Friday, April 10, 2015




ರಾಷ್ಟ್ರಪ್ರಶಸ್ತಿ ರಾತ್ರೋರಾತ್ರಿ ಬಂದದ್ದಲ್ಲ ಪ್ರಶಸ್ತಿಗಾಗಿ ಶ್ರದ್ದೆ, ತಾಳ್ಮೆ,, ಆಸಕ್ತಿಯ ಫಲವಿದೆ. : ನಟ ವಿಜಯ್
ಚಿಕ್ಕನಾಯಕನಹಳ್ಳಿ : ರಾಷ್ಟ್ರಮಟ್ಟದಲ್ಲಿ ಉತ್ತಮ ನಟನೆಂಬ ಪ್ರಶಸ್ತಿ ರಾತ್ರೋರಾತ್ರಿ ಬಂದದ್ದಲ್ಲ, ಆತ್ಮವಿಶ್ವಾಸ, ತಾಳ್ಮೆ, ಶ್ರದ್ದೆ, ಆಸಕ್ತಿಯ ಫಲ ಈ ಪ್ರಶಸ್ತಿ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ವಿಜಯ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನ 2014-15ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಅವನಲ್ಲ ಅವಳು ಚಿತ್ರ ಮಂಗಳಮುಖಿಯರ ಸಂಬಂಧದ ಚಿತ್ರವಾಗಿದ್ದು ಈ ಚಿತ್ರಕ್ಕಾಗಿ ಮಂಗಳಮುಖಿಯರು ಹೇಗೆ ವತರ್ಿಸುತ್ತಾರೆಂಬ ಬಗ್ಗೆ ಮಂಗಳಮುಖಿಯರಿರುವ ಜಾಗಕ್ಕೆ ಹೋಗಿ ಅವರ ಹಾವ, ಭಾವಗಳನ್ನು ಕಲಿತೆ ಎಂದರಲ್ಲದೆ, ಚಿತ್ರತಂಡದ ಸಂಪೂರ್ಣ ಸಹಕಾರದಿಂದಲೇ ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯಲು ಸಹಕಾರವಾಯಿತು ಎಂದರು. 
ನಾನು ಅವನಲ್ಲ ಅವಳು ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯುವಲ್ಲಿ ಚಿತ್ರತಂಡದ ಪರಿಶ್ರಮ ಹೆಚ್ಚಿನದಾಗಿದೆ, ಆತ್ಮಚರಿತ್ರೆಯೊಂದನ್ನು ಸತತ ಆರು ವರ್ಷಗಳ ಕಾಲದಿಂದಲೂ ಸಿದ್ದಪಡಿಸಿಕೊಂಡಿದ್ದ ನಿದೇರ್ಶಕ ಲಿಂಗದೇವರು ಅವರು,  ಯಾರೊಬ್ಬರು ಮಾಡದೆ ಇದ್ದಾಗ ರಂಗಭೂಮಿ ಕಲಾವಿದನಾಗಿದ್ದ ನನ್ನನ್ನು ಆಯ್ಕೆ ಮಾಡಿ ಅವಕಾಶ ನೀಡಿದ ನಿಮರ್ಾಪಕರಾದ ರವಿಗರಣಿ ಹಾಗೂ ನಿದರ್ೇಶಕರಾದ ಬ್ಯಾಲದಕೆರೆ ಲಿಂಗದೇವರು ರವರು ಈ ಚಿತ್ರದಿಂದ ನನ್ನನ್ನು ಇಂದು ಇಡೀ ದೇಶವೇ ಗುರುತಿಸುವಂತೆ ಮಾಡಿದೆ ಎಂದರು. ನಾನು ಅವನಲ್ಲ ಅವಳು ಚಿತ್ರದ ಮಂಗಳಮುಖಿ ಪಾತ್ರವು ಸಾಧಾರಣವಾದ ಚಿತ್ರವಲ್ಲ, ಈ ಪಾತ್ರಕ್ಕಾಗಿ ನಿದರ್ೇಶಕರು ನೀಡಿದ ಸಲಹೆ, ಸೂಚನೆಗಳನ್ನು ಗಮನಿಸಿದ್ದಲ್ಲದೆ ಮಂಗಳಮುಖಿಯರ ಬಗ್ಗೆ ಅರಿತುಕೊಳ್ಳಲು ಮುಂದಾದೆ ಎಂದರು.
ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಿನಿಮಾ ಮಾಡುವುದು ಒಂದು ರೀತಿ ಕಷ್ಟವಾದರೆ, ಮಾಡಿದ ಕೆಲಸವನ್ನು ಜನರಿಗೆ ತೋರಿಸುವುದು ಮತ್ತೊಂದು ರೀತಿಯ ಕಷ್ಟ ಎಂದರಲ್ಲದೆ,  ಯು.ಎಫ್.ಓ ರವರು ಟಾಕೀಸ್ಗಳಲ್ಲಿ ಜೋಡಿಸಿರುವ ತಂತ್ರಜ್ಞಾನದಿಂದ ಇಂದು ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದರು.
ನಾನು ಅವನಲ್ಲ ಅವಳು ಚಿತ್ರದ ಮೂಲಕ  ತುಮಕೂರು ಜಿಲ್ಲೆಗೆ ಎರಡು ರಾಷ್ಟ್ರಪ್ರಶಸ್ತಿ ಬಂದಿದೆ, ನಟ ವಿಜಯ್ ತಾಲ್ಲೂಕಿನ ಪಕ್ಕದ ಪಂಚನಹಳ್ಳಿ ಯವರು, ಹಾಗೂ ಚಿತ್ರದ ಮೇಕಪ್ ಮ್ಯಾನ್ ರಾಜು ತಾಲ್ಲೂಕಿನ ಸಮೀಪದ ಹತ್ಯಾಳುವಿನವರು ಎಂಬುದೇ ಜಿಲ್ಲೆಗೆ ಸಂತಸದ ವಿಷಯವಾಗಿದೆ, 2009ರಲ್ಲಿ ನಾನು ಅವನಲ್ಲ ಅವಳು ಚಿತ್ರವನ್ನು ತೆರೆಗೆ ತರಲು ಆಲೋಚಿಸಿದೆನು, ಆತ್ಮಚರಿತ್ರೆಯೊಂದರ ಕಥೆಯಾದ ಈ ಚಿತ್ರ ಮಂಗಳಮುಖಿಯರ ಬದುಕಾಗಿದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕಡೆಗಳಲ್ಲಿ ಮಂಗಳಮುಖಿಯರನ್ನು ಹೇಗೆ ನೋಡುತ್ತಾರೆಂಬದು ಚಿತ್ರದ ಮುಖ್ಯ ವಸ್ತುವಾಗಿದೆ  ಎಂದರಲ್ಲದೆ ಈ ಚಿತ್ರವನ್ನು ಶೀಘ್ರದಲ್ಲೇ ಚಿ.ನಾ.ಹಳ್ಳಿಯಲ್ಲಿ ಬಿಡುಗಡೆ ಮಾಡಿಸಲಾಗುವುದು ಎಂದರು.
ಕೆಲವು ನಿದರ್ೇಶಕರು ಸ್ಕ್ರಿಪ್ಟ್ ಹಾಗೂ ತಯಾರಿಯೇ ಇಲ್ಲದೇ ಸಿನಿಮಾ ರಚನೆ ಮಾಡುತ್ತಾರೆ ನಂತರ ಸಿನಿಮಾ ಬಿಡುಗಡೆಯಾದಾಗ ಸಿನಿಮಾನೇ  ಓಡುತ್ತಿಲ್ಲ ಎಂದು ಹೇಳುತ್ತಾರೆ ಎಂದು ವಿಷಾಧಿಸಿದರು. 
ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕೆಲಸಮಾಡುವುದು ಅವಮಾನವಲ್ಲ, ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ಸಿದ್ದಿ ದೊರೆಯುತ್ತದೆ ಅದಕ್ಕೆ ನಮ್ಮ ಮುಂದಿರುವ ಇವರೇ ಸಾಕ್ಷಿ ಎಂದರಲ್ಲದೆ,   ಕಾಲೇಜಿನಲ್ಲಿ ಸಿನಿಮಾ ಜಗತ್ತನ್ನು ಪರಿಚಯಿಸುವ ಅಗತ್ಯವಿರಲಿಲ್ಲ ಆದರೆ ತಮ್ಮ ಪ್ರತಿಭೆಯ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತರನ್ನು ನಿಮಗೆ ಪರಿಚಯಿಸುವ ಉದ್ದೇಶದಿಂದ ಅವರ ಸಾಧನೆಯನ್ನು ನಿಮ್ಮ ಮುಂದೆ ತರಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು ಸಾಧನೆಗೆ ಗುರಿ ಮುಖ್ಯವೇ ಹೊರತು ಅಹಂಕಾರವಲ್ಲ ಎಂದ ಅವರು ವಿದ್ಯಾಥರ್ಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡಿ, ಇಂಜನಿಯರಿಂಗ್, ಕ್ಷೇತ್ರಗಳಲ್ಲಿನ ಅಭ್ಯಥರ್ಿಗಳಿಗೆ ಈಗಾಗಲೇ ಕೆಲಸವೇ ಇಲ್ಲದಂತಾಗುತ್ತಿದೆ, ಮುಂದಿನ ದಿನಗಳಲ್ಲಿ ಬಿ.ಎ ವಿದ್ಯಾಥರ್ಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಲಿದೆ ಆದ್ದರಿಂದ ವಿದ್ಯಾಥರ್ಿಗಳು ಬಿ.ಎ ಶಿಕ್ಷಣದ ಬಗ್ಗೆ ಅಸಡ್ಡೆ ತೋರಬೇಡಿ ಎಂದರು.
ಕಾರ್ಯಕ್ರಮಲ್ಲಿ ರಾಷ್ಟ್ರಪಶಸ್ತಿ ಪುರಸ್ಕೃತರಾದ ವಿಜಯ್, ರಾಜು ಹತ್ಯಾಳುರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನವೋದಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್,  ಪ್ರಾಂಶುಪಾಲ ಎಸ್.ಎಲ್.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವೋದಯ ಕಾಲೇಜಿನ ಯುವಕ ಮಂಡಳಿ ವತಿಯಿಂದ ಭಾವಗೀತೆಗಳ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


ಚಿಕ್ಕನಾಯಕನಹಳ್ಳಿ ಪಟ್ಟಣದ ನವೋದಯ ಕಾಲೇಜಿಗೆ ಆಗಮಿಸಿದ್ದ ನಾನು ಅವನಲ್ಲ ಅವಳು ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ನಾಯಕ ವಿಜಯ್, ನಿದರ್ೇಶಕ ಬಿ.ಎಸ್.ಲಿಂಗದೇವರು, ಮೇಕಪ್ಮ್ಯಾನ್ ರಾಜುಹತ್ಯಾಳ್ರನ್ನು ಚಿ.ನಾ.ಹಳ್ಳಿಯ ವಿವಿಧ ಸಂಘಟನೆಯವರು ಅಭಿನಂದಿಸಿದರು. ಎಂ.ಎಸ್.ರವಿಕುಮಾರ್, ಸುಪ್ರಿಂ.ಸುಬ್ರಹ್ಮಣ್ಯ, ಸಿದ್ದು.ಜಿ.ಕೆರೆ, ಸಿ.ಹೆಚ್.ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಜಾತಿ ಗಣತಿಗೆ ಸಾರ್ವಜನಿಕರು ಸಹಕರಿಸಿ
ಚಿಕ್ಕನಾಯಕನಹಳ್ಳಿ,ಏ.10 :- ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ 23 ವಾಡರ್್ಗಳಲ್ಲಿ ರಾಜ್ಯ ಸಕರ್ಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಜಾತಿಗಣತಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಏಪ್ರಿಲ್ 11 ರಿಂದ ಪ್ರಾರಂಭವಾಗಿ ಏಪ್ರಿಲ್ 30 ಕ್ಕೆ ಮುಕ್ತಾಯವಾಗಲಿದೆ. ಜಾತಿ ಗಣತಿದಾರರು ಮನೆ ಮನೆಗಳಿಗೆ ಬೇಟಿ ನೀಡಿದಾಗ ಅಧಾರ್ ಕಾಡರ್್, ಪಡಿತರಚೀಟಿ ಮತ್ತು ಮತದಾರರ ಗುರುತಿನ ಚೀಟಿ ನೀಡಿ ಗಣತಿದಾರರು ಕೇಳುವ ಮಾಹಿತಿಯನ್ನು ನೀಡಿ ಅವರೊಂದಿಗೆ ಸಹಕರಿಸಿ ಗಣತಿ ಕಾರ್ಯ ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ಪುರಸಭಾ ಅಧ್ಯಕ್ಷೆ  ಕೆ. ರೇಣುಕಮ್ಮ, ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ ಶೆಟ್ಟಿ ಮನವಿ ಮಾಡಿದ್ದಾರೆ. 
   ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಮುಖ್ಯಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಸಂಪಕರ್ಿಸಲು ಕೋರಿದೆ. 

ಶಿಕ್ಷಕರ ಅಭಿವೃದ್ದಿಗೆ ಸಂಘ ಗಮನ ಹರಿಸುವುದು.

ಚಿಕ್ಕನಾಯಕನಹಳ್ಳಿ,ಏ.10 :- ತಾಲ್ಲೂಕು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜೂನ್ ತಿಂಗಳಲ್ಲಿ ಗುರುಸ್ವಂದನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ಪ್ರಾಥಾಮಿಕ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಎನ್. ಪ್ರಕಾಶ್ ತಿಳಿಸಿದರು. 
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಪ್ರಾಥಮಿಕ ಪಾಠಶಾಲಾ ಶಿಕ್ಷಕರಿಗೆ ಸಂಘದವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರತಿ ಹೋಬಳಿಗಳಲ್ಲಿ ಶಿಕ್ಷಕರಿಗೆ ಪೂಸ್ಕೊ ಕಾಯ್ದೆ ಕುರಿತು ವಿಚಾರ ಸಂಕೀರ್ಣ 720 ಶಿಕ್ಷಕರಿಗೆ ಗಳಿಕೆ ರಜೆ ನಗದೀಕರಣ, ಸ್ವಯಂ ಚಾಲಿತ ವೇತನ ಬಡ್ತಿ, ಕಾಲಮಿತಿ ವೇತನ ಬಡ್ತಿ ಸಕಾಲದಲ್ಲಿ ಮಾಡಿಸಲಾಗಿದೆ. ಹಲವು ವರ್ಷಗಳಿಂದ ಶಿಕ್ಷಕರಿಗೆ ಬಾಕಿ ಇದ್ದ ಭತ್ಯೆ ಬಿಲ್ಲು ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಪ್ರತಿ ತಿಂಗಳು 5 ನೇ ತಾರೀಖಿನ ಒಳಗಡೆ ವೇತನ, 14-15 ನೇ ಸಾಲಿನ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ನಲ್ಲಿ ನ್ಯಾಯ ಸಮ್ಮತವಾಗಿ ನಡೆಸಿಕೊಡುವ ಮೂಲಕ ಶಿಕ್ಷಕರ ಅಭಿವೃದ್ಧಿಗೆ ಸಂಘ ಗಮನ ಹರಿಸಿದೆ. ಎಂದು ತಿಳಿಸಿದರು. 
   ಪತ್ರಿಕಾ  ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಜೆ.ವೆಂಕಟೇಶ್ ಪ್ರದಾನ ಕಾರ್ಯದಶರ್ಿ ಹೆಚ್.ಸಿ.ಲೋಕೇಶ್, ಉಪಾಧ್ಯಕ್ಷ ಎಂ.ಎಸ್. ಈಶ್ವರಯ್ಯ, ಎ.ವಿನೋಧ, ಎಂ.ಈಶ್ವರಯ್ಯ, ಮಹದೇವಮ್ಮ ಚಂದ್ರಯ್ಯ, ಸಿ.ವೀಣಾ, ಮುಂತಾದವರು ಉಪಸ್ಥಿತರಿದ್ದರು. 


5ರಿಂದ 15 ವರ್ಷ ಒಳಪಟ್ಟ ಮಕ್ಕಳಿಗೆ ಬೇಸಿಗೆ ಶಿಬಿರಕ್ಕೆ ಆಹ್ವಾನ 
ಚಿಕ್ಕನಾಯಕನಹಳ್ಳಿ,ಏ.10 : 5ರಿಂದ 15 ವರ್ಷ ಒಳಪಟ್ಟ ಮಕ್ಕಳಿಗಾಗಿ ಇನ್ಸ್ಫೈರ್ ಕೆರಿಯರ್ ಅಕಾಡೆಮಿ ವತಿಯಿಂದ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ ಎಂದು ಶಿಬಿರದ ಸಂಯೋಜಕ ಜಾಕಿರ್ ಹುಸೇನ್ ತಿಳಿಸಿದ್ದಾರೆ.
ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ಬೇಸಿಗೆ ಶಿಬಿರ ನಡೆಯಲಿದ್ದು ಬೇಸಿಗೆ ಶಿಬಿರದಲ್ಲಿ ನೃತ್ಯ, ಕರಾಟೆ, ಚಿತ್ರಕಲೆ, ಕರಕುಶಲ, ಮಣ್ಣಿನ ಶಿಲ್ಪಕಲೆ ಹಾಗೂ ಬುದ್ದಿಶಕ್ತಿಗೆ ಸಂಬಂಧಪಟ್ಟ ಆಟಗಳು ಹಾಗೂ ಇತರ ಸಾಮಾನ್ಯ ಜ್ಞಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನೃತ್ಯ ನಿದರ್ೇಶಕ .ಆರ್.ವಿಶ್ವನಾಥ್ ತಿಳಿಸಿದ್ದಾರೆ. ಬೇಸಿಗೆ ಶಿಬಿರದ ಪ್ರವೇಶಕ್ಕೆ ಏಪ್ರಿಲ್ 15ರೊಳಗೆ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ಮೊ.ನಂ. 9620692112, 85489910040 ನಂ.ಗೆ ಸಂಪಕರ್ಿಸಲು ಕೋರಿದ್ದಾರೆ.





Monday, April 6, 2015



ರಾಜ್ಯದಲ್ಲಿ ವಿವಿಧ ರೀತಿಯ 36 ಸಾವಿರ ಸಹಕಾರ ಸಂಘಗಳ ಕಾರ್ಯನಿರ್ವಹಿಸುತ್ತಿವಗೆ : ರಮೇಶ್ಬಾಬು
ಚಿಕ್ಕನಾಯಕನಹಳ್ಳಿ,: ರಾಜ್ಯದಲ್ಲಿ ಪತ್ತಿನ ಸಹಕಾರ ಸಂಘ, ಮಹಿಳಾ ಸಂಘ, ಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ರೀತಿಯ 36 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದು ವಕೀಲ ರಮೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲ್ಲೂಕು ಉಪಾಧ್ಯಾಯರ ಸಹಕಾರ ಸಂಘದ ನೂತನ ಕಟ್ಟಡ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ತತ್ವದ ಅಡಿಯಲ್ಲಿ ಪ್ರಾರಂಭವಾಗಿರುವ ಸಹಕಾರ ಸಂಘಗಳು ನಿತ್ಯ ಠೇವಣಿ ಸಂಗ್ರಹ, ನಿಶ್ಚಿತ ಠೇವಣಿ ಸಂಗ್ರಹಿಸಲು ಬೈಲಾ ತಿದ್ದುಪಡಿ ಮಾಡಿಕೊಂಡು ಹಣ ಸಂಗ್ರಹ ಮಾಡಿ ಶಿಕ್ಷಕರಿಗೆ ನಿವೇಶನ ಕಟ್ಟಡ ನಿಮರ್ಾಣಕ್ಕೆ ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕೆ ಈ ಹಣವನ್ನು ಉಪಯೋಗಿಸಿಕೊಳ್ಳಲು ಸಲಹೆ ನೀಡಿದ ಅವರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ 10 ಸಾವಿರ ರೂಪಾಯಿ ಮೇಲ್ಪಟ್ಟು ಬಡ್ಡಿ ಬಂದರೆ ಸಹಜವಾಗಿ ಟಿ.ಡಿ.ಎಸ್ ಕಟ್ಟಬೇಕಾಗುತ್ತದೆ, ಸಹಕಾರಿ ಸಂಘಗಳಲ್ಲಿ ಠೇವಣಿ ಇಟ್ಟರೆ ಟಿ.ಡಿ.ಎಸ್ ಇರುವುದಿಲ್ಲ ಆದ್ದರಿಂದ ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟರೆ ಟಿ.ಡಿ.ಎಸ್ ಕಟ್ಟಬೇಕಾಗುತ್ತದೆ, ಸಹಕಾರಿ ಸಂಘಗಳಲ್ಲಿ ಠೇವಣಿಗೆ ಇಡಲು ಉತ್ತೇಜನ ನೀಡಿ ಇದರಿಂದ ಶಿಕ್ಷಕರಿಗೂ ಅನುಕೂಲವಾಗಲಿದೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಎಲ್ಲಾ ರಾಜಕೀಯ ರಂಗಗಳಲ್ಲೂ ಇದ್ದಾರೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಸಹಕಾರಿ ಸಂಘಗಳ ಹೆಚ್ಚುವರಿ ಕೊಠಡಿ ನಿಮರ್ಿಸಲು 2ಲಕ್ಷ ರೂಪಾಯಿ ನೀಡುವುದಾಗಿ ಮತ್ತು ಸಕರ್ಾರಿ ನೌಕರರ ಸಂಘದ ಕಟ್ಟಡದ ಗ್ರಂಥಾಲಯಕ್ಕೆ 2ಲಕ್ಷದ 70ಸಾವಿರ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದ ಅವರು ಅಕ್ಷರ ದಾಸೋಹ ಶಿಕ್ಷಣ ಇಲಾಖೆಗೆ ಬರುವ ಅನುದಾನದ ಹಣವನ್ನು ಶಿಕ್ಷಕರ ಸಹಕಾರ ಸಂಘದಲ್ಲಿ ಇಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ ಅವರು ಶಿಕ್ಷಕರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಶಿಕ್ಷಕರು ಸಹಕಾರ ಸಂಘವನ್ನು ಪ್ರಾಮಾಣಿಕವಾಗಿ ಮುನ್ನೆಡೆಸಿಕೊಂಡು ಹೋದರೆ ತಾವು ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾಥರ್ಿಗಳಿಗೆ ಬೆಳ್ಳಿ ಪದಕ ನೀಡುತ್ತಿದ್ದು ಇನ್ನು ಹೆಚ್ಚಿನ ವಿದ್ಯಾಥರ್ಿಗಳಿಗೆ ಪದಕ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಂಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಸಾ.ಚಿ.ನಾಗೇಶ್ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ, ಪುರಸಭಾಧ್ಯಕ್ಷೆ ರೇಣುಕಮ್ಮ, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ದೊರೆಮುದ್ದಯ್ಯ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯಬಿ.ಇ.ಓ ಕೃಷ್ಣಮೂತರ್ಿ, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಹೆಚ್.ಎಂ.ಸುರೇಶ್, ಸಿ.ಜಿ.ಶಂಕರ್, ರಾಜಯ್ಯ, ಸಿ.ಎಂ.ದಿನಕರ್, ಶಿವಕುಮಾರ್, ಚಿ.ನಾ.ಪುರುಷೋತ್ತಮ್ ಮತ್ತಿತರರರು ಉಪಸ್ಥಿತರಿದ್ದರು.


ಜಾತಿಗಣತಿಯಲ್ಲಿ ಸವಿತಾ ಮಾಜದವರು ಸವಿತಾ ಎಂದು ಬರೆಸಲು ಮನವಿ
ಚಿಕ್ಕನಾಯಕನಹಳ್ಳಿ, : ಜಾತಿಗಣತಿಯ ಸಂದರ್ಭದಲ್ಲಿ ಪ್ರತಿ ಸವಿತಾ ಸಮಾಜದ ಬಂಧುಗಳು ತಮ್ಮ ಜಾತಿಯ ಕಾಲಂನಲ್ಲಿ ಸವಿತಾ ಎಂದು ದಾಖಲಿಸಬೇಕೆಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುಬ್ರಹ್ಮಣ್ಯ(ಸುಪ್ರಿಂ) ಕೋರಿದ್ದಾರೆ.
ಉಪಜಾತಿಯ ಕಾಲಂನಲ್ಲಿ ಭಜಂತ್ರಿ ಅಥವಾ ನಾಯಿಂದ ಎಂದು ದಾಖಲಿಸಬೇಕೆಂದು ಮನವಿ ಮಾಡಿದ್ದಾರೆ.


ಜಾತಿಗಣತಿಯಲ್ಲಿ ಮಾದಿಗ ಜನಾಂಗದವರು ಮಾದಿಗ ಹಾಗೂ ಹೊಲೆಯ  ಜನಾಂಗದವರು ಛಲವಾದಿ ಎಂದು ಬರೆಸಲು ಮನವಿ
ಚಿಕ್ಕನಾಯಕನಹಳ್ಳಿ, : ರಾಜ್ಯ ಸಕರ್ಾರ ಏಪ್ರಿಲ್ 11ರಿಂದ ಆರಂಭಿಸಲಿರುವ ಜಾತಿಗಣತಿಯ ಸಂದರ್ಭದಲ್ಲಿ ಗಣತಿದಾರರು ತಮ್ಮ ಮನೆಗೆ ಬಂದಾಗ ಪರಿಶಿಷ್ಠ ಜಾತಿ ಕಾಲಂನಲ್ಲಿ ಮಾದಿಗ ಜನಾಂಗದವರು ಮಾದಿಗ ಅಂತಲೂ ಹಾಗೂ ಹೊಲೆಯ ಸಮುದಾಯದವರು ಛಲವಾದಿ ಎಂತಲೂ ನಮೂದಿಸುವಂತೆ ದಲಿತ ಸಂಘರ್ಷ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಲಿಂಗದೇವರು ಮಾತನಾಡಿ,  ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ವಗರ್ೀಕರಣಕ್ಕೆ ಇಂದಿನ ಪರಿಶಿಷ್ಠ ಜಾತಿಯ ಉಪಜಾತಿಯ ಜನಸಂಖ್ಯಾ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ ಅನಿವಾರ್ಯವಾಗಿದ್ದು ಇದೇ ತಿಂಗಳ ಏಪ್ರಿಲ್ 11ರಿಂದ ಆರಂಭವಾಗುತ್ತಿರುವ ಸಾಮಾಜಿಕ ಜನಗಣತಿಯ ಸಮೀಕ್ಷೆಗಾಗಿ ದಸಂಸ ಮುಖಂಡರುಗಳು ತಾಲ್ಲೂಕಿನಾದ್ಯಂತ ಮಾದಿನ ಜನಾಂಗದವರ ಮನೆಮನೆಗೆ ತೆರಳಿ ಗಣತಿಯ ಬಗ್ಗೆ ಅರಿವು ಮೂಡಿಸುತ್ತೇವೆ, ತಾಲ್ಲೂಕು ಕಛೇರಿಗಳಲ್ಲಿ ಸಟರ್ಿಫಿಕೇಟ್ಗಳಿಗಾಗಿ ಆದಿಕನರ್ಾಟಕ ಎಂದು ನಮೂದಿಸಿರುವ ಜನಾಂಗದವರು ಗಣತಿ ಸಂದರ್ಭದಲ್ಲಿ ಮಾದಿಗ ಎಂದು ನಮೂದಿಸಿ, ಇದರಿಂದ ಸವಲತ್ತುಗಳು ದೊರಕುವುದಿಲ್ಲವೆಂಬ ಭಯ ಬೇಡ ಎಂದ ಅವರು ಮಾದಿಗ ಜನಾಂಗದವರು ಗಣತಿ ಅಜರ್ಿಯಲ್ಲಿ ಕಾಲಂ ನಂ 6ರಲ್ಲಿನ ಬಿ061ರಲ್ಲಿ ಮಾದಿಗ ಎಂದು ನಮೂದಿಸುವಂತೆ ಮನವಿ ಮಾಡಿದರು.
ಛಲವಾದಿ ಜನಾಂಗದ ಮುಖಂಡ ದೇವರಾಜು ಮಾತನಾಡಿ, ಆದಿದ್ರಾವಿಡ ಜನಾಂಗದಲ್ಲಿ ಜನಸಂಖ್ಯೆ ಎಷ್ಟಿದೆ ಎಂದು ತಿಳಿಯಲು ಜಾತಿಗಣತಿ ಸಹಕಾರಿಯಾಗಿದ್ದು ಜನಾಂಗದವರು ಗಣತಿ ಸಂದರ್ಭದಲ್ಲಿ ಹೊಲೆಯ ಸಮುದಾಯದವರು ಛಲವಾದಿ ಎಂದು ನಮೂದಿಸಲು ಮನವಿ ಮಾಡಿದ ಅವರು ಗಣತಿಯ ಅಜರ್ಿಯ ಕಾಲಂ ನಂ 6ರಲ್ಲಿ ಬಿ027ರಲ್ಲಿ ಛಲವಾದಿ ಎಂದು ನಮೂದಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಗೋವಿಂದರಾಜು, ಸತೀಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.


 ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಬಳಸುವ ನಿಟ್ಟಿನಲ್ಲಿ ಗಣಿ ಭಾದಿತ ಪ್ರದೇಶದ ಜನರಿಗೆ ಪ್ರಾತಿನಿಧ್ಯ ನೀಡಲು ಒತ್ತಾಯ
ಚಿಕ್ಕನಾಯಕನಹಳ್ಳಿ, : ಗಣಿಗಾರಿಕಾ ಪ್ರದೇಶದಲ್ಲಿ ನಡೆದ ಅಕ್ರಮ ಅದಿರು ಹರಾಜಿನಿಂದ ಸಂಗ್ರಹವಾದ 3ಸಾವಿರ ಕೋಟಿ ಹಣವನ್ನು ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಬಳಸುವ ನಿಟ್ಟಿನಲ್ಲಿ ಸಕರ್ಾರ ಗಣಿ ಪರಿಸರ ಪುನರ್ ಸ್ಥಾಪನಾ ನಿಗಮ ಸ್ಥಾಪಿಸಲು ಮುಂದಾಗಿದ್ದು ಇದರಲ್ಲಿ ಗಣಿ ಭಾದಿತ ಪ್ರದೇಶದ ಜನರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ನಂಜುಂಡಯ್ಯ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿ ಪ್ರದೇಶಗಳ ಅಕ್ರಮ ಅದಿರಿನಿಂದ ಸಂಗ್ರಹವಾದ ಹಣವನ್ನು ಸವರ್ೋಚ್ಛ ನ್ಯಾಯಾಲಯದ ಆದೇಶದಂತೆ ಗಣಿಭಾದಿತ ಪ್ರದೇಶಗಳಿಗೆ ವೆಚ್ಚ ಮಾಡಬೇಕು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಟಾಸ್ಕ್ಪೋಸರ್್ ಸಮಿತಿ ಸಭೆಯಲ್ಲಿ ಚಚರ್ಿಸಲು ಸ್ಥಳೀಯ ಜನರನ್ನು ಆಯ್ಕೆ ಮಾಡಿ ಸಭೆಯಲ್ಲಿ ಭಾಗವಹಿಸುವಂತೆ ಅವಕಾಶ ನೀಡಬೇಕು ಎಂದರಲ್ಲದೆ, ಗಣಿಭಾದಿತ ಪ್ರದೇಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸುವಂತೆ ತಿಳಿಸಿದರೂ ಇದುವರೆವಿಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ, ಈಗಾಗಲೇ ದಂಡದ ರೂಪದಲ್ಲಿ ವಸೂಲಾಗಿರುವ ಹಣ ಸಕರ್ಾರದ ಬೊಕ್ಕಸದಲ್ಲಿದೆ ಈ ಹಣವನ್ನು ಕಾಮಗಾರಿಗಳ ಅನುಷ್ಠಾನಕ್ಕೆ ಶೀಘ್ರ ಆರಂಭಿಸದಿದ್ದರೆ ಬೇರೆ ಯಾವುದಾದರೂ ಉದ್ದೇಶಕ್ಕೆ ಬಳಕೆಯಾಗಲಿದೆ ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಣಿಭಾದಿತ ಪ್ರದೇಶಗಳ ಪುನರ್ವಸತಿ ಮತ್ತು ಪುನಶ್ಚೇತನ ಪರಿಸರಕ್ಕೆ ಸಂಬಂಧಪಟ್ಟ ಅಭಿವೃದ್ದಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೆಲವು ಗಣಿ ಮಾಲೀಕರು ಗಣಿಭಾಗದಲ್ಲಿ ಅಂಗನವಾಡಿ ಕೇಂದ್ರ, ಶೌಚಾಲಯ ಮತ್ತು ಇತರೆ ಕೆಲವು ಅಭಿವೃದ್ದಿ ಮಾಡಿದ್ದೇವೆಂದು ತೋರ್ಪಡಿಸುತ್ತಿದ್ದು ಈ ಕಾಮಗಾರಿಗಳನ್ನು ಸ್ಥಳೀಯ ಜನರಿಗೆ ನೀಡದೆ ಪರಸ್ಥಳದ ಹಾಗೂ ರಾಜಕಾರಣಿಗಳ ಬೆಂಬಲವಿರುವವರಿಗೆ ನೀಡುತ್ತಿದ್ದು ಇಂಥಾ ದ್ವಂದ್ವ ನೀತಿ ಅನುಸರಿಸುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸವರ್ೋಚ್ಚ ನ್ಯಾಯಾಲಯದ ಆದೇಶದಂತೆ ಸ್ಥಳೀಯರಿಗೆ ಮೊದಲ ಆಧ್ಯತೆ ನೀಡಬೇಕು ಇಲ್ಲದೇ ಹೋದರೆ ಈ ಬಗ್ಗೆ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಡೆಕೆರೆ ಗ್ರಾ.ಪಂ.ಸದಸ್ಯರಾದ ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ ಉಪಸ್ಥಿತರಿದ್ದರು.

ಕಾಡು ಹಂದಿಗೆ ಡಿಕ್ಕಿ ಶಿಕ್ಷಕ ಸಾವು
ಚಿಕ್ಕನಾಯಕನಹಳ್ಳಿ, : ಚಿಕ್ಕನಾಯಕನಹಳ್ಳಿ ಯಿಂದ  ಹುಳಿಯಾರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕರೊಬ್ಬರು ಕಾಡುಹಂದಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪ್ಪಿದ್ದಾರೆ.
ತಾಲ್ಲೂಕಿನ ಯಳನಡು ಸಕರ್ಾರಿ ಪ್ರೌಢಶಾಲೆಯ ಶಿಕ್ಷಕ ಚಂದ್ರಯ್ಯ(57) ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರಿಗೆ ತೆರಳುವಾಗ ಆಲದಕಟ್ಟೆ ಸಮೀಪದಲ್ಲಿ ಶನಿವಾರ ರಾತ್ರಿ 7.30ರ ಸುಮಾರಿನಲ್ಲಿ ಅಪಘಾತದ ಸಂಭವಿಸಿದ್ದು,  ತಕ್ಷಣ ಚಿಕ್ಕನಾಯಕನಹಳ್ಳಿ ಸಕರ್ಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದರು,  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ಚಂದ್ರಯ್ಯನವರ ಮಗ ದೀಕ್ಷಿತ್(22) ಎಂಬುವವರಿಗೆ ಗಾಯವಾಗಿದ್ದು ಚಿ.ನಾ.ಹಳ್ಳಿ ಆಸ್ಪತ್ರೆಗೆ ಸೇರಿಸಲಾಗಿದೆ.. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.


ಕಪ್ಪುಹಣ ವಾಪಸ್ ತರದ ಬಿಜೆಪಿ ಸಕರ್ಾರದ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ, : ಬಿಜೆಪಿ ಸಕರ್ಾರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 100 ದಿನದೊಳಗೆ ವಿದೇಶದಲ್ಲಿರುವ ಕಪ್ಪುಹಣವನ್ನು  ವಾಪಾಸ್ ತಂದು ಭಾರತೀಯ ಪ್ರತಿ ಪ್ರಜೆಗೆ 15ಲಕ್ಷ ರೂಪಾಯಿಗಳನ್ನು ಹಂಚುವುದಾಗಿ ಹೇಳಿದ್ದರು ಆದರೆ ಕಳೆದ ಹತ್ತು ತಿಂಗಳಿಂದಲೂ ಬಿಜೆಪಿ ಸಕರ್ಾರ ಅಧಿಕಾರದಲ್ಲಿದ್ದರೂ ಕಪ್ಪುಹಣದ ಬಗ್ಗೆ ಯಾವುದೇ ಚಕಾರವನ್ನು ಎತ್ತುತ್ತಿಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟಿಸಿದ ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು, ಕಪ್ಪು ಹಣದ ಬಗ್ಗೆ ಜನತೆಯ ಪ್ರಶ್ನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರಮೋದಿರವರು ಕೂಡಲೇ ಉತ್ತರಿಸಬೇಕೆಂದು ಆಗ್ರಹಿಸಿ ಶಿರಸ್ತೆದಾರ್ ಶಿವಕುಮಾರ್ರವರ ಮೂಲಕ ಸಕರ್ಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಚಿನಾಹಳ್ಳಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಾತನಾಡಿ,   ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರಮೋದಿಯವರು ಹಾಗೂ ಅಮಿತ್ಷಾರವರು ಕಪ್ಪುಹಣವನ್ನು ಸಕರ್ಾರ ಅಧಿಕಾರಕ್ಕೆ ಬಂದ 100 ದಿನದೊಳಗೆ ತರುತ್ತೇವೆಂದು ಭರವಸೆ ನೀಡಿದ್ದರೂ ಕಪ್ಪುಹಣದ ಬಗ್ಗೆ ಯಾವ ಚಚರ್ೆಯೂ ನಡೆಯುತ್ತಿಲ್ಲ ಆದ್ದರಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರರವರ ಸೂಚನೆ ಮೇರೆಗೆ ಕಪ್ಪುಹಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 15ಲಕ್ಷ ನಮೂದಿಸಿರುವ ಚೆಕ್ ಮಾದರಿಯ ಕರಪತ್ರವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಮೋದಿಯವರು ಚುನಾವಣಾ ಸಮಯದಲ್ಲಿ ನೀಡಿದ್ದ ಸುಳ್ಳು ಆಶ್ವಾಸನೆಯನ್ನು ಜನತೆಗೆ ಮನದಟ್ಟು ಮಾಡಿ ಕೇಂದ್ರ ಸಕರ್ಾರ ಪೊಳ್ಳು ಭರವಸೆಗಳನ್ನು ದೇಶದ ಜನರಿಗೆ ನೀಡುತ್ತಿದೆ ಎಂದು ತಿಳಿಸಲು ಪ್ರತಿಭಟನೆ ನಡೆಸುತ್ತಿದ್ದೇವೆಂದು ಹೇಳಿದರು.
ಕಪ್ಪುಹಣವನ್ನು ಭಾರತಕ್ಕೆ ತರಲು ಯಾವುದೇ ಒಂದು ನಿಧರ್ಿಷ್ಠವಾದ ಪ್ರಯತ್ನವನ್ನು ಮಾಡಿರದ ಬಿಜೆಪಿ ಸಕರ್ಾರ ಚುನಾವಣಾ ಸಮಯದ ರಾಜಕೀಯ ತಂತ್ರಗಾರಿಕೆಗಾಗಿ ಬಿಜೆಪಿ ಪಕ್ಷ ಮತದಾರರಿಗೆ ಸುಳ್ಳಿನ ಆಶ್ವಾಸನೆ ನೀಡಿದ್ದಾರೆ, ಯುಪಿಎ ಸಕರ್ಾರವಿದ್ದಾಗ ಮೇ. 2012ರಲ್ಲಿ ಶ್ವೇತ ಪತ್ರವನ್ನು ಹೊರಡಿಸಿ ಕಪ್ಪು ಹಣವನ್ನು ತರುವಲ್ಲಿ ಸಕರ್ಾರದ ಪ್ರಯತ್ನಗಳು ಹಾಗೂ ಕಪ್ಪುಹಣದ ಬಗ್ಗೆ ಅಂಕಿ-ಅಂಶಗಳನ್ನು ಮತ್ತು ಸೂಕ್ಷ್ಮವಿಚಾರಗಳನ್ನು ತಿಳಿಸಲಾಗಿತ್ತು, ಯುಪಿಎ ಸಕರ್ಾರದ ಕಪ್ಪು ಹಣದ ಬಗೆಗಿನ ವರದಿಯ ನಂತರವೂ ಕಪ್ಪುಹಣದ ವಿಚಾರವು ತುಂಬ ಸಂಕೀರ್ಣವಾದುದೆಂದು ತಿಳಿದಿದ್ದರೂ ಬಿಜೆಪಿಯು ಸುಳ್ಳು ಆಶ್ವಾಸನೆ, ಸುಳ್ಳು ಭರವಸೆಗಳನ್ನು ನೀಡಿ ದೇಶದ ಜನರನ್ನು ವಂಚಿಸಿದ್ದಾರೆ ಆದ್ದರಿಂದ ಜನತೆಗೆ ಆಶ್ವಾಸನೆ ವಂಚನೆಯ ಬಗ್ಗೆ ಬಹಿರಂಗ ಪಡಿಸಬೇಕಾಗಿದೆ ಎಂದು ಕಾರ್ಯಕರ್ತತರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯತರುಗಳಾದ ಶಶಿಧರ್, ಕೆ.ಜಿ.ಕೃಷ್ಣೆಗೌಡ, ಜ್ಞಾನೇಷ್, ಅಮೀರ್ಪಾಷ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.


ಏಪ್ರಿಲ್ 10ರಿಂದ 12ರವರೆಗೆ ಹೆಸರಹಳ್ಳಿ-ಗೌಡನಹಳ್ಳಿ ಜಾತ್ರಾಮಹೋತ್ಸವ

ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹೆಸರಹಳ್ಳಿ-ಗೌಡನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಜಾತ್ರಾ ಮಹೋತ್ಸವವು ಇದೇ 10 ರಿಂದ 12ರವರೆಗೆ ನಡೆಯಲಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಹೆಸರಹಳ್ಳಿ ಮತ್ತು ಗೌಡನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಉತ್ಸವಾದಿಗಳು ನೆರವೇರಲಿದೆ.
10ರಂದು ಗೌಡನಹಳ್ಳಿ ರಂಗನಾಥಸ್ವಾಮಿ ಮದನಿಂಗ ಮತ್ತು ಹೆಸರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀದೇವರು ಮದನಗಿತ್ತಿಯ ಹೊಳೆಸೇವೆ, ಮತ್ತು ಪಾನಕ ಫಲಹಾರ ಸೇವೆ, ಆರತಿಬಾನ ಮತ್ತು ಧ್ವಜಾರೋಹಣ ನೆರವೇರಲಿದೆ.
11ರಂದು ಬೆಳಗ್ಗೆ 7ಕ್ಕೆ ಗೌಡನಹಳ್ಳಿಯಲ್ಲಿ ದೂಪದ ಸೇವೆ, ಮಧ್ಯಾಹ್ನ 3ಕ್ಕೆ ಹೆಸರಹಳ್ಳಿಯಲ್ಲಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಮುಹೂರ್ತ, ಬಂಡಿಬಾನ, ಕಳಸೋತ್ಸವ, ಕಳಸಬಾನ ನೆರವೇರಲಿದೆ.
12ರಂದು ಬೆಳಗ್ಗೆ 7ಕ್ಕೆ ಚಿಕ್ಕಮ್ಮನಹಳ್ಳಿಯಲ್ಲಿ ಗಂಗಾಸ್ನಾನ ಮತ್ತು ಪಾನಕ ಫಲಹಾರ ಸೇವಾರ್ಥ, ಲಕ್ಷ್ಮೀರಂಗನಾಥಸ್ವಾಮಿಗೆ ತುಂಬೆ ಹೂವಿನ ಧಾರೆ, ಬನ್ನಿಮರದ ಪವಾಡ ಹಾಗೂ ಹೆಸರಹಳ್ಳಿಯಲ್ಲಿ ಬನ್ನಿ ಮರ ಹತ್ತಿಸುವ ಪವಾಡ ನಡೆಯಲಿದೆ. ಹೆಸರಹಳ್ಳಿ ಗ್ರಾಮಸ್ಥರಿಂದ ರಾತ್ರಿ 8.30ಕ್ಕೆ ಹೆಸರಹಳ್ಳಿಯಲ್ಲಿ ಮಹಾಮಂಗಳಾರತಿ, ಓಕಳಿ ಉತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನಾಡಜಾಗೃತಿ ಜಿಲ್ಲಾಧ್ಯಕ್ಷ ನಿಂಗರಾಜು ತಿಳಿಸಿದ್ದಾರೆ.

ಬೈಕ್ಗೆ ನಾಯಿ ಡಿಕ್ಕಿ ಯುವಕ ಸಾವು
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹಂದನಕೆರೆ ರಾಮಘಟ್ಟದ ಕೆರೆಕೋಡಿ ಬಳಿ ಆರ್.ಸಿ.ಮರುಳೇಗೌಡ(20) ಎಂಬುವವರು ಭಾನುವಾರ ರಾತ್ರಿ ತಮ್ಮ ಮನೆಯ ವಸ್ತುಗಳನ್ನು ತರಲು ರಾಮಘಟ್ಟದಿಂದ ಹಂದನಕೆರೆಗೆ ತೆರಳುವಾಗ ಕೆರೆಕೋಡಿ ಬಳಿ ಆಕಸ್ಮಿಕ ನಾಯಿ ಅಡ್ಡ ಬಂದಾಗ ಬ್ರೇಕ್ ಹೊಡೆದ ಪರಿಣಾಮ ಡಾಂಬರ್ ರಸ್ತೆಗೆ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.





Wednesday, April 1, 2015


ದಬ್ಬೆಘಟ್ಟ ಹಾಗೂ ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿ       ವಿಜೃಂಭಣೆಯಾಗಿ ನೆರವೇರಿದ  ಜಾತ್ರಾಮಹೋತ್ಸವ,       ಅಗ್ನಿಕುಂಡ ಉತ್ಸವ.           
ಚಿಕ್ಕನಾಯಕನಹಳ್ಳಿ : ಪಟ್ಟಣದ ವಾಡರ್್4ರ  ದಬ್ಬೆಘಟ್ಟ ಗ್ರಾಮದ ಮರುಳಸಿದ್ದಸ್ವಾಮಿ ದೇವಾಲಯ ಹಾಗೂ ಪಟ್ಟಣದ ಹೊರವಲಯದ ನಿವರ್ಾಣಸ್ವಾಮಿ ಗದ್ದಿಗೆ ಬಳಿ ಜಾತ್ರಾಮಹೋತ್ಸವದ ಅಂಗವಾಗಿ ದೇವರ ಉತ್ಸವ  ಹಾಗೂ ಅಗ್ನಿಕುಂಡ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. 
ಪಟ್ಟಣದ ದಬ್ಬೆಘಟ್ಟದಲ್ಲಿ ಪ್ರತಿ ವರ್ಷದಂತೆ ಮಂಗಳವಾರ ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾಮಹೋತ್ಸವ ನಡೆಯಿತು. ಸಾವಿರಾರು ಭಕ್ತಾಧಿಗಳು ಜಾತ್ರೆಗೆ ಆಗಮಿಸಿ ಮರುಳಸಿದ್ದಸ್ವಾಮಿಗೆ ಹಣ್ಣು, ಕಾಯಿಯನ್ನು ತಂದು ಭಕ್ತಿ ಭಾವದಿಂದ ದೇವರಿಗೆ ಪೂಜೆ ಸಲ್ಲಿಸಿದರು ಹಾಗೂ ಪಟ್ಟಣದ ದಿಬ್ಬದಹಳ್ಳಿ, ಬಾವನಹಳ್ಳಿ ಸಮೀಪದ ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿಯೂ ಸಹ ಪ್ರತಿ ವರ್ಷದಂತೆ ದೇವರ ಪೂಜೆ ಹಾಗೂ ಅಗ್ನಿಕುಂಡ ಮಹೋತ್ಸವ ನೆರವೇರಿತು.
ನಂತರ ದೇವಾಲಯದ ಬಳಿ ಹಾಕಿದ್ದ ಅಗ್ನಿಕುಂಡಕ್ಕೆ ಉತ್ಸವ ಮೂತರ್ಿಯನ್ನು ಹೊತ್ತ ಭಕ್ತರು ಅಗ್ನಿಕುಂಡ ಹಾದು ಹೊರಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು, ಅಗ್ನಿಕೆಂಡದ ಮೇಲೆ ನಡೆದಾಡುವ ದೃಶ್ಯ ಭಕ್ತಾಧಿಗಳಲ್ಲಿ ಮೈನವರೀಳಿಸುವಂತಿತ್ತು, ಬೆಂಗಳೂರು , ತುಮಕೂರು ಸೇರಿದಂತೆ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವರ ಅಗ್ನಿಕುಂಡದ ನಂತರ ದಾಸೋಹ ಕಾರ್ಯಕ್ರಮ ನಡೆಯಿತು. 
ಈ ಸಂದರ್ಭದಲ್ಲಿ ಮಾತನಾಡಿದ, ದಬ್ಬೆಘಟ್ಟದ ಗ್ರಾಮದ ಮುಖಂಡ ಶಿವಕುಮಾರ್, ಶ್ರೀ ಮರುಳಸಿದ್ದರು ಗ್ರಾಮಕ್ಕೆ ಬಂದು ನೆಲಸಿದ್ದರು ಎಂದು ಪ್ರತೀತಿ ಇದೆ, ಈ ಸಂದರ್ಭದಲ್ಲಿ ಕೆಂಪಮ್ಮ ಮಾರಿ ಬಂದು ಮಾನವರ ಹಾಗೂ ಪ್ರಾಣಿಗಳ ಆಹಾರ ಬೇಕೆಂದಾಗ ಮರುಳಸಿದ್ದರು ಕೊಡಲು ಸಾಧ್ಯವಿಲ್ಲ ಎಂದಾಗ, ಮಾರಿ ಕೆಂಡದ ಉಂಡೆಗಳನ್ನು ಸುರಿದಾಗ ಮರುಳಸಿದ್ದರು ಭಕ್ತರನ್ನು ಹಾಗೂ ಗ್ರಾಮಸ್ಥರನ್ನು ಮಾರಿಯಿಂದ ಕಾಪಾಡಿದರೆಂಬ ಪ್ರತೀತಿ ಇದೆ ಆದ್ದರಿಂದ ಪ್ರತಿ ವರ್ಷದ ಮರುಳಸಿದ್ದರಿಗೆ ಕೆಂಡದ ಸೇವೆಯನ್ನು ಸಲ್ಲಿಸಲಾಗುವುದು ಎಂದರು.
ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿ ಉತ್ಸವ ಮೂತರ್ಿಯೊಂದಿಗೆ ಗ್ರಾಮ ದೇವತೆಗಳಾದ ಮಾವೂರದ ಯಲ್ಲಮ್ಮ, ದುರ್ಗಮ್ಮ, ಬ್ಯಾಲಕೆರೆಯಮ್ಮ, ಸೋಮದೇವರೊಂದಿಗೆ ಬಸವಣ್ಣ ಸೇರಿದಂತೆ ನಂಧಿಧ್ವಜ ಹೊತ್ತವರು ಅಗ್ನಿಕೊಂಡ ಹಾಯುವ ಮೂಲಕ ಜಾತ್ರಾಮಹೋತ್ಸವದಲ್ಲಿ ಭಕ್ತಿಯನ್ನು ಸಮಪರ್ಿಸುವ ಮೂಲಕ ವಿಜೃಂಭಣೆಯ ಮೆರಗು ತಂದರು. ಈ ಸಂದರ್ಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಹಾಜರಿದ್ದು ಮುಖಡರುಗಳಾದ ಸಿ.ಬಸವರಾಜು ವಿವಿಧ ಜನಪ್ರತಿನಿಧಿಗಳು  ಗ್ರಾಮದ ಹಿರಿಯರಾದ ಗೋಪಾಲಯ್ಯ, ನಾಗಣ್ಣ ಹಾಗೂ ಭಕ್ತಾಧಿಗಳು ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ರವರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ :  ಡಾ||ಬಾಬು ಜಗಜೀವನರಾಂ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಅವರಲ್ಲಿನ ಆದರ್ಶಗಳನ್ನು ಅರಿವು ಮೂಡಿಸಬೇಕಾದ ಅಧಿಕಾರಿಗಳಲ್ಲಿರುವ ನಿರಾಸಕ್ತಿಯಿಂದಾಗಿ ದಲಿತ ಮನಸ್ಸುಗಳನ್ನು ಕದಡಿದಂತೆ ಮಾಡುತ್ತಿದೆ ಎಂದು ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಪ್ಪ ಆಕ್ರೋಶ ವ್ಯಕ್ತಪಡಿಸಿದರು. 
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಡಾ||ಬಾಬು ಜಗಜೀವನರಾಂ ರವರ 108 ಹಾಗೂ ಡಾ||ಅಂಬೇಡ್ಕರ್ರವರ 124 ನೇ ಜಯಂತಿ ಆಚರಣೆಯನ್ನು ಒಟ್ಟಿಗೆ ಆಚರಿಸುವ ಸಲುವಾಗಿ ಕರೆದಿದ್ದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು,  ಭಾರತದ ಮಹಾನ್ ವ್ಯಕ್ತಿಗಳಾದ ಡಾ||ಬಾಬು ಜಗಜೀವನರಾಂ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಇವರು ಈ ದೇಶದ ಅತ್ಯಮೂಲ್ಯ ಆಸ್ತಿಯಾಗಿದ್ದು ಇವರ ಜನ್ಮ ಆಚರಣೆಯನ್ನು ಸಕರ್ಾರ ಆಚರಿಸುವಂತೆ ಆದೇಶ ನೀಡಿದ್ದರೂ ಇಲ್ಲಿನ ಆಡಳಿತ ನಿರಾಸಕ್ತಿ ತೋರುತ್ತ ಬೇಜವಬ್ದಾರಿ ಎದ್ದು ಕಾಣುತ್ತಿದೆ. ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯತಿಗಳಿದ್ದರೂ ಅಧಿಕಾರಿಗಳೂ ಭಾಗವಹಿಸಿಲ್ಲ. ಅಧಿಕಾರಿಗಳು ಈ ಬಗ್ಗೆ  ಉದಾಸೀನದ ಮನೋಭಾವ ಬಿಟ್ಟು ಎಲ್ಲರೂ ಒಟ್ಟಾಗಿ ಸೇರಿ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳ ಪ್ರತಿ ನಾಗರೀಕರಿಗೂ ತಿಳಿಯುವಂತೆ ಮಾಡುವ ಆಚರಣೆಗೆ ಎಲ್ಲರ ಸಹಕಾರ ಬೇಕು. ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗದ ಜನರಿಗೆ ಇಲಾಖೆಗಳಿಂದ ಸಿಗುವ ಸೌಲಭ್ಯ ಸಮರ್ಪಕವಾಗಿ ಪಡೆಯುವಂತೆ ಮಾಹಿತಿ ಅಗತ್ಯವಾಗಿದೆ. ಇಂತಹ ಜನ್ಮ ಆಚರಣೆಯ ಸಂದರ್ಭದಲ್ಲಿ ಶೋಷಿತ ವರ್ಗದವರನ್ನು ಒಂದು ಕಡೆ ಕಲೆಹಾಕಿ ಆ ಜನರಿಗೆ ಇವರ ಆದರ್ಶಗಳ ಬಗ್ಗೆ ತಿಳಿಸುವ ಕಾರ್ಯಕ್ರಮವಾಗಬೇಕು ಎಂದರು. 
   ದಲಿತ ಮುಖಂಡ ಸಿ.ಎಸ್.ಲಿಂಗದೇವರು ಮಾತನಾಡಿ ಮಹಾನ್ ವ್ಯಕ್ತಿಗಳ ಜನ್ಮ ಆಚರಣೆಗಳು ಸರ್ವಸಮಾಜಕ್ಕೂ ಆಗತ್ಯವಾದ ಆಚರಣೆಯನ್ನು ನಮ್ಮನ್ನಾಳುವ ಸಕರ್ಾರಗಳು ಕೇವಲ ಒಂದೊಂದು ಸಮಾಜಕ್ಕೆ ಅವರನ್ನು ಸೀಮಿತಗೊಳಿಸಿ ಆಚರಿಸುತ್ತಿರುವುದು ಖಂಡನಾರ್ಹ ವಿಷಯ, ಇವರುಗಳೇ ಸಮಾಜಗಳನ್ನು ಒಡೆದು ಅಳುವ ನೀತಿಗೆ ಹೋಗಿರುವುದರಿಂದ ನಮ್ಮ ನಾಯಕರ ಆಚರಣೆಯನ್ನು ಸಹ ತಾಲ್ಲೂಕು ಆಡಳಿತ ಮತ್ತು ದಲಿತ ಸಂಘಟನೆಗೆ ಸಿಮಿತಗೊಳಿಸಿಬೇಡಿ ಎಂದು ಮನದಾಳದ ಆಕ್ರೋಶವನ್ನು ಬಿಚ್ಚಿಟ್ಟರು. 
ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಕ್ಷಮ್ಮ ಮಾತನಾಡಿ ಒಂದು ಸಮಾಜಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲಾ ಆಚರಣೆಯ ಸಂದರ್ಭದಲ್ಲಿ ಭಾಗವಹಿಸಿದರೆ ಯಾರ ಅಡ್ಡಿಯೂ  ಇರುವುದಿಲ್ಲ ಎಲ್ಲರೂ ಒಟ್ಟಾಗಿ ಆಚರಿಸುವ ಆಚರಣೆಯಾಗಬೇಕು ಇದಕ್ಕೆ ಎಲ್ಲರ ಸಹಕಾರವೂ ಇದ್ದು ಅಧಿಕಾರಿಗಳ ಸಹಕಾರವು ನಮಗೆ ಸಿಗುತ್ತಿದೆ ಜೊತೆಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
 ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಲತಾಕೇಶವಮೂತರ್ಿ ಪುರಸಭಾಧ್ಯಕ್ಷೆ ರೇಣುಕಮ್ಮ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ನಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ಶೆಟ್ಟಿ, ಬಿ.ಇ.ಓ ಕೃಷ್ನಮೂತರ್ಿ ಬೆಸ್ಕಾಂ ಎ.ಇ.ಇ.ರಾಜಶೇಖರ್, ಕೃಷಿ ಸಹಾಯಕ ನಿದರ್ೇಶಕ ಹೊನ್ನೆದಾಸೆಗೌಡ, ಕೃಷ್ಣನಾಯಕ್ ತಾಲ್ಲುಕು ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ ಉಪಸ್ಥಿತರಿದ್ದರು.


ಹೆಚ್ಚುವರಿ ಶಿಕ್ಷಣರ ತಾತ್ಕಾಲಿಕ ಪಟ್ಟಿ ಪ್ರಕಟ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಮಾ.31: 2014-15ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಥರ್ಿ, ಶಿಕ್ಷಕರ ಅನುಪಾತದಂತೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ತಾತ್ಕಾಲಿಕ ಪಟ್ಟಿಯನ್ನು ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ. ಕೃಷ್ಣಮೂತರ್ಿ ತಿಳಿಸಿದ್ದಾರೆ.
ಈ ಹೆಚ್ಚುವರಿ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಮಥರ್ಿಸ ಬಲ್ಲಂತಹ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4ರ ಒಳಗೆ ಕಛೇರಿಯ ನೋಡಲ್ ಅಧಿಕಾರಿಗಳಿಗೆ ಮುದ್ದಾಂ ಸಲ್ಲಿಸುವುದು, ತಡವಾಗಿ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದು.
ಬಿ.ಆರ್.ಪಿ ಮತ್ತು ಸಿ.ಆರ್.ಪಿ.ಹುದ್ದೆಗಳಿಗೆ ಪರೀಕ್ಷೆ: 2015-16ನೇ ಸಾಲಿನ ಸಿ.ಆರ್.ಪಿ. ಮತ್ತು ಬಿ.ಆರ್.ಪಿ. ಖಾಲಿ ಹುದ್ದೆಗಳನ್ನು ಭತರ್ಿ ಮಾಡುವ ಸಂಬಂಧ ಅರ್ಹ ಶಿಕ್ಷಕರಿಂದ ಅಜರ್ಿಗಳನ್ನು ಆಹ್ವಾನಿಸಲಾಗಿದೆ. 
ಅಜರ್ಿ ಸಲ್ಲಿಸಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ 31.5.2015ಕ್ಕೆ 10 ವರ್ಷ ಸೇವೆ ಹಾಗೂ ಆ ಶಾಲೆಯಲ್ಲಿ ಕನಿಷ್ಟ ಮೂರು ವರ್ಷ ಸೇವೆ ಪೂರ್ಣಗೊಳಿಸಿರಬೇಕು, ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಹುದ್ದಗಳಿಗೆ ಅಜರ್ಿ ಸಲ್ಲಿಸುವ ಶಿಕ್ಷಕರು ದಿ. 31.05.2015ಕ್ಕೆ ಐದು ವರ್ಷ ಸೇವೆ ಹಾಗೂ ಆ ಶಾಲೆಯಲ್ಲಿ ಕನಿಷ್ಟ ಮೂರು ವರ್ಷ ಸೇವೆ ಪೂರ್ಣಗೊಳಿಸಿರುವುದು ಕಡ್ಡಾಯವಾಗಿರುತ್ತದೆ.
ದಿನಾಂಕ 31.05.215ಕ್ಕೆ ಗರಿಷ್ಟ ವಯೋಮಿತಿ 50 ವರ್ಷ ಮೀರಿರಬಾರದು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಹೆಚ್ಚಿನ ಮಾಹಿತಿಯನ್ನು ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಅಜರ್ಿ ಸಲ್ಲಿಸಲು ಕೊನೆ ದಿನಾಂಕ 16.04.2015, ಲಿಖಿತ ಪರೀಕ್ಷೆ 26.04.2015 ಅಜರ್ಿ ಸಲ್ಲಿಸುವ ಸ್ಥಳ ಕ್ಷೇತ್ರ ಸಮನ್ಯಯಾಧಿಕಾರಿಗಳು ಬಿ.ಆರ್.ಸಿ. ಕಛೇರಿ ಚಿ.ನಾ.ಹಳ್ಳಿ ಇಲ್ಲಿ ಸಂಪಕರ್ಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೀನಂಶ್ರೀ ಭವನ ಶೀಘ್ರ ಪೂರ್ಣಗೊಳಿಸಲು ವಿಪ್ರ ಹಿತರಕ್ಷಣಾ ವೇದಿಕೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಏ.01 : ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಕುಂಟುತ್ತಾ ಸಾಗುತ್ತಿರುವ ತೀ.ನಂ.ಶ್ರೀಕಂಠಯ್ಯ ಭವನ ಕಾಮಗಾರಿಯನ್ನು ತ್ವರಿತವಾಗಿ ಪೂರೈಸುವಂತೆ ಹಾಗೂ ತೀ.ನಂ.ಶ್ರೀ  ಭವನವನ್ನು ವಿಪ್ರ ಹಿತರಕ್ಷಣ ವೇದಿಕೆಗೆ ಹಸ್ತಾಂತರಿಸುವಂತೆ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ ಸಕರ್ಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ನಡೆದ ವಿಪ್ರ ಹಿತರಕ್ಷಣಾ ವೇದಿಕೆ ಮಾಸಿಕ ಸಭೆಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಶೆಟ್ಟಿಕೆರೆ ವಿಶ್ವನಾಥ್, ತಾಲ್ಲೂಕಿನ ತೀರ್ಥಪುರದ ಹೆಸರಾಂತ ಸಾಹಿತಿ  ತೀ.ನಂ.ಶ್ರೀಯವರ  ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ತೀ.ನಂ.ಶ್ರೀ ಭವನದಲ್ಲಿ ಸುಸ್ಸಜಿತ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಅವರು  ಸಾಹಿತ್ಯ ಕ್ಷೇತ್ರದ ಚಟುವಟಿಕೆಗಳಿಗೆ ಪೂರಕವಾಗುವಂತೆ ಈ ಭವನ ನಿಮರ್ಿಸಬೇಕು, ಪ್ರತಿ ಸೋಮವಾರದಂದು ಇಲ್ಲಿ ನಡೆಯುತ್ತಿರುವ ಸಂತೆಯನ್ನು ಬೇರೆಡೆಗ ಸ್ಥಳಾಂತರಿಸಬೇಕು ಎಂದರು.
ತಾಲ್ಲೂಕಿವ ವಿಪ್ರ ಸಮುದಾಯದವರ ಶ್ರೇಯೋಭಿವೃದ್ದಿಗಾಗಿ ವಿಪ್ರ ಹಿತರಕ್ಷಣಾ ವೇದಿಕೆಯಿಂದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ತಾಲ್ಲೂಕಿನ ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರು ಸಂಘದ ಸದಸ್ಯತ್ವ ಪಡೆಯಬೇಕೆಂದು ಸಧ್ಯ ನಡೆಯುವ ಜಾತಿಗಣತಿಯಲ್ಲಿ ಒಳಪಂಗಡಗಳನ್ನು ನಮೂದಿಸದೆ ಜಾತಿ ಸೂಚಕದಲ್ಲಿ ಬ್ರಾಹ್ಮಣ ಎಂದೆ ನಮೂದಿಸಿ ಎಂದು ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಗಾಯಿತ್ರಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗುತ್ತಿದ್ದು ಆಥರ್ಿಕವಾಗಿ ಹಿಂದುಳಿದ ವಿಪ್ರ ಸಮಾಜದ ಅಭಿವೃದ್ಧಿಗಾಗಿ ಸ್ಥಾಪಿಸಲಿದ್ದು, ತಾಲ್ಲೂಕಿನಾದ್ಯಂತ ವಿಪ್ರ ಸಂಘ ಚಟುವಟಿಕಗಳಲ್ಲಿ ತೊಡಗಿಸಿಕೊಂಡಿದ್ದು ಗಾಯಿತ್ರಿ ಪತ್ತಿನ ಸಹಕಾರ ಸಂಘಕ್ಕೆ  ಮುಖ್ಯ ಪ್ರವರ್ತಕರನ್ನಾಗಿ ಹುಳಿಯಾರಿನ ಲೋಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ, ನೋಂದಣಿ ಕಾರ್ಯ ಪೂರ್ಣಗೊಂಡ ನಂತರ ತಾಲ್ಲೂಕಿನಾದ್ಯಂತ ಸಂಚರಿಸಿ ಷೇರು ಹಣವನ್ನು ಸಂಗ್ರಹಿಸಲಾಗುವುದು ಎಂದರು. 
 ಪಟ್ಟಣದ ಕೆರೆ ಬಳಿಯಲ್ಲಿ ಇರುವ ದಹನ ಕಾರ್ಯಕ್ಕೆ ನೆರವಾಗಲು ಸುಸಜ್ಜಿತ ಮುಕ್ತಿಧಾಮ ನಿಮರ್ಿಸಲು ತೀಮರ್ಾನಿಸಿದ್ದು ಮುಕ್ತಿಧಾಮ ಅಭಿವೃದ್ದಿ ಸಮಿತಿಯನ್ನು ರಚಿಸಲಾಗಿದ್ದು ಸ್ಮಶಾನ ಭೂಮಿಯ ಹಸ್ತಾಂತರಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದು ಈ ಮುಕ್ತಿಧಾಮಕ್ಕೆ 10ಲಕ್ಷ ರೂಪಾಯಿ ತಗಲುವ ಅಂದಾಜಿದ್ದು ದಾನಿಗಳ ನೆರವಿನಿಂದ ಕಾಮಗಾರಿ ನಡೆಸಲು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವಿಪ್ರಹಿತರಕ್ಷಣಾ ವೇದಿಕೆ ಅಧ್ಯಕ್ಷ ನರೇಂದ್ರಬಾಬು, ಸ್ಥಾಯಿಸಮಿತಿ ಅಧ್ಯಕ್ಷ ಹು.ಕೃ.ವಿಶ್ವನಾಥ್, ಕಾರ್ಯದಶರ್ಿ ಮಧುಸೂದನ್ ರಾವ್, ಪದಾಧಿಕಾರಿಗಳಾದ ಸಿ.ಡಿ.ರವಿ, ತೀರ್ಥಪುರ ಶ್ರೀಕಂಠಪ್ರಸಾದ್, ಶ್ರೀನಿವಾಸ್,ರಂಗನಾಥಪ್ರಸಾದ್, ರಾಜೀವಲೋಚನ, ಸೂರ್ಯನಾರಾಯಣ, ಗಣೇಶ್,ಮೋಹನ್, ಲಕ್ಷ್ಮಿನಾರಾಯಣ, ಭಾಸ್ಕರ್, ರವಿಕುಮಾರ್ ,ರಂಗನಾಥ ಉಡುಪ ಮತ್ತಿತರರಿದ್ದರು.






Monday, March 30, 2015


 ಜಾತಿಗಣತಿಯಲ್ಲಿ ವೈಷ್ಣವ ಜನಾಂಗದವರು ಶ್ರೀ ವೈಷ್ಣವ ಎಂದೇ ನಮೂದಿಸಲು ಮನವಿ
                    
ಚಿಕ್ಕನಾಯಕನಹಳ್ಳಿ : ರಾಜ್ಯ ಸಕರ್ಾರ ಜಾತಿಗಳ ಗಣತಿ ಮಾಡಲು ಆದೇಶಿಸಿದ ಹಿನ್ನಲೆಯಲ್ಲಿ, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಶ್ರೀ ವೈಷ್ಣವ ಸಮುದಾಯದವರು ಶ್ರೀ ವೈಷ್ಣವ ಎಂದೇ ಗಣತಿಯಲ್ಲಿ ನಮೂದಿಸುವಂತೆ ತಾಲ್ಲೂಕು ಶ್ರೀ ವೈಷ್ಣವ ಸಂಘದ ಅಧ್ಯಕ್ಷ ಸಾಲ್ಕಟ್ಟೆ ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೇ.99ರಷ್ಟು ಜನ ಅರ್ಚಕ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿರುವ ಶ್ರೀ ವೈಷ್ಣವರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದು ಯಾವುದೇ ಜಮೀನು ಇಲ್ಲದೆ ಆಥರ್ಿಕವಾಗಿ ಹಿಂದುಳಿದಿರುವುದರಿಂದ ಹಿಂದುಳಿದವರಿಗೆ ನೀಡುವ ಸವಲತ್ತುಗಳನ್ನು ಶ್ರೀ ವೈಷ್ಣವ ಸಮುದಾಯದವರಿಗೂ ನೀಡುವಂತೆ ಸಕರ್ಾರವನ್ನು ಒತ್ತಾಯಿಸಿದ್ದಾರೆ, ಶ್ರೀ ವೈಷ್ಣವ ಜನಾಂಗದ ಉಪಜಾತಿಗಳ ಪ್ರಕಾರ, ವೈಷ್ಣವ, ಶಾತ್ತದ ಶ್ರೀ ವೈಷ್ಣವ, ಸಾತಾನಿ, ಸಮಯರಾಯ, ಕದ್ರಿವೈಷ್ಣವ, ಸಾತ್ತದವಲ್ ಈ ಎಲ್ಲಾ ಉಪಪಂಗಡಗಳನ್ನು ಶ್ರೀ ವೈಷ್ಣವ ಎಂದೇ ನಮೂದಿಸಲು ಮನವಿ ಮಾಡಿದ್ದಾರೆ.
 ಮೇಲು ಕೋಟೆಯ ಮಜುರಾಯ ಇಲಾಖೆಗೆ ಸೇರಿದ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಉಸ್ತುವಾರಿ ನಡೆಸಲು ಯದುಗಿರಿ ಯತಿರಾಜ ಮಠದ ವಶಕ್ಕೆ ನೀಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ರಾಮಾನುಜಾಚಾರ್ಯರು ಜಾತಿ ಬೇಧವಿಲ್ಲದೆ ಎಲ್ಲರನ್ನೂ ಒಂದೇ ಎಂದು ಸಾರಿದ ಮಹಾನ್ಪುರುಷ, 1017ರಲ್ಲಿ ಜನಿಸಿದ ರಾಮಾನುಜಾಚಾರ್ಯರು 120 ವರ್ಷಗಳ ಕಾಲ ಜೀವಿಸಿದ್ದರು. 2017ನೇ ಇಸವಿಗೆ ಅವರ ಸಹಸ್ರಮನೋತ್ಸವ ಜಯಂತ್ಯೋತ್ಸವವನ್ನು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಸಲು ತೀಮರ್ಾನಿಸಲಾಗಿದೆ ಎಂದರಲ್ಲದೆ ಅಂದೇ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ ನಿಮರ್ಾಣಕ್ಕೆ ಹರಿಜನರ ಸಹಕಾರದೊಂದಿಗೆ ದೇವಾಲಯ ನಿಮರ್ಾಣ ಮಾಡಲು ಸಹಕಾರ ಪಡೆದಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಿಪಟೂರು ಶ್ರೀ ವೈಷ್ಣವ ಸಂಘದ ಅಧ್ಯಕ್ಷ ದೇವರಾಜು, ಗುಬ್ಬಿ ವೈಷ್ಣವ ಸಂಘದ ತಾ.ಅಧ್ಯಕ್ಷ ದಯಾನಂದ್, ತಾ.ಉಪಾಧ್ಯಕ್ಷ ಶ್ರೀನಿವಾಸ್, ಕೇಶವಮೂತರ್ಿ, ಕೃಷ್ಣಮೂತರ್ಿ, ಸಾದರಹಳ್ಳಿ ಗ್ರಾ.ಪಂ.ಸದಸ್ಯ ರಂಗನಾಥ್, ಸಿದ್ದನಕಟ್ಟೆ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ರಾಮ ಸಪ್ತಾಹ ಏಳು ದಿನಗಳ ಕಾರ್ಯಕ್ರಮ
                                      

ಚಿಕ್ಕನಾಯಕನಹಳ್ಳಿ,: ಪಟ್ಟಣದ ದೇವಾಂಗ ಬೀದಿಯ ಶ್ರೀ ರಾಮ ಸಪ್ತಾಹದ ಸಮಿತಿ ವತಿಯಿಂದ ಶ್ರೀ ರಾಮ ಸಪ್ತಾಹ 71 ವರ್ಷಗಳಿಂದಲೂ ನಡೆಸುತ್ತಾ ಬಂದಿದ್ದು ಶ್ರೀ ರಾಮನವಮಿ ಅಂಗವಾಗಿ ಮಾಚರ್್ 28ರಿಂದ ಏಪ್ರಿಲ್ 3 ರವರೆಗೆ ಏಳು ದಿನಗಳ ಕಾಲ ಶ್ರೀ ರಾಮ ಸಪ್ತಾಹ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಾಚರ್್ 20 ರಂದು ಶ್ರೀ ರಾಮ ಭಕ್ತಿ ಗೀತೆಗಳ ಗಾಯನ , 30 ರಂದು ಶಾಲಾ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ, 31ರಂದು ಅಭಿನವ ಕಲಾ ಸಂಘದವರಿಂದ ನಗೆ ನಾಟಕ ಕಾರ್ಯಕ್ರಮ, ಏಪ್ರಿಲ್ 1ರಂದು ಯುವ ಕಲಾವಿದರಿಂದ ನಗೆಹನಿ ಮತ್ತು ಏಕಪಾತ್ರಾಭಿನಯ, 2ರಂದು ಬನಶಂಕರಿ ಮಹಿಳಾ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಕೊನೆಯ ದಿನ 3ರಂದು ಬೆಳಗ್ಗೆ 9ಗಂಟೆಗೆ ಹೋಮಾದಿ ಕಾರ್ಯಕ್ರಮಗಳು ಪೂಣರ್ಾಹುತಿ ಬೆಳಗ್ಗೆ 11.30ಕ್ಕೆ ವಸಂತೋತ್ಸವ ಹಾಗೂ ಬನಶಂಕರಿ ದೇವಿಯವರ ಉತ್ಸವ ನಡೆಯಲಿದೆ.
ರಾತ್ರಿ 9ಕ್ಕೆ ಸಮಾರೋಪ ಸಮಾರಂಭ ನಡೆಯಲಿದು,್ದ ಏಪ್ರಿಲ್ 7ರಂದು ಭಕ್ತಾಧಿಗಳ ನೆರವಿನೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ.  
ಈ ಸಂದರ್ಭದಲ್ಲಿ ಮಾತನಾಡಿದ ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್ ಮಾತನಾಡಿ, 71ವರ್ಷಗಳಿಂದಲೂ ಶ್ರೀ ರಾಮ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು ಶ್ರೀ ರಾಮನವಮಿಯ ದಿನದಿಂದ ಏಳು ದಿನಗಳ ವರೆಗೆ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ ನಂತರ ಓಕಳಿ,ವಸಂತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಕನ್ನಡ ಸಂಘದ ವೇದಿಕೆಯ ಮೇಲ್ಛಾವಣಿ ಕಾಮಗಾರಿಗೆ ಗುದ್ದಲಿ ಪೂಜೆ
                      

ಚಿಕ್ಕನಾಯಕನಹಳ್ಳಿ : ಕನ್ನಡ ಸಂಘದ ಚಟುವಟಿಕೆಗಳಿಗೆ ಹಾಗೂ ತಾಲ್ಲೂಕಿನ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿದ್ದ ಕನ್ನಡ ಸಂಘದ ವೇದಿಕೆಯ ಮೇಲ್ಛಾವಣಿಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀರವರು ತಮ್ಮ ಅನುದಾನದಲ್ಲಿ ಬಿಡುಗಡೆ ಮಾಡಿರುವ 12.5ಲಕ್ಷ ರೂ ಹಣದಲ್ಲಿ ಮೇಲ್ಛಾವಣಿ ಕಾಮಗಾರಿಗೆ  ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯ ಬಳಿ ನೂತನವಾಗಿ ನಿಮರ್ಾಣವಾಗುತ್ತಿರುವ ವೇದಿಕೆಯ ಮೇಲ್ಛಾವಣಿಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕನ್ನಡ ಸಂಘದ ವೇದಿಕೆಯು 36 ವರ್ಷಗಳ ಹಿಂದೆ ಪ್ರಾರಂಭವಾಗಿದೆ, ಈ ಸಂಘದ ವೇದಿಕೆಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಹ ಅನುದಾನ ಬಿಡುಗಡೆ ಮಾಡಿದ್ದಾರೆ, ವೇದಿಕೆಯ ಮುಂಭಾಗದ ಮೇಲ್ಛಾವಣಿಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ 12.5 ಲಕ್ಷ ರೂಗಳನ್ನು ಅನುದಾನವನ್ನು ಬಿಡುಗಡೆ ಮಾಡಿದ್ದು ಇದರಿಂದ ಪಟ್ಟಣದಲ್ಲಿ ನಡೆಯುವ ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆ, ನಾಟಕೋತ್ಸವ ಕಾರ್ಯಕ್ರಮಗಳಿಗೆ ಈ ವೇದಿಕೆ ಅನುಕೂಲ ಕಲ್ಪಿಸಲಿದೆ ಎಂದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಕನ್ನಡ ಸಂಘದ ವೇದಿಕೆಗೆ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ, ವೇದಿಕೆ ಹಾಗೂ ಮೇಲ್ಛಾವಣಿ ನಿಮರ್ಾಣ ಮಾಡಿರುವುದರಿಂದ ಪಟ್ಟಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದರು. ಈಗ ಗುದ್ದಲಿ ಪೂಜೆ ನೆರವೇರಿಸಿದ್ದು ಎರಡು ತಿಂಗಳ ಒಳಗೆ ಮೇಲ್ಛಾವಣಿ ಕಾಮಗಾರಿ ಮುಗಿಯಲಿದೆ ಎಂದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಾತನಾಡಿ, 36 ವರ್ಷಗಳ ಹಿಂದೆ ಆರಂಭವಾದ ಕನ್ನಡ ಸಂಘದ ವೇದಿಕೆಯ ಅಭಿವೃದ್ದಿಯಲ್ಲಿ ಸಂಘದ ಅಧ್ಯಕ್ಷರಾದ ಸೀಮೆಎಣ್ಣೆ ಕೃಷ್ಣಯ್ಯನವರ ಹಾಗೂ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿರವರ ಪರಿಶ್ರಮವಿದೆ, ಸಂಘದ ವೇದಿಕೆ ಹಾಗೂ ಮೇಲ್ಛಾವಣಿ ಕಾಮಗಾರಿಯಿಂದ ತಾಲ್ಲೂಕಿನ ಜನತೆಗೆ ಸಂಪೂರ್ಣ ಉಪಯೋಗವಾಗಲಿದೆ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಚಿ.ನಾ.ಪುರುಷೋತ್ತಮ್, ಸಾಲ್ಕಟ್ಟೆಶ್ರೀನಿವಾಸ್, ಕೆ.ಜಿ.ಕೃಷ್ಣೆಗೌಡ, ಶ್ರೀನಿವಾಸ್, ಜಯರಾಮಯ್ಯ, ರಾಜಣ್ಣ, ಸಿ.ಎಸ್.ನಟರಾಜು, ರವಿಕುಮಾರ್, ರವಿ ಮತ್ತಿತತರರು ಉಪಸ್ಥಿತರಿದ್ದರು.

ಅಕ್ರಮ ಮರಳು ವಶ, ಬಡವರಿಗೆ ಮನೆ ಕಟ್ಟಿಕೊಳ್ಳಲು ನೀಡುವಂತೆ ದಸಂಸ ಮುಖಂಡರ ಒತ್ತಾಯ
                      
ಚಿಕ್ಕನಾಯಕನಹಳ್ಳಿ,: ಚಿ.ನಾ.ಹಳ್ಳಿ ತಾಲ್ಲೂಕಿನ ಹಂದನಕೆರೆ ಬಳಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ವಶಪಡಿಸಿಕೊಂಡಿರುವ ಮರಳನ್ನು ಲೋಕೋಪಯೋಗಿ ಇಲಾಖೆಯವರು ಸಕರ್ಾರದ ಯೋಜನೆಗಳ ಮೂಲಕ ಮನೆ ಕಟ್ಟಿಕೊಳ್ಳುತ್ತಿರುವ ಬಡವರಿಗೆ ರಿಯಾಯಿತಿ ದರದಲ್ಲಿ ನೀಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಡಿಎಸ್ಎಸ್ ಮುಖಂಡ ಲಿಂಗದೇವರು ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂದನಕೆರೆ ಬಳಿ ಗ್ರಾಮಗಳಲ್ಲಿ ಅಕ್ರಮವಾಗಿ ಶೇಖರಿಸಿದ್ದ ಮರಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಆಶ್ರಯ ಯೋಜನೆ, ಅಂಬೇಡ್ಕರ್ ಯೋಜನೆ, ಇಂದಿರಾ ಅವಾಜ್ ಹಾಗೂ ಬಸವ ವಸತಿ ಯೋಜನೆಗಳ ಮೂಲಕ ಸಕರ್ಾರದ ವತಿಯಿಂದ ಮನೆ ಕಟ್ಟಿಕೊಳ್ಳುತ್ತಿರುವ ಬಡವರಿಗೆ ರಿಯಾಯಿತಿ ದರದಲ್ಲಿ ನೀಡಿದರೆ ಅವರು ಮನೆ ಕಟ್ಟಿಕೊಳ್ಳುವಾಗ ಉಂಟಾಗುವ ಸಮಸ್ಯೆಯನ್ನು ನಿವಾರಿಸಬಹುದು ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೋವಿ ಜನಾಂಗದ ಮುಖಂಡ ಸತೀಶ್ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಪುರಸಭೆ 8.99ಲಕ್ಷ ಉಳಿತಾಯ ಬಜೆಟ್
                                 

ಚಿಕ್ಕನಾಯಕನಹಳ್ಳಿ, : 2015-16ನೇ ಸಾಲಿಗೆ ಚಿ.ನಾ.ಹಳ್ಳಿ ಪುರಸಭೆ 8.99ಲಕ್ಷ ರೂ ಉಳಿತಾಯ ಬಜೆಟ್ನ್ನು ಪುರಸಭೆ ಬಹುಮತದಿಂದ ಅಂಗೀಕರಿಸಿತು.
ಪುರಸಭಾಧ್ಯಕ್ಷೆ ರೇಣುಕಮ್ಮನವರ ಅಧ್ಯಕ್ಷತೆಯಲ್ಲಿ ಆಯವ್ಯಯ ಅಂದಾಜು ಪಟ್ಟಿಯನ್ನು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಂಡಿಸಿದರು.
ಪುರಸಭಾ ಸಾರ್ವಜನಿಕ ಕಾಮಗಾರಿಗಳಿಗಾಗಿ 11ಲಕ್ಷ ರೂ ವೆಚ್ಚ ಮಾಡಲು ತೀಮರ್ಾನಿಸಿತ್ತು, ಪುರಸಭಾ ವತಿಯಿಂದ ಸಾರ್ವಜನಿಕ ಕಾಮಗಾರಿಗಳಿಗಾಗಿ 25 ಲಕ್ಷ ರೂ ವೆಚ್ಚ ಮಾಡಲು ಸಭೆ ನಿರ್ಧರಿಸಿದ ಪರಿಣಾಮ, ಉಳಿತಾಯದ 4ಲಕ್ಷ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ನೀರಿನ ಅನುಕೂಲತೆಯ ಹಣದಲ್ಲಿ 10ಲಕ್ಷ ರೂ ಸೇರಿಸಿ 25ಲಕ್ಷ ರೂ ವಿನಿಯೋಗಿಸುವಂತೆ ತೀಮರ್ಾನಿಸಲಾಯಿತು. 12.99ಲಕ್ಷ ರೂ ಇದ್ದ ಉಳಿತಾಯ ಬಜೆಟ್ನಲ್ಲಿ ಸಾರ್ವಜನಿಕ ಕಾಮಗಾರಿಗಳಿಗೆ 4ಲಕ್ಷ ತೆಗೆದಿದ್ದರಿಂದ ಉಳಿತಾಯ 8.99ಲಕ್ಷ ರೂಪಾಯಿ ಉಳಿತಾಯದ ಬಜೆಟ್ನ್ನು ಸಭೆ ಸವರ್ಾನುಮತದಿಂದ ಅಂಗೀಕರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯ ಮಹಮದ್ ಖಲಂದರ್ ಮಾತನಾಡಿ, ಪಟ್ಟಣದ ವಿವಿಧ ವಾಡರ್್ಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡುತ್ತಿದ್ದು ಕಳಪೆ ಕಾಮಗಾರಿಗಳಾಗುತ್ತಿವೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಸಲಹೆ ನೀಡಿದ ಅವರು ಸಿ.ಸಿ.ರಸ್ತೆಗೆ ಗುತ್ತಿಗೆದಾರರು ಸರಿಯಾಗಿ ನೀರು ಹಾಕಿ ಕ್ಯೂರಿಂಗ್ ಮಾಡುತ್ತಿಲ್ಲ ಇದರಿಂದ ರಸ್ತೆ ಬೇಗ ಹಾಳಾಗುತ್ತದೆ ಎಂದರು.
ಸಕರ್ಾರ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಶೌಚಾಲಯಗಳನ್ನು ನಿಮರ್ಿಸಲು ಸಹಾಯಧನ ನೀಡಲು ಸಕರ್ಾರದ ಆದೇಶ ಬಂದ ನಂತರ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಸಭೆಯಲ್ಲಿ ತಿಳಿಸಿದರು.
2013-14ರಲ್ಲಿ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 75 ಮನೆಗಳು ಬಂದಿದ್ದು,  2015-16ರಲ್ಲಿ 200 ಮನೆಗಳನ್ನು ಮಂಜೂರು ಮಾಡಲು ಪುರಸಭೆ ಠರಾವು ಮಾಡಿ ಸಕರ್ಾರಕ್ಕೆ ಕಳಿಸಲು ಸಭೆಯಲ್ಲಿ ತೀಮರ್ಾನಿಸಿದರು ಹಾಗೂ ಪಟ್ಟಣದ ಹೊಸಬಸ್ನಿಲ್ದಾಣದ ಹಾಗೂ ಪುರಸಭೆ ಪಕ್ಕದ ಎರಡು ಮಳಿಗೆ ಹಾಗೂ ಮಟನ್ ಮಾಕರ್ೆಟ್ ಬಳಿ ಇರುವ 5 ಅಂಗಡಿ ಮಳಿಗೆಗಳು ಹಾಗೂ ವೆಂಕಟರಮಣ ದೇವಾಲಯದ ಹತ್ತಿರವಿರುವ ಪುರಸಭಾ ಮಳಿಗೆಗಳನ್ನು ಹರಾಜು ಮಾಡಲು ಸಭೆ ತೀಮರ್ಾನಿಸಿತು.
ಸಂತೆ ಮೈದಾನದ ಬಳಿ ಹಾಗೂ ಮಾರುಕಟ್ಟೆ ಬಳಿ ಶೌಚಾಲಯ ನಿಮರ್ಿಸಲು ಸದಸ್ಯ ಸಿ.ಪಿ.ಮಹೇಶ್ ಅಧಿಕಾರಿಗಳಿಗೆ ಆಗ್ರಹಿಸಿದರು.
ಇನ್ನು ಎರಡು ತಿಂಗಳಿನಲ್ಲಿ ಶೌಚಾಲಯ ನಿಮರ್ಿಸಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ತಿಳಿಸಿದರು.
ವೆಂಕಟರಮಣ ದೇವಾಲಯದ ಬಳಿ ಖಾಲಿ ಇರುವ ಮಳಿಗೆಗಳಿಗೆ 1ಸಾವಿರ ರೂ ಬಾಡಿಗೆ ಹಾಗೂ 50 ಸಾವಿರ ರೂಪಾಯಿ ಮುಂಗಡ ಡೆಪಾಸಿಟ್ ಮಾಡಲು ಜಿಲ್ಲಾಧಿಕಾರಿಯವರಿಗೆ ಕಳಿಸಲು ಸಭೆ ತೀಮರ್ಾನಿಸಿತು.
ಪುರಸಭೆಯ ಜೆ.ಸಿ.ಬಿ.ಯನ್ನು ರಿಪೇರಿ ಮಾಡಿಸಿ, ರಿಪೇರಿಯಾಗದೇ ಹೋದರೆ ಗುಜರಿಗೆ ಹಾಕಿ ಎಂದು ಸಿ.ಪಿ.ಮಹೇಶ್ ಹೇಳಿದರು.
ಪುರಸಭೆಯ ಅಂಗಡಿ ಮಳಿಗೆಗಳನ್ನು ಕೂಗಿದವರು ಸ್ಥಳದಲ್ಲಿ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು.
ಪುರಸಭಾ ಸದಸ್ಯೆ ರೂಪಾ ಮಾತನಾಡಿ, ನಮ್ಮ ವಾಡರ್್ಗೆ ನೀರು ಹರಿಸಲು ಅನೇಕ ಬಾರಿ ಮನವಿ ಮಾಡಿದರೂ ನಮ್ಮ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ಕೂಡಲೇ ವಾಡರ್್ಗೆ ನೀರು ಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರುಗಳಾದ ರೇಣುಕಮ್ಮ, ಪ್ರೇಮದೇವರಾಜು, ಪುಷ್ಪ.ಟಿ.ರಾಮಯ್ಯ, ಇಂದಿರಾಪ್ರಕಾಶ್, ಗೀತಾರಮೇಶ್, ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಮಲ್ಲೇಶಯ್ಯ, ಅಶೋಕ್, ಸಿ.ಡಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಕೆರೆ ಒತ್ತುವರಿ ಖರಾಬು ತೆರವುಗಳಿಸುವಂತೆ ರೈತರ ಮನವಿ 

                             
ಚಿಕ್ಕನಾಯಕನಹಳ್ಳಿ,ಮಾ.30 : ಕೆಲವು ಪ್ರಭಾವಿ ರೈತರು ಒತ್ತುವರಿ ಮಾಡಿಕೊಂಡಿರುವ ಖರಾಬು ತೆರವುಗೊಳಿಸುವಂತೆ ಒತ್ತಾಯಿಸಿ ಕಾತ್ರಿಕೆಹಾಲ್ ಹಾಗೂ ಮದನಮಡು ಸುತ್ತಮುತ್ತ ಗ್ರಾಮಗಳ ರೈತರು ಸಕರ್ಾರವನ್ನು ಒತ್ತಾಯಿಸಿ ತಹಶೀಲ್ದಾರ್ ಕಾಮಾಕ್ಷಮ್ಮನವರಿಗೆ ಮನವಿ ಸಲ್ಲಿಸಿದರು. 
ತಾಲ್ಲೂಕಿನ ಕಂದಿಕೆರೆ ಹೋಬಳಿ ಗುಡ್ಡಗಾಡಿನಿಂದ ಕೂಡಿದ್ದು ಶೇ.95ರಷ್ಟು ರೈತರು ವ್ಯವಸಾಯ ಹಾಗೂ ಪಶುಪಾಲನೆ ವೃತ್ತಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದೇವೆ, ಹತ್ತಾರು ವರ್ಷಗಳಿಂದ ಈ ಭಾಗಕ್ಕೆ ಸರಿಯಾಗಿ ಮಳೆಯಾಗದೇ ಅಂತರ್ಜಲ ಕಡಿಮೆಯಾಗಿ ತೆಂಗು, ಬಾಳೆ, ಅಡಿಕೆ ಮುಂತಾದ ಬೆಳೆಗಳು ಒಣಗಿ ಹೋಗಿದ್ದು ಕುಡಿಯುವ ನೀರಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ, 1000 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ, ತೆಂಗು ಅಡಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿ ಹಗಲು ಕಷ್ಟಪಟ್ಟರು, ಏನೂ ಪ್ರಯೋಜನವಾಗುತ್ತಿಲ್ಲ, ಇದರಿಂದ ರೈತರು ಲಕ್ಷಾಂತರ ರೂಪಾಯಿಗಳನ್ನು ಖಚರ್ು ಮಾಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರದೇ ರೈತ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾತಗಿದೆ, 20 ರಿಂದ 25 ವರ್ಷದ ಹುಡುಗರು ಜಮೀನಿನಲ್ಲಿ ತಂದೆ ತಾಯಿಗಳನ್ನು ಬಿಟ್ಟು ಪಟ್ಟಣಗಳಿಗೆ ಕೆಲಸ ಹುಡಿಕಿಕೊಂಡು ಗುಳೇ ಹೋಗುವಂತಾಗಿದೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದಂತಾಗಿದೆ ಈ ಸಂದರ್ಭದಲ್ಲಿ ಕೆಲವು ಪ್ರಭಾವಿ ಮುಖಂಡರು ಕೆರೆಯ ಖರಾಬು ಹಳ್ಳಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಇದರ ಬಗ್ಗೆ ಕಾನೂನು ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ.
ಕೂಡಲೇ ಹೇಮಾವತಿ ನಾಲೆಯಿಂದ ಮದನಮಡು ಕಾತ್ರಿಕೆಹಾಲ್, ಜಾಣೇಹಾರ್ ಭಾಗಗಳಿಗೆ ನೀರು ಹರಿಸಿದರೆ ಮಾತ್ರ ಈ ಭಾಗದ ಜನರು ಬದುಕುಳಿಯಲು ಸಾಧ್ಯ ಎಂದು ರೈತ ಮುಖಂಡರು ಸಕರ್ಾರವನ್ನು ಒತ್ತಾಯಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಪೋಡಿ ಆಂದೋಲನ ಮಾಡುತ್ತಿರುವುದರಿಂದ ಎಲ್ಲಾ ಸವರ್ೆಯರ್ಗಳಿಗೆ 4ನೇ ತಾರೀಖಿನವರೆಗೂ ಪೋಡಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರಿಗೆ ಕೆಲಸದ ಒತ್ತಡವಿದೆ ಎಂದ ಅವರು ಏಪ್ರಿಲ್ 6ರ ನಂತರ ಸವರ್ೆಯರ್ಗಳನ್ನು ಕರೆದುಕೊಂಡು ಖರಾಬಿನ ಸ್ಥಳಗಳಿಗೆ ಭೇಟಿ ನೀಡಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮನವಿ ಪತ್ರವನ್ನು ಅಪರ್ಿಸಿದರು.
ಈ ಸಂದರ್ಭದಲ್ಲಿ ರೈತರುಗಳಾದ ವಸಂತ್ಕುಮಾರ್, ಕಾತ್ರಿಕೆಹಾಲ್ ಕುಮಾರ್, ವಿರೂಪಾಕ್ಷಪ್ಪ, ಯೋಗಾನಂದಪ್ಪ, ಕೋದಂಡರಾಮು, ಲೋಕೇಶ್, ಗಂಗಾಧರಯ್ಯ, ಜಯಪ್ರಕಾಶ್, ವಸಂತ್ಕುಮಾರ್ ಮುಂತಾದವರು ಉಪಸ್ಥಿತರಿದ್ದರು.


ಆಟೋ ಚಾಲಕರ ಜಾಥಾ ಚಿ.ನಾ.ಹಳ್ಳಿಗೆ ಆಗಮನ
                          

ಚಿಕ್ಕನಾಯಕನಹಳ್ಳಿ,ಮಾ.30: ರಾಜ್ಯದ ಆಟೋ ಚಾಲಕರು ತಮ್ಮ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾಚರ್್ 24 ರಿಂದ ಏಪ್ರಿಲ್ 12ರವರೆಗೆ ರಾಜ್ಯಾದ್ಯಂತ ಸಿಐಟಿಯು ನೇತೃತ್ವದಲ್ಲಿ ಆಟೋ ಚಾಲಕರ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಕಾರ್ಯದಶರ್ಿ ಪಿ.ಎನ್.ರವಿ ಹೇಳಿದರು.  
ದಾವಣಗೆರೆ ಹಾಗೂ ಬೆಂಗಳೂರಿನಿಂದ ಹೊರಟ ಆಟೋ ಚಾಲಕರ ಜಾಥಾ ಸೋಮವಾರ ಚಿಕ್ಕನಾಯಕನಹಳ್ಳಿಗೆ ಆಗಮಿಸಿ ನಂತರ ನೆಹರು ವೃತ್ತದಲ್ಲಿಪಟ್ಟಣದ ಆಟೋಚಾಲಕರೊಂದಿಗೆ ಮಾತನಾಡಿದ ಪಿ.ಎನ್.ರವಿ, ಆಟೋ ಚಾಲಕರ ರಾಜ್ಯ ತರಬೇತಿ ಶಿಬಿರ ಮೇ 15ರಿಂದ 17ರವರೆಗೆ ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ನಡೆಯಲಿದ್ದು ಶಿಬಿರಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಟೋ ಚಾಲಕರು ಭಾಗವಹಿಸಲಿದ್ದಾರೆ ಎಂದ ಅವರು, ಆಟೋ ಚಾಲಕರಿಗೆ ಪರವಾನಿಗೆ ನೀಡುವಾಗ ವಿದ್ಯಾರ್ಹತೆ 8ನೇ ತರಗತಿ ಕಡ್ಡಾಯಗೊಳಿಸಿರುವುದು ಸರಿಯಲ್ಲ, ರಾಜಕಾರಣಿಗಳು ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಸಂಸತ್ತು ಹಾಗೂ ವಿಧಾನಸಭೆಗೆ ಸ್ಪಧರ್ಿಸಲು ಏಕೆ ವಿದ್ಯಾರ್ಹತೆ ನಿಗಧಿಪಡಿಸಿಲ್ಲ ಎಂದು ಪ್ರಶ್ನಿಸಿದ ಅವರು, ಅಸಂಘಟಿತ ಕಾಮರ್ಿಕರ ಕಲ್ಯಾಣ ಮಂಡಳಿಯಲ್ಲಿ ಆಟೋ ಚಾಲಕರ ನೊಂದಣಿ, ಗುರುತಿನ ಪತ್ರ ಹಾಗೂ ಕಲ್ಯಾಣ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು. ಇಲ್ಲಿಯವರೆಗೆ ಚಾಲಕರನ್ನು ನೊಂದಣಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಿಲ್ಲ  ಸಕರ್ಾರ ಬಜೆಟ್ನಲ್ಲಿ ಹೆಚ್ಚುವರಿ ಹಣವನ್ನು ನೀಡಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಆಟೋ ಚಾಲಕರನ್ನು ಕ್ರಿಮಿನಲ್ಗಳಂತೆ ನೋಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರಾದ ಗಂಗರಾಜು, ಈಶ್ವರಯ್ಯ,, ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.


Saturday, March 28, 2015


ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ : ಪ್ರಾಂಶುಪಾಲ ವರದರಾಜು
                                  
ಚಿಕ್ಕನಾಯಕನಹಳ್ಳಿ,ಮಾ. : ಕೊಠಡಿಗಳಲ್ಲಿ ಕಲಿಯುವ ಶಿಕ್ಷಣದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲೂ ಭಾಗವಹಿಸುವುದರಿಂದ ಜೀವನ ಅರ್ಥವಾಗುತ್ತದೆ ಎಂದು ಪ್ರಾಚಾರ್ಯ ವಿ.ವರದರಾಜು ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾಥರ್ಿಗಳು ಪರಿಸರದ ಸ್ವಚ್ಛತೆ, ಸಮಾಜ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಎಲ್ಲವೂ ವಿದ್ಯಾಥರ್ಿಗಳು ತಿಳಿದುಕೊಳ್ಳಬೇಕಾಗಿದೆ, ಅದಕ್ಕೋಸ್ಕರ ಗ್ರಾಮಗಳಲ್ಲಿ ನಡೆಯುವ ಎನ್.ಎಸ್.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಹಳ್ಳಿಗಳ ಜೀವನದ ಕಷ್ಟ ಸುಖಗಳು ತಿಳಿಯುತ್ತವೆ, ಅದಕ್ಕೋಸ್ಕರ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.
ಉಪನ್ಯಾಸಕ ಡಾ.ಶಿವಲಿಂಗಮೂತರ್ಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕಾಗಿದೆ, ಹಳ್ಳಿಗಳು ಸಹ ಆಧುನಿಕ ಜೀವನಕ್ಕೆ ಒಳಗಾಗುತ್ತಿರುವುದು ವಿಷಾಧನೀಯ, ನಮ್ಮ ಮೂಲ ಸಂಸ್ಕೃತಿಯನ್ನು ಬೆಳಸಿ ಸಂಸ್ಕಾರವಂತರನ್ನಾಗಿ ಮಾಡಬೇಕಾಗಿದೆ, ಕೈಗಾರಿಕೆಗಳು ಕೇವಲ ಹಣ ಮಾಡುವ ಕಾಖರ್ಾನೆಗಳಾಗಿದ್ದು ಇದರ ಹಿಂದೆ ಓದರೆ ನಮ್ಮ ಗ್ರಾಮೀಣ ಕೃಷಿ ಬದುಕು ನಾಶವಾಗುತ್ತದೆ ಆದ್ದರಿಂದ ನಮ್ಮ ಕೃಷಿ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ  ಗ್ರಾ.ಪಂ.ಅಧ್ಯಕ್ಷೆ ವಿನೋದಬಾಯಿ, ಉಪಾಧ್ಯಕ್ಷ ಗುರುಶಾಂತಪ್ಪ, ಶಿಬಿರಾಧಿಕಾರಿಗಳಾದ ಚಂದ್ರಶೇಖರ್, ಶಿವರಾಮಯ್ಯ, ಮುಖ್ಯಶಿಕ್ಷಕಿ ಪಾರ್ವತಮ್ಮ, ಕಾರ್ಯದಶರ್ಿ ಶಿವರ್ಣಣ, ಶಂಕರಪ್ಪ, ಲೋಕೇಶನಾಯ್ಕ, ಅಭಿವೃದ್ದಿ ಅಧಿಕಾರಿ ಭೈರಪ್ಪ, ಪ್ರೊ.ಪ್ರಸನ್ನಕುಮಾರ್, ಸುರೇಶ್, ಪ್ರಸನ್ನ, ಶೈಲೇಂದ್ರಕುಮಾರ್, ಅಧೀಕ್ಷಕ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.



ಕಾಯ್ದೆಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ : ವಕೀಲ ಎಂ.ಕೆ.ರವಿಚಂದ್ರ,
ಚಿಕ್ಕನಾಯಕನಹಳ್ಳಿ,ಮಾ.27 : ಮಹಿಳೆಯರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ವರದಕ್ಷಿಣೆ ನಿಷೇದ, ಬ್ರೂಣ ಹತ್ಯೆ ನಿಷೇಧ, ಜೀವನಾಂಶ ವಿವಾವ ವಿಚ್ಛೇದನ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ತಮ್ಮ ರಕ್ಷಣೆಗಾಗಿ ಬಳಸಬೇಕೇ ಹೊರತು ದ್ವೇಷಕ್ಕೆ ಉಪಯೋಗಿಸಿ ಕಾನೂನನ್ನು ದುರ್ಬಳಕೆ ಮಾಡಬಾರದೆಂದು ಚಿ.ನಾ.ಹಳ್ಳಿ ಜೆ.ಎಂ.ಎಫ್.ಸಿ ಸಹಾಯಕ ಸಕರ್ಾರಿ ಅಭಿಯೋಜಕ ಎಂ.ಕೆ.ರವಿಚಂದ್ರ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ಇಂದಿನ ಸ್ಥಿತಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಸ್ಥಿತಿಯಲ್ಲಿದ್ದಾರೆ, ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ವೈಜ್ಞಾನಿಕವಾಗಿ ಪುರುಷರಿಗೆ ಸರಿಸಮನಾಗಿ ಭಾಗವಹಿಸುವಂತೆ ಮತ್ತು ಮಹಿಳೆಯರಿಗೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರಲ್ಲದೆ ಅಶಕ್ತ, ಆಥರ್ಿಕ ದುರ್ಬಲರು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತವಾಗಿ ಕಾನೂನು ನೆರವನ್ನು ಪಡೆಯಬಹುದೆಂದು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005ರ ನಿಯಮ 2006 ರ ಬಗ್ಗೆ ಮಾಹಿತಿ ನೀಡಿದರು. ಒಂದೇ ಸೂರಿನಡಿ ಕುಟುಂಬದ ಯಾವುದೇ ಸದಸ್ಯರಿಂದ ಆಥರ್ಿಕ ಲೈಂಗಿಕ ಬೌದ್ದಿಕ ಮಾನಸಿಕ ದೌರ್ಜನ್ಯಗೊಳಗಾದಲ್ಲಿ ಈ ಕಾಯ್ದೆಯಡಿ ರಕ್ಷಣೆಯನ್ನು ಪಡೆಯಬಹುದಾಗಿರುತ್ತದೆ. ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಕೌಟುಂಬಿಕ ದೌರ್ಜನ್ಯ ಹಿಂಸೆ ಸಂರಕ್ಷಣಾಧಿಕಾರಿ, ಸಕರ್ಾರದಿಂದ ಮಾನ್ಯತೆ ಪಡೆದ ಸೇವಾ ಕೇಂದ್ರ, (ಸಾಂತ್ವಾನ ಕೇಂದ್ರ) ಪೋಲಿಸ್ ಠಾಣೆ, ನ್ಯಾಯಾಲಯ ಈ ನಾಲ್ಕು ಕಡೆ ಸಂದರ್ಭನುಸಾರ ದೂರನ್ನು ಸಲ್ಲಿಸಬಹುದಾಗಿರುತ್ತದೆ, ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಈ ಕಾಯ್ದೆಯಲ್ಲಿ ವೈದ್ಯಕೀಯ ಚಿಕಿತ್ಸೆ, ವಸತಿ ಸೌಲಭ್ಯ, ತುತರ್ು ಅಗತ್ಯಗಳನ್ನು ಸಮಯೋಚಿತವಾಗಿ ಒದಗಿಸಲಾಗುವುದು ಎಂದರಲ್ಲದೆ ಆಧ್ಯತೆ ಮೇಲೆ ಈ ಕೇಸನ್ನು 60ದಿನದಲ್ಲಿ ಇತ್ಯರ್ಥಪಡಿಸಬೇಕಾಗಿದೆ, ಅನಿವಾರ್ಯ ಸಂದರ್ಭಗಳಲ್ಲಿ ತಾತ್ಕಾಲಿಕ ಆದೇಶ ಮಾಡಿ ನಂತರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ಈ ಕಾಯ್ದೆಯಡಿ ರಕ್ಷಣೆಯನ್ನು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಬಾಲ್ಯವಿವಾಹದ ಬಗ್ಗೆ ಮಾಹಿತಿ ನೀಡಿದರು. ವಕೀಲ ವೈ.ಜಿ.ಲೋಕೇಶ್ ಆಸ್ತಿ ಕ್ಕು ಮತ್ತು ವರದಕ್ಷಿಣೆ ನಿಷೇದ ಕಾಯ್ದೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಲಯದ ಸಿಬ್ಬಂದಿ , ಸಿಡಿಪಿಓ ಕಛೇರಿ ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಸದಸ್ಯರುಗಳು, ಭಾಗ್ಯಲಕ್ಷ್ಮಿ ತಾಯಂದಿರು, ಅಂಗನವಾಡಿ ಕಾರ್ಯಕತರ್ೆಯರು, ಸಹಾಯಕಿಯರು ಭಾಗವಹಿಸಿದ್ದರು.




                                             ಚಿತ್ರ ಶೀಷರ್ಿಕೆ :
                                   
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿ ಗ್ರಾಮದ ಶ್ರೀ ಕಂಚೀರಾಯಸ್ವಾಮಿ ಜಾತ್ರೆ ರಥೋತ್ಸವವು ವಿಜೃಂಭಣೆಯಾಗಿ ನೆರವೇರಿತು.  ಕಂಚೀರಾಯಸ್ವಾಮಿ ಮತ್ತು ಬ್ಯಾಲದಕೆರೆ ಶ್ರೀ ಕೆಂಪಮ್ಮದೇವಿಯ ಜಾತ್ರೆ ರಥೋತ್ಸವು ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.


                                      
ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ದೇವರ ದಾಸಿಮಯ್ಯ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೆ.ಟಿ.ತಿಮ್ಮರಾಯಪ್ಪ, ಸಿ.ಎಂ.ಅನಂತಯ್ಯ ಹಾಗೂ ಮತ್ತಿತರರನ್ನು ಶಾಸಕ ಸಿ.ಬಿ.ಸುರೇಶ್ಬಾಬು ಸನ್ಮಾನಿಸಿದರು. ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಸೀಮೆಎಣ್ಣೆ ಕೃಷ್ಣಯ್ಯ, ಸಿ.ಡಿ.ಚಂದ್ರಶೇಖರ್ ಮತ್ತಿತತರರು ಉಪಸ್ಥಿತರಿದ್ದರು.



ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಚೆಕ್ ವಿತರಿಸಿದರು. ಪುರಸಭಾಧ್ಯಕ್ಷೆ ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದ ಓದಿನ ಮನೆ ವಿಶ್ವವಿದ್ಯಾನಿಲಯವಿದ್ದಂತೆ : ವಿಮರ್ಷಕ ನಟರಾಜ್ ಬೂದಾಳ್
                                    
ಚಿಕ್ಕನಾಯಕನಹಳ್ಳಿ: ಗ್ರಾಮೀಣ ಭಾಗದಲ್ಲಿ ಅಕ್ಷರ ಜ್ಞಾನವನ್ನು ವೃದ್ದಿಸುವುದಕ್ಕಾಗಿ ಓದಿನ ಮನೆ ಎಂಬ ಹೆಸರನ್ನಿಟ್ಟು ಪತ್ರಿಕೆಗಳು, ಪುಸ್ತಕಗಳನ್ನು ಹಳ್ಳಿಗಳ ಜನರಿಗೆ ತಲುಪಿಸುವ ಮೂಲಕ ಗ್ರಾಮೀಣ ಭಾಗದಲ್ಲಿ  ವಿಶ್ವವಿದ್ಯಾನಿಲಯಕ್ಕೆ ಸರಿಸಮಾನವಾಗಿ ಕೆಲಸ ಮಾಡುತ್ತಿದೆ  ಎಂದು ಕನರ್ಾಟಕ ಸಮಗ್ರ ತತ್ವಪದ ಪ್ರಕಟಣಾ ಯೋಜನೆಯ ರಾಜ್ಯ ಸಂಯೋಜಕ  ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾಕುವಳ್ಳಿ ಗ್ರಾಮದಲ್ಲಿನ ಓದಿನ ಮನೆ ಪ್ರಾರಂಭವಾಗಿ ಮಾಸ ಪೂರೈಸುವ ಹೊತ್ತಿಗೆ, ಓದಿನ ಮನೆ, ಅರಿವಿನ ಮನೆಯಾಗಿ ಪರಿವತರ್ಿಸುವಲ್ಲಿ ನಡೆದಿರುವ ಆಗುಹೋಗಗಳ ಬಗ್ಗೆ ನಡೆದ ಆತ್ಮ ವಿಮಶರ್ಾ ಸಭೆ ಹಾಗೂ ತತ್ವಪದ ಹಾಡುಗಾರಿಕೆ ಪ್ರಸ್ತುತಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು,  ಜನರಿಗೆ, ವಿದ್ಯಾಥರ್ಿಗಳಿಗೆ ದೇಶದಲ್ಲಿ ದಿನನಿತ್ಯ ನಡೆಯುವ ಘಟನೆಗಳನ್ನು ಹಾಗೂ ಜ್ಞಾನವೃದ್ದಿಸಿಕೊಳ್ಳಲು ಉಪಯೋಗವಾಗುವಂತ ಪತ್ರಿಕೆಗಳು, ಪುಸ್ತಕಗಳನ್ನು ಜನರಿಗೆ ತಲುಪಿಸುವ ಮೂಲಕ ಓದಿನ ಮನೆ, ಅರಿವಿನ ಮನೆಯಾಗಿದೆ ಎಂದರಲ್ಲದೆ,  ವಿಶ್ವವಿದ್ಯಾನಿಲಯಗಳು ವಿದ್ಯಾಥರ್ಿಗಳಿಗೆ ಜ್ಞಾನವನ್ನು ನೀಡುವ ರೀತಿಯಲ್ಲೇ  ಇಲ್ಲಿನ ಜನರಿಗೆ ಓದಿನ ಮನೆ ಜ್ಞಾನವನ್ನು ಒಬ್ಬರಿಂದ ಮತ್ತೊಬರಿಗೆ ಪ್ರಚುರ ಪಡೆಸಲು ಕಂಡು ಕೊಂಡ ಉತ್ತಮ ದಾರಿಯಾಗಿದೆ ಎಂದರು.
  ಓದಿನ ಮನೆ ಹಳ್ಳಿಯ ಜನರನ್ನೆಲ್ಲಾ ಒಂದು ಕಡೆ ಸೇರಿಸಿ ಸಮಾಜದಲ್ಲಿನ ಆಗುಹೋಗುಗಳನ್ನು ತಿಳಿಸುತ್ತಿದೆ, ಹಳ್ಳಿಯಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಿಸಲು ಉತ್ತಮ ವೇದಿಕೆಯಾಗಿದೆ ಎಂದರಲ್ಲದೆ  ಕನ್ನಡದ ನಿಜವಾದ ಸಂಪತ್ತು ಇರುವುದು ಹಳ್ಳಿಗಳಲ್ಲಿ, ಹಳ್ಳಿಗಳ ಪ್ರತಿಭೆಗಳೇ ಇಂದು ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು, ಅಂತಹವರ ಸಾಲಿನಲ್ಲಿ ನಿಲ್ಲಲು ಪ್ರಪಂಚದ ಜ್ಞಾನ ಅವಶ್ಯಕವಾಗಿದ್ದು ದಿನನಿತ್ಯ  ಪತ್ರಿಕೆಗಳು, ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ದಿಸಿಕೊಳ್ಳಬಹುದು ಎಂದರು. ಹಿಂದೆ ಅಕ್ಷರ ದೊರಕಲಿಲ್ಲ ಎಂಬ ಒಂದೇ ಕಾರಣಕ್ಕೆ ಅರ್ಧ ಚೈತನ್ಯಗಳು ಹೊರಬರಲಾಗದೇ ಕಳೆಗುಂದಿದವು ಆದರೆ ಈಗಿನ ಮಕ್ಕಳಿಗೆ ಅಕ್ಷರ ಜ್ಞಾನದ ಅವಶ್ಯಕತೆ ಹೆಚ್ಚಿನದಾಗಿದೆ, ಮಕ್ಕಳಿಗೆ ಇಂತಹ ಓದಿನ ಮನೆಗಳು ಹೆಚ್ಚಿದಷ್ಟು ಮಕ್ಕಳಿಗೆ ಸಣ್ಣವಯಸ್ಸಿನಿಂದಲೇ ಸ್ಪಧರ್ಾತ್ಮಕ ವೇದಿಕೆ ತಯಾರಿ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
 ಈ ಗ್ರಾಮದಲ್ಲಿ ತತ್ವಪದಕಾರರ ತಂಡವಿದ್ದು ಮಕ್ಕಳಿಗೆ ಈ ವೇದಿಕೆಯ ಮೂಲಕ ಸಾಂಸ್ಕೃತಿಕ ಕೌಶಲ್ಯವೂ ದೊರಕತ್ತದೆ ಆದ್ದರಿಂದ ಗುರು ಹಿರಿಯರು ನಮಗೆ ಉತ್ತಮ ದಾರಿಯನ್ನು ತೋರಿಸಿದ್ದು ಆ ದಾರಿಯನ್ನು ನಾವು ಪಾಲಿಸಬೇಕು ಎಂದರು.
  ಸಾಹಿತಿ ಎಸ್.ಗಂಗಾಧರಯ್ಯ ಮಾತನಾಡಿ, ಹಳ್ಳಿಗಳಲ್ಲಿ ಅಕ್ಷರ ಜ್ಞಾನ ತುಂಬುವ, ಸಾಹಿತ್ಯದ ಚಟುವಟಿಕೆ ಬೆಳೆಸುವ ಯೋಚನೆ ಇದ್ದಿದ್ದರಿಂದಲೇ ಈ ಓದಿನ ಮನೆ ಆರಂಭಿಸಲಾಯಿತು, ಓದಿನ ಮನೆ ಅರಿವಿನ ಮನೆಯಾಗಿಯೂ ಕಾಣಲಿದೆ, ಆರಂಭವಾದ ಒಂದು ತಿಂಗಳಿನಲ್ಲಿಯೇ ಓದಿನ ಮನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕಿರಿಯರಿಂದ, ದೊಡ್ಡವರವರೆಗೂ ಓದಿನ ಮನೆಗೆ ದಿನನಿತ್ಯ ಬಂದು ಹೋಗುತ್ತಿದ್ದಾರೆ, ಇದರಿಂದ ಇಲ್ಲಿನ ಜನತೆಗೆ ಸಮಾಜದಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ, ಮುಂದೇನು ಮಾಡಬೇಕೆಂಬ ಆಲೋಚನೆಗಳು ಮೂಡುತ್ತಿವೆ, ಈ ಓದಿನ ಮನೆ ನಮ್ಮ ನಂತರದ ಪೀಳಿಗೆಗೆ ಅವಶ್ಯಕವಾಗಿದ್ದು ಪ್ರತಿಯೊಬ್ಬರು ಅಕ್ಷರ ಜ್ಞಾನ ಪಡೆಯಬೇಕೆಂಬುದೇ ಓದಿನ ಮನೆಯ ಉದ್ದೇಶವಾಗಿದೆ ಎಂದರು.
ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಕಲಿಕೆಗೆ ದಾರಿಯಾಗಿರುವ ಓದಿನ ಮನೆಗೆ ಪೋಷಕರು ಮಕ್ಕಳನ್ನು ಕಳಿಸುವುದರ ಜೊತೆಗೆ ಅವರೂ ಆಗಮಿಸಿ ಅಕ್ಷರ ಜ್ಞಾನ ಪಡೆದುಕೊಳ್ಳಬೇಕು ಈ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು, ಓದಿನ ಮನೆಯಂತಹ ಉತ್ತಮ ವೇದಿಕೆ ಮಾಕುವಳ್ಳಿಯಲ್ಲಿ ಬಿಟ್ಟರೆ ಜಿಲ್ಲೆಯಲ್ಲಿ ಎಲ್ಲಿಯೂ ಇದುವರೆವಿಗೂ ಆರಂಭವಾಗಿಲ್ಲ, ಈ ಓದಿನ ಮನೆ ಎಲ್ಲಾ ಕಡೆಗೂ ವ್ಯಾಪಿಸಿ ಹಳ್ಳಿ ಜನತೆಗೆ ಅನುಕೂಲವಾಗಲಿ ಎಂದರು.
ಕನರ್ಾಟಕ ಸಮಗ್ರ ತತ್ವಪದ ಪ್ರಕಟಣಾ ಯೋಜನೆಯ ಜಿಲ್ಲಾ ಸಂಪಾದಕ ಹಾಗೂ ಕ್ಷೇತ್ರ ತಜ್ಞ ಉಜ್ಜಜ್ಜಿರಾಜಣ್ಣ ಮಾತನಾಡಿ, ಓದಿನ ಮನೆ ಎಂಬ ವೇದಿಕೆ ಮಾಕುವಳ್ಳಿಯಲ್ಲಿ ಆರಂಭವಾದ ನಂತರ ಹಲವಾರು ಹಳ್ಳಿಗಳಲ್ಲಿ ಓದಿನ ಮನೆ ಆರಂಭಿಸಲು ಸಲಹೆ ಸೂಚನೆಗಳನ್ನು ಕೇಳುತ್ತಿದ್ದಾರೆ, ತಿಪಟೂರಿನ ಪಕ್ಕದ ಮಂಜುನಾಥನಗರ ಹಳ್ಳಿಯೊಂದರಲ್ಲಿ ಓದಿನ ಮನೆ ಆರಂಭಿಸಲು ಕೇಳಿದ್ದಾರೆ ಅದೇ ರೀತಿ ಚಿ.ನಾ.ಹಳ್ಳಿಯ ಸೋರಲಮಾವು ಹಾಗೂ ಮತ್ತಿತರರ ಕಡೆಯಲ್ಲೂ ಓದಿನ ಮನೆಗಾಗಿ ಸಲಹೆಗಳನ್ನು ಕೇಳುತ್ತಿದ್ದಾರೆ ಎಂದರು.
ವಿದ್ಯಾಥರ್ಿ ಉಮೇಶ್ ಮಾತನಾಡಿ, ಡಿ.ಕೆ.ರವಿ ಎಂಬ ಅಧಿಕಾರಿಯ ಬಗ್ಗೆ ನಮಗೆ ತಿಳಿದೇ ಇರಲಿಲ್ಲ ಓದಿನ ಮನೆಗೆ ಪತ್ರಿಕೆಯನ್ನು ಓದಲು ಆಗಮಿಸಿದಾಗಲೇ ಅವರ ಪ್ರಾಮಾಣಿಕ ಕೆಲಸದ ಬಗ್ಗೆ ಅರಿವಾಗಿದ್ದು, ಅದೇ ರೀತಿಯ ಸಮಾಜದ ಆಗುಹೋಗುಗಳನ್ನು ತಿಳಿಯಲು ಸಹಕಾರಿಯಾಯಿತು ಎಂದು ತನ್ನ ಅಭಿಪ್ರಾಯ ಹಂಚಿಕೊಂಡರು. 
ಈ ಸಂದರ್ಭದಲ್ಲಿ ವಿದ್ಯಾಥರ್ಿಗಳಾದ ಭೈರೇಶ್, ಕಾವ್ಯ, ಕುಸುಮ ಸೇರಿದಂತೆ ಹಲವರು ಓದಿನ ಮನೆಯಿಂದ ತಮಗಾದ  ಅನುಭವಗಳನ್ನು ಹಂಚಿಕೊಂಡರು,   ಮಾಕುವಳ್ಳಿ ಗ್ರಾಮದ ತತ್ವಪದಕಾರರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡುರಗಳಾದ ನಿಜಾನಂದಮೂತರ್ಿ, ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.


ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಸಾಲ ಸೌಲಭ್ಯ ವಿತರಣೆ
ಚಿಕ್ಕನಾಯಕನಹಳ್ಳಿ,ಮಾ.28: ಕನರ್ಾಟಕ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ 2014-15ನೇ ಸಾಲಿಗೆ ಈ ವಿಧಾನ ಸಭಾ ಕ್ಷೇತ್ರದಲ್ಲಿ ಮೂವತ್ತೆಂಟು ಲಕ್ಷ ರೂಗಳನ್ನು ವಿತರಿಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಈ ವಿಧಾನ ಸಭಾ ಕ್ಷೇತ್ರದ ಎಂಟು ಸ್ವಸಹಾಯ ಸಂಘಗಳ 86 ಫಲಾನುಭವಿಗಳಿಗೆ ತಲಾ ಹತ್ತು ಸಾವಿರದಂತೆ  ಒಟ್ಟು ಎಂಟು ಲಕ್ಷದ ಅರವತ್ತು ಸಾವಿರ ರೂಗಳನ್ನು ಹಾಗೂ ಶ್ರಮ ಶಕ್ತಿ ಯೋಜನೆ ಅಡಿಯಲ್ಲಿ 150 ಫಲಾನುಭವಿಗಳಿಗೆ ತಲಾ ಇಪ್ಪತ್ತು ಸಾವಿರದಂತೆ ಒಟ್ಟು ಮೂವತ್ತು ಲಕ್ಷ ರೂಗಳನ್ನು ವಿತರಲಾಗಿದೆ ಹಾಗೂ ಹದಿನೇಳು ಕೊಳವೆ ಬಾವಿಗಳನ್ನು ಮಂಜೂರು ಮಾಡಿ,   ನನ್ನ ಕ್ಷೇತ್ರಕ್ಕೆ ಹೆಚ್ಚು ಅನುಧಾನ ನೀಡಿದ ವ್ಯವಸ್ಥಾಪಕ ನಿದರ್ೇಶಕರಾದ ಸಲೀಂ ಅಹಮದ್ ರವರಿಗೆ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಅಬೂಬ್ ಕಲಾಂ ರವರಿಗೆ ಅಭಿನಂದಿಸುವುದಾಗಿ ತಿಳಿಸಿದರು.

.


Thursday, March 26, 2015



ಪುರಸಭೆಯಲ್ಲಿ ಟ್ರಾಕ್ಟರ್ ಹಾಗೂ ಜೆಸಿಬಿಗೆ ಹಾಕಿಸುವ ಆಯಿಲ್, ಗ್ರೀಸ್ನಲ್ಲಿ ಅವ್ಯವಹಾರ ನಡೆದಿದೆ ಪುರಸಭಾ ಸದಸ್ಯರು, :  ತನಿಖೆಗೆ ಆಗ್ರಹ
ಚಿಕ್ಕನಾಯಕನಹಳ್ಳಿ,ಮಾ.26 : ಪುರಸಭೆಯಲ್ಲಿನ ಟ್ರಾಕ್ಟರ್ ಹಾಗೂ ಜೆ.ಸಿ.ಬಿಗೆ ಹಾಕಿಸುವ ಡೀಸೆಲ್, ಆಯಿಲ್ ಹಾಗೂ ಗ್ರೀಸ್ನಲ್ಲಿ ಅವ್ಯವಹಾರ ನಡೆದಿದೆ ಇದರ ಬಗ್ಗೆ ತನಿಖೆ ನಡೆಸುವಂತೆ ಪುರಸಭಾ ಸದಸ್ಯರು ಅಧಿಕಾರಿಗಳನ್ನು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ರೇಣುಕಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಪ್ರತಿ ತಿಂಗಳು ಮಾಡಬೇಕಾದ ಜಮಾಖಚರ್ಿನ ಸಭೆಯನ್ನು ಐದು ತಿಂಗಳ ನಂತರ ಮಾಡುತ್ತಿರುವುದು ಸರಿಯಲ್ಲ ಆದ್ದರಿಂದ ಆಯವ್ಯಯ ಮಂಡಣೆ ಮಾಡುವ ಮೊದಲು ಜಮಾಖರ್ಚನ್ನು ಮಂಡಿಸಿ  ನಂತರ ವಾಷರ್ಿಕ ಆಯವ್ಯಯ ಮಂಡಿಸುವಂತೆ ಸದಸ್ಯರು ಪುರಸಭಾ ಅಧ್ಯಕ್ಷರಿಗೆ ಹೇಳಿದರು.
ಪುರಸಭೆಯ ವಾಹನಗಳಿಗೆ ಹಾಕಿಸುವ ಡೀಸೆಲ್ನಲ್ಲಿ ಐದು ತಿಂಗಳಿನಲ್ಲೂ ಅವ್ಯವಹಾರ ನಡೆದಿದೆ ಎಂದು ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಸಭೆ ನಿರ್ಧರಿಸಿತು.
ಡೀಸೆಲ್ ಅವ್ಯವಹಾರದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ರವರಿಂದ ಲೋಪವಾಗಿದ್ದು ಅವರ ಸಂಬಳದಲ್ಲಿ ವಸೂಲು ಮಾಡುವಂತೆ ಸದಸ್ಯ ಮಹಮದ್ ಖಲಂದರ್, ಸಿ.ಪಿ.ಮಹೇಶ್ ಆಗ್ರಹಿಸಿದರು.
ಆರೋಗ್ಯ ನಿರೀಕ್ಷಕರು ಈ ಹುದ್ದೆಯಲ್ಲಿ ಇರಲು ನಾಲಾಯ್ಕ ಇವರನ್ನು ಬೇರೆ ಕಡೆ ವಗರ್ಾಯಿಸಿ ಇಲ್ಲದೆ ಹೋದರೆ ಪುರಸಭೆಯ ಮುಂದೆ ಧರಣಿ ನಡೆಸುವುದಾಗಿ ಸದಸ್ಯ ಮಹಮದ್ ಖಲಂದರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿ ತಿಂಗಳು 35 ರಿಂದ 40 ಸಾವಿರ ರೂಪಾಯಿ ಡೀಸೆಲ್ಗೆಂದು ಖಚರ್ು ಹಾಕುತ್ತೀರಿ, ಜೆ.ಸಿ.ಬಿ, ಆಟೋ ಟಿಪ್ಪರ್, ಸಕ್ಕಿಂಗ್ಯಂತ್ರ ಕಳದೆ ಆರು ತಿಂಗಳಿಂದ ಮೂಲೆ ಸೇರಿವೆ, ಇರುವ ಒಂದೇ ಟ್ರಾಕ್ಟರ್ ಹಾಗೂ ಆಟೋ ಟಿಪ್ಪರ್ಗೆ ಎಷ್ಟು  ಡೀಸೆಲ್ ಬೇಕು, ನಿತ್ಯ ಟ್ರಾಕ್ಟರ್ ಎಷ್ಟು ಕಿಲೋಮೀಟರ್ ಓಡಿದೆ ಇದರ ಬಗ್ಗೆ ಮಾಹಿತಿ ನೀಡಿ ಎಂದು ಸದಸ್ಯರು ಒತ್ತಾಯಿಸಿದರು.
ಲಾರಿ ರಿಪೇರಿಗೆ 15ರಿಂದ 20 ಸಾವಿರ ರೂ ಖಚರ್ು ಬರುವುದಿಲ್ಲ, ಟ್ರಾಕ್ಟರ್ ರಿಪೇರಿಗೆ 15 ಸಾವಿರ ರೂ ಎಂದು ಜಮಾ ಖಚರ್ಿನಲ್ಲಿ ನಮೂದು ಮಾಡಿದ್ದೀರಿ ಇಷ್ಟು ಹಣ ಖಚರ್ು ಹೇಗೆ ಬರುತ್ತದೆ ಎಂದು ಮಹಮದ್ ಖಲಂದರ್ ಪ್ರಶ್ನಿಸಿದರು, ಒಂದು ತಿಂಗಳಿಗೆ ಖಾಸಗಿ ಟ್ರಾಕ್ಟರ್ನವರು 10 ರಿಂದ 12 ಸಾವಿರ ರೂಗೆ ಬಾಡಿಗೆಗೆ ಬರುತ್ತಾರೆ, ಆದರೆ ಪುರಸಭೆ ಟ್ರಾಕ್ಟರ್ ರಿಪೇರಿ ಹಾಗೂ ಡೀಸೆಲ್ ಖಚರ್ು ಸೇರಿ 50 ರಿಂದ 60 ಸಾವಿರ ಖಚರ್ು ಬರುತ್ತಿದೆ ಹೀಗಾದರೆ ಹೇಗೆ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಶೆಟ್ಟಿಕೆರೆ ರಸ್ತೆಯಲ್ಲಿರುವ ವೆಂಕಣ್ಣನಕಟ್ಟೆ ಪಾಕರ್್ ಮಾಡಲು ಹಣ ನೀಡಿದ್ದೀರಿ ಇಲ್ಲಿ ಒಂದು ಭಾಗದಲ್ಲಿ ಪುಟ್ಪಾತ್ ಮಾಡಿ ಅರ್ಧಕ್ಕೆ ನಿಂತಿದೆ, ವೆಂಕಣ್ಣನ ಕಟ್ಟೆಯ ತಗ್ಗು ಪ್ರದೇಶವಿರುವುದರಿಂದ ಅಲ್ಲೇ ಊರಿನ ಕಸ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ ಇದರಿಂದ ಸುತ್ತಮುತ್ತಲ ಮನೆಗಳಿಗೆ ಪ್ಲಾಸ್ಟಿಕ್ ವಾಸನೆ ಹರಡಿ ಅನಾರೋಗ್ಯದಿಂದ ಬಳಲುವಂತಾಗಿದೆ, ಈ ಜಾಗದಲ್ಲಿ ಕಸ ಹಾಕುವಂತೆ ಯಾರು ಹೇಳಿದ್ದೀರಿ ಎಂದು ಅಧಿಕಾರಿಗಳನ್ನು ಸದಸ್ಯ ಎಂ.ಕೆ.ರವಿಚಂದ್ರ ಹೆಲ್ತ್ ಇನ್ಸ್ಪೆಕ್ಟರ್ ಜಯರಾಂರವರನ್ನು ಪ್ರಶ್ನಿಸಿದರು.
ಹೆಲ್ತ್ ಇನ್ಸ್ಪೆಕ್ಟರ್ ಮಾತನಾಡಿ ಯಾರು ವೆಂಕಣ್ಣನ ಕಟ್ಟೆಗೆ ಕಸ ಹಾಕುವಂತೆ ಹೇಳಿಲ್ಲ ಇನ್ನು ಮುಂದೆ ಕಸ ಹಾಕದಂತೆ ನೋಡಿಕೊಳ್ಳುತ್ತೇವೆ ಎಂದರು.
ಪಟ್ಟಣದಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡುವುದಿಲ್ಲ ಸರಿಯಾಗಿ ಕುಡಿಯುವ ನೀರಿ ಬಿಡುತ್ತಿಲ್ಲ, ಚರಂಡಿಗಳಿಗೆ ಬ್ಲಿಚಿಂಗ್ ಪೌಡರ್, ಫೆನಾಯಿಲ್ ಹಾಕುತ್ತಿಲ್ಲ ಇದರಿಂದ ಊರು ಸ್ವಚ್ಛವಾಗಿರಲು ಸಾಧ್ಯವೇ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಚರಂಡಿ ಹಾಗೂ ರಸ್ತೆ ಪಕ್ಕದಲ್ಲಿ ಕೊಳಚೆ ಜಾಗಗಳಲ್ಲಿ ಫೆನಾಯಿಲ್ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದೇವೆ ಎಂದು ಹೆಲ್ತ್ ಇನ್ಸ್ಪೆಕ್ಟರ್ರವರೇ ಪ್ರತಿ ವಾಡರ್್ಗಳಿಗೆ ಭೇಟಿ ನೀಡೋಣ ತೋರಿಸುತ್ತೀರಾ ಎಂದು ಸದಸ್ಯರು ಪ್ರಶ್ನಿಸಿದರು. ಹೆಲ್ತ್ ಇನ್ಸ್ಪೆಕ್ಟರ್ ಮೌನವಾಗಿದ್ದರು.
ಪಟ್ಟಣದ ಕೋಳಿ ಘನತ್ಯಾಜ್ಯ ವಿಲೇವಾರಿ ಮಾಡಲು ಘನತ್ಯಾಜ್ಯ ವಿಲೇವಾರಿ ಕೇಂದ್ರವಿದೆ, ಆದರೆ ಕೋಳಿ ಅಂಗಡಿಯವರು ಕೋಳಿ ತ್ಯಾಜ್ಯವನ್ನು ಭಾವನಹಳ್ಳಿ ಹತ್ತಿರ ಹಾಕುತ್ತಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸದಸ್ಯ ಮಲ್ಲೇಶಯ್ಯ ಒತ್ತಾಯಿಸಿದರು.
ಪುರಸಭೆಯಲ್ಲಿ ಸಕ್ಕಿಂಗ್ಯಂತ್ರ, ಜೆ.ಸಿ.ಬಿ ಎರಡೂ  ಕೆಟ್ಟು ಹೋಗಿ ಆರು ತಿಂಗಳಾಗಿದೆ,  ಕೆಟ್ಟು ನಿಂತ ಸ್ಥಳದಲ್ಲಿಯೇ ನಿಂತಿದೆ ಇದುವರೆಗೆ ರಿಪೇರಿ ಮಾಡಿಸಲಾಗಿಲ್ಲ, ಬೇರೆ ಬೇರೆ ಬಾಬ್ತುಗಳಿಗೆ ಹಣ ಖಚರ್ು ಮಾಡುತ್ತೀರಿ ರಿಪೇರಿಗೆ ಏಕೆ ಹಣ ಖಚರ್ು ಮಾಡಿಲ್ಲ ಎಂದು ಸದಸ್ಯ ಸಿ.ಪಿ.ಮಹೇಶ್ ಪ್ರಶ್ನಿಸಿದರು.
ಸಭೆಯಲ್ಲಿ ಪುರಸಭಾಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಸದಸ್ಯರುಗಳಾದ ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ರಾಜಶೇಖರ್, ಅಶೋಕ್, ಇಂದಿರಾಪ್ರಕಾಶ್, ಧರಣಿಲಕ್ಕಪ್ಪ, ರೇಣುಕಾಗುರುಮತರ್ಿ, ಪ್ರೇಮದೇವರಾಜು, ಗೀತಾರಮೇಶ್, ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



 ಕೇಂದ್ರ ಸಕರ್ಾರದ ಭೂಸ್ವಾಧೀನ ಕಾಯ್ದೆಗೆ ರೈತರ ವಿರೋಧ
ಚಿಕ್ಕನಾಯಕನಹಳ್ಳಿ, : ಕೇಂದ್ರ ಸರ್ಕರ ಭೂಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ನೀತಿಯು  ಸಾರ್ವಜನಿಕ ಮತ್ತು ದೇಶದ ರೈತರ ಹಿತರಕ್ಷಣೆಗೆ ಕಾಳಜಿ ಇಲ್ಲದ ಸಕರ್ಾರದ ಪ್ರಯೋಗವಾಗಿದೆ ಎಂದು ರಾಜ್ಯ ಹಸಿರು ಸೇನೆಯ ರಾಜ್ಯ ಕಾರ್ಯದಶರ್ಿ  ಸತೀಶ್ಕೆಂಕೆರೆ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೇಂದ್ರ ಸಕರ್ಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ಕೆಂಕೆರೆ,  ಬ್ರಿಟೀಷರ ಕಾಲದ 1894ರ ಭೂಸ್ವಾಧೀನ ಕಾಯ್ದೆಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ದೇಶಾದ್ಯಂತ ಹಲವು ದಶಕಗಳ ಕಾಲ ಎಷ್ಟೋ ಚಳುವಳಿಗಳು ನಡೆದ ಫಲವಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾದರೆ ರೈತರ ಒಪ್ಪಿಗೆ, ಸಂತ್ರಸ್ಥರಾದ ರೈತರಿಗೆ ಪುನಶ್ಚೇತನ ಮತ್ತು ಪುನರ್ ವಸತಿ ನ್ಯಾಯಯುತ ಪರಿಹಾರ ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕೆಂದು 2013ರಲ್ಲಿ ಜಾರಿಗೆ ತರಲಾಯಿತು,  ಈ  ಭೂಸ್ವಾಧೀನ ಕಾಯ್ದೆಗೆ ಕೇಂದ್ರದಲ್ಲಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸಕರ್ಾರವು ತಿದ್ದುಪಡಿಯನ್ನು  ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವುದು ದೇಶದ ರೈತರಿಗೆ ಬಗೆದ ದ್ರೋಹವಾಗಿದೆ, ಹೀಗಾಗಿ ಈ ಸುಗ್ರೀವಾಜ್ಞೆಯನ್ನು ಕೇವಲ ತಿದ್ದುಪಡಿಯೆಂದು ಕರೆಯಲಾಗುವುದು ಎಂದ ಅವರು, ಈ ತಿದ್ದುಪಡಿ  2013ರ ಮೂಲ ಆಶಯ ಮತ್ತು ಉದ್ದೇಶವನ್ನು ನಿರಾರ್ಥಕಗೊಳಿಸುತ್ತದೆ ಎಂದರು.
1894ರ ಕಾಯ್ದೆಯಲ್ಲಿ ಸಂತ್ರಸ್ಥ ಭೂಪಾಲಕರಿಗೆ ಆಕ್ಷೇಪಣೆ ಸಲ್ಲಿಸಲು, ತಮ್ಮ ಕಷ್ಠ ಹೇಳಿಕೊಳ್ಳುವ ಅವಕಾಶವಾದರು ಇತ್ತು,  ಆದರೆ ಈಗ ಸುಗ್ರಿವಾಜ್ಞೆಯಲ್ಲಿ ವಿಧಿ ವಿಧಾನದ ಅಗತ್ಯೆತಗಳನ್ನು ಬೈಪಾಸ್ ಮಾಡಿರುವುದರಿಂದ ಜಮೀನು ಮಾಲೀಕರಿಗೆ ಕನಿಷ್ಠ ರಕ್ಷಣೆ ಇಲ್ಲದಂತೆ ಆಗಿದೆ, ಒಟ್ಟಾರೆ ಇದು ರಿಯಲ್ ಏಸ್ಟೇಟ್ನವರು,  ಉದ್ದಿಮೆದಾರರು,  ಕಾಪರ್ೋರೇಟ್ಗಳ ಹಿತರಕ್ಷಣೆಗಾಗಿ ನಡೆಯುತ್ತಿರುವ ಪೈಪೋಟಿ ಆಗಿದೆ, ಈ ಪೈಪೋಟಿಯ ಹಿಂದೆ ಒಂದೆಡೆ ಪ್ರಭಾವಿಗಳು ಇದ್ದಾರೆ,  ಯಾವುದೇ ಪ್ರಭಾವ ಇಲ್ಲದ ರೈತ ಸಮುದಾಯದ ಪರವಾಗಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇರುತ್ತದೆ ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರುಗಳಾದ ಶಿವಕುಮಾರ್, ಲೋಕಣ್ಣ ತಿಮ್ಮನಹಳ್ಳಿ, ವಿರೂಪಾಕ್ಷಯ್ಯ, ಮನು, ಉಮೇಶ್ಗೌಡ, ದಬ್ಬೆಘಟ್ಟ ಬಸವರಾಜು, ಮತ್ತಿತರರು ಉಪಸ್ಥಿತರಿದ್ದರು.


ಎಲ್.ಜಿ.ಹಾವನೂರುರವರ ಜನ್ಮದಿನಾಚಾರಣೆ ಕಾರ್ಯಕ್ರಮ


ಚಿಕ್ಕನಾಯಕನಹಳ್ಳಿ,ಮಾ.26: ಪ್ರತಿಯೊಬ್ಬರಿಗೂ ಮೀಸಲಾತಿ ದೊರಕಬೇಕೆಂಬ ಎಲ್.ಜಿ.ಹಾವನೂರುರವರ ಸಿದ್ದಾಂತಗಳು ಹಾಗೂ  ಹೋರಾಟಗಳ  ಬಗ್ಗೆ ನಾಡಿನ ಪ್ರತಿಯೊಬ್ಬರಿಗೂ ತಿಳಿಸುವುದು ಅವಶ್ಯಕ ಎಂದು ಕನರ್ಾಟಕ ವಾಲ್ಮಿಕಿ ಸೇನೆಯ ರಾಜ್ಯಾಧ್ಯಕ್ಷ ಪ್ರತಾಪ್ಮದಕರಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕನರ್ಾಟಕ ವಾಲ್ಮೀಕಿ ಸೇನೆಯ ವತಿಯಿಂದ ಏರ್ಪಡಿಸಿದ್ದ ಎಲ್.ಜಿ.ಹಾವನೂರುರವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್.ಜಿ.ಹಾವನೂರುರವರು ದಕ್ಷಿಣ ಭಾರತದ ಜನತೆಗೆ ಅನುಕೂಲವಾಗಲು ಸಿದ್ದಾಂತಗಳನ್ನು ರಚಿಸಿದರು, ಪ್ರತಿಯೊಬ್ಬರಿಗೂ ಮೀಸಲಾತಿ ದೊರಕಬೇಕೆಂಬುದೇ ಅವರ ಆಶಯವಾಗಿತ್ತು ಎಂದರು.
 ಕನರ್ಾಟಕ ವಾಲ್ಮೀಕಿ ಸೇನೆಯ ಮಹಿಳಾ ಪತ್ತಿನ ಸಹಕಾರ ಸಂಘ ಅಸ್ಥಿತ್ವಕ್ಕೆ ಬರಬೇಕು, ಈ ಘಟಕ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಆರಂಭವಾಗಬೇಕು, ಮಹಿಳೆಯರ ಸಂಘಟನೆಯ ಶಕ್ತಿ ಏನೆಂಬುದು ಜನತೆಗೆ ತಿಳಿದಿದ್ದು ವಾಲ್ಮೀಕಿ ಸೇನೆಯ ಮಹಿಳಾ ಸಂಘಟನೆಗಳೇ ಒಗ್ಗಟ್ಟಿನಿಂದ ಸಂಘ ರಚಿಸಿ ವ್ಯವಹಾರ ನಡೆಸಬೇಕು,  ಕನರ್ಾಟಕ ವಾಲ್ಮೀಕಿ ಸೇನೆ ಸಂಘಟನೆಯಿಂದ ಹಳ್ಳಿಗಳ ಮೂಲಕ ರಾಜ್ಯವ್ಯಾಪಿ ಹರಡಬೇಕು ಎಂದರು.
ಈ ಸಂಧರ್ಭದಲ್ಲಿ ಕನರ್ಾಟಕ ವಾಲ್ಮೀಕಿ ಸೇನೆಯ ಮಲ್ಲೇಶಣ್ಣ, ನಾಗಣ್ಣ, ಶಿವಣ್ಣ, ನಾಗರಾಜ್, ಶಿವಮ್ಮಕೊಡಿಹಳ್ಳಿ, ಪುಷ್ಪಾವತಿ ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ: ಜಾತಿಗಣತಿ ತರಬೇತಿ ಸ್ಥಳಾಂತರ
ಚಿಕ್ಕನಾಯಕನಹಳ್ಳಿ: ಜಾತಿ ಗಣತಿಯ ಎರಡನೇ ಹಂತದ ತರಬೇತಿಯು ಇದೇ 28 ಮತ್ತು 29 ರಂದು ನಡೆಯಲಿದ್ದು, ತರಬೇತಿಯು ಪಟ್ಟಣದ ಶ್ರೀ ನಿವರ್ಾಣೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದರು.
ಈ ಮೊದಲು ತರಬೇತಿಯು ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ಎಂದು ನಿಗಧಿಪಡಿಸಲಾಗಿತ್ತು, ಆದರೆ ಅಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಈ ಸ್ಥಳದ ಬದಲಾಗಿ, ಶ್ರೀ ನಿವರ್ಾಣೇಶ್ವರ ಪ್ರೌಢಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Wednesday, March 25, 2015


ದೇವರ ದಾಸಿಮಯ್ಯ ಜಯಂತಿ
ಚಿಕ್ಕನಾಯಕನಹಳ್ಳಿ : ದೇವರ ದಾಸಿಮಯ್ಯನವರು ಕಾವ್ಯವನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ರಚಿಸಿದ್ದಾರೆ, ಗದ್ಯಪದ್ಯ ಮಿಶ್ರಿತ ಸಾಹಿತ್ಯವನ್ನು ರಚಿಸಿದ ಅವರು, ಭಕ್ತಿಯಲ್ಲಿ ಹೆಚ್ಚು ತೊಡಗಿಸಿಕೊಂಡರು, ದಾಸಿಮಯ್ಯ ಹೆಚ್ಚಿನ ಅಧ್ಯಯನಕ್ಕಾಗಿ ಮದನೂರಿನಿಂದ ಶ್ರೀಶೈಲಕ್ಕೆ ಹೋಗುವ  ಮಾರ್ಗಮಧ್ಯದಲ್ಲಿ ಜನರಿಗೆ ಭಕ್ತಿಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದರು ಎಂದು ನಿವೃತ್ತ ಶಿಕ್ಷಕ ಬನಶಂಕರಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ದೇವರ ದಾಸಿಮಯ್ಯ ವಚನಕಾರರಲ್ಲಿ ಮೊದಲಿಗರು,  ವಸ್ತ್ರ ತಯಾರಿಕೆಯಲ್ಲಿ 7ನೇಯವರು ಎಂದರು,  ದೇವರ ದಾಸಿಮಯ್ಯ ಜಯಂತ್ಯೋತ್ಸವಕ್ಕೆ ಹಿಂದಿನ ಸಕರ್ಾರವೂ ಕಾರಣವಾಗಿದ್ದು ದಾಸಿಮಯ್ಯನವರ ಹೆಸರಿನಲ್ಲಿ ಅಧ್ಯಯನ ಪೀಠ ರಚಿಸಿ ಕೋಟ್ಯಾಂತರ ರೂಪಾಯಿಗಳನ್ನು ಸಕರ್ಾರ ಬಿಡುಗಡೆ ಮಾಡಿದೆ, ಈಗಿರುವ ಸಕರ್ಾರ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲು ತೀಮರ್ಾನಿಸಿಸುವ ಹಂತದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಸಕರ್ಾರದ ಮೇಲೆ ಒತ್ತಡ ತಂದಿರುವುದು ಗಮನಾರ್ಹ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ದೇವರ ದಾಸಿಮಯ್ಯನವರು ಸಮಾಜ ಸುಧಾರಣೆಗೋಸ್ಕರ ಶ್ರಮಿಸಿದ ಮಹಾನ್ ಪುರುಷ ಎಂದು ಹೇಳಿದರಲ್ಲದೆ, ಸಕರ್ಾರ ಪ್ರಥಮವಾಗಿ ದೇವರ ದಾಸಿಮಯ್ಯ ಕಾರ್ಯಕ್ರಮವನ್ನು ಸಕರ್ಾರದ ಮಟ್ಟದಲ್ಲಿ ಆಚರಿಸುತ್ತಿರುವುದು  ಸಂತಸ ತಂದಿದ್ದು ದೇವರ ದಾಸಿಮಯ್ಯನವರ ಮಾರ್ಗದರ್ಶನ ಇಂದಿನ ಯುವಪೀಳಿಗೆಗೆ ಅವಶ್ಯವಾಗಿದ್ದು ಅವರ ಆದರ್ಶ ತತ್ವಗಳನ್ನು ರೂಡಿಸಿಕೊಂಡಾಗ ಮಾತ್ರ ಇಂತಹ ಜಯಂತ್ಯೋತ್ಸವಗಳಿಗೆ ಅರ್ಥ ಬರುತ್ತದೆ, ಅದೇ ರೀತಿ ಭೋವಿ ಜನಾಂಗದವರಿಗೂ ಸಿದ್ದರಾಮಜಯಂತಿ ಮಾಡಲು ಸಕರ್ಾರ ತೀಮರ್ಾನಿದೆ ಎಂದರು.
ಪುರಸಭಾಧ್ಯಕ್ಷೆ ರೇಣುಕಮ್ಮ ಮಾತನಾಡಿ, ವೃತ್ತಿಯ ಎಳೆಯಲ್ಲಿಯೇ ದೇವರನ್ನು ಕಂಡ ದಾಸಿಮಯ್ಯನವರ ತತ್ವ ಚಿಂತನೆಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.   
ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಮಾತನಾಡಿ, ದೇವರ ದಾಸಿಮಯ್ಯನವರು ಮೇಲು ಕೀಳು ಎಂದು ಭಾವನೆಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾಪುರುಷ, ಕಾಯಕವೇ ಕೈಲಾಸ ಎಂದು ತಿಳಿದು ವಸ್ತ್ರವಿನ್ಯಾಸ ಮಾಡಿ ಜೀವನ ನಡೆಸುತ್ತಿದ್ದ ದೇವರ ದಾಸಿಮಯ್ಯ ಭಕ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದರು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಕೆ.ಟಿ.ತಿಮ್ಮರಾಯಪ್ಪ, ಸಿ.ಎಂ.ಅನಂತಯ್ಯ, ಶಂಕರಶೆಟ್ಟಿ, ಸಿ.ಎಲ್.ನಾರಾಯಣಪ್ಪ, ಹೆಚ್.ಜಿ.ಶಂಕರಯ್ಯ, ರೇವಣ್ಣ, ರಂಗಶೆಟ್ಟಿರವರಿಗೆ ಸನ್ಮಾನಿಸಲಾಯಿತು.
ತಹಶೀಲ್ದಾ ಕಾಮಾಕ್ಷಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ   ಜಿ.ಪಂ.ಸದಸ್ಯೆ ಲೋಹಿತಬಾಯಿ, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಸಿ.ಡಿ.ಚಂದ್ರಶೇಖರ್, ಇಂದಿರಾಪ್ರಕಾಶ್, ಅಶೋಕ್, ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಅಕ್ಷರ ದಾಸೋಹದ ಸಹಾಯಕ ನಿದರ್ೇಶಕ ತಿಮ್ಮರಾಜು, ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ, ಹುಳಿಯಾರು ಅನಂತಯ್ಯ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ತಾಲ್ಲೂಕು ಕಛೇರಿಯಿಂದ ದಾಸಿಮಯ್ಯನವರ ಭಾವಚಿತ್ರ ಹಾಗೂ ನೇಯ್ಗೆಯ ಸಾಕ್ಷ್ಯಚಿತ್ರದೊಂದಿಗೆ ಮಹಿಳಾ ಭಜನಾ ತಂಡ, ಗಾರುಡಿಗ, ಕರಡಿಗೆ, ವಾದ್ಯಗೋಷ್ಠಿಯು ನೆಹರು ಸರ್ಕಲ್ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಂಚರಿಸಿತು.

ಕಿಡಿಗೇಡಿಗಳಿಂದ ಫ್ಲೆಕ್ಸ್ ಹರಿದಿರುವ ಘಟನೆ
ಚಿಕ್ಕನಾಯಕನಹಳ್ಳಿ,ಮಾ.25 : ರಾಜ್ಯಾದ್ಯಂತ ದೇವರ ದಾಸಿಮಯ್ಯನವರ ಜಯಂತ್ಯೋತ್ಸವವನ್ನು ಸಕರ್ಾರದ ವತಿಯಿಂದ ವಿಜೃಂಭಣೆಯಿಂದ ಆಚರಿಸಲು ತೀಮರ್ಾನಿಸಿದ ಹಿನ್ನಲೆಯಲ್ಲಿ ಪಟ್ಟಣದ ದೇವಾಂಗ ಸಮಾಜದವರು ಸಕರ್ಾರದ ತೀಮರ್ಾನಕ್ಕೆ ಖುಷಿ ಪಟ್ಟು ಪ್ಲೆಕ್ಸ್ ಹಾಕಿಸಿ ಸಂತಸ ವ್ಯಕ್ತಪಡಿಸಿದ್ದ ಬ್ಯಾನರ್ಗೆ ಕಿಡಿಗೇಡಿಗಳು ಸಮುದಾಯದ ಮುಖಂಡರ ಭಾವಚಿತ್ರವನ್ನು ಹರಿದಿರುವ ಘಟನೆ ನಡೆದಿದೆ.
ಪಟ್ಟಣದ ಸಿವಿಲ್ ಬಸ್ಟ್ಯಾಂಡ್ನ ಹೊಸಬಾಗಿಲುಮೂಲೆ ಬಳಿ ಈ ಘಟನೆ ನಡೆದಿದ್ದು ಈ ಭಾಗದಲ್ಲಿ ದೇವಾಂಗ ಸಮುದಾಯದವರು ಹಾಕಿದ ಬ್ಯಾನರ್ಗಳನ್ನು ಕಿಡಿಗೇಡಿಗಳು ಹರಿದಿರುವ ಘಟನೆ ನಡೆದಿತ್ತು, ಬುಧವಾರದಂದು ದೇವರ ದಾಸಿಮಯ್ಯನವರ ಜಯಂತಿ ಹಿನ್ನಲೆಯಲ್ಲಿ ದೇವಾಂಗ ಸಮುದಾಯದ ಮುಖಂಡರು ದಾಸಿಮಯ್ಯನವರ ಜಯಂತಿಗೆ ಶುಭಾಷಯ ಕೋರಿ ಬ್ಯಾನರ್ ಹಾಕಿದ್ದರು ಆದರೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಬ್ಯಾನರ್ನ್ನು ಹರಿದ ಪರಿಣಾಮ ಸಮುದಾಯದ ಮುಖಂಡರು ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಳ್ಳಂಬೆಳಗ್ಗೆ ಪೋಲಿಸ್ ಠಾಣೆಗೆ ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಮಾತನಾಡಿ, ಸಕರ್ಾರದ ವತಿಯಿಂದ ದಾಸಿಮಯ್ಯನವರ ಜಯಂತಿ ಆಚರಣೆ ಮಾಡುವಾಗ ಕಿಡಿಗೇಡಿಗಳು ಬ್ಯಾನರ್ನ್ನು ಹರಿದು ಹಾಕಿರುವುದು ಖಂಡನೀಯವಾಗಿದೆ, ಈ ಭಾಗದಲ್ಲಿ ಮೂರು ನಾಲ್ಕು ಬಾರಿ ಕಿಡಿಗೇಡಿಗಳು ಬ್ಯಾನರ್ನ್ನು ಹರಿದಿದ್ದು ಪೋಲಿಸ್ ಇಲಾಖೆ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪುರಸಭಾ ಸದಸ್ಯ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ, ಕಿಡಿಗೇಡಿಗಳ ಬ್ಯಾನರ್ ಹರಿದಿರುವ ಕೃತ್ಯದಿಂದಾಗ ದಾಸಿಮಯ್ಯನವರ ಜಯಂತಿಗೆ ಅಪಮಾನವಾದಂತಾಗಿದೆ, ಈ ಬಗ್ಗೆ ಪೋಲಿಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು ಮಾತನಾಡಿ, ಈ ಭಾಗದಲ್ಲಿ ಹಲವಾರು ಬಾರಿ ಶುಭಾಷಯಕ್ಕೆ ಸಂಬಂಧಪಟ್ಟ ಬ್ಯಾನರ್ಗಳು ಹರಿದಿವೆ, ದಾಸಿಮಯ್ಯನವರ ಜಯಂತಿಯಂದು ಸಮಾಜದ ಮುಖಂಡರು ಹಾಕಿರುವ ಶುಭಾಷಯ ಬ್ಯಾನರ್ನ್ನು ಹರಿದಿರುವ ದುಷ್ಕಮರ್ಿಗಳ ಪತ್ತೆಯನ್ನು ಪೋಲಿಸ್ ಇಲಾಖೆ ಮಾಡಬೇಕಿದೆ ಎಂದ ಅವರು ಬ್ಯಾನರ್ ಹಾಕಿರುವ ಪಕ್ಕದಲ್ಲೇ ಮನೆಯೊಂದರಲ್ಲಿ ಸಿಸಿಟಿವಿ ಇದ್ದು ಇದರ ಮೂಲಕ ಬ್ಯಾನರ್ ಹರಿದ ದುಷ್ಕಮರ್ಿಗಳನ್ನು ಪತ್ತೆಹಚ್ಚಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಮುಖಂಡರುಗಳಾದ ಸಿ.ಎ.ಕೋದಂಡರಾಮಯ್ಯ, ಸಿ.ವಿ.ಪ್ರಕಾಶ್, ಸಿ.ಎಸ್.ಗಿರೀಶ್, ನಟರಾಜು ಹಾಗೂ ದೇವಾಂಗ ಸಮುದಾಯದವರು ಉಪಸ್ಥಿತರಿದ್ದರು.
ಅಬಕಾರಿ ಕಾಯ್ದೆ ಬರುವವರೆಗೆ ನೀರಾ ಇಳಿಸಬೇಡಿ : ಲಿಂಗರಾಜು 
ಚಿಕ್ಕನಾಯಕನಹಳ್ಳಿ,ಮಾ.25 : ಸಕರ್ಾರ ಅಬಕಾರಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ತನಕ ರೈತರು ನೀರಾವನ್ನು ಇಳಿಸದೆ ಏಪ್ರಿಲ್ ತಿಂಗಳವರೆವಿಗೂ ಕಾಯುವಂತೆ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಿಂಗರಾಜು ಮನವಿ ಮಾಡಿದ್ದಾರೆ.
ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿ ಅಬಕಾರಿ ಕಾಯ್ದೆಯನ್ನು ಸಡಿಲಗೊಳಿಸಿದ್ದಾರೆಂದು ಹುಳಿಯಾರಿನಲ್ಲಿ ರೈತರೊಬ್ಬರು  ತೆಂಗಿನ ಮರದಿಂದ ನೀರಾ ಇಳಿಸಿ, ಮಾರುತ್ತಿರುವ ಸಂದರ್ಭದಲ್ಲಿ ಪೋಲಿಸ್ನವರು ಆ ರೈತನನ್ನು ಬಂಧಿಸಿದ್ದಾರೆ, ಇದರ ವಿರುದ್ದ ತಾಲ್ಲೂಕಿನ ರೈತರು ಒಗ್ಗಟ್ಟಾಗಿ ಬಂಧನಕ್ಕೊಳಗಾದ ರೈತನ ಪರವಾಗಿ ನಿಂತಿದ್ದರು ಆದ್ದರಿಂದ ರೈತರು ಅಬಕಾರಿ ಕಾಯ್ದೆಯ ನೀರಾ ಪಾಲಿಸಿ ಬಂದ ನಂತರ ನೀರಾ ಇಳಿಸುವಂತೆ ಸಲಹೆ ನೀಡಿದ ಅವರು, ರಾಜ್ಯದಲ್ಲಿ ತೆಂಗು ಬೆಳೆಗಾರರ ಸಂಘದ 5 ಕಂಪನಿಗಳು ಇದೆ, ತಾಲ್ಲೂಕಿನಲ್ಲಿ ತೆಂಗು ಬೆಳೆಗಾರರ ಕಂಪನಿ ರಚಿಸಲು ಸಿದ್ದತೆ ನಡೆಸುತ್ತಿದ್ದು 6ನೇ ತೆಂಗು ಬೆಳೆಗಾರರ ಸಂಘದ ಕಂಪನಿಯು ಚಿಕ್ಕನಾಯಕನಹಳ್ಳಿಯಲ್ಲಿ ಆಗಲಿದೆ ಇದರಿಂದ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ವಕೀಲ ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿಯೇ 6ನೇ ತೆಂಗು ಬೆಳೆಗಾರರ ಸಂಘದ ಆರಂಭಕ್ಕಾಗಿ ಸಿದ್ದತೆ ನಡೆಯುತ್ತಿದೆ ಎಂದರಲ್ಲದೆ ರೈತರು ನೀರಾ ಇಳಿಸಲು ಸಡಿಲತೆ ನೀಡಿರುವುದಕ್ಕೆ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದರು ಅದೇ ರೀತಿ ನೀರಾ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಗರ್ಹುಕುಂ ಸಾಗುವಳಿದಾರರಿಂದ ಕನರ್ಾಟಕ ಉಚ್ಛ ನ್ಯಾಯಾಲಯಕ್ಕೆ ಅಜರ್ಿ 
ಚಿಕ್ಕನಾಯಕನಹಳ್ಳಿ,ಮಾ.23 : ಬಗರ್ಹುಕುಂ ಸಾಗುವಳಿಯಲ್ಲಿ ಭೂಮಿಯನ್ನು ಉಳುಮೆ ಮಾಡಿದವರಿಗೆ ಸಕರ್ಾರ ಹಕ್ಕುಪತ್ರ ವಿತರಿಸುತ್ತೇವೆಂದು ಸುಳ್ಳು ಆಶ್ವಾಸನೆಗಳನ್ನು ನೀಡಿ ಹಕ್ಕುಪತ್ರ ವಿತರಿಸದೆ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದರಿಂದ 60 ವರ್ಷಗಳಿಂದ ಸಕರ್ಾರಿ ಭೂಮಿಗಳಲ್ಲಿ ಉಳುಮೆ ಮಾಡುತ್ತಿರುವ ರೈತರು ಬೀದಿಗೆ ಬೀಳಲಿದ್ದು ರೈತರ ಉಳಿವಿಗಾಗಿ ಅವರ ರಕ್ಷಣೆ ಮಾಡುವಂತೆ ಒತ್ತಾಯಿಸಿ ಕನರ್ಾಟಕ ಉಚ್ಛ ನ್ಯಾಯಾಲಕ್ಕೆ ಅಜರ್ಿ ಸಲ್ಲಿಸುತ್ತಿದ್ದೇವೆಂದು ಕನರ್ಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಹೇಳಿದರು.
ಭೂಸ್ವಾಧಿನ ಕಾಯ್ದೆಗೆ ಬಹುರಾಷ್ಟ್ರೀಯ ಕಂಪನಿಗಳ ಪರ ತಿದ್ದುಪಡಿಯನ್ನು ವಿರೋಧಿಸಿ, ನೈಸ್ ಹಾಗೂ ಇತರೇ ಕಂಪನಿಗಳ ಭೂ ಅಕ್ರಮಕ್ಕೆ ಶಿಕ್ಷೆಗೆ ಒತ್ತಾಯಿಸಿ, ನಿವೇಶನ ಸಹಿತ ಮನೆಗಾಗಿ, ಶುದ್ದ ಕುಡಿಯುವ ನೀರಿಗಾಗಿ, ಬಗರಹುಕ್ಕುಂ ಗೋಮಳ ಹಾಗೂ ಅರಣ್ಯ ಭೂಮಿ, ಗೋಮಾಳ, ಅರಣ್ಯ ಭೂಮಿ, ಸೇಂದಿವನ, ಹುಲ್ಲುಬನಿ ಕಾವಲ್ ಮುಂತಾದ ಭೂಮಿಯನ್ನೇ ನಂಬಿ ಉಳುಮೆ ಮಾಡುತ್ತಾ ಜೀವನ ಸಾಗಿಸುತ್ತಾ ಬಂದಿರುವ ರೈತರನ್ನು ಒಕ್ಕಲೆಬ್ಬಿಸುವ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪರವಾದ ಭೂ ಮಸೂದೆ ಕಾಯ್ದೆಯನ್ನು ಕನರ್ಾಟಕ ಪ್ರಾಂತ ರೈತ ಸಂಘ ವಿರೋಧಿಸುತ್ತದೆ ಎಂದಿದ್ದಾರೆ.
ಭೂಮಿಯಲ್ಲಿ ವ್ಯವಸಾಯ ಮಾಡುವುದರ ಮೂಲಕ ಜೀವನ ನಡೆಸುತ್ತಿರುತ್ತೇವೆ, ಜಮೀನು ಮಂಜುರಾತಿಗೆ ಅರ್ಹರಾಗಿರುತ್ತೇವೆ, ಆದುದರಿಂದ ನ್ಯಾಯಾಲಯದ ಪ್ರಕರಣದ ನೆಪದಲ್ಲಿ ನಾವು ಸ್ವಾಧೀನದಲ್ಲಿರುವ ಜಮೀನಿನಿಂದ ಹೊರದೂಡಿದರೆ ನಮ್ಮ ಬದುಕು ಬೀದಿಪಾಲಾಗುತ್ತದೆ, ಕನರ್ಾಟಕ ಕಂದಾಯದ ನಿಯಮದ ಪ್ರಕಾರ ಜಮೀನು ಮಂಜೂರು ಮಾಡಲು ನಾವು ಅರ್ಹರಿದ್ದು ಸಕರ್ಾರವು ತನ್ನ ಜಮೀನು ಮಂಜೂರು ಮಾಡವ ಕೆಲಸವನ್ನು ನಿರ್ವಹಿಸದೆ, ನಮ್ಮಂತಹ ಬಡ ರೈತರು ವ್ಯವಸಾಯ ಮಾಡಿಕೊಂಡು ಬದುಕುವವರನ್ನು ಹೊರದೂಡುವುದು ಅನ್ಯಾಯವಾಗುತ್ತದೆ, ಇದು ಭಾರತ ಸಂವಿಧಾನದಲ್ಲಿ ನೀಡಿರುವ ಜೀವನೋಪಾಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ, ಅಧಿಕಾರಿಗಳು ಈ ಮೇಲ್ಕಂಡ ನ್ಯಾಯಾಲಯದ ಅಜರ್ಿ ಸಂಖ್ಯೆ ಮತ್ತು ಇತರೆ ಪ್ರಕರಣಗಳ ನೆಪವೊಡ್ಡಿ ರೈತರನ್ನು ಹೊರದೂಡುವ ಪ್ರಯತ್ನದಲ್ಲಿರುವುದರಿಂದ ರೈತರ ಸುಬಧರ್ಿನಲ್ಲಿರುವ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿರುವ ಸಣ್ಣ ರೈತರು ವ್ಯಾಪಾರಕ್ಕಾಗಿ ಜಮೀನುಗಳನ್ನು ಅತಿಕ್ರಮಿಸಿಕೊಂಡಿರುವುದಿಲ್ಲ ಆದ್ದರಿಂದ ರೈತರ ಜಮೀನುಗಳನ್ನು ತೆರವು ಮಾಡದಂತೆ ಹಾಗೂ ಹಕ್ಕುಪತ್ರ ನೀಡಲು ಸಕರ್ಾರ ಆದೇಶಿಸಬೇಕು ಎಂದು ಕನರ್ಾಟಕ ಉಚ್ಛನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತರುಗಳಾದ ಪರಮೇಶ್, ನಟರಾಜ್ಹೊಸಹಳ್ಳಿ, ಕಂಟಯ್ಯ, ಓಬಳಗಿರಿಯಪ್ಪ, ಶ್ರೀನಿವಾಸ್, ರಾಮದಾಸಪ್ಪ, ಲೋಕೇಶ್, ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Tuesday, March 24, 2015


        ಶಾಸಕರಿಂದ ಸಾರ್ವಜನಿಕ ಕುಂದುಕೊರತೆಗಳ ಸಭೆ
                          
ಚಿಕ್ಕನಾಯಕನಹಳ್ಳಿ,: ತಾಲ್ಲೂಕಿನ ಕುಂದುಕೊರತೆಗಳ ಸಭೆ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು.
ತಾ.ಪಂ.ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಕುಂದುಕೊರತೆಗಳ ಸಭೆಯಲ್ಲಿ ಎಂ.ಎಚ್.ಕಾವಲ್ ಹಾಗೂ ಗೊಲ್ಲರ ಹಟ್ಟಿ ಗ್ರಾಮಗಳಿಗೆ ಸವರ್ೆ ನಂ. 28ರ ಸಕರ್ಾರ ಖರಾಬ್ನಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ ಕೊರೆಸಿದ್ದು ಈ ಸ್ಥಳ ನಮಗೆ ಸೇರಿದೆ ಎಂದು ಅದೇ ಗ್ರಾಮದ ರವಿ ಎನ್ನುವವರು ಗ್ರಾಮ ಪಂಚಾಯ್ತಿಯಿಂದ ಕೊಳವೆ ಬಾವಿಗೆ ಮೋಟಾರು ಅಳವಡಿಸಲು ಹೋದಾಗ ಅಡ್ಡಿಪಡಿಸುತ್ತಿದ್ದಾರೆ ಇದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ, ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಹೆಚ್.ಎಂ.ಕಾವಲು ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರು ಶಾಸಕರಿಗೆ ಮನವಿ ಪತ್ರ ಅಪರ್ಿಸಿದರು. ಸ್ಥಳಕ್ಕೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇದರ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಶಾಸಕರು ಇ.ಓ ರವರಿಗೆ ಸೂಚಿಸಿದರು.
ಬಡಕೆಗುಡ್ಲು ಗ್ರಾಮಕ್ಕೆ ಸ್ವಚ್ಛ ಕುಡಿಯುವ ನೀರಿನ ಘಟಕವನ್ನು ಆರ್.ಓ ಸ್ಥಾಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ದೊಡ್ಡಬಿದರೆ ಗ್ರಾಮಕ್ಕೆ ರಸ್ತೆ, ಡಾಂಬರೀಕರಣಗೊಳಿಸುವಂತೆ ಕೊಳವೆ ಬಾವಿ ಕೊರೆಸಿಕೊಡುವಂತೆ ದೊಡ್ಡಬಿದರೆ ಗ್ರಾಮಸ್ಥರು ಮನವಿ ಮಾಡಿದರು.
ಕುಂದುಕೊರತೆಯ ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ತಹಶೀಲ್ದಾರ್ ಕಾಮಾಕ್ಷಮ್ಮ ಮತ್ತಿತರರು ಉಪಸ್ಥಿತರಿದ್ದರು.

 ಅಕ್ರಮ ಮರಳು ಸಾಗಾಣಿಕೆ ಮಾಡದಂತೆ ಚೆಕ್ಪೋಸ್ಟ್ಗಳು
ಚಿಕ್ಕನಾಯಕನಹಳ್ಳಿ,ಮಾ.24: ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡದಂತೆ ತಡೆಯಲು ತಿಪಟೂರು ತಾಲ್ಲೂಕಿನ ಕೊಡಿಗೆಹಳ್ಳಿ ಸೇರಿದಂತೆ ಒಂಬತ್ತು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ 50 ಟಿಪ್ಪರ್ಲಾರಿ ಹಾಗೂ 29 ಟ್ರಾಕ್ಟರ್ ಮರಳನ್ನು ವಶಪಡಿಸಿಕೊಂಡು ಹನ್ನೊಂದು ಲಕ್ಷ ಅರವತ್ತು ಸಾವಿರ ರೂ ದಂಡ ವಿಧಿಸಲಾಗಿದೆ ಎಂದ ಅವರು, ತಾಲ್ಲೂಕಿನ ಬಾಚಿಹಳ್ಳಿ, ಅಣೆಕಟ್ಟೆ, ಹರೇನಹಳ್ಳಿಗೇಟ್, ತಿಮ್ಮನಹಳ್ಳಿ, ಹುಳಿಯಾರ್ ಗೇಟ್, ಕಣಿವೆಕ್ರಾಸ್, ಬೆಳ್ಳಾರ ಕ್ರಾಸ್, ನಂದಿಹಳ್ಳಿ ರಸ್ತೆ, ಮತಿಘಟ್ಟ ಕೈಮರದ ಬಳಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಪ್ರತಿಯೊಂದು ಚೆಕ್ಪೋಸ್ಟ್ ಬಳಿ ವಿಲೇಜ್ ಅಕೌಂಟೆಂಟ್, ಒಬ್ಬ ಪೋಲಿಸ್, ಒಬ್ಬರು ಹೋಮ್ಗಾಡರ್್ ನಿಯೋಜಿಸಲು ತೀಮರ್ಾನಿಸಲಾಗಿದೆ, ಈಗಾಗಲೇ ಮರಳು ತೆಗೆಯುವುದರಿಂದ ಅಂತರ್ಜಲ ಕುಸಿದಿದ್ದು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವಶಪಡಿಸಿಕೊಂಡಿರುವ ಮರಳನ್ನು ಹರಾಜು ಮಾಡಲು ಲೋಕೋಪಯೋಗಿ ಅಧಿಕಾರಿಗಳಿಗೆ ವಹಿಸಲಾಗಿದ್ದು ಸಕರ್ಾರ ನಿಗಧಿಪಡಿಸಿದ ದರದಲ್ಲಿ ಈ ಮರಳನ್ನು ಮನೆ ನಿಮರ್ಿಸಿ ಕೊಳ್ಳುವವರಿಗೆ ನೀಡಲಾಗುತ್ತಿದೆ ಎಂದರು,  ಇದುವರೆಗೆ ತಾಲ್ಲೂಕಿನ ವಿವಿಧ ಪೋಲಸ್ ಠಾಣಾ ವ್ಯಾಪ್ತಿಯಲ್ಲಿ 100 ಮೊಕದ್ದಮೆಗಳು ಹಾಕಿದ್ದು 2013ರಿಂದ 2015ರವರೆಗೆ 52 ಜನರಿಗೆ ಮರಳು ಪರವಾನಗಿ ನೀಡಲಾಗಿದೆ, 313.40 ಘನ ಮೀಟರ್ ಮರಳನ್ನು ಹರಾಜು ಮಾಡಲಾಗಿದೆ ಎಂದರು.
ರಾಜ್ಯ ಸಕರ್ಾರ ಮರಳು ನೀತಿಯನ್ನು ಜಾರಿಗೆ ತರಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಉಪತಹಶೀಲ್ದಾರ್ ಶಿವಶಂಕರ್ ಉಪಸ್ಥಿತರಿದ್ದರು.

ಹೈನುಗಾರಿಕೆಯ ಸಹಾಯಧನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕರೆ : ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿ,ಮಾ.24: ಕುಟುಂಬವು ಆಥರ್ಿಕವಾಗಿ ಸದೃಡಗೊಳ್ಳಲು ಸಕರ್ಾರ ಹೈನುಗಾರಿಕೆಯ ಮೂಲಕ ನೀಡುತ್ತಿರುವ ಸಹಾಯ ಧನವನ್ನು  ಫಲಾನುಭವಿಗಳು  ಸಮರ್ಪಕವಾಗಿ ಹೈನುಗಾರಿಕೆಗೆ ತೊಡಗಿಸಿಕೊಂಡು ಕುಟುಂಬದ ಆಥರ್ಿಕ ಬಲವರ್ದನೆಗೆ ಹೊತ್ತು ನೀಡಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು. 
   ಇಂದು ಪಟ್ಟಣದ ಪಶು ಆಸ್ವತ್ರೆಯ ಸಭಾಂಗಣದಲ್ಲಿ 14-15 ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಆಥರ್ಿಕ ಸಬಲೀಕರಣಕ್ಕಾಗಿ ಹೈನುಗಾರಿಕೆಗೆ ಪ್ರೋತ್ಸಾಹಿಸಲು ಕುಟುಂಬಕ್ಕೆ ನೀಡುವ 75 ಸಾವಿರ ಸಹಾಯ ಧನ ಚೆಕ್ ವಿತರಿಸಿ ಮಾತನಾಡುವಾಗ ಕುಟುಂಬದಲ್ಲಿ ಹಸುಹೊಂದಿದ್ದರೆ ಆ ಹಸುವಿನಿಂದ ಕುಟುಂಬವೇ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆ ಉಪಯೋಗ ಪಡೆಯಲು 108 ಕ್ಕೂ ಅಧಿಕ ಅಜರ್ಿಗಳು ಬಂದಿದ್ದವು ಆದರೆ ಈ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ 9 ಪರಿಶಿಷ್ಟ ಪಂಗಡಕ್ಕೆ 4  ಒಟ್ಟು 13 ಫಲಾನುಭವಿಗಳನ್ನು ಆಯ್ಕೆ ಮಾಡಲು ಸಕರ್ಾರ ಅನುಮೋದನೆ ನೀಡಿತ್ತು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಯ್ಕೆ ಮಾಡಲಾಗುವುದು. ಈ ಯೋಜನೆಯ ಉದ್ದೇಶ ಇಡೇರಬೇಕಾದರೆ ಫಲಾನುಭವಿಗಳು ಹೈನುಗಾರಿಕೆಗೆ ಉತ್ತೇಜನ ನೀಡಿ ಸಾರ್ಥಕತೆ ಪಡೆದುಕೊಳ್ಳಬೇಕು. ಈಗಾಗಲೇ ಪಶು ಆಸ್ವತ್ರೆಗಳನ್ನು ಹೊಸದಾಗಿ ನಿಮರ್ಾಣ ಮಾಡಲು ಕೈಗೆತ್ತಿಕೊಂಡ  100 ಆಸ್ವತ್ರೆಗಳ ಪೈಕಿ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೋಡೆಕೆರೆ ಹೊಯ್ಸಲಕಟ್ಟೆ, ಬೆಂಚೆಗೇಟ್, ಗಳಿಗೆ 3 ಆಸ್ಟತ್ರೆ ನೀಡಿದ್ದು ತೀರ್ಥಪುರ ಪಶು ಆಸ್ವತ್ರೆಯನ್ನು ಮೇಲ್ದಜರ್ೆಗೇರಿಸಿರುವ  ಸಚಿವರಿಗೂ ಮತ್ತು ಸಕರ್ಾರಕ್ಕೂ ಕೃತಘ್ಞತೆ ಸಲ್ಲಿಸುತ್ತೇನೆ ಎಂದರು. 
     ತಾಲ್ಲೂಕು ಪಶು ಇಲಾಖಾ ಸಹಾಯಕ ನಿದರ್ೇಶಕ ಎಂ.ಪಿ.ಶಶಿಕುಮಾರ್ ಮಾತನಾಡಿ ಪ್ರತಿ ಫಲಾನುಭವಿ ರ್ಯತರಿಗೆ ಹಸು ಸಾಕಾಣಿಕೆಗೆಂದು 75 ಸಾವಿರ ಸಹಾಯ ಧನ ನೀಡಲಾಗುವುದು. ಫಲಾನುಭವಿ ವಂತಿಕೆ 25 ಸಾವಿರ ಸೇರಿ 1 ಲಕ್ಷ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಮೊತ್ತವನ್ನು 2 ಹಂತದಲ್ಲಿ ಬ್ಯಾಂಕ್ ಮೂಲಕ ಹಣವನ್ನು  ವಿತರಿಸಲಾಗುವುದು. ಫಲಾನುಭವಿ ಹೈನುಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಬಂದ ಫಲಾನುಭವಿಗೆ ಉಳಿದ ಕಂತನ್ನು ಅರ್ಧವಾಷರ್ಿಕದಲ್ಲಿ ವಿತರಿಸಲಾಗುವುದು. ಪ್ರತಿ ಹಸುವಿಗೂ ಜೀವ ವಿಮೆ  ನಿವರ್ಹಣೆ ಮತ್ತು ಆಹಾರ ಇವುಗಳು ಕೂಡ ಈ ಯೊಜನೆಯ್ಲಲಿಯೇ ಸೇರಿದ್ದು ಪ್ರತಿ ಲೀಟರ್ ಗೆ ನಿಡುವ 4 ರೂ ಪ್ರೊತ್ಸಾಹ ಧನ ಬಳೆಸಿಕೊಂಡು ಉತ್ತಮವಾಗಿ ಹ್ಯನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದರು.  
  ಪಶು ಇಲಾಖೆಯ ವಿಸ್ತರಣಾಧಿಖಾರಿ ಡಾ||ಕಾಂತರಾಜು ಮಾತನಾಡಿ ಸಕರ್ಾರ ಸದುದ್ದೇಶದಿಂದ ರೈತರು ಆಥರ್ಿಕವಾಗಿ ಸದೃಡರಾಗಲೆಂದೇ ನೀಡುವ ಸಹಾಯದಿಂದ  ಪಡೆದ ಹಸುಗಳ ಮುಂದಿನ ದಿನಗಳಲ್ಲಿ ಅದರ ಉತ್ವನ್ನವಾಗುವಂತೆ ಇರಬೇಕು ಎಂದರಲ್ಲದೆ,  ನೀಡುವ ಸಹಾಯಗಳು ಕೆಲವೇ ದಿನಗಳಲ್ಲಿ ಅದರ ಉಪಯೋಗವಿಲ್ಲದಂತೆ ಆಗುತ್ತಿರುವುದು ಆತಂಕಕಾರಿ ಸಂಗತಿ . ಇಂತಹ ಸದುಪಯೋಗ ಪಡಿಸಿಕೊಂಡು ಸ್ವತ್ತಿನ ಉತ್ವತ್ತಿಯಿಂದ ನಿಮ್ಮ ಆಥರ್ೀಕ ಅಭಿವೃದ್ಧಿ ಹೊಂದಲು ಫಲಾನಿಭವಿಗಳು ಕಾಯರ್ೋನ್ಮುಕರಾಗುವಂತೆ  ಕರೆನೀಡಿದರು.
        ಈ ಸಂದರ್ಭದಲ್ಲಿ  ಮಂಜುನಾಥ್, ರಾಮಚಂದ್ರಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಮತ್ತಿತರರು ಉಪಸ್ಥಿತರಿದ್ದು ಫಲಾನುಭವಿಗಳಿಗೆ 75 ಸಾವಿರ ಸಹಾಯ ಧನದ ಚೆಕ್ನ್ನು ವಿತರಿಸಿದರು.