Saturday, November 13, 2010


ಮಕ್ಕಳ ದಿನಾಚರಣೆಯ ಈ ದಿನ, ಬೀದಿ ಮಕ್ಕಳ ಬಗ್ಗೆಯೂ ಆಲೋಚಿಸಿ.
ಚಿಕ್ಕನಾಯಕನಹಳ್ಳಿ : ತುತ್ತು ಅನ್ನಕ್ಕಾಗಿ ಹೊಟ್ಟೆ ತುಂಬಿಸಿಕೊಳ್ಳವ ಹಂಬಲದಿಂದ ಶಾಲೆ ಬಿಟ್ಟು ಸಾಕು ಪ್ರಾಣಿ, ಮತ್ತು ನಿಜರ್ೀವ ವಸ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಚಿಕ್ಕ ಪುಟ್ಟ ಪ್ರತಿಭೆಗಳನ್ನು ಬಳಸಿ, ಊರೂರು ಅಲೆದು ಹಣ ಸಂಪಾದಿಸಿ ಜೀವನವನ್ನು ಕಳೆಯುವ ಸಾವಿರಾರು ಮಕ್ಕಳಿಗೆ ಇನ್ನೂ ಸಹ ಮಕ್ಕಳ ದಿನಾಚರಣೆ ಕಾಣುವ ಸೌಭಾಗ್ಯವಿಲ್ಲ.
ದಿ.ಮಾಜಿ ಪ್ರದಾನಿ ಜವಹಾರ್ಲಾಲ್ ನೆಹರು ರವರ ಜನ್ಮ ದಿನಾಚರಣೆಯನ್ನು ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಭವ್ಯ ಭಾರತದ ಸತ್ ಪ್ರಜೆಗಳನ್ನು ರೂಪಿಸಲು ಹೊರಟಿರುವ ಸಕರ್ಾರ, ಶಾಲೆಗೆ ಮಕ್ಕಳನ್ನು ಕರೆತರಲು ಪ್ರಾಥಮಿಕ ಮತ್ತು ಪ್ರೌಡಶಾಲೆಗಳಿಗೆ ಮಧ್ಯ್ಯಾಹ್ನದ ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಪ್ರೌಡಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದರೂ, ಬಡತನದಿಂದ ಹಾಗೂ ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳು ಶಾಲೆ ಬಿಟ್ಟು ಚಿಕ್ಕ ವಯಸಿನಲ್ಲೇ ಬೀದಿ ಬೀದಿ ಅಲೆದು ದುಡಿಮೆಗೆ ಇಳಿಯುವ ಪ್ರವೃತ್ತಿ ತಪ್ಪಿಲ್ಲ.
ಇಂದು ಬಡತನದ ಹಿನ್ನೆಲೆ ಇರುವ ಕುಟುಂಬಗಳ ಮಕ್ಕಳು ತಾತ್ಕಾಲಿಕವಾಗಿ ಉದರ ಪೊಷಣೆ ಮಾಡಿಕೊಳ್ಳಲು ಬೀದಿಗಿಳಿದು ಚಿಕ್ಕಾಸು ದುಡಿಯುವ ಆಲೋಚನೆಯನ್ನು ಮಾಡುವುದು ಒಂದು ಕಡೆಯಾದರೆ, ಇನ್ನು ಕೆಲವು ಮಕ್ಕಳು ಮಾಂಸಖಂಡಗಳು ಬಲಿಯುವ ಮೊದಲೇ ಹಲವು ಕಾಖರ್ಾನೆ, ಅಂಗಡಿಗಳಲ್ಲಿ ದುಡಿಯುವ ಅನಿವಾರ್ಯತೆಗಳು ಎದುರಾಗಿದೆ. ಇದರಿಂದಾಗಿ ಬಡವರ ಮಕ್ಕಳನ್ನು ಕರೆದು ಕೆಲಸ ನೀಡುವ ಸಾಹುಕಾರರು, ಕಡಿಮೆ ಸಂಬಳಕ್ಕೆ ಎಲ್ಲಾ ಕೆಲಸವನ್ನು ಮಾಡಿಸಿಕೊಳ್ಳುವುದರ ಜೊತೆಗೆ ದೈಹಿಕ ಹಿಂಸೆಯನ್ನು ನೀಡುವ ಕೀಳು ಮನೋಭಾವ ಇನ್ನೂ ಹೋಗಿಲ್ಲ. ಬಾಲಕಾಮರ್ಿಕ ನಿಷೇಧ ಕಾಯಿದೆ ಇವರನ್ನು ಏನು ಮಾಡಲಾಗಿಲ್ಲ.
ವಿದ್ಯಾಬ್ಯಾಸ ಮಾಡಿದರೆ ಸಕರ್ಾರಿ ನೌಕರಿಯೇ ಸಿಗಬೇಕು ಎಂಬ ಆಲೋಚನೆ ದೂರವಾಗಿ, ಸಮಾಜಕ್ಕೆ ಮಾರಕವಾಗದಂತಹ ಯಾವುದೇ ಕ್ಷೇತ್ರವಾದರೂ ಸರಿಯೇ ಬದುಕು ರೂಪಿಸಿಕೊಳ್ಳುವಂತಹ ಶಿಕ್ಷಣವನ್ನು ಪಡೆಯುವುದು ಮುಖ್ಯ ಎಂಬುದನ್ನು ಮನಗಾಣದ ಹಲವರು, ಬಾಲ್ಯದಲ್ಲೇ ಮಕ್ಕಳಿಗೆ ಕಾಸಿನ ರುಚಿ ತೋರಿಸಿ ಬುದ್ದಿ ಬರುವ ಮೊದಲೇ ದುಡಿಮೆಗೆ ಇಳಿಸಿ, ಇದರಿಂದ ನಿನ್ನ ಜೀವನಕ್ಕೆ ಒಂದು ದಾರಿಯಾಗುತ್ತದೆ ಹೋಗು ಎಂಬ ಭ್ರಮೆಯನ್ನು ತುಂಬುವ ಬೇಜವಬ್ದಾರಿ ತಂದೆ-ತಾಯಿಗಳು ತಮ್ಮ ನಿಲುವನ್ನ ಮಕ್ಕಳಿಗೆ ತುಂಬವುದರ ಮೂಲಕ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಲು ಮುಂದಾಗುತ್ತಾರೆ, ಇಂತಹ ಕೆಟ್ಟ ನಿಲುವುಗಳನ್ನು ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದು ಶಿಕ್ಷಣ ಆಸಕ್ತರ ಆಲೋಚನೆಯಾಗಿದೆ. ಇದು ಅವರದಷ್ಟೇ ಅಭಿಪ್ರಾಯವಲ್ಲ ದೇಶಪ್ರೇಮಿಗಳೆಲ್ಲರ ನಿಧರ್ಾರ.
ಇಷ್ಟೇ ಅಲ್ಲದೆ ಜೀವನವೆಂದರೇನು ಎಂದು ತಿಳಿಯದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ಕ್ರಿಯೆಗಳು ಮಕ್ಕಳ ಮೇಲೆ ಬಹಳ ಅಗಾಧವಾಗಿ ಪರಿಣಾಮ ಬೀರುತ್ತಿದ್ದು ಇದರಿಂದ ಕೊಲೆ, ಕಳ್ಳತನದಂತಹ ಪ್ರಕರಣಗಳು ಹೆಚ್ಚಾದಾಗ ಮಕ್ಕಳು ಭೂಗತಲೋಕ ಕಡೆ ತಿರುಗಿ ಪಾತಕಲೋಕದ ದಿಗ್ಗಜರಾಗಿ ರಾಷ್ಟ್ರಗಳನ್ನು ನಡುಗಿಸಿದಾಗ ಇದೇ ಸಕರ್ಾರ ಅವರನ್ನು ಹಿಡಿಯಲು ಅಥವಾ ಶೂಟೌಟ್ ಮಾಡಲು ಲಕ್ಷಾಂತರ ರೂಗಳನ್ನು ಖಚರ್ು ಮಾಡುವುದರ ಜೊತೆಗೆ ಎಷ್ಟೋ ಜೀವಗಳು ಕಾಣದಂತೆ ಮಾಯವಾಗಿ ಬಿಡುತ್ತವೆ.
ಕನಿಷ್ಠ ಮಕ್ಕಳಿಗೆ ಸರಿ ತಪ್ಪುಗಳನ್ನು ನಿರ್ಣಯಿಸುವಷ್ಟು ಲೋಕ ಜ್ಞಾನವನ್ನು ಕಲಿಸುವ ಕೆಲಸ ಬಾಲ್ಯದಲ್ಲಾಗದಿದ್ದರೆ ಇನ್ನೆಂದೂ ಆಗುವುದಿಲ್ಲ, ಅಂತಹ ಪೋಷಕರಿಂದ ನಿರೀಕ್ಷೆ ಮಾಡುವುದು ತಪ್ಪು.
ಹಣವುಳ್ಳವರು ತಮ್ಮ ಮಕಳ ಭವಿಷ್ಯವನ್ನು ಉಜ್ವಲವಾಗಿಸಲು ಯೋಚಿಸಿದರೆ, ತಮ್ಮ ಹೊಟ್ಟೆ ಪಾಡಿಗಾಗಿ ಹಾಗೂ ಚಟಗಳನ್ನು ತೀರಿಸಿಕೊಳ್ಳಲು ತಮ್ಮ ಮಕ್ಕಳನ್ನು ಬೀದಿಗೆ ಬಿಟ್ಟು ಕುಡಿತದ ಅಮಲಿನಲ್ಲಿ ಮಕ್ಕಳ ಜೀವನವನ್ನು ಹೊಸಿಕಿ ಹಾಕುವ ಪೋಷಕರಿಗೆ ಏನನ್ನ ಬೇಕು, ಭಾರತ ಮಾತೆ ನೀನೇ ಹೇಳು.........

..ಎ.ಪಿ.ಎಲ್. ಪಡಿತರದಾರರಿಗೆ ಕಡಿಮೆ ದರದಲ್ಲಿ ಅಕ್ಕಿ,ಗೋಧಿ
ಚಿಕ್ಕನಾಯಕನಹಳ್ಳಿ,ನ.12: ನವಂಬರ್ ತಿಂಗಳಿಗೆ ತಾಲೂಕಿನ ಭಾವಚಿತ್ರ ಸೆರೆಹಿಡಿದ ಎಎವೈ, ಬಿಪಿಎಲ್, ಎಪಿಎಲ್, ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಲು ಅಕ್ಕಿ, ಗೋಧಿ, ಸಕ್ಕರೆ ಹಂಚಿಕೆ ನೀಡಿಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಅಂತ್ಯೋದಯ ಕಾಡರ್ುದಾರರಿಗೆ ಕಾಡರ್್1ಕ್ಕೆ 3ರೂನಂತೆ 29ಕೆ.ಜಿ ಅಕ್ಕಿ, 2ರೂನಂತೆ 6 ಕೆ.ಜಿಗೋಧಿ, 13-5ನಂತೆ 1 .ಕೆ.ಜಿ ಸಕ್ಕರೆ, ಅಕ್ಷಯ ಮತ್ತು ನೆಮ್ಮದಿದಾರ ಕಾಡರ್ುದಾರರಿಗೆ ಯುನಿಟ್ ಪದ್ದತಿಯಂತೆ ಅಕ್ಕಿ1 ಕೆ.ಜಿಗೆ 3ರೂ, ಗೋದಿ 1 ಕೆ.ಜಿಗೆ 3ರೂನಂತೆ ಸಕ್ಕರೆ 1 ಕೆ.ಜಿಗೆ 13.50ನಂತೆ ಮತ್ತು ಎಪಿಎಲ್ ಪಡಿತರದಾರರಿಗೆ ಕಾಡರ್್1ಕ್ಕೆ 9.40ರೂನಂತೆ 9.50ಕೆ.ಜಿ ಅಕ್ಕಿ, 7.20ರೂನಂತೆ 2.5ಕೆ.ಜಿ.ಗೋಧಿ ಮತ್ತು ಸಕ್ಕರೆ ಹಂಚಿಕೆ ಇರುವುದಿಲ್ಲವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಿಮೆ ದರದಲ್ಲಿ ಅಕಿ ಗೋದಿ: ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಸಗಟು ಮಳಿಗೆಗಳ ಮೂಲಕ ರಾಜ್ಯದ ಎಲ್ಲಾ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದ್ದು ಎಪಿಎಲ್ ಪಡಿತರದಾರರು ಇದರ ಸದುಪಯೋಗಪಡಿಸಿಕೊಳ್ಳಲು ತಹಶೀಲ್ದಾರ್ ಟಿ.ಸಿ.ಕಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸಕರ್ಾರಿ ನೌಕರರು, ಸಾರ್ವಜನಿಕ ಉದ್ದಿಮೆಗಳ ನೌಕರರು, ಪೌರಾಡಳಿತ ಸಂಸ್ಥೆಯ ಹಾಗೂ ಖಾಸಗಿ ಅನುದಾನಿ, ಅನುದಾನರಹಿತ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ಸೈನಿಕ, ಅರೆಸೈನಿಕ ಪಡೆಯ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ, ಗ್ರಾಮೀಣ ಭಾಗದ ಎಪಿಎಲ್ ಪಡಿತರ ಚೀಟಿದಾರರು, ಸ್ವಾತಂತ್ರ ಹೋರಾಟಗಾರರು, ಅಧಿಕೃತ ಪತ್ರಕರ್ತರು, ಕಲಾವಿದರು, ಕ್ರೀಡಾಪಟುಗಳು ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಅಂಗವಿಕಲರು, ತಮ್ಮ ಎಪಿಎಲ್ ಪಡಿತರ ಚೀಟಿ ಅಥವಾ ವೃತ್ತಿ ಸಂಬಂದಿತ ಸಂಸ್ಥೆಯ ಮುಖ್ಯಸ್ಥರು ನೀಡಲಾದ ಭಾವಚಿತ್ರ ಸಹಿತ ಗುರುತಿನ ಚೀಟಿಯ ದೃಡೀಕೃತ ಪ್ರತಿಯನ್ನು ನೀಡಿ ಪ್ರತೀ ಕೆ.ಜಿ ಅಕ್ಕಿಗೆ 13ರೂನಂತೆ ಗರಿಷ್ಟ 50ಕೆ.ಜಿ ಮತ್ತು ಪ್ರತೀ ಕೆ.ಜಿ.ಗೋಧಿಗೆ 9.50ರೂನಂತೆ ಗರಿಷ್ಟ 50ಕೆ.ಜಿ.ಯನ್ನು ಕನರ್ಾಟಕ ಆಹಾರ ನಾಗರೀಕ ಸರಬರಾಜು ನಿಗಮ ಸಗಟು ಮಳಿಗೆ ಗೋದಾಮಿನಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ನ.14: ತಾಲೂಕು ಮಟ್ಟದ ಟಿ.ಎಲ್.ಎಂ. ಹಾಗೂ ಮೆಟ್ರಿಕ್ ಮೇಳ

ಚಿಕ್ಕನಾಯಕನಹಳ್ಳಿ,ನ.12: ತಾಲೂಕು ಮಟ್ಟದ ಟಿ.ಎಲ್.ಎಂ ಮತ್ತು ಮೆಟ್ರಿಕ್ ಮೇಳವನ್ನು ಇದೇ 14ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾಧ್ಯಕ್ಷ ರಾಜಣ್ಣ ಮೆಟ್ರಿಕ್ ಮೇಳದ ಉದ್ಘಾಟನೆ ನೆರವೇರಿಸಲಿದ್ದಾರೆ.
ಡಯಟ್ ಪ್ರಾಂಶುಪಾಲ ಪ್ರಭಾಕರ್ ಟಿ.ಎಲ್.ಎಂ ಉದ್ಘಾಟನೆ ನೆರವೇರಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ದಯಾನಂದ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.