Monday, June 27, 2016



ಸೇವಾದಳ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ.27 : ಭಾರತ ಸೇವಾದಳ ತನ್ನದೇ ಆದ ಪ್ರತ್ಯೇಕ ಸ್ಥಾನಮಾನ ಹೊಂದಿದ್ದು ಈ ಸಂಸ್ಥೆ ಮೂಲಕ ಶಿಸ್ತು, ಸ್ವಚ್ಛತೆ, ಸೇವೆಯ ಮೂಲಕ ಯುವಕರನ್ನು ಸಂಘಟಿಸುತ್ತಿದೆ ಎಂದು ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸೀಮೆಎಣ್ಣೆ ಕೃಷ್ಣಯ್ಯ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿಯ ಬಿ.ಆರ್.ಸಿ ಸಭಾಂಗಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶಿಕ್ಷಕಿಯರಿಗೆ ಮಿಲಾಪ್ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ತನ್ನ ಸ್ವಯಂ ಸೇವೆಯ ಮೂಲಕ ತನ್ನದೇ ಆದ ವ್ಯಕ್ತತ್ವ ಹೊಂದಿಕೊಂಡಿದೆ, ಭಾರತ ಇರೋವರೆಗೂ ಸೇವಾದಳ ಸ್ಥಿರವಾಗಿರುತ್ತದೆ, ಶಿಸ್ತು ಸ್ವಚ್ಛತೆ ಸೇವೆಯ ಮೂಲಕ ಯುವಕರನ್ನು ಬಡಿದೆಬ್ಬಿಸುವ ಕೇಂದ್ರ ಈಗಾಗಲೇ ಬೆಳಗಾವಿ ಭಾಗದಲ್ಲಿ ಆರೋಗ್ಯ ಧಾಮ ಸ್ಥಾಪಿಸಿ ಸಾರ್ವಜನಿಕರಿಗೆ ಉಚಿತ ಸೇವೆ ನೀಡುತ್ತಿದೆ ಸೇವಾದಳ ಬಲಿಷ್ಠವಾಗಿ ಬೆಳೆಯಲು ಶಿಕ್ಷಕರು ಹೆಚ್ಚು ಉತ್ಸಕರಾಗಬೇಕು, ಸಕರ್ಾರಗಳು ಒತ್ತು ನೀಡಬೇಕು ಎಂದರು.
ಜಿಲ್ಲಾ ಸಂಘಟಕ ಪ್ರಸನ್ನ ಮಾತನಾಡಿ, ಒಂದೇ ಮಾತರಂ ಗೀತೆ ಬರೆದ ಬಂಕೀಮ ಚಂದ್ರ ಚಟಜರ್ಿ ಅವರ ಹುಟ್ಟು ಹಬ್ಬವಿದ್ದು ಅವರ ಗೀತೆಯ ಸಾರಾಂಶದಂತೆ ಭಾರತ ಸೇವಾದಳ ಸರ್ವಧರ್ಮಗಳನ್ನು ಏಕತೆಯಿಂದ ನೋಡುವ ಏಕೈಕ ಸಂಸ್ಥೆಯಾಗಿದೆ, ಈ ಸಂಸ್ಥೆ ಹುಟ್ಟಲು ಕಾರಣರಾದ ಮಹಾತ್ಮ ಗಾಂಧಿಯವರ ವ್ಯಕ್ತಿಯ ಮಹತ್ವಗಳನ್ನು ವಿದೇಶಿಯರಿಂದ ತಿಳಿಯುವಂತೆ ಆಗಬಾರದು ಪ್ರಪಂಚದ ಯಾವುದೇ ಮಹಾನ್ ವ್ಯಕ್ತಿ ಸತ್ತರೂ ಪರಸ್ಪರ ದೇಶಗಳ ತನ್ನ ರಾಷ್ಟ್ರದ್ವಜಗಳನ್ನು ಅರ್ಧಕ್ಕೆ ಹಾರಿಸಲು ಮೀನಾಮೇಷ ಎಣಿಸುತ್ತವೆ, ಹೀಗಿರುವಾಗ ಭಾರತದ ರಾಷ್ಟ್ರಪಿತ ಸಾವನ್ನಪಿದ ಸಂದರ್ಭದಲ್ಲಿ 166 ರಾಷ್ಟ್ರಗಳು ಸಾಮೂಹಿಕವಾಗಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ  ಹಾರಿಸುವಂತಹವರ ವಿಷಯವನ್ನು ವಿದೇಶಿಯರಿಂದ ಕಲಿಯುವುದು ಬೇಡ ಗಾಂಧಿಜಿಯವರ ಆದರ್ಶಗಳಿಗೆ ಅವರ ಉದ್ದೇಶಗಳಿಗೆ ಮಹತ್ವವನ್ನು ನೀಡಿ ಗೌರವಿಸಬೇಕು ಎಂದರು.
ತಾಲ್ಲೂಕು ಶಾಖೆ ಅಧ್ಯಕ್ಷ ಈಶ್ವರಪ್ಪ ಮಾತನಾಡಿ, ಭಾರತ ಸೇವಾದಳ ಸೇರಿದರೆ ರಾಷ್ಟ್ರ ಪ್ರೇಮ ಹೆಚ್ಚು ಬೆಳೆಯಲು ಸಾಧ್ಯವಾಗುತ್ತದೆ, ಪ್ರತಿನಿತ್ಯ ರಾಷ್ಟ್ರಧ್ವಜಗಳನ್ನು ಗ್ರಾಮ ಪಂಚಾಯಿತಿಗಳ ಕಛೇರಿಯಲ್ಲಿ ಹಾರಿಸುವುದರಿಂದ ಸರಿಯಾದ ನಿರ್ವಹಣೆ ಇಲ್ಲದೆ ತ್ರಿವರ್ಣ ಬಣ್ಣಗಳು ಬಿಸಿಲಿನಿಂದಾಗಿ ಒಂದೇ ಕಲ್ಲರ್ ಆಗಿದ್ದು ರಾಷ್ಟ್ರದ್ವಜಕ್ಕೆ ಪಂಚಾಯಿತಿಗಳು ಮಾಡುತ್ತಿರುವ ಅಪಮಾನ ಹೇಳತೀರದಾಗಿದೆ ಎಂದು ವಿಷಾಧಿಸಿದ ಅವರು, ರಾಷ್ಟ್ರಧ್ವಜದ ಆರೋಹಣಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ಕೂಡ ಅತ್ಯಗತ್ಯವಾಗಿದೆ, ರಾಷ್ಟ್ರೀಯ ಹಬ್ಬಕ್ಕಾಗಿ ರಾಷ್ಟ್ರದ್ವಜ ಹಾರಿಸಬೇಕಾದರೆ ಹಾವು ಕಂಡು ಹೆದರಿದಂತೆ ದೂರ ಹೋಗುತ್ತಾರೆ ಶಿಕ್ಷಕರು, ಹೀಗಾಗಿ ಶಿಕ್ಷಕರಿಗೆ ತರಬೇತಿ ನೀಡುವಂತೆ ಕೋರಿದರು. 
ಈ ಸಂದರ್ಭದಲ್ಲಿ ಶಿಕ್ಷಣ ಸಮನ್ವಯಾಧಿಕಾರಿ ನಾಗರಾಜು.ಕೆ.ಎನ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್, ಚಿ.ನಿ.ಪುರುಪೋತ್ತಮ್ ಉಪಸ್ಥಿತರಿದ್ದರು. ಬನಶಂಕರಯ್ಯ ಸ್ವಾಗಿತಿಸಿ ನಿರೂಪಿಸಿದರು.

ರೈತರ ಬಂದ್ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ 
ಚಿಕ್ಕನಾಯಕನಹಳ್ಳಿ,ಜೂ.27 : ವಿದೇಶಿ ಅಡಿಕೆ, ತೆಂಗು ಆಮದು ನಿರ್ಬಂಧಿಸಿ ರಾಜ್ಯ ರೈತ ಸಂಘ ಹಾಗೂ ಕನ್ನಡ ಪರ ವಿವಿಧ ಸಂಘಟನೆ ಜೂನ್ 27ರಂದು ಕರೆ ನೀಡಿದ್ದ ಬಂದ್ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈತರ ವಿವಿಧ ಬೇಡಿಕೆಯ ಈಡೇರಿಕೆಗಾಗಿ ಬಂದ್ ಕರೆ ನೀಡಲಾಗಿತ್ತು, ಬಂದ್ ಯಶಸ್ವಿಗೊಳಿಸಲು  ರೈತರು ನಾಗರೀಕರು ಸಹಕರಿಸಬೇಕೆಂದು ರೈತ ಸಂಘ ಮಾಡಿದ ಮನವಿಗೆ ತಾಲ್ಲೂಕು ವಕೀಲರ ಸಂಘ ಕೋಟರ್್ ಕಲಾಪದಿಂದ ಹಿಂದೆ ಸರಿದು ಬೆಂಬಲಿಸಿತು. 
ಕೇಂದ್ರ ಸಕರ್ಾರ ವಿದೇಶಿ ವ್ಯಾಪಾರದಲ್ಲಿ ಅಡಿಕೆ ತೆಂಗು ತಡೆದು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಅಮದು ಸುಂಕದ ದರವನ್ನು ಹೆಚ್ಚಿಸುದ್ದರೂ ಆಮದು ಆಗುವ ವಿದೇಶೀ ಅಡಿಕೆ ತೆಂಗಿಗೆ ಬೆಲೆ ಕುಸಿತದ ಬೀತಿ ಇಲ್ಲವಾಗಿದೆ ಈ ಹಿನ್ನೆಲೆಯಲ್ಲಿ ಕರೆದಿದ್ದ ಬಂದ್ಗೆ ಸಹಮತ ದೊರೆಕಿದೆ , ಸೋಮವಾರ ಸಂತೆ ಹಾಗೂ ಎ.ಪಿ.ಎಮ್.ಸಿ ಆವರಣದಲ್ಲಿ ನಡೆಯುವ ಕುರಿ ವ್ಯಾಪಾರ ಅಂಗಡಿ ಮುಂಗ್ಗಟ್ಟು ಎಂದಿನಂತೆ ನಡೆಯಿತು. ಯಾವುದೇ ಸಂಘಟನೆಗಳಾಗಲಿ ರೈತ ಪರ ಸುಂಘಟನೆಗಳಾಗಲಿ ಮನವಿ ನೀಡುವುದಾಗಲಿ ಮೆರವಣಿಗೆ ಮಾಡುವುದಾಗಲಿ ನಡೆಯಲಿಲ್ಲ. ಹುಳಿಯಾರು ಮಾರ್ಗವಾಗಿ ಖಾಸಗಿ ಬಸ್ಸಿನ ಸಂಚಾರ ಸ್ಥಗಿತಗೊಂಡಿದ್ದು ಉಳಿದಂತೆ ಎಲ್ಲ ಮಾರ್ಗಗಳ ಸಂಚಾರ ಸಕರ್ಾರಿ ಬಸ್ ಸಂಚರ ಕೂಡ ಎಂದಿನಂತೆ ಕೂಡಿತ್ತು. ಶಾಲಾ ಕಾಲೇಜುಗಳು ಎಂದಿನಂತೆ ನಡೆದವು.
ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರಯ್ಯ ಮಾತನಾಡಿ, 1984ರಲ್ಲಿ ತೆಂಗು ಬೆಳೆಗೆ ಆರು ಸಾವಿರ ನಿಗಧಿಯಾಗಿತ್ತು, ಕಳೆದ 30ವರ್ಷಗಳು ಕಳೆದರೂ ಅದೇ ಬೆಲೆ ಚಾಲ್ತಿಯಲ್ಲಿದೆ, ರೈತರು ಬೆಳೆದ ಬೆಳೆಗೆ ಯಾವುದೇ ಬೆಂಬಲಿತ ಬೆಲೆಯಾಗಲಿ ಸಕರ್ಾರ ನೀಡದಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದಂತಾಗಿದೆ ಈಗಾಗಿ ಕೇಂದ್ರ ಸಕರ್ಾರ ಮಧ್ಯೆ ಪ್ರವೇಶಿಸಿ ದೇಶದ ರೈತರಿಗೆ ರೈತರ ಸಂಕಷ್ಟವನ್ನು ಪರಿಹರಿಸುವಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಎಂದರು.
ವಕೀಲರ ಸಂಘದ ಕಾರ್ಯದಶರ್ಿ ಕೆ.ಎಂ.ಷಡಕ್ಷರಿ ಮಾತನಾಡಿ, ಜನಪ್ರತಿನಿಧಿಗಳು ಅವರ ಅಧಿಕಾರ ದಾಹದಿಂದ ಇಂತಹ ಸಚಿವ ಸ್ಥಾನವೇ ಬೇಕು ಎಂದು ಹೋರಾಡುವ ಅವರು ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಅವನು ಕೃಷಿಯನ್ನೇ ಬಿಡುವ ಹಂತದಲ್ಲಿದ್ದಾನೆ, ಇಂತಹ ರೈತರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು ಹೀಗಾಗಿ ವಕೀಲರ ಸಂಘ ಕೂಡ ರೈತರ ಹೋರಾಟಕ್ಕೆ ಬೆಂಬಲಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಡಿ.ಎ.ಸ್ವಾಮಿ, ಜಯಣ್ಣ, ಹೆಚ್.ಎಸ್.ಜ್ಞಾನಮೂತರ್ಿ, ಶಿವಾನಂದ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಬೆನಕನಕಟ್ಟೆ ಗ್ರಾಮದಲ್ಲಿ ಅನೈರ್ಮಲ್ಯ 
ಚಿಕ್ಕನಾಯಕನಹಳ್ಳಿ,ಜೂ.27 : ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚಾಗಿದ್ದು,ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ತಾಲ್ಲೂಕಿನ ಬೆನಕನಕಟ್ಟೆ ಗ್ರಾಮಸ್ಥರು ದೂರಿದ್ದಾರೆ.
    ಕಳೆದ ಆರು ತಿಂಗಳಿನಿಂದ ಅನೈರ್ಮಲ್ಯ ಅಧಿಕವಾಗುತ್ತಿದೆ. ಆಂಜನೇಯಸ್ವಾಮಿ ದೇವಾಲಯದ ಮುಂದಿನ ರಸ್ತೆಯಲ್ಲಿ ಕೊಳಚೆ ನಿರಂತರವಾಗಿ ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.ಅಲ್ಲದೆ ನೂತನ ದೇವಸ್ಥಾನದ ನಿಮರ್ಾಣ ಕಾರ್ಯಕ್ಕೂ ಅನೈರ್ಮಲ್ಯ ತೊಡಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಟೇಲ್ ಬೀದಿಯಿಂದ ದೇವಸ್ಥಾನದ ಮುಂಭಾಗದವರೆವಿಗೂ ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ದೇವಸ್ಥಾನದ ಮುಂಭಾಗವೇ ಚರಂಡಿಯ ನೀರೆಲ್ಲಾ ಶೇಖರಣೆಯಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಅನೈರ್ಮಲ್ಯ ಹೆಚ್ಚಾಗಿ ಮಲೇರಿಯಾ, ಚಿಕೂನ್ಗುನ್ಯಾ ದಂತಹ ರೋಗಗಳು ಉಲ್ಭಣಿಸುತ್ತಿವೆ ಎಂದು ದೂರಿದ್ದಾರೆ. 
  ನಿಮಿಷಾಂಬ ಮಹಿಳಾ ಸ್ತ್ರೀಶಕ್ತಿ ಸಂಘದ ಪ್ರತಿನಿಧಿ ವೀಣಾ ಮಾತನಾಡಿ,ಮಳೆಗಾಲ ಆರತಂಭವಾಗಿದ್ದು ಗ್ರಾಮದ ಅನೈರ್ಮಲ್ಯದಿಂದ ಮಕ್ಕಳೂ ಹಾಗೂ ಮುದುಕರ ಆರೋಗ್ಯದ ಮೇಲೆ ತೀವ್ರ ಪ್ರತೀಕೂಲ ಪರಿಣಾಮ ಉಂಟಾಗುತ್ತಿದೆ. ಚುನಾವಣೆ ಸಮಯದಲ್ಲಿ ಗಂಟೆಗೊಮ್ಮೆ ಬರುವ ರಾಜಕಾರಣಿಗಳು ಎಷ್ಟು ಮನವಿ ಮಾಡಿದರೂ ಇತ್ತ ತಿರುಗಿ ನೋಡುತ್ತಿಲ್ಲ. ಅಧಿಕಾರಿಗಳನ್ನು ಗದರಿಸಿ ಕೆಲಸ ಮಾಡಿಸುವ ಇಚ್ಚಾಶಕ್ತಿ ಪ್ರದಶರ್ಿಸುತ್ತಿಲ್ಲ ಎಂದು ದೂರಿದರು.
  ಗ್ರಾಮಸ್ಥ ದೇವರಾಜ್ ಮಾತನಾಡಿ, ಈಗಾಗಲೆ ಈಗಾಗಲೆ 15ಮಂದಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಕಳೆದ ಮೂರು ತಿಂಗಳುಗಳಿಂದ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅನೈರ್ಮಲ್ಯದಿಂದ ಯಾವುದೇ ಸಾವು ನೋವುಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪರಮೇಶ್, ನಿಜಲಿಂಗಪ್ಪ, ನರಸಿಂಹಮೂತರ್ಿ, ಆದಶರ್್, ತಿಮ್ಮಕ್ಕ, ಶೈಲ, ಶಶಿಧರ್, ರೇಣುಕಮ್ಮ, ಮಂಜುಳ, ರಂಗಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳ ಮನೆ ಶಾಲೆಯಲ್ಲಿ ಕಾರ್ಯಕ್ರಮ 
  ಚಿಕ್ಕನಾಯಕನಹಳ್ಳಿ,ಜೂ.27: ಮಕ್ಕಳ ಮನೆ ಕನ್ನಡ ಶಾಲೆಗಳನ್ನು ಉಳಿಸುವ ದೂರಗಾಮಿ ಉದ್ದೇಶವನ್ನು ಇಟ್ಟುಕೊಂಡು ಪ್ರಾರಂಭವಾಗುತ್ತಿದೆ ಇದರ ಯಶಸ್ಸಿಗೆ ಶಿಕ್ಷಕರು ಹಾಗೂ ಸೇವಾ ಮನೋಭಾವನೆ ಇರುವ ಯುವ ಸಮೂಹ ಕೈಜೋಡಿಸಬೇಕು ಎಂದು ತಾ.ಕ.ಸಾ.ಪ. ಅಧ್ಯಕ್ಷೆ ಎನ್.ಇಂದಿರಮ್ಮ ಮನವಿ ಮಾಡಿದರು.
ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಮಕ್ಕಳ ಮನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮುದಾಯದ ಸಹಭಾಗಿತ್ವದಲ್ಲಿ ಗುಣಾತ್ಮಕ ಶಿಕ್ಷಣವನ್ನು ಉಚಿತವಾಗಿ ನೀಡುವ ಆಶಯದಿಂದ ತಾಲ್ಲೂಕಿನಲ್ಲಿ ಮಕ್ಕಳ ಮನೆ ಪ್ರಾರಂಭವಾಗಿವೆ. ಪೋಷಕರು, ಸಾರ್ವಜನಿಕರು ಹಾಗೂ ಹಳೆಯ ವಿದ್ಯಾಥರ್ಿಗಳು ಈ ವಿನೂತನ ಯೋಜನೆಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ಮಕ್ಕಳ ಮನೆಗಳನ್ನು ನಿರಂತರವಾಗಿ ಲವಲವಿಕೆಯಿಂದ ಮುನ್ನಡೆಸಲು ಹಲವು ಮನಸ್ಸುಗಳು ಮುಂದೆ ಬರುತ್ತಿದ್ದು, ಸಾರ್ವಜನಿಕರಿಂದ ಸಿಗುತ್ತಿರುವ ಪ್ರೋತ್ಸಾಹ ಸಂಘಟಕರಲ್ಲಿ ಉತ್ಸಾಹ ಮೂಡಿಸುತ್ತಿದೆ ಎಂದರು.
ಸುವರ್ಣ ಚೇತನ ಸಂಘಟನೆಯ ಅಧ್ಯಕ್ಷ  ರಾಮಕೃಷ್ಣಪ್ಪ ಮಾತನಾಡಿ, ಖಾಸಗಿ ಶಾಲೆಗಳಲ್ಲಿನ ಡೊನೇಷನ್ ವ್ಯವಸ್ಥೆ ಸಂವಿಧಾನದ ಆಶಯಕ್ಕೆ ವಿರುದ್ದವಾದವು ಎಲ್ಲರಿಗೂ ಉಚಿತ ಹಾಗೂ ಸಮಾನ ಶಿಕ್ಷಣ ಕೊಡುವುದು ಸಕರ್ಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಸಿ.ಆರ್.ಪಿ ಸುರೇಶ್ಕೆಂಬಾಳ್ ಮಾತನಾಡಿ, ಮಕ್ಕಳ ಮನೆ ವಿನೂತನ ಯೋಜನೆಯಾಗಿದ್ದು ಇದನ್ನು ಯಶಸ್ವಿಯಾಗಿಸುವ ಜವಬ್ದಾರಿ ಎಲ್ಲರದ್ದೂ ಆಗಿದೆ ಇಲಾಖೆಯ ವತಿಯಿಂದ ಯಾವುದೇ ಆದೇಶ ಇಲ್ಲದಿದ್ದರೂ ಈಗಾಗಲೇ ಮೌಖಿಕ ಸಮ್ಮತಿ ದೊರೆತಿದೆ, ಈ ಯೋಜನೆಯ ಯಶಸ್ವಿಗೆ ತನ್ನ ಕಾರ್ಯ ಮಿತಿಯೊಳಗಡೆ ಇಲಾಖೆಯು ಸಹಕರಿಸಲಿದೆ ಎಂದರು.
ಸೃಜನ ಅಧ್ಯಕ್ಷೆ ಎಲ್.ಜಯಮ್ಮ ಮಾತನಾಡಿ, ಸಕರ್ಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ತಪ್ಪು ಅಭಿಪ್ರಾಯ ಸಾರ್ವಜನಿಕರಲ್ಲಿದೆ, ಸಕರ್ಾರಿ ಶಾಲೆಗಳಲ್ಲಿ ಉತ್ತಮ ತರಬೇತುದಾರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ, ಒಳ್ಳೆಯ ಮೂಲಭೂತ ಸವಲತ್ತುಗಳು ಹಾಗೂ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಶೂ , ಪಾಠೋಪಕರಣಗಳನ್ನು ಒದಗಿಸಲಾಗುತ್ತಿದೆ ಇದರೊಟ್ಟಿಗೆ ಸಾರ್ವಜನಿಕರು ಕೈಜೋಡಿಸಿದರೆ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸಕರ್ಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸಬಹುದು ಎಂದರು.
ಮುದ್ದೇನಹಳ್ಳಿ ಸಕರ್ಾರಿ ಶಾಲೆಯ ಶಿಕ್ಷಕ ಈಶ್ವರಪ್ಪ ಮಾತನಾಡಿ, ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚು ಇರುವುದರಿಂದ ಸಹಜವಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ, ತರಗತಿಗೊಬ್ಬ ಶಿಕ್ಷಕರನ್ನು ಸಮುದಾಯದ ಸಹಭಾಗಿತ್ವದಲ್ಲಿ ಒದಗಿಸಲು ಸಾಧ್ಯವಾದರೆ ಸಕರ್ಾರಿ ಶಾಲೆಗಳು ಮರುಜೀವ ಪಡೆದುಕೊಳ್ಳುತ್ತವೆ ಎಂದ ಅವರು ಕಳೆದ ಬಾರಿ ತಾಲ್ಲೂಕಿನಿಂದ 318ಮಕ್ಕಳು ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ ಇದರಲ್ಲಿ 290ಕ್ಕೂ ಹೆಚ್ಚು ಮಕ್ಕಳು ಸಕರ್ಾರಿ ಶಾಲೆಯಲ್ಲಿಯೇ ಓದಿದವರು ಎಂಬುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದಶರ್ಿ ನಾಗಕುಮಾರ್ಚೌಕಿಮಠ್, ನಗರ ಘಟಕದ ಅಧ್ಯಕ್ಷ ಧನಂಜಯಮೂತರ್ಿ, ಶೆಟ್ಟಿಕೆರೆ ಹೋಬಳಿ ಘಟಕದ ಅಧ್ಯಕ್ಷ ಅಶ್ವತ್ಥ್, ಯುವರಾಜ್, ಶಿವಕುಮಾರ್, ಮುಖ್ಯೋಪಾಧ್ಯಾಯಿನಿ ರಾಮಕ್ಕ, ಶಿಕ್ಷಕರಾದ ಪುಟ್ಟಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕರಾದ ಸಿ.ಟಿ.ರೇಖಾ ಸ್ವಾಗತಿಸಿದರು. ಜಯಮ್ಮ ನಿರೂಪಿಸಿ ವಂದಿಸಿದರು.