಷರಾದ ಸಿ.ಎ.ಕುಮಾರಸ್ವಾಮಿ ಮಾತನಾಡಿ ಇಂದಿನ ಸಮಾಜದ ಅವನತಿಗೆ ಜನಪದ ಕಲೆಗಳು ಜನರಿಂದ ದೂರವಾಗುತ್ತಿರುವುದೇ ಕಾರವಾಗಿದ್ದು, ಜನಪದ ಕಲೆಗಳು ಸಮಾಜದ ಕೈಗನ್ನಡಿಯಂತಿದ್ದು ಇದನ್ನು ಬೆಳಸುವುದರಿಂದ ಸಾಮಾಜಿಕ ಮೌಲ್ಯಗಳು ವೃದ್ದಿಯಾಗುತ್ತವೆ ಎಂದು ತಿಳಿಸಿದರು. ಕಲಾವಿದರ ಇಂದಿನ ಸ್ಥಿತಿಗತಿಗಳ ಬಗ್ಗೆ ಚಚರ್ಿಸುತ್ತಾ ಜನಪದ ಕಲಾವಿದರ ಬಗ್ಗೆ ಗೌರವ ಭಾವನೆ ತಾಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ದೇವಾಂಗ ಸಂಘದ ಅಧ್ಯಕ್ಷ ಸಿ.ಜೆ.ಶೇಷಪ್ಪ, ಹಾಗೂ ವಿವಿದ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು ಭಾಗವಹಿಸಿದ್ದರು.
ಸಿ.ಎ.ಚಿಕ್ಕನಾರಾಯಣಸ್ವಾಮಿ ನಿರೂಪಿಸಿ ಸಿ.ಟಿ.ಜಯಕೃಷ್ಣ ಸ್ವಾಗತಿಸಿ, ಸಿ.ಎಂ.ರಂಗನಾಥ್ ವಂದಿಸಿದರು.



Thursday, December 16, 2010


ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಸಪ್ತದ್ವಾರ ದರ್ಶನ
ಚಿಕ್ಕನಾಯಕನಹಳ್ಳಿ.ಡಿ.16: 15ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವದ ಪ್ರಯುಕ್ತ ಪಟ್ಟಣದ ಲಕ್ಷ್ಮೀವೆಂಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ 17, 18, 19 ರಂದು ದೇವಸ್ಥಾನದಲ್ಲಿ ಪುಷ್ಪಾಲಂಕಾರ, ಸಪ್ತದ್ವಾರದ ದರ್ಶನವನ್ನು ಏರ್ಪಡಿಸಲಾಗಿದೆ.
17ರಂದು ಸಪ್ತದ್ವಾರಗಳ ದರ್ಶನ, ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, 18ರಂದು ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಸಂಜೆ ದೇವರ ಉಯ್ಯಾಲೆ ಉತ್ಸವ, 19ರಂದು ಊರಿನ ಪ್ರಮುಖ ಬೀದಿಗಳಲ್ಲಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಶಿಕ್ಚಕರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಉನ್ನತ ವ್ಯಾಸಾಂಗ
ಚಿಕ್ಕನಾಯಕನಹಳ್ಳಿ,ಡಿ.16: ವಿಜ್ಞಾನ ಗಣಿತ ಮತ್ತು ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಉನ್ನತ ವ್ಯಾಸಾಂಗ ನಿಯೋಜಿಸಲು ಶಿಕ್ಷಕರ ತಮ್ಮಾ ಇಚ್ಚಾ ಪತ್ರವನ್ನು ಇದೇ 20ರ ಒಳಗಾಗಿ ಬಿ.ಇ.ಒ ಕಛೇರಿಗೆ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಿ.ನಾ.ಹಳ್ಳಿ: 5 ಜಿ.ಪಂ. ಕ್ಷೇತ್ರಗಳಿಗೆ 49 ಉಮೇದುವಾರಿಕೆ, 19 ತಾ.ಪಂ. ಕ್ಷೇತ್ರಗಳಿಗೆ 114 ನಾಮಪತ್ರಗಳು
ಚಿಕ್ಕನಾಯಕನಹಳ್ಳಿ,ಡಿ.15: ತಾಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ 49 ನಾಮಪತ್ರಗಳು, 19 ತಾ.ಪಂ.ಕ್ಷೇತ್ರಗಳಿಗೆ 114 ಅಬ್ಯಾಥರ್ಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಹುಳಿಯಾರು ಕ್ಷೇತ್ರ ದಿಂದ 7, ಹೊಯ್ಸಳಕಟ್ಟೆಯಿಂದ 10, ಹಂದನಕೆರೆ 7, ಕಂದೀಕೆರೆ ಕ್ಷೇತ್ರದಿಂದ 15 ಹಾಗೂ ಶೆಟ್ಟೀಕೆರೆ ಕ್ಷೇತ್ರದಿಂದ 10 ಉಮೇದುವಾರಿಕೆ ಅಜರ್ಿಗಳು ಚುನಾವಣಾಧಿಕಾರಿ ರವಿಕುಮಾರ್ ರವರಿಗೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಅಬ್ಯಾಥರ್ಿಗಳು ಉತ್ಸಾಹದಿಂದ ಉಮೇದುವಾರಿಕೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ 6 ಅಜರ್ಿಗಳು, ಬಿ.ಜೆ.ಪಿ. ಹೆಸರಿನಲ್ಲಿ 7, ಜೆ.ಡಿ.ಎಸ್.ಹೆಸರಿನಲ್ಲಿ 9, ಜೆ.ಡಿ.ಯು ಹೆಸರಿನಲ್ಲಿ 7, ಪಕ್ಷೇತರರು 17, ರೈತ ಸಂಘದಿಂದ 1, ಬಿ.ಎಸ್.ಪಿ.ಯಿಂದ 1 ಅಜರ್ಿಗಳು ಜಿ.ಪಂ. ಕ್ಷೇತ್ರಕ್ಕೆ ನೊಂದಾಯಿತವಾಗಿದೆ.
ಶೆಟ್ಟೀಕೆರೆ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಲಕ್ಕಪ್ಪ , ನಿಜಾನಂದ ಮೂತರ್ಿ, ಬಿ.ನಾಗರಾಜು, ಟಿ.ಆರ್.ಮಹೇಶ್, ಎಚ್.ಬಿ.ಪಂಚಾಕ್ಷರಯ್ಯ, ಟಿ.ಶಂಕರಲಿಂಗಪ್ಪ, ಎಸ್.ಎನ್.ಸತೀಶ್, ಎಸ್.ಸಿ.ದಿನೇಶ್, ಬಿ.ಎನ್.ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.
ಕಂದಿಕೆರೆ ಕ್ಷೇತ್ರದಿಂದ ಜಿ.ಲೋಹಿತಾ ಬಾಯಿ, ಎಸ್.ಡಿ.ಮೂಡ್ಲಯ್ಯ, ಆರ್.ಹನುಮಂತಯ್ಯ, ಜಿ.ರಘುನಾಥ್, ರಾಮಚಂದ್ರನಾಯ್ಕ, ಜಿ.ರೇವಾನಾಯ್ಕ, ಎಸ್.ಟಿ.ಚಂದ್ರಯ್ಯ, ಜಿ.ಪರಮೇಶ್ವರಯ್ಯ, ಕಮಲಾನಾಯ್ಕ, ಸಿ.ರಂಗನಾಯ್ಕ, ಎಮ್.ಎಲ್.ಗಂಗಾಧರಯ್ಯ, ಸಣ್ಣಯ್ಯ, ಈರಯ್ಯ, ಜಿ.ನರಸಿಂಹಮೂತರ್ಿ, ಎಸ್.ಟಿ.ಗಿರಿಯಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಹಂದನಕೆರೆ: ಕ್ಷೇತ್ರದಿಂದ ಪ್ರೇಮಲತ, ಜಯಲಕ್ಷ್ಮಮ್ಮ, ಜಾನಮ್ಮ, ಯಶೋದ ಬಸವರಾಜು, ರೇಣುಕಮ್ಮ ಎ.ಎಸ್.ಅನುಸೂಯಮ್ಮ, ಮರುಳಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಿಂದ ಲಕ್ಷ್ಮೀದೇವಿ, ತೊಳಸಮ್ಮ, ಜ್ಯೋತಿ, ಎಚ್.ಎನ್.ಗೌರಮ್ಮ, ನಿಂಗಮ್ಮ, ಜಯಲಕ್ಷ್ಮೀ, ಮಹಾಲಕ್ಷ್ಮಿ, ರಾಧಮ್ಮ, ಭಾರತಮ್ಮ, ಚಂದ್ರಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹುಳಿಯಾರು: ಕ್ಷೇತ್ರದಿಂದ ಬಿ.ಎ.ನಾಗವೇಣಿ, ಎನ್.ಜಿ.ಮಂಜುಳ, ನಾಗಮ್ಮ, ಎಸ್.ಎಚ್.ಲತಾ, ಚಂದ್ರಕಲಾ, ಎಚ್.ಡಿ.ರಮಾದೇವಿ, ವೈ.ಎಮ್.ರೇಣುಕಾದೇವಿ ನಾಮಪತ್ರ ಸಲ್ಲಿಸಿದ್ದಾರೆ.
19 ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿರುವವರು: 114 ಅಬ್ಯಾಥರ್ಿಗಳು ನಾಮಪತ್ರ ಸಲ್ಲಿಸಿದ್ದು ಕ್ಷೇತ್ರವಾರು ವಿವರ ಇಂತಿದೆ. ಹುಳಿಯಾರಿನಲ್ಲಿ 8 ಜನ ನಾಮಪತ್ರ ಸಲ್ಲಿಸಿದ್ದು, ಯಳನಡುವಿನಲ್ಲಿ 6, ತಿಮ್ಲಾಪುರದಲ್ಲಿ 9, ಕೆಂಕೆರೆಯಲ್ಲಿ 9, ಗಾಣಧಾಳು 4, ಹೊಯ್ಸಳಕಟ್ಟೆ 4, ತಿಮ್ಮನಹಳ್ಳಿ 5, ತೀರ್ಥಪುರ 5, ಕಂದಿಕೆರೆ 4, ಮಾಳಿಗೆಹಳ್ಳಿ 5, ಹೊನ್ನೆಬಾಗಿ 5, ಜಯಚಾಮರಾಜ ಪುರ 6, ಶೆಟ್ಟೀಕೆರೆ 7, ಕುಪ್ಪೂರು 5, ಮತ್ತೀಘಟ್ಟ 7, ಬರಗೂರು 6, ಹಂದನಕೆರೆ 5, ದೊಡ್ಡೆಣ್ಣೆಗೆರೆ 8, ದಸೂಡಿ 8 ನಾಮಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಹುಳಿಯಾರು ಕ್ಷೇತ್ರದಿಂದ ಪವರ್ಿನ್, ಸಿ.ಎಮ್.ಗಾಯಿತ್ರಿ, ಫಾತಿಮ.ಬಿ.ಬಿ, ಚಂದ್ರಕಲಾ ಎಚ್.ಆರ್, ಹಸೀನಾಬಾನು, ವೀಣಾ, ರುಕ್ಸನಾಭಾನು ನಾಮಪತ್ರ ಸಲ್ಲಿಸಿದ್ದಾರೆ.
ಯಳನಡು ಕ್ಷೇತ್ರದಿಂದ ಸುಮಿತ್ರ, ಲತಾಮಣಿ, ತಾರಾಮಣಿ ಯಾದವ್, ಜಯಲಕ್ಷ್ಮೀ, ಎಂ.ಆರ್.ಜ್ಯೋತಿ, ವಿಜಯಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.
ತಿಮ್ಲಾಪುರ ಕ್ಷೇತ್ರದಿಂದ ಎಚ್.ಆರ್.ಕೃಷ್ಣಮೂತರ್ಿ, ಎಚ್.ಆರ್.ರಾಜಣ್ಣ, ಟಿ.ಆರ್.ರಮೇಶ್, ಎಚ್.ಎನ್.ರಾಮಯ್ಯ, ಕುಮಾರಸ್ವಾಮಿ, ಚಂದ್ರಶೇಖರಯ್ಯ, ಜಯಣ್ಣ, ಎಮ್.ಮಲ್ಲೇಶಯ್ಯ, ಎಚ್.ಚಂದ್ರಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಕೆಂಕೆರೆ ಕ್ಷೇತ್ರದಿಂದ ರಾಜಶೇಖರರೆಡ್ಡಿ, ಕೆ.ಆರ್.ಚನ್ನಬಸವಯ್ಯ, ಕೆ.ಎಂ.ನವೀನ, ನಾಗರಾಜ್, ಶಿವಕುಮಾರ್, ಕೆ.ಸಿ.ಶಿವಮೂತರ್ಿ, ಧನಂಜಯ್ಯ, ಎಮ್,ನಾಗರಾಜು ನಾಮಪತ್ರ ಸಲ್ಲಿಸಿದ್ದಾರೆ.
ಗಾಣದಾಳು ಕ್ಷೇತ್ರದಿಂದ ಎಚ್.ಕೆ.ರಾಮಲಿಂಗಪ್ಪ, ಆರ್.ಉದಯಕುಮಾರ್, ಜಿ.ಆರ್.ಸೀತಾರಾಮಯ್ಯ, ಹೆಚ್.ಜಿ.ವಿಶ್ವನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಿಂದ ಕವಿತ ಎ.ಜಿ, ಚಂದ್ರಪ್ರಭಾ, ಲಕ್ಷ್ಮೀದೇವಿ, ಮೀನಾಕ್ಷಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತಿಮ್ಮನಹಳ್ಳಿ ಕ್ಷೇತ್ರದಿಂದ ಕೆ.ಎಸ್.ಸುಮಿತ್ರ, ಪುಟ್ಟಗಂಗಮ್ಮ, ಕರಿಯಮ್ಮ, ಶಿವಮ್ಮ, ಲಲಿತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತೀರ್ಥಪುರ ಕ್ಷೇತ್ರದಿಂದ ರತ್ನಮ್ಮ, ಕೆ.ಬಿ.ಮಂಜುಳ, ಎಮ್.ಇ.ಲತಾ, ಧನಲಕ್ಷ್ಮೀ, ಎಮ್.ಕೆ.ಲಕ್ಷ್ಮೀದೇವಯ್ಯ ನಾಮಪತ್ರ ಸಲ್ಲಿಸಿದ್ದಾರೆ
ಕಂದಿಕೆರೆ ಕ್ಷೇತ್ರದಿಂದ ಉಮಾದೇವಿ, ಪಾರ್ವತಮ್ಮ, ರೇಣುಕಮ್ಮ, ಕ್ಯಾತಲಿಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಮಾಳಿಗೆಹಳ್ಳಿ ಕ್ಷೇತ್ರ ಎಂ.ಎಸ್. ಚಂದ್ರಕಲಾ, ಮಧು ಎನ್.ಸಿ, ನಿರ್ಮಲ, ಲತಾ, ಶಾರದಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹೊನ್ನೆಬಾಗಿ ಕ್ಷೇತ್ರದಿಂದ ನಾಗರಾಜು ಎಚ್.ಟಿ, ಶಶಿಧರ, ವಿವೇಕಾನಂದಸ್ವಾಮಿ, ಎಚ್.ಜಿ.ಪ್ರಸನ್ನಕುಮಾರ್, ಶಂಕರಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಜಯಚಾಮರಾಜಾಪುರ ಕ್ಷೇತ್ರದಿಂದ ಜಗದೀಶ್ ಎಮ್.ಎಮ್, ರವೀಶ್, ದಯಾನಂದಮೂತರ್ಿ, ಎಂ.ಪಿ.ಪ್ರಸನ್ನಕುಮಾರ್, ಶೇಖರಯ್ಯ, ಕೆ.ಎಮ್.ಸತೀಶ್ಬಾಬು ನಾಮಪತ್ರ ಸಲ್ಲಿಸಿದ್ದಾರೆ.
ಶೆಟ್ಟಿಕೆರೆ ಕ್ಷೇತ್ರದಿಂದ ಎಸ್.ಎನ್.ನಿಂಗಪ್ಪ, ಎಸ್.ಜಿ.ಮಹೇಶ್, ಜಿ.ಟಿ.ವೆಂಕಟೇಶ್, ಎ.ಬಿ.ರಮೇಶ್ಕುಮಾರ್, ರಾಜಶೇಖರಪ್ಪ, ಎ.ಬಿ.ಮಹೇಶ್, ಎಸ್.ಆರ್. ಉಮೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಕುಪ್ಪೂರು ಕ್ಷೇತ್ರದಿಂದ ಭಾಗ್ಯಮ್ಮ, ಚಿಕ್ಕಮ್ಮ, ಸುಜಾತ, ಪ್ರೇಮಲೀಲ, ಸುವರ್ಣಮ್ಮ ನಾಮಪತ್ರ ಸಲ್ಲಸಿದ್ದಾರೆ.
ಮತಿಘಟ್ಟ ಕ್ಷೇತ್ರದಿಂದ ನಿರಂಜನಮೂತರ್ಿ, ಮಹದೇವಯ್ಯ, ಕರಿಯಪ್ಪ, ತಿಮ್ಮಯ್ಯ, ಪ್ರಭಾಕರ, ಡಿ.ದೇವರತ್ನಯ್ಯ, ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಬರಗೂರು ಕ್ಷೇತ್ರದಿಂದ ಚಂದ್ರಬಾಯಿ, ಶ್ರೀದೇವಿ, ಶಾರದಮ್ಮ, ಗುಂಡಮ್ಮ, ಕೆ.ಆರ್.ಚೇತನ, ನೇತ್ರಾವತಿ ನಾಮಪತ್ರ ಸಲ್ಲಿಸಿದ್ದಾರೆ.
ಹಂದನಕೆರೆ ಕ್ಷೇತ್ರದಿಂದ ಸಿದ್ದಪ್ಪ, ಪಾಂಡುರಂಗಯ್ಯ, ಎಮ್.ಲಿಂಗರಾಜು, ಎಚ್.ಎನ್.ರಾಮನಾಥ್, ಡಿ.ಶಿವರಾಜು ನಾಮಪತ್ರ ಸಲ್ಲಿಸಿದ್ದಾರೆ.
ದೊಡ್ಡೆಎಣ್ಣೆಗೆರೆ ಕ್ಷೇತ್ರದಿಂದ ಪುಷ್ಪಾವತಿ, ರೇಣುಕಮ್ಮ, ಚಂದ್ರಮ್ಮ, ಮಂಜಮ್ಮ, ಲಕ್ಷ್ಮೀದೇವಿ, ಲೀಲಾವತಿ, ಗೀತಾ, ಹೇಮಾವತಿ ನಾಮಪತ್ರ ಸಲ್ಲಿಸಿದ್ದಾರೆ.
ದಸೂಡಿ ಕ್ಷೇತ್ರದಿಂದ ಶ್ರೀನಿವಾಸಮೂತರ್ಿ, ಆರ್.ಪಿ.ವಸಂತಯ್ಯ, ರಮೇಶ್ ಡಿ.ಬಿ, ನಿಂಗಪ್ಪ ಎಮ್.ಎಲ್, ಶಾಂತಕುಮಾರ್ ಡಿ.ಎಸ್, ಚಿನ್ನಸ್ವಾಮಿ, ಶಿವಕುಮಾರ್, ಎಮ್.ಎಲ್.ರಾಮಯ್ಯ ನಾಮಪತ್ರ ಸಲ್ಲಿಸಿದ್ದಾರೆ.


ಸ್ಮಾಟರ್್ ಕಾಡರ್್ಗೆ ಶಿಕ್ಷಕ ಶಿಕ್ಷಕಿಯರ ಸಂಘದ ವಿರೋಧ
ಚಿಕ್ಕನಾಯಕನಹಳ್ಳಿ ಡಿ.15 : ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸ್ಮಾಟರ್್ ಕಾಡರ್್ ನೀಡಲು ಹೊರಟಿರುವುದು ಶಿಕ್ಷಕರ ಸಮೂಹಕ್ಕೆ ಹೊರೆಯೇ ಹೊರತು ಅದರಿಂದ ಯಾವುದೇ ಹೇಳಿಕೊಳ್ಳುವಂತಹ ಅನುಕೂಲಗಳಿಲ್ಲ ಬದಲಾಗಿ ಶಿಕ್ಷಕರ ಸಂಬಳದಲ್ಲೂ ತಲಾ 210 ರೂ.ಗಳನ್ನು ಸಂಬಳದಲ್ಲಿ ಕಟಾವಣೆ ಮಾಡ ಹೊರಟಿರುವುದು ಸರಿಯಲ್ಲ. ಈ ಬಗ್ಗೆ ಶಿಕ್ಷಕ ಸಮೂಹ ಎಚ್ಚರದಿಂದಿರಬೇಕು ಎಂದು ತಾಲ್ಲೂಕು ಸಕರ್ಾರಿ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘವು ಮನವಿ ಮಾಡಿದೆ.
ರಾಜ್ಯ ಶಿಕ್ಷಕರ ಸಂಘ ಈ ಬಗ್ಗೆ ಹಣಕಾಸು ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ ಎಂಬುದು ನಮ್ಮ ಸಂಘದ ಗಮನಕ್ಕೆ ಬಂದಿದೆ. ಶಿಕ್ಷಕರು ತಮ್ಮ ಸೇವಾ ಮಾಹಿತಿಯನ್ನು ತಮ್ಮ ಎಸ್.ಆರ್. ಗಳ ನಕಲು ಪ್ರತಿಯ ಮೂಲಕ ಪಡೆಯಬಹುದು ಅಥವಾ ಹೆಚ್.ಆರ್.ಎಂ.ಎಸ್ ನಲ್ಲಿ ಪಡೆಯಬಹುದು ಎಂದು ಶಿಕ್ಷಕ-ಶಿಕ್ಷಕಿಯರ ಸಂಘವು ತಿಳಿಸಿದೆ.
ಶಿಕ್ಷಕರಿಗೆ ಸ್ಮಾಟರ್್ ಕಾಡರ್್ ನೀಡುವ ಯೋಜನೆ ಶಿಕ್ಷಣ ಇಲಾಖೆಯ ಉದ್ದೇಶವಾಗಿದ್ದರೆ ಶಿಕ್ಷಕರಿಗೆ ಆಥರ್ಿಕ ಹೊರೆಯಾಗದಂತೆ ಇಲಾಖೆಯೇ ನಿರ್ವಹಿಸುವುದಾದರೆ ನಮ್ಮ ಸಂಘ ಸ್ವಾಗತಿಸುತ್ತದೆ.
ಅಭಿನಂದನೆ : 18ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ನಮ್ಮ ತಾಲ್ಲೂಕಿನ ರೋಟರಿ ಶಾಲೆ ಹಾಗೂ ಜೆ.ಸಿ. ಪುರ ಮೊರಾಜರ್ಿ ವಸತಿ ಶಾಲೆ ಆಯ್ಕೆಯಾಗಿರುವುದಕ್ಕೆ ತಾಲ್ಲೂಕು ಸರ್ಕರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘವು ವಿದ್ಯಾಥರ್ಿಗಳನ್ನು ಹಾಗೂ ಶಾಲಾ ಆಡಳಿತವನ್ನು ಅಭಿನಂದಿಸುತ್ತದೆ.