Tuesday, November 1, 2016


ಚಿಕ್ಕನಾಯಕನಹಳ್ಳಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ 
ಚಿಕ್ಕನಾಯಕನಹಳ್ಳಿ.ನ.01 : ಜಗತ್ತಿನಲ್ಲಿರುವ ಎಲ್ಲಾ ಭಾಷೆ ಕಲಿಯಬೇಕು ಆದರೆ ನಮ್ಮ ಮಾತೃ ಭಾಷೆಯಾಗಿರುವ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ಕನ್ನಡವನ್ನು ಇತರರಿಗೆ ಕಲಿಸಿ ಬೆಳೆಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 61ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನವಂಬರ್ನಲ್ಲಿ ನಾವು ಕನ್ನಡಿಗರಾಗದೇ ವರ್ಷವಿಡೀ ಕನ್ನಡಿಗರಾಗಬೇಕು, ವಿದ್ಯಾಥರ್ಿಗಳು ರಾಷ್ಟ್ರ, ರಾಜ್ಯದ ಬಗ್ಗೆ ಅಭಿಮಾನ ಬೆಳೆಸಿ ಶಿಸ್ತನ್ನು ರೂಢಿಸಿಕೊಳ್ಳಬೇಕು, ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಎಂದು ತಿಳಿಸಿದರು.
  ಕನ್ನಡ ನಾಡಿನಲ್ಲಿ ಹುಟ್ಟಿರುವ ಎಲ್ಲರೂ ಕನ್ನಡಾಭಿಮಾನವನ್ನು ಹೊಂದುವುದು ಖಡ್ಡಾಯವಾಗಬೇಕು, ಈ ನೆಲದ ನೀರು, ಭೂಮಿ, ಸಂಪತ್ತು ಹಂಚಿಕೊಂಡು ಇಲ್ಲಿಯ ಭಾಷಾ ಅಭಿಮಾನ ಬೆಳಸಿಕೊಳ್ಳದಿದ್ದರೆ ಹೇಗೆ ಎಂದು ತಿಳಿಸಿದರಲ್ಲದೆ ಕಾವೇರಿ ತೀಪರ್ಿಗೆ ತಲೆಬಾಗಿ ಬೇರೆಯವರಿಗೆ ನೀರು ನೀಡುವ ಪರಿಸ್ಥಿತಿ ಉಂಟಾಗಿದೆ, ಈಗಾಗಲೇ ರಾಜ್ಯದಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು.  
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಗಂಗೇಶ್ ಮಾತನಾಡಿ, ಕ್ರಿ.ಶ.850ರಲ್ಲಿ ಕವಿರಾಜಮಾರ್ಗದಲ್ಲಿ ಕನ್ನಡ ಉಜ್ವಲವಾಯಿತು, ಆ ಸಾಹಿತ್ಯದಲ್ಲಿ ಕನರ್ಾಟಕದ ವಿಸ್ತಾರ, ವರ್ಣನೆಯ ಬಗ್ಗೆ ತಿಳಿದುಕೊಳ್ಳಲಾಯಿತು, ಕಾವೇರಿಯಿಂದ ಗೋದಾವರಿಯವರೆಗೂ ಕನರ್ಾಟಕ ವಿಸ್ತರಿಸಿದೆ ಎಂದ ಅವರು, 1956 ನವಂಬರ್ 1ರಂದು ಕನ್ನಡಿಗರೆಲ್ಲರ ಹೆಮ್ಮಯ ವಿಶಾಲ ಮೈಸೂರು ರಾಜ್ಯ ಉದಯವಾಯಿತು, 1973ರಲ್ಲಿ ಮೈಸೂರು ರಾಜ್ಯವನ್ನು ಕನರ್ಾಟಕ ಎಂದು ಅಂದಿನ ಮುಖ್ಯಮಂತ್ರಿ ದೇವರಾಜು ಅರಸು ಅವಧಿಯಲ್ಲಿ ನಾಮಕರಣ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಸಿ.ಬಿ.ಲೋಕೇಶ್, ಭಾಗವತ ಹನುಮಂತಯ್ಯನವರ ಮಗ ಬಸವರಾಜುರನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. 
ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಗಂಗೇಶ್, ಬಿಇಓ ಕೃಷ್ಣಮೂತರ್ಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಸಬ್ಇನ್ಸೆಪೆಕ್ಟರ್ ಮಂಜುನಾಥ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಉಳಿಸುವ ಅರಿವು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡಿಗರ, ಕನ್ನಡಾಂಬೆಯ ವೇಷಭೂಷಣಗಳನ್ನು ತೊಟ್ಟ ವಿದ್ಯಾಥರ್ಿಗಳು ಟ್ರಾಕ್ಟರ್ ಮೂಲಕ ಮೆರವಣಿಗೆ ನಡೆಸಿದರು. ಶಾಲಾ ವಿದ್ಯಾಥರ್ಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬಾಕ್ಸ್-1
ಕನ್ನಡ ರಾಜ್ಯೋತ್ಸವ ನವಂಬರ್ 1ರಂದು ತಿಳಿದಿದ್ದರೂ ಜನಪ್ರತಿನಿಧಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾತ್ರ ಕೆಲವರು ಆಗಮಿಸಿದ್ದರು, ತಹಶೀಲ್ದಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪುರಸಭಾ ಮುಖ್ಯಾಧಿಕಾರಿ ಬಿಟ್ಟರೆ ಬೇರೆ ಇಲಾಖೆಯ ಯಾವ ತಾಲೂಕು ಮಟ್ಟದ ಅಧಿಕಾರಿಗಳು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ ಹಾಗೂ ತಾ.ಪಂ.ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಟ್ಟದ ಸದಸ್ಯರು ಸಹ ಕಾರ್ಯಕ್ರಮಕ್ಕೆ ಬರದಿದ್ದದ್ದು ಕನ್ನಡ ರಾಜ್ಯೋತ್ಸವದ ಬಗ್ಗೆ ಇರುವ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ ಎಂಬುದು  ಸಾರ್ವಜನಿಕರ ಅಭಿಪ್ರಾಯ. 


ತಾಲ್ಲೂಕಿಗೆ ಶೀಘ್ರ ನೀರಾವರಿ ಯೋಜನೆ ಆರಂಭಿಸಲು ಹೋರಾಟ ಸಮಿತಿ ಜಿಲ್ಲಾಧಿಕಾರಿ, ಸಚಿವರಿಗೆ ಮನವಿ ಅಪರ್ಿಸಲು ನಿಯೋಗ 
ಚಿಕ್ಕನಾಯಕನಹಳ್ಳಿ,ನ.01 : ತಾಲ್ಲೂಕಿಗೆ ಶೀಘ್ರ ಹೇಮಾವತಿ ನೀರು ಹರಿಸುವುದು, ಎತ್ತಿನಹೊಳೆ ಮತ್ತು ಭದ್ರಾಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ತಾಲ್ಲೂಕು ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಹಾಗೂ ಸಚಿವರಿಗೆ ಮನವಿ ಅಪರ್ಿಸಲು ನಿಯೋಗ ತೆರಳಿತು.
ಹೇಮಾವತಿ ನಾಲಾ ಕಾಮಗಾರಿ ಆರಂಭವಾಗಿ ಹಲವು ವರ್ಷಗಳು ಕಳೆದರೂ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳುತ್ತಲೇ ಇಲ್ಲ, ತಾಲ್ಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ಮಳೆಯ ಅಭಾವ ಕೂಡ ಹೆಚ್ಚಾಗಿ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೆ ಒಣಗುತ್ತಿದೆ ಇದರಿಂದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಜೊತೆಗೆ , ಜಾನುವಾರುಗಳಿಗೂ ಹಾಗೂ ಕೃಷಿ ಬೆಳೆಗೂ ನೀರಿನ ಸಮಸ್ಯೆ ಹೆಚ್ಚಿದೆ ಆದ್ದರಿಂದ ಹೇಮಾವತಿ ಜೊತೆಗೆ ಎತ್ತಿನಹೊಳೆ ಹಾಗೂ ಭದ್ರಮೇಲ್ದಂಡೆ ನೀರಾವರಿ ಯೋಜನೆಯನ್ನು ತಾಲ್ಲೂಕಿಗೆ ಶೀಘ್ರ ತರುವಂತೆ ಒತ್ತಾಯಿಸಲಾಗುವುದು ಎಂದು ತಾಲ್ಲೂಕು ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿಯ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ತುಮಕೂರಿಗೆ ತೆರಳಿದ ನಿಯೋಗದಲ್ಲಿ ಹೋರಾಟ ಸಮಿತಿಯ ಕೆಂಕೆರೆಸತೀಶ್, ಸಿ.ಹೆಚ್.ಚಿದಾನಂದ್, ಸಿ.ಡಿ.ಚಂದ್ರಶೇಖರ್, ಸಿ.ಟಿ.ಗುರುಮೂತರ್ಿ, ದಬ್ಬೆಘಟ್ಟಜಗದೀಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಗೋಡೆಕೆರೆಯ ಶ್ರೀತುರುಬಿನಮ್ಮ ದೇವಾಲಯ ನೂತನ ವಿಗ್ರಹ ಪ್ರತಿಷ್ಠಾಪನೆ 
ಚಿಕ್ಕನಾಯಕನಹಳ್ಳಿ,ನ.1 : ತಾಲ್ಲೂಕಿನ ಗೋಡೆಕೆರೆಯ ಶ್ರೀತುರುಬಿನಮ್ಮ ದೇವರ ಜೀಣರ್ೋದ್ದಾರ,  ನೂತನ ದೇವಾಲಯ ಪ್ರವೇಶ, ನೂತನ ವಿಗ್ರಹ ಶಿಖರ ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಸಮಾರಂಭ ನವಂಬರ್ 3ರಿಂದ 4ರವರೆಗೆ ಶ್ರೀ ಕ್ಷೇತ್ರ ಗೋಡೆಕೆರೆಯಲ್ಲಿ ನಡೆಯಲಿದೆ.
3ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಗೋಡೆಕೆರೆ ಜಗದ್ಗುರು ಸಿದ್ದರಾಮೇಶ್ವರಸ್ವಾಮಿಯ ಆಗಮನದೊಂದಿಗೆ ಗಂಗಾಪೂಜೆ, ರುದ್ರಪಠಣ ಆಲಯ ಪ್ರವೇಶ, ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗಿನ ಜಾವ 4ರಿಂದ 5ಗಂಟೆಯವರೆಗೆ ಸಲ್ಲುವ ಶುಭ ಬ್ರಾಹ್ಮಿ ಲಗ್ನದಲ್ಲಿ ಮೃತ್ಯುಂಜಯದೇಶೀಕೇಂದ್ರಸ್ವಾಮಿಗಳ ಅಮೃತ ಹಸ್ತದಿಂದ ಶ್ರೀ ತುರುಬಿನಮ್ಮ ದೇವಿ ಮತ್ತು ಶ್ರೀ ಪಾತಪ್ಪಸ್ವಾಮಿ ದೇವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಸಿದ್ದರಾಮದೇಶೀಕೇಂದ್ರಸ್ವಾಮಿಗಳ ಅಮೃತ ಹಸ್ತದಿಂದ ನೂತನ ಶಿಖರಕ್ಕೆ ಕಲಶ ಪ್ರತಿಷ್ಠಾಪನೆ ನಡೆಯಲಿದೆ.
ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ, ಸಿದ್ದರಾಮದೇಶೀಕೇಂದ್ರಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ, ಚಿತ್ರದುರ್ಗ ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮೀಜಿ, ಆದಿಜಾಂಬವ ಮಠದ ಷಡಕ್ಷರಿಮುನಿ ದೇಶೀಕೇಂದ್ರಸ್ವಾಮೀಜಿ ಧಾಮರ್ಿಕ ಸಮಾರಂಭ ಉದ್ಘಾಟಿಸುವರು. ಚಿತ್ರದುರ್ಗ ಯಾದವಾನಂದಸ್ವಾಮೀಜಿ, ಹೊಸದುರ್ಗ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿಸ್ವಾಮೀಜಿ, ಶಾಸಕ ಸಿ.ಬಿ.ಸುರೇಶ್ಬಾಬು ಆಗಮಿಸಲಿದ್ದಾರೆ.

Friday, September 30, 2016



ಸಿಡಿಪಿಓ ಕಛೇರಿಯಿಂದ ಮಕ್ಕಳಿಗೆ ಆಧಾರ್ ನೊಂದಣಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುವ ಆಧಾರ್ ನೊಂದಣಿ ಕಾರ್ಯದಿಂದ ತಾಲ್ಲೂಕಿನ ಮಕ್ಕಳ ಸಂಖ್ಯೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಈ ಮೂಲಕ ಆರಂಭದಿಂದಲೇ ಮಕ್ಕಳ ದೊರಕುತ್ತದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಪ್ಪಯ್ಯ ಹೇಳಿದರು.
ಪಟ್ಟಣದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಸಂಖ್ಯೆ ನೊಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧಾರ್ ನೊಂದಣಿ ದೇಶದ ಯಾವುದೇ ಮೂಲೆಯಲ್ಲಿದ್ದರು ಇಂತಹ ವ್ಯಕ್ತಿಯೇ ಎಂಬುದು ಪತ್ತೆಯಾಗುವ ಸಾಧನ, ಈ ನೊಂದಣಿಯಿಂದ ಸಕರ್ಾರಿ ಸೌಲಭ್ಯಗಳಿಗೂ ಸಹಾಯವಾಗುತ್ತದೆ ಇದನ್ನು ಪ್ರತಿ ಮಗುವು ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕು ಎಂದರು.
ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ ಮಾತನಾಡಿ, ಸಕರ್ಾರ ನೀಡಿರುವ ಟ್ಯಾಬ್ ಮೂಲಕ ಮಕ್ಕಳ ನೊಂದಣಿ ಮಾಡುವುದರಿಂದ ಸಮಗ್ರ ವರದಿ ಲಭ್ಯವಾಗುತ್ತದೆ, ಈ ನೊಂದಣಿಯಿಂದ ಯಾವುದೇ ಮಾಹಿತಿಯ ಕೊರತೆ ಉಂಟಾಗಲಾರದು ಎಂದರು. 
ಈ ಸಂದರ್ಭದಲ್ಲಿ ಮಕ್ಕಳಿಂದ ಹೆಬ್ಬೆಟ್ಟು ಗುರುತು ಪಡೆಯುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೇಲ್ವಚಾರಕಿ ಅನುಸೂಯಮ್ಮ, ಮಹದೇವಮ್ಮ, ಲಕ್ಷ್ಮಯ್ಯ, ಶಾರದಮ್ಮ, ಪ್ರಮೀಳಾ, ಚೌಗತಿ ಹಾಜರಿದ್ದು ನೊಂದಣಿ ಕಾರ್ಯ ನೆರವೇರಿಸಿದರು.


ಎಪಿಎಂಸಿ ರೈತ ಸಂಜೀವಿನಿ ಯೋಜನೆ ವತಿಯಿಂದ ಮೃತ

ರೈತನ ಕುಟುಂಬಕ್ಕೆ 1ಲಕ್ಷ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ, : ಮೃತ ರೈತ ಕುಟುಂಬಕ್ಕೆ ಸಕರ್ಾರ ನೀಡುವ ಪರಿಹಾರದ ಹಣವನ್ನು ಬದುಕು ಕಟ್ಟಿಕೊಳ್ಳಲು ತೊಡಗಿಸಿಕೊಂಡು ಜೀವನವನ್ನು ಸದೃಡ ಮಾಡಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಸವರಾಜು ಹೇಳಿದರು.
ಕೆಲವು ತಿಂಗಳ ಹಿಂದೆ ಚುಂಗನಹಳ್ಳಿ ಗ್ರಾಮದ ರೈತ ಮಧುಸೂದನ್ ಟ್ಯಾಕ್ಟರ್ನಲ್ಲಿ ತೆಂಗಿನಕಾಯಿ ತುಂಬಿಕೊಂಡು ಬರುವ ವೇಳೆ ಟ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಬಗ್ಗೆ ಸೂಕ್ತ ದಾಖಲಾತಿ ಪಡೆದು ಸಕರ್ಾರಕ್ಕೆ ವರದಿ ಸಲ್ಲಿಸಿದ ಪ್ರಸ್ಥಾವನೆಯಿಂದಾಗಿ ಮೃತ ವ್ಯಕ್ತಿಯ ಪತ್ನಿ ಆಶಾರಾಣಿ ರವರಿಗೆ ರೈತ ಸಂಜೀವಿನಿ ಯೋಜನೆಯಡಿ 1 ಲಕ್ಷ.ರೂ ಮೊತ್ತದ ಚೆಕ್ ನೀಡಲಾಗಿದೆ ಈ ಹಣವನ್ನು ನಿಮ್ಮ ಆಥರ್ಿಕ ಭದ್ರತೆಗೆ ತೊಡಗಿಸಿಕೊಳ್ಳುವಂತೆ ಹೇಳಿದರು. 
ಎ.ಪಿ.ಎಂ.ಸಿ ಕಾರ್ಯದಶರ್ಿ ಶ್ರೀನಿವಾಸ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ರೈತ ಭಾಗಿಯಾಗಿದ್ದಾಗ ಅಪಘಾತ ಅಥವಾ ಸಾವು ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ವಸ್ತು ಸ್ಥಿತಿಯ ದಾಖಲೆ ಸಂಗ್ರಹಿಸಿ ರೈತ ಸಂಜೀವಿನಿ ವಿಮಾ ಯೋಜನೆಯಡಿ ಪರಿಹಾರ ಹಣ ನೀಡಲಾಗುತ್ತದೆ ಇದರಿಂದ ಸಂಕಷ್ಟಕ್ಕೊಳಗಾದವರ ಆಥರ್ಿಕ ಸಮಸ್ಯೆ ದೂರ ಮಾಡುವ ಪ್ರಯತ್ನ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ಶಿವರಾಜು, ಈಶಣ್ಣ ಹಾಜರಿದ್ದರು.