Wednesday, May 13, 2015

ೆಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೆ ಪ್ರಥಮ ಚಿಕ್ಕನಾಯಕನಹಳ್ಳಿ ವಿದ್ಯಾಥರ್ಿನಿ ಎಂ.ಆರ್.ಧೃವಿಕ
                                                                       ಚಿತ್ರ ಶೀಷರ್ಿಕೆ :
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೊರಾಜರ್ಿ ಶಾಲೆಯ ವಿದ್ಯಾಥರ್ಿನಿ ಎಂ.ಆರ್.ಧೃವಿಕ 619 ಅಂಕಗಳಿಸಿ ಜಿಲ್ಲೆಗೆ ಪ್ರಥಮರೆನಿಸಿದ್ದಾರೆ. ಚಿತ್ರದಲ್ಲಿ ವಿದ್ಯಾಥರ್ಿನಿ ತಾಯಿ ನಾಗಮಣಿ, ಶಾಲೆಯ ಪ್ರಾಂಶುಪಾಲ ಸತೀಶ್ ಇದ್ದಾರೆ.

ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಮೊರಾಜರ್ಿ ದೇಸಾಯಿ ವಸತಿ ನಿಲಯದ ವಿದ್ಯಾಥರ್ಿನಿ ಎಂ.ಆರ್.ಧೃವಿಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಂ.ಆರ್.ಧೃವಿಕ ಎಸ್.ಎಸ್ಎಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ 124, ಇಂಗ್ಲೀಷ್ 98, ಹಿಂದಿ 99, ಗಣಿತ 100, ವಿಜ್ಞಾನ 99, ಸಮಾಜವಿಜ್ಞಾನ 99 ಅಂಕಗಳನ್ನು ಪಡೆದು ಎ+ ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ. ಎಂ.ಆರ್.ಧೃವಿಕ ಕೃಷಿ ಕುಟುಂಬದ ತಂದೆ ಎಚ್.ರಂಗನಾಥಸ್ವಾಮಿ, ತಾಯಿ ನಾಗಮಣಿ ಮಗಳಾಗಿದ್ದಾರೆ. ವಿದ್ಯಾಥರ್ಿನಿ ಎಂ.ಆರ್.ಧೃವಿಕ ಪಠ್ಯಪುಸ್ತಕ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಶ್ರದ್ದೆಯಿಂದ ಕಲಿತಿದ್ದು ಓಸ್ವಾಲ್ ಪ್ರಶ್ನೆಪುಸ್ತಕವನ್ನು ನಿತ್ಯ ನೋಡುವ ಅಭ್ಯಾಸ ಮಾಡಿಕೊಂಡಿದ್ದೆ, ಶಾಲೆಯಲ್ಲಿ ನೀಡುವ ಪ್ರಶ್ನೆಪತ್ರಿಕೆಯನ್ನು ಚಾಚೂ ತಪ್ಪದೆ ಬರೆಯುತ್ತಿದ್ದೆ ಎಂದರಲ್ಲದೆ ಮುಂದೆ ಐ.ಎ.ಎಸ್ ಮಾಡುವ ಬಯಕೆಯಿದೆ ಎಂದರು.
ಪ್ರಾಂಶುಪಾಲ ಸತೀಶ್ ಮಾತನಾಡಿ, ಎಂ.ಆರ್.ಧೃವಿಕ ಪ್ರತಿಭಾನ್ವಿತ ವಿದ್ಯಾಥರ್ಿನಿಯಾಗಿದ್ದರು. ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು ಶಿಕ್ಷಕರು ವಿದ್ಯಾಥರ್ಿಗಳಿಗೆ ಮೂರು ತಿಂಗಳ ಮುಂಚೆಯೇ ಪರೀಕ್ಷೆಯ ಬಗ್ಗೆ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾಥರ್ಿಗಳಿಗೆ ತಯಾರಿ ನಡೆಸಿದ್ದರು ಹಾಗೂ ಪರೀಕ್ಷೆಯಲ್ಲಿ ಬರೆಯಲು ವಿದ್ಯಾಥರ್ಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದರು. ಈ ಕಾರಣದಿಂದಲೇ ಧೃವಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಲು ಕಾರಣ ಹಾಗೂ ಶಾಲೆಯ ಎಲ್ಲಾ ವಿದ್ಯಾಥರ್ಿಗಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬರಲು ಸಾಧ್ಯವಾಯಿತು ಎಂದರು.
ಮೊರಾಜರ್ಿ ದೇಸಾಯಿ  ಶಾಲೆಯಿಂದ 47 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು ಎಂ.ಎಆರ್.ಧೃವಿಕ 619, ಪ್ರೀತಿ 600, ಕಾವ್ಯ 576, ಮಧುಶ್ರೀ 574, ಭಾಸ್ಕರ್ ಡಿ.ಎಸ್.569, ಸುಕ್ಷಿತ್ 563, ಅಂಕ ಹಾಗೂ 10 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ, 26 ಮಕ್ಕಳು ಪ್ರಥಮ ದಜರ್ೆಯಲ್ಲಿ, 5 ಮಕ್ಕಳು ದ್ವಿತಿಯ ದಜರ್ೆಯಲ್ಲಿ ಪಾಸಾಗುವ ಮೂಲಕ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದರು.
 
ರೋಟರಿ ಶಾಲೆಯ ವಿದ್ಯಾಥರ್ಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕ
ಚಿಕ್ಕನಾಯಕನಹಳ್ಳಿ,ಮೇ.13 : ನಿರೀಕ್ಷಯಂತೆ ಅಂಕ ಬಂದಿರುವುದು ಸಂತಸ ತಂದಿದೆ, ಈ ನಿಟ್ಟಿನಲ್ಲೇ ಮುಂದೆ ಡಾಕ್ಟರ್ ಆಗುವ ನಿರೀಕ್ಷೆಯಿದೆ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 611 ಅಂಕ ಪಡೆದಿರುವ ಸಿ.ವಿ.ದಶರ್ಿನಿ ಹೇಳಿದರು.
ಪಟ್ಟಣದ ರೋಟರಿ ಶಾಲೆಯ ವಿದ್ಯಾಥರ್ಿನಿ ಸಿ.ವಿ.ದಶರ್ಿನಿ ಮಾತನಾಡಿ, ತಂದೆ ತಾಯಿಯ ಕನಸು ನನಸು ಮಾಡುವುದು ನನ್ನ ಧ್ಯೇಯ, ತಂದೆ ವಕೀಲರಾದ ವೆಂಕಟೇಶ್, ತಾಯಿ ಲಕ್ಷ್ಮೀಲತಾ ಇವರು ಕೃಷಿ ಕುಟುಂಬದಿಂದ ಬಂದವರಾಗಿದ್ದು ಮಗಳ ಯಶಸ್ಸಿಗೆ ಸಂತಸ ಹಂಚಿಕೊಂಡರು.
ಗಣಿತದಲ್ಲಿ 100ಕ್ಕೆ 100 ಅಂಕಗಳಿಸಿದರೆ, ಕನ್ನಡದಲ್ಲಿ 122, ಇಂಗ್ಲೀಷ್ 97, ಹಿಂದಿ 98, ವಿಜ್ಞಾನ 97, ಸಮಾಜ 97, ಪಡೆದು ಒಟ್ಟು 611 ಅಂಕ ಪಡೆದು ಶೇ.97ರಷ್ಟು ಅಂಕ ಪಡೆದಿದ್ದಾರೆ.


ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರೋಟರಿ ಶಾಲೆಗೆ 100% ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.13 : ಪಟ್ಟಣದ ರೋಟರಿ ಆಂಗ್ಲ ಪ್ರೌಢಶಾಲೆಯ ವಿದ್ಯಾಥರ್ಿ ಮೋಹಿತ್.ಎಸ್. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರೋಟರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 55 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು ಅತ್ಯುನ್ನತ ಶ್ರೇಣಿಯಲ್ಲಿ 15 ವಿದ್ಯಾಥರ್ಿಗಳು, ಪ್ರಥಮ ದಜರ್ೆಯಲ್ಲಿ 40 ವಿದ್ಯಾಥರ್ಿಗಳು ಪಾಸಾಗಿದ್ದಾರೆ, ಶೇ.100 ರಷ್ಟು ಫಲಿತಾಂಶ ಬಂದಿದೆ. 
1) ಎಸ್.ಮೋಹಿತ್ 619.(ಶೇ.99.4,) 2) ದಶರ್ಿನಿ 611.(97.11), ಜಿ.ಕೆ.ಸಂದೀಪ್606(96.96), ಬಿಂದುರಾಜಶೇಖರ್ 597(95.52), ದೊರೈರಾಜ್588(94.08), ಬಿ.ಎಸ್.ಚೇತನ 577(92.32), ಸಹನ ಸಿ.ಎಸ್(577(92.32), ಪಾವನಗಂಗ 576(92.16), ಕೆ.ಆರ್.ಶ್ರೀಲಕ್ಷ್ಮೀ 573(91.68), ಹೆಚ್.ಬಿ.ಯಶವಂತ್573(91.68), ಟಿ.ವಿನಯ್568(90.88), ಆಶಾ.ಕೆ.ಎಸ್567(90.72), ಸಹನ.ಕೆ.566(90.56), ಮಧು.ಬಿ.ಎನ್.565(90.40), ಸುಪ್ರಿತ.ಸಿ.565(90.40) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
(1ರಿಂದ 15ರವರೆಗಿನ ಪೋಟೋಗಳು).
ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು.


















Tuesday, May 5, 2015


ಕಟ್ಟಡ ಕಾಮರ್ಿಕರ ನೂತನ ಸಂಘ ಉದ್ಘಾಟನೆ
ಚಿಕ್ಕನಾಯಕನಹಳ್ಳಿ : ಕಟ್ಟಡ ಕಾಮರ್ಿಕರ ಬಗ್ಗೆ ಸಂಸತ್ತಿನಲ್ಲಾಗಲಿ, ವಿಧಾನಸಭೆಯಲ್ಲಾಗಲಿ, ಜಿ.ಪಂ.ಸಭೆಯಲ್ಲಾಗಲಿ, ಯಾರು ಪ್ರಸ್ತಾಪಿಸದೇ ಇರುವುದು ದುರದೃಷ್ಠಕರ ಎಂದು ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘದ ತುಮಕೂರು ಜಿಲ್ಲಾ ಖಜಾಂಚಿ ಅಶ್ವತ್ಥ್ನಾರಾಯಣ್ ವಿಷಾಧಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ದೇವಾಲಯದ ಬಳಿ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘದ ನೂತನ ಶಾಖಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿಧಾನಸಭಾ ಸದಸ್ಯರು ತಮ್ಮ ಸಂಬಳ ಸಾರಿಗೆ ವ್ಯವಸ್ಥೆಗೆ 8 ನಿಮಿಷಗಳಲ್ಲಿ ಹೆಚ್ಚಿಸಿಕೊಂಡರು. ಆದರೆ ಅಸಂಘಟಿತ ಕಾಮರ್ಿಕರ ಬಗ್ಗೆ ಗಮನ ಹರಿಸಲಿಲ್ಲ ಎಂದು ವಿಷಾಧಿಸಿದ ಅವರು ಸಕರ್ಾರ ಪ್ರತಿ ಕಟ್ಟಡ ಕಟ್ಟುವವ ಶೇ.1ರಷ್ಟು ಸೆಸ್ ವಸೂಲಿ ಮಾಡುತ್ತಿದ್ದು, ಈ ಹಣ 3280 ಕೋಟಿ ರೂಪಾಯಿಗಳಾಷ್ಟಾಗಿದೆ ಆದರೆ ಕಾಮರ್ಿಕರಿಗೆ ಮಾತ್ರ ಸರಿಯಾದ ಸವಲತ್ತುಗಳು ನೀಡುತ್ತಿಲ್ಲ ಎಂದ ಅವರು ಕೇಂದ್ರ ಸಕರ್ಾರ ಬಂಡವಾಳ ಶಾಹಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆಯನ್ನು ಮನ್ನ ಮಾಡುತ್ತಿದ್ದಾರೆ, ಈಗಿನ ಕೇಂದ್ರ ಸಕರ್ಾರ ಅಭಿವೃದ್ದಿಯ ಹೆಸರಿನಲ್ಲಿ ರೈತರಿಂದ ಜಮೀನುಗಳನ್ನು ವಶಪಡಿಸಿಕೊಂಡು ರೈತರಿಗೆ ವಂಚಿಸುತ್ತಿದ್ದಾರೆಂದು ಹೇಳಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್ ಮಾತನಾಡಿ, ದೇಶದ ಕಟ್ಟಡದ ಕಾಮರ್ಿಕರು  5ಕೋಟಿ ಜನರಿದ್ದು ರಾಜ್ಯದಲ್ಲಿ 25ಲಕ್ಷ ಕಾಮರ್ಿಕರಿದ್ದಾರೆ, ಸಂಸತ್ತಿನ ಪಾಲರ್ಿಮೆಂಟ್, ವಿಧಾನಸೌದ ಸಕರ್ಾರಿ ಕಛೇರಿಗಳು ಸೇರಿದ್ದು ನಾನಾ ಕಟ್ಟಡಗಳು ಕಾಮರ್ಿಕರೇ ಕಟ್ಟಿದ್ದಾರೆ ಆದರೆ ಅವರಿಗೆ ಸವಲತ್ತುಗಳನ್ನು ನೀಡುತ್ತಿದೆ, ಸಕರ್ಾರಿ ನೌಕರರಿಗೆ ಕಂಪನಿಗಳ ಕಾಮರ್ಿಕರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು ಅಸಂಘಟಿತ ಕಾಮರ್ಿಕರಿಗೆ ಸವಲತ್ತು ನೀಡುತ್ತಿಲ್ಲ ಎಂದ ಅವರು ರಾಜ್ಯದಲ್ಲಿ 7.45ಲಕ್ಷ ಕಾಮರ್ಿಕರು ನೊಂದಣಿ ಮಾಡಿಸಿಕೊಂಡಿದ್ದಾರೆ ಆದ್ದರಿಂದ ಪ್ರತಿಯೊಬ್ಬ ಕಾಮರ್ಿಕರೂ ಕಾಮರ್ಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಳ್ಳುವ ಮೂಲಕ ಸಕರ್ಾರದ ನಾನಾ ಸವಲತ್ತುಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಮರ್ಿಕರು ಮೋಟಾರ್ ಬೈಕ್ ಜಾಥಾವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಮಹಮದ್ಖಲಂದರ್ ಮತ್ತಿತರರು ಉಪಸ್ಥಿತರಿದ್ದರು.





ಕನ್ನಡ ಸಾಹಿತ್ಯ ಪರಿಷತ್ ಆರಂಭಗೊಂಡು ನೂರವಸಂತಗಳು 
ಚಿಕ್ಕನಾಯಕನಹಳ್ಳಿ : ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಲು ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ಇಂದಿಗೆ ನೂರು ವಸಂತಗಳು ತುಂಬುತ್ತಿರುವುದರಲ್ಲಿ ಹಲವರ ಶ್ರಮವಿದೆ ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಆರಂಭವಾಗಿ ನೂರು ವಸಂತಗಳು ತುಂಬಿದ ಹಿನ್ನಲೆಯಲ್ಲಿ ಪಟ್ಟಣದ ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಕಟ್ಟಡ ಕಟ್ಟುವ ಹಾಗೂ ಕೂಲಿ ಕಾಮರ್ಿಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ನೂರರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತನ್ನದೇ ಆದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಆರಂಭವಾಯಿತು ಅಂದಿನಿಂದ ಇಂದಿನವರೆಗೂ ಸಾಹಿತ್ಯ ಪರಿಷತ್ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಕನ್ನಡ ಮನಸ್ಸುಗಳನ್ನು ಕಟ್ಟುತ್ತಿದೆ ಎಂದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ, ಕನ್ನಡ ಮನಸ್ಸುಗಳು ಹಾಗೂ ಪಟ್ಟಣದ ಸಂಘಟನೆಗಳು ಕನ್ನಡ ಸಾಹಿತ್ಯ ಪರಿಷತ್ನ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ  ಕಾರ್ಯಕ್ರಮ ಹಮ್ಮಿಕೊಂಡಿರುವುದು ಕನ್ನಡದ ಬಗ್ಗೆ ಇರುವ ಅಭಿಮಾನವಾಗಿದೆ, ಕೇಂದ್ರ ಸಕರ್ಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ ಎಂದರಲ್ಲದೆ ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಹಾಗೂ ಕನ್ನಡ ಕಾರ್ಯಕ್ಕೆ ನಾವೆಲ್ಲರೂ ಒಟ್ಟುಗೂಡಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ಜಯಲಕ್ಷ್ಮಮ್ಮ, ಸಿದ್ದಲಿಂಗಮ್ಮ, ಜಯರಾಮ್, ಸಿ.ಡಿ.ಚಂದ್ರಶೇಖರ್, ಪಾರ್ಥಸಾರಥಿರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಂತರ ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ, ದಲಿತ ಸಂಘರ್ಷ ಸಮಿತಿ, ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಸಂಘ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಯಕನರ್ಾಟಕ ವೇದಿಕೆ, ಭೋದಿವೃಕ್ಷ, ಚಿಕ್ಕನಾಯಕ ಯೂತ್ ಕ್ಲಬ್, ಸ್ನೇಹಕೂಟ, ನಡೆನುಡಿ, ಕುಂಚಾಂಕುರ ಕಲಾಸಂಘ, ಭುವನೇಶ್ವರಿ ಸಂಘ, ಆಟೋಚಾಲಕರ, ಕಟ್ಟಡ ಕಟ್ಟುವ ಹಾಗೂ ಕೂಲಿ ಕಾಮರ್ಿಕರ ಸಂಘ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಕನ್ನಡ ಬಾವುಟದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸಿದ್ದುಜಿ.ಕೆರೆ, ನಿರೂಪ್ರಾವತ್, ಮಂಜುನಾಥ್, ರವಿಕುಮಾರ್, ಜಯಮ್ಮ, ಗೋವಿಂದರಾಜು, ಲಿಂಗದೇವರು, ಬಸವರಾಜು, ನಂಜುಂಡಪ್ಪ, ಸುಪ್ರಿಂಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.




ಟಿ.ಎ.ಪಿ.ಸಿ.ಎಂ.ಎಸ್ನ ಆಡಳಿತ ಮಂಡಳಿಗೆ  ಎಂಟು ಜನ ಅವಿರೋಧವಾಗಿ ಆಯ್ಕೆ ಇನ್ನೆರಡು ಸ್ಥಾನಕ್ಕೆ ಐದು ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಮೇ.5: ಟಿ.ಎ.ಪಿ.ಸಿ.ಎಂ.ಎಸ್ನ ಆಡಳಿತ ಮಂಡಳಿಗೆ 10 ಜನ ಚುನಾಯಿತ ನಿದರ್ೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದ್ದು ಇದರಲ್ಲಿ ಎಂಟು ಜನ ಅವಿರೋಧವಾಗಿ ಆಯ್ಕೆಯಾದರೆ ಎನ್ನೆರಡು ಸ್ಥಾನಕ್ಕೆ ಐದು ಜನ ಕಣದಲ್ಲಿದ್ದಾರೆ.
ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ (ಟಿ.ಎ.ಪಿ.ಸಿ.ಎಂ.ಎಸ್)ಕ್ಕೆ ಎ ವರ್ಗದಿಂದ ಅವಿರೋಧವಾಗಿ ಆಯ್ಕೆಯಾದವರೆಂದರೆ, ಷಡಾಕ್ಷರಿ ಮಾಳಿಗೆಹಳ್ಳಿ, ಜಯದೇವಮೂತರ್ಿ ತೀರ್ಥಪುರ, ಲಿಂಗದರಾಜು ಹಂದನಕೆರೆ, ಜಯದೇವಪ್ಪ ಗಾಣಧಾಳು, ವಕೀಲ ಎನ್.ಎನ್.ಶ್ರೀಧರ್ ವಿವಿಧ ವಿ.ಎಸ್.ಎಸ್.ಎನ್.ಸೊಸೈಟಿಗಳನ್ನು ಪ್ರತಿನಿಧಿಸಿದ್ದಾರೆ, ಮೀಸಲು ಕ್ಷೇತ್ರದಿಂದ ಶಶಿಶೇಖರ್, ಮಹಿಳಾ ಕ್ಷೇತ್ರದಿಂದ ಮಂಜುಳ ನಾಗರಾಜ್ ಗೋಪಾಲನಹಳ್ಳಿ, ಕಲ್ಪನಾ ರಾಮಲಿಂಗಯ್ಯ ಮಾರಸಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿ.ಸಿ.ಎಂ.ನ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಎರಡು ಸ್ಥಾನಕ್ಕೆ ಎರಡು ಸಾವಿರ ಷೇರುದಾರರು ಮತಚಲಾಯಿಸಬೇಕಿದೆ.
ಟಿ.ಎ.ಪಿ.ಸಿ.ಎಂ.ಎಸ್.ಗೆ ಒಟ್ಟು 13 ಜನ ನಿದರ್ೇಶಕರಿದ್ದು, ಇದರಲ್ಲಿ 10 ಜನ ಚುನಾವಣೆ ಮೂಲಕ ಆಯ್ಕೆಯಾದರೆ ಇಬ್ಬರು ಅಧಿಕಾರಿ ವರ್ಗದಿಂದ ನಿದರ್ೇಶಕರಾಗಿ ನಿಯೋಜನೆಗೊಳ್ಳುವರು, ಒಬ್ಬರು ಸಕರ್ಾರದಿಂದ ನೇಮಕಗೊಳ್ಳುವರು.




ಚಿಕ್ಕನಾಯಕನಹಳ್ಳಿ ಬಿಜೆಪಿ ಪಕ್ಷದ ವತಿಯಿಂದ ನೇಪಾಳ ಸಂತ್ರಸ್ಥರಿಗಾಗಿ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು. ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಬುಳ್ಳೇನಹಳ್ಳಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.


Saturday, May 2, 2015


ವಕೀಲರ ಸಂಘದ ನೂತನ ಅಧ್ಯಕ್ಷರ ಆಯ್ಕೆ
ಚಿಕ್ಕನಾಯಕನಹಳ್ಳಿ, : ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆರ್.ಕರಿಯಪ್ಪ, ಕಾರ್ಯದಶರ್ಿಯಾಗಿ ಬಿ.ಜಿ.ಆದರ್ಶ,ಉಪಾಧ್ಯಕ್ಷರಾಗಿ ಸಿ.ರಾಜಶೇಖರ್ ಸಹಕಾರ್ಯದಶರ್ಿಯಾಗಿ ಟಿ.ರವೀಂದ್ರಕುಮಾರ್, ಖಜಾಂಚಿಯಾಗಿ ಮೋಹನ್ಪೃಥ್ವಿಪ್ರಸಾದ್ ಆಯ್ಕೆಯಾಗಿದ್ದಾರೆ.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ
ಚಿಕ್ಕನಾಯಕನಹಳ್ಳಿ : ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ, ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸುಕರಾಗಿರುವುದನ್ನು ಸ್ವಾಗತಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಗೋ.ನಿ.ವಸಂತ್ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಪರಿಶಿಷ್ಠ ಜಾತಿಯಲ್ಲಿನ ಶೇಕಡಾ 15ರ ಮೀಸಲಾತಿಯನ್ನು ಸಂವಿಧಾನದತ್ತವಾಗಿ, ಜನಸಂಖ್ಯಾ ಆಧಾರಿತವಾಗಿ ಪರಿಶಿಷ್ಠ ಜಾತಿಯ ಒಳಗಿನ ಮಾದಿಗರಿಗೆ ಶೇ.6%, ಛಲವಾಧಿಗಳಿಗೆ ಶೇ.5%, ಉಳಿದ ಇತರೆಯವರಿಗೆ ಶೇ.3% ಹಾಗೂ ಅಲೆಮಾರಿಗಳಿಗೆ ಶೇ.1% ಒಳ ಮೀಸಲಾತಿಯಲ್ಲಿ ವಗರ್ೀಕರಣ ಮಾಡಿ ಸಕರ್ಾರಕ್ಕೆ ಶಿಫಾರಸ್ಸು ಮಾಡಿದ್ದು, ಅಸ್ಪೃಶ್ಯತೆಯ ಅಸಮಾನತೆಯ ಬದುಕನ್ನು ಸವೆಸುತ್ತಿರುವ ಮಾದಿಗರು ಮತ್ತು ಛಲವಾದಿ(ಹೊಲೆಯ) ಸಮುದಾಯಗಳಿಗೆ ನ್ಯಾ.ಸದಾಶಿವ ವರದಿ ಜಾರಿಗೊಂಡರೆ ಈ ಸಮುದಾಯಗಳು ಸಾಮಾಜಿಕ ಮುಖ್ಯ ವಾಹಿನಿಗೆ ಬರಲು ಸಹಾಯಕವಾಗುತ್ತದೆ ತಕ್ಷಣ ಸದಾಶಿವ ವರದಿ ಜಾರಿಯಾಗಬೇಕೆಂದು ಒತ್ತಾಯಿಸಿ, ದಲಿತ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಸಿ.ಎಸ್.ಲಿಂಗದೇವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಂಡ ನಿವಾಸಿಗಳಿಗೆ ದುಶ್ಚಟಗಳಿಂದ ದೂರವಿರಲು
                                                          
ಜಾಗೃತಿ ಶಿಬಿರ
                             

ಚಿಕ್ಕನಾಯಕನಹಳ್ಳಿಮೇ.02 : ಯುವಕ, ಯುವತಿಯರು ಮಧ್ಯಪಾನ, ಬೀಡಿ ಸಿಗರೇಟು, ಗುಟುಕದಂತಹ ದುಷ್ಚಟಗಳಿಗೆ ಒಳಗಾಗುವುದರಿಂದ ಅವರ ಆರೋಗ್ಯದ ಮೇಲೆ ಬೀರುವ ದುಷ್ಪಣಾಮದ ಬಗ್ಗೆ ತಾಂಡ ನಿವಾಸಿಗಳಿಗೆ ಅರಿವು, ಜಾಗೃತಿ ಮೂಡಿಸಲು ಶ್ರೀ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನರ್ಾಟಕ ಸಕರ್ಾರದ, ಕನರ್ಾಟಕ ತಾಂಡಾ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದ್ದು ಕನರ್ಾಟಕದಲ್ಲಿರುವ ವಿವಿಧ ತಾಂಡಗಳಿಗೆ ಮತ್ತು ತಾಂಡ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮದ ಪ್ರಯುಕ್ತ ತಾಲ್ಲೂಕಿನ ಬರಗೂರು ಗ್ರಾಮ ಪಂಚಾಯಿತಿಗೆ ಸೇರಿದ ಟಿ.ತಾಂಡಾ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥಯ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನರ್ಾಟಕದ ತಾಂಡಾ ಅಭಿವೃದ್ದಿ ನಿಗಮದಿಂದ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳು, ತಾಂಡದಲ್ಲಿ ಸಿ.ಸಿ.ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರು, ಬೀದಿ ದೀಪಗಳು, ವಿದ್ಯುತ್ ಸಂಪರ್ಕ, ಬಸ್ ನಿಲುಗಡೆ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಆರೋಗ್ಯ ಮತ್ತು ಶೈಕ್ಷಣಿಕ ಮೂಲ ಸೌಕರ್ಯ ಯೋಜನೆಗಳು ಆರೋಗ್ಯ ಕೇಂದ್ರಗಳು, ಆರೋಗ್ಯ ತಪಾಸಣಾ ಶಿಬಿರ ಮತ್ತು ಶೈಕ್ಷಣಿಕವಾಗಿ ಅಂಗನವಾಡಿ ಕೇಂದ್ರ ಮತ್ತು ಖುತುಮಾನ ಶಾಲೆಗಳು, ತಾಂಡ ನಿವಾಸಿಗಳಿಗಾಗಿ ಬಂಜಾರ ಜನರ ಪಾರಂಪರಿಕ ಮತ್ತು ಸಾಂಸ್ಕೃತಿಕ ಆಚಾರ ವಿಚಾರ ಸಂಪ್ರದಾಯಗಳಿಗೆ ಉತ್ತೇಜನ, 2006 ಅರಣ್ಯ ಹಕ್ಕು ಕಾಯ್ದೆ ಅನ್ವಯ ತಾಂಡಾದ ನಿವಾಸಿಗಳು ಸಕರ್ಾರಿ ಜಮೀನು, ಗೋಮಾಳ, ಅರಣ್ಯ ಭೂಮಿ ಉಳುಮೆ ಮಾಡುವವರಿಗೆ ಹಕ್ಕು ಪತ್ರ ವಿತರಣೆ ಮಾಡಿಸುವ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು ಹಾಗೂ ಪ್ರತಿಯೊಂದು ತಾಂಡಾ ಮಟ್ಟದಲ್ಲಿ ತಾಂಡಾ ವಿಕಾಸ ಸಮಿತಿಯನ್ನು ರಚನೆ ಮಾಡುವುದು, ಅದರಲ್ಲಿ ತಾಂಡಾದ ವಂಶಪಾರಂಪಾರಿಕರಾದ ನಾಯಕ, ಡಾವೂ, ಕಾರುಭಾರಿ & ಒಬ್ಬ ವಿದ್ಯಾವಂತ ಯುವಕ/ಯುವತಿ ಹಾಗೂ ಸ್ಥಳಿಯ ಚುನಾಯಿತಿ ಪ್ರತಿನಿಧಿಗಳು ತಾಂಡಾ ವಿಕಾಸ ಸಮಿತಿಯಲ್ಲಿ ಪದಮಿತ ಸದಸ್ಯರಾಗಿರುವುದು ತಾಂಡಾ ವಿಕಾಸ ಸಮಿತಿಯ ಮುಖ್ಯ ಉದ್ದೇಶ ತಾಂಡಾವನ್ನು ನಾವೇ ಅಭಿವೃದ್ದಿ ಮಾಡವುದು ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಚೇತನಗಂಗಾಧರ್, ರಾಜ್ಯ ತಾಂಡ ಅಭಿವೃದ್ದಿ ನಿಗಮದ ಸಂಪನ್ಮೂಲ ವ್ಯಕ್ತಿಗಳಾದ ಹರಿಯಾನಾಯ್ಕ, ಕೃಷ್ಣನಾಯ್ಕ, ಶಶಿಧರನಾಯ್ಕ, ಗ್ರಾ.ಪಂ.ಮಾಜಿ ಸದಸ್ಯರಾದ ಚಂದ್ರನಾಯ್ಕ, ಶಿಕ್ಷಕ ಮೂತರ್ಿನಾಯ್ಕ, ಗಂಗಾದರ್, ಬಡ್ಸರ್್ ಸಂಸ್ಥೆಯ ಸಿಬ್ಬಂದಿ ಶಿವಾನಂದನಾಯಕ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಚಿಕ್ಕನಾಯಕನಹಳ್ಳಿಯಲ್ಲಿ ಜಯಕನರ್ಾಟಕ ಸಂಘಟೆನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪರೈರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ ತಾ.ಜಯಕನರ್ಾಟಕ ಸಂಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಉಚಿತ ಹಣ್ಣು, ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ತಾ.ಜಯಕನರ್ಾಟಕ ಸಂಘಟನೆ ಅಧ್ಯಕ್ಷ ಹೆಚ್.ಎನ್.ವೆಂಕಟೇಶ್, ಕುಮಾರಸ್ವಾಮಿ, ಲೋಕೇಶ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Friday, May 1, 2015


                              ಟಾಟಾ ಸಫಾರಿ ಕಾರಿಗೆ ಲಾರಿ ಡಿಕ್ಕಿ 


ಚಿಕ್ಕನಾಯಕನಹಳ್ಳಿ,ಮೇ.01: ತಾಲ್ಲೂಕಿನ ಬಿ.ಎಚ್.ರಸ್ತೆಯ ಬಳ್ಳೆಕಟ್ಟೆ ಬಳಿಯ ಪೋಚಕಟ್ಟೆ ಗೇಟ್ ಹತ್ತಿರ ಟಾಟಾ ಸಫಾರಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 5 ಜನ ಗಾಯಗೊಂಡು ಓರ್ವ ತೀವ್ರ ಗಾಯಗೊಂಡು ತುಮಕೂರು ಜಿಲ್ಲಾ ಆಸ್ವತ್ರೆಗೆ ಕಳಿಸಲಾಗಿದೆ. 
  ಹೊಸದುರ್ಗ ತಾಲ್ಲೂಕು ಕಿಟ್ಟದಾಳಿನ ಶರತ್ ಎನ್ನುವರು ಕುಟುಂಬ ಸಮೇತ ತುಮಕೂರಿನಲ್ಲಿ ತಮ್ಮ ಸಂಬಂಧಿಕರ ಮದುವೆ ಮುಗಿಸಿಕೊಂಡು ತಮ್ಮ ಸ್ವಂತ ಗ್ರಾಮವಾದ ಕಿಟ್ಟದಾಳಿಗೆ ವಾಪಸ್ಸು ಬರುವಾಗ ಪೋಚುಕಟ್ಟೆ ಬಳಿ ಎದುರಿನಿಂದ ಬಂದ ಲಾರಿ ಟಾಟಾ ಸಫಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಯುಸುತ್ತಿದ್ದ ಶರತ್ ಸೇರಿದಂತೆ ಆತನ ಪತ್ನಿ ರೀತು ಮಕ್ಕಳಾದ ರಶ್ಮೀಕ, ದೀಕ್ಷಾ ಹಾಗೂ ಶರತ್ ಅತ್ತೆ ಮಾಲ ಇವರು ಗಾಯಗೊಂಡಿದ್ದಾರೆ. ರಶ್ಮೀಕ ತೀರ್ವವಾಗಿ ಗಾಯಗೊಂಡು ಹುಳಿಯಾರು ಸಕರ್ಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಕರ್ಾರಿ ಆಸ್ವತ್ರೆಗೆ ದಾಖಲಿಸಲಾಗಿದೆ. ಈ ಸಂಬಂದ ಹುಳಿಯಾರು ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ.
                                                                  ಸುದ್ದಿ ಇಲ್ಲ
                                                               ಚಿತ್ರ ಶೀಷರ್ಿಕೆ :
                                     
ಚಿಕ್ಕನಾಯಕನಹಳ್ಳಿ ಪಟ್ಟಣದ ಪುರಸಭಾ ಕಾಯರ್ಾಲಯದ ಸಿಬ್ಬಂದಿ ಮುರುಡಯ್ಯ ವಯೋನಿವೃತ್ತಿಯ ಪ್ರಯುಕ್ತ ಪುರಸಭಾ ವತಿಯಿಂದ ಬೀಳ್ಕೊಡಲಾಯಿತು. ಪುರಸಭಾಧ್ಯಕ್ಷೆ ರೇಣುಕಮ್ಮ, ಪುರಸಭಾ ಸಿಬ್ಬಂದಿಗಳಾದ ಚಂದ್ರಶೇಖರ್, ಗಂಗಾಧರಯ್ಯ, ಚಂದ್ರಶೇಖರ್, ರವಿಕುಮಾರ್, ಜಯಶಂಕರ್, ನಾಗರಾಜು, ಲಕ್ಷ್ಮಮ್ಮ ಉಪಸ್ಥಿತರಿದ್ದರು



ವಿವಿಧ ದೇವಾಲಯದ ಧಾಮರ್ಿಕ ಕಾರ್ಯಕ್ರಮಗಳು
 ಚಿಕ್ಕನಾಯಕನಹಳ್ಳಿ,ಮೇ.01 :  ತಾಲ್ಲೂಕಿನ ತಮ್ಮಡೀಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿಯ ಜೀಣರ್ೊದ್ಧಾರ ನೂತನ ದೇವಾಲಯ ಪ್ರವೇಶ ಪ್ರಾಣ ಪ್ರತಿಷ್ಠಾಪನಾ ನೇತ್ರೋನ್ನಿಲನ ದೃಷ್ಠಿ ಹಾಗೂ ಹೋಮರ್ಚನಾಭಿಷೇಕ ಮಹೋತ್ಸವ ಮೇ 3 ರಿಂದ 4 ರವರೆಗೆ ನಡೆಯಲಿದೆ. 3 ರಂದು ಗೋಧೂಳಿ ಲಗ್ನದಲ್ಲಿ ವಿವಿಧ ಪೂಜೆ, ಶ್ರೀ ಬಸವೇಶ್ವರ ದೇವಾಲಯ ಪ್ರವೇಶವು  ಶ್ರೀ ಮಲ್ಲಿಕಾಜರ್ುನಸ್ವಾಮಿ, ವಿರೂಪಾಕ್ಷಸ್ವಾಮಿ ದೇವರುಗಳ ಆಗಮನಗಳೊಂದಿಗೆ ನಡೆಯಲಿದೆ. 
4 ರಂದು ಬೆಳಗಿನ ಜಾವ 4-30 ರಿಂದ 5 -30 ರ ಬ್ರಾಹ್ಮೀ ಮುಹೂರ್ತದಲ್ಲಿ  ತಮ್ಮಡೀಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶಿಕೇಂದ್ರಸ್ವಾಮಿಯವರ ಅಮೃತ ಹಸ್ತದಿಂದ ಬಸವೇಶ್ವರ ಸ್ವಾಮಿ ಶಿಲಾ ಮೂತರ್ಿಯ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನಾ ನಂತರ ನೇತ್ರೋನ್ಮಿಲನ ಬೆಳಿಗ್ಗೆ 7-30 ಕ್ಕೆ ರುದ್ರಭಿಷೇಕ ಹಾಗೂ ಮುಂತಾದ ಧಾಮರ್ಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಧಿಗಳು ಆಗಮಿಸುವಂತೆ ಮನವಿ ಮಾಡಿದ್ದಾರೆ.
8ನೇ ವರ್ಷ ವಾಷರ್ಿಕೋತ್ಸವ: ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವಿ ಹಾಗೂ ಮಾಸ್ತಮ್ಮ ದೇವಾಲಯದ  8 ನೇ ವರ್ಷದ ವಾಷರ್ಿಕೋತ್ಸವ ಸಮಾರಂಭ  ಮೇ 03 ಮತ್ತು 04 ರಂದು ನಡೆಯಲಿದೆ.  
ಮೇ 3 ರಂದು ಸಂಜೆ 6.30 ವಿವಿಧ ಹೋಮ ಮತ್ತು  ಮಹಾಮಂಗಳಾರತಿ,     4 ರಂದು ಪ್ರಾತಃಕಾಲ ವಿವಿಧ ಪೂಜೆ,  12-05 ಕ್ಕೆ ಪೂಣರ್ಾಹುತಿ, ಬಲಿ ಪ್ರಧಾನ, ಕಳಶ ಸ್ಥಾಪನೆ, ಅಭಿಷೇಕ, ಮಧ್ಯಾಹ್ನ 1-50 ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ  ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವರ ಟ್ರಸ್ಟ್ ಸಮಿತಿ  ಮನವಿ ಮಾಡಿದೆ.



Tuesday, April 21, 2015


ಚಿ.ನಾ.ಹಳ್ಳಿಯಲ್ಲಿ ಬಸವಜಯಂತಿ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ, : ಜಾತವೇದ ಮುನಿ ಶಿವಾಚಾರ್ಯಸ್ವಾಮಿ ವೀರಶೈವ ಧರ್ಮವನ್ನು ಸ್ಥಾಪಿಸಿದ ಮೊದಲಿಗರು, ಇವರ ಪ್ರೇರಣೆಯಿಂದ ಬಸವಣ್ಣನವರು ಆಗಿನ ಕಾಲದಲ್ಲಿ ಗಂಡು, ಹೆಣ್ಣಿಗೆ ಸಮಾನತೆಯಿದ್ದ ವೀರಶೈವ ಧರ್ಮ ಸ್ವೀಕರಿಸಿದರು ಎಂದು ಕುಪ್ಪೂರು ಶ್ರೀಮರುಳಸಿದ್ದೇಶ್ವರ ಮಠದ ಪೀಠಾಧ್ಯಕ್ಷ  ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಬಸವೇಶ್ವರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಬಸವಣ್ಣನವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ನಂತರ ಗಂಡು, ಹೆಣ್ಣಿಗೆ ಸಮಾನತೆಯಿದ್ದ ವೀರಶೈವ ಧರ್ಮ ಸ್ವೀಕರಿಸಿದವರು, ಬಸವಣ್ಣನವರು ಜಾತಿ, ಬೇದ ಮರೆತು ಎಲ್ಲರನ್ನೂ ಒಟ್ಟುಗೂಡಿಸಲು ಶ್ರಮಪಟ್ಟವರು, ವಿಶ್ವಮಾನವರಾದ ಬಸವಣ್ಣನವರು ವಚನ ಸಾಹಿತ್ಯ ರಚಿಸಿ ವಿಶ್ವಕ್ಕೆ ಮಾದರಿಯಾದವರು ಎಂದರಲ್ಲದೆ ಕಾರ್ಯಕ್ರಮಗಳಿಗೆ ಎಷ್ಟು ಜನ ಬಂದಿದ್ದಾರೆ ಎಂಬುದು ಮುಖ್ಯವಲ್ಲ ಕಾರ್ಯಕ್ರಮದಿಂದ ಹೋದ ನಾವುಗಳು ಬಸವಣ್ಣನವರ ತತ್ವಗಳಂತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯ ಎಂದರು.
 ತಾಲ್ಲೂಕಿನ 26ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಯುವ ಯೋಜನೆಯಲ್ಲಿ ಕುಪ್ಪೂರು, ದಾಸಿಹಳ್ಳಿ, ತಮ್ಮಡಿಹಳ್ಳಿ, ಹಾಲ್ಕುರಿಕೆ ಕೆರೆಗಳನ್ನು ಕೈ ಬಿಡುವ ಹುನ್ನಾರ ನಡೆಯುತ್ತಿದ್ದು ಶೀಘ್ರವೇ ಇದರ ಬಗ್ಗೆ ಸಭೆಯನ್ನು ಕರೆದು ಚಚರ್ಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದರ ಬಗ್ಗೆ ಶಾಸಕರು ಸಕರ್ಾರದ ಜೊತೆಯಲ್ಲಿ ಮಾತುಕತೆ ನಡೆಸುವಂತೆ ಸಲಹೆ ನೀಡಿದರು.
ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ದಾರ್ಶನಿಕರ ಜಯಂತಿಗಳನ್ನು ಆಚರಿಸುವ ಮೂಲಕ ಧಾಮರ್ಿಕ ಮೌಲ್ಯಗಳನ್ನು ತಿಳಿಸುವ ಕಾರ್ಯಕ್ರಮಗಳು ಅವಶ್ಯ ಎಂದು ಸಲಹೆ ನೀಡಿದರು.
ಇನ್ನೂ ಗ್ರಾಮೀಣ ಭಾಗಗಳಲ್ಲಿ ಬಸವಣ್ಣ (ನಂದಿಯನ್ನು) ಪೂಜಿಸುವ ಸಂಪ್ರದಾಯವಿದೆ ನಾವು ಇನ್ನೂ ದಾರ್ಶನಿಕರ, ದಾಸರ, ವಚನಕಾರರ ಜಯಂತಿಗಳನ್ನು ಆಚರಿಸಿಕೊಳ್ಳುತ್ತಾ ಬಂದಿರುವುದರಿಂದಲೇ ನಮ್ಮ ಧಾಮರ್ಿಕ ಮೌಲ್ಯಗಳಿವೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಬಸವಣ್ಣನವರು ಜಾತಿ ಬೇದಬಾವ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಎಲ್ಲ ವರ್ಗಗಳನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಲು ಅನುಭವ ಮಂಟಪ ಸ್ಥಾಪಿಸಿದರು. ಈಗ ರಾಜಕಾರಣಿಗಳು ಜಾತಿಗಳನ್ನು ಸೃಷ್ಠಿಸಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಜಾತಿ ನಮ್ಮ ಮನೆಯಲ್ಲಿರಬೇಕೆ ಹೊರತು ಹೊರಗಡೆಯಲ್ಲ ಎಲ್ಲರಿಗೂ ಒಂದೇ ಭಾವನೆ ಬಂದರೆ ಮಾತ್ರ ಸಮಾಜ ಉದ್ದಾರವಾಗುತ್ತದೆ, ಮಠ ಮಂದಿರಗಳು ಸಮಾಜ ತಿದ್ದುವ ಕಾರ್ಯಗಳನ್ನು ಮಾಡಬೇಕಾಗಿದೆ ಎಂದರು.
ಉಪನ್ಯಾಸ ನೀಡಿದ ದಿಬ್ಬದಹಳ್ಳಿ ಶ್ಯಾಮಸುಂದರ್ ಮಾತನಾಡಿ, ಬಸವಣ್ಣನವರು ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷ, ಅನೇಕ ದಾರ್ಶನಿಕರ ಜಯಂತಿಗಳನ್ನು ಆಚರಿಸುತ್ತಿರುವುದು ಸಂತಸ, ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ,  ಬಸವಣ್ಣನವರು ಸ್ತ್ರೀಯರಿಗೆ ಸರಿಸಮಾನಾದ ಗೌರವವನ್ನು ಅನುಭವ ಮಂಟಪದಲ್ಲಿ ಅವಕಾಶ ನೀಡಿ ಸಮಾಜದ ಸುಧಾರಣೆಗೆ ಶ್ರಮಿಸಿದರು ಎಂದರು.
ಕಾರ್ಯಕ್ರಮವನ್ನು ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಉದ್ಘಾಟಿಸಿದರು. ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ.ಸದಸ್ಯೆ ಹೆಚ್.ಬಿ.ಪಂಚಾಕ್ಷರಿ, ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್, ಇಂದಿರಾಪ್ರಕಾಶ್, ಅಶೋಕ್, ಡಿಎಸ್ಎಸ್ನ ಬೇವಿನಹಳ್ಳಿಚನ್ನಬಸವಯ್ಯ, ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಪುರಸಭಾಧ್ಯಕ್ಷೆ ರೇಣುಕಮ್ಮಸಣ್ಣಮುದ್ದಯ್ಯ, ಸಿ.ಎಲ್.ಜಯದೇವ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಸಿಡಿಪಿಓ ಅನೀಸ್ಖೈಸರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿವಸ್ವಾಮಿ ನಿರೂಪಿಸಿ ಸ್ವಾಗತಿಸಿದರು. ರಾಜ್ಕುಮಾರ್ ವಂದಿಸಿದರು. ತಾಲ್ಲೂಕು ಕಛೇರಿಯಿಂದ ಹೊರಟ ಬಸವಣ್ಣನವರ ಭಾವಚಿತ್ರವಿರುವ ಮೆರವಣಿಗೆಯು ನೆಹರು ಸರ್ಕಲ್ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. 


Saturday, April 18, 2015


ಕನರ್ಾಟಕ ಬಂದ್ಗೆ ಚಿ.ನಾ.ಹಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ


ಚಿಕ್ಕನಾಯಕನಹಳ್ಳಿ,ಏ.18 : ಮೇಕೆದಾಟು ಬಳಿ ಅಣೆಕಟ್ಟೆ ನಿಮರ್ಾಣ ಯೋಜನೆ ವಿರೋಧಿಸಿ ತಮಿಳುನಾಡು ನಡೆಸಿದ ಬಂದ್ಗೆ ಪ್ರತಿಯಾಗಿ ರಾಜ್ಯದಲ್ಲಿ ಶನಿವಾರ ಕರೆ ನೀಡಿದ್ದ ಕನರ್ಾಟಕ ಬಂದ್ಗೆ ಪಟ್ಟಣದಲ್ಲಿ  ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ನಡೆಸಿದರು.
ಶನಿವಾರ ಬೆಳಗ್ಗೆ 6ಗಂಟೆಯಿಂದಲೇ ಎಂದಿನಂತೆ ಬಸ್ಗಳು ಸಂಚರಿಸದಿದ್ದರೂ ವಿರಳವಾಗಿ ವಾಹನಗಳು ಸಂಚರಿಸುತ್ತಿದ್ದವು, ಕನರ್ಾಟಕ ಬಂದ್ ಇರುವುದನ್ನು ಅರಿತಿದ್ದ ಪ್ರಯಾಣಿಕರು ಬಸ್ಗಳು ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಇಲ್ಲದಿದ್ದರಿಂದ ಪ್ರಯಾಣಿಕರು ತಮ್ಮ ವಾಹನಗಳಲ್ಲಿ ಸಂಚರಿಸುತ್ತಿದ್ದರಲ್ಲದೆ, ಕಡಿಮೆಯಿರುವ ಬಗ್ಗೆ ಮೊದಲೇ ತಿಳಿದಿದ್ದ ಪ್ರಯಾಣಿಕರು ತಮ್ಮ ಕೆಲಸಗಳಿಗೆ ರಜೆ ಹಾಕಿ ಮನೆಯಲ್ಲಿ ದಿನ ಕಳೆದರು.
ಪಟ್ಟಣದಲ್ಲಿನ ಸಾರ್ವಜನಿಕರಿಗೆ ಆಸ್ಪತ್ರೆ ಚಿಕಿತ್ಸೆಗೆ, ಮೆಡಿಕಲ್ಶಾಪ್, ಆಂಬುಲೆನ್ಸ್ ಸೇವೆಗೆ ಯಾವುದೇ ತೊಂದರೆಯಾಗಲಿಲ್ಲ.
ಬೆಳಗ್ಗೆ 6ಗಂಟೆಗೆ ಬಂದ್ ಆರಂಭವಾದರೂ ಅದರ ಬಿಸಿ ತಟ್ಟಿದ್ದು ಮಾತ್ರ ನಿಧಾನವಾಗಿ, ಕನ್ನಡ ಪರ ಸಂಘಟನೆಗಳ ಮುಖಂಡರು ಪಟ್ಟಣದ ನೆಹರು ಸರ್ಕಲ್ನ ಬಳಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಸಂಚಾರವನ್ನು ಸ್ಥಗಿತಗೊಳಿಸಿ ಇಲ್ಲವಾದರೆ ಮುಂದಿನ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಹನ ಸಂಚಾರಕರಿಗೆ ಹೇಳುತ್ತಿದ್ದರು. 
ಕನ್ನಡಪರ ಸಂಘಟನೆಗಳ ಬೆಂಬಲ : 

Thursday, April 16, 2015


ಏಪ್ರಿಲ್ 21, 22, 23  ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,: ರಾಜ್ಯ ಮಟ್ಟದ ಸಂಗೀತ ಸ್ಪದರ್ೆ ಕಾರ್ಯಕ್ರಮವನ್ನು ಏಪ್ರಿಲ್ 21, 22, 24 ರಂದು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ಗಾನವಿ ಲಲಿತಾ ಕಲಾವೃಂದದ ಉಪಾಧ್ಯಕ್ಷ ಸಿ.ಎಸ್.ಗಂಗಾಧರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಾಗೂ ಶ್ರೀ ಗಾನವಿ ಲಲಿತಾ ಕಲಾ ವೃಂದದ ವತಿಯಿಂದ ಏರ್ಪಡಿಸಿರುವ ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಶರಣರ ವಚನ, ದಾಸರ ಪದ, ರಂಗಗೀತೆ, ಭಾವಗೀತೆ, ಜಾನಪದ ಗೀತೆ, ಚತ್ರಗೀತೆ ಸ್ಪಧರ್ೆಗಳು ನಡೆಯಲಿವೆ.
21ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 6ಕ್ಕೆ ಸನ್ಮಾನ ಸಮಾರಂಭ ಕಾರ್ಯಕ್ರಮ ನೆರವೇರಲಿದ್ದು ಹಿರಿಯ ಸಾಹಿತಿ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
22ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಬಿ.ಲಕ್ಕಪ್ಪ ಅಧ್ಯಕ್ಷತೆ ವಹಿಸಲಿರುವರು.
24ರಂದು ಸಂಜೆ 4ಕ್ಕೆ ಸಂಗೀತ ಸ್ಪಧರ್ೆಗಳ ಬಹುಮಾನ ವಿತರಣೆ ಕಾಯಕ್ರಮ ನಡೆಯಲಿದೆ. ಪುರಸಭಾಧ್ಯಕ್ಷೆ ರೇಣುಕಮ್ಮ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿರುವರು.
ಗೋಷ್ಠಿಯಲ್ಲಿ ಗಾನವಿ ಲಲಿತ ಕಲಾವೃಂದದ ಶಿವರುದ್ರಯ್ಯ, ಮಹಾಲಿಂಗಯ್ಯ ಉಪಸ್ಥಿತರಿದ್ದರು.

Friday, April 10, 2015




ರಾಷ್ಟ್ರಪ್ರಶಸ್ತಿ ರಾತ್ರೋರಾತ್ರಿ ಬಂದದ್ದಲ್ಲ ಪ್ರಶಸ್ತಿಗಾಗಿ ಶ್ರದ್ದೆ, ತಾಳ್ಮೆ,, ಆಸಕ್ತಿಯ ಫಲವಿದೆ. : ನಟ ವಿಜಯ್
ಚಿಕ್ಕನಾಯಕನಹಳ್ಳಿ : ರಾಷ್ಟ್ರಮಟ್ಟದಲ್ಲಿ ಉತ್ತಮ ನಟನೆಂಬ ಪ್ರಶಸ್ತಿ ರಾತ್ರೋರಾತ್ರಿ ಬಂದದ್ದಲ್ಲ, ಆತ್ಮವಿಶ್ವಾಸ, ತಾಳ್ಮೆ, ಶ್ರದ್ದೆ, ಆಸಕ್ತಿಯ ಫಲ ಈ ಪ್ರಶಸ್ತಿ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ವಿಜಯ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನ 2014-15ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಅವನಲ್ಲ ಅವಳು ಚಿತ್ರ ಮಂಗಳಮುಖಿಯರ ಸಂಬಂಧದ ಚಿತ್ರವಾಗಿದ್ದು ಈ ಚಿತ್ರಕ್ಕಾಗಿ ಮಂಗಳಮುಖಿಯರು ಹೇಗೆ ವತರ್ಿಸುತ್ತಾರೆಂಬ ಬಗ್ಗೆ ಮಂಗಳಮುಖಿಯರಿರುವ ಜಾಗಕ್ಕೆ ಹೋಗಿ ಅವರ ಹಾವ, ಭಾವಗಳನ್ನು ಕಲಿತೆ ಎಂದರಲ್ಲದೆ, ಚಿತ್ರತಂಡದ ಸಂಪೂರ್ಣ ಸಹಕಾರದಿಂದಲೇ ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯಲು ಸಹಕಾರವಾಯಿತು ಎಂದರು. 
ನಾನು ಅವನಲ್ಲ ಅವಳು ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯುವಲ್ಲಿ ಚಿತ್ರತಂಡದ ಪರಿಶ್ರಮ ಹೆಚ್ಚಿನದಾಗಿದೆ, ಆತ್ಮಚರಿತ್ರೆಯೊಂದನ್ನು ಸತತ ಆರು ವರ್ಷಗಳ ಕಾಲದಿಂದಲೂ ಸಿದ್ದಪಡಿಸಿಕೊಂಡಿದ್ದ ನಿದೇರ್ಶಕ ಲಿಂಗದೇವರು ಅವರು,  ಯಾರೊಬ್ಬರು ಮಾಡದೆ ಇದ್ದಾಗ ರಂಗಭೂಮಿ ಕಲಾವಿದನಾಗಿದ್ದ ನನ್ನನ್ನು ಆಯ್ಕೆ ಮಾಡಿ ಅವಕಾಶ ನೀಡಿದ ನಿಮರ್ಾಪಕರಾದ ರವಿಗರಣಿ ಹಾಗೂ ನಿದರ್ೇಶಕರಾದ ಬ್ಯಾಲದಕೆರೆ ಲಿಂಗದೇವರು ರವರು ಈ ಚಿತ್ರದಿಂದ ನನ್ನನ್ನು ಇಂದು ಇಡೀ ದೇಶವೇ ಗುರುತಿಸುವಂತೆ ಮಾಡಿದೆ ಎಂದರು. ನಾನು ಅವನಲ್ಲ ಅವಳು ಚಿತ್ರದ ಮಂಗಳಮುಖಿ ಪಾತ್ರವು ಸಾಧಾರಣವಾದ ಚಿತ್ರವಲ್ಲ, ಈ ಪಾತ್ರಕ್ಕಾಗಿ ನಿದರ್ೇಶಕರು ನೀಡಿದ ಸಲಹೆ, ಸೂಚನೆಗಳನ್ನು ಗಮನಿಸಿದ್ದಲ್ಲದೆ ಮಂಗಳಮುಖಿಯರ ಬಗ್ಗೆ ಅರಿತುಕೊಳ್ಳಲು ಮುಂದಾದೆ ಎಂದರು.
ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಿನಿಮಾ ಮಾಡುವುದು ಒಂದು ರೀತಿ ಕಷ್ಟವಾದರೆ, ಮಾಡಿದ ಕೆಲಸವನ್ನು ಜನರಿಗೆ ತೋರಿಸುವುದು ಮತ್ತೊಂದು ರೀತಿಯ ಕಷ್ಟ ಎಂದರಲ್ಲದೆ,  ಯು.ಎಫ್.ಓ ರವರು ಟಾಕೀಸ್ಗಳಲ್ಲಿ ಜೋಡಿಸಿರುವ ತಂತ್ರಜ್ಞಾನದಿಂದ ಇಂದು ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದರು.
ನಾನು ಅವನಲ್ಲ ಅವಳು ಚಿತ್ರದ ಮೂಲಕ  ತುಮಕೂರು ಜಿಲ್ಲೆಗೆ ಎರಡು ರಾಷ್ಟ್ರಪ್ರಶಸ್ತಿ ಬಂದಿದೆ, ನಟ ವಿಜಯ್ ತಾಲ್ಲೂಕಿನ ಪಕ್ಕದ ಪಂಚನಹಳ್ಳಿ ಯವರು, ಹಾಗೂ ಚಿತ್ರದ ಮೇಕಪ್ ಮ್ಯಾನ್ ರಾಜು ತಾಲ್ಲೂಕಿನ ಸಮೀಪದ ಹತ್ಯಾಳುವಿನವರು ಎಂಬುದೇ ಜಿಲ್ಲೆಗೆ ಸಂತಸದ ವಿಷಯವಾಗಿದೆ, 2009ರಲ್ಲಿ ನಾನು ಅವನಲ್ಲ ಅವಳು ಚಿತ್ರವನ್ನು ತೆರೆಗೆ ತರಲು ಆಲೋಚಿಸಿದೆನು, ಆತ್ಮಚರಿತ್ರೆಯೊಂದರ ಕಥೆಯಾದ ಈ ಚಿತ್ರ ಮಂಗಳಮುಖಿಯರ ಬದುಕಾಗಿದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕಡೆಗಳಲ್ಲಿ ಮಂಗಳಮುಖಿಯರನ್ನು ಹೇಗೆ ನೋಡುತ್ತಾರೆಂಬದು ಚಿತ್ರದ ಮುಖ್ಯ ವಸ್ತುವಾಗಿದೆ  ಎಂದರಲ್ಲದೆ ಈ ಚಿತ್ರವನ್ನು ಶೀಘ್ರದಲ್ಲೇ ಚಿ.ನಾ.ಹಳ್ಳಿಯಲ್ಲಿ ಬಿಡುಗಡೆ ಮಾಡಿಸಲಾಗುವುದು ಎಂದರು.
ಕೆಲವು ನಿದರ್ೇಶಕರು ಸ್ಕ್ರಿಪ್ಟ್ ಹಾಗೂ ತಯಾರಿಯೇ ಇಲ್ಲದೇ ಸಿನಿಮಾ ರಚನೆ ಮಾಡುತ್ತಾರೆ ನಂತರ ಸಿನಿಮಾ ಬಿಡುಗಡೆಯಾದಾಗ ಸಿನಿಮಾನೇ  ಓಡುತ್ತಿಲ್ಲ ಎಂದು ಹೇಳುತ್ತಾರೆ ಎಂದು ವಿಷಾಧಿಸಿದರು. 
ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕೆಲಸಮಾಡುವುದು ಅವಮಾನವಲ್ಲ, ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ಸಿದ್ದಿ ದೊರೆಯುತ್ತದೆ ಅದಕ್ಕೆ ನಮ್ಮ ಮುಂದಿರುವ ಇವರೇ ಸಾಕ್ಷಿ ಎಂದರಲ್ಲದೆ,   ಕಾಲೇಜಿನಲ್ಲಿ ಸಿನಿಮಾ ಜಗತ್ತನ್ನು ಪರಿಚಯಿಸುವ ಅಗತ್ಯವಿರಲಿಲ್ಲ ಆದರೆ ತಮ್ಮ ಪ್ರತಿಭೆಯ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತರನ್ನು ನಿಮಗೆ ಪರಿಚಯಿಸುವ ಉದ್ದೇಶದಿಂದ ಅವರ ಸಾಧನೆಯನ್ನು ನಿಮ್ಮ ಮುಂದೆ ತರಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು ಸಾಧನೆಗೆ ಗುರಿ ಮುಖ್ಯವೇ ಹೊರತು ಅಹಂಕಾರವಲ್ಲ ಎಂದ ಅವರು ವಿದ್ಯಾಥರ್ಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡಿ, ಇಂಜನಿಯರಿಂಗ್, ಕ್ಷೇತ್ರಗಳಲ್ಲಿನ ಅಭ್ಯಥರ್ಿಗಳಿಗೆ ಈಗಾಗಲೇ ಕೆಲಸವೇ ಇಲ್ಲದಂತಾಗುತ್ತಿದೆ, ಮುಂದಿನ ದಿನಗಳಲ್ಲಿ ಬಿ.ಎ ವಿದ್ಯಾಥರ್ಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಲಿದೆ ಆದ್ದರಿಂದ ವಿದ್ಯಾಥರ್ಿಗಳು ಬಿ.ಎ ಶಿಕ್ಷಣದ ಬಗ್ಗೆ ಅಸಡ್ಡೆ ತೋರಬೇಡಿ ಎಂದರು.
ಕಾರ್ಯಕ್ರಮಲ್ಲಿ ರಾಷ್ಟ್ರಪಶಸ್ತಿ ಪುರಸ್ಕೃತರಾದ ವಿಜಯ್, ರಾಜು ಹತ್ಯಾಳುರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನವೋದಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್,  ಪ್ರಾಂಶುಪಾಲ ಎಸ್.ಎಲ್.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವೋದಯ ಕಾಲೇಜಿನ ಯುವಕ ಮಂಡಳಿ ವತಿಯಿಂದ ಭಾವಗೀತೆಗಳ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


ಚಿಕ್ಕನಾಯಕನಹಳ್ಳಿ ಪಟ್ಟಣದ ನವೋದಯ ಕಾಲೇಜಿಗೆ ಆಗಮಿಸಿದ್ದ ನಾನು ಅವನಲ್ಲ ಅವಳು ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ನಾಯಕ ವಿಜಯ್, ನಿದರ್ೇಶಕ ಬಿ.ಎಸ್.ಲಿಂಗದೇವರು, ಮೇಕಪ್ಮ್ಯಾನ್ ರಾಜುಹತ್ಯಾಳ್ರನ್ನು ಚಿ.ನಾ.ಹಳ್ಳಿಯ ವಿವಿಧ ಸಂಘಟನೆಯವರು ಅಭಿನಂದಿಸಿದರು. ಎಂ.ಎಸ್.ರವಿಕುಮಾರ್, ಸುಪ್ರಿಂ.ಸುಬ್ರಹ್ಮಣ್ಯ, ಸಿದ್ದು.ಜಿ.ಕೆರೆ, ಸಿ.ಹೆಚ್.ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಜಾತಿ ಗಣತಿಗೆ ಸಾರ್ವಜನಿಕರು ಸಹಕರಿಸಿ
ಚಿಕ್ಕನಾಯಕನಹಳ್ಳಿ,ಏ.10 :- ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ 23 ವಾಡರ್್ಗಳಲ್ಲಿ ರಾಜ್ಯ ಸಕರ್ಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಜಾತಿಗಣತಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಏಪ್ರಿಲ್ 11 ರಿಂದ ಪ್ರಾರಂಭವಾಗಿ ಏಪ್ರಿಲ್ 30 ಕ್ಕೆ ಮುಕ್ತಾಯವಾಗಲಿದೆ. ಜಾತಿ ಗಣತಿದಾರರು ಮನೆ ಮನೆಗಳಿಗೆ ಬೇಟಿ ನೀಡಿದಾಗ ಅಧಾರ್ ಕಾಡರ್್, ಪಡಿತರಚೀಟಿ ಮತ್ತು ಮತದಾರರ ಗುರುತಿನ ಚೀಟಿ ನೀಡಿ ಗಣತಿದಾರರು ಕೇಳುವ ಮಾಹಿತಿಯನ್ನು ನೀಡಿ ಅವರೊಂದಿಗೆ ಸಹಕರಿಸಿ ಗಣತಿ ಕಾರ್ಯ ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ಪುರಸಭಾ ಅಧ್ಯಕ್ಷೆ  ಕೆ. ರೇಣುಕಮ್ಮ, ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ ಶೆಟ್ಟಿ ಮನವಿ ಮಾಡಿದ್ದಾರೆ. 
   ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಮುಖ್ಯಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಸಂಪಕರ್ಿಸಲು ಕೋರಿದೆ. 

ಶಿಕ್ಷಕರ ಅಭಿವೃದ್ದಿಗೆ ಸಂಘ ಗಮನ ಹರಿಸುವುದು.

ಚಿಕ್ಕನಾಯಕನಹಳ್ಳಿ,ಏ.10 :- ತಾಲ್ಲೂಕು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜೂನ್ ತಿಂಗಳಲ್ಲಿ ಗುರುಸ್ವಂದನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ಪ್ರಾಥಾಮಿಕ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಎನ್. ಪ್ರಕಾಶ್ ತಿಳಿಸಿದರು. 
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಪ್ರಾಥಮಿಕ ಪಾಠಶಾಲಾ ಶಿಕ್ಷಕರಿಗೆ ಸಂಘದವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರತಿ ಹೋಬಳಿಗಳಲ್ಲಿ ಶಿಕ್ಷಕರಿಗೆ ಪೂಸ್ಕೊ ಕಾಯ್ದೆ ಕುರಿತು ವಿಚಾರ ಸಂಕೀರ್ಣ 720 ಶಿಕ್ಷಕರಿಗೆ ಗಳಿಕೆ ರಜೆ ನಗದೀಕರಣ, ಸ್ವಯಂ ಚಾಲಿತ ವೇತನ ಬಡ್ತಿ, ಕಾಲಮಿತಿ ವೇತನ ಬಡ್ತಿ ಸಕಾಲದಲ್ಲಿ ಮಾಡಿಸಲಾಗಿದೆ. ಹಲವು ವರ್ಷಗಳಿಂದ ಶಿಕ್ಷಕರಿಗೆ ಬಾಕಿ ಇದ್ದ ಭತ್ಯೆ ಬಿಲ್ಲು ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಪ್ರತಿ ತಿಂಗಳು 5 ನೇ ತಾರೀಖಿನ ಒಳಗಡೆ ವೇತನ, 14-15 ನೇ ಸಾಲಿನ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ನಲ್ಲಿ ನ್ಯಾಯ ಸಮ್ಮತವಾಗಿ ನಡೆಸಿಕೊಡುವ ಮೂಲಕ ಶಿಕ್ಷಕರ ಅಭಿವೃದ್ಧಿಗೆ ಸಂಘ ಗಮನ ಹರಿಸಿದೆ. ಎಂದು ತಿಳಿಸಿದರು. 
   ಪತ್ರಿಕಾ  ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಜೆ.ವೆಂಕಟೇಶ್ ಪ್ರದಾನ ಕಾರ್ಯದಶರ್ಿ ಹೆಚ್.ಸಿ.ಲೋಕೇಶ್, ಉಪಾಧ್ಯಕ್ಷ ಎಂ.ಎಸ್. ಈಶ್ವರಯ್ಯ, ಎ.ವಿನೋಧ, ಎಂ.ಈಶ್ವರಯ್ಯ, ಮಹದೇವಮ್ಮ ಚಂದ್ರಯ್ಯ, ಸಿ.ವೀಣಾ, ಮುಂತಾದವರು ಉಪಸ್ಥಿತರಿದ್ದರು. 


5ರಿಂದ 15 ವರ್ಷ ಒಳಪಟ್ಟ ಮಕ್ಕಳಿಗೆ ಬೇಸಿಗೆ ಶಿಬಿರಕ್ಕೆ ಆಹ್ವಾನ 
ಚಿಕ್ಕನಾಯಕನಹಳ್ಳಿ,ಏ.10 : 5ರಿಂದ 15 ವರ್ಷ ಒಳಪಟ್ಟ ಮಕ್ಕಳಿಗಾಗಿ ಇನ್ಸ್ಫೈರ್ ಕೆರಿಯರ್ ಅಕಾಡೆಮಿ ವತಿಯಿಂದ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ ಎಂದು ಶಿಬಿರದ ಸಂಯೋಜಕ ಜಾಕಿರ್ ಹುಸೇನ್ ತಿಳಿಸಿದ್ದಾರೆ.
ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ಬೇಸಿಗೆ ಶಿಬಿರ ನಡೆಯಲಿದ್ದು ಬೇಸಿಗೆ ಶಿಬಿರದಲ್ಲಿ ನೃತ್ಯ, ಕರಾಟೆ, ಚಿತ್ರಕಲೆ, ಕರಕುಶಲ, ಮಣ್ಣಿನ ಶಿಲ್ಪಕಲೆ ಹಾಗೂ ಬುದ್ದಿಶಕ್ತಿಗೆ ಸಂಬಂಧಪಟ್ಟ ಆಟಗಳು ಹಾಗೂ ಇತರ ಸಾಮಾನ್ಯ ಜ್ಞಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನೃತ್ಯ ನಿದರ್ೇಶಕ .ಆರ್.ವಿಶ್ವನಾಥ್ ತಿಳಿಸಿದ್ದಾರೆ. ಬೇಸಿಗೆ ಶಿಬಿರದ ಪ್ರವೇಶಕ್ಕೆ ಏಪ್ರಿಲ್ 15ರೊಳಗೆ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ಮೊ.ನಂ. 9620692112, 85489910040 ನಂ.ಗೆ ಸಂಪಕರ್ಿಸಲು ಕೋರಿದ್ದಾರೆ.





Monday, April 6, 2015



ರಾಜ್ಯದಲ್ಲಿ ವಿವಿಧ ರೀತಿಯ 36 ಸಾವಿರ ಸಹಕಾರ ಸಂಘಗಳ ಕಾರ್ಯನಿರ್ವಹಿಸುತ್ತಿವಗೆ : ರಮೇಶ್ಬಾಬು
ಚಿಕ್ಕನಾಯಕನಹಳ್ಳಿ,: ರಾಜ್ಯದಲ್ಲಿ ಪತ್ತಿನ ಸಹಕಾರ ಸಂಘ, ಮಹಿಳಾ ಸಂಘ, ಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ರೀತಿಯ 36 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದು ವಕೀಲ ರಮೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲ್ಲೂಕು ಉಪಾಧ್ಯಾಯರ ಸಹಕಾರ ಸಂಘದ ನೂತನ ಕಟ್ಟಡ ಪ್ರಾರಂಭೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ತತ್ವದ ಅಡಿಯಲ್ಲಿ ಪ್ರಾರಂಭವಾಗಿರುವ ಸಹಕಾರ ಸಂಘಗಳು ನಿತ್ಯ ಠೇವಣಿ ಸಂಗ್ರಹ, ನಿಶ್ಚಿತ ಠೇವಣಿ ಸಂಗ್ರಹಿಸಲು ಬೈಲಾ ತಿದ್ದುಪಡಿ ಮಾಡಿಕೊಂಡು ಹಣ ಸಂಗ್ರಹ ಮಾಡಿ ಶಿಕ್ಷಕರಿಗೆ ನಿವೇಶನ ಕಟ್ಟಡ ನಿಮರ್ಾಣಕ್ಕೆ ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕೆ ಈ ಹಣವನ್ನು ಉಪಯೋಗಿಸಿಕೊಳ್ಳಲು ಸಲಹೆ ನೀಡಿದ ಅವರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ 10 ಸಾವಿರ ರೂಪಾಯಿ ಮೇಲ್ಪಟ್ಟು ಬಡ್ಡಿ ಬಂದರೆ ಸಹಜವಾಗಿ ಟಿ.ಡಿ.ಎಸ್ ಕಟ್ಟಬೇಕಾಗುತ್ತದೆ, ಸಹಕಾರಿ ಸಂಘಗಳಲ್ಲಿ ಠೇವಣಿ ಇಟ್ಟರೆ ಟಿ.ಡಿ.ಎಸ್ ಇರುವುದಿಲ್ಲ ಆದ್ದರಿಂದ ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟರೆ ಟಿ.ಡಿ.ಎಸ್ ಕಟ್ಟಬೇಕಾಗುತ್ತದೆ, ಸಹಕಾರಿ ಸಂಘಗಳಲ್ಲಿ ಠೇವಣಿಗೆ ಇಡಲು ಉತ್ತೇಜನ ನೀಡಿ ಇದರಿಂದ ಶಿಕ್ಷಕರಿಗೂ ಅನುಕೂಲವಾಗಲಿದೆ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಎಲ್ಲಾ ರಾಜಕೀಯ ರಂಗಗಳಲ್ಲೂ ಇದ್ದಾರೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಸಹಕಾರಿ ಸಂಘಗಳ ಹೆಚ್ಚುವರಿ ಕೊಠಡಿ ನಿಮರ್ಿಸಲು 2ಲಕ್ಷ ರೂಪಾಯಿ ನೀಡುವುದಾಗಿ ಮತ್ತು ಸಕರ್ಾರಿ ನೌಕರರ ಸಂಘದ ಕಟ್ಟಡದ ಗ್ರಂಥಾಲಯಕ್ಕೆ 2ಲಕ್ಷದ 70ಸಾವಿರ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದ ಅವರು ಅಕ್ಷರ ದಾಸೋಹ ಶಿಕ್ಷಣ ಇಲಾಖೆಗೆ ಬರುವ ಅನುದಾನದ ಹಣವನ್ನು ಶಿಕ್ಷಕರ ಸಹಕಾರ ಸಂಘದಲ್ಲಿ ಇಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ ಅವರು ಶಿಕ್ಷಕರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಶಿಕ್ಷಕರು ಸಹಕಾರ ಸಂಘವನ್ನು ಪ್ರಾಮಾಣಿಕವಾಗಿ ಮುನ್ನೆಡೆಸಿಕೊಂಡು ಹೋದರೆ ತಾವು ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾಥರ್ಿಗಳಿಗೆ ಬೆಳ್ಳಿ ಪದಕ ನೀಡುತ್ತಿದ್ದು ಇನ್ನು ಹೆಚ್ಚಿನ ವಿದ್ಯಾಥರ್ಿಗಳಿಗೆ ಪದಕ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಮಂಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಸಾ.ಚಿ.ನಾಗೇಶ್ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ, ಪುರಸಭಾಧ್ಯಕ್ಷೆ ರೇಣುಕಮ್ಮ, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ದೊರೆಮುದ್ದಯ್ಯ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯಬಿ.ಇ.ಓ ಕೃಷ್ಣಮೂತರ್ಿ, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಹೆಚ್.ಎಂ.ಸುರೇಶ್, ಸಿ.ಜಿ.ಶಂಕರ್, ರಾಜಯ್ಯ, ಸಿ.ಎಂ.ದಿನಕರ್, ಶಿವಕುಮಾರ್, ಚಿ.ನಾ.ಪುರುಷೋತ್ತಮ್ ಮತ್ತಿತರರರು ಉಪಸ್ಥಿತರಿದ್ದರು.


ಜಾತಿಗಣತಿಯಲ್ಲಿ ಸವಿತಾ ಮಾಜದವರು ಸವಿತಾ ಎಂದು ಬರೆಸಲು ಮನವಿ
ಚಿಕ್ಕನಾಯಕನಹಳ್ಳಿ, : ಜಾತಿಗಣತಿಯ ಸಂದರ್ಭದಲ್ಲಿ ಪ್ರತಿ ಸವಿತಾ ಸಮಾಜದ ಬಂಧುಗಳು ತಮ್ಮ ಜಾತಿಯ ಕಾಲಂನಲ್ಲಿ ಸವಿತಾ ಎಂದು ದಾಖಲಿಸಬೇಕೆಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುಬ್ರಹ್ಮಣ್ಯ(ಸುಪ್ರಿಂ) ಕೋರಿದ್ದಾರೆ.
ಉಪಜಾತಿಯ ಕಾಲಂನಲ್ಲಿ ಭಜಂತ್ರಿ ಅಥವಾ ನಾಯಿಂದ ಎಂದು ದಾಖಲಿಸಬೇಕೆಂದು ಮನವಿ ಮಾಡಿದ್ದಾರೆ.


ಜಾತಿಗಣತಿಯಲ್ಲಿ ಮಾದಿಗ ಜನಾಂಗದವರು ಮಾದಿಗ ಹಾಗೂ ಹೊಲೆಯ  ಜನಾಂಗದವರು ಛಲವಾದಿ ಎಂದು ಬರೆಸಲು ಮನವಿ
ಚಿಕ್ಕನಾಯಕನಹಳ್ಳಿ, : ರಾಜ್ಯ ಸಕರ್ಾರ ಏಪ್ರಿಲ್ 11ರಿಂದ ಆರಂಭಿಸಲಿರುವ ಜಾತಿಗಣತಿಯ ಸಂದರ್ಭದಲ್ಲಿ ಗಣತಿದಾರರು ತಮ್ಮ ಮನೆಗೆ ಬಂದಾಗ ಪರಿಶಿಷ್ಠ ಜಾತಿ ಕಾಲಂನಲ್ಲಿ ಮಾದಿಗ ಜನಾಂಗದವರು ಮಾದಿಗ ಅಂತಲೂ ಹಾಗೂ ಹೊಲೆಯ ಸಮುದಾಯದವರು ಛಲವಾದಿ ಎಂತಲೂ ನಮೂದಿಸುವಂತೆ ದಲಿತ ಸಂಘರ್ಷ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಮುಖಂಡ ಲಿಂಗದೇವರು ಮಾತನಾಡಿ,  ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ವಗರ್ೀಕರಣಕ್ಕೆ ಇಂದಿನ ಪರಿಶಿಷ್ಠ ಜಾತಿಯ ಉಪಜಾತಿಯ ಜನಸಂಖ್ಯಾ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ ಅನಿವಾರ್ಯವಾಗಿದ್ದು ಇದೇ ತಿಂಗಳ ಏಪ್ರಿಲ್ 11ರಿಂದ ಆರಂಭವಾಗುತ್ತಿರುವ ಸಾಮಾಜಿಕ ಜನಗಣತಿಯ ಸಮೀಕ್ಷೆಗಾಗಿ ದಸಂಸ ಮುಖಂಡರುಗಳು ತಾಲ್ಲೂಕಿನಾದ್ಯಂತ ಮಾದಿನ ಜನಾಂಗದವರ ಮನೆಮನೆಗೆ ತೆರಳಿ ಗಣತಿಯ ಬಗ್ಗೆ ಅರಿವು ಮೂಡಿಸುತ್ತೇವೆ, ತಾಲ್ಲೂಕು ಕಛೇರಿಗಳಲ್ಲಿ ಸಟರ್ಿಫಿಕೇಟ್ಗಳಿಗಾಗಿ ಆದಿಕನರ್ಾಟಕ ಎಂದು ನಮೂದಿಸಿರುವ ಜನಾಂಗದವರು ಗಣತಿ ಸಂದರ್ಭದಲ್ಲಿ ಮಾದಿಗ ಎಂದು ನಮೂದಿಸಿ, ಇದರಿಂದ ಸವಲತ್ತುಗಳು ದೊರಕುವುದಿಲ್ಲವೆಂಬ ಭಯ ಬೇಡ ಎಂದ ಅವರು ಮಾದಿಗ ಜನಾಂಗದವರು ಗಣತಿ ಅಜರ್ಿಯಲ್ಲಿ ಕಾಲಂ ನಂ 6ರಲ್ಲಿನ ಬಿ061ರಲ್ಲಿ ಮಾದಿಗ ಎಂದು ನಮೂದಿಸುವಂತೆ ಮನವಿ ಮಾಡಿದರು.
ಛಲವಾದಿ ಜನಾಂಗದ ಮುಖಂಡ ದೇವರಾಜು ಮಾತನಾಡಿ, ಆದಿದ್ರಾವಿಡ ಜನಾಂಗದಲ್ಲಿ ಜನಸಂಖ್ಯೆ ಎಷ್ಟಿದೆ ಎಂದು ತಿಳಿಯಲು ಜಾತಿಗಣತಿ ಸಹಕಾರಿಯಾಗಿದ್ದು ಜನಾಂಗದವರು ಗಣತಿ ಸಂದರ್ಭದಲ್ಲಿ ಹೊಲೆಯ ಸಮುದಾಯದವರು ಛಲವಾದಿ ಎಂದು ನಮೂದಿಸಲು ಮನವಿ ಮಾಡಿದ ಅವರು ಗಣತಿಯ ಅಜರ್ಿಯ ಕಾಲಂ ನಂ 6ರಲ್ಲಿ ಬಿ027ರಲ್ಲಿ ಛಲವಾದಿ ಎಂದು ನಮೂದಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಗೋವಿಂದರಾಜು, ಸತೀಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.


 ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಬಳಸುವ ನಿಟ್ಟಿನಲ್ಲಿ ಗಣಿ ಭಾದಿತ ಪ್ರದೇಶದ ಜನರಿಗೆ ಪ್ರಾತಿನಿಧ್ಯ ನೀಡಲು ಒತ್ತಾಯ
ಚಿಕ್ಕನಾಯಕನಹಳ್ಳಿ, : ಗಣಿಗಾರಿಕಾ ಪ್ರದೇಶದಲ್ಲಿ ನಡೆದ ಅಕ್ರಮ ಅದಿರು ಹರಾಜಿನಿಂದ ಸಂಗ್ರಹವಾದ 3ಸಾವಿರ ಕೋಟಿ ಹಣವನ್ನು ಗಣಿಬಾಧಿತ ಪ್ರದೇಶದ ಅಭಿವೃದ್ದಿಗೆ ಬಳಸುವ ನಿಟ್ಟಿನಲ್ಲಿ ಸಕರ್ಾರ ಗಣಿ ಪರಿಸರ ಪುನರ್ ಸ್ಥಾಪನಾ ನಿಗಮ ಸ್ಥಾಪಿಸಲು ಮುಂದಾಗಿದ್ದು ಇದರಲ್ಲಿ ಗಣಿ ಭಾದಿತ ಪ್ರದೇಶದ ಜನರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸಾಮಾಜಿಕ ಕಾರ್ಯಕರ್ತ ನಂಜುಂಡಯ್ಯ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿ ಪ್ರದೇಶಗಳ ಅಕ್ರಮ ಅದಿರಿನಿಂದ ಸಂಗ್ರಹವಾದ ಹಣವನ್ನು ಸವರ್ೋಚ್ಛ ನ್ಯಾಯಾಲಯದ ಆದೇಶದಂತೆ ಗಣಿಭಾದಿತ ಪ್ರದೇಶಗಳಿಗೆ ವೆಚ್ಚ ಮಾಡಬೇಕು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಟಾಸ್ಕ್ಪೋಸರ್್ ಸಮಿತಿ ಸಭೆಯಲ್ಲಿ ಚಚರ್ಿಸಲು ಸ್ಥಳೀಯ ಜನರನ್ನು ಆಯ್ಕೆ ಮಾಡಿ ಸಭೆಯಲ್ಲಿ ಭಾಗವಹಿಸುವಂತೆ ಅವಕಾಶ ನೀಡಬೇಕು ಎಂದರಲ್ಲದೆ, ಗಣಿಭಾದಿತ ಪ್ರದೇಶಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸುವಂತೆ ತಿಳಿಸಿದರೂ ಇದುವರೆವಿಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ, ಈಗಾಗಲೇ ದಂಡದ ರೂಪದಲ್ಲಿ ವಸೂಲಾಗಿರುವ ಹಣ ಸಕರ್ಾರದ ಬೊಕ್ಕಸದಲ್ಲಿದೆ ಈ ಹಣವನ್ನು ಕಾಮಗಾರಿಗಳ ಅನುಷ್ಠಾನಕ್ಕೆ ಶೀಘ್ರ ಆರಂಭಿಸದಿದ್ದರೆ ಬೇರೆ ಯಾವುದಾದರೂ ಉದ್ದೇಶಕ್ಕೆ ಬಳಕೆಯಾಗಲಿದೆ ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಣಿಭಾದಿತ ಪ್ರದೇಶಗಳ ಪುನರ್ವಸತಿ ಮತ್ತು ಪುನಶ್ಚೇತನ ಪರಿಸರಕ್ಕೆ ಸಂಬಂಧಪಟ್ಟ ಅಭಿವೃದ್ದಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೆಲವು ಗಣಿ ಮಾಲೀಕರು ಗಣಿಭಾಗದಲ್ಲಿ ಅಂಗನವಾಡಿ ಕೇಂದ್ರ, ಶೌಚಾಲಯ ಮತ್ತು ಇತರೆ ಕೆಲವು ಅಭಿವೃದ್ದಿ ಮಾಡಿದ್ದೇವೆಂದು ತೋರ್ಪಡಿಸುತ್ತಿದ್ದು ಈ ಕಾಮಗಾರಿಗಳನ್ನು ಸ್ಥಳೀಯ ಜನರಿಗೆ ನೀಡದೆ ಪರಸ್ಥಳದ ಹಾಗೂ ರಾಜಕಾರಣಿಗಳ ಬೆಂಬಲವಿರುವವರಿಗೆ ನೀಡುತ್ತಿದ್ದು ಇಂಥಾ ದ್ವಂದ್ವ ನೀತಿ ಅನುಸರಿಸುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸವರ್ೋಚ್ಚ ನ್ಯಾಯಾಲಯದ ಆದೇಶದಂತೆ ಸ್ಥಳೀಯರಿಗೆ ಮೊದಲ ಆಧ್ಯತೆ ನೀಡಬೇಕು ಇಲ್ಲದೇ ಹೋದರೆ ಈ ಬಗ್ಗೆ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಡೆಕೆರೆ ಗ್ರಾ.ಪಂ.ಸದಸ್ಯರಾದ ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ ಉಪಸ್ಥಿತರಿದ್ದರು.

ಕಾಡು ಹಂದಿಗೆ ಡಿಕ್ಕಿ ಶಿಕ್ಷಕ ಸಾವು
ಚಿಕ್ಕನಾಯಕನಹಳ್ಳಿ, : ಚಿಕ್ಕನಾಯಕನಹಳ್ಳಿ ಯಿಂದ  ಹುಳಿಯಾರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕರೊಬ್ಬರು ಕಾಡುಹಂದಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಮುನ್ನ ಸಾವನ್ನಪ್ಪಿದ್ದಾರೆ.
ತಾಲ್ಲೂಕಿನ ಯಳನಡು ಸಕರ್ಾರಿ ಪ್ರೌಢಶಾಲೆಯ ಶಿಕ್ಷಕ ಚಂದ್ರಯ್ಯ(57) ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರಿಗೆ ತೆರಳುವಾಗ ಆಲದಕಟ್ಟೆ ಸಮೀಪದಲ್ಲಿ ಶನಿವಾರ ರಾತ್ರಿ 7.30ರ ಸುಮಾರಿನಲ್ಲಿ ಅಪಘಾತದ ಸಂಭವಿಸಿದ್ದು,  ತಕ್ಷಣ ಚಿಕ್ಕನಾಯಕನಹಳ್ಳಿ ಸಕರ್ಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದರು,  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ಚಂದ್ರಯ್ಯನವರ ಮಗ ದೀಕ್ಷಿತ್(22) ಎಂಬುವವರಿಗೆ ಗಾಯವಾಗಿದ್ದು ಚಿ.ನಾ.ಹಳ್ಳಿ ಆಸ್ಪತ್ರೆಗೆ ಸೇರಿಸಲಾಗಿದೆ.. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.


ಕಪ್ಪುಹಣ ವಾಪಸ್ ತರದ ಬಿಜೆಪಿ ಸಕರ್ಾರದ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ, : ಬಿಜೆಪಿ ಸಕರ್ಾರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 100 ದಿನದೊಳಗೆ ವಿದೇಶದಲ್ಲಿರುವ ಕಪ್ಪುಹಣವನ್ನು  ವಾಪಾಸ್ ತಂದು ಭಾರತೀಯ ಪ್ರತಿ ಪ್ರಜೆಗೆ 15ಲಕ್ಷ ರೂಪಾಯಿಗಳನ್ನು ಹಂಚುವುದಾಗಿ ಹೇಳಿದ್ದರು ಆದರೆ ಕಳೆದ ಹತ್ತು ತಿಂಗಳಿಂದಲೂ ಬಿಜೆಪಿ ಸಕರ್ಾರ ಅಧಿಕಾರದಲ್ಲಿದ್ದರೂ ಕಪ್ಪುಹಣದ ಬಗ್ಗೆ ಯಾವುದೇ ಚಕಾರವನ್ನು ಎತ್ತುತ್ತಿಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟಿಸಿದ ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು, ಕಪ್ಪು ಹಣದ ಬಗ್ಗೆ ಜನತೆಯ ಪ್ರಶ್ನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರಮೋದಿರವರು ಕೂಡಲೇ ಉತ್ತರಿಸಬೇಕೆಂದು ಆಗ್ರಹಿಸಿ ಶಿರಸ್ತೆದಾರ್ ಶಿವಕುಮಾರ್ರವರ ಮೂಲಕ ಸಕರ್ಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಚಿನಾಹಳ್ಳಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಾತನಾಡಿ,   ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನರೇಂದ್ರಮೋದಿಯವರು ಹಾಗೂ ಅಮಿತ್ಷಾರವರು ಕಪ್ಪುಹಣವನ್ನು ಸಕರ್ಾರ ಅಧಿಕಾರಕ್ಕೆ ಬಂದ 100 ದಿನದೊಳಗೆ ತರುತ್ತೇವೆಂದು ಭರವಸೆ ನೀಡಿದ್ದರೂ ಕಪ್ಪುಹಣದ ಬಗ್ಗೆ ಯಾವ ಚಚರ್ೆಯೂ ನಡೆಯುತ್ತಿಲ್ಲ ಆದ್ದರಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರರವರ ಸೂಚನೆ ಮೇರೆಗೆ ಕಪ್ಪುಹಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 15ಲಕ್ಷ ನಮೂದಿಸಿರುವ ಚೆಕ್ ಮಾದರಿಯ ಕರಪತ್ರವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಮೋದಿಯವರು ಚುನಾವಣಾ ಸಮಯದಲ್ಲಿ ನೀಡಿದ್ದ ಸುಳ್ಳು ಆಶ್ವಾಸನೆಯನ್ನು ಜನತೆಗೆ ಮನದಟ್ಟು ಮಾಡಿ ಕೇಂದ್ರ ಸಕರ್ಾರ ಪೊಳ್ಳು ಭರವಸೆಗಳನ್ನು ದೇಶದ ಜನರಿಗೆ ನೀಡುತ್ತಿದೆ ಎಂದು ತಿಳಿಸಲು ಪ್ರತಿಭಟನೆ ನಡೆಸುತ್ತಿದ್ದೇವೆಂದು ಹೇಳಿದರು.
ಕಪ್ಪುಹಣವನ್ನು ಭಾರತಕ್ಕೆ ತರಲು ಯಾವುದೇ ಒಂದು ನಿಧರ್ಿಷ್ಠವಾದ ಪ್ರಯತ್ನವನ್ನು ಮಾಡಿರದ ಬಿಜೆಪಿ ಸಕರ್ಾರ ಚುನಾವಣಾ ಸಮಯದ ರಾಜಕೀಯ ತಂತ್ರಗಾರಿಕೆಗಾಗಿ ಬಿಜೆಪಿ ಪಕ್ಷ ಮತದಾರರಿಗೆ ಸುಳ್ಳಿನ ಆಶ್ವಾಸನೆ ನೀಡಿದ್ದಾರೆ, ಯುಪಿಎ ಸಕರ್ಾರವಿದ್ದಾಗ ಮೇ. 2012ರಲ್ಲಿ ಶ್ವೇತ ಪತ್ರವನ್ನು ಹೊರಡಿಸಿ ಕಪ್ಪು ಹಣವನ್ನು ತರುವಲ್ಲಿ ಸಕರ್ಾರದ ಪ್ರಯತ್ನಗಳು ಹಾಗೂ ಕಪ್ಪುಹಣದ ಬಗ್ಗೆ ಅಂಕಿ-ಅಂಶಗಳನ್ನು ಮತ್ತು ಸೂಕ್ಷ್ಮವಿಚಾರಗಳನ್ನು ತಿಳಿಸಲಾಗಿತ್ತು, ಯುಪಿಎ ಸಕರ್ಾರದ ಕಪ್ಪು ಹಣದ ಬಗೆಗಿನ ವರದಿಯ ನಂತರವೂ ಕಪ್ಪುಹಣದ ವಿಚಾರವು ತುಂಬ ಸಂಕೀರ್ಣವಾದುದೆಂದು ತಿಳಿದಿದ್ದರೂ ಬಿಜೆಪಿಯು ಸುಳ್ಳು ಆಶ್ವಾಸನೆ, ಸುಳ್ಳು ಭರವಸೆಗಳನ್ನು ನೀಡಿ ದೇಶದ ಜನರನ್ನು ವಂಚಿಸಿದ್ದಾರೆ ಆದ್ದರಿಂದ ಜನತೆಗೆ ಆಶ್ವಾಸನೆ ವಂಚನೆಯ ಬಗ್ಗೆ ಬಹಿರಂಗ ಪಡಿಸಬೇಕಾಗಿದೆ ಎಂದು ಕಾರ್ಯಕರ್ತತರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯತರುಗಳಾದ ಶಶಿಧರ್, ಕೆ.ಜಿ.ಕೃಷ್ಣೆಗೌಡ, ಜ್ಞಾನೇಷ್, ಅಮೀರ್ಪಾಷ, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.


ಏಪ್ರಿಲ್ 10ರಿಂದ 12ರವರೆಗೆ ಹೆಸರಹಳ್ಳಿ-ಗೌಡನಹಳ್ಳಿ ಜಾತ್ರಾಮಹೋತ್ಸವ

ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹೆಸರಹಳ್ಳಿ-ಗೌಡನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಜಾತ್ರಾ ಮಹೋತ್ಸವವು ಇದೇ 10 ರಿಂದ 12ರವರೆಗೆ ನಡೆಯಲಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಹೆಸರಹಳ್ಳಿ ಮತ್ತು ಗೌಡನಹಳ್ಳಿಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರಸ್ವಾಮಿ ಜಾತ್ರಾ ಉತ್ಸವಾದಿಗಳು ನೆರವೇರಲಿದೆ.
10ರಂದು ಗೌಡನಹಳ್ಳಿ ರಂಗನಾಥಸ್ವಾಮಿ ಮದನಿಂಗ ಮತ್ತು ಹೆಸರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀದೇವರು ಮದನಗಿತ್ತಿಯ ಹೊಳೆಸೇವೆ, ಮತ್ತು ಪಾನಕ ಫಲಹಾರ ಸೇವೆ, ಆರತಿಬಾನ ಮತ್ತು ಧ್ವಜಾರೋಹಣ ನೆರವೇರಲಿದೆ.
11ರಂದು ಬೆಳಗ್ಗೆ 7ಕ್ಕೆ ಗೌಡನಹಳ್ಳಿಯಲ್ಲಿ ದೂಪದ ಸೇವೆ, ಮಧ್ಯಾಹ್ನ 3ಕ್ಕೆ ಹೆಸರಹಳ್ಳಿಯಲ್ಲಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಮುಹೂರ್ತ, ಬಂಡಿಬಾನ, ಕಳಸೋತ್ಸವ, ಕಳಸಬಾನ ನೆರವೇರಲಿದೆ.
12ರಂದು ಬೆಳಗ್ಗೆ 7ಕ್ಕೆ ಚಿಕ್ಕಮ್ಮನಹಳ್ಳಿಯಲ್ಲಿ ಗಂಗಾಸ್ನಾನ ಮತ್ತು ಪಾನಕ ಫಲಹಾರ ಸೇವಾರ್ಥ, ಲಕ್ಷ್ಮೀರಂಗನಾಥಸ್ವಾಮಿಗೆ ತುಂಬೆ ಹೂವಿನ ಧಾರೆ, ಬನ್ನಿಮರದ ಪವಾಡ ಹಾಗೂ ಹೆಸರಹಳ್ಳಿಯಲ್ಲಿ ಬನ್ನಿ ಮರ ಹತ್ತಿಸುವ ಪವಾಡ ನಡೆಯಲಿದೆ. ಹೆಸರಹಳ್ಳಿ ಗ್ರಾಮಸ್ಥರಿಂದ ರಾತ್ರಿ 8.30ಕ್ಕೆ ಹೆಸರಹಳ್ಳಿಯಲ್ಲಿ ಮಹಾಮಂಗಳಾರತಿ, ಓಕಳಿ ಉತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನಾಡಜಾಗೃತಿ ಜಿಲ್ಲಾಧ್ಯಕ್ಷ ನಿಂಗರಾಜು ತಿಳಿಸಿದ್ದಾರೆ.

ಬೈಕ್ಗೆ ನಾಯಿ ಡಿಕ್ಕಿ ಯುವಕ ಸಾವು
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹಂದನಕೆರೆ ರಾಮಘಟ್ಟದ ಕೆರೆಕೋಡಿ ಬಳಿ ಆರ್.ಸಿ.ಮರುಳೇಗೌಡ(20) ಎಂಬುವವರು ಭಾನುವಾರ ರಾತ್ರಿ ತಮ್ಮ ಮನೆಯ ವಸ್ತುಗಳನ್ನು ತರಲು ರಾಮಘಟ್ಟದಿಂದ ಹಂದನಕೆರೆಗೆ ತೆರಳುವಾಗ ಕೆರೆಕೋಡಿ ಬಳಿ ಆಕಸ್ಮಿಕ ನಾಯಿ ಅಡ್ಡ ಬಂದಾಗ ಬ್ರೇಕ್ ಹೊಡೆದ ಪರಿಣಾಮ ಡಾಂಬರ್ ರಸ್ತೆಗೆ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ ಪ್ರಥಮ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.





Wednesday, April 1, 2015


ದಬ್ಬೆಘಟ್ಟ ಹಾಗೂ ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿ       ವಿಜೃಂಭಣೆಯಾಗಿ ನೆರವೇರಿದ  ಜಾತ್ರಾಮಹೋತ್ಸವ,       ಅಗ್ನಿಕುಂಡ ಉತ್ಸವ.           
ಚಿಕ್ಕನಾಯಕನಹಳ್ಳಿ : ಪಟ್ಟಣದ ವಾಡರ್್4ರ  ದಬ್ಬೆಘಟ್ಟ ಗ್ರಾಮದ ಮರುಳಸಿದ್ದಸ್ವಾಮಿ ದೇವಾಲಯ ಹಾಗೂ ಪಟ್ಟಣದ ಹೊರವಲಯದ ನಿವರ್ಾಣಸ್ವಾಮಿ ಗದ್ದಿಗೆ ಬಳಿ ಜಾತ್ರಾಮಹೋತ್ಸವದ ಅಂಗವಾಗಿ ದೇವರ ಉತ್ಸವ  ಹಾಗೂ ಅಗ್ನಿಕುಂಡ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. 
ಪಟ್ಟಣದ ದಬ್ಬೆಘಟ್ಟದಲ್ಲಿ ಪ್ರತಿ ವರ್ಷದಂತೆ ಮಂಗಳವಾರ ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾಮಹೋತ್ಸವ ನಡೆಯಿತು. ಸಾವಿರಾರು ಭಕ್ತಾಧಿಗಳು ಜಾತ್ರೆಗೆ ಆಗಮಿಸಿ ಮರುಳಸಿದ್ದಸ್ವಾಮಿಗೆ ಹಣ್ಣು, ಕಾಯಿಯನ್ನು ತಂದು ಭಕ್ತಿ ಭಾವದಿಂದ ದೇವರಿಗೆ ಪೂಜೆ ಸಲ್ಲಿಸಿದರು ಹಾಗೂ ಪಟ್ಟಣದ ದಿಬ್ಬದಹಳ್ಳಿ, ಬಾವನಹಳ್ಳಿ ಸಮೀಪದ ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿಯೂ ಸಹ ಪ್ರತಿ ವರ್ಷದಂತೆ ದೇವರ ಪೂಜೆ ಹಾಗೂ ಅಗ್ನಿಕುಂಡ ಮಹೋತ್ಸವ ನೆರವೇರಿತು.
ನಂತರ ದೇವಾಲಯದ ಬಳಿ ಹಾಕಿದ್ದ ಅಗ್ನಿಕುಂಡಕ್ಕೆ ಉತ್ಸವ ಮೂತರ್ಿಯನ್ನು ಹೊತ್ತ ಭಕ್ತರು ಅಗ್ನಿಕುಂಡ ಹಾದು ಹೊರಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು, ಅಗ್ನಿಕೆಂಡದ ಮೇಲೆ ನಡೆದಾಡುವ ದೃಶ್ಯ ಭಕ್ತಾಧಿಗಳಲ್ಲಿ ಮೈನವರೀಳಿಸುವಂತಿತ್ತು, ಬೆಂಗಳೂರು , ತುಮಕೂರು ಸೇರಿದಂತೆ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವರ ಅಗ್ನಿಕುಂಡದ ನಂತರ ದಾಸೋಹ ಕಾರ್ಯಕ್ರಮ ನಡೆಯಿತು. 
ಈ ಸಂದರ್ಭದಲ್ಲಿ ಮಾತನಾಡಿದ, ದಬ್ಬೆಘಟ್ಟದ ಗ್ರಾಮದ ಮುಖಂಡ ಶಿವಕುಮಾರ್, ಶ್ರೀ ಮರುಳಸಿದ್ದರು ಗ್ರಾಮಕ್ಕೆ ಬಂದು ನೆಲಸಿದ್ದರು ಎಂದು ಪ್ರತೀತಿ ಇದೆ, ಈ ಸಂದರ್ಭದಲ್ಲಿ ಕೆಂಪಮ್ಮ ಮಾರಿ ಬಂದು ಮಾನವರ ಹಾಗೂ ಪ್ರಾಣಿಗಳ ಆಹಾರ ಬೇಕೆಂದಾಗ ಮರುಳಸಿದ್ದರು ಕೊಡಲು ಸಾಧ್ಯವಿಲ್ಲ ಎಂದಾಗ, ಮಾರಿ ಕೆಂಡದ ಉಂಡೆಗಳನ್ನು ಸುರಿದಾಗ ಮರುಳಸಿದ್ದರು ಭಕ್ತರನ್ನು ಹಾಗೂ ಗ್ರಾಮಸ್ಥರನ್ನು ಮಾರಿಯಿಂದ ಕಾಪಾಡಿದರೆಂಬ ಪ್ರತೀತಿ ಇದೆ ಆದ್ದರಿಂದ ಪ್ರತಿ ವರ್ಷದ ಮರುಳಸಿದ್ದರಿಗೆ ಕೆಂಡದ ಸೇವೆಯನ್ನು ಸಲ್ಲಿಸಲಾಗುವುದು ಎಂದರು.
ನಿವರ್ಾಣಸ್ವಾಮಿ ಗದ್ದಿಗೆ ಮಠದಲ್ಲಿ ಉತ್ಸವ ಮೂತರ್ಿಯೊಂದಿಗೆ ಗ್ರಾಮ ದೇವತೆಗಳಾದ ಮಾವೂರದ ಯಲ್ಲಮ್ಮ, ದುರ್ಗಮ್ಮ, ಬ್ಯಾಲಕೆರೆಯಮ್ಮ, ಸೋಮದೇವರೊಂದಿಗೆ ಬಸವಣ್ಣ ಸೇರಿದಂತೆ ನಂಧಿಧ್ವಜ ಹೊತ್ತವರು ಅಗ್ನಿಕೊಂಡ ಹಾಯುವ ಮೂಲಕ ಜಾತ್ರಾಮಹೋತ್ಸವದಲ್ಲಿ ಭಕ್ತಿಯನ್ನು ಸಮಪರ್ಿಸುವ ಮೂಲಕ ವಿಜೃಂಭಣೆಯ ಮೆರಗು ತಂದರು. ಈ ಸಂದರ್ಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಹಾಜರಿದ್ದು ಮುಖಡರುಗಳಾದ ಸಿ.ಬಸವರಾಜು ವಿವಿಧ ಜನಪ್ರತಿನಿಧಿಗಳು  ಗ್ರಾಮದ ಹಿರಿಯರಾದ ಗೋಪಾಲಯ್ಯ, ನಾಗಣ್ಣ ಹಾಗೂ ಭಕ್ತಾಧಿಗಳು ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ರವರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ :  ಡಾ||ಬಾಬು ಜಗಜೀವನರಾಂ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಅವರಲ್ಲಿನ ಆದರ್ಶಗಳನ್ನು ಅರಿವು ಮೂಡಿಸಬೇಕಾದ ಅಧಿಕಾರಿಗಳಲ್ಲಿರುವ ನಿರಾಸಕ್ತಿಯಿಂದಾಗಿ ದಲಿತ ಮನಸ್ಸುಗಳನ್ನು ಕದಡಿದಂತೆ ಮಾಡುತ್ತಿದೆ ಎಂದು ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಪ್ಪ ಆಕ್ರೋಶ ವ್ಯಕ್ತಪಡಿಸಿದರು. 
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಡಾ||ಬಾಬು ಜಗಜೀವನರಾಂ ರವರ 108 ಹಾಗೂ ಡಾ||ಅಂಬೇಡ್ಕರ್ರವರ 124 ನೇ ಜಯಂತಿ ಆಚರಣೆಯನ್ನು ಒಟ್ಟಿಗೆ ಆಚರಿಸುವ ಸಲುವಾಗಿ ಕರೆದಿದ್ದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು,  ಭಾರತದ ಮಹಾನ್ ವ್ಯಕ್ತಿಗಳಾದ ಡಾ||ಬಾಬು ಜಗಜೀವನರಾಂ ಮತ್ತು ಡಾ|| ಬಿ.ಆರ್.ಅಂಬೇಡ್ಕರ್ ಇವರು ಈ ದೇಶದ ಅತ್ಯಮೂಲ್ಯ ಆಸ್ತಿಯಾಗಿದ್ದು ಇವರ ಜನ್ಮ ಆಚರಣೆಯನ್ನು ಸಕರ್ಾರ ಆಚರಿಸುವಂತೆ ಆದೇಶ ನೀಡಿದ್ದರೂ ಇಲ್ಲಿನ ಆಡಳಿತ ನಿರಾಸಕ್ತಿ ತೋರುತ್ತ ಬೇಜವಬ್ದಾರಿ ಎದ್ದು ಕಾಣುತ್ತಿದೆ. ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯತಿಗಳಿದ್ದರೂ ಅಧಿಕಾರಿಗಳೂ ಭಾಗವಹಿಸಿಲ್ಲ. ಅಧಿಕಾರಿಗಳು ಈ ಬಗ್ಗೆ  ಉದಾಸೀನದ ಮನೋಭಾವ ಬಿಟ್ಟು ಎಲ್ಲರೂ ಒಟ್ಟಾಗಿ ಸೇರಿ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳ ಪ್ರತಿ ನಾಗರೀಕರಿಗೂ ತಿಳಿಯುವಂತೆ ಮಾಡುವ ಆಚರಣೆಗೆ ಎಲ್ಲರ ಸಹಕಾರ ಬೇಕು. ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗದ ಜನರಿಗೆ ಇಲಾಖೆಗಳಿಂದ ಸಿಗುವ ಸೌಲಭ್ಯ ಸಮರ್ಪಕವಾಗಿ ಪಡೆಯುವಂತೆ ಮಾಹಿತಿ ಅಗತ್ಯವಾಗಿದೆ. ಇಂತಹ ಜನ್ಮ ಆಚರಣೆಯ ಸಂದರ್ಭದಲ್ಲಿ ಶೋಷಿತ ವರ್ಗದವರನ್ನು ಒಂದು ಕಡೆ ಕಲೆಹಾಕಿ ಆ ಜನರಿಗೆ ಇವರ ಆದರ್ಶಗಳ ಬಗ್ಗೆ ತಿಳಿಸುವ ಕಾರ್ಯಕ್ರಮವಾಗಬೇಕು ಎಂದರು. 
   ದಲಿತ ಮುಖಂಡ ಸಿ.ಎಸ್.ಲಿಂಗದೇವರು ಮಾತನಾಡಿ ಮಹಾನ್ ವ್ಯಕ್ತಿಗಳ ಜನ್ಮ ಆಚರಣೆಗಳು ಸರ್ವಸಮಾಜಕ್ಕೂ ಆಗತ್ಯವಾದ ಆಚರಣೆಯನ್ನು ನಮ್ಮನ್ನಾಳುವ ಸಕರ್ಾರಗಳು ಕೇವಲ ಒಂದೊಂದು ಸಮಾಜಕ್ಕೆ ಅವರನ್ನು ಸೀಮಿತಗೊಳಿಸಿ ಆಚರಿಸುತ್ತಿರುವುದು ಖಂಡನಾರ್ಹ ವಿಷಯ, ಇವರುಗಳೇ ಸಮಾಜಗಳನ್ನು ಒಡೆದು ಅಳುವ ನೀತಿಗೆ ಹೋಗಿರುವುದರಿಂದ ನಮ್ಮ ನಾಯಕರ ಆಚರಣೆಯನ್ನು ಸಹ ತಾಲ್ಲೂಕು ಆಡಳಿತ ಮತ್ತು ದಲಿತ ಸಂಘಟನೆಗೆ ಸಿಮಿತಗೊಳಿಸಿಬೇಡಿ ಎಂದು ಮನದಾಳದ ಆಕ್ರೋಶವನ್ನು ಬಿಚ್ಚಿಟ್ಟರು. 
ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಕ್ಷಮ್ಮ ಮಾತನಾಡಿ ಒಂದು ಸಮಾಜಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲಾ ಆಚರಣೆಯ ಸಂದರ್ಭದಲ್ಲಿ ಭಾಗವಹಿಸಿದರೆ ಯಾರ ಅಡ್ಡಿಯೂ  ಇರುವುದಿಲ್ಲ ಎಲ್ಲರೂ ಒಟ್ಟಾಗಿ ಆಚರಿಸುವ ಆಚರಣೆಯಾಗಬೇಕು ಇದಕ್ಕೆ ಎಲ್ಲರ ಸಹಕಾರವೂ ಇದ್ದು ಅಧಿಕಾರಿಗಳ ಸಹಕಾರವು ನಮಗೆ ಸಿಗುತ್ತಿದೆ ಜೊತೆಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
 ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಲತಾಕೇಶವಮೂತರ್ಿ ಪುರಸಭಾಧ್ಯಕ್ಷೆ ರೇಣುಕಮ್ಮ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ನಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ಶೆಟ್ಟಿ, ಬಿ.ಇ.ಓ ಕೃಷ್ನಮೂತರ್ಿ ಬೆಸ್ಕಾಂ ಎ.ಇ.ಇ.ರಾಜಶೇಖರ್, ಕೃಷಿ ಸಹಾಯಕ ನಿದರ್ೇಶಕ ಹೊನ್ನೆದಾಸೆಗೌಡ, ಕೃಷ್ಣನಾಯಕ್ ತಾಲ್ಲುಕು ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ ಉಪಸ್ಥಿತರಿದ್ದರು.


ಹೆಚ್ಚುವರಿ ಶಿಕ್ಷಣರ ತಾತ್ಕಾಲಿಕ ಪಟ್ಟಿ ಪ್ರಕಟ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಮಾ.31: 2014-15ನೇ ಸಾಲಿನ ಸಕರ್ಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಥರ್ಿ, ಶಿಕ್ಷಕರ ಅನುಪಾತದಂತೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ತಾತ್ಕಾಲಿಕ ಪಟ್ಟಿಯನ್ನು ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಬಿ.ಇ.ಓ. ಕೃಷ್ಣಮೂತರ್ಿ ತಿಳಿಸಿದ್ದಾರೆ.
ಈ ಹೆಚ್ಚುವರಿ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಮಥರ್ಿಸ ಬಲ್ಲಂತಹ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4ರ ಒಳಗೆ ಕಛೇರಿಯ ನೋಡಲ್ ಅಧಿಕಾರಿಗಳಿಗೆ ಮುದ್ದಾಂ ಸಲ್ಲಿಸುವುದು, ತಡವಾಗಿ ಬಂದಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದು.
ಬಿ.ಆರ್.ಪಿ ಮತ್ತು ಸಿ.ಆರ್.ಪಿ.ಹುದ್ದೆಗಳಿಗೆ ಪರೀಕ್ಷೆ: 2015-16ನೇ ಸಾಲಿನ ಸಿ.ಆರ್.ಪಿ. ಮತ್ತು ಬಿ.ಆರ್.ಪಿ. ಖಾಲಿ ಹುದ್ದೆಗಳನ್ನು ಭತರ್ಿ ಮಾಡುವ ಸಂಬಂಧ ಅರ್ಹ ಶಿಕ್ಷಕರಿಂದ ಅಜರ್ಿಗಳನ್ನು ಆಹ್ವಾನಿಸಲಾಗಿದೆ. 
ಅಜರ್ಿ ಸಲ್ಲಿಸಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ 31.5.2015ಕ್ಕೆ 10 ವರ್ಷ ಸೇವೆ ಹಾಗೂ ಆ ಶಾಲೆಯಲ್ಲಿ ಕನಿಷ್ಟ ಮೂರು ವರ್ಷ ಸೇವೆ ಪೂರ್ಣಗೊಳಿಸಿರಬೇಕು, ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಹುದ್ದಗಳಿಗೆ ಅಜರ್ಿ ಸಲ್ಲಿಸುವ ಶಿಕ್ಷಕರು ದಿ. 31.05.2015ಕ್ಕೆ ಐದು ವರ್ಷ ಸೇವೆ ಹಾಗೂ ಆ ಶಾಲೆಯಲ್ಲಿ ಕನಿಷ್ಟ ಮೂರು ವರ್ಷ ಸೇವೆ ಪೂರ್ಣಗೊಳಿಸಿರುವುದು ಕಡ್ಡಾಯವಾಗಿರುತ್ತದೆ.
ದಿನಾಂಕ 31.05.215ಕ್ಕೆ ಗರಿಷ್ಟ ವಯೋಮಿತಿ 50 ವರ್ಷ ಮೀರಿರಬಾರದು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಹೆಚ್ಚಿನ ಮಾಹಿತಿಯನ್ನು ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಅಜರ್ಿ ಸಲ್ಲಿಸಲು ಕೊನೆ ದಿನಾಂಕ 16.04.2015, ಲಿಖಿತ ಪರೀಕ್ಷೆ 26.04.2015 ಅಜರ್ಿ ಸಲ್ಲಿಸುವ ಸ್ಥಳ ಕ್ಷೇತ್ರ ಸಮನ್ಯಯಾಧಿಕಾರಿಗಳು ಬಿ.ಆರ್.ಸಿ. ಕಛೇರಿ ಚಿ.ನಾ.ಹಳ್ಳಿ ಇಲ್ಲಿ ಸಂಪಕರ್ಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೀನಂಶ್ರೀ ಭವನ ಶೀಘ್ರ ಪೂರ್ಣಗೊಳಿಸಲು ವಿಪ್ರ ಹಿತರಕ್ಷಣಾ ವೇದಿಕೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಏ.01 : ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಕುಂಟುತ್ತಾ ಸಾಗುತ್ತಿರುವ ತೀ.ನಂ.ಶ್ರೀಕಂಠಯ್ಯ ಭವನ ಕಾಮಗಾರಿಯನ್ನು ತ್ವರಿತವಾಗಿ ಪೂರೈಸುವಂತೆ ಹಾಗೂ ತೀ.ನಂ.ಶ್ರೀ  ಭವನವನ್ನು ವಿಪ್ರ ಹಿತರಕ್ಷಣ ವೇದಿಕೆಗೆ ಹಸ್ತಾಂತರಿಸುವಂತೆ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ ಸಕರ್ಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ನಡೆದ ವಿಪ್ರ ಹಿತರಕ್ಷಣಾ ವೇದಿಕೆ ಮಾಸಿಕ ಸಭೆಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಶೆಟ್ಟಿಕೆರೆ ವಿಶ್ವನಾಥ್, ತಾಲ್ಲೂಕಿನ ತೀರ್ಥಪುರದ ಹೆಸರಾಂತ ಸಾಹಿತಿ  ತೀ.ನಂ.ಶ್ರೀಯವರ  ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ತೀ.ನಂ.ಶ್ರೀ ಭವನದಲ್ಲಿ ಸುಸ್ಸಜಿತ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದ ಅವರು  ಸಾಹಿತ್ಯ ಕ್ಷೇತ್ರದ ಚಟುವಟಿಕೆಗಳಿಗೆ ಪೂರಕವಾಗುವಂತೆ ಈ ಭವನ ನಿಮರ್ಿಸಬೇಕು, ಪ್ರತಿ ಸೋಮವಾರದಂದು ಇಲ್ಲಿ ನಡೆಯುತ್ತಿರುವ ಸಂತೆಯನ್ನು ಬೇರೆಡೆಗ ಸ್ಥಳಾಂತರಿಸಬೇಕು ಎಂದರು.
ತಾಲ್ಲೂಕಿವ ವಿಪ್ರ ಸಮುದಾಯದವರ ಶ್ರೇಯೋಭಿವೃದ್ದಿಗಾಗಿ ವಿಪ್ರ ಹಿತರಕ್ಷಣಾ ವೇದಿಕೆಯಿಂದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ತಾಲ್ಲೂಕಿನ ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರು ಸಂಘದ ಸದಸ್ಯತ್ವ ಪಡೆಯಬೇಕೆಂದು ಸಧ್ಯ ನಡೆಯುವ ಜಾತಿಗಣತಿಯಲ್ಲಿ ಒಳಪಂಗಡಗಳನ್ನು ನಮೂದಿಸದೆ ಜಾತಿ ಸೂಚಕದಲ್ಲಿ ಬ್ರಾಹ್ಮಣ ಎಂದೆ ನಮೂದಿಸಿ ಎಂದು ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಗಾಯಿತ್ರಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗುತ್ತಿದ್ದು ಆಥರ್ಿಕವಾಗಿ ಹಿಂದುಳಿದ ವಿಪ್ರ ಸಮಾಜದ ಅಭಿವೃದ್ಧಿಗಾಗಿ ಸ್ಥಾಪಿಸಲಿದ್ದು, ತಾಲ್ಲೂಕಿನಾದ್ಯಂತ ವಿಪ್ರ ಸಂಘ ಚಟುವಟಿಕಗಳಲ್ಲಿ ತೊಡಗಿಸಿಕೊಂಡಿದ್ದು ಗಾಯಿತ್ರಿ ಪತ್ತಿನ ಸಹಕಾರ ಸಂಘಕ್ಕೆ  ಮುಖ್ಯ ಪ್ರವರ್ತಕರನ್ನಾಗಿ ಹುಳಿಯಾರಿನ ಲೋಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ, ನೋಂದಣಿ ಕಾರ್ಯ ಪೂರ್ಣಗೊಂಡ ನಂತರ ತಾಲ್ಲೂಕಿನಾದ್ಯಂತ ಸಂಚರಿಸಿ ಷೇರು ಹಣವನ್ನು ಸಂಗ್ರಹಿಸಲಾಗುವುದು ಎಂದರು. 
 ಪಟ್ಟಣದ ಕೆರೆ ಬಳಿಯಲ್ಲಿ ಇರುವ ದಹನ ಕಾರ್ಯಕ್ಕೆ ನೆರವಾಗಲು ಸುಸಜ್ಜಿತ ಮುಕ್ತಿಧಾಮ ನಿಮರ್ಿಸಲು ತೀಮರ್ಾನಿಸಿದ್ದು ಮುಕ್ತಿಧಾಮ ಅಭಿವೃದ್ದಿ ಸಮಿತಿಯನ್ನು ರಚಿಸಲಾಗಿದ್ದು ಸ್ಮಶಾನ ಭೂಮಿಯ ಹಸ್ತಾಂತರಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದು ಈ ಮುಕ್ತಿಧಾಮಕ್ಕೆ 10ಲಕ್ಷ ರೂಪಾಯಿ ತಗಲುವ ಅಂದಾಜಿದ್ದು ದಾನಿಗಳ ನೆರವಿನಿಂದ ಕಾಮಗಾರಿ ನಡೆಸಲು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವಿಪ್ರಹಿತರಕ್ಷಣಾ ವೇದಿಕೆ ಅಧ್ಯಕ್ಷ ನರೇಂದ್ರಬಾಬು, ಸ್ಥಾಯಿಸಮಿತಿ ಅಧ್ಯಕ್ಷ ಹು.ಕೃ.ವಿಶ್ವನಾಥ್, ಕಾರ್ಯದಶರ್ಿ ಮಧುಸೂದನ್ ರಾವ್, ಪದಾಧಿಕಾರಿಗಳಾದ ಸಿ.ಡಿ.ರವಿ, ತೀರ್ಥಪುರ ಶ್ರೀಕಂಠಪ್ರಸಾದ್, ಶ್ರೀನಿವಾಸ್,ರಂಗನಾಥಪ್ರಸಾದ್, ರಾಜೀವಲೋಚನ, ಸೂರ್ಯನಾರಾಯಣ, ಗಣೇಶ್,ಮೋಹನ್, ಲಕ್ಷ್ಮಿನಾರಾಯಣ, ಭಾಸ್ಕರ್, ರವಿಕುಮಾರ್ ,ರಂಗನಾಥ ಉಡುಪ ಮತ್ತಿತರರಿದ್ದರು.






Monday, March 30, 2015


 ಜಾತಿಗಣತಿಯಲ್ಲಿ ವೈಷ್ಣವ ಜನಾಂಗದವರು ಶ್ರೀ ವೈಷ್ಣವ ಎಂದೇ ನಮೂದಿಸಲು ಮನವಿ
                    
ಚಿಕ್ಕನಾಯಕನಹಳ್ಳಿ : ರಾಜ್ಯ ಸಕರ್ಾರ ಜಾತಿಗಳ ಗಣತಿ ಮಾಡಲು ಆದೇಶಿಸಿದ ಹಿನ್ನಲೆಯಲ್ಲಿ, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಶ್ರೀ ವೈಷ್ಣವ ಸಮುದಾಯದವರು ಶ್ರೀ ವೈಷ್ಣವ ಎಂದೇ ಗಣತಿಯಲ್ಲಿ ನಮೂದಿಸುವಂತೆ ತಾಲ್ಲೂಕು ಶ್ರೀ ವೈಷ್ಣವ ಸಂಘದ ಅಧ್ಯಕ್ಷ ಸಾಲ್ಕಟ್ಟೆ ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೇ.99ರಷ್ಟು ಜನ ಅರ್ಚಕ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿರುವ ಶ್ರೀ ವೈಷ್ಣವರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದು ಯಾವುದೇ ಜಮೀನು ಇಲ್ಲದೆ ಆಥರ್ಿಕವಾಗಿ ಹಿಂದುಳಿದಿರುವುದರಿಂದ ಹಿಂದುಳಿದವರಿಗೆ ನೀಡುವ ಸವಲತ್ತುಗಳನ್ನು ಶ್ರೀ ವೈಷ್ಣವ ಸಮುದಾಯದವರಿಗೂ ನೀಡುವಂತೆ ಸಕರ್ಾರವನ್ನು ಒತ್ತಾಯಿಸಿದ್ದಾರೆ, ಶ್ರೀ ವೈಷ್ಣವ ಜನಾಂಗದ ಉಪಜಾತಿಗಳ ಪ್ರಕಾರ, ವೈಷ್ಣವ, ಶಾತ್ತದ ಶ್ರೀ ವೈಷ್ಣವ, ಸಾತಾನಿ, ಸಮಯರಾಯ, ಕದ್ರಿವೈಷ್ಣವ, ಸಾತ್ತದವಲ್ ಈ ಎಲ್ಲಾ ಉಪಪಂಗಡಗಳನ್ನು ಶ್ರೀ ವೈಷ್ಣವ ಎಂದೇ ನಮೂದಿಸಲು ಮನವಿ ಮಾಡಿದ್ದಾರೆ.
 ಮೇಲು ಕೋಟೆಯ ಮಜುರಾಯ ಇಲಾಖೆಗೆ ಸೇರಿದ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಉಸ್ತುವಾರಿ ನಡೆಸಲು ಯದುಗಿರಿ ಯತಿರಾಜ ಮಠದ ವಶಕ್ಕೆ ನೀಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ರಾಮಾನುಜಾಚಾರ್ಯರು ಜಾತಿ ಬೇಧವಿಲ್ಲದೆ ಎಲ್ಲರನ್ನೂ ಒಂದೇ ಎಂದು ಸಾರಿದ ಮಹಾನ್ಪುರುಷ, 1017ರಲ್ಲಿ ಜನಿಸಿದ ರಾಮಾನುಜಾಚಾರ್ಯರು 120 ವರ್ಷಗಳ ಕಾಲ ಜೀವಿಸಿದ್ದರು. 2017ನೇ ಇಸವಿಗೆ ಅವರ ಸಹಸ್ರಮನೋತ್ಸವ ಜಯಂತ್ಯೋತ್ಸವವನ್ನು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಸಲು ತೀಮರ್ಾನಿಸಲಾಗಿದೆ ಎಂದರಲ್ಲದೆ ಅಂದೇ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯ ನಿಮರ್ಾಣಕ್ಕೆ ಹರಿಜನರ ಸಹಕಾರದೊಂದಿಗೆ ದೇವಾಲಯ ನಿಮರ್ಾಣ ಮಾಡಲು ಸಹಕಾರ ಪಡೆದಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಿಪಟೂರು ಶ್ರೀ ವೈಷ್ಣವ ಸಂಘದ ಅಧ್ಯಕ್ಷ ದೇವರಾಜು, ಗುಬ್ಬಿ ವೈಷ್ಣವ ಸಂಘದ ತಾ.ಅಧ್ಯಕ್ಷ ದಯಾನಂದ್, ತಾ.ಉಪಾಧ್ಯಕ್ಷ ಶ್ರೀನಿವಾಸ್, ಕೇಶವಮೂತರ್ಿ, ಕೃಷ್ಣಮೂತರ್ಿ, ಸಾದರಹಳ್ಳಿ ಗ್ರಾ.ಪಂ.ಸದಸ್ಯ ರಂಗನಾಥ್, ಸಿದ್ದನಕಟ್ಟೆ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ರಾಮ ಸಪ್ತಾಹ ಏಳು ದಿನಗಳ ಕಾರ್ಯಕ್ರಮ
                                      

ಚಿಕ್ಕನಾಯಕನಹಳ್ಳಿ,: ಪಟ್ಟಣದ ದೇವಾಂಗ ಬೀದಿಯ ಶ್ರೀ ರಾಮ ಸಪ್ತಾಹದ ಸಮಿತಿ ವತಿಯಿಂದ ಶ್ರೀ ರಾಮ ಸಪ್ತಾಹ 71 ವರ್ಷಗಳಿಂದಲೂ ನಡೆಸುತ್ತಾ ಬಂದಿದ್ದು ಶ್ರೀ ರಾಮನವಮಿ ಅಂಗವಾಗಿ ಮಾಚರ್್ 28ರಿಂದ ಏಪ್ರಿಲ್ 3 ರವರೆಗೆ ಏಳು ದಿನಗಳ ಕಾಲ ಶ್ರೀ ರಾಮ ಸಪ್ತಾಹ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಾಚರ್್ 20 ರಂದು ಶ್ರೀ ರಾಮ ಭಕ್ತಿ ಗೀತೆಗಳ ಗಾಯನ , 30 ರಂದು ಶಾಲಾ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ, 31ರಂದು ಅಭಿನವ ಕಲಾ ಸಂಘದವರಿಂದ ನಗೆ ನಾಟಕ ಕಾರ್ಯಕ್ರಮ, ಏಪ್ರಿಲ್ 1ರಂದು ಯುವ ಕಲಾವಿದರಿಂದ ನಗೆಹನಿ ಮತ್ತು ಏಕಪಾತ್ರಾಭಿನಯ, 2ರಂದು ಬನಶಂಕರಿ ಮಹಿಳಾ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಕೊನೆಯ ದಿನ 3ರಂದು ಬೆಳಗ್ಗೆ 9ಗಂಟೆಗೆ ಹೋಮಾದಿ ಕಾರ್ಯಕ್ರಮಗಳು ಪೂಣರ್ಾಹುತಿ ಬೆಳಗ್ಗೆ 11.30ಕ್ಕೆ ವಸಂತೋತ್ಸವ ಹಾಗೂ ಬನಶಂಕರಿ ದೇವಿಯವರ ಉತ್ಸವ ನಡೆಯಲಿದೆ.
ರಾತ್ರಿ 9ಕ್ಕೆ ಸಮಾರೋಪ ಸಮಾರಂಭ ನಡೆಯಲಿದು,್ದ ಏಪ್ರಿಲ್ 7ರಂದು ಭಕ್ತಾಧಿಗಳ ನೆರವಿನೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ.  
ಈ ಸಂದರ್ಭದಲ್ಲಿ ಮಾತನಾಡಿದ ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್ ಮಾತನಾಡಿ, 71ವರ್ಷಗಳಿಂದಲೂ ಶ್ರೀ ರಾಮ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು ಶ್ರೀ ರಾಮನವಮಿಯ ದಿನದಿಂದ ಏಳು ದಿನಗಳ ವರೆಗೆ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ ನಂತರ ಓಕಳಿ,ವಸಂತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಕನ್ನಡ ಸಂಘದ ವೇದಿಕೆಯ ಮೇಲ್ಛಾವಣಿ ಕಾಮಗಾರಿಗೆ ಗುದ್ದಲಿ ಪೂಜೆ
                      

ಚಿಕ್ಕನಾಯಕನಹಳ್ಳಿ : ಕನ್ನಡ ಸಂಘದ ಚಟುವಟಿಕೆಗಳಿಗೆ ಹಾಗೂ ತಾಲ್ಲೂಕಿನ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿದ್ದ ಕನ್ನಡ ಸಂಘದ ವೇದಿಕೆಯ ಮೇಲ್ಛಾವಣಿಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀರವರು ತಮ್ಮ ಅನುದಾನದಲ್ಲಿ ಬಿಡುಗಡೆ ಮಾಡಿರುವ 12.5ಲಕ್ಷ ರೂ ಹಣದಲ್ಲಿ ಮೇಲ್ಛಾವಣಿ ಕಾಮಗಾರಿಗೆ  ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯ ಬಳಿ ನೂತನವಾಗಿ ನಿಮರ್ಾಣವಾಗುತ್ತಿರುವ ವೇದಿಕೆಯ ಮೇಲ್ಛಾವಣಿಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕನ್ನಡ ಸಂಘದ ವೇದಿಕೆಯು 36 ವರ್ಷಗಳ ಹಿಂದೆ ಪ್ರಾರಂಭವಾಗಿದೆ, ಈ ಸಂಘದ ವೇದಿಕೆಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಹ ಅನುದಾನ ಬಿಡುಗಡೆ ಮಾಡಿದ್ದಾರೆ, ವೇದಿಕೆಯ ಮುಂಭಾಗದ ಮೇಲ್ಛಾವಣಿಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ 12.5 ಲಕ್ಷ ರೂಗಳನ್ನು ಅನುದಾನವನ್ನು ಬಿಡುಗಡೆ ಮಾಡಿದ್ದು ಇದರಿಂದ ಪಟ್ಟಣದಲ್ಲಿ ನಡೆಯುವ ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆ, ನಾಟಕೋತ್ಸವ ಕಾರ್ಯಕ್ರಮಗಳಿಗೆ ಈ ವೇದಿಕೆ ಅನುಕೂಲ ಕಲ್ಪಿಸಲಿದೆ ಎಂದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಕನ್ನಡ ಸಂಘದ ವೇದಿಕೆಗೆ ಎಲ್ಲಾ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ, ವೇದಿಕೆ ಹಾಗೂ ಮೇಲ್ಛಾವಣಿ ನಿಮರ್ಾಣ ಮಾಡಿರುವುದರಿಂದ ಪಟ್ಟಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದರು. ಈಗ ಗುದ್ದಲಿ ಪೂಜೆ ನೆರವೇರಿಸಿದ್ದು ಎರಡು ತಿಂಗಳ ಒಳಗೆ ಮೇಲ್ಛಾವಣಿ ಕಾಮಗಾರಿ ಮುಗಿಯಲಿದೆ ಎಂದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಾತನಾಡಿ, 36 ವರ್ಷಗಳ ಹಿಂದೆ ಆರಂಭವಾದ ಕನ್ನಡ ಸಂಘದ ವೇದಿಕೆಯ ಅಭಿವೃದ್ದಿಯಲ್ಲಿ ಸಂಘದ ಅಧ್ಯಕ್ಷರಾದ ಸೀಮೆಎಣ್ಣೆ ಕೃಷ್ಣಯ್ಯನವರ ಹಾಗೂ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿರವರ ಪರಿಶ್ರಮವಿದೆ, ಸಂಘದ ವೇದಿಕೆ ಹಾಗೂ ಮೇಲ್ಛಾವಣಿ ಕಾಮಗಾರಿಯಿಂದ ತಾಲ್ಲೂಕಿನ ಜನತೆಗೆ ಸಂಪೂರ್ಣ ಉಪಯೋಗವಾಗಲಿದೆ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಚಿ.ನಾ.ಪುರುಷೋತ್ತಮ್, ಸಾಲ್ಕಟ್ಟೆಶ್ರೀನಿವಾಸ್, ಕೆ.ಜಿ.ಕೃಷ್ಣೆಗೌಡ, ಶ್ರೀನಿವಾಸ್, ಜಯರಾಮಯ್ಯ, ರಾಜಣ್ಣ, ಸಿ.ಎಸ್.ನಟರಾಜು, ರವಿಕುಮಾರ್, ರವಿ ಮತ್ತಿತತರರು ಉಪಸ್ಥಿತರಿದ್ದರು.

ಅಕ್ರಮ ಮರಳು ವಶ, ಬಡವರಿಗೆ ಮನೆ ಕಟ್ಟಿಕೊಳ್ಳಲು ನೀಡುವಂತೆ ದಸಂಸ ಮುಖಂಡರ ಒತ್ತಾಯ
                      
ಚಿಕ್ಕನಾಯಕನಹಳ್ಳಿ,: ಚಿ.ನಾ.ಹಳ್ಳಿ ತಾಲ್ಲೂಕಿನ ಹಂದನಕೆರೆ ಬಳಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ವಶಪಡಿಸಿಕೊಂಡಿರುವ ಮರಳನ್ನು ಲೋಕೋಪಯೋಗಿ ಇಲಾಖೆಯವರು ಸಕರ್ಾರದ ಯೋಜನೆಗಳ ಮೂಲಕ ಮನೆ ಕಟ್ಟಿಕೊಳ್ಳುತ್ತಿರುವ ಬಡವರಿಗೆ ರಿಯಾಯಿತಿ ದರದಲ್ಲಿ ನೀಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಡಿಎಸ್ಎಸ್ ಮುಖಂಡ ಲಿಂಗದೇವರು ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂದನಕೆರೆ ಬಳಿ ಗ್ರಾಮಗಳಲ್ಲಿ ಅಕ್ರಮವಾಗಿ ಶೇಖರಿಸಿದ್ದ ಮರಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಆಶ್ರಯ ಯೋಜನೆ, ಅಂಬೇಡ್ಕರ್ ಯೋಜನೆ, ಇಂದಿರಾ ಅವಾಜ್ ಹಾಗೂ ಬಸವ ವಸತಿ ಯೋಜನೆಗಳ ಮೂಲಕ ಸಕರ್ಾರದ ವತಿಯಿಂದ ಮನೆ ಕಟ್ಟಿಕೊಳ್ಳುತ್ತಿರುವ ಬಡವರಿಗೆ ರಿಯಾಯಿತಿ ದರದಲ್ಲಿ ನೀಡಿದರೆ ಅವರು ಮನೆ ಕಟ್ಟಿಕೊಳ್ಳುವಾಗ ಉಂಟಾಗುವ ಸಮಸ್ಯೆಯನ್ನು ನಿವಾರಿಸಬಹುದು ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೋವಿ ಜನಾಂಗದ ಮುಖಂಡ ಸತೀಶ್ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಪುರಸಭೆ 8.99ಲಕ್ಷ ಉಳಿತಾಯ ಬಜೆಟ್
                                 

ಚಿಕ್ಕನಾಯಕನಹಳ್ಳಿ, : 2015-16ನೇ ಸಾಲಿಗೆ ಚಿ.ನಾ.ಹಳ್ಳಿ ಪುರಸಭೆ 8.99ಲಕ್ಷ ರೂ ಉಳಿತಾಯ ಬಜೆಟ್ನ್ನು ಪುರಸಭೆ ಬಹುಮತದಿಂದ ಅಂಗೀಕರಿಸಿತು.
ಪುರಸಭಾಧ್ಯಕ್ಷೆ ರೇಣುಕಮ್ಮನವರ ಅಧ್ಯಕ್ಷತೆಯಲ್ಲಿ ಆಯವ್ಯಯ ಅಂದಾಜು ಪಟ್ಟಿಯನ್ನು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್ ಮಂಡಿಸಿದರು.
ಪುರಸಭಾ ಸಾರ್ವಜನಿಕ ಕಾಮಗಾರಿಗಳಿಗಾಗಿ 11ಲಕ್ಷ ರೂ ವೆಚ್ಚ ಮಾಡಲು ತೀಮರ್ಾನಿಸಿತ್ತು, ಪುರಸಭಾ ವತಿಯಿಂದ ಸಾರ್ವಜನಿಕ ಕಾಮಗಾರಿಗಳಿಗಾಗಿ 25 ಲಕ್ಷ ರೂ ವೆಚ್ಚ ಮಾಡಲು ಸಭೆ ನಿರ್ಧರಿಸಿದ ಪರಿಣಾಮ, ಉಳಿತಾಯದ 4ಲಕ್ಷ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ನೀರಿನ ಅನುಕೂಲತೆಯ ಹಣದಲ್ಲಿ 10ಲಕ್ಷ ರೂ ಸೇರಿಸಿ 25ಲಕ್ಷ ರೂ ವಿನಿಯೋಗಿಸುವಂತೆ ತೀಮರ್ಾನಿಸಲಾಯಿತು. 12.99ಲಕ್ಷ ರೂ ಇದ್ದ ಉಳಿತಾಯ ಬಜೆಟ್ನಲ್ಲಿ ಸಾರ್ವಜನಿಕ ಕಾಮಗಾರಿಗಳಿಗೆ 4ಲಕ್ಷ ತೆಗೆದಿದ್ದರಿಂದ ಉಳಿತಾಯ 8.99ಲಕ್ಷ ರೂಪಾಯಿ ಉಳಿತಾಯದ ಬಜೆಟ್ನ್ನು ಸಭೆ ಸವರ್ಾನುಮತದಿಂದ ಅಂಗೀಕರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯ ಮಹಮದ್ ಖಲಂದರ್ ಮಾತನಾಡಿ, ಪಟ್ಟಣದ ವಿವಿಧ ವಾಡರ್್ಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡುತ್ತಿದ್ದು ಕಳಪೆ ಕಾಮಗಾರಿಗಳಾಗುತ್ತಿವೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಸಲಹೆ ನೀಡಿದ ಅವರು ಸಿ.ಸಿ.ರಸ್ತೆಗೆ ಗುತ್ತಿಗೆದಾರರು ಸರಿಯಾಗಿ ನೀರು ಹಾಕಿ ಕ್ಯೂರಿಂಗ್ ಮಾಡುತ್ತಿಲ್ಲ ಇದರಿಂದ ರಸ್ತೆ ಬೇಗ ಹಾಳಾಗುತ್ತದೆ ಎಂದರು.
ಸಕರ್ಾರ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಶೌಚಾಲಯಗಳನ್ನು ನಿಮರ್ಿಸಲು ಸಹಾಯಧನ ನೀಡಲು ಸಕರ್ಾರದ ಆದೇಶ ಬಂದ ನಂತರ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಸಭೆಯಲ್ಲಿ ತಿಳಿಸಿದರು.
2013-14ರಲ್ಲಿ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 75 ಮನೆಗಳು ಬಂದಿದ್ದು,  2015-16ರಲ್ಲಿ 200 ಮನೆಗಳನ್ನು ಮಂಜೂರು ಮಾಡಲು ಪುರಸಭೆ ಠರಾವು ಮಾಡಿ ಸಕರ್ಾರಕ್ಕೆ ಕಳಿಸಲು ಸಭೆಯಲ್ಲಿ ತೀಮರ್ಾನಿಸಿದರು ಹಾಗೂ ಪಟ್ಟಣದ ಹೊಸಬಸ್ನಿಲ್ದಾಣದ ಹಾಗೂ ಪುರಸಭೆ ಪಕ್ಕದ ಎರಡು ಮಳಿಗೆ ಹಾಗೂ ಮಟನ್ ಮಾಕರ್ೆಟ್ ಬಳಿ ಇರುವ 5 ಅಂಗಡಿ ಮಳಿಗೆಗಳು ಹಾಗೂ ವೆಂಕಟರಮಣ ದೇವಾಲಯದ ಹತ್ತಿರವಿರುವ ಪುರಸಭಾ ಮಳಿಗೆಗಳನ್ನು ಹರಾಜು ಮಾಡಲು ಸಭೆ ತೀಮರ್ಾನಿಸಿತು.
ಸಂತೆ ಮೈದಾನದ ಬಳಿ ಹಾಗೂ ಮಾರುಕಟ್ಟೆ ಬಳಿ ಶೌಚಾಲಯ ನಿಮರ್ಿಸಲು ಸದಸ್ಯ ಸಿ.ಪಿ.ಮಹೇಶ್ ಅಧಿಕಾರಿಗಳಿಗೆ ಆಗ್ರಹಿಸಿದರು.
ಇನ್ನು ಎರಡು ತಿಂಗಳಿನಲ್ಲಿ ಶೌಚಾಲಯ ನಿಮರ್ಿಸಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ತಿಳಿಸಿದರು.
ವೆಂಕಟರಮಣ ದೇವಾಲಯದ ಬಳಿ ಖಾಲಿ ಇರುವ ಮಳಿಗೆಗಳಿಗೆ 1ಸಾವಿರ ರೂ ಬಾಡಿಗೆ ಹಾಗೂ 50 ಸಾವಿರ ರೂಪಾಯಿ ಮುಂಗಡ ಡೆಪಾಸಿಟ್ ಮಾಡಲು ಜಿಲ್ಲಾಧಿಕಾರಿಯವರಿಗೆ ಕಳಿಸಲು ಸಭೆ ತೀಮರ್ಾನಿಸಿತು.
ಪುರಸಭೆಯ ಜೆ.ಸಿ.ಬಿ.ಯನ್ನು ರಿಪೇರಿ ಮಾಡಿಸಿ, ರಿಪೇರಿಯಾಗದೇ ಹೋದರೆ ಗುಜರಿಗೆ ಹಾಕಿ ಎಂದು ಸಿ.ಪಿ.ಮಹೇಶ್ ಹೇಳಿದರು.
ಪುರಸಭೆಯ ಅಂಗಡಿ ಮಳಿಗೆಗಳನ್ನು ಕೂಗಿದವರು ಸ್ಥಳದಲ್ಲಿ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ತಿಳಿಸಿದರು.
ಪುರಸಭಾ ಸದಸ್ಯೆ ರೂಪಾ ಮಾತನಾಡಿ, ನಮ್ಮ ವಾಡರ್್ಗೆ ನೀರು ಹರಿಸಲು ಅನೇಕ ಬಾರಿ ಮನವಿ ಮಾಡಿದರೂ ನಮ್ಮ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿ ಕೂಡಲೇ ವಾಡರ್್ಗೆ ನೀರು ಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರುಗಳಾದ ರೇಣುಕಮ್ಮ, ಪ್ರೇಮದೇವರಾಜು, ಪುಷ್ಪ.ಟಿ.ರಾಮಯ್ಯ, ಇಂದಿರಾಪ್ರಕಾಶ್, ಗೀತಾರಮೇಶ್, ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಮಲ್ಲೇಶಯ್ಯ, ಅಶೋಕ್, ಸಿ.ಡಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಕೆರೆ ಒತ್ತುವರಿ ಖರಾಬು ತೆರವುಗಳಿಸುವಂತೆ ರೈತರ ಮನವಿ 

                             
ಚಿಕ್ಕನಾಯಕನಹಳ್ಳಿ,ಮಾ.30 : ಕೆಲವು ಪ್ರಭಾವಿ ರೈತರು ಒತ್ತುವರಿ ಮಾಡಿಕೊಂಡಿರುವ ಖರಾಬು ತೆರವುಗೊಳಿಸುವಂತೆ ಒತ್ತಾಯಿಸಿ ಕಾತ್ರಿಕೆಹಾಲ್ ಹಾಗೂ ಮದನಮಡು ಸುತ್ತಮುತ್ತ ಗ್ರಾಮಗಳ ರೈತರು ಸಕರ್ಾರವನ್ನು ಒತ್ತಾಯಿಸಿ ತಹಶೀಲ್ದಾರ್ ಕಾಮಾಕ್ಷಮ್ಮನವರಿಗೆ ಮನವಿ ಸಲ್ಲಿಸಿದರು. 
ತಾಲ್ಲೂಕಿನ ಕಂದಿಕೆರೆ ಹೋಬಳಿ ಗುಡ್ಡಗಾಡಿನಿಂದ ಕೂಡಿದ್ದು ಶೇ.95ರಷ್ಟು ರೈತರು ವ್ಯವಸಾಯ ಹಾಗೂ ಪಶುಪಾಲನೆ ವೃತ್ತಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದೇವೆ, ಹತ್ತಾರು ವರ್ಷಗಳಿಂದ ಈ ಭಾಗಕ್ಕೆ ಸರಿಯಾಗಿ ಮಳೆಯಾಗದೇ ಅಂತರ್ಜಲ ಕಡಿಮೆಯಾಗಿ ತೆಂಗು, ಬಾಳೆ, ಅಡಿಕೆ ಮುಂತಾದ ಬೆಳೆಗಳು ಒಣಗಿ ಹೋಗಿದ್ದು ಕುಡಿಯುವ ನೀರಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ, 1000 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ, ತೆಂಗು ಅಡಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿ ಹಗಲು ಕಷ್ಟಪಟ್ಟರು, ಏನೂ ಪ್ರಯೋಜನವಾಗುತ್ತಿಲ್ಲ, ಇದರಿಂದ ರೈತರು ಲಕ್ಷಾಂತರ ರೂಪಾಯಿಗಳನ್ನು ಖಚರ್ು ಮಾಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರದೇ ರೈತ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾತಗಿದೆ, 20 ರಿಂದ 25 ವರ್ಷದ ಹುಡುಗರು ಜಮೀನಿನಲ್ಲಿ ತಂದೆ ತಾಯಿಗಳನ್ನು ಬಿಟ್ಟು ಪಟ್ಟಣಗಳಿಗೆ ಕೆಲಸ ಹುಡಿಕಿಕೊಂಡು ಗುಳೇ ಹೋಗುವಂತಾಗಿದೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದಂತಾಗಿದೆ ಈ ಸಂದರ್ಭದಲ್ಲಿ ಕೆಲವು ಪ್ರಭಾವಿ ಮುಖಂಡರು ಕೆರೆಯ ಖರಾಬು ಹಳ್ಳಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಇದರ ಬಗ್ಗೆ ಕಾನೂನು ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವಂತೆ ರೈತರು ಆಗ್ರಹಿಸಿದ್ದಾರೆ.
ಕೂಡಲೇ ಹೇಮಾವತಿ ನಾಲೆಯಿಂದ ಮದನಮಡು ಕಾತ್ರಿಕೆಹಾಲ್, ಜಾಣೇಹಾರ್ ಭಾಗಗಳಿಗೆ ನೀರು ಹರಿಸಿದರೆ ಮಾತ್ರ ಈ ಭಾಗದ ಜನರು ಬದುಕುಳಿಯಲು ಸಾಧ್ಯ ಎಂದು ರೈತ ಮುಖಂಡರು ಸಕರ್ಾರವನ್ನು ಒತ್ತಾಯಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಪೋಡಿ ಆಂದೋಲನ ಮಾಡುತ್ತಿರುವುದರಿಂದ ಎಲ್ಲಾ ಸವರ್ೆಯರ್ಗಳಿಗೆ 4ನೇ ತಾರೀಖಿನವರೆಗೂ ಪೋಡಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರಿಗೆ ಕೆಲಸದ ಒತ್ತಡವಿದೆ ಎಂದ ಅವರು ಏಪ್ರಿಲ್ 6ರ ನಂತರ ಸವರ್ೆಯರ್ಗಳನ್ನು ಕರೆದುಕೊಂಡು ಖರಾಬಿನ ಸ್ಥಳಗಳಿಗೆ ಭೇಟಿ ನೀಡಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮನವಿ ಪತ್ರವನ್ನು ಅಪರ್ಿಸಿದರು.
ಈ ಸಂದರ್ಭದಲ್ಲಿ ರೈತರುಗಳಾದ ವಸಂತ್ಕುಮಾರ್, ಕಾತ್ರಿಕೆಹಾಲ್ ಕುಮಾರ್, ವಿರೂಪಾಕ್ಷಪ್ಪ, ಯೋಗಾನಂದಪ್ಪ, ಕೋದಂಡರಾಮು, ಲೋಕೇಶ್, ಗಂಗಾಧರಯ್ಯ, ಜಯಪ್ರಕಾಶ್, ವಸಂತ್ಕುಮಾರ್ ಮುಂತಾದವರು ಉಪಸ್ಥಿತರಿದ್ದರು.


ಆಟೋ ಚಾಲಕರ ಜಾಥಾ ಚಿ.ನಾ.ಹಳ್ಳಿಗೆ ಆಗಮನ
                          

ಚಿಕ್ಕನಾಯಕನಹಳ್ಳಿ,ಮಾ.30: ರಾಜ್ಯದ ಆಟೋ ಚಾಲಕರು ತಮ್ಮ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾಚರ್್ 24 ರಿಂದ ಏಪ್ರಿಲ್ 12ರವರೆಗೆ ರಾಜ್ಯಾದ್ಯಂತ ಸಿಐಟಿಯು ನೇತೃತ್ವದಲ್ಲಿ ಆಟೋ ಚಾಲಕರ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಕಾರ್ಯದಶರ್ಿ ಪಿ.ಎನ್.ರವಿ ಹೇಳಿದರು.  
ದಾವಣಗೆರೆ ಹಾಗೂ ಬೆಂಗಳೂರಿನಿಂದ ಹೊರಟ ಆಟೋ ಚಾಲಕರ ಜಾಥಾ ಸೋಮವಾರ ಚಿಕ್ಕನಾಯಕನಹಳ್ಳಿಗೆ ಆಗಮಿಸಿ ನಂತರ ನೆಹರು ವೃತ್ತದಲ್ಲಿಪಟ್ಟಣದ ಆಟೋಚಾಲಕರೊಂದಿಗೆ ಮಾತನಾಡಿದ ಪಿ.ಎನ್.ರವಿ, ಆಟೋ ಚಾಲಕರ ರಾಜ್ಯ ತರಬೇತಿ ಶಿಬಿರ ಮೇ 15ರಿಂದ 17ರವರೆಗೆ ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ನಡೆಯಲಿದ್ದು ಶಿಬಿರಕ್ಕೆ ರಾಜ್ಯದ ನಾನಾ ಭಾಗಗಳಿಂದ ಆಟೋ ಚಾಲಕರು ಭಾಗವಹಿಸಲಿದ್ದಾರೆ ಎಂದ ಅವರು, ಆಟೋ ಚಾಲಕರಿಗೆ ಪರವಾನಿಗೆ ನೀಡುವಾಗ ವಿದ್ಯಾರ್ಹತೆ 8ನೇ ತರಗತಿ ಕಡ್ಡಾಯಗೊಳಿಸಿರುವುದು ಸರಿಯಲ್ಲ, ರಾಜಕಾರಣಿಗಳು ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಸಂಸತ್ತು ಹಾಗೂ ವಿಧಾನಸಭೆಗೆ ಸ್ಪಧರ್ಿಸಲು ಏಕೆ ವಿದ್ಯಾರ್ಹತೆ ನಿಗಧಿಪಡಿಸಿಲ್ಲ ಎಂದು ಪ್ರಶ್ನಿಸಿದ ಅವರು, ಅಸಂಘಟಿತ ಕಾಮರ್ಿಕರ ಕಲ್ಯಾಣ ಮಂಡಳಿಯಲ್ಲಿ ಆಟೋ ಚಾಲಕರ ನೊಂದಣಿ, ಗುರುತಿನ ಪತ್ರ ಹಾಗೂ ಕಲ್ಯಾಣ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು. ಇಲ್ಲಿಯವರೆಗೆ ಚಾಲಕರನ್ನು ನೊಂದಣಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಿಲ್ಲ  ಸಕರ್ಾರ ಬಜೆಟ್ನಲ್ಲಿ ಹೆಚ್ಚುವರಿ ಹಣವನ್ನು ನೀಡಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಆಟೋ ಚಾಲಕರನ್ನು ಕ್ರಿಮಿನಲ್ಗಳಂತೆ ನೋಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರಾದ ಗಂಗರಾಜು, ಈಶ್ವರಯ್ಯ,, ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.