Wednesday, November 17, 2010





ವಿದ್ಯಾಥರ್ಿ ವೇತನಕ್ಕಾಗಿ ಎಬಿವಿಪಿ ಹೋರಾಟ
ಚಿಕ್ಕನಾಯಕನಹಳ್ಳಿ,ನ,17:
ಡಿ.ಇಡಿ ಮುಗಿಸಿಕೊಂಡು ಪದವಿ ಓದುತ್ತಿರುವ ಪರಿಶಿಷ್ಟ ಜಾತಿ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಮಂಜೂರು ಮಾಡಬೇಕು ಎಂದು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ತಹಶೀಲ್ದಾರ್ರವರಿಗೆ ಮನವಿ ಪತ್ರವನ್ನು ಸಲ್ಲಿಸಿತು.
ಮನವಿ ಪತ್ರ ನೀಡಿ ಮಾತನಾಡಿದ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಡಿಗ್ರಿ ಓದುತ್ತಿರುವ ವಿದ್ಯಾಥರ್ಿಗಳಿಗೆ ಹಾಸ್ಟಲ್ ಸೌಲಭ್ಯವನ್ನು ರದ್ದುಗೊಳಿಸಿದ್ದು, ವಿದ್ಯಾಥರ್ಿ ವೇತನವನ್ನು ಮಂಜೂರ ಮಾಡುವುದಿಲ್ಲವೆಂದು ಆದೇಶ ನೀಡಿರುವುದು ಖಂಡನೀಯವಾಗಿದ್ದು ಪರಿಶಿಷ್ಟ ಜಾತಿ ವಿದ್ಯಾಥರ್ಿಗಳ ವಿದ್ಯಾ ಅಭ್ಯಾಸಕ್ಕೆ ಒತ್ತು ನೀಡಬೇಕಾದ ಸಕರ್ಾರ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದ ಅವರು ಡಿ.ಇಡಿ ಮುಗಿಸಿದವರಿಗೆ ಪ[ದವಿತರಗತಿಗೆ ಪ್ರವೇಶ ನೀಡಿ ವಿದ್ಯಾಥರ್ಿ ವೇತನವನ್ನು ತಡೆಹಿಡಿದಿರುವುದು ಕೊಟ್ಟು ಡಿಡೀರ್ ಅಂತ ಹಾಸ್ಟಲ್ನಿಂದ ಹೊರ ಹಾಕುತ್ತಿರುವುದು ನ್ಯಾಯಸಮ್ಮತವಾಗಿಲ್ಲ ಮತ್ತು ಡಿಗ್ರಿ ವಿದ್ಯಾಥರ್ಿಗಳಿಗೆ ಮುಂದಿನ ತಿಂಗಳು ಸೆಮಿಷ್ಟರ್ ಪರೀಕ್ಷೆಯಿದ್ದು ದೂರದ ಊರುಗಳಿಂದ ಓದಲು ಬಂದಿರುವ ವಿದ್ಯಾಥರ್ಿಗಳಿಗೆ ತೊಂದರೆಯಾಗಿರುವುದನ್ನು ಅಧಿಕಾರಿಗಳು ಸರಿಪಡಿಸಿಕೊಡಬೇಕು ಇಲ್ಲದಿದ್ದರೆ ಎ.ಬಿ.ವಿ.ಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವಿ ಪತ್ರದ ಹೇಳಿದ್ದಾರೆ.
ಈ ಸಂದರ್ಬದಲ್ಲಿ ನಗರ ಕಾರ್ಯದಶರ್ಿ ಮನೋಹರ್, ಸಹ ಕಾರ್ಯದಶರ್ಿ ದಿಲೀಪ್ ಮತ್ತು ಕಾರ್ಯಕರ್ತರುಗಳಾದ ಜಗದೀಶ್, ರವಿ, ದರ್ಶನ್ ಉಪಸ್ಥಿತರಿದ್ದರು.

ಯವುಳ್ಳ ಧರ್ಮಕ್ಕೆ ಜಯ ಶತಸಿದ್ದ
ಚಿಕ್ಕನಾಯಕನಹಳ್ಳಿ,ನ,17: ಧರ್ಮದ ಭಾವನೆ ಬಹಳ ಸೂಕ್ಷ್ಮ, ಧರ್ಮವು ವ್ಯಕ್ತಿ ಮತ್ತು ಸಮಾಜದ ನಡುವೆ ಇರುವ ಮಾನವೀಯ ಮೌಲ್ಯ, ಅಲ್ಲದೆ ದಯವೇ ಧರ್ಮದ ಮೂಲವಾಗಿರುವಾಗ ಧರ್ಮಕ್ಕೆ ಎಂದಿಗೂ ಜಯವಿರುತ್ತದೆ ಎಂದು ತಮ್ಮಡಿಹಳ್ಳಿ ವಿರಕ್ತಮಠ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಹೇಳಿದರು.
ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ನಡೆದ ಪಂಚಮುಖಿ ಗಣಪತಿ ದೇವಾಯಲದ ಪ್ರತಿಷ್ಠಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮಕ್ಕೆ ಎಂದು ಸಾವಿಲ್ಲ. ದೊಡ್ಡ ದೊಡ್ಡ ಸಾಮ್ರಾಜ್ಯಗಳು ಮಣ್ಣಿನಲ್ಲಿ ಹೂತು ಹೋದರೂ ಅವರ ಧರ್ಮವನ್ನು ಇಂದಿಗೂ ಪಾಲಿಸುತ್ತಿದ್ದಾರೆ, ಧರ್ಮವನ್ನು ವೇದಿಕೆ ಮುಖಾಂತರ ಎಂದೂ ಬೆಳೆಯದೇ ಅನುಷ್ಟಾನದ ಮುಖಾಂತರ ಬೆಳೆಸಿದಾಗ ಧರ್ಮದ ಅರ್ಥ ಎಲ್ಲರಿಗೂ ತಿಳಿಯುತ್ತದೆ ಎಂದ ಅವರು ಸ್ವಾರ್ಥ, ಅಹಂಕಾರ ತೊರೆದಾಗ ಮಾತ್ರ ಧರ್ಮದ ವೈಶಿಷ್ಟ್ಯ ತಿಳಿದು ಗೆಲುವು ಸಂಪಾದಿಸುತ್ತಾರೆ ಎಂದು ಹೇಳಿದರು.
ಬನಶಂಕರಿ ನಾಗರೀಕ ಬಳಗದ ಅಧ್ಯಕ್ಷ ಸಿ.ಟಿ.ವರದರಾಜು ಮಾತನಾಡಿ ಚೋಳರ ಕಾಲದಲ್ಲಿ ಕಟ್ಟುತ್ತಿದ್ದ ಪಂಚಮುಖಿ ದೇವಸ್ಥಾನ ಈಗ ಕಟ್ಟಿರುವುದು ಬನಶಂಕರಿ ನಾಗರೀಕರ ಬಳಗದ 17ವರ್ಷಗಳ ಕನಸು ಈಡೇರಿದಂತಾಗಿದೆ, ದೇವಸ್ಥಾನ ಕಟ್ಟುವುದಕ್ಕೋಸ್ಕರ ಭಕ್ತಾಧಿಗಳಿಂದ ಮತ್ತು ಆಥರ್ಿಕ ವ್ಯವಾಹರಗಳ ಮೂಲಕ ಸಂಗ್ರಹಿಸಿದ ಹಣದಲ್ಲಿ ದೇವಸ್ಥಾನ ಕಟ್ಟಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ರಾಜಣ್ಣ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಪುರಸಭಾ ಸದಸ್ಯರುಗಳಾದ ಸಿ.ಕೆ.ಕೃಷ್ಣಮೂತರ್ಿ, ಈಶ್ವರ್ಭಾಗವತ್, ರುಕ್ಮಿಣಮ್ಮ, ಲಕ್ಷ್ಮಯ್ಯ, ಬಿಜೆಪಿ ಮುಖಂಡ ಮೈಸೂರಪ್ಪ, ಶೇಷಪ್ಪ, ಅನ್ವರ್ಪಾಷ ಉಪಸ್ಥಿತರಿದ್ದರು.


ಪರಂಪರಾ ತಾಣಗಳನ್ನು ರಕ್ಷಿಸುವ ಮೂಲಕ ಪರಂಪರೆಯನ್ನು ಉಳಿಸಿ
ಚಿಕ್ಕನಾಯಕನಹಳ್ಳಿ,ನ.14: ಹಿರಿಯರು ಮಾಡಿ ಬಿಟ್ಟಿರುವ ಪರಂಪರಾ ತಾಣಗಳನ್ನು ಇಂದಿನ ಯುವಕರು ರಕ್ಷಿಸಿ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಮೀಸಲಿಡಬೇಕು ಎಂದು ಪರಂಪರಾಕೂಟದ ಜಿಲ್ಲಾ ಸಂಚಾಲಕ ಡಾ. ಡಿ.ಎನ್.ಯೋಗಿಶ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಪರಂಪರಾ ಕೂಟದ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಹಿರಿಕರು ರೂಢಿಸಿಕೊಂಡು ಬಂದಿರುವ ಎಲ್ಲಾ ರೀತಿಯ ಪರಂಪರೆಯನ್ನು ರಕ್ಷಿಸುವ ಮಹತ್ತರ ಕಾರ್ಯಕ್ರಮವನ್ನು ಪರಂಪರಾಕೂಟ ಹಮ್ಮಿಕೊಂಡಿದ್ದು ಪರಂಪರಾ ತಾಣಗಳ ಸಂರಕ್ಷಿಸುವುದರಲ್ಲಿ ಕಾಲೇಜು ವಿದ್ಯಾಥರ್ಿಗಳ ಪಾತ್ರ ಬಹು ಮುಖ್ಯ ಎಂದ ಅವರು, ನಮ್ಮ ತಾಲೂಕಿನ ಪ್ರಮುಖ ಪರಂಪರಾ ತಾಣಗಳಾದ ಶುಕ್ರವಾರದ ಬಾಗಿಲು, ನೀರುಬಾಗಿಲು, ವೆಂಕಟರಮಣ ದೇವಸ್ಥಾನ, ಪ್ರಸನ್ನರಾಮೇಶ್ವರ ದೇವಾಲಯ, ಶೆಟ್ಟಿಕೆರೆಯ ಯೋಗ ಮಾಧವರಾಯ ದೇವಾಲಯಗಳು ಈ ಭಾಗದ ಪರಂಪರಾಕೂಟದ ತಾಣಗಳಾಗಿವೆ, ಇವುಗಳನ್ನು ಯಾವ ರೀತಿಯಲ್ಲಿ ರಕ್ಷಿಸಬೇಕು ಎಂಬುದನ್ನು ವಿವರವಾಗಿ ತಿಳಿಸಿದರು.
ಪ್ರಾಧ್ಯಾಪಕ ಡಿ.ಎನ್.ಈರಪ್ಪನಾಯಕ ಮಾತನಾಡಿ ನಮ್ಮ ಸಂಸ್ಕೃತಿಯ ಪರಂಪರಾ ತಾಣಗಳ ಬಗ್ಗೆ ವಿದೇಶೀಯರಿಗೆ ಇರುವಷ್ಟು ಗೌರವ ಭಾವನೆಗಳು ನಮ್ಮ ಭಾರತೀಯರಲ್ಲಿ ಇಲ್ಲ ಎಂದು ವಿಷಾದಿಸಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಕನ್ನಡಿಗರು ತಮ್ಮ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳಸಿಕೊಂಡು ಕನ್ನಡ ಭಾಷೆ ಮತ್ತು ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಹರಡಬೇಕು ಎಂದರು.
ಸಮಾರಂಭದಲ್ಲಿ ಪ್ರಾಧ್ಯಾಪಕ ಟಿ.ವಿ.ರವೀಂದ್ರಶರ್ಮ, ಪರಂಪರಾ ಕೂಟದ ಸಂಚಾಲಕ ಸಿ.ಜಿ.ಸುರೇಶ್, ಉಪನ್ಯಾಸಕ ಸಿ.ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.
ಸಮಾರಂಬದಲ್ಲಿ ಅಶ್ವಿನಿ ಅಣ್ಣಪ್ಪ ಪ್ರಾಥರ್ಿಸಿದರೆ ಜಿ.ಸುಧಾ ಸ್ವಾಗತಿಸಿ, ಪ್ರತಿಭಾ ನಿರೂಪಿಸಿದರು.


ಶಾಸಕರ ಅನುಪಸ್ಥಿತಿಯ ವಿರುದ್ದ ವಿನೂತನ ಪ್ರತಿಭಟನೆ: ತಾ.ಬಿ.ಜೆ.ಪಿ.
ಚಿಕ್ಕನಾಯಕನಹಳ್ಳಿ,ನ.17: ತಾಲೂಕಿನಲ್ಲಿ ಹೆಚ್ಚು ಮಳೆಯಾಗಿ ಹಲವು ಮನೆಗಳು ಬಿದ್ದರೂ ತಾಲೂಕಿನಲ್ಲಿರುವ ಹಲವು ಕೆರೆಗಳ ಏರಿ ಹೊಡೆದಿವೆ, ಬೋರನಕಣಿವೆ ಜಲಾಶಯದ ಗೇಟ್ ಮುರಿದು ನೀರು ಪೊಲಾಗುತ್ತಿದ್ದರೂ ಆ ಬಗ್ಗೆ ಗಮನ ಹರಿಸದೆ ಹಾಗೂ ಕ್ಷೇತ್ರದ ಜನತೆಯ ಸಮಸ್ಯೆಗಳ ಬಗ್ಗೆ ನಿಗಾವಹಿಸದೇ ಕ್ಷೇತ್ರದಿಂದ 2ತಿಂಗಳುಗಳಿಂದ ದೂರವಿರುವುದನ್ನು ವಿರೋಧಿಸಿ ತಾಲೂಕಿನ ಅಭಿವೃದ್ದಿಗಾಗಿ ಬಿಜೆಪಿ ಘಟಕ ಇದೇ 22ರ ಸೋಮವಾರ ಜನರಿಂದ ಅಹವಾಲು ಪಡೆಯುವ 'ಸ್ಪಂದನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ ಮಿಲ್ಟ್ರಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಾಸಕರ ಅನುಪಸ್ಥಿತಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಬಿ.ಜೆ.ಪಿ. ಈ ರೀತಿಯ ಹೊರಾಟವನ್ನು ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ರಾಜ್ಯ ಉಪಾಧ್ಯಕ್ಷ ಅಶ್ವಥ್ನಾರಯಣ್ ಮತ್ತು ಜಿಲ್ಲಾಧ್ಯಕ್ಷ ಶಿವಪ್ರಸಾದ್ ಆಗಮಿಸುವರು ಎಂದರು.
ತಾಲೂಕು ಬಿ.ಜೆ.ಪಿ ಕಾರ್ಯದಶರ್ಿ ಸುರೇಶ್ ಹಳೇಮನೆ ಮಾತನಾಡಿ, ತಾಲೂಕಿನ ಆಡಳಿತ ಕಡೆ ಜವಾಬ್ದಾರಿ ಇಲ್ಲದೆ ಮತ್ತು ಜನರ ಸಮಸ್ಯೆಗಳನ್ನು ಕೇಳದೆ ತಾಲೂಕಿನಿಂದ ಕಣ್ಮರೆಯಾಗಿರುವ ಶಾಸಕ ಸಿ.ಬಿ.ಸುರೇಶ್ಬಾಬು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ತಾಲೂಕಿನಲ್ಲಿ ನಡೆಯುತ್ತಿರುವ ದುರಾಡಳಿತದ ವಿರುದ್ದ ಈ ಹಿಂದೆ ಪತ್ರಿಕಾಗೋಷ್ಟಿಯನ್ನು ಕರೆದು, ಪತ್ರಿಕೆ ಮೂಲಕ ಶಾಸಕರಿಗೆ ತಿಳಿಸಿದರೂ ಯಾವ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಭಾಗವಹಿಸಿದೆ ತಾಲ್ಲೂಕನ್ನು ಕಡೆಗಣಿಸುತ್ತಿದ್ದಾರೆ ಇದರಿಂದ ತಾಲೂಕಿನ ಜನತೆಯ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದರು. ಈ ಸಮಸ್ಯೆ ಬಗೆಹರಿಸಲು ತಾಲೂಕು ಬಿಜೆಪಿ ಘಟಕ ತಾಲೂಕು ಕಛೇರಿ ಆವರಣದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಪ್ರತಿ ಸೋಮವಾರ 'ಸ್ಪಂದನ' ಎಂಬ ಕಾರ್ಯಕ್ರಮ ಹಮ್ಮಿಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿ ಸಂಬಂದಪಟ್ಟ ಇಲಾಖೆಗೆ ಕಳುಹಿಸಲಾಗುವುದು ಎಂದರು. ಈ ರೀತಿಯ ಪ್ರತಿಭಟನೆ ಶಾಸಕರ ಅನುಪಸ್ಥಿತಿಯನ್ನು ಎಚ್ಚರಿಸಿದಂತಾಗುತ್ತದೆ ಬಿಜೆಪಿ ಘಟಕ ಈ ಮುಖಾಂತರ ತಾಲೂಕಿನ ಅಭಿವೃದ್ದಿಗಾಗಿ ಹೋರಾಟ ಮಾಡುತ್ತಿದೆ ಎಂದರು.
ಈ ಗೋಷ್ಟಿಯಲ್ಲಿ ಜೆ.ಸಿಪುರ ಘಟಕ ಬಿಜೆಪಿ ಮುಖಂಡ ಸುಂದರ್, ಪರಮೇಶ್ ಉಪಸ್ಥಿತರಿದ್ದರು.


ಈ ಭೂಮಿ ಇರುವವರೆಗೂ ಕನಕನ ಸಾಹಿತ್ಯ ಉಳಿಯುವಂತೆ ಮಾಡಬೇಕು
ಚಿಕ್ಕನಾಯಕನಹಳ್ಳಿ,ನ.17: ಕನಕದಾಸರ ಸಾಹಿತ್ಯವನ್ನು ಮಕ್ಕಳಿಗೆ ತಿಳಿಸಲು ಈ ಸ್ಪಧರ್ೆಗಳನ್ನು ಏರ್ಪಡಿಸಿ ಅದರ ಮೂಲಕ ಹೊಸ ಪ್ರತಿಭೆಗಳನ್ನು ಹೊರತರುತ್ತಿರುವ ಕನಕ ಯುವಕ ಸಂಘದವರ ಕಾರ್ಯ
ಶ್ಲಾಘನೀಯವದದ್ದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರ ಕಂಬಳಿ ಸೊಸೈಟಿ ಆವರಣದಲ್ಲಿ ನಡೆದ ಕನಕದಾಸರ ಚಿತ್ರಕಲಾ ಮತ್ತು ಕನಕ ಕೀರ್ತನಾ ಗಾಯನ ಸ್ಪಧರ್ೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರ ಜಯಂತ್ಯೋತ್ಸವ ಸಕರ್ಾರಿ ಕಾರ್ಯಕ್ರಮವಾದ್ದರಿಂದ ಜಯಂತಿಯಂದು ತಾಲೂಕು ಕಛೇರಿಯಿಂದ ಕನಕದಾಸರ ಭಾವಚಿತ್ರದೊಂದಿಗೆ ವಿಜೃಂಭಣೆಯ ಮೆರವಣಿ ಏರ್ಪಡಿಸಲಾಗೆ ಎಂದ ಅವರು ಕನಕದಾಸರ ಜಯಂತಿಯನ್ನು ಆಚರಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು.
ಸಂಪಾದಕ ಎಚ್.ಎಸ್.ರಾಮಣ್ಣ ಮಾತನಾಡಿ ಪ್ರತಿಯೊಬ್ಬರೂ ಹೇಗೆ ಭೂಮಿಯನ್ನು ದೇವರಂತೆ ಕಂಡು ಪೂಜಿಸುತ್ತಾರೋ ಹಾಗೆ ಈ ಭೂಮಿ ಇರುವವರೆಗೂ ಕನಕದಾಸರ ಸಾಹಿತ್ಯವನ್ನು ಜನರು ಅರ್ಥಮಾಡಿಕೊಂಡು ಅವರ ತತ್ವವನ್ನು ಪಾಲಿಸಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮಕ್ಕಳಿಗಾಗಿ ಕೀರ್ತನೆ ಮತ್ತು ಚಿತ್ರಕಲಾ ಸ್ಪಧರ್ೆಯನ್ನು ಏರ್ಪಡಿಸಿದ್ದು ಕನಕದಾಸರ ಜೀವನ ಮತ್ತು ಅವರ ಸಾಹಿತ್ಯವನ್ನು ಈಗಿನ ಮಕ್ಕಳಿಗೆ ಈ ಸ್ಪಧರ್ೆಗಳ ಮೂಲಕ ತಿಳಿಸಿ ಮಕ್ಕಳ ಮುಖಾಂತರ ಎಲ್ಲರಿಗೂ ಅವರ ಗಾಯನಗಳನ್ನು ಹರಿದಾಡುವಂತೆ ಮತ್ತು ದಾಸರ ಜಯಂತಿಯನ್ನು ಸಾಹಿತ್ಯದ ಮೂಲಕ ಆಚರಿಸಲು ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ರಾಜಣ್ಣ, ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ಕನರ್ಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗಿರೀಶ್ ಸ್ವಾಗತಿಸಿದರೆ ಗಂಗಾಧರ್ ವಂದಿಸಿದರು.