Wednesday, June 20, 2012


ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಮಾದಿಗ ದಂಡೋರ ಸಮಿತಿಯ ಒತ್ತಾಯ

        ಚಿಕ್ಕನಾಯಕನಹಳ್ಳಿ,ಜೂ.20: ಮಾದಿಗ ಜನಾಂಗಕ್ಕೆ ಪರಿಶಿಷ್ಠ ಜಾತಿಯಲ್ಲಿ ಶೇ.15ರಷ್ಟರ ಸರಿಯಾದ ಮೀಸಲಾತಿ ದೊರೆಯದೇ ಇರುವುದರಿಂದ  ಜನಾಂಗಕ್ಕೆ ಎ.ಬಿ.ಸಿ.ಡಿ ಮೀಸಲಾತಿ ವಗರ್ೀಕರಣ ಆಗಬೇಕೆಂದು ಸಕರ್ಾರಕ್ಕೆ ಸದಾಶಿವ ಆಯೋಗ ವರದಿ ಸಲ್ಲಿಸಿರುವುದನ್ನು ತಕ್ಷಣವೇ ಸಕರ್ಾರ ಲೋಕಸಭೆಗೆ ಶಿಫಾರಸ್ಸು ಮಾಡಿ ಜನಾಂಗದ ಬೇಡಿಕೆಯನ್ನು ಈಡೇರಿಸಬೇಕೆಂದು ರಾಜ್ಯ ಮಾದಿಗ ದಂಡೋರ ಸಮಿತಿಯ ಜಂಟಿ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಸದಾಶಿವ ಆಯೋಗ ಪರಿಶಿಷ್ಠ ಜಾತಿಗಳ ಸ್ಥಿತಿಗತಿ ಕುರಿತು ಸಕರ್ಾರಕ್ಕೆ 200 ಪುಟಗಳ ವರದಿ ಸಲ್ಲಿಸಿದೆ, ಶೇ.6 ಎಡಗೈ(ಮಾದಿಗರಿಗೆ), ಶೇ.5 ಬಲಗೈ, ಶೇ.3 ಪರಿಶಿಷ್ಠರಲ್ಲಿ ಸ್ಪೃಷ್ಯರಿಗೆ, ಶೇ.1ರಷ್ಟು ಒಳಮೀಸಲಾತಿಗಾಗಿ ನೀಡಲು ಆಯೋಗ ಶಿಫಾರಸ್ಸು ಮಾಡಿ ಸಕರ್ಾರಕ್ಕೆ ಮನವಿ ಸಲ್ಲಿಸಿದ್ದು, ಈ ಮನವಿಯನ್ನು ಸಕರ್ಾರ ಪುರಸ್ಕರಿಸಿ ಜನಾಂಗದ ಸುಮಾರು 96.60ಲಕ್ಷ ಜನರ ಮೀಸಲಾತಿಯನ್ನು ನೀಡುವ ಬಗ್ಗೆ ಸಕರ್ಾರ ಜಾರಿಗೊಳಿಸಲು ಸಂಪುಟದಲ್ಲಿ ತೀಮರ್ಾನಿಸಿ ಲೋಕಸಭೆಗೆ ಶಿಫಾರಸ್ಸು ಮಾಡಿ ಜನಾಂಗದ ಅಭಿವೃದ್ದಿಗೆ ಮುಂದಾಗಬೇಕೆಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹಾಗೂ ಸಚಿವರಾದ ಗೋವಿಂದ ಕಾರಜೋಳ, ಎ.ನಾರಾಯಣಸ್ವಾಮಿಯವರಿಗೆ ಒತ್ತಾಯಿಸಿದ್ದು, ತತ್ಕ್ಷಣ ಸಕರ್ಾರ ಶಿಫಾರಸ್ಸು ಮಾಡಿ ಲೋಕಸಭೆಗೆ ಕಳುಹಿಸಲು ಒತ್ತಾಯಿಸಿದರು ಎಂದ ಅವರು ಜನಾಂಗದ ಸುಮಾರು 6ಲಕ್ಷ ಜನರು ಸರಿಯಾಗಿ ಜಾತಿ ಹೆಸರು ಹೇಳದೆ ಶೇ.1ರ ಮೀಸಲಾತಿಯನ್ನು ಕಳೆದುಕೊಂಡಿರುವುದು ವಿಷಾದನೀಯವಾಗಿದ್ದು ಜನಂಗದವರು ದಯಮಾಡಿ ಜಾತಿ ಹೆಸರನ್ನು ಪ್ರಸ್ತಾಪಿಸಲು ಕೋರಿದರು.
ಗೋಷ್ಠಿಯಲ್ಲಿ ತಾಲ್ಲೂಕು ಮಾದಿಗ ಸಂಘದ ಅಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದಶರ್ಿ ರಾಜು ಬೆಳಗಿಹಳ್ಳಿ, ಸಿ.ಎನ್.ಹನುಮಯ್ಯ, ರಾಮಯ್ಯ, ನೀಲಕಂಠಯ್ಯ, ಸಿದ್ದರಾಮಣ್ಣ ಉಪಸ್ಥಿತರಿದ್ದರು.

ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ

ಚಿಕ್ಕನಾಯಕನಹಳ್ಳಿ,ಜೂ.20 ; ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಇದೇ 30 ಮತ್ತು 1 ಮತ್ತು 2ರಂದು ನಡೆಯಲಿದೆ, 30ರ ಶನಿವಾರ ಬೆಳ್ಳಿಪಲ್ಲಕ್ಕಿ, ಜುಲೈ1ರಂದು ಬ್ರಹ್ಮ ರಥೋತ್ಸವ, ಜುಲೈ2ರಂದು ರಥೋತ್ಸವ ಹಮ್ಮಿಕೊಳ್ಳಲಾಗಿದೆ.
 ಜಾತ್ರೆಯ ಪ್ರಯುಕ್ತ ಪಟ್ಟಣದಲ್ಲಿ ಅದ್ದೂರಿ ತಯಾರಿ ನಡೆಯುತ್ತಿದೆ, ರಸ್ತೆಗಳಿಗೆ ಡಾಂಬರೀಕರಣ, ವಿದ್ಯುತ್ ಕಂಬಗಳ ಮರು ಜೋಡಣೆ, ಶುಭಕೋರುವ ಪ್ಲೆಕ್ಸ್ಗಳ ಮೂಲಕ ಜಾತ್ರೆಗೆ ಆಗಮಿಸುವವರಿಗೆ ಕಂಗೊಳಿಸಲು ಬೇಕಾಗುವ ಎಲ್ಲಾ ರೀತಿಯ ತಯಾರಿ ಹೆಚ್ಚಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವವು ಪ್ರತಿ ವರ್ಷಕ್ಕಿಂತ ಈ ವರ್ಷದ ತಯಾರಿ ಜೋರಾಗಿ ನಡೆಯುತ್ತಿದೆ. 
ಆಷಾಡ ಮಾಸದ ಸಮಯದಲ್ಲಿ ನಡೆಯುವ ಈ ಜಾತ್ರೆಗೆ ನವದಂಪತಿಗಳು ಒಟ್ಟಾಗಿ ಪಾಲ್ಗೊಂಡು ತೇರಿಗೆ ಬಾಳೆಹಣ್ಣು ಎಸೆಯುತ್ತಾರೆ.
ಇನ್ನು ಜಾತ್ರೆಗೆ ಕುಂಚಾಂಟಿಗರ ಸಂಘವು ಚಿತ್ರಕಲೆಯನ್ನು ಪ್ರದಶರ್ಿಸುವ, ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ ನವದಂಪತಿಗಳ ಸ್ಪಧರ್ೆ, ಅನ್ನಪೂಣರ್ೇಶ್ವರಿ ಕಲಾ ಸಂಘ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಹಾಗೂ ಮಾರುತಿ ವ್ಯಾಯಾಮ ಸಂಘ ಕುಸ್ತಿ ಪಂದ್ಯವನ್ನು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದಾರೆ. 


ಕಿರುಧಾನ್ಯವಾದ ಹಾರಕ ಬೆಳೆಗಾರರ ಗುಂಪಿಗೆ ತರಬೇತಿ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.20: ತಾಲೂಕಿನ ಗೋಪಾಲನಹಳ್ಳಿಯಲ್ಲಿ ಕಿರುಧಾನ್ಯವಾದ ಹಾರಕ ಬೆಳೆಗಾರರ ಗುಂಪಿಗೆ ತರಬೇತಿ ಕಾರ್ಯಕ್ರಮವನ್ನು ಶ್ರೀ ಕಾಲಭೈರವೇಶ್ವರ ಬನಶಂಕರಿ ಕೆರೆ ಅಭಿವೃದ್ದಿ ಸಂಘದ ಕಛೇರಿಯಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಶ್ವ ವಿದ್ಯಾನಿಲಯದ ಸಹ ಪ್ರಧ್ಯಾಪಕರಾದ ಸಿ.ಸೋಮಶೇಖರ್ ರವರು ಹಾರಕ ಬೆಳೆಯ ಬೇಸಾಯಕ್ರಮ ಮತ್ತು ಕೃಷಿ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದರಲ್ಲದೆ, ಕೃಷಿ ವಿಶ್ವವಿದ್ಯಾಲಯ ವತಿಯಿಂದ ಕಿರು ಧಾನ್ಯ ಯೋಜನೆಯಡಿಯಲ್ಲಿ ಹಾರಕದ ತಳಿಗಳಾದ ಜಿ.ಪಿ.ಯು.ಕೆ.-3 ಹಾಗೂ ಆರ್.ಬಿ.ಕೆ.-155ರ ಬೀಜಗಳನ್ನು ಗುಂಪಿನ ಸದಸ್ಯರಿಗೆ ವಿತರಿಸಲಾಯಿತು.
ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಶಂಕರ್ ರವರು ಮಾತನಾಡಿ ಹಾರಕ ಬೆಳೆಗೆ ತಗಲುವ ಕೀಟ ಬಾದೆಗಳ ಬಗ್ಗೆ ಮಾಹಿತಿ ನೀಡಿದರು
ತಾಲೂಕಿನ 'ಆತ್ಮ' ಯೋಜನೆಯ ತಾಂತ್ರಿಕ ವ್ಯವಸ್ಥಾಪಕರಾದ ಜಗನಾಥ್ ರವರು ಸರಕು ಆಸಕ್ತರ ಗುಂಪುಗಳನ್ನು ರಚನೆ ಅವುಗಳ ಕಾರ್ಯ ಮಹತ್ವದ ಬಗ್ಗೆ ತಿಳಿಸಲು ಈ ಯೋಜನೆಯಡಿಯಲ್ಲಿ ಪ್ರವಾಸಗಳ ಮೂಲಕ ತರಬೇತಿ ನೀಡಲು ಅವಕಾಶ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ಎಮ್.ಬಸವರಾಜು ವಹಿಸದ್ದರು. ಕಾರ್ಯಕ್ರಮದಲ್ಲಿ ಹಾರಕ ಬೆಳೆಗಾರರ ಸಂಘದ ಅಧ್ಯಕ್ಷರಾದ ಜಿ.ಎಸ್.ಚಂದ್ರಶೇಖರಯ್ಯ ಭಾಗವಹಿಸಿದ್ದರು. ಜಿಲ್ಲಾ ಸಂಯೋಜಕ ಡಾ.ಗೋಪಿನಾಥ್ ಕಾರ್ಯಕ್ರಮ ನಿರೂಪಿಸಿದರೆ ಉಪನ್ಯಾಸಕ ಜಿ.ಎಸ್.ರಘು ಸ್ವಾಗತಿಸಿ ವಂದಿಸಿದರು.

 

Saturday, April 21, 2012


ಅಕ್ರಮ ಮರಳು : ಸಾಗಾಣಿಕೆ ತಡೆಯಲು ಕೆರೆ ಅಂಗಳಕ್ಕೆ ನಿಷೇದಾಜ್ಞೆ ಜಾರಿ. ಎನ್.ಆರ್.ಉಮೇಶ್ಚಂದ್ರ
ಚಿಕ್ಕನಾಯಕನಹಳ್ಳಿ,ಏ.21 : ತಾಲ್ಲೂಕಿನ ಶೆಟ್ಟಿಕೆರೆ ಕೆರೆಯಲ್ಲಿನ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಕೆರೆಯ ಒಳಗೆ ಅತಿಕ್ರಮ ಪ್ರವೇಶ ಮಾಡದಂತೆ  ಐ.ಪಿ.ಸಿ ಸೆಕ್ಷನ್ 133ರ ಪ್ರಕಾರ  ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇದೇ ಏಪ್ರಿಲ್ 23ರಿಂದ ಈ ಆದೇಶ ಜಾರಿಗೆ ಬರಲಿದ್ದು  ಈ ಮೂಲಕ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ, 2011 ಮೇ 5ರಿಂದ 2012 ಏಪ್ರಿಲ್ 1ರವರೆಗೆ ವಿವಿಧ ಸ್ಥಳಗಳಲ್ಲಿ ಅಕ್ರಮ ಮರಳು ಸಾಗಾಣಿಕೆಯಯನ್ನು ಸೀಜ್ ಮಾಡಲಾಗಿದ್ದು ಈ ಸಂಬಂಧ ವಿಧಿಸಿದ ದಂಡವು  ಒಂದು ಲಕ್ಷದ ಏಳು ಸಾವಿರದ ಐದುನೂರು ರೂಪಾಯಿಯನ್ನು ಸಕರ್ಾರಕ್ಕೆ ಜಮಾ ಮಾಡಲಾಗಿದೆ. ನಲವತ್ಮೂರು ಸಾವಿರದ ಐದುನೂರು ರೂ ಮರಳನ್ನು ಹರಾಜು ಮಾಡಲಾಗಿದೆ ಈ ಮೂಲಕ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಕಾನೂನಿನ ಅಡಿಯಲ್ಲಿ ಅಗತ್ಯವಿರುವ ಎಲ್ಲಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು  ಕೆಲವು ಕಡೆ ನಡೆಯುತ್ತಿದ್ದ ಮರಳು ಸಾಗಾಣಿಕೆಯನ್ನು ಸೀಜ್ ಮಾಡಲು ಹೋದಾಗ ಸಾರ್ವಜನಿಕರಿಂದ ಪ್ರತಿರೋಧ ಎದುರಿಸಬೇಕಾಯಿತು, ಇಂತಹ ಸಂದರ್ಭದಲ್ಲಿ ಸಾರ್ವಜನಿಕರನ್ನು ಪ್ರಶ್ನಿಸಿದರೆ ನಮಗೆ ಮನೆ ಕಟ್ಟಿಕೊಳ್ಳಲು ಮರಳು ಲಭ್ಯವಾಗದ್ದರಿಂದ ಮರಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬ ವಿಷಯಗಳನ್ನು ತಿಳಿಸಿತ್ತಾರೆ ಎಂದ ಅವರು ಹೊರಗಡೆಯಿಂದ ತಂದಂತಹ ಮರಳನ್ನು ಶೇಖರಿಸಿಡಲು ತಾಲ್ಲೂಕಿನ ಪ್ರತಿ ಹೋಬಳಿಗೂ 2ಎಕರೆ ಜಮೀನು ಕಲ್ಪಿಸಿದ್ದು ಇದರ ಉಸ್ತುವಾರಿಯನ್ನು ಪಿ.ಡಬ್ಯೂ.ಡಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತಾಲ್ಲೂಕು ರೈತ ಸಂಘ, ಹಸಿರು ಸೇನೆ ಬೆಂಬಲ
ಚಿಕ್ಕನಾಯಕನಹಳ್ಳಿ,ಏ.21 : ರಾಜ್ಯ ಸಕರ್ಾರ ರೈತರಿಗೆ ವಿದ್ಯುತ್ ಶಕ್ತಿ ಸರಬರಾಜು, ಸಾಲ ಮನ್ನಾ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವುದರ ವಿರುದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದೇ 25ರ ಬುಧುವಾರ ಹಮ್ಮಿಕೊಂಡಿರುವ  ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ತಾಲ್ಲೂಕು ರೈತ ಸಂಘ, ಹಸಿರು ಸೇನೆ ಬೆಂಬಲ ವ್ಯಕ್ತಪಡಿಸಿದೆ.
ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲದಲ್ಲಿ ಹಲವು ಬೇಡಿಕೆಗಳನ್ನಿಟ್ಟಿದ್ದು ಅದರಲ್ಲಿ ಬರಗಾಲ ಪ್ರದೇಶದ ರೈತರ ಎಲ್ಲಾ ಸಾಲಗಳನ್ನು ತಕ್ಷಣ ರದ್ದು ಮಾಡಬೇಕು, ಟ್ರಾಕ್ಟರ್ ಸಾಲ ಮನ್ನ ಮಾಡಿ  ಹೊಸದಾಗಿ ಸಾಲ ಕೊಡಬೇಕು, ಪ್ರತಿ ಜಿಲ್ಲೆಗೆ ತಕ್ಷಣ 5ಕೋಟಿ ಮೊದಲನೆ ಕಂತಿನಲ್ಲಿ ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲೆಗೊಬ್ಬರಂತೆ ರಾಜ್ಯ ಮಟ್ಟದ ಅಧಿಕಾರಿ ಮತ್ತು ಮಂತ್ರಿಗಳನ್ನು ನೇಮಿಸಿ ಜನಗಳಿಗೆ ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು, ನೀರು ಒದಗಿವುದು ಇವುಗಳು ಸೇರಿದಂತೆ ರೈತರಿಗೆ ನೆರವಾಗುವಂತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕಾರ್ಯಕ್ರಮ ಬೆಂಬಲಿಸಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಪಿ.ಮಲ್ಲೇಶ್, ಗೌರವಾಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ, ಉಪಾಧ್ಯಕ್ಷ ಗಂಗಣ್ಣ ಕಾಡೇನಹಳ್ಳಿ, ಕಾರ್ಯದಶರ್ಿ ಮರುಳಪ್ಪ ಕಾರ್ಯಕ್ರಮಕ್ಕೆ ಬೆಂಬಲ ತಿಳಿಸಿದ್ದಾರೆ.

ಬಸವೇಶ್ವರರ ಜಯಂತ್ಯೋತ್ಸವ
ಚಿಕ್ಕನಾಯಕನಹಳ್ಳಿ,ಏ.21 : ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಹಾಗೂ ಶ್ರೇಷ್ಠ ವಚನಕಾರ ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 24ರ ಮಂಗಳವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕು ಆಡಳಿತ ಮತ್ತು ಬಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.
ತಾ.ಪಂ.ಅಧ್ಯಕ್ಷ ಸೀತರಾಮಯ್ಯ ಬಸವೇಶ್ವರರ ಭಾವಚಿತ್ರ ಅನಾವರಣಗೊಳಿಸಲಿದ್ದು, ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಜಿ.ಪಂ.ಸದಸ್ಯತು, ಮಾಜಿ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿರುವರು.

Monday, April 2, 2012




ಬರಪರಿಹಾರ ಕಾರ್ಯದಲ್ಲಿ  ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವ ಡಿ.ಸಿ.: ಶಾಸಕ ಸಿ.ಬಿ.ಎಸ್. ಆರೋಪ
ಚಿಕ್ಕನಾಯಕನಹಳ್ಳಿ,ಏ.02 : ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ ಅಲ್ಲದೆ ತಾಲ್ಲೂಕು  ಬರಪೀಡಿತ ಪ್ರದೇಶವೆಂದು ಸಕರ್ಾರ ಘೋಷಿಸಿದೆ ಆದರೂ ಜಿಲ್ಲಾಧಿಕಾರಿಗಳು ಸೌಜನ್ಯಕ್ಕಾದರೂ ತಾಲ್ಲೂಕಿನಲ್ಲಿ ಒಂದು ಬಾರಿಯಾದರೂ ಜನಪ್ರತಿನಿಧಿಗಳ ಸಭೆ ಕರೆದು ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಚಚರ್ಿಸದೆ, ಜನಪ್ರತಿನಿದಿಗಳನ್ನು ಕಡೆಗಣಿಸಿ ಜಿಲ್ಲೆಯಲ್ಲಿ ಪ್ರೆಸಿಡೆಂಟ್ನಂತೆ ಮಾದರಿಯಲ್ಲಿ ಅವರ ಪಾಡಿಗೆ ಅವರು ವತರ್ಿಸುತ್ತಿದ್ದಾರೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆರೋಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಬರಪರಿಹಾರ ಕಾರ್ಯ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸಕರ್ಾರ ಈ ಹಿಂದೆ ಕೂಲಿಗಾಗಿ ಕಾಳು ಯೋಜನೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಜನತೆಯ ಜೀವನ ಸುಧಾರಿಸಿತ್ತು,  ಅದೇ ರೀತಿ ಈಗ ನೀರಿನ ಬವಣೆ ನಿವಾರಿಸಲು ಹೆಚ್ಚಿನ ರೀತಿಯಲ್ಲಿ ಬೋರ್ವೆಲ್ಗಳನ್ನು ಕೊರೆಸಿ ನೀರಿನ ದಾಹ ತೀರಿಸುವ ಅಗತ್ಯವಿದೆ ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಿ ತಾಲ್ಲೂಕಿನ ಸಮಸ್ಯೆಗಳನ್ನು ಸಕರ್ಾರಕ್ಕೆ ಸಲ್ಲಿಸಬೇಕು, ಆದರೆ ಜಿಲ್ಲಾಧಿಕಾರಿಗಳು ಇಲ್ಲಿಯ ಸಮಸ್ಯೆ ಬಗ್ಗೆ ಒಂದು ಬಾರಿಯೂ  ಈ ಕಡೆ ಗಮನ ಹರಿಸುತ್ತಿಲ್ಲದಿರುವುದರಿಂದ ತಾಲೂಕಿನಲ್ಲಿ ಸಮಸ್ಯೆ ಹೆಚ್ಚುತ್ತಿದೆ, 
ಬರಪರಿಹಾರ ಸಮಿತಿಗೆ  ಶಾಸಕರುಗಳನ್ನು ಅಧ್ಯಕ್ಷರನ್ನಾಗಿ ಸಕರ್ಾರ ಮಾಡಿದೆ, ಆದರೆ ಜಿಲ್ಲಾಧಿಕಾರಿಗಳು ಶಾಸಕರನ್ನು ಹಾಗೂ ಜನಪ್ರತಿನಿಧಿಗಳನ್ನು ಲೆಕ್ಕಿಸದಿರುವುದು ಶೋಚನೀಯವಾಗಿದೆ ಎಂದ ಅವರು,  ಜಾನುವಾರುಗಳಿಗೆ ಮೇವಿನ ಸಮಸ್ಯೆ  ಹಾಗೂ ಜನರ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ, ಕೆಲವು ಕಡೆ ಬೋರ್ವೆಲ್ ಮತ್ತು ಪೈಪ್ಲೈನ್ ಇರುವ ಕಡೆ  ನೀರು ತಳಮಟ್ಟಕ್ಕೆ ಹೋಗುತ್ತಿದೆ,  ಇದರಿಂದ ಜನರು ಜೀವನೋಪಾಯಕ್ಕಾಗಿ ಕುಟುಂಬ ಸಮೇತ ಪಟ್ಟಣಗಳತ್ತ ಗುಳೇ ಹೋಗುತ್ತಿದ್ದಾರೆ.  ಸಕರ್ಾರ ಬರಪೀಡಿತ ಪ್ರದೇಶಗಳಿಗೆ ಅನುದಾನ ನೀಡುತ್ತಿರುವುದು ಸಾಲುತ್ತಿಲ್ಲ ಇದಕ್ಕಾಗಿ ಜಿಲ್ಲಾಧಿಕಾರಿಗಳು ತಾಲ್ಲೂಕಿಗೆ ಆಗಮಿಸಿ ಸಮಸ್ಯೆಗಳನ್ನು ತಿಳಿಯಬೇಕು,  ಸಕರ್ಾರ ಬರಪೀಡಿತ ಪ್ರದೇಶಗಳ ಸಮಸ್ಯೆ ನಿವಾರಿಸಲು ಉತ್ತಮ ರೀತಿಯಲ್ಲಿ ಹಣ ಮಂಜೂರು ಮಾಡಬೇಕು ಎಂದು ತಿಳಿಸಿದರು. 



ಸಕಾಲ ದಿಂದ ಜನರಿಗೆ ಸಕರ್ಾರಿ ಸೇವೆಗಳು ಶೀಘ್ರ ಸಿಗುವಂತಾಗಲಿ
ಚಿಕ್ಕನಾಯಕನಹಳ್ಳಿ,ಏ.02 : ಸಕರ್ಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಯಾರ ಒತ್ತಡಕ್ಕೂ ಮಣಿಯದೇ, ಸಾರ್ವಜನಿಕರ ಸೇವೆಯನ್ನು ವಿಳಂಬಗೊಳಿಸದೆ ಶೀಘ್ರವಾಗಿ ಪರಿಹರಿಸಬೇಕು ಎಂಬ ಉದ್ದೇಶದಿಂದ ಸಕಾಲ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದ್ದು ಇದರಿಂದ ಸಾರ್ವಜನಿಕರ ಸೇವೆ ಸಕಾಲದಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಕಾಲ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಸಕರ್ಾರದ ಕೆಲಸ ಪೂರ್ಣಗೊಳ್ಳಲು ದಿನವಿಡಿ ಕಾಯುವ ಸಾರ್ವಜನಿಕರು ಇನ್ನು ಮುಂದೆ ಶೀಘ್ರವಾಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು, ತಡವಾದರೆ ಅದರ ಬದಲಾಗಿ ಪರಿಹಾರ ಧನ ಪಡೆಯಬಹುದಾಗಿದೆ, ಅದಕ್ಕಾಗಿ ಸಾರ್ವಜನಿಕರು ತಮ್ಮ ಸಮಸ್ಯೆ ಬಗ್ಗೆ ಅಧಿಕಾರಿಗಳಲ್ಲಿ ಅಜರ್ಿ ನೀಡಿ, ಅಜರ್ಿ ನೀಡಿದಕ್ಕಾಗಿ ಸ್ವೀಕೃತಿ ಪತ್ರ ಪಡೆಯಬೇಕು, ಅಜರ್ಿ ನೀಡಿಯೂ ತಮ್ಮ ಕೆಲಸ ತಾವು ಪಡೆದ ಕಾಲವಕಾಶದೊಳಗೆ ಪೂರ್ಣಗೊಳ್ಳದಿದ್ದರೆ ಸ್ವೀಕೃತಿ ಪತ್ರ ನೀಡಿದ ಅಧಿಕಾರಿಯೂ ತಮ್ಮ ವೇತನದಲ್ಲಿ 20ರೂ ನಿಂದ 500ರೂ ವರೆಗೆ ಪರಿಹಾರ ನೀಡಲಿದ್ದಾರೆ ಎಂದು  ತಿಳಿಸಿದ ಅವರು  ಈ ಸಕಾಲ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕಾರ್ಯಕ್ರಮ ಹಮ್ಮಿಕೊಂಡು ಈ ಯೋಜನೆಯ ಬಗ್ಗೆ ಗ್ರಾಮದ ಜನರಿಗೂ ತಿಳಿಸಬೇಕು, ಹಾಗೂ ಅಧಿಕಾರಿಗಳು ಸಕಾಲ ಯೋಜನೆಯನ್ನು ಮರೆಯದೆ ಸರಿಯಾದ ವೇಳೆಯಲ್ಲಿ ಸಾರ್ವಜನಿಕರ ಕಾರ್ಯ ಪೂರ್ಣಗೊಳಿಸಲು ತಿಳಿಸಿದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಸಕರ್ಾರ ಹಮ್ಮಿಕೊಂಡಿರುವ ಸಕಾಲ ಯೋಜನೆಯಿಂದ ಅಧಿಕಾರಿಗಳ ಹಾಗೂ ಜನಸಾಮಾನ್ಯರ ಭಾಂದವ್ಯ ಬೆಳೆಯುತ್ತದೆ ಎಂದ ಅವರು ಈ ಯೋಜನೆಯಿಂದ ಸಾರ್ವಜನಿಕರು ಪ್ರತಿ ದಿನ ಕಛೇರಿಗಳನ್ನು ಅಲೆಯುವುದು ತಪ್ಪುತ್ತದೆ ಎಂಬ ಅಭಿಪ್ರಾಯವಿದೆ, ಅಲ್ಲದೆ ಅಧಿಕಾರಿಗಳು ಕಛೇರಿಯಲ್ಲಿ ಏನಾದರೂ ತೊಂದರೆ ಇದ್ದರೆ ಸಾರ್ವಜನಿಕರಲ್ಲಿ ನೇರವಾಗಿ ತಿಳಿಸಿ ನಿಮ್ಮ ಕೆಲಸ ಯಾವಗ ಪೂರ್ಣಗೊಳ್ಳುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿ, ಅವರನ್ನು ಕಛೇರಿಯಿಂದ ಕಛೇರಿಗೆ ಅಲೆಸಬೇಡಿ ಎಂದು ಸಲಹೆ ನೀಡಿದರು.
ಸಕಾಲದ ಸಂಪನ್ಮೂಲ ವ್ಯಕ್ತಿ ಹಾಗೂ, ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಸಕಾಲ ಯೋಜನೆಯಲ್ಲಿ ಅಧಿಕಾರಿಗಳು ತಮ್ಮ ಕೆಲಸವನ್ನು ನಿಗದಿತ ದಿನಾಂಕದೊಳಗೆ ಮಾಡಿಕೊಡದಿದ್ದರೆ ಪರಿಹಾರ ಹಣ ಕೊಡಬೇಕು, ಪರಿಹಾರ ಹಣ ನೀಡಿದ ನಂತರವೂ ಕೆಲಸವನ್ನು ಪೂರ್ಣಗೊಳಿಸುವುದು ಈ ಯೋಜನೆಯಲ್ಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯ ಉದ್ಘಾಟನೆ ಗ್ರಾ.ಪಂ.ಕಛೇರಿಗಳಲ್ಲೂ ನಡೆಯಲಿದೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕಾಲ ಯೋಜನೆಯಲ್ಲಿ ಅಧಿಕಾರಿಗಳು ಮಾತ್ರ ಕರ್ತವ್ಯಯತೆಯಿಂದ ಕೂಡಿರಬೇಕೆಂದಲ್ಲ ಜನಪ್ರತಿನಿಧಿಗಳು ಈ ಯೋಜನೆಯ ಉದ್ದೇಶ ತಿಳಿದುಕೊಂಡು ತಮ್ಮ ವ್ಯಾಪ್ತಿಗೆ ಬರುವ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು, ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳು ಯಾವಾಗ ತಮ್ಮ ಕಾರ್ಯಚಟುವಟಿಕೆಯನ್ನು ಸರಿಯಾಗಿ ನಿರ್ವಹಿಸುತ್ತವೆಯೋ ಆ ಸಮಯದಲ್ಲಿ ಸಕರ್ಾರದ ಯೋಜನೆ, ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ,  ತಹಶೀಲ್ದಾರ್ ಉಮೇಶ್ಚಂದ್ರ,  ಪುರಸಭಾಧ್ಯಕ್ಷ ದೊರೆಮುದ್ದಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿಫಾತೀಮ, ಸದಸ್ಯೆ ಚೇತನಗಂಗಾಧರ್, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ರೇಣುಕಗುರುಮೂತರ್ಿ,  ಇ.ಓ ಎನ್.ಎಂ.ದಯಾನಂದ್ ಸೇರಿದಂತೆ ಮುಂತಾದವರಿದ್ದರು.


ಮರಳು ಮಾಫಿಯಾಕ್ಕೆ ಬಲಿಯಾದ ಗ್ರಾಮ ಸಹಾಯಕ ವಿಜಯ್ ಕುಮಾರ್

ಚಿಕ್ಕನಾಯಕನಹಳ್ಳಿ,ಏ.02 : ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಮರಳು ಮಾಫಿಯಾಕ್ಕೆ ಗ್ರಾಮ ಸಹಾಯಕ ವಿಜಯ್ಕುಮಾರ್(48)ನನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ.       ವಿಜಯ್ಕುಮಾರ್ ಶೆಟ್ಟಿಕೆರೆಯ ಗ್ರಾಮಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದು ಶೆಟ್ಟಿಕೆರೆಯ ಕೆರೆಯಲ್ಲಿ ಮರಳು ತುಂಬಲು ಬಂದ ಜನರನ್ನು ತಡೆಯಲು ಹೋದಾಗ ಈ ಘಟನೆ ನಡೆದಿರಬಹುದೆನ್ನೆಲಾಗಿದೆ. ಮೃತ ವಿಜಯ ಕುಮಾರ್ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಮಾರಕಸ್ತ್ರಾಗಳಿಂದ ಹೊಡೆದಿರುವ ಗುರುತುಗಳಿವೆ, ಜೊತೆಗೆ ಕುತ್ತಿಗೆಯ ಬಳಿ ಕಾಲಿನಿಂದ ತುಳಿದಿರುವ ಕುರುಹಗಳಿವೆ.
  ಭಾನುವಾರ ರಾತ್ರಿ ಈ ಕೃತ್ಯ ನಡೆದಿದ್ದು ಸೋಮವಾರ ಗ್ರಾಮಸ್ಥರಿಗೆ ತಿಳಿದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. 
 ಘಟನಾ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು, ಎಸ್.ಪಿ.ಮೋಹನ್ ರೆಡ್ಡಿ, ಪ್ರಭಾರ ಡಿವೈಎಸ್ಪಿ ಶಿವರುದ್ರ ಸ್ವಾಮಿ,  ತಹಶೀಲ್ದಾರ್ ಉಮೇಶ್ಚಂದ್ರ, ಸಿ.ಪಿ.ಐ ಕೆ.ಪ್ರಭಾಕರ್ ಭೇಟಿ ನೀಡಿ ಪರಿಶೀಲಿಸಿದರು. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಮಾಫಿಯಾ: ತಾಲೂಕಿನ ಶೆಟ್ಟೀಕೆರೆ, ಕಾಡೇನಹಳ್ಳಿ, ಬರಗೂರು, ಹೊಸಕೆರೆ, ಬಳ್ಳೆಕಟ್ಟೆ ಸೇರಿದಂತೆ ಹಲವು ಕಡೆ ಮರಳು ಮಾಫಿಯಾ ನಡೆಯುತ್ತಿದೆ.  ಈ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳದೆ, ಅಧೀನ ನೌಕರರನ್ನು ಬಿಟ್ಟು ಆಟನೋಡುವ ಅಧಿಕಾರಿಗಳ ಕಾಟಕ್ಕೆ ವಿಜಯಕುಮಾರ್ ಬಲಿಯಾಗಿದ್ದಾನೆ ಎಂಬುದು ಸ್ಥಳೀಯರ ಅಭಿಪ್ರಾಯ.
ಪರಿಹಾರಕ್ಕೆ ಒತ್ತಾಯ:  ಮರಳು ಮಾಫಿಯಾಕ್ಕೆ ಬಲಿಯಾಗಿರುವ ಗ್ರಾಮ ಸಹಾಯಕ ನಾಯಕ ಜನಾಂಗದವನಾಗಿದ್ದು, ಹೆಂಡತಿ, ಎರಡು ಹೆಣ್ಣು, ಒಬ್ಬ ಗಂಡು ಮಗನ ತಂದೆ, ಅವನ ಸಾವಿನಿಂದ ಕುಟುಂಬ ಬೀದಿಗೆ ಬಿದ್ದಂತಾಗಿದೆ,  ಆದ್ದರಿಂದ ಸಕರ್ಾರ ಶೀಘ್ರ ಆರೋಪಿಗಳನ್ನು ಬಂಧಿಸಬೇಕು ಹಾಗೂ ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಹಾಗೂ ಅಹಿಂದ ತಾಲೂಕು ಅಧ್ಯಕ್ಷ ಸಿಂಗದಹಳ್ಳಿ ರಾಜ್ಕುಮಾರ್ ಒತ್ತಾಯಿಸಿದ್ದಾರೆ.

ಸುಪ್ರಿಂ ಸೆಲೂನ್ನಲ್ಲಿ ಮಟ್ ಮಂಗ್ಳವಾರದ ಕವಿಗೋಷ್ಠಿ
ಚಿಕ್ಕನಾಯಿಕನಹಳ್ಳಿ,ಏ.02: ಪಟ್ಟಣದ ಸುಪ್ರಿಂ ಸೆಲೂನ್ನಲ್ಲಿ ಸಾಹಿತ್ಯ ಎಂಬ ನೂತನ ಕಲ್ಪನೆಯೊಂದಿಗೆ ಸಾಹಿತ್ಯದ ಕೆಲಸವನ್ನು ತನ್ನ ಕಾಯಕದೊಂದಿಗೆ ನೆಡೆಸಿಕೊಡುತ್ತಿರುವ ಸುಪ್ರಿಂ ಸುಬ್ರಹ್ಮಣ್ಯ  ಅವರು, ಇದೇ ಏ.3ರಂದು ಸಂಜೆ 5.30ಕ್ಕೆ ತನ್ನ ಸೆಲೂನ್ನಲ್ಲಿ ಕವಿಗೋಷ್ಠಿ ಏರ್ಪಡಿಸಿದ್ದಾರೆ.
ಜಾಡು ವೇದಿಕೆಯೊಂದಿಗೆ ನಡೆಯುತ್ತಿರುವ ಈ ಕವಿಗೋಷ್ಠಿಯಲ್ಲಿ ಚಿಂತಕ ಕೆ.ದೊರೈರಾಜ್, ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್, ಜಿ.ವಿ.ಆನಂದಮೂತರ್ಿ, ಬಿಳಿಗೆರೆ ಕೃಷ್ಣಮೂತರ್ಿ, ಅಬ್ದುಲ್ ಹಮೀದ್, ಎನ್.ನಾಗಪ್ಪ, ಎನ್.ಇಂದಿರಮ್ಮ, ಎಸ್.ಗಂಗಾಧರಯ್ಯ, ಉಗಮ ಶ್ರೀನಿವಾಸ್, ಸಿ.ಗುರುಮೂತರ್ಿ ಕೊಟಿಗೆಮನೆ,  ಅಣೆಕಟ್ಟೆ ವಿಶ್ವನಾಥ್, ದೇವರಹಳ್ಳಿ ಧನಂಜಯ, ರಾಧಕೃಷ್ಣ, ಸಿ.ಪಿ.ಗಿರೀಶ್, ಸಿ.ಎ.ಸೋಮಶೇಖರ್ ಸೇರಿದಂತೆ ಹಲವು ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದಾರೆ. 
ಅಂಬೇಡ್ಕರ್ ಜಯಂತಿ ಅಂಗವಾಗಿ ಉಚಿತ ಬ್ಯೂಟಿ ಪಾರ್ಲರ್ ತರಬೇತಿ
ಚಿಕ್ಕನಾಯಕನಹಳ್ಳಿ,ಏ.02: ಡಾ.ಅಂಬೇಡ್ಕರ್ ಜನ್ಮದಿನಾಚರಣೆಯ ಅಂಗವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ವಿಧವೆಯರಿಗೆ ಉಚಿತವಾಗಿ 10 ದಿನಗಳ  ಬ್ಯೂಟಿ ಪಾರ್ಲರ್ ತರಬೇತಿಯನ್ನು ನೀಡಲಾಗುವುದು ಎಂದು ಸುಪ್ರಿಂ ಬ್ಯೂಟಿಪಾರ್ಲರ್ ತರಬೇತಿ ಸಂಸ್ಥೆಯ ಕಾರ್ಯದಶರ್ಿ ವನಜ ಸುಬ್ರಹ್ಮಣ್ಯ ತಿಳಿಸಿದ್ದಾರೆ.
 ತರಬೇತಿಗೆ ಅಜರ್ಿ ಸಲ್ಲಿಸುವವರು 18 ರಿಂದ 35 ವರ್ಷ ವಯಸ್ಸಿನ ಮಹಿಳೆಯರಾಗಿರಬೇಕು, ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ತರಬೇತಿಯನ್ನು ನೀಡಲಾಗುವುದು, ತರಬೇತಿಯ ನಂತರ ಸಟರ್ಿಫಿಕೇಟ್ ನೀಡಲಾಗುವುದು. ಈ ತರಬೇತಿಗೆ ಆಯ್ದ 10 ಮಹಿಳೆಯರನ್ನು ಮಾತ್ರ ಆಯ್ಕೆಮಾಡಿಕೊಳ್ಳಲಾಗುವುದು. ಹೆಚ್ಚಿನ ವಿಷಯಗಳಿಗೆ ತರಬೇತಿ ಸಂಸ್ಥೆಯ ಅಧ್ಯಕ್ಷೆ ರತ್ನಮ್ಮ ರೇಣುಕಸ್ವಾಮಿ ಮೊ.9741752827 ಕಾರ್ಯದಶರ್ಿ ವನಜ ಸುಬ್ರಹ್ಮಣ್ಯ ಮೊ.9742316759 ಸಂಪಕರ್ಿಸಬಹುದು.

Wednesday, March 28, 2012


ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಮಾ.28 : ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆ ಏರ್ಪಡಿಸುವ ಬಗ್ಗೆ ಕ್ಷೇತ್ರದ ವಿಧಾನಸಭಾ ವ್ಯಾಪ್ತಿಯ ಸಮಸ್ತ ಕಾಂಗ್ರೆಸ್ ಮುಖಂಡರುಗಳ ಮತ್ತು ಕಾರ್ಯಕರ್ತರುಗಳ ಪೂರ್ವಭಾವಿ ಸಭೆಯನ್ನು ಇದೇ 29ರ ಗುರವಾರ ಸಂಜೆ 4ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದೆ ಎಂದು ಚಿನಾಹಳ್ಳಿ ವಿಧಾನಸಭಾ ಕ್ಷೇತ್ರದ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕರಾದ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏಪ್ರಿಲ್ 10ರ ಮಂಗಳವಾರ ಸಂಜೆ 4ಗಂಟೆಗೆ ನಡೆಯಲಿರುವ ಚಿನಾಹಳ್ಳಿ ವಿಧಾನಸಭಾ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ನಾಯಕರಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಮತ್ತು ಇತರ ನಾಯಕರುಗಳು, ಭಾಗವಹಿಸಲಿರುವ ಸಭೆಯ ರೂಪು ರೇಷೆಗಳನ್ನು ಚಚರ್ಿಸಿ ನಿರ್ಧರಿಸಲಾಗುವುದು. ಈ ಸಭೆಯು ಅಚ್ಚುಕಟ್ಟಾಗಿ ರೂಪಿಸಲು ಕಾರ್ಯಕರ್ತರು ಮತ್ತು ಮುಖಂಡರುಗಳು ಈ ಪೂರ್ವಭಾವಿ ಸಭೆಯಲ್ಲಿ  ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ.

ವಿದ್ಯುತ್ ವ್ಯತ್ಯಯ
ಚಿಕ್ಕನಾಯಕಹಳ್ಳಿ,ಮಾ.28 : ತಾಲ್ಲೂಕಿನ ಉಪವಿಭಾಗದ ತಿಮ್ಮನಹಳ್ಳಿ 110/11 ಕೆ.ವಿ ಉಪಕೇಂದ್ರದಲ್ಲಿ ಮತ್ತು ಹಂದನಕೆರೆ 110/11 ಕೆ.ವಿ ಉಪಕೇಂದ್ರದಲ್ಲಿ ಇದೇ ಮಾಚರ್್ 30 ಮತ್ತು 31ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೆ ತುತರ್ು ನಿರ್ವಹಣಾ ಕಾರ್ಯವಿರುವುದರಿಂದ, ಈ ಎರಡೂ ಉಪಕೇಂದ್ರಗಳಿಂದ ಪೂರಕವಾಗುತ್ತಿರುವ 11.ಕೆ.ವಿ ಮಾರ್ಗಗಳಿಗೆ ಬೆಳಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವಾಗಿದ್ದು ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ಬೆವಿಕಂ. ಸಹಾಯಕ ಕಾರ್ಯನಿವರ್ಾಹಕ ಇಂಜನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Thursday, March 22, 2012


ನೀರಿಗಾಗಿ ಹಾಹಾಕಾರ: ಖಾಲಿ ಕೊಡ ಹಿಡಿದ ಜನತೆಯ ಪರದಾಟ 
  • ನೀರು ಬಿಡಲು ಆಗ್ರಹಿಸಿ ಗ್ರಾ.ಮ ಪಂಚಾಯಿತಿಗೆ ಬೀಗ ಜಡಿದ ಗ್ರಾಮಸ್ಥರು. 
  • ಅಧಿಕಾರಸ್ಥರಿಗೆ ಧಿಕ್ಕಾರ ಕೂಗಿದ ಮಹಿಳೆಯರು  
  • ಖಾಲಿ ಕೊಡ ಹಿಡಿದು 2ನೇ ದಿನವೂ ಗ್ರಾ.ಪಂ. ಕಾಯರ್ಾಲಯಕ್ಕೆ ಬೀಗ. 
  • ಅಕ್ಕಪಕ್ಕದ ತೋಟಗಳಲ್ಲಿ ನೀರಿಗಾಗಿ ಕಾಡಿಬೇಡಿ ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳುತ್ತಿರುವ     ಜನರು .

ಚಿಕ್ಕನಾಯಕನಹಳ್ಳಿ,ಮಾ.22 : ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ, ಇದೇ ಸಮಯದಲ್ಲಿ ಬೇಸಿಗೆಗಾಲ ಶುರುವಾಗಿ ಹಲವು ದಿನಗಳು ಕಳೆದಿವೆ, ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ, ಜನರು ನೀರಿಗಾಗಿ  ಅಕ್ಕಪಕ್ಕದ ತೋಟಗಳಲ್ಲಿ ಕಾಡಿಬೇಡಿ ತಮ್ಮ ದಿನನಿತ್ಯ ಕರ್ಮಗಳನ್ನು ಪೂರೈಸುವಲ್ಲಿ ನಿರತರಾಗಿರುವುದು ಸಾಮಾನ್ಯ ದೃಷ್ಯವಾಗಿದೆ, ಆದರೆ ಇದರಿಂದ ರೋಸಿಹೋಗಿರುವ  ದುಗಡಿಹಳ್ಳಿ ಗ್ರಾಮದ ಜನ ಅಂತಿಮ ಪ್ರಯತ್ನವಾಗಿ  ಗ್ರಾ.ಪಂ.ಕಾಯರ್ಾಲಯಕ್ಕೆ ಬೀಗ ಜಡಿಯುವ ಮೂಲಕ ತಮ್ಮ ರೋಷವನ್ನು ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ದುಗಡಿಹಳ್ಳಿ, ಸಿದ್ದರಾಮನಗರ ಗ್ರಾಮಗಳಲ್ಲಿ ಕಳೆದ 6ತಿಂಗಳಿನಿಂದಲೂ ನೀರಿಗಾಗಿ ಪರದಾಡುತ್ತಿದ್ದರು, ಈ ಬಗ್ಗೆ ಅಧಿಕಾರದಲ್ಲಿರುವ ಎಲ್ಲ ವರ್ಗದ ಜನರ ಬಳಿಯೂ ಗೋಳು ಹೇಳಿಕೊಂಡರು ಕುಡಿಯಲು ನೀರು ಸಿಗದಿರುವುದರಿಂದ  ಸಿಟ್ಟಿಗೆದ್ದ ಜನರು ಮಾ.21ರಂದು   ಗ್ರಾಮ ಪಂಚಾಯಿತಿ ಕಾಯರ್ಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದ್ದಾರೆ, ಮೊದಲನೆ ದಿನ ಗ್ರಾಮ ಪಂಚಾಯಿತಿ ಕಾಯರ್ಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದಕ್ಕೆ ಗ್ರಾ.ಪಂ.ಅಧ್ಯಕ್ಷರಾದ ಲಕ್ಷ್ಮೀದೇವಮ್ಮ  ಪ್ರತಿಕ್ರಿಯಿಸಿ ನಾಳೆ ಟ್ಯಾಂಕರ್ ಮೂಲಕ ನೀರನ್ನು ತರಿಸುವುದಾಗಿ ಭರವಸೆ ನೀಡಿದರು, ಈ ಭರವಸೆಗೆ ಒಪ್ಪಿಕೊಂಡ ಗ್ರಾಮಸ್ಥರು ಗ್ರಾ.ಪಂ. ಕಾಯರ್ಾಲಯಕ್ಕೆ ಹಾಕಿದ್ದ ಬೀಗ ತೆಗೆದು ಅಲ್ಲಿನ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅನವು ಮಾಡಿಕೊಟ್ಟರು, ಮರು ದಿನ ಅಂದರೆ ಮಾ.22ರಂದು  1ಗಂಟೆಯಾದರೂ ನೀರು ಬಾರದಿರುವದನ್ನು ಮನಗಂಡು  ಗ್ರಾಮಸ್ಥರು ಮತ್ತೆ ಗ್ರಾ.ಪಂ.ಕಾಯರ್ಾಲಯದ ಮುಂದೆ ಖಾಲಿ ಕೊಡ ಪ್ರದಶರ್ಿಸಿ ಬೀಗ ಜಡಿದು ಪ್ರತಿಭಟಿಸಿದರು.
ಹೊಸದಾಗಿ ಬೋರ್ ಕೊರೆಸಿದ್ದು ಅದಕ್ಕೆ ಮೋಟಾರ್ ಅಳವಡಿಸಿಲ್ಲ,  ಗ್ರಾಮದ ಜನತೆಗೆ ನೀರು ಬಿಡಬೇಕಾದ ನೌಕರ ಅಪಘಾತಕ್ಕೀಡಾಗಿ  ಆಸ್ಪತ್ರೆ ಸೇರಿದ್ದಾನೆ,  ಇವೆಲ್ಲಾ ಕಾರಣಗಳಿಂದ  ಸುಮಾರು ಆರು ತಿಂಗಳಿನಿಂದಲೂ ಸರಿಯಾಗಿ ನೀರಿನ ಸರಬರಾಜು ಇಲ್ಲದೆ ಗ್ರಾಮದ ಜನರು ಅಕ್ಕಪಕ್ಕದಲ್ಲಿನ ತೋಟಗಳಿಗೆ ಹೋಗಿ ತೋಟದ ಮಾಲೀಕರಲ್ಲಿ ವಿನಂತಿಸಿಕೊಂಡು ನೀರನ್ನು ತಂದು ತಮ್ಮ ದಿನನಿತ್ಯ ಕಾರ್ಯಗಳನ್ನು ಪೂರೈಸಿಕೊಳ್ಳುತ್ತಿರುವುದಾಗಿ  ಆ ಭಾಗದ ಗ್ರಾಮಸ್ಥ ಲೋಕೇಶ್  ಪತ್ರಿಕೆಯ ಬಳಿ ಹೇಳಿಕೊಂಡಿದ್ದಾರೆ. ಈ ಕೂಡಲೇ ಗ್ರಾಮಕ್ಕೆ ನೀರು ಬಿಡಲು ಪಯರ್ಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ನಮಗೆ ನೀರು ಸಿಗುವವರೆಗೆ ಗ್ರಾ.ಪಂ.ಗೆ ಬೀಗ ಜಡಿಯುವುದು ಖಂಡಿತವೆಂದು ಆ ಭಾಗದ ಜನರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿ.ಲೋಕೇಶ್ ಬಿಲ್ಲೇಮನೆ, ನಿಜಗುಣಮೂತರ್ಿ, ನಂದೀಶ್, ಷಡಾಕ್ಷರಿ ಸೇರಿಂದತೆ ಮಹಾಲಿಂಗೇಶ್ವರ ಯುವಕ ಸಂಘದ ಸದಸ್ಯರು, ಮಹಿಳಾ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.


Tuesday, March 13, 2012




ಜಿಲ್ಲೆಯಲ್ಲಿ ಉತ್ತಮ ಪ್ರಗತಿಯ ಪ್ರಥಮ ಸಂಘವನ್ನಾಗಿಸಲು ಶ್ರಮಿಸುವೆ
ಚಿಕ್ಕನಾಯಕನಹಳ್ಳಿ,ಮಾ.13: ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗಿಂತ ನಂದಿನಿ ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘವನ್ನು ಜಿಲ್ಲೆಯಲ್ಲೇ ಉತ್ತಮ ಪ್ರಗತಿಯ ಪ್ರಥಮ ಪತ್ತಿನ ಸಹಕಾರ ಸಂಘ ಮಾಡಲು ಸಂಘದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಾಲ್ಲೂಕು ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಹೇಳಿದರು.
ಪಟ್ಟಣದ ನಂದಿನಿ ಹಾಲು ಉತ್ಪಾಕರುಗಳ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ 2012ನೇ ಸಾಲಿನ  ಚುನಾವಣೆಯಲ್ಲಿ 3ನೇ ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹಳೆಮನೆ ಶಿವನಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀನರಸಿಂಹಯ್ಯರವರಿಗೆ ನಿದರ್ೇಶಕರುಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಳೆಮನೆ ಶಿವನಂಜಪ್ಪ ಸಂಘದ ಅಭಿವೃದ್ದಿಗಾಗಿ ನಿಷ್ಠೆಯಿಂದ  ಕಾರ್ಯನಿರ್ವಹಿಸಲಿದ್ದು, ಟೀಕೆಗಳಿಗೆ ಕಿವಿಗೊಡದೆ ಅಭಿವೃದ್ದಿ ಕಡೆಗೆ ಕೊಂಡೊಯ್ಯುಲು ಶ್ರಮಿಸುತ್ತೇನೆ, ಇದಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕೆಂದು ಕೋರಿದರು. ನಂದಿನಿ ಪತ್ತಿನ ಸಹಕಾರ ಸಂಘದಲ್ಲಿ ಜಾತಿ, ಭೇದ ಮಾಡದೆ, ಒಂದೇ ರೀತಿಯ ವ್ಯವಸ್ಥೆ ಇರುವುದು ಎಂದು ತಿಳಿಸಿದರು.
3ನೇ ಬಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಲಕ್ಷ್ಮೀನರಸಿಂಹಯ್ಯ ಮಾತನಾಡಿ ವಿಸ್ತರಣಾಧಿಕಾರಿಗಳಿಗೂ, ಸಂಘದ ಸದಸ್ಯರಿಗೂ, ಖಾತೆದಾರರಿಗೂ  ಉತ್ತಮವಾದ ಸಂಬಂಧ ಇರಬೇಕು ಆಗ ಸಂಘದಲ್ಲಿ ಅಭಿವೃದ್ದಿ ಕಾಣುತ್ತದೆ ಎಂದರು.
ಸಮಾರಂಭದಲ್ಲಿ ನಿದರ್ೇಶಕ ಸಿದ್ದರಾಮಯ್ಯ, ವಿಸ್ತರಣಾಧಿಕಾರಿ ಯರಗುಂಟಪ್ಪ ಉಪಸ್ಥಿತರಿದ್ದರು.
ಬರ ನಿರ್ವಹಣಾ ಕೋಶದ ಸಹಾಯವಾಣಿ
ಚಿಕ್ಕನಾಯಕನಹಳ್ಳಿ,ಮಾ.13: ತಹಶೀಲ್ದಾರ್ ಕಛೇರಿಯಲ್ಲಿ ಬರಪರಿಹಾರ ನಿರ್ವಹಣಾ ಕೋಶವನ್ನು ತೆರೆಯಲಾಗಿದ್ದು, ಇಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಹಾಗೂ ಇತರೆ ಉದ್ಯೋಗ ಸೃಜನ ಕಾಮಗಾರಿಗಳ ದೂರುಗಳು ಹಾಗೂ ಸಲಹೆಗಳನ್ನು ಸ್ವೀಕರಿಸಲು ಈ ಕೋಶವನ್ನು ತೆರೆಯಲಾಗಿದೆ.
ಬರ ಪರಿಹಾರ ನಿರ್ವಹಣಾ ವಿಷಯವಾಗಿ ಹೆಚ್ಚಿನ ಮಾಹಿತಿಗಾಗಿ ಈ ಕೋಶದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು  ಸಾರ್ವಜನಿಕರು 08133-267242 ಈ ಸಂಖ್ಯೆಯನ್ನು ಸಂರ್ಪಕಿಸಲು ಕೋರಲಾಗಿದೆ.
ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ಪಟ್ಟಿ
ಚಿಕ್ಕನಾಯಕನಹಳ್ಳಿ,ಮಾ.13: ಸಕರ್ಾರಿ ಪ್ರೌಢಶಾಲೆಗಳ ಗ್ರೇಡ್-2 ಸಹ ಶಿಕ್ಷಕರ ತಾತ್ಕಾಲಿಕ ಹೆಚ್ಚುವರಿ ಪಟ್ಟಿಯನ್ನು ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಸದರಿ ಪಟ್ಟಿಯ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಮರ್ಥನೀಯ ಪೂರಕ ದಾಖಲೆಗಳೊಂದಿಗೆ ದಿ.15.03.12ರೊಳಗೆ ಕಛೇರಿಗೆ ಮುದ್ದಾಂ ಸಲ್ಲಿಸಿ ಸ್ವೀಕೃತಿ ಪಡೆಯಲು ಬಿ.ಇ.ಓ. ಸಾ.ಚಿ.ನಾಗೇಶ್ ಕೋರಿದ್ದಾರೆ.



Saturday, March 10, 2012


ತಾತಯ್ಯನವರ 52ನೇ ವರ್ಷದ ಉರುಸ್ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಮಾ.10 : ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ ಉರುಸ್, ತಾತಯ್ಯನವರ 52ನೇ ವರ್ಷದ ಉರುಸ್ ಕಾರ್ಯಕ್ರಮವನ್ನು ಇದೇ 12ರಿಂದ 14ರವರೆಗೆ ನಡೆಯಲಿದೆ ಎಂದು ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ತಿಳಿಸಿದೆ.
ಉರುಸ್ ಕಾರ್ಯಕ್ರಮವು 12ರ ಸೋಮವಾರದಂದು ರಾತ್ರಿ 8.30ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ 
 ತಾತಯ್ಯನವರ ಉತ್ಸವ ನಡೆಯಲಿದೆ, 13ರ ಮಂಗಳವಾರ ಸಂಜೆ 7.30ಕ್ಕೆ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಮುಜ್ತಾಬಾ ನಾಜಾನ್ ಪಾಟರ್ಿ ಆಫ್ ಮುಂಬಯಿ ಮತ್ತು ನೂರಿ ಸಭಾ ಪಾಟರ್ಿ ಆಫ್ ನಾಗಪುರುರವರಿಂದ ಜಿದ್ದಾಜಿದ್ದಿನ ಖವ್ವಾಲಿ ನಡೆಯಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನೆರವೇರಿಸಲಿದ್ದು ಗೋರಿಕಮಿಟಿ ಉಪಾಧ್ಯಕ್ಷ ಟಿ.ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಜಿ.ಪಂ.ಅಧ್ಯಕ್ಷ ಆನಂದರವಿ ಮತ್ತಿತರರು ಉಪಸ್ಥಿತರಿರುವರು.
14ರ ಬುಧವಾರ ಸಂಜೆ 7.30ಕ್ಕೆ ನಗೆಹಬ್ಬ, ಸಂಗೀತ ರಸಸಂಜೆಯನ್ನು ಖ್ಯಾತ ಹಾಸ್ಯಗಾರರಾದ ರಿಚಡರ್್ ಲೂಯಿಸ್ ಹಾಗೂ ಮೈಸೂರ್ ಆನಂದ್ ತಂಡದವರಿಂದ ನಡೆಯಲಿದ್ದು ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆರ್.ಕೆ.ರಾಜು ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಖ್ಯಾತ ಚಲನಚಿತ್ರ ನಟ ದುನಿಯಾ ವಿಜಯ್ ಹಾಗೂ ನಟಿ ಪೂಜಾಗಾಂಧಿರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿದೇವಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಉಪಸ್ಥಿತರಿರುವರು.

ತಾತಯ್ಯನವರ ಉತ್ಸವಕ್ಕೆ ಸೂಕ್ತ ಬಂದು ಬಸ್ತ್ ವ್ಯವಸ್ಥೆ
                                            
ಚಿಕ್ಕನಾಯಕನಹಳ್ಳಿ,ಮಾ.10 : ತಾತಯ್ಯನವರ ಉತ್ಸವಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತ ಬಂದು ಬಸ್ತ್ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ತಿಳಿಸಿದರು.
ತಾತಯ್ಯನವರ ಉರುಸ್ ಉತ್ಸವ ಆರಂಭವಾಗುವ ಹಿನ್ನೆಲೆಯಲ್ಲಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಕರೆದಿದ್ದ ಹಿಂದು ಮುಸ್ಲಿಂ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೊದಲಿನಿಂದಲೂ ನೆಡಯುತ್ತಿರುವ ಈ ಉರುಸ್ ಕಾರ್ಯಕ್ರಮಕ್ಕೆ ಎಲ್ಲಾ ಹಿಂದು ಮುಸ್ಲಿಂರು ಒಟ್ಟಾಗಿ ಸೇರಿ ಉರುಸ್ನ್ನು ಯಶಸ್ವಿಯಾಗಿ ನಡೆಸಲು ಕರೆ ನೀಡಿದರು.
ಪುರಸಭಾ ಸದಸ್ಯ ಬಾಬುಸಾಹೇಬ್ ಮಾತನಾಡಿ ಈ ಬಾರಿ ತಾತಯ್ಯನವರ ಉರುಸ್ಗೆ ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು ಅದಕ್ಕಾಗಿ ಹೆಚ್ಚು ಮಹಿಳಾ ಪೋಲಿಸ್ ಸಿಬ್ಬಂದಿಯನ್ನು ನೇಮಿಸಲು ಸಲಹೆ ನೀಡಿದರು.
ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಉರುಸ್ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.
ಶಾಂತಿ ಸಭೆಯಲ್ಲಿ ಪಿ.ಎಸ್.ಐ ಕೆ.ಪ್ರಭಾಕರ್, ಪ್ರೊಪೆಷನರಿ ಪಿ.ಎಸ್.ಐ ನಾಗರಾಜುಮೇಕ, ಪೋಲಿಸ್ ಗುಪ್ತಮಾಹಿತಿ ಸಿಬ್ಬಂದಿ ಆರ್.ದಯಾನಂದ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಕಾಂಗ್ರೆಸ್ ಪಕ್ಷದ ವಿಧಾನಸಭಾ ವೀಕ್ಷಕರಾದ ಕ್ಯಾಪ್ಟನ್ ಸೋಮಶೇಖರ್,  ಗೋರಿ ಕಮಿಟಿಯ ಟಿ.ರಾಮಯ್ಯ, ಘನ್ನಿಸಾಬ್, ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ, ದಲಿತ ಮುಖಂಡ ಮಲ್ಲಿಕಾಜರ್ುನ್,  ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ,  ನಾಮಿನಿ ಸದಸ್ಯ ಎಂ.ಎಸ್.ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುವುದೇ ಮಹಿಳಾ ದಿನಾಚರಣಾ ಕಾರ್ಯಕ್ರಮದ ಉದ್ದೇಶ
                                             
ಚಿಕ್ಕನಾಯಕನಹಳ್ಳಿ,ಮಾ.10 : ಕಾಲಕ್ಕೆ ತಕ್ಕಂತೆ ಜೀವನ ಶೈಲಿ ಬದಲಾಗುತ್ತಿದೆ ಅದರಂತೆ ಮಹಿಳೆಯರು, ಎಲ್ಲಾ ಕ್ಷೇತ್ರದಲ್ಲೂ ಭಾಗಿಯಾಗಿದ್ದಾರೆ ಆದರೂ ಅವರಿಗೆ ಜೀವನ ಸುಧಾರಣೆಯಲ್ಲಿ ಒತ್ತಡ ಹೆಚ್ಚಿರುತ್ತದೆ ಈ ಬಗ್ಗೆ ಮಹಿಳೆಯರಿಗೆ ಗಮನ ಹರಿಸಿ ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುವುದೇ ಮಹಿಳಾ ದಿನಾಚರಣಾ ಕಾರ್ಯಕ್ರಮದ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಶಿಶು ಅಭಿವೃದ್ದಿ ಯೋಜನಾ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಡಿದ ಅವರು ಮಹಿಳೆಯರು ಪುರುಷರಿಗಿಂತ ಮುಂದೆ ಇರುವುದನ್ನು ಇಂದು ನಾವು ಕಾಣುತ್ತಿದ್ದೇವೆ, ಸಕರ್ಾರವು ಇಂದು ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುತ್ತಿದೆ ಇದರ ಜೊತೆಗೆ ತಮ್ಮ ಶ್ರಮವನ್ನು ಹೆಚ್ಚಿನದಾಗಿ ಬಳಸಿಕೊಂಡರೆ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ದಾರಿ ಕಾಣಲು ಸಾಧ್ಯ ಎಂದರು.
ನ್ಯಾಯಾಧೀರಾದ ಕೆ.ನಿರ್ಮಲ ಮಾತನಾಡಿ ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಎರಡು ಕಣ್ಣುಗಳಿದ್ದಂತೆ, ಸಮಾಜದಲ್ಲಿ ಪುರುಷರು ಎಷ್ಟು ಮುಖ್ಯವೋ ಅಷ್ಟೇ ಮಹಿಳೆಯರು ಮುಖ್ಯ, ದೇಶದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನಮಾನವಿದೆ, ಹಿಂದಿನ ಕಾಲದಿಂದಲೂ ಹೆಣ್ಣನ್ನೇ ದೇವತೆ, ಆದಿಶಕ್ತಿ, ಮಾತೆಯರು ಎಂಬ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದೆ, ಇಂದು ಮಹಿಳೆಯರಿಗೆ ಸಕರ್ಾರವು ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿರುವುದು ಉನ್ನತ ಸ್ಥಾನಮಾನವನ್ನು ಅಲಂಕರಿಸಿ ಸಮಾಜದ ಸೇವೆಯನ್ನು ಮಾಡುವಲ್ಲಿ ಸಹಕಾರಿಯಾಗಿದೆ ಎಂದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ 1808ರಲ್ಲಿ ಇಗ್ಲೆಂಡ್ ದೇಶದಲ್ಲಿ ಮಾಚರ್್ 8ರಂದು ಕಾಮರ್ಿಕರು ನಡೆಸಿದ ಹೋರಾಟದ ಫಲವಾಗಿ ಮಹಿಳಾ ದಿನಾಚರಣೆ ಜಾರಿಗೆ ಬಂತು ಇದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ಲಭಿಸಲು ಫಲಕಾರಿಯಾಯಿತು, ನಮ್ಮ ರಾಜ್ಯದಲ್ಲಿ 1975ರಿಂದ ಮಾಚರ್್ 8ರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಸ್ತ್ರೀಯರಿಗೆ ಸಮಾನ ಅವಕಾಶ ಸಿಗುತ್ತಿರಲಿಲ್ಲ, ಸ್ತ್ರೀಯರ ಅಭಿವೃದ್ದಿಗೆ ಅನೇಕ ಕಾನೂನುಗಳು ಜಾರಿಯಾಗಿದ್ದು ಅದರಲ್ಲಿ ವರದಕ್ಷಿಣೆ ನಿಷೇದ ಕಾಯಿದೆ, ಕೌಟುಂಬಿಕ ದೌರ್ಜನ್ಯ ಕಾಯಿದೆ, ಆಸ್ತಿಯ ಹಕ್ಕು, ವಿವಾಹ ಹಕ್ಕು   ಮಹಿಳೆಯರ ಏಳಿಗೆಗಾಗಿ ಕಾನೂನುಗಳು ರೂಪಿತವಾಗಿದ್ದು ಸಮಾಜದಲ್ಲಿ ಮಹಿಳೆಯರು ಮುಂದೆ ಬರಲು ಈ ಕಾಯಿದೆಗಳು ಸಹಕಾರಿಯಾಗಿವೆ ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಉಪಸ್ಥಿತರಿದ್ದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ.ಈ.ಪರ್ವತಯ್ಯ ಸ್ವಾಗತಿಸಿದರೆ, ವಕೀಲರ ಸಂಘದ ಕಾರ್ಯದಶರ್ಿ ರಾಜಶೇಖರ್ ವಂದಿಸಿದರು.

Thursday, March 8, 2012


ವಿಕಲಚೇತನರಿಗೆ ಕೃತಕ ಅಂಗ ಜೋಡಣೆ  ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ
ಚಿಕ್ಕನಾಯಕನಹಳ್ಳಿ,ಮಾ.06 : ಜನರು ಆಕಸ್ಮಿಕವಾಗಿ  ಅಥವ ಅಪಘಾತಗಳಿಂದ ಅವಘಡಕ್ಕೊಳಗದ ಸಂದರ್ಭದಲ್ಲಿ ಅವರಿಗೆ ಕೃತಕ ದೇಹದ ಭಾಗಗಳನ್ನು ನೀಡಿದರೆ, ಅವರು ತಮಗೆ ತಾವೇ ಆತ್ಮಸ್ಥೈರ್ಯ ಕಂಡುಕೊಳ್ಳುವುದರ ಮೂಲಕ ತಮ್ಮ ಜೀವನ ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಇನ್ನರ್ವೀಲ್ ಕ್ಲಬ್ ವತಿಯಿಂದ ನಡೆದ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ  ಮಾತನಾಡಿದ ಅವರು,  ಅಪಘಾತಕ್ಕೊಳಗಾದ ವ್ಯಕ್ತಿಯು ಆ ಸಂದರ್ಭದಲ್ಲಿ ತನ್ನಲ್ಲಿರುವ ನಂಬಿಕೆ,  ಶಕ್ತಿಯನ್ನು ಕಳೆದುಕೊಂಡು ಮೂಲೆಗುಂಪಾಗುತ್ತಾನೆ, ಈ ಸಮಯದಲ್ಲಿ ಅವರಿಗೆ ದೇಹಕ್ಕೆ ಕೃತಕ ಭಾಗಗಳನ್ನು ನೀಡಿ ಆತ್ಮಸ್ಥೈರ್ಯ ತುಂಬಿದರೆ ಅವರು ಜೀವಿಸಲು ಸಹಕಾರಿಯಾಗುವುದು ಎಂದ ಅವರು, ಇಂತಹ ಕಾರ್ಯವನ್ನು ಇನ್ನರ್ವೀಲ್ ಕ್ಲಬ್ ಮಾಡುತ್ತಿರುವುದು ಸಂತೋಷಕರ ಮತ್ತು ಅಂಗವಿಕಲರಿಗೆ ಸಕರ್ಾರ ಹೆಚ್ಚಿನ ರೀತಿಯಲ್ಲಿ ನೆರವಾಗಬೇಕು ಹಾಗೂ ಅವರಿಗೆ ಶಾಶ್ವತ ಪರಿಹಾರ ನೀಡಬೇಕೆಂದರು.
ಇನ್ನರ್ವೀಲ್ ಕ್ಲಬ್ ಜಿಲ್ಲಾ ವೈಸ್ ಛೇರಮನ್ ಮೀನಾ ಅಂಬ್ಲಿ ಮಾತನಾಡಿ ಕೃತಕ ಕಾಲು ಜೋಡಣಾ ಶಿಬಿರವನ್ನು ಕ್ಲಬ್ ಹಲವು ವರ್ಷಗಳಿಂದ  ಹಮ್ಮಿಕೊಂಡು ಬರುತ್ತಿರುವುದಾಗಿ ತಿಳಿಸಿದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಇನ್ನರ್ವೀಲ್ ಸಂಸ್ಥೆ ಹಮ್ಮಿಕೊಂಡಿರುವ ಕೃತಕ ಕಾಲು ಜೋಡಣಾ ಶಿಬಿರವನ್ನು ಬಡ ಜನರು ಸದುಪಯೋಗ ಪಡೆದುಕೊಳ್ಳಬೇಕು, ಅಲ್ಲದೆ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಯಲ್ಲೂ ಹಮ್ಮಿಕೊಂಡ ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸಮಾರಂಭದಲ್ಲಿ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್,  ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಚನ್ನಬಸವಯ್ಯ, ತಾ.ಪಂ.ಸದಸ್ಯರಾದ ಚೇತನಗಂಗಾಧರ್, ಲತಾ, ಟೌನ್ ಬ್ಯಾಂಕ್ ಅದ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾದ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಪುರಸಭಾ ಸದಸ್ಯರಾದ ಸಿ.ಎಸ್.ರಮೇಶ್, ಕವಿತಾಚನ್ನಬಸವಯ್ಯ, ಮಹಾವೀರ್ಜೈನ್ನ ಡಾ.ಮುರುಳಿ,  ವೈದ್ಯಾಧಿಕಾರಿ ಡಾ.ಶಿವಕುಮಾರ್, ಸಿ.ಡಿ.ಪಿ.ಓ ಅನೀಸ್ಖೈಸರ್ ಸೇರಿದಂತೆ ಮುಂತಾದವರಿದ್ದರು.
ಸಮಾರಂಭದಲ್ಲಿ ಇನ್ನರ್ವೀಲ್ ಕ್ಲಬ್ಮ ಚಂದ್ರಿಕಾಮೂತರ್ಿ ಪ್ರಾಥರ್ಿಸಿದರೆ, ವೀಣಾಶಂಕರ್ ಸ್ವಾಗತಿಸಿ, ಭವಾನಿಜಯರಾಂ ನಿರೂಪಿಸಿದರು.
                                         
ಹೇಗೆ ನಡೆದುಕೊಳ್ಳಬೇಕೆಂಬದನ್ನು ಅರಿತರೆ ಜಗಳ ಇಲ್ಲವಾಗುತ್ತದೆ
                                         
ಚಿಕ್ಕನಾಯಕನಹಳ್ಳಿ,ಮಾ.06 : ಜಗಳಮಾಡಿಕೊಂಡು ಜೀವನದಲ್ಲಿ ಅಶಾಂತಿ ಉಂಟುಮಾಡಿಕೊಳ್ಳುತ್ತಾ  ನ್ಯಾಯಾಲಯಗಳಿಗೆ ಆಗಮಿಸಿ ಸುಮ್ಮನೆ ತಮ್ಮ ಸಮಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುವುದನ್ನು ಬಿಟ್ಟು ಶಾಂತಿಯುತವಾಗಿ ಜೀವನ ನಡೆಸಿ, ತಮ್ಮ ಸುತ್ತಮುತ್ತಲಿನ ಸಮಾಜವನ್ನು ಪರಿವರ್ತನೆ ಮಾಡಿ  ಎಂದು ನ್ಯಾಯಾಧೀಶರಾದ ನಿರ್ಮಲ ಹೇಳಿದರು.
ಪಟ್ಟಣದ ಡಿ.ವಿ.ಪಿ ಶಾಲೆಯ ಆವರಣದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ನ್ಯಾಯಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಂತಿಯುತ ಜೀವನ ನಡೆಸಲು  ವಿದ್ಯಾವಂತರೇ ಆಗಬೇಕೆಂದೇನಿಲ್ಲ, ಯಾರೇ ಆಗಲಿ ನಾವು ಎಲ್ಲಿ, ಯಾವಾಗ, ಯಾವ ರೀತಿ ನಡೆದುಕೊಳ್ಳಬೇಕೆಂಬುದೇನು ಅರಿತವನಿಗೆ ಮುಂದೇನಾಗಬಹುದು ಎಂಬ ಗ್ರಹಿಸುವಿಕೆ ಮುಖ್ಯ ಎಂದ ಅವರು, ಇದರಿಂದಲೇ ಅರ್ಧ ಸಮಸ್ಯೆಗಳು ತಪ್ಪುತ್ತವೆ ಎಂದರು,  ಮಕ್ಕಳು ತಮ್ಮ  ವ್ತಕ್ತಿತ್ವ ವಿಕಾಸನ ಮಾಡಿಕೊಳ್ಳಬೇಕು ಅದಕ್ಕೆ ಪೋಷಕರು ಸಹಕರಿಸಬೇಕು ಮತ್ತು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ನ್ಯಾಯಾಧೀಶರಾದ ಎ.ಜಿ.ಶಿಲ್ಪ ಮಾತನಾಡಿ  ನಾವು ಮಾಡಿದ ರೀತಿಯೇ ಸರಿ ಎಂಬ  ಯೋಚನೆಗಳು ಮಕ್ಕಳಲ್ಲಿ ಹಲವು ಕೃತ್ಯಗಳನ್ನು ಎಸಗುತ್ತಾರೆ ಆ  ಆಲೋಚನೆಯಲ್ಲಿ ತಪ್ಪುಗಳನ್ನು ಮಾಡುತ್ತಾರೆ ಆ ಮೂಲಕ ಅವರು ಬಾಲಪರಾಧಿಗಳಾಗುತ್ತಾರೆ ಇದರ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು  ಎಂದ ಅವರು ಬಾಲಪರಾಧಿಗಳಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳಿವೆ ಅಲ್ಲಿ ಅವರ ತಪ್ಪುಗಳನ್ನು ವಿಶೇಷವಾಗಿ ಚಚರ್ಿಸಿ ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ  ಡಿ.ವಿ.ಪಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು ಮಾತನಾಡಿದರು. ಸಮಾರಂಭದಲ್ಲಿ  ನಿವೃತ್ತ ಉಪನ್ಯಾಸಕ ಜಿ.ತಿಮ್ಮಯ್ಯ, ಶಿಕ್ಷಕ ನಾಗರಾಜು ಉಪಸ್ಥಿತರಿದ್ದರು

ಚಿಕ್ಕನಾಯಕನಹಳ್ಳಿ,ಮಾ08 : ತಾಲ್ಲೂಕು ಬೋರನಕಣಿವೆಯ ಸೇವಾ ಚೇತನದಲ್ಲಿ ಮಾ.14 ಮತ್ತು 15ರಂದು ವಿಶೇಷ ಘಟಕ ಮತ್ತು ಗಿರಿಜನ ಯೋಜನೆಯಡಿ ಯುವ ಕವಿಗಳಿಗೆ ಕಾವ್ಯ ಕಮ್ಮಟ ಏರ್ಪಡಿಸಲಾಗಿದೆ.
ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಬೋರನಕಣಿವೆ ಸೇವಾ ಚೇತನಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾವ್ಯ ಕಮ್ಮಟದ ಉದ್ಘಾಟನಾ ಸಮಾರಂಭ ಮಾ.14ರ ಬೆಳಗ್ಗೆ 11ಕ್ಕೆ ಜರುಗಲಿದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಮನುಬಳಿಗಾರ್ ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಕವಿ ಹೆಚ್.ಗೋವಿಂದಯ್ಯ ಮುಖ್ಯ ಅತಿಥಿಗಳಾಗಿ ಕೈಗಾರಿಕೋದ್ಯಮಿ ಬಿ.ಎ.ಚಿದಂಬರಯ್ಯ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಮದ್ಯಾಹ್ನ 2.30 ಗಂಟೆಗೆ ಕವಿ, ಪ್ರೊ.ಕೆ.ಬಿ.ಸಿದ್ದಯ್ಯ ಅವರೊಂದಿಗೆ ಸಂವಾದ ಸಂಜೆ 6ಕ್ಕೆ ಬಿಳಿಗೆರೆ ಕೃಷ್ಣಮೂತರ್ಿ ಅವರಿಂದ ತತ್ವಪದಗಳ ಗಾಯನ ಜರುಗಲಿದೆ, ಮಾ.15ರಂದು ಮದ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಬ ಜರುಗಲಿದ್ದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಮಾರೋಪದ ಅದ್ಯಕ್ಷತೆ ವಹಿಸಲಿದ್ದಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿದರ್ೇಶಕ ಕಾ.ತ.ಚಿಕ್ಕಣ್ಣ ಸಮಾರೋಪ ಭಾಷಣ ಮಾಡಲಿದ್ದಾರೆ, ರುದ್ರಪ್ಪ ಅನಗವಾಡಿ ಎಸ್.ಆರ್.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಸತ್ತಿಗೂ ಹಾಗೂ ವಿದಾನಸಭೆಗೆ ಶೇ.50ರಷ್ಟು ಮಹಿಳೆಯರಿಗೆ ಮೀಸಲಿಡಬೇಕೆ

                                    
ಚಿಕ್ಕನಾಯಕನಹಳ್ಳಿ,ಮಾ.08 : ಸಂಸತ್ತಿಗೂ ಹಾಗೂ ವಿದಾನಸಭೆಗೆ ಶೇ.50ರಷ್ಟು ಮಹಿಳೆಯರಿಗೆ ಮೀಸಲಿಡಬೇಕೆಂದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ಸಕರ್ಾರವನ್ನು ಒತ್ತಾಯಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸೃಜನ ಮಹಿಳಾ ಸಂಘದ ವತಿಯಿಂದ ನಡೆದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ ಪ್ರಪಂಚದಲ್ಲಿ ಶೇ.50ರಷ್ಟು ಮಹಿಳೆಯರು ಇರುವುದರಿಂದ ಸಕರ್ಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು, ಮಹಿಳೆಯರಿಗೆ ಸಮಾಜದಲ್ಲಿ ಸಕರ್ಾರಿ ಕೆಲಸ ಕುಟುಂಬ ಪಾಲನೆಯಲ್ಲಿ ಅವಕಾಶ ನೀಡಿದರೆ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಾಳೆ, ಮಹಿಳೆಯರು ಹಾಗೂ ಶಿಕ್ಷಿತರಾದರೆ ಮಾತ್ರ ಸಮಾಜ ಜಾಗೃತರಾಗಲು ಸಾಧ್ಯ, ಆ ಸಂದರ್ಭದಲ್ಲಿ ಅವರಿಗೆ ಅವಕಾಶಗಳು ತಾವಾಗೇ ಬರುತ್ತವೆ, ಸಕರ್ಾರ ಮಹಿಳೆಯರ ಬಗ್ಗೆ ಕಾನೂನುಗಳಿದ್ದರೂ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ ಲೈಂಗಿಕ, ದೌರ್ಜನ್ಯಗಳು ನಡೆಯುತ್ತಲೇ ಇದೆ, ಇದರ ಬಗ್ಗೆ ಮಹಿಳೆಯರೆಲರಿಗೂ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದರು, ಮಹಿಳಾ ದಿನಾಚರಣೆಯಂದು ಸಕರ್ಾರ ರಜಾ ಘೋಷಿಸುವಂತೆ ಒತ್ತಾಯಿಸಿದರು. 
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ರಾತ್ರಿ ನಿಭರ್ೀತಿಯಿಂದ ಸಂಚರಿಸಿದಾಗ ದೇಶ ರಾಮ ರಾಜ್ಯವಾಗುವುದರಲ್ಲಿ ಅನುಮಾನವಿಲ್ಲ ಎಂಬುದನ್ನು ಗಾಂಧೀಜಿಯವರ ಕನಸು ಕಂಡಿದ್ದರು, ಮಹಿಳೆಯರು ಸಕರ್ಾರ ನೀಡುವ ಸವಲತ್ತುಗಳೂ ಸರಿಯಾಗಿ ಉಪಯೋಗಿಸಿಕೊಂಡು ಆಥರ್ಿಕವಾಗಿ ಮುಂದೆ ಬರಬೇಕು, ಸ್ತ್ರೀಯರ ಮೇಲಿನ ದೌರ್ಜನ್ಯ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿನ ದೌರ್ಜನ್ಯಗಳನ್ನು ತಡೆಯುವುದು ಸಮಾಜದ ಎಲ್ಲಾ ನಾಗರೀಕರ ಕರ್ತವ್ಯ ಎಂದರು.
ಸಮಾರಂಭಕ್ಕೂ ಮುನ್ನ ಆಂಜನೇಯಸ್ವಾಮಿ ದೇವಸ್ಥಾನದಿಂದ ಕನ್ನಡ ಸಂಘದವರೆಗೆ ಮೆರವಣಿಗೆ ನಡೆಸಲಾಯಿತು. ನೆಹರು ಸರ್ಕಲ್ನಲ್ಲಿ ಮಾನವ ಸರಪಳಿ ನಿಮರ್ಿಸಿ, ಜನರಲ್ಲಿ ಮಹಿಳೆಯರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ.ಸಸದಸ್ಯರಾದ ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿದೇವಿ, ಪುರಸಭಾ ಸದಸ್ಯರಾದ ರೇಣುಕಗುರುಮೂತರ್ಿ, ರುಕ್ಮಿಣಮ್ಮ, ಶಿವಣ್ಣ, ಕವತಾಚನ್ನಬಸವಯ್ಯ, ಸುಮಿತ್ರಕಣ್ಣಯ್ಯ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್ ಮುಂತಾದವರಿದ್ದರು.

Wednesday, February 22, 2012

ಎರಡು ಸಮಾಜಗಳ ನಡುವೆ ವೈಷಮ್ಯ ಮೂಡಿಸುತ್ತಿರುವ ಪೊಲೀಸ್ ಇಲಾಖೆ ಶೀಘ್ರ ಎಚ್ಚೆತ್ತುಕೊಳ್ಳಲಿ: ಸಿ.ಡಿ.ಸಿ.
ಚಿಕ್ಕನಾಯಕನಹಳ್ಳಿ,ಫೆ.22 : ತಾಲ್ಲೂಕಿನ ಅಜ್ಜಿಗುಡ್ಡೆ ಗ್ರಾಮದಲ್ಲಿ ಅಂಗವಿಕಲೆ ಲಕ್ಕಮ್ಮನಿಗೆ ಹಾಗೂ ಅವರ ಮನೆಯ ಮೇಲೆ ನಡೆದ ದಾಂಧಲೆಯನ್ನು  ಖಂಡಿಸಿರುವುದಲ್ಲದೆ, ದಾಂಧಲೆ ನಡೆಸಿದ ಆರೋಪಿಗಳ ವಿರುದ್ದ ಪೋಲಿಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಇದೇ 18ರಂದು ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯನ್ನು ಆಧಾರಿಸಿ ಅಜ್ಜಿಗುಡ್ಡೆ ಲಕ್ಕಮ್ಮ ಹಾಗೂ ಅವರ ಮಗನಿಗೆ ಸಾಂತ್ವಾನ ಹೇಳಲೆಂದು ಅಜ್ಜಿಗುಡ್ಡೆಯ ಮನೆಗೆ ತೆರಳಿದ್ದರು.  
ದಾಂಧಲೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಅಂಗವಿಕಲ ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಇಷ್ಟೋಂದು ತಾತ್ಸಾರ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಲಕ್ಕಮ್ಮ ಮತ್ತು ಅವರ ಕುಟುಂಬ ಅಶಕ್ತರಲ್ಲ ಅವರ ಜೊತೆ ನಾವಿದ್ದೇವೆ, ಕುರುಬ ಸಮಾಜದ ಒಂದೇ ಒಂದು ಮನೆ ಇದೆ ಎಂಬ ಕಾರಣಕ್ಕೆ ಇಷ್ಟೊಂದು ಕಿರುಕುಳ ನೀಡುವುದು ಸರಿಯಲ್ಲ. ಪೊಲೀಸ್ ಇಲಾಖೆ ಶೀಘ್ರ ಎಚ್ಚೆತ್ತುಕೊಂಡು ಅನ್ಯಾಯಕ್ಕೊಳಗಾಗಿರುವ ಈ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
  ಚರಂಡಿಯ ಕೊಳಚೆ ನೀರು ಹರಿಯುವ ವಿಷಯಕ್ಕೆ ಎದ್ದಿರುವ ಈ ವೈಷ್ಯಮ್ಯವನ್ನು ತಮನ ಮಾಡಲು  ತಾಲ್ಲೂಕು ಪಂಚಾಯಿತಿ ಶೀಘ್ರ ಇಲ್ಲಿ ಚರಂಡಿ ನಿಮರ್ಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಲಕ್ಕಮ್ಮನ ಮನೆಯವರು  ಅಜರ್ಿ ಕೊಟ್ಟು 2ವರ್ಷವಾದರೂ ತಾಲ್ಲೂಕು ಆಡಳಿತ ಯಾವ ಕ್ರಮವನ್ನು ಕೈಗೊಂಡಿಲ್ಲ ಆದ್ದರಿಂದ  ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ  ಈ ಬಗ್ಗೆ ಪರಿಶೀಲಿಸಿ ಅಂಗವಿಕಲೆ ಅಜ್ಜಿಗೆ ಹಾಗೂ ಅವರ ಮನೆಗೆ ನಡೆದಿರುವ ದಾಂಧಲೆಗೆ ಪರಿಹಾರ ನೀಡಬೇಕು ಎಂದ ಅವರು ಕೇವಲ 2ಮನೆಗಳ ನಡುವೆ ಉಂಟಾದ ಈ ಗಲಭೆಯು ಎರಡು ಸಮಾಜದ ನಡುವೆ ವೈಷಮ್ಯ ಬೆಳೆಯುವಂತೆ ಮಾಡದೆ ಪೊಲೀಸ್ ಇಲಾಖೆ ಲಕ್ಕಮ್ಮನ ದೂರನ್ನು ದಾಖಲೆ ಮಾಡಿಕೊಂಡು ಶೀಘ್ರ ಎಫ್.ಐ.ಆರ್. ನೀಡುವಂತೆ ಒತ್ತಾಯಿಸಿದ್ದಾರೆ.  

ಅಧಿಕಾರಿಗಳ ನಿರ್ಲಕ್ಷ ಅಭಿವೃದ್ದಿ ಕಾರ್ಯಗಳು ಕುಂಠಿತ: ಆರೋಪ
ಚಿಕ್ಕನಾಯಕನಹಳ್ಳಿ,ಫೆ.22 :  ತಾಲ್ಲೂಕು ಪಂಚಾಯ್ತಿ ಸ್ವತ್ತನ್ನು ಅಳತೆ ಮಾಡಿಸಲು ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ರವರಿಗೆ  ಹಾಗೂ ಭೂಮಾಪನ ಇಲಾಖೆಯ ಸೂಪರ್ ವೈಸರ್ ಹೇಳಿ ಹಲವು ದಿನಗಳಾದರೂ ಇಲ್ಲಿಯವರೆಗೆ ಅಳತೆ ಮಾಡಿರುವುದಿಲ್ಲ ಎಂದು ತಾ.ಪಂ.ಸದಸ್ಯ ನಿರಂಜನಮೂತರ್ಿ ಆರೋಪಿಸಿದ್ದಾರೆ.
ತಿಮ್ಲಾಪುರ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ.15ರಷ್ಟು ಲಂಚಕೊಟ್ಟರೆ ಒಬ್ಬನೇ ವ್ಯಕ್ತಿಗೆ 15ಲಕ್ಷದಷ್ಟು ಕಾಮಗಾರಿ ಮಂಜೂರು ಮಾಡಿಕೊಡುತ್ತಾರೆ, ಇಲ್ಲಿಯ ಅಧಿಕಾರಿಗಳು ತಮಗೆ ಆಪ್ತರಾದವರಿಗೆ ಚಿ.ನಾ.ಹಳ್ಳಿ  ತಾ.ಪಂ.ನಿಂದಲೇ ಅನುಷ್ಠಾನಗೊಳಿಸಿ, ಉಳಿದವರಿಗೆ  ಜಿಲ್ಲಾ ಪಂಚಾಯ್ತಿಗೆ ಕಳುಹಿಸಿಕೊಡಿ ಎಂದು ಹೇಳಿ ತಲೆ ತಪ್ಪಿಸಿಕೊಳ್ಳುತ್ತಾರೆ ಎಂದು ನಿರಂಜನಮೂತರ್ಿ ಆರೋಪಿಸಿದ್ದಾರೆ. 
 2011-12ನೇ ಸಾಲಿನ ತಾ.ಪಂಚಾಯ್ತಿಯಲ್ಲಿ ಮಾಚರ್್ 15ಕ್ಕೆ 11-12ನೇ ಸಾಲಿನ ಹಣ ಖಚರ್ಾಗಬೇಕು ಇಲ್ಲದಿದ್ದರೆ ಸಕರ್ಾರ ವಾಪಸ್ ಪಡೆಯಲಿದೆ ಎಂದು ಖಜಾನೆಯಿಂದ ಪತ್ರ ಬಂದಿದೆ, 29 ಇಲಾಖೆಗಳಲ್ಲಿ ಹಣ ಸಕರ್ಾರಕ್ಕೆ ವಾಪಸ್ ಹೋದರೆ ನೇರವಾಗಿ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
  1. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಜವಬ್ದಾರಿ ಅರಿತು ಕೆಲಸ ಮಾಡಲಿ.

ಚಿಕ್ಕನಾಯಕನಹಳ್ಳಿ,ಫೆ.22 : ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಜವಾಬ್ದಾರಿಗಳು, ಕರ್ತವ್ಯಗಳನ್ನು ಅರಿತು ಶಾಲೆಯಲ್ಲಿ  ಕೆಲಸ ಮಾಡಬೇಕೆಂದು  ಪಟ್ಟಣದ ಕೆ.ಎಂ.ಎಚ್.ಪಿ.ಎಸ್.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಬಿ.ಲೋಕೇಶ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರ ಸಕರ್ಾರಿ ಶಾಲೆಯಲ್ಲಿ  ನಡೆದ ಶಾಲಾಭಿವೃದಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ನಾಗರೀಕ ಸೌಕರ್ಯ ಸ್ಥಾಯಿ ಸಮಿತಿ ಸದಸ್ಯರಿಗೆ 3ದಿನದ ಸಂಕಲ್ಪ ಸಮಕ್ಷಮ ಹಾಗೂ ಸಮಾವೇಶದ ತರಬೇತಿ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ತರಬೇತಿ ಕಾಯರ್ಾಗಾರದಲ್ಲಿ ಭಾಗವಹಿಸುವ ಮೂಲಕ ಶಾಲೆಗಳಲ್ಲಿ ಮಕ್ಕಳಿಗಾಗಿ ಯಾವ ರೀತಿಯ ಅಭಿವೃದ್ದಿ ಕಾರ್ಯಗಳು ಮಾಡಬೇಕು ಅದಕ್ಕಾಗಿ ಶಿಕ್ಷಕರಿಗೆ ಯಾವ ರೀತಿ ಮಾರ್ಗದರ್ಶನ ನೀಡಬಹುದು ಎಂಬುದನ್ನು ತಿಳಿಯಬಹುದಾಗಿದ್ದು ಶಾಲೆಗಳಲ್ಲಿನ ಶೈಕ್ಷಣಿಕ ಪ್ರಗತಿ ಬಗ್ಗೆ ಹಾಗೂ ಶಾಲೆಗಳ ಮುಂದಿನ ಅಭಿವೃದ್ದಿ ಕಾರ್ಯಗಳಿಗೆ ತರಬೇತಿ ಕಾರ್ಯಗಾರಗಳು ಅನುಕೂಲ ಮಾಡಿಕೊಡುತ್ತವೆ ಎಂದ ಅವರು ಶಾಲೆಗಳ ಅಭಿವೃದ್ದಿಗೆ ಎಸ್.ಡಿ.ಎಂ.ಸಿ ಸದಸ್ಯರ ಪಾತ್ರ ಬಹುಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಎಚ್.ಪಿ.ಎಸ್.ರೇವಣ್ಣ ಮಠ ಶಾಲೆಯ ಅಧ್ಯಕ್ಷ ರೇವಣ್ಣ ಉದ್ಘಾಟಿಸಿದರು, ರಾ.ಪ್ರಾ.ಶಾ.ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಿ.ಎಸ್.ಶೋಭಾ, ಸಿ.ಆರ್.ಪಿ. ದುರ್ಗಯ್ಯ ರಾಜಣ್ಣ  ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಪ್ರಕಾಶ್ ಪ್ರಾಥರ್ಿಸಿದರೆ, ಕೃಷ್ನಮೂತರ್ಿ ವಂದಿಸಿದರು.

Friday, February 10, 2012


ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ

ಕುಪ್ಪಳಿಯಲ್ಲಿರುವ ಕವಿ ಮನೆಯ ವಿಹಂಗಮ ನೋಟ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.
 ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.

 ಸಿ.ಗುರುಮೂತರ್ಿ ಕೊಟಿಗೆಮನೆ
ಲೇಖಕ, ಹವ್ಯಾಸಿ ಪತ್ರಕರ್ತ
ಚಿಕ್ಕನಾಯಕನಹಳ್ಳಿ. 9448659573

Tuesday, February 7, 2012



ವಿಜ್ಞಾನ ವಿಭಾಗದ ಗ್ರಾಮೀಣ ವಿದ್ಯಾಥರ್ಿಗಳಿಗೆ ಸಿ.ಇ.ಟಿ.ಯ ಬಗ್ಗೆ ಹೆಚ್ಚಿನ ಜ್ಞಾನ ಅಗತ್ಯ
ಚಿಕ್ಕನಾಯಕನಹಳ್ಳಿ,ಫೆ.06  ;  ನಗರದ ಜ್ಞಾನಪೀಠ ಪ್ರೌಢ ಶಾಲೆಯಲ್ಲಿ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ವತಿಯಿಂದ ದ್ವಿತಿಯ ಪಿ.ಯು.ಸಿ, ವಿಜ್ಞಾನ ವಿಭಾಗದ ವಿದ್ಯಾಥರ್ಿಗಳಿಗೆ ಸಿ.ಇ.ಟಿ. ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ರಸಾಯನ  ಶಾಸ್ರದ  ಉಪನ್ಯಾಸಕರಾದ ಆನಂದ ಅವರು ಮಾತನಾಡಿ ದ್ವಿತಿಯ ಪಿ.ಯು.ಸಿ. ವಿಜ್ಞಾನ ವಿಭಾಗದಿಂದ ಇಂಜಿನಿಯರಿಂಗ್, ಎಂ,ಬಿ.ಬಿ.ಎಸ್. ಮತ್ತು ಬಿ.ಡಿ.ಎಸ್. ಪವ್ರೇಶ ಪರೀಕ್ಷೇಗೆ ಈ ತರಬೇತಿ ಅನುಕೂಲವಾಗುತ್ತದೆ. ಸಿ.ಇ.ಟಿ. ಯಲ್ಲಿ ವೇಗ ಮತ್ತು ಸ್ಪಷ್ಟತೆ ತುಂಬ ಅವಶ್ಯಕವಾಗಿರುತ್ತದೆ. ಏಕೆಂದರೆ 90 ನಿಮಿಷದಲ್ಲಿ 60 ಪ್ರಶ್ನೆಗೆ  ಉತ್ತರಿಸುವುದರಿಂದ ತರಬೇತಿಯ ಅವಶ್ಯಕತೆ ಇರುತ್ತದೆ. ವಿದ್ಯಾಥರ್ಿಗಳಿಗೆ ಉತ್ತಮ ಫಲಿತಾಂಶಗಳಿಸಲಿ ಎಂದು ಆಶಿಸಿದರು
ಈ ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಕೊ  ಅಪರೆಟಿವ್ ಬ್ಯಾಂಕ್ ಅಧ್ಯಕ್ಷರು ಸಿ.ಎಸ್. ನಟರಾಜು, ಪುರಸಭಾದ್ಯಕ್ಷ ದೊರೆಮುದ್ದಯ್ಯ, ದಿವ್ಯಜ್ಯೋತಿ ಕಲಾ ಸಂಘದ ಅಧ್ಯಕ್ಷ  ಸಿ.ಡಿ.ಚಂದ್ರಶೇಖರ್ ಮಾತನಾಡಿದರು.. 
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅದ್ಯಕ್ಷರಾದ ಅಸ್ಲಂ ಪಾಷ, ಕಾಂಗ್ರೆಸ್ ಮುಖಂಡರು ಕೃಷ್ಣೆಗೌಡ, ಜಯಕನರ್ಾಟಕ ಅದ್ಯಕ್ಷರಾದ ವೆಂಕಟೇಶ್. ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಸಹನಾ ಪ್ರಿಯಾ ಪ್ರಾಥರ್ಿಸಿದರೆ, ಜಾಕೀರ್ ಹುಸೇನ್ ಸ್ವಾಗತಿಸಿ  ಸಿ.ಆರ್.ಪಿ. ದುರ್ಗಯ್ಯ ನಿರೂಪಿಸಿದರು.

ಬ್ರೈ ಕಾಯಿದೆ ಜಾರಿಗೆ ಬಂದರೆ ಕುಲಾಂತರಿ ಬೀಜದ ಬಗ್ಗೆ ಮಾತನಾಡುವವರನ್ನೂ  ಬಂಧಿಸುವ ಅಪಾಯವಿದೆ, ರೈತರೇ ಎಚ್ಚರ.
ಚಿಕ್ಕನಾಯಕನಹಳ್ಳಿ,ಫೆ.5: ಜೈವಿಕ ಬೀಜಗಳಿಗೆ ಸಂಬಂಧಿಸಿದಂತೆ ಬಿ.ಆರ್.ಎ.ಐ(ಬ್ರೈ) ಮಸೂದೆ ಜಾರಿಗೆ ಬಂದರೆ ಕುಲಾಂತರಿ ಬೀಜದ ಬಗ್ಗೆ ಮಾತನಾಡಿದರೆ ಪೊಲೀಸರು ಬಂಧಿಸುವಂತಹ ಪರಿಸ್ಥಿತಿ ನಿಮರ್ಾಣವಾಗುತ್ತದೆ ಆದ್ದರಿಂದ ಎಲ್ಲಾ ರೈತರು ಕುಲಾಂತರಿ ಬೀಜಗಳ ಬಗ್ಗೆ ಈಗಲೇ ಜಾಗೃತಿ ವಹಿಸುವ ತುತರ್ಾದ ಕೆಲಸವಾಗಬೇಕು ಎಂದು ರಾಜ್ಯ ಬೀಜ ಆಂದೋಲನದ ಮುಖಂಡರಾದ ಗಾಯಿತ್ರಿ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದಿಂದ ಅಂದು ಉಪ್ಪು, ಇಂದು ಬೀಜ ಆಂದೋಲನದ ಅಂಗವಾಗಿ ಹೊರಟ ಜಾಥ,  ತಾಲೂಕಿನ ತರಬೇನಹಳ್ಳಿಯಲ್ಲಿ ಸಮಾವೇಶಗೊಂಡು  ಆಂದೋಲನದ ವಿಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ(ಬ್ರೈ), ಕಾನೂನು ಕರಡು ರೂಪದಲ್ಲಿದೆ, ಈ ಕಾಯಿದೆಯನ್ನೇನಾದರೂ ಕೇಂದ್ರ ಸಕರ್ಾರ ಕಾನೂನಾಗಿ ಜಾರಿಗೆ ತಂದರೆ,  ಖಾಸಗಿ ಕಂಪನಿಗಳು ಬೀಜಗಳನ್ನು ನಿಯಂತ್ರಿಸುತ್ತವೆ, ಖಾಸಗಿ ಕಂಪನಿಗಳು ನೀಡುವ ನಪುಂಸಕ ಬೀಜಗಳು ರೈತರ ಹೊಲ ಸೇರುತ್ತವೆ,  ಇಂತಹ ಬೀಜಗಳಿಂದ ಗಂಡಾತರ ಕಾದಿದೆ, ಅದನ್ನು ಈಗಲೇ ಹಿಸುಕಿ ಹಾಕದಿದ್ದರೆ ಮುತ್ತೊಂದು ದಿನ ನಮ್ಮನ್ನೆಲ್ಲಾ ಆ ಬೀಜಗಳು ಸಾವಿನ ದವಡೆಗೆ ತಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ನಮ್ಮ ಈ ಆಂದೋಲನ ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ವಲಯಗಳಲ್ಲೂ ನಡೆಯಲಿದ್ದೂ, ಅಂತಿಮವಾಗಿ  ಫೆ. 15ರಂದು ಕೂಡ್ಲಗಿಯಲ್ಲಿ ಸಮಾವೇಶಗಳಲ್ಲಿದೆ ಎಂದು ತಿಳಿಸಿದರು.
ನಂದಿಹಳ್ಳಿ ಕೃಷಿಕ ಎನ್.ಮೃತ್ಯುಂಜಯಪ್ಪ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಬೀಜದ ಗುಣಮಟ್ಟವನ್ನು ಕಾಯ್ದುಕೊಳ್ಳವ ಅಧಿಕಾರ  ನಮ್ಮ ಸಕರ್ಾರಕ್ಕಿದೆ.   ಸಕರ್ಾರ ತರಲು ಹೊರಟಿರುವ ಕೆಲವು ಕಾಯಿದೆಗಳೇನಾದರೂ ಜಾರಿಗೆ ಬಂದರೆ ಆ ಅಧಿಕಾರ ಖಾಸಗಿ ಕಂಪನಿಗಳಿಗೆ ಹೋಗಿ ಅವರು ಕೊಟ್ಟ ನಪುಂಸಕ ಬೀಜಗಳನ್ನು ಪ್ರತಿ ವರ್ಷವು ಕಂಪನಿಗಳಿಂದ ಕೊಳ್ಳಬೇಕಾಗುತ್ತದೆ ಎಂದರು.
ತರಬೇನಹಳ್ಳಿ ಷಡಾಕ್ಷರಿ ಮಾತನಾಡಿ, ದೇಶಿ ಬೀಜಗಳಲ್ಲಿ ಇರುವ ಸತ್ವವನ್ನು ನಾವು ಕಂಪನಿಗಳು ಕೊಡುವ ಬೀಜಗಳಲ್ಲಿ ಪಡೆಯಲಾಗುವುದಿಲ್ಲ, ಈಗಾಗಲೇ ನಮ್ಮ ದೇಹದಲ್ಲಿ ದಿನೇ ದಿನೇ ಧಾರಣಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೇ, ಕುಲಾಂತರಿ ಬೀಜದ ಆರ್ಭಟ ಹೆಚ್ಚಾದರೆ ನಮ್ಮ ತನವನ್ನೇ ಕಳೆದುಕೊಂಡತ್ತಾಗುತ್ತದೆ ಎಂದರು.
ತರಬೇನಹಳ್ಳಿ ಅನ್ನಪೂರ್ಣಮ್ಮನವರು ದೇಶಿ ಬೀಜದ ಕೈಚೀಲವನ್ನು ಸೃಜನಾ ಎಂಬ ಬಾಲಕಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ತರಬೇನಹಳ್ಳಿ ಷಡಾಕ್ಷರಿಯವರ ತೋಟದಲ್ಲಿ ಬೀಜ ಬ್ಯಾಂಕ್ನ್ನು ಪ್ರಾರಂಭಿಸಲಾಯಿತು, ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಕೈ ಚೀಲದಲ್ಲಿ ದೇಶಿ ಬೀಜಗಳನ್ನು ಉಡುಗೊರೆಯಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಸೃಜನಾ ಮಹಿಳಾ ತಂಡದವರಿಂದ ವೀರಗಾಸೆ ನೃತ್ಯ ಪ್ರದರ್ಶನ ಹಾಗೂ ಸೋಮನಹಳ್ಳಿ ಶಾಲಾ ಮಕ್ಕಳಿಂದ ನನ್ನ ಅಂಗಿಗೇಕೆ ಜೇಬಿಲ್ಲ ಎಂಬ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ  ಸಾವಯವ ಕೃಷಿ ಪರಿವಾರದ ತಾಲೂಕು ಅಧ್ಯಕ್ಷ ಮಲ್ಲೇಶಯ್ಯ ಕಲ್ಲೇನಹಳ್ಳಿ, ಸೃಜನ ಸಂಘದ ಅಧ್ಯಕ್ಷೆ ಜಯಮ್ಮ, ಎನ್.ಇಂದಿರಮ್ಮ,  ತರಬೇನಹಳ್ಳಿ ಅನ್ನಪೂರ್ಣಮ್ಮ, ಪಂಕಜ ಚಂದ್ರಶೇಖರ್,  ಹಸಿರು ಸೇನೆಯ ಸತೀಶ್ ಕೆಂಕೆರೆ ಉಪಸ್ಥಿತರಿದ್ದರು.

ಜುಯಲರಿಯಲ್ಲಿ ಬಂಗಾರವನ್ನು ಕದ್ದವರನ್ನು ಒಂದು ಗಂಟೆಯಲ್ಲಿ ಮಾಲು ಸಮೇತ ಹಿಡಿದ ಚಿ.ನಾ.ಹಳ್ಳಿ ಪೊಲೀಸರು.
ಚಿಕ್ಕನಾಯಕನಹಳ್ಳಿ,ಫೆ.5: ಪಟ್ಟಣದ ಖಾಸಗಿ ಜ್ಯೂಯಲರಿ ಅಂಗಡಿಯಲ್ಲಿ ಸುಮಾರು ಮೂರು ನೂರು ಗ್ರಾಂಗಳಿಗೂ ಅಧಿಕ ಪ್ರಮಾಣದ ಸುಮಾರು ಏಳುವರೆ ಲಕ್ಷ ರೂಗಳ ಚಿನ್ನಾಭರಣ ಕಳ್ಳತನ ಮಾಡಿದ ಐದು ಮಹಿಳೆಯರ ಗುಂಪನ್ನು ಕಳ್ಳತನ ಮಾಡಿದ ಒಂದು ಗಂಟೆ ಒಳಗೆ ಮಾಲು ಸಮೇತ ಪತ್ತೆಹಚ್ಚಿದ ಘಟನೆ ಜರುಗಿದೆ.
 ಪಟ್ಟಣದ ಖಾಸಗಿ ಬಸ್ ಸ್ಟಾಂಡ್ ಬಳಿಯ ಶ್ರೀ ಲಕ್ಷ್ಮಿ ಜುಯಲರ್ಸ್ಗೆ ಗ್ರಾಹಕರಂತೆ ನಟಿಸಿಕೊಂಡು ಬಂದ ಐದು ಜನ ಮಹಿಳೆಯರು,  ಆಭರಣಗಳನ್ನು ಕೊಂಡುಕೊಳ್ಳುವವರಂತೆ ನಟಿಸಿ ಜುಯಲರಿ ಮಾಲೀಕ ಚನ್ನಾರಾಂ ರವರ ಗಮನವನ್ನು ಬೇರೆಡೆ ಸೆಳೆದು ಅಂಗಡಿಯ ಕಪಾಟಿನಲ್ಲಿ ಬಂಗಾರದ ಒಡವೆಗಳನ್ನು ಇಟ್ಟಿದ ಟ್ರೇಗಳನ್ನೇ ಹೊತ್ತು ಹೊಯ್ದಿದ್ದಾರೆ.
ಎರಡು ಗುಂಪುಗಳಲ್ಲಿ ಬಂದ ಐವರು ಮಹಿಳೆಯರ ಪೈಕಿ  ಮೊದಲು ಮೂವರು ಮಹಿಳೆಯರು ಓಲೆಗಳನ್ನು ತೋರಿಸುವಂತೆ ಕೇಳಿದ್ದಾರೆ,  ನಂತರ ಇಬ್ಬರು ಬಂದು ಬೆಳ್ಳಿ ಆಭರಣಗಳನ್ನು ತೋರಿಸುವಂತೆ ಕೇಳಿದ್ದಾರೆ, ಇವರ ಕಡೆ ಮಾಲೀಕ ಚೆನ್ನಾರಾಂ ಬಂದಾಗ ಮೊದಲು ಬಂದ ಮೂವರು ಮಹಿಳೆಯರು ಕಪಾಟಿಗೆ ಕೈ ಹಾಕಿ ಚಿನ್ನಾಭರಣವಿದ್ದ ಟ್ರೇಗಳನ್ನು ಹೊತ್ತು ಹೊಯ್ದಿದ್ದಾರೆ. ನಂತರ ಉಳಿದ ಇಬ್ಬರು ಸ್ಥಳದಿಂದ ಕಾಲು ಕಿತ್ತಿದ್ದಾರೆ, ಇವರ ನಡವಳಿಕೆಯಲ್ಲಿ ಅನುಮಾನ ಬಂದದ್ದರಿಂದ ಅಂಗಡಿ ಮಾಲೀಕ ಚೆನ್ನಾರಾಂ ಕಪಾಟಿನ ಕಡೆ ನೋಡುವಷ್ಟರಲ್ಲಿ ಚಿನ್ನಾಭರಣಗಳಿದ್ದ ಟ್ರೇ ಕಾಣೆಯಾಗಿದೆ, ಬಂದ ಗಿರಾಕಿಗಳು ಅಂಗಡಿ ಎದುರಿನಲ್ಲೇ ಬಸ್ ಹತ್ತುವುದನ್ನು ಕಂಡು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಚೆನ್ನಾರಾಂ,  ಗಿರಾಕಿಗಳು ಹತ್ತಿದ ಬಸ್ನ್ನು ಬೆನ್ನು ಹತ್ತಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಸಿಕ್ಕಿಹಾಕೊಂಡಿದ್ದಾರೆ, ಇನ್ನು ಉಳಿದ ಮೂವರು ಜೆ.ಸಿ.ಪುರದ  ದೇವಸ್ಥಾನದ ಬಳಿ ಅನುಮಾನವಾಗಿ ಓಡಾಡುವುದನ್ನು ಕಂಡು ಅಲ್ಲಿನ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆಯಲ್ಲಿ ಉಳಿದ ಮೂವರನ್ನು ಪೊಲೀಸರು ಮಾಲು ಸಮೇತ ಹಿಡಿದಿದ್ದಾರೆ. 
ಆರೋಪಿಗಳು ಮೈಸೂರು ನಿವಾಸಿಗಳೆಂದು ಹೇಳಿಕೊಂಡಿದ್ದು ದುರ್ಗ, ಶೀಲ, ಮಂಜುಳ, ಶೀಲ ಹಾಗೂ ಮಂಜುಳ ಎಂದು ಗುರುತಿಸಲಾಗಿದೆ. ಇವರೆಲ್ಲಾ 25 ರಿಂದ 45 ವರ್ಷದೊಳಗಿನವರಾಗಿದ್ದಾರೆ, ಹೆಚ್ಚಿನ ತನಿಖೆಯನ್ನು ಚಿ.ನಾ.ಹಳ್ಳಿ ಸಿ.ಪಿ.ಐ. ಪ್ರಭಾಕರ್ ಹಾಗೂ ಪಿ.ಎಸೈ ಚಿದಾನಂದ ಮೂತರ್ಿ ಕೈಗೊಂಡಿದ್ದಾರೆ.

ಬೈಕ್ನಿಂದ ಬಿದ್ದು ಸ್ಥಳದಲ್ಲೇ ಒಬ್ಬ ಸಾವು, ಇಬ್ಬರು ಬೆಂಗಳೂರು ಆಸ್ಪತ್ರೆಗೆ
ಚಿಕ್ಕನಾಯಕನಹಳ್ಳಿ,ಫೆ.07 : ತಾಲ್ಲೂಕಿನ ಕಂದಿಕೆರೆ ಹೋಬಳಿ ಹನುಮಂತನಹಳ್ಳಿ ಗೇಟ್ ಬಳಿಯ ಬೈಕೊಂದರಿಂದ ಬಿದ್ದು ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮದನಮಡು ಗ್ರಾಮದ ಮಂಜುನಾಥ್(26) ಮೃತ ದುದರ್ೈವಿ ಅದೇ ಗ್ರಾಮದ ನರಸಿಂಹಮೂತರ್ಿ(28) ಮತ್ತು ರಂಗನಾಥ್(30) ಈ ಇಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಇಬ್ಬರು ಜೀವನ್ಮರಣದ ಜೊತೆ ಹೋರಾಡುತ್ತಿದ್ದಾರೆ.
ಸೋಮವಾರ ತಡರಾತ್ರಿ ಈ ದುರ್ಘಟನೆ ನಡೆದಿದ್ದು ಮಂಗಳವಾರ ಬೆಳಗ್ಗೆ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಮತ್ತು ಮಂಜುನಾಥನ ಶವವನ್ನು ಕಂಡು ಸ್ಥಳೀಯರು ಪೋಲಿಸರಿಗೆ ತಿಳಿಸಿದ್ದಾರೆ.
ಪ್ರಕರಣವನ್ನು ಚಿ.ನಾ.ಹಳ್ಳಿ ಪೋಲಿಸರು ದಾಖಲಿಸಿದ್ದು, ಸಿ.ಪಿ.ಐ ಪ್ರಭಾಕರ್ ಹಾಗೂ ಪಿ.ಎಸೈ ಚಿದಾನಂದಮೂತರ್ಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರತಿಭಾ ಪುರಸ್ಕಾರ, 
ಚಿಕ್ಕನಾಯಕನಹಳ್ಳಿ,ಫೆ.07 : 2010-2011ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿ ಹೊಂದಿ ಉತ್ತೀರ್ಣರಾಗಿರುವ ವಿದ್ಯಾಥರ್ಿ-ವಿದ್ಯಾಥರ್ಿನಿಯರುಗಳಿಗೆ ಮಾಚರ್್ 4ರ ಭಾನುವಾರ ಬೆಳಗ್ಗೆ 11ಗಂಟೆಗೆ  ಕುರುಬರಶ್ರೇಣಿಯ ಹಿರಿಯ ವಿದ್ಯಾಥರ್ಿಗಳ ಸಂಘದ ಎರಡನೇ ವಾಷರ್ಿಕೋತ್ಸವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.
 ಪ್ರತಿಭಾ ಪುರಸ್ಕೃತರು ಕುರುಬರ ಶ್ರೇಣಿಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ವ್ಯಾಸಾಂಗ ಮಾಡಿರಬೇಕು. ಸಂಬಂಧಪಟ್ಟ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು   ಜಿ.ರಂಗಯ್ಯ, ನಿ.ಮುಖ್ಯಶಿಕ್ಷಕರು, ಬಸವೇಶ್ವರ ನಗರ, ಡಿಇಡಿ ಕಾಲೇಜ್ ಮುಂಬಾಗ, ಚಿಕ್ಕನಾಯಕನಹಳ್ಳಿ ಈ ವಿಳಾಸಕ್ಕೆ  ದಾಖಲೆ ನೀಡಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ  9964345554,  9448297581 ನಂ.ಗೆ ಸಂಪಕರ್ಿಸುವುದು.

Saturday, February 4, 2012

  ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮಲ್ಲಿರುವ ಪ್ರತಿಭೆ ಮತ್ತು ಜ್ಞಾನವನ್ನು ಮನಗಾಣಬೇಕಿದೆ
ಚಿಕ್ಕನಾಯಕನಹಳ್ಳಿ,ಫೆ.04 : ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮಲ್ಲಿರುವ ಪ್ರತಿಭೆ ಮತ್ತು ಜ್ಞಾನವನ್ನು ಮನಗಾಣಬೇಕಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ತಿಳಿಸಿದರು.
  ಪಟ್ಟಣದ   ಬಾಲ ವಿಕಾಸ ಅಕಾಡೆಮಿ  ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ. ಓದುತ್ತಿರುವ ಮಕ್ಕಳಿಗೆ ಪರಿಕ್ಷೇಗೆ ಸಿದ್ದಾರಾಗಿ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು  ವಿದ್ಯಾಥರ್ಿ ಜೀವನವೇ ಪರಿಕ್ಷೇಗಳ ಸವಾಲು, ಅದರಲ್ಲೂ ಮುಖ್ಯವಾಗಿ ವಿದ್ಯಾಥರ್ಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಭವಿಷ್ಯ ರೂಪಿಸಿಕೊಳ್ಳಲು ಎಸ್.ಎಸ್.ಎಲ್.ಸಿಯಲ್ಲಿನ ಅಂಕಗಳು ಸ್ಪೂತರ್ಿದಾಯಕ ಹಾಗಾಗಿ ಪರಿಕ್ಷೇ ಎದುರಿಸುವ ಬಗ್ಗೆ ವಿದ್ಯಾಥರ್ಿಗಳಿಗೆ ಅತ್ಮವಿಶ್ವಾಸ ಮೂಡಿಸಲೂ ಇಂತ ಕಾರ್ಯಕ್ರಮಗಳೂ ಸಹಕಾರಿ ಎಂದು ಹೇಳಿದರು.
    ಕ್ಷೇತ್ರ ಸಿಕ್ಷಣದಿಕಾರಿಗಳಾದ ಸಾ.ಚಿ. ನಾಗೇಶ್ ಮಾತನಾಡಿ ಈಗಾಗಲೇ ಸಾಕಷ್ಟು  ಎಸ್.ಎಸ್.ಎಲ್.ಸಿ ಮಕ್ಕಳಿಗೆ ಸರಣಿ ಪರಿಕ್ಷೇಗಳನ್ನು ಹಾಗು ಪೂರ್ವ ಸಿದ್ದತ ಪರಿಕ್ಷೆಗಳನ್ನು ನಡೆಸಲಾಗುತ್ತಿದೆ. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಬಾಲ ವಿಕಾಸ ಆಕಡೆಮಿ ಮತ್ತು ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ, ಶಿಶು ಅಭೀವೃದ್ದಿ ಯೋಜನೆಗಳ ಮೂಲಕ ಎಸ್.ಎಸ್.ಎಲ್.ಸಿ. ಪರಿಕ್ಷೇಗಳ ಬಗ್ಗೆ ಅರಿವು ಮೂಡಿಸಿ ಧ್ಯೆರ್ಯದಿಂದ ಪರಿಕ್ಷೇಯನ್ನ ಎದುರಿಸಿ ಉತ್ತಮ ಪಲಿತಾಂಶ ಪಡೆಯಲು ಪ್ರೋತ್ಸಹ ನೀಡುತ್ತಿರುವುದು ಶ್ಲಾಘನೀಯ. ಈ ಸೌಲಬ್ಯವನ್ನು ಮಕ್ಕಳು ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಸದುಪಯೋಗಪಡಿಸಿ ಕೋಳ್ಳುವಂತೆ ಕರೆ ನೀಡಿದರು. 
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆಂಜನಪ್ಪ, ವೀರಣ್ಣ, ಮಂಜುನಾಥಾಚಾರ್, ಕೆ.ಬಿ.ಕೃಷ್ಣಮೂತರ್ಿ, ವೇಣುಗೋಪಾಲ್ ಹಾಜರಿದ್ದರು. ಗಾಯಿತ್ರಿ ಪ್ರಾಥರ್ಿಸಿದರು. ಪುಷ್ಪ ಪಿ.ಸಾಳಸ್ಕರ್ ಸ್ವಾಗತಿಸಿದರೆ, ಪರಮೇಶ್ವರ ನಿರೂಪಿಸಿದರು, ಮೇಲ್ವಿಚಾರಕಿ ನಂದಾ ನವಲಗುಂದ ವಂದಿಸಿದರು.

ಪಾರ್ವತಿ ಪ್ರಸನ್ನರಾಮೇಶ್ವರಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ
ಚಿಕ್ಕನಾಯಕನಹಳ್ಳಿ,ಫೆ.04 : ಶ್ರೀ ಪಾರ್ವತಿ ಪ್ರಸನ್ನರಾಮೇಶ್ವರಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವವನ್ನು ಇದೇ 5ರಿಂದ 11ರ ವರೆಗೆ ಏರ್ಪಡಿಸಲಾಗಿದೆ.
5ರ ಭಾನುವಾರದಂದು ಮಹಾಗಣಪತಿ ಪೂಜೆ, ಅಂಕುರಾರ್ಪಣಾ, 6ರಂದು ಗಿರಿಜಾಕಲ್ಯಾಣೋತ್ಸವ, 7ರಂದು ಬ್ರಹ್ಮರಥೋತ್ಸವ, 8ರಂದು ಶಯನೋತ್ಸವ, 9ರಂದು ಪೂಣರ್ಾಹುತಿ ಹೋಮ, 10ರಂದು ಅನ್ನಸಂತರ್ಪಣೆ, 11ರಂದು ಊರಿನ ಪ್ರಮುಖ ಬೀದಿಗಳಲ್ಲಿ ಭೂ ಕಲ್ಯಾಣೋತ್ಸವ ನಡೆಯಲಿದೆ.
ವಿದ್ಯಾಥರ್ಿಗಳು ತಮ್ಮ ಓದಿನ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು  ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಗರೀಕರಾಗಿ
ಚಿಕ್ಕನಾಯಕನಹಳ್ಳಿ,ಫೆ.04 : ವಿದ್ಯಾಥರ್ಿಗಳು ತಮ್ಮ ಓದಿನ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು  ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಗರೀಕರಾಗಿ ಬಾಳುವ ಮೂಲಕ ತಮ್ಮ ಗುರುಗಳಿಗೆ ಕಾಣಿಕೆ ನೀಡಿ  ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಹಾಗೂ  ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಮೆರಿಟ್ಗಳಿಸುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು, ಈಗಿನ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ಇನ್ನಿತರ ಉನ್ನತ ಹುದ್ದೆಗಳ ಉದ್ಯೋಗಕ್ಕೆ ಮೆರಿಟ್ ಅಭ್ಯಥರ್ಿಗಳನ್ನೇ ಆಯ್ಕೆ ಮಾಡಲಿದ್ದು ಅದಕ್ಕಾಗಿ ವಿದ್ಯಾಥರ್ಿಗಳು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಗಮನವನ್ನು ವಿದ್ಯಾರ್ಜನೆ ಕಡೆಗೆ ಹರಿಸಿದರೆ ಉತ್ತಮ ಅಂಕ ಪಡೆಯುತ್ತೀರ, ವಿದ್ಯಾಥರ್ಿಗಳು ತಮ್ಮ ಓದನ್ನು ಹೆಚ್ಚು ಹೆಚ್ಚು  ಓದಿದಷ್ಟು ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದ ಅವರು ಈ ಬಾರಿ ಪಿಯುಸಿಯಲ್ಲಿ ಓದುತ್ತಿರುವ ಡಿಸ್ಟಿಂಕ್ಷನ್ ಬರುವ ಎಲ್ಲಾ ವಿದ್ಯಾಥರ್ಿಗಳಿಗೆ ಬೆಳ್ಳೆ ಪದಕ ನೀಡಿ ಗೌರವಿಸಲು ತೀಮರ್ಾನಿಸಿದ್ದು ಈ ಮೂಲಕ ಬೇರೆ ವಿದ್ಯಾಥರ್ಿಗಳು ಡಿಸ್ಟಿಂಕ್ಷನ್ ಬಂದ ವಿದ್ಯಾಥರ್ಿಗಳನ್ನು ಗೌರವಿಸುವುದನ್ನು ನೋಡಿ ಅವರಿಗೂ ನಾನು ಆ ಗೌರವಕ್ಕೆ ಪಾತ್ರವಾಗಬೇಕು ಎನ್ನುವ ಬಯಕೆ ಬಂದು ಉತ್ತಮ ಅಂಕಗಳಿಸಲಿ ಎನ್ನುವುದು ಎಂದ ಅವರು ಈ ಕಾಲೇಜಿನ ಮೇಲಂತಸ್ಥಿನ ಕಟ್ಟಡ ನಿಮರ್ಾಣಕ್ಕೆ ಹಲವು ಬಾರಿ ಸಕರ್ಾರದ ಮೇಲೆ ಒತ್ತಡ ಹೇರಿದ್ದರೂ ಅದು ನೆರವೇರಿಲ್ಲ ಈ ಬಾರಿ ಸದನದಲ್ಲಿ ಮಾತನಾಡಿ  ಕಾಲೇಜಿನ ಕಟ್ಟಡ ಕಟ್ಟಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ನಿವೃತ್ತ ಕನ್ನಡ ಪ್ರಾಧ್ಯಾಪಕ ಹೆಚ್.ವಿ.ವೀರಭದ್ರಯ್ಯ,  ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯರುಗಳಾದ ದೊಡ್ಡಯ್ಯ, ರವಿ(ಮೈನ್ಸ್), ವರದರಾಜು, ಮುಂತಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಎಂ.ಬಿ.ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ವಾಸು ಸ್ವಾಗತಿಸಿದರು.
 

Tuesday, January 24, 2012



ಅಂಗನವಾಡಿ ಶಿಕ್ಷಕಿಯರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ನೀಡಿ
ಚಿಕ್ಕನಾಯಕನಹಳ್ಳಿ,ಜ.24: ಮಹಿಳೆಯರ ಮತ್ತು ಮಕ್ಕಳ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಕರ್ಾರ ಅವರ ಅಭಿವೃದ್ದಿಗೆ ಮುಂದಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು. 
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆದ ತಾಲೂಕು  ಅಂಗನವಾಡಿ ಕೇಂದ್ರಗಳಿಗೆ ಸಮಾರೋಪಾದಿ ಭೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿರುವ ವ್ಯವಸ್ಥೆಯನ್ನು ಪರಿಶೀಲನೆಮಾಡಿ ಅಂಗನವಾಡಿ ಕಾರ್ಯಕರ್ತರ ಜವಬ್ದಾರಿ ಬಗ್ಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಯಾವ ರೀತಿ ನೀಡಬೇಕು ಎಂಬುದನ್ನು ಪರಿಶೀಲಿಸುವ ಕಾರ್ಯಕ್ರಮ ಇದಾಗಿದೆ  ಎಂದರು.
 ಸ್ತ್ರೀಶಕ್ತಿ ಭವನ ನಿಮರ್ಿಸಲು ಸ್ಥಳೀಯ ಅಭಿವೃದ್ಧಿ ಅನುದಾನದಲ್ಲಿ 5 ಲಕ್ಷ ರೂ ಬಿಡುಗಡೆಯಾಗಿದ್ದು ಈ ಭವನದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವಂತ ಕಟ್ಟಡ ನಿಮರ್ಿಸಲು ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.
   ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಅಂಗನವಾಡಿ ಶಿಕ್ಷಕಿಯರಿಗೆ ಹಾಗೂ ಸಹಾಯಕರಿಗೆ ನೀಡುವ  ಸಂಬಳ ಕಡಿಮೆಯಾಗಿದ್ದು, ಅವರ ಸಂಬಳವನ್ನು  ಹೆಚ್ಚಿಸಬೇಕು ಎಂದರಲ್ಲದೆ,  ಚಿಕ್ಕಮಕ್ಕಳನ್ನು ಪೋಷಿಸಿ ಅವರಿಗೆ ಅಕ್ಷರ ಕಲಿಸುವುದು ತುಂಬ ಕಷ್ಟದ ಕೆಲಸ ಎಂದರು. 
  ಸಮಾಜದ ಅಭಿವೃದ್ದಿಯಲ್ಲಿ ಸ್ತೀಯರ ಪಾತ್ರ  ಬಹುಮುಖ್ಯ ಮಹಿಳೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಪಶ್ಚಿಮ ಬಂಗಾಳದಲ್ಲಿ 25ವರ್ಷ ರಾಜ್ಯವಾಳಿದ ಕಮ್ಯುನಿಷ್ಟ್ ಸಕರ್ಾರವನ್ನು ಕಿತ್ತೊಗೆಯಲು ಒಬ್ಬ ಮಹಿಳೆಯಿಂದ ಸಾಧ್ಯವಾಯಿತು, ಈ ನಿಟ್ಟಿನಲ್ಲಿ  ಮಮತಾ ಬ್ಯಾನಜರ್ಿ ಯಶಸ್ವಿಯಾಗಿ ಅಲ್ಲಿನ ಮುಖ್ಯಮಂತ್ರಿಯೂ ಆದರೂ ಎಂದರಲ್ಲದೆ,  ಈ ಯಶಸ್ವಿಗೆ ಅವರಲ್ಲಿದ್ದ ರೈತರ ಕಾಳಜಿ ಪ್ರಮುಖವಾಯಿತು ಎಂದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಅಂಗನವಾಡಿ ಕೇಂದ್ರಗಳು ಸಹಾಯಕವಾಗಿವೆ, ಊರಿಗೆ ಒಂದು ಅಂಗನವಾಡಿ ಕೇಂದ್ರ ಮತ್ತು  ದೇವಸ್ಥಾನ ಇರುವುದು ಇಂದಿನ ದಿನಮಾನದಲ್ಲಿ ಖಡ್ಡಾಯವಾಗಿದೆ ಎಂದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ  ರಾಮು, ಇ.ಓ ದಯಾನಂದ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಉಪಾಧ್ಯಕ್ಷೆ ಗಾಯಿತ್ರಮ್ಮ, ತಾ.ಪಂ.ಸದಸ್ಯರಾದ ಚೇತನಗಂಗಾಧರ್, ಪುರಸಭಾ ಸದಸ್ಯೆ ರುಕ್ಮಿಣಮ್ಮ, ಸಿಡಿಪಿಓ ಅನೀಸ್ಖೈಸರ್ ಮುಂತಾದವರಿದ್ದರು.

ಚಿ.ನಾ.ಹಳ್ಳಿಯಲ್ಲಿ  ಆಡಳಿತ ವೈಪಲ್ಯದ ವಿರುದ್ದ  ಕಾಂಗ್ರೆಸ್ ಪ್ರತಿಭಟನೆ
ಶೀರ್ಷಿಕೆ ಸೇರಿಸಿ
ಚಿಕ್ಕನಾಯಕನಹಳ್ಳಿ,ಜ.24 : ರಾಜ್ಯ ಬಿಜೆಪಿ ಸಕರ್ಾರದ ವೈಪಲ್ಯಗಳ ವಿರುದ್ದ ಮತ್ತು ನಿಷ್ಕ್ರಿಯ ಆಡಳಿತದ ವಿರುದ್ದ ಆಗ್ರಹಿಸಿ ಇದೇ 30ರ ಸೋಮವಾರದಂದು ಕಾಂಗ್ರೆಸ್ ಪಕ್ಷದ ವತಿಯಿಂದ ತಹಶೀಲ್ದಾರ್ರವರ ಕಛೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಚಿ.ನಾ.ಹಳ್ಳಿ ವಿಧಾನಸಭಾ ವ್ಯಾಪ್ತಿಯ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕರಾಗಿರುವ  ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರತಿಭಟನೆಯನ್ನು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಹಮ್ಮಿಕೊಂಡಿದ್ದು,  ಆರಂಭದಲ್ಲಿ ನೆಹರು ಸರ್ಕಲ್ನಿಂದ ತಹಶೀಲ್ದಾರ್ ಕಛೇರಿವರೆಗೂ ಮೆರವಣಿಗೆ ನಡೆಯಲಿದ್ದು,  ನಂತರ ತಹಶೀಲ್ದಾರ್ ಕಛೇರಿಯ ಬಳಿ ಧರಣಿ ಕಾರ್ಯಕ್ರಮ ನಡೆಯಲಿದೆ.  ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ  ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಷಫಿಅಹಮದ್, ಮಾಜಿ ಲೋಕಸಭಾ ಸದಸ್ಯ ಸಿ.ಪಿ.ಮೂಡಲಗಿರಿಯಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಶಾಸಕರಾದ ಆರ್.ನಾರಾಯಣ್, ಕೆ.ನಂಜೇಗೌಡ(ಮೂತರ್ಿ), ಕೆ.ಷಡಕ್ಷರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ,  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯಿತ್ರಿರಾಜು ಹಾಗೂ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ಯ ಪ್ರಧಾನ ಕಾರ್ಯದಶರ್ಿ  ಕೆ.ಜಿ.ಕೃಷ್ಣೆಗೌಡ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಿ.ಕೆ.ಮೊಹಮದ್ ಪೀರ್ಪಾಷ, ಪ.ಜಾ.ಘಟಕ ಅಧ್ಯಕ್ಷ ಶಿವಕುಮಾರ್, ತಿಮ್ಮನಹಳ್ಳಿ ಗ್ರಾ.ಪಂ.ಸದಸ್ಯ ರಾಘವೇಂದ್ರ ಉಪಸ್ಥಿತರಿದ್ದರು.

Monday, January 23, 2012


ಕಾವೇರಿ ಕಲ್ಪತರು ಬ್ಯಾಂಕ್ನ ನಿಂದ ಗ್ರಾಮೀಣ ಜನರಿಗೆ ವಿಮಾ ಸೌಲಭ್ಯ: ಪಿ.ಎನ್.ಸ್ವಾಮಿ
ಚಿಕ್ಕನಾಯಕನಹಳ್ಳಿ,ಜ.23 : ಗ್ರಾಮೀಣ ಪ್ರದೇಶದ ಜನರಿಗೆ ಜೀವವಿಮಾ ಪಾಲಿಸಿಯ ಅರಿವು ಆಗಲಿ, ಅದರಿಂದ ಸಿಗುವಂತಹ ಅನುಕೂಲಗಳು ಅವರಿಗೆ ದೊರೆಯಲಿ ಎಂಬ ಉದ್ದೇಶದಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಸರಳ ಸುಲಭ ಜೀವವಿಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತುಮಕೂರು ಬ್ಯಾಂಕ್ನ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ಪಿ.ಎಲ್.ಸ್ವಾಮಿ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಹಾಗೂ ಸರಳ ಸುಲಭ ಜೀವವಿಮೆ ಗುಂಪು ಸ್ವದನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವಿಮೆಯನ್ನು ಕಲ್ಪತರು ಗ್ರಾಮೀಣ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವ ಪ್ರತಿಯೊಬ್ಬರೂ ವಿಮೆ ಮಾಡಿಸಬಹುದಾಗಿದ್ದು, ಎಲ್ಲಾ ವಿಮಾ ಪಾಲಿಸಿಯಲ್ಲಿ ಇರುವಂತೆ ಈ ಪಾಲಿಸಿಯಲ್ಲಿಯೂ ಮನಿಬ್ಯಾಕ್ ಪಾಲಿಸಿ, ಎಂಡೋಮೆಂಟ್ ಪಾಲಿಸಿ, ಸ್ಕಾಲರ್ ಪಾಲಿಸಿ, ಸರಳ ಶೀಲ್ಡ್ ಪಾಲಿಸಿ, ಸರಳ್ ಪಾಲಿಸಿ ವಿಮಾ ಪಾಲಿಸಿಯಿದೆ ಎಂದ ಅವರು, ವಿಮಾ ಪಾಲಿಸಿ ಮಾಡಿಸುವುದರಿಂದ ಪಾಲಿಸಿ ಮಾಡಿಸಿದವರ ಕುಟಂಬದ ಜೀವನ ನಿರ್ವಹಣೆಯಾಗುವುದು ಇದಕ್ಕಾಗಿ ಪ್ರತಿಯೊಬ್ಬರಿಗೂ ವಿಮಾ ಪಾಲಿಸಿಯ ಅವಶ್ಯವಿದೆ ಎಂದ ಅವರು ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್ ಸಾಲ ನೀಡುವುದು ನಂಬಿಕೆಯ ಮೇಲೆ ಆ ನಂಬಿಕೆಯನ್ನು ಕಳೆದುಕೊಳ್ಳಬೇಡಿ, ಸಂಘಗಳಲ್ಲಿ ಇತ್ತೀಚಿಗೆ ಒಡಕು ಸೃಷ್ಠಿಯಾಗುತ್ತಿದೆ, ತಮ್ಮ ಸ್ವಂತಕ್ಕಾಗಿ ಸಂಘವನ್ನು ಒಡೆಯಬೇಡಿ ಸಂಘವನ್ನು ಸಂಘಟಿಸುವದಕ್ಕೆ ಧೈರ್ಯಮಾಡಿ ಎಂದು ಸಲಹೆ ನೀಡಿದರು.
ತುಮಕೂರು ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಎ.ಎನ್. ನೀಲಕಂಠರವರು ಮಾತನಾಡಿ,  ದೇಶದಲ್ಲಿ ವಿಮಾ ಪಾಲಿಸಿ ಹೊಂದಿರುವವರು ಶೇ.7ರಷ್ಟು ಮಾತ್ರ, ಗ್ರಾಮೀಣ ಪ್ರದೇಶದ ಜನರಿಗೆ ಈ ಪಾಲಿಸಿಯ ಬಗ್ಗೆ ಇನ್ನೂ ತಿಳಿದೇ ಇಲ್ಲ,  ಪಾಲಿಸಿಯಿಂದ ಸಿಗುವಂತಹ ಅನುಕೂಲಗಳು ಎಲ್ಲರಿಗೂ ಸಿಗಲಿ ಎಂಬ ಉದ್ದೇಶದಿಂದ ಸಾಧ್ಯವಾದಷ್ಟು ಸಾರ್ವಜನಿಕ ಸೇವೆ ಮಾಡವ ಬಯಕೆಯಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್,  ಸರಳ ಸುಲಭ ಜೀವವಿಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದ ಅವರು,  ಈ ವಿಮಾ ಪಾಲಿಸಿ 5 ರಿಂದ 10ವರ್ಷದ ಅವಧಿಯಾಗಿದ್ದು 50ಸಾವಿರ, 1ಲಕ್ಷ ಹಾಗೂ 3ಲಕ್ಷದ ವರೆವಿಗೂ ವಿಮಾ ಪಾಲಿಸಿ ಮಾಡಿಸಬಹುದು,  ಸಣ್ಣ, ಅತಿಸಣ್ಣ, ಕೂಲಿ ಕಾಮರ್ಿಕರು ಮತ್ತು ಆಥರ್ಿಕವಾಗಿ ಹಿಂದುಳಿದವರಿಗೆ ಸುಲಭವಾಗಿ ವಿಮಾ ಪಾಲಿಸಿ ದೊರಕಲಿ ಎಂಬ ಉದ್ದೇಶದಿಂದ ಬ್ಯಾಂಕ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಚಿ.ನಾ.ಹಳ್ಳಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ರಾಜಶೇಖರ್ ಉಪಸ್ಥಿತರಿದ್ದರು.
 C