Monday, March 14, 2016


ವಿದ್ಯುತ್ ಶಾಕ್ ವ್ಯಕ್ತಿ ಸಾವು 
ಚಿಕ್ಕನಾಯಕನಹಳ್ಳಿ,ಮಾ.14: ಮೇಕೆಗಳಿಗೆ ಸೊಪ್ಪು ತರಲು ಹೋದ ವ್ಯಕ್ತಿ,  ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಕಾತ್ರಿಕೆಹಾಳ್ ಗ್ರಾಮದ ಹೊಸೂರಿನಲ್ಲಿ  ನಡೆದಿದೆ.
ತಾಲ್ಲೂಕಿನ ಕಂದಿಕೆರೆ ಹೋಬಳಿ ಕಾತ್ರಿಕೆಹಾಳ್ ಗ್ರಾಮದ ನಾಗರಾಜು(ರಾಜು) 40 ವರ್ಷ ದುದರ್ೈವಿ, ಸೋಮವಾರ ಬೆಳಗ್ಗೆ ತಾನು ಸಾಕಿದ್ದ ಮೇಕೆಗಳಿಗೆ ಸೊಪ್ಪು ತರಲು ಹೋದ ವ್ಯಕ್ತಿ, ಸೊಪ್ಪು ಕತ್ತರಿಸಲು ಮರಕ್ಕೆ ಹತ್ತಿದ ವೇಳೆ ಈ ಅವಘಡ ಸಂಭವಿಸಿದೆ.
 ಚಿಕ್ಕನಾಯಕನಹಳ್ಳಿಯಿಂದ ಹಾಗಲವಾಡಿಗೆ ಹೋಗುವ ಮಾರ್ಗ ಮಧ್ಯದ 14 ನೇ ಕಿಲೋಮೀಟರ್ ಕಲ್ಲಿನ ಬಳಿ ಇರುವ ಗೋಣಿಮರವು ನಿರಂತರ ವಿದ್ಯುತ್ ಕಂಬದ ತಂತಿಗಳಿಗೆ ತಗುಲಿಕೊಂಡಿದ್ದು,  ವಿದ್ಯುತ್ ತಂತಿಯು ತರಂಗ ಸ್ಪರ್ಶದಿಂದಾಗಿ ವ್ಯಕ್ತಿಗೆ ಪ್ರವಹಿಸಿ ಆತ ಸ್ಥಳದಲ್ಲೇ ಸಾವನ್ನಪ್ಪುವಂತೆ ಮಾಡಿದೆ. ಮೃತ ವ್ಯಕ್ತಿ ಹೆಂಡತಿ ನಲ್ಲೂರಮ್ಮ, 6ನೇ ತರಗತಿ ಹಾಗೂ ಅಂಗನವಾಡಿಗೆ ಹೋಗುತ್ತಿರುವ ಎರಡು ಪುಟ್ಟ ಹೆಣ್ಣು ಮಕ್ಕಳಿದ್ದು ಇಡೀ ಕುಟುಂಬ ನಿರ್ವಹಣೆ ಜವಬ್ದಾರಿ ನಾಗರಾಜು ಹೆಗಲ ಮೇಲಿತ್ತು ಈ ಅವಘಡದಿಂದಾಗಿ ಇಡೀ ಕುಟುಂಬಕ್ಕೆ  ದಿಕ್ಕು ಕಾಣದಂತಾಗಿದೆ. 
ಘಟನಾ ಸ್ಥಳಕ್ಕೆ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು   ಸ್ಥಳಕ್ಕೆ ಭೇಟಿ ನೀಡಿದ್ದು.  ಚಿಕ್ಕನಾಯಕನಹಳ್ಳಿ ಪೋಲಿಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ನವೋದಯ ಕಾಲೇಜಿನ ವಿದ್ಯಾಥರ್ಿಗಳಿಂದ ಬಜೆಟ್ 
ಚಿಕ್ಕನಾಯಕನಹಳ್ಳಿ,ಮಾ.14:   ಈ ಬಾರಿಯ ಕೇಂದ್ರ  ಬಜೇಟ್ ಮಿಶ್ರ ಪ್ರತಿಕ್ರೀಯೆಯಿಂದ ಕೂಡಿದ್ದು ಅಭಿವೃದ್ದಿಯ ವಿಚಾರಗಳಿಗೆ ಹೆಚ್ಚಿನ ಮನ್ನಣೆ ನೀಡದೆ,  ಕಳೆದ ಬಾರಿ ಇದ್ದಂತಹ ವಿಚಾರವನ್ನೆ ಮುಂದುವರಿಸಿದೆ ಎಂದು ವಿದ್ಯಾಥರ್ಿನಿ ನಂದನ ವಿಶ್ಲೇಷಿಸಿದರು.
ಪಟ್ಟಣದ  ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ  ಆಯೋಜಿಸಿದ್ದ ಕೇಂದ್ರ ಸರಕಾರ ಮಡಿಸಿದ್ದಂತಹ 2016 -17 ನೇ ಸಾಲಿನ  ಬಜೆಟ್ ವಿಶ್ಲೇಷಣೆ ವಿಚಾರ ಸಂಕಿರಣದಲ್ಲಿ ವಿದ್ಯಾಥರ್ಿಗಳು  ಆಯೋಜಿಸಿದ್ದರು. 
ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,  ಆರೋಗ್ಯ, ಕೃಷಿ, ಶಿಕ್ಷಣ, ರಕ್ಷಣೆ  ಕೈಗಾರಿಕೆ, ಗ್ರಾಮೀಣಾಭಿವೃದ್ದಿ, ರಸ್ತೆ, ರಾಷ್ಟ್ರೀಯ ಹೆದ್ದಾರಿ ಇನ್ನಿತರೆ ವಿಷಯಗಳಿಗೆ ಸಂಬಂಧ ಪಟ್ಟಂತೆ ಪರಿಪೂರ್ಣವಾದ ಅಂಕಿ ಅಂಶಗಳ ಮುಖೇನ ತಮ್ಮ ವಿಚಾರ ಮಂಡನೆ ಮಾಡಿದರು. ನಂತರ ಇದಕ್ಕೆ ಹಲವು ವಿದ್ಯಾಥರ್ಿಗಳು ಪ್ರತಿಕ್ರಯಿಸಿ ಸಾಕಷ್ಟು ಚಚರ್ೆಯನ್ನು ಮಾಡುವ ಮೂಲಕ ಬಜೆಟ್ ನಲ್ಲಿ ಅನುಸರಿಸದಂತಹ ವಿಷಯಗಳ ಬಗ್ಗೆ ಚಚರ್ಿಸಿದರು.  
ಕೃಷಿಯ ಬಗ್ಗೆ ಹೆಚ್ಚು ಪ್ರೆಶ್ನೆ ಮಾಡಿದ ವಿದ್ಯಾಥರ್ಿಗಳು ನಾವೆಲ್ಲರೂ ಕೃಷಿಯನ್ನೆ ಮಾಡುತ್ತಿದ್ದೇವೆ ಆದರೆ ಕೃಷಿಗಾಗಿ ಸಾವಿರಾರು ಕೊಟಿಯಷ್ಟು ಹಣವನ್ನು ಸರಕಾರ ಬಜೆಟ್ ನಲ್ಲಿ ಮಂಡನೆ ಮಾಡುತ್ತದೆ ಆದರೆ ಅದರ ಫಲಗಳು ನಮಗೆ ಸಿಗುತ್ತಿಲ್ಲವಲ್ಲ ಈ ಹಣವೆಲ್ಲ ಎಲ್ಲಿ ಹೋಗುತ್ತಿದೆ ಎಂದು ಕೇಳಿದಾಗ ಅದರ ಮೇಲ್ವಿಚಾರಕರಾದ ಪ್ರೋ ಚಂದ್ರಶೇಖರ್ ಮಾತನಾಡಿ ಅದಕ್ಕೆ ಸಮಂಜಸ ಉತ್ತರವನ್ನು ನೀಡಿದರು ಹೀಗೆ ಹಲವು ಪ್ರೆಶ್ನೆಗಳು ವಿದ್ಯಾಥರ್ಿಗಳಿಂದ ಬಂದವು ಇದಕ್ಕೆ ಉಪನ್ಯಾಸಕರು ಮಾರ್ಗದರ್ಶನವನ್ನು ನೀಡಿದರು.
ವಿದ್ಯಾಥರ್ಿನಿ ಮೇಘನಾ ಎಂ.ಬಿ ಬಜೆಟ್ ಮಂಡನೆ ಯಾದ ನಂತರ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಬಜೆಟ್ನ ಮೇಲಿನ  ಅಭಿಪ್ರಾಯವನ್ನು ಹಂಚಿಕೊಂಡರು.
 ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸಿ.ಜಿ ಸುರೇಶ್, ಪ್ರೋ ಶಿವರಾಮಯ್ಯ, ಶ್ರೀನಿವಾಸ್ ಪ್ರಸನ್ನಕುಮಾರ್, ಪ್ರಸನ್ನ.ಡಿ.ಆರ್ ಇನ್ನಿತರರು ಹಾಜರಿದ್ದರು.

ಶಿವಪ್ಪನ ಗುಡಿಯಲ್ಲಿ ಏಳು ದಿನ ನಡೆದ ಶಿವಪೂಜೆ
ಚಿಕ್ಕನಾಯಕನಹಳ್ಳಿ,ಮಾ.14: ಪಟ್ಟಣದ ಶಿವನ ದೇವಾಲಯದಲ್ಲಿ ನಡೆಯುತ್ತಿದ್ದ  ಅಹೋರಾತ್ರಿ ಶಿವಸ್ತತಿ, ಅಖಂಡ ಭಜನೆಯ ಅಂಗವಾಗಿ  ಏಳನೇ ದಿನದಂದು  ಹೋಮ, ಹವನ ಪೂಜೆಯೊಂದಿಗೆ ಅಂತ್ಯಗೊಂಡಿತು.
ಏಳು ದಿನಗಳವರೆಗೆ ನಡೆದ ಶಿವಸಪ್ತಾಹದ ಅಂಗವಾಗಿ ಅಹೋರಾತ್ರಿ ಶಿವಸ್ತುತಿ ಹಾಗೂ ಅಖಂಡ ಭಜನೆ ಪೂಜೆಗೆ ಪ್ರತಿನಿತ್ಯ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು, ಅಬಾಲವೃದ್ದರಾಗಿ ಆ ಭಾಗದ ಭಕ್ತರು ಶಿವಸ್ತುತಿಯನ್ನು ಕಳೆದ ಏಳುದಿನಗಳಿಂದ  ದಿನದ ಇಪ್ಪತ್ತನಾಲ್ಕು ಗಂಟೆಯೂ ನಡೆಸುತ್ತಿದ್ದರು, ಅಂತಿಮ ದಿನವಾದ ಸೋಮವಾರ ಹರಿಯ ಭಕ್ತರಾದ ದಾಸಪ್ಪಗಳು ಹರನಿಗೆ ವಿಶೇಷ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಭಕ್ತ ಆರ್ ಸಿದ್ದರಾಮಯ್ಯ ಮಾತನಾಡಿ, 66 ವರ್ಷಗಳಿಂದಲೂ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದ್ದು,  ಶಿವರಾತ್ರಿ ಆರಂಭವಾದ ದಿನದಿಂದ ಏಳು ದಿನಗಳ ವರೆಗೆ ದೇವಾಲಯದಲ್ಲಿ ಅಹೋರಾತ್ರಿ ಶಿವಸ್ಮರಣೆಯ ಭಜನೆ ನಡೆಯುತ್ತದೆ,  ಜಾತಿ, ಮತ ಬೇದವಿಲ್ಲದೆ ಎಲ್ಲಾ ಜನಾಂಗದವರು ಭಜನೆಯಲ್ಲಿ ಭಾಗವಹಿಸಿ ದೇವಾಲಯದ ಗರ್ಭಗುಡಿಯೊಳಗಿನ ಶಿವಲಿಂಗವನ್ನು  ಪ್ರದಕ್ಷಣೆ ಮಾಡುತ್ತಾ ಶಿವಸ್ತುತಿ ಮಾಡುತ್ತಾರೆ, ಏಳು ದಿನದ ನಂತರ ಕೊನೆಯ ದಿವಸ ಹೋಮ, ಹವನ, ನವಗ್ರಹ ಪೂಜೆ, ಗಣಪತಿ ಪೂಜೆ ನೆರವೇರಲಿದೆ ನಂತರ ಮರುದಿನ  ಊರಿನ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ನಡೆಯಲಿದೆ, ಈ ಕಾರ್ಯಕ್ರಮದ ಕೊನೆಯಲ್ಲಿ ಪಟ್ಟಣದ ಸಮಸ್ತ ಜನರಿಗೆ  ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದರು.
ಮತ್ತೋರ್ವ ಭಕ್ತ ಸಿದ್ದರಾಜು ಮಾತನಾಡಿ, ಶಿವರಾತ್ರಿಯ ದಿನದಂದು ಆರಂಭವಾದ ಭಜನೆ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾಗುತ್ತಾರೆ, ದೇವಾಲಯದಲ್ಲಿ ನಂದಾದೀಪ ಬೆಳಗಿದ ನಂತರದ ಏಳು ದಿವಸಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು ಶಿವಭಕ್ತರು ಶಿವನ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ, ಅನ್ನಸಂತರ್ಪಣೆ ನಡೆಯಲು ಭಿಕ್ಷಾಟನೆಗಾಗಿ ಹೋಗುವ ಭಕ್ತರಿಗೆ ಏಳುದಿವಸಗಳ ಕಾಲ ಭಕ್ತರ ಮನೆಯಲ್ಲಿ ಭೋಜನದ ವ್ಯವಸ್ಥೆಯೂ ಇರುತ್ತದೆ ಹಾಗೂ ಶಿವರಾತ್ರಿ ಆರಂಭವಾದ ನಂತರ ಪ್ರತಿನಿತ್ಯ ರಾತ್ರಿ ಶಾಲಾ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ, ಜಗದೀಶ್ ಗಾರೆ, ಮಹಲಿಂಗಣ್ಣ, ಸ್ವಾಮಿ, ನಾಗರಾಜು, ಶಿವಣ್ಣ, ರವಿಕುಮಾರ್ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ
ಚಿಕ್ಕನಾಯಕನಹಳ್ಳಿ,ಮಾ.14 : ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಹೃದಯ ರೋಗ ಹಾಗೂ ಮಹಿಳೆಯರಿಗಾಗಿ ಸ್ತನದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾಚರ್್ 20ರಂದು ಹಮ್ಮಿಕೊಳ್ಳಲಾಗಿದೆ. 
ಪಟ್ಟಣದ ರೋಟರಿ ಕ್ಲಬ್, ತಾಲ್ಲೂಕು ವೈದ್ಯರ ಸಂಘ, ಸಾರ್ವಜನಿಕ ಆಸ್ಪತ್ರೆ, ನಾರಾಯಣ ಇನ್ಸ್ಟ್ಯೂಟ್ ಕಾಡರ್ಿಯಕ್ ಸೈನ್ಸೆಸ್ ಇವರ ಸಂಯುಕ್ತಾಶ್ರಯದಲ್ಲಿ  ಈ ಶಿಬಿರವನ್ನು ಹಮ್ಮಿಕೊಂಡಿದ್ದು, ರೋಗಿಗಳು ಈ ಹಿಂದೆ ತಪಾಸಣೆ ಮಾಡಿಸಿದ್ದರೆ ಸಂಬಂಧಿಸಿದ ಮಾಹಿತಿಗಳನ್ನು ಶಿಬಿರಕ್ಕೆ ತರುವುದು ಎಂದು ತಿಳಿಸಿದ್ದಾರಲ್ಲದೆ,  ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ರೋಟರಿ ಕ್ಲಬ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ 9448748225 ನಂ.ಗೆ ಸಂಪಕರ್ಿಸಲು ಕೋರಿದ್ದಾರೆ.

ಗುರುಪರಪ್ಪಸ್ವಾಮಿ ದೇವಾಲಯದ 25ನೇ ವರ್ಷದ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಮಾ.14 : ಪಟ್ಟಣದ ಶ್ರೀ ಗುರುಪರಪ್ಪಸ್ವಾಮಿ ಮಠ 25ನೇ ವರ್ಷದ ವಾಷರ್ಿಕ ಮಹೋತ್ಸವ ಹಾಗೂ ರಜತ ಕವಚ ಧಾರಣಾ ಕಾರ್ಯಕ್ರಮವನ್ನು ಇದೇ ಮಾಚರ್್ 21ರಿಂದ 22ರವರೆಗೆ ನಡೆಯಲಿದೆ.
21ರ ಸೋಮವಾರ ರಜತ ಕವಚಕ್ಕೆ ಗಂಗಾಸ್ನಾನ ಶ್ರೀ ತೀರ್ಥರಾಮಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡಯಲಿದೆ. 22ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, ನಂದಾದೀಪ, 9ಗಂಟೆಗೆ ಅಭಿಷೇಕ, ರಜತಕವಚಧಾರಣೆ, ಗಣಪತಿ ಹೋಮ, ನವಗ್ರಹಹೋಮ, ಮಹಾಮೃತ್ಯುಂಜಯ ಹೋಮ, ಮಧ್ಯಾಹ್ನ 12ಕ್ಕೆ ಪೂಣರ್ಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, 12.30ಕ್ಕೆ ಶ್ರೀ ದೇವಿಪಾರಾಯಣ, ರಾತ್ರಿ 8ಕ್ಕೆ ಆರಂಭಗೊಳ್ಳುವ ಭಜನೆ ಅಹೋರಾತ್ರಿ ನಡೆಯಲಿದೆ. 
ಇದೇ 22ರಂದು ರಾತ್ರಿ 8ಕ್ಕೆ  ಧಾಮರ್ಿಕ ಸಮಾರಂಭ ನಡೆಯಲಿದ್ದು ಕನಕ ಹೊಸದುರ್ಗ ಗುರುಪೀಠದ ಶ್ರೀ ಈಶ್ವರಾನಂದಪುರಿಸ್ವಾಮೀಜಿ ಸಾನಿದ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಪರಪ್ಪಸ್ವಾಮಿ ಮಠದ ಅಧ್ಯಕ್ಷ ಸಿ.ಎಸ್.ದೊರೆಸ್ವಾಮಿ, ಪುರಸಭಾಧ್ಯಕ್ಷೆ ಪ್ರೇಮದೇವರಾಜು, ಉಪಾಧ್ಯಕ್ಷ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ, ಕ್ಯಾಪ್ಟನ್ಸೋಮಶೇಖರ್, ಪುರಸಭಾ ಸದಸ್ಯ ಸಿ.ಟಿ.ದಯಾನಂದ, ಸಿ.ಎಸ್.ರಾಜಣ್ಣ ಹಾಗೂ ಸಿ.ಬಸವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
23ರಂದು ಬುಧವಾರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪರಪ್ಪಸ್ವಾಮಿ ಮಠದ ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


 ಸಿದ್ದರಾಮನಗರದಲ್ಲಿ ದೇವರುಗಳ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮಾ.14 : ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಸಿದ್ದರಾಮನಗರದ ಹಾಗೂ ವಿವಿಧ ಗ್ರಾಮಗಳಿಗೆ ಸೇರಿದ ಹೆಂಜಾರ ಭೈರವೇಶ್ವರ, ಸಿದ್ದರಾಮೇಶ್ವರ, ಹತ್ತಿಮರದಮ್ಮ ಹಾಗೂ ಆಲದಮರದಮ್ಮ ದೇವರ ರಥೋತ್ಸವ ಹಾಗೂ ದನಗಳ ಜಾತ್ರೆ ಕಾರ್ಯಕ್ರಮ ಮಾಚರ್್ 18ರಿಂದ 23ರವರೆಗೆ ನಡೆಯಲಿದೆ.
18ರಂದು ಹೆಂಜಾರ ಭೈರವೇಶ್ವರಸ್ವಾಮಿಗೆ ಅಂಕುರಾರ್ಪಣೆ ಸೇವೆ, 19ರಂದು ಗಿರಿಜಾ ಕಲ್ಯಾಣೋತ್ಸವ, 20ರಂದು ಗುರುಸಿದ್ದರಾಮೇಶ್ವರಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ, 21ರಂದು ಬಸವೋತ್ಸವ, 22ರಂದು ಬೆಳಗ್ಗೆ 6.30ಕ್ಕೆ ದೊಡ್ಡ ರಥೋತ್ಸವ ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿಯವರ ದಿವ್ಯ ಸಾನಿದ್ಯದಲ್ಲಿ ನಡೆಯಲಿದೆ, ಬೆಳಗ್ಗೆ 8ಕ್ಕೆ ಸ್ವಾಮಿಯವರ ಉಯ್ಯಾಲೋತ್ಸವ, ಮಧ್ಯಾಹ್ನ 2ರಿಂದ 3ರವರೆಗೆ ಆಲದಮರದ ದೇವರ ಬನ್ನಿಮರ ಹತ್ತುವ ಕಾರ್ಯಕ್ರಮ ನಡೆಯಲಿದೆ. 23ರಂದು ಗುರುಸಿದ್ದರಾಮೇಶ್ವರಸ್ವಾಮಿ ರಥೋತ್ಸವ ನಂತರ ಗಂಗಾಸ್ನಾನ ಹಾಗೂ ಮೂಲಸ್ಥಾನಕ್ಕೆ ದೇವರನ್ನು ಕರೆತರುವುದು.