Tuesday, August 31, 2010

ಕಲಿತವನು ನುರಿತವನು ಕೂಡಿ ಮಾಡಿದ ಕೆಲಸ ಫಲಪ್ರದ
ಚಿಕ್ಕನಾಯಕನಹಳ್ಳಿ,ಆ.31: ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಅನಾವರಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಎಸ್.ಎಂ.ಎಸ್. ಡಿ.ಇಡಿ. ಕಾಲೇಜಿನ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಹಂದನಕೆರೆ ಹೋಬಳಿಯ ಬಂದ್ರೇಹಳ್ಳಿಯ ಸಕರ್ಾರಿ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ಚಿಗುರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿತವನು ಹಾಗೂ ನುರಿತವನು ಕೂಡಿ ಮಾಡಿದ ಕೆಲಸ ಫಲಪ್ರದವಾಗುತ್ತದೆ ಎಂದ ಅವರು, ಕುಟುಂಬದಲ್ಲೂ ಅಷ್ಟೇ ದುಡಿಯುವ ಯುವಕರು ಅನುಭವಿ ಪೋಷಕರ ಮಾರ್ಗದರ್ಶನದಲ್ಲೂ ನಡೆಯುವ ಕುಟುಂಬಗಳು ಏಳ್ಗೆ ಹೊಂದುತ್ತದೆ ಎಂದರು.
ಇಂದಿನ ಯುವಕರು ಗಡಿಯಾರದ ಮುಳ್ಳಿನ ಹಿಂದೆ ಓಡುವುದನ್ನು ಕಲಿತಾದ ಮೇಲೆ ಒತ್ತಡದ ಬದುಕಿಗೆ ಒಳಗಾಗಿದ್ದು ಮದುವೆ ಮುಂಜಿಯಂತಹ ಬಾಂಧವ್ಯ ಬೆಸೆಯುವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸದೆ ಮುಖ ತೋರಿಸಿ ಹೋಗುವ ಪರಿಪಾಟಲಿಗೆ ಒಳಗಾಗಿದ್ದಾರೆ ಎಂದ ಅವರು ಬಂಧುಬಾಂದವ ಸಂಬಂಧಗಳನ್ನು ವೃದ್ದಿಸಿಕೊಳ್ಳುವುದನ್ನು ಈಗಿನಿಂದಲೇ ಪಾಲಕರು ತಮ್ಮ ಮಕ್ಕಳಿಗೆ ಕಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಜಾನಪದ ಕಲಾ ಪ್ರಕಾರಗಳಿಂದ ಸೋಬಾನೆ ಪದ, ಲಾವಣಿಗಳು ಹಾಗೂ ಒಡಪುಗಳ ವೃದ್ದರ ಬಾಯಿಂದ ಮಾಯವಾಗುವ ಮುನ್ನ ಅವುಗಳು ಶಾಶ್ವತವಾಗಿ ಉಳಿಯುವಂತೆ ಮಾಡಲು ಬರೆದಿಡುವ ಅಥವಾ ಧ್ವನಿ ಮುದ್ರಿಸಿಕೊಳ್ಳುವ ಕಾರ್ಯ ನಡೆಯಬೇಕೆಂದರು.
ಹಂದನಕೆರೆ ಐತಿಹಾಸಿಕ ಸ್ಮಾರಕದ 12 ಸೋಪನಾದ ಬಾವಿಗೆ ದೊಡ್ಡ ಇತಿಹಾಸವಿದ್ದು, ಈ ಇತಿಹಾಸ ಇಂದಿಗೂ ಹಿರಿಯರು ಹೇಳುವ ಲಾವಣಿಯಲ್ಲಿ ಅಡಕವಾಗಿದೆ ಎಂದ ಅವರು, 15ನೇ ಶತಮಾನದಲ್ಲಿದ್ದ ನಾಗತಿ ಚನ್ನವ್ವ ಮಕ್ಕಳ ಫಲ ಪಡೆಯಲು ಮಾಡಿಕೊಂಡ ಹರಕೆಯಂತೆ ಈ 12 ಸೋಪನಾದ ಬಾವಿಯನ್ನು ತೋಡಿಸಿರುವುದು ಐತಿಹಾಸಿಕ ಘಟನೆ ಇಂದಿಗೂ ಈ ಬಾವಿ ಚೆನ್ನವ್ವನ ವೃತ್ತಾಂತವನ್ನು ಹೇಳುವ ಸ್ಮಾರಕವಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಗೆರೆ ಗ್ರಾ.ಪಂ. ಅಧ್ಯಕ್ಷೆ ವಿಮಲಮ್ಮ ವಹಸಿದ್ದು, ಉಪಾಧ್ಯಕ್ಷ ಚಂದ್ರನಾಯ್ಕ, ಸದಸ್ಯರಾದ ರಾಜಶೇಖರ್, ನಾಗಭೂಷಣ್, ಇ.ಸಿ.ಓ ತಿಮ್ಮಬೋವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿವಕುಮಾರ್, ಎಸ್.ಡಿ.ಎಂ.ಸಿ ಬಸವಲಿಂಗಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 8ರಿಂದ 14 ವರ್ಷದ ವಿದ್ಯಾಥರ್ಿಗಳು ಕಾವ್ಯವಾಚನ ಮಾಡಿದರು. ಶಾಲೆಯ ಎಚ್.ಎಂ. ಮಂಜುಳಮ್ಮ, ಸ್ವಾಗತಿಸಿದರೆ, ಶಿಕ್ಷಕ ಎ.ಸೋಮಶೇಖರಯ್ಯ ನಿರೂಪಿಸಿದರು.
ದುರಾಲೋಚನೆಯಿಂದ ದೂರವಿದ್ದು ಮುಂದಾಲೋಚನೆಗೆ ಒತ್ತು ನೀಡಿ
ಚಿಕ್ಕನಾಯಕನಹಳ್ಳಿ,ಆ.31: ಶಿಸ್ತುಬದ್ದತೆಯಿಂದ ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಉತ್ತಮ ಫಲಿತಾಂಶ ತರುವ ಮೂಲಕ ಕಾಲೇಜಿನ ಕೀತರ್ಿಯನ್ನು ಬೆಳಗಿಸಬೇಕು ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳಿಂದ ಕಿರಿಯ ವಿದ್ಯಾಥರ್ಿಗಳಿಗೆ ನಡೆದ ಸ್ನೇಹಸಂಗಮ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾಥರ್ಿಗಳು ದುರಭ್ಯಾಸ ಬಿಟ್ಟು ಉತ್ತಮ ನಡವಳಿಕೆಯಿಂದ ಕಾಲೇಜಿಗೆ ಆಗಮಿಸಿ ಗುರುವಿನ ಮಾತನ್ನು ಅಲ್ಲಗಳೆಯದೇ ಅವರ ಮಾತನ್ನು ಶಿರಸಾವಹಿಸಿ ಪಾಲಿಸಿ ಉತ್ತಮ ಫಲಿತಾಂಶ ತರಬೇಕು ಎಂದರಲ್ಲದೆ, ತಮ್ಮ ನಡವಳಿಕೆಯಿಂದ ಎಲ್ಲರ ವಿಶ್ವಾಸಗಳಿಸಬೇಕು ಎಂದ ರು. ಮುಂದೆ ಗುರಿ ಇದ್ದು ಹಿಂದೆ ಗುರು ಇದ್ದರೆ ಎಂತಹ ಕ್ಲಿಷ್ಟಕರವಾದ ಸಂಗತಿಯನ್ನು ಬಗೆಹರಿಸಿ ಯಶಸ್ಸನ್ನು ಸಾಧಿಸಬಹುದು ಎಂದರು.
ಉಪನ್ಯಾಸಕ ಶಿವಲಿಂಗಮೂತರ್ಿ ಮಾತನಾಡಿ ಹಿರಿಯ ವಿದ್ಯಾಥರ್ಿಗಳ ಉತ್ತಮ ನಡವಳಿಕೆಯನ್ನು ಕಿರಿಯ ವಿದ್ಯಾಥರ್ಿಗಳು ಪಾಲಿಸಿ ಎಲ್ಲರ ಮನಸ್ಸನ್ನು ಗೆಲ್ಲಬೇಕು ಮತ್ತು ಹಿರಿಯ ವಿದ್ಯಾಥರ್ಿಗಳು ಕಿರಿಯ ವಿದ್ಯಾಥರ್ಿಗಳಿಗೆ ಯಾವುದೇ ಅಹಿತಕರ ಘಟನೆ ನಡೆಸಿ ಮನಸ್ಸನ್ನು ನೋಯಿಸದೆ ಸ್ನೇಹ ಸಹಬಾಳ್ವೆಯಿಂದ ಬಾಳಲು ತಿಳಿಸಿದರಲ್ಲದೆ ಪ್ರಾರಂಭದಲ್ಲಿ ಪ್ರತಿ ವಿಷಯವೂ ಕಷ್ಟ ಆದರೆ ಅನುಭವದ ನಂತರ ಎಲ್ಲ ವಿಷಯವೂ ಸುಲಭವೆಂದು ತಿಳಿಸಿದರು.
ಉಪನ್ಯಾಸಕಿ ರಂಜಿತ ಮಾತನಾಡಿ ಕಿರಿಯ ವಿದ್ಯಾಥರ್ಿಗಳು ತಮ್ಮ ಹಿಂದಿನ ಜೀವನದ ಅಹಿತಕರ ಘಟನೆ, ಕೆಟ್ಟ ನಡತೆ ಮತ್ತು ಬೇಜವಬ್ದಾರಿತನದಂತಹ ದೂರಾಲೋಚನೆಗಳನ್ನು ಮರೆತು ಉತ್ತಮ ನಡತೆಯಿಂದ ಹೊಸ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ಉತ್ತಮ ಪಲಿತಾಂಶ ತರಲು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಚಂದ್ರಶೇಖರ್, ಸುರೇಶ್, ಪ್ರಸನ್ನಕುಮಾರ್, ಮಹೇಶ್, ದರ್ಶನ, ವೇದಮೂತರ್ಿ, ಲಕ್ಷೀಶ, ಶಶಿಧರ್, ನಾಗಭೂಷಣ್, ಚಿರಂಜೀವಿ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿಗಳಾದ ಲಕ್ಷ್ಮೀ ಸ್ವಾಗತಿಸಿದರೆ, ಗೌಸ್ಪಾಷ ನಿರೂಪಿಸಿ, ರಂಗಸ್ವಾಮಿ ವಂದಿಸಿದರು.

Monday, August 30, 2010

ತಾಲೂಕಿನ 48 ಶಾಲೆಗಳು ಮುಚ್ಚುವ ಅಂಚಿನಲ್ಲಿವೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಆ.30: ಉಳ್ಳವರು ಎಲ್ಲೊ ಹೋಗಿ ಓದುತ್ತಾರೆ ಬಡವರಿಗಾಗಿ ಇರುವ ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರು ಬದ್ದತೆಯಿಂದ ಬೋಧನೆ ಮಾಡಿ, ಕಾನ್ವೆಂಟ್ ಮಕ್ಕಳಿಗಿಂತ ಪ್ರಬುದ್ದರನ್ನಾಗಿ ಮಾಡಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ರೇವಣಪ್ಪನ ಮಠ ಸಕರ್ಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶಾಲೆಗೆ ಸ್ಥಳದಾನ ಮಾಡಿದ ದಂಪತಿಗಳ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾದ ಗುಣಮಟ್ಟದ ಶಿಕ್ಷಣ ನೀಡುವುದರ ಜೊತಗೆ ವಿದ್ಯಾಥರ್ಿಗಳನ್ನು ಶಾಲೆಗೆ ಕರೆತರಲು ಶ್ರಮಿಸಬೇಕು ಎಂದ ರಲ್ಲದೆ, ತಾಲೂಕಿನ 48 ಸಕರ್ಾರಿ ಶಾಲೆಗಳು ಮುಚ್ಚುವ ಅಂಚಿನಲ್ಲಿದ್ದು ಶಿಕ್ಷಕರು ಮಕ್ಕಳ ಹಾಜರಾತಿಯ ಬಗ್ಗೆ ಗಮನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದರು. ಸಕರ್ಾರಿ ಶಾಲೆಗಳಿಗೆ ವಿದ್ಯಾಥರ್ಿಗಳನ್ನು ಕರೆತರಲು ಸಕರ್ಾರ ಹೆಚ್ಚು ಉತ್ತೇಜನ ನೀಡುತ್ತಿದೆ, ಅದಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ವಿದ್ಯಾಥರ್ಿಗಳನ್ನು ಶಾಲೆಗೆ ನಿರಂತರವಾಗಿ ಬರುವಂತೆ ಪ್ರೇರೆಪಿಸುತ್ತಿದೆ, ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಶಿಕ್ಷಕರು ಜವಬ್ದಾರ ಹೊರಬೇಕೆಂದರು.
ವಾತರ್ಾ ಇಲಾಖೆ ನಿವೃತ್ತ ಜಂಟಿ ನಿದರ್ೇಶಕ ಸಿ.ಕೆ.ಪರುಶುರಾಮಯ್ಯ ಮಾತನಾಡಿ ಶಾಲೆಗಳಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು, ಗುರು ಪ್ರಾರಂಭದಿಂದ ಅಂತ್ಯದವರೆವಿಗೂ ಅಡಿಪಾಯ ಹಾಕುವ ಒಬ್ಬ ಶಿಲ್ಪಿಯಂತೆ ಎಂದರಲ್ಲದೆ, ವಿದ್ಯಾಥರ್ಿಯ ಮನಸ್ಸನ್ನು ಅರಿತು ವಿದ್ಯೆ ಬೋದಿಸಿದಾಗ ಅವನ ಮನಸ್ಸಿನಲ್ಲಿ ಶಾಂತಿ ನೆಲಸಿ ವಿದ್ಯೆ ಕಲಿಯಲು ಮುಂದಾಗುತ್ತಾನೆ ಎಂದರು, ವಿದ್ಯಾಥರ್ಿಗಳನ್ನ ಪರಿಪೂರ್ಣತೆಗೆ ಕೊಂಡೊಯ್ಯುವಾಗ ಗುರುವು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕೆಂದರು.
ತುಮಕೂರು ಡಿ.ಡಿ.ಪಿ.ಐ.ಕಛೇರಿಯ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 12ಕ್ಕಿಂತ ಕಡಿಮೆ ವಿದ್ಯಾಥರ್ಿಗಳಿರುವ ಸಕರ್ಾರಿ ಶಾಲೆಗಳು 412 ಇದ್ದು, ಇವುಗಳ ಸ್ಥಿತಿ ಸಂಕಷ್ಟದಲ್ಲಿದೆ ಅಲ್ಲಿನ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ.ಸದಸ್ಯರು ದಾಖಲಾತಿ ಮತ್ತು ಹಾಜರಾತಿಗಳ ಹೆಚ್ಚು ಗಮನ ನೀಡಬೇಕಾಗುತ್ತದೆ ಎಂದರಲ್ಲದೆ, ನಗರೀಕರಣ ಮತ್ತು ಇಂಗ್ಲೀಷೀಕರಣದಿಂದಾಗಿ ಸಕರ್ಾರಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ ಶಿಕ್ಷಕರು ತಮಗೆ ನೀಡುತ್ತಿರುವ ಸಾಮಥ್ರ್ಯ ಆಧಾರಿತ ತರಬೇತಿಗಳನ್ನು ಶಾಲೆಗಳಲ್ಲಿ ಬಳಸಿಕೊಂಡು ಬೋಧಿಸಿದರೆ ವಿದ್ಯಾಥರ್ಿಗಳ ಕಲಿಕೆ ಉತ್ತಮಗೊಂಡು ಸಕರ್ಾರಿ ಶಾಲೆಗಳ ಕಡೆ ಪೋಷಕರು ಮುಖಮಾಡತ್ತಾರೆ ಎಂದರು. ಶಿಕ್ಷಣ ಹಕ್ಕು ಕಾಯಿದೆ ಪ್ರಖರವಾಗಿದ್ದು ವಿದ್ಯಾಥರ್ಿಗಳು ತಮ್ಮ ವಿದ್ಯಾರ್ಜನೆಯ ನ್ಯೂನತೆಗಳನ್ನು ನ್ಯಾಯಾಲಯಗಳಲ್ಲೂ ಪ್ರಶ್ನಿಸಬಹುದಾದಂತಹ ದಿನಗಳು ದೂರವಿಲ್ಲವೆಂದರು.
ಕಾರ್ಯಕ್ರಮದಲ್ಲಿ ಸ್ಥಳದಾನಿಗಳದ ಚೌಡಿಕೆ ಕರಿಯಪ್ಪ ಹಾಗೂ ಸಣ್ಣಮುದ್ದಮ್ಮನವರ ಭಾವಚಿತ್ರಗಳನ್ನು ಇ.ಎನ್.ಟಿ.ತಜ್ಞ ಡಾ.ಸಿ.ಗುರುಮೂತರ್ಿ ಹಾಗೂ ಸಿ.ಎಚ್.ಹನುಮಂತಯ್ಯ ಅನಾವರಣಗೊಳಿಸಿದರು. ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಶಾಲೆಗೆ ಸ್ಥಳದಾನ ಮಾಡಿದ ಸಿ.ಕೆ.ಪರಶುರಾಮಯ್ಯ, ಸಿ.ಆರ್.ನಾಗರತ್ನ ದಂಪತಿಗಳನ್ನು ಶಾಸಕರು ಸನ್ಮಾನಿಸದರು.
ಸಮಾರಂಭದಲ್ಲಿ ಸ್ವಾತಂತ್ರ ಹೋರಾಟಗಾರ ಮುರುಡಯ್ಯ, ಪುರಸಬಾಧ್ಯಕ್ಷ ರಾಜಣ್ಣ, ಬಿ.ಇ.ಓ ಸಾ.ಚಿ.ನಾಗೇಶ್, ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪುರಸಭಾ ಸದಸ್ಯರಾದ ಸುಮಿತ್ರಾ ಕಣ್ಣಯ್ಯ, ರೇಣುಕಾಗುರುಮೂತರ್ಿ, ಸಿ.ಡಿ.ಚಂದ್ರಶೇಖರ್, ಸಿ.ಬಸವರಾಜು, ಸಿ.ಎಂ.ರಂಗಸ್ವಾಮಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿ.ಜಿ.ರೇವಣ್ಣ, ಮಾಜಿ ಪುರಸಭಾ ಅಧ್ಯಕ್ಷ ಕೆ.ರಾಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಶೀಲ ರಾಮಸ್ವಾಮಿ ಪ್ರಾಥರ್ಿಸಿದರೆ, ಮುಖ್ಯ ಶಿಕ್ಷಕಿ ತಿಲೋತ್ತಮೆ ಸ್ವಾಗತಿಸಿ, ಉಪನ್ಯಾಸಕ ಕಣ್ಣಯ್ಯ ನಿರೂಪಿಸಿದರು, ಶಿಕ್ಷಕ ಬಸವರಾಜು ವಂದಿಸಿದರು.

Sunday, August 29, 2010

Friday, August 27, 2010

ಬಂದ್ರೇಹಳ್ಳಿಯಲ್ಲಿ ಚಿಗುರು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಆ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 8ರಿಂದ 14 ವರ್ಷದ ಶಾಲಾ ಮಕ್ಕಳಿಗೆ ಚಿಗುರು ಕಾರ್ಯಕ್ರಮ ಇದೇ 28(ಇಂದು)ಶನಿವಾರ ಬೆಳಿಗ್ಗೆ 11-30ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ತಾಲೂಕಿನ ಬಂದ್ರೇಹಳ್ಳಿ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಮಲ್ಲಿಗೆರೆ ಗ್ರಾ.ಪಂ.ಅಧ್ಯಕ್ಷೆ ವಿಮಲಮ್ಮವೀರಭದ್ರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯೆ ಜಾನಕಮ್ಮ ರಾಮಚಂದ್ರಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಡಿ.ಇಡಿ.ಕಾಲೇಜ್ನ ಪ್ರಾಂಶುಪಾಲ ರಾಜ್ಕುಮಾರ್, ಮಲ್ಲಿಗೆರೆ ಗ್ರಾ.ಪಂ.ಉಪಾಧ್ಯಕ್ಷ ಚಂದ್ರನಾಯ್ಕ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ಗ್ರಾ.ಪಂ.ಸದಸ್ಯ ರಾಜಶೇಖರ, ಮಾಜಿ ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಮಲ್ಲಿಕಾಜರ್ುನಯ್ಯ ಉಪಸ್ಥಿತರಿದ್ದು ಶಿಕ್ಷಕ ಎ.ಸೋಮಶೇಖರಯ್ಯ ಕಾರ್ಯಕ್ರಮ ಭಾಗವಹಿಸಲಿದ್ದಾರೆ.
ಸಾಧಕನ ದೇಹಕ್ಕಷ್ಟೇ ಸಾವು, ಸಾಧನೆಗಲ್ಲ: ಗೀತಾಚಾರ್ಯ
ಚಿಕ್ಕನಾಯಕನಹಳ್ಳಿ,ಆ.27: ವಿಶ್ವದಲ್ಲಿ ಆಗಿಹೋಗಿರುವ ಮಹಾತ್ಮರೆಲ್ಲಾ ತಮ್ಮ ಸಾಧನೆಯಿಂದ ಮೇಲೆ ಬಂದವರು ಹಾಗೂ ಅವರು ಮಾಡಿರುವ ಕೆಲಸಗಳಿಂದ ಇಂದಿಗೂ ಅವರು ನಮ್ಮ ನಡುವೆ ಇದ್ದಾರೆ ಇಂತಹ ಮಹಾತ್ಮರ ಆದರ್ಶಗಳು ಇಂದಿನ ಯುವಕರಿಗೆ ದಾರಿದೀಪವಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಚಂದ್ರಮೋಹನ್ ಅಭಿಪ್ರಾಯಪಟ್ಟರು.
ಪಟ್ಟಣದ ನವೊದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿ.ಎಂ.ಶ್ರೀ ಪ್ರತಿಷ್ಠಾನ ವತಿಯಿಂದ ನಡೆದ ಎಂ.ವೀ.ಸಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂ.ವೀ.ಸಿ, ಪು.ತೀ.ನ ರವರನ್ನು ನಾವು ನೋಡುತ್ತ ಬೆಳೆದವರು ಅಂತವರ ಆದರ್ಶವನ್ನು ನಾವು ಪಾಲಿಸುತ್ತಿದ್ದೇವೆ, ಅವರ ಆದರ್ಶವನ್ನು ನಿಮ್ಮೆಲ್ಲರಿಗೂ ತಿಳಿಸಲು ಪ್ರಯತ್ನಿಸುತ್ತೇದ್ದೇವೆ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಅವರು ಸಾಕಷ್ಟು ಕೆಲಸಮಾಡಿದ್ದಾರೆ ಎಂದರಲ್ಲದೆ, ಭಾಷೆಯ ಭಾಗವಾಗಿ ಸಾಹಿತ್ಯವೂ ಇರುತ್ತದೆ, ಸಾಹಿತ್ಯ ಗ್ರಂಥಗಳನ್ನು ವೃದ್ದಿಸುವ ಮೂಲಕ ಭಾಷೆಯ ಬೆಳವಣಿಗೆಯನ್ನು ವಿಸ್ತರಿಸಬೇಕು ಎಂದರು.
ಲೇಖಕ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನದ ಕಾರ್ಯದಶರ್ಿ ಎಸ್.ವಿ.ಶ್ರೀನಿವಾಸರಾವ್ ಮಾತನಾಡಿ ಎಂ.ವಿ.ಸೀರವರ ಬರವಣಿಗೆಯನ್ನು ಆಧಾರವಾಗಿಟ್ಟುಕೊಂಡು ಲಕ್ಷಾಂತರ ಜನ ಲೇಖನ ಬರೆಯುವುದಕ್ಕೆ ಸ್ಪೂತರ್ಿಗೊಂಡಿದ್ದಾರೆ ಮತ್ತು ಯಾವುದೇ ವಿಷಯವನ್ನು ಪ್ರೀತಿಯಿಂದ ಸಲಹಿ ಪ್ರೋತ್ಸಾಹಿಸಿದರೆ ಅದು ಕಾಣದ ದಾರಿ ತೋರಿಸುತ್ತದೆ ಎಂದರು. ಸಾಹಿತ್ಯವನ್ನು ಬೆಳಸಬೇಕಾದರೆ ಅದರ ಹಿಂದಿನ ಮರ್ಮವನ್ನು ಹುಡುಕಿ ತೆಗೆದು ಸಾಹಿತ್ಯವನ್ನು ಕಾಣಬೇಕು ಎಂದ ಅವರು ಎಂ.ವಿ.ಸೀ ರವರ ಮಕ್ಕಳ ಸಾಹಿತ್ಯದ ಬಗ್ಗೆ ಪುಸ್ತಕ ರಚಿಸುತ್ತಿದ್ದೇವೆ ಎಂದರು.
ಡಾ.ನಾ.ಗೀತಾಚಾರ್ಯ ಮಾತನಾಡಿ ಎಂ.ವಿ.ಸೀತರಾಮಯ್ಯನವರು ಹಸ್ತಪ್ರತಿ ವಿಭಾಗದಲ್ಲಿ ಹೆಚ್ಚು ಕೆಲಸ ಮಾಡಿದವರು, ಅವರು ಸಂಗ್ರಹಿಸಿ ಸಂಸ್ಕರಿಸುವ ಮೂಲಕ ವಿನಾಶದಲ್ಲಿದ್ದ ಪ್ರಕಾರದ ಬಗ್ಗೆ ಹೆಚ್ಚು ಗಮನ ನೀಡಿ ಆ ಬಗ್ಗೆ ಸಂಶೋಧನೆ ನಡೆಸಿದ ಕೆಲವೇ ಸಂಶೋಧಕರಲ್ಲಿ ಎಂ.ವಿ.ಸೀ.ಅವರು ಒಬ್ಬರು, ಇವರು ಮೈಸೂರಿನವರಾದರೂ ಅವರ ಪೂವರ್ಿಕರ ಸ್ಥಳ ಚಿಕ್ಕನಾಯಕನಹಳ್ಳಿ. ಇದೇ ಕಾರಣಕ್ಕೆ ಅವರ ಜನ್ಮ ಶತಮಾನೋತ್ಸವದ ಕೊನೆಯ ಕಾರ್ಯಕ್ರಮವನ್ನು ಈ ಊರಿನಲ್ಲಿ ಹಮ್ಮಿಕೊಂಡಿದ್ದು, ಸೆ.9ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಕುವೆಂಪು, ಎಂ.ವೀ.ಸಿ ರಂತಹ ಕನ್ನಡ ಸಾಹಿತ್ಯ ಲೋಕದ ರತ್ನತ್ರಯರನ್ನು ಎಂದಿಗೂ ಮರೆಯಬಾರದು ಮತ್ತು ಇಂತಹ ಮಹನ್ ವ್ಯಕ್ತಿಗಳ ಆದರ್ಶವನ್ನು ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂಬ ಆಶಯದಿಂದ ನಮ್ಮ ಕಾಲೇಜನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.



Wednesday, August 25, 2010


ಕ.ಸಾ.ಪ.ವತಿಯಿಂದ ನವೋದಯ ಕಾಲೇಜ್ನಲ್ಲಿ ಎಂ.ವಿ.ಸೀ.ಜನ್ಮಶತಮಾನೋತ್ಸವ
ಚಿಕ್ಕನಾಯಕನಹಳ್ಳಿ,ಆ.25: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿ.ಎಂ.ಶ್ರೀ ಪ್ರತಿಷ್ಟಾನ ಸಹಯೋಗ ವತಿಯಿಂದ ಎಂ.ವಿ.ಸೀ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಇದೇ 27ರ ಶುಕ್ರವಾರ ಏರ್ಪಡಿಸಲಾಗಿದೆ ಎಂದು ತಾ.ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜರಾವ್ ತಿಳಿಸಿದ್ದಾರೆ.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಎಸ್.ವಿ ಶ್ರೀನಿವಾಸರಾವ್ , ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕನ್ನಡದ ಪ್ರಗತಿಪರ ಚಿಂತಕ ರಾ.ನಂ.ಚಂದ್ರಶೇಖರ್, ಬಿ.ಎಂ.ಶ್ರೀ ಪ್ರತಿಷ್ಠಾನ ಖಜಾಂಚಿ ಎಸ್.ಟಿ.ರಾಧಕೃಷ್ಣ ಎಂ.ವಿ.ಸೀ. ಬದುಕು ಬರಹ ಕುರಿತು ಮಾತನಾಡಲಿದ್ದಾರೆ ಎಂದು ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ.

ಚಿಕ್ಕನಾಯಕನಹಳ್ಳಿ,ಆ.25: ಮಕ್ಕಳಲ್ಲಿ ಸಹಕಾರ, ಸದೃಡಮನಸ್ಸು, ಸೃಜನಾಶೀಲತೆ ಸದೃಡದೇಹ ಉತ್ತಮ ತೀಮರ್ಾನದ ಮನೋಭಾವ ಬೆಳೆಸುವಲ್ಲಿ ಕ್ರೀಡೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ತಾಲೂಕಿನ ಹಂದನಕೆರೆ ಹೋಬಳಿ ಪ್ರಾಥಮಿಕ ಪಾಠಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಥರ್ಿಗಳನ್ನು ಕುರಿತು ಪ್ರತಿಜ್ಞಾವಿಧಿ ಬೋದಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಶಿಕ್ಷಕರು ಆತ್ಮಸ್ಥೈರ್ಯ ತುಂಬಿ ಕ್ರೀಡೆಗೆ ಪ್ರೋತ್ಸಾಹಿಸಿದರೆ ಅವರ ಪ್ರತಿಭೆ ಹೊರಗೆ ಬಂದು ಉತ್ತಮ ಕ್ರೀಡಾಪಟುವಾಗಿ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಾರೆ ಎಂದರು.
ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಬಸವರಾಜು, ಉಷಾ ಕೃಷ್ಣಮೂತರ್ಿ, ಮಹೇಶ್, ಸದಸ್ಯರಾದ ಉದಯ್ಕುಮಾರ್, ಶಿವಕುಮಾರ್, ಮುಖ್ಯ ಶಿಕ್ಷಕ ಮಹಾಲಿಂಗಯ್ಯ, ನೇಮಿಚಂದ್ರ, ಎಚ್.ಬಸವರಾಜು, ನರಸಿಂಹಮೂತರ್ಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಿ.ಎಮ್.ದೇವರಾಜಯ್ಯ ಸ್ವಾಗತಿಸಿದರೆ, ಬಿ.ಎಸ್.ಶಿವಕುಮಾರ್ ನಿರೂಪಿಸಿ, ಕೆ.ಬಿ.ಶಿವಣ್ಣ ವಂದಿಸಿದರು.

ಸಂಘದ ಬೆಳವಣಿಗೆಗೆ ಸಹಕಾರ ಮುಖ್ಯವೇ ಹೊರತು ಪ್ರತಿಷ್ಠೆಯಲ್ಲ
ಚಿಕ್ಕನಾಯಕನಹಳ್ಳಿ,ಆ.25: ಸಣ್ಣ ಪುಟ್ಟ ವಿಚಾರಗಳಿಗೆ ಕಚ್ಚಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಕನಕ ಯುವ ಕ್ಷೇಮಾಭಿವೃದ್ದಿ ಸಂಘವನ್ನು ಸಂಘಟಿಸಿಕೊಂಡು ಮತ್ತು ಅಭಿವೃದ್ದಿಪಡಿಸಿಕೊಂಡು ಹೋಗಬೇಕೆಂದು ಮಸಾಲ್ತಿಗುಡ್ಲು ಗ್ರಾಮದ ಹಿರಿಯರಾದ ಲಕ್ಷ್ಮಜ್ಜಿ ಹೇಳಿದರು.
ಪಟ್ಟಣದ ಮಸಾಲ್ತಿಗುಡ್ಲು ಗ್ರಾಮದಲ್ಲಿ ನಡೆದ ಕನಕ ಯುವ ಕ್ಷೇಮಾಭಿವೃದ್ದಿ ನೂತನ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂಘದಲ್ಲಿ ನನ್ನಿಂದಲೇ ಎಲ್ಲಾ ಎಂಬ ಮನೋಭಾವವನ್ನು ಬಿಟ್ಟು ನಮ್ಮಿಂದ ಎಂಬ ಮನಭಾವವನ್ನು ಬೆಳಸಿಕೊಳ್ಳಬೇಕೆಂದರು.
ಹಿರಿಯರಾದ ಯೋಗಲಿಂಗಯ್ಯ ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಒಗ್ಗೂಡಿದರೆ ಸಂಘ ಅಭಿವೃದ್ದಿಯಾಗುತ್ತದೆ ಮತ್ತು ನಮ್ಮ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಗ್ರಾಮವನ್ನು ಅಭಿವೃದ್ದಿಗೊಳಿಸಿ ಬಡವಿದ್ಯಾಥರ್ಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಮಾಡಬೇಕು ಎಂದರು.
ಸಮಾರಂಭದಲ್ಲಿ 75ವರ್ಷಕ್ಕೂ ಮೇಲ್ಪಟ್ಟ ನಾಗರೀಕರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬೆಟ್ಟಯ್ಯ, ಶಿವಪ್ಪ, ಲಕ್ಷ್ಮಯ್ಯ, ಯೋಗಲಿಂಗಸ್ವಾಮಿ, ಹನುಮಂತಪ್ಪ, ತೇರಪ್ಪ ಕರಿಯಪ್ಪ, ನಿಂಗಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಶಿಧರಮೂತರ್ಿ ಪ್ರಾಥರ್ಿಸಿದರೆ, ಮೋಹನ್ಕುಮಾರ್ ಸ್ವಾಗತಿಸಿ, ಸಿ.ಬಿ.ಲೋಕೇಶ್ ನಿರೂಪಿಸಿ, ರಂಗನಾಥ್ ವಂದಿಸಿದರು.
ಕಳ್ಳತನದ ಆರೋಪಿಗೆ ಶಿಕ್ಷೆ
ಚಿಕ್ಕನಾಯಕನಹಳ್ಳಿ,ಆ.25: ಕಳ್ಳತನದ ಆರೋಪಿತರು ಎಸಗಿರುವ ಅಪರಾಧವು ಸಾಬೀತಾಗಿದ್ದು ನ್ಯಾಯಾಧೀಶಾರದ ಶೀಲಾ ಆರೋಪಿಗೆ ಒಂದು ತಿಂಗಳು ಸಾಧಾರಣ ಕಾರಾಗೃಹ ವಾಸ ಹಾಗೂ 1000ರೂ. ದಂಡವನ್ನು ಪಾವತಿಸಲು ತಪ್ಪಿದ್ದಲ್ಲಿ 7ದಿನ ಸಾಧಾರಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ತೀಪರ್ು ನೀಡಿದ್ದಾರೆ.
2006ರ ಏಪ್ರಿಲ್ 16ರಂದು ವಿದ್ಯಾನಗರದ 2ನೇ ಕ್ರಾಸ್ನಲ್ಲಿರುವ ಸಣ್ಣನಿಂಗಯ್ಯರ ಮನೆಗೆ ಹಾಕಿದ್ದ ಬೀಗವನ್ನು ಆರೋಪಿಗಳಾದ ಕುಮಾರ ಮತ್ತು ವರದರಾಜು ಎಂಬುವರು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯರಲ್ಲಿನ ಸುಮಾರು 20ಸಾವಿರ ಬೆಲೆಯ ಚಿನ್ನದ ವಡವೆಗಳು ಹಾಗೂ ಕ್ಯಾಮರ ಕಳವು ಮಾಡಿಕೊಂಡು ಹೋಗಿದ್ದರೆಂದು ಎಂಬ ಆರೋಪ ಸಾಬೀತಾಗಿರುತ್ತದೆ. ಸಕರ್ಾರದ ಪರವಾಗಿ ಆರ್.ಟಿ.ಆಶಾ ವಾದ ಮಂಡಿಸಿದ್ದರು.


Tuesday, August 24, 2010

ಅರಸು; ಪ್ರಧಾನಿ ಹುದ್ದೆಯನ್ನು ನಿಭಾಯಿಸುವಂತಹ ವ್ಯಕ್ತಿತ್ವಹೊಂದಿದ್ದವರು: ಮುದ್ದು
ಚಿಕ್ಕನಾಯಕನಹಳ್ಳಿ,ಆ.24: ದೇಶದ ಪ್ರಧಾನಿ ಹುದ್ದೆಯನ್ನು ನಿಭಾಯಿಸುವ ಎದೆಗಾರಿಕೆ, ಸಮರ್ಥ ನಾಯಕತ್ವ ಹಾಗೂ ವಿಚಿಕ್ಷ್ಣದೂರ ದೃಷ್ಟಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ರವರಿಗಿತ್ತು ಎಂದು ಬಿ.ಸಿ.ಎಂ ಇಲಾಖೆಯ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಉಡೇವು ಬೀದಿಯಲ್ಲಿ ದೇವರಾಜ್ ಅರಸ್ರವರ 95ನೇ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಹಾಗೂ ಹಿಂದುಳಿದ ವರ್ಗಗಳಲ್ಲಿನ ಪ್ರತಿಭೆಗಳನ್ನು ಹುಡುಕಿ ತೆಗೆದು ಅವರನ್ನೆಲ್ಲಾ ಮುಖ್ಯವಾಹಿನಿಗೆ ತರುವ ಕೆಲಸವನ್ನು ಅವರು ಆ ಸಮಯದಲ್ಲಿ ಮಾಡದೇ ಹೊಗಿದ್ದರೆ ಇಂದಿಗೂ ಹಿಂದುಳಿದ ವರ್ಗಗಳು ಸಮಾಜದಲ್ಲಿನ ನಿರ್ಲಕ್ಷತೆಯ ಜನರಾಗಿ ಉಳಿಯಬೇಕಾಗಿತ್ತು ಎಂದರು.
ಬಡವರ ಪರವಾಗಿ ಅವರು ತೆಗೆದುಕೊಂಡ ಎರಡು ದಿಟ್ಟವಾದ ನಿಧರ್ಾರಗಳೆಂದರೆ ಒಂದು 'ಉಳುವವನೇ ಭೂಮಿಯ ಒಡೆಯ' ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದದ್ದು, ಮತ್ತೊಂದು ಹಾವನೂರು ವರದಿಗೆ ಆದ್ಯತೆ ನೀಡಿದ್ದು ಎಂದರಲ್ಲದೆ ನೀರಾವರಿಯ ಬಗ್ಗೆಯೂ ಅವರು ನಿಷ್ಣಾತರಾಗಿದ್ದರಿಂದಲೇ ಘಟಪ್ರಭಾ ಯೋಜನೆ ಸಾಕಾರಗೊಳ್ಳಲು ಕಾರಣವಾಯಿತು ಎಂದರು.
ರಾಜಕೀಯವಾಗಿ ಅವರು ಬೆಳೆಸಿದ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು ಅರಸು ರವರ ಹೆಸರನ್ನು ಚಿರಸ್ಥಾಯಿಗೊಳಿಸಿವೆ ಎಂದರಲ್ಲದೆ, ರಾಜಕೀಯವಾಗಿ ಅವರು ಹುಟ್ಟುಹಾಕಿದ ಬೀಜಗಳು ಇಂದು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರಸು ಸಂಘದ ಅಧ್ಯಕ್ಷ ಶ್ರೀನಿವಾಸರಾಜ ಅರಸ್ ಮಾತನಾಡಿ ದೇವರಾಜ್ ಅರಸ್ರವರು ಹಿಂದುಳಿದ ವರ್ಗಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂಬ ವಿಶಾಲ ದೃಷ್ಟಿಯನ್ನು ಮೈಗೂಡಿಸಿಕೊಂಡಿದ್ದಾರೆ ವಿನಹ, ತನ್ನ ಜಾತಿಯೊಂದೇ ಮೇಲೇರಬೇಕೆಂಬ ಸಂಕುಚಿತ ಮನಸ್ಸಿನವರಾಗಿರಲಿಲ್ಲ ಎಂದರು.
ನಿಷ್ಠಾರವಾದಿಯಾದ ಅರಸುರವರು ತಮ್ಮ ಸ್ವಾರ್ಥಕ್ಕಾಗಿ ಎಂದೂ ತಮ್ಮ ತತ್ವ ಆದರ್ಶಗಳನ್ನು ಬಲಿಕೊಟ್ಟವರಲ್ಲ ಎಂದರಲ್ಲದೆ ಕೆಳಸ್ತರದವರನ್ನು ಮೆಲಕ್ಕೆತ್ತುವ ಸಂದರ್ಭಗಳಲೆಲ್ಲಾ ಎಂತಹ ಅಡ್ಡಿ ಆತಂಕಗಳಿಗೂ ಸೊಪ್ಪು ಆಕದೆ ಮುಂದುವರೆದವರೆದಿಂದ್ದಾಗಿ ಉಂಟಾದ ಶತ್ರುಗಳಿಗೂ ಕೇರ್ ಮಾಡಿದವರಲ್ಲ ಎಂದರು.
ಪುರಸಭೆಯ ವಿರೋಧ ಪಕ್ಷದ ನಾಯಕ ಸಿ.ಡಿ.ಚಂದ್ರಶೇಖರ್ ಮಾತನಾಡಿ ದೇವರಾಜ್ ಅರಸುರವರು ತಮ್ಮ ತಾಯಿಯ ತೌರೂರಾದ ಮಧುಗಿರಿಯಲ್ಲಿ ಜನ್ಮ ಪಡೆಯುವ ಮೂಲಕ ಜಿಲ್ಲೆಯ ಬಾಂಧವ್ಯನ್ನು ಗಟ್ಟಿಗೊಳಿಸಿ ಕೊಂಡರಲ್ಲದೆ, ನಮ್ಮ ಕ್ಷೇತ್ರದ ಆಗಿನ ಎಂ.ಎಲ್.ಎ ಬಸವಯ್ಯನವರಿಗೆ ಮಂತ್ರಿ ಸ್ಥಾನವನ್ನು ಕಲ್ಪಿಸಿಕೊಡುವ ಮೂಲಕ ರಾಜ್ಯಮಟ್ಟದಲ್ಲಿ ನಮ್ಮೂರಿಗೆ ಸ್ಥಾನಮಾನ ಕಲ್ಪಿಸಿಕೊಟ್ಟರು ಎಂದರಲ್ಲದೆ ಅದನ್ನು ಉಳಿಸಿಕೊಳ್ಳುವಲ್ಲಿ ನಾವು ಸೋತೆವು ಎಂದರು.
ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಅರಸುರವರೊಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು.
ಪುರಸಭಾಧ್ಯಕ್ಷ ರಾಜಣ್ಣ ಮಾತನಾಡಿ ಅರಸು ಸಂಘದವರು ಮೈಸೂರು ರಾಜರೊಬ್ಬರ ಸಮಾಧಿ ಸಂರಕ್ಷಣೆಗೆ ಮಾಡಿರುವ ಮನವಿಗೆ ಸಕಾರಾತ್ಮವಾಗಿ ಸ್ಪಂದಿಸಲಾಗುವುದು ಎಂದರು.
ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಿ, ಸಿ.ಬಸವರಾಜು, ಅರಸು ಸಂಘದ ಅಧ್ಯಕ್ಷ ನಾಗರಾಜ್ ಅರಸ್ ಸೇರಿದಂತೆ ಹಲವರು ಮಾತನಾಡಿದರು.
ಸಮಾರಂಭದಲ್ಲಿ ಗೋಪಾಲರಾಜ್ ಅರಸ್ ಸ್ವಾಗತಿಸಿದರೆ, ಸ್ವಾಮಿ ರಾಜ್ ಅರಸ್ ನಿರೂಪಿಸಿದರು ಶ್ರೀನಿವಾಸ ರಾಜ್ ಅರಸ್ ಸಂಘದ ಮನವಿಯನ್ನು ವಾಚಿಸಿದರು, ಜಯರಾಮರಾಜ ಅರಸ್ ವಂದಿಸಿದರು.
ಆ.26ರಂದು ಕಾನೂನು ಅರಿವು-ನೆರವು ಕಾರ್ಯಕ್ರ
ಚಿಕ್ಕನಾಯಕನಹಳ್ಳಿ,ಆ.24: ತಾಲೂಕು ವಕೀಲರ ಸಂಘ, ಕಂದಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಇದೇ 26ರ ಗುರುವಾರ ಮಧ್ಯಾಹ್ನ 2ಗಂಟೆಗೆ ಏರ್ಪಡಿಸಲಾಗಿದೆ.
ಪಟ್ಟಣದ ತಾಲೂಕು ಆಫೀಸ್ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶೆ ಎನ್.ಶೀಲಾ, ವಕೀಲರ ಸಂಘದ ಅಧ್ಯಕ್ಷ ಎಸ್.ಗೋಪಾಲಕೃಷ್ಣ, ಉಪಾಧ್ಯಕ್ಷ ಎಂ.ಎಸ್.ಶಂಕರ್, ಸಿ.ಡಿ.ಪಿ.ಓ ಅನೀಸ್ಖೈಸರ್, ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ಟಿ.ಆಶಾ, ಸಿ.ರಾಜಶೇಖರ್, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿರುವರು ರೆವಿನ್ಯೂ ದಾಖಲಾತಿಗಳು ಹಾಗೂ ರಿಜಿಸ್ಟ್ರೇಷನ್ ಮತ್ತು ಕಾನೂನು ಎಂಬ ವಿಷಯವಾಗಿ ಹೆಚ್.ಎಸ್.ಚಂದ್ರಶೇಖರ್, ಮಹಿಳಾ ಹಾಗೂ ಮಕ್ಕಳ ರಕ್ಷಣೆ ಮತ್ತು ಕಾನೂನು ಎಂಬ ವಿಷಯವಾಗಿ ವೈ.ಜಿ.ಲೋಕೇಶ್ ಮಂಡಿಸಲಿದ್ದಾರೆ.


ಇಂದು ತಾಲೂಕು ಮಟ್ಟದ ಕ್ರೀಡಾ ಕೂಟ
ಚಿಕ್ಕನಾಯಕನಹಳ್ಳಿ,ಆ.24: ಹಿರಿಯ ಪ್ರಾಥಮಿಕ ಪಾಠಶಾಲೆಗಳ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಇದೇ 25ರ ಬುಧವಾರ ಬೆಳಗ್ಗೆ 9-30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ಸಿ.ಎಸ್.ರಾಜಣ್ಣ ಧ್ವಜಾರೋಹಣ ನೆರವೇರಿಸುವರು.
ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಜ್ಯೋತಿ ಸ್ವೀಕಾರ ಮಾಡುಲಿದ್ದು, ತಾ.ಪಂ. ಇ.ಓ.ವೇದಮೂತರ್ಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಜಯಮ್ಮದಾನಪ್ಪ, ಜಿ.ರಘುನಾಥ್, ಹೊನ್ನಪ್ಪ, ಈರಣ್ಣ, ಸುಶೀಲಾ ಸುರೇಂದ್ರಯ್ಯ, ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಮು.ಶಿ.ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸುರೇಶ್ ಉಪಸ್ಥಿತರಿರುವರು.

Monday, August 23, 2010

Saturday, August 21, 2010


ಆಗಷ್ಟ್ 23ರಂದು ಯಾದವ ಜನಾಂಗದವರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಆ,21: ಜಿಲ್ಲಾ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಇದೇ 23ರ ಸೋಮವಾರ ಬೆಳಗ್ಗೆ 11ಗಂಟೆಗೆ ತುಮಕೂರಿನ ಪುರಭವನದ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾಡುಗೊಲ್ಲರ ಮುಖಂಡರುಗಳಾದ ತೀರ್ಥಪುರ ವಾಸುದೇವ, ಗೋಡೆಕೆರೆ ಶಿವಣ್ಣ ತಿಳಿಸಿದ್ದಾರೆ.
ಕಾಡುಗೊಲ್ಲರು ಅತ್ಯಂತ ಹಿಂದುಳಿದ ಅಲೆಮಾರಿ, ಅರೆಅಲೆಮಾರಿ, ಬುಡಕಟ್ಟು ಸಂಪ್ರದಾಯಕ್ಕೆ ಸೇರಿದವರಾಗಿದ್ದು ಆಥರ್ಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದಾರೆ, ಸಕರ್ಾರದ ಮೀಸಲಾತಿ ಇದ್ದರೂ ಸಹ ಇತರೆ ಜಾತಿಗಳ ಸೇರ್ಪಡೆಯಾಗಿ ನಮ್ಮ ಜನಾಂಗಕ್ಕೆ ಸಕರ್ಾರಿ ಶಾಲಾ ಮಕ್ಕಳ ಹಾಜರಾತಿ ಸಕರ್ಾರದ ಪ್ರಾಯೋಜಿತ ಯೋಜನೆಗಳಲ್ಲಿ ವಂಚಿತರಾಗಿದ್ದೇವೆ ಇದರ ಅನ್ಯಾಯದ ವಿರುದ್ದವಾಗಿ ಸಕರ್ಾರಕ್ಕೆ ಮನವಿಯನ್ನು ನೀಡುವ ಮೂಲಕ ರಸ್ತೆತಡೆಯನ್ನು ಹಮ್ಮಿಕೊಳ್ಳಲಾಗಿದೆ, ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿಯನ್ನು ನೀಡಲಾಗುತ್ತದೆ. ಪ್ರತಿಭಟನೆಗೆ ಯಾದವ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

Thursday, August 19, 2010

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲ ನೀಡಲು ಡಿ.ಸಿ.ಸಿ.ಬ್ಯಾಂಕ್ ಒಲವು
ಚಿಕ್ಕನಾಯಕನಹಳ್ಳಿ,ಆ.18: ಇಂದಿನ ತಂತ್ರಜ್ಞಾನ, ಕಂಪ್ಯೂಟರಿಕರಣ ಮತ್ತು ಎಲೆಕ್ಟ್ರಾನಿಕರಣದಂತಹ ಯುಗದಲ್ಲಿ ರೈತರು ಉಳುಮೆ ಮಾಡಿ ಜೀವನ ನಡೆಸುವುದು ಕಷ್ಟಕರವಾಗಿದ್ದು ಅದಕ್ಕಾಗಿ ಉಪಕಸುಬುಗಳನ್ನು ನೆಚ್ಚಿಕೊಂಡಿರುವ ಸಣ್ಣ ರೈತರಿಗೆ ಅತಿಯಾದ ಕಟ್ಟುಪಾಡುಗಳಿಲ್ಲದೆ ಸಾಲ ನೀಡಲು ನಮ್ಮ ಬ್ಯಾಂಕ್ ಸಿದ್ದವಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು
ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ವಿವಿಧ ಯೋಜನೆಯ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಅಲ್ಪ ಬಂಡವಾಳವನ್ನು ಹೂಡಿ ಆದಾಯಗಳಿಸಿ ಸ್ವಾವಲಂಬಿ ಜೀವನ ನಡೆಸಬೇಕು ಅದಕ್ಕಾಗಿ ಬ್ಯಾಂಕ್ ಕಡಿಮೆ ಬಡ್ಡಿದರದ ಸಾಲ ನೀಡುತ್ತಿದೆ ಎಂದರಲ್ಲದೆ, ಸಾಲವನ್ನು ಪಡೆದವರು ಎಚ್ಚರಿಕೆಯಿಂದ ಇಂದ ಸಾಲ ಮರುಪಾವತಿ ಮಾಡಬೇಕು ಇಲ್ಲದಿದ್ದರೆ ಸಾಲದ ಬಡ್ಡಿ ಶೇ.13 ರಷ್ಟು ಹೆಚ್ಚಿ ಸಾಲಗಾರ ಆತಂಕಕ್ಕೆ ಒಳಗಾಗುತ್ತಾನೆ ಎಂದರು.
ಸಾಲ ಪಡೆಯುವುದು ಸಾಲಗಾರನ ಹಕ್ಕು ಅದನ್ನು ಹಿಂತಿರುಗಿಸುವುದು ಅವರ ಜವಬ್ದಾರಿಯಾಗಿದೆ ಎಂದರಲ್ಲದೆ, ಸಾಲವನ್ನು ಮರುಪಾವತಿ ಮಾಡಿ ಸಾಲವನ್ನು ನೀಡುವ ಸಂಸ್ಥೆಯನ್ನು ಉಳಿಸಬೇಕು ಎಂದ ಅವರು ರೈತರು ಉಳುಮೆ ಜೊತೆ ಉಪಕಸುಬುಗಳನ್ನು ಮಾಡಬೇಕು ಇದರಿಂದ ನಿಮ್ಮ ಆಥರ್ಿಕ ಪರಿಸ್ಥಿತಿ ಸುದಾರಿಸುತ್ತದೆ ಈ ವಿಷಯವನ್ನು ಪ್ರತಿ ಬಾರಿ ಸಾಲ ನೀಡುವಾಗ ಎಲ್ಲಾ ರೈತರಿಗೂ ಹೇಳುತ್ತೇನೆ ಎಂದರು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ನೇಕಾರರಿಗೂ ಶೇ.4ರ ಬಡ್ಡಿದರದಲ್ಲಿ ಸಾಲವನ್ನು ನೀಡುವ ಯೋಜನೆಯನ್ನು ಬ್ಯಾಂಕ್ ಜಾರಿಗೆ ತರಲಿದೆ ಎಂದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದ ಈ ಭಾಗ, ಕೇವಲ ಮಳೆಯನ್ನು ಆಧರಿಸಿ ರೈತರು ಜೀವನ ನಡೆಸುತ್ತಿರುವ ನಮ್ಮ ಜನರಿಗೆ ಜಿಲ್ಲಾ ಬ್ಯಾಂಕ್ನಿಂದ ಸಾಲ ಒದಗಿಸಿ ಇವರ ಆಥರ್ಿಕ ಪರಿಸ್ಥಿತಿ ಸುಧಾರಿಸಲು ಮತ್ತು ಇಲ್ಲಿನ ಹಾಲಿನ ಸಹಕಾರ ಸಂಘಗಳಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲು ಜಿಲ್ಲಾ ಬ್ಯಾಂಕ್ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದ ಮುಖಂಡರುಗಳಾದ ಹನುಮಂತಪ್ಪ, ರಾಮಕೃಷ್ಣಯ್ಯ, ರಾಜಣ್ಣ, ಸಣ್ಣಯ್ಯ, ವೆಂಕಟರಾಮಯ್ಯ, ರತ್ನಮ್ಮ, ಕೇಶವಮೂತರ್ಿ, ಈಶ್ವರಪ್ಪ ಹಾಗೂ ಬ್ಯಾಂಕ್ನ ಅಧಿಕಾರಿಗಳಾದ ರಾಮಕೃಷ್ಣಯ್ಯ ಮುದ್ದಪ್ಪ, ಜಯರಾಮ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರಂಗನಾಥ್ ಸ್ವಾಗತಿಸಿ, ವಂದಿಸಿದರು.

ಕರಡಿ ದಾಳಿ ಗಾಯಾಳು ಆಸ್ಪತ್ರೆಗೆ
ಚಿಕ್ಕನಾಯಕನಹಳ್ಳಿ,ಆ.19: ಕರಡಿ ದಾಳಿಯಿಂದ ವ್ಯಕ್ತಿಯೊಬ್ಬನ ತಲೆಬುರುಡೆಗೆ ತೀವ್ರ ಹಾನಿಯಗಿರುವ ಘಟನೆ ತಾಲೂಕಿನ ದೊಡ್ಡಬಿದರೆ ಬಳಿಯ ಕಲ್ಲಹಳ್ಳಿ ಪಾಳ್ಯದಲ್ಲಿ ನಡೆದಿದೆ.
ಬೆಳಗಿನ ಜಾವ 5.30ಕ್ಕೆ ಬಹಿದರ್ೆಸೆಗೆ ಹೋದ ಸಂದರ್ಭದಲ್ಲಿ ತಾಯಿಕರಡಿ ಮತ್ತು ಮರಿಕರಡಿಗಳ ದಾಳಿಯಿಂದ ನರಸಿಂಹಯ್ಯ(50) ಎಂಬ ವ್ಯಕ್ತಿಯ ತಲೆಬುರುಡೆಕಿತ್ತಿದ್ದು ನರಸಿಂಹಯ್ಯ ಹುಳಿಯಾರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕರಡಿ ದಾಳಿಯಂತಹ ಘಟನೆ ಈ ಭಾಗದಲ್ಲಿ ಪದೇ ಪದೇ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ತೀವ್ರ ಗಮನ ನೀಡುತ್ತಿಲ್ಲವೆಂದು ವಕೀಲ ಜಯಣ್ಣ ಆರೋಪಿಸಿದ್ದಾರೆ.
ರಸ್ತೆಯಲ್ಲಿ ವ್ಯಕ್ತಿ ಸಾವು: ತಾಲೂಕಿನ ಗೌರಸಾಗರ ಗೇಟ್ಬಳಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸಕೆರೆಯ ಕುಮಾರಸ್ವಾಮಿ(35) ಎಂಬ ವ್ಯಕ್ತಿ ಟಿ.ವಿ.ಎಸ್ ಮೊಪೆಡ್ನಲ್ಲಿ ತೆರುಳುತ್ತಿರುವಾಗ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಓದುಗರ ಪತ್ರ
ಕೈಮಗ್ಗ ಸಂಘದಿಂದ ವಿದ್ಯಾಥರ್ಿ ವೇತನದ ಚೆಕ್ ನೀಡಲು ಹಣಕ್ಕಾಗಿ ಒತ್ತಾಯ
ಚಿಕ್ಕನಾಯಕನಹಳ್ಳಿಯ ಬನಶಂಕರಿ ಕೈಮಗ್ಗ ಅಭಿವೃದ್ದಿ ಸಂಘವು ನೇಕಾರರ ಮಕ್ಕಳಿಗೆ ವಿವಿಧ ಯೋಜನೆಯಲ್ಲಿ ಬಂದಂತಹ ವಿದ್ಯಾಥರ್ಿ ವೇತನ ಮತ್ತು ಇತ್ತೀಚಿಗೆ ಸಕರ್ಾರದಿಂದ ಬಂದಂತಹ ಮಹಾತ್ಮಾಗಾಂಧೀ ಬುನ್ಕರ್ ಭೀಮಾ ಯೋಜನೆಯ ಚೆಕ್ಗಳನ್ನು ವಿದ್ಯಾಥರ್ಿಗಳಿಗೆ ನೀಡಲು ಪ್ರತಿಯೊಬ್ಬ ವಿದ್ಯಾಥರ್ಿಗಳಿಂದ 100ರೂಗಳಂತೆ ಹಣವನ್ನು ಬನಶಂಕರಿ ಸೊಸೈಟಿ ಅಧ್ಯಕ್ಷರು ಹಣವನ್ನು ವಸೂಲಿ ಮಾಡುತ್ತಿದ್ದು, ಅಧ್ಯಕ್ಷರಿಗೆ ಹಣ ನೀಡದ ವಿದ್ಯಾಥರ್ಿಗಳಿಗೆ ಚೆಕ್ ನೀಡದೆ ಇಲ್ಲದ ತೊಂದರೆ ಕೊಡುತ್ತಿದ್ದಾರೆ ಎಂದು ವಿದ್ಯಾಥರ್ಿಗಳು ದೂರಿದ್ದಾರೆ.
ಚೆಕ್ಗಳನ್ನು ಅಥವ ಹಣವನ್ನು ನೀಡಲು 1000 ರೂಗಳಿಗೆ 100ರೂನಂತೆ ಹಣವನ್ನು ಬಡ ವಿದ್ಯಾಥರ್ಿಗಳಿಂದ ಹಣ ಪಡೆದು ಬಡವಿದ್ಯಾಥರ್ಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅನ್ಯಾಯಕ್ಕೊಳಪಟ್ಟ ವಿದ್ಯಾಥರ್ಿಗಳು ಆರೋಪಿಸಿದ್ದಾರೆ.
ನೊಂದ 10 ವಿದ್ಯಾಥರ್ಿಗಳ ಸಹಿ ಇದೆ

Sunday, August 15, 2010

ಚಿಕ್ಕನಾಯಕನಹಳ್ಳಿ,ಆ.15: ಗಡಿ ಸಮಸ್ಯೆ, ನೀರಿನ ಸಮಸ್ಯೆಗಳನ್ನು ಮರೆತು ಭಾರತದ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನವನ್ನು ಬೆಳೆಸಿಕೊಂಡು ರಾಷ್ಟ್ರಕ್ಕಾಗಿ ಹೋರಾಡಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
63ನೇ ಸ್ವಾತಂತ್ರ್ಯ ದಿನಾಚರಣೆಯ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರಕ್ಕಾಗಿ ಇಡೀ ದೇಶದ ಜನರೆಲ್ಲರೂ ಒಟ್ಟುಗೂಡಿ ಹೋರಾಡಿದ ಪರಿಣಾಮ ಇಂದು ನಮಗೆ ಸ್ವಾತಂತ್ರ ದೊರಕಿದೆ, ಮಹಾತ್ಮಾ ಗಾಂಧೀಜಿ, ಸುಭಾಷ್ಚಂದ್ರಭೋಸ್ ನಂತಹ ಕೆಚ್ಚೆದೆಯ ಉತ್ಸಾಹ ಯುವಕರು ಸೈನ್ಯಕ್ಕೆ ಸೇರಬೇಕು ಮತ್ತು ಸಮಾಜ ಕಟ್ಟುವಂತಹ ನಾಯಕತ್ವವನ್ನು ಬೆಳಸಿಕೊಳ್ಳಬೇಕು ಎಂದ ಅವರು ವೈದ್ಯಕೀಯ, ಸಮಾಜ, ಮತ್ತು ಪ್ರಗತಿಪರ ರೈತರನ್ನು ಇಂದು ಸನ್ಮಾನಿಸುತ್ತಿದ್ದು ಇದು ಕೇವಲ ಕಾಟಾಚರಕ್ಕೆ ಮಾಡುತ್ತಿಲ್ಲ ಇವರು ಸಮಾಜಕ್ಕೆ ಸಲ್ಲಿಸಿರುವ ಉತ್ತಮ ಕಾರ್ಯಗಳು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಿಷ್ಠೆ, ಪ್ರಮಾಣಿಕತೆಯಿಂದ ನಿರ್ವಹಿಸಿದ್ದಾರೆ ಎಂದರಲ್ಲದೆ, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಕರೆ ಬಂದಾಗ ಇದು ತಮಗೆ ಒದಗಿದ ಒಂದು ಉತ್ತಮ ಅವಕಾಶವೆಂದು ಭಾವಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅನರಕ್ಷತೆ, ಮೌಡ್ಯತೆ, ವೈಷಮ್ಯ ಇವು ದೇಶದಲ್ಲಿ ದೊಡ್ಡ ಪಿಡುಗಾಗಿದ್ದು ಇದನ್ನು ಹೋಗಲಾಡಿಸಲು ಇಂದಿನ ಯುವಕರು ಹೋರಾಡಬೇಕೆಂದು ಕರೆ ನೀಡಿದರು.
ಲಾಲಲಜಪತರಾಯ್, ಬಿಪಿನ್ ಚಂದ್ರಪಾಲ್ ಮುಂತಾದ ಸ್ವಾತಂತ್ರ ಹೋರಾಟಗಾರರು ಯುವಕರನ್ನು ಹುರಿದುಂಬಿಸಿ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಿದರು. ಇಂತಹವರ ಪರಿಶ್ರಮದಿಂದ ದೊರೆದ ಸ್ವಾತಂತ್ರವನ್ನು ಪ್ರತಿಯೊಬ್ಬರು ನೆನಪಿಸಿಕೊಂಡು ದೇಶದ ಅಭಿವೃದ್ದಿಗಾಗಿ ಭಾವೈಕ್ಯತೆಯಿಂದ ಬಾಳಬೇಕು ಎಂದರು.
ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದ ಡಾ.ಹೆಚ್.ಕೆ.ದಾಸ್, ಸಮಾಜ ಕ್ಷೇತ್ರದ ಮಲ್ಲಿಕಾಜರ್ುನಯ್ಯ(ಸಾಯಿಬಾಬ), ಪ್ರಗತಿಪರ ರೈತ ಕೆ.ಬಸವರಾಜುರವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷೆ ಜಯಮ್ಮದಾನಪ್ಪ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ, ಇ.ಓ. ವೇದಮೂತರ್ಿ, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿ, ರಮೇಶ್ಕೆಂಬಾಳ್ ನಿರೂಪಿಸಿ, ನರಸಿಂಹಮೂತರ್ಿ ವಂದಿಸಿದರು.
ಚಿತ್ರ ಶೀಷರ್ಿಕೆ:

Friday, August 13, 2010

ಮಹಾತ್ಮಾಗಾಂಧಿ ವಿದ್ಯಾಥರ್ಿ ವೇತನ ವಿತರಣೆ ಸಮಾರಂಭ
ಚಿಕ್ಕನಾಯಕನಹಳ್ಳಿ,ಆ.13: 2009-10ನೇ ಸಾಲಿನ ಮಹಾತ್ಮಗಾಂಧಿ ಬುನ್ಕರ್ ಭೀಮಾ ಯೋಜನೆಯ ವಿದ್ಯಾಥರ್ಿ ವೇತನವು 140 ನೇಕಾರರ ಮಕ್ಕಳಿಗೆ 1.68000 ಸಾವಿರ ವಿದ್ಯಾಥರ್ಿ ವೇತನ ಬಂದಿದೆ ಎಂದು ಕಂಬಳಿ ಸೊಸೈಟಿ ಕಾರ್ಯದಶರ್ಿ ಸಿ.ಎಚ್.ಗಂಗಾಧರ್ ತಿಳಿಸಿದ್ದಾರೆ.
ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಆವರಣದಲ್ಲಿ ಆಗಷ್ಟ್ 15ರ ಭಾನುವಾರ ಮಧ್ಯಾಹ್ನ 3ಗಂಟೆಗೆ ಚೆಕ್ಗಳನ್ನು ವಿತರಿಸಲಿದ್ದು ಅರ್ಹ ಫಲಾನುಭವಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಚೆಕ್ಗಳನ್ನು ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಗೊಳ್ಳಿರಾಯಣ್ಣನವರ 214ನೇ ಜನ್ಮದಿನಾಚರಣಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಆ.13: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವಸೇನೆ ಸಂಯುಕ್ತಾಶ್ರಯದಲ್ಲಿ ವಿದ್ಯಾಥರ್ಿವೇತನ ವಿತರಣೆ ಹಾಗೂ ಸ್ವತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನವರ 214ನೇ ಜನ್ಮದಿನಾಚರಣೆ ಸಮಾರಂಭವನ್ನು ಇದೇ ಆಗಷ್ಟ್ 15ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಸಂಘದ ಕಛೇರಿ ಆವರಣದಲ್ಲಿ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಂಡಿದ್ದು ಸಂಪಾದಕ ಚಿ.ನಾ.ಏಕೇಶ್ವರ್ ಉದ್ಘಾಟನೆ ನೆರವೇರಿಸುವರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ, ತಾಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಡಿ.ಕೆ.ಮುಕುಂದಯ್ಯ ವಿದ್ಯಾಥರ್ಿ ವೇತನದ ಚೆಕ್ ವಿತರಣೆ ಮಾಡಲಿದ್ದು, ಸ್ವಾತಂತ್ರ ಹೋರಾಟಗಾರ ಸಿ.ಎನ್.ನಾಗೇಶಯ್ಯ ಮತ್ತು ಪ್ರಾಂಶುಪಾಲರಾದ ಎನ್.ಇಂದಿರಮ್ಮನವರಿಗೆ ಸೇನೆ ವತಿಯಿಂದ ಸನ್ಮಾನಿಸಲಿದ್ದು ರೋಟರಿ ಕ್ಷಬ್ ಅಧ್ಯಕ್ಷ ಎನ್.ಶ್ರೀಕಂಠಯ್ಯ ನೋಟ್ಪುಸ್ತಕ ವಿತರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನಕ ಭವನದ ಅಧ್ಯಕ್ಷ ಸಿ.ಎಸ್.ಬಸವರಾಜು, ರಾಜ್ಯ ಅಹಿಂದ ಸಂಚಾಲಕ ಚಿ.ಲಿಂ.ರವಿಕುಮಾರ್, ಕನಕ ಭವನದ ಉಪಾಧ್ಯಕ್ಷ ಸಿ.ಕೆ.ಲೋಕೇಶ್, ನಿದರ್ೇಶಕರಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಎನ್.ವಿಜಯ್ಕುಮಾರ್, ಆರ್.ಜಿ.ಗಂಗಾಧರಯ್ಯ, ಗೋವಿಂದಯ್ಯ, ಭಾರತಿ ಉಪಸ್ಥಿತರಿರುವರು.


ಶಾದಿ ಮಹಲ್ ನಿವೇಶನಕ್ಕೆ ವಿರೋಧ
ಚಿಕ್ಕನಾಯಕನಹಳ್ಳಿ,ಆ.13: ಚಿಕ್ಕನಾಯಕನಹಳ್ಳಿ ನಗರದ ಶ್ರೀತಾತಯ್ಯ ಘೋರಿ ಪಕ್ಕದ ನಿವೇಶನದಲ್ಲಿ ಶಾದಿಮಹಲ್ ನಿಮರ್ಾಣಕ್ಕೆ ಮುಸ್ಲಿಂ ಬಾಂದವರು ಅನುಮತಿ ಕೇಳಿದ್ದಾರೆಂದು ಪುರಸಭೆಯ ತುತರ್ು ಸಭೆಯಲ್ಲಿ ಶಾಸಕರು ಪ್ರಸ್ತಾಪಮಾಡಿರುವ ಸುದ್ದಿ ಪ್ರಕಟವಾಗಿರುವುದಕ್ಕೆ ತಾ.ಬಿ.ಜೆ.ಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಸ್ಪಷ್ಟೀಕರಣ ಬಯಸಿದ್ದಾರೆ.
ಈ ನಿವೇಶನ ಮೂಲತ: ಯಾರಿಗೆ ಸಂಬಂದಿಸಿದ್ದು ಈಗ ಯಾರ ಹೆಸರಿಗೆ ದಾಖಲಿದೆ ಸದರಿಯವರಿಗೆ ಬದಲಾದ ರೀತಿ ಹೇಗೆ? ಇದು ನಿಯಮ ಬದ್ದವಾಗಿದೆಯೇ ಅಥವ ನಿಯಮ ಬಾಹಿರವಾಗಿದೆಯೇ ಸಕರ್ಾರ ಅನುಮತಿ ನೀಡಿದೆಯೆ ಮುಂತಾದ ಪ್ರಶ್ನೆಗಳು ಉದ್ಭವವಾಗುತ್ತದೆ. ಹಾಲಿ ನಿವೇಶನದಲ್ಲಿ ಮೈಸೂರು ರಾಜವಂಶದವರಿಗೆ ಸಂಬಂದಿಸಿದ ಒಂದು ಸ್ಮಾರಕವಿದ್ದು ಇತಿಹಾಸದ ಪುಸ್ತಕದಲ್ಲೂ ಇದು ದಾಖಲಿದ್ದು ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಪುರಸಭೆಯ ಪ್ರತಿನಿಧಿಗಳು ಕುಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೆ ಜೋಗಿಹಳ್ಳಿ ಗ್ರಾಮದಲ್ಲಿ ಇಂತಹದೆ ವಿವಾದ ಸೃಷ್ಟಿಯಾಗಿ ಹೋರಾಟ ನಡೆದದ್ದು ನೆನಪಿನಂಗಳದಲ್ಲಿ ಇನ್ನೂ ಹಸಿರಾಗಿಯೇ ಇದೆ ಆದ್ದರಿಂದ ಇಂತಹದಕ್ಕೆ ಅವಕಾಶ ನೀಡಬಾರದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಮಧರ್ಾತ್ಮಕ ಪರೀಕ್ಷೆಗಳಿಗೆ ಬೆಂಬಲ: ಜೆ.ಸಿ.ಎಂ
ಚಿಕ್ಕನಾಯಕನಹಳ್ಳಿ,ಆ.13: ವಿದ್ಯಾಥರ್ಿಗಳು ಎಲ್ಲಾ ಕ್ಷೇತ್ರಗಳ ಬೆಳವಣಿಗೆಯನ್ನು ಉತ್ತೇಜಿಸುತ್ತಾ ವಿದ್ಯಾ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿಷದಪಡಿಸಿದರು ಮತ್ತು ವಿದ್ಯಾಥರ್ಿಗಳಿಗೆ ಸ್ಮಧರ್ಾತ್ಮಕ ಪರೀಕ್ಷೆಗಳ ತಯಾರಿಗೆ ಬೆಂಬಲ ನೀಡುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಿದ್ಯಾಥರ್ಿಗಳಿಗೆ ಭರವಸೆ ನೀಡಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ದಿಯ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಮತ್ತು ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ವಿದ್ಯಾಥರ್ಿಗಳು ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಅವರ ಪ್ರತಿಭೆ ಬೆಳಕಿಗೆ ಬಂದಂತಾಗುತ್ತದೆ ಇದರಿಂದ ಅವರ ವ್ಯಕ್ತಿತ್ವದ ವಿಕಸನ ಸಾಧಿಸಲು ಸಾಧ್ಯ ಎಂದರು.
ಅನೂಹ್ಯ ಟ್ರಸ್ಟ್ನ ಮುಖ್ಯಸ್ಥರಾದ ಬಾಲಸೂರ್ಯ ಮಾತನಾಡಿ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ವಿದ್ಯಾಥರ್ಿಗಳ ಪಾತ್ರ ಮಹತ್ವದ್ದಾಗಿದ್ದು ಕನರ್ಾಟಕದಲ್ಲಿನ ಜನರಿಗಿರುವ ರಕ್ಷಣಾ ಸೇವೆಯ ಬಗೆಗಿನ ನಿರಾಸಕ್ತಿಯನ್ನು ಅಂಕಿ ಅಂಶಗಳ ಮೂಲಕ ತಿಳಿಸಿದರು.
ಭೂಮಿ ಬಳಗದ ಅಧ್ಯಕ್ಷರಾದ ಸೋಮಶೇಖರ್ ಮಾತನಾಡಿ ವಿವಿಧ ದೇಶಗಳಿಗೆ ಬೇರೆ ಬೇರೆ ಸಂಸತ್ತುಗಳಿರುವ ಹಾಗೆ ಕ್ರೀಡೆಗೆ ಸಂಸತ್ತುಗಳಿಲ್ಲ, ಎಲ್ಲ ದೇಶಗಳಲ್ಲೂ ಕ್ರೀಡೆಗೆ ಒಂದೇ ರೀತಿಯ ನಿಬಂದನೆಗಳಿರುತ್ತವೆ ಎಂದು ವಿದ್ಯಾಥರ್ಿಗಳನ್ನು ಕ್ರೀಡಾ ಕ್ಷೇತ್ರದೆಡೆಗೆ ಹುರಿದುಂಬಿಸಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಕೆ.ಸಿ.ಬಸಪ್ಪ, ಉಪನ್ಯಾಸಕರಾದ ಪರಮಶಿವಯ್ಯ, ರೇಣುಕಾರ್ಯ, ಕೈಲಾಸ್ನಾಥ್ ಉಪಸ್ಥಿತರಿದ್ದರು.


Thursday, August 12, 2010

Monday, August 9, 2010

Sunday, August 8, 2010

Wednesday, August 4, 2010


ವ್ಯಕ್ತಿತ್ವ ರೂಪಿಸುವಲ್ಲಿ ವಿಶ್ವಕ್ಕೆ ಆದರ್ಶ ವಿವೇಕನಂದ
ಚಿಕ್ಕನಾಯಕನಹಳ್ಳಿ,ಆ.04: ಗುರುವೃಂದಕ್ಕೆ ಆದರ್ಶವಾಗಿ ಲೋಕದ ಗುರು ಶಿಷ್ಯ ಸಂಬಂಧಕ್ಕೆ ಮಾದರಿ ಎನ್ನುವಂತೆ ದಾರಿ ತೋರಿದ ಮಹಾನ್ ಚೇತನ, ಸಂತ, ಖುಷಿ, ಯೋಗಿ ಭಾರತದ ಭವಿಷ್ಯವನ್ನು ಬೆಳಗಿಸಿದ ಮಹಾನ್ ಗುರು, ಸ್ವಾಮಿ ವಿವೇಕಾನಂದ ಎಂದು ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ 'ಗುರುಚಿಂತನ' ಪರಿಪೂರ್ಣ ಶಿಕ್ಷಣಕ್ಕಾಗಿ ಶಿಕ್ಷಕರ ಸಮ್ಮೇಳನ-40, ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ಬ್ರಹ್ಮ, ವಿಷ್ಣು, ಮಹೇಶ್ವರರು ಭಕ್ತರನ್ನು ಹೊಂದಿದ್ದರೆ, ಸ್ವಾಮಿ ವಿವೇಕಾನಂದರು ಪ್ರಪಂಚದಲ್ಲೆಲ್ಲ ತನ್ನ ಶಿಷ್ಯರನ್ನು ಹೊಂದಿದ ಮಹಾನ್ ಸಂತ, ತನ್ನ ಶಿಷ್ಯರನ್ನು ಸಮಾನ ರೀತಿಯಲ್ಲಿ ಕಾಣುತ್ತಾ ಅವರ ಏಳಿಗೆಯನ್ನು ತನ್ನ ಏಳಿಗೆ ಎಂದು ಭಾವಿಸಿದ ವ್ಯಕ್ತಿತ್ವ ಅವರು, ಸ್ವಾಮಿಗಳ ಆದರ್ಶದಿಂದಲೇ ಅವರ ಅನುಯಾಯಿಗಳಾಗಿರುವುದು ಎಂದರು. ಸ್ವಾಮಿ ವಿವೇಕಾನಂದರ ಆದರ್ಶವನ್ನು ಪಾಲಿಸಿ ವಿದ್ಯಾಥರ್ಿಗಳಿಗೆ ಪರಿಪೂರ್ಣ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿದಾಗ, ಶಿಕ್ಷಕರ ಆದರ್ಶ ಶಿಷ್ಯರಲ್ಲೂ ಪ್ರಭಾವ ಬೀರಿ ವಿದ್ಯೆ ಕಲಿಸಿದ ಗುರುಗಳಿಗೆ ತಮ್ಮ ಮನಸ್ಸಿನಲ್ಲಿ ಉನ್ನತಮಟ್ಟದ ಸ್ಥಾನಕೊಡುತ್ತಾರೆ, ಮುಂದಿನ ಪೀಳಿಗೆಯವರಿಗೆ ಅವರೂ ಸಹ ಸ್ವಾಮಿ ವಿವೇಕಾನಂದರಂತಹ ವ್ಯಕ್ತಿತ್ವವನ್ನು ಹೊಂದಿದವರಾಗುತ್ತಾರೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಮಾನವ ಸೇವೆ ಅಮೂಲ್ಯವಾದದ್ದು, ಸೇವೆ ಅಗತ್ಯ ಇದ್ದವರಿಗೆ ಇಲ್ಲದವರು ಯಾವುದಾದರೊಂದು ರೀತಿಯಲ್ಲಿ ಸೇವೆ ಮಾಡಿದರೆ ಸಮಾಜದ ಋಣವನ್ನು ಕಿಂಚಿತ್ತಾದರೂ ತೀರಿಸಿದಂತಾಗುತ್ತದೆ ಎಂದ ಅವರು, ವಿಶ್ವದ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿದೆ ಅದು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಹೇಗೆ ಬೆಳಸಿಕೊಳ್ಳಬೇಕೆಂದು ಹೇಳಿಕೊಟ್ಟ ಗುರು, ಶಿಕ್ಷಕರು ವಿವೇಕಾನಂದರಂತೆ ವಿದ್ಯಾಥರ್ಿಗಳಲ್ಲಿ ಉತ್ತಮ ಆದರ್ಶ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವ ಮೂಲಕ ಶಿಕ್ಷಕ ವೃತ್ತಿಗೆ ಅಮೋಘವಾದ ಸೇವೆ ಮಾಡಬೇಕು ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಮಕ್ಕಳಿಗೆ ಜ್ಞಾನದ ಹಸಿವನ್ನು ಶಿಕ್ಷಕರು ಹೋಗಲಾಡಿಸಬೇಕು ಮತ್ತು ಸಮಾಜದಲ್ಲಿ ನಾನು ಎಂಬ ಗರ್ವ ಹೋಗಿ ಎಲ್ಲರಿಗಾಗಿ ನಾವು ಎಂದು ಭಾವಿಸಿ ಆಧ್ಯಾತ್ಮಿಕತೆಯನ್ನು ಎಲ್ಲರೂ ಬೆಳಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಮಾತೆ ಚೈತನ್ಯಮಯೀ, ಹಂಪಿ ವಿಶ್ವವಿದ್ಯಾಲಯ ವಿಜ್ಞಾನ ಸಂಗಾತಿ ಸಂಪಾದಕ ಸುರೇಶ್ಕುಲಕಣರ್ಿ, ರಮೇಶ್ಉಮಾರಾಣಿ, ಚಿಕ್ಕನಾಯಕನಹಳ್ಳಿ ಮೂಲದ ಗೆಳೆಯರ ಒಕ್ಕೂಟ ಅಧ್ಯಕ್ಷ ಸಿ.ಎಂ.ಹೊಸೂರಪ್ಪ, ಸಪ್ತಮಿ ಟ್ರಸ್ಟ್ ಅಧ್ಯಕ್ಷ ಆನಂದ್, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸರ್ವಮಂಗಳ ಪ್ರಾಥರ್ಿಸಿದರು. ಸಿ.ಎಂ.ಹೊಸೂರಪ್ಪ ಸ್ವಾಗತಿಸಿ, ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿ, ಷಡಾಕ್ಷರಿ ತರಬೇನಹಳ್ಳಿ ವಂದಿಸಿದರು.


Monday, August 2, 2010


ಕುಪ್ಪೂರು ಶ್ರೀಗಳ ಹುಟ್ಟು ಹಬ್ಬದಂದು ನೀರಾವರಿಗಾಗಿ 67 ಸಂಘಟನೆಗಳಿಂದ ಚಚರ್ೆ

ಚಿಕ್ಕನಾಯಕನಹಳ್ಳಿ,ಆ2: ಜನತೆಗೆ ಅಗತ್ಯವಾಗಿರುವುದು ನೀರಾವರಿ ಸೌಲಭ್ಯ ಕಲ್ಪಿಸಲು ಇಂದು ತಾಲೂಕಿನಲ್ಲಿ ನೀರಾವರಿ ಹೋರಾಟದಿನವನ್ನಾಗಿ ಆಚರಿಸಲಾಗಿತ್ತಿದೆ ಎಂದು ಡಾ.ಯತೀಶ್ವರ ಶಿವಚಾರ್ಯಸ್ವಾಮೀಜಿ ಹೇಳಿದರು.

ತಾಲೂಕಿನ ಕಪ್ಪೂರು ಗದ್ದಿಗೆ ಮಠದಲ್ಲಿ ಯತೀಶ್ವರ ಶಿವಚಾರ್ಯಸ್ವಾಮಿ 36ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಜನ್ಮದಿನವನ್ನು ನೀರಾವರಿ ಹೋರಾಟ ದಿನವನ್ನಾಗಿ ಆಚರಿಸಲು ಸಂಕಲ್ಪಿಸಲಾಗಿದೆ ಇದಕ್ಕೆ ತಾಲೂಕಿನ 67ಸಂಘಟನೆಗಳು ಬೆಂಬಲ ಸೂಚಿಸಿದ್ದು ಮುಂದೆ ವಿವಿಧ ಹೋರಾಟಗಳನ್ನು ರೂಪಿಸಲಾಗುವುದು ಎಂದರು.

ಹೊಸದುರ್ಗದ ಭಗೀರತ ಮಠದ ಪುರಷೋತ್ತಮಾನಂದ ಸ್ವಾಮೀಜಿ ಮಾತನಾಡಿ ಮಾನವ ಜನ್ಮವನ್ನು ಸನ್ಮಾರ್ಗದ ಮೂಲಕ ಸಾರ್ಥಕತೆ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಆರೋಗ್ಯ ತಪಾಸಣೆ ಶಿಬಿರದ ಮುಖ್ಯಸ್ಥರಾದ ಡಾ.ಜಿ.ಪರಮೇಶ್ವರಪ್ಪ ಮಾತನಾಡಿ ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಮಠದ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ಪುಸ್ತಕ ವಿತರಣೆ ಮತ್ತು ಸುತ್ತಮುತ್ತಲಿನ ನೂರಾರು ಮಂದಿಗೆ ವಿವಿಧ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.


ಚಿಕ್ಕನಾಯಕನಹಳ್ಳಿ,ಜು.30: ಭವಿಷ್ಯದ ಬಗೆಗೆ ಹಲವು ಹೊಂಗನಸುಗಳನ್ನು ಹೊತ್ತು ಹೊಸ ಪರಿಸರದಲ್ಲಿ ಪ್ರವೇಶ ಪಡೆದು ಆರಂಭಿಕ ಮುಜುಗರಕ್ಕೆ ಒಳಗಾಗುವ ವಿದ್ಯಾಥರ್ಿಗಳ ಆತಂಕವನ್ನು ತಪ್ಪಿಸಲು ಸ್ಥಳೀಯ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳು ಕಿರಿಯ ವಿದ್ಯಾಥರ್ಿಗಳನ್ನು ಪರಿಚಯಿಸಿಕೊಳ್ಳಲು ಆತ್ಮೀಯವೆನಿಸುವ 'ಮಡಿಲು ಸೇರುವ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಹಿರಿಯ ಮತ್ತು ಕಿರಿಯ ವಿದ್ಯಾಥರ್ಿಗಳಲ್ಲಿ ಅನೇಕರು ಪರಸ್ಪರ ಶುಭಾಷಯ ಮತ್ತು ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಿದ ತರುವಾಯ ಕಾಲೇಜಿನ ಅಧ್ಯಾಪಕ ವೃಂದ 2010-11ನೇ ಸಾಲಿನ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ನೀಲ ನಕ್ಷೆಯೊಂದನ್ನು ವಿದ್ಯಾಥರ್ಿಗಳ ಎದುರು ಅನಾವರಣಗೊಳಿಸಿ ಅದರ ಯಶಸ್ಸು ಆ ಮೂಲಕ ನಿಮ್ಮಗಳ ವ್ಯಕ್ತಿತ್ವದ ವಿಕಸನದ ಸಾಧನೆಗಾಗಿ ಎಲ್ಲ ವಿದ್ಯಾಥರ್ಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳಲು ಅರಿಕೆ ಮಾಡಿದರು.

ಕಾಲೇಜಿನಿ ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಗಾತ್ರದಲ್ಲಿ ಚಿಕ್ಕದಾದರೂ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದಲ್ಲಿ ಈ ಕಾಲೇಜಿನಿಂದ ಅಧಿಕ ಸಂಖ್ಯೆಯ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಬೇಕು ಅದಕ್ಕಾಗಿಯೇ ಎಲ್ಲ ಅಧ್ಯಾಪಕರನ್ನೊಳಗೊಂಡಂತೆ ನಡೆಸಿದ ತೀವ್ರತರ ಚಿಂತನೆ ಮತ್ತು ಚಚರ್ೆಯ ಫಲವಾಗಿ ಈ ನೀಲ ನಕ್ಷೆ ರೂಪಿಸಲಾಗಿದೆ. ವಿದ್ಯಾಥರ್ಿಗಳ ಆಪ್ತ ಸಮಾಲೋಚನೆ, ವಿಭಿನ್ನ ವೇದಿಕೆಗಳಲ್ಲಿ ಅವರುಗಳ ಪ್ರತಿಭಾ ಅನಾವರಣಕ್ಕೆ ಅವಕಾಶ, ವಿಚಾರ ಸಂಕಿರಣ, ಸ್ಪೋಕನ್ ಇಂಗ್ಲೀಷ್, ಗುಂಪು ಚಚರ್ೆ, ಚಚರ್ಾಸ್ಪಧರ್ೆ, ಸಮೀಕ್ಷೆ ಸಂಗತಿ ಅಧ್ಯಯನ ರಾಷ್ಟ್ರೀಯ ಸೇವಾ ಯೋಜನೆ ಇವುಗಳನ್ನೊಳಗೊಂಡಂತೆ ಸಾಂಸ್ಕೃತಿಕ ಚಟುವಟಿಕೆಗಳ ಉದ್ದೀಪನ, ಕ್ರೀಡಾ ಚಟುವಟಿಕೆಗಳ ವಿಸ್ತರಣೆ ತನ್ಮೂಲಕ ಪ್ರತಿ ವಿದ್ಯಾಥರ್ಿಯ ಸವಾಂಗೀಣ ವ್ಯಕ್ತಿತ್ವ ವಿಕಸನ ಶೈಕ್ಷಣಿಕ ನೀಲ ನಕ್ಷೆಯ ಯೋಜಿತ ಗುರಿಯಾಗಿಸಿಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾಥರ್ಿಗಳು ಇವೆಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತರೋತ್ತರ ಏಳಿಗೆ ಸಾಧಿಸಲೆಂದು ಹಾರೈಸಿದರು.

ಸಮಾರಂಭದಲ್ಲಿ ಅಧ್ಯಾಪಕರುಗಳಾದ ಆರ್.ಎಂ.ಶೇಖರಯ್ಯ, ಎಸ್.ಎಲ್.ಶಿವಕುಮಾರಸ್ವಾಮಿ, ಬಿ.ಎಸ್.ಬಸವಲಿಂತಯ್ಯ, ಸಿ.ಚನ್ನಬಸಪ್ಪ, ಹೆಚ್.ಎಸ್.ಪ್ರಕಾಶ, ಶಿವಯೋಗಿ, ಆಶಾ, ಅರುಣ್ಕುಮಾರ್, ಡಿ.ಎಸ್.ಲೋಕೇಶ್, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿದ್ಯಾಥರ್ಿಯರಾದ ಅನ್ನಪೂರ್ಣ ಮತ್ತು ಹೇಮ ಪ್ರಾಥರ್ಿಸಿ, ರವಿಚಂದ್ರ ಸ್ವಾಗತಿಸಿ, ದನಲಕ್ಷೀ ನಿರೂಪಿಸಿ, ಶ್ರೀನಿವಾಮೂತರ್ಿ ವಂದಿಸಿದರು.

ಕಂದಿಕೆರೆ ಶಾಂತಪ್ಪನವರ ಜಾತ್ರೆ

ಚಿಕ್ಕನಾಯಕನಹಳ್ಳಿ,ಆ2: ಜಡೇಸಿದ್ದೇಶ್ವರ ಮತ್ತು ಶಾಂತವೀರ ಸ್ವಾಮಿ 21ನೇ ವರ್ಷಬ್ದಿ ಪೂಜಾ ಮತ್ತು ಪಲ್ಲಕ್ಕಿ ಮಹೋತ್ಸವ ಇದೇ ಆಗಸ್ಟ್ 11ರಂದು ಏರ್ಪಡಿಸಲಾಗಿದೆ.

ಮಹೋತ್ಸವದಂದು ಬೆಳಿಗ್ಗೆ 6ಗಂಟೆಗೆ ಗಣಪತಿ ಪೂಜೆ, ರುದ್ರಾಭಿಷೇಕ ನಂತರ ಮಹಾಮಂಗಳಾರತಿ ನಂತರ ಮಧ್ಯಾಹ್ನ 1-30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಸಂಜೆ 6-30ಕ್ಕೆ ಪಲ್ಲಕ್ಕಿ ಮಹೋತ್ಸವ ಜನಪದ ಕಲಾ ವೀರಗಾಸೆ ಕಥಾನಕದೊಂದಿಗೆ ಕಂದಿಕೆರೆ ರಾಜಬೀದಿಗಳಲ್ಲಿ ಏರ್ಪಡಿಸಲಾಗಿದೆ

Sunday, August 1, 2010





  • ಕಳ್ಳತನಕ್ಕೆ ಈ ಶಿಕ್ಷೆ ಸರಿಯೇ. . . . ?
  • ಇದು ಮಾನವ ಹಕ್ಕು ಸ್ಪಷ್ಟ ಉಲ್ಲಂಘನೆ
  • ಕಾನೂನನ್ನು ಕೈಗೆತ್ತಿಕೊಂಡಿದ್ದು ಎಷ್ಟು ಸಮಂಜಸ
  • ನಾಗರೀಕ ಸಮಾಜದಲ್ಲಿ ಇನ್ನೂ ಇಂತಹವಕ್ಕೆ ಅವಕಾಶವಿರುವುದು ಸೊಜಗ
  • ಕಳ್ಳತನಮಾಡಿರುವುದು ತಪ್ಪೇ, ಆದರೆ ಶಿಕ್ಷೆ ಕೊಡಲು ಇವರ್ಯಾರು ?
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.31: ಒಂದುವರೆ ವರ್ಷದಾಚೆ ಲಾರಿಯೊಂದರಲ್ಲಿ 360 ಲೀ ಡೀಸಲ್, ಟಾರ್ಪಾಲ್, ಜಾಕ್ ಮತ್ತಿತರ ವಸ್ತುಗಳನ್ನು ಕದ್ದವ, ಈಗ ಸಿಕ್ಕನೆಂದು ಲೈಟ್ ಕಂಬಕ್ಕೆ ಕಟ್ಟಿ ಹಾಕಿದ್ದ ಪ್ರಸಂಗ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ದೇವಾಂಗ ಬೀದಿಯ ಬನಶಂಕರಿ ದೇವಸ್ಥಾನದ ಬಳಿ ಸುಮಾರು 30 ವರ್ಷದ ವ್ಯಕ್ತಿಯೊರ್ವನನ್ನು ಸುಮಾರು ಎರಡು ಗಂಟೆ ಕಾಲ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಆತನನ್ನು ಅವಮಾನಿಸಲಾಗಿದೆ.
ಲೈಟ್ ಕಂಬಕ್ಕೆ ಕಟ್ಟಲು ಕಾರಣ: ತಿಪಟೂರು ತಾಲೂಕಿನ ಈ ಆರೋಪಿ ಮೈನ್ಸ್ ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದವ, ಈತನ ಸುಬದರ್ಿನಲ್ಲಿ ಖನಿಜ ತುಂಬಿದ ಲಾರಿಯನ್ನು ಅನ್ಲೋಡ್ ಮಾಡಲು ಮಂಗಳೂರಿಗೆ ಕಳುಹಿಸಲಾಗಿತ್ತು, ಆದರೆ ಈತ ಮತ್ತು ಈತನ ಸ್ನೇಹಿತರು ಹಾಸನದ ಬಳಿ ಯ 'ದುದ್ದ'ದ ಬಳಿ ಲಾರಿಯಲ್ಲಿದ್ದ 360 ಲೀ. ಡೀಸಲ್, ಜಾಕ್, ವೀಲ್ ಸ್ಪ್ಯಾನರ್, ಟಾರಪಾಲ್,ಹಗ್ಗ ಸೇರಿದಂತೆ ಲಾರಿಯಲ್ಲಿದ್ದ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ, ಅಂದಿನಿಂದ ಈತನ ಮೇಲೆ ಒಂದು ಕಣ್ಣಿಟ್ಟಿದ್ದೆವು ಇಂದು ಸಿಕ್ಕಿದ, ಪೊಲೀಸಿನವರಿಗೆ ವಿಷಯ ತಿಳಿಸಿದ್ದಕ್ಕೆ, ಈ ಘಟನೆ ನಡೆದಿರುವುದು ದುದ್ದದಲ್ಲಿ ಅಲ್ಲಿಯ ಪೊಲೀಸರಿಗೆ ದೂರು ನೀಡಿ ಎಂದರು, ಈತನನ್ನು ಅಲ್ಲಿಯ ತನಕ ಏಕೆ ಕರೆದುಕೊಂಡು ಹೋಗಲಿ ಇಲ್ಲಿಯೇ ಕಟ್ಟಿ ಹಾಕಿದ್ದೇವೆ. ಈತನನ್ನು ಬಿಡಸಿಕೊಂಡು ಹೋಗುವವರು ಅಂದು ಕಳುವಾಗಿರುವ ಅಷ್ಟೂ ಸಾಮಾಗ್ರಿಗಳನ್ನು ತಂದು ಕೊಟ್ಟು ಬಿಡಿಸಿಕೊಂಡು ಹೋಗಲಿ ಎಂಬುದು ಈತನನ್ನು ಕಂಬಕ್ಕೆ ಕಟ್ಟಿದವರ ದೂರು. ಈ ಬಗ್ಗೆ ಕೈಕಟ್ಟಿಸಿಕೊಂಡವನನ್ನು ಪ್ರಶ್ನಿಸಿದರೆ, ಹೌದು ಆ ದಿನ ಲಾರಿಯಲ್ಲಿದ್ದ ಸಾಮಾನುಗಳು ಕಳ್ಳತನವಾಗಿರುವುದು ಸತ್ಯ, ಆದರೆ ಇದಕ್ಕೆ ನಾನು ಸಂಪೂರ್ಣ ಹೊಣೆಗಾರನಲ್ಲ, ನನ್ನ ಜೊತೆ ಇನ್ನಿತರರು ಇದ್ದರು, ಅವರನ್ನೇಲ್ಲಾ ಸೇರಿಸಿ ಪೊಲೀಸರಿಗೆ ದೂರು ನೀಡಲಿ ಆದರೆ ನನಗೊಬ್ಬನಿಗೆ ಈ ರೀತಿಯ ಶಿಕ್ಷೆ ಏಕೆ ಎಂಬುದು ಆತನ ಅಳಲು.
ಈಗ ಸಾರ್ವಜನಿಕರಲ್ಲಿ ಚಚರ್ೆ ಆಗುತ್ತಿರುವ ವಿಷಯವೆಂದರೆ, ಆತ ನಿಜವಾಗಿಯೂ ಕಳ್ಳನಾಗಿದ್ದರೆ ವಿಚಾರಿಸಲು ಪೋಲೀಸು, ನ್ಯಾಯಾಲಯವಿದೆ, ಆದರೆ ಇವರು ಕಂಬಕ್ಕೆ ಕಟ್ಟಿ ಹಾಕಿರುವುದು ತಪ್ಪು, ಇದು ಮಾನವ ಹಕ್ಕು ಉಲ್ಲಂಘನೆ, ಇಂತಹ ಘಟನೆಗಳು ಹಾಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ, ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತವೆ, ಇನ್ನು ಕೆಲವು ಮುಚ್ಚಿ ಹೋಗುತ್ತವೆ. ಆದರೆ ಈ ರೀತಿ ಅವಮಾನಿಸುತ್ತಿರುವುದು ಎಷ್ಟು ಸರಿ.
ಆಧುನಿಕ ಶೈಲಿಗೆ ಮಾರು ಹೋಗುತ್ತಿರುವ ಯುವಕರು, ಹೇಗಾದರೂ ಸರಿಯೇ ಮೈನೊವಿಲ್ಲದಂತೆ ಬೇಗ ಶ್ರೀಮಂತರಾಗಲು ಅವಣಿಸುತ್ತಿರುವುದು ಎಲ್ಲಾ ಕಡೆ ನಡೆಯುತ್ತಿದೆ. ಹಾಗಾಗಿ ಕಳ್ಳತನವೆಂಬುದು ಒಂದು ಪಿಡುಗಾಗಿದೆ, ಇದನ್ನು ಅವರ ಅವರ ಯೋಗ್ಯಾತಾನುಸಾರ ಮಾಡುತ್ತಿದ್ದಾರೆ, ಅದೊಂದು ಕುಕೃತ್ಯವೆಂದು ತಿಳಿದೂ ತಿಳಿದು ಮಾಡುತ್ತಿರುವದಕ್ಕೆ ಕ್ಷಮೆ ಇಲ್ಲ, (ದೊಡ್ಡೋರು/ಅಧಿಕಾರದಲ್ಲಿರುವವರು ಮಾಡುವುದು ಬೇರೆ ಮಾತು.....!), ಆದರೆ ಈ ಕಳ್ಳತನಕ್ಕೆ ಈ ರೀತಿಯ ಶಿಕ್ಷೆ ಸರಿಯೇ. . . !?

ಚಿನ್ನಾಭರಣ ದೋಚಲು ಹೊಂಚು ಹಾಕುತ್ತಿದ್ದವರ ಬಂಧನ
ಚಿಕ್ಕನಾಯಕನಹಳ್ಳಿ,ಜು.31: ಪಟ್ಟಣದ ಜ್ಯೂಯಲರಿಯ ಮಾಲೀಕರೊಬ್ಬರು ಚಿನ್ನಾಭರಣಗಳನ್ನು ಅಂಗಡಿಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲಿ ದೋಚಲು ಹೊಂಚುಹಾಕುತ್ತಿದ್ದ ಯುವಕರ ಗುಂಪೊಂದನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಕಿಶೋರ್ ಜ್ಯೂಯಲರ್ಸ್ನ ಮಾಲೀಕ ತನ್ನ ಅಂಗಡಿಯಲ್ಲಿದ್ದ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಿಂದ ಅಂಗಡಿಗೆ ತೆಗೆದುಕೊಂಡು ಹೋಗುವ ಬಗ್ಗೆ ಮಾಹಿತಿ ಪಡೆದು ಆ ಆಭರಣಗಳನ್ನು ದೋಚಲು ಸಕರ್ಾರಿ ಪದವಿ ಪೂರ್ವ ಕಾಲೇಜ್ನ ಬಳಿ ಹೊಂಚು ಹಾಕುತ್ತಿದ್ದ ಯುವಕರಾದ ಬೆಂಗಳೂರಿನ ಇಮ್ರಾನ್, ಸದ್ದಾಂ, ಭರತ್ ಗೌಡ, ಶ್ರೀಧರ, ನವೀನ, ಜಿ.ಎಂ.ಗೌಡ, ಸತೀಶ,ನಾಗರಾಜು ಎಂಬುವರನ್ನು ಬಂಧಿಸಿದ್ದು, ಇವರ ಬಳಿ ಇದ್ದ ಒಂದು ಲಾಂಗ್, ಖಾರದ ಪುಡಿ, 4 ಮೊಬೈಲ್, ಮೋಟಾರ್ ಸೈಕಲ್ನ್ನು ವಶ ಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾಯರ್ಾಚರಣೆಯಲ್ಲಿ ವೃತ್ತ ನಿರೀಕ್ಷಕ ಪಿ.ರವಿಪ್ರಸಾದ್ ನೇತೃತ್ವದಲ್ಲಿ ಕೆ.ಬಿ.ಕ್ರಾಸ್ ಪಿ.ಎಸೈ. ರಾಘವೇಂದ್ರ ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು.

ಜಡೇಸಿದ್ದೇಶ್ವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಜು.30: ಜಡೇಸಿದ್ದೇಶ್ವರ ಮತ್ತು ಶಾಂತವೀರ ಸ್ವಾಮಿ 21ನೇ ವರ್ಷಬ್ದಿ ಪೂಜಾ ಮತ್ತು ಪಲ್ಲಕ್ಕಿ ಮಹೋತ್ಸವ ಇದೇ ಆಗಷ್ಟ್ 11ರಂದು ಏರ್ಪಡಿಸಲಾಗಿದೆ.
ಮಹೋತ್ಸವದಂದು ಬೆಳಿಗ್ಗೆ 6ಗಂಟೆಗೆ ಗಣಪತಿ ಪೂಜೆ, ರುದ್ರಾಭಿಷೇಕ ನಂತರ ಮಹಾಮಂಗಳಾರತಿ ನಂತರ ಮಧ್ಯಾಹ್ನ 1-30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಸಂಜೆ 6-30ಕ್ಕೆ ಪಲ್ಲಕ್ಕಿ ಮಹೋತ್ಸವ ಜನಪದ ಕಲಾ ವೀರಗಾಸೆ ಕಥಾನಕದೊಂದಿಗೆ ಕಂದಿಕೆರೆ ರಾಜಬೀದಿಗಳಲ್ಲಿ ನಡೆಯುವುದು.
ಯಶಸ್ವಿ ಆರೋಗ್ಯ ಮತ್ತು ರಕ್ತದಾನ ಶಿಬಿರ
ಚಿಕ್ಕನಾಯಕನಹಳ್ಳಿ,ಜು.30: ಜನತೆಗೆ ಅಗತ್ಯವಾಗಿರುವುದು ನೀರಾವರಿ ಸೌಲಭ್ಯ ಈ ಕೊರತೆ ನಿವಾರಣೆಗಾಗಿ ಇಂದು ತಾಲೂಕಿನಲ್ಲಿ ನೀರಾವರಿ ಹೋರಾಟದಿನವನ್ನಾಗಿ ಆಚರಿಸಲಾಗಿದೆ ಎಂದು ಡಾ.ಯತೀಶ್ವರ ಶಿವಚಾರ್ಯಸ್ವಾಮೀಜಿ ಹೇಳಿದರು.
ತಾಲೂಕಿನ ಕಪ್ಪೂರು ಗದ್ದಿಗೆ ಮಠದಲ್ಲಿ ಯತೀಶ್ವರ ಶಿವಚಾರ್ಯಸ್ವಾಮಿ 36ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಮ್ಮ ಜನ್ಮದಿನವನ್ನು ನೀರಾವರಿ ಹೋರಾಟ ದಿನವನ್ನಾಗಿ ಆಚರಿಸಲು ಸಂಕಲ್ಪಿಸಲಾಗಿದೆ ಇದಕ್ಕೆ ತಾಲೂಕಿನ 67ಸಂಘಟನೆಗಳು ಬೆಂಬಲ ಸೂಚಿಸಿದ್ದು ಮುಂದೆ ವಿವಿಧ ಹೋರಾಟಗಳನ್ನು ರೂಪಿಸಲಾಗುವುದು ಎಂದರು.
ಪುರಷೋತ್ತಮಾನಂದ ಸ್ವಾಮೀಜಿ ಮಾತನಾಡಿ ಮಾನವ ಜನ್ಮವನ್ನು ಸನ್ಮಾರ್ಗದ ಮೂಲಕ ಸಾರ್ಥಕತೆ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಆರೋಗ್ಯ ತಪಾಸಣೆ ಶಿಬಿರದ ಮುಖ್ಯಸ್ಥರಾದ ಡಾ.ಜಿ.ಪರಮೇಶ್ವರಪ್ಪ ಮಾತನಾಡಿ ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮಠದ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ಪುಸ್ತಕ ವಿತರಣೆ ಮತ್ತು ಸುತ್ತಮುತ್ತಲಿನ ನೂರಾರು ಮಂದಿಗೆ ವಿವಿಧ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.

ಹರಿಯ ವಿದ್ಯಾಥರ್ಿಗಳಿಂದ ಕಿರಿಯ ವಿದ್ಯಾಥರ್ಿಗಳಿಗೆ ಸ್ವಾಗತ
ಚಿಕ್ಕನಾಯಕನಹಳ್ಳಿ,ಜು.30: ಭವಿಷ್ಯದ ಬಗೆಗೆ ಹಲವು ಹೊಂಗನಸುಗಳನ್ನು ಹೊತ್ತು ಹೊಸ ಪರಿಸರದಲ್ಲಿ ಪ್ರವೇಶ ಪಡೆದು ಆರಂಭಿಕ ಮುಜುಗರಕ್ಕೆ ಒಳಗಾಗುವ ವಿದ್ಯಾಥರ್ಿಗಳ ಆತಂಕವನ್ನು ತಪ್ಪಿಸಲು ಸ್ಥಳೀಯ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳ ಕಿರಿಯ ವಿದ್ಯಾಥರ್ಿಗಳನ್ನು ಪರಿಚಯಿಸಿಕೊಳ್ಳಲು ಆತ್ಮೀಯವೆನಿಸುವ 'ಮಡಿಲು ಸೇರುವ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಹಿರಿಯ ಮತ್ತು ಕಿರಿಯ ವಿದ್ಯಾಥರ್ಿಗಳಲ್ಲಿ ಅನೇಕರು ಪರಸ್ಪರ ಶುಭಾಷಯ ಮತ್ತು ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಿದ ತರುವಾಯ ಕಾಲೇಜಿನ ಅಧ್ಯಾಪಕ ವೃಂದ 2010-11ನೇ ಸಾಲಿನ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ನೀಲ ನಕ್ಷೆಯೊಂದನ್ನು ವಿದ್ಯಾಥರ್ಿಗಳ ಎದುರು ಅನಾವರಣಗೊಳಿಸಿ ಅದರ ಯಶಸ್ಸು ಆ ಮೂಲಕ ನಿಮ್ಮಗಳ ವ್ಯಕ್ತಿತ್ವದ ವಿಕಸನದ ಸಾಧನೆಗಾಗಿ ಎಲ್ಲ ವಿದ್ಯಾಥರ್ಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳಲು ಅರಿಕೆ ಮಾಡಿದರು.
ಕಾಲೇಜನಿ ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಗಾತ್ರದಲ್ಲಿ ಚಿಕ್ಕದಾದರೂ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದಲ್ಲಿ ಈ ಕಾಲೇಜಿನಿಂದ ಅಧಿಕ ಸಂಖ್ಯೆಯ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಬೇಕು ಅದಕ್ಕಾಗಿಯೇ ಎಲ್ಲ ಅಧ್ಯಾಪಕರನ್ನೊಳಗೊಂಡಂತೆ ನಡೆಸಿದ ತೀವ್ರತರ ಚಿಂತನೆ ಮತ್ತು ಚಚರ್ೆಯ ಫಲವಾಗಿ ಈ ನೀಲ ನಕ್ಷೆ ರೂಪಿಸಲಾಗಿದೆ. ವಿದ್ಯಾಥರ್ಿಗಳ ಆಪ್ತ ಸಮಾಲೋಚನೆ ವಿಭಿನ್ನ ವೇದಿಕೆಗಳಲ್ಲಿ ಅವರುಗಳ ಪ್ರತಿಭಾ ಅನಾವರಣಕ್ಕೆ ಅವಕಾಶ, ವಿಚಾರ ಸಂಕಿರಣ, ಸ್ಪೋಕನ್ ಇಂಗ್ಲೀಷ್, ಗುಂಪು ಚಚರ್ೆ, ಚಚರ್ಾಸ್ಪಧರ್ೆ, ಸಮೀಕ್ಷೆ ಸಂಗತಿ ಅಧ್ಯಯನ ರಾಷ್ಟ್ರೀಯ ಸೇವಾ ಯೋಜನೆ ಇವುಗಳನ್ನೊಳಗೊಂಡಂತೆ ಸಾಂಸ್ಕೃತಿಕ ಚಟುವಟಿಕೆಗಳ ಉದ್ದೀಪನ, ಕ್ರೀಡಾ ಚಟುವಟಿಕೆಗಳ ವಿಸ್ತರಣೆ ತನ್ಮೂಲಕ ಪ್ರತಿ ವಿದ್ಯಾಥರ್ಿಯ ಸವಾಂಗೀಣ ವ್ಯಕ್ತಿತ್ವ ವಿಕಸನ ಶೈಕ್ಷಣಿಕ ನೀಲ ನಕ್ಷೆಯ ಯೋಜಿತ ಗುರಿಯಾಗಿಸಿಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾಥರ್ಿಗಳು ಇವೆಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತರೋತ್ತರ ಏಳಿಗೆ ಸಾಧಿಸಲೆಂದು ಹಾರೈಸಿದರು.
ಸಮಾರಂಭದಲ್ಲಿ ಅಧ್ಯಾಪಕರುಗಳಾದ ಆರ್.ಎಂ.ಶೇಖರಯ್ಯ, ಎಸ್.ಎಲ್.ಶಿವಕುಮಾರಸ್ವಾಮಿ, ಬಿ.ಎಸ್.ಬಸವಲಿಂತಯ್ಯ, ಸಿ.ಚನ್ನಬಸಪ್ಪ, ಹೆಚ್.ಎಸ್.ಪ್ರಕಾಶ, ಶಿವಯೋಗಿ, ಆಶಾ, ಅರುಣ್ಕುಮಾರ್, ಡಿ.ಎಸ್.ಲೋಕೇಶ್, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿಯರಾದ ಅನ್ನಪೂರ್ಣ ಮತ್ತು ಹೇಮ ಪ್ರಾಥರ್ಿಸಿ, ರವಿಚಂದ್ರ ಸ್ವಾಗತಿಸಿ, ದನಲಕ್ಷೀ ನಿರೂಪಿಸಿ, ಶ್ರೀನಿವಾಮೂತರ್ಿ ವಂದಿಸಿದರು.
ಹೈನುಗಾರಿಕೆ ಅಭಿವೃದ್ದಿ ಪಡಿಸಿ ಬೆಂಗಳೂರಿನ ವಲಸೆ ತಪ್ಪಿಸಿ
ಚಿಕ್ಕನಾಯಕನಹಳ್ಳಿ,ಜು.30: ವಿಧವೆಯರಿಗೆ ಹಸು ಸಾಕಲು ಹಾಲು ಒಕ್ಕೂಟ 35ಸಾವಿರ ರೂಗಳನ್ನು ಸಾಲನೀಡುತ್ತಿದ್ದು ಈ ಸಾಲ ಯೋಜನೆಯಲ್ಲಿ 18,500ರೂಗಳ ಸಬ್ಸಿಡಿ ದೊರೆಯಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿದರ್ೇಶಕ ಶಿವನಂಜಪ್ಪ ಹಳೇಮನೆ ತಿಳಿಸಿದರು.
ತಾಲೂಕಿನ ಕುಪ್ಪೂರು ಗ್ರಾ.ಪಂ.ವ್ಯಾಪ್ತಿಯ ಬೆನಕನಕಟ್ಟೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲು ಏರ್ಪಡಿಸಿದ್ದ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ತಿಂಗಳಿಗೆ ಐದಾರು ಸಾವಿರ ದುಡಿಯಲು ಬೆಂಗಳೂರಿಗೆ ವಲಸೆ ಹೋಗಿ ಅಲ್ಲಿ ಕಷ್ಟ ಅನುಭವಿಸುವ ಬದಲು ತಮ್ಮ ಊರಿನಲ್ಲೇ ಎರಡು ಸೀಮೆಹಸುವನ್ನು ಸಾಕಿದರೆ ಅದು ಕೊಡುವ ಹಾಲಿನಲ್ಲಿ ಸುಖವಾಗಿ ತಮ್ಮ ತಂದೆ, ತಾಯಿಗಳ ಜೊತೆಯಲ್ಲಿ ಆನಂದವಾಗಿ ಸಂಸಾರ ನಡೆಸಬಹುದೆಂದರು ಒಕ್ಕೂಟವೇ 20 ತರಹದ ಔಷದಿಯನ್ನು ಕೊಡುತ್ತಿದೆ ಎಂದರು. ಈ ಮೂರು ವರ್ಷದಲ್ಲಿ ತಾಲೂಕಿನಲ್ಲಿ 80ಕ್ಕೂ ಅಧಿಕ ಹಾಲೂ ಉತ್ಪಾದಕರ ಸಂಘಗಳನ್ನು ನೊಂದಾಯಿಸಿದ್ದು ನಮ್ಮ ಅವಧಿಯಲ್ಲಿ 101 ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇನೆ ಎಂದರು.
ನಮ್ಮ ತಾಲೂಕಿನಿಂದ ತುಮಕೂರಿಗೆ ಪ್ರತಿ ದಿನ 30ಸಾವಿರ ಲೀಟರ್ ಹಾಲನ್ನು ರವಾನೆ ಮಾಡುತ್ತಿತ್ತು, ಮಲ್ಲಸಂದ್ರದ ಬಳಿ ಇರುವ ಹಾಲು ಒಕ್ಕೂಟಕ್ಕೆ ಪ್ರತಿದಿನ 3ಲಕ್ಷದ 65ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದರು.
ನಾನು ಈ ಹಿಂದೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಸಂದರ್ಭದಲ್ಲಿ ಒಕ್ಕೂಟ 11ಕೋಟಿ ಸಾಲದ ಹೊರೆಯನ್ನು ಹೊಂದಿತ್ತು. ಈ ಸಾಲವನ್ನೆಲ್ಲ ತೀರಿಸಲು ನಾನು ಸಾಕಷ್ಟು ಶ್ರಮಿಸಿ ಹತ್ತು ಕೋಟಿಗೂ ಹೆಚ್ಚು ಸಾಲವನ್ನು ತೀರಿಸಿದೆನು ಎಂದರು.
ಈ ಸಭೆಯಲ್ಲಿ ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ ಹಾಲು ಉತ್ಪಾದಕರಿಗೆ ಸಾಕಷ್ಟು ಅವಕಾಶಗಳಿದ್ದು ಸಕರ್ಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಹಾಲು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಗ್ರಾಮ ಸಭೆಯಲ್ಲಿ ಮುಖ್ಯ ಪ್ರವರ್ತಕರು ಸೇರಿದಂತೆ ಹತ್ತು ಜನ ಪ್ರವರ್ತಕರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ಕೃಷ್ಣಮೂತರ್ಿ, ಹಿರಿಯಣ್ಣ ಪಾಂಡುರಂಗಯ್ಯ, ವಾಗೀಶ ಪಂಡಿತರಾದ್ಯ ಸೇರಿದಂತೆ ವಿಸ್ತರಣಾಧಿಕಾರಿಗಳಾದ ಬಸವಯ್ಯ, ಯರಗುಂದಪ್ಪ, ಬಲಟ್ಟಿಪ್ರಸಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸಕರ್ಾರಿ ಕಿ.ಪ್ರಾ.ಶಾಲೆಯ ವಿದ್ಯಾಥರ್ಿಗಳಾದ ದರ್ಶನ್ ಮತ್ತು ಲೀನಾ ಪ್ರಾಥರ್ಿಸಿದರೆ ವೆಂಕಟೇಶ್ ಸ್ವಾಗತಿಸಿ, ವಂದಿಸಿದರು.





Tuesday, July 27, 2010

ಕುಪ್ಪೂರು ಶ್ರೀ ಹುಟ್ಟು ಹಬ್ಬವನ್ನು ತಾಲೂಕಿನ ನೀರಾವರಿ ಹೋರಾಟದ ದಿನವಾಗಿ ಆಚರಣೆ
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಇದೇ ಸಂದರ್ಭದಲ್ಲಿ ತಾಲೂಕಿನ ನೀರಾವರಿ ಹೋರಾಟದ ರೂಪುರೇಷೆಗಳನ್ನು ಚಚರ್ಿಸಲಾಗುವುದು ಎಂದು ರೈತ ಸಂಘದ ಮುಖಂಡ ಸತೀಶ್ ಕೆಂಕೆರೆ ಹಾಗೂ ಡಾ.ಪರಮೇಶ್ ತಿಳಿಸಿದ್ದಾರೆ.
ಕುಪ್ಪೂರು ಶ್ರೀ ಮರುಳುಸಿದ್ದೇಶ್ವರ ಗದ್ದಿಗೆ ಸಂಸ್ಥಾನ ಮಠಾಧ್ಯಕ್ಷರಾ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳ 36ನೇ ಹುಟ್ಟು ಹಬ್ಬವನ್ನು ಇದೇ 29ರ ಗುರುವಾರ ಕುಪ್ಪೂರಿನಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ತಾಲೂಕಿಗೆ ನದಿಪಾತ್ರಗಳಿಂದ ನೀರು ತರುವ ವಿಷಯವಾಗಿ ಚಚರ್ಿಸಲು 63 ಸಂಘಟನೆಗಳು ಭಾಗವಹಿಸಲಿವೆ ಎಂದು ಸತೀಶ್ ತಿಳಿಸಿದರು.
ತಾಲೂಕಿಗೆ ನೀರು ತರುವ ವಿಷಯವಾಗಿ ಹುಳಿಯಾರಿನಲ್ಲಿ 70 ದಿನಗಳ ಸುದೀರ್ಘ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಲ್ಲದೆ, ನೀರಾವರಿ ಸಚಿವರ ಬಳಿಯೂ ನಿಯೋಗ ತೆರಳಿ ಈ ಬಗ್ಗೆ ಸಕರ್ಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು, ಆ ಸಂದರ್ಭದಲ್ಲಿ ಸಚಿವರ ನೀಡಿದ ವಾಗ್ದಾನದಂತೆ ಕೆಲಸವಾಗಿರುವುದಿಲ್ಲ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಆಸಕ್ತಿವಹಿಸಿರುವುದಿಲ್ಲ, ಆದ್ದರಿಂದ ಮುಂದಿನ ನಮ್ಮ ನಡೆಯ ಬಗ್ಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳೊಂದಿಗೆ ಮತ್ತೊಮ್ಮೆ ಚಚರ್ಿಸುವ ಕುಪ್ಪೂರು ಶ್ರೀಗಳ ಹುಟ್ಟು ಹಬ್ಬದ ದಿನದಂದು ಕುಪ್ಪೂರಿನಲ್ಲಿ ಸಭೆ ಕರೆಯಲಾಗಿದೆ ಎಂದು ಸತೀಶ್ ಕೆಂಕೆರೆ ಹಾಗೂ ಡಾ.ಪರಮೇಶ್ವರ ತಿಳಿಸಿದ್ದಾರೆ.
ಶಿಕ್ಷಕರ ಸಂಘದ ಒಗ್ಗಟ್ಟನ್ನು ಹೊಡೆಯಬೇಡಿ ಸಂಘದ ಪದಾಧಿಕಾರಿಗಳ ಮನವಿ
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಕೆಲವು ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಧನೆಗಳನ್ನು ತಿಳಿದರೂ ಸಹ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಶಿಕ್ಷಕರಲ್ಲಿ ತಪ್ಪು ಕಲ್ಪನೆ ಮೂಡಿಸಿ ಸಂಘದ ಬಗ್ಗೆ ಅಪಪ್ರಚಾರ ಮಾಡಿ ಪಯರ್ಾಯ ಸಂಘ ರಚಿಸುತ್ತೇವೆಂದು ಶಿಕ್ಷಕರ ಹಾಗೂ ಸಂಘದ ಒಗ್ಗಟ್ಟನ್ನು ವಿಭಜಿಸಲು ಹೊರಟಿದ್ದಾರೆಂದು.ಪ್ರಾ.ಶಾ.ಶಿ. ಸಂಘದ ತಾಲೂಕು ಅಧ್ಯಕ್ಷ ಎಚ್.ಎಮ್.ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸಂಘದ ವಿರುದ್ದವಾಗಿ ರಾಜ್ಯಮಟ್ಟದಲ್ಲಿ ಹಲವಾರು ಸಂಘಗಳು ಉದಯವಾಗುತ್ತಿದೆ ಇವೆಲ್ಲಾ ಸೂಯರ್ೊದಯಕ್ಕೆ ಉದಯವಾಗಿ ಸೂಯೂಸ್ತ ಸಮಯಕ್ಕೆ ಅಸ್ತಂಗತವಾಗುತ್ತವೆ ಇದರಿಂದಾಗಿ ಈ ಸಂಘಗಳು ಶಿಕ್ಷಕರ ಪರವಾಗಿ ಹೋರಾಟ ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ಟೀಕಿಸಿರುವ ಅವರು, ನಮ್ಮ ಸಂಘವು ಚುನಾವಣೆಯ ನಂತರ ಒಂದು ವರ್ಷದಲ್ಲಿ ಪರಿಹಾರ ಭೋಧನೆಯನ್ನು ಶಾಲಾ ಅವಧಿಯಲ್ಲಿಯೇ ಮಾಡುವಂತೆ ಮತ್ತು ಅಕ್ಟೋಬರ್ ರಜೆ ಅವದಿಯು ಕಡಿತವಾಗಿದ್ದನ್ನು ಮೊದಲಿನಂತೆಯೇ ರಜೆ ಅವಧಿಯನ್ನು ನಿಗಧಿ ಪಡಿಸುವಂತೆ ಆದೇಶ ಮಾಡುವಲ್ಲಿ ನಮ್ಮ ಸಂಘ ಯಶಸ್ವಿಯಾಗಿದೆ, ಎಲ್ಲಾ ಶಿಕ್ಷಕರಿಗೂ ತಿಂಗಳ ಮೊದಲನೇ ವಾರದಲ್ಲಿ ವೇತನ ನೀಡಿ ಯಾವುದೇ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದೆ.
ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಶಿಕ್ಷಕರಿಗೆ ನಿವೇಶನ ಕೊಡಿಸುವುದರ ಮೂಲಕ ಪ್ರತಿ ತಾಲೂಕಿನಲ್ಲಿ ಶಿಕ್ಷಕರ ಬಡಾವಣೆ ನಿಮರ್ಿಸುವ ಪ್ರಯತ್ನ ಮಾಡಿದರೂ ಸಹ ಕೆಲವು ಮಂದಿ ಶಿಕ್ಷಕರು ಬೇರೆ ಬೇರೆ ಸಂಘ ಸ್ಥಾಪಿಸುತ್ತೇವೆಂದು ನಮ್ಮ ಸಂಘಕ್ಕೆ ಬೆಂಬಲ ನೀಡಿ ಎಂದು ಸಹಿ ಸಂಗ್ರಹಿಸಿರುವುದರಲ್ಲಿ ನಿರತರಾಗಿರುವುದು ಸಂಘದ ಗಮನಕ್ಕೆ ಬಂದಿದ್ದು ಯಾವುದೇ ರೀತಿಯಲ್ಲಿ ಇಂತಹ ಅನಾಮಧೇಯ ಸಂಘಟನೆಗಳ ಮನವಿಗೆ ಕಿವಿಗೊಡದೆ ಹಾಗೂ ಸಹಿ ಹಾಕಲು ನಿರಾಕರಿಸುವುದರ ಮೂಲಕ ಸಂಘಟನಾ ಶಕ್ತಿಯನ್ನು ಬಲಪಡಿಸಬೇಕೆಂದು ಉಪಾಧ್ಯಕ್ಷ ಎಸ್.ಸಿ.ನಟರಾಜ್, ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ್, ಸಂಘಟನಾ ಕಾರ್ಯದಶರ್ಿ ಶಾಂತಮ್ಮ, ಸಹಕಾರ್ಯದಶರ್ಿ ಎಲ್.ಅನಸೂಯಮ್ಮ ವಿನಂತಿಸಿದ್ದಾರೆ.
ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಸಾವು.
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಗಾಂಧಿನಗರ ಕೈಮರದ ಬಳಿ ಕೃಷಿ ಹೊಂಡಕ್ಕೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಕೋಡಿಪಾಳ್ಯದ ಗಂಗಾಧರಯ್ಯ ಎಂಬುವರಿಗೆ ಸೇರಿದ ಈ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಗೌಡನಕಟ್ಟೆಯ ಗೌರಮ್ಮ(45) ಎಂದು ಗುರುತಿಸಲಾಗಿದೆ, ಪಾಶ್ರ್ವವಾಯು ಪೀಡಿತಳಾದ ಈಕೆ ಮಾನಸಿಕವಾಗಿ ನೊಂದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಹಂದನಕೆರೆ ಪಿ.ಎಸೈ. ಟಿ.ವಿ.ರಾಜು ಪ್ರಕರಣ ದಾಖಲಿಸಿದ್ದಾರೆ.
ಬಿ2ಬಿ ಪಾದಯಾತ್ರೆಗೆ ಬಿ.ಸಿ.ಸಿ. ಪಾದಾರ್ಪಣೆ
ಚಿಕ್ಕನಾಯಕನಹಳ್ಳಿ,ಜು.27: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಬೆಂಗಳೂರು ಬಳ್ಳಾರಿ ಪಾದಯಾತ್ರೆಯಲ್ಲಿ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಭಾಗವಹಿಸುವುದಾಗಿ ಅಧ್ಯಕ್ಷ ಸಿ.ಬಸವರಾಜು ಹೇಳಿಕೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯ ವಿರುದ್ದ ಸಿ.ಬಿ.ಐ.ಗೆ ವಹಿಸುವಂತೆ ಒತ್ತಾಯಿಸುವುದು ಹಾಗೂ ಬಿ.ಜೆ.ಪಿ.ಸಕರ್ಾರದ ವೈಫಲ್ಯದ ವಿರುದ್ದ ಹಾಗೂ ನಾಡಿನ ರಕ್ಷಣೆಗಾಗಿ ಕೆ.ಪಿ.ಸಿ.ಸಿ.ಆಯೋಜಿಸಿರುವ ಈ ಪಾದಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ನ ಜನಾಂದೋಲನ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆಯನ್ನು ಒಳಗೊಂಡ ಸಾಮೂಹಿ ನಾಯಕತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಯಶಸ್ವಿಗಾಗಿ ಹಳ್ಳಿ ಹಳ್ಳಿಯಿಂದ ಸ್ವಯಂ ಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯರುಗಳಾದ ಸಿ.ಪಿ.ಮಹೇಶ್, ಬಾಬು ಸಾಹೇಬ್, ಧರಣಿ ಲಕ್ಕಪ್ಪ, ರೇಣುಕ ಗುರುಮೂತರ್ಿ, ಎಚ್.ಬಿ.ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೇಗೌಡ, ಚಿ.ಲಿಂ.ರವಿಕುಮಾರ್, ಶಿವಕುಮಾರಸ್ವಾಮಿ, ನಿಜಾನಂದಮೂತರ್ಿ, ರಾಮಕೃಷ್ಣಯ್ಯ, ಸಿ.ಎಂ.ಬೀರಪ್ಪ, ಸೇರಿದಂತೆ ಹಲವು ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಹಿಸಿದ್ದರು.


Sunday, July 25, 2010

Saturday, July 24, 2010


ಪ್ರತಿಭೆಗಳ ಭವಿಷ್ಯ ಬೆಳಗಿಸಲು ಸ್ಪಧರ್ೆಗಳನ್ನು ಏರ್ಪಡಿಸಲು ನಾಯಕರು ಮುಂದೆ ಬರಬೇಕು
ಚಿಕ್ಕನಾಯಕನಹಳ್ಳಿ,ಜು.24: ಪ್ರತಿಭೆಗಳನ್ನು ಗುರುತಿಸುವ ಮತ್ತು ಅವರ ಭವಿಷ್ಯವನ್ನು ಬೆಳೆಗಿಸುವ ಉತ್ತಮ ಕಾರ್ಯವು ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇಲ್ಲಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಸ್ಪಧರ್ಿಗಳು ಗೆಲುವು-ಸೋಲು ಎರಡು ಒಂದೇ ಮುಖಗಳೆಂದು ಭಾವಿಸಿ ಉತ್ತಮ ನೃತ್ಯಪ್ರದರ್ಶನವನ್ನು ನೀಡಿ ಮನರಂಜನೆ ಕೊಡಬೇಕು ಎಂದ ಅವರು ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆಯಲ್ಲಿ ಇನ್ನಿತರ ಸಣ್ಣಪುಟ್ಟ ಕಾರ್ಯಕ್ರಮ ನಡೆದು ಜಾತ್ರೆಯನ್ನು ಇನ್ನೂ ಹೆಚ್ಚು ಜನಪ್ರಿಯಗೊಳಿಸಬೇಕು ಎಂದರು.
ಕರಿಸಿದ್ದೇಶ್ವರ ಮಠದ ಶಿವಪ್ರಕಾಶ್ಶಿವಚಾರ್ಯಸ್ವಾಮಿ ಮಾತನಾಡಿ ಸ್ಪಧರ್ಿಗಳು ಸ್ಪಧರ್ೆಗೆ ಭಾಗವಹಿಸುವುದರ ಜೊತೆಗೆ ತಮ್ಮ ಪ್ರತಿಭೆಯಿಂದ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಅನ್ನಪೂರ್ಣಕಲಾ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪುರಸಭಾ ಸದಸ್ಯ ಸಿ.ಟಿ.ವರದರಾಜು, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಕುಶಾಲ್ ಗಾಮರ್ೆಂಟ್ಸ್ ಮಾಲೀಕ ಶಾಂತಕುಮಾರ್, ರವಿಚಂದ್ರ, ಶಶಿಕುಮಾರ್ ಉಪಸ್ಥಿತರಿದ್ದರು.
ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ನೆರವಾಗಬೇಕು
ಚಿಕ್ಕನಾಯಕನಹಳ್ಳಿ,ಜು.24 ಮಕ್ಕಳ ಭವಿಷ್ಯ ಮತ್ತು ಅವರ ಪ್ರಗತಿಗೆ ಸಕರ್ಾರ ರೂಪಿಸಿರುವ ಕಾರ್ಯಕ್ರಮಗಳ ಜೊತೆಗೆ ಪೋಷಕರು ನೆರವಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಪ್ರಸನ್ನರಾಮೇಶ್ವರ ದೇವಾಲಯದಲ್ಲಿ ನಡೆದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ಮಕ್ಕಳು ಪುಣ್ಯವಂತರು, ಸಕರ್ಾರದ ಹಲವಾರು ಯೋಜನೆಗಳು ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದು ಉನ್ನತ ಶಿಕ್ಷಣ ಪಡೆಯಬೇಕು ಎಂದರಲ್ಲದೆ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಬೇಕು ಎಂದರು.
ಸಮಾರಂಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಉಪಸ್ಥಿತರಿದ್ದರು.
ವಿದ್ಯುತ್ ಸಮಸ್ಯೆ ನೀಗಿಸಲು ಮನವಿ
ಚಿಕ್ಕನಾಯಕನಹಳ್ಳಿ,ಜು.24:ತಾಲೂಕಿನ ಗಾಂಧಿನಗರದ ನಿವೇಶನಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ಹೊತ್ತು ಹಾವು ಹಾಗೂ ಕಾಡು ಹಂದಿಗಳ ಹಾವಳಿ ಹೆಚ್ಚಾಗಿ ತುಂಬಾ ತೊಂದರೆ ಅನುಭವಿಸಿತ್ತಿದ್ದೇವೆ ಎಂದು ಗಾಂದಿನಗರದ ನಿವಾಸಿಗಳು ಪತ್ರಿಕೆಯ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗಾಂಧಿನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಿವೇಶನ ಪತ್ರಗಳನ್ನು ನೀಡಿದ್ದು ಅದರ ಜೊತೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು, ವಿದ್ಯುತ್ ಸಂಪರ್ಕವು ಗಾಂಧಿನಗರದಲ್ಲಿ ಇಲ್ಲದೆ ಹಲವಾರು ಪ್ರಾಣಿಗಳಿಂದ ಜನರ ಪ್ರಾಣಕ್ಕೆ ಸಂಚಕಾರವಿದೆ ಮತ್ತು ಇಲ್ಲಿನ ವಿದ್ಯಾಥರ್ಿಗಳಿಗೆ ರಾತ್ರಿ ಹೊತ್ತು ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ ಈ ಸಮಸ್ಯೆಯನ್ನು ಪರಿಹರಿಸಲು ಅಲ್ಲಿನ ನಿವಾಸಿಗಳು ಪುರಸಭೆಯವರನ್ನು ಕೋರಿದ್ದಾರೆ.




Friday, July 23, 2010



ಮಹಿಳಾ ಸ್ವಸಹಾಯ ಗುಂಪುಗಳಿಂದ ತಯಾರಿಸದ ಉತ್ಪನ್ನಗಳ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಜು.22: ಸಮಗ್ರ ಶಿಶು ಅಭಿವೃದ್ದಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಉಪವಿಭಾಗ ಮಟ್ಟದ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವು ಇದೇ ಜುಲೈ 23ರಿಂದ 25ರವರಗೆ ನಡೆಯಲಿದೆ.
ಮೇಳದ ಉದ್ಘಾಟನ ಸಮಾರಂಭವು ಜುಲೈ 23ರ ಶುಕ್ರವಾರ ಮಧ್ಯಾಹ್ನ 12-30ಕ್ಕೆ ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಆವರಣದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ತಿಪಟೂರು ಶಾಸಕ ಬಿ.ಸಿ.ನಾಗೇಶ್ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಜಿ.ಪಂ.ಸದಸ್ಯರಾದ ಜಯಮ್ಮದಾನಪ್ಪ, ರಘುನಾಥ್ ಹೆಚ್.ಬಿ.ಹೊನ್ನಯ್ಯ, ಸುಶೀಲಸುರೇಂದ್ರಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಿ, ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ಲಿಂಗದೇವರು, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿದರ್ೇಶಕ ಹೆಚ್.ಕೆ.ದಾಸಪ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ಡಾ.ವಿ.ವೇದಮೂತರ್ಿ ಉಪಸ್ಥಿತರಿರುವರು.
ಜಾತ್ರೆಯ ಪ್ರಯುಕ್ತ ಸಂಪೂರ್ಣ ರಾಮಾಯಣ ನಾಟಕ
ಚಿಕ್ಕನಾಯಕನಹಳ್ಳಿ,ಜು.22: ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಉಯ್ಯಾಲೋತ್ಸವದ ಅಂಗವಾಗಿ 10ನೇ ವರ್ಷದ ಸಂಪೂರ್ಣ ರಾಮಾಯಣ ನಾಟಕವನ್ನು ಮಿತ್ರ ಕಲಾ ಸಂಘದ ವತಿಯಿಂದ ಇದೇ 24ರ ರಾತ್ರಿ 9ಕ್ಕೆ ಏರ್ಪಡಿಸಲಾಗಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ನಾಟಕದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು ಹುಳಿಯಾರು ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ.ಸಂ.ಇ ಸಹಾಯಕ ಎಂ.ಎಸ್.ಚಂದ್ರಪ್ಪ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಸದಸ್ಯರಾದ ಗಾಯಿತ್ರಿದೇವಿ ಪುಟ್ಟಣ್ಣ, ಸಿ.ಪಿ.ಮಹೇಶ್, ಬಾಬುಸಾಹೇಬ್, ತಹಶೀಲ್ದಾರ್ ಟಿ.ಸಿ.ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿರುವರು.
ಐ.ಟಿ.ಐ.ಪರೀಕ್ಷೆಯಲ್ಲಿ ಅವ್ಯವಹಾರಕ್ಕೆ ಆಸ್ಪದವಿಲ್ಲ: ಎ.ಬಿ.ವಿ.ಪಿ
ಚಿಕ್ಕನಾಯಕನಹಳ್ಳಿ,ಜು.22: ಐ.ಟಿ.ಐ ಪರೀಕ್ಷೆಯಲ್ಲಿ ನಡೆಯುತ್ತಿರುವ ಪ್ರಶ್ನ ಪತ್ರಿಕೆ ಡೀಲ್ಗಳನ್ನು ತಡೆಯುವುದಕ್ಕೆ ಅಭಾವಿಪ ಸಂಘಟನೆ ಸಜ್ಜಾಗಿದ್ದು ನಕಲಿ ನಡೆದರೆ ಆ ಸ್ಥಳಗಳಿಗೆ ಪೋಲಿಸರ ಸಹಾಯದೊಂದಿಗೆ ಅಭಾವಿಪ ಕಾರ್ಯಕರ್ತರು ದಾಳಿ ಮಾಡಲಿದ್ದಾರೆ ಎಂದು ಅಭಾವಿಪ ನಗರ ಕಾರ್ಯದಶರ್ಿ ಚೇತನ್ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐ.ಟಿ.ಐ ನಡೆಸುವ ಸಂಸ್ಥೆಗಳೇ ವಿದ್ಯಾಥರ್ಿಗಳಿಂದ ಹಣ ವಸೂಲಿ ಮಾಡಿ ಪ್ರಶ್ನೆಪತ್ರಿಕೆ ನೀಡುತ್ತಿವೆ ಎಂಬ ಮಾಹಿತಿ ಅಭಾವಿಪ ಘಟಕಕ್ಕೆ ಬಂದಿದ್ದು ಯಾವುದೇ ವಿದ್ಯಾಥರ್ಿಗಳು ಸಂಸ್ಥೆಗಳಿಗೆ ಹಣ ನೀಡದೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಲು ತಿಳಿಸಿದರೆ. ಈ ಸ್ಕ್ಯಾಂಡಲ್ನಲ್ಲಿ ಯಾವುದೇ ಸಂಸ್ಥೆಗಳು ಕೈಜೋಡಿಸಿದ್ದರೆ ಅಂತಹ ಸಂಸ್ಥೆಗಳ ಅನುಮತಿಯನ್ನು ರದ್ದುಗೊಳಿಸುವಂತೆ ಸಕರ್ಾರಕ್ಕೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
ಶತಾಯುಷಿ ಮುದ್ದಪ್ಪ ನಿಧನ
ಚಿಕ್ಕನಾಯಕನಹಳ್ಳಿ,ಜು.22: ಪಟ್ಟಣದ ಹಿರಿಯ ನಾಗರಿಕ, ಕುರುಬ ಸಮಾಜದ ಧಾಮರ್ಿಕ ವಿಧಿವಿಧಾನಗಳ ಅನುಭವಿ, ಶತಾಯುಷಿ ಮಠದ ಮುಂದಲ ಮುದ್ದಪ್ಪ ನಿಧನರಾಗಿದ್ದಾರೆ.
ಪಟ್ಟಣದ ವಿವಿಧ ಧಾಮರ್ಿಕ ಕೆಲಸ ಕಾರ್ಯಗಳಲ್ಲಿ ಮುಂಚುಣಿಯಲಿದ್ದ ಮುದ್ದಪ್ಪನವರಿಗೆ ನೂರ ಒಂದು ವರ್ಷಗಳ ತುಂಬು ಜೀವನ ನಡೆಸುತ್ತಿದ್ದರು. ಶ್ರೀ ರೇಣುಕ ಜಯಂತಿ ಮಹೋತ್ಸವವದ ವಿಶ್ವಸ್ಥ ಮಂಡಳಿಯ ಪ್ರಮುಖರಾಗಿದ್ದರು.
ಮೃತರು ಪತ್ನಿ, ಐವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಹಾಗೂ ಬಂಧುಭಾಂದವರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನಕ್ಕೆ ಎ.ಪಿ.ಎಂ.ಸಿ. ಅಧ್ಯಕ್ಷ ಸಿ.ಬಸವರಾಜು, ಪುರಸಭಾ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ದೊರೆಮುದ್ದಯ್ಯ, ಸಿ.ಪಿ.ಮಹೇಶ್,ಸುಮಿತ್ರ ಕಣ್ಣಯ್ಯ, ಮಾಜಿ ಪುರಸಭಾ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಭೈರವ ಮಿನರಲ್ಸ್ನ ಸಿ.ಡಿ.ಸುರೇಶ್ ಸೇರಿದಂತೆ ಹಲವರು ಆಗಮಿಸಿದ್ದರು.

Wednesday, July 21, 2010

ವಿದ್ಯತ್ ಹರಿದು ಅಜ್ಜಿ ಮತ್ತು ಎಮ್ಮೆ ಸಾವು
ಚಿಕ್ಕನಾಯಕನಹಳ್ಳಿ,ಜು.19: ವಿದ್ಯುತ್ ಹರಿದು ಅಜ್ಜಿಯೊಬ್ಬರು ಹಾಗೂ ಎಮ್ಮೆ, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಡೆಕೆರೆ ಪಂಚಾಯ್ತಿಯ ಸೊಂಡೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ವರದಿಯಾಗಿದೆ.
ತಾಲೂಕಿನ ಸೊಂಡೇನಹಳ್ಳಿ ಗೊಲ್ಲರಹಟ್ಟಿಯ ಮರಿಯಮ್ಮ(60)ಕೊಂ ಚನ್ನಯ್ಯ ಎಂಬುವರು ತಮ್ಮ ತೋಟದಲ್ಲಿ ಎಮ್ಮೆ ಮೇಹಿಯಿಸುವಾಗ ಈ ಘಟನೆ ನಡೆದಿದೆ, ಮೃತ ಮರಿಯಮ್ಮನ ತೋಟದಲ್ಲಿದ್ದ ಟಿ.ಸಿ ಇಟ್ಟಿದ್ದ ಕಂಬದ ಬಳಿ ಎಮ್ಮೆ ಹೋಗಿದ್ದು ಎಮ್ಮೆಯನ್ನು ಹಿಡಿದುಕೊಳ್ಳಲು ಹೋದ ಅಜ್ಜಿ ಮರಿಯಮ್ಮನಿಗೂ ಕಂಬದಿಂದ ವಿದ್ಯುತ್ ಹರಿದಿದು ಎಮ್ಮೆ ಮತ್ತು ಅಜ್ಜಿ ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ ಸದಸ್ಯ ತಿಮ್ಮೇಗೌಡ ಈ ದುರ್ಘಟನೆಗೆ ಬೆಸ್ಕಾಂರವರ ನಿರ್ಲಕ್ಷವೇ ಕಾರಣ ಎಂದು ದೂರಿದ್ದಾರಲ್ಲದೆ ಈ ಅನಾಹುತಕ್ಕೆ ಕಾರಣರಾದ ಬೆಸ್ಕಾಂ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಚಿ.ನಾ.ಹಳ್ಳಿ ಪಿ.ಎಸ್.ಐ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಗ್ರಾಮದ ಸ್ವಚ್ಚತೆಗಾಗಿ ಶ್ರಮದಾನ ಮಾಡಿ, ಸಾಂಕ್ರಾಮಿಕ ರೋಗಗಳಿಂದ ದೂರವಿರಿ: ಜಿ.ಪಂ.ಸಿ.ಇ.ಓ
ಚಿಕ್ಕನಾಯಕನಹಳ್ಳಿ,ಜು.21: ಗ್ರಾಮದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ತಿಂಗಳಿಗೆ ಒಂದು ದಿನವಾದರೂ ಎಲ್ಲರೂ ಸೇರಿ ಶ್ರಮದಾನ ಮಾಡಿ ಎಂದು ಜಿ.ಪಂ, ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ತುಳಿಸಿಮದ್ದಿನೇನಿ ಮನವಿ ಮಾಡಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಮುದಾಯದ ಸಹಭಾಗಿತ್ವ''ಎಂಬ ವಿಷಯವಾಗಿ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳ ವಿಚಾರ ಸಂಕೀರ್ಣದಲ್ಲಿ ಭಾಗಹಿಸಿ ಮಾತನಾಡಿದರು.
ನಮ್ಮ ಗ್ರಾ.ಪಂ.ಗಳು ಎಲ್ಲಾ ಗ್ರಾಮಗಳಲ್ಲಿನ ಗುಂಡಿ, ಗೊಟರುಗಳು ಹಾಗೂ ತಿಪ್ಪೇಗುಂಡಿಗಳನ್ನು ಸ್ವಚ್ಚ ಮಾಡಿಸುವಷ್ಟು ಹಣವನ್ನು ಕೊಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಗ್ರಾಮಗಳಲ್ಲಿನ ಜನರು, ವಿದ್ಯಾಥರ್ಿಗಳು ಮುಂದೆ ನಿಂತು ಶ್ರಮದಾನ ಮಾಡಿದರೆ ಗ್ರಾಮದ ಸ್ವಚ್ಚತೆಯನ್ನು ಕಾಯ್ದುಕೊಳ್ಳಬಹುದು, ತನ್ಮೂಲಕ ಸೊಳ್ಳಗಳನ್ನು ನಿಯಂತ್ರಿಸಿಹುದು ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದರು.
ಗ್ರಾ.ಪಂ.ಗಳು ಸೋಡಿಯಂ ಲೈಟ್, ಟ್ಯೂಬ್ಲೈಟ್ಗಳ ಕಡೇ ಅತೀ ವ್ಯಾಮೋಹ ತೋರದೆ ಚರಂಡಿ ಹಾಗೂ ಶೌಚಾಲಯಗಳ ಕಡೆಯೂ ಗಮನ ನೀಡಿ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಇತ್ತೀಚೆಗೆ ಜನರು ಟಿ.ವಿ ಹಾಗೂ ಮೊಬೈಲ್ಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಶೌಚಾಲಯಗಳ ನಿಮರ್ಾಣಕ್ಕೆ ಗಮನ ಹರಿಸದೆ ಇರುವುದರ ಬಗ್ಗೆ ವಿಷಾದಿಸಿದ ಅವರು, ಮಹಿಳೆಯರು ಈ ಟಿ.ವಿ.ಗಳಲ್ಲಿನ ಧಾರವಾಹಿಗಳನ್ನು ನೋಡಿ ರಾಗ ದ್ವೇಷಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದು ಈ ಹಿಂದೆ ಇದ್ದ ಹೊಂದಾಣಿಕೆ ಹಾಗೂ ಸಾಮರಸ್ಯ ಜೀವನ ಕಾಣೆಯಾಗುತ್ತಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ನಮ್ಮ ತಾಲೂಕು ಮಲೇರಿಯಾ, ಚಿಕನ್ ಗುನ್ಯಾ ಹಾಗೂ ಇತ್ತೀಚೆಗೆ ಕಾಣಿಸಿಕೊಂಡಿರುವ ಡೆಂಗ್ಯೂ ಜ್ವರಗಳನ್ನು ಹರಡುವ ಸೊಳ್ಳೆಗಳು ಹೆಚ್ಚಾಗಿದ್ದು, ಈ ಸೊಳ್ಳೆಗಳನ್ನು ನಿಯಂತ್ರಿಸಲು ಐಕಾನ್ ಎಂಬ ಸೊಳ್ಳೆ ನಾಶಕವನ್ನು ಬಳಸಿದರೆ ಹತೋಟಿಗೆ ತರಲು ಸಾಧ್ಯ ಎಂದ ಅವರು, ಜಿ.ಪಂ.ನವರು ಈ ಐಕಾನ್ ಎಂಬ ಸೊಳ್ಳೆ ನಾಶಕವನ್ನು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಜೈವಿಕ ವಿಧಾನದಿಂದ ಸೊಳ್ಳೆ ನಾಶ ಪಡೆಸುವಂತ ಗಪ್ಪಿ-ಗಾಂಬೋಜಿಯ ಎಂಬ ಮೀನುಗಳನ್ನು ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳಿಗೆ ಬಿಡುವಂತೆ ಮೀನುಗಾರಿಕೆ ಇಲಾಖೆಯವರಿಗೆ ಸೂಚಿಸಿದರು.
ನೀರು ಸರಬರಾಜು ಮಾಡಲು ಜೊಡಿಸಿರುವ ಪೈಪ್ ಲೈನ್ಗಳು ತುತರ್ು ರಿಪೇರಿ ಇರುವಂತಹ ಕಡೆಗಳಿಗೆ ಟಾಸ್ಕಪೋಸರ್್ನಲ್ಲಿರುವ ಹಣವನ್ನು ಬಳಸಲು ಅವಕಾಶ ಮಾಡಿ ಕೊಡಲಾಗುವುದು ಎಂದರು.
ಜಿ.ಪಂ.ಅಧ್ಯಕ್ಷೆ ಕುಸುಮ ಜಗನಾಥ್ ಮಾತನಾಡಿ ಈ ದೇಶ ಅಭಿವೃದ್ದಿಯಾಗಬೇಕೆಂದರೆ ಗ್ರಾಮಗಳ ಅಭಿವೃದ್ದಿಯಿಂದ ಮಾತ್ರ ಸಾಧ್ಯ ಎಂದ ಅವರು, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಒಟ್ಟಾಗಿ ಕೂತು ಜನರ ಸಮಸ್ಯೆಗಳ ಬಗ್ಗೆ ಆಲೋಚಿಸಿ, ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಜಿ.ಪಂ.ಉಪಾಧ್ಯಕ್ಷ ಮದುಮಡು ರಂಗಸ್ವಾಮಿ ಮಾತನಾಡಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಸಣ್ಣ ಪುಟ್ಟ ಲೋಪಗಳು ಆಗುವುದು ಸಹಜ ಅದನ್ನು ಕೆದಕಲು ಹೋಗದೆ ಮುಂದೆ ಆಗಬೇಕಾದ ಅಭಿವೃದ್ದಿ ಕಾರ್ಯಗಳ ಕಡೆ ಗಮನ ಕೊಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿ.ಎಚ್.ಓ. ಡಾ.ಚನ್ನಮಲ್ಲಯ್ಯ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಉಪಾಧ್ಯಕ್ಷೆ ರುಕ್ಮಿಣಮ್ಮ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ,ಇ.ಓ. ಡಾ.ವೇದಮೂತರ್ಿ, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್, ತಾ.ಪಂ.ಸದಸ್ಯರಾದ ವೈ.ಆರ್.ಮಲ್ಲಿಕಾರ್ಜನಯ್ಯ, ಮಾತನಾಡಿದರು.
ತಾ.ಪಂ.ಸದಸ್ಯರುಗಳಾದ ಡಿ.ಆರ್.ರುದ್ರೇಶ್, ಜಾನಮ್ಮ ರಾಮಚಂದ್ರಯ್ಯ, ತಿಮ್ಮಕ್ಕ, ಕೆ.ಟಿ.ಗೋವಿಂದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್ ಸ್ವಾಗತಿಸಿದರು, ಸಿ.ಎ.ರಮೇಶ್ ನಿರೂಪಿಸಿ ವಂದಿಸಿದರು.
ದಿವ್ಯ ಜ್ಯೋತಿ ಕಲಾ ಸಂಘದಿಂದ ಏಕಾದಶಿ ಜಾತ್ರೆಯಲ್ಲಿ ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆ, ನವ ದಂಪತಿಗಳ ಸ್ಪಧರ್ೆ.
ಚಿಕ್ಕನಾಯಕನಹಳ್ಳಿ,ಜು.21: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ ಹಳೆಯೂರು ಆಂಜನೇಯ ಸ್ವಾಮಿಯ ಏಕಾದಶಿ ಜಾತ್ರೆಯ ಪ್ರಯುಕ್ತ 19ನೇ ವರ್ಷದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು ಹಾಗೂ ನವದಂಪತಿಗಳ ಸ್ಪಧರ್ೆಯ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ.
ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು 23ರ ಮಧ್ಯಾಹ್ನ 3ಗಂಟೆಗೆ ಪುರಸಭೆ ಮುಂಭಾಗ ಹಮ್ಮಿಕೊಂಡಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿ.ಪಿ.ಐ.ರವಿಪ್ರಸಾದ್, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ತಾ.ಸ.ನೌ.ಸಂಘದ ಅಧ್ಯಕ್ಷ ಪರಶಿವಮೂತರ್ಿ ಪುರಸಭಾ ಸದಸ್ಯರುಗಳಾದ ಮಹೇಶ್, ದೊರೆಮುದ್ದಯ್ಯ, ಧರಣಿ, ರೇಣುಕ, ಆರ್.ರವಿ, ಎಂ.ಎನ್.ಸುರೇಶ್, ಬಾಬು ಸಾಹೇಬ್, ಈಶ್ವರ ಭಾಗವತ್, ಎಂ.ಎಸ್.ರವಿಕುಮಾರ್, ಮುಖ್ಯಾಧಿಕಾರಿ ಹೊನ್ನಪ್ಪ, ಹುಚ್ಚೆಗೌಡ್ರು ಉಪಸ್ಥಿತರಿರುವರು.
ನವದಂಪತಿಗಳ ಸ್ಪಧರ್ೆ: ನವದಂಪತಿಗಳ ಸ್ಪಧರ್ೆಯ ಉದ್ಘಾಟನಾ ಸಮಾರಂಭವನ್ನು 24ರ ಮಧ್ಯಾಹ್ನ 3ಕ್ಕೆ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್, ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ಕುಮಾರ್, ಎ.ಪಿ.ಎಂ.ಸಿ.ಅಧ್ಯಕ್ಷ ಸಿ.ಬಸವರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಲೋಕೇಶ್, ಕಾಂಗ್ರೆಸ್ ಮುಖಂಡ ಸೀಮೆಣ್ಣೆ ಕೃಷ್ಣಯ್ಯ, ಬಿ.ಜೆ.ಪಿ ಮುಖಂಡರಾದ ಮೈಸೂರಪ್ಪ, ಸುರೇಶ್ಹಳೇಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಉಪಸ್ಥಿತರಿರುವರು.
ಸಮಾರೋಪ ಸಮಾರಂಭ: ನವದಂಪತಿಗಳ ಸ್ಪಧರ್ೆಯ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ 24ರ ಶನಿವಾರ ರಾತ್ರಿ 7ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರೋಪ ನೆರವೇರಿಸಲಿದ್ದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ರಂಗಾಯಣ ನಿದರ್ೇಶಕ ಲಿಂಗದೇವರು ಹಳೇಮನೆ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಚಲನಚಿತ್ರ ನಟರಾದ ದೊಡ್ಡಣ್ಣ, ಶಿವಧ್ವಜ್, ಅಚ್ಯುತ್ ನಟಿ ಹೇಮಶ್ರೀ, ನಿದರ್ೇಶಕ ಬಿ.ಎಸ್.ಲಿಂಗದೇವರು, ಸೆಲ್ವರಾಜ್, ರವೀಶ್ ಆಗಮಿಸಲಿದ್ದು ಸಮಾರಂಭದಲ್ಲಿ ಸಾವಿರ ಪಾಯದ ಸರದಾರ ನಾಗಣ್ಣ ನವರನ್ನು ವಿಶೇಷವಾಗಿ ಸನ್ಮಾನಿಸಲಿದ್ದಾರೆ.


Saturday, July 17, 2010

ಏಕದಶಿ ಜಾತ್ರೆಯ ಅಂಗವಾಗಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಜು.18: ಅನ್ನಪೂಣರ್ೇಶ್ವರಿ ಕಲಾ ಸಂಘದ ವತಿಯಿಂದ 12ನೇ ವರ್ಷದ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು ಇದೇ ಜುಲೈ 23ರ ಬೆಳಿಗ್ಗೆ 10-30ಕ್ಕೆ ಏರ್ಪಡಿಸಲಾಗಿದೆ ಎಂದು ಸಿ.ಎಸ್.ರೇಣುಕಮೂತರ್ಿ ತಿಳಿಸಿದ್ದಾರೆ.
ಸ್ಪಧರ್ೆಯನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಸಪ್ತತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಉದ್ಘಾಟನಾ ಸಮಾರಂಭವನ್ನು ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ್ಶಿವಾಚಾರ್ಯಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಅಬಕಾರಿ ಗುತ್ತಿಗೆದಾರ ಎನ್.ಜಿ.ನಾಗರಾಜು, ಕುಶಾಲ್ ಗಾಮರ್ೆಟ್ಸ್ ಮಾಲೀಕ ಶಾಂತಕುಮಾರ್ ಉಪಸ್ಥಿತರಿರುವರು.
ಸ್ಪಧರ್ೆಗೆ ಭಾಗವಹಿಸುವವರು ಜುಲೈ 22ಗುರುವಾರ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರನ್ನು ನೊಂದಾಯಿಸಿಬೇಕು ಹೆಚ್ಚಿನ ವಿವರಗಳಿಗಾಗಿ ಸಿ.ಎಸ್.ರೇಣುಕಮೂತರ್ಿ(9980163152), ಸಿ.ಎನ್.ರಾಮು(9742796001) ಮತ್ತು 9880311961, 9916815000 ಈ ದೂರವಾಣಿಗಳಲ್ಲಿ ಸಂಪಕರ್ಿಸಲು ಕೋರಿದ್ದಾರೆ.
ಕಲಾವಿದರನ್ನು ಬೆಳಸಿ ಕಲೆಯನ್ನು ಉಳಿಸಿ: ತಾ.ಪಂ.ಅಧ್ಯಕ್ಷ
ಚಿಕ್ಕನಾಯಕನಹಳ್ಳಿ,ಜು.18: ಇಂದಿನ ಎಲೆಕ್ಟ್ರಾನಿಕ್ ಯುಗದ ಮಧ್ಯೆಯೂ ರಂಗಕಲೆ ಮತ್ತು ಜನಪದ ಕಲೆಗಳು ಜೀವಂತವಾಗಿರುವುದು ವಿಶೇಷವಾಗಿದೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಗುಡ್ಡಗಾಡು ಪ್ರದೇಶವಾದ ಕೆಂಪರಾಯನಹಟ್ಟಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದುಳಿದ ಗ್ರಾಮಗಳಲ್ಲಿ ಕಾರ್ಯಕ್ರಗಳನ್ನು ನಡೆಸಿ ಯಶಸ್ವಿಯಾಗುತ್ತಿರುವ ಇಲಾಖೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಜಾನಪದ, ರಂಗಕಲೆಗಳನ್ನು ಉಳಿಸುವಲ್ಲಿ ಶ್ರಮಿಸುತ್ತಿರುವ ಜನಪದ ಕಲಾವಿದರ ಸಂಘದವರಿಗೆ ಮತ್ತು ಪಾರಂಪರಿಕ ಕಲೆಗಳನ್ನು ಉಳಿಸಿಕೊಂಡು ಬರುತ್ತಿರುವ ಯಾದವ ಜನಾಂಗವನ್ನು ಶ್ಲಾಘಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಶೋದಮ್ಮಮಹದೇವಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ರಂಗಕಲೆ ಮತ್ತು ಜಾನಪದ ಕಲೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ದೊರೆತು ಅದರ ಉಳಿವಿಕೆಯನ್ನು ಬೆಳಸಬೇಕು ಎಂದರು.
ತಾಲೂಕು ಜಾನಪದ ಕಲಾವಿದರ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಮಾತನಾಡಿ ಸಂಘಟನೆಯನ್ನು ಬೆಳೆಸಲು ಕಲಾವಿದರೆಲ್ಲರೂ ಐಕ್ಯತೆಯಿಂದ ಸಹಕಾರ ನೀಡಬೇಕೆಂದು ಕೋರುತ್ತಾ ಜಾನಪದ ಕಲಾವಿದರ ಸ್ಥಿತಿಗತಿಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ರಾತ್ರಿ ಇಡೀ ನಡೆದ ಕಾರ್ಯಕ್ರಮದಲ್ಲಿ ಕೋಲಾಟ, ಸೋಬಾನಪದ, ದೇವರ ಪದಗಳು, ಚಟ್ಟಿಮೇಳ, ಕರಡೇವುವಾದ್ಯ, ಭಜನೆ, ಮೊದಲಾದ ಕಾರ್ಯಕ್ರಮಗಳು ನಡೆದವು.
ಸಮಾರಂಭದಲ್ಲಿ ಗ್ರಾ.ಪಂ ಸದಸ್ಯ ಎನ್.ಕುಮಾರಯ್ಯ, ಉಪನ್ಯಾಸಕ ಶಿವಲಿಂಗಮೂತರ್ಿ, ಎಂ.ರಂಗಯ್ಯ, ಸಿ.ಎನ್.ಹನುಮಯ್ಯ, ಮಹಾಲಿಂಗಯ್ಯ, ಸಿ.ಎಂ.ಸೋಮಶೇಖರ್, ಸಿ.ಎ.ಚಿಕ್ಕನಾರಾಯಣಸ್ವಾಮಿ, ಉಪಸ್ಥಿತರಿದ್ದರು.

Friday, July 16, 2010


ಟೈಗರ್ ಸೊಳ್ಳೆಯಿಂದ ಡೆಂಗ್ಯೂ ಜ್ವರ, ಸೊಳ್ಳೆನಿಯಂತ್ರಣಕ್ಕೆ ಮುಂದಾಗಿ: ಟಿ.ಎಚ್.ಓ.
ಚಿಕ್ಕನಾಯಕನಹಳ್ಳಿ,ಜು.16: ಜ್ವರ ಕಾಣಿಸಕೊಂಡ ಕೂಡಲೇ ರಕ್ತ ಪರೀಕ್ಷೆಗೆ ಮುಂದಾಗಿ ರೋಗ ಪತ್ತೆ ಕಾರ್ಯ ಮೊದಲು ಆಗಬೇಕು, ಡೆಂಗ್ಯೂಗೆ ಟೈಗರ್ ಮಸ್ಕಿಟೊ ಎಂಬ ಸೊಳ್ಳ ಕಾರಣವಾಗಿದ್ದು ಸೊಳ್ಳೆಯನ್ನು ನಿಂಯತ್ರಿಸಲು ಜನರು ಮುಂದಾಗಬೇಕೆಂದು ಡಾ.ಶಿವಕುಮಾರ್ ಮನವಿ ಮಾಡಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ತಾಲೂಕಿನ ಕೆ.ಸಿ.ಪಾಳ್ಯದಲ್ಲಿ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದರು, 1950ರಿಂದಲೇ ಡೆಂಗ್ಯೂ ಜ್ವರ ಕಾಣಿಸಿದ್ದು ಇದೇನು ಹೊಸರೋಗವಲ್ಲ, ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅನೈರ್ಮಲ್ಯ ಕೂಡ ಹೆಚ್ಚಾಗಿ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆಗಳು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ ಎಂದರು.
ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾ.ಪಂ.ಗಳು ಹೆಚ್ಚು ಗಮನ ಹರಿಸಬೇಕೆಂದರಲ್ಲದೆ, ಜೂನ್ ತಿಂಗಳಿಂದ ಮಳೆ ಆರಂಭವಾದ್ದರಿಂದ ಗುಂಡಿ ಗೊಟರುಗಳಲ್ಲಿ ಮಳೆ ನಿಂತು ಸೊಳ್ಳೆ ಉತ್ಪದನಾ ಕೇಂದ್ರವಾಗಿವೆ ಎಂದರು. ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ಮಾಸಾಚರಣೆ ಮೂಡುವ ಮೂಲಕ ಜನರಲ್ಲಿ ಸೊಳ್ಳೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವ ಮೂಲಕ ಸೊಳ್ಳೆ ನಿಯಂತ್ರಿಸಬಹುದು, ತಾಲೂಕಿನಲ್ಲಿ ಈಗಾಗಲೇ ಮಲೇರಿಯಾ ಕಂಡು ಬಂದಂತ ಪ್ರದೇಶಗಳಲ್ಲಿ ಅಗತ್ಯ ಎಂದು ಕಂಡುಬಂದ ಪ್ರದೇಶದಲ್ಲಿ ಸೊಳ್ಳೆ ನಿರೋಧಕ ವಿಧಾನ ಮಾಡಲು ಫಾಗಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು. ತಾಲೂಕಿನ 25,059ಮಂದಿ ರಕ್ತ ಪರೀಕ್ಷೆಗೊಳಪಡಿಸಿದ್ದು ಇವುಗಳಲ್ಲಿ ಸಾಕಷ್ಟು ಜನರಿಗೆ ಮಲೇರಿಯ ಕಾಣಿಸಿಕೊಂಡಿದೆ ಎಂದರು.
ಚಿಕನ್ಗುನ್ಯಾ ಮಲೇರಿಯಾ ಡಂಗ್ಯೂ ನಿಯಂತ್ರಿಸಬೇಕಾದರೆ ಸ್ವಯಂ ಘೋಷಿತರಾಗಿ ಗ್ರಾಮಗಳ ಸ್ಚಚ್ಛತೆ ಮದ್ದು ಎಂದರು. ಡೆಂಗ್ಯೂ ಜ್ವರ ಮೂರು ಹಂತದಲ್ಲಿ ಜನರನ್ನು ಆಕ್ರಮಿಸಿಕೊಳ್ಳುವುದು, ಮೊದಲ ಹಂತದಲ್ಲಿರುವ ಜ್ವರವನ್ನು ನಿಯಂತ್ರಿಸಬಹುದು, ಆದರೆ ಎರಡು ಮತ್ತು ಮೂರನೇ ಹಂತಕ್ಕೆ ತಲುಪಿದ ಡೆಂಗ್ಯೂ ಜ್ವರಕ್ಕೆ ಯಾವುದೇ ತರಹದ ಚಿಕಿತ್ಸೆ ಇಲ್ಲ ಎಂದರು.
ಯಾವದೇ ವ್ಯಕ್ತಿಗೆ ವೈರಾಣುದಾಳಿಯಿಂದ ಜ್ವರ ಕಾಣಿಸಿಕೊಂಡರೆ ಕೂಡಲೇ ರಕ್ತ ಪರೀಕ್ಷೆಗೆ ಮುಂದಾಗಿ ರೋಗ ಪತ್ತೆ ಕಾರ್ಯ ಮೊದಲು ಆಗಬೇಕು ಆದ ನಂತರವೇ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಜ್ವರ 15ದಿನಗಳಿಂದ ಇದ್ದರೆ ಡೆಂಗ್ಯೂ ಎಂದು ಭಾವಿಸಬಹುದು ಎಂದರು.
ಟೈಗರ್ ಮಸ್ಕಿಟೋ ಎಂಬ ಆರೋಗ್ಯವಂತ ವ್ಯಕ್ತಿಯಮೇಲೆ ಸೋಂಕಿತವ್ಯಕ್ತಿಗೆ 2 ಮತ್ತು 3 ಬಾರಿ ದಾಳಿ ನಡೆಸಿ ಕಚ್ಚಿದಾಗ ಡಂಗ್ಯೂ ತೀವ್ರತರಕ್ಕೆ ಹೋಗಿ ವ್ಯಕ್ತಿ ಸಾಯುತ್ತಾನೆ ಎಂದರು.
ಇ.ಓ ಡಾ.ವೇದಮೂತರ್ಿ ಮಾತನಾಡಿ ಕೆ.ಸಿ ಪಾಳ್ಯಕ್ಕೆ ಭೇಟಿ ನೀಡಿ ಅಲ್ಲಿ ಜನತೆ ಚರಂಡಿಗಳನ್ನು ಕಸದ ತೊಟ್ಟಿಗಳಂತಿದ್ದು ಕೂಡಲೇ ಸ್ವಚ್ಛಗೊಳಿಸುವಂತೆ ಸೂಚಸಿ ಎಲ್ಲಾ ಗ್ರಾಮದ ಸ್ವಚ್ಛತೆಗೆ ಆದೇಶಿಸಿದ್ದೇವೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಿದ್ದರು.
ಪಡಿತರ ಕಾಡರ್್ ಪಡೆಯಲು ಸೂಚನೆ
ಚಿಕ್ಕನಾಯಕನಹಳ್ಳಿ,ಜು.15: ಪಡಿತರ ಚೀಟಿದಾರರು ಹಳೆಯ ಪಡಿತರ ಚೀಟಿ ವಾಪಸ್ಸು ನೀಡಿ 15ರೂ ಪಾವತಿಸಿ ಹೊಸದಾದ ಶಾಶ್ವತ ಪಡಿತರ ಚೀಟಿ ಪಡೆಯಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈ ಮೊದಲು ವಿತರಣೆ ಮಾಡಿದ್ದ ಪಡಿತರ ಚೀಟಿಗಳನ್ನು ನೀಡಿ ಉಳಿದಿರುವ ಶಾಶ್ವತ ಪಡಿತರ ಚೀಟಿಗಳು ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರದಶರ್ಿಸಲಾಗಿದ್ದು ಪಟ್ಟಿಯಲ್ಲಿರುವ ಕಾಡರ್ುಗಳನ್ನು ಜುಲೈ 15ರಿಂದ ತಾಲೂಕು ಕಛೇರಿಯಲ್ಲಿ ಪಡೆಯಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಕಾದಶಿ ಜಾತ್ರೆಯಲ್ಲಿ ಕುಸ್ತಿ ಪಂದ್ಯ
ಚಿಕ್ಕನಾಯಕನಹಳ್ಳಿ,ಜು.15: ಹಳೆಯೂರು ಆಂಜನೇಯಸ್ವಾಮಿ ಜಾತ್ರೆಯ ಪ್ರಯುಕ್ತ ಮಾರುತಿ ಗರಡಿ ಕುಸ್ತಿ ಸಂಘದ ವತಿಯಿಂದ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪದರ್ೆಯನ್ನು ಇದೇ ಜುಲೈ 24ರ ಶನಿವಾರ ಏರ್ಪಡಿಸಲಾಗಿದೆ.
ಸ್ಪಧರ್ೆಯನ್ನು ಕನ್ನಡ ಸಂಘದ ವೇದಿಕೆ ಮುಂಭಾಗದಲ್ಲಿ ಮಧ್ಯಾಹ್ನ 2ಗಂಟೆಗೆ ಹಮ್ಮಿಕೊಂಡಿದ್ದು ಸ್ಪಧರ್ೆಯ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ರೀಡಾ ಮತ್ತು ಜವಳಿ ಸಚಿವ ಗೂಳಿಹಟ್ಟಿಶೇಖರ್, ಮಾಜಿ ಶಾಸಕರಾದ ಕೆ.ಎಸ್.ಕಿರಣ್ಕುಮಾರ್, ಜೆ.ಸಿ.ಮಾಧುಸ್ವಾಮಿ, ಆಗಮಿಸಲಿದ್ದು, ಭೈರವ ಮಿನರಲ್ಸ್ ಮಾಲೀಕ ಸಿ.ಡಿ.ಸುರೇಶ್, ಮಾಜಿ.ಗ್ರಾ.ಪಂ ಅಧ್ಯಕ್ಷ ಹೆಚ್.ಬಿ.ಪಂಚಾಕ್ಷರಿ, ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಬಸ್ ಏಜೆಂಟ್ ವಸಂತ ಕುಮಾರ್, ಎಸ್.ಡಿ.ದಿಲೀಪ್ಕುಮಾರ್, ಚಂದ್ರಶೇಖರ್ ಗುಪ್ತ ಸ್ಪಧರ್ಿಗಳಿಗೆ ಬಹುಮಾನ ವಿತರಿಸಲಿದ್ದಾರೆ.


ಅಂತರ್ ರಾಷ್ಟ್ರೀಯ ಬಾಂಧವ್ಯ ಬೆಸೆಯುವಲ್ಲಿ ರೋಟರಿ ಪಾತ್ರ ಮಹತ್ವದ್ದು

ಚಿಕ್ಕನಾಯಕನಹಳ್ಳಿ,ಜು.15: ಸಮಾಜವನ್ನು ಕಟ್ಟುವ ಹಾಗೂ ದೇಶ ವಿದೇಶಗಳ ನಡುವೆ ಉತ್ತಮ ಬಾಂದವ್ಯ ಬೆಸೆಯುವಲ್ಲಿ ರೋಟರಿ ಸಂಸ್ಥೆ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಜಿಲ್ಲಾ ಗವನರ್್ರ್ ಎಚ್.ಕೆ.ವಿ.ರೆಡ್ಡಿ ತಿಳಿಸಿದರು.

ಪಟ್ಟಣದ ರೋಟರಿ ಶಾಲೆಯ ಆವರಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಸ್ವೀಕಾರ ಸಮಾರಂಭದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡಿದರು.

ಸಂಸ್ಥೆಯ ಸೇವಾ ವ್ಯಾಪ್ತಿಯು ವಿಶಾಲವಾಗಿದ್ದು, ಅತ್ಯಂತ ಬಡವರ ಬಳಿಗೆ ಬಂದಾಗ ಸಮಾಜಕಟ್ಟುವ ಕೆಲಸಕ್ಕೆ ಪ್ರೋತ್ಸಾಹಕರವಾಗಿರಬೇಕು ಎಂದರು ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದವರಿಗೆ ನೆರವಾಗುವುದು ಸಂಸ್ಥೆಯ ಧ್ಯೇಯ ಎಂದರಲ್ಲದೆ, ಈ ಕಾರ್ಯದಿಂದ ಸದಸ್ಯರ ಗೌರವವು ಹಿಮ್ಮಡಿಯಾಗಲಿದೆ ಎಂದರು. ಮಕ್ಕಳ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಮತ್ತು ಪಲ್ಸ್ಪೋಲಿಯೋ ಕಾರ್ಯದಲ್ಲಿ ರೋಟರಿ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದರು.

ನಮ್ಮ ಸಂಸ್ಥೆಯು ವಿಶ್ವದ ಬಹುತೇಕ ದೇಶಗಳಲ್ಲಿ ಈ ಸೇವೆಯನ್ನು ನಡೆಸುವ ಮೂಲಕ ಇದು ಅಂತರಾಷ್ಟ್ರೀಯ ಬಾಂದವ್ಯ ವೃದ್ದಿಗೆ ಸಹಕಾರಿ ಎಂದರು, ಉಳ್ಳವರು ತಮ್ಮ ಸಂಪಾದನೆಯಲ್ಲಿ ಸ್ವಲ್ಪಭಾಗ ಸಾಮಾಜಿಕ ಸೇವೆಗೆ ಮುಡುಪಾಗಿಟ್ಟರೆ ಸಮಾಜವು ಆಥರ್ಿಕವಾಗಿ ಮುಂದುವರಿಯಲಿದೆ ಎಂದರು.

ಜಿಲ್ಲಾ ಅಸಿಸ್ಟೆಂಟ್ ಗವನರ್್ರ್ ಸಿ.ಎನ್.ವೆಂಕಟರೆಡ್ಡಿ 'ನಾಯಕ' ಸಂದೇಶ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿಯಂತಹ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದರು ತಹಶೀಲ್ದಾರ್ ಟಿ.ಸಿ.ಕಾಂತರಾಜು 20ಮಂದಿ ರೈತರಿಗೆ ಸಾವಯುವ ಗೊಬ್ಬರ ಔಷಧಿ ಮತ್ತು ಪರಿಕರಗಳನ್ನು ವಿತರಿಸಿದರು ಮತ್ತು ಎಂ.ವಿ.ನಾಗರಾಜ್ರಾವ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಗ್ರಂಥ ಬಂಡಾರಕ್ಕೆ ಪುಸ್ತಕಗಳನ್ನು ದಾನವಾಗಿ ನೀಡಿದರು.

ಸಮಾರಂಭದಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ಕುಮಾರ್, ಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಕಾರ್ಯದಶರ್ಿ ಅಶ್ವತ್ಥ್ನಾರಾಯಣ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ರೋಟರಿ ಸಂಸ್ಥೆ ಸದಸ್ಯ ಕೆ.ವಿ.ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಎಂ.ವಿ.ನಾಗರಾಜ್ರಾವ್ ಸ್ವಾಗತಿಸಿ, ಪರಮೇಶ್ ನಿರೂಪಿಸಿ ಭುವನಸುಂದರ್ ವಂದಿಸಿದರು.