Monday, July 15, 2013

 ಹಾಸ್ಯದೊಂದಿಗೆ ಜೀವನ ದರ್ಶನದ ಮಾಡಿಸುವ ತಾಕತ್ತು ತೇಜಸ್ವಿ ಬರಹಗಳಲ್ಲಿದೆ: 
  • ಈ ಧಾಟಿಯ ಬರಹ ವಿಶ್ವದಲ್ಲಿ ಮೂವರಿಗೆ ಮಾತ್ರ ಧಕ್ಕಿದೆ, ಅದರಲ್ಲಿ ತೇಜಸ್ವಿ ಒಬ್ಬರು.
  • ತೇಜಸ್ವಿಯವರ 'ಕಾಡು ಮತ್ತು ಕ್ರೌರ್ಯ' ಪ್ರಿಂಟ್ಗೆ ಸಿದ್ದವಾಗಿರುವ ಕೃತಿ
  • ಮಾನಸ ಗಂಗೋತ್ರಿ ಆವರಣ ಸ್ಮಶಾನವಾಗಬಾರದೆಂದು ಅಣ್ಣನ ಕಳೆಬರವನ್ನು  ಕುಪ್ಪಳಿಗೆ ತಂದ ಪೂಚಂತೇ.

ಚಿಕ್ಕನಾಯಕನಹಳ್ಳಿ,ಜು.15 : ಪೂಚಂತೇಯವರು ತಮ್ಮ ಬರವಣಿಗೆಯಲ್ಲಿ ಹಾಸ್ಯದೊಂದಿಗೆ ಜೀವನ  ದುಃಖವನ್ನು ಬಿಂಬಿಸುತ್ತಿದ್ದ ರೀತಿಯ ಮನೋಜ್ಞವಾಗಿದೆ ಇಂತಹ  ಬರವಣಿಗೆ ವಿಶ್ವದ ಮೂವರು ಉತ್ತಮ ಬರಹಗಾರರಲ್ಲಿ ಪೂರ್ಣಚಂದ್ರ  ತೇಜಸ್ವಿಯವರು ಒಬ್ಬರು ಎಂದು ಅಂತರ ರಾಷ್ಟ್ರೀಯ ಕಲಾವಿದ ಡಾ.ಕೆ.ಟಿ.ಶಿವಪ್ರಸಾದ್ ತಿಳಿಸಿದರು.
ಪಟ್ಟಣದ ನವೋದಯ ಕಾಲೇಜಿನ ಆವರಣದಲ್ಲಿ ನಡೆದ ಯುಜಿಸಿ ಪ್ರಾಯೋಜಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದ ಆಶಯ ಭಾಷಣದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಬರಹದ ಧಾಟಿ ವಿಶ್ವದ ಮೂವರು ಉತ್ತಮ ಬರಹಗಾರರಾದ ಬೋರೆಸ್, ಮಾಕರ್್ವೇಸ್, ತೇಜಸ್ವಿಯವರಿಗೆ ಧಕ್ಕಿತ್ತು ಎಂದ ಅವರು, ಕಲಾ ಮೀಮಾಂಸೆಯೊಂದಿಗೆ ಬರವಣಿಗೆ ಆರಂಭಿಸಿದ ಅವರು. ಪರಿಸರದ ಪೋಟೋಗ್ರಾಪ್ಗೆ ಹೆಚ್ಚು ಒತ್ತು ನೀಡಿದವರು, ತಮ್ಮ ಪರಿಸರದ ಜೊತೆಗೆ ವೈಜ್ಞಾನಿಕ, ವೈಚಾರಿಕ ಜ್ಞಾನದಲ್ಲೂ ತಮ್ಮನ್ನು ತಾವು ಅನ್ವೇಷಿಸಿಕೊಳ್ಳುತ್ತಾ ತಾನು ಕಂಡು ಕೊಂಡ ಸತ್ಯಗಳಿಗೆ ಅಕ್ಷರದ ರೂಪವನ್ನು ಕೊಟ್ಟವರು ಎಂದರು. 
ತೇಜಸ್ವಿಯವರು ಬರೆಯುತ್ತಿದ್ದ ಪುಸ್ತಕಗಳಲ್ಲಿ ಆರಂಭ ಯಾವುದು, ಕೊನೆ ಯಾವುದು ಎಂಬುದೇ ತಿಳಿಯುತ್ತಿರಲಿಲ್ಲ ಆದರೂ ಅವರ ಪುಸ್ತಕಗಳಲ್ಲಿ ಯುವ ಪೀಳಿಗೆ ಅರಿಯಬೇಕಿರುವ ಅಂಶ ಹೆಚ್ಚಿದೆ. ತೇಜಸ್ವಿಯವರ ಬರಹಗಳು ಐ.ಟಿ.ಬಿ.ಟಿಯಿಂದ ಹಿಡಿದು ಇಂದಿನ ಯುವಕರವರೆಗೆ ಎಲ್ಲರೂ ಸುಲಭವಾಗಿ ಓದುವಂತೆ ಮಾಡುತ್ತಿದ್ದ ಲೇಖಕರಾಗಿದ್ದ ಅವರು, ತನ್ನ ಕಥೆಗಳಿಗೆ  ಪತ್ರಿಕೆಯ ವರದಿಗಾರಿಕೆಯ ತಂತ್ರದ ಟೆಚ್ ನೀಡುವ ಮೂಲಕ ಬರವಣಿಗೆಗೆ ಹೊಸ ರೂಪವನ್ನು ಕೊಡಲು ಪ್ರಯತ್ನಿಸುತ್ತಿದ್ದರು ಅದು  ಅವರ ಬರೆದ ಅದರೆ ಇನ್ನೂ ಪ್ರಿಂಟ್ ಆಗಿಲ್ಲದ  ಕೃತಿಯಾದ  ಕಾಡು ಮತ್ತು ಕ್ರೌರ್ಯ ದಲ್ಲಿ ಕಂಡು ಬರುತ್ತದೆ,  ಈ ಪುಸ್ತಕವನ್ನು  ಶಿಷ್ಯಂದಿರು ಪ್ರಿಂಟ್ ಮಾಡಿಸಲು ತಯಾರಿ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಹಾಗೂ ನವೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಒಂದು ಕಾಲದಲ್ಲಿ ನಾನು ಕೂಡ ತೇಜಸ್ವಿಯವರ ಅಭಿಮಾನಿ, ತೇಜಸ್ವಿಯವರು ಕೃಷಿಗಿಂತ ಹೆಚ್ಚಾಗಿ ಪ್ರಕೃತಿ ಇಷ್ಟಪಡುತ್ತಿದ್ದ ಒಬ್ಬ ಶಿಸ್ತಿನ ಮನುಷ್ಯ, ನೇರ ಮಾತುಗಾರಿಕೆ ಹೊಂದಿದ್ದ ಅವರು ಪಟ್ಟಣದಲ್ಲಿ ಬೆಳೆದು ಹಳ್ಳಿಗಾಡಿನ ಜೀವನವನ್ನು ಅರಸಿ ಬಂದವರು. ಅವರು ಕೃಷಿಗಿಂತ ಹೆಚ್ಚಾಗಿ ಪ್ರಕೃತಿ ಅನ್ವೇಷಣಾಕಾರರಾಗಿ ಹೆಸರು ಪಡೆದವರು, ತೇಜಸ್ವಿ ತಮ್ಮ ತಂದೆ ಕುವೆಂಪು ರವರ ಕಳೆಬರವನ್ನು ಮೈಸೂರನ ಗಂಗೋತ್ರಿಯಲ್ಲಿ ಸಮಾಧಿ ಮಾಡಲು ಒಪ್ಪಲಿಲ್ಲ ಕಾರಣ ಅಲ್ಲಿದ್ದ ಒಂದು ವರ್ಗ ಕನ್ನಡ ಅಧ್ಯಯನ ಕೇಂದ್ರದ ಆವರಣವನ್ನು ಸ್ಮಶಾನ ಮಾಡಲು ಹೊರಟ್ಟಿತ್ತು ಅದನ್ನು ತಪ್ಪಿಸುವ ಸಲುವಾಗಿ ಅಣ್ಣನ ಸಮಾಧಿಯನ್ನು ಕುಪ್ಪಳಿ ಮಾಡಲಾಯಿತು ಎಂಬ ಸತ್ಯವನ್ನು ತೇಜಸ್ವಿ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಜೆ.ಸಿ.ಎಂ. ತಿಳಿಸಿದರು. 
ತೇಜಸ್ವಿಯವರು  ಏಕೆ ಪುಸ್ತಕ ಬರೆಯುತ್ತಾರೆ ಎಂಬ  ಪ್ರಶ್ನೆಗೆ ಅವರ ಕೊಟ್ಟ ಉತ್ತರವೆಂದರೆ  ಮುಂದಿನ ಪೀಳಿಗೆ ಹುಡುಕಾಟದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಪುಸ್ತಕಗಳನ್ನು ಬರೆಯುತ್ತಿರುವುದಾಗಿ ತಿಳಿಸಿದ್ದಾರು  ಎಂದರಲ್ಲದೆ, ಅರಣ್ಯ ಸರಹದ್ದಿನ ಕಡೆ  ಆಗುತ್ತಿದ್ದ ವಿಚಾರಗಳನ್ನು ತೇಜಸ್ವಿಯವರಿಗಿಂತ ಉತ್ತಮವಾಗಿ ಬರೆಯುತ್ತಿದ್ದ ಬರಹಗಾರರು ಇರಲಿಲ್ಲ ಅಂತಹ ಅದ್ವಿತೀಯತೆ ಅವರಲ್ಲಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನವೋದಯ ವಿದ್ಯಾ ಸಂಸ್ಥೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ರನ್ನ, ಜನ್ನ, ಪೊನ್ನ, ರಾಘವಾಂಕರಂತಹ ಕವಿಗಳು ಬಹಳ ಹಿಂದಿನ ತಲೆಮಾರಿನವರು, ಅ.ನ.ಕೃ, ಕುವೆಂಪು, ದ.ರಾ.ಬೇಂದ್ರೆರವರು 1960ರ ತಲೆಮಾರಿನವರು, ಈಗಿನ ತಲೆಮಾರಿನಗೆ ಯು.ಆರ್.ಅನಂತಮೂತರ್ಿ, ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ ಹಾಗೂ ಇತರ ಸಾಹಿತ್ಯಾಸಕ್ತರು ಈಗಿನ ತಲೆಮಾರಿಗೆ ಸರಿ ಹೊಂದಿದವರು. ತೇಜಸ್ವಿಯವರು 1930ರಲ್ಲಿ ಕುವೆಂಪುರವರ ಮೊದಲನೆ ಮಗನಾಗಿ ಜನಿಸಿದರೂ ಎಲ್ಲೂ ತಾನು ಕುವೆಂಪುರವರ ಮಗ ಎಂದು ಹೇಳಿಕೊಳ್ಳದೇ ತೇಜಸ್ವಿಯಾಗಿಯೇ ಗುರುತಿಸಿಕೊಂಡವರು. ಕೃಷಿಕರಾಗಿ ಪ್ರಕೃತಿ ಸಂಪತ್ತನ್ನು ಪ್ರೀತಿಸುತ್ತಾ ತಮ್ಮ ಅಧ್ಯಯನ ಮಾಡಿಕೊಳ್ಳುತ್ತಿದ್ದರು. ತೇಜಸ್ವಿಯವರು ಪ್ರತಿಯೊಂದು ವಿಷಯವನ್ನು ಸ್ವಾಭಿಮಾನಿಯಾಗಿ ತೆಗೆದುಕೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ,  ನಿವೃತ್ತ ಪಾಂಶುಪಾಲ ಕೆ.ಸಿ.ಬಸಪ್ಪ, ಪ್ರಾಂಶುಪಾಲ ಪ್ರೊ.ಬಿ.ಎಸ್.ಬಸವಲಿಂಗಯ್ಯ, ಉಪಸ್ಥಿತರಿದ್ದರು. ಸಮಾರಂಭದಲ್ಲಿ ಲಾವಣ್ಯ ಪ್ರಾಥರ್ಿಸಿದರೆ, ತಯ್ಯೂಬ್ ನಿರೂಪಿಸಿ, ಉಪನ್ಯಾಸಕ ಸಿ.ರವಿಕುಮಾರ್ ವಂದಿಸಿದರು.

ಚಿ.ನಾ.ಹಳ್ಳಿ ರೊಟರಿ ಸೇವೆ ಶ್ಲಾಘನೀಯ: ಕವಿತಾ ಕೃಷ್ಣ
             

ಚಿಕ್ಕನಾಯಕನಹಳ್ಳಿ,ಜು.15 : ರೋಟರಿಯ ಸೇವೆ ಕಸದ ಪೊರಕೆಯಂತಿರಬೇಕು, ತನ್ನ ಸುತ್ತಮುತ್ತಲಿನ ಕೊಳೆಯನ್ನು ಶುಚಿಗೊಳಿಸಲು ಪೊರಕೆಯ ಪ್ರತಿ ಕಡ್ಡಿಯಂತೆ ರೋಟರಿಯನ್ಗಳು ಒಂದಾಗಿ ತಾಲ್ಲೂಕಿನ ಸಮಸ್ಯೆಗಳನ್ನು  ಖುಷಿಯಿಂದ ಸ್ವೀಕರಿಸಿ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಹೇಳಿದರು.
ಪಟ್ಟಣದ ಕಲ್ಪಕವೃಕ್ಷ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 2013-14ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ 38ನೇ ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರೋಟರಿಯ ಸೇವೆಯು ಎಲ್ಲಾ ಕಡೆಯುಲ್ಲೂ ಉತ್ತಮವಾಗಿದೆ, ಸಬಲರು ರೋಟರಿಯೊಂದಿಗೆ ತೊಡಗಿಸಿಕೊಂಡು ಆಥರ್ಿಕವಾಗಿ ಹಿಂದುಳಿದಿರುವ ಹಾಗೂ ಸಮಾಜದ ಸಮಸ್ಯೆಗಳನ್ನು ನಿವಾರಿಸಿ ಜನರ ಜೀವನವನ್ನು ಉತ್ತಮಗೊಳಿಸುವಂತೆ ರೋಟರಿಯನ್ಗಳಿಗೆ ಕರೆ ನೀಡಿದರು. 
 ಚಿಕ್ಕನಾಯಕನಹಳ್ಳಿಯಲ್ಲಿ ರೋಟರಿ ಸಂಸ್ಥೆ ಹಾಗೂ ಸೃಜನ ಸಂಘಟನೆ ಸಮಾಜದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರಲ್ಲದೆ, ಸೇವೆಗಾಗಿ ಹಲವರು ದುಡಿದಿದ್ದಾರೆ ಅದರಮತೆ  ಸ್ವಾಮಿ ವಿವೇಕಾನಂದರು ಚಿಕಾಗೋ ಸೇರಿದಂತೆ ಹಲವು ದೇಶಗಳಲ್ಲಿ ನಡೆಸಿದ ಉಪನ್ಯಾಸ ಕಾರ್ಯಕ್ರಮಗಳಲ್ಲೂ ಸೇವೆಯ ಮಹತ್ವ ತಿಳಿ ಹೇಳಿದ್ದರು, ಮಾತನ್ನು ಮುತ್ತಾಗಿ ಬೆಳೆಸುತ್ತಿದ್ದ ವಿವೇಕಾನಂದರಂತೆ ರೋಟರಿಯಲ್ಲಿನ ಸದಸ್ಯರು ನಡೆದರೆ ರೋಟರಿ ಸಂಸ್ಥೆ  ಉತ್ತಮ ರೀತಿಯಲ್ಲಿ ಅಭಿವೃದ್ದಿಯಾಗುತ್ತದೆ ಎಂದರಲ್ಲದೆ ಸಂಸ್ಥೆಯ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ನಾಮಿನಿ ಗವರ್ನರ್ ರೊ.ಕೆ.ಪಿ.ನಾಗೇಶ್ ಮಾತನಾಡಿ, ರೋಟರಿ ಸಂಸ್ಥೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆ, ವಿವಿಧ ಸಮಾಜ ಸೇವೆಗಳ ಜೊತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ವಿವಿಧ ಆರೋಗ್ಯ ತಪಾಸಣಾ ಶಿಬಿರ, ಕುಡಿಯುವ ನೀರು ಪೂರೈಕೆ, ವಿದ್ಯಾಥರ್ಿಗಳಿಗೆ ಉತ್ತೇಜನ ನೀಡುವಂತಹ ಸನ್ಮಾನ ಕಾರ್ಯಕ್ರಮ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ, ಅಲ್ಲದೆ ರೋಟರಿಯ ಸದಸ್ಯತ್ವ ಪಡೆಯಲು ಹಲವರು ಮುಂದೆ ಬಂದಿದ್ದಾರೆ ಎಂದರಲ್ಲದೆ ರೋಟರಿಯಲ್ಲಿ ಯಾವ ಕುಲವೂ ಇಲ್ಲ ಎಲ್ಲಾ ಕುಲದ ವ್ಯಕ್ತಿಗಳು ಇಲ್ಲಿ ಸಮಾನರು ಎಂದರು. 
ಸಾಹಿತಿ ಸಿ.ಕೆ.ಪರುಶುರಾಮಯ್ಯ ಮಾತನಾಡಿ, ಇತ್ತೀಚೆಗೆ ರೋಟರಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಹೆಚ್ಚು ಪ್ರಶಂಶನೀಯವಾಗಿವೆ,  ಸ್ವಯಂ ಸೇವೆಯ ಮನೋಭಾವದ ರೋಟರಿ ಸಂಸ್ಥೆಯಿಂದ ತಾಲ್ಲೂಕಿನ ಹಲವು ಸಮಸ್ಯೆಗಳು ನಿವಾರಣೆಯಾಗಲಿ ಎಂದು ಹಾರೈಸಿದರು.
  ನೂತನ ರೋಟರಿ ಅಧ್ಯಕ್ಷ ಸಿ.ಎಸ್.ಪ್ರದೀಪ್ಕುಮಾರ್ ಮಾತನಾಡಿ ಎಲ್ಲಾ ರೋಟರಿಯನ್ಗಳು ಸಹಕಾರ ನೀಡುವ ಮೂಲಕ ಕ್ಲಬ್ನ  ಶಕ್ತಿಯಾಗಿ, ಆ ಮೂಲಕ ನಾವೆಲ್ಲರೂ ಸೇರಿ ರೋಟರಿ ಮೂಲಕ ಹಲವು ಸೇವೆಯನ್ನು ನಿರ್ವಹಿಸೋಣ ಎಂದರಲ್ಲದೆ ಸಂಸ್ಥೆಗೆ ನೂತನವಾಗಿ 13ಮಂದಿ ನೂತನವಾಗಿ ಸೇರ್ಪಡೆಯಾಗಿದ್ದಾರೆ ಈ ಮೂಲಕ ರೋಟರಿ ಸಂಸ್ಥೆ 38 ಸದಸ್ಯರಿಂದ 50ರ ಗಡಿ ದಾಟಿ 51ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು. 
ಜಿಲ್ಲಾ ರೋಟರಿಯನ್ ನವೀನ್ ಮಾತನಾಡಿ ರೋಟರಿ ಹಿಂದೆ ನಡೆಯುತ್ತಿದ್ದಕ್ಕಿಂತ ಈಗನ ದಾರಿ ಬದಲಾಗಿ ಎಲ್ಲಡೆಯಲ್ಲೂ ಉತ್ತಮ ಸೇವೆ ನೀಡುತ್ತಿದೆ, ರೋಟರಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಇತರರಿಗೆ ಸಹಾಯ ಮಾಡುತ್ತಿದ್ದೇವೆ. ಚಿ.ನಾ.ಹಳ್ಳಿ ರೋಟರಿ ಸಂಸ್ಥೆ ತಾಲ್ಲೂಕಿನಲ್ಲಿ ಉತ್ತಮ ಸೇವೆ ಮಾಡಿದ್ದು ಬಡವರಿಗೆ ಸಹಾಯ ಮಾಡುತ್ತಿದೆ, ಅಲ್ಲದೆ ಇಲ್ಲಿನ ಇನ್ನರ್ವೀಲ್ ಕ್ಲಬ್ ಕೂಡ ಬಲಿಷ್ಟವಾಗಿದ್ದು ರೋಟರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರೋಟರಿಯ ನಾಯಕ ಪತ್ರಿಕೆ ಹಾಗೂ ಎಂ.ಹರೀಶ್ ರೂಪಿಸಿರುವ ರೋಟರಿಯ ಕ್ಲಬ್ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯಿತು.. ಸಮಾರಂಭದಲ್ಲಿ ಕನ್ನಡದ ಕೋಟ್ಯಾಧಿಪತಿ ಸ್ಪಧರ್ೆಯಲ್ಲಿ ಭಾಗವಹಿಸಿದ್ದ  ಸಿ.ಎಸ್.ಬೀರಪ್ಪ, ಪ್ರತಿಭಾನ್ವಿತ ಕ್ರೀಡಾಪಟು ಅನುಷಾ ಎಸ್.ಶೆಟ್ಟಿ, ಪ್ರತಿಭಾನ್ವಿತ ವಿದ್ಯಾಥರ್ಿಗಳಾದ ಟಿ.ಎನ್.ಪಲ್ಲವಿ, ಆರ್.ಮಧುಸೂಧನ್ರವರನ್ನು ಸನ್ಮಾನಿಸಲಾಯಿತು. 
2013-14ನೇ ಸಾಲಿಗೆ ನೂತನವಾಗಿ ರೋಟರಿ ಅಧ್ಯಕ್ಷರಾಗಿ ಸಿ.ಎಸ್.ಪ್ರದೀಪ್ಕುಮಾರ್, ಕಾರ್ಯದಶರ್ಿಯಾಗಿ ಡಾ.ಜಿ.ಪ್ರಶಾಂತ್ಕುಮಾರ್ಶೆಟ್ಟಿಕ ಪದವಿ ಸ್ವೀಕರಿಸಿದರು.
ಸಮಾರಂಭದಲ್ಲಿ  ಕೆ.ಸಿ.ಡಿ.ಎ.ನಿದರ್ೇಶಕ ದಿಲೀಪ್ಕುಮಾರ್ ಷಾ, ಅಸಿಸ್ಟೆಂಟ್ ಗವರ್ನರ್ ರೊ.ಜಯರಾಂ, ಎಚ್.ಆರ್.ಶ್ರೀನಾಥ್ಬಾಬು, 2013-13ನೇ ಸಾಲಿನ ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಎಂ.ದೇವರಾಜು, ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಮ್.ಸುರೇಶ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ತೇಜಾವತಿ ನರೇಂದ್ರಬಾಬು, ಜಿಲ್ಲಾ ಗವರ್ನರ್ ಬಿಳಿಗೆರೆ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.