Saturday, August 21, 2010


ಆಗಷ್ಟ್ 23ರಂದು ಯಾದವ ಜನಾಂಗದವರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಆ,21: ಜಿಲ್ಲಾ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಇದೇ 23ರ ಸೋಮವಾರ ಬೆಳಗ್ಗೆ 11ಗಂಟೆಗೆ ತುಮಕೂರಿನ ಪುರಭವನದ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾಡುಗೊಲ್ಲರ ಮುಖಂಡರುಗಳಾದ ತೀರ್ಥಪುರ ವಾಸುದೇವ, ಗೋಡೆಕೆರೆ ಶಿವಣ್ಣ ತಿಳಿಸಿದ್ದಾರೆ.
ಕಾಡುಗೊಲ್ಲರು ಅತ್ಯಂತ ಹಿಂದುಳಿದ ಅಲೆಮಾರಿ, ಅರೆಅಲೆಮಾರಿ, ಬುಡಕಟ್ಟು ಸಂಪ್ರದಾಯಕ್ಕೆ ಸೇರಿದವರಾಗಿದ್ದು ಆಥರ್ಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದಾರೆ, ಸಕರ್ಾರದ ಮೀಸಲಾತಿ ಇದ್ದರೂ ಸಹ ಇತರೆ ಜಾತಿಗಳ ಸೇರ್ಪಡೆಯಾಗಿ ನಮ್ಮ ಜನಾಂಗಕ್ಕೆ ಸಕರ್ಾರಿ ಶಾಲಾ ಮಕ್ಕಳ ಹಾಜರಾತಿ ಸಕರ್ಾರದ ಪ್ರಾಯೋಜಿತ ಯೋಜನೆಗಳಲ್ಲಿ ವಂಚಿತರಾಗಿದ್ದೇವೆ ಇದರ ಅನ್ಯಾಯದ ವಿರುದ್ದವಾಗಿ ಸಕರ್ಾರಕ್ಕೆ ಮನವಿಯನ್ನು ನೀಡುವ ಮೂಲಕ ರಸ್ತೆತಡೆಯನ್ನು ಹಮ್ಮಿಕೊಳ್ಳಲಾಗಿದೆ, ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿಯನ್ನು ನೀಡಲಾಗುತ್ತದೆ. ಪ್ರತಿಭಟನೆಗೆ ಯಾದವ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

Thursday, August 19, 2010

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲ ನೀಡಲು ಡಿ.ಸಿ.ಸಿ.ಬ್ಯಾಂಕ್ ಒಲವು
ಚಿಕ್ಕನಾಯಕನಹಳ್ಳಿ,ಆ.18: ಇಂದಿನ ತಂತ್ರಜ್ಞಾನ, ಕಂಪ್ಯೂಟರಿಕರಣ ಮತ್ತು ಎಲೆಕ್ಟ್ರಾನಿಕರಣದಂತಹ ಯುಗದಲ್ಲಿ ರೈತರು ಉಳುಮೆ ಮಾಡಿ ಜೀವನ ನಡೆಸುವುದು ಕಷ್ಟಕರವಾಗಿದ್ದು ಅದಕ್ಕಾಗಿ ಉಪಕಸುಬುಗಳನ್ನು ನೆಚ್ಚಿಕೊಂಡಿರುವ ಸಣ್ಣ ರೈತರಿಗೆ ಅತಿಯಾದ ಕಟ್ಟುಪಾಡುಗಳಿಲ್ಲದೆ ಸಾಲ ನೀಡಲು ನಮ್ಮ ಬ್ಯಾಂಕ್ ಸಿದ್ದವಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು
ತಾಲೂಕಿನ ಕಂದಿಕೆರೆ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ವಿವಿಧ ಯೋಜನೆಯ ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಅಲ್ಪ ಬಂಡವಾಳವನ್ನು ಹೂಡಿ ಆದಾಯಗಳಿಸಿ ಸ್ವಾವಲಂಬಿ ಜೀವನ ನಡೆಸಬೇಕು ಅದಕ್ಕಾಗಿ ಬ್ಯಾಂಕ್ ಕಡಿಮೆ ಬಡ್ಡಿದರದ ಸಾಲ ನೀಡುತ್ತಿದೆ ಎಂದರಲ್ಲದೆ, ಸಾಲವನ್ನು ಪಡೆದವರು ಎಚ್ಚರಿಕೆಯಿಂದ ಇಂದ ಸಾಲ ಮರುಪಾವತಿ ಮಾಡಬೇಕು ಇಲ್ಲದಿದ್ದರೆ ಸಾಲದ ಬಡ್ಡಿ ಶೇ.13 ರಷ್ಟು ಹೆಚ್ಚಿ ಸಾಲಗಾರ ಆತಂಕಕ್ಕೆ ಒಳಗಾಗುತ್ತಾನೆ ಎಂದರು.
ಸಾಲ ಪಡೆಯುವುದು ಸಾಲಗಾರನ ಹಕ್ಕು ಅದನ್ನು ಹಿಂತಿರುಗಿಸುವುದು ಅವರ ಜವಬ್ದಾರಿಯಾಗಿದೆ ಎಂದರಲ್ಲದೆ, ಸಾಲವನ್ನು ಮರುಪಾವತಿ ಮಾಡಿ ಸಾಲವನ್ನು ನೀಡುವ ಸಂಸ್ಥೆಯನ್ನು ಉಳಿಸಬೇಕು ಎಂದ ಅವರು ರೈತರು ಉಳುಮೆ ಜೊತೆ ಉಪಕಸುಬುಗಳನ್ನು ಮಾಡಬೇಕು ಇದರಿಂದ ನಿಮ್ಮ ಆಥರ್ಿಕ ಪರಿಸ್ಥಿತಿ ಸುದಾರಿಸುತ್ತದೆ ಈ ವಿಷಯವನ್ನು ಪ್ರತಿ ಬಾರಿ ಸಾಲ ನೀಡುವಾಗ ಎಲ್ಲಾ ರೈತರಿಗೂ ಹೇಳುತ್ತೇನೆ ಎಂದರು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ನೇಕಾರರಿಗೂ ಶೇ.4ರ ಬಡ್ಡಿದರದಲ್ಲಿ ಸಾಲವನ್ನು ನೀಡುವ ಯೋಜನೆಯನ್ನು ಬ್ಯಾಂಕ್ ಜಾರಿಗೆ ತರಲಿದೆ ಎಂದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದ ಈ ಭಾಗ, ಕೇವಲ ಮಳೆಯನ್ನು ಆಧರಿಸಿ ರೈತರು ಜೀವನ ನಡೆಸುತ್ತಿರುವ ನಮ್ಮ ಜನರಿಗೆ ಜಿಲ್ಲಾ ಬ್ಯಾಂಕ್ನಿಂದ ಸಾಲ ಒದಗಿಸಿ ಇವರ ಆಥರ್ಿಕ ಪರಿಸ್ಥಿತಿ ಸುಧಾರಿಸಲು ಮತ್ತು ಇಲ್ಲಿನ ಹಾಲಿನ ಸಹಕಾರ ಸಂಘಗಳಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲು ಜಿಲ್ಲಾ ಬ್ಯಾಂಕ್ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಸಹಕಾರಿ ಕ್ಷೇತ್ರದ ಮುಖಂಡರುಗಳಾದ ಹನುಮಂತಪ್ಪ, ರಾಮಕೃಷ್ಣಯ್ಯ, ರಾಜಣ್ಣ, ಸಣ್ಣಯ್ಯ, ವೆಂಕಟರಾಮಯ್ಯ, ರತ್ನಮ್ಮ, ಕೇಶವಮೂತರ್ಿ, ಈಶ್ವರಪ್ಪ ಹಾಗೂ ಬ್ಯಾಂಕ್ನ ಅಧಿಕಾರಿಗಳಾದ ರಾಮಕೃಷ್ಣಯ್ಯ ಮುದ್ದಪ್ಪ, ಜಯರಾಮ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ರಂಗನಾಥ್ ಸ್ವಾಗತಿಸಿ, ವಂದಿಸಿದರು.

ಕರಡಿ ದಾಳಿ ಗಾಯಾಳು ಆಸ್ಪತ್ರೆಗೆ
ಚಿಕ್ಕನಾಯಕನಹಳ್ಳಿ,ಆ.19: ಕರಡಿ ದಾಳಿಯಿಂದ ವ್ಯಕ್ತಿಯೊಬ್ಬನ ತಲೆಬುರುಡೆಗೆ ತೀವ್ರ ಹಾನಿಯಗಿರುವ ಘಟನೆ ತಾಲೂಕಿನ ದೊಡ್ಡಬಿದರೆ ಬಳಿಯ ಕಲ್ಲಹಳ್ಳಿ ಪಾಳ್ಯದಲ್ಲಿ ನಡೆದಿದೆ.
ಬೆಳಗಿನ ಜಾವ 5.30ಕ್ಕೆ ಬಹಿದರ್ೆಸೆಗೆ ಹೋದ ಸಂದರ್ಭದಲ್ಲಿ ತಾಯಿಕರಡಿ ಮತ್ತು ಮರಿಕರಡಿಗಳ ದಾಳಿಯಿಂದ ನರಸಿಂಹಯ್ಯ(50) ಎಂಬ ವ್ಯಕ್ತಿಯ ತಲೆಬುರುಡೆಕಿತ್ತಿದ್ದು ನರಸಿಂಹಯ್ಯ ಹುಳಿಯಾರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕರಡಿ ದಾಳಿಯಂತಹ ಘಟನೆ ಈ ಭಾಗದಲ್ಲಿ ಪದೇ ಪದೇ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ತೀವ್ರ ಗಮನ ನೀಡುತ್ತಿಲ್ಲವೆಂದು ವಕೀಲ ಜಯಣ್ಣ ಆರೋಪಿಸಿದ್ದಾರೆ.
ರಸ್ತೆಯಲ್ಲಿ ವ್ಯಕ್ತಿ ಸಾವು: ತಾಲೂಕಿನ ಗೌರಸಾಗರ ಗೇಟ್ಬಳಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸಕೆರೆಯ ಕುಮಾರಸ್ವಾಮಿ(35) ಎಂಬ ವ್ಯಕ್ತಿ ಟಿ.ವಿ.ಎಸ್ ಮೊಪೆಡ್ನಲ್ಲಿ ತೆರುಳುತ್ತಿರುವಾಗ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಓದುಗರ ಪತ್ರ
ಕೈಮಗ್ಗ ಸಂಘದಿಂದ ವಿದ್ಯಾಥರ್ಿ ವೇತನದ ಚೆಕ್ ನೀಡಲು ಹಣಕ್ಕಾಗಿ ಒತ್ತಾಯ
ಚಿಕ್ಕನಾಯಕನಹಳ್ಳಿಯ ಬನಶಂಕರಿ ಕೈಮಗ್ಗ ಅಭಿವೃದ್ದಿ ಸಂಘವು ನೇಕಾರರ ಮಕ್ಕಳಿಗೆ ವಿವಿಧ ಯೋಜನೆಯಲ್ಲಿ ಬಂದಂತಹ ವಿದ್ಯಾಥರ್ಿ ವೇತನ ಮತ್ತು ಇತ್ತೀಚಿಗೆ ಸಕರ್ಾರದಿಂದ ಬಂದಂತಹ ಮಹಾತ್ಮಾಗಾಂಧೀ ಬುನ್ಕರ್ ಭೀಮಾ ಯೋಜನೆಯ ಚೆಕ್ಗಳನ್ನು ವಿದ್ಯಾಥರ್ಿಗಳಿಗೆ ನೀಡಲು ಪ್ರತಿಯೊಬ್ಬ ವಿದ್ಯಾಥರ್ಿಗಳಿಂದ 100ರೂಗಳಂತೆ ಹಣವನ್ನು ಬನಶಂಕರಿ ಸೊಸೈಟಿ ಅಧ್ಯಕ್ಷರು ಹಣವನ್ನು ವಸೂಲಿ ಮಾಡುತ್ತಿದ್ದು, ಅಧ್ಯಕ್ಷರಿಗೆ ಹಣ ನೀಡದ ವಿದ್ಯಾಥರ್ಿಗಳಿಗೆ ಚೆಕ್ ನೀಡದೆ ಇಲ್ಲದ ತೊಂದರೆ ಕೊಡುತ್ತಿದ್ದಾರೆ ಎಂದು ವಿದ್ಯಾಥರ್ಿಗಳು ದೂರಿದ್ದಾರೆ.
ಚೆಕ್ಗಳನ್ನು ಅಥವ ಹಣವನ್ನು ನೀಡಲು 1000 ರೂಗಳಿಗೆ 100ರೂನಂತೆ ಹಣವನ್ನು ಬಡ ವಿದ್ಯಾಥರ್ಿಗಳಿಂದ ಹಣ ಪಡೆದು ಬಡವಿದ್ಯಾಥರ್ಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅನ್ಯಾಯಕ್ಕೊಳಪಟ್ಟ ವಿದ್ಯಾಥರ್ಿಗಳು ಆರೋಪಿಸಿದ್ದಾರೆ.
ನೊಂದ 10 ವಿದ್ಯಾಥರ್ಿಗಳ ಸಹಿ ಇದೆ

Sunday, August 15, 2010

ಚಿಕ್ಕನಾಯಕನಹಳ್ಳಿ,ಆ.15: ಗಡಿ ಸಮಸ್ಯೆ, ನೀರಿನ ಸಮಸ್ಯೆಗಳನ್ನು ಮರೆತು ಭಾರತದ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನವನ್ನು ಬೆಳೆಸಿಕೊಂಡು ರಾಷ್ಟ್ರಕ್ಕಾಗಿ ಹೋರಾಡಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
63ನೇ ಸ್ವಾತಂತ್ರ್ಯ ದಿನಾಚರಣೆಯ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರಕ್ಕಾಗಿ ಇಡೀ ದೇಶದ ಜನರೆಲ್ಲರೂ ಒಟ್ಟುಗೂಡಿ ಹೋರಾಡಿದ ಪರಿಣಾಮ ಇಂದು ನಮಗೆ ಸ್ವಾತಂತ್ರ ದೊರಕಿದೆ, ಮಹಾತ್ಮಾ ಗಾಂಧೀಜಿ, ಸುಭಾಷ್ಚಂದ್ರಭೋಸ್ ನಂತಹ ಕೆಚ್ಚೆದೆಯ ಉತ್ಸಾಹ ಯುವಕರು ಸೈನ್ಯಕ್ಕೆ ಸೇರಬೇಕು ಮತ್ತು ಸಮಾಜ ಕಟ್ಟುವಂತಹ ನಾಯಕತ್ವವನ್ನು ಬೆಳಸಿಕೊಳ್ಳಬೇಕು ಎಂದ ಅವರು ವೈದ್ಯಕೀಯ, ಸಮಾಜ, ಮತ್ತು ಪ್ರಗತಿಪರ ರೈತರನ್ನು ಇಂದು ಸನ್ಮಾನಿಸುತ್ತಿದ್ದು ಇದು ಕೇವಲ ಕಾಟಾಚರಕ್ಕೆ ಮಾಡುತ್ತಿಲ್ಲ ಇವರು ಸಮಾಜಕ್ಕೆ ಸಲ್ಲಿಸಿರುವ ಉತ್ತಮ ಕಾರ್ಯಗಳು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಿಷ್ಠೆ, ಪ್ರಮಾಣಿಕತೆಯಿಂದ ನಿರ್ವಹಿಸಿದ್ದಾರೆ ಎಂದರಲ್ಲದೆ, ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಕರೆ ಬಂದಾಗ ಇದು ತಮಗೆ ಒದಗಿದ ಒಂದು ಉತ್ತಮ ಅವಕಾಶವೆಂದು ಭಾವಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅನರಕ್ಷತೆ, ಮೌಡ್ಯತೆ, ವೈಷಮ್ಯ ಇವು ದೇಶದಲ್ಲಿ ದೊಡ್ಡ ಪಿಡುಗಾಗಿದ್ದು ಇದನ್ನು ಹೋಗಲಾಡಿಸಲು ಇಂದಿನ ಯುವಕರು ಹೋರಾಡಬೇಕೆಂದು ಕರೆ ನೀಡಿದರು.
ಲಾಲಲಜಪತರಾಯ್, ಬಿಪಿನ್ ಚಂದ್ರಪಾಲ್ ಮುಂತಾದ ಸ್ವಾತಂತ್ರ ಹೋರಾಟಗಾರರು ಯುವಕರನ್ನು ಹುರಿದುಂಬಿಸಿ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಿದರು. ಇಂತಹವರ ಪರಿಶ್ರಮದಿಂದ ದೊರೆದ ಸ್ವಾತಂತ್ರವನ್ನು ಪ್ರತಿಯೊಬ್ಬರು ನೆನಪಿಸಿಕೊಂಡು ದೇಶದ ಅಭಿವೃದ್ದಿಗಾಗಿ ಭಾವೈಕ್ಯತೆಯಿಂದ ಬಾಳಬೇಕು ಎಂದರು.
ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದ ಡಾ.ಹೆಚ್.ಕೆ.ದಾಸ್, ಸಮಾಜ ಕ್ಷೇತ್ರದ ಮಲ್ಲಿಕಾಜರ್ುನಯ್ಯ(ಸಾಯಿಬಾಬ), ಪ್ರಗತಿಪರ ರೈತ ಕೆ.ಬಸವರಾಜುರವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷೆ ಜಯಮ್ಮದಾನಪ್ಪ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ, ಇ.ಓ. ವೇದಮೂತರ್ಿ, ಸಿ.ಪಿ.ಐ ರವಿಪ್ರಸಾದ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿ, ರಮೇಶ್ಕೆಂಬಾಳ್ ನಿರೂಪಿಸಿ, ನರಸಿಂಹಮೂತರ್ಿ ವಂದಿಸಿದರು.
ಚಿತ್ರ ಶೀಷರ್ಿಕೆ:

Friday, August 13, 2010

ಮಹಾತ್ಮಾಗಾಂಧಿ ವಿದ್ಯಾಥರ್ಿ ವೇತನ ವಿತರಣೆ ಸಮಾರಂಭ
ಚಿಕ್ಕನಾಯಕನಹಳ್ಳಿ,ಆ.13: 2009-10ನೇ ಸಾಲಿನ ಮಹಾತ್ಮಗಾಂಧಿ ಬುನ್ಕರ್ ಭೀಮಾ ಯೋಜನೆಯ ವಿದ್ಯಾಥರ್ಿ ವೇತನವು 140 ನೇಕಾರರ ಮಕ್ಕಳಿಗೆ 1.68000 ಸಾವಿರ ವಿದ್ಯಾಥರ್ಿ ವೇತನ ಬಂದಿದೆ ಎಂದು ಕಂಬಳಿ ಸೊಸೈಟಿ ಕಾರ್ಯದಶರ್ಿ ಸಿ.ಎಚ್.ಗಂಗಾಧರ್ ತಿಳಿಸಿದ್ದಾರೆ.
ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಆವರಣದಲ್ಲಿ ಆಗಷ್ಟ್ 15ರ ಭಾನುವಾರ ಮಧ್ಯಾಹ್ನ 3ಗಂಟೆಗೆ ಚೆಕ್ಗಳನ್ನು ವಿತರಿಸಲಿದ್ದು ಅರ್ಹ ಫಲಾನುಭವಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಚೆಕ್ಗಳನ್ನು ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಗೊಳ್ಳಿರಾಯಣ್ಣನವರ 214ನೇ ಜನ್ಮದಿನಾಚರಣಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಆ.13: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವಸೇನೆ ಸಂಯುಕ್ತಾಶ್ರಯದಲ್ಲಿ ವಿದ್ಯಾಥರ್ಿವೇತನ ವಿತರಣೆ ಹಾಗೂ ಸ್ವತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನವರ 214ನೇ ಜನ್ಮದಿನಾಚರಣೆ ಸಮಾರಂಭವನ್ನು ಇದೇ ಆಗಷ್ಟ್ 15ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಸಂಘದ ಕಛೇರಿ ಆವರಣದಲ್ಲಿ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಂಡಿದ್ದು ಸಂಪಾದಕ ಚಿ.ನಾ.ಏಕೇಶ್ವರ್ ಉದ್ಘಾಟನೆ ನೆರವೇರಿಸುವರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ, ತಾಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಡಿ.ಕೆ.ಮುಕುಂದಯ್ಯ ವಿದ್ಯಾಥರ್ಿ ವೇತನದ ಚೆಕ್ ವಿತರಣೆ ಮಾಡಲಿದ್ದು, ಸ್ವಾತಂತ್ರ ಹೋರಾಟಗಾರ ಸಿ.ಎನ್.ನಾಗೇಶಯ್ಯ ಮತ್ತು ಪ್ರಾಂಶುಪಾಲರಾದ ಎನ್.ಇಂದಿರಮ್ಮನವರಿಗೆ ಸೇನೆ ವತಿಯಿಂದ ಸನ್ಮಾನಿಸಲಿದ್ದು ರೋಟರಿ ಕ್ಷಬ್ ಅಧ್ಯಕ್ಷ ಎನ್.ಶ್ರೀಕಂಠಯ್ಯ ನೋಟ್ಪುಸ್ತಕ ವಿತರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನಕ ಭವನದ ಅಧ್ಯಕ್ಷ ಸಿ.ಎಸ್.ಬಸವರಾಜು, ರಾಜ್ಯ ಅಹಿಂದ ಸಂಚಾಲಕ ಚಿ.ಲಿಂ.ರವಿಕುಮಾರ್, ಕನಕ ಭವನದ ಉಪಾಧ್ಯಕ್ಷ ಸಿ.ಕೆ.ಲೋಕೇಶ್, ನಿದರ್ೇಶಕರಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಎನ್.ವಿಜಯ್ಕುಮಾರ್, ಆರ್.ಜಿ.ಗಂಗಾಧರಯ್ಯ, ಗೋವಿಂದಯ್ಯ, ಭಾರತಿ ಉಪಸ್ಥಿತರಿರುವರು.


ಶಾದಿ ಮಹಲ್ ನಿವೇಶನಕ್ಕೆ ವಿರೋಧ
ಚಿಕ್ಕನಾಯಕನಹಳ್ಳಿ,ಆ.13: ಚಿಕ್ಕನಾಯಕನಹಳ್ಳಿ ನಗರದ ಶ್ರೀತಾತಯ್ಯ ಘೋರಿ ಪಕ್ಕದ ನಿವೇಶನದಲ್ಲಿ ಶಾದಿಮಹಲ್ ನಿಮರ್ಾಣಕ್ಕೆ ಮುಸ್ಲಿಂ ಬಾಂದವರು ಅನುಮತಿ ಕೇಳಿದ್ದಾರೆಂದು ಪುರಸಭೆಯ ತುತರ್ು ಸಭೆಯಲ್ಲಿ ಶಾಸಕರು ಪ್ರಸ್ತಾಪಮಾಡಿರುವ ಸುದ್ದಿ ಪ್ರಕಟವಾಗಿರುವುದಕ್ಕೆ ತಾ.ಬಿ.ಜೆ.ಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಸ್ಪಷ್ಟೀಕರಣ ಬಯಸಿದ್ದಾರೆ.
ಈ ನಿವೇಶನ ಮೂಲತ: ಯಾರಿಗೆ ಸಂಬಂದಿಸಿದ್ದು ಈಗ ಯಾರ ಹೆಸರಿಗೆ ದಾಖಲಿದೆ ಸದರಿಯವರಿಗೆ ಬದಲಾದ ರೀತಿ ಹೇಗೆ? ಇದು ನಿಯಮ ಬದ್ದವಾಗಿದೆಯೇ ಅಥವ ನಿಯಮ ಬಾಹಿರವಾಗಿದೆಯೇ ಸಕರ್ಾರ ಅನುಮತಿ ನೀಡಿದೆಯೆ ಮುಂತಾದ ಪ್ರಶ್ನೆಗಳು ಉದ್ಭವವಾಗುತ್ತದೆ. ಹಾಲಿ ನಿವೇಶನದಲ್ಲಿ ಮೈಸೂರು ರಾಜವಂಶದವರಿಗೆ ಸಂಬಂದಿಸಿದ ಒಂದು ಸ್ಮಾರಕವಿದ್ದು ಇತಿಹಾಸದ ಪುಸ್ತಕದಲ್ಲೂ ಇದು ದಾಖಲಿದ್ದು ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಪುರಸಭೆಯ ಪ್ರತಿನಿಧಿಗಳು ಕುಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೆ ಜೋಗಿಹಳ್ಳಿ ಗ್ರಾಮದಲ್ಲಿ ಇಂತಹದೆ ವಿವಾದ ಸೃಷ್ಟಿಯಾಗಿ ಹೋರಾಟ ನಡೆದದ್ದು ನೆನಪಿನಂಗಳದಲ್ಲಿ ಇನ್ನೂ ಹಸಿರಾಗಿಯೇ ಇದೆ ಆದ್ದರಿಂದ ಇಂತಹದಕ್ಕೆ ಅವಕಾಶ ನೀಡಬಾರದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಮಧರ್ಾತ್ಮಕ ಪರೀಕ್ಷೆಗಳಿಗೆ ಬೆಂಬಲ: ಜೆ.ಸಿ.ಎಂ
ಚಿಕ್ಕನಾಯಕನಹಳ್ಳಿ,ಆ.13: ವಿದ್ಯಾಥರ್ಿಗಳು ಎಲ್ಲಾ ಕ್ಷೇತ್ರಗಳ ಬೆಳವಣಿಗೆಯನ್ನು ಉತ್ತೇಜಿಸುತ್ತಾ ವಿದ್ಯಾ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿಷದಪಡಿಸಿದರು ಮತ್ತು ವಿದ್ಯಾಥರ್ಿಗಳಿಗೆ ಸ್ಮಧರ್ಾತ್ಮಕ ಪರೀಕ್ಷೆಗಳ ತಯಾರಿಗೆ ಬೆಂಬಲ ನೀಡುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಿದ್ಯಾಥರ್ಿಗಳಿಗೆ ಭರವಸೆ ನೀಡಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ದಿಯ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಮತ್ತು ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ವಿದ್ಯಾಥರ್ಿಗಳು ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಅವರ ಪ್ರತಿಭೆ ಬೆಳಕಿಗೆ ಬಂದಂತಾಗುತ್ತದೆ ಇದರಿಂದ ಅವರ ವ್ಯಕ್ತಿತ್ವದ ವಿಕಸನ ಸಾಧಿಸಲು ಸಾಧ್ಯ ಎಂದರು.
ಅನೂಹ್ಯ ಟ್ರಸ್ಟ್ನ ಮುಖ್ಯಸ್ಥರಾದ ಬಾಲಸೂರ್ಯ ಮಾತನಾಡಿ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ವಿದ್ಯಾಥರ್ಿಗಳ ಪಾತ್ರ ಮಹತ್ವದ್ದಾಗಿದ್ದು ಕನರ್ಾಟಕದಲ್ಲಿನ ಜನರಿಗಿರುವ ರಕ್ಷಣಾ ಸೇವೆಯ ಬಗೆಗಿನ ನಿರಾಸಕ್ತಿಯನ್ನು ಅಂಕಿ ಅಂಶಗಳ ಮೂಲಕ ತಿಳಿಸಿದರು.
ಭೂಮಿ ಬಳಗದ ಅಧ್ಯಕ್ಷರಾದ ಸೋಮಶೇಖರ್ ಮಾತನಾಡಿ ವಿವಿಧ ದೇಶಗಳಿಗೆ ಬೇರೆ ಬೇರೆ ಸಂಸತ್ತುಗಳಿರುವ ಹಾಗೆ ಕ್ರೀಡೆಗೆ ಸಂಸತ್ತುಗಳಿಲ್ಲ, ಎಲ್ಲ ದೇಶಗಳಲ್ಲೂ ಕ್ರೀಡೆಗೆ ಒಂದೇ ರೀತಿಯ ನಿಬಂದನೆಗಳಿರುತ್ತವೆ ಎಂದು ವಿದ್ಯಾಥರ್ಿಗಳನ್ನು ಕ್ರೀಡಾ ಕ್ಷೇತ್ರದೆಡೆಗೆ ಹುರಿದುಂಬಿಸಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಕೆ.ಸಿ.ಬಸಪ್ಪ, ಉಪನ್ಯಾಸಕರಾದ ಪರಮಶಿವಯ್ಯ, ರೇಣುಕಾರ್ಯ, ಕೈಲಾಸ್ನಾಥ್ ಉಪಸ್ಥಿತರಿದ್ದರು.


Thursday, August 12, 2010

Monday, August 9, 2010

Sunday, August 8, 2010

Wednesday, August 4, 2010


ವ್ಯಕ್ತಿತ್ವ ರೂಪಿಸುವಲ್ಲಿ ವಿಶ್ವಕ್ಕೆ ಆದರ್ಶ ವಿವೇಕನಂದ
ಚಿಕ್ಕನಾಯಕನಹಳ್ಳಿ,ಆ.04: ಗುರುವೃಂದಕ್ಕೆ ಆದರ್ಶವಾಗಿ ಲೋಕದ ಗುರು ಶಿಷ್ಯ ಸಂಬಂಧಕ್ಕೆ ಮಾದರಿ ಎನ್ನುವಂತೆ ದಾರಿ ತೋರಿದ ಮಹಾನ್ ಚೇತನ, ಸಂತ, ಖುಷಿ, ಯೋಗಿ ಭಾರತದ ಭವಿಷ್ಯವನ್ನು ಬೆಳಗಿಸಿದ ಮಹಾನ್ ಗುರು, ಸ್ವಾಮಿ ವಿವೇಕಾನಂದ ಎಂದು ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ 'ಗುರುಚಿಂತನ' ಪರಿಪೂರ್ಣ ಶಿಕ್ಷಣಕ್ಕಾಗಿ ಶಿಕ್ಷಕರ ಸಮ್ಮೇಳನ-40, ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ಬ್ರಹ್ಮ, ವಿಷ್ಣು, ಮಹೇಶ್ವರರು ಭಕ್ತರನ್ನು ಹೊಂದಿದ್ದರೆ, ಸ್ವಾಮಿ ವಿವೇಕಾನಂದರು ಪ್ರಪಂಚದಲ್ಲೆಲ್ಲ ತನ್ನ ಶಿಷ್ಯರನ್ನು ಹೊಂದಿದ ಮಹಾನ್ ಸಂತ, ತನ್ನ ಶಿಷ್ಯರನ್ನು ಸಮಾನ ರೀತಿಯಲ್ಲಿ ಕಾಣುತ್ತಾ ಅವರ ಏಳಿಗೆಯನ್ನು ತನ್ನ ಏಳಿಗೆ ಎಂದು ಭಾವಿಸಿದ ವ್ಯಕ್ತಿತ್ವ ಅವರು, ಸ್ವಾಮಿಗಳ ಆದರ್ಶದಿಂದಲೇ ಅವರ ಅನುಯಾಯಿಗಳಾಗಿರುವುದು ಎಂದರು. ಸ್ವಾಮಿ ವಿವೇಕಾನಂದರ ಆದರ್ಶವನ್ನು ಪಾಲಿಸಿ ವಿದ್ಯಾಥರ್ಿಗಳಿಗೆ ಪರಿಪೂರ್ಣ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿದಾಗ, ಶಿಕ್ಷಕರ ಆದರ್ಶ ಶಿಷ್ಯರಲ್ಲೂ ಪ್ರಭಾವ ಬೀರಿ ವಿದ್ಯೆ ಕಲಿಸಿದ ಗುರುಗಳಿಗೆ ತಮ್ಮ ಮನಸ್ಸಿನಲ್ಲಿ ಉನ್ನತಮಟ್ಟದ ಸ್ಥಾನಕೊಡುತ್ತಾರೆ, ಮುಂದಿನ ಪೀಳಿಗೆಯವರಿಗೆ ಅವರೂ ಸಹ ಸ್ವಾಮಿ ವಿವೇಕಾನಂದರಂತಹ ವ್ಯಕ್ತಿತ್ವವನ್ನು ಹೊಂದಿದವರಾಗುತ್ತಾರೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಮಾನವ ಸೇವೆ ಅಮೂಲ್ಯವಾದದ್ದು, ಸೇವೆ ಅಗತ್ಯ ಇದ್ದವರಿಗೆ ಇಲ್ಲದವರು ಯಾವುದಾದರೊಂದು ರೀತಿಯಲ್ಲಿ ಸೇವೆ ಮಾಡಿದರೆ ಸಮಾಜದ ಋಣವನ್ನು ಕಿಂಚಿತ್ತಾದರೂ ತೀರಿಸಿದಂತಾಗುತ್ತದೆ ಎಂದ ಅವರು, ವಿಶ್ವದ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿದೆ ಅದು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಹೇಗೆ ಬೆಳಸಿಕೊಳ್ಳಬೇಕೆಂದು ಹೇಳಿಕೊಟ್ಟ ಗುರು, ಶಿಕ್ಷಕರು ವಿವೇಕಾನಂದರಂತೆ ವಿದ್ಯಾಥರ್ಿಗಳಲ್ಲಿ ಉತ್ತಮ ಆದರ್ಶ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವ ಮೂಲಕ ಶಿಕ್ಷಕ ವೃತ್ತಿಗೆ ಅಮೋಘವಾದ ಸೇವೆ ಮಾಡಬೇಕು ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಮಕ್ಕಳಿಗೆ ಜ್ಞಾನದ ಹಸಿವನ್ನು ಶಿಕ್ಷಕರು ಹೋಗಲಾಡಿಸಬೇಕು ಮತ್ತು ಸಮಾಜದಲ್ಲಿ ನಾನು ಎಂಬ ಗರ್ವ ಹೋಗಿ ಎಲ್ಲರಿಗಾಗಿ ನಾವು ಎಂದು ಭಾವಿಸಿ ಆಧ್ಯಾತ್ಮಿಕತೆಯನ್ನು ಎಲ್ಲರೂ ಬೆಳಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಮಾತೆ ಚೈತನ್ಯಮಯೀ, ಹಂಪಿ ವಿಶ್ವವಿದ್ಯಾಲಯ ವಿಜ್ಞಾನ ಸಂಗಾತಿ ಸಂಪಾದಕ ಸುರೇಶ್ಕುಲಕಣರ್ಿ, ರಮೇಶ್ಉಮಾರಾಣಿ, ಚಿಕ್ಕನಾಯಕನಹಳ್ಳಿ ಮೂಲದ ಗೆಳೆಯರ ಒಕ್ಕೂಟ ಅಧ್ಯಕ್ಷ ಸಿ.ಎಂ.ಹೊಸೂರಪ್ಪ, ಸಪ್ತಮಿ ಟ್ರಸ್ಟ್ ಅಧ್ಯಕ್ಷ ಆನಂದ್, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸರ್ವಮಂಗಳ ಪ್ರಾಥರ್ಿಸಿದರು. ಸಿ.ಎಂ.ಹೊಸೂರಪ್ಪ ಸ್ವಾಗತಿಸಿ, ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿ, ಷಡಾಕ್ಷರಿ ತರಬೇನಹಳ್ಳಿ ವಂದಿಸಿದರು.


Monday, August 2, 2010


ಕುಪ್ಪೂರು ಶ್ರೀಗಳ ಹುಟ್ಟು ಹಬ್ಬದಂದು ನೀರಾವರಿಗಾಗಿ 67 ಸಂಘಟನೆಗಳಿಂದ ಚಚರ್ೆ

ಚಿಕ್ಕನಾಯಕನಹಳ್ಳಿ,ಆ2: ಜನತೆಗೆ ಅಗತ್ಯವಾಗಿರುವುದು ನೀರಾವರಿ ಸೌಲಭ್ಯ ಕಲ್ಪಿಸಲು ಇಂದು ತಾಲೂಕಿನಲ್ಲಿ ನೀರಾವರಿ ಹೋರಾಟದಿನವನ್ನಾಗಿ ಆಚರಿಸಲಾಗಿತ್ತಿದೆ ಎಂದು ಡಾ.ಯತೀಶ್ವರ ಶಿವಚಾರ್ಯಸ್ವಾಮೀಜಿ ಹೇಳಿದರು.

ತಾಲೂಕಿನ ಕಪ್ಪೂರು ಗದ್ದಿಗೆ ಮಠದಲ್ಲಿ ಯತೀಶ್ವರ ಶಿವಚಾರ್ಯಸ್ವಾಮಿ 36ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಜನ್ಮದಿನವನ್ನು ನೀರಾವರಿ ಹೋರಾಟ ದಿನವನ್ನಾಗಿ ಆಚರಿಸಲು ಸಂಕಲ್ಪಿಸಲಾಗಿದೆ ಇದಕ್ಕೆ ತಾಲೂಕಿನ 67ಸಂಘಟನೆಗಳು ಬೆಂಬಲ ಸೂಚಿಸಿದ್ದು ಮುಂದೆ ವಿವಿಧ ಹೋರಾಟಗಳನ್ನು ರೂಪಿಸಲಾಗುವುದು ಎಂದರು.

ಹೊಸದುರ್ಗದ ಭಗೀರತ ಮಠದ ಪುರಷೋತ್ತಮಾನಂದ ಸ್ವಾಮೀಜಿ ಮಾತನಾಡಿ ಮಾನವ ಜನ್ಮವನ್ನು ಸನ್ಮಾರ್ಗದ ಮೂಲಕ ಸಾರ್ಥಕತೆ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಆರೋಗ್ಯ ತಪಾಸಣೆ ಶಿಬಿರದ ಮುಖ್ಯಸ್ಥರಾದ ಡಾ.ಜಿ.ಪರಮೇಶ್ವರಪ್ಪ ಮಾತನಾಡಿ ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಮಠದ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ಪುಸ್ತಕ ವಿತರಣೆ ಮತ್ತು ಸುತ್ತಮುತ್ತಲಿನ ನೂರಾರು ಮಂದಿಗೆ ವಿವಿಧ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.


ಚಿಕ್ಕನಾಯಕನಹಳ್ಳಿ,ಜು.30: ಭವಿಷ್ಯದ ಬಗೆಗೆ ಹಲವು ಹೊಂಗನಸುಗಳನ್ನು ಹೊತ್ತು ಹೊಸ ಪರಿಸರದಲ್ಲಿ ಪ್ರವೇಶ ಪಡೆದು ಆರಂಭಿಕ ಮುಜುಗರಕ್ಕೆ ಒಳಗಾಗುವ ವಿದ್ಯಾಥರ್ಿಗಳ ಆತಂಕವನ್ನು ತಪ್ಪಿಸಲು ಸ್ಥಳೀಯ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳು ಕಿರಿಯ ವಿದ್ಯಾಥರ್ಿಗಳನ್ನು ಪರಿಚಯಿಸಿಕೊಳ್ಳಲು ಆತ್ಮೀಯವೆನಿಸುವ 'ಮಡಿಲು ಸೇರುವ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಹಿರಿಯ ಮತ್ತು ಕಿರಿಯ ವಿದ್ಯಾಥರ್ಿಗಳಲ್ಲಿ ಅನೇಕರು ಪರಸ್ಪರ ಶುಭಾಷಯ ಮತ್ತು ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಿದ ತರುವಾಯ ಕಾಲೇಜಿನ ಅಧ್ಯಾಪಕ ವೃಂದ 2010-11ನೇ ಸಾಲಿನ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ನೀಲ ನಕ್ಷೆಯೊಂದನ್ನು ವಿದ್ಯಾಥರ್ಿಗಳ ಎದುರು ಅನಾವರಣಗೊಳಿಸಿ ಅದರ ಯಶಸ್ಸು ಆ ಮೂಲಕ ನಿಮ್ಮಗಳ ವ್ಯಕ್ತಿತ್ವದ ವಿಕಸನದ ಸಾಧನೆಗಾಗಿ ಎಲ್ಲ ವಿದ್ಯಾಥರ್ಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳಲು ಅರಿಕೆ ಮಾಡಿದರು.

ಕಾಲೇಜಿನಿ ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಗಾತ್ರದಲ್ಲಿ ಚಿಕ್ಕದಾದರೂ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದಲ್ಲಿ ಈ ಕಾಲೇಜಿನಿಂದ ಅಧಿಕ ಸಂಖ್ಯೆಯ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಬೇಕು ಅದಕ್ಕಾಗಿಯೇ ಎಲ್ಲ ಅಧ್ಯಾಪಕರನ್ನೊಳಗೊಂಡಂತೆ ನಡೆಸಿದ ತೀವ್ರತರ ಚಿಂತನೆ ಮತ್ತು ಚಚರ್ೆಯ ಫಲವಾಗಿ ಈ ನೀಲ ನಕ್ಷೆ ರೂಪಿಸಲಾಗಿದೆ. ವಿದ್ಯಾಥರ್ಿಗಳ ಆಪ್ತ ಸಮಾಲೋಚನೆ, ವಿಭಿನ್ನ ವೇದಿಕೆಗಳಲ್ಲಿ ಅವರುಗಳ ಪ್ರತಿಭಾ ಅನಾವರಣಕ್ಕೆ ಅವಕಾಶ, ವಿಚಾರ ಸಂಕಿರಣ, ಸ್ಪೋಕನ್ ಇಂಗ್ಲೀಷ್, ಗುಂಪು ಚಚರ್ೆ, ಚಚರ್ಾಸ್ಪಧರ್ೆ, ಸಮೀಕ್ಷೆ ಸಂಗತಿ ಅಧ್ಯಯನ ರಾಷ್ಟ್ರೀಯ ಸೇವಾ ಯೋಜನೆ ಇವುಗಳನ್ನೊಳಗೊಂಡಂತೆ ಸಾಂಸ್ಕೃತಿಕ ಚಟುವಟಿಕೆಗಳ ಉದ್ದೀಪನ, ಕ್ರೀಡಾ ಚಟುವಟಿಕೆಗಳ ವಿಸ್ತರಣೆ ತನ್ಮೂಲಕ ಪ್ರತಿ ವಿದ್ಯಾಥರ್ಿಯ ಸವಾಂಗೀಣ ವ್ಯಕ್ತಿತ್ವ ವಿಕಸನ ಶೈಕ್ಷಣಿಕ ನೀಲ ನಕ್ಷೆಯ ಯೋಜಿತ ಗುರಿಯಾಗಿಸಿಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾಥರ್ಿಗಳು ಇವೆಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತರೋತ್ತರ ಏಳಿಗೆ ಸಾಧಿಸಲೆಂದು ಹಾರೈಸಿದರು.

ಸಮಾರಂಭದಲ್ಲಿ ಅಧ್ಯಾಪಕರುಗಳಾದ ಆರ್.ಎಂ.ಶೇಖರಯ್ಯ, ಎಸ್.ಎಲ್.ಶಿವಕುಮಾರಸ್ವಾಮಿ, ಬಿ.ಎಸ್.ಬಸವಲಿಂತಯ್ಯ, ಸಿ.ಚನ್ನಬಸಪ್ಪ, ಹೆಚ್.ಎಸ್.ಪ್ರಕಾಶ, ಶಿವಯೋಗಿ, ಆಶಾ, ಅರುಣ್ಕುಮಾರ್, ಡಿ.ಎಸ್.ಲೋಕೇಶ್, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿದ್ಯಾಥರ್ಿಯರಾದ ಅನ್ನಪೂರ್ಣ ಮತ್ತು ಹೇಮ ಪ್ರಾಥರ್ಿಸಿ, ರವಿಚಂದ್ರ ಸ್ವಾಗತಿಸಿ, ದನಲಕ್ಷೀ ನಿರೂಪಿಸಿ, ಶ್ರೀನಿವಾಮೂತರ್ಿ ವಂದಿಸಿದರು.

ಕಂದಿಕೆರೆ ಶಾಂತಪ್ಪನವರ ಜಾತ್ರೆ

ಚಿಕ್ಕನಾಯಕನಹಳ್ಳಿ,ಆ2: ಜಡೇಸಿದ್ದೇಶ್ವರ ಮತ್ತು ಶಾಂತವೀರ ಸ್ವಾಮಿ 21ನೇ ವರ್ಷಬ್ದಿ ಪೂಜಾ ಮತ್ತು ಪಲ್ಲಕ್ಕಿ ಮಹೋತ್ಸವ ಇದೇ ಆಗಸ್ಟ್ 11ರಂದು ಏರ್ಪಡಿಸಲಾಗಿದೆ.

ಮಹೋತ್ಸವದಂದು ಬೆಳಿಗ್ಗೆ 6ಗಂಟೆಗೆ ಗಣಪತಿ ಪೂಜೆ, ರುದ್ರಾಭಿಷೇಕ ನಂತರ ಮಹಾಮಂಗಳಾರತಿ ನಂತರ ಮಧ್ಯಾಹ್ನ 1-30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಸಂಜೆ 6-30ಕ್ಕೆ ಪಲ್ಲಕ್ಕಿ ಮಹೋತ್ಸವ ಜನಪದ ಕಲಾ ವೀರಗಾಸೆ ಕಥಾನಕದೊಂದಿಗೆ ಕಂದಿಕೆರೆ ರಾಜಬೀದಿಗಳಲ್ಲಿ ಏರ್ಪಡಿಸಲಾಗಿದೆ

Sunday, August 1, 2010





  • ಕಳ್ಳತನಕ್ಕೆ ಈ ಶಿಕ್ಷೆ ಸರಿಯೇ. . . . ?
  • ಇದು ಮಾನವ ಹಕ್ಕು ಸ್ಪಷ್ಟ ಉಲ್ಲಂಘನೆ
  • ಕಾನೂನನ್ನು ಕೈಗೆತ್ತಿಕೊಂಡಿದ್ದು ಎಷ್ಟು ಸಮಂಜಸ
  • ನಾಗರೀಕ ಸಮಾಜದಲ್ಲಿ ಇನ್ನೂ ಇಂತಹವಕ್ಕೆ ಅವಕಾಶವಿರುವುದು ಸೊಜಗ
  • ಕಳ್ಳತನಮಾಡಿರುವುದು ತಪ್ಪೇ, ಆದರೆ ಶಿಕ್ಷೆ ಕೊಡಲು ಇವರ್ಯಾರು ?
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.31: ಒಂದುವರೆ ವರ್ಷದಾಚೆ ಲಾರಿಯೊಂದರಲ್ಲಿ 360 ಲೀ ಡೀಸಲ್, ಟಾರ್ಪಾಲ್, ಜಾಕ್ ಮತ್ತಿತರ ವಸ್ತುಗಳನ್ನು ಕದ್ದವ, ಈಗ ಸಿಕ್ಕನೆಂದು ಲೈಟ್ ಕಂಬಕ್ಕೆ ಕಟ್ಟಿ ಹಾಕಿದ್ದ ಪ್ರಸಂಗ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ದೇವಾಂಗ ಬೀದಿಯ ಬನಶಂಕರಿ ದೇವಸ್ಥಾನದ ಬಳಿ ಸುಮಾರು 30 ವರ್ಷದ ವ್ಯಕ್ತಿಯೊರ್ವನನ್ನು ಸುಮಾರು ಎರಡು ಗಂಟೆ ಕಾಲ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಆತನನ್ನು ಅವಮಾನಿಸಲಾಗಿದೆ.
ಲೈಟ್ ಕಂಬಕ್ಕೆ ಕಟ್ಟಲು ಕಾರಣ: ತಿಪಟೂರು ತಾಲೂಕಿನ ಈ ಆರೋಪಿ ಮೈನ್ಸ್ ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದವ, ಈತನ ಸುಬದರ್ಿನಲ್ಲಿ ಖನಿಜ ತುಂಬಿದ ಲಾರಿಯನ್ನು ಅನ್ಲೋಡ್ ಮಾಡಲು ಮಂಗಳೂರಿಗೆ ಕಳುಹಿಸಲಾಗಿತ್ತು, ಆದರೆ ಈತ ಮತ್ತು ಈತನ ಸ್ನೇಹಿತರು ಹಾಸನದ ಬಳಿ ಯ 'ದುದ್ದ'ದ ಬಳಿ ಲಾರಿಯಲ್ಲಿದ್ದ 360 ಲೀ. ಡೀಸಲ್, ಜಾಕ್, ವೀಲ್ ಸ್ಪ್ಯಾನರ್, ಟಾರಪಾಲ್,ಹಗ್ಗ ಸೇರಿದಂತೆ ಲಾರಿಯಲ್ಲಿದ್ದ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ, ಅಂದಿನಿಂದ ಈತನ ಮೇಲೆ ಒಂದು ಕಣ್ಣಿಟ್ಟಿದ್ದೆವು ಇಂದು ಸಿಕ್ಕಿದ, ಪೊಲೀಸಿನವರಿಗೆ ವಿಷಯ ತಿಳಿಸಿದ್ದಕ್ಕೆ, ಈ ಘಟನೆ ನಡೆದಿರುವುದು ದುದ್ದದಲ್ಲಿ ಅಲ್ಲಿಯ ಪೊಲೀಸರಿಗೆ ದೂರು ನೀಡಿ ಎಂದರು, ಈತನನ್ನು ಅಲ್ಲಿಯ ತನಕ ಏಕೆ ಕರೆದುಕೊಂಡು ಹೋಗಲಿ ಇಲ್ಲಿಯೇ ಕಟ್ಟಿ ಹಾಕಿದ್ದೇವೆ. ಈತನನ್ನು ಬಿಡಸಿಕೊಂಡು ಹೋಗುವವರು ಅಂದು ಕಳುವಾಗಿರುವ ಅಷ್ಟೂ ಸಾಮಾಗ್ರಿಗಳನ್ನು ತಂದು ಕೊಟ್ಟು ಬಿಡಿಸಿಕೊಂಡು ಹೋಗಲಿ ಎಂಬುದು ಈತನನ್ನು ಕಂಬಕ್ಕೆ ಕಟ್ಟಿದವರ ದೂರು. ಈ ಬಗ್ಗೆ ಕೈಕಟ್ಟಿಸಿಕೊಂಡವನನ್ನು ಪ್ರಶ್ನಿಸಿದರೆ, ಹೌದು ಆ ದಿನ ಲಾರಿಯಲ್ಲಿದ್ದ ಸಾಮಾನುಗಳು ಕಳ್ಳತನವಾಗಿರುವುದು ಸತ್ಯ, ಆದರೆ ಇದಕ್ಕೆ ನಾನು ಸಂಪೂರ್ಣ ಹೊಣೆಗಾರನಲ್ಲ, ನನ್ನ ಜೊತೆ ಇನ್ನಿತರರು ಇದ್ದರು, ಅವರನ್ನೇಲ್ಲಾ ಸೇರಿಸಿ ಪೊಲೀಸರಿಗೆ ದೂರು ನೀಡಲಿ ಆದರೆ ನನಗೊಬ್ಬನಿಗೆ ಈ ರೀತಿಯ ಶಿಕ್ಷೆ ಏಕೆ ಎಂಬುದು ಆತನ ಅಳಲು.
ಈಗ ಸಾರ್ವಜನಿಕರಲ್ಲಿ ಚಚರ್ೆ ಆಗುತ್ತಿರುವ ವಿಷಯವೆಂದರೆ, ಆತ ನಿಜವಾಗಿಯೂ ಕಳ್ಳನಾಗಿದ್ದರೆ ವಿಚಾರಿಸಲು ಪೋಲೀಸು, ನ್ಯಾಯಾಲಯವಿದೆ, ಆದರೆ ಇವರು ಕಂಬಕ್ಕೆ ಕಟ್ಟಿ ಹಾಕಿರುವುದು ತಪ್ಪು, ಇದು ಮಾನವ ಹಕ್ಕು ಉಲ್ಲಂಘನೆ, ಇಂತಹ ಘಟನೆಗಳು ಹಾಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ, ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತವೆ, ಇನ್ನು ಕೆಲವು ಮುಚ್ಚಿ ಹೋಗುತ್ತವೆ. ಆದರೆ ಈ ರೀತಿ ಅವಮಾನಿಸುತ್ತಿರುವುದು ಎಷ್ಟು ಸರಿ.
ಆಧುನಿಕ ಶೈಲಿಗೆ ಮಾರು ಹೋಗುತ್ತಿರುವ ಯುವಕರು, ಹೇಗಾದರೂ ಸರಿಯೇ ಮೈನೊವಿಲ್ಲದಂತೆ ಬೇಗ ಶ್ರೀಮಂತರಾಗಲು ಅವಣಿಸುತ್ತಿರುವುದು ಎಲ್ಲಾ ಕಡೆ ನಡೆಯುತ್ತಿದೆ. ಹಾಗಾಗಿ ಕಳ್ಳತನವೆಂಬುದು ಒಂದು ಪಿಡುಗಾಗಿದೆ, ಇದನ್ನು ಅವರ ಅವರ ಯೋಗ್ಯಾತಾನುಸಾರ ಮಾಡುತ್ತಿದ್ದಾರೆ, ಅದೊಂದು ಕುಕೃತ್ಯವೆಂದು ತಿಳಿದೂ ತಿಳಿದು ಮಾಡುತ್ತಿರುವದಕ್ಕೆ ಕ್ಷಮೆ ಇಲ್ಲ, (ದೊಡ್ಡೋರು/ಅಧಿಕಾರದಲ್ಲಿರುವವರು ಮಾಡುವುದು ಬೇರೆ ಮಾತು.....!), ಆದರೆ ಈ ಕಳ್ಳತನಕ್ಕೆ ಈ ರೀತಿಯ ಶಿಕ್ಷೆ ಸರಿಯೇ. . . !?

ಚಿನ್ನಾಭರಣ ದೋಚಲು ಹೊಂಚು ಹಾಕುತ್ತಿದ್ದವರ ಬಂಧನ
ಚಿಕ್ಕನಾಯಕನಹಳ್ಳಿ,ಜು.31: ಪಟ್ಟಣದ ಜ್ಯೂಯಲರಿಯ ಮಾಲೀಕರೊಬ್ಬರು ಚಿನ್ನಾಭರಣಗಳನ್ನು ಅಂಗಡಿಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲಿ ದೋಚಲು ಹೊಂಚುಹಾಕುತ್ತಿದ್ದ ಯುವಕರ ಗುಂಪೊಂದನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಕಿಶೋರ್ ಜ್ಯೂಯಲರ್ಸ್ನ ಮಾಲೀಕ ತನ್ನ ಅಂಗಡಿಯಲ್ಲಿದ್ದ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಿಂದ ಅಂಗಡಿಗೆ ತೆಗೆದುಕೊಂಡು ಹೋಗುವ ಬಗ್ಗೆ ಮಾಹಿತಿ ಪಡೆದು ಆ ಆಭರಣಗಳನ್ನು ದೋಚಲು ಸಕರ್ಾರಿ ಪದವಿ ಪೂರ್ವ ಕಾಲೇಜ್ನ ಬಳಿ ಹೊಂಚು ಹಾಕುತ್ತಿದ್ದ ಯುವಕರಾದ ಬೆಂಗಳೂರಿನ ಇಮ್ರಾನ್, ಸದ್ದಾಂ, ಭರತ್ ಗೌಡ, ಶ್ರೀಧರ, ನವೀನ, ಜಿ.ಎಂ.ಗೌಡ, ಸತೀಶ,ನಾಗರಾಜು ಎಂಬುವರನ್ನು ಬಂಧಿಸಿದ್ದು, ಇವರ ಬಳಿ ಇದ್ದ ಒಂದು ಲಾಂಗ್, ಖಾರದ ಪುಡಿ, 4 ಮೊಬೈಲ್, ಮೋಟಾರ್ ಸೈಕಲ್ನ್ನು ವಶ ಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾಯರ್ಾಚರಣೆಯಲ್ಲಿ ವೃತ್ತ ನಿರೀಕ್ಷಕ ಪಿ.ರವಿಪ್ರಸಾದ್ ನೇತೃತ್ವದಲ್ಲಿ ಕೆ.ಬಿ.ಕ್ರಾಸ್ ಪಿ.ಎಸೈ. ರಾಘವೇಂದ್ರ ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು.

ಜಡೇಸಿದ್ದೇಶ್ವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಜು.30: ಜಡೇಸಿದ್ದೇಶ್ವರ ಮತ್ತು ಶಾಂತವೀರ ಸ್ವಾಮಿ 21ನೇ ವರ್ಷಬ್ದಿ ಪೂಜಾ ಮತ್ತು ಪಲ್ಲಕ್ಕಿ ಮಹೋತ್ಸವ ಇದೇ ಆಗಷ್ಟ್ 11ರಂದು ಏರ್ಪಡಿಸಲಾಗಿದೆ.
ಮಹೋತ್ಸವದಂದು ಬೆಳಿಗ್ಗೆ 6ಗಂಟೆಗೆ ಗಣಪತಿ ಪೂಜೆ, ರುದ್ರಾಭಿಷೇಕ ನಂತರ ಮಹಾಮಂಗಳಾರತಿ ನಂತರ ಮಧ್ಯಾಹ್ನ 1-30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಸಂಜೆ 6-30ಕ್ಕೆ ಪಲ್ಲಕ್ಕಿ ಮಹೋತ್ಸವ ಜನಪದ ಕಲಾ ವೀರಗಾಸೆ ಕಥಾನಕದೊಂದಿಗೆ ಕಂದಿಕೆರೆ ರಾಜಬೀದಿಗಳಲ್ಲಿ ನಡೆಯುವುದು.
ಯಶಸ್ವಿ ಆರೋಗ್ಯ ಮತ್ತು ರಕ್ತದಾನ ಶಿಬಿರ
ಚಿಕ್ಕನಾಯಕನಹಳ್ಳಿ,ಜು.30: ಜನತೆಗೆ ಅಗತ್ಯವಾಗಿರುವುದು ನೀರಾವರಿ ಸೌಲಭ್ಯ ಈ ಕೊರತೆ ನಿವಾರಣೆಗಾಗಿ ಇಂದು ತಾಲೂಕಿನಲ್ಲಿ ನೀರಾವರಿ ಹೋರಾಟದಿನವನ್ನಾಗಿ ಆಚರಿಸಲಾಗಿದೆ ಎಂದು ಡಾ.ಯತೀಶ್ವರ ಶಿವಚಾರ್ಯಸ್ವಾಮೀಜಿ ಹೇಳಿದರು.
ತಾಲೂಕಿನ ಕಪ್ಪೂರು ಗದ್ದಿಗೆ ಮಠದಲ್ಲಿ ಯತೀಶ್ವರ ಶಿವಚಾರ್ಯಸ್ವಾಮಿ 36ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಮ್ಮ ಜನ್ಮದಿನವನ್ನು ನೀರಾವರಿ ಹೋರಾಟ ದಿನವನ್ನಾಗಿ ಆಚರಿಸಲು ಸಂಕಲ್ಪಿಸಲಾಗಿದೆ ಇದಕ್ಕೆ ತಾಲೂಕಿನ 67ಸಂಘಟನೆಗಳು ಬೆಂಬಲ ಸೂಚಿಸಿದ್ದು ಮುಂದೆ ವಿವಿಧ ಹೋರಾಟಗಳನ್ನು ರೂಪಿಸಲಾಗುವುದು ಎಂದರು.
ಪುರಷೋತ್ತಮಾನಂದ ಸ್ವಾಮೀಜಿ ಮಾತನಾಡಿ ಮಾನವ ಜನ್ಮವನ್ನು ಸನ್ಮಾರ್ಗದ ಮೂಲಕ ಸಾರ್ಥಕತೆ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಆರೋಗ್ಯ ತಪಾಸಣೆ ಶಿಬಿರದ ಮುಖ್ಯಸ್ಥರಾದ ಡಾ.ಜಿ.ಪರಮೇಶ್ವರಪ್ಪ ಮಾತನಾಡಿ ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮಠದ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ಪುಸ್ತಕ ವಿತರಣೆ ಮತ್ತು ಸುತ್ತಮುತ್ತಲಿನ ನೂರಾರು ಮಂದಿಗೆ ವಿವಿಧ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.

ಹರಿಯ ವಿದ್ಯಾಥರ್ಿಗಳಿಂದ ಕಿರಿಯ ವಿದ್ಯಾಥರ್ಿಗಳಿಗೆ ಸ್ವಾಗತ
ಚಿಕ್ಕನಾಯಕನಹಳ್ಳಿ,ಜು.30: ಭವಿಷ್ಯದ ಬಗೆಗೆ ಹಲವು ಹೊಂಗನಸುಗಳನ್ನು ಹೊತ್ತು ಹೊಸ ಪರಿಸರದಲ್ಲಿ ಪ್ರವೇಶ ಪಡೆದು ಆರಂಭಿಕ ಮುಜುಗರಕ್ಕೆ ಒಳಗಾಗುವ ವಿದ್ಯಾಥರ್ಿಗಳ ಆತಂಕವನ್ನು ತಪ್ಪಿಸಲು ಸ್ಥಳೀಯ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳ ಕಿರಿಯ ವಿದ್ಯಾಥರ್ಿಗಳನ್ನು ಪರಿಚಯಿಸಿಕೊಳ್ಳಲು ಆತ್ಮೀಯವೆನಿಸುವ 'ಮಡಿಲು ಸೇರುವ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಹಿರಿಯ ಮತ್ತು ಕಿರಿಯ ವಿದ್ಯಾಥರ್ಿಗಳಲ್ಲಿ ಅನೇಕರು ಪರಸ್ಪರ ಶುಭಾಷಯ ಮತ್ತು ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಿದ ತರುವಾಯ ಕಾಲೇಜಿನ ಅಧ್ಯಾಪಕ ವೃಂದ 2010-11ನೇ ಸಾಲಿನ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ನೀಲ ನಕ್ಷೆಯೊಂದನ್ನು ವಿದ್ಯಾಥರ್ಿಗಳ ಎದುರು ಅನಾವರಣಗೊಳಿಸಿ ಅದರ ಯಶಸ್ಸು ಆ ಮೂಲಕ ನಿಮ್ಮಗಳ ವ್ಯಕ್ತಿತ್ವದ ವಿಕಸನದ ಸಾಧನೆಗಾಗಿ ಎಲ್ಲ ವಿದ್ಯಾಥರ್ಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳಲು ಅರಿಕೆ ಮಾಡಿದರು.
ಕಾಲೇಜನಿ ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಗಾತ್ರದಲ್ಲಿ ಚಿಕ್ಕದಾದರೂ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದಲ್ಲಿ ಈ ಕಾಲೇಜಿನಿಂದ ಅಧಿಕ ಸಂಖ್ಯೆಯ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಬೇಕು ಅದಕ್ಕಾಗಿಯೇ ಎಲ್ಲ ಅಧ್ಯಾಪಕರನ್ನೊಳಗೊಂಡಂತೆ ನಡೆಸಿದ ತೀವ್ರತರ ಚಿಂತನೆ ಮತ್ತು ಚಚರ್ೆಯ ಫಲವಾಗಿ ಈ ನೀಲ ನಕ್ಷೆ ರೂಪಿಸಲಾಗಿದೆ. ವಿದ್ಯಾಥರ್ಿಗಳ ಆಪ್ತ ಸಮಾಲೋಚನೆ ವಿಭಿನ್ನ ವೇದಿಕೆಗಳಲ್ಲಿ ಅವರುಗಳ ಪ್ರತಿಭಾ ಅನಾವರಣಕ್ಕೆ ಅವಕಾಶ, ವಿಚಾರ ಸಂಕಿರಣ, ಸ್ಪೋಕನ್ ಇಂಗ್ಲೀಷ್, ಗುಂಪು ಚಚರ್ೆ, ಚಚರ್ಾಸ್ಪಧರ್ೆ, ಸಮೀಕ್ಷೆ ಸಂಗತಿ ಅಧ್ಯಯನ ರಾಷ್ಟ್ರೀಯ ಸೇವಾ ಯೋಜನೆ ಇವುಗಳನ್ನೊಳಗೊಂಡಂತೆ ಸಾಂಸ್ಕೃತಿಕ ಚಟುವಟಿಕೆಗಳ ಉದ್ದೀಪನ, ಕ್ರೀಡಾ ಚಟುವಟಿಕೆಗಳ ವಿಸ್ತರಣೆ ತನ್ಮೂಲಕ ಪ್ರತಿ ವಿದ್ಯಾಥರ್ಿಯ ಸವಾಂಗೀಣ ವ್ಯಕ್ತಿತ್ವ ವಿಕಸನ ಶೈಕ್ಷಣಿಕ ನೀಲ ನಕ್ಷೆಯ ಯೋಜಿತ ಗುರಿಯಾಗಿಸಿಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾಥರ್ಿಗಳು ಇವೆಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತರೋತ್ತರ ಏಳಿಗೆ ಸಾಧಿಸಲೆಂದು ಹಾರೈಸಿದರು.
ಸಮಾರಂಭದಲ್ಲಿ ಅಧ್ಯಾಪಕರುಗಳಾದ ಆರ್.ಎಂ.ಶೇಖರಯ್ಯ, ಎಸ್.ಎಲ್.ಶಿವಕುಮಾರಸ್ವಾಮಿ, ಬಿ.ಎಸ್.ಬಸವಲಿಂತಯ್ಯ, ಸಿ.ಚನ್ನಬಸಪ್ಪ, ಹೆಚ್.ಎಸ್.ಪ್ರಕಾಶ, ಶಿವಯೋಗಿ, ಆಶಾ, ಅರುಣ್ಕುಮಾರ್, ಡಿ.ಎಸ್.ಲೋಕೇಶ್, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿಯರಾದ ಅನ್ನಪೂರ್ಣ ಮತ್ತು ಹೇಮ ಪ್ರಾಥರ್ಿಸಿ, ರವಿಚಂದ್ರ ಸ್ವಾಗತಿಸಿ, ದನಲಕ್ಷೀ ನಿರೂಪಿಸಿ, ಶ್ರೀನಿವಾಮೂತರ್ಿ ವಂದಿಸಿದರು.
ಹೈನುಗಾರಿಕೆ ಅಭಿವೃದ್ದಿ ಪಡಿಸಿ ಬೆಂಗಳೂರಿನ ವಲಸೆ ತಪ್ಪಿಸಿ
ಚಿಕ್ಕನಾಯಕನಹಳ್ಳಿ,ಜು.30: ವಿಧವೆಯರಿಗೆ ಹಸು ಸಾಕಲು ಹಾಲು ಒಕ್ಕೂಟ 35ಸಾವಿರ ರೂಗಳನ್ನು ಸಾಲನೀಡುತ್ತಿದ್ದು ಈ ಸಾಲ ಯೋಜನೆಯಲ್ಲಿ 18,500ರೂಗಳ ಸಬ್ಸಿಡಿ ದೊರೆಯಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿದರ್ೇಶಕ ಶಿವನಂಜಪ್ಪ ಹಳೇಮನೆ ತಿಳಿಸಿದರು.
ತಾಲೂಕಿನ ಕುಪ್ಪೂರು ಗ್ರಾ.ಪಂ.ವ್ಯಾಪ್ತಿಯ ಬೆನಕನಕಟ್ಟೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲು ಏರ್ಪಡಿಸಿದ್ದ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ತಿಂಗಳಿಗೆ ಐದಾರು ಸಾವಿರ ದುಡಿಯಲು ಬೆಂಗಳೂರಿಗೆ ವಲಸೆ ಹೋಗಿ ಅಲ್ಲಿ ಕಷ್ಟ ಅನುಭವಿಸುವ ಬದಲು ತಮ್ಮ ಊರಿನಲ್ಲೇ ಎರಡು ಸೀಮೆಹಸುವನ್ನು ಸಾಕಿದರೆ ಅದು ಕೊಡುವ ಹಾಲಿನಲ್ಲಿ ಸುಖವಾಗಿ ತಮ್ಮ ತಂದೆ, ತಾಯಿಗಳ ಜೊತೆಯಲ್ಲಿ ಆನಂದವಾಗಿ ಸಂಸಾರ ನಡೆಸಬಹುದೆಂದರು ಒಕ್ಕೂಟವೇ 20 ತರಹದ ಔಷದಿಯನ್ನು ಕೊಡುತ್ತಿದೆ ಎಂದರು. ಈ ಮೂರು ವರ್ಷದಲ್ಲಿ ತಾಲೂಕಿನಲ್ಲಿ 80ಕ್ಕೂ ಅಧಿಕ ಹಾಲೂ ಉತ್ಪಾದಕರ ಸಂಘಗಳನ್ನು ನೊಂದಾಯಿಸಿದ್ದು ನಮ್ಮ ಅವಧಿಯಲ್ಲಿ 101 ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇನೆ ಎಂದರು.
ನಮ್ಮ ತಾಲೂಕಿನಿಂದ ತುಮಕೂರಿಗೆ ಪ್ರತಿ ದಿನ 30ಸಾವಿರ ಲೀಟರ್ ಹಾಲನ್ನು ರವಾನೆ ಮಾಡುತ್ತಿತ್ತು, ಮಲ್ಲಸಂದ್ರದ ಬಳಿ ಇರುವ ಹಾಲು ಒಕ್ಕೂಟಕ್ಕೆ ಪ್ರತಿದಿನ 3ಲಕ್ಷದ 65ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದರು.
ನಾನು ಈ ಹಿಂದೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಸಂದರ್ಭದಲ್ಲಿ ಒಕ್ಕೂಟ 11ಕೋಟಿ ಸಾಲದ ಹೊರೆಯನ್ನು ಹೊಂದಿತ್ತು. ಈ ಸಾಲವನ್ನೆಲ್ಲ ತೀರಿಸಲು ನಾನು ಸಾಕಷ್ಟು ಶ್ರಮಿಸಿ ಹತ್ತು ಕೋಟಿಗೂ ಹೆಚ್ಚು ಸಾಲವನ್ನು ತೀರಿಸಿದೆನು ಎಂದರು.
ಈ ಸಭೆಯಲ್ಲಿ ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ ಹಾಲು ಉತ್ಪಾದಕರಿಗೆ ಸಾಕಷ್ಟು ಅವಕಾಶಗಳಿದ್ದು ಸಕರ್ಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಹಾಲು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಗ್ರಾಮ ಸಭೆಯಲ್ಲಿ ಮುಖ್ಯ ಪ್ರವರ್ತಕರು ಸೇರಿದಂತೆ ಹತ್ತು ಜನ ಪ್ರವರ್ತಕರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ಕೃಷ್ಣಮೂತರ್ಿ, ಹಿರಿಯಣ್ಣ ಪಾಂಡುರಂಗಯ್ಯ, ವಾಗೀಶ ಪಂಡಿತರಾದ್ಯ ಸೇರಿದಂತೆ ವಿಸ್ತರಣಾಧಿಕಾರಿಗಳಾದ ಬಸವಯ್ಯ, ಯರಗುಂದಪ್ಪ, ಬಲಟ್ಟಿಪ್ರಸಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸಕರ್ಾರಿ ಕಿ.ಪ್ರಾ.ಶಾಲೆಯ ವಿದ್ಯಾಥರ್ಿಗಳಾದ ದರ್ಶನ್ ಮತ್ತು ಲೀನಾ ಪ್ರಾಥರ್ಿಸಿದರೆ ವೆಂಕಟೇಶ್ ಸ್ವಾಗತಿಸಿ, ವಂದಿಸಿದರು.





Tuesday, July 27, 2010

ಕುಪ್ಪೂರು ಶ್ರೀ ಹುಟ್ಟು ಹಬ್ಬವನ್ನು ತಾಲೂಕಿನ ನೀರಾವರಿ ಹೋರಾಟದ ದಿನವಾಗಿ ಆಚರಣೆ
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಇದೇ ಸಂದರ್ಭದಲ್ಲಿ ತಾಲೂಕಿನ ನೀರಾವರಿ ಹೋರಾಟದ ರೂಪುರೇಷೆಗಳನ್ನು ಚಚರ್ಿಸಲಾಗುವುದು ಎಂದು ರೈತ ಸಂಘದ ಮುಖಂಡ ಸತೀಶ್ ಕೆಂಕೆರೆ ಹಾಗೂ ಡಾ.ಪರಮೇಶ್ ತಿಳಿಸಿದ್ದಾರೆ.
ಕುಪ್ಪೂರು ಶ್ರೀ ಮರುಳುಸಿದ್ದೇಶ್ವರ ಗದ್ದಿಗೆ ಸಂಸ್ಥಾನ ಮಠಾಧ್ಯಕ್ಷರಾ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳ 36ನೇ ಹುಟ್ಟು ಹಬ್ಬವನ್ನು ಇದೇ 29ರ ಗುರುವಾರ ಕುಪ್ಪೂರಿನಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ತಾಲೂಕಿಗೆ ನದಿಪಾತ್ರಗಳಿಂದ ನೀರು ತರುವ ವಿಷಯವಾಗಿ ಚಚರ್ಿಸಲು 63 ಸಂಘಟನೆಗಳು ಭಾಗವಹಿಸಲಿವೆ ಎಂದು ಸತೀಶ್ ತಿಳಿಸಿದರು.
ತಾಲೂಕಿಗೆ ನೀರು ತರುವ ವಿಷಯವಾಗಿ ಹುಳಿಯಾರಿನಲ್ಲಿ 70 ದಿನಗಳ ಸುದೀರ್ಘ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಲ್ಲದೆ, ನೀರಾವರಿ ಸಚಿವರ ಬಳಿಯೂ ನಿಯೋಗ ತೆರಳಿ ಈ ಬಗ್ಗೆ ಸಕರ್ಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು, ಆ ಸಂದರ್ಭದಲ್ಲಿ ಸಚಿವರ ನೀಡಿದ ವಾಗ್ದಾನದಂತೆ ಕೆಲಸವಾಗಿರುವುದಿಲ್ಲ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಆಸಕ್ತಿವಹಿಸಿರುವುದಿಲ್ಲ, ಆದ್ದರಿಂದ ಮುಂದಿನ ನಮ್ಮ ನಡೆಯ ಬಗ್ಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳೊಂದಿಗೆ ಮತ್ತೊಮ್ಮೆ ಚಚರ್ಿಸುವ ಕುಪ್ಪೂರು ಶ್ರೀಗಳ ಹುಟ್ಟು ಹಬ್ಬದ ದಿನದಂದು ಕುಪ್ಪೂರಿನಲ್ಲಿ ಸಭೆ ಕರೆಯಲಾಗಿದೆ ಎಂದು ಸತೀಶ್ ಕೆಂಕೆರೆ ಹಾಗೂ ಡಾ.ಪರಮೇಶ್ವರ ತಿಳಿಸಿದ್ದಾರೆ.
ಶಿಕ್ಷಕರ ಸಂಘದ ಒಗ್ಗಟ್ಟನ್ನು ಹೊಡೆಯಬೇಡಿ ಸಂಘದ ಪದಾಧಿಕಾರಿಗಳ ಮನವಿ
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಕೆಲವು ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಧನೆಗಳನ್ನು ತಿಳಿದರೂ ಸಹ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಶಿಕ್ಷಕರಲ್ಲಿ ತಪ್ಪು ಕಲ್ಪನೆ ಮೂಡಿಸಿ ಸಂಘದ ಬಗ್ಗೆ ಅಪಪ್ರಚಾರ ಮಾಡಿ ಪಯರ್ಾಯ ಸಂಘ ರಚಿಸುತ್ತೇವೆಂದು ಶಿಕ್ಷಕರ ಹಾಗೂ ಸಂಘದ ಒಗ್ಗಟ್ಟನ್ನು ವಿಭಜಿಸಲು ಹೊರಟಿದ್ದಾರೆಂದು.ಪ್ರಾ.ಶಾ.ಶಿ. ಸಂಘದ ತಾಲೂಕು ಅಧ್ಯಕ್ಷ ಎಚ್.ಎಮ್.ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸಂಘದ ವಿರುದ್ದವಾಗಿ ರಾಜ್ಯಮಟ್ಟದಲ್ಲಿ ಹಲವಾರು ಸಂಘಗಳು ಉದಯವಾಗುತ್ತಿದೆ ಇವೆಲ್ಲಾ ಸೂಯರ್ೊದಯಕ್ಕೆ ಉದಯವಾಗಿ ಸೂಯೂಸ್ತ ಸಮಯಕ್ಕೆ ಅಸ್ತಂಗತವಾಗುತ್ತವೆ ಇದರಿಂದಾಗಿ ಈ ಸಂಘಗಳು ಶಿಕ್ಷಕರ ಪರವಾಗಿ ಹೋರಾಟ ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ಟೀಕಿಸಿರುವ ಅವರು, ನಮ್ಮ ಸಂಘವು ಚುನಾವಣೆಯ ನಂತರ ಒಂದು ವರ್ಷದಲ್ಲಿ ಪರಿಹಾರ ಭೋಧನೆಯನ್ನು ಶಾಲಾ ಅವಧಿಯಲ್ಲಿಯೇ ಮಾಡುವಂತೆ ಮತ್ತು ಅಕ್ಟೋಬರ್ ರಜೆ ಅವದಿಯು ಕಡಿತವಾಗಿದ್ದನ್ನು ಮೊದಲಿನಂತೆಯೇ ರಜೆ ಅವಧಿಯನ್ನು ನಿಗಧಿ ಪಡಿಸುವಂತೆ ಆದೇಶ ಮಾಡುವಲ್ಲಿ ನಮ್ಮ ಸಂಘ ಯಶಸ್ವಿಯಾಗಿದೆ, ಎಲ್ಲಾ ಶಿಕ್ಷಕರಿಗೂ ತಿಂಗಳ ಮೊದಲನೇ ವಾರದಲ್ಲಿ ವೇತನ ನೀಡಿ ಯಾವುದೇ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದೆ.
ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಶಿಕ್ಷಕರಿಗೆ ನಿವೇಶನ ಕೊಡಿಸುವುದರ ಮೂಲಕ ಪ್ರತಿ ತಾಲೂಕಿನಲ್ಲಿ ಶಿಕ್ಷಕರ ಬಡಾವಣೆ ನಿಮರ್ಿಸುವ ಪ್ರಯತ್ನ ಮಾಡಿದರೂ ಸಹ ಕೆಲವು ಮಂದಿ ಶಿಕ್ಷಕರು ಬೇರೆ ಬೇರೆ ಸಂಘ ಸ್ಥಾಪಿಸುತ್ತೇವೆಂದು ನಮ್ಮ ಸಂಘಕ್ಕೆ ಬೆಂಬಲ ನೀಡಿ ಎಂದು ಸಹಿ ಸಂಗ್ರಹಿಸಿರುವುದರಲ್ಲಿ ನಿರತರಾಗಿರುವುದು ಸಂಘದ ಗಮನಕ್ಕೆ ಬಂದಿದ್ದು ಯಾವುದೇ ರೀತಿಯಲ್ಲಿ ಇಂತಹ ಅನಾಮಧೇಯ ಸಂಘಟನೆಗಳ ಮನವಿಗೆ ಕಿವಿಗೊಡದೆ ಹಾಗೂ ಸಹಿ ಹಾಕಲು ನಿರಾಕರಿಸುವುದರ ಮೂಲಕ ಸಂಘಟನಾ ಶಕ್ತಿಯನ್ನು ಬಲಪಡಿಸಬೇಕೆಂದು ಉಪಾಧ್ಯಕ್ಷ ಎಸ್.ಸಿ.ನಟರಾಜ್, ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ್, ಸಂಘಟನಾ ಕಾರ್ಯದಶರ್ಿ ಶಾಂತಮ್ಮ, ಸಹಕಾರ್ಯದಶರ್ಿ ಎಲ್.ಅನಸೂಯಮ್ಮ ವಿನಂತಿಸಿದ್ದಾರೆ.
ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಸಾವು.
ಚಿಕ್ಕನಾಯಕನಹಳ್ಳಿ,ಜು.27: ತಾಲೂಕಿನ ಗಾಂಧಿನಗರ ಕೈಮರದ ಬಳಿ ಕೃಷಿ ಹೊಂಡಕ್ಕೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಕೋಡಿಪಾಳ್ಯದ ಗಂಗಾಧರಯ್ಯ ಎಂಬುವರಿಗೆ ಸೇರಿದ ಈ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಗೌಡನಕಟ್ಟೆಯ ಗೌರಮ್ಮ(45) ಎಂದು ಗುರುತಿಸಲಾಗಿದೆ, ಪಾಶ್ರ್ವವಾಯು ಪೀಡಿತಳಾದ ಈಕೆ ಮಾನಸಿಕವಾಗಿ ನೊಂದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಹಂದನಕೆರೆ ಪಿ.ಎಸೈ. ಟಿ.ವಿ.ರಾಜು ಪ್ರಕರಣ ದಾಖಲಿಸಿದ್ದಾರೆ.
ಬಿ2ಬಿ ಪಾದಯಾತ್ರೆಗೆ ಬಿ.ಸಿ.ಸಿ. ಪಾದಾರ್ಪಣೆ
ಚಿಕ್ಕನಾಯಕನಹಳ್ಳಿ,ಜು.27: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಬೆಂಗಳೂರು ಬಳ್ಳಾರಿ ಪಾದಯಾತ್ರೆಯಲ್ಲಿ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಭಾಗವಹಿಸುವುದಾಗಿ ಅಧ್ಯಕ್ಷ ಸಿ.ಬಸವರಾಜು ಹೇಳಿಕೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯ ವಿರುದ್ದ ಸಿ.ಬಿ.ಐ.ಗೆ ವಹಿಸುವಂತೆ ಒತ್ತಾಯಿಸುವುದು ಹಾಗೂ ಬಿ.ಜೆ.ಪಿ.ಸಕರ್ಾರದ ವೈಫಲ್ಯದ ವಿರುದ್ದ ಹಾಗೂ ನಾಡಿನ ರಕ್ಷಣೆಗಾಗಿ ಕೆ.ಪಿ.ಸಿ.ಸಿ.ಆಯೋಜಿಸಿರುವ ಈ ಪಾದಯಾತ್ರೆಯಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ನ ಜನಾಂದೋಲನ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆಯನ್ನು ಒಳಗೊಂಡ ಸಾಮೂಹಿ ನಾಯಕತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಯಶಸ್ವಿಗಾಗಿ ಹಳ್ಳಿ ಹಳ್ಳಿಯಿಂದ ಸ್ವಯಂ ಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯರುಗಳಾದ ಸಿ.ಪಿ.ಮಹೇಶ್, ಬಾಬು ಸಾಹೇಬ್, ಧರಣಿ ಲಕ್ಕಪ್ಪ, ರೇಣುಕ ಗುರುಮೂತರ್ಿ, ಎಚ್.ಬಿ.ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೇಗೌಡ, ಚಿ.ಲಿಂ.ರವಿಕುಮಾರ್, ಶಿವಕುಮಾರಸ್ವಾಮಿ, ನಿಜಾನಂದಮೂತರ್ಿ, ರಾಮಕೃಷ್ಣಯ್ಯ, ಸಿ.ಎಂ.ಬೀರಪ್ಪ, ಸೇರಿದಂತೆ ಹಲವು ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಹಿಸಿದ್ದರು.


Sunday, July 25, 2010

Saturday, July 24, 2010


ಪ್ರತಿಭೆಗಳ ಭವಿಷ್ಯ ಬೆಳಗಿಸಲು ಸ್ಪಧರ್ೆಗಳನ್ನು ಏರ್ಪಡಿಸಲು ನಾಯಕರು ಮುಂದೆ ಬರಬೇಕು
ಚಿಕ್ಕನಾಯಕನಹಳ್ಳಿ,ಜು.24: ಪ್ರತಿಭೆಗಳನ್ನು ಗುರುತಿಸುವ ಮತ್ತು ಅವರ ಭವಿಷ್ಯವನ್ನು ಬೆಳೆಗಿಸುವ ಉತ್ತಮ ಕಾರ್ಯವು ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇಲ್ಲಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಸ್ಪಧರ್ಿಗಳು ಗೆಲುವು-ಸೋಲು ಎರಡು ಒಂದೇ ಮುಖಗಳೆಂದು ಭಾವಿಸಿ ಉತ್ತಮ ನೃತ್ಯಪ್ರದರ್ಶನವನ್ನು ನೀಡಿ ಮನರಂಜನೆ ಕೊಡಬೇಕು ಎಂದ ಅವರು ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆಯಲ್ಲಿ ಇನ್ನಿತರ ಸಣ್ಣಪುಟ್ಟ ಕಾರ್ಯಕ್ರಮ ನಡೆದು ಜಾತ್ರೆಯನ್ನು ಇನ್ನೂ ಹೆಚ್ಚು ಜನಪ್ರಿಯಗೊಳಿಸಬೇಕು ಎಂದರು.
ಕರಿಸಿದ್ದೇಶ್ವರ ಮಠದ ಶಿವಪ್ರಕಾಶ್ಶಿವಚಾರ್ಯಸ್ವಾಮಿ ಮಾತನಾಡಿ ಸ್ಪಧರ್ಿಗಳು ಸ್ಪಧರ್ೆಗೆ ಭಾಗವಹಿಸುವುದರ ಜೊತೆಗೆ ತಮ್ಮ ಪ್ರತಿಭೆಯಿಂದ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಅನ್ನಪೂರ್ಣಕಲಾ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪುರಸಭಾ ಸದಸ್ಯ ಸಿ.ಟಿ.ವರದರಾಜು, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಕುಶಾಲ್ ಗಾಮರ್ೆಂಟ್ಸ್ ಮಾಲೀಕ ಶಾಂತಕುಮಾರ್, ರವಿಚಂದ್ರ, ಶಶಿಕುಮಾರ್ ಉಪಸ್ಥಿತರಿದ್ದರು.
ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ನೆರವಾಗಬೇಕು
ಚಿಕ್ಕನಾಯಕನಹಳ್ಳಿ,ಜು.24 ಮಕ್ಕಳ ಭವಿಷ್ಯ ಮತ್ತು ಅವರ ಪ್ರಗತಿಗೆ ಸಕರ್ಾರ ರೂಪಿಸಿರುವ ಕಾರ್ಯಕ್ರಮಗಳ ಜೊತೆಗೆ ಪೋಷಕರು ನೆರವಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಪ್ರಸನ್ನರಾಮೇಶ್ವರ ದೇವಾಲಯದಲ್ಲಿ ನಡೆದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ಮಕ್ಕಳು ಪುಣ್ಯವಂತರು, ಸಕರ್ಾರದ ಹಲವಾರು ಯೋಜನೆಗಳು ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದು ಉನ್ನತ ಶಿಕ್ಷಣ ಪಡೆಯಬೇಕು ಎಂದರಲ್ಲದೆ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಬೇಕು ಎಂದರು.
ಸಮಾರಂಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಉಪಸ್ಥಿತರಿದ್ದರು.
ವಿದ್ಯುತ್ ಸಮಸ್ಯೆ ನೀಗಿಸಲು ಮನವಿ
ಚಿಕ್ಕನಾಯಕನಹಳ್ಳಿ,ಜು.24:ತಾಲೂಕಿನ ಗಾಂಧಿನಗರದ ನಿವೇಶನಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ಹೊತ್ತು ಹಾವು ಹಾಗೂ ಕಾಡು ಹಂದಿಗಳ ಹಾವಳಿ ಹೆಚ್ಚಾಗಿ ತುಂಬಾ ತೊಂದರೆ ಅನುಭವಿಸಿತ್ತಿದ್ದೇವೆ ಎಂದು ಗಾಂದಿನಗರದ ನಿವಾಸಿಗಳು ಪತ್ರಿಕೆಯ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗಾಂಧಿನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಿವೇಶನ ಪತ್ರಗಳನ್ನು ನೀಡಿದ್ದು ಅದರ ಜೊತೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು, ವಿದ್ಯುತ್ ಸಂಪರ್ಕವು ಗಾಂಧಿನಗರದಲ್ಲಿ ಇಲ್ಲದೆ ಹಲವಾರು ಪ್ರಾಣಿಗಳಿಂದ ಜನರ ಪ್ರಾಣಕ್ಕೆ ಸಂಚಕಾರವಿದೆ ಮತ್ತು ಇಲ್ಲಿನ ವಿದ್ಯಾಥರ್ಿಗಳಿಗೆ ರಾತ್ರಿ ಹೊತ್ತು ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ ಈ ಸಮಸ್ಯೆಯನ್ನು ಪರಿಹರಿಸಲು ಅಲ್ಲಿನ ನಿವಾಸಿಗಳು ಪುರಸಭೆಯವರನ್ನು ಕೋರಿದ್ದಾರೆ.




Friday, July 23, 2010