Thursday, August 28, 2014

ಗೌರಿ ದೇವಿಗೆ ಬಾಗಿನ ಅಪರ್ಿಸಿದ ಮಹಿಳೆಯರು
ಚಿಕ್ಕನಾಯಕನಹಳ್ಳಿ  :  ಪಟ್ಟಣದ ಹೊಸಬೀದಿಯಲ್ಲಿರುವ ವೀರಭದ್ರಸ್ವಾಮಿ   ದೇವಾಲಯದಲ್ಲಿ ಗೌರಿ ಹಬ್ಬದ ಪ್ರಯುಕ್ತ ಗೌರಮ್ಮನವರನ್ನು ಕುಳ್ಳಿರಿಸಿ ಪೂಜಿಸಲಾಯಿತು.

ಇಲ್ಲಿನ ಎಲ್ಲಾ ಹೆಣ್ಣುಮಕ್ಕಳು ದೊಡ್ಡಗೌರಮ್ಮನವರನ್ನು ಭಕ್ತಿ ಭಾವದಿಂದ ಪೂಜಿಸುತ್ತಾರೆ, ಗೌರಿ ಹಬ್ಬದಂದು ಎಲ್ಲಾ ಮಹಿಳೆಯರು ಬೆಳಗಿನ ಜಾವದಿಂದಲೇ ದೇವಿಯ ಪೂಜೆಗಾಗಿ ಸಿದ್ದರಾಗಿ ಉಪವಾಸವಿದ್ದು ನಂತರ ಗೌರಮ್ಮನವರನ್ನು ಕುಳ್ಳಿರಿಸಿರುವಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ, 
ಗೌರಿ ಹಬ್ಬದಂದು ಕುಳ್ಳಿರಿಸುವ ದೇವಿಯನ್ನ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುವುದು, ಅದೇ ರೀತಿ ಒಂಬತ್ತು ದಿನಗಳ ಕಾಲ  ಪೂಜೆ ಸಲ್ಲಿಸಲಾಗುವುದು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೆರೆಯಲ್ಲಿ ವಿಸಜರ್ಿಸಲಾಗುವುದು.
ಸುಮಾರು 400ವರ್ಷಗಳಿಂದಲೂ ದೇಶದ ಗೌರಮ್ಮನೆಂಬುದಾಗಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದು ಇದೇ ಸಂಪ್ರದಾಯದ ಆಚರಣೆಯನ್ನು ನಾವೂ ಮುಂದುವರೆಸಿಕೊಂಡು ಬರುತ್ತಿದ್ದೇವೆ.
ದೇವಿಗೆ ಪೂಜೆ ಸಲ್ಲಿಸಿದ ಭಕ್ತರು ಮಾತನಾಡಿ ಪಾಳೇಗಾರರ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವುದನ್ನು ನಾವು ಚಿಕ್ಕಮಕ್ಕಳಿಂದ ನೋಡಿ ಕಲಿತು ಅದೇ ಸಂಪ್ರದಾಯವನ್ನು ಮುಂದುವರೆಸುತ್ತಿದ್ದೇವೆ, ಪ್ರತಿ ಗೌರಿ ಹಬ್ಬದಂದು ಇಲ್ಲಿ ಹೆಣ್ಣುಮಕ್ಕಳು ಗೌರಮ್ಮನವರನ್ನು ಪೂಜಿಸುತ್ತಾರೆ, ದೇವಿ ಗೌರಮ್ಮನವರಿಗೆ ಹೆಚ್ಚು ಜನರು ಬಂದು ಪೂಜೆ ಸಲ್ಲಿಸುತ್ತಾರೆ, ಹೊಸ ಬಾಗಿನ ಅಪರ್ಿಸುವವರು ವಿಶೇಷ ರೀತಿಯಲ್ಲಿ ದೇವರಿಗೆ ಬಾಗಿನ ಅಪರ್ಿಸುತ್ತಾರೆ, ಕಜರ್ಿಕಾಯಿ, ಚಕ್ಕಲಿ, ಕೋಡಬಳೆಯನ್ನು ಹಾಗೂ ಹರಿಶಿನ ದಾರ, ಗೌರಿ ಎಲೆ, ಅರಿಶಿನ ಕುಂಕುಮ , ಕೋಸುಂಬರಿ, ಹಣ್ಣು ಹಂಪಲು ನೀಡಿ ಬಾಗಿನ ಅಪರ್ಿಸುತ್ತಾರೆ.
 ಬಾಗಿನ ಅಪರ್ಿಸಲು ಬಂದ ಮುತೈದೆಯರಿಗೆ ಹರಿಶಿನ ಕುಂಕುಮ ನೀಡಿ ಪರಸ್ಪರ ಶುಭಾಷಯ ಕೋರುತ್ತೇವೆ. ನಂತರ ಗೌರಮ್ಮನವರಲ್ಲಿ ನಮ್ಮ ಮುತೈದೆ ಭಾಗ್ಯ ಚೆನ್ನಾಗಿರಲಿ ಎಂದು ದೇವರಲ್ಲಿ ಕೋರುತ್ತೇವೆ ಎಂದು ತಿಳಿಸಿದರು.

ವೀಶೇಷ : ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಲ್ಲಿ ದೇಶದ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಎಲ್ಲೆಡೆ ದೊಡ್ಡಗಾತ್ರದ ಗಣೇಶನ ಪಕ್ಕದಲ್ಲಿ ಪುಟ್ಟ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ ಆದರೆ ಇಲ್ಲಿ ಮಾತ್ರ ಗೌರಮ್ಮನೇ ಗಾತ್ರದಲ್ಲಿ ದೊಡ್ಡವಳು, ಅವಳ ಪಕ್ಕದಲ್ಲಿ ಗಣಪ ಪುಟ್ಟ ಕೂಸಿನಂತೆ ಕಾಣುತ್ತಾನೆ.
ಶ್ರಾವಣ ಮಾಸದಲ್ಲಿ ತವರು ಮನೆಯಿಂದ ತರುವ ಬಾಗಿನವನ್ನು ಹೆಣ್ಣು ಮಕ್ಕಳು ಗೌರಿ ಬಾಗಿನದ ದಿನದವರೆಗೆ ಬಿಚ್ಚುವುದಿಲ್ಲ, ತವರಿನಿಂದ ಬಂದ ಬಾಗಿನವನ್ನು ರುದ್ರನ ಗುಡಿಗೆ ತರುತ್ತಾರೆ, ಸೀರೆ, ಕುಪ್ಪಸ, ಬಳೆ, ಅರಿಶಿನ,ಕುಂಕುಮ ಐದು ಬಗೆಯ ಧಾನ್ಯಗಳನ್ನು ದೇಶದ ಗೌರಮ್ಮನಿಗೆ ಅಪರ್ಿಸುತ್ತಾರೆ, ನಂತರ ಒಬ್ಬರಿಗೊಬ್ಬರು ಮಡಿಲು ತುಂಬಿ ಪರಸ್ಪರ ಶುಭ ಕೋರುತ್ತಾರೆ.

Wednesday, August 27, 2014



ಪುರಸಭಾ ಸದಸ್ಯರಿಗೆ ಮಾತುಗಾರಿಕೆಯ  ಬಗ್ಗೆ ಪಾಠ ಮಾಡಿದ ಜಿಲ್ಲಾಧಿಕಾರಿ.
ಚಿಕ್ಕನಾಯಕನಹಳ್ಳಿ,ಆ.27: ಮಾತು ಮಾಣಿಕ್ಯ, ಮಾತೇ ಮೃತ್ಯು, ಎಂಬ ಭಾವರ್ಥವಿರುವ ಸರ್ವಜ್ಞನ ತ್ರಿಪದಿಯನ್ನು  ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ನಿರರ್ಗಳವಾಗಿ ಹೇಳುತ್ತಾ,  ಮೇಷ್ಟ್ರು ರೀತಿ ಪಾಠ ಮಾಡುತ್ತಿದ್ದರೆ ಸಭೆಯಲ್ಲಿದ್ದ ಪುರಸಭಾ ಸದಸ್ಯರು  ಕಮಕ್ ಕಿಮಿಕ್ ಎನ್ನದೆ, ಶ್ರದ್ದಾಭಕ್ತಿಯಿಂದ ಕೇಳುವ ವಿದ್ಯಾಥರ್ಿಗಳಂತೆ ಕೇಳುತ್ತಿದ್ದ ಸನ್ನಿವೇಶ ನೋಡಿದರೆ, ಇವರೇನಾ ನಮ್ಮ ಕೌನ್ಸಿಲರ್ಗಳು...! ಸಾಮಾನ್ಯ ಸಭೆಯಲ್ಲಿ ಆರ್ಭಟಿಸುತ್ತಿದ್ದ ಪುರ ಪಿತೃಗಳು...? ಎಂಬಂತ್ತಿತ್ತು ಆ ದೃಶ್ಯ. 
ಇದು ನಡೆದಿದ್ದು ಜಿಲ್ಲಾಧಿಕಾರಿ ಸತ್ಯಮೂತರ್ಿಯವರು ದಿಢೀರನೆ ಇಲ್ಲಿನ ಪುರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುರಸಭಾ ನೌಕರರು ಹಾಗೂ ಕೌನ್ಸಿಲರ್ಗಳೊಂದಿಗೆ ಪಟ್ಟಣದ ಸಮಸ್ಯೆಗಳ ಬಗ್ಗೆ ಚಚರ್ೆಸುವ ಸಂದರ್ಭದಲ್ಲಿ ಮೇಲಿನ ಸನ್ನಿವೇಶ ನಿಮರ್ಾಣವಾಗಿತ್ತು.
ಜಿಲ್ಲಾಧಿಕಾರಿಗಳು ಆರಂಭದಲ್ಲೇ ಪುರಸಭಾ ಮುಖ್ಯಾಧಿಕಾರಿಗಳನ್ನು ಉದ್ದೇಶಿಸಿ, ಯಾರೋ ಇಲ್ಲಿನ  ವಿರೋಧ ಪಕ್ಷದ ಸದಸ್ಯರು ಜಾಸ್ತಿ ಗಲಾಟೆ ಮಾಡ್ತಾರೆ ಅಂತ  ಪತ್ರಿಕೆಗಳಲ್ಲಿ ಬರುತ್ತಲ್ಲಾ ಅವರ್ಯಾರು ಎಂದು ಕೇಳುತ್ತಿದ್ದ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್ ಪಕ್ಷದ ಸಿ.ಪಿ.ಮಹೇಶ್ ಸಭೆಗೆ ಆಗಮಿಸಿದರು, ತಕ್ಷಣವೇ ಪಕ್ಕದಲ್ಲಿದ್ದ ಸದಸ್ಯರು ಇವರೇ ಸಾರ್, ಈಗ ನೀವು ಕೇಳಿದ್ದು ಎಂದರು. ತಕ್ಷಣವೇ ಮಹೇಶ್ ತಮ್ಮ ಪರಿಚಯ ಮಾಡಿಕೊಂಡರು ನಂತರ ಕಡತ ಪರಿಶೀಲನೆಗೆ ತೊಡಗಿದ ಡಿ.ಸಿ.ಯವರು,  ಈ ಪುರಸಭೆಗೆ ಸಂಬಂಧಿಸಿದಂತೆ ನನ್ನ ಕಛೇರಿಯಲ್ಲಿ ಯಾವ ಯಾವ ಫೈಲ್ಗಳು ಬಾಕಿ ಇವೆ ಎಂದು ಪ್ರಶ್ನೆಸಿದರು, ಮುಖ್ಯಾಧಿಕಾರಿಗಳು ಈ ಬಗ್ಗೆ ಉತ್ತರಿಸಲು ಮುಂದಾದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಸದಸ್ಯರು ಬೇರೆ ವಿಷಯಗಳ ಬಗ್ಗೆ ಡಿ.ಸಿ.ಯವರನ್ನು ಕೇಳಲು ಮುಂದಾದರು, ತಕ್ಷಣವೇ ಡಿ.ಸಿ. ಮಾತನಾಡಿ, ನನ್ನನ್ನು ವಿಷಯಾಂತರಗೊಳಿಸಬೇಡಿ, ನಾನು ಕೇಳುವ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದಾರೆ, ಸ್ವಲ್ಪ ಸಮಾಧಾನವಾಗಿರಿ ಎಂದರು.
ಫೈಲ್ಗಳ ವಿಷಯ ಇನ್ನೂ ಮುಗಿದೆ ಇರಲಿಲ್ಲ ಮತ್ತೋರ್ವ ಸದಸ್ಯರು ಮಾತನಾಡಲು ಮುಂದಾದರು ಈ ಸಂದರ್ಭದಲ್ಲಿ ಸ್ವಲ್ಪ ಅಸಮಧಾನದಂತೆ ಕಂಡ ಡಿ.ಸಿ. ತಕ್ಷಣವೇ ಮಾತಿಗೆ ಸಂಬಂಧಿಸಿದ ಸರ್ವಜ್ಞರ ವಚನವನ್ನು ಪಠಿಸಿ ಅದರ ಅರ್ಥವನ್ನು ತಿಳಿಸಿ ಸರಳವಾಗಿ, ಮೃದುವಾಗಿ, ಸೌಜನ್ಯದಿಂದ ಮಾತನಾಡ ಬೇಕು, ನೀವು ಹೇಗಂದರೆ ಹಾಗೆ ಮಾತನಾಡಿದರೆ ಅದು ಆರ್ಭಟವಾಗುತ್ತದೆ ಹೊರತು ಸಭಾ ಮಯರ್ಾದೆ ಎನಿಸಿಕೊಳ್ಳುವುದಿಲ್ಲ  ಎಂದು ಪಾಠ ಶುರು ಮಾಡಿದ ತಕ್ಷಣವೇ ಸದಸ್ಯರು ಶಾಂತರಾದರು, ಪಾಠದ ಕೊನೆಯಲ್ಲಿ ಪಕ್ಕದಲ್ಲಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು ರವರ ಕಡೆ ತಿರುಗಿ ನಾನು ಹೇಳಿದ್ದು ಕರೆಕ್ಟಾ ಎಂದು ಕೇಳುವ ಮೂಲಕ ತಮ್ಮ ಪಾಠಕ್ಕೆ ಶಾಸಕರ ಅನುಮೋದನೆಯನ್ನು ಪಡೆದಿದ್ದು ಇಡೀ ಸಭೆ ಒಂದು ರೀತಿ ತರಗತಿ ಕೋಣೆಯಂತಹ ವಾತಾವರಣವನ್ನು ನಿಮರ್ಿಸಿತು.
ಎರಡು ದಿನಗಳೊಳಗೆ ಫೈಲ್ ಕ್ಲಿಯರ್ ಮಾಡಿಸಿಕೊಳ್ಳಿ:  ಪಟ್ಟಣದ ಸ್ವಚ್ಚತೆಗೆ ಸಂಬಂಧಿಸಿದಂತೆ ಹೊರಗುತ್ತಿಗೆ ನೇಮಕದ ವಿಷಯ, ಘನತ್ಯಾಜ್ಯ ನಿರ್ವಹಣೆಯ ವಾಹನಗಳಿಗೆ ಹೊರಗುತ್ತಿಗೆಯ ಮೇಲೆ ಚಾಲಕರನ್ನು ನೇಮಿಸಿಕೊಳ್ಳುವ ಕಡತಗಳು ತಮ್ಮ ಕಛೇರಿಯಲ್ಲಿ ಬಾಕಿ ಇವೆ ಎಂದು ಪರಿಸರ ಇಂಜಿನಿಯರ್ ತಿಳಿಸಿದರೆ,  ಯು.ಜಿ.ಡಿ.ಗೆ ಸಂಬಂಧಿಸಿದ ವಿಷಯವನ್ನು ಸದಸ್ಯ ಸಿ.ಎಸ್.ರಮೇಶ್ ಡಿ.ಸಿ.ಯವರ ಗಮನಕ್ಕೆ ತಂದರು,  ಆಶ್ರಯ ಸೈಟ್ಗಳ  ನಿಮರ್ಾಣಕ್ಕೆ ಸಂಬಂಧಿಸಿದ ವಿಷಯವನ್ನು ಸಿ.ಎಂ.ರಂಗಸ್ವಾಮಿ ಪ್ರಸ್ತಾಪಿಸಿದರು,   ಕಾಡೇನಹಳ್ಳಿಯ ಬಳಿ ಇರುವ ಜಮೀನನ್ನು ಕೆ.ಎಸ್.ಆರ್.ಟಿ.ಸಿ. ಡಿಪೋಕ್ಕೆ ಮಂಜೂರು ಮಾಡುವ ವಿಷಯದ ಬಗ್ಗೆ  ಸಿ.ಡಿ.ಚಂದ್ರಶೇಖರ್ ಡಿ.ಸಿ.ಯವರ ಗಮನ ಸೆಳೆದರು, ಅಲ್ಲದೆ ವಗರ್ಾವಣೆಗೊಂಡು ಆರು ತಿಂಗಳಾದರೂ  ಇಂಜಿನಿಯರ್ ಇನ್ನೂ ಚಾಚರ್್ ನೀಡದಿರುವ ಬಗ್ಗೆ ಸಿ.ಪಿ.ಮಹೇಶ್ ಮಾತನಾಡಿದರು    ಈ ಎಲ್ಲಾ ವಿಷಯಗಳನ್ನು ಶಾಂತ ಚಿತ್ತದಿಂದ ಆಲಿಸಿದ ಡಿ.ಸಿ., ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಫೈಲ್ಗಳನ್ನು ತಕ್ಷಣವೇ ಸಿದ್ದ ಮಾಡಿಕೊಂಡಿರುವ ಬಗ್ಗೆ ತಮ್ಮ ಕಛೇರಿಯ ಆಪ್ತ ಶಾಖೆಗೆ ದೂರವಾಣಿಯ ಮೂಲಕ  ತಿಳಿಸಿದರು,  ಇನ್ನೂ ಯಾವುದಾದರೂ ಫೈಲ್ಗಳಿದ್ದರೆ ಇನ್ನೆರಡು ದಿನಗಳೊಂದಿಗೆ ಖುದ್ದು  ಕಛೇರಿಗೆ ಬಂದು ಫೈಲ್ಗಳನ್ನು ಕ್ಲಿಯರ್ ಮಾಡಿಸಿಕೊಳ್ಳುವಂತೆ ಡಿ.ಸಿ.ಸತ್ಯಮೂತರ್ಿ ಸೂಚಿಸಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು, ಪುರಸಭಾ ಅಧ್ಯಕ್ಷೆ ಪುಷ್ಪ ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ ಶಿವಕುಮಾರ್,  ಸದಸ್ಯರುಗಳಾದ ರಾಜಶೇಖರ್,  ಮಹಮದ್ ಖಲಂದರ್, ಮಲ್ಲೇಶ್, ಪ್ರೇಮಾ ದೇವರಾಜು, ರೂಪಾ, ರೇಣುಕಾ ಸತೀಶ್, ಗೀತಾ ರಮೇಶ್, ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ ಶೆಟ್ಟಿ ಸೇರಿದಂತೆ ಪುರಸಭಾ ಸಿಬ್ಬಂದಿ ಸಭೆಯಲ್ಲಿದ್ದರು. 


ಅಪ್ರಪ್ತಾ ಯುವಕರು ಓಡಿಸುತ್ತಿದ್ದ ಬೈಕ್ಗಳು ಪೊಲೀಸರ ವಶಕ್ಕೆ.
ಚಿಕ್ಕನಾಯಕನಹಳ್ಳಿ,ಆ.27 : ಪಟ್ಟಣದಲ್ಲಿ ಅಪ್ರಪ್ತಾ ಯುವಕರು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಮೂವತ್ತು ಬೈಕ್ಗಳನ್ನು ಸಿ.ಪಿ.ಐ. ಜಯಕುಮಾರ್ ನೇತೃತ್ವದ ತಂಡ ತಮ್ಮ ವಶಕ್ಕೆ ಪಡೆದುಕೊಂಡಿದೆ.
 ಪೋಲಿಸರು ಬುಧವಾರ ಮುಂಜಾನೆ 6 ಗಂಟೆಯಿಂದಲೇ ತಮ್ಮ ಕಾಯರ್ಾಚರಣೆ ಪ್ರಾರಂಭಿಸಿದ ಪೊಲೀಸರು ಅಪ್ರಾಪ್ತ ಯುವಕರು ಹಾಗೂ  ಪರವಾನಿಗೆ ಇಲ್ಲದೆ  ದ್ವಿಚಕ್ರ ವಾಹನದಲ್ಲಿ ಮನೆಪಾಠಕ್ಕೆ ತೆರಳುವ ವಿದ್ಯಾಥರ್ಿಗಳ ಬೈಕ್ಗಳನ್ನು  ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಪೋಲಿಸರು ಪಟ್ಟಣದ ನೆಹರು ಸರ್ಕಲ್, ಹೊಸ ಬಸ್ ನಿಲ್ದಾಣ, ಮತಿಘಟ್ಟ ಗೇಟ್, ಶೆಟ್ಟಿಕೆರೆ ಗೇಟ್, ಹಾಗಲವಾಡಿ ಗೇಟ್, ವೆಂಕಟರಮಣಸ್ವಾಮಿ ದೇವಸ್ಥಾನ, ಬ್ರಾಹ್ಮಣರ ಬೀದಿ, ವಿದ್ಯಾನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಪೋಲಿಸ್ ಸಬ್ಇನ್ಸ್ಪೆಕ್ಟರ್, ಸಿಬ್ಬಂದಿ ಗಸ್ತು ತಿರುಗುವ ಮೂಲಕ ಪರವಾನಿಗೆ ಇಲ್ಲದೆ ಸಂಚರಿಸುತ್ತಿದ್ದ ಮೋಟಾರ್ ಸೈಕಲ್ ಸವಾರರು ಹಾಗೂ ಹದಿನೆಂಟು ವರ್ಷಕ್ಕಿಂತ ಒಳಗಿನ ಚಾಲಕರನ್ನು ಹಿಡಿದು ಅವರಿಂದ ಬೈಕ್ ವಶಪಡಿಸಿಕೊಂಡು ಪ್ರತಿಯೊಬ್ಬ ಅಪ್ರಪ್ತಾ ಬೈಕ್ ಸವಾರನ ಪೋಷಕರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಲ್ಲೆ, ಇನ್ನು ಮುಂದೆ ಪರವಾನಿಗೆ ಪಡೆಯುವವರಿಗೆ ವಾಹನ ಚಲಾಯಿಸದಂತೆ  ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಮುಂದೆ ವಾಹನ ಚಾಲಕರು ಇದೇ ರೀತಿ ತಮ್ಮ ಬೈಕ್ಗಳು ರಸ್ತೆಗಿಳಿದರೆ  ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದೆಂದು ಚಾಲಕರಿಗೆ ತಿಳಿಸಿದ್ದಾರೆ.


ಅಭ್ಯಸಿಸಿದರೆ ಉತ್ತಮ ಫಲಿತಾಂಶ
ಚಿಕ್ಕನಾಯಕನಹಳ್ಳಿ,ಆ.27 : ವಿದ್ಯಾಥರ್ಿಗಳು ತನ್ನ ಕ್ರೀಡೆಗೆ ಸಂಬಂಧ ಪಟ್ಟಂತೆ ಪ್ರತಿ ದಿನ ಅಭ್ಯಾಸ ನಡೆಸಿದರೆ ಗೆಲುವು ಪಡೆಯಬಹುದು  ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಪಾಠದ ಜೊತೆಯಲ್ಲಿ ಆಟಗಳು ಮುಖ್ಯ ಇದರಿಂದ ಆರೋಗ್ಯದ ಜೊತೆಗೆ ಉತ್ಸಾಹವೂ ಹೆಚ್ಚುತ್ತದೆ, ಹೋಬಳಿ ಮಟ್ಟದಿಂದ ವಿಜೇತರಾಗಿ ತಾಲ್ಲೂಕು ಮಟ್ಟದಲ್ಲಿ ಭಾಗವಹಿಸಿದ ಮಕ್ಕಳು ವಿಜೇತರಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಅಲ್ಲೂ ವಿಜೇತರಾಗಿ ತಾಲ್ಲೂಕಿಗೆ ಹಾಗೂ ಶಾಲೆಗೆ ಕೀತರ್ಿ ತರುವಂತೆ ಸಲಹೆ ನೀಡಿದರಲ್ಲದೆ ವಿದ್ಯಾಥರ್ಿಗಳು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಶಾರೀರಿಖವಾಗಿ ದೃಢಕಾಯವಾಗುವುದರ ಜೊತೆಯಲ್ಲಿ ಮನಸ್ಸು ಸದೃಢ ಮಾಡಿಕೊಳ್ಳಬಹುದು ಎಂದರು.
ಪುರಸಭಾ ಅಧ್ಯಕ್ಷೆ ಪುಷ್ಪ.ಟಿ.ರಾಮಯ್ಯ ಹಾಗೂ ದೇಶೀಯ ವಿದ್ಯಾಪೀಠ ಪ್ರೌಢಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಪಾರಿವಾಳವನ್ನು ಹಾರಿಸುವ ಮೂಲಕ ತಾಲ್ಲೂಕು ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾಲ್ಲೂಕು ಶಿಕ್ಷಕರ ಸಂಘದ ರಾಜಶೇಖರ್, ನಾಗರಾಜು, ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ದೈಹಿಕ ಶಿಕ್ಷಕರಾದ ಚಿ.ನಾ.ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.


 ಗಣಪತಿಗೆ ಡಿಮ್ಯಾಂಡ್
ಚಿಕ್ಕನಾಯಕನಹಳ್ಳಿ,ಆ.27 : ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ತಯಾರಿಸುವ ಪರಿಸರ ಸ್ನೇಹಿ ಗಣಪತಿ ಹಾಗೂ ಗೌರಮ್ಮನವರ ಪ್ರತಿಮೆಗಳನ್ನು ಪಟ್ಟಣದ ಬಿ.ಹೆಚ್.ರಸ್ತೆಯ ಅಂಗಡಿಗಳ ಮುಂಭಾಗಗಳಲ್ಲಿ ಮಾರಾಟ ಮಾಡಲು ವ್ಯಾಪಾರಸ್ಥರು ಸಿದ್ದರಾಗಿದ್ದಾರೆ.
ತಾಲ್ಲೂಕಿನ ಕುಪ್ಪೂರು, ಪಾಪನಕೊಣ ಭಾಗಗಳಲ್ಲಿನ ಗಣಪತಿ ಮೂತರ್ಿಯ ಕಲಾವಿದರು ಗಣೇಶ ಚತುಥರ್ಿಗಾಗಿ ಆರು ತಿಂಗಳ ಹಿಂದೆಯೇ ಮನೆಮಂದಿಯೆಲ್ಲಾ ಕೆರೆಗಳಲ್ಲಿನ ಜೇಡಿಮಣ್ಣನ್ನು ತೆಗೆದುಕೊಂಡು ಬಂದು ಮಕ್ಕಳಾಧಿಯಾಗಿ ಗಣಪತಿ ಹಾಗೂ ಗೌರಮ್ಮನವರ ಮೂತರ್ಿಯನ್ನು ತಯಾರಿಸಿ, ಮೂತರ್ಿಗೆ ವಿವಿಧ ರೀತಿಯ ಬಣ್ಣವನ್ನು ಲೇಪಿಸಿ ಮಾರಾಟಕ್ಕೆ ತಂದಿದ್ದಾರೆ.
ಗಣಪತಿಯ ಮೂತರ್ಿಗಳು ಅರ್ಧ ಅಡಿ ಎತ್ತರದಿಂದ ಹಿಡಿದು ನಾಲ್ಕು ಅಡಿಯವರೆಗೆ ಇರುವ ಮೂತರ್ಿಗಳು ಪಟ್ಟಣದಲ್ಲಿ ಮಾರಾಟಕ್ಕೆ ತಂದಿದ್ದು ವಿವಿಧ ಬಡಾವಣೆ ಹಾಗೂ ಗ್ರಾಮೀಣ ಭಾಗದ ಭಕ್ತರು ಪ್ರತಿಷ್ಠಾಪಿಸುವ ಗಣಪತಿ ಮೂತರ್ಿಗಳನ್ನು ಕಾಯ್ದಿರಿಸಿದ್ದು ಪ್ರತಿಷ್ಠಾಪನಾ ದಿನದಂದು ಟ್ರಾಕ್ಟರ್, ಮೂರು ಚಕ್ರದ ಆಟೋಗಳಲ್ಲಿ ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ. ಚಿಕ್ಕ ಗಣಪತಿ ಮೂತರ್ಿಯ ಬೆಲೆ 50ರಿಂದ 100ರೂಗಳಿದ್ದು ಎರಡು ಅಡಿ ಗಣಪತಿ ಮೂತರ್ಿಗಳು 500ರೂ ರಿಂದ ಎರಡು ಸಾವಿರದವರೆಗೆ ಮಾರಾಟವಾಗುತ್ತಿವೆ.
ಗಣಪತಿ ಹಬ್ಬದ ಪ್ರಯುಕ್ತ ಹಣ್ಣಿನ ಹಾಗೂ ಹೂವಿನ ಬೆಲೆ ಗಗನಕ್ಕೆ ಏರಿದ್ದು ಏರಿಕೆಯ ಮಧ್ಯೆಯೂ ಭಕ್ತಾಧಿಗಳು ದುಪ್ಪಟ್ಟು ಹಣ ತೆತ್ತು ವಸ್ತುಗಳನ್ನು ಕೊಂಡೊಯುತ್ತಿರುವುದು ಸವರ್ೆ ಸಾಮಾನ್ಯವಾಗಿದೆ. 

Wednesday, August 20, 2014


ದೇವರಾಜೇಅರಸ್ರವರನ್ನು ಬಡವರು, ಕೂಲಿಕಾಮರ್ಿಕರು ಪೂಜಿಸುತ್ತಿದ್ದಾರೆ
ಚಿಕ್ಕನಾಯಕನಹಳ್ಳಿ,ಆ.20 : ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ರೈತಾಪಿ ಕೆಲಸ ಮಾಡುತ್ತಿದ್ದ ಡಿ.ದೇವರಾಜು ಅರಸ್ರವರು ಜಾರಿಗೆ ತಂದಂತಹ ಯೋಜನೆಗಳಿಂದ ಶ್ರೀಮಂತರು ತೆಗಳಿದರು, ಲಕ್ಷಾಂತರ ಬಡವರು, ಕೂಲಿ ಕಾಮರ್ಿಕರು, ಹಿಂದುಳಿದ ವರ್ಗದವರು ರಾಜ್ಯದಲ್ಲಿ ಬದಲಾವಣೆ ತಂದ ಪರಿವರ್ತನೆಯ ರೂವಾರಿ ಎಂದು ಪೂಜಿಸುತ್ತಿದ್ದಾರೆ ಎಂದು ಮೈಸೂರು ಇತಿಹಾಸ ತಜ್ಞ ಪಿ.ವಿ.ನಂಜರಾಜೇ ಅರಸ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಡಿ.ದೇವರಾಜ ಅರಸುರವರ 99ನೇ ಜನ್ಮದಿನಾಚಾರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಭೂಸ್ವಾದೀನಾ ಕಾಯೆಯಂತಹ ಕಾರ್ಯಕ್ರಮವನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಬಡ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ, ಅರಸರು ಬಡವರ ಕೆಲಸ ಮಾಡಬೇಕೆಂದು ತೀಮರ್ಾನಿಸಿದರೆ ಅದನ್ನು ಜಾರಿಗೆ ತರುವವರೆಗೂ ಬಿಡುತ್ತಿರಲಿಲ್ಲ, ದೀನ ದಲಿತ ಹಿಂದುಳಿದ ಜನಾಂಗಗಳ ಬಡಬಗ್ಗರಿಗೆ ಆಶಾಕಿರಣವಾಗಿದ್ದರು, ಹಿಂದುಳಿದವರು ದೀರ್ಘ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದ್ದವರನ್ನು ಬಡಿದೆಬ್ಬಿಸಿ ಅವರಲ್ಲಿ ಜಾಗೃತಿ ಮೂಡಿಸಿದರು, ಇಂದಿರಾಗಾಂಧಿ ಜಾರಿಗೆ ತಂದ 20ಅಂಶಗಳ ಕಾರ್ಯಕ್ರಮವನ್ನು ಕನರ್ಾಟಕದಲ್ಲಿ ಅರಸ್ರವರು ಮಾತ್ರ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದರೆ ಹೊರತು ಬೇರೆ ಯಾವ ರಾಜ್ಯದಲ್ಲೂ ಜಾರಿಗೆ ತರಲಿಲ್ಲ ಎಂದರಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಆಡಳಿತಾವಧಿಯ 1918ರಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರಮಿಸಿದ್ದರು, ಹೆಣ್ಣು ಮಕ್ಕಳಿಗೆ ಶಾಲೆ ಹಾಗೂ ಹಿಂದುಳಿದ ವರ್ಗದವರ ಮಕ್ಕಳಿಗೆ ಹಾಸ್ಟಲ್ ಸೌಲಭ್ಯವನ್ನು ಒದಗಿಸಿದರು.
ದೇವರಾಜ ಅರಸ್ರವರ ಆಡಳಿತದ ಅವಧಿಯಲ್ಲಿ ಸಾಮಾಜಿಕ ಅನಿಷ್ಠಗಳಾದ ಮಲಹೊರುವ ಪದ್ದತಿ ರದ್ದು ಮಾಡಿದರು, ಅರಸ್ರು ಮುಖ್ಯಮಂತ್ರಿಯಾಗಿದ್ದರೂ ತಮ್ಮ ಊರಿನಲ್ಲಿ ಜನರ ಜೊತೆಯಲ್ಲಿ ಹರಟೆ ಹೊಡೆಯುವುದರ ಜೊತೆಯಲ್ಲಿ ಕೃಷಿಕರಾಗಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು, ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಾಗ ಭೂ ಮಾಲೀಕರು ನ್ಯಾಯಾಲಯಕ್ಕೆ ಮೊರೆ ಹೋಗುತ್ತಾರೆಂಬ ಕಾರಣದಿಂದ ಭೂ ನ್ಯಾಯ ಮಂಡಳಿಗಳನ್ನು ರಚಿಸಿದ್ದರಿಂದ ಅಲ್ಲೇ ತೀಪರ್ು ನೀಡುತ್ತಿದ್ದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ  ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಚಚರ್ಿಸಲಾಗುವುದಲ್ಲದೆ, ಮುಷ್ಕರ ಮಾಡುವುದರಿಂದ ನೀರು ಬರುವುದಿಲ್ಲ, ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚಚರ್ಿಸಿ ನೀರು ತರಬೇಕು,  ತಾಲೂಕಿನ ಎಲ್ಲಾ ಭಾಗಗಳಿಗೆ ನೀರು ತರಲು ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದರು. 
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ದೇಶದಲ್ಲಿ ಕನರ್ಾಟಕ ರಾಜ್ಯವನ್ನು ಗಟ್ಟಿಗೊಳಿಸಿದ ಕೀತರ್ಿ ದೇವರಾಜುಅರಸುರವರಿಗೆ ಸಲ್ಲುತ್ತದೆ, ಹಿಂದುಳಿದವರ ಪರವಾಗಿ ದುಡಿದ ದೇವರಾಜು ಅರಸುರವರು ಜೀತಪದ್ದತಿ, ಜಾತಿಪದ್ದತಿಯನ್ನು ಹೋಗಲಾಡಿಸಲು ಶ್ರಮಿಸಿದವರು, ಶಿಕ್ಷಣದಿಂದಲೇ ಬಡವರ ಏಳಿಗೆಯೆಂದು ತಿಳಿದು ಅನೇಕ ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ನಾವು ಮಾಡುವ ಜಯಂತಿಗಳು ಜಾತಿಗೆ ಸೀಮಿತವಾಗದೆ ಅವರು ಬಿಟ್ಟುಹೋದ ಆದರ್ಶಗಳನ್ನು ಅನುಸರಿಸುವಂತಾಗಬೇಕು ಎಂದರು.
ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಪುಷ್ಟ.ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ, ಪುರಸಭಾ ಸದಸ್ಯರಾದ ಮಲ್ಲೇಶ್, ಇಂದಿರಾ ಪ್ರಕಾಶ್, ರೇಣುಕಮ್ಮ, ರಂಗಸ್ವಾಮಯ್ಯ, ಇ.ಓ.ಕೃಷ್ಣಮೂತರ್ಿ, ಜಿಲ್ಲಾ ಅರಸು ಸಂಘದ ಅಧ್ಯಕ್ಷ ಶ್ರೀನಿವಾಸರಾಜ ಅರಸು, ತಾಲ್ಲೂಕು ಅಧ್ಯಕ್ಷ ನಾಗರಾಜ್ ಅರಸು, ಗೋಪಾಲರಾಜ್ಅರಸ್, ವಿಜಯರಾಜ್ಅರಸ್, ಉಪತಹಶೀಲ್ದಾರ್ ದೊಡ್ಡಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜಯ್ಯನ ಪಾಳ್ಯದ ನಿವೃತ್ತ ಪ್ರಾಧ್ಯಾಪಕ ಎಸ್.ಆರ್.ಚಂದ್ರರಾಜೇಅರಸ್, ಮಹಮದ್ಗೌಸ್(ಬಾಬುಬೋರ್ವೆಲ್), ವಿದ್ಯಾಥರ್ಿನಿ ಲೇಖನರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ನಿರೂಪಿಸಿದರು. ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿದರು. ಸಮಾರಂಭದಲ್ಲಿ ಶಾಲಾ ವಿದ್ಯಾಥರ್ಿಗಳಿಗೆ ನೋಟ್ಬುಕ್ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಮೊರಾಜರ್ಿ ಶಾಲಾ ವಿದ್ಯಾಥರ್ಿಗಳಿಂದ ನೃತ್ಯ ಕಾರ್ಯಕ್ರಮ ನೆರವೇರಿತು.
ತಾಲ್ಲೂಕು ಕಛೇರಿಯಿಂದ ಡಿ.ದೇವರಾಜು ಅರಸ್ರವರ ಭಾವಚಿತ್ರ ಬಿ.ಹೆಚ್.ರಸ್ತೆ, ನೆಹರು ಸರ್ಕಲ್, ಹೊಸ ಬಸ್ನಿಲ್ದಾಣದ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. ವೀರಗಾಸೆ, ಡೊಳ್ಳುಕುಣಿತ, ಮುಂತಾದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಬಾಕ್ಸ್-1
ಪಾರಂಪರಿಕ ಐತಿಹಾಸಿಕ ಸ್ಥಳಗಳನ್ನು ಉಳಿಸುವ ದೃಷ್ಠಿಯಿಂದ ಪಟ್ಟಣದಲ್ಲಿನ ತೀ.ನಂ.ಶ್ರೀ ಗ್ರಂಥಾಲಯದ ಹಿಂಭಾಗದಲ್ಲಿರುವ ಮೈಸೂರು ಒಡೆಯರ್ ವಂಶಸ್ಥರಾದ 13ನೇ ದೊಡ್ಡ ದೇವರಾಜ ಒಡೆಯರ್ರವರ ಸಮಾಧಿಯಿದ್ದು ಇದನ್ನು ಅರಸು ಸಂಘದವರಿಗೆ ವಹಿಸಿ ಜೀಣರ್ೋದ್ದಾರಕ್ಕೆ ಸಹಾಯ ಮಾಡಬೇಕೆಂದು ಶಾಸಕ ಸಿ.ಬಿ.ಸುರೇಶ್ಬಾಬುರವರಲ್ಲಿ ಮನವಿ.
ನಂಜರಾಜೇಅರಸ್, ಮೈಸೂರು ಇತಿಹಾಸ ತಜ್ಞ
ಬಾಕ್ಸ್-2
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಅರಸು ಭವನ ನಿಮರ್ಾಣಕ್ಕಾಗಿ ಸಿ.ಎಂ.ಸಿದ್ದರಾಮಯ್ಯನವರು ಒಂದು ಕೋಟಿ ರೂ ಬಿಡುಗಡೆ ಮಾಡಲು ಒಪ್ಪಿದ್ದಾರೆ,  ಭವನ ನಿಮರ್ಾಣಕ್ಕೆ ಶೀಘ್ರ ಸ್ಥಳ ಗುತರ್ಿಸಲಾಗುವುದು.
ಾಸಕ ಸಿ.ಬಿ.ಸುರೇಶ್ಬಾಬು, ಶಾಸಕ

ಅರಸು ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪಧರ್ೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ.

ಚಿಕ್ಕನಾಯಕನಹಳ್ಳಿ : ಡಿ.ದೇವರಾಜ್ಅರಸ್ರವರ 99ನೇ ಜನ್ಮದಿನಾಚಾರಣೆ ಅಂಗವಾಗಿ ತಾಲ್ಲೂಕಿನ ವಿದ್ಯಾಥರ್ಿ ನಿಲಯಗಳಲ್ಲಿ ಮಕ್ಕಳಿಗೆ ನಡೆದ ವಿವಿಧ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪಧರ್ೆಯಲ್ಲಿ ಹುಳಿಯಾರು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯದ ಎನ್.ಆರ್.ಯುವರಾಜ, ತಿಮ್ಮನಹಳ್ಳಿಯ ಎಸ್.ಎನ್.ರಾಜೇಶ್, ಚಚರ್ಾಸ್ಪದರ್ೆಯಲ್ಲಿ ಹೊಯ್ಸಳಕಟ್ಟೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯದ ಕೆ.ಜೆ.ಶ್ರೀಧರ ಹಾಗೂ ತಿಮ್ಮನಹಳ್ಳಿ ವಿದ್ಯಾಥರ್ಿ ನಿಲಯದ ಎನ್.ಅಜಯ್ಕುಮಾರ್, ಭಾವಗೀತೆ/ಜಾನಪದ ಗೀತೆ ಸ್ಪಧರ್ೆಯಲ್ಲಿ ಹುಳಿಯಾರಿನ ಮೆಟ್ರಿಕ್ ಪೂರ್ವಬಾಲಕರ ವಿದ್ಯಾಥರ್ಿ ನಿಲಯದ ಎನ್.ಜಿ.ಬಸವರಾಜು, ಚಿಕ್ಕನಾಯಕನಹಳ್ಳಿಯ ಎಸ್.ಎನ್.ಮುರಳಿ, ಪ್ರಬಂಧ ಸ್ಪದರ್ೆಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯದ ಕೆ.ವಿ.ಅನಿತ ಹಾಗೂ ಬಿ.ಆರ್.ಭವ್ಯ, ಚಚರ್ಾ ಸ್ಪದರ್ೆಯಲ್ಲಿ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿನಿಲಯದ ಆರ್.ಎಂ.ಅಮೃತ, ಭಾವಗೀತೆ, ಜಾನಪದ ಗೀತೆ ಸ್ಪದರ್ೆಯಲ್ಲಿ ಪಟ್ಟಣದ ಮೆಟ್ರಿಕ್ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯದ ಆರ್.ಆರ್.ಸೌಮ್ಯ ಹಾಗೂ ಎಂ.ಜಿ.ತುಂಗ, ಪ್ರಬಂಧ ಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯದ ಎಸ್.ಜೆ.ಯಶೋಧ, ಆರ್.ಎನ್.ಸಹನ, ಚಚರ್ಾಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯದ ಸ್ವಾತಿ ಹಾಗೂ ಮಮತ, ಭಾವಗೀತೆ ಹಾಗೂ ಜಾನಪದ ಗೀತೆ ಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾಥರ್ಿ ನಿಲಯದ ಜೆ.ಕೆ.ಕುಸುಮ ಹಾಗೂ ವೈ.ಜ್ಯೋತಿ, ಪ್ರಬಂಧ ಸ್ಪಧರ್ೆಯಲ್ಲಿ ಮೊರಾಜರ್ಿ ದೇಸಾಯಿ ಶಾಲೆಯ ಎಂ.ಆರ್.ಧೃವಿಕ ಹಾಗೂ ಪ್ರೀತಿ ಚಿದಾನಂದ, ಚಚರ್ಾಸ್ಪಧರ್ೆಯಲ್ಲಿ ಮೊರಾಜರ್ಿ ಶಾಲೆಯ ಪ್ರೀತಿಚಿದಾನಂದ, ಹಾಗೂ ಎಂ.ಆರ್.ಧೃವಿಕ ಭಾವಗೀತೆ ಸ್ಪಧರ್ೆಯಲ್ಲಿ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಆರ್.ಕಾವ್ಯ ಹಾಗೂ ಆರ್.ಕುಸುಮ ವಿಜೇತರಾಗಿದ್ದಾರೆ.

Thursday, August 14, 2014


 ಹೊಯ್ಸಳರ ಕಾಲದ ಶಿಲ್ಪಕಲೆಗಳ ಸೌಂದರ್ಯ ಶೆಟ್ಟಿಕೆರೆಯಲ್ಲಿನ ಯೋಗಮಾಧವನಂದಸ್ವಾಮಿ ದೇವಾಲಯದಲ್ಲಿ
  ]

 ಚಿಕ್ಕನಾಯಕನಹಳ್ಳಿ : ಹೊಯ್ಸಳರ ಕಾಲದ ಶಿಲ್ಪಕಲೆಗಳ ಸೌಂದರ್ಯವನ್ನು ವೀಕ್ಷಿಸಲು ಬೇಲೂರು, ಹಳೇಬೀಡು ಪ್ರವಾಸ ತಾಣಗಳಿಗೆ ತೆರಳಿದಾಗ ಸಿಗುವ ಶಿಲ್ಪಕಲೆಗಳ ಸೊಬಗು ತಾಲ್ಲೂಕಿನ ಶೆಟ್ಟಿಕೆರೆಯಲ್ಲಿನ ಯೋಗಮಾಧವನಂದಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದಾಗಲೂ ಶಿಲ್ಪಕಲೆಗಳ ಕಲಾತ್ಮಕತೆ ಪ್ರವಾಸಿಗರಿಗೆ ದೊರೆಯುತ್ತದೆ.
    ಶೆಟ್ಟಿಕೆರೆಯ ಈ ದೇವಾಲಯವು     1262ನೇ ಇಸವಿಯಲ್ಲಿ ಹೊಯ್ಸಳರ ದೊರೆಯಾದ ಮೂರನೇ ನರಸಿಂಹ ಬಲ್ಲಾಳನ ಮಂತ್ರಿಯಾದ ಗೋಪಾಲ ದಂಡನಾಯಕ ಈ ದೇವಾಲಯ ನಿಮರ್ಿಸಿದ್ದನೆಂದು ತಿಳಿದು ಬಂದಿದ್ದು, ಆಗಿನ ಶ್ರೀಭರತ ಪ್ರಕಾಶ ಪುರಿ ಎಂಬ (ಈಗಿನ ಶೆಟ್ಟಿಕೆರೆ) ಊರಿನ ಅಗ್ರಹಾರದಲ್ಲಿ ದೇವಾಲಯ ನಿಮರ್ಿತವಾಗಿತ್ತು.
    ಈ ಯೋಗಮಾಧವ ದೇವಾಲಯ ಕಳೆದ ಕೆಲ ದಶಕದ ಹಿಂದೆ ಶಿಥಿಲಗೊಂಡಿತ್ತು, ದೇವಸ್ಥಾನದ ಜೀಣೋಧ್ದಾರಕ್ಕಾಗಿ ಹದಿಮೂರನೇ ಹಣಕಾಸಿನ ಯೋಜನೆ ಅಡಿಯಲ್ಲಿ ಒಂದು ಕೋಟಿ ಮೂವತ್ತೆರಡು ಲಕ್ಷರೂಗಳ ವೆಚ್ಚ ಬಿಡುಗಡೆಯಾಗಿ ದೇವಾಲಯದ ಜೀಣೋದ್ದಾರ ಕಾಮಗಾರಿ ಪೂರ್ಣಗೊಂಡು ಇದೇ ತಿಂಗಳ ಆಗಸ್ಟ್ 14 ಮತ್ತು 15ರಂದು ಪುನರ್ ನಿಮರ್ಾಣ ಪ್ರಯುಕ್ತ ಪುನರ್ ಪ್ರತಿಷ್ಠಾಪನೆ ನಡೆಯಲಿದೆ.
    ಶಿಥಿಲಗೊಂಡಿದ್ದ ಸಮಯದಲ್ಲಿ ದೇವಾಲಯದ ಒಳಭಾಗದಲ್ಲಿ ಗಾಳಿ-ಬೆಳಕು ಇಲ್ಲದೆ ಪೂರ್ಣ ಕತ್ತಲೆಯಿಂದ ಕೂಡಿತ್ತು, ಜೀಣರ್ೋದ್ದಾರವಾದ ನಂತರ ದೇವಸ್ಥಾನಕ್ಕೆ ವಿದ್ಯುದೀಪಾಲಂಕರವನ್ನು ಮಾಡಿಸಿದ್ದಾರೆ, ಒಳ ಹಾಗೂ ಹೊರಭಾಗದಲ್ಲಿ ಸುಂದರವಾಗಿ ಕೆತ್ತನೆಯನ್ನು ಪೂರ್ಣಗೊಳಿಸಿದ್ದಾರೆ.


        ಯೋಗಮಾಧವ ದೇವಾಲಯದ ಹಿನ್ನಲೆ ಮತ್ತು ವಿಶೇಷ :
    ಶೆಟ್ಟಿಕೆರೆ ಊರಿನ ಪಡುವಣಕ್ಕೆ ಹೊಯ್ಸಳರ ಭುಜಬಲ ವೀರಸಿಂಹನ ಕಾಲದಲ್ಲಿ ಪೂವರ್ಾಭಿಮುಖವಾಗಿ ನಿಮರ್ಿಸಲಾಗಿರುವ ದೇವಾಲಯವು ವಾಸ್ತು ವೈಖರಿ ಶಿಲ್ಪಾಲಂಕರಾದಿಂದ ಮತ್ತು ಪ್ರಧಾನವಾಗಿ ನಕ್ಷತ್ರ ಹಾಗೂ ಕಮಲ ಸಮ್ಮಿಶ್ರ ವಿನ್ಯಾಸದಲ್ಲಿ ರೂಪುಗೊಂಡಿದೆ, ದೇವಾಲಯದ ಹೊರಗಿನ ಪ್ರಕಾರ ಮಹಾದ್ವಾರ ಮಂಟಪ ಮತ್ತು ಹೊರವಲಯ ದ್ವಾರದ ಎದುರು ಗರುಡ ಸ್ತಂಭ ವಿಜಯನಗರ ಪಾಳೇಗಾರನ ಕಾಲದಲ್ಲಿನ ಡ್ರಾವಿಡ ಶೈಲಿಯಲ್ಲಿ ನಿಮರ್ಿತವಾಗಿದೆ.  
    ಮಹಾದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿದರೆ ಮೊದಲು ಸಿಗುವುದು ಹೊರ ನವರಂಗದ ಪೂರ್ವ ದ್ವಾರದ ನೈರುತ್ಯ ಮೂಲೆಯಲ್ಲಿ ಒಂದು ಕೋಣೆಯನ್ನು ಜೋಡಿಸಿ ಅದರಲ್ಲಿ ದುಗರ್ಾದೇವಿಯನ್ನು ಪ್ರತಿಷ್ಠಾಪಿಸಲಾಗಿದೆ.
    ದಕ್ಷಿಣ ಗರ್ಭಗುಡಿಯಲ್ಲಿ ಕೊಳಲು ಗೋಪಾಲ, ಉತ್ತರ ಗರ್ಭಗುಡಿಯಲ್ಲಿ ಲಕ್ಷ್ಮೀನಾರಾಯನ ದಂಪತಿಗಳ ಸುಂದರ ವಿಗ್ರಹಗಳು ಹಾಗೂ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.
 ದೇವಸ್ಥಾನದ ಪ್ರಧಾನವಾದ ಮೂಲದೇವರು ಯೋಗಮಾಧವನ ಗರ್ಭಗುಡಿಯು ಬಾಗಿಲು ವೈಷ್ಣವ ದ್ವಾರಪಾಲಕರಿಂದ ಅಲಂಕೃಗೊಂಡು ಗರ್ಭಗುಡಿಯಲ್ಲಿನ ಯೋಗ ಮಾಧವನ ಶಿಲಾವಿಗ್ರಹವನ್ನು ಗರಡ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಯೋಗನಾಥ ಅತ್ಯಂತ ಶಾಂತಿ ಹಾಗೂ ಅಪರೂಪದ ಶಿಲಾ ಮೂತರ್ಿಯಾಗಿದೆ.
    ಯೋಗಮಾಧವ ಚತುಭರ್ುಜ ಹೊಂದಿದ್ದು ಪದ್ಮಾಸನ ಅಥವಾ ಬ್ರ್ರಹ್ಮಾಸನದಲ್ಲಿ ಕುಳಿತಿದ್ದಾನೆ, ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದು, ಮುಂದಿನ ಕೈಯಲ್ಲಿ ಬಲಹಸ್ತದ ಮೇಲೆ ಎಡಹಸ್ತವನ್ನಿಟ್ಟು ಯೋಗಮುದ್ರೆಯಿಂದ ಸೂಚಿತವಾಗಿದೆ. ಮಾಧವ ಧ್ಯಾನ ಮುದ್ರೆಯಲ್ಲೂ ಆಯುಧ ದಾರಿಯಾಗಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ, ಯೋಗಶಾಸ್ತ್ರ ತಿಳಿಸುವಂತೆ ಪ್ರತಿಬಿಂಬಿಸುವ ನೇತ್ರಗಳು, ನಾಸಿಕಾಗ್ರಹದಲ್ಲಿ ತೋರದೆ ಪೂರ್ಣತೆರೆದು ಎದುರು ನೋಟದಲ್ಲಿ ದಿಟ್ಟಭಾವವನ್ನು ಸೂಚಿಸುವಂತಿದೆ.
    ಅಗ್ರಹಾರದ ಮೂವತ್ತೇಳು ಪ್ರಕಾರವನ್ನು ಒಡಂಬಡಿಸಿ ದೇವಸ್ಥಾನವನ್ನು ನಡೆಸಲೆಂದು ಸಾಕಷ್ಟು ವ್ಯವಸ್ಥೆ ಮಾಡಿದನೆಂಬ ಇತಿಹಾಸ ಪುಟದಲ್ಲಿ ಉಲ್ಲೇಖಿಸಿದ್ದಾರೆ, ದೇವಸ್ಥಾನದ ನಿಮರ್ಾಣದ ಶಿಲ್ಪಕಲೆಗಳ ಕೆತ್ತನೆಗೆ ಬಳಪದ ಕಲ್ಲುಗಳನ್ನು ಬಳಸಲಾಗಿದೆ.

ಶೈಲಿ : ದೇವಾಲಯವು ಡ್ರಾವಿಡ ವೇಸರ ಶೈಲಿಯನ್ನು ಒಳಗೊಂಡಿದ್ದು ನಕ್ಷತ್ರಾಕಾರದ ಜಗತಿಯನ್ನು ಒಳಗೊಂಡಿದೆ, ದೇವಾಲಯವು ಮುಖ್ಯವಾಗಿ ನಾಲ್ಕು ಭಾಗಗಳನ್ನು ಒಳಗೊಂಡಿದೆ, ಮೂಲ ದೇವರ ಮೂತರ್ಿಯಿರುವ ಜಾಗ ಗರ್ಭಗೃಹ, ನಂತರದ ಸ್ಥಳ ಶುಕನಾಸಿ ಅಥವಾ ಅಂತರಾಳ, ಮೂರನೆಯದು ನವರಂಗ ಅಥವಾ ಸಭಾಮಂಟಪ, ನಾಲ್ಕನೆಯದು ವಾಹನ ಮಂಟಪ, ಗರ್ಭಗುಡಿಯಲ್ಲಿ ಮೂಲವಿಗ್ರಹ, ಅಂತರಾಳ ಅಥವಾ ಶುಕನಾಸಿಯು ವಿಶೇಷ ಪ್ರಾರ್ಥನೆಗೆ ರಾಜರಿಗೆ, ದೇವಾಲಯಕ್ಕೆ ಸಂಬಂಧಪಟ್ಟ ಧಾಮರ್ಿಕ ಅಧಿಕಾರಿಗಳು ಪ್ರಾರ್ಥನೆ ಸಲ್ಲಿಸಲು ಮತ್ತು ಉತ್ಸವ ದೇವರುಗಳನ್ನು ಇಟ್ಟು ಪೂಜಿಸುವ ಸ್ಥಳ, ಸಭಾಮಂಟಪ ಅಥವಾ ನವರಂಗವು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುತ್ತದೆ, ನವರಂಗ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು, ವಿಶೇಷ ಸಭೆಗಳನ್ನು ನಡಸುವುದಕ್ಕಾಗಿ ರಚನೆಯಾಗಿದೆ, ವಾಹನ ಮಂಟಪದಲ್ಲಿ ಸಂಬಂಧಿಸಿದ ದೇವರ ವಾಹನವನ್ನು ಕೆತ್ತಲಾಗಿದೆ.
    ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ :  14ರ ಗುರುವಾರ ಗಂಗಾಪೂಜೆ, ಪುಣ್ಯಾಹ, ದೇವನಾಂದಿ, ಕಳಶ ಸ್ಥಾಪನೆ, ಗಣಪತಿ, ನವಗ್ರಹ, ಮೃತ್ಯುಂಜಯ, ಲಕ್ಷ್ಮಿನಾರಾಯಣ ಹೋಮಗಳು ನಂತರ ಮಂಗಳಾರತಿ ವಾಸ್ತುಪೂಜೆ, ರಾಮೋಘ್ಮ ಹೋಮ, ಬಲಿ ಪ್ರಧಾನ, ಕದಳಿ ಛೇದನ, ಸೂತ್ರ ಬಂಧನ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಾಗಲಿದೆ. ಪ್ರಾತಃಕಾಲ ನೇತ್ರೋನ್ಮಿಲನ, ಕಳಾಹೋಮ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಡೆಯಲಿದೆ. ಸಂಜೆ 4ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ, ಶ್ರೀ ಕೆಂಪಮ್ಮದೇವರು, ಶ್ರೀ ಧರ್ಮರಾಯಸ್ವಾಮಿ ದೇವರುಗಳ ಆಗಮನವಾಗಲಿದೆ.
    15ರ ಮಧ್ಯಾಹ್ನ ಶ್ರೀ ಯೋಗಮಾಧ್ವಸ್ವಾಮಿ ದೇವಾಲಯದಲ್ಲಿ ನೆಲೆಸಿರುವ ದೇವರುಗಳ ಪುನರ್ ಪ್ರತಿಷ್ಠಾಪನೆ, 12ಕ್ಕೆ ಪೂಣರ್ಾಹುತಿ ನಂತರ ಕಳಶ ಸ್ಥಾಪನೆ, ಕುಂಭಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಕಾಲಭೈರವಸ್ವಾಮಿ, ಶ್ರೀ ಕೆಂಪಮ್ಮದೇವರು ಮತ್ತು ಶ್ರೀ ಧರ್ಮರಾಯಸ್ವಾಮಿ ದೇವರುಗಳ ಉತ್ಸವವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮದ್ದಿನ ಸೇವೆ, ಕಪರ್ೂರದ ಸೇವೆಗಳೊಂದಿಗೆ ನಡೆಯಲಿದೆ.


ತಪ್ಪಿಗೆ ತಕ್ಕ ಶಾಸ್ತಿ ಎಂಬಂತೆ, ಅನ್ನ ನೀರು ಬಿಟ್ಟು ಬೀದಿ ಪಾಲಾಗಿರುವ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೆದಾರ್.
ಚಿಕ್ಕನಾಯಕನಹಳ್ಳಿ,: ಕಟ್ಟಿಕೊಂಡ ಹೆಂಡ್ತೀರನ್ನು ಬಿಟ್ಟು ಇಟ್ಕೊಂಡೋಳ ಹಿಂದೆ ಬಿದ್ದ ಪರಿಣಾಮ  ಇದ್ದಬದ್ದ ಆಸ್ತಿ ಅಡವುಗಳನ್ನೇಲ್ಲಾ ದೋಚಿಕೊಂಡು ಕೊನೆಗೆ ಲಕ್ವ ಹೊಡೆದಿರುವ ವ್ಯಕ್ತಿಯನ್ನು ಬಸ್ಸ್ಟಾಂಡ್ನಲ್ಲಿ ಎಸೆದು ಹೋಗಿರುವ ಕರುಣಾಜನಕ ಸ್ಥಿತಿ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೆದಾರ್ ಒಬ್ಬರಿಗೆ ಒದಗಿಬಂದಿದೆ.
    ಈತನ ಸ್ಥಿತಿ ನೋಡಿದರೆ ಶತ್ರುವಿಗೂ ಬೇಡ ಎನ್ನಿಸುತ್ತದೆ, ಪಟ್ಟಣದ ಖಾಸಗಿ ಬಸ್ಸ್ಟಾಂಡ್ನಲ್ಲಿ ಕಳೆದ ಹತ್ತು ದಿನಗಳಿಂದ ಅನ್ನ ನೀರು ಇಲ್ಲದೆ ಜೀವಂತ ಶವದಂತೆ ಬಿದ್ದಿರುವ ಲಕ್ಕಣ್ಣ ಎಂಬಾತ ಒಂದು ಕಾಲಕ್ಕೆ ಚಿ.ನಾ.ಹಳ್ಳಿ, ಗುಬ್ಬಿ, ತುರುವೇಕೆರೆಯ ನ್ಯಾಯಾಲಯಗಳಲ್ಲಿ ಶಿರಸ್ತೆದಾರ್ ಆಗಿ ಕರ್ತವ್ಯ ನಿರ್ವಹಿಸಿದವರು. ಆದರೆ ಇಂದು ಬೀದಿ ಬಿಕಾರಿಯಂತಾಗಿದ್ದಾರೆ.
    ಹಾಗೆ ನೋಡಿದರೆ ಇವರು ದವರ್ೇಸಿಯೂ ಅಲ್ಲ, ಬೇವಸರ್ಿಯೂ ಅಲ್ಲ ಆದರೆ ಸ್ವಯಂಕೃತ ಅಪರಾಧ, ಎಲ್ಲಾ ಇದ್ದು ಏನೂ ಇಲ್ಲದೆ ಸಾಯುವ ಕಾಲದಲ್ಲಿ ತನ್ನವರೆನ್ನಲೂ ಯಾರೂ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. ಇವರು ಈ ಸ್ಥಿತಿಗೆ ಕಾರಣ ತಾನೇ ಮಾಡಿಕೊಂಡ ಯಡವಟ್ಟುಗಳು,  ಹಾಗಾಗಿ ತಾನು ಮಾಡಿರುವ ತಪ್ಪಿಗೆ ತಕ್ಕ ಶಾಸ್ತಿಯಾಗಿದೆ ಎಂದು,  ಅನ್ನ ನೀರು ಸೇವೆಸದೆ ಸಾಯಬೇಕು ಎನ್ನುವ ಹಠಕ್ಕೆ ಬಿದ್ದವರಂತೆ, ಬಸ್ಸ್ಟಾಂಡ್ನಲ್ಲಿ ಕಳೆದ ಹತ್ತು ದಿನಗಳಿಂದ ಮಲಗಿದ್ದ ಸ್ಥಳದಲ್ಲೇ ಮಲಗಿದ್ದಾರೆ, ಆ ಸ್ಥಳವನ್ನು ಬಿಟ್ಟು ಕಿಂಚಿತ್ತೂ ಕದಲಿಲ್ಲ. ಯಾರು ಏನೇ ಕೊಟ್ಟರೂ ತಿನ್ನುವುದಿಲ್ಲ, ಅವರ ಆ ಸ್ಥಿತಿಯನ್ನು ನೋಡಿ, ಜನ ತಿನ್ನಲು ಏನೂ ಕೊಟ್ಟರು ಸ್ವೀಕರಿಸೋದಿಲ್ಲ. ಇಡೀ ಹತ್ತು ದಿನಗಳಲ್ಲಿ ಒಮ್ಮೆ ಮಾತ್ರ ನೀರು ಎಂದು ಕನವರಿಸಿರುವುದು ಬಿಟ್ಟು  ಬೇರೇನನ್ನೂ ಮಾತನಾಡಿಲ್ಲ. ಇಂತಹ ಲಕ್ಕಣ್ಣ ನಾಲ್ಕು ಮನೆಯ ಒಡೆಯ, ಐದಾರು ಎಕರೆ ಜಮೀನು ಇದ್ದವ, ತಿಂಗಳಿಗೆ ಇಪ್ಪತ್ತು ಸಾವಿರದ ವರೆಗೂ ಪೆನ್ಷ್ನ್ ಪಡೆಯುವ ಈತ ಈಗ ಬೀದಿ ಪಾಲು.
ಈ ಸ್ಥತಿಗೆ ಬರಲು ಕಾರಣ: ಈತನಿಗೆ ಇಬ್ಬರು ಪತ್ನಿಯರಿದ್ದರು, ಅದರಲ್ಲಿ ಒಬಾಕೆ ವೃತ್ತಿಯಲ್ಲಿ ನಸರ್್ ಆಗಿದ್ದವರು, ನಸರ್್ನ ತಂಗಿಯನ್ನೇ ಎರಡನೇ ಮದುವೆಯಾಗಿದ್ದರು, ಈ ಸಂಸಾರಕ್ಕೆ ಒಬ್ಬ ಮಗನೂ ಇದ್ದಾನೆ, ಆತ ಗೋವಾದಲ್ಲಿ ಸಾಫ್ಟ್ವೇರ್ ಇಂಜಿನಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ, ಆದರೆ ಇವರ ಸಂಬಂಧವನ್ನು ದಶಕಗಳ ಹಿಂದಯೇ ಕಡಿದುಕೊಂಡಿರುವ ಈತ,  ಅವರತ್ತ ಕಣ್ಣೇತ್ತೂ ನೋಡಲಿಲ್ಲ. ಕುಣಿಗಲ್ ಕಡೆಯ ಮಹಿಳೆಯೊಂದಿಗೆ ಚಿ.ನಾ.ಹಳ್ಳಿಯಲ್ಲಿ ವಾಸವಿದ್ದ, ಆಕೆ ಸಾವನ್ನಪ್ಪಿದ ನಂತರ ಮತ್ತೊಬ್ಬಳೊಂದಿಗೆ ಸಂಬಂಧವಿಟ್ಟುಕೊಂಡ. ಈಕೆ ಇವರ ಆಸ್ತಿ ಅಡವುಗಳನ್ನೇಲ್ಲಾ ತನ್ನ ಹೆಸರಿಗೆ ಬರಸಿಕೊಂಡು ಬರುತ್ತಿದ್ದ ಪೆನ್ಷ್ನ್ ಹಣವನ್ನು ತಾನೇ ಪಡೆಯುತ್ತಿರುವ ಆ ಮಹಿಳೆ, ಲಕ್ಕಣ್ಣನಿಗೆ ಲಕ್ವ ಹೊಡೆದ(ಸ್ಟ್ರೋಕ್) ದಿನ ದಿಂದ ಆತನನ್ನು ಬಸ್ ಸ್ಟಾಂಡ್ನಲ್ಲಿ ಬಿಟ್ಟು ಹೋಗಿದ್ದಾರೆ.
    ಕಳೆದ ಹತ್ತು ದಿನಗಳಿಂದ ಅಲ್ಲೇ ಮಲಗಿರುವ ಲಕ್ಕಣ್ಣ ತನ್ನಿಂದ ಅನುಕೂಲ ಪಡೆದವರಿಗೇ ನಾನು ಬೇಡವಾಗಿರುವಾಗ,  ನಾನು ಇದ್ದೇನು ಪ್ರಯೋಜನವೆನ್ನುವಂತೆ ಅನ್ನ ನೀರು ಬಿಟ್ಟಿದ್ದಾರೆ,  ಅಲ್ಲಿರುವ ಅಂಗಡಿಯವರು ಏನಾದರೂ ಆಹಾರ ಕೊಟ್ಟರೂ  ತಿನ್ನುವುದಿಲ್ಲ. ಮಲಗಿದ್ದ ಸ್ಥಳದಿಂದ ಕದಲದ ಈತನ ಸುತ್ತಾ ನೋಣಗಳು ಜುಯ್ಯೋ ಎನ್ನುತ್ತವೆ, ಗಬ್ಬು ವಾಸನೆ ಬರುತ್ತಿದೆ, ಈತನ ಈ ಸ್ಥಿತಿಯನ್ನು ಸಂಸಾರ ಮರೆತವರು,  ಅನೈತಿಕ ಸಂಬಂಧಗಳಿಗೆ ಹಲ್ಲುಗಿಂಜುವವರು ನೋಡಿದರೆ ಕ್ಷಣ ಕಾಲ ಯೋಚಿಸುವಂತೆ ಮಾಡಲೂ ಬಹುದು, ಬುದ್ದಿಯೂ ಬರಬಹುದು...!
                      

ಕೆಪಿಎಸ್ಸಿಯ ಪರೀಕ್ಷೆಯ ನಿಧರ್ಾರದಿಂದ ಪ್ರತಿಭಾನ್ವಿತ ಹಾಗೂ ಬಡವಿದ್ಯಾಥರ್ಿಗಳಿಗೆ ಅನುಕೂಲ
ಚಿಕ್ಕನಾಯಕನಹಳ್ಳಿ,ಆ.12 ; ಕೆಪಿಎಸ್ಸಿ ಪರೀಕ್ಷೆಯಲ್ಲಿ ಆದಂತಹ ಭ್ರಷ್ಠಾಚಾರವು ಸಿಐಡಿ ವರದಿಯಿಂದ ಬಹಿರಂಗವಾಗಿದ್ದು ಸಿ.ಎಂ.ಸಿದ್ದರಾಮಯ್ಯನವರು ಸಚಿವ ಸಂಪುಟದ ಒತ್ತಡವಿದ್ದರೂ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಮತ್ತೊಮ್ಮೆ ಪರೀಕ್ಷೆ ನಡೆಸಲು ತೀಮರ್ಾನಿಸಿರುವುದು ಪ್ರತಿಭಾನ್ವಿತ ಹಾಗೂ ಬಡ ವಿದ್ಯಾಥರ್ಿಗಳಿಗೆ ಸಹಾಯವಾಗಲಿದೆ ಎಂದು ರಾಜ್ಯ ಅಹಿಂದ ಸಂಚಾಲಕ ಸಿ.ಎಲ್.ರವಿಕುಮಾರ್ ಹೇಳಿದರು.
    ಪಟ್ಟಣದ ರೇವಣಪ್ಪನ ಮಠದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 67ನೇ ಹುಟ್ಟುಹಬ್ಬದ ಪ್ರಯುಕ್ತ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಣ್ಣು ಹಾಗೂ ಶಾಲಾ ವಿದ್ಯಾಥರ್ಿಗಳಿಗೆ ನೋಟ್ಬುಕ್, ಸಮವಸ್ತ್ರ ವಿತರಿಸಿ ಮಾತನಾಡಿದರು.
    ಕನರ್ಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆಸಿದ ನೇಮಕಾತಿಯ ಬಗ್ಗೆ ಸಚಿವ ಸಂಪುಟದಲ್ಲಿ ನಾಲ್ಕೈದು ಬಾರಿ ಚಚರ್ೆಯಾಯಿತು, ನಂತರ ಈ ವಿಷಯದ ಬಗ್ಗೆ ಸಿಐಡಿ ನೀಡಿದ ವರದಿಯನ್ನು ಆಧಾರವಾಗಿಟ್ಟುಕೊಂಡು  ಮುಖ್ಯಮಂತ್ರಿಗಳು ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಲು ಕೆಪಿಎಸ್ಸಿ ನೇಮಕಾತಿ ಪಟ್ಟಿಯನ್ನು ಸಚಿವ ಸಂಪುಟ ರದ್ದುಗೊಳಿಸಿರುವುದು ಉತ್ತಮ ನಿಧರ್ಾರ ಎಂದರು.
    ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಗುರುಸಿದ್ದಯ್ಯ ಮಾತನಾಡಿ ಸಿದ್ದರಾಮಯ್ಯನವರ ಆದರ್ಶಗಳನ್ನು ಒಪ್ಪಿಕೊಂಡು ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ರೇವಣಸಿದ್ದೇಶ್ವರ ಮಠದಲ್ಲಿ ವಿದ್ಯಾಥರ್ಿಗಳಿಗೆ ನೋಟ್ಬುಕ್ ನೀಡುತ್ತಿರುವ  ಕಾರ್ಯ ಶ್ಲಾಘನೀಯವಾದುದು ಎಂದರಲ್ಲದೆ ರಾಜ್ಯದಲ್ಲಿ ಉತ್ತಮ ಆಡಳಿತ ನಿರ್ವಹಿಸುತ್ತಿರುವ ಸಿದ್ದರಾಮಯ್ಯನವರು ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತಂದರೂ ಆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರವ ಬಗ್ಗೆ ವಿಷಾಧಿಸಿದರು.
    ಕಾಂಗ್ರೆಸ್ ಮುಖಂಡ ನಾರಾಯಣಗೌಡ ಮಾತನಾಡಿ ಸಿ.ಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಉತ್ತಮ ಯೋಜನೆಗಳನ್ನು ತರುತ್ತಿದ್ದಾರೆ, ಈ ಯೋಜನೆಗಳ ಬಗ್ಗೆ ವಿದ್ಯಾಥರ್ಿಗಳು ಪತ್ರಿಕೆಯಲ್ಲಿ ಓದಿ ತಿಳಿಯಬೇಕು ಎಂದರು.
    ಮುಖಂಡ ಕೆ.ಜಿ.ಕೃಷ್ಣೆಗೌಡ ಮಾತನಾಡಿ ಕೆಪಿಎಸ್ಸಿ ಭ್ರಷ್ಠಾಚಾರದಲ್ಲಿ ಉತ್ತಮ ನಿಧರ್ಾರ ತೆಗೆದುಕೊಂಡಿರುವ ಮುಖ್ಯಮಂತ್ರಿಗಳ ವಿರುದ್ದ ಜೆ.ಡಿ.ಎಸ್ ಹಾಗೂ ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ, ಭ್ರಷ್ಠಾಚಾರ ತೊಡೆದು ಹಾಕಲು ಸಿದ್ದರಾಮಯ್ಯನವರು ಉತ್ತಮ ನಿಧರ್ಾರ ತೆಗೆದುಕೊಂಡಿದ್ದಾರೆ ಎಂದರಲ್ಲದೆ ಹೋರಾಟದಿಂದ ಬೆಳೆದು ಬಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಬೇಕೆಂಬ ಕನಸನ್ನು ನನಸಾಗಿ ಮಾಡಿಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
    ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸಿ.ಎಂ.ಬೀರಲಿಂಗಯ್ಯ, ಸಿ.ಟಿ.ಗುರುಮೂತರ್ಿ, ಸಿದ್ದರಾಮಯ್ಯ, ಸಣ್ಣಪ್ಪ, ಉಪಸ್ಥಿತರಿದ್ದರು.

ಆಗಸ್ಟ್ 15ರಂದು ತುಮಕೂರಿನ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಬಳಿ ಬೆಳಗ್ಗೆ 8ಕ್ಕೆ ಕಪ್ಪುಬಾವುಟ ಪ್ರದರ್ಶನ ಮತ್ತು ಮೌನ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಆ.12 : ನಿವೃತ್ತ ನ್ಯಾಯಮೂತರ್ಿ ಎ. ಜೆ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಕನರ್ಾಟಕ ಮಾದಿಗ ದಂಡೋರ ಜಿಲ್ಲಾ ಶಾಖೆ ವತಿಯಿಂದ ಆಗಸ್ಟ್ 15ರಂದು ತುಮಕೂರಿನ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಬಳಿ ಬೆಳಗ್ಗೆ 8ಕ್ಕೆ ಕಪ್ಪುಬಾವುಟ ಪ್ರದರ್ಶನ ಮತ್ತು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
    ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನರ್ಾಟಕ ಮಾದಿಗ ದಂಡೋರ ಸಂಘಟನೆಯು ಮಾದಿಗ ಜಾತಿಯ ಬಂಧುಗಳಿಗೆ ಆಥರ್ಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಎ.ಜೆ.ಸದಾಶಿವ ವರದಿಯ ಪ್ರಕಾರ ಶೇ.6ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವಂತೆ ರಾಜ್ಯ ಸಕರ್ಾರಕ್ಕೆ ಶಿಫಾರಸ್ಸು ಮಾಡಿದೆ, ಆದರೆ ಆಯೋಗದ ವರದಿಯನ್ನು ಜಾರಿಗೆ ತರುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿಯನ್ನು ಪ್ರದಶರ್ಿದೆ ನಿರ್ಲಕ್ಷ ವಹಿಸಿವೆ ಆದ್ದರಿಂದ ಕನರ್ಾಟಕ ಮಾದಿಗ ದಂಡೋರ ಸಂಘಟನೆ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಸಕರ್ಾರದ ಮೇಲೆ ಒತ್ತಡ ತರಲು ಆಗಸ್ಟ್ 15ರಂದು ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಸೋಮನಹಳ್ಳಿ ಜಗದೀಶ್, ಉಪಾಧ್ಯಕ್ಷ ಈಚನೂರು ಮಹದೇವ್, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಅಶೋಕ್, ಸಂಘಟನೆಯ ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಸಣ್ಣಮ್ಮ ಉಪಸ್ಥಿತರಿದ್ದರು.

ಕೊಲೆ ಮಾಡಿದ್ದ ಆರೋಪಿಗಳ ಬಂಧನ
ಚಿಕ್ಕನಾಯಕನಹಳ್ಳಿ,ಆ.13: ತಾಲೂಕಿನ ಚಿಕ್ಕೇಣ್ಣೆಗೆರೆಯಲ್ಲಿ ತನ್ನ ಪತ್ನಿಯೊಂದಿಗೆ ಅನೈತಿಕ ಸಂಪರ್ಕವಿಟ್ಟುಕೊಂಡಿದ್ದ ವ್ಯಕ್ತಿಯನ್ನು ಪ್ರಶ್ನೆಸಿದ್ದ ಹಿನ್ನೆಲೆಯಲ್ಲಿ ಲಿಂಗರಾಜು ಎಂಬುವನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ಜಯಕುಮಾರ್ ನೇತೃತ್ವ ತಂಡ ಪ್ರಕರಣವನ್ನು ಭೇದಿಸಿ ಬಂಧಿಸಿದ್ದಾರೆ.
    ಮೃತ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅದೇ ಗ್ರಾಮದ ಹನುಮಂತಯ್ಯ ಎಂಬುವನು ಲಿಂಗರಾಜುವಿಗೆ  ಮಧ್ಯದಂಗಡಿಯಲ್ಲಿ ಭೇಟಿಯಾಗಿದ್ದು ಇಬ್ಬರೂ ಕುಡಿದ ಅಮಲಿನಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದಾರೆ, ನಂತರ ಹನುಮಂತಯ್ಯ ಉಪಾಯವಾಗಿ ಲಿಂಗರಾಜುವನ್ನು ಗ್ರಾಮದ ಕೆರೆಯ ಹಿಂಭಾಗಕ್ಕೆ ಕರೆದೊಯ್ದು ಅಲ್ಲಿ ಟವಲ್ನಿಂದ ಲಿಂಗರಾಜುವಿನ ಕೊರಳಿಗೆ ಬಿಗಿದು ಕೊಲೆ ಮಾಡಿದ್ದನ್ನೆನ್ನಲಾಗಿದೆ, ನಂತರ ತನ್ನ ಸಂಬಂಧಿಯಾದ ಯೋಗೀಶ್ನ ಸಹಾಯದಿಂದ ಮರಕ್ಕೆ ನೇಣು ಬಿಗಿದಂತೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಚಿತ್ರಿಸಲು ಪ್ರಯತ್ನಿಸಿದ್ದಾರೆ, ಆದರೆ ಮೃತನ ಕೊರಳಿನಲ್ಲಿ ಆದ ಗಾಯಗಳಿಂದ ಪ್ರಕರಣ ಬೆಳಕಿಗೆ ಬಂದಿದೆ.
    ಈ ಸಂಬಂಧ ಹನುಮಂತಯ್ಯ, ಯೋಗೀಶ್ ಹಾಗೂ ಇವರಿಬ್ಬರಿಗೂ ರಕ್ಷಣೆ ನೀಡಿದ್ದ ಗಿರೀಶ್ ಎಂಬುವರನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಇಸ್ಪೀಟ್ ಆಡುತ್ತಿದ್ದ ಐವರ ಬಂಧನ: ತಾಲೂಕಿನ ರಂಗನಾಥ ಪುರದ ಬಳಿ ಇಸೀಟ್ ಆಡುತ್ತಿದ್ದ ಐವರನ್ನು ಬಂಧಿಸಿ ಅವರಿಂದ ಒಂದು ಮಾರುತಿ ಓಮ್ನಿ ವಾಹನ, ಮೂರು ಮೋಬೈಲ್ ಹಾಗೂ ಪಣಕ್ಕಿಟ್ಟ ಒಂದು ಮುಕ್ಕಾಲು ಸಾವಿರ ರೂಗಳ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಜಗಳ ಬಿಡಿಸಲು ಹೋಗಿ ಚೂರಿ ತಿವಿಸಿಕೊಂಡವನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ: ತಾಲೂಕಿನ ಶೆಟ್ಟೀಕೆರೆಯಲ್ಲಿ ಆಟೋ ಚಾಲಕ ಕೆಂಪಯ್ಯ ಹಾಗೂ ರವಿ ಎಂಬುವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು, ಜಗಳ ಬಿಡಿಸಲು ಹೋದ ಯತೀಶ್ನಿಗೆ ಕೆಂಪಯ್ಯ ಚೂರಿಯಿಂದ ತಿವಿದಿದ್ದಾನೆ, ಇದರಿಂದ ತೀವ್ರ ಗಾಯಗೊಂಡ ಯತೀಶ್ನಿಗೆ ಶ್ವಾಸಕೋಶಕ್ಕೆ ಹಾನಿಯಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾನೆ, ಕೆಂಪಯ್ಯನನ್ನು ಚಿ.ನಾ.ಹಳ್ಳಿ ಪೊಲೀಸರು ಬಂದಿಸಿದ್ದಾರೆ.
ಬಸ್ನಿಂದ ಬಿದ್ದು ವ್ಯಕ್ತಿ ಸಾವು: ಪಟ್ಟಣದ ಕೇದಿಗೆಹಳ್ಳಿ ಪಾಳ್ಯದ ಬಳಿ ವ್ಯಕ್ತಿಯೊಬ್ಬ ಬಸ್ನ ಟಾಪ್ನಲ್ಲಿ ಕುಳಿತು ಪ್ರಯಣಿಸುತ್ತಿರುವಾಗ, ಮರದ ಕೊಂಬೆಯೊಂದು ಕೃಷ್ಣಪ್ಪ(50) ಎಂಬಾತನಿಗೆ ತಗುಲಿದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ಬಸ್ನಿಂದ ಕೆಳಕ್ಕೆ ಬಿದ್ದಿದ್ದಾನೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಪ್ರಾಣಬಿಟ್ಟಿದ್ದಾನೆ.
ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


 ಸಾಹಿತಿ ಎಂ.ವಿ.ನಾಗರಾಜ್ರಾವ್ರವರ 74ನೇ ಹುಟ್ಟುಹಬ್ಬ
ಚಿಕ್ಕನಾಯಕನಹಳ್ಳಿ,ಆ.13: ಸಾಹಿತಿ ಎಂ.ವಿ.ನಾಗರಾಜ್ರಾವ್ರವರ 74ನೇ ಹುಟ್ಟುಹಬ್ಬ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ರೋಟರಿ ಸೇವಾ ಪ್ರಶಸ್ತಿ ಸಮಾರಂಭವನ್ನು ಇದೇ 16ರಂದು ಬೆಳಗ್ಗೆ 10.30ಕ್ಕೆ ಕೋ.ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಬಿ.ಸುರೇಶ್ಬಾಬು ಕಾರ್ಯಕ್ರಮ ಉದ್ಘಾಟಿಸುವರು. ಲೇಖಕ ಪ್ರೊ.ನಾ.ದಯಾನಂದ ಪ್ರಾಸ್ತಾವಿಕ ನುಡಿಯುವರು, ಪ್ರೊ.ನಾ.ದಯಾನಂದರವರು ರಚಿಸಿರುವ ಎಂ.ವಿ.ನಾಗರಾಜ್ರಾವ್ ಬದುಕು-ಬರಹ 'ವಷರ್ಾನುಕಾಲ' ಕೃತಿ ಬಿಡುಗಡೆಯನ್ನು ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನೆರವೇರುಸುವರು.
    ಎಂ.ವಿ.ನಾಗರಾಜ್ರಾವ್ರವರ ಸಾರ್ಥಕ ಬದುಕಿನ ನೂರು ಸ್ಪೂತರ್ಿ ಕಥೆಗಳು ಪುಸ್ತಕದ ಇಂಗ್ಲೀಷ್ ಅನುವಾದ 'ಲಿಟಲ್ ಲ್ಯಾಮ್ಸ್' ಪುಸ್ತಕ ಬಿಡುಗಡೆಯನ್ನು ಸಕರ್ಾರಿ ದಂತ ಮಹಾವಿದ್ಯಾಲಯದ ನಿವೃತ್ತ ನಿದರ್ೇಶಕ ಡಾ.ಎಸ್.ಎಸ್.ಹಿರೇಮಠ್ ಬಿಡುಗಡೆ ಮಾಡುವರು, ಎಂ.ವಿ.ಎನ್ರವರ 74ನೇ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ರೋಟರಿಯ ಪ್ರತಿಷ್ಠಿತ ಅಂತರಾಷ್ಟ್ರೀಯ ಸೇವಾ ಪ್ರಶಸ್ತಿ ಪ್ರಧಾನ ಹಾಗೂ ಸಾಹಿತ್ಯ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.
    ಜಿಲ್ಲಾ ರೋಟರಿ ಆರ್.ಐ ಪಿಡಿಜಿ ಕೆ.ಎಸ್.ನಾಗೇಂದ್ರ, ರೋಟರಿ ಅಧ್ಯಕ್ಷ ಸಿ.ಎನ್.ಮರುಳಾರಾಧ್ಯ, ಪೂವರ್ಾಧ್ಯಕ್ಷರು ಸಿ.ಎಸ್.ಪ್ರದೀಪ್ಕುಮಾರ್,  ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಇನ್ನರ್ವೀಲ್ ಅಧ್ಯಕ್ಷೆ ಶಶಿಕಲಾ ಜಯದೇವ್, ಡಾ.ಕವಿತಾಕೃಷ್ಣ, ಗೌಡನಕಟ್ಟೆ ತಿಮ್ಮಯ್ಯ, ಬಾಳೆಕಾಯಿ ಶಿವನಂಜಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

 ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ  ಶ್ರೀ ಕೃಷ್ಣ ಜನ್ಮಾಷ್ಠಮಿ,

ಚಿಕ್ಕನಾಯಕನಹಳ್ಳಿ,ಆ.13 : ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ  ಶ್ರೀ ಕೃಷ್ಣ ಜನ್ಮಾಷ್ಠಮಿ, ಪ್ರಥಮ ವರ್ಷದ ತಾಲ್ಲೂಕು ಮಟ್ಟದ ವಿದ್ಯಾಥರ್ಿಗಳ ಪ್ರತಿಭಾ ಪುರಸ್ಕಾರ ಮತ್ತು ಉಚಿತ ನೋಟ್ ಪುಸ್ತಕಗಳ ವಿತರಣಾ ಸಮಾರಂಭ ಹಾಗೂ ರುಕ್ಮಿಣಿ ಮಹಿಳಾ ಸ್ವಸಹಾಯ ಸಂಘದ ಪ್ರಥಮ ವಾಷರ್ಿಕ ಸಮಾರಂಭವನ್ನು ಇದೇ 17ರ ಭಾನುವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
     ಪಟ್ಟಣದ ತಾಲ್ಲೂಕು ಕಛೇರಿ ಎದುರಿನ ಶ್ರೀ ಪಾಂಡುರಂಗಸ್ವಾಮಿ ನಿವೇಶನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗೋಡೆಕೆರೆ ಚಮಠದ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶೀಕೇಂದ್ರಸ್ವಾಮಿಗಳು ಉದ್ಘಾಟನೆ ನೆರವೇರಿಸುವರು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
    ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪೂಜಾ ಕಾರ್ಯಕ್ರಮ ಮತ್ತು ಪ್ರಸಾದ ವಿನಿಯೋಗವಿದೆ, ಎಲ್ಲಾ ಮಕ್ಕಳೂ ಕೃಷ್ಣನ ವೇಶ ಹಾಕಿಕೊಂಡು ಬರುವುದು, ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

 

Monday, August 11, 2014



ದಶಕದ ಹಿಂದಿನ ಸ್ಥಿತಿಯಲ್ಲಿ ಹಿಂದುಳಿಯುತ್ತಿರುವ ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ,ಆ.11 : ದಶಕದ ಹಿಂದೆ ಚಿಕ್ಕನಾಯಕನಹಳ್ಳಿ ಯಾವ ಸ್ಥಿತಿಯಲ್ಲಿ ಇತ್ತೋ ಅದೇ ರೀತಿಯಲ್ಲಿ ಈಗಲೂ ಇದೆ,  ಯಾವ ಅಭಿವೃದ್ದಿಯನ್ನೂ ಕಾಣದೆ ಹಿಂದುಳಿಯುತ್ತಿದೆ ಎಂದು ಕಿರುತರೆ ಕಲಾವಿದ ಹನುಮಂತೆಗೌಡ ವಿಷಾಧಿಸಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ 2014-15ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ. ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಬೇಸಿಗೆಯಲ್ಲಿ ಮಾತ್ರವಲ್ಲ ಇತರ ಕಾಲಗಳಲ್ಲೂ ನೀರಿನ ಸಮಸ್ಯೆ ದೊಡ್ಡದಾಗಿ ಪರಿಣಮಿಸಿದೆ ಎಂದ ಅವರು ಮುಂದೆ ಹೇಗೆ ಎಂಬುದರ ಬಗ್ಗೆ ನಾಗರೀಕರು ಈಗಿನಿಂದಲೇ ಚಿಂತನೆ ನಡೆಸಿ ತಾಲ್ಲೂಕಿನ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸಿ ಎಂದರು.
ಮನೆಯ ಹಿರಿಯರು ಹೇಗೆ ಇರುತ್ತಾರೋ ಅದೇ ರೀತಿಯಲ್ಲಿ ಕಿರಿಯರು ಜೀವಿಸುತ್ತಾರೆ, ಅದೇ ರೀತಿಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ದಾರಿಯನ್ನು ತೋರಿಸಿದರೆ ಮಕ್ಕಳು ಸಮಾಜದ ಒಳ್ಳೆಯ ವ್ಯಕ್ತಿಗಳಾಗಿ ಬದುಕುತ್ತಾರೆ, ಇಂತಹದರ ನಡುವೆ ನಾವು ಜೀವನವನ್ನು ಕಳೆಯಬೇಕಿದ್ದು ನಾಡನ್ನು ಕಟ್ಟುವ ಪ್ರಯತ್ನದಲ್ಲಿ ಮುಂದುವರೆಯೋಣ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ನಮ್ಮನ್ನು ನಾವು ನಮ್ಮ ಪ್ರತಿಭೆಯ ಮೂಲಕ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಾಗ ಗೌರವಕ್ಕೆ ಒಳಗಾಗುತ್ತೇವೆ, ಒಂದೇ ಕ್ಷೇತ್ರದಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿದರೆ ಆ ಸೇವೆಯು ಸಾಧನೆಯಾಗಿ ಪರಿವರ್ತನೆಯಾಗಿ ಗೆಲುವು ಪಡೆಯಬಹುದು ಎಂದರು.
 ಬಿ.ಎ ಪದವಿಗೆ ಮುಂದಿನ ವರ್ಷಗಳಲ್ಲಿ ಒಳ್ಳೆಯ ಪ್ರಾತಿನಿಧ್ಯ ದೊರಕಲಿದೆ, ಕಂಪನಿಗಳ ಮಾಲೀಕರು ಆಡಳಿತ ಸೇವೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ,  ಇಂಜನಿಯರಿಂಗ್, ಕಾಮಸರ್್ ಪದವಿಗಳಿಗೆ ಹೆಚ್ಚಿನದಾಗಿ ವಿದ್ಯಾಥರ್ಿಗಳು ದಾಖಲಾಗಿರುವುದು ಹಾಗೂ ಆ ಪದವಿಗಳ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಬಿ.ಎ ಪದವಿಯ ಬಗ್ಗೆ ಅಸೆಡ್ಡೆ ತೋರದೆ ವಿದ್ಯಾಭ್ಯಾಸ ಮುಂದುವರೆಸಿ ಬಿ.ಎ ಪದವಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ದೊರಕಲಿದೆ ಎಂದರು.
ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಕೇಂದ್ರ ಸಕರ್ಾರ ಹಿಂದಿ ಭಾಷೆಯ ಬಗ್ಗೆ ಒಲವು ತೋರಿರುವುದರಿಂದ ದಕ್ಷಿಣ ಭಾರತದ ಜನತೆಗೆ ಸಮಸ್ಯೆಯುಂಟಾಗುತ್ತದೆ, ಯುಪಿಎಸ್ಸಿ ಪರೀಕ್ಷೆಗೆ ಹಿಂದಿ ಕಡ್ಡಾಯವಾದರೆ ಪರೀಕ್ಷೆ ಬರೆಯುವವರು ಹಿಂದಿ ಭಾಷೆ ಕಲಿಯುವುದು ಅನಿವಾರ್ಯವಾಗುತ್ತದೆ ಎಂದರಲ್ಲದೆ ವಿದ್ಯಾಥರ್ಿಗಳಿಗೆ ಗುಣಮಟ್ಟ ಬೋಧನೆ ನೀಡಿದಾಗ ಉತ್ತಮ ಅಂಕ ದೊರೆಯಲಿದೆ ಎಂದರು.
ನವೋದಯ ವಿದ್ಯಾಸಂಸ್ಥೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ವಿದ್ಯಾಥರ್ಿಗಳ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಮುಂದೊಂದು ದಿನ ಅದು ಪ್ರತಿಭೆಗಳಿಗೆ ನೆರವಾಗಲಿದೆ ಎಂದರು.
 ಕಾರ್ಯಕ್ರಮದಲ್ಲಿ ಪ್ರಥಮ ದಜರ್ೆ ಕಾಲೇಜ್ನ ಪ್ರಾಂಶುಪಾಲರಾದ ಬಿ.ಎಸ್.ಬಸವಲಿಂಗಪ್ಪ, ಪಿ.ಯು.ಕಾಲೇಜ್ನ ಪ್ರಾಂಶುಪಾಲರಾದ ಮೋಹನ್ ಉಪಸ್ಥಿತರಿದ್ದರು.



ಕುಪ್ಪೂರು ಶ್ರೀಗಳ ರಜತ ಮಹೋತ್ಸವಕ್ಕೆ ಸಿದ್ದತೆ:
ಚಿಕ್ಕನಾಯಕನಹಳ್ಳಿ,ಆ.11: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ 25ನೇ ವರ್ಷದ ಪಟ್ಟಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮವನ್ನು ವಿಂಜೃಂಭಣೆಯಾಗಿ ನೆರವೇರಿಸಲು ಭಕ್ತರ ಸಮೂಹ ತಿಮರ್ಾನಿಸಿತು.
  ಕುಪ್ಪೂರು ಗದ್ದಿಗೆಯ ಪೀಠಾಧ್ಯಕ್ಷರಾಗಿ ಇಪ್ಪತೈದು ವರ್ಷದ ಸೇವೆಯನ್ನು ಸ್ಮರಿಸಿಕೋಂಡು ಭಕ್ತರ ಸಮೂಹ,  ಸ್ವಾಮೀಜಿಯವರ ಪಟ್ಟಾಧಿಕಾರದ  ರಜತಾ ಮಹೋತ್ಸವವನ್ನು ನೆರವೇರಿಸಲು ಪೂರ್ವಭಾವಿ ಸಭೆಯನ್ನು ಏರ್ಪಡಿಸಿತ್ತು.
 ಸಭೆಯ ಅಧ್ಯಕ್ಷತೆ ವಹಿಸಿ ಎಸ್.ಪಿ.ಗಂಗಾಧರಪ್ಪ ಮಾತನಾಡಿ ಗದ್ದಿಗೆ ಮಠದಲ್ಲಿ ಹಿರಿಯ ಶ್ರೀಗಾಳಾದ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಇಷ್ಟ ಪಟ್ಟು ಅತಿ ಚಿಕ್ಕ ವಯಸ್ಸಿನಲ್ಲಿ ಯತೀಶ್ವರ ಶಿವಾಚಾರ್ಯ ಸ್ವಾಮಿಗಳಿಗೆಪಟ್ಟಾಧಿಕಾರವನ್ನು ನೀಡಿದರು. ಅವರ ಮಾರ್ಗ ದರ್ಶನದಂತೆ ಮಠದ ಅಭಿವೃದ್ದಿ ಹಾಗೂ ಸಮಾಜದಲ್ಲಿ ಅವರದೇ ಆದ ಶೈಲಿಯಲ್ಲಿ ಶ್ರೀಗಳು ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು. 
ಡಿಸೆಂಬರ್ 05,06 ಮತ್ತು07ರಂದು  ನೆಡೆಯಲಿರುವ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅಭಿವಂದನಾ ಗ್ರಂಥವನ್ನು ಶ್ರೀಗಳಿಗೆ ಅಪರ್ಿಸಲಾಗುವುದು, ಸ್ವಾಮೀಜಿ ಯವರ ಸಾಧನೆಗಳ ಚಿತ್ರ ಸಂಪುಟವನ್ನು ಬಿಡುಗಡೆ ಮಾಡಲಾಗುವುದು. ಎಂದು ವಕೀಲ ಶಿವಲಿಂಗಪ್ಪ ತೀಳಿಸಿದರು. ಮೂರು ದಿವಸ ನೆಡೆಯುವ ಬೃಹತ್ ಕಾರ್ಯಕ್ರಮದಲ್ಲಿ  ನಾಡಿನ ಜಗದ್ಗುರುಗಳು, ಶಿವಾಚಾರ್ಯರು, ಸಮಾಜದ ಚಿಂತಕರು, ಕವಿಗಳು, ಕಲಾವಿದರು, ರಾಜಕೀಯ ಗಣ್ಯರು ಪಾಲ್ಗೋಳ್ಳಲಿದ್ದಾರೆ ಎಂದು ಭಕ್ತರ ಸಮೂಹ ತಿಳಿಸಿತು. ಸಭೆಯಲ್ಲಿ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿದ್ಯ ವಹಿಸಿದ್ದರು, ತಿಪಟೂರು ಬಿಜೆಪಿ ಮುಂಖಡ ಹೆಚ್.ಎನ್.ಗಂಗಾಧರಪ್ಪ, ಶೆಟ್ಟಿಕೆರೆ ಡಾ.ಶಿವಕುಮಾರ್, ಆರ್.ಮಹೇಶ್, ಆರ್.ಬಿ.ಕೊಟ್ಟೂರಪ್ಪ, ಕೆ.ಎಸ್.ಶಿವಶಂಕರಪ್ಪ, ಸಾಸಲು ಶಾಂತವೀರಪ್ಪ, ಮುಂತಾದ ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಅಂತಹ ಕಲಹ ಎಲ್ಲೆ ಮೀರಿದಾಗ ಮೀಸಲಾತಿಗೆ ಮುನ್ನಡಿ ಬರೆದವರು ಬ್ರಾಹ್ಮಣರೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಆ11: ಕನರ್ಾಟಕದಲ್ಲಿ ಮೀಸಲಾತಿಗೆ ಮುನ್ನುಡಿ ಬರೆದವರು ಬ್ರಾಹ್ಮಣರು. ಮೈಸೂರು ಅರಸರ ಆಳ್ವಿಕೆಯಲ್ಲಿ ಉನ್ನತ ಹುದ್ದೆಗಳು ತಮಿಳುನಾಡು ಬ್ರಾಹ್ಮಣರ ಪಾಲಾಗುತ್ತಿದ್ದಾಗ ಕನರ್ಾಟಕದ ಬ್ರಾಹ್ಮಣರಿಗೆ ಮೀಸಲಾತಿ ಕೊಡಿ ಎಂದು ಪಟ್ಟು ಹಿಡಿದಿದ್ದವರು ಇವರೆ. ಅಂದು ಮೀಸಲಾತಿಗೆ ಮುಗಿಬಿದ್ದ ಬ್ರಾಹ್ಮಣರು ಇಂದು ಪ್ರತಿಭೆ ಹೆಸರಿನಲ್ಲಿ ಮೀಸಲಾತಿ ವಿರೋಧಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು. 
ತಾಲ್ಲೂಕಿನ ಜೆ.ಸಿ.ಪುರದಲ್ಲಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉಳ್ಳವರು ಇಲ್ಲದವರಿಗೆ ಸಹಾಯ ಹಸ್ತ ಚಾಚುವುದು ಸಂಘಟನೆಯ ಧ್ಯೇಯ ಆಗಬೇಕು ಎಂದರು.
  ಕನರ್ಾಟಕದಲ್ಲಿ ಶಿಕ್ಷಣದ ಮಾತು ಬಂದಾಗ ಶಿಕ್ಷಣವನ್ನು ಸಾರ್ವತ್ರೀಕರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸಂಸ್ಥೆಗಳನ್ನು ಕಟ್ಟಿ ಶಿಕ್ಷಣವನ್ನು ವಿಸ್ತರಿಸಿದ ಮಠಗಳನ್ನು ಸ್ಮರಿಸಬೇಕು, ಮೀಸಲಾತಿ ಲಾಭ ಪಡೆದು ಮೇಲೆ ಬಂದವರು ಸಮುದಾಯದ ಮಕ್ಕಳಿಗೆ ಸೂಕ್ತ ಸಹಾಯ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಋಣ ತೀರಿಸಬೇಕು ಎಂದರು. ಆಥರ್ಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮಾನ ಹಂಚಿಕೆಗೆ ಮೀಸಲಾತಿ ಬೇಕು. ಆದರಲ್ಲಿ ಇನ್ಫೋಸಿಸ್ ಹಾಗೂ ವಿಪ್ರೋದಂತಹ  ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಗಳು ಪ್ರತಿಭೆ ಹೆಸರಿನಲ್ಲಿ ಮೀಸಲಾತಿ ವಿರೋಧಿ ಚಳುವಳಿಯನ್ನು ರೂಪಿಸುತ್ತಿವೆ  ಪ್ರತಿಭೆಗೂ ಉದ್ಯೋಗಕ್ಕೂ ಸಂಬಂಧ ಇಲ್ಲ. ಕೆಲಸಕ್ಕೆ ಬೇಕಿರುವುದು ಪರಿಶ್ರಮ ಮತ್ತು ಶ್ರದ್ಧೆ.ಅಂಕಗಳಿಂದ ಅಳೆಯಲ್ಪಡುತ್ತಿರುವ ಪ್ರತಿಭೆ ಒಳ್ಳೆಯ ಉದ್ಯೋಗಿಯನ್ನು ರೂಪಿಸಲಾರದು ಎಂದರು.
ಜಾತಿ, ಧರ್ಮ ಶ್ರೇಷ್ಠ ಅಲ್ಲ ಮಾನವಿಯತೆ ಶ್ರೇಷ್ಠ, ಮಾನವೀಯತೆ ಸಮಾಜ ಸೃಷಿಸಿದ್ಠ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
    ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್.ಸದಾಶಿವಯ್ಯ ಮಾತನಾಡಿ, ಯಶಸ್ಸಿಗೆ ಶೇ.95 ಭಾಗ ಶ್ರಮ ಹಾಗೂ ಉಳಿದ ಶೆ.5ಭಾಗ ಪ್ರೇರಣೆ ಕಾರಣವಾಗುತ್ತದೆ. ಕಷ್ಟವೇ  ಸಾಧನೆಗೆ ಸ್ಪೂತರ್ಿಯಾಗುತ್ತದೆ.ಹಳ್ಳಿಯ ಮಕ್ಕಳು ತಮ್ಮಲ್ಲಿ ಹಡಗಿರುವ ಸುಪ್ತ ಶಕ್ತಿಯನ್ನು ಹೊರ ಹೊಮ್ಮಿಸಲು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಕಿವಿಮಾತು ಹೇಳಿದರು.
  ಗೋಡೆಕೆರೆ ಕ್ಷೇತ್ರದ ಸ್ಥಿರ ಪಟ್ಟಾಧ್ಯಕ್ಷ ಶ್ರೀ ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಎಸ್.ಸಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು.ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ,ತಾಪಂ ಸದಸ್ಯರಾದ ಎಂ.ಎಂ.ಜಗದೀಶ್ ಮತ್ತು ಎಚ್.ಆರ್.ಶಶಿಧರ್, ಡಿಡಿಪಿಐ ಈಶ್ವರಯ್ಯ, ತುಮುಲ್ ನಿದರ್ೇಶಕ ಹಳೇಮನೆ ಶಿವನಂಜಪ್ಪ ಮಾತನಾಡಿದರು.   
ವೀರಶೈವಮುಖಂಡರುಗಳಾದ ಬಾಲಚಂದ್ರ, ಪ್ರಸನ್ನಕುಮಾರ್, ನಿಜಗುಣಯ್ಯ, ಶಿವರಾಜ್,ಶಂಕರಲಿಂಗಪ್ಪ. ಜಯಣ್ಣ, ಮಾ.ಚಿ.ಕೈಲಾಸನಾಥ್, ಎಸ್.ಎಲ್.ಶಾಂತಕುಮಾರ್, ನಿರಂಜನ್ ಮುಂತಾದವರು ಇದ್ದರು. 
ಮರುಳಸಿದ್ಧಯ್ಯ ವಾಷರ್ಿಕ ವರದಿ ವಾಚಿಸಿದರು.ಕೆ.ಎಸ್.ನವೀನ್ಕುಮಾರ್ ಸ್ವಾಗತಿಸಿ ಎಂ.ಎಸ್.ಈಶ್ವರಪ್ಪ ನಿರೂಪಿಸಿದರು. ಶಿಕ್ಷಕ ಮಲ್ಲಿಕಾಜರ್ುನ್ರ ವಚನ ಗಾಯನ ಮಾಡಿದರು.

ರಾಗಿ ಬಿತ್ತನೆಗೆ ಸಜ್ಜಾದ ರೈತರು
ಚಿಕ್ಕನಾಯಕನಹಳ್ಳಿ,ಆ.11 : ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ರೈತರು ತಮ್ಮ ಹೊಲಗಳಲ್ಲಿ ರಾಗಿ ಬೆಳೆಯನ್ನು ಬಿತ್ತನೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.
ಜುಲೈ ತಿಂಗಳಿನಲ್ಲಿ ಮಳೆಯನ್ನೇ ಕಾಣದ ಜನತೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಿದ್ದ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ, ತಾಲ್ಲೂಕಿನಲ್ಲಿ ಮುಂಗಾರು ಮಳೆಯು ಕೈಕೊಟ್ಟ ಪರಿಣಾಮ ಹೆಸರುಕಾಳು, ಹಲಸುಂಡೆ ಹಾಗೂ ದ್ವಿದಳ ಧಾನ್ಯಗಳ ಬೆಳೆಯನ್ನು ಹಾಕಿ ಕೈಸುಟ್ಟುಕೊಂಡಿದ್ದರು. ಕಳೆದ ಎರಡು ತಿಂಗಳಿನಿಂದಲೂ ಸರಿಯಾಗ ಮಳೆಯಾಗದೇ ಇದ್ದ ಪರಿಣಾಮ ಸಾಲ ಮಾಡಿ ಮುಂಗಾರು ಬೆಳೆ ಬೆಳೆಯಲು ಗೊಬ್ಬರ ಮತ್ತು ಬೀಜಗಳನ್ನು ತಂದು ಹೊಲಗಳಿಗೆ ಬಿತ್ತನೆ ಮಾಡಿದರೂ ಉತ್ತಮ ಫಸಲು ದೊರೆಯದ ಕಾರಣ ರೈತರು ನೋವನ್ನು ಅನುಭವಿಸುತ್ತಿದ್ದರು, ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯಿಂದ ದ್ವಿದಳ ಬೆಳೆಗಳನ್ನು ಬಿತ್ತಿದ್ದ ರೈತರು ಹೊಲಗಳನ್ನು ಸ್ವಚ್ಛಗೊಳಿಸಿ, ರಾಗಿ ಬೆಳೆಯ ಭಿತ್ತನೆ ನೆಡೆಸುತ್ತಿದ್ದಾರೆ.
ಕುರುಬರಹಳ್ಳಿ ರೈತ ಮಹಿಳೆ ಗೌರಮ್ಮ ಮಾತನಾಡಿ ಕಳೆದ ಎರಡು ದಿನಗಳಿಂದ ಬಿದ್ದ ಮಳೆಯನ್ನು ನೆಚ್ಚಿಕೊಂಡು ಮನೆಮಂದಿಯೆಲ್ಲಾ ರಾಗಿ ಬಿತ್ತನೆಗೆ ಮುಂದಾಗಿದ್ದೇವೆ, ನೆನ್ನೆ ಬಂದಂತಹ ಮಳೆಯಿಂದ ಹೊಲದ ಪೂರ್ಣಭಾಗ ಸಸಿ ಹಾಕುತ್ತಿದ್ದೇವೆ ಎಂದರಲ್ಲದೆ, ಮುಂಗಾರು ಮಳೆಯಲ್ಲಿ ಹಾಕಿದಂತಹ ಬೆಳೆ ನಷ್ಟವಾಗಿ ರೈತರಿಗೆ ಏನೂ ಸಿಗದಂತಾಗಿದೆ, ರೈತರು ಏನೇ ಕಷ್ಟ ಪಟ್ಟು ಮಾಡಿದರೂ ಉತ್ತಮ ಫಸಲು ದೊರೆಯುತ್ತಿಲ್ಲ, ಗೊಬ್ಬರದ ಮತ್ತು ಬೀಜಗಳ ಬೆಲೆ ಗಗನಕ್ಕೇರಿದೆ, ಕೊಟ್ಟಿಗೆ ಗೊಬ್ಬರ ಸಿಂಪಡಿಸೋಣವೆಂದರೆ ಪಶುಗಳಿಗೆ ಮೇವೂ ಹಾಗೂ ಕುಡಿಯಲೂ ನೀರಿಲ್ಲದೆ ಕೊಟ್ಟಿಗೆ ಗೊಬ್ಬರ ಎಲ್ಲಿಯೋ ದೊರೆಯುತ್ತಿಲ್ಲ, ಅಂಗಡಿಗಳಲ್ಲಿ ಗೊಬ್ಬರದ ಬೆಲೆ ಹೆಚ್ಚಿರುವುದರಿಂದ ಹಣ ನೀಡಿ ತರಲು ಸಾಧ್ಯವಾಗುತ್ತಿಲ್ಲ ಇದರಿಂದ ಗೊಬ್ಬರದ ಸಮಸ್ಯೆಯೂ ತಲೆದೂರಿದೆ, ಸಕರ್ಾರ ಗೊಬ್ಬರದ ಬೆಲೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. 
ರೈತ ಕೃಷ್ಣಪ್ಪ ಮಾತನಾಡಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಡಿಮೆ ಬೆಲೆಯಲ್ಲಿ ಅಂಗಡಿಗಳ ವ್ಯಾಪಾರಸ್ಥರು ಕೇಳುತ್ತಾರೆ, ಆದರೆ ನಾವು ಬೆಳೆದ ಬೆಳೆಯನ್ನೇ ಅನಿವಾರ್ಯವಾಗಿ ಅಂಗಡಿಗಳಲ್ಲಿ ತರಲು ಹೋದರೆ ದುಪ್ಪಟ್ಟು ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಗುರು ರಾಘವೇಂದ್ರಸ್ವಾಮಿಯ 343 ನೇ ಆರಾಧನೆ  

ಚಿಕ್ಕನಾಯಕನಹಳ್ಳಿ : ಪಟ್ಟಣದ ಜೋಗಿಹಳ್ಳಿ ಬಳಿ ಇರುವ  ಆದಿಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿಯ 343 ನೇ ಆರಾಧನಾ ಮಹೋತ್ಸವ ಆಗಸ್ಟ್12 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
 ಬೆಳಿಗ್ಗೆ 8 ಗಂಟ್ಟೆಗೆ ಆದಿಆಂಜನೇಯಸ್ವಾಮಿಗೆ ಅಭಿಷೇಕ ಹಾಗೂ ಬೆಳಿಗ್ಗೆ 8 ಘಂಟ್ಟೆಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 6 ಘಂಟೆಗೆ ಪ್ರಸಾಧ ವಿನಿಯೋಗ ಸಂಜೆ 7 ಗಂಟ್ಟೆಗೆ ಮಾರುತಿ ಭಜನ ಸಂಘದವರಿಂದ ಹಾಗೂ ವಾಸವಿ ಭಜನಾ ಮಂಡಳಿ ಮತ್ತು ಇತರೆ  ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಆದ್ದರಿಂದ ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣಿಯಲ್ಲಿ ತಿಳಿಸಿದೆ.














Friday, August 8, 2014



ಮಗುವಿಗೆ ತಾಯಿಯ ಹಾಲು ಮುಖ್ಯ
ಚಿಕ್ಕನಾಯಕನಹಳ್ಳಿ,: ಮಗುವಿಗೆ ತಾಯಿಯ ಹಾಲು ಹೆಚ್ಚಾಗಿ ಕುಡಿಸಿದಷ್ಟು ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು, ಕ್ಷಯ, ಟಿ.ಬಿ. ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳು ಬರುವುದಿಲ್ಲ ಎಂದು ಡಾ.ಚಂದನ ಹೇಳಿದರು.
ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖಾ, ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ, ಶಿಶು ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಗಸ್ಟ್ ಮೊದಲ ವಾರದಲ್ಲಿ ವಿಶ್ವ ಸ್ತನ್ಯಪಾನ ದಿನಾಚಾರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ, ತಾಯಿಯ ಹಾಲು ಅಮೃತವಿದ್ದಂತೆ ಇದು ದೇವರ ಕೊಡುಗೆ  ತಾಯಿ ಹಾಲಿನಲ್ಲಿ ಮಗುವಿಗೆ ಬೇಕಾದ ಪೋಷ್ಠಿಕಾಂಶವಿದ್ದು ಮಗು ತಾಯಿಯ ಹಾಲು ಕುಡಿದಷ್ಟು ಆರೋಗ್ಯವಾಗಿರುತ್ತದೆ, ಈ ಹಾಲಿನಲ್ಲಿ ಮಗು ಹಾಲು ಕುಡಿದಷ್ಟು ತಾಯಿಯ ಸೌಂದರ್ಯ ಕಡಿಮೆಯಾಗುವುದು ಎಂಬ ಕಲ್ಪನೆ ನಮ್ಮ ನಗರ ಪ್ರದೇಶದ ತಾಯಂದಿರಲ್ಲಿದೆ, ಇದು ತಪ್ಪು ಕಲ್ಪನೆಯಾಗಿದೆ ಎಂದ ಅವರು ಮಗು ತಾಯಿಯ ಹಾಲು ಕುಡಿದಷ್ಟು ತಾಯಿಯ ಸೌಂದರ್ಯ ಹೆಚ್ಚಾಗುತ್ತದೆ ಇದರಿಂದ ಗಭರ್ಿಣಿ ಸ್ತ್ರೀಯರು ಹೆಚ್ಚು ಹೆಚ್ಚಾಗಿ ಹಾಲು ಪಡೆಯಲು ದ್ವಿದಳ ಧಾನ್ಯಗಳು, ಗೋಧಿ ಪಾಯಸ, ಸೊಪ್ಪು, ಸಬಾಕ್ಸಿ ಸೊಪ್ಪು ಕಡಲೆ ಕಾಯಿ, ನುಗ್ಗೆಕಾಯಿ ಮುಂತಾದ ಆಹಾರ ಸೇವಿಸುವಂತೆ ಸಲೆಹ ನೀಡಿದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ತಾಯಿಯ ಎದೆ ಹಾಲು ಮಗುವಿಗೆ ದಿವ್ಯ ಔಷಧಿ, ಮಗುವಿನ ದೈಹಿಕ ಮಾನಸಿಕ ಸದೃಢವಾಗಲು ಮಗುವಿಗೆ ತಾಯಿಯ ಹಾಲು ನೀಡಿದರೆ ಮಗು ಅನಾರೋಗ್ಯಕ್ಕೆ ತುತ್ತಾಗದೆ ಆರೋಗ್ಯವಂತವಾಗಿರುತ್ತದೆ, ಇಂದಿನ ವಿದ್ಯಾವಂತ ಹೆಣ್ಣು ಮಕ್ಕಳು ಮಗುವಿಗೆ ಹಾಲುನ್ನು ಕುಡಿಸಲು ಮೀನಾಮೇಶ ಎಣಿಸುತ್ತಿದ್ದಾರೆ ಇದು ಅಕ್ಷಮ್ಯ ಅಪರಾಧ ಇದನ್ನು ಕಾರ್ಯಕ್ರಮದಲ್ಲಿ ಅರಿತವರು ತಮ್ಮ ಅಕ್ಕಪಕ್ಕದ ಮನೆಯವರಿಗೆ ತಿಳಿ ಹೇಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಡಿಪಿಓ ಅನೀಸ್ಖೈಸರ್, ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಉಪಾಧ್ಯಕ್ಷ ವಸಂತಯ್ಯ, ಎಸಿಡಿಪಿಓ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ಜಾನುವಾರು ತಪಾಸಣಾ ಶಿಬಿರ 
ಚಿಕ್ಕನಾಯಕನಹಳ್ಳಿ,: ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ ಉಚಿತ ಜಾನುವಾರು ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಏಪಡರ್ಿಸಲಾಗಿತ್ತು.
ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಏರ್ಪಡಿಸಿದ್ದ  ಈ ಶಿಬಿರದಲ್ಲಿ  ಅರಳಿಕೆರೆ ಗ್ರಾಮದ ರ್ಯತರಿಗೆ ಜಾನುವಾರುಗಳಿಗೆ ಬರುವ ವಿವಿಧ ರೋಗಗಳು ಹಾಗೂ ಅವುಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಈ ಶಿಬಿರದಲ್ಲಿ 142 ಜಾನುವಾರುಗಳಿಗೆ ಲಸಿಕೆ ಹಾಕಿ, 450 ಕುರಿ, ಮೇಕೆ ಮತ್ತು ಕರುಗಳಿಗೆ  ಜಂತು ನಿವಾರಕ ಔಷದಿ ಕುಡಿಸಲಾಯಿತು ಮತ್ತು 8 ಬರಡು ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಈ ಶಿಬಿರದಲ್ಲಿ ಪಶು ವೈದ್ಯರಾದ ಡಾ. ಅಜಿತ್ ಮತ್ತು ಪಶು ಪರೀಕ್ಷಕರಾದ ಶಾಂತಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು
ಹೇಮಾವತಿ ನಾಲೆ ಒಡೆದ ದುಷ್ಕಮರ್ಿಗಳ ವಿರುದ್ದ ಸಿಐಡಿ ತನಿಖೆಗೆ ಒತ್ತಾಯ
ಚಿಕ್ಕನಾಯಕನಹಳ್ಳಿ,: ಹೇಮಾವತಿ ನಾಲೆಯನ್ನು ಒಡೆದ ದುಷ್ಕಮರ್ಿಗಳ ವಿರುದ್ದ ಸಿ.ಐ.ಡಿ. ತನಿಖೆಗೆ ಒತ್ತಾಯಿಸಿ ಇದೇ 9ರಂದು(ಇಂದು) ಕೆ.ಬಿ.ಕ್ರಾಸ್ನಲ್ಲಿ ಭಾರಿ ಬಹಿರಂಗ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ತಾಲೂಕಿನ ಎಲ್ಲಾ ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಬೇಕೆಂದು ಟಿ.ಎ.ಪಿ.ಸಿ.ಎಂ.ಎಸ್.ಅಧ್ಯಕ್ಷ ಸಿಂಗದಹಳ್ಳಿ ರಾಜ್ಕುಮಾರ್ ಮನವಿ ಮಾಡಿದ್ದಾರೆ.
ಶನಿವಾರದಂದು ಹಮ್ಮಿಕೊಂಡಿರುವ ಭಾರಿ ಪ್ರತಿಭಟನೆಯಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಮುಖರುಗಳು ಭಾಗವಹಿಸಲಿದ್ದು, ಈ ಸಂಧರ್ಭದಲ್ಲಿ ನಾಲೆ ಒಡೆಯುವಂತಹ ದುಷ್ಕೃತ್ಯದಲ್ಲಿ ಹಾಸನ ಜಿಲ್ಲೆಯ ಚೀಫ್ ಇಂಜಿನಿಯರ್ ಮತ್ತಿತರ ಅಧಿಕಾರಿಗಳು ಸಹ ಶಾಮೀಲ್ ಆಗಿರುವುದು ಹೊರನೋಟಕ್ಕೆ ಕಂಡು ಬರುತ್ತದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂ ನಮ್ಮ ಜಿಲ್ಲೆಯ ಜನರ ನೀರಿನ ಭವಣೆ ತಿರಲು ಅನುಕೂಲ ಮಾಡಿಕೊಡಬೇಕು ಹಾಗೂ  ನಾವು ಇಂತಹ ಸಮಯದಲ್ಲಿ  ಸಹನೆಯಿಂದಿದ್ದರೆ ಅದನ್ನು ನಮ್ಮ ಅಸಹಾಯಕತೆ ಎಂದು ತಿಳಿಯುವ ದುಷ್ಕಮರ್ಿಗಳು ತಮ್ಮ ಉಪಠಳವನ್ನು ಅಧಿಕಗೊಳಿಸುವುದರಿಂದ ನಾವು ನಮ್ಮ ಇಚ್ಚಾ ಶಕ್ತಿಯನ್ನು ತೋರ್ಪಡಿಸಲೋಸ್ಕರ ಈ ಪ್ರತಿಭಟನೆಯಲ್ಲಿ ಭಾಗವಹಿಸುವುದು ಅನಿವಾರ್ಯವಾಗಿದೆ ಆದ್ದರಿಂದ ಆಸಕ್ತರೆಲ್ಲರೂ ಭಾಗವಹಿಸಬೇಕೆಂದು ಸಿಂಗದಹಳ್ಳಿ ರಾಜ್ಕುಮಾರ್ ಕೋರಿದ್ದಾರೆ.

ದೇವಾಲಯಗಳ ಜೀಣರ್ೋದ್ದಾರಕ್ಕಾಗಿ ಧಮೋತ್ಧಾನ ಸಂಸ್ಥೆ
ಚಿಕ್ಕನಾಯಕನಹಳ್ಳಿ,: ಪುರಾತನ ಕಾಲದ ದೇವಸ್ಥಾನ ಹಾಗೂ ಜೀಣೋಧ್ದಾರ ಆಗಬೇಕಿರುವ ದೇವಸ್ಥಾನಗಳಿಗೆ ಸಹಾಯ ಮಾಡುವಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಧಮರ್ೋತ್ಧಾನ ಟ್ರಸ್ಟ್ ಸ್ಥಾಪಿಸಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಜಿಲ್ಲಾ ಯೋಜನಾಧಿಕಾರಿ ಪಿ.ಕೆ.ಪುರುಷೋತ್ತಮ್ ತಿಳಿಸಿದರು.
ಪಟ್ಟಣದ ಕುರುಬರಹಳ್ಳಿಯಲ್ಲಿ ಅರಿವಿಲಕ್ಕಮ್ಮ ದೇವಾಲಯದ ಜೀಣೋಧ್ದಾರಕ್ಕಾಗಿ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಸಂಸ್ಥೆ ವತಿಯಿಂದ ಎರಡು ಲಕ್ಷ ರೂ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ಧಮರ್ೋತ್ಥಾನ ಟ್ರಸ್ಟ್ ವತಿಯಿಂದ ಪ್ರಸಾದದ ರೂಪದಲ್ಲಿ ದೇವಾಲಯಗಳ ಜೀಣರ್ೋದ್ದಾರಕ್ಕಾಗಿ ಹಣ ನೀಡಲಾಗುತ್ತಿದೆ, ಧಮರ್ೋತ್ಥಾನ ಟ್ರಸ್ಟ್ ದೇವಾಲಯಗಳ ಅಭಿವೃದ್ದಿಗಾಗಿಯೇ ಧರ್ಮಸ್ಥಳದ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ್ದಾರೆ. ಸಂಸ್ಥೆ ವತಿಯಿಂದ ಹಣ ನೀಡಿದ ಮೇಲೆ ಅರ್ಧಕ್ಕೆ ನಿಂತಿದ್ದ ದೇವಾಲಯಗಳು ಪೂರ್ಣವಾಗುತ್ತಿರುವ ಬಗ್ಗೆ ತಿಳಿಸಿದರಲ್ಲದೆ ಧರ್ಮಸ್ಥಳ ಸಂಸ್ಥೆ ಆರಂಭವಾಗಿ 32ವರ್ಷವಾಗಿದೆ, ತುಮಕೂರು ಜಿಲ್ಲೆಯಲ್ಲಿ ಆರಂಭವಾಗಿ ಮೂರುವರೆ ವರ್ಷವಾಗಿದ್ದು ಜಿಲ್ಲೆಯಲ್ಲಿ ಸಂಸ್ಥೆ ಅಡಿಯಲ್ಲಿ ಆರಂಭವಾಗಿರುವ ಸಂಘ-ಸಂಸ್ಥೆಗಳಿಗೆ ಒಟ್ಟು 250ಕೋಟಿ ರೂನಷ್ಟು ಸಾಲ ನೀಡಲಾಗಿದೆ ಎಂದರು.
ಧ.ಗ್ರಾ.ಸಂ.ಯೋಜನಾಧಿಕಾರಿ ರೋಹಿತಾಕ್ಷ ಮಾತನಾಡಿ ಊರಿನ ದೇವಾಲಯಗಳು ಜೀಣರ್ೋದ್ದಾರವಾದರೆ ಅಲ್ಲಿನ ಜನರು ಆಧ್ಯಾತ್ಮಿಕ ನೆಮ್ಮದಿಯ ಜೊತೆಗೆ ವಿವಿಧ ರೀತಿಯಲ್ಲಿ ಅಭಿವೃದ್ದಿಯಾಗುತ್ತಾರೆ ಎಂಬುದಾಗಿ ತಿಳಿಸಿದರು.
ನಿವೃತ್ತ ಉಪನ್ಯಾಸಕ ದೊಡ್ಡಯ್ಯ ಮಾತನಾಡಿ ಧರ್ಮಸ್ಥಳ ಸಂಸ್ಥೆಯಿಂದ ಹಲವಾರು ಸಂಘ-ಸಂಸ್ಥೆಗಳಿಗೆ, ವಿದ್ಯಾಥರ್ಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಾಯ ದೊರೆಯುತ್ತಿರುವ ಬಗ್ಗೆ ಶ್ಲಾಘಿಸಿದರು.
ಸಮಾರಂಭದಲ್ಲಿ ಸ್ಪಂದನ ಪ್ರಗತಿಪರ ಜನಸೇವಾ ಒಕ್ಕೂಟದ ಅಧ್ಯಕ್ಷ ಯೋಗೀಶ್, ಊರಿನ ಪ್ರಮುಖರಾದ ಸಿದ್ದಯ್ಯ, ಕೆ.ಬಿ.ಲಕ್ಕಣ್ನ ಮುಂತಾದವರು ಉಪಸ್ಥಿತರಿದ್ದರು.



ಡಿ.ದೇವರಾಜು ಅರಸು ರವರ ಜನ್ಮದಿನಾಚಾರಣೆಯನ್ನು 
ವಿಜೃಂಭಣೆಯಾಗಿ ಆಚರಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ: ಕನಕದಾಸರ ಜಯಂತಿ, ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ ರೀತಿಯಲ್ಲೇ ಡಿ.ದೇವರಾಜು ಅರಸು ರವರ 99ನೇ ಜನ್ಮದಿನಾಚಾರಣೆಯನ್ನು ತಾಲ್ಲೂಕಿನಲ್ಲಿ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯ ಸಭೆ ತೀಮರ್ಾನಿಸಿತು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಡಿ.ದೇವರಾಜು ಅರಸುರವರ ಜನ್ಮದಿನಾಚಾರಣೆ ಆಚರಿಸುವ ಬಗ್ಗೆ ಜನಪ್ರತಿನಿಧಿಗಳ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಅರಸು ಜನಾಂಗದ ಮುಖಂಡರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯಲಾಗಿತ್ತು.
ಆಗಸ್ಟ್ 20ರಂದು ಬೆಳಗ್ಗೆ 10.30ಕ್ಕೆ ತಾಲ್ಲೂಕು ಕಛೇರಿಯಿಂದ ಹೊರಟ ವಿವಿಧ ಕಲಾ ತಂಡಗಳ ಮೆರವಣಿಗೆ ನೆಹರು ಸರ್ಕಲ್ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸುವುದು ನಂತರ ಉಪನ್ಯಾಸ, ಸ್ಪಧರ್ೆಗಳಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ ಪುರಸ್ಕಾರ, ಅಲ್ಪಸಂಖ್ಯಾತ ಇಲಾಖೆಗೆ ಸೇರಿದ ಚೆಕ್ಗಳನ್ನು ಫಲಾನುಭವಿಗಳಿಗೆ ನೀಡುವುದು, ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಶೇ.91ರಷ್ಟು ಅಂಕ ಪಡೆದ ಹಾಸ್ಟೆಲ್ಗಳಲ್ಲಿ ಓದಿದ ವಿದ್ಯಾಥರ್ಿ, ಹಾಗೂ ದೇವರಾಜ್ ಅರಸ್ರವರಿಗೆ ಬಾಡಿಗಾಡರ್್ ಆಗಿದ್ದ ಮಹಮದ್ಗೌಸ್(ಬೋರ್ವೆಲ್ ಬಾಬು), ಅರಸು ಜನಾಂಗ ರಾಜಯ್ಯನಪಾಳ್ಯದ ನಿವೃತ್ತ ಪ್ರಾಂಶುಪಾಲ ಚಂದ್ರರಾಜಅರಸ್ ಮೂವರಿಗೆ ಸನ್ಮಾನಿಸುವ ಬಗ್ಗೆ ಚಚರ್ಿಸಲಾಯಿತು.
ಕಾರ್ಯಕ್ರಮದ ಉಪನ್ಯಾಸಕ್ಕಾಗಿ ಮೈಸೂರಿನ ಪಿ.ವಿ.ನಾಗರಾಜುಅರಸ್ರವರನ್ನು ಆಹ್ವಾನಿಸುವ ಬಗ್ಗೆ ಅರಸು ಜನಾಂಗದ ಮುಖಂಡ ಗೋಪಾಲರಾಜ್ಅರಸ್ ಸಭೆಗೆ ತಿಳಿಸಿದರು. 
ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ.ಕೃಷ್ಣನಾಯ್ಕ್, ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಮಲ್ಲೇಶಪ್ಪ, ಬಿ.ಇಂದಿರಾ, ರೇಣುಕಮ್ಮ, ಬಿ.ಇ.ಓ ಸಾ.ಚಿ.ನಾಗೇಶ್,  ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಕನ್ನಡ ಸಂಘದ ಸಿ.ಬಿ.ರೇಣುಕಸ್ವಾಮಿ, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಅರಸು ಜನಾಂಗದ ಅಧ್ಯಕ್ಷ ನಾಗರಾಜ್ಅರಸ್, ಗೋಪಾಲರಾಜ್ಅರಸ್, ದಲಿತ ಮುಖಂಡ ಲಿಂಗದೇವರು, ನಿಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Wednesday, August 6, 2014

16ಲಕ್ಷದ 80ಸಾವಿರ ಲೀಟರ್ ನೀರು ಚಿಕ್ಕನಾಯಕನಹಳ್ಳಿಗೆ ಅಗತ್ಯ
ಚಿಕ್ಕನಾಯಕನಹಳ್ಳಿ,ಆ.6: ಪ್ರತಿನಿತ್ಯ ಪುರಸಭಾ ವ್ಯಾಪ್ತಿಯ ಹಳ್ಳಿಗಳಿಗೂ ಸೇರಿದಂತೆ ಒಟ್ಟು  16ಲಕ್ಷದ 80ಸಾವಿರ ಲೀಟರ್ ನೀರು ಅಗತ್ಯವಿದ್ದು ಸದ್ಯದ ಪರಿಸ್ಥಿತಿಯಲ್ಲಿ ಮೂರು ಲಕ್ಷದಷ್ಟು ನೀರು ದೊರೆಯುತ್ತಿದೆ ಉಳಿದ ನೀರು ಕೊರೆತೆಯಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ ಶೆಟ್ಟಿ ಸಭೆಗೆ ತಿಳಿಸಿದರು. 
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪಾರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.  
ಪಟ್ಟಣಕ್ಕೆ ದಿನನಿತ್ಯ ಎಷ್ಟು ಲೀಟರ್ ನೀರು ಅಗತ್ಯವಿದೆ, ಜನತೆಗೆ ಯಾವ ಪ್ರಮಾಣದಲ್ಲಿ ನೀರು ದೊರೆಯುತ್ತಿದೆ ಎಂಬುದರ ಬಗ್ಗೆ ಸಿ.ಪಿ.ಮಹೇಶ್ ಪ್ರಶ್ನಿಸಿದಕ್ಕೆ ಮುಖ್ಯಾಧಿಕಾರಿಗಳು ಉತ್ತರಿಸಿದರು.
ಪಟ್ಟಣದಲ್ಲಿ ವೆಂಕಟ್ಟಣ್ಣಕಟ್ಟೆ ಬಳಿ ಹಾಗೂ ತಾತಯ್ಯನಗೋರಿ ಪಕ್ಕ ಪಾಕರ್್ ನಿಮರ್ಾಣ ಮಾಡಲು ಪುರಸಭೆಯಿಂದ ಹಣ ಖಚರ್ಾಗುತ್ತಿದೆ ಆದರೆ ಆ ಪ್ರಮಾಣದಲ್ಲಿ ಅಲ್ಲಿ ಅಭಿವೃದ್ದಿ ಆಗುತ್ತಿಲ್ಲ ಎಂದು ಸದಸ್ಯ ಸಿ.ಪಿ.ಮಹೇಶ್ ಆರೋಪಿಸಿದರು.
ಪುರಸಭಾ ಸದಸ್ಯ ಸಿ.ಆರ್.ತಿಮ್ಮಪ್ಪ ಮಾತನಾಡಿ ವಾಡರ್್ ನಂ.12ರಲ್ಲಿ ಟ್ಯಾಂಕರ್ ನೀರನ್ನು ಹರಿಸುತ್ತಿಲ್ಲ, ನೆಲ್ಲಿಯಲ್ಲಿಯೂ ನೀರನ್ನು ಸರಿಯಾಗಿ ಬಿಡುತ್ತಿಲ್ಲ, ನೀರಿಗಾಗಿ ಜನರು ಪ್ರತಿ ದಿನ ನಮ್ಮನ್ನು ದೂರುತ್ತಿದ್ದಾರೆ ಎಂದು ಆರೋಪಿಸಿದರು.
ಪುರಸಭಾ ಸದಸ್ಯ ಮಲ್ಲೇಶ್ ಮಾತನಾಡಿ, ಟ್ಯಾಂಕರ್ನಲ್ಲಿ ನೀರನ್ನು ಬೇರೆ ವಾಡರ್್ಗಳಿಗೆ ಕಳುಹಿಸುತ್ತಿದ್ದೀರ ಆದರೆ ವಾಡರ್್ ನಂ.15ರಲ್ಲಿ ಟ್ಯಾಂಕರ್ ನೀರು ಹರಿಸುತ್ತಿಲ್ಲ ಎಂದರು.
ಸದಸ್ಯ ಅಶೋಕ್ ಮಾತನಾಡಿ ವೀರಲಕ್ಕಮ್ಮ ಬಡಾವಣೆಗೆ ಸಮುದಾಯ ಭವನ ನೀಡುವಂತೆ ಒತ್ತಾಯಿಸಿದರು, ಪಟ್ಟಣದಲ್ಲಿ ಜನರಲ್ ಸಮುದಾಯ ಭವನ ನಿಮರ್ಿಸಲು ಪುರಸಭೆಯಿಂದ ಜಾಗ ನೀಡಿದರೆ ಸಂಸದರ ಬಳಿ ಭವನ ನಿಮರ್ಾಣದ ಬಗ್ಗೆ ಮಾತನಾಡಬಹುದು ಎಂದು ಕಾಂಗ್ರೆಸ್ ಸದಸ್ಯ ಸಿ.ಪಿ.ಮಹೇಶ್ ತಿಳಿಸಿದರು. 
ಪಟ್ಟಣದ ಉಡೇವ್ ಬೀದಿಯಲ್ಲಿನ ಅಂಗನವಾಡಿಯ ಕೊಠಡಿ ಚಿಕ್ಕದಾಗಿರುವುದರಿಂದ ಅಲ್ಲೇ ಇರುವ ಗಾಂಧಿಶಿಶುವಿಹಾರಕ್ಕೆ ಪುರಸಭೆಯಿಂದ ಜಾಗ ನೀಡಿ ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಸಿಡಿಪಿಓರವರ ಮನವಿಯನ್ನು ಸಭೆಗೆ ತಿಳಿಸಿದರು. ಸದಸ್ಯರು ಸವರ್ಾನುಮತದಿಂದ ಒಪ್ಪಿಗೆ ಸೂಚಿಸಿದರು.
ಪುರಸಭೆಯಿಂದ ಹಾಕಲ್ಪಡುವ ಪ್ಲೆಕ್ಸ್ಗಳು, ಕರಪತ್ರಗಳಿಗೆ ಎಲ್ಲಾ ಸದಸ್ಯರ ಹೆಸರುಗಳನ್ನು ಹಾಕಿಸುವಂತೆ ಸಿ.ಟ.ದಯಾನಂದ್ ತಿಳಿಸಿದರು.
ಸ್ವಾತಂತ್ರ್ಯ ದಿನಾಚಾರಣೆ ದಿನದಂದ ಸಹಿ ವಿತರಣೆಯನ್ನು ತಯಾರಿಸುವ ಬಗ್ಗೆ ಚಚರ್ಿಸಲಾಯಿತು. 
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ರೂಪಾ, ಎಂ.ಕೆ.ಇಂದಿರಾ, ರೇಣುಕಮ್ಮ, ಗೀತಾರಮೇಶ್, ಧರಣಿಲಕ್ಕಪ್ಪ, ಅಶೋಕ್, ಸಿ.ಎಂ.ರಾಜಶೇಖರ್, ಹೆಚ್.ಬಿ.ಪ್ರಕಾಶ್, ಸಿ.ಎಂ.ರಂಗಸ್ವಾಮಯ್ಯ ಉಪಸ್ಥಿತರಿದ್ದರು.

Tuesday, August 5, 2014

ಗೆಲ್ಲುವ ಗುರಿ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ : ಬಿ.ಇ.ಓ ಸಾ.ಚಿ.ನಾಗೇಶ್


 ಚಿಕ್ಕನಾಯಕನಹಳ್ಳಿ : ಯಾವುದೇ ಕ್ಷೇತ್ರದಲ್ಲಿ ಗೆಲ್ಲಬೇಕೆಂಬ ಗುರಿ ಇದ್ದರೆ ಮಾತ್ರ ಜೀವನದಲ್ಲಿ ಮುಂದೆ ಬರಬಹುದು ಎಂದು ಬಿ.ಇ.ಒ. ಸಾ.ಚಿ.ನಾಗೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಗಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತೀಪರ್ುಗಾರರು ತೀಪರ್ು ನೀಡುವಾಗ ತಾರತಮ್ಯ ಮಾಡದೇ ಸರಿಯಾದ ತೀಪರ್ು ನೀಡಿದರೆ ಮಾತ್ರ ಮಕ್ಕಳು ಕ್ರೀಡೆಯ ಬಗ್ಗೆ ಅಸಕ್ತಿ ತೋರಿಸುವರು ಎಂದರು. 
  ಪುರಸಭಾ ಅದ್ಯಕ್ಷೆ ಪುಷ್ವ.ಟಿ.ರಾಮಯ್ಯ ಮಾತಾನಾಡಿ, ಮಕ್ಕಳು ವಿದ್ಯೆಯ ಜೊತೆಯಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಿ, ಕ್ರೀಡೆ ಹಾಗೂ ವಿದ್ಯೆಯಲ್ಲಿ ಹೆಚ್ಚು   ತೊಡಗಿಸಿಕೊಳ್ಳಲು ಪೊಷಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು.
ಪುರಸಭಾ ಸ್ಥಾಯಿ ಸಮಿತಿ ಅದ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, 2010ರ ಕಾಮಾನ್ವೆಲ್ತ್ ಕ್ರೀಡಾಕೂಟದಲ್ಲಿ 101 ಪದಕಗಳನ್ನು ಭಾರತದ ಕ್ರೀಡಾಪಟುಗಳು ಗಳಿಸಿದ್ದರು,  ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ದೇಶ 64 ಪದಕ ಗಳಿಸಿರುವುದನ್ನು ನೋಡಿದರೆ ದೇಶದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ದೊರಕುತ್ತಿಲ್ಲ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ವಿಷಾಧಿಸಿದರು.
  2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಶೂಟಿಂಗ್ನಲ್ಲೇ 14 ಚಿನ್ನಗಳಿಸಿದ್ದರು ಆದರೆ ಈ ಬಾರಿ ಒಟ್ಟಾರೆ 15 ಚಿನ್ನಗಳಿಸಿರುವುದನ್ನು ನೋಡಿದರೆ ಕ್ರೀಡೆಗೆ ಸಕರ್ಾರ ಹೆಚ್ಚು ಪ್ರೋತ್ಸಾಹ ನೀಡುತ್ತಿಲ್ಲ ಎಂದ ಅವರು ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ನಾವು ಗೆಲುವು ಸಾಧಿಸಬೇಕೆಂಬ ಛಲವಿರಬೇಕು ಹೋರೆತು ಬೇರೆಯವರನ್ನು ಸೋಲಿಸಬೇಕು ಎಂಬ ಮನೋಭಾವವಿರಬಾರದು, ಕ್ರೀಡೆ ದೇಶ-ದೇಶಗಳ ಹಾಗೂ ವ್ಯಕ್ತಿ ವ್ಯಕ್ತಿಗಳಲ್ಲಿ ಸಾಮರಸ್ಯ  ಬೆಸೆಯುತ್ತದೆ ಎಂದರು. 
       ದೇಶೀಯ ವಿದ್ಯಾಪೀಠ ಪ್ರೌಢಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ 2014-15ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಗುವುದು ಎಂದರು.
ಡಿವಿಪಿ ಶಿಕ್ಷಣ ಸಂಸ್ಥೆಯ  ನಿದರ್ೇಶಕ ಸಿ.ಬಿ.ರೇಣುಕಸ್ವಾಮಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿ.ಇ.ಓ ಸಾ.ಚಿ.ನಾಗೇಶ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಿ.ಎಸ್.ರಮೇಶ್, ರೂಪಾ ಶಿವಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿ.ನಾ.ಪುರುಷೋತ್ತಮ್, ನರಸಿಂಹಮೂತರ್ಿ, ಸಿ.ಎಸ್.ಕುಮಾರಸ್ವಾಮಿ, ಉಪಸ್ಥಿತರಿದ್ದರು. ಸಹನಾ ತಂಡದವರು ಪ್ರಾಥರ್ಿಸಿದರೆ, ಶಿಕ್ಷಕ ಎಂ.ಎಲ್.ಮಲ್ಲಿಕಾಜರ್ುನಯ್ಯ ಸ್ವಾಗತಿಸಿದರು. ವೇಣುಗೋಪಾಲ್ ನಿರೂಪಿಸಿದರು. ಬಿ.ಆರ್.ರಾಮಸ್ವಾಮಿ ವಂದಿಸಿದರು. 

Monday, August 4, 2014


ಸ್ವಂತಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ ಸರ್ವಸ್ವ ತತ್ವದಿಂದ ಬಾಳಿ : ಹೊಸೂರಪ್ಪ
ಚಿಕ್ಕನಾಯಕನಹಳ್ಳಿ,ಆ.04 : ಸ್ವಂತಕ್ಕಾಗಿ ಸ್ವಲ್ಪ, ಸಮಾಕ್ಕಾಗಿ ಸರ್ವಸ್ವ ಎಂಬ ತತ್ವದಡಿ ಬಾಳಿದರೆ ಬಡವರಿಗೆ ಸಹಾಯದ ಹಸ್ತ ನೀಡುವ ಜೊತೆಯಲ್ಲಿ ನೆರವಾದವರಿಗೆ ತೃಪ್ತಿಯೂ ದೊರಕುತ್ತದೆ ಎಂದು ಶಾಲಾ ಹಿರಿಯ ವಿದ್ಯಾಥರ್ಿ  ಹೊಸೂರಪ್ಪ ಹೇಳಿದರು.
ಪಟ್ಟಣದ ಕುರುಬರಶ್ರೇಣಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ತಾಯಿಯ ನೆನಪಿನಲ್ಲಿ ಪ್ರತಿ ವರ್ಷವೂ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡುತ್ತಿದ್ದು ಪ್ರತಿ ವರ್ಷ ಇದೇ ಮಾದರಿಯಲ್ಲಿ ನಿರಂತರವಾಗಿ ಸೇವೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದರಲ್ಲದೆ, ನಾನೂ ಕೂಡ ಶಾಲೆಯೊಂದರ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಸಂಜೆ 6ರವರಗೆ ಬೋಧನೆ ಮಾಡಿದರ ಪರಿಣಾಮ ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಮ್ಮ ಶಾಲೆ ಪ್ರಥಮ ಸ್ಥಾನದಲ್ಲಿದೆ, ಕೆಲವು ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜನಿಯರ್ಗಳು ನಮ್ಮ ಶಾಲೆಗೆ ಪ್ರತಿ ಶನಿವಾರ, ಭಾನುವಾರ ಆಗಮಿಸಿ ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ ಈ ರೀತಿ ಹಣ ನಿರೀಕ್ಷಿಸದಂತಹ ದಾನಿಗಳು ಸೇವೆ ಸಲ್ಲಿಸಿದಾಗ ನಿಜವಾದ ಸೇವೆಯಾಗುತ್ತದೆ ಎಂದರು.
ಶಾಲೆಯ ಮುಖ್ಯೋಪಾಧ್ಯಯ ತಿಮ್ಮಾಭೋವಿ ಮಾತನಾಡಿ ಮನೆಯಲ್ಲಿ ಹಿರಿಯರು ಹೊಂದುವ ಆಲೋಚನೆಗಳನ್ನು ಮಕ್ಕಳು ಮಾದರಿ ಮಾಡಿಕೊಳ್ಳುತ್ತಾರೆ, ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬಾಳಿದರೆ ಮಕ್ಕಳು ಅದನ್ನೇ ಅನುಸರಿಸಿ ಇತರರಿಗೆ ಮಾದರಿಯಾದಾಗ ಸೇವೆ ಮಾಡಿದ ಉದ್ದೇಶ ಸಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 
ಸಮಾರಂಭದಲ್ಲಿ ಶಾಲಾ ಹಿರಿಯ ವಿದ್ಯಾಥರ್ಿ ಬಿ.ಎಂ. ಪ್ರಸಾದ್, ಎಸ್.ಆರ್.ಪೂಜಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಎಸ್.ರಾಜೇಶ್, ಶಿಕ್ಷಕರುಗಳಾದ ಶಿವಕುಮಾರ್, ಶಾಂತಮ್ಮ, ಸಾಕಮ್ಮ, ಸರ್ವಮಂಗಳ ಮುಂತಾದವರು ಉಪಸ್ಥಿತರಿದ್ದರು.


ಅತ್ಯಾಚಾರದ ವಿರುದ್ದ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ : ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ರಾಜ್ಯ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ, ರಾಜ್ಯಕ್ಕೆ ಹೊರ ರಾಜ್ಯಗಳಿಂದ ಉದ್ಯೋಗ ಹರಸಿಕೊಂಡು ಬರುವ ಸಾವಿರಾರು ಜನ ಬೆಂಗಳೂರಿನಲ್ಲಿ ನೆಲಸಿದ್ದು ಅವರಲ್ಲಿ ಕೆಲವರು ಕಾನೂನು ವಿರೋಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ಮೇಲೆ ಪೊಲೀಸರು ತೀವ್ರ ನಿಗಾವಹಿಸಬೇಕು ಎಂದು ರೈತ ಸಂಘದ ಸಂಘಟನಾ ಕಾರ್ಯದಶರ್ಿ ಕೆಂಕೆರೆ ಸತೀಶ್ ಸಕರ್ಾರವನ್ನು ಒತ್ತಾಯಿಸಿದರು.
ಪಟ್ಟಣದ ನೆಹರು ವೃತ್ತದಲ್ಲಿ ಜಾಗೃತಿ ಸೇನೆ, ರಾಜ್ಯ ರೈತ ಸಂಘ, ಜಯಕನರ್ಾಟಕ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಕರ್ಾರ ಅತ್ಯಾಚಾರಿಗಳ ವಿರುದ್ದ ಗೂಂಡಾ ಕಾಯ್ದೆಯನ್ನು ಜಾರಿಗೆ ತಂದು ಬಂಧಿಸಬೇಕೆಂದರಲ್ಲದೆ, ಗೃಹ ಇಲಾಖೆ ಸಮಾಜದಲ್ಲಿನ ದುಷ್ಟಶಕ್ತಿಗಳ ವಿರುದ್ದ ಕ್ರಮ ಕೈಗೊಳ್ಳವಲ್ಲಿ ಗೃಹ ಸಚಿವರು ತಮ್ಮ ಖಾತೆಯನ್ನು ಸರಿಯಾಗಿ ನಿರ್ವಹಿಸಲು ವಿಫಲರಾಗಿದ್ದಾರೆ, ರಾಜ್ಯದ ಗಡಿ ಭಾಗಗಳಲ್ಲಿ ಅಕ್ರಮವಾಗಿ ಎಂ.ಇ.ಎಸ್ ಗುಂಡಾಗಳು ಕನ್ನಡ ನಾಮ ಫಲಕವನ್ನು ಹೊಡೆದು ಹಾಕಿದ್ದರೂ ಪೋಲಿಸ್ ಇಲಾಖೆ ಎಂ.ಇ.ಎಸ್ ವಿರುದ್ದ ಕ್ರಮ ಕೈಗೊಳ್ಳದೆ ಕನ್ನಡ ನೆಲ, ಜಲ ರಕ್ಷಣೆಗೆ ಹೋದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಅತ್ಯಾಚಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ನೂರಾರು ನಾಗರೀಕರು ಭಾಗವಹಿಸಿದ್ದರು. ನಾಡ ಜಾಗೃತಿ ಸೇನೆಯ ರಾಜ್ಯಾಧ್ಯಾಕ್ಷ ಎಸ್.ಆನಂದ್, ಜಿಲ್ಲಾಧ್ಯಕ್ಷ ಎಸ್.ಎಮ್.ನಿಂಗರಾಜು, ಉಪಾಧ್ಯಕ್ಷ ಸುರೇಶ್, ಜಯ ಕನರ್ಾಟಕ ಸಂಘಟನೆಯ ಅಧ್ಯಕ್ಷ ವೆಂಕಟೇಶ್ ರೈತ ಸಂಘದ ಮಲ್ಲಿಕಾಜರ್ುನಯ್ಯ ಭಾಗವಹಿಸಿದ್ದರು.
ನೆಹರು ವೃತ್ತದಿಂದ ಹೊರಟ ಮೆರವಣಿಗೆ ಹೊಸ ಬಸ್ ನಿಲ್ದಾಣ,  ಬಿ.ಹೆಚ್.ರಸ್ತೆ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ಉಪತಹಶೀಲ್ದಾರ್ ದೊಡ್ಡಮಾರಯ್ಯವರಿಗೆ ಮನವಿ ಅಪರ್ಿಸಿದರು.

ಮಹಿಳೆಯರಿಗೆ ಸಾಮಾಜಿಕ ಭದ್ರತೆ ನೀಡಲು ಸೃಜನ ಸಂಘಟನೆ ಒತ್ತಾಯ
ಚಿಕ್ಕನಾಯಕನಹಳ್ಳಿ : ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ, ಮಹಿಳಾ ದೌರ್ಜನ್ಯ, ಲೈಂಗಿಕ ಹಿಂಸೆ,  ಮಾನಸಿಕ ಉಪಟಳ, ದೈಹಿಕ ಶೋಷಣೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಸಾಮಾಜಿಕ ಭದ್ರತೆಗಾಗಿ ಎಚ್ಚರಿಸಲು ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಸೃಜನ ಮಹಿಳಾ ಸಂಘಟನೆ ಒತ್ತಾಯಿಸಿತು.
ಹೆಣ್ಣು ಮಕ್ಕಳ ಮೇಲೆ ಅವ್ಯಾಹಿತವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ನಾಗರೀಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ, ಅತ್ಯಾಚಾರದಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನ ಪಡೆದಿದೆಯೆಂದರೆ ನಮ್ಮ ಸಮಾಜ ನೈತಿಕ ಅಧಃಪತನದತ್ತ ಸಾಗುತ್ತಿದೆ ಎಂಬುದು ಅರ್ಥವಾಗುತ್ತದೆ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಭದ್ರತೆಯ ಬಗ್ಗೆ ಮತ್ತು ಅವರ ಮುಂದಿನ ಭವಿಷ್ಯದ ಬಗ್ಗೆ ಆತಂಕವಾಗುತ್ತಿದ್ದು ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಅಪರಾಧಿಗಳಿಗೆ ಮರಣದಂಡನೆಯಂತಹ ಘೋರ ಶಿಕ್ಷೆಯನ್ನು ವಿಧಿಸಬೇಕೆಂದು ಸೃಜನ ಮಹಿಳಾ ಸಂಘಟನೆ ಉಪ ತಹಶೀಲ್ದಾರ್ರವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸೃಜನ ಸಂಘಟನೆಯ ಎನ್.ಇಂದಿರಮ್ಮ,  ಎ.ಎಸ್.ಕವಿತ,  ಕವಿತಾ ಚನ್ನಬಸವಯ್ಯ, ಶಶಿಕಲಾ, ಗೌರಮ್ಮ, ಬಿ.ಎಸ್.ಅನ್ನಪೂರ್ಣ, ಎಸ್.ರುದ್ರಮ್ಮ, ಕೆ.ಎನ್.ಯಶೋಧ  ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿರಿಯ ನಾಗರೀಕರಿಗಾಗಿ ವಿವಿಧ ಸ್ಪಧರ್ೆಗಳು


ಚಿಕ್ಕನಾಯಕನಹಳ್ಳಿ : ಸ್ವತಂತ್ರ ದಿನಾಚಾರಣೆ ಅಂಗವಾಗಿ ನಡೆದ ಹಿರಿಯ ನಾಗರೀಕರ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು.
ಪುರಷರ ವಿಭಾಗದಲ್ಲಿ - 60ರಿಂದ 70 ವರ್ಷ ವಯಸ್ಸಿನ 50.ಮೀಟರ್ ನಡಿಗೆಯಲ್ಲಿ ಕೃಷ್ಣಪ್ಪ ಪ್ರಥಮ ,  ಸಂಜೀವಯ್ಯ ದ್ವಿತೀಯ, ರಾಜಪ್ಪ ತೃತೀಯ ಬಹುಮಾನ ಪಡೆದರು.
70ರಿಂದ 80 ವಯಸ್ಸಿನ ವಿಭಾಗದಲ್ಲಿ ವರದರಾಜಶೆಟ್ಟಿ ಪ್ರಥಮ, ಸತ್ಯನಾರಾಯಣ ದ್ವಿತೀಯ, ರಾಮರಾಜು ತೃತೀಯ ಬಹುಮಾನ ಪಡೆದರು.
ನಾಣ್ಯ ಸಂಖ್ಯೆ ಹೇಳುವ ಸ್ಪದರ್ೆ- ಶ್ರೀರಂಗಾಚಾರ್ಯ ಪ್ರಥಮ, ಎಂ.ವಿ.ನಾಗರಾಜ್ರಾವ್ ದ್ವಿತಿಯ, ವರದರಾಜಶೆಟ್ಟಿ ತೃತಿಯ ಬಹುಮಾನ.
ಮಡಿಕೆ ಒಡೆಯುವ ಸ್ಫದರ್ೆಯಲ್ಲಿ : ಹನುಮಂತಯ್ಯ ಪ್ರಥಮ, ಸತ್ಯನಾರಾಯಣ ದ್ವಿತಿಯ, ಚಂದ್ರಶೇಖರ್ಶೆಟ್ಟಿ ತೃತಿಯ ಬಹುಮಾನ ಪಡೆದರು.
ಚಕ್ರ ಎಸೆಯುವ ಸ್ಪಧರ್ೆಯಲ್ಲಿ : ಕೆ.ಎಂ.ನಾಗರಾಜು ಪ್ರಥಮ, ಕೃಷ್ಣಪ್ಪ ದ್ವಿತಿಯ, ರಾಜಪ್ಪ ತೃತಿಯ ಬಹುಮಾನ.
ಬಕೆಟ್ಗೆ ರಿಂಗ್ ಹಾಕುವ ಸ್ಫದರ್ೆ : ಸಿ.ಎಸ್.ಸತ್ಯನಾರಾಯಣ ಪ್ರಥಮ, ಹೆಚ್.ಆರ್.ಸತ್ಯನಾರಾಯಣ ದ್ವಿತಿಯ, ಹನುಮಂತಯ್ಯ ತೃತಿಯ ಬಹುಮಾನ ಪಡೆದರು.
ಮಹಿಳಾ ವಿಭಾಗದಲ್ಲಿ
ಮಡಿಕೆ ಹೊಡೆಯುವುದು : ಜಯಮ್ಮ ಪ್ರಥಮ, ನಾಗರತ್ನಮ್ಮ ದ್ವಿತಿಯ, ಕಮಲಮ್ಮ ತೃತಿಯ ಬಹುಮಾನ ಪಡೆದರು
50ಮೀ.ನಡಿಗೆ ಸ್ಪಧರ್ೆ : ರಾಜೇಶ್ವರಿ ಪ್ರಥಮ, ರುದ್ರಾಕ್ಷಮ್ಮ ದ್ವಿತಿಯ, ಶಶಿರೇಖಾ ತೃತಿಯ ಬಹುಮಾನ
ನಾಣ್ಯ ಸಂಖ್ಯೆ ಹೇಳುವ ಸ್ಪಧರ್ೆ : ರಾಜೇಶ್ವರಿ ಪ್ರಥಮ, ರುದ್ರಾಕ್ಷಮ್ಮ ದ್ವಿತಿಯ, ಕಮಲಮ್ಮ ತೃತಿಯ ಬಹುಮಾನ ಪಡೆದರು.
ಬಕೆಟ್ಗೆ ರಿಂಗ್ ಹಾಕುವ ಸ್ಫದರ್ೆ : ಕೆ.ಎನ್.ಶಶಿರೇಖಾ ಪ್ರಥಮ, ಎಸ್.ಬಿ.ಸೌಭಾಗ್ಯಲಿಂಗರಾಜು ದ್ವಿತಿಯ, ಪ್ರಭಾವತಿ ನರಸಿಂಹಯ್ಯ ತೃತಿಯ, 
ಚಕ್ರ ಎಸೆತ ಸ್ಪದರ್ೆ : ರುದಾಕ್ಷಮ್ಮ ಪ್ರಥಮ, ಪ್ರಭಾವತಿ ನರಸಿಂಹಯ್ಯ ದ್ವಿತಿಯ, ಟಿ.ಎಸ್.ರಾಜೇಶ್ವರಿ ತೃತಿಯ ಬಹುಮಾನ.
ಆದರ್ಶ ದಂಪತಿಗಳ ಸ್ಪಧರ್ೆ : ನಾಗರಾಜ್ಅರಸ್ ಸುನಂದ್ ಪ್ರಥಮ, ಲಿಂಗರಾಜು ಸೌಭಾಗ್ಯಮ್ಮ ದ್ವಿತಿಯ, ರಾಮಯ್ಯ ಜಯಮ್ಮ ತೃತಿಯ ಬಹುಮಾನ ಪಡೆದರು.

Saturday, August 2, 2014


ಕ್ಷೀರಭಾಗ್ಯ ಯೋಜನೆ ಒಂದು ವರ್ಷ ಪೂರ್ಣ : ಸಂತಸ
ಚಿಕ್ಕನಾಯಕನಹಳ್ಳಿ,ಆ.01 : ಶಾಲೆಗಳಿಗೆ ಬರುವ ವಿದ್ಯಾಥರ್ಿಗಳ ಹಸಿವು ನೀಗಿಸಲು ಸಕರ್ಾರ ಹಮ್ಮಿಕೊಂಡಿರುವ ಕ್ಷೀರಭಾಗ್ಯ ಯೋಜನೆಗಾಗಿ ತುಮಕೂರು ಹಾಲು ಒಕ್ಕೂಟ ಚಿ.ನಾ.ಹಳ್ಳಿ ತಾಲ್ಲೂಕಿಗೆ ಒಂದು ದಿವಸಕ್ಕೆ 90ಸಾವಿರ ರೂ ನಷ್ಟು ಹಾಲಿನ ಪೌಡರ್ ನೀಡುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿದರ್ೇಶಕ ಹಳೆಮನೆ ಶಿವನಂಜಪ್ಪ ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲೆಯ ಆವರಣದಲ್ಲಿ ಸಕರ್ಾರ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಕ್ಷೀರಭಾಗ್ಯ ಯೋಜನೆ ಆರಂಭವಾಗಿ ಒಂದು ವರ್ಷದ ಯಶಸ್ವಿ ಯೋಜನೆಯಲ್ಲಿ ಮಕ್ಕಳಿಗೆ ಹಾಲನ್ನು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಕರ್ಾರ ಶಾಲಾ ವಿದ್ಯಾಥರ್ಿಗಳಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಕ್ಷೀರಭಾಗ್ಯ ಯೋಜನೆಯೂ ಒಂದು ಉತ್ತಮ ಯೋಜನೆಯಾಗಿದೆ, ಈ ಯೋಜನೆಯು ವಾರದಲ್ಲಿ ಮೂರು ದಿನಗಳ ಕಾಲ ಹಾಲನ್ನು ನೀಡಲಿದ್ದು ತಾಲ್ಲೂಕಿನ 367 ಶಾಲೆಗಳ 18569 ಮಕ್ಕಳಲ್ಲಿ ಪ್ರತಿ ವಿದ್ಯಾಥರ್ಿಗೆ 150 ಎಂ.ಎಲ್ ಹಾಲನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಕ್ಷೀರಭಾಗ್ಯ ಯೋಜನೆಯು ರಾಜ್ಯಾದ್ಯಂತ ಯಶಸ್ವಿ ಕಾರ್ಯಕ್ರಮವಾಗಿದ್ದು, ಶಾಲೆಯಲ್ಲಿಯೇ ಮಕ್ಕಳಿಗೆ ಉತ್ತಮ ಹಾಲನ್ನು ನೀಡುವುದರಿಂದ ಮಕ್ಕಳ ಮಾನಸಿಕ, ಭೌಧ್ದಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ, ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದರಲ್ಲದೆ ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಾಗಿ ಹಾಜರಾತಿ ಗುಣಮಟ್ಟವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಯರಗುಂಟಪ್ಪ, ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಆರ್.ನಾಗರಾಜು ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.


ನೀರಿಗಾಗಿ ಪಟ್ಟಣದ 6ನೇ ವಾಡರ್್ ನಾಗರೀಕರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಆ.01 : ಕುಡಿಯುವ ನೀರಿಗಾಗಿ ಆಗ್ರಹಿಸಿ ಪಟ್ಟಣದ 6ನೇ ವಾಡರ್್ನ ಲಿಂಗಯ್ಯನಪಾಳ್ಯದ ನಾಗರೀಕರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕುಡಿಯುವ ನೀರು ಬರುತ್ತಿದ್ದ ಬೋರ್ ಕೆಟ್ಟು ಮೂರು ತಿಂಗಳಾಗಿದ್ದು ನೀರಿಗಾಗಿ ಬೇರೆಯರ ತೋಟಗಳ ಬೋರ್ಗಳಲ್ಲಿ ಕಾಡಿ ಬೇಡಿ ನೀರನ್ನು ತರಲಾಗುತ್ತಿತ್ತು ಆದರೆ ಇಷ್ಟು ದಿವಸ ಮಾನವೀಯತೆಯಿಂದ ನೀರು ಬಿಡುತ್ತಿದ್ದ ಅವರೂ ಈಗ ತೋಟಕ್ಕೆ ನೀರು ಬೇಕು ಎಂದು ಗೇಟ್ಗೆ ಬೀಗ ಹಾಕಿದ್ದಾರೆ,  ಇದರಿಂದ ವಾಡರ್್ನ ಜನತೆ ಹಾಗೂ ದನ ಕರುಗಳಿಗೂ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದರು.
ದಿನಕೂಲಿಗಾಗಿ ಕೆಲಸ ಮಾಡುವ ನಾವು ನೀರನ್ನು ತರುವುದಕ್ಕಾಗಿಯೇ ದಿನವನ್ನು ಮುಡುಪಾಗಿಟ್ಟರೆ ಆ ದಿನದ ನಮ್ಮ ಕೂಲಿಯೂ ಹೋಗುತ್ತದೆ ಎಂದರಲ್ಲದೆ ಪುರಸಭೆಯಿಂದ ನಮ್ಮ ವಾಡರ್್ಗೆ ಟ್ಯಾಂಕರ್ನಲ್ಲಿ ನೀರು ಬರುತ್ತಿದೆ, ಆದರೆ ಟ್ಯಾಂಕರ್ ನೀರು ರಾತ್ರಿ 12ರ ಸುಮಾರಿನಲ್ಲಿ ಅದರಲ್ಲೂ ಹದಿನೈದು ದಿನಕ್ಕೊಮ್ಮೆ ಬರುತ್ತದೆ, ಬಂದರೂ ಟ್ಯಾಂಕರ್ನಲ್ಲಿ ಬರುವ ನೀರು ಒಂದು ಮನೆಗೆ ಹತ್ತು ಬಿಂದಿಗೆಯಷ್ಟು ಮಾತ್ರ ದೊರಕುತ್ತಿದೆ ಈ ಬಗ್ಗೆ 6ನೇ ವಾಡರ್್ನ ಸದಸ್ಯೆ ಧರಣಿರವರಿಗೆ ತಿಳಿಸಿದರೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಲಿಂಗಯ್ಯನಪಾಳ್ಯದ ಪುಟ್ಟಮ್ಮ ಪ್ರತಿಭಟನೆಯಲ್ಲಿ ಮಾತನಾಡಿ ಮೂರು ತಿಂಗಳಿನಿಂದಲೂ ನಾವು ನೀರಿಗಾಗಿ ಬೇರೆಯವರನ್ನು ಅವಲಂಬಿಸಬೇಕಾಗಿದೆ ಟ್ಯಾಂಕರ್ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲ, ರಾತ್ರಿ ವೇಳೆಯಲ್ಲಿ ನೀರು ಕಳುಹಿಸಿದರೆ ಜನರು ನಿದ್ರಿಸುತ್ತಿರುತ್ತಾರೆ, ಟ್ಯಾಂಕರ್ನಲ್ಲಿ ನೀರು ಬಂದಿದೆ ಎಂದು ತಿಳಿದವರು ಮಾತ್ರ ನೀರನ್ನು ಪಡೆಯುತ್ತಿದ್ದಾರೆ ಆದ್ದರಿಂದ ದಿನಕ್ಕೊಮ್ಮೆ ಟ್ಯಾಂಕರ್ನಲ್ಲಿ ನೀರು ಕೊಡಿ ಇಲ್ಲವಾದರೆ ಕೆಟ್ಟಿರುವ ಬೋರ್ ಸರಿಪಡಿಸಿ ನೀರು ಕೊಡಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಲಕ್ಕಣ್ಣ, ಸಿದ್ದರಾಮಯ್ಯ, ನಿಂಗಣ್ಣ, ಗಂಗಾಧರ್, ರವಿ, ಶಿವಮ್ಮ, ನಾಗಮಣಿ ಸೇರಿದಂತೆ ಆರನೇ ವಾಡರ್್ನ ನಾಗರೀಕರು ಉಪಸ್ಥಿತರಿದ್ದರು.

 
ಸೋಲಾರ್ ಗ್ರಾಮವಾಗಿ ಕುಪ್ಪೂರು ಗ್ರಾಮದ ಬಾಚಿಹಳ್ಳಿ
ಚಿಕ್ಕನಾಯಕನಹಳ್ಳಿ,ಆ.01 : ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗ್ರಾಮದ ಬಾಚಿಹಳ್ಳಿಯನ್ನು ಸೋಲಾರ್ ಗ್ರಾಮವನ್ನಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ಪರಿವತರ್ಿಸಿದೆ. 
  ಬಾಚಿಹಳ್ಳಿಯಲ್ಲಿರುವ 45 ಕುಟುಂಬಗಳಲ್ಲಿ 40 ಕುಟುಂಬಗಳಿಗೆ ಸೋಲಾರ್ ಅಳವಡಿಸಲಾಗಿದೆ .ಎಫ್.ಐ ಸೆಲ್ಕೋ ಸೋಲಾರ್ ಪ್ರೈವೆಟ್ ಲಿಮಿಟೆಡ್ ನಿಂದ ಸೋಲಾರ್ಗಳನ್ನು ಅಳವಡಿಸಲಾಗಿದ್ದು, ಕಂಪೆನಿಯವರು ಒಂದು ಕುಟುಂಬಕ್ಕೆ 1,300.ಅನುದಾನ ಒದಗಿಸಲಾಗಿದೆ. ಒಟ್ಟು 52,000.00 ಅನುದಾನ ನೀಡಲಾಗಿದೆ.
ಕಾರ್ಯಕ್ರಮವನ್ನು ಮೈಸೂರು ಧ.ಗ್ರಾ.ಯೋಜನೆಯ ಪ್ರಾದೇಶಿಕ ನಿದರ್ೆಶಕ ಶ್ರೀಹರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಚಿಹಳ್ಳಿ ಹಿರಿಯ ಮುಖಂಡರು ಜಯಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ,   ತಾ.ಪಂ.ಸದಸ್ಯ ಶಶಿಧರ್, ಕುಪ್ಪೂರು 636ನೇ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಸ್.ಎಲ್ ಶಾಂತಕುಮಾರ್, ತುಮಕೂರು  ಜಿಲ್ಲಾ ನಿದರ್ೇಶಕ ಪಿ.ಕೆ.ಪುರುಷೋತ್ತಮ್, ಯೋಜನಾಧಿಕಾರಿ ರೋಹಿತಾಕ್ಷ, ಮೇಲ್ವಿಚಾರಕರಾದ ನಾಗರಾಜ್.ಎ.ಎಸ್, ಹೈನುಗಾರಿಕಾಧಿಕಾರಿ ಗೋಪಿ,  ಮತ್ತು ಬಾಚಿಹಳ್ಳಿಯ ಸೇವಾಪ್ರತಿನಿಧಿ  ಉಷಾ ಮತ್ತು ವಲಯದ ಎಲ್ಲಾ ಸೇವಾಪ್ರತಿನಿಧಿಗಳು, ಗ್ರಾಮಾಸ್ಥರು ಹಾಜರಿದ್ದರು. 

ಹಾಲು ಪರೀಕ್ಷಕನ ಮೇಲೆ ಹಲ್ಲೆ
ಚಿಕ್ಕನಾಯಕನಹಳ್ಳಿ,ಆ.01 : ಹಂದನಕೆರೆ ಹಾಲು ಉತ್ಪಾದಕ ಸಹಕಾರ ಸಂಘದ ಹಾಲು ಪರೀಕ್ಷಕನ ಮೇಲೆ ಸಂಘದ ಕಾರ್ಯದಶರ್ಿ ಹಾಗೂ ಅಧ್ಯಕ್ಷ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾಗಿರುವ ಶ್ರೀನಿವಾಸ್ (29), ಕಾರ್ಯದಶರ್ಿ ನಾಗರಾಜು, ಅಧ್ಯಕ್ಷ ಭಂಡಾರಿನಾಯ್ಕ್ ಮಾಡುವ ಅವ್ಯವಹಾರಗಳ ಬಗ್ಗೆ ಸಾರ್ವಜನಿಕರಿಕೆ ತಿಳಿಸುತ್ತಾನೆಂದು ರಜೆ ಮೇಲೆ ತೆರಳಿದ್ದು ಅಲ್ಲಿಂದ ಬಂದ  ನಂತರ ಕೆಲಸಕ್ಕೆ ಸೇರಿಸಿಕೊಳ್ಳುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾಗಿರುವ ವ್ಯಕ್ತಿ ಶ್ರೀನಿವಾಸ್ ತಿಳಿಸಿದ್ದಾರೆ.
2009ರಿಂದಲೂ ಹಂದನಕೆರೆಯ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾರ್ಯದಶರ್ಿ ನಾಗರಾಜು ರೈತರಿಗೆ ಹಾಲಿನ ಅಳತೆಯಲ್ಲಿ ನಡೆಸುತ್ತಿದ್ದ ಮೋಸವನ್ನು ರೈತರಿಗೆ ತಿಳಿಸಿದ ವಿಷಯಕ್ಕಾಗಿ ಶ್ರೀನಿವಾಸ್ನನ್ನು ಒಂದು ತಿಂಗಳ ಕಾಲ ಕೆಲಸದಿಂದ ತೆಗೆದು ಹಾಕಲಾಗಿತ್ತು ನಂತರ ಪುನಹ ಕೆಲಸಕ್ಕಾಗಿ ಕಛೇರಿಗೆ ಹೋದಾಗ ಮನಬಂದಂತೆ ತಳಿಸಿದ್ದಾರೆ, ಪರಿಶಿಷ್ಟ ಜಾತಿಯವನಾಗಿ ನಾನೊಬ್ಬನೇ ಇಲ್ಲಿ ಕೆಲಸ ಮಾಡುತ್ತಿದ್ದು ನನ್ನನ್ನು ಕೆಲಸದಿಂದ ತೆಗೆಯಬೇಕು ಎಂಬ ಉದ್ದೇಶವಿತ್ತು ಎಂದು ಪತ್ರಿಕೆಯ ಮುಂದೆ ಅಳಲು ತೋಡಿಕೊಂಡರು. ಹಲ್ಲೆಗೊಳಗಾದ ಶ್ರೀನಿವಾಸ್ ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ದಲಿತ ವ್ಯಕ್ತಿ ಎಂದು ಹಲ್ಲೆ ಮಾಡಿರುವುದಕ್ಕೆ ದಲಿತ ಮುಖಂಡರುಗಳಾದ ವಕೀಲ ಜಯಣ್ಣ, ಲಿಂಗದೇವರು, ಮಲ್ಲಿಕಾಜರ್ುನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.