Friday, July 15, 2011



ಕಾನೂನು ತಿಳುವಳಿಕೆಗೆ ಬಡವ ಬಲ್ಲಿದನೆಂಬ ಬೇದ ಬೇಡ
ಚಿಕ್ಕನಾಯಕನಹಳ್ಳಿ,ಜು.15 : ನ್ಯಾಯಾಲಯದ ದಾವೆಗಳನ್ನು ಕಕ್ಷಿದಾರರು ವಕೀಲರನ್ನು ನೇಮಿಸಿ ದಾವೆ ಇತ್ಯರ್ಥ ಪಡಿಸಲು ಆಗದಿರುವಂತಹ ಬಡ ಕಕ್ಷಿದಾರರಿಗೆ ಸಕರ್ಾರದಿಂದ ವಕೀಲರನ್ನು ನೇಮಿಸಿ ನ್ಯಾಯಲಯದ ದಾವೆ ಪೂರ್ಣಗೊಳ್ಳುವವರೆಗೆ ಪ್ರಕರಣದ ಖಚರ್ು ವೆಚ್ಚವನ್ನು ಸಕರ್ಾರ ಭರಿಸುವುದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಆವರಣದಲ್ಲಿ ನಡೆದ ತಾಲ್ಲೂಕು ಕಾನೂನು ಸಲಹಾ ಕೇಂದ್ರದ ಪ್ರಾರಂಭ ಹಾಗೂ ಕಾನೂನು ನೆರವು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ಕಾರಣಗಳಿಂದ ಕಾನೂನಿನ ಬಗ್ಗೆ ಅರಿವು ಇರದ ಜನಸಾಮಾನ್ಯರು ಕಾನೂನಿನ ಬಗ್ಗೆ ತಪ್ಪಾಗಿ ತಿಳುವಳಿಕೆ ಪಡೆಯುತ್ತಿದ್ದಾರೆ, ಅಂತಹವರಿಗೆ ಕಾನೂನಿನ ಅರಿವನ್ನು ಮೂಡಿಸಲು, ನ್ಯಾಯಾಲಯಕ್ಕೆ ಕಕ್ಷಿದಾರರು ಸಲ್ಲಿಸಿರುವ ಯಾವುದೇ ಕಾನೂನಿನ ಬಗ್ಗೆ ಸಲಹೆ ನೀಡಲು ತಾಲ್ಲೂಕು ಕಛೇರಿಯಲ್ಲಿ ಸಲಹಾ ಕೇಂದ್ರವನ್ನು ತೆರೆಯಲಾಗಿದೆ ಎಂದ ಅವರು, ತಾಲ್ಲೂಕು ಕಛೇರಿಯಲ್ಲಿ ಸಲಹಾ ಕೇಂದ್ರವನ್ನು ತೆರೆದಿರುವುದು ಕಾನೂನಿನ ಬಗ್ಗೆ ಅರಿವಿರದ ಜನಸಾಮಾನ್ಯರು ಹೆಚ್ಚಾಗಿ ಆಗಮಿಸುತ್ತಿದ್ದು ಅಂತಹವರಿಗೆ ಅನುಕೂಲವಾಗಲಿ ಮತ್ತು ಖಾತೆ ಬದಲಾವಣೆಗಳ ಬಗ್ಗೆ ತಿಳುವಳಿಕೆ ಪಡೆಯಲೆಂಬ ಉದ್ದೇಶವನ್ನು ಹೊಂದಿ ಸಲಹಾ ಕೇಂದ್ರ ತೆರೆಯಲಾಗಿದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಜನಸಾಮಾನ್ಯರು ಸಣ್ಣ ಪುಟ್ಟ ವಿಚಾರಗಳಿಗಾಗಿ ನ್ಯಾಯಾಲಯಕ್ಕೆ ಹೋಗುವುದನ್ನು ತಪ್ಪಿಸಲು, ಅಶಕ್ತರಿಗೆ ನೆರವಾಗಲು ಸಲಹಾ ಕೇಂದ್ರ ತೆರೆಯಲಾಗಿದ್ದು ತಾಲ್ಲೂಕಿನ ಯಾವುದೇ ವಿವಾದಗಳು, ನಮೂನೆಗಳ ಅಜರ್ಿ ವಿಚಾರಣೆಗಳನ್ನು ಬಗೆ ಹರಿಸಲಾಗುವುದು ಎಂದ ಅವರು ಪ್ರತಿ ವಾರದ ಎರಡು ದಿನ ಇಬ್ಬರು ವಕೀಲರು ಸಲಹಾ ಕೇಂದ್ರದಲ್ಲಿ ಬೆಳಗ್ಗೆ 10 ರಿಂದ 1ರವರೆಗೆ, ಮತ್ತು 2ರಿಂದ 6ರವರೆಗೆ ಸಲಹೆ ನೀಡುತ್ತಾರೆ ಎಂದರು.
ಕಿರಿಯ ಶ್ರೇಣಿ ನ್ಯಾಯಾಧೀಶೆ ಎ.ಜಿ.ಶಿಲ್ಪ ಮಾತನಾಡಿ ತಾಲ್ಲೂಕು ಕಛೇರಿಯಲ್ಲಿ ತೆರೆದಿರುವ ಸಲಹಾ ಕೇಂದ್ರದಿಂದ ಜನರಿಗೆ ಯಾವುದೇ ದಾವೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ದೊರಕುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಯಾವುದೇ ರೀತಿಯ ಕುಂದುಕೊರತೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಕಾನೂನಿನ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದರು.
ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ಸಿ.ಪಿ.ಐ, ಕೆ.ಪ್ರಭಾಕರ್ ವಕೀಲರ ಸಂಘದ ಕಾರ್ಯದಶರ್ಿ ಸಿ.ರಾಜಶೇಖರ್, ಸಕರ್ಾರಿ ಅಭಿಯೋಜಕರಾದ ಕೆ.ಎಲ್.ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.
ರೋಗಭಾದೆ ನಿವಾರಣೆಗೆ ಹೋಬಳಿ ಮಟ್ಟದಲ್ಲಿ ರೈತರ ಸಭೆಗೆ ಆಗ್ರಹ
ಚಿಕ್ಕನಾಯಕನಹಳ್ಳಿ,ಜು.15 : ತೆಂಗಿಗೆ ತಾಲ್ಲೂಕಿನ ವಿವಿಧ ಕಡೆ ಅನೇಕ ರೋಗಭಾದೆಗಳು ಕಾಡುತ್ತಿದ್ದು ತೋಟಗಾರಿಕೆ ಇಲಾಖೆಯವರು ಹೋಬಳಿವಾರು ಸಭೆ ನಡೆಸಿ ರೈತರಿಗೆ ರೋಗದ ಬಗ್ಗೆ ಜಾಗೃತಿ ದೊರಕಿಸಬೇಕೆಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಲ್.ನಟರಾಜು ತಿಳಿಸಿದರು.
ಪಟ್ಟಣದ ಸಕರ್ಾರಿ ನೌಕರರ ಸಂಘದ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕೊಳೆರೋಗ, ಕಪ್ಪುತಲೆ ಹಾಗೂ ಕೆಂಪು ಮೂತಿ ಹುಳುಗಳ ಭಾದೆ ತಾಲ್ಲೂಕಿನಲ್ಲಿ ಜಾಸ್ತಿಯಾಗಿದ್ದು ಅಧಿಕಾರಿಗಳು ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಸಮಗ್ರ ಹತೋಟಿಗೆ ಪರಿಹಾರ ಸೂಚಿಸುವಂತೆ ಸಲಹೆ ನೀಡಿದರು.
ಕಾರ್ಯದಶರ್ಿ ರಂಗನಕೆರೆ ಮಹೇಶ್ ಮಾತನಾಡಿ ತಾಲ್ಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ಜಿಲ್ಲಾಧಿಕಾರಿಗಳ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕಾಮಗಾರಿಗಳ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಉಪಾಧ್ಯಕ್ಷ ಬಿ.ಸಿ.ನಾಗರಾಜಪ್ಪ, ಜಿಲ್ಲಾ ಪ್ರತಿನಿಧಿ ಬಿ.ಎನ್.ಲೋಕೇಶ್, ನಿದರ್ೇಶಕ ಬಿ.ಎಲ್.ರೇಣುಕಪ್ರಸಾದ್ ಮಾತನಾಡಿದರು. ಮೀನುಗಾರಿಕೆಯ ಸಹಾಯಕ ನಿದರ್ೇಶಕ ಉಮೇಶ್, ಜಲಾನಯನ ಇಲಾಖೆ ಅಧಿಕಾರಿ ಮೋಹನ್, ಸಭೆಗೆ ಮಾಹಿತಿ ನೀಡಿದರು.
ನಿದರ್ೇಶಕರಾದ ಮಲ್ಲಿಕಾಜರ್ುನಯ್ಯ, ನಿಜಾನಂದಮೂತರ್ಿ, ಶಂಕರಪ್ಪ, ವೆಂಕಟೇಶ್, ವಿಶ್ವನಾಥ್ ಮತ್ತಿತರರರಿದ್ದರು. ಕೃಷಿ ಸಹಾಯಕ ನಿದರ್ೇಶಕ ಬಿ.ಎನ್.ರಂಗಸ್ವಾಮಿ ಸ್ವಾಗತಿಸಿ ವಂದಿಸಿದರು.

ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ವಿಜೇತರು
ಚಿಕ್ಕನಾಯಕನಹಳ್ಳಿ,ಜು.15 : ಅನ್ನಪೂಣರ್ೆಶ್ವರಿ ಕಲಾ ಸಂಘದವರು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೃತ್ಯಪಟುಗಳು ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಧಾನಕರ ಬಹುಮಾನಗಳನ್ನು ಪಡೆದಿದ್ದಾರೆ.
ಸಿನಿಯರ್ ಸೋಲೊ ನೃತ್ಯ ಫಲಿತಾಂಶ. ; ಪ್ರಥಮ ಸ್ಥಾನ ಅಸ್ಲರ್ ದಾವಣಗೆರೆ, ದ್ವಿತೀಯ ಸ್ಥಾನ ತನೋಷ ನಾರಾಯಣ್ ಮೈಸೂರು, ತೃತೀಯ ಸ್ಥಾನ ಅರುಣ್ ಬೆಂಗಳೂರು, ಸಮಾಧಾನಕರ ಜಗದೀಶ್ ಆನೇಕಲ್ ,ನವೀನ್ ಕುಮಾರ್ ತುಮಕೂರು, ಪ್ರಥಮಸ್ಥಾನ ರಾಘವೇಂದ್ರ ಹರಿಹರ,ದ್ವಿತೀಯ ಸ್ಥಾನ ಶ್ರೀ ಕಾಂತ್ ಆನೇಕಲ್,ತೃತೀಯ ಸ್ಥಾನ ಅಜೀತ್ ಜಿ.ವಿ.ಆರ್. ಮೂಡಿಗೆರೆ ಸಮಾಧಾನಕರ ಚರಣ್ ಕೆ.ಹಚ್. ಚಿಕ್ಕಬಳ್ಳಾಪುರ,ಶರತ್ ತುಮಕೂರು.
ಹಿರಿಯರ ಗುಂಪು : ಪ್ರಥಮ ಸ್ಥಾನ ನ್ಯೂಸ್ಹಿಲೀಟ್ ಡ್ಯಾನ್ಸ್ ಅಕಾಡಮಿ ಆನೇಕಲ್ ,ದ್ವಿತೀಯ ಸ್ಥಾನ ನ್ಯೂರಂಜಿತ್ ಡ್ಯಾನ್ಸ್ ಗ್ರೋಪ್ ಹರಿಹರ, ತೃತೀಯ ಸ್ಥಾನ ಆದಿಸ್ಕೂಲ್ ಆಫ್ ಡ್ಯಾನ್ಸ್ ಬೆಂಗಳೂರು, ಸಮಾಧಾನಕರ ಸ್ಟ್ರೆಲೀಷ ಡ್ಯಾನ್ಸ್ ಗ್ರೋಪ್ ತುಮಕೂರು, ಗಣೇಶ್ ಡ್ಯಾನ್ಸ್ ಗ್ರೋಪ್ ಮುದ್ದೂರು, ಸವರ್ೋತ್ತಮ ಪ್ರಶಸ್ತಿ ರಾಯಲ್ ಮೆಟ್ರೋಗ್ರೆಸ ಭದ್ರಾವತಿ, ಅತಿಶ್ರೇಷ್ಠ ಪ್ರಶಸ್ತಿ ಚರಣ್ &ತಂಡ ಚಿಕ್ಕಬಳ್ಳಾಪುರ, ಶ್ರೇಷ್ಠ ಪ್ರಶಸ್ತಿ ಕಿರಣ್ &ತಂಡ ಬೆಂಗಳೂರು.
ಕಿರಿಯರ ಸೋಲೊ ನೃತ್ಯ : ಪ್ರಥಮ ಸ್ಥಾನ ತರುಣ್ ದಾವಣಗೆರೆ, ದ್ವಿತೀಯ ಸ್ಥಾನ ನಿರೂಷ ನಾರಾಯಣ್ ಮೈಸೂರು, ತೃತೀಯ ಸ್ಥಾನ ನಿಧಿ ದಾವಣಗೆರೆ, ಸಮಾ-ನಿತ್ಯಾಚಂದನ ಬೆಂಗಳೂರು, ಚೈತ್ರ ತಿಪಟೂರು, ಪ್ರದೀಪ್ ಕುಮಾರ್ ಬೆಂಗಳೂರು, ಸುಕೃತ್ ದಾವಣಗೆರೆ ,ಅನೋಷ ದಾವಣಗೆರೆ ಪದ್ಮಾಶ್ರೀ ಚಿಕ್ಕಮಂಗಳೂರು ದಿವ್ಯ ಬೆಂಗಳೂರು, ಪ್ರಥ-ಪ್ಲೆಯಿಂಗ್ ಭರ್ಡ ದಾವಣಗೆರೆ , ದ್ವಿತೀ-ಸೂಪರ್ ಸ್ಟೆಷ್ಸ್ ರಾಣಿಬೆನ್ನೂರು,ತೃತೀ-ಕಿಯೋಟಿವ್ ಚಿಕ್ಕನಾಯಕನಹಳ್ಳಿ, ಸಮಾಧಾನಕರ ರೂಬಿಶೇಖರ್ ತುಮಕೂರು, ವಿದೇಶ್ &ತಂಡ ಹರಿಹರ, ಸವರ್ೋತ್ತಮ ಪ್ರಶಸ್ತಿ-ಅನೋಷ &ತಂಡ ಮಂಡ್ಯ, ಅತಿಶ್ರೇಷ್ಠ ಪ್ರಶಸ್ತಿ ಹೆಸ್ಮಿನಿ ದಾವಣಗೆರೆ, ಶ್ರೇಷ್ಠ ಪ್ರಶಸ್ತಿ ಸ್ಕೂಲ್ ತುಮಕೂರು ಪಡೆದಿದ್ದಾರೆ.

Thursday, July 14, 2011




ಜೂಜುಕೋರರ ಬಂಧನ: ಬಾಜಿಕಟಿದ್ದ್ಟ ಹಣ ವಶ
ಚಿಕ್ಕನಾಯಕನಹಳ್ಳಿ,ಜು.14: ಪಟ್ಟಣದ ಎಸ್.ಎಲ್.ಎನ್. ಚಿತ್ರ ಮಂದಿರದ ಬಳಿ ಜೂಜಾಡುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದು, ಬಾಜಿಕಟ್ಟಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿ.ಎಚ್.ರಸ್ತೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಚಿತ್ರಮಂದಿರದ ಬಳಿ ಜೂಜಾಡುತ್ತಿದ್ದ ಗೌತಮ್, ನಿಂಗರಾಜು, ರವಿ,ಪರಮೇಶ್, ಗವಿರಂಗ, ಗೋಪಿ, ಜಯಕುಮಾರ್, ಪರಮೇಶ್ ಎಂಬುವರನ್ನು ಬಂಧಿಸಿದ ಪೋಲೀಸರು, ಬಾಜಿಕಟ್ಟಿದ ಹಣವಾದ ಆರು ಸಾವಿರ ರೂಗಳನ್ನು ಸುಬಧರ್ಿಗೆ ತೆಗೆದುಕೊಂಡಿದ್ದಾರೆ.
ಸಿ.ಪಿ.ಐ.ಪ್ರಭಾಕರ್, ಪಿ.ಎಸೈ.ಚಿದಾನಂದಮೂತರ್ಿ ಜೂಜುಕೋರರ ಮೇಲೆ ದಾಳಿ ನಡೆಸಿದ್ದಾರೆ.
ಏಕಾದಶಿ ಜಾತ್ರೆಯಲ್ಲಿ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆದ ವೀರರು
ಚಿಕ್ಕನಾಯಕನಹಳ್ಳಿ,ಜು.14 : ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದವರು ಹಮ್ಮಿಕೊಂಡಿದ್ದ
ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ 105ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು.
ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ ವಿಜೇತರಾದವರೆಂದರೆ ಕ್ಷೇತ್ರಪಾಲ್ ದಿಬ್ಬದಹಳ್ಳಿ ಪ್ರಥಮ ಸ್ಥಾನ, ಸಿ.ಎನ್.ರಾಮ್ ಪ್ರಸಾದ್ ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ, ಆಂಜನೇಯ ನೆಲಮಂಗಲ ತೃತೀಯ ಸ್ಥಾನ, ಪಾಂಡುರಂಗಯ್ಯ ಕೆ.ಬಿ.ಕ್ರಾಸ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಸಮಾಧಾನಕರ ಬಹುಮಾನ ಪಡೆದವರೆಂದರೆ ಲೋಕೇಶ್ ಹುಳಿಯಾರು, ನಾರಾಯಣ್ರಾವ್ ಗೋಡೆಕೆರೆ, ಬಸವರಾಜು ಚಿ.ನಾ.ಹಳ್ಳಿ, ಮಲ್ಲಿಕಾಜರ್ುನ ಕೆ.ಬಿ.ಕ್ರಾಸ್, ಮಂಜುನಾಥ್ ಚಿ.ನಾ.ಹಳ್ಳಿ, ಸಿ.ಮೂತರ್ಿ ಬಾಣಸಂದ್ರ ಬಹುಮಾನ ಪಡೆದಿದ್ದಾರೆ.
ನವದಂಪತಿಗಳ ಸ್ಪಧರ್ೆ : ಅಂತರ್ ಜಾತಿ ವಿವಾಹ ವಿಜೇತರು: ಮೋಹನ್ ರಾಜು ಪವಿತ್ರ ಚಿಕ್ಕಮಗಳೂರು, ಅದೃಷ್ಠ ದಂಪತಿಗಳಾದ ಕುಮಾರಸ್ವಾಮಿ ಲಕ್ಷ್ಮೀ ಬಹುಮಾನ ಪಡೆದರು.

Wednesday, July 13, 2011

Tuesday, July 12, 2011

Monday, July 11, 2011

Friday, July 8, 2011



ಹೇಮಾವತಿ ಹರಿಯುವುದು ತಾಲ್ಲೂಕಿಗೆ ಸಂತೋಷದಾಯಕ ಸಂಗತಿ
ಚಿಕ್ಕನಾಯಕನಹಳ್ಳಿ,ಜು.08: ಬಹುದಿನಗಳಿಂದ ಈ ತಾಲ್ಲೂಕಿನ ರೈತರ ಬೇಡಿಕೆಯಾಗಿದ್ದ ಹೇಮಾವತಿಯ ನೀರು 2011ನೇ ಇಸವಿಯಲ್ಲಿ ಈಡೇರಿಸಿರುವುದು ಸಂತೋಷದಾಯವಾದ ಸಂಗತಿ ಎಂದು ತಾ.ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹೇಮಾವತಿಯ ನೀರು ಹರಿಯಲು ಬಹಳಷ್ಟು ಜನರ ಶ್ರಮವಿದ್ದು, ಮೊದಲಿಗೆ ಅಜ್ಜನಹಳ್ಳಿಯ ಶರತ್ಕುಮಾರ್ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರಿಗೆ ಮನವಿ ಸಲ್ಲಿಸಿ ಇದಕ್ಕೆ ಚಾಲನೆ ನೀಡಿದರು, ಆದರೆ ಅದಕ್ಕೆ ಸರಿಯಾದ ಬೆಂಬಲ ದೊರೆಯದೆ ನೆನೆಗುದಿಗೆ ಬಿತ್ತು.
ಶೆಟ್ಟಿಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಯುವಕರು ದೃಢ ಮನಸ್ಸು ಮಾಡಿ ಸ್ವಮತ ಖುಚರ್ಿನಿಂದ ವಿಧಾನಸೌಧದ ಮೆಟ್ಟಿಲೇರಿಳಿದರು. ಕಳ್ಳಂಬೆಳ್ಳದ ಅಂದಿನ ಶಾಸಕರಾಗಿದ್ದ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ತಂಡ ಅಂದಿನ ಜಲಸಂಪನ್ಮೂಲ ಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪನವರನ್ನು ಕಂಡು ಸವರ್ೆಗೆ ಚಾಲನೆ ದೊರಕಿಸಿಕೊಂಡರು.
ಹುಳಿಯಾರಿನ ರೈತ ಸಂಘ ಉಪವಾಸ ಸತ್ಯಾಗ್ರಹ, ಬೈಕ್ ರ್ಯಾಲಿ ಗೋಡೆಕೆರೆಯ ಮಹಿಳಾ ಬಿ.ಜೆ.ಪಿ. ತಂಡ, ಈ ತಾಲ್ಲೂಕಿನ ಎಲ್ಲಾ ಮಠಾಧಿಪತಿಗಳು ಪೂಜ್ಯ ಸಿದ್ದಗಂಗಾ ಮಠಾಧೀಶರು ವಿವಿಧ ಸಂಘ ಸಂಸ್ಥೆಯವರು ಮುಖ್ಯಮಂತ್ರಿಗಳಿಗೆ ಜಲಸಂಪನ್ಮೂಲ ಮಂತ್ರಿಗಳಿಗೆ ಒತ್ತಾಯ ಮಾಡುತ್ತಲೆ ಒಂದು ಸಮಸ್ಯೆ ಜೀವಂತವಾಗಿರುವಂತೆ ಎಚ್ಚರಿಕೆ ವಹಿಸಿದವು ಬಾಚಿಹಳ್ಳಿಯ ಸವರ್ೆಯರ್ ವೇದಾಂತ ಮೂತರ್ಿಯ ಕಾರ್ಯವೂ ಶ್ಲಾಘನೀಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾನ್ಯ ಯಡಿಯೂರಪ್ಪ ಮತಿಘಟ್ಟ ಸಾರ್ವಜನಿಕ ಸಮಾರಂಭದಲ್ಲಿ ಶೆಟ್ಟಕೆರೆ ಭಾಗಕ್ಕೆ ನೀರು ಹರಿಸುವ ಭರವಸೆ ನೀಡಿದ್ದರು.ಮುಖ್ಯ ಮಂತ್ರಿಗಳಾದ ಮೇಲೆ ತಿಪಟೂರಿನ ಸಾರ್ವಜನಿಕ ಸಮಾರಂಭದಲ್ಲಿ ಚಿ.ನಾ.ಹಳ್ಳಿಗೆ ನೀರು ಹರಿಸುವ ಭರವಸೆ ನೀಡಿದ್ದರು, ಆದರೆ ನಮ್ಮ ಶಾಸಕರು ಸಕರ್ಾರ ತಾರತಮ್ಯ ಮಾಡುತ್ತಿದೆ ಎಂದು ಟೀಕಿಸಿದರು. ಆ ಭಾವನೆ ಇದ್ದರೆ ವಿರೋಧ ಪಕ್ಷದ ಶಾಸಕರಿರುವ ಈ ಕ್ಷೇತ್ರಕ್ಕೆ ನೀರು ಬರಲು ಸಾಧ್ಯವಿತ್ತೆ? ಮತ್ತೊಬ್ಬ ಮಾಜಿ ಶಾಸಕರು, ಅವರು ಶಾಸಕರಿದ್ದ ಅವಧಿಯಲ್ಲಿ ಶೆಟ್ಟಿಕೆರೆ ಸಾರ್ವಜನಿಕ ಸಮಾರಂಭದಲ್ಲಿ ಈಭಾಗಕ್ಕೆ ನೀರು ಬರಲು ಸಾಧ್ಯವೇ ಇಲ್ಲ ಎಂದು ಯಾವ ಸಂಕೊಚವಿಲ್ಲದೆ ಘೊಷಿಸಿದ್ದರು. ಶೆಟ್ಟಿಕೆರೆ ತಂಡ ಭೇಟಿ ಮಾಡಿದಾಗ. ಈಗ ಮಂತ್ರಿಗಳ ಭೇಟಿ ಸಾಧ್ಯವಿಲ್ಲ ಯಾವುದಾದರೊಂದು ಸಿನಿಮಾ ನೋಡಿಕೊಂಡು ಹೋಗಿ ಎಂದು ತಾತ್ಯರವಾಗಿ ನುಡಿದರು. ಇಷ್ಟೆಲ್ಲಾ ಅಡೆ ತಡೆಯ ನಡುವೆ ಸಂಸದರಾದ ಜಿ.ಎಸ್. ಬಸವರಾಜು, ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ರವರು ತಮ್ಮ ರಾಜಕೀಯ ಪ್ರಭಾವ ಬೀರಿ26 ಕೆರೆಗಳಿಗೆ 102.6ಕೋಟಿ ಬಿಡುಗಡೆಯಾಗಿದ್ದು. ಇನ್ನು 2 ತಿಂಗಳೊಳಗೆ ಟೆಂಟರ್ ಪ್ರಕ್ರಿಯೆ ನಡೆಯುವುದು ಎಂದು ಇದೇ ಮಾಹೆ 5 ರಂದು ಭೇಟಿಯಾದ ಚಿ.ನಾ.ಹಳ್ಳಿ ತಾಲ್ಲೂಕು ತಂಡಕ್ಕೆ ತಿಳಿಸಿದ್ದಾರೆ.
ಈ ಭಾಗದ ರೈತರು ತಮ್ಮ ಸ್ವಂತಿಗೆ ಸ್ವಲ್ಪ ಧಕ್ಕೆಯಾದರೂ ಸಾರ್ವಜನಿಕರಿಗೆ ಅನುಕೂಲವಾಗುವ ಈ ಮಹತ್ತರ ಕಾರ್ಯಕ್ಕೆ ಸಕರ್ಾರದೊಟ್ಟಗೆ ಕೈ ಜೋಡಿಸಬೇಕು. ಆಗಾದರೆ ಇನ್ನೆರಡು ವರ್ಷದೊಳಗೆ ಹೆಮೆ ಹರಿದು ಬರಡಾದ ಈ ಭೂಮಿ ನಂದನವನವಾಗುವ ಕಾಲ ದೂರ ಇಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆಯಲ್ಲಿ ಸಾಧಕರಿಗೆ ಸನ್ಮಾನ
ಚಿಕ್ಕನಾಯಕನಹಳ್ಳಿ,ಜು.08; ಶ್ರೀ ಹಳೆಯೂರು ಆಂಜನೇಯಸ್ವಾಮಿಯವರ ಏಕಾದಶಿ ಜಾತೆಯ ಅಂಗವಾಗಿ ನವದಂಪತಿಗಳ ಸ್ಪದರ್ೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ 13ರ ಬುಧವಾರ ರಾತ್ರಿ 8ಕ್ಕೆ ಏರ್ಪಡಿಸಲಾಗಿದೆ.
ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ವತಿಯಿಂದ ಕೋ-ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಸಾಧಕರಾದ ಕೆಂಕೆರೆ ಚಂದ್ರಕಲಾ ಸತೀಶ್, ಪತ್ರಕರ್ತ ಉಗಮ ಶ್ರೀನಿವಾಸ್, ವೃತ್ತ ನಿರೀಕ್ಷಕ ರವಿಪ್ರಸಾದ್, ವರದಕ್ಷಿಣೆ ವಿರೋದಿ ವೇದಿಕೆ ಸಂಚಾಲಕ ಸಾ.ಚಿ.ರಾಜಕುಮಾರ್, ಆರ್ಚಕ ಶ್ರೀನಿವಾಸರಾಜರವರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಕಾಲೇಜಿನ ಕೊರತೆಗೆ ಶೀಘ್ರ ಸ್ಪಂದನೆ ವಿ.ಎಸ್.ಆಚಾರ್ಯ
ಚಿಕ್ಕನಾಯಕನಹಳ್ಳಿ,ಜು.08 : ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸಬೇಕೆಂದು ಗೃಹ ಸಚಿವ ವಿ.ಎಸ್.ಆಚಾರ್ಯರವರಿಗೆ ಕಾಲೇಜಿನ ಕೊರತೆ ನೀಗಿಸಬೇಕೆಂದು ನೀಡಿದ ಮನವಿಗೆ ಸಚಿವರು ಸ್ಪಂದಿಸಿದ್ದಾರೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಲೇಜಿನ ಉಪನ್ಯಾಸಕರ ಕೊರತೆ, ಕೊಠಡಿಗಳ ಕೊರತೆ, ವಿಜ್ಞಾನ ವಿಭಾಗದ ಕೊರತೆಗಳನ್ನು ನೀಗಿಸಲು ಜೊತೆ ಸಚಿವರ ಕಛೇರಿಗೆ ಹೋಗಿ ಮನವಿ ಅಪರ್ಿಸಿರುವುದಾಗಿ ತಿಳಿಸಿದರು.
ಎಚ್.ಬಿ.ಎಸ್.ನಾರಾಯಣಗೌಡ ಮಾತನಾಡಿ ನಂಜುಂಡಪ್ಪ ವರದಿಯಂತೆ ತಾಲ್ಲೂಕು ಹಿಂದುಳಿದ್ದು ತಾಲ್ಲೂಕು ಅಭಿವೃದ್ದಿ ಪಡಿಸಲು ಸಹಕರಿಸಿ ಎಂಬ ನಮ್ಮ ಮನವಿಗೆ ಶೀಘ್ರವೇ ಇದರ ಬಗ್ಗೆ ಸ್ಪಂದನೆ ನೀಡುವುದಾಗಿ ತಿಳಿಸಿದರ.
ತಾ.ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಸ್ವಾತಂತ್ರ ಹೋರಾಟಗಾರ ಎಸ್.ಮುರುಡಯ್ಯ, ಗುರುಸಿದ್ದಯ್ಯ, ಕೆ.ಜಿ.ಕೃಷ್ಣೆಗೌಡ ಉಪಸ್ಥಿತರಿದ್ದರು.
ಒಂದೇ ಸಂಘದಲ್ಲಿದ್ದು ಸಂಘವನ್ನು ಬೆಳಸಿ
ಚಿಕ್ಕನಾಯಕನಹಳ್ಳಿ,ಜು.07 :- ಮಹಿಳೆಯರು 4-5 ಸಂಘಗಳಿಗೆ ಸೇರಿ ಆ ಸಂಘದಿಂದ ಸಾಲತೆಗೆದುಕೊಂಡು ಸಾಲದ ಹಣವನ್ನು ಖಚರ್ು ಮಾಡಿ, ಸಾಲದ ಬಡ್ಡಿ ಹೆಚ್ಚುತ್ತಾ ಸಾಲವನ್ನು ಕಟ್ಟುವುದಕ್ಕೆ ಆಗದೆ ಇದ್ದಾಗ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಈ ರೀತಿಯ ವ್ಯವಸ್ಥೆ ತಪ್ಪಬೇಕು ಮಹಿಳೆಯರು ಒಂದೇ ಸಂಘದಲ್ಲಿ ಇದ್ದು ಸಂಘವನ್ನು ಬಲಪಡಿಸಬೇಕು ಎಂದು ಸಿ.ಡಿ.ಪಿ.ಓ ಅನೀಸ್ಖೈಸರ್ ಹೇಳಿದರು.
ಪಟ್ಟಣದ ಎಂ.ಪಿ.ಜಿ.ಎಸ್. ಶಾಲೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಗೊಂಚ್ಚಲು ಬ್ಲಾಕ್ ಸೊಸೈಟಿಗಳ ಬಲವಾರ್ಧನೆಗಾಗಿ ಗುಂಪಿನ ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬ್ಯಾಂಕ್ಗಳಿಗೆ ಮತ್ತು ಶಿಶು ಅಭಿವೃದ್ದಿ ಇಲಾಖೆಗೆ ಸ್ತ್ರೀ ಶಕ್ತಿ ಸಂಘಗಳ ಬಗ್ಗೆ ನಂಬಿಕೆ ಇರುವುದರಿಂದಲೇ ಸಾಲವನ್ನು ನೀಡುತ್ತಾರೆ. ಸಾಲ ಪಡೆದವರು ಬ್ಯಾಂಕ್ಗೆ ಮರಳಿ ನೀಡಿ ಪುನಹ ಸಾಲ ಪಡೆಯಲು ತಿಳಿಸಿದ ಅವರು ಸ್ತೀ ಶಕ್ತಿ ಸಂಘಗಳಿಗೆ ಮಹಿಳೆಯರೇ ಮುಂದಾಗಿ ಸಂಘವನ್ನು ಬಲಪಡಿಸಿ ಹಣವನ್ನು ಉಳಿತಾಯ ಮಾಡುವುದರಲ್ಲಿ ಮುಂದಾಬೇಕು. ಹೆಣ್ಣು ಮಕ್ಕಳ ಬ್ರೂಣ ಹತ್ಯೆ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ಮಹಿಳೆಯರು ಸಂಘದಲ್ಲಿರುವ ಲೋಪದೋಷಗಳನ್ನು ಬಲಪಡಿಸುತ್ತಾ ಸಂಘವನ್ನು ಒಗ್ಗಟ್ಟಿನ ಕಡೆ ಕರೆದೊಯ್ಯಬೇಕು, ಸಂಘ ಕಟ್ಟುವುದು ಬಹಳ ಕಷ್ಠಕರವಾದ ಕೆಲಸವಾಗಿದ್ದು ಸಂಘ ಕಟ್ಟುವವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಇದಕ್ಕಾಗಿ ಸಕರ್ಾರ ಸ್ತ್ರೀ ಶಕ್ತಿ ಸಂಘಗಳಿಗೆ ಸಹಕಾರ ನೀಡುತ್ತಿದೆ ಎಂದರು.
ಸಮಾರಂಭದಲ್ಲಿ ಮೇಲ್ವಿಚಾರಕರಾದ ನಾಗರತ್ನಮ್ಮ, ಅನುಸೂಯಮ್ಮ, ಮಹದೇವಮ್ಮ ಮುಂತಾದವರಿದ್ದರು.

Thursday, July 7, 2011



ತಾಲೂಕಿನ ಆಸ್ಪತ್ರೆಗಳ ಕಾರ್ಯವೈಖರಿಯ ಬಗ್ಗೆ ತಾ.ಪಂ.ಅಧ್ಯಕ್ಷರ ಅಸಮಾಧಾನ
ಚಿಕ್ಕನಾಯಕನಹಳ್ಳಿ,ಜು.07 : ತಾಲೂಕಿನ ಯಾವುದೇ ಆಸ್ಪತ್ರ್ರೆಗೆ ಹೋದರು ವೈದ್ಯರು ಸಾರ್ವಜನಿಕರಿಗೆ ಸಿಗುವುದಿಲ್ಲ, ಆಸ್ಪತ್ರೆಯಲ್ಲಿ ವೈದ್ಯರು ಇದ್ದರೂ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ನಮ್ಮ ಬಳಿ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಆರೋಪಿಸಿದರು.
ತಾ.ಪಂ.ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾತ್ರಿ ಸಮಯದಲ್ಲಿ ತಾಲ್ಲೂಕಿನ ಕೆಲವು ಆಸ್ಪತ್ರೆಗಳ ವೈದ್ಯರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ, ವೈದ್ಯರು ಆಸ್ಪತ್ರೆಯಿಂದ ದೂರವೇ ಇರುತ್ತಾರೆ ಅಲ್ಲದೆ ಕೆಲವು ಆಸ್ಪತ್ರೆಗಳು ದನಗಳ ಕೊಟ್ಟಗೆಯಂತಾಗಿದೆ ಎಂದರು, ಈ ಸಂದರ್ಭದಲ್ಲಿ ಧ್ವನಿಗೂಡಿಸಿದ ತಾ.ಪಂ.ಸದಸ್ಯೆ ಚೇತನ್ಗಂಗಾಧರ್ ಗೂಬೆಹಳ್ಳಿ ಆಸ್ಪತ್ರೆಯಲ್ಲಿ ಮಾತ್ರೆ ಹಾಗೂ ಇಜೆಕ್ಷನ್ಗೆ ಜನರಿಂದ ಹಣ ತೆಗೆದು ಕೊಳ್ಳುತ್ತಿದ್ದಾರೆ ಎಂದರಲ್ಲದೆ, ಹಣ ನೀಡದಿದ್ದರೆ ಆರೋಗ್ಯ ತಪಸಣೆ ಮಾಡುವುದಿಲ್ಲವೆನ್ನುತ್ತಾರೆ ಎಂದು ಆ ಭಾಗದ ಜನರು ದೂರು ನೀಡಿದ್ದಾರೆ ಎಂದರು ಈ ಎಲ್ಲಾ ದೂರುಗಳ ಬಗ್ಗೆ ಆರೋಗ್ಯಾಧಿಕಾರಿ ಗಮನ ಹರಿಸಬೇಕು ಎಂದರು.
ಬೆಸ್ಕಾಂ ಇಲಾಖೆಯಲ್ಲಿನ ಕೆಲವು ನೌಕರರ ಬೇಜವಬ್ದಾರಿಯಿಂದ ರೈತರಿಗೆ ವಿದ್ಯುತ್ ಸಂಪರ್ಕ ಸಮರ್ಪಕ ನೀಡುತ್ತಿಲ್ಲ ಎಂದು ದೂರಿದ ಅವರು, ಗಂಗಾಕಲ್ಯಾಣ ಯೋಜನೆಯಲ್ಲಿ ಬೋರ್ ಕೊರಿಸಿದವರು ಕಳೆದಎರಡು ವರ್ಷ ವಿದ್ಯುತ್ ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದಾರೆ. ಕಂಟ್ರಾಕ್ಟರ್ಗಳು ಅಧಿಕಾರಿಗಳಿಗೆ ಕೊಡಬೇಕೆಂದು ಎರಡರಿಂದ ಐದು ಸಾವಿರವರೆಗೆ ಲಂಚಕೇಳುತ್ತಿದ್ದಾರೆ ಎಂಬ ದೂರಿದೆ ಎಂದರು.
ಕೆ.ಇ.ಬಿ. ಅಧಿಕಾರಿ ಮಾತನಾಡಿ ಗಂಗಾ ಕಲ್ಯಾಣ ಯೋಜನೆಯ ಯಾರಾದರು ಲಂಚತೆಗೆದುಕೊಂಡಿರುವ ಬಗ್ಗೆ ಅಜರ್ಿಯ ಮುಖಾಂತರ ಕೂಡಲೆ ಕ್ರಮತೆಗೆದುಕೊಳ್ಳತ್ತಾರೆ.ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿಯ ಕಾರ್ಯನಿವರ್ಾಹಣಾಧಿಕಾರಿ ಎನ್.ಎಂ.ದಯಾನಂದ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಬಿ.ಬಿ.ಫಾತಿಮಾ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.07 : ಆತ್ಮ ಯೋಜನೆಯಡಿ ಒಂದು ದಿನದ ಹೈನುಗಾರಿಕೆ ತರಬೇತಿ ಶಿಬಿರ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಮತ್ತು ವಿವಿಧ ಸಕರ್ಾರೇತರ ಸಂಸ್ಥೆಗಳ ಯೋಜನೆಯ ಸಮಾರೋಪ ಸಮಾರಂಭವನ್ನು ಇದೇ 8ಂದು ಏರ್ಪಡಿಸಲಾಗಿದೆ.
ತರಬೇನಹಳ್ಳಿಯ ಷಡಕ್ಷರಿ ಇವರ ತೋಟದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಕೃಷಿಕ ಷಡಕ್ಷರಿ ತರಬೇನಹಳ್ಳಿ ಅಧ್ಯಕ್ಷತೆ ವಹಿಸಲಿದ್ದು ರರೈತ ಸಂಘದ ಜಿಲ್ಲಾ ಸಂಚಾಲಕ ಶಂಕರಣ್ಣ ಸಮಾರೊಪ ಭಾಷಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತಾಗಿ ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್, ಗ್ರಾ.ಪಂ.ಅಧ್ಯಕ್ಷೆ ಜಿ.ಎಸ್.ಕುಶಲ, ಸದಸ್ಯ ಜಿ.ಪಿ.ಪರಮಶಿವಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಸಾಹಿತಿ ಕೃಷ್ಣಮೂತರ್ಿ ಬಿಳಿಗೆರೆ, ಜಲಸಿರಿ ಸಂಪಾದಕ ಮಲ್ಲಿಕಾಜರ್ುನ ಹೊಸಪಾಳ್ಯ, ಪ್ರಜಾವಾಣಿ ಶ್ರೀಕಂಠ ಗಾಣದಾಳು, ಸುವರ್ಣಮುಖಿ ಸಮೂಹ ಮಾಧ್ಯಮ ಕೇಂದ್ರದ ಗುರುಮೂತರ್ಿ ಕೊಟಿಗೆಮನೆ, ಜಿ.ಕೃಷ್ಣಪ್ರಸಾದ್, ವಿಶ್ವನರ್ಾ ಅಣೇಕಟ್ಟೆ, ಕ್ಯಾಪ್ಟನ್ ಸೋಮಶೇಖರ್ ಉಪಸ್ಥಿತರಿರುವರು.
ಶಿಕ್ಷಕರ ಜಿಲ್ಲಾ ಮಟ್ಟದ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಜು.07 : ಗುಣಾತ್ಮಕ ಶಿಕ್ಷಣ ಬಲಪಡಿಸುವ, ಶಿಕ್ಷಕರ ವಿವಿಧ ಬೇಡಿಕೆಗಳಿಗೆ ಸಕರ್ಾರದ ಗಮನ ಸೆಳೆಯಲು ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಇದೇ 8ರಂದು ಏರ್ಪಡಿಸಿದ್ದು ತಾಲ್ಲೂಕಿನ ಸಮಸ್ತ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸುವಂತೆ ತಾ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೆಶ್ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದ ಸುಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ದಿವ್ಯಸಾನಿದ್ಯದಲ್ಲಿ ಹಮ್ಮಿಕೊಂಡಿದ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನೆಯ ಹಿತದೃಷ್ಠಿಯಿಂದಲೂ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಸಮ್ಮೇಳನಕ್ಕೆ ಸಚಿವರುಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಲೋಕಸಬಾ ಸದಸ್ಯರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲ್ಲೂಕಿನ ಸಾ.ಶಿ.ಇಲಾಖಾ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದಶರ್ಿಗಳು ಹಾಗೂ ಪಧಾಧಿಕಾರಿಗಳು ಭಾಗವಹಿಸಲಿದ್ದು ಶಿಕ್ಷಕರುಗಳು ಸಮ್ಮೇಳನಕ್ಕೆ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಲು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

Tuesday, July 5, 2011



ತಾಲ್ಲೂಕಿನಲ್ಲಿ ಯಶಸ್ವಿಯಾದ ಶಾಲೆಗಾಗಿ ನೀವು ನಾವು
ಚಿಕ್ಕನಾಯಕನಹಳ್ಳಿ,ಜು..05 : ವಿದ್ಯೆಯನ್ನು ಕಲಿಸಬೇಕೆಂಬ ಆಸಕ್ತಿ ಶಿಕ್ಷಕರಲ್ಲಿದ್ದಾಗ ಮಕ್ಕಳಿಗೆ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಕುತೂಹಲ ಹೆಚ್ಚುತ್ತದೆ, ಈ ವಿಷಯಗಳನ್ನು ತಿಳಿಸುವುದೇ ಶಾಲೆಗಾಗಿ ನಾವು ನೀವು ಕಾರ್ಯಕ್ರಮವಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ತಾಲ್ಲೂಕಿನ ಸಾಸಲು ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲೆಲ್ಲಾ ಶಾಲೆಗಾಗಿ ನಾವು ನೀವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೋಷಕರಿಗೆ, ಎಸ್.ಡಿ.ಎಂ.ಸಿ ಸದಸ್ಯರಿಗೆ ಹಾಗೂ ಜನಪ್ರತಿನಿಧಿಗಳು ಶಾಲೆಯ ಸ್ವಚ್ಚತೆ, ಕೊರತೆಯಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕು. ಎಸ್.ಡಿ.ಎಂ.ಸಿ ಸದಸ್ಯರು ಶಾಲೆಗೆ ಆಗಾಗ ಬಂದು ಶಾಲೆಯ ಅಭಿವೃದ್ದಿ ಕೆಡ ಗಮನ ಹರಿಸಬೇಕು. ಶಾಲೆಯಲ್ಲಿ ಮೊದಲು ಗುಣಾತ್ಮಕ ಶಿಕ್ಷಣ ಕ್ರಿಯಾಶೀಲವಾದ ಸ್ಪಷ್ಠ ಓದಿಗೆ ಪ್ರಾಮುಖ್ಯತೆ ಇತ್ತು ಈಗ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತವೇ ಮುಖ್ಯವಾಗಿದೆ ಎಂದ ಅವರು ಎಸ್.ಡಿ.ಎಂ.ಸಿ ಸದಸ್ಯರುಗಳು 14 ವರ್ಷ ವಯಸ್ಸಾಗಿದ್ದು ಶಾಲೆಗೆ ಸೇರದೇ ಇದ್ದವರನ್ನು ಶಾಲೆಗಳತ್ತ ಪೋಷಕರ ಮನವೊಲಿಸಿ ಕರೆತರುವಲ್ಲಿ ನಮಗೆ ನೆರವಾಗಬೇಕು. ಶಾಲಾ ಶಿಕ್ಷಕರು ಶಾಲೆಗೆ ಸಮಯಕ್ಕೆ ಸರಿಯಾಗಿ ಬರುತ್ತಾರೋ ಇಲ್ಲವೋ ಎಂಬುದನ್ನು ಗಮನಿಸುತ್ತಿರಬೇಕು ಮತ್ತು ಸಕರ್ಾರಿ ಶಾಲೆಗಳಲ್ಲಿ ಆಯ್ಕೆಯಾಗಿ ಬಂದಿರುವ ಶಿಕ್ಷಕರು ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿ ಉತ್ತಮವಾಗಿ ಭೋದನೆ ನೀಡಲು ಸಕರ್ಾರಿ ಶಾಲೆಗೆ ಬಂದಿರುತ್ತಾರೆ ಆದರೂ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದು ಸಕರ್ಾರಿ ಶಾಲೆಗಳತ್ತ ಮಕ್ಕಳು ವಾಲುವಂತೆ ಎಲ್ಲಾ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯ ರಮೇಶ್ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಯ್ಯ, ಸಮನ್ವಯಾಧಿಕಾರಿ ಸುಧಾಕರ್, ದಿನೇಶ್, ರವಿಕುಮಾರ್, ಕುಮಾರ್, ಸುರೇಶ್, ಸುವರ್ಣಮ್ಮ ಮುಂತಾದವರಿದ್ದರು.
ಚಿಕ್ಕನಾಯಕನಹಳ್ಳಿ,: ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವಿದ್ದು ಉಚಿತ ಸಮವಸ್ತ್ರ, ಪಠ್ಯಪುಸ್ತಕವನ್ನು ಸಕರ್ಾರ ನೀಡುತ್ತಿರುವುದರಿಂದ ಶೈಕ್ಷಣಿ ಪದ್ದತಿ ಸುಧಾರಣೆಯಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.
ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಶ್ರದ್ದೆಯಿಂದ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಶಿಕ್ಷಣವನ್ನು ಪಡೆಯಲು ಸಲಹೆ ನೀಡಿದರು.
ವಿಷಯ ಪರಿವೀಕ್ಷಕ ಭೈರಪ್ಪನವರು ಮಾತನಾಡಿ ಶಿಕ್ಷಣದ ಹಕ್ಕನ್ನು ಯಾರು ಕಿತ್ತುಕೊಳ್ಳು ಸಾಧ್ಯವಿಲ್ಲ, ಉನ್ನತವಾದ ಶಿಕ್ಷಣ ಪಡೆಯುತ್ತಾ ವಿದ್ಯೆಯನ್ನು ಕಲಿತು ಪ್ರತಿಭಾವಂತರಾಗಲು ತಿಳಿಸಿದರು.
ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಬಿ.ಲೋಕೇಶ್ ಪ್ರತಿಜ್ಞಾವಿದಿ ಭೋದಿಸಿ ಈ ನಾಡಿನ ಪ್ರಜ್ಞಾವಂತ ಪ್ರಜೆಯಾದ ನಾವು,6ರಿಂದ 14 ವರ್ಷ ವಯಸ್ಸಿನೊಳಗಿನ ಎಲ್ಲಾ ಮಕ್ಕಳು ಮನೆಗೆ ಸಮೀಪದಲ್ಲಿರುವ ಶಾಲೆಯಲ್ಲಿ ಉಚಿತವಾಗಿ ಹಾಗೂ ಕಡ್ಡಾಯವಾಗಿ ಗುಣಾತ್ಮಕ ಪ್ರಾಥಮಿಕ ಶಿಕ್ಷಣ ಪಡೆದು ಉತ್ತಮ ನಾಗರೀಕರಾಗುವಂತೆ ನೋಡಿಕೊಳ್ಳುತ್ತೇವೆ ಈ ಮೂಲಕ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆಗೆ ಬದ್ದತೆಯನ್ನು ಘೋಷಿಸಿದರು.
ಸಮಾರಂಭದಲ್ಲಿ ಪುರಸಭಾ ಸದಸ್ಯೆ ಕವಿತಾಚನ್ನಬಸವಯ್ಯ, ಸಿ.ಡಿ.ಚಂದ್ರಶೇಖರ್, ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ರೋಟರಿ ಕ್ಲಬ್ ಕಾರ್ಯದಶರ್ಿ ಅಶ್ವಥ್ನಾರಾಯಣ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,: ಸಮಾರಂಭದಲ್ಲಿ ಸ್ವಾಭಿಮಾನಿ ಯುವಕರ ಪಡೆ ನಿಮರ್ಾಣ ಮಾಡಲು ಶಿಕ್ಷಕರಷ್ಠೇ ಸಮುದಾಯದ ಪಾತ್ರವೂ ಶ್ರೇಷ್ಠ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳನ್ನು ಸ್ವಾವಲಂಭಿ ಮಾಡಲು ಮಾನಸಿಕ ದೈಹಿಕ ಸಾಮಥ್ರ್ಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದ ಅವರು ಮಕ್ಕಳ ಕಲಿಕೆಯ ವಾಸ್ತವಿಕತೆಯನ್ನು ಪೋಷಕರು ಅರಿಯಲು ಶಾಲೆಯ ಬಗ್ಗೆ ಕಾಳಜಿಯಿಟ್ಟು ಆಗಾಗ ಶಾಲೆಗೆ ಭೇಟಿ ನೀಡಬೇಕು ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ, ಎಮ್.ಎಮ್.ಜಗದೀಶ್, ಪಾರ್ವತಮ್ಮ, ಬಿ.ನಾಗರಾಜು, ಬಿ.ಎನ್.ಶಶಿಕಲಾ, ರವಿ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,: ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ ಮೂಲಕ ಹೆಚ್.ಪಿ.ಎಸ್. ಕಾಳಮ್ಮನಗುಡಿ ಬೀದಿ ಶಾಲೆಯ ಶಾಲೆಗಾಗಿ ನೀವು ನಾವು ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಗಳಾದ ಎಚ್.ಸಿ.ಜಗದೀಶ್, ಮುಖ್ಯೋಪಾಧ್ಯಾಯ ಕೆ.ಜಿ.ಶಂಕರಪ್ಪ, ಹಾಗೂ ಪಟ್ಟಣದ ಬಸವೇಶ್ವರ ನಗರದ ಶಾಲೆಯ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಾದ ಸಿ.ಎಲ್.ದೊಡ್ಡಯ್ಯ, ಎಂ.ಎನ್.ಸುರೇಶ್, ಬಾಬುಸಾಹೇಬ್ ಮುಂತಾದವರಿದ್ದರು.
11ನೇ ವಷರ್ಾಚರಣೆಯಲ್ಲಿ ಸಂಪೂರ್ಣ ರಾಮಾಯಣ ನಾಟಕ
ಚಿಕ್ಕನಾಯಕನಹಳ್ಳಿ,ಜು.05 : ಮಿತ್ರಕಲಾಸಂಘದ ವತಿಯಿಂದ ಸಂಪೂರ್ಣ ರಾಮಾಯಣ ಎಂಬ ಪೌರಾಣಿಕ ನಾಟಕವನ್ನು ಇದೇ 13ರ ಬುಧವಾರ ರಾತ್ರಿ 9ಕ್ಕೆ ಏರ್ಪಡಿಸಲಾಗಿದೆ.
ನಾಟಕವನ್ನು ಶ್ರೀ ಆಂಜನೇಯಸ್ವಾಮಿ ಜಾತ್ರೆ ಮತ್ತು ಉಯ್ಯಾಲೋತ್ಸವದ ಅಂಗವಾಗಿ 11ನೇ ವಷರ್ಾಚರಣೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೈನುಗಾರಿಕೆ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಸಕರ್ಾರೇತರ ಸಂಸ್ಥೆ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರ

ಚಿಕ್ಕನಾಯಕನಹಳ್ಳಿ,ಜು.05 : ಆತ್ಮ ಯೋಜನೆಯಡಿ ಒಂದು ದಿನದ ಹೈನುಗಾರಿಕೆ ತರಬೇತಿ ಶಿಬಿರ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಮತ್ತು ವಿವಿಧ ಸಕರ್ಾರೇತರ ಸಂಸ್ಥೆಗಳ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರವನ್ನು ಇದೇ 8ರ ಶುಕ್ರವಾರದಂದು ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
ಶಿಬಿರವನ್ನು ಶ್ರೀ ಷಡಕ್ಷರಿ ತರಬೇನಹಳ್ಳಿ ಇವರ ತೋಟದಲ್ಲಿ, ರಾಜ್ಯ ರೈತ ಸಂಘ, ಹಸಿರು ಸೇನೆ, ತರಬೇನಹಳ್ಳಿ ಗ್ರಾಮೀಣ ಘಟಕ, ಪಶುಸಂಗೋಪನೆ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದು ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಅಧ್ಯಕ್ಷತೆ ವಹಿಸಲಿದ್ದು ಹಸಿರು ಸೇನೆಯ ಸತೀಶ್ ಕೆಂಕರೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ಗ್ರಾ.ಪಂ.ಉಪಾಧ್ಯಕ್ಷೆ ಬಿ.ಎಸ್.ಗಂಗಾಧರ್, ಸದಸ್ಯೆ ಜಯಮ್ಮ, ತಿಪಟೂರು ಹಸಿರು ಸೇನೆ ಅಧ್ಯಕ್ಷ ದೇವರಾಜು, ತರಬೇನಹಳ್ಳಿ ಘಟಕದ ರಾಜ್ಯ ರೈತ ಸಂಘದ ಅಧ್ಯಕ್ಷ ಟಿ.ಬಿ.ಷಡಕ್ಷರಿ, .ಚಿ..ತಾ..ಮೂಲದ ಗೆಳೆಯರ ಒಕ್ಕೂಟದ ಅಧ್ಯಕ್ಷ ಹೊಸೂರಪ್ಪ, ಪ್ರಗತಿಪರ ಕೃಷಿಕ ಶಿವನಂಜಪ್ಪ ಬಾಳೇಕಾಯಿ, ಭೈಪ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಎಂ.ಎನ್.ಕುಲಕಣರ್ಿ, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವ್ ಉಪಸ್ಥಿತರಿರುವರು.

Monday, July 4, 2011







ವಿಕಲನ ಚೇತನರಿಗೆ ಆತ್ಮ ಸ್ಥೈರ್ಯ ವಜ್ರಾಯುಧವಿದ್ದಂತೆ
ಚಿಕ್ಕನಾಯಕನಹಳ್ಳಿ,ಜು.04 : ವಿಕಚೇತನರು ಸಕರ್ಾರ ಕೊಡುವೆ ಸವಲತ್ತುಗಳನ್ನು ಪಡೆದು ಆತ್ಮ ಸ್ಥೈರ್ಯದಿಂದ ಜೀವನ ನಡೆಸುವಂತೆ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ ತಿಳಿಸಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ನಡೆದ ವಿಕಲ ಚೇತನರಿಗೆ ಪುರಸಭೆಯಲ್ಲಿ ಶೇ 3% ರ ಅನುದಾನದಲ್ಲಿ ಸಹಾಯದ ಚಕ್ ವಿತರಿಸಿ ಮಾತನಾಡಿದರು, ವಿಕಲ ಚೇತನರು ತಮ್ಮ ಹಿಂಜರಿತವನ್ನು ಬೆಳಸಿಕೊಳ್ಳದೆ ಆತ್ಮ ಸ್ಥೈರ್ಯದಿಂದ ಮುನ್ನಗಿದರೆ ಅದೇ ಅವರಿಗೆ ಪ್ರಮುಖ ಆಯುಧವಿದಂತೆ
ಪುರಸಭಾ ಸದಸ್ಯ ಸಿ.ಡಿ. ಚಂದ್ರಶೇಖರ್ ಮಾತನಾಡಿ, ವಿಕಲ ಚೇತನರನ್ನು ಪೋಷಕರು ತಾರತಮ್ಯ ಮಾಡದೇ ಆತ್ಮ ಸ್ಥೈರ್ಯ ತುಂಬಬೇಕಾಗಿದೆ ಎಂದರು.
ಪುರಸಭೆ ಶೇ3% ರ ನಿಧಿಯಲ್ಲಿ 67 ಜನ ವಿಕಲ ಚೇತನರಿಗೆ 750 ರೂ ನಂತೆ ಚಕ್ ವಿತರಿಸಿ ಮಾತನಾಡಿ, ವಿಕಲ ಚೇತನರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಸಕರ್ಾರ ಪುರಸಭೆಗೆ ಬಿಡುಗಡೆ ಮಾಡುವ ಶೇ 3% ರ ಅನುದಾನವನ್ನು ಶೇ 6%ರನ್ನು ಹಟಿಸುವಂತೆ ಒತ್ತಾಯಿಸಿದರು.
ಕಾರ್ಯಕ್ರಮದ ಉಪಾಧ್ಯಕ್ಷ ಮೈನ್ಸ್ ರವಿ, ಕಾಂಗ್ರೆಸ್ ಪಕ್ಷದ ನಾಯಕಿ ರೇಣುಕಾ ಗುರುಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ಅಂಗವಿಕಲರ ಸಂಘದ ಸಂಚಾಲಕಿ ಶಾಂತಮ್ಮ ಮುಂತಾದವರು ಉಪಸ್ಮಿತರಿದ್ದರು.
ಮೂಲಭೂತ ಸೌಕರ್ಯಗಳಿಲ್ಲದೆ ಕಾಲೇಜ್ನ ಅಭಿವೃದ್ದಿಗೆ ಸಕರ್ಾರ ಗಮನ ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ
ಚಿಕ್ಕನಾಯಕನಹಳ್ಳಿ,ಜು.04 : ತಾಲ್ಲೂಕಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಉಪನ್ಯಾಸಕರ ಕೊರತೆ, ವಿಜ್ಞಾನ ಪದವಿ ಪ್ರಾರಂಭಿಸುವುದು, ಸುಸಜ್ಜಿತ ಗ್ರಂಥಾಲಯ ನಿಮರ್ಾಣ ಮಾಡುವುದು ಮತ್ತು ಕಾಲೇಜಿನ ಕಾಂಪೌಂಡ್ ನಿಮರ್ಾಣ ಕಾರ್ಯವನ್ನು ಶೀಘ್ರವಾಗಿ ಆದ್ಯತೆ ಮೇರೆಗೆ ಈಡೇರಿಸಬೇಕೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಒತ್ತಾಯಿಸಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲೇಜಿನ ನ್ಯೂನತೆಗಳಿಂದ ಕಾಲೇಜಿನ 650 ವಿದ್ಯಾಥರ್ಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪಡೆಯಲಾಗುತ್ತಿಲ್ಲ. ಕಾಲೇಜಿನಲ್ಲಿೆ ಕೇವಲ 6 ಮಂದಿ ಖಾಯಂ ಉಪನ್ಯಾಸಕರಿದ್ದು, ಗ್ರಂಥಪಾಲಕರು, ದೈಹಿಕ ಶಿಕ್ಷಕರು ಪ್ರಥಮ ಮತ್ತು ದ್ವಿತೀಯ ದಜರ್ೆ ಸಹಾಯಕರು ಒಬ್ಬರೂ ಇರದೇ ಅನೇಕ ವರ್ಷಗಳಿಂದ ಎಲ್ಲಾ ಹುದ್ದೆಗಳು ಖಾಲಿ ಇದೆ, ಕಾಲೇಜಿಗೆ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ 8 ಹುದ್ದೆ, ರಾಜ್ಯ ಶಾಸ್ತ್ರ ಉಪನ್ಯಾಸಕರ 2 ಹುದ್ದೆ, ಸಮಾಜಶಾಸ್ರ್ರ 1, ಕಂಪ್ಯೂಟರ್ ಉಪನ್ಯಾಸಕರ 1, ದೈಹಿಕ ನಿದರ್ೇಶಕರ 1, ಗ್ರಂಥಪಾಲಕರು 1, ಸಮಾಜಕಾರ್ಯ ಉಪನ್ಯಾಸಕರ 4, ಪ್ರಥಮ ದಜರ್ೆ ಸಹಾಯಕರ 1, ದ್ವಿತೀಯ ದಜರ್ೆ ಸಹಾಯಕರ 4, ಡಿ ದಜರ್ೆ ನೌಕರರ 3 ಹುದ್ದೆಗಳು ಖಾಲಿ ಇದೆ ಅಲ್ಲದೆ ಬಿ.ಎ, ಬಿ.ಕಾಂ, ಬಿ.ಬಿ.ಎಂ. ಬಿ.ಎಸ್.ಡಬ್ಲ್ಯೂ ಪದವಿಗಳ ತರಗತಿಗಳಿಗೆ 18 ಸೆಕ್ಷನ್ಗಳಿಗೆ 8 ಕೊಠಡಿಗಳಿದ್ದು 10 ಕೊಠಡಿಗಳ ಕೊರತೆಯಿದೆ ಎಂದ ಅವರು ವಿಜ್ಞಾನ ವಿಭಾಗ ತೆರೆಯಲು ಅಗತ್ಯ ಪರಿಕರ ಸೌಲಭ್ಯಗಳೊಂದಿಗೆ ಮಂಜೂರಾತಿ ಮತ್ತು ಕಾಲೇಜಿನ 5 ಎಕರೆ ವಿಶಾಲವಾದ ಭೂಮಿಗೆ 500 ಗಿಡಗಳನ್ನು ಬೆಟ್ಟು ಬೆಳೆಸುತ್ತಿದ್ದು ಇದರ ರಕ್ಷಣೆಗೆ ಕಾಂಪೌಂಡ್ ನಿಮರ್ಾಣ ಹಾಗೂ ಗ್ರಾಮಾಂತರ ವಿದ್ಯಾಥರ್ಿಗಳಿಗೆ ಕಂಪ್ಯೂಟರ್ ಸೌಲಭ್ಯದೊಂದಿಗೆ ಸುಸಜ್ಜಿತವಾದ ಗ್ರಂಥಾಲಯ ನಿಮರ್ಾಣ ಮಾಡಬೇಕಾಗಿದೆ, ಇಲ್ಲವಾದರೆ ಬೇಡಿಕೆ ಈಡೇರುವವರೆಗೆ ಉನ್ನತ ಶಿಕ್ಷಣ ಸಚಿವರ ಮನೆ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಎಚ್.ಬಿ.ಎಸ್. ನಾರಾಯಣಗೌಡ ಮಾತನಾಡಿ ರಾಜ್ಯ ಸಕರ್ಾರ, ಸಕರ್ಾರಿ ಕಾಲೇಜಿನ ಬಗ್ಗೆ ಬೇಜಾವಬ್ದಾರಿ ರೀತಿಯ ಧೋರಣೆ ತೋರಿರುವುದರಿಂದಲೇ ವಿದ್ಯಾಥರ್ಿಗಳು ಖಾಸಗಿ ಕಾಲೇಜಿನತ್ತ ಮುಂದಾಗುತ್ತಿದೆ, ಕಾಲೇಜಿಗೆ ಕೊರತೆಯಿರುವ ಮೂಲಭೂತ ಸೌಕರ್ಯಗಳನ್ನು ಶೀಘ್ರವೇ ಬಗೆಹರಿಸಿದರೆ ಉತ್ತಮ ಎಂದರು.
ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ನಮ್ಮ ತಾಲ್ಲೂಕಿನ ವಿದ್ಯಾಥರ್ಿಗಳು ಕಾಲೇಜಿನ ಮೂಲಭೂತ ಸೌಕರ್ಯದ ಕೊರತೆಯಿಂದ ಬೇರೆ ಬೇರೆ ತಾಲ್ಲೂಕಿನ ಕಾಲೇಜಿಗೆ ಹೋಗುತ್ತಿದ್ದಾರೆ, ಹಳ್ಳಿ ಕಡೆಯಿಂದ ಬರುವ ಮಕ್ಕಳಿಗೆ ಸರಿಯಾಗಿ ಸಂಚಾರದ ವ್ಯವಸ್ಥೆಯೂ ಸರಿಯಾಗಿ ಇರದೆ ಪರದಾಡುತ್ತಿದ್ದಾರೆ ಇದನ್ನು ತಪ್ಪಿಸಲು ತಾಲ್ಲೂಕನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸಕರ್ಾರ ಮುಂದಾಗಬೇಕು ಎಂದರು.
ಪ್ರತಿಭಟನೆಯಲ್ಲಿ ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಮುರುಡಯ್ಯ, ಕಾರ್ಯದಶರ್ಿ ನಾಗೇಶಯ್ಯ, ಕರವೇ(ಪ್ರವೀಣ್ಬಣ) ಅಧ್ಯಕ್ಷ ನಿಂಗರಾಜು, ವಾಸು, ಗುರುಸಿದ್ದಯ್ಯ, ಕರಡಿಶಿವಣ್ಣ, ರಾಮಕೃಷ್ಣಯ್ಯ, ಮಹಮದ್ ಸರೋಜುದ್ದೀನ್ ಉಪಸ್ಥಿತರಿದ್ದರು.

Saturday, July 2, 2011


ಸಮಾಜಮುಖಿ ಕಾರ್ಯ ನೆರವೇರಿಸುವವರಿಗೆ ಆತ್ಮೋಲ್ಲಾಸ ಮುಖ್ಯ : ಕವಿತಾಕೃಷ್ಣ
ಚಿಕ್ಕನಾಯಕನಹಳ್ಳಿ,ಜು.02 : ಕಲೆ, ಸಾಹಿತ್ಯ, ಕ್ರೀಡೆ, ನೃತ್ಯ ಮುಂತಾದ ಸಮಾಜಮುಖಿ ಕಾರ್ಯ ನೆರವೇರಿಸುವವರಿಗೆ ಆತ್ಮೋಲ್ಲಾಸ ಮುಖ್ಯಾವಾಗಿದೆ, ಇದರಿಂದ ಅವರು ಹೊಂದಿರುವ ಕಾರ್ಯಗಳು ಯಶಸ್ವಿಯಾಗಿ ಮುನ್ನಡೆಯುತ್ತವೆ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಹೇಳಿದರು.
ಪಟ್ಟಣದ ಮಲ್ಲಿಕಾಜರ್ುನ ಡಿ.ಇಡಿ ಹೊಸಕಟ್ಟಡದ ಕಾಲೇಜು ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಎಸ್.ಎಂ.ಎಸ್.ಡಿ.ಇಡಿ ಕಾಲೇಜು, ಕನಕ ಗ್ರಾಮೀಣ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ರವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವಪರಿಸರ ದಿನಾಚರಣೆ, ಪುಸ್ತಕ ಬಿಡುಗಡೆ, ಟ್ರಸ್ಟ್ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಸಮಾಜಮುಖಿಯು ತಮ್ಮ ಮನಸ್ಸಿಗೆ ಸಂತೋಷವಾಗುವಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸಿದಾಗ ಆತ್ಮ ಸಂತೃಪ್ತಿ ಮೂಲಕ ಗೆಲುವು ಸಾಧಿಸುತ್ತಾನೆ. ಮನುಷ್ಯನು ಎಂದಿಗೂ ಬೀಗಬಾರದು, ಪ್ರತಿಯೊಬ್ಬರ ಜೊತೆ ವಿನಯವಾಗಿ ಬಾಗುತ್ತಾ ಸ್ನೇಹವನ್ನು ಸಂಪಾದಿಸಬೇಕು, ಈ ಅರಿವು ಶಿಕ್ಷಣದಲ್ಲಿದೆ ಎಂದ ಅವರು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿರುವ ಹಿಂದೂ ಧರ್ಮಕ್ಕೆ ಉತ್ತಮ ಭಾವನೆಯಿದೆ, ಮಹಾತ್ಮ ಗಾಂಧೀಜಿಯವರ ತತ್ವಗಳು, ಆದರ್ಶಗಳು ಎಲ್ಲರಿಗೂ ಅಗತ್ಯವಾಗಿದೆ. ಸತ್ಯಾಗ್ರಹ ಮೂಲಕ ನ್ಯಾಯ ಪೆಡದ ಗಾಂಧೀಜಿ ಪ್ರಪಂಚದಾದ್ಯಂತ ಚಿರಪರಿಚಿತರಾಗಿದ್ದು ಅವರ ಬಗ್ಗೆ ಎಂ.ವಿ.ಎನ್ರವರು ಬರೆದಿರುವ ಗಾಂಧೀಜಿ 100 ಆದರ್ಶಗಳು ಪುಸ್ತಕದಲ್ಲಿ ಗಾಂಧೀಜಿಯವರ ಮಾನವೀಯ ಮೌಲ್ಯಗಳು ಮರುಗಟ್ಟುತ್ತವೆ ಎಂದರು.
ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರಸ್ವಾಮಿ ಆಶೀರ್ವಚನ ನೀಡಿ ದೇಶದ ಬಗ್ಗೆ ಕಾಳಜಿ, ದೇಶದ ಅಭಿವೃದ್ದಿಯಾಗಬೇಕಾದರೆ ಗಾಂಧೀಜಿಯವರ ಆದರ್ಶ ಮತ್ತು ಚಿಂತನೆ ಅಗತ್ಯವಾಗಿದೆ, ಗಾಂಧೀಜಿಯವರಂತೆ ಪ್ರತಿಯೊಂದು ಹೆಜ್ಜೆಯೂ ಛಲದಿಂದ ಕೂಡಿದ್ದು ಕಠಿಣ ಶ್ರಮವಿದಾಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ತಾಲ್ಲೂಕಿನ ಸಾಹಿತ್ಯದ ಭಾವನೆಗಳು ಕ್ರಿಯಾಶೀಲವಾಗಿ ಉತ್ತಮವಾಗಿದೆ ಎಂದ ಅವರು ಪರಿಸರ ನಾಶವಾದರೆ ಮನುಷ್ಯ ನಾಶವಾದಂತೆ, ಜೀವಿಸುವ ಪ್ರತಿಯೊಬ್ಬರು ಪರಿಸರವನ್ನು ಕಾಪಾಡಬೇಕು. 2 ಮಹಾಯುುದ್ದಗಳು ದೇಶದ ಸಾಮ್ರಾಜ್ಯ ವಿಸ್ತರಿಸಲು ನಡೆದಿತ್ತು ಈಗ 3ನೇ ಮಹಾಯುದ್ದ ನಡೆದರೆ ಅದು ನೀರು ಮತ್ತು ಆಹಾರಕ್ಕಾಗಿ ನಡೆಯುತ್ತದೆ ಆದ್ದರಿಂದ ಪರಿಸರ ರಕ್ಷಿಸಲು ಮುಂದಾಗುತ್ತ ದೇಶ ರಕ್ಷಿಸಬೇಕು ಎಂದು ಹೇಳಿದರು.
ಜಿ.ಪಂ. ಯೋಜನಾ ನಿದರ್ೇಶಕ ಕೆ.ಬಿ.ಆಂಜನಪ್ಪ ಮಾತನಾಡಿ ಶೈಕ್ಷಣಿಕ ವ್ಯವಸ್ಥೆಗೆ ರಾಜ್ಯದಲ್ಲಿನ ಮಠ-ಮಾನ್ಯಗಳು ಉತ್ತಮ ಪ್ರೇರಣೆ ನೀಡುತ್ತಿವೆ, ಬೇರೆ ರಾಜ್ಯದ ಮಠ ಮಾನ್ಯಗಳು ಈ ರೀತಿಯ ಬೆಳವಣಿಗೆ ಹೊಂದಿಲ್ಲ, ನಮ್ಮ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕಿನ ಕಂದಿಕೆರೆ ಗ್ರಾಮದಲ್ಲಿ ಸಿದ್ದಗಂಗಾ ಶಾಲೆ ಸ್ಥಾಪಿತವಾಗಿ ಗ್ರಾಮೀಣ ವಿದ್ಯಾಥರ್ಿಗಳಿಗೆ ಅನುಕೂಲವಾಯಿತು. ಅದೇ ರೀತಿ ಮಲ್ಲಿಕಾಜರ್ುನಸ್ವಾಮಿ ಕಾಲೇಜು ವಿದ್ಯಾಥರ್ಿಗಳಿಗೆ ಅನುಕೂಲ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಕಿರಿಯರಿಗೆ ಹಿರಿಯರ ಮಾರ್ಗದರ್ಶನದ ಅಗತ್ಯವಿದೆ, ಹಿರಿಯರ ಅನುಭವ, ತಿಳುವಳಿಕೆ ಮತ್ತು ಸಲಹೆಯನ್ನು ಕಿರಿಯರು ಪಾಲಿಸಬೇಕು ಎಂದ ಅವರು ಸಮುದಾಯ ಮತ್ತು ಸಕರ್ಾರ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಶಿಕ್ಷಣವು ಉತ್ತಮವಾಗಿರುತ್ತದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಸಕರ್ಾರ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಆಧ್ಯತೆ ನೀಡಿದರೂ ಮಕ್ಕಳಲ್ಲಿ ವಿದ್ಯಾಭ್ಯಾಸ ಕ್ಷೀಣಿಸುತ್ತಿದೆ, ಪೋಷಕರು ಮಕ್ಕಳಲ್ಲಿ ಶಿಕ್ಷಣಾಸಾಕ್ತಿಯನ್ನು ಹೆಚ್ಚಿಸಿ ಸ್ನಾತಕೋತ್ತರ ಪದವಿಗಳ ಮೂಲಕ ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು ಎಂದ ಅವರು ತಾಲ್ಲೂಕಿಗೆ ಬಂದ ನಂತರ ಸಕರ್ಾರಿ ಕಛೇರಿಗಳಲ್ಲಿ ಮಧ್ಯವತರ್ಿಗಳ ಹಾವಳಿ ತಪ್ಪಿಸಿ ಕಛೇರಿಗಳ ಕೆಲಸಗಳನ್ನು ಸಲೀಸಾಗಿ ಆಗುವಂತೆ ಮಾಡಿದ್ದೇವೆ, ಅದೇ ರೀತಿ ಪರಿಸರ ಹಾಳು ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾದರೆ ಸಮಾಜದ ಮುಂಚೂಣಿಯಲ್ಲಿರುವ ಹಲವರು ಒತ್ತಡ ಹೇರುತ್ತಾ ನಮ್ಮ ಕರ್ತವ್ಯವನ್ನು ಲೋಪವಾಗುವಂತೆ ಮಾಡುತ್ತಿರುವ ತಮಗಾಗುತ್ತಿರುವ ಕಾರ್ಯದಕ್ಷತೆಗೆ ಆಗುತ್ತಿರುವ ಅನಾನೂಕಲತೆಯನ್ನ ತೋಡಿಕೊಂಡರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಎಲ್ಲರ ಸಲಹೆ ಸಹಕಾರದಿಂದ ಉತ್ತಮ ಶಿಕ್ಷಣ ಪಡೆದು ಪ್ರತಿಭಾನ್ವಿತರಾಗಿ ಶಾಲೆಗೆ ಮತ್ತು ತಮ್ಮ ಪೋಷಕರಿಗೆ ವಿದ್ಯಾಥರ್ಿಗಳು ಕೀತರ್ಿ ತಂದುಕೊಡಬೇಕು ಎಂದ ಅವರು ಶಾಲಾ ಆವರಣದಲ್ಲಿ ಮತ್ತು ತಮ್ಮ ಮನೆಯ ಅಂಗಳದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯತೆ ವಹಿಸಿ ಮಾತನಾಡಿದರು. ಸಾಹಿತಿ ಆರ್.ಬಸವರಾಜು ಮಾತನಾಡಿದರು.
ಸಮಾರಂಭದಲ್ಲಿ 2011ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 70 ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶೃಂಗಾರ ಪ್ರಕಾಶನದವರ ವತಿಯಿಂದ ಬಿ.ಸಿ.ಎಂ.ಹೆಣ್ಣುಮಕ್ಕಳ ವಸತಿ ನಿಲಯದ ಗ್ರಂಥಾಲಯಕ್ಕೆ 10ಸಾವಿರ ರೂಗಳ ಪುಸ್ತಕ ಕೊಡಗೆಯನ್ನು ನೀಡಲಾಯಿತು.
ಸಮಾರಂಭದಲ್ಲಿ ಕನಕ ಗ್ರಾಮೀಣ ಶಿಕ್ಷಣ ಚಾರಿಟಬಲ್ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಗಾಯಿತ್ರಿದೇವಿ, ಶೃಂಗಾರ ಪ್ರಕಾಶನದ ನಾಗರತ್ನರಾವ್, ನಿವೃತ್ತ ಶಿಕ್ಷಕರಾದ ಕುಮಾರಸ್ವಾಮಿ, ಜಿ.ತಿಮ್ಮಯ್ಯ, ನಾಗರಾಜ್, ಶಿವಬಸಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿನಿ ಎಸ್.ಆರ್.ಆಶಾರಾಣಿ ಪ್ರಾಥರ್ಿಸಿದರೆ, ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿ, ಎಂ.ವಿ.ರಾಜ್ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಿ.ಎ.ಕುಮಾರಸ್ವಾಮಿ ನಿರೂಪಿಸಿ, ಭವಾನಿಜಯರಾಂ ವಂದಿಸಿದರು.
ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸಕರ್ಾರಿ ಶಾಲೆಗಳು ಮುಚ್ಚಿದೆ: ಸಾ.ಚಿ.ನಾಗೇಶ್

ಚಿಕ್ಕನಾಯಕನಹಳ್ಳಿ,ಜು.02 : ಸಕರ್ಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಿದರೂ ವಿದ್ಯಾಥರ್ಿಗಳು ಖಾಸಗಿ ಶಾಲೆಗಳತ್ತ ಮುಖಮಾಡಿರುವ ಪರಿಣಾಮ ತಾಲ್ಲೂಕಿನಲ್ಲಿ 6ಸಕರ್ಾರಿ ಶಾಲೆಗಳು ಮುಚ್ಚುವಂತಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ಪಟ್ಟಣದ ಕನಕ ಬವನದಲ್ಲಿ ಕನಕ ವಿದ್ಯಾಭಿವೃದ್ದಿ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿ ಸಕರ್ಾರಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದು, ಸಕರ್ಾರಿ ಶಾಲೆಗಳಲ್ಲಿ ವಿದ್ಯಾಥರ್ಿಗಳಿಗಾಗಿ ಮೂಲಭೂತ ಸೌರ್ಕರ್ಯಗಳನ್ನು ನೀಡುತ್ತಿದೆ ಆದರೂ ವಿದ್ಯಾಥರ್ಿಗಲ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ, ಪೋಷಕರು ಇದನ್ನು ತಪ್ಪಿಸಿ ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗೆ ಸೇರಿಸಲು ಮನವರಿಕೆ ಮಾಡಿದ ಅವರು ಸಕರ್ಾರ ಜುಲೈ 5ರಂದು ಹಮ್ಮಿಕೊಂಡಿರುವ ಶಾಲೆಗಾಗಿ ನಾವು ನೀವು ಎಂಬ ಕಾರ್ಯಕ್ರಮಕ್ಕೆ ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಎಲ್ಲರೂ ಭಾಗವಹಿಸಲು ಕೋರಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು ಮತ್ತು ಶಿಕ್ಷಣದ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರೋತ್ಸಾಹಿಸಲು ದಾನಿಗಳು ಮುಂದೆ ಬರಬೇಕು ಎಂದ ಅವರು ವಿದ್ಯಾಥರ್ಿಗಳು ಮುಂದೆ ಉನ್ನತ ಹುದ್ದೆ ಅಲಂಕರಿಸಿದಾಗ ಅವರೂ ಸಹ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಸಹಾಯ ಮಾಡಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮನುಷ್ಯನಿಗೆ ಬೌಧಿಕ ಶಿಕ್ಷಣ ಮತ್ತು ಸಾಮಾಜಿಕ ಶಿಕ್ಷಣ ಬೇಕಾಗಿದೆ, ಸಂಪತ್ತು ಮತ್ತು ಶಿಕ್ಷಣ ಎರಡು ಒಂದೇ ಕಡೆ ಸೇರಿಸುವ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಗೆ ಸಹಾಯ ಮಾಡುವುದು ಸಮಂಜಸವಾಗಿದೆ ಎಂದ ಅವರು ಕಂಬಳಿ ಸೊಸೈಟಿಯಲ್ಲೂ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಸದ್ಯದಲ್ಲೇ ನೀಡಲಾಗುವುದು ಎಂದರು.
ಕನಕವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಶ್ರೀಕಂಠಯ್ಯ ಮಾತನಾಡಿ ಸಂಘ ಸ್ಥಾಪಿತವಾಗಿರುವುದು ಅಸಾಯಕರಿಗೆ, ಆಥರ್ಿಕವಾಗಿ ಹಿಂದುಳಿದವರಿಗೆ ಮತ್ತು ಸಮಾಜಕ್ಕೆ ಅನುಕೂಲವಾಗಲಿ ಎಂದು ಸಂಘದ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ , ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ದಾನಿಗಳಾದ ಸಿ.ಡಿ.ರಾಮಲಿಂಗಯ್ಯ, ಡಿ.ಎನ್.ನಾಗರಾಜು, ಇಂಜನಿಯರ್ ಪ್ರಭಾಕರ್ ಮುಂತಾದವರಿದ್ದರು.
ಕಂಬಳಿ ಬಗ್ಗೆ ಅವಹೇಳನಕಾರಿ ಲೇಖನ ನೀಡಿರುವವರು ಕ್ಷಮೆ ಕೇಳಲಿ : ಸಿ.ಡಿ.ಚಂದ್ರಶೇಖರ್
ಚಿಕ್ಕನಾಯಕನಹಳ್ಳಿ,ಜು.02: ಕಂಬಳಿ ಎಂದರೆ ಉಣ್ಣೆ ಎಳೆಗಳ ಸಾಮ್ರಾಜ್ಯವಾಗಿದ್ದು ಅದರ ಮೇಲೆ ಊಟಕ್ಕೆ ಕುಳಿತರೆ ಕೂದಲು ಸಿಗುವುದು, ಕಂಬಳಿ ಬಳಸುವವರದು ದುರ್ಜನರ ಪತ್ರೀಕ, ದುಷ್ಠ ಜನರ ಸಹವಾಸ ಎಂಬ ಪದಗಳನ್ನು ಬಳಸಿ ಕಂಬಳಿ ಬಗ್ಗೆ ಈ ರೀತಿ ಪತ್ರಿಕೆ ಲೇಖನವೊಂದು ಬಿಂಬಿಸಿರುವುದು ಕಂಬಳಿ ಉದ್ಯಮಿಗಳಿಗೆ ಅವಮಾನ ಮಾಡಿದಂತಾಗಿದೆ ಎಂದು ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆರೋಪಿಸಿದ್ದಾರೆ.
ಜುಲೈ 1ರಂದು ಸಂಯುಕ್ತ ಕನರ್ಾಟಕ ದಿನಪತ್ರಿಕೆಯ್ಲ ನ್ಯಾಯದೀಪಿಕೆ 354ನೇ ಅಂಕಣದಲ್ಲಿ ಸತ್ಸಂಗ ಬಲು ಮೇಲು ಎಂಬ ಶೀಷರ್ಿಕೆಯಡಿಯಲ್ಲಿ ಎನ್ಕೆಡಿರವರು ನೀಡಿರುವ ಲೇಖನದಲ್ಲಿ ಕಂಬಳಿ ಉದ್ಯಮದ ಬಗ್ಗೆ ಅವಮಾನ ರೀತಿಯಾಗಿ ಲೇಖನ ನೀಡಿದ್ದು ತಕ್ಷಣವೇ ಈ ಲೇಖನಕ್ಕೆ ಸಂಪಾದಕರು ಮತ್ತು ಲೇಖನ ಬರೆದಿರುವವರು ಕಂಬಳಿ ನೇಕಾರರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕಂಬಳಿ ನೇಕಾರರಾದ ಗಂಗಾಧರ್, ಗೋವಿಂದಪ್ಪ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ ಉಪಸ್ಥಿತರಿದ್ದರು.

Thursday, June 30, 2011

ಏಕದಶಿ ಜಾತ್ರೆಯ ಪ್ರಯುಕ್ತ ರಥೋತ್ಸವ ಹಾಗೂ ರಾಜ್ಯ ಮಟ್ಟದ ವಿವಿಧ ಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.30 : ಹಳೆಯೂರು ಶ್ರೀ ಆಂಜನೇಯಸ್ವಾಮಿಯವರ ರಥೋತ್ಸವವನ್ನು ಜುಲೈ 11 ರಿಂದ 13ರವರೆಗೆ ಏರ್ಪಡಿಸಿದ್ದು ಈ ಸಂಬಂಧ ವಿವಿಧ ಉತ್ಸವ ಹಾಗೂ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ.ಜುಲೈ 11ರಂದು ಸೋಮವಾರ ಬೆಳ್ಳಿ ಪಲ್ಲಕ್ಕಿಉತ್ಸವ, 12ರ ಮಂಗಳವಾರದಂದು ಬ್ರಹ್ಮರಥೋತ್ಸವ ಏರ್ಪಡಿಸಲಾಗಿದೆ, ರಥೋತ್ಸವದ ನಂತರ ದಿವ್ಯಜ್ಯೋತಿ ಕಲಾ ಸಂಘದವರಿಂದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ, ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಏರ್ಪಡಿಸಿದೆ. ಜುಲೈ 13ರ ಬುಧವಾರದಂದು ರಥೋತ್ಸವ ಮತ್ತು ಅನ್ನ ಸಂತರ್ಪಣೆ ನಡೆಸಲಾಗಿದೆ.ಇದೇ ದಿನ ಮಧ್ಯಾಹ್ನ 3 ಗಂಟೆಗೆ ಕಲ್ಪವೃಕ್ಷ ಕೋ-ಅಪರೇಟೀವ್ ಬ್ಯಾಂಕ್ ಸಭಾಂಗಣದಲ್ಲಿ ದಿವ್ಯ ಜ್ಯೋತಿ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 'ನವ ದಂಪತಿಗಳ' ಸ್ಪಧರ್ೆಯನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಅಂದು ಮಿತ್ರಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕ ಮತ್ತು ಮಾರುತಿ ವ್ಯಾಯಾಮ ಶಾಲೆಯವರಿಂದ ಜಿದ್ದಾ ಜಿದ್ದಿನ ಕುಸ್ತಿಯನ್ನು ಏರ್ಪಡಿಸಲಾಗಿದೆ.
13ನೇ ವರ್ಷದ ರಾಜ್ಯಮಟ್ಟದ ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.30 : 13ನೇ ವರ್ಷದ ರಾಜ್ಯಮಟ್ಟದ ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆಯನ್ನು ಜುಲೈ12ರ ಮಂಗಳವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಶ್ರೀ ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಎನ್.ಬಸವಯ್ಯನವರ ಸವಿನೆನಪಿಗಾಗಿ ಕಲ್ಪವೃಕ್ಷ ಕೋ-ಆಪರೇಟಿವ್ ಸಪ್ತತಿ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಸಿಡ್ಲೇಹಳ್ಳಿ ಸಂಸ್ಥಾನದ ಕರಿಬಸವದೇಶೀಕೇಂದ್ರಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಬೆಂಗಳೂರಿನ ಉಪ್ಪಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ವರ್, ಪೋದಾರ್ ಕಂಪನಿ ಶಂಕರ್, ಕುಶಾಲ್ ಗಾಮರ್ೆಂಟ್ಸ್ ಶಾಂತಕುಮಾರ್ ಉಪಸ್ಥಿತರಿರುವರು.ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆ ವಿವರ : ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯು ಸೀನಿಯರ್ ಗ್ರೂಪ್, ಜೂನಿಯರ್ ಗ್ರೂಪ್, ಸೀನಿಯರ್ ಸಿಂಗಲ್, ಜೂನಿಯರ್ ಸಿಂಗಲ್ ವಿಭಾಗವಿದ್ದು ಗ್ರೂಪ್ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಿದ್ದು, ಸೀನಿಯರ್ ಗ್ರೂಪ್ ಪ್ರವೇಶ ದರ 200, ಜೂನಿಯರ್ ಗ್ರೂಪ್ 100, ಸೀನಿಯರ್ ಸಿಂಗಲ್ 100, ಸೀನಿಯರ್ ಸಿಂಗಲ್ 100 ಪ್ರವೇಶ ದರಗಳಿದ್ದು ತೀಪರ್ುಗಾರರ ಮತ್ತು ವ್ಯವಸ್ಥಾಪಕರ ತೀಮರ್ಾನವೇ ಅಂತಿಮ ತೀಮರ್ಾನವಾಗಿದೆ, ಹೆಚ್ಚಿನ ವಿವರಗಳಿಗಾಗಿ ಸಿ.ಎಸ್.ರೇಣುಕಮೂತರ್ಿ-9980163152, 9742796001, ಸಂಪಕರ್ಿಸಬಹುದಾಗಿದೆ.
ಆಧಾರ್ 7ರವರೆಗೆ, ಮತದಾರ ನೊಂದಾಣಿ 31 ರವರೆಗೆ ಅವಧಿ ವಿಸ್ತರಣೆ: ತಹಶೀಲ್ದಾರ್ ಟಿ.ಸಿ.ಕೆ.ಚಿಕ್ಕನಾಯಕನಹಳ್ಳಿ,ಜೂ.30: ವಿಶಿಷ್ಟ ಗುರುತಿನ ಚೀಟಿ ಆಧಾರ್'' ಯೋಜನೆಯಲ್ಲಿ ಭಾವಚಿತ್ರ ತೆಗೆಯುವ ಕಾರ್ಯವನ್ನು ಜುಲೈ 7ರವರೆಗೆ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ. ತಾಲೂಕಿನಲ್ಲಿ ಎರಡು ಲಕ್ಷದ ಹನ್ನೆರಡು ಸಾವಿರದ ಮೂರುನೂರ ಐವತ್ತು ಜನರಿದ್ದು, ಇದರಲ್ಲಿ ಎರಡು ಲಕ್ಷದ ಒಂದು ಸಾವಿರದ ಒಂದು ನೂರ ಐವತ್ತು ಜನರು ಈಗಾಗಲೇ ಆಧಾರ್ ಯೋಜನೆಗೆ ಒಳಪಟ್ಟಿದ್ದಾರೆ. ಇನ್ನು ಹತ್ತು ಸಾವಿರ ಜನ ಮಾತ್ರ ಆಧಾರ ಸಂಖ್ಯೆಯನ್ನು ಹೊಂದಬೇಕಾಗಿದೆ. ಈ ಹತ್ತು ಸಾವಿರ ಜನರಿಗಾಗಿ ಭಾವ ಚಿತ್ರ ತೆಗೆಯುವ ಕಾರ್ಯವನ್ನು ಜುಲೈ ಏಳರವರೆಗೆ ವಿಸ್ತರಿಸಿದ್ದು, ತಕ್ಷಣವೇ ಉಳಿದಿರುವ ಸಾರ್ವಜನಿಕರು ಈ ವ್ಯಾಪ್ತಿಗೆ ಒಳಪಡಬೇಕು ಎಂದಿದ್ದಾರೆ. ಆಧಾರ್ ಯೋಜನೆಗೆ ಒಳಪಡದೆ ಇರುವ ಜನರಿಗೆ ಸಕರ್ಾರದ ಸವಲತ್ತುಗಳಾದ ಪಡಿತರ ವಿತರಣೆ, ಸೀಮೆಣ್ಣೆ ವಿತರಣೆ, ಪಿಂಚಣಿ, ನೌಕರರಿಗೆ ಸಂಬಳ ಸೇರಿದಂತೆ ಎಲ್ಲಾ ರೀತಿಯ ಸಕರ್ಾರಿ ಸೌಲಭ್ಯಗಳನ್ನು ತಡೆಹಿಡಯಲಾಗುವುದು ಎಂದರು.ಜುಲೈ 30 ಮತಪರಿಷ್ಕರಣೆಗೆ ಗಡವು: ಹದಿನೆಂಟು ವರ್ಷ ತುಂಬಿರುವ ಎಲ್ಲಾ ಯುವ ಜನತೆ ತಮ್ಮ ಮೂಲಭೂತ ಹಕ್ಕಾದ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಜುಲೈ 31 ಅಂತಿಮ ದಿನವಾಗಿದೆ ಎಂದು ಚುನಾವಣಾ ಆಯೋಗ ನಿದರ್ೇಶನ ನೀಡಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ. 1.1.11ಕ್ಕೆ 18 ವರ್ಷ ತುಂಬಿರುವ ಎಲ್ಲಾ ಯುವಕ, ಯುವತಿಯರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ನೊಂದಾಯಿಸಲು ಅವಕಾಶವಿದ್ದು, ಹೊಸದಾಗಿ ನೊಂದಾಯಿಸಿಗೊಳ್ಳಲಿಚ್ಚಿಸುವರು ನಮೂನೆ 6ನ್ನು ಭತರ್ಿಮಾಡುವುದು, ಹೆಸರು, ಸ್ಥಳ, ಲಿಂಗ ಸೇರಿದಂತೆ ಇನ್ನಿತರ ತಿದ್ದುಪಡಿ ಮಾಡಲಿಚ್ಚಿಸುವರು ನಮೂನೆ 8ನ್ನು ಭತರ್ಿ ಮಾಡಿ ತಮ್ಮ ವ್ಯಾಪ್ತಿಯ ಬಿ.ಎಲ್.ಓ.ಗಳಿಗೆ ಕೊಡಬೇಕೆಂದು ಕೋರಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಒಂದು ಲಕ್ಷ ಐವತ್ತೈದು ಸಾವಿರ ಮತದಾರರ ಪೈಕಿ 93 ಸಾವಿರ ಮತದಾರರು ತಮ್ಮ ಮೊಬೈಲ್ ಯಾ ದೂರವಾಣಿ ಸಂಖ್ಯೆಯನ್ನು ನೊಂದಾಯಿಸಿಕೊಂಡಿದ್ದು ಉಳಿದವರು ಇನ್ನೂ ನೊಂದಾಯಿಸಿಕೊಳ್ಳಬೇಕಾಗಿದೆ ಆದ್ದರಿಂದ ಮೊಬೈಲ್ ಅಥವಾ ದೂರವಾಣಿ ಸಂಖ್ಯೆಗಳನ್ನು ನೊಂದಾಯಿಸುವುದು ಹಾಗೂ ಭಾವಚಿತ್ರ ಕೊಡುವುದು ಖಡ್ಡಾಯವಾಗಿರುವುದರಿಂದ ಸಂಬಂಧಿಸಿದವರು ತಮ್ಮ ವ್ಯಾಪ್ತಿಯ ಬಿ.ಎಲ್.ಓಗಳನ್ನು ಭೇಟಿ ಮಾಡಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್ ಕಛೇರಿಯ ಚುನಾವಣೆಯ ಶಾಖೆಯ ದೂರವಾಣಿ ಸಂಖ್ಯೆ 08133 267242 ಇಲ್ಲಿ ಸಂಪಕರ್ಿಸಲು ಕೋರಲಾಗಿದೆ.ಹಂದನಕೆರೆ ಜನಸ್ಪಂದನ ಸಭೆ ಮುಂದೂಡಿಕೆ: ಹಂದನಕೆರೆಯಲ್ಲಿ ಜುಲೈ 2ರಂದು ನಡೆಯಬೇಕಾಗಿದ್ದ ಜನಸ್ಪಂದನ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ, ಮುಂದೂಡಿರುವ ಸಭೆಯನ್ನು ಜುಲೈ ತಿಂಗಳ ಮೂರನೇ ಶನಿವಾರದಂದು ನಡೆಸಲಾಗುವುದು ಎಂದು ತಾಲೂಕು ಕಛೇರಿಯ ಮೂಲ ತಿಳಿಸಿದೆ.
ವಿಶ್ವ ಪರಿಸರ ದಿನಾಚರಣೆ, ಪುಸ್ತಕ ಬಿಡುಗಡೆ ಮತ್ತು ಟ್ರಸ್ಟ್ ಉದ್ಘಾಟನೆಚಿಕ್ಕನಾಯಕನಹಳ್ಳಿ,ಜೂ.30 : ವಿಶ್ವ ಪರಿಸರ ದಿನಾಚರಣೆ, ಪುಸ್ತಕ ಬಿಡುಗಡೆ, ಟ್ರಸ್ಟ್ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜುಲೈ 2ರ ಶನಿವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀ ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ ಕಾಲೇಜು, ಶ್ರೀ ಕನಕ ಗ್ರಾಮೀಣ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶಿಕೇಂದ್ರಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು, ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.ತಹಶೀಲ್ದಾರ್ ಟಿ.ಸಿ.ಕಾಂತರಾಜು ಸಸಿನೆಡು-ಮರ ಸಂರಕ್ಷಿಸು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಶ್ರೀ ಕನಕ ಗ್ರಾಮೀಣ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ನ ಉದ್ಘಾಟನೆಯನ್ನು ತುಮಕೂರು ಜಿ.ಪಂ.ನ ಯೋಜನಾ ನಿದರ್ೇಶಕ ಕೆ.ಬಿ.ಆಂಜನಪ್ಪ ಉದ್ಘಾಟಿಸಲಿದ್ದಾರೆ. ಲೇಖಕ ವಿದ್ಯಾವಾಚಸ್ಪತಿ ಕವಿತಾಕೃಷ್ಣ ಎಂ.ವಿ.ನಾಗರಾಜ್ರಾವ್ ಬರೆದಿರುವ ಗಾಂಧೀಜಿ 100 ಆದರ್ಶಗಳು ಪುಸ್ತಕವನ್ನು ಬಿಡುಗಡೆ ಮಾಡಲಿದ್ದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್ ಬಿ.ಸಿ.ಎಂ. ಹೆಣ್ಣುಮಕ್ಕಳ ವಸತಿ ನಿಲಯದ ಗ್ರಂಥಾಲಯಕ್ಕೆ ಪುಸ್ತಕಗಳ ವಿತರಣೆ ಮಾಡಲಿದ್ದಾರೆ, ಬಿ.ಇ.ಓ ಸಾ.ಚಿ.ನಾಗೇಶ್ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಿದ್ದು, ಶ್ರೀ.ಕ.ಗ್ರಾ.ಶಿ.ಚಾ.ಟ್ರಸ್ಟ್ ಮ್ಯಾನೇಂಜಿಂಗ್ ಟ್ರಸ್ಟಿ ಬಿ.ಎನ್.ಗಾಯಿತ್ರಿದೇವಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಡಿ.ಇಡಿ, ಪರೀಕ್ಷೆಗಳಲ್ಲಿ ಕ್ನನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ 70 ವಿದ್ಯಾಥರ್ಿ, ವಿದ್ಯಾಥರ್ಿನಿಯರಿಗೆ ಅಭಿನಂದನ ಪತ್ರ ವಿತರಣೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿ ಆರ್.ಬಸವರಾಜ್, ಶೃಂಗಾರ ಪ್ರಕಾಶನ ನಾಗರತ್ನರಾವ್, ವಲಯ ಅರಣ್ಯಾಧಿಕಾರಿ ನಂಜುಂಡಪ್ಪ, ಸಾಮಾಜಿಕ ಅರಣ್ಯ ಇಲಾಖೆಯ ಪಿ.ಎಚ್.ಮಾರುತಿ, ನಿ.ಕೃಷಿ ಸಹಾಯಕ ನಿದರ್ೇಶಕ ಸಿ.ಹೆಚ್.ನಾಗರಾಜ್, ಶಿಕ್ಷಕ ಕುಮಾರಸ್ವಾಮಿ ಉಪಸ್ಥಿತರಿರುವರು ಎಂದು ಡಿ.ಇಡಿ.ಕಾಲೇಜ್ನ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್, ಕಸಾಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ.

Wednesday, June 29, 2011

ಕುಪ್ಪೂರು ಕೆರೆಯಿಂದ 15ಸಾವಿರ ಲೋಡ್ ಮಣ್ಣು ಹೊರಕ್ಕೆಚಿಕ್ಕನಾಯಕನಹಳ್ಳಿ,ಜೂ.29 : ಕುಪ್ಪೂರು ಕೆರೆಯ ಊಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದ್ದು, ಈ ಕೆರೆಯಿಂದ ಸುಮಾರು 15ಸಾವಿರ ಲೋಡ್ ಊಳೆತ್ತಲಾಗುತ್ತಿದೆ. ಇಷ್ಟು ಪ್ರಮಾಣದಲ್ಲಿ ಮಣ್ಣು ಹೊರ ತೆಗೆದರು ಕೆರೆಯ ಒಂದು ಮೂಲೆಯಲ್ಲಿ ಅಲ್ಪ ಪ್ರಮಾಣದಷ್ಟು ತೆಗೆದಂತಾಗಿದೆ ಅಷ್ಟೇ.ತಾಲ್ಲೂಕಿನ ಕುಪ್ಪೂರು ಕೆರೆ 63 ಎಕರೆಯಷ್ಟು ವಿಶಾಲವಾಗಿದ್ದು ಈ ಕೆರೆಯಲ್ಲಿ ಮಣ್ಣು ತುಂಬಿಕೊಂಡು ತಟ್ಟೆಯಂತಾಗಿತ್ತು. ಈ ಕೆರೆಯಲ್ಲಿ ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ಯವಿಲ್ಲದೆ, ಬಹುಬೇಗ ತುಂಬುತ್ತಿತ್ತು, ಅಷ್ಟೇ ಬೇಗ ಖಾಲಿಯಾಗುತ್ತಿತ್ತು. ಈ ಕೆರೆಯಿಂದ ಸುತ್ತ ಮುತ್ತಲಿನ ಅಚ್ಚುಕಟ್ಟುದಾರರಿಗೆ ಯಾವುದೇ ಉಪಯೋಗವಾಗುತ್ತಿರಲಿಲ್ಲ. ಇದನ್ನರಿತ ಕುಪ್ಪೂರಿನ ಯುವಕರು ಶ್ರೀ ಮರುಳ ಸಿದ್ದೇಶ್ವರಸ್ವಾಮಿ ಕೆರೆ ಅಭಿವೃದ್ದಿ ಸಂಘವನ್ನು ಕಟ್ಟಿಕೊಂಡು ಕೆರೆಯ ಅಭಿವೃದ್ದಿಗೆ ಮುಂದಾಗಿದ್ದು ಮೊದಲ ಹಂತವಾಗಿ ಈ ಕೆರೆಯಿಂದ 15 ಸಾವಿರ ಲೋಡ್ ಮಣ್ಣನ್ನು ಕೆರೆಯಿಂದ ತೆಗೆಯುವ ಕಾರ್ಯ 15 ದಿನಗಳಿಂದ ಭರದಿಂದ ನಡೆಯುತ್ತಿದೆ. ಈ ಮಣ್ಣನ್ನು ನೂರಾರು ರೈತರು ತಮ್ಮ ಹೊಲ, ಗದ್ದೆ, ತೋಟಗಳಿಗೆ ಹೊಡೆದುಕೊಳ್ಳುತ್ತಿದ್ದು ಹುಳಿಯಾರು, ಹಂದನಕೆರೆ, ಅರಳೀಕೆರೆ ಭಾಗಗಳಿಗೂ ಈ ಮಣ್ಣು ಹೋಗುತ್ತಿದೆ, ಕೆರೆಯಿಂದ ಸುಮಾರು 30 ಕಿ.ಮೀ ಯಷ್ಟು ದೂರದೂರುಗಳಿಂದ ಲಾರಿಗಳನ್ನು ತಂದು ಮಣ್ಣನ್ನು ತೆಗೆಯುತ್ತಿದ್ದಾರೆ., ನೂರಾರು ಟ್ರಾಕ್ಟರ್ಗಳು ಹತ್ತಾರು ಲಾರಿಗಳು ಪ್ರತಿದಿನ ಮಣ್ಣು ಹೊಡೆಯುತ್ತಿದೆ ಈ ಕಾರ್ಯದಲ್ಲಿ ಹಿಟಾಚಿಗಳು ದೈತು ಶಕ್ತಿಯಂತೆ ಕಾರ್ಯನಿರ್ವಹಿಸುತ್ತಿವೆ. ಈ ಕಾರ್ಯಕ್ಕೆ ಸಕರ್ಾರ ಈಗಾಗಲೇ 15ಲಕ್ಷ ರೂಗಳನ್ನು ಮಂಜೂರು ಮಾಡಿದೆ, ಎಂದು ಕೆರೆ ಅಭಿವೃದ್ದಿ ಸಂಘದ ಅಧ್ಯಕ್ಷ ಆನಂದಕುಮಾರ್ ತಿಳಿಸಿದ್ದಾರೆ. ಈ ಕೆರೆಯಲ್ಲಿ 30ಸಾವಿರ ಕ್ಯೂಬಕ್ ಮೀಟರ್ ಮಣ್ಣು ತೆಗೆಯಲಾಗುವುದು, ಇಷ್ಟು ಮಣ್ಣು ತೆಗೆದರು ಕೆರೆಯಲ್ಲಿ ಇನ್ನೂ ಒಂದು ಲಕ್ಷ ಕ್ಯೂಬಕ್ ಮೀಟರ್ನಷ್ಟು ಹಾಗೆಯೇ ಉಳಿಯುತ್ತದೆ ಎನ್ನುವ ಅವರು ಈ ಕೆರಯಲ್ಲಿ ನಾವಂದುಕೊಂಡಷ್ಟು ಮಣ್ಣು ಹೊರತೆಗೆದು ಕೆರೆಯಲ್ಲಿನ ಗಿಡಗಂಟೆಗಳನ್ನು ಸವರಿ ಹೊರ ತೆಗೆದು ಕೆರೆಯಲ್ಲಿನ ಗಿಡಗಂಟೆಗಳನ್ನು ಸವರಿ ಹೊರ ತೆಗೆದರೆ ಈ ಕೆರೆಯೊಂದು ಸುಂದರ ತಾಣವಾಗುತ್ತದೆ, ಜೊತೆಗೆ ಕೆರೆಯ ಮುಂಭಾಗದಲ್ಲಿ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠವಿದೆ ಹಿಂಭಾಗದಲ್ಲಿ ತಮ್ಮಡಿಹಳ್ಳಿ ವಿರಕ್ತ ಮಠದವಿದೆ, ಈ ಎರಡು ಸ್ಥಳಗಳು ಪುಣ್ಯ ಕ್ಷೇತ್ರವಾಗಿರುವುದರಿಂದ ನಾಡಿನ ಮೂಲೆ ಮೂಲೆಗಳಿಂದ ಬರುವ ಜನರಿಗೂ ಇದೊಂದು ನಿಸರ್ಗಧಾಮವಾಗುತ್ತದೆ. ಜೊತೆಗೆ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ(ದೋಣಿವಿಹಾರ) ಮಾಡಿದರೆ ಪ್ರೇಕ್ಷಣಿಯ ಸ್ಥಳವಾಗಿ, ಈ ಭಾಗವನ್ನು ಪ್ರವಾಸಿ ತಾಣವಾಗಿಸುವ ಎಲ್ಲಾ ಸವಲತ್ತುಗಳ್ನು ಪಡೆದಿದ್ದು ಸಕರ್ಾರ ಈ ಕೆರೆ ಅಭಿವೃದ್ದಿಗೆ ಇನ್ನೂ ಕನಿಷ್ಠ 20ಲಕ್ಷ ರೂಗಳಷ್ಟು ಅನುದಾನ ಬಿಡುಗಡೆ ಮಾಡಬೇಕೆಂದು ಈ ಭಾಗದ ಸಾರ್ವಜನಿಕರು ಸಕರ್ಾರವನ್ನು ಒತ್ತಾಯಿಸಿದ್ದಾರೆ.

ತಾಲ್ಲೂಕು ಕಸಾಪ ವತಿಯಿಂದ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಸನ್ಮಾನ
ಚಿಕ್ಕನಾಯಕನಹಳ್ಳಿ,ಜೂ.28: ತಾಲ್ಲೂಕಿನ ಎಲ್ಲಾ ಪ್ರೌಡಶಾಲೆಗಳಲ್ಲಿನ 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿ/ನಿಯರನ್ನು ಸನ್ಮಾನಿಸಲಾಗುವುದು ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ. ಜುಲೈ 2ರಶನಿವಾರ ಬೆಳಗ್ಗೆ 10ಕ್ಕೆ ಪಟ್ಟಣದ ಶ್ರೀ ಮಲ್ಲಿಕಾಜರ್ುನ ಶಿಕ್ಷಕರ ತರಬೇತಿ ಕಾಲೇಜ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರತಿ ಶಾಲೆಯ ಒಂದು ವಿದ್ಯಾಥರ್ಿಯನ್ನು ಸನ್ಮಾನಿಸಲಿದ್ದು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಬ್ಬರ ಹೆಸರನ್ನು ದೃಢೀಕರಣದೊಂದಿಗೆ ತಾ.ಕಸಾಪ ಅಧ್ಯಕ್ಷರಿಗೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ 9980585894, 9480785031 ಈ ದೂರವಾಣಿಗೆ ಸಂಪಕರ್ಿಸಲು ಕೋರಿದೆ.

ಹಳೆಯೂರು ಆಂಜನೇಯಸ್ವಾಮಿಯವರ ರಥೋತ್ಸವಚಿಕ್ಕನಾಯಕನಹಳ್ಳಿ,ಜೂ.29 : ಹಳೆಯೂರು ಶ್ರೀ ಆಂಜನೇಯಸ್ವಾಮಿಯವರ ರಥೋತ್ಸವವನ್ನು ಜುಲೈ 11 ರಿಂದ 13ರವರೆಗೆ ಏರ್ಪಡಿಸಿದ್ದು, ವಿವಿಧ ಉತ್ಸವ, ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ.ಜುಲೈ 11ರಂದು ಸೋಮವಾರ ಬೆಳ್ಳಿ ಪಲ್ಲಕ್ಕಿಉತ್ಸವ, 12ರ ಮಂಗಳವಾರದಂದು ಬ್ರಹ್ಮರಥೋತ್ಸವ ಮತ್ತು ದಿವ್ಯಜ್ಯೋತಿ ಕಲಾ ಸಂಘದವರಿಂದ ನವ ದಂಪತಿಗಳು ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ, ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ, ಹಾಗೂ 13 ರ ಬುಧವಾರದಂದು ರಥೋತ್ಸವ ಮತ್ತು ಅನ್ನ ಸಂತರ್ಪಣೆ ನಡೆಸಲಾಗಿದೆ.13ರಂದು ಮಧ್ಯಾಹ್ನ 3 ಗಂಟೆಗೆ ಕಲ್ಪವೃಕ್ಷ ಕೋ-ಅಪರೇಟೀವ್ ಬ್ಯಾಂಕ್ ಸಭಾಂಗದಲ್ಲಿ ದಿವ್ಯ ಜ್ಯೋತಿ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನವ ದಂಪತಿಗಳ ಸ್ಪಧರ್ೆಯನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಅಂದು ಮಿತ್ರಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕ ಮತ್ತು ಮಾರುತಿ ವ್ಯಾಯಾಮ ಶಾಲೆಯವರಿಂದ ಜಿದ್ದಾ ಜಿದ್ದಿನ ಕುಸ್ತಿಯನ್ನು ಏರ್ಪಡಿಸಲಾಗಿದೆ.
13ನೇ ವರ್ಷದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.29 : 13ನೇ ವರ್ಷದ ರಾಜ್ಯಮಟ್ಟದ ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆಯನ್ನು ಜುಲೈ12ರ ಮಂಗಳವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಶ್ರೀ ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಸಿ.ಎನ್.ಬಸವಯ್ಯನವರ ಸವಿನೆನಪಿಗಾಗಿ ಕಲ್ಪವೃಕ್ಷ ಕೋ-ಆಪರೇಟಿವ್ ಸಪ್ತತಿ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಸಿಡ್ಲೇಹಳ್ಳಿ ಸಂಸ್ಥಾನದ ಕರಿಬಸವದೇಶೀಕೇಂದ್ರಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಉಪ್ಪಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ವರ್, ಪೋದಾರ್ ಕಂಪನಿ ಶಂಕರ್, ಕುಶಾಲ್ ಗಾಮರ್ೆಂಟ್ಸ್ ಶಾಂತಕುಮಾರ್ ಉಪಸ್ಥಿತರಿರುವರು.ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆ ವಿವರ : ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯು ಸೀನಿಯರ್ ಗ್ರೂಪ್, ಜೂನಿಯರ್ ಗ್ರೂಪ್, ಸೀನಿಯರ್ ಸಿಂಗಲ್, ಜೂನಿಯರ್ ಸಿಂಗಲ್ ವಿಭಾಗವಿದ್ದು ಗ್ರೂಪ್ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಿದ್ದು, ಸೀನಿಯರ್ ಗ್ರೂಪ್ ಪ್ರವೇಶ ದರ 200, ಜೂನಿಯರ್ ಗ್ರೂಪ್ 100, ಸೀನಿಯರ್ ಸಿಂಗಲ್ 100, ಸೀನಿಯರ್ ಸಿಂಗಲ್ 100 ಪ್ರವೇಶ ದರಗಳಿದ್ದು ತೀಪರ್ುಗಾರರ ಮತ್ತು ವ್ಯವಸ್ಥಾಪಕರ ತೀಮರ್ಾನವೇ ಅಂತಿಮ ತೀಮರ್ಾನವಾಗಿದೆ, ಹೆಚ್ಚಿನ ವಿವರಗಳಿಗಾಗಿ ಸಿ.ಎಸ್.ರೇಣುಕಮೂತರ್ಿ-9980163152, 9742796001, ಸಂಪಕರ್ಿಸಬಹುದಾಗಿದೆ.

Sunday, June 26, 2011



ಶಿಕ್ಷಣದ ಜೊತೆಗೆ ಕ್ರೀಡೆ ಕಡೆ ಮಕ್ಕಳು ಗಮನ ಹರಿಸಲಿಚಿಕ್ಕನಾಯಕನಹಳ್ಳಿ,ಜೂ.26 ; ಚಿಕ್ಕನಾಯಕನಹಳ್ಳಿ,ಜೂ.26 ; ವಿದ್ಯಾಥರ್ಿಗಳು ವಿದ್ಯಾಭ್ಯಾದ ಜೊತೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚು ಗಮನ ಹರಿಸುವಂತೆ ಶಿಕ್ಷಕ ಸದಾನಂದ ದೊಂಗ್ರೇ ಹೇಳಿದರು.ಪಟ್ಟಣದ ದೇಶೀಯ ವಿದ್ಯಾಪೀಠದ ಬಾಲಕಿಯರ ಪ್ರೌಡಶಾಲೆಯಲ್ಲಿ ನಡೆದ ಸೋದರಿ ಬಳಗ ಕ್ರೀಡಾ ಸಂಘ, ವಿಜ್ಞಾನ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ ವಿದ್ಯಾಥರ್ಿಗಳು ಶಿಕ್ಷಣ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಶಾರೀರಿಖವಾಗಿ, ಮಾನಸಿಕವಾಗಿ ಸದೃಡವಾಗುವ ಜೊತೆಗೆ ಮನಸ್ಸು ಉಲ್ಲಾಸವಾಗುವುದು ಎಂದರು.ಕಾರ್ಯಕ್ರಮದಲ್ಲಿ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜ್ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಶಿಸ್ತು ಸಮಿತಿ ಅಧ್ಯಕ್ಷ ಜಿ.ತಿಮ್ಮಯ್ಯ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸಿ.ಆರ್.ನಾಗಲಿಂಗಯ್ಯ, ದೈಹಿಕ ಶಿಕ್ಷಕ ನರಸಿಂಹಮೂತರ್ಿ, ರಾಮಸ್ವಾಮಿ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಈರಣ್ಣ ಸ್ವಾಗತಿಸಿ ನಿರೂಪಿಸಿದರು, ನಾಗೇಂದ್ರಪ್ಪ ವಂದಿಸಿದರು. ಶಿಕ್ಷಕ ಸದಾನಂದ ದೊಂಗ್ರೇ ಹೇಳಿದರು.ಪಟ್ಟಣದ ದೇಶೀಯ ವಿದ್ಯಾಪೀಠದ ಬಾಲಕಿಯರ ಪ್ರೌಡಶಾಲೆಯಲ್ಲಿ ನಡೆದ ಸೋದರಿ ಬಳಗ ಕ್ರೀಡಾ ಸಂಘ, ವಿಜ್ಞಾನ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ ವಿದ್ಯಾಥರ್ಿಗಳು ಶಿಕ್ಷಣ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಶಾರೀರಿಖವಾಗಿ, ಮಾನಸಿಕವಾಗಿ ಸದೃಡವಾಗುವ ಜೊತೆಗೆ ಮನಸ್ಸು ಉಲ್ಲಾಸವಾಗುವುದು ಎಂದರು.ಕಾರ್ಯಕ್ರಮದಲ್ಲಿ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜ್ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಶಿಸ್ತು ಸಮಿತಿ ಅಧ್ಯಕ್ಷ ಜಿ.ತಿಮ್ಮಯ್ಯ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸಿ.ಆರ್.ನಾಗಲಿಂಗಯ್ಯ, ದೈಹಿಕ ಶಿಕ್ಷಕ ನರಸಿಂಹಮೂತರ್ಿ, ರಾಮಸ್ವಾಮಿ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಈರಣ್ಣ ಸ್ವಾಗತಿಸಿ ನಿರೂಪಿಸಿದರು, ನಾಗೇಂದ್ರಪ್ಪ ವಂದಿಸಿದರು.

Saturday, June 25, 2011






ಹೋರಾಟಕ್ಕೆ ಸಂದ ಫಲ : ಜ.ಎಸ್.ಬಸವರಾಜು ಚಿಕ್ಕನಾಯಕನಹಳ್ಳಿ,1983ರಿಂದಲೂ ಕುಡಿಯುವ ನೀರಾವರಿಗಾಗಿ ಹೋರಾಟ ಮಾಡಿದ ಪರಿಣಾಮವಾಗಿ ಈಗ 102 ರೂ ಕೋಟಿಯನ್ನು ಸಕರ್ಾರ ಬಿಡುಗಡೆ ಮಾಡಿ ತಾಲ್ಲೂಕಿನ ಜನತೆಯ ನೀರಿನ ದಾಹ ನೀಗಿಸಿರುವುದು ಸಂತೋಷಕರ ವಿಷಯ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಪಟ್ಟಣದ ಬಿಜೆಪಿ ಕಾಯರ್ಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದಿನ ಸಕರ್ಾರವು ತಾಲ್ಲೂಕಿನ ಕುಡಿಯುವ ನೀರಿನ ಬವಣೆ ನೀಗಿಸುವ ಪ್ರಯತ್ನದಲ್ಲಿ ನಮ್ಮ ಸಕರ್ಾರ ಬರುವವರೆಗೂ ಸ್ಪಂದಿಸಿರಲಿಲ್ಲ ಈಗ ಜನರ ಸಮಸ್ಯೆಗೆ ಸ್ಪಂದಿಸಿರುವ ಮೂಲಕ ನಮ್ಮ ಪಕ್ಷ ಜನಪರ ಕಾಳಜಿ ಮೆರೆದಿದೆ ಎಂದರು. 102 ಕೋಟಿ ರೂಗಳ ಈ ಯೋಜನೆಯಲ್ಲಿ 3 ಕೆರೆಗಳಿಗೆ ಏತ ನೀರಾವರಿ ಮೂಲಕ ಹಾಗೂ 24 ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಯಲಿದೆ. ಈ ಸಾಲಿನ ಆಯವ್ಯಯದಲ್ಲಿ 35 ಕೋಟಿರೂ ತೆಗೆದಿರಿಸಲಾಗಿದೆ ಎಂದ ಅವರು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ರವರ ಬೆಂಬಲದಿಂದಲೂ, ಹಲವಾರು ಜನಪ್ರತಿನಿಧಿಗಳ ಹೋರಾಟದ ಫಲವಾಗಿ ತಾಲ್ಲೂಕಿನ ಬಹುತೇಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾದಂತಾಗಿದೆ ಈ ಯೋಜನೆಯಲ್ಲಿ ಶೆಟ್ಟಿಕೆರೆ ಕೆರೆಗೆ 71 ಎಂ.ಸಿ.ಎಫ್.ಟಿ ಪೆಮ್ಮಲದೇವರಹಳ್ಳಿ ಕೆರೆ 28 ಎಂ.ಸಿ.ಎಫ್.ಟಿ, ದಾಸಿಹಳ್ಳಿ ಕೆರೆ 6.5, ಚುಂಗನಹಳ್ಳಿ 11.5, ಕೊಡಲಾಗರಕೆರೆ 5.5, ಮಾರಸಂದ್ರ 1.9, ನವಿಲೆಕೆರೆ 6.5, ಅಣೆಕಟ್ಟೆಕೆರೆ 30, ದಬ್ಬೆಘಟ್ಟಕೆರೆ 2.3, ಚಿಕ್ಕನಾಯಕಹಳ್ಳಿಕೆರೆ 45, ಕಂದಿಕೆರೆ 100, ಕುಪ್ಪೂರು 18.2, ತಮ್ಮಡಿಹಳ್ಳಿಕೆರೆ 1.2, ತಿಮ್ಲಾಪುರಕೆರೆ 105, ಹುಳಿಯಾರು 99.5, ನಡುವನಹಳ್ಳಿ 9.78, ಜೆ.ಸಿ.ಪುರ 18.2, ಕಿಬ್ಬನಹಳ್ಳಿ ಮತ್ತು ಬಿಳಿಗೆರೆಗೆ 52. ಪಟ್ಟದೇವರಕೆರೆ 20 ರಷ್ಟು ನೀರನ್ನು ಹಾಯಿಸಲಾಗುವುದು ಎಂದರು. ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ಈ ಹಿಂದೆ ತಾಲ್ಲೂಕಿಗೆ ಭೇಟಿ ನೀಡಿ ಈ ಭಾಗದ ಜನರಿಗೆ ಮಾತು ಕೊಟ್ಟಂತೆ ಈ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಜನರ ನಂಬಿಕೆಗೆ ಪಾತ್ರರಾಗಿದ್ದಾರೆ, ಇವರಿಗೆ ಸಹಕರಿಸಿದ ಸಚಿವರಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ತಾಲ್ಲೂಕಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು. ಗೋಷ್ಠಿಯಲ್ಲಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ, ತಾಲ್ಲೂಕು ಬಿಜೆಪಿ ಕಾರ್ಯದಶರ್ಿ ಸುರೇಶ್ಹಳೇಮನೆ, ಬಸವರಾಜು, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ ಮುಖಂಡರಾದ ಶ್ರೀನಿವಾಸಮೂತರ್ಿ, ಮೈಸೂರಪ್ಪ, ಗಂಗಾಧರಯ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಕೆರೆಗಳಿಗೆ ನೀರು ಹಾಯಿಸಲು ರೈತರ ಸಹಕಾರ ಮುಖ್ಯಚಿಕ್ಕನಾಯಕನಹಳ್ಳಿ,; ತಾಲ್ಲೂಕಿನ 27 ಕೆರೆಗಳ ನೀರು ತುಂಬಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಮಂಜೂರಾತಿ ನೀಡಿದ್ದು, ಈ ಯೋಜನೆಯ ಶೀಘ್ರ ಕಾರ್ಯಗತಕ್ಕೆ ರೈತರ ಸಹಕಾರ ಮುಖ್ಯ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಯೋಜನೆ ಅನುಷ್ಠಾನ ಹಂತದಲ್ಲಿ ಕೆರೆಗಳಿಗೆ ಹರಿಯುವ ನೀರು ಕೆಲವು ಜಮೀನುಗಳ ಮೂಲಕ ಹರಿಯಲಿದೆ. ಇದಕ್ಕಾಗಿ ತಕರಾರು ಮಾಡದೆ ರೈತರು ತಮ್ಮ ಜಮೀನುಗಳನ್ನು ಬಿಟ್ಟು ಕೊಟ್ಟರೆ ಜಮೀನಿಗೆ ಸಕರ್ಾರ ತಕ್ಕ ಬೆಲೆ ನೀಡಿ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಿ ನೀರನ್ನು ಹರಿಸಲಿದೆ. ಆಯಾ ಭಾಗದ ರೈತರು ನಾಗರೀಕ ಸಮಿತಿ ರಚಿಸಿಕೊಂಡು ಜಮೀನುಗಳನ್ನು ಬಿಟ್ಟುಕೊಡುವಲ್ಲಿ ಈ ಯೋಜನೆಗೆ ಸಹಕರಿಸಬೇಕೆಂದು ವಿನಂತಿಸಿಕೊಂಡರು.ನೇತ್ರಾವತಿಯ ನದಿ ತಿರುವ ಯೋಜನೆಗೆ ತಾಂತ್ರಿಕ ಅನುಮತಿ ದೊರಕಿದ್ದು, ಯೋಜನೆಯ ಅನುಮೋದನೆಗೆ ಸಂಸತ್ನಲ್ಲಿ ಅಂಗೀಕಾರಕ್ಕಾಗಿ ಕಳಿಸಲಾಗಿದ್ದು, ಸುಮಾರು 13500 ಕೆರೆಗಳ ನೀರನ್ನು ಹರಿಸಲಾಗುವುದು.ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ತಾಲ್ಲೂಕು ನೀರಾವರಿ ಹೋರಾಟ ಸಮಿತಿಯ 35ವರ್ಷ ಹೋರಾಟವು ಈಗ ಫಲಿಸಿದ್ದು ಇದಕ್ಕಾಗಿ ಶ್ರಮಿಸಿದ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಸಂಸದರಿಗೆ ಅಭಿನಂದಿಸುತ್ತೇವೆ ಎಂದರು.ಗೋಷ್ಠಿಯಲ್ಲಿ ಕುಂದರಹಳ್ಳಿ ರಮೇಶ್, ಬಿ.ಎನ್.ಶಿವಪ್ರಕಾಶ್, ನಾರಾಯಣಗೌಡ, ಮಿಲ್ಟ್ರಿ ಶಿವಣ್ಣ, ಮುಂತಾದವರು ಉಪಸ್ಥಿತರಿದ್ದರು.

Thursday, June 23, 2011


ತಾಲ್ಲೂಕಿಗೆ ಹೇಮಾವತಿ ನೀರು ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಕಳೆದ ನಾಲ್ಕು ವರ್ಷಗಳ ಸತತ ಹೋರಾಟದ ಫಲವಾಗಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತಾಲ್ಲೂಕಿನ ಪೆಮ್ಮಲದೇವರ ಕೆರೆ, ಶೆಟ್ಟಿಕೆರೆ ಮೂಲಕ ಬೋರನಕಣಿವೆ ಜಲಾಶಯಕ್ಕೆ ಕುಡಿಯುವ ಯೋಜನೆಗೆ ಸಕರ್ಾರ ಅನುಮೋದನೆ ನೀಡಿ 102 ಕೋಟಿರೂಗಳ ಬಿಡುಗಡೆ ಮಾಡಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು.
ಗುರುವಾರ ಹುಳಿಯಾರು ಮೂಲಕ ಶೆಟ್ಟಿಕೆರೆಗೆ ಬೈಕ್ ರ್ಯಾಲಿಯಲ್ಲಿ ಆಗಮಿಸಿ ಪಟ್ಟಣದ ನೆಹರು ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ತಮ್ಮ ಸಂಭ್ರಮ ವ್ಯಕ್ತಪಡಿಸಿದುರು.
ನಂತರ ಮಾತನಾಡಿ ಎರಡು ತಿಂಗಳಲ್ಲಿ ಟೆಂಡರ್ ಕರೆದು ನವರಂಬರ್ ಡಿಸಂಬರ್ನಲ್ಲಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವ ಬಸವರಾಜು ಬೊಮ್ಮಾಯಿಯವರನ್ನು ಕೆರೆದು ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಮತ್ತು ಗೋಡೆಕೆರೆ ಹಾಗೂ ಜೆ.ಸಿ.ಪುರ ಭಾಗಕ್ಕೂ ಕುಡಿಯುವ ನೀರು ಹರಿಸಲು ಮಂಜೂರಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಹೆಚ್.ಬಿ.ಪಂಚಾಕ್ಷರಯ್ಯ, ತು.ಹಾ.ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ, ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ, ರಮೇಶ್,ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಪಟ್ಟಣ ಆಶ್ರಯ ಸಮಿತಿ ಗಂಗಾಧರಯ್ಯ, ಪುರಸಭಾ ನಾಮಿನಿ ಸದಸ್ಯರಾದ ಈಶ್ವರಭಾಗವತ್, ಲಕ್ಷ್ಮಯ್ಯ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು


ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಸಲಕರಣೆಗಳನ್ನು ಸಂಘ ಸಂಸ್ಥೆಗಳು ನೀಡಲಿ ; ಕ್ಯಾಪ್ಟನ್ ಸೋಮಶೇಖರ್
ಚಿಕ್ಕನಾಯಕನಹಳ್ಳಿ,ಜೂ.23 : ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಸಲಕರಣೆಗಳನ್ನು ಸಂಘ ಸಂಸ್ಥೆಗಳು ಒದಗಿಸುವ ಮೂಲಕ ಮಕ್ಕಳಿಗೆ ಶಿಕ್ಷಣಾಸಕ್ತಿಯನ್ನು ಹೆಚ್ಚಿಸಿ ಅವರ ಮಂದಿನ ಭವಿಷ್ಯವನ್ನು ಬೆಳಗುವಂತಹ ದಾರಿಯಲ್ಲಿ ಕರೆದೊಯ್ಯಬೇಕು ಎಂದು ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ಗೌರವಾಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಲಕ್ಷ್ಮೀದೇವಾಲಯ ಆವಣರಣದಲ್ಲಿ ಕುರುಬರ ಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಶಾಲೆಯ ಬಡವಿದ್ಯಾಥರ್ಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಿ ಮಾತನಾಡಿದ ಅವರು ಬಡತನ ರೇಖೆಯಲ್ಲಿರುವ ಮಕ್ಕಳೇ ಹೆಚ್ಚಾಗಿ ಸಕರ್ಾರಿ ಶಾಲೆಗೆ ಸೇರುವವರಿದ್ದು , ಅದರಲ್ಲೂ ಪುಸ್ತಕ ಲೇಖನ ಸಾಮಗ್ರಿ ಕೊಳ್ಳಲು ಆಗದಂತಹ ಕುಟುಂಬಗಳಿಗೆ ನಮ್ಮ ಸಂಘ ನೆರವಾಗಲಿದೆ ಅಂತಹ ವಿದ್ಯಾಥರ್ಿಗಳ ಬಗ್ಗೆ ಆ ಶಾಲೆಯ ಶಿಕ್ಷಕರು ಹೆಸರುಗಳನ್ನು ಸೂಚಿಸಿದರೆ ಬಡ ವಿದ್ಯಾಥರ್ಿಗಳಿಗೆೆ ಸಂಘದ ವತಿಯಿಂದ ಸೌಲಭ್ಯ ನೀಡುವ ಆಶಯ ವ್ಯಕ್ತಪಡಿಸಿ, ದೇಶ ಕಾಯುವಂತಹ ಸೇನೆಯಲ್ಲಿ ವಿದ್ಯಾಥರ್ಿಗಳು ಹೆಚ್ಚು ಆಸಕ್ತಿ ತೋರಿಸಬೇಕು ಎಂದ ಅವರು ನಾವು ಓದಿದ ಶಾಲೆಯಲ್ಲಿನ ವಿದ್ಯಾಥರ್ಿಗಳು ಮುಂದೆ ಉನ್ನತ ಹುದ್ದೆಗಳನ್ನು ಹೊಂದುವಂತಹ ಮಕ್ಕಳು ತಯಾರು ಆಗಲಿ ಎಂಬ ಉದ್ದೇಶದಿಂದ ಹಿರಿಯ ವಿದ್ಯಾಥರ್ಿಗಳ ಸಂಘ ಉದಯವಾಗಿರುವುದು, ಈ ಮೂಲಕ ಉತ್ತಮ ಸಮಾಜ ನಿಮರ್ಾಣಸಾದ್ಯ ಎಂಬ ಉದ್ದೆಶವನ್ನು ಸಂಘ ಹೊಂದಿದೆ ಎಂದರು.
ಹಿರಿಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಜಿ.ರಂಗಯ್ಯ ಮಾತನಾಡಿ ಶಿಕ್ಷಣ ಕಲಿಕೆಯಿಂದ ಮೇಲೆ ಬಂದ ವಿದ್ಯಾಥರ್ಿಗಳು ಉನ್ನತ ಸ್ಥಾನವನ್ನೇರಿದರೂ, ತಾವು ಓದಿದ ಶಾಲೆಯ ಮಕ್ಕಳಿಗೆ ಸೇವೆ ಮಾಡುವುದರ ಮೂಲಕ ಶಿಕ್ಷಣ ಕಲಿಯುವ ಮಕ್ಕಳಿಗೆ ಮಾದರಿಯಾಗಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಸುಧಾಕರ್ ಮಾತನಾಡಿ ಶಾಲಾ ಆವರಣ ಸ್ವಚ್ಛತೆಯಿಂದ ಕೂಡಿದ್ದು ಶಾಲಾ ಸಿಬ್ಬಂದಿಗಳಲ್ಲಿ ಹೊಂದಾಣಿಕೆಯಿದ್ದರೆ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದರು.
ಇ.ಸಿ.ಓ. ಅಧಿಕಾರಿ ಮರುಳಾನಾಯ್ಕ ಮಾತನಾಡಿ ಮಕ್ಕಳಿಗೆ ನಿರಂತರ ಬರವಣಿಗೆಯ ಅಭ್ಯಾಸವು ರೂಢಿಯಾದರೆ ಶಿಕ್ಷಣ ನಿರಗ್ರ್ರಳವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾಥರ್ಿಗಳ ಸಂಘದ ಕಾರ್ಯದಶರ್ಿ ಕೆ.ಜಿ.ರಾಜೀವಲೋಚನ, ಶಂಕರಪ್ಪ, ಮಿಲ್ಟ್ರಿ ಶಿವಣ್ಣ, ದುರ್ಗಯ್ಯ, ಮುಖ್ಯ ಶಿಕ್ಷಕಿ ಶಾಂತಮ್ಮ ಉಪಸ್ಥಿತರಿದ್ದರು.
ಲಾವಣ್ಯ ಸಂಗಡಿಗರು ಪ್ರಾಥರ್ಿಸಿದರು. ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿದರೆ ಶಾಂತದುರ್ಗಯ್ಯ ವಂದಿಸಿದರು.

ಕನ್ನಡ ಕಾರ್ಯಗಾರ ಮುಂದೂಡಿಕೆ
ಚಿಕ್ಕನಾಯಕನಹಳ್ಳಿ,ಜೂ.23 ; ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ಕಾರ್ಯಗಾರವನ್ನು ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯವಿರುವುದರಿಂದ ಕಾರ್ಯಗಾರವನ್ನು ಮುಂದೂಡಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ಕ್ಷೇತ್ರಶಿಕ್ಷಣಾಧಿಕಾರಿಗಳ ಕಾಯರ್ಾಲಯ ಹಾಗೂ ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಜೂನ್ 27ರ ಸೋಮವಾರ ಹುಳಿಯಾರಿನ ಟಿ.ಎಸ್.ಆರ್.ಎಸ್ ಪ್ರೌಡಶಾಲೆಯಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು, ಆದರೆ ಜೂನ್ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯ ಜೂನ್ 27ರಿಂದ ಆರಂಭಗೊಳ್ಳುವುದರ ಹಿನ್ನೆಲೆಯಲ್ಲಿ ಕಾರ್ಯಗಾರವನ್ನು ಮುಂದೂಡಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

Wednesday, June 22, 2011



ಡೇ ಹತ್ಯೆ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಲು ಒತ್ತಾಯ:ಚಿಕ್ಕನಾಯಕನಹಳ್ಳಿ,ಜೂ.22 : ಪ್ರಾಮಾಣಿಕವಾಗಿ ಸಮಾಜದ ಸೇವೆಯನ್ನು ನೆರವೇರಿಸುತ್ತಿದ್ದ ಪತ್ರಕರ್ತ ಜ್ಯೋತಿರ್ಮಯಿ ಡೇ ಯವರ ಹತ್ಯೆಯು ಹೇಯ ಕೃತ್ಯವಾಗಿದ್ದು, ಡೇಯವರ ಹತ್ಯೆಯ ಹಿಂದಿರುವ ಪಾತಕಿಗಳ ತನಿಖೆಯು ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ನಡೆದಿಲ್ಲದಿರುವುದರಿಂದ ತನಿಖೆಯನ್ನು ಸಿ.ಬಿ.ಐ ಗೆ ವಹಿಸಬೇಕೆಂದು ತಾಲ್ಲೂಕು ಪತ್ರಕರ್ತರ ಸಂಘ ಒತ್ತಾಯಿಸಿತು.ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪತ್ರಕರ್ತರ ಘಟಕದ ವತಿಯಿಂದ ಮುಂಬೈನ ಮಿಡ್ ಡೇ ಪತ್ರಿಕೆಯ ತನಿಖಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ಹಿರಿಯ ಪತ್ರಕರ್ತರಾದ ಜ್ಯೋತಿರ್ಮಯಿ ಡೇ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಸಮಾಜದಲ್ಲಿನ ನ್ಯೂನ್ಯತೆ, ಅನ್ಯಾಯ ಅಕ್ರಮ ಹಾಗೂ ಭ್ರಷ್ಠತೆಗಳ ಬಗ್ಗೆ ನಿರ್ಭಯವಾಗಿ ವರದಿ ಮಾಡುವಂತ ಪ್ರಾಮಾಣಿಕ ಪತ್ರಕರ್ತರಿಗೆ ಈ ದೇಶದಲ್ಲಿ ರಕ್ಷಣೆ ಇಲ್ಲದೇ ಹೋಗಿರುವುದು ಪ್ರಜಾತಂತ್ರದ ಅಣಕವಾಗಿದೆ, ಮುಂಬೈನ ಪಾತಕ ಜಗತ್ತಿನ ಕರಾಳತೆಯನ್ನು ಎರಡು ದಶಕಗಳಿಂದಲೂ ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಡೇ ರವರ ಜೀವಕ್ಕೆ ಅಪಾಯದ ಮುನ್ಸೂಚನೆ ಇದ್ದರೂ ಅಲ್ಲಿನ ಸಕರ್ಾರ ರಕ್ಷಣೆ ನೀಡುವಲ್ಲಿ ವಿಪಲವಾಗಿದೆ. ಜನಪ್ರತಿನಿಧಿ ಸಕರ್ಾರಗಳು ಇಂದು ಕೆಲವೊಂದು ಮಾಫಿಯಗಳ ಕಪಿಮುಷ್ಠಿಯ ನಿಯಂತ್ರದಲ್ಲಿರುವದರಿಂದ ಡೇ ಹತ್ಯೆ ತನಿಖೆ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ನಡೆದಿಲ್ಲ, ಭವಿಷ್ಯದಲ್ಲಿ ಪ್ರಾಮಾಣಿಕ ಪತ್ರಕರ್ತರು ಈ ದೇಶದಲ್ಲಿ ನಿಭರ್ೀತಿಯಿಂದ ಕಾರ್ಯ ನಿರ್ವಹಿಸಲು ಇಂತಹ ಘಟನೆಗಳು ದೃತಿಗೆಡೆಸಲಿವೆ, ಡೇ ಹತ್ಯೆ ಪ್ರಕರಣವನ್ನು ಸಿ.ಬಿ.ಐ ಗೆ ವಹಿಸುವ ಮೂಲಕ ಈ ಕೃತ್ಯದಲ್ಲಿ ಭಾಗಿಯಾಗಿರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ಪಾತಕಿಗಳನ್ನು ಮತ್ತು ಇವರೊಂದಿಗೆ ಶಾಮೀಲಾಗಿರುವ ಈ ದೇಶದ ದುಷ್ಠ ಶಕ್ತಿಗಳನ್ನು ಬಂಧಿಸುವ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸಕರ್ಾರಕ್ಕೆ ಈ ಮನವಿ ಮೂಲಕ ಒತ್ತಾಯಿಸುತ್ತೇವೆ ಎಂದ ಅವರು ಪ್ರಾಣಾಪಯವಿರುವ ಪತ್ರಕರ್ತರಿಗೆ ಸೂಕ್ತ ಭದ್ರತೆ, ಒದಗಿಸಬೇಕು ಎಂದರು.ಜನಪರ ವೇದಿಕೆ ಸಂಘಟನೆಯ ಸಂಚಾಲಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಅಂಗವಾಗಿರುವುದು ಪತ್ರಿಕಾ ರಂಗ, ಆ ಪತ್ರಿಕಾರಂಗದ ಮೂಲಕ ಸಮಾಜದ ಸೇವೆ ಸಲ್ಲಿಸುತ್ತಿದ್ದ ಡೇಯವರನ್ನು ಹಾಡುಹಗಲೇ ಬರ್ಬರ ಹತ್ಯೆ ಮಾಡಿರುವುದು ಸಂವಿಧಾನಕ್ಕೆ ತಂದಿರುವ ಕಪ್ಪುಚುಕ್ಕೆಯಾಗಿದ್ದು ಡೇಯವರ ಹತ್ಯೆಯು ಸಿ.ಬಿ.ಐಗೆ ವಹಿಸಬೇಕೆಂದು ಒತ್ತಾಯಿಸಿದ ಅವರು ಜನಪರ ವೇದಿಕೆ ಜನಪರ ಸಂಘಟನೆಗಳಿಗೆ ಒತ್ತು ನೀಡುತ್ತದೆ ಎಂದರು.ತಾ.ಪತ್ರಕರ್ತ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮಾತನಾಡಿ, ಪತ್ರಕರ್ತರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕಾಗಿರುವುದು ಸಕರ್ಾರಗಳ ಜವಬ್ದಾರಿ ಎಂದರು. ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ ಪತ್ರಿಕಾರಂಗದವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಲೇಖನ ಪ್ರಕಟಿಸಿದಾಗ ಅವರ ಪ್ರಾಣ ತೆಗೆಯುತ್ತಾರೆ ಎಂದ ಅವರು ಡೇಯವರ ಹತ್ಯೆ ಮಾಡಿರುವವರನ್ನು ಶೀಘ್ರ ಬಂಧಿಸಬೇಕು ಇಲ್ಲವಾದರೆ ಈ ಪ್ರತಿಭಟನೆಯು ಮುಂದೆ ಬೇರೆ ಹಾದಿ ತುಳಿಯುತ್ತದೆ ಎಂದರು.ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಪ್ರಸ್ತುತ ಮನವಿಯನ್ನು ಜಿಲ್ಲಾಧಿಕಾರಿಗರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದಶರ್ಿ ಚಿದಾನಂದ್, ಸಹ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಸಂಘದ ಜಿಲ್ಲಾ ಸದಸ್ಯರಾದ ರಂಗೇನಹಳ್ಳಿ ಮಹೇಶ್, ಸಿದ್ದರಾಮಣ್ಣ ಅಣೆಕಟ್ಟೆ, ಗೋವಿಂದರಾಜು, ಶಿವಣ್ಣ, ಕೋದಂಡರಾಮಯ್ಯ, ಕಿರಣ್ಕುಮಾರ್, ರವಿಕುಮಾರ್, ರಮೇಶ್, ಚೇತನ್ಪ್ರಸಾದ್ ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಮುಂತಾದವರು ಉಪಸ್ಥಿತರಿದ್ದರು.
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿ ನಿಲಯದ ಪ್ರವೇಶಕ್ಕೆ ಅಜರ್ಿ ಆಹ್ವಾನಚಿಕ್ಕನಾಯಕನಹಳ್ಳಿ,ಜೂ.22 : 2011-12ನೇ ಸಾಲಿಗೆ ತಾಲ್ಲೂಕಿನ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯಕ್ಕೆ ಪ್ರವೇಶಕ್ಕಾಗಿ ಅಜರ್ಿಯನ್ನು ಆಹ್ವಾನಿಸಲಾಗಿದೆ. ವಿದ್ಯಾಥರ್ಿ ನಿಲಯಕ್ಕೆ ಪ್ರವೇಶ ಪಡೆಯ ಬಯಸುವ ವಿದ್ಯಾಥರ್ಿಗಳು ಸಕರ್ಾರಿ ಅಂಗೀಕೃತ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋಸರ್ುಗಳಾದ ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ, ಎಂಬಿಬಿಎಸ್, ಡಿಪ್ಲಮೋ, ವೃತ್ತಿಶಿಕ್ಷಣ ಕೋರ್ಸಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಪ್ರವೇಶ ನೀಡಲಾಗುವುದು, ವಿದ್ಯಾಥರ್ಿನಿಲಯಗಳು ಇರುವ ಸ್ಥಳಗಳ ಕಾಲೇಜುಗಳಿಂದ 5ಕಿ.ಮೀ.ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾಥರ್ಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಸ್ಥಳೀಯ ವಿದ್ಯಾಥರ್ಿಗಳು ಪ್ರವೇಶಕ್ಕೆ ಅನರ್ಹರಾಗಿದ್ದು ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ವರ್ಗ 2ಎ. 2ಬಿ.3ಎ. ಮತ್ತು 3ಬಿ. ವರ್ಗಗಳ ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳ ಕುಟುಂಬದ ವಾಷರ್ಿಕ ವರಮಾನ ಮಿತಿ ರೂ 15.000/- ಹಾಗೂ ಪ್ರವರ್ಗ1, ಎಸ್ಸಿ, ಮತ್ತು ಎಸ್,ಟಿ, ವಿದ್ಯಾಥರ್ಿಗಳಿಗೆ ರೂ.50,920/-ಗಳನ್ನು ನಿಗಧಿಪಡಿಸಲಾಗಿದೆ. ವಿದ್ಯಾಥರ್ಿಯು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರದ್ದು ವಿದ್ಯಾಥರ್ಿನಿಲಯಕ್ಕೆ ಪ್ರವೇಶ ಬಯಸುವ ನವೀಕರಣ ಹಾಗೂ ಹೊಸವಿದ್ಯಾಥರ್ಿಗಳು ಅಜರ್ಿಯನ್ನು ಈ ಕಾಯರ್ಾಲಯದಿಂದ ಅಥವಾ ಸಂಬಂಧಿಸಿದ ವಿದ್ಯಾಥರ್ಿನಿಲಯದ ನಿಲಯಪಾಲಕರಿಂದ ಪಡೆದು ಜುಲೈ 19ರ ಸಂಜೆ 5.00 ಗಂಟೆಯೊಳಗಾಗಿ ಈ ಕಾಯರ್ಾಲಕ್ಕೆ ಅಥವಾ ಸಂಬಂಧಿಸಿದ ನಿಲಯ ಪಾಲಕರಿಗೆ ಸಲ್ಲಿಸತಕ್ಕದ್ದು.

Tuesday, June 21, 2011


ತಾಲ್ಲೂಕಿನ ಅಭಿವೃದ್ದಿಗಾಗಿ ವಿದೇಶಿ ಪ್ರವಾಸ : ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿ,ಜೂ.21: ದೇಶ ಸುತ್ತು ಇಲ್ಲ ಕೋಶ ಓದು ಎಂಬ ಗಾದೆಯಂತೆ ದೇಶಗಳ ಪ್ರವಾಸ ಮಾಡಿ ಅಲ್ಲಿನ ಜನತೆಯ ಶಿಕ್ಷಣ, ಆಥರ್ಿಕತೆಯಂತೆ ರಾಜ್ಯದ ಜನತೆಗೂ ತಿಳಿಸಲು ವಿದೇಶಿ ಪ್ರವಾಸ ಕೈಗೊಂಡು ಉತ್ತಮ ತರಬೇತಿ ಪಡೆದು ತಾಲ್ಲೂಕಿನ ಅಭಿವೃದ್ದಿಯತ್ತ ಮುನ್ನುಗ್ಗುತ್ತೇನೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಶಾಸಕರ ವಿದೇಶಿ ಪ್ರವಾಸ ಸುಗಮವಾಗಿ ಹಿಂತಿರುಗಲಿ ಎಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದ ಅಭಿವೃದ್ದಿಯ ಹಿತದೃಷ್ಠಿಯಿಂದ ವಿದೇಶ ಪ್ರವಾಸ ಕೈಗೊಂಡಿದ್ದೇವೆ, ರಾಜ್ಯದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ 20 ಜನರ ಸಮಿತಿ ಸದಸ್ಯರು ಈ ಪ್ರವಾಸ ಕೈಗೊಂಡಿದ್ದು, ಹಿಂದುಳಿದ ಜನರ ಅಭಿವೃದ್ದಿಗಾಗಿ ಪ್ರವಾಸದಲ್ಲಿ ಹಲವು ಕಾರ್ಯಗಳ ಬಗ್ಗೆ ತಿಳಿದುಕೊಳ್ಳಲಿದ್ದು ಹಣಕಾಸು ಯೋಜನೆಯಂತಹ ಉತ್ತಮ ಯೋಜನೆಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸಲು, ಮತ್ತು ರಾಜ್ಯದಲ್ಲಿರುವ ಹಲವಾರು ಯೋಜನೆಗಳು ವಿಫಲವಾಗುತ್ತಿರುವುದರಿಂದ ಅಲ್ಲಿನ, ತರಬೇತಿ ಪಡೆದು ಮಾಪರ್ಾಡು ಮಾಡುವಂತಹ ಚಿಂತನೆಯಿದ್ದು, ಮುಂದಿನ ದಿನಗಳಲ್ಲಿ ಈಗಿನ ವಿದ್ಯಾಥರ್ಿಗಳು ಇದರ ಬಗ್ಗೆ ಚಚರ್ಿಸಲಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕ ಕಣ್ಣಯ್ಯ ಮಾತನಾಡಿ ಶಾಸಕರ ಪ್ರವಾಸ 13ದಿನಗಳ ಪ್ರವಾಸವಾಗಿದ್ದು 5 ದಿನ ದೇಶದ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಪಂಜಾಬ್, ದೆಹಲಿ, ರಾಜಸ್ಥಾನ ಉಳಿದ 7 ದಿವಸ ದಕ್ಷಿಣಾ ಆಪ್ರಿಕ ದೇಶದ ಪ್ರವಾಸವಾಗಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಜಿ.ತಿಮ್ಮಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಶುಭಾಷಯ ಕೋರಿದರು.
ಸಮಾರಂಭದಲ್ಲಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ದೊರೆಮುದ್ದಯ್ಯ, ತಾ.ಪಂ.ಸದಸ್ಯೆ ಚೇತನಗಂಗಾಧರ್, ರವಿ, ಕೃಷ್ಣೆಗೌಡ ಉಪಸ್ಥಿತರಿದ್ದರು.

ವಿದ್ಯಾಥರ್ಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಜೂ.21: 2011-12ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಸಕರ್ಾರಿ ಕಾಲೇಜು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಬಾಲಕರ ವಿದ್ಯಾಥರ್ಿ ನಿಲಯದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶಕ್ಕಾಗಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಅರ್ಹ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಸಮಾಜಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಆಸಕ್ತ ವಿದ್ಯಾಥರ್ಿಗಳು ತಹಶೀಲ್ದಾರ್ರವರಿಂದ ಪಡೆದ ಪ್ರಸಕ್ತ ಸಾಲಿನ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಮತ್ತು ಹಿಂದಿನ ತರಗತಿಯಲ್ಲಿ ಉತ್ತೀರ್ಣವಾದ ಅಂಕಪಟ್ಟಿ ಹಾಗೂ ಇತ್ತೀಚಿನ ಪಾಸ್ ಪೋಟರ್್ ಸೈಜ್ 3ಭಾವಚಿತ್ರಗಳನ್ನು ಲಗತ್ತಿಸಿ ಸಲ್ಲಿಸುವುದು, ವಾಷರ್ಿಕ ಆದಾಯ ಮಿತಿ 1ಲಕ್ಷ ರೂ ಮೀರಿರುವರು ಹಾಗೂ ವಿದ್ಯಾಭ್ಯಾಸ ಕುಂಠಿತವಾಗಿರುವವರು ಅರ್ಹರಿರುವುದಿಲ್ಲ ಎಂದು ತಿಳಿಸಿರುವ ಅವರು ಭಾರತ ಸಕರ್ಾರದ ವಿದ್ಯಾಥರ್ಿ ವೇತನ ಪಡೆಯಲು ಅರ್ಹರಿರುವ ಪ.ಜಾತಿ ಮತ್ತು ಪ.ವರ್ಗದವರು ಮಾತ್ರ ಅಜರ್ಿ ಸಲ್ಲಿಸಬೇಕು, ಪ್ರವೇಶ ಪಡೆದ ವಿದ್ಯಾಥರ್ಿಗಳಿಗೆ ಊಟ, ತಿಂಡಿ, ವ್ಯವಸ್ಥೆಯನ್ನು ವಿದ್ಯಾಥರ್ಿ ನಿಲಯಕ್ಕೆ ದಾಖಲಾದ ವಿದ್ಯಾಥರ್ಿಗಳಿಗೆ ಮಂಜೂರು ಮಾಡಲಾದ ವಿದ್ಯಾಥರ್ಿ ವೇತನ ಮತ್ತು ಹೆಚ್ಚುವರಿ ಊಟ ಮತ್ತು ವಸತಿ ವೆಚ್ಚದಲ್ಲಿ ಭರಿಸಲಾಗುವುದು, ವಿದ್ಯಾಥರ್ಿ ನಿಲಯಕ್ಕೆ ಆಯ್ಕೆಯಾದ ವಿದ್ಯಾಥರ್ಿಗಳಿಗೆ ನಿಲಯದ ನಿಬಂಧನೆಗಳಿಗೆ ಒಳಪಡುವುದಾಗಿ ಮುಚ್ಚಳಿಕೆ ಪತ್ರವನ್ನು ದಾಖಲಾತಿ ಸಮಯದಲ್ಲಿ ನೀಡುವುದು, ಆಯ್ಕೆಯಾದ ವಿದ್ಯಾಥರ್ಿಗಳು ರೂ.100/-ಗಳ ಎಚ್ಚರಿಕೆ ಹಣ ಪಾವತಿಸಬೇಕು, ವ್ಯಾಸಾಂಗ ಮುಗಿದ ನಂತರ ಸದರಿ ಹಣವನ್ನು ವಾಪಸ್ ಮಾಡಲಾಗುವುದಿಲ್ಲ.
ನಿಗದಿತ ಅಜರ್ಿ ನಮೂನೆಗಳನ್ನು ಸಂಬಂಧಿಸಿದ ವಿದ್ಯಾಥರ್ಿನಿಲಯದಲ್ಲಿ ಅಥವಾ ಚಿ.ನಾ.ಹಳ್ಳಿ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿಗಳ ಕಛೇರಿರವರಿಂದ ಉಚಿತವಾಗಿ ಪಡೆದು ಜೂನ್ 30ರೊಳಗೆ ಸಲ್ಲಿಸುವುದು, ತಡವಾಗಿ ಬಂದ ಅಥವಾ ಅಪೂರ್ಣವಾದ ಅಜರ್ಿಗಳನ್ನು ಪರಿಗಣಿಸಲಾಗುವುದಿಲ್ಲ, ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿಗಳ ಕಛೇರಿಯನ್ನು ಸಂಪಕರ್ಿಸಬಹುದಾಗಿದೆ ಎಂದು ತಿಳಿಸಿದ್ದಾರೆ.


Monday, June 20, 2011







ಪುರಾತನ ದೇವಾಲಯಗಳ ಜೀಣರ್ೋದ್ದಾರಕ್ಕೆ, ಜಮೀನು ರಕ್ಷಣೆಗೆ ಕರವೇ ಒತ್ತಾಯಚಿಕ್ಕನಾಯಕಹಳ್ಳಿ,ಜೂ.20: ತಾಲ್ಲೂಕು ವ್ಯಾಪ್ತಿಯಲ್ಲಿರುವ ಮುಜುರಾಯಿ ಇಲಾಖೆಗೆ ಒಳಪಡುವ ಎಲ್ಲಾ ಪುರಾತನ ದೇವಾಲಯಗಳ ದುರಸ್ತಿಕಾರ್ಯ ಮಾಡಿಸುವುದು ಹಾಗೂ ದೇವಾಲಯಕ್ಕೆ ಸಂಬಂಧಿಸಿದಂತೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಬೇಕೆಂದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ತಹಶೀಲ್ದಾರ್ ಟಿ.ಸಿ.ಕಾಂತರಾಜುರವರಿಗೆ ಮನವಿ ಅಪರ್ಿಸಿದರು.ದೇವಾಲಯಕ್ಕೆ ಸಂಬಂಧಿಸಿದ ಜಮೀನು ಅಕ್ರಮವಾಗಿದ್ದರೆ ಸವರ್ೆ ಮಾಡಿಸಿ ದೇವಾಲಯದ ಮುಂದೆ ಜಮೀನಿನ ವಿವರದ ಫಲಕವನ್ನು ಹಾಕಿ ಮುಂದಾಗುವ ಅಕ್ರಮವನ್ನು ತಡೆಯಬೇಕೆಂದು ಹಾಗೂ ದೇವಾಲಯಗಳ ಜೀಣರ್ೋದ್ದಾರ ಮಾಡಿಸಬೇಕೆಂದು ಮನವಿ ಮಾಡಿದ್ದಾರೆ.





ಚಿತ್ರಕಲಾಸ್ಪಧರ್ೆಯಲ್ಲಿನವಿಜೇತರುಚಿಕ್ಕನಾಯಕನಹಳ್ಳಿ,





ಜೂ.20: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ 1ರಿಂದ 10ನೇ ತರಗತಿ ವರೆಗಿನ ಶಾಲೆಯ ವಿದ್ಯಾಥರ್ಿಗಳಿಗೆ ನಡೆದಿದ್ದ ಚಿತ್ರಕಲಾ ಸ್ಪಧರ್ೆಯಲ್ಲಿ 160ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು.ಸ್ಪೂತರ್ಿ ಸಾಂಸ್ಕೃತಿಕ ಸಂಘ, ವಾಸವಿ ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪಧರ್ೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ, ರೋಟರಿ ಶಾಲೆಯ ನೀತು ಚೌದರಿ, ದಿವ್ಯಪ್ರಭ ಶಾಲೆಯ ಎಂ.ಪ್ರಕೃತಿ, ರೋಟರಿ ಶಾಲೆಯ ಇಫರ್ಾನ್, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದಿವ್ಯಪ್ರಭ ಶಾಲೆಯ ಚಿ.ನಾ.ತಶ್ವೀನ್ ಸಿಂಹಾ, ರೋಟರಿ ಶಾಲೆಯ ಸಿ.ಎಸ್.ಭಾರತಿ, ಸಿ.ಲಾವಣ್ಯ, ಪ್ರೌಡಶಾಲಾ ವಿಭಾಗದಲ್ಲಿ ಬಳ್ಳೆಕಟ್ಟೆ ವಿದ್ಯಾವಾರಿದಿ ಶಾಲೆಯ ಪ್ರಜ್ವಲ್ ಪಿ.ಶೆಟ್ಟಿ, ರೋಟರಿ ಶಾಲೆಯ ವಿನಯ್ಕುಮಾರ್, ಎಸ್.ದೀಪಕ್ ಸ್ಪಧರ್ೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.