Saturday, May 24, 2014

ಲಂಚ ಕೊಡಲು ನಿರಾಕರಿಸಿದ್ದಕ್ಕೆ ಕಳೆಪೆ ಕಾಮಗಾರಿ ಎಂದು ವರದಿ ನೀಡಿರುವ ಅಧಿಕಾರಿಯ ವರ್ತನೆಯ ವಿರುದ್ದ ಆಕ್ರೋಶ.
 ಚಿಕ್ಕನಾಯಕನಹಳ್ಳಿ,ಮೇ.24 : 2013-14ನೇ ಸಾಲಿನ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿನ ಎನ್.ಆರ್.ಇ.ಜಿ. ಯೋಜನೆಯ ಕಡತ ಮತ್ತು ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋದನಾ ಸಂಯೋಜಕ ಕೇಳಿದ ಹಣ ನೀಡದೆ ಇದ್ದುದರಿಂದ ಯೋಜನೆಯಲ್ಲಿ ಜೆ.ಸಿ.ಬಿ ಬಳಕೆ, ಕಳಪೆ ಕಾಮಗಾರಿ, ಹಳೆಯ ಕಾಮಗಾರಿಗಳ ಮೂಲಕ ಕೆಲಸ ನಿರ್ವಹಿಸಲಾಗಿದೆ ಎಂದು ಸಕರ್ಾರಕ್ಕೆ ತಪ್ಪು ವರದಿ ಸಲ್ಲಿಸಿದ್ದಾರೆ ಎಂದು ತಾ.ಪಂ..ಸದಸ್ಯ ಎ.ಬಿ.ರಮೇಶ್ಕುಮಾರ್ ಆರೋಪಿಸಿದರು.
  ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟಿಕೆರೆ ಗ್ರಾಮ ಪಂಚಾಯ್ತಿ ಎಂ.ಜಿ.ಎನ್.ಆರ್.ಜಿ. ಕಾಮಗಾರಿಗಳ ತನಿಖೆಗೆಂದು ಬಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಮಂಜುನಾಥ್ ಪಾಟೀಲ್ ಎಂಬುವರು ತನಿಖೆಗೆ ಬಂದಾಗ ಉತ್ತಮವಾದ ವರದಿ ನೀಡಲು ಐವತ್ತು ಸಾವಿರ ರೂ ಲಂಚ ಕೇಳಿದರು, ಲಂಚವನ್ನು ಕೊಡಲು ನಿರಾಕರಿಸಿದ್ದಕ್ಕೆ ಆ ಅಧಿಕಾರಿ ಸಕರ್ಾರಕ್ಕೆ ತಪ್ಪು ವರದಿ ನೀಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಇದೇ ಕಾಮಗಾರಿಯ  ಬಗ್ಗೆ ಫೆಬ್ರವರಿ 23ರಂದು ನಿವೃತ್ತ ಚೀಪ್ ಇಂಜನಿಯರ್ ಸುಲ್ತಾನ್ ಷರೀಪ್ ಆಗಮಿಸಿ ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟ ಉತ್ತಮವಾಗಿದೆ ಎಂದು ಸಕರ್ಾರಕ್ಕೆ ವರದಿ ನೀಡಿದ್ದಾರೆ, ಆದರೆ  ನಂತರ ಬಂದ ಅಂದರೆ ಫೆಬ್ರವರಿ 25 ಮತ್ತು 26ರಂದು ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋದನಾ ಸಂಯೋಜಕ ಆರ್.ಮಂಜುನಾಥ್ ಪಾಟೀಲ್ ನೇತೃತ್ವದ ತಂಡ ಶೆಟ್ಟೀಕೆರೆ ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆಗೆ ಬಂದು ಮಾಡಿದ ತನಿಖೆಯ ವರದಿಯಲ್ಲಿ  ಕಾಮಗಾರಿಗಳು ಕಳಪೆ ಮತ್ತು ಹಳೆಯದಾಗಿವೆ ಅಲ್ಲದೆ ಕಾಂಪೌಂಡ್ ನಿಮರ್ಾಣಕ್ಕೆ ಜೆ.ಸಿ.ಬಿ ಬಳಕೆ ಮಾಡಿ ಕೆಲಸ ನಿರ್ವಹಿಸಲಾಗಿದೆ ಎಂದು ವರದಿ ಸಲ್ಲಿಸಿ 21,45,181ರೂಗಳನ್ನು ವಸೂಲಿ ಮಾಡಿ ಸಕರ್ಾರಕ್ಕೆ ಜಮಾ ಮಾಡಲು ತಿಳಿಸಿದ್ದಾರೆ ಆದರೆ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿ ಕಟ್ಟಿರುವ ಶಾಲಾ ರಕ್ಷಣಾ ಗೋಡೆ, ತಡೆ ಗೋಡೆ ಸೇತುವೆ ಕಾಮಗಾರಿ ಇವುಗಳಿಗೆ ಯಾವುದೇ ಜೆ.ಸಿ.ಬಿ ಬಳಸದೆ ಕೂಲಿ ಕಾಮರ್ಿಕರಿಂದ ಕೆಲಸ ನಿರ್ವಹಿಸಲಾಗಿದೆ ಎಂದರಲ್ಲದೆ ನಿಮರ್ಿಸಿರುವ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿದೆ ಎಂದಿದ್ದಾರೆ.
ಸಕರ್ಾರಕ್ಕೆ ವರದಿ ಸಲ್ಲಿಸಿರುವ ವರದಿಯ ಪುಟ ಸಂಖ್ಯೆ 37ರಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನ ಮಾಡಲಾದ ಕಾಮಗಾರಿಗಳಲ್ಲಿ ಒಂದು ಶಾಲಾ ಕಾಂಪೌಂಡ್ ಕಾಮಗಾರಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾಮಗಾರಿಗಳು ಉತ್ತಮವಾಗಿ ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದ್ದು ಒಂದೇ ವರದಿಯಲ್ಲಿ ಅದೇ ಕಾಮಗಾರಿಗಳನ್ನು ಕಳಪೆ/ಹಳಯದು ಎಂದು ಒಂದು ಕಡೆ ತಿಳಿಸಿ, ಮತ್ತದೇ  ಕಾಮಗಾರಿಗಳನ್ನು ಉತ್ತಮ ಎಂದು ತಿಳಿಸಿರುವುದರಿಂದ ಇವರು ವರದಿಯ ಸತ್ಯಾ ಸತ್ಯತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ ಎಂದರಲ್ಲದೆ, ಅವರ ಅರ್ಹತೆ, ಅನುಭವದ ಬಗ್ಗೆಯೂ ಅನುಮಾನಗಳು ಹುಟ್ಟುತ್ತವೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಸಕರ್ಾರಕ್ಕೆ ವರದಿ ಸಲ್ಲಿಸಿರುವಂತೆ ಕೂಲಿ ಕಾಮರ್ಿಕರಿಗೆ ಕೆಲಸ ನೀಡದೆ ಕಾಮಗಾರಿಯ ಬುನಾದಿಯನ್ನು ಗುತ್ತಿಗೆದಾರರಿಂದ ಮತ್ತು ಜೆ.ಸಿ.ಬಿ ಯಂತ್ರೋಪಕರಣಗಳಿಂದ ಅನುಷ್ಠಾನ ಮಾಡಲಾಗಿದೆ ಎಂದು ವರದಿ ಸಲ್ಲಿಸಿದ್ದು ಈ ಬಗ್ಗೆ ಸ್ಥಳೀಯ ಕೂಲಿ ಕಾಮರ್ಿಕರನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲಿ ಎಂದು ಸವಾಲೆಸೆದರು.
ಶೆಟ್ಟಿಕೆರೆ ಗ್ರಾ.ಪಂ.ಅಧ್ಯಕ್ಷೆ ದಾಕ್ಷಾಯಿಣಿ ರಮೇಶ್ ಮಾತನಾಡಿ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಒಂದು ಕಡೆ ಕಳಪೆ ಎಂದು ಮತ್ತೊಂದು ಕಡೆ ಉತ್ತಮ ಎಂದು ಸಕರ್ಾರಕ್ಕೆ ವರದಿ ನೀಡಿರುವುದು  ಅಧಿಕಾರಿಗಳ ಸತ್ಯಕ್ಕೆ ದೂರವಾದ ವರದಿ ಎಂದಿರುವ ಅವರು,  ಕೆಲಸ ನಿರ್ವಹಿಸಿರುವ ಕಾಮಗಾರಿಗಳಿಗೆ ನಾಮಪಲಕ ಹಾಕಿದ್ದರೂ ಹಾಕಿಲ್ಲ ಎಂದು, ಜೆಸಿಬಿ ಬಳಸಲು ಅವಕಾಶವೆ ಇಲ್ಲದಿರುವಾಗ ಜೆಸಿಬಿ ಬಳಸಿದ್ದಾರೆಂದು ವರದಿ ನೀಡಿದ್ದಾರೆ, ಈ ರೀತಿ ಬೇಜವಬ್ದಾರಿ ವರದಿ ನೀಡಿದರೆ ಉತ್ತಮವಾಗಿ ಕೆಲಸ ಮಾಡುತ್ತಿರುವ, ಸಕರ್ಾರದ ಯೋಜನೆಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಲು ಶ್ರಮಿಸುತ್ತಿರುವ ಅನೇಕ ಗ್ರಾಮ ಪಂಚಾಯ್ತಿಗಳಿಗೆ ಮುಂದೆ ಕೆಲಸಗಳನ್ನೇ ಮಾಡಬಾರದು ಎಂಬ ನಿಧರ್ಾರಕ್ಕೆ ಬರಬೇಕಾದಂತಹ ಅನಿವಾರ್ಯತೆ ಎದುರಾಗುತ್ತದೆ ಎಂದರು.
ಶೆಟ್ಟಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಜಿ.ಎಂ.ನಾಗರಾಜು ಮಾತನಾಡಿ ಶೆಟ್ಟಿಕೆರೆ ಗ್ರಾ.ಪಂ.ನಲ್ಲಿ ಮಾಡಲಾಗಿರುವ ಕಾಮಗಾರಿಗಳ ಸ್ಥಳದಲ್ಲಿ ನಾಮಫಲಕ ಹಾಕಿರುವ ಬಗ್ಗೆ ಅವರ ವರದಿಯಲ್ಲೇ ಅನೇಕ ಪೋಟೋಗಳು ಸಾಕ್ಷಿ ಇದ್ದರೂ ನಾಮಫಲಕ ಹಾಕದೆ ಯೋಜನೆಯ ಕಾಯ್ದೆ ಉಲ್ಲಂಘಿಸಿದ್ದಾರೆಂದು ವರದಿ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Tuesday, May 20, 2014

ಕಟ್ಟ ಕಡೆಯ ವ್ಯಕ್ತಿಯೂ ಸಹಕಾರಿ ಬ್ಯಾಂಕ್ಗಳ ಸೇವೆಯನ್ನು ಪಡೆಯಬೇಕು
ಚಿಕ್ಕನಾಯಕನಹಳ್ಳಿ,ಮೇ.20: ಕಟ್ಟ ಕಡೆಯ ವ್ಯಕ್ತಿಯೂ ಸಹಕಾರಿ ಬ್ಯಾಂಕ್ಗಳ ಸೇವೆಯನ್ನು ಪಡೆದು ತನ್ನ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಡಿ.ಸಿ.ಸಿ.ಬ್ಯಾಂಕ್ ಸಣ್ಣಪುಟ್ಟ ಸಮಾಜದವರನ್ನು ಗುತರ್ಿಸಿ ಅವರನ್ನು ಆಥರ್ಿಕವಾಗಿ ಸದೃಢರನ್ನಾಗಿಸಲು ಮುಂದಾಗಿದೆ ಎಂದು ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲೂಕಿನ ಬಂಗಾರಗೆರೆ ತಾಂಡ್ಯದಲ್ಲಿ ಶ್ರೀ ಸೇವಾಲಾಲ್ ಸ್ವಸಹಾಯ ಸಂಘದವರು ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಅಲೆಮಾರಿ ಬುಡಕಟ್ಟುಗಳಾದ ದಕ್ಕಲಿಗರು, ದೊಂಬಿದಾಸರು, ಸಿಳ್ಳೇಕ್ಯಾತರು ಸೇರಿದಂತೆ ಹಮ್ಮಾಮ್ ಕೋಮಿನ ತಮ್ಮಾಮ್ ಜನರನ್ನು ಗುತರ್ಿಸಿ ಅವರು ಇಚ್ಚಿಸುವ ವ್ಯಾಪಾರ ವ್ಯವಹಾರಗಳನ್ನು ಮಾಡಲು ಸ್ವಸಹಾಯ ಸಂಘಗಳ ಮೂಲಕ ಹಣಕಾಸಿನ ನೆರವನ್ನು ನೀಡಿದ್ದು ಈ ಎಲ್ಲಾ ಸಮಾಜದವರು ನಿಷ್ಠೆಯಿಂದ ಸಾಲವನ್ನು ಮರುಪಾವತಿ ಮಾಡಿ ತಮ್ಮ ವ್ಯವಹಾರಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವ ಮೂಲಕ ಬ್ಯಾಂಕ್ನ ಬೆಳವಣಿಗೆಗೂ ಸಹಕರಿಸುತ್ತಿದ್ದಾರೆ ಎಂದರು.
ಬಂಗಾರಗೆರೆ ತಾಂಡ್ಯದಲ್ಲಿನ ಇಪ್ಪತ್ತು ಜನ ಸದಸ್ಯರಿರುವ ಸ್ವಸಹಾಯ ಸಂಘಕ್ಕೆ ಇಲ್ಲಿಯವರೆಗೂ ಐದು ಲಕ್ಷ ರೂ ಸಾಲ ನೀಡಿದ್ದು ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡರೆ ಆ ಸಂಘಗಳಿಗೂ ಸಾಲ ಸೌಲಭ್ಯ ನೀಡುವುದಾಗಿ ತಿಳಿಸಿದರು, ಆಲದಕಟ್ಟೆ ತಾಂಡ್ಯದ ಸೇವಾಲಾಲ್ ಸಂಘವೂ ಇದೇ ರೀತಿ ಉತ್ತಮ ಪ್ರಗತಿ ಹೊಂದಿದ್ದರಿಂದ ಆ ಸಂಘಕ್ಕೆ ಡಿ.ಸಿ.ಸಿ.ಬ್ಯಾಂಕ್ ಉಚಿತವಾಗಿ ಸೇಫ್ ಲಾಕರ್ನ್ನು ನೀಡಿದೆ ಎಂದರಲ್ಲದೆ, ತಾಲೂಕಿನಲ್ಲಿರುವ ಸ್ವಸಹಾಯ ಸಂಘಗಳಿಗೆ 13 ಕೋಟಿ ರೂಗಳಷ್ಟು ಸಾಲ ನೀಡಲಾಗಿದೆ ಎಂದು ಎಸ್.ಆರ್.ರಾಜ್ಕುಮಾರ್ ತಿಳಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯಕ್ ಮಾತನಾಡಿ, ಲಂಬಾಣಿ ಜನಾಂಗದ ಬಾಂಧವರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು, ಹಿಂದೆ ಮಕ್ಕಳಿಗೆ ಆಸ್ತಿ ಮಾಡಬೇಕೆಂಬ ಕಾಲ ಒಂದಿತ್ತು, ಈಗ ಮಕ್ಕಳನ್ನೇ ಆಸ್ತಿ ಮಾಡುವ ಕಾಲ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರಲ್ಲದೆ, ಸಮಾಜದ ಬಡ ಬಂಧುಗಳು ಸಕರ್ಾರಿ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ಪಡೆಯುವ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸೇವಾಲಾಲ್ ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಈ ಊರಿಗೆ ನ್ಯಾಯಬೆಲೆ ಅಂಗಡಿ ಮುಂಜೂರು ಮಾಡಿಸಬೇಕೆಂದು ಒತ್ತಾಯಿಸಿದರು.
ತಾ.ಪಂ.ಸದಸ್ಯೆ ಚೇತನ ಗಂಗಾಧರ್ ಮಾತನಾಡಿ ಇಲ್ಲಿಗೆ ಅಗತ್ಯವಿರುವ ಕುಡಿಯುವ ನೀರಿನ ಸೌಲಭ್ಯ, ರಸ್ತೆ, ಮುಜರಾಯಿ ಇಲಾಖೆಯಿಂದ ದೇವಸ್ಥಾನ ನಿಮರ್ಾಣ, ತಾಂಡ್ಯಕ್ಕೊಂದು ಸಮುದಾಯ ಭವನ, ಬಡವರಿಗೆ ಉಚಿತ ನಿವೇಶನ ನೀಡುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಗ್ರಾ.ಪಂ.ಯಿಂದ ಮಾತ್ರ ಸಾಧ್ಯ ಆದ್ದರಿಂದ ಇ.ಓ.ರವರು ಈ ಬಗ್ಗೆ ಹೆಚ್ಚು ಗಮನ ನೀಡಿ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸುವ ಇಚ್ಚಾಶಕ್ತಿಯನ್ನು ತೋರಬೇಕೆಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಬರಗೂರು ಬಸವರಾಜು, ಬರಗೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಬಿ.ಎನ್.ನಾಗರಾಜು, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ, ಮ್ಯಾನೇಜರ್ ಟಿ.ಎನ್.ನಾಗರಾಜು, ವಿ.ಎಸ್.ಎಸ್.ಎನ್. ಸಿ.ಇ.ಓ. ಬಿ.ಸಣ್ಣಕರಿಯಪ್ಪ, ನಿದರ್ೇಶಕ ಜಾಫರ್ ಸಾಧಿಕ್ ಸೇರಿದಂತೆ ಹಲವರಿದ್ದರು.
ಸಮಾರಂಭದಲ್ಲಿ ವಕೀಲ ಯತೀಶ್ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶಿಕ್ಷಕ ರಂಗನಾಥ್ ಸ್ವಾಗತಿಸಿದರು.

ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ವರ ರಸ್ತೆ ಅಪಘಾತದಲ್ಲಿ ಮರಣ
 ಚಿಕ್ಕನಾಯಕನಹಳ್ಳಿ,ಮೇ.20: ಮದುವೆಯ ಲಗ್ನಪತ್ರಿಕೆ ವಿತರಿಸಿಸಲು ಹೋಗಿದ್ದ ವರ ತನ್ನದಲ್ಲದ ತಪ್ಪಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡುರಾತ್ರಿಯಲ್ಲಿ ನಡೆದಿದೆ.
 ತಾಲೂಕಿನ ಸಾಲಕಟ್ಟೆ ಕ್ರಾಸ್ ಮತ್ತು ಮುದ್ದೇನಹಳ್ಳಿ ಗೇಟ್ ಮಧ್ಯೆ ನಡು ರಸ್ತೆಯಲ್ಲಿ  ಕೆಟ್ಟು ನಿಂತಿದ್ದ ಲಾರಿಗೆ ಬೈಕ್ನಲ್ಲಿ ಬಂದ ದೊಡ್ಡ ಬಿದರೆ ತೋಟದ ಮನೆ ವಾಸಿ ಡಿ.ಎನ್.ಸೋಮಶೇಖರಯ್ಯ ಉರುಫ್ ಸುರೇಶ್ ಮತ್ತು ಹೊಸಹಟ್ಟಿಯ ನಿಂಗರಾಜು ಢಿಕ್ಕಿ ಹೊಡೆದ ಪರಿಣಾಮ ಡಿ.ಎನ್.ಸೋಮಶೇಖರ್ ಸಾವನ್ನಪ್ಪಿದ್ದರೆ ನಿಂಗರಾಜು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಸೋಮಶೇಖರಯ್ಯನ ಮದುವೆ ತನ್ನ ಅಕ್ಕನ ಮಗಳೊಂದಿಗೆ ಇದೇ 24, 25ರಂದು ನಡೆಯಬೇಕಿತ್ತು, ಈ ಸಂಬಂಧ ತನ್ನ ಬಂಧುಬಳಗದವರಿಗೆ ಲಗ್ನ ಪತ್ರಿಕೆಯೊಂದಿಗೆ ಕೊಡಲು  ತನ್ನ ಸ್ನೇಹಿತನೊಂದಿಗೆ ತೆರಳಿದ್ದ ಮೃತ ಸೋಮಶೇಖರ್, ಸೋಮವಾರ ರಾತ್ರಿ ತಡ ರಾತ್ರಿ ಮುದ್ದೇನಹಳ್ಳಿ ಗೇಟ್ ಬಳಿ ಬರುತ್ತಿರುವಾಗ ರಸ್ತೆ ಮಧ್ಯೆ ಲಾರಿಯೊಂದ ಕೆಟ್ಟು ನಿಂತಿತ್ತು, ಈ ಬಗ್ಗೆ  ಯಾವುದೇ ರೀತಿಯ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳದ ಲಾರಿ ಡ್ರೈವರ್ನ ಅಜಾಗರೂಕತೆಯಿಂದಾಗಿ  ಬೈಕ್ನ ಸವಾರ ಸೋಮಶೇಖರ್ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೋರ್ವ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಲಾರಿ ಚಾಲಕ ಘಟನೆ ನಡೆಯುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾನೆ.

ಎಸ್.ಪಿ.ಎಂ.ರವರನ್ನು ಗೆಲ್ಲಿಸುವ ಮೂಲಕ ಮತದಾರರು ಪ್ರೌಢಿಮೆ ಮೆರೆದಿದ್ದಾರೆ. :  ಡಾ.ಡಿ.ಆರ್. ನಾಗೇಶ್ 
ಚಿಕ್ಕನಾಯಕನಹಳ್ಳಿ,ಮೇ.20: ತುಮಕೂರು ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಬ್ಯಾಥರ್ಿ ಎಸ್.ಪಿ.ಮುದ್ದಹನುಮೇಗೌಡರನ್ನು ಗೆಲ್ಲಿಸುವ ಮೂಲಕ ಪ್ರೌಢಿಮೆ ಮೆರೆದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕೃಷಿ ಮತ್ತು ಕೃಷಿ ಕಾಮರ್ಿಕ ಘಟಕದ ಬೆಂಗಳೂರು ವಿಭಾಗದ ಪ್ರಧಾನ ಕಾರ್ಯದಶರ್ಿ ಡಾ.ಡಿ.ಆರ್. ನಾಗೇಶ್ ಹೇಳಿದ್ದಾರೆ.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಎಂ.ಸಿದ್ದರಾಮಯ್ಯನವರ ಸಮಾಜಿಕ ಕಳಕಳಿ, ಪಕ್ಷದ ರಾಜ್ಯಾಧ್ಯಕ ಡಾ.ಜಿ.ಪರಮೇಶ್ವರ ರವರ ಸಂಘಟನಾ ಚಾತುರ್ಯ ಹಾಗೂ ಅಬ್ಯಾಥರ್ಿ ಎಸ್.ಪಿ.ಎಂ.ಯವರ ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಮತದಾರರು ಮನಸೋತು ಹೆಚ್ಚಿನ ಮತ ನೀಡಿ ಅವರ ಜಯಕ್ಕೆ ಕಾರಣರಾಗಿದ್ದಾರೆ ಎಂದಿದ್ದಾರೆ.
ಸ್ಪಧರ್ೆ ಚುನಾವಣೆಯ ಸಂದರ್ಭಕ್ಕೆ ಸೀಮಿತವಾಗಿರಬೇಕು, ಗೆದ್ದ ನಂತರ ಕ್ಷೇತ್ರದ ಎಲ್ಲಾ ಜನರ ಪ್ರತಿನಿಧಿಯಾಗುವುದರಿಂದ ಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ದುಡಿಯಬೇಕು ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿನ ಮತದಾರರು ಯಾವುದೇ ರಾಗ ದ್ವೇಷಗಳಿಗೆ ಬಲಿಯಾಗದೆ ಸಹೌರ್ಧತೆಯಿಂದ  ಅಭಿವೃದ್ದಿಯ ನಿಟ್ಟಿನಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.




ಗ್ರಾ.ಪಂ. ಸದಸ್ಯರಿಗೆ ಮಾಹಿತಿ ನೀಡದ ಪಿ.ಡಿ.ಓ.: ಕಾಮಗಾರಿ ದಾಖಲೆಗಳ ಬಗ್ಗೆ ತನಿಖೆಗೆ ಒತ್ತಾಯ.
ಚಿಕ್ಕನಾಯಕನಹಳ್ಳಿ : ಗೋಡೆಕೆರೆ ಗ್ರಾಮ ಪಂಚಾಯ್ತಿಯಲ್ಲಿ 2010-11ರಿಂದ 2013-14ರವರೆಗೆ ನಡೆದಿರುವ ಎನ್.ಆರ್.ಇ.ಜಿ ಕಾಮಗಾರಿ, ಶೌಚಾಲಯ ಮತ್ತು ಪಂಚಾಯ್ತಿ ಕರವಸೂಲಾತಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು  ಪಂಚಾಯ್ತಿ ಸದಸ್ಯರೇ ತನಿಖೆಗೆ  ಒತ್ತಾಯಿಸಿದ್ದಾರೆ.
ಪಟ್ಟಣದ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸದಸ್ಯರುಗಳು, ಗೋಡೆಕೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಪಂಚಾಯ್ತಿಯ ಪಿಡಿಓ ಕೋಕಿಲರವರಲ್ಲಿ ಕೇಳಿದರೂ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ, ಈ ಬಗ್ಗೆ ಪಂಚಾಯ್ತಿಯಲ್ಲಿನ ಹಾಲಿ ಸದಸ್ಯರಿಗೆ ಅವಮಾನ ಮಾಡಿರುವುದಲ್ಲದೆ,  ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರವ ಬಗ್ಗೆ ಅನುಮಾನ ಬರುವಂತೆ ವತರ್ಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2010-11ನೇ ಸಾಲಿನಿಂದ 2013-14ನೇ ಸಾಲಿನವರೆ ಗ್ರಾಮ ಪಂಚಾಯ್ತಿಗೆ ಸಕರ್ಾರದಿಂದ ಬಂದ ಹಣದ ಲೆಕ್ಕ ಹಾಗೂ ಈ ಹಣ ಯಾವ ಯಾವ ಬಾಬ್ತಿಗೆ ಖಚರ್ು ಮಾಡಲಾಗಿದೆ ಎಂಬುದರ ಬಗ್ಗೆ ಪಂಚಾಯ್ತಿ ಪಾಸ್ಪುಸ್ತಕದ ನಕಲಿನ ಸಮೇತ ಮಾಹಿತಿ ನೀಡಲು ಕೋರಲಾಗಿತ್ತು ಈ ಬಗ್ಗೆ ಅವರು ಯಾವುದೇ ಮಾಹಿತಿ ನೀಡುತ್ತಿಲ್ಲ,  ಅಲ್ಲದೆ ಪಂಚಾಯ್ತಿ ಬಿಲ್ ಕಲೆಕ್ಟರ್ 2010ರಿಂದ 2013-14ನೇ ಸಾಲಿನವರೆಗೆ ವಸೂಲಿ ಮಾಡಿರುವ ಕಂದಾಯದ ವಿವರವನ್ನು ನೀಡುವಂತೆ  ಮನವಿ ಮಾಡಲಾಗಿತ್ತು ಆದರೆ ಪಿಡಿಓರವರು ಈ ಬಗ್ಗೆಯೂ ಸದಸ್ಯರಿಗೆ ಮಾಹಿತಿ ನೀಡಿಲ್ಲವೆಂದು ಆಪಾದಿಸಿದ್ದಾರೆ. 
 ಈ ಬಗ್ಗೆ ಮಾಚರ್್ 11ರ 2014 ಹಾಗೂ ಏಪ್ರಿಲ್ 28 2014ರಂದು ಪುನಃ ಮನವಿ ಸಲ್ಲಿಸಿ 13ನೇ ಹಣಕಾಸು ಯೋಜನೆಯಲ್ಲಿ 2010ರಿಂದ 2014ರವರೆಗೆ ಶೌಚಾಲಯ ಮತ್ತು ಕಾಮಗಾರಿಗಳಿಗೆ ಬಿಡುಗಡೆ ಮಾಡಿರುವ ಹಣಕಾಸಿನ ವಿವರಗಳನ್ನು ಫಲಾನುಭವಿಗಳ ವಿಳಾಸದೊಂದಿಗೆ ಮಾಹಿತಿ ಕೇಳಿದರೂ ಸಹ ಮಾಹಿತಿ ನೀಡಿರುವುದಿಲ್ಲ, ಪಿಡಿಓರವರನ್ನು ಈ ಬಗ್ಗೆ ಮೌಖಿಕವಾಗಿ ಕೇಳಿದಾಗ ಅಧ್ಯಕ್ಷರು ಪಂಚಾಯ್ತಿ ರೆಕಾಡರ್್ಗಳನ್ನು ಪಂಚಾಯ್ತಿ ಕಛೇರಿಯಲ್ಲಿಯೇ ಪರಿಶೀಲಿಸಲು ತಿಳಿಸಿರುತ್ತಾರೆ ಎಂದು ಹೇಳುತ್ತಾರೆ ಆದರೆ ಸದಸ್ಯರು ಕೇಳುವ ಯಾವುದೇ ದಾಖಲೆಗಳನ್ನು ನೀಡದೆ ಬೇಜವ್ದಾರಿಯಿಂದ ನಡೆದುಕೊಳ್ಳುತ್ತಾರೆಂದು ಆರೋಪಿಸುತ್ತಾರೆ.  
ಪಿಡಿಓರವರು ಯಾವುದೇ ಮಾಹಿತಿ ಹಾಗೂ ದಾಖಲೆಗಳನ್ನು ನೀಡುತ್ತಿಲ್ಲವೆಂದಿರುವ ಸದಸ್ಯರುಗಳಾದ ಗೋ.ನಿ.ವಸಂತಯ್ಯ ಜಿ.ಪಿ.ಲೋಕೇಶ್, ತಿಮ್ಮೇಗೌಡೃ, ಬಸವಲಿಂಗಯ್ಯ ಪಂಚಾಯ್ತಿಯಲ್ಲಿನ ಎಲ್ಲಾ ವ್ಯವಹಾರಗಳ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಅಲ್ಲದೆ ಹಾಲಿ ಸದಸ್ಯರಿಗೆ ಲಿಖಿತವಾಗಿ ಮಾಹಿತಿ ನೀಡದೆ ಇರುವ ಪಿಡಿಓರವರ ಮೇಲೆ ಕ್ರಮ ಕೈಗೊಳ್ಳುವಂತೆ  ಸಕರ್ಾರವನ್ನು ಒತ್ತಾಯಿಸಿದ್ದಾರೆ.

Saturday, May 17, 2014


ಲೋಕಸಭಾ ಫಲಿತಾಂಶ: ಜೆ.ಸಿ.ಎಂ, ಕೆ.ಎಸ್.ಕೆ. ಹೊಂದಾಣಿಕೆ ಮತದಾರನಿಗೆ ಸಮಾಧಾನ ತಂದಿಲ್ಲವೆ...?!
  • ಶಾಸಕ ಸಿ.ಬಿ.ಎಸ್. ನಿರೀಕ್ಷೆಗಳು ಹುಸಿಯಾಯಿತೇ ?
  • ಎರಡು ಜಾತಿಗಳ ನಡುವಿನ ರಾಜಕಾರಣ ಇನ್ನು ಇತಿಹಾಸವೇ ?
  • ಅಹಿಂದ ಜಾತಿಗಳು ನಿಣರ್ಾಯಕವೆನಿಸುತ್ತವಯೇ 
  • ಕಾಂಗ್ರೆಸ್ಗೆ ಇಲ್ಲಿ ನಿಜವಾದ ಶಕ್ತಿ ಇದೆಯೇ 
  • ಈ ಶಕ್ತಿಯನ್ನು ಚುನಾವಣೆಯ ಸಂದರ್ಭದಲ್ಲಿ ನಾಯಕರೇ ಹಾಳು ಮಾಡುತ್ತಿದ್ದರೆ?

ಚಿಕ್ಕನಾಯಕನಹಳ್ಳಿ,ಮೇ: ಈ ಭಾರಿಯ ಲೋಕಸಭಾ ಚುನಾವಣೆ ಫಲಿತಾಂಶ ಈ ವಿಧಾನ ಸಭಾ ಕ್ಷೇತ್ರದ ಮಟ್ಟಿನ ಹಲವು ವಿದ್ಯಮಾನಗಳಿಗೆ ಜನಾದೇಶ ನೀಡಿದೆ. 
ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ, ಜನಪ್ರತಿನಿಧಿಗಳಾಗ ಬಯಸುವವರು ಕೇವಲ ತಮ್ಮ ಜಾತಿಗಳನ್ನಷ್ಟೇ ತೃಪ್ತಿ ಪಡಿಸಿದರೆ ಸಾಕಾಗುವುದಿಲ್ಲ, ಬೇರೆ ಜಾತಿಯ ಮತದಾರರನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳಬೇಕಿದೆ ಎಂಬ ಸಂದೇಶವನ್ನು ಸ್ಪಷ್ಟ ಪಡಿಸಿದೆ.  ಅಲ್ಲದೆ  ಶಾಸಕ ಸಿ.ಬಿ.ಸುರೇಶ್ ಬಾಬು ಇಟ್ಟ ನಿರೀಕ್ಷೆ ಹುಸಿಯಾಗಿರುವುದು, ಮಾಜಿ ಶಾಸಕರಿಬ್ಬರು ಒಂದೇ ಪಕ್ಷದಡಿಗೆ ಬಂದಿರುವುದಕ್ಕೆ ಅಸಮಧಾನ ತೋರ್ಪಡಿಸಿರುವುದು, ಕಾಂಗ್ರೆಸ್ ಪಕ್ಷದ ಬಲವರ್ಧನೆಗೊಂಡಿರುವುದು, ಮತದಾರರ ಎಲ್ಲಾ ಚುನಾವಣೆಗಳಲ್ಲೂ ಒಂದೇ ರೀತಿ ಆಲೋಚಿಸಿದೆ ತನ್ನ ಪ್ರಜ್ಞಾವಂತಿಕೆಯನ್ನು ಮೆರೆದಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.
 ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದೀಚೆಗಿನ ಚುನಾವಣೆಗಳನ್ನು ಹೋಲಿಕೆ ಮಾಡಿದರೆ ಇರುವ ಇಬ್ಬರಲ್ಲಿ ಯಾರು ಹಿತವರು ಎಂಬಂತೆ ಆಯ್ಕೆ ಮಾಡುತ್ತಿದ್ದರು, ಮತ್ತು ಇಲ್ಲಿ ಆಯ್ಕೆಯಾಗುತ್ತಿದ್ದು ಒಮ್ಮೆ ಕುರುಬರು ಗೆದ್ದರೆ ಮತ್ತೊಮ್ಮೆ ಲಿಂಗಾಯಿತರು ಗೆಲ್ಲುತ್ತಿದ್ದರು,  ಇವರಿಬ್ಬರನ್ನು ಬಿಟ್ಟರೆ ಬೇರೆಯವರಿಗೆ ಈ ಕ್ಷೇತ್ರದಲ್ಲಿ ಅವಕಾಶವೇ ಇಲ್ಲ, ಮಿಕ್ಕ ಜಾತಿಗಳಿರುವುದು ಕೇವಲ ಮತ ಹಾಕಲಿಕ್ಕೆ ಹೊರತು ಆಯ್ಕೆ ಯಾಗುವುದಕ್ಕಲ್ಲವೇನೋ ಎಂಬಂತೆ ತೋರುತ್ತಿದ್ದು ಆದರೆ 2013ರ ವಿಧಾನ ಸಭಾ ಚುನಾವಣೆಯ ನಂತರ ಆ ಕಾಲ ಬದಲಾಗಿದೆ, ಈ ವಾದವನ್ನು 2014ರ ಲೋಕಸಭಾ ಚುನಾವಣೆ ಇನ್ನಷ್ಟು ಬಲಪಡಿಸಿದೆ. ಇಲ್ಲಿನ ನಾಯಕರು ತಮಗೆ ನಿರ್ಣಯಕ ಮತಗಳೆಂದರೆ, ಅಹಿಂದ ವರ್ಗವೂ ಸೇರಿದಂತೆ ಒಕ್ಕಲಿಗ ಮತದಾರರಿಗೂ ಮನ್ನಣೆ ನೀಡಬೇಕೆಂಬ ಆದೇಶವನ್ನು ನೀಡಿದೆ.  
 ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷಕ್ಕೆ  ನಿರೀಕ್ಷೆಗಿಂತ ಹೆಚ್ಚಿನ ಮುನ್ನಡೆ ಪಡೆದಿರುವುದು ಕಾಂಗ್ರೆಸಿಗರಲ್ಲಿ ಅದರಲ್ಲೂ ಯುವ ಕಾರ್ಯಕರ್ತರಲ್ಲಿ ಭಾರಿ ಉತ್ಸಹವನ್ನು ಮೂಡಿಸಿದ್ದರೆ, ಬಿ.ಜೆ.ಪಿ.ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ, ಇಲ್ಲಿನ ಬಿ.ಜೆ.ಪಿ. ಲೋಕಸಭಾ ಚುನಾವಣೆಗೂ ಮುನ್ನ  ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಪಕ್ಷವನ್ನು ಬಲಪಡಿಸುತ್ತಿದ್ದರು ಆದರೆ ಕೆ.ಜೆ.ಪಿ. ಬಿ.ಜೆ.ಪಿ. ರಾಜ್ಯದಲ್ಲಿ ವಿಲೀನಗೊಂಡ ಬಳಿಕ ಇಲ್ಲಿಯೂ ವಿಲೀನಗೊಂಡವು,  ಕೆ.ಜೆ.ಪಿ.ಯಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ,  ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು. ಸೇರ್ಪಡೆ ಕಾರ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಾದ್ದರಿಂದ ಸಂಧಾನ ಕಾರ್ಯ ಸ್ಪಷ್ಟವಾಗಿ ನಡೆಯದೆ ಇದ್ದುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು, ಕಾರಣ ಹುಳಿಯಾರು, ಬುಕ್ಕಾಪಟ್ಟಣ ಭಾಗದಲ್ಲಿ ಕೆ.ಎಸ್.ಕೆ. ಪರವಾದ ಬೆಂಬಲಿಗರಿಗೂ, ಉಳಿದ ಭಾಗದಲ್ಲಿನ ಜೆ.ಸಿ.ಎಂ. ಅಭಿಮಾನಿಗಳಿಗೂ ತೆರದ ಹೃದಯದ ಹೊಂದಾಣಿಕೆ ಯಾಗದೆ,  ತೆರೆಯ ಮರೆಯ ಗೊಂದಲಗಳು ಹಾಗಿಯೇ ಉಳಿದುಕೊಂಡವು,  ಲೋಕಸಭಾ ಚುನಾವಣೆಯ ನಂತರ ಆ ಗೊಂದಲ ಇನ್ನಷ್ಟು ಜಾಸ್ತಿಯಾಯಿತು ಎನ್ನುತ್ತಾರೆ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತ ಧನಂಜಯ. 
  ಮತದಾರನೂ ಈ ಇಬ್ಬರ ಹೊಂದಾಣಕೆಿಯನ್ನು ನೇರವಾಗಿ ಒಪ್ಪಿಕೊಂಡಿಲ್ಲವೆಂಬುದನ್ನು ಈ ಚುನಾವಣೆಯಲ್ಲಿ ಅಲ್ಲಲ್ಲಿ ಕಂಡು ಬಂದಿತು. ಈ ಅಭಿಪ್ರಾಯ ಹೌದೇನೆ ಎಂಬಂತೆ ಫಲಿತಾಂಶವೂ ಬಂದಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಪಿ.ಮುದ್ದಹನುಮೇಗೌಡರಿಗೆ ಉಳಿದ ಅಬ್ಯಾಥರ್ಿಗಳಿಗಿಂತ 11.999 ಮತಗಳಷ್ಟು ಹೆಚ್ಚಿಗೆ ನೀಡುವ ಮೂಲಕ ಇದನ್ನು ಪುಷ್ಟಿಗೊಳಿಸಿದ್ದಾರೆ. 
ಈ ಚುನಾವಣೆಯಲ್ಲಿ ಬಿ.ಜೆ.ಪಿ. ಅಬ್ಯಾಥರ್ಿ ಜಿ.ಎಸ್.ಬಸವರಾಜು ಪಡೆದಿರುವ ಮತಗಳು 45.863 ಮತಗಳು ಮಾತ್ರ, ಈ ಅಂಕಿಯನ್ನು ನೋಡಿದರೆ ಜೆ.ಸಿ.ಎಂ. ಮತ್ತು ಕೆ.ಎಸ್.ಕೆ. ಹೊಂದಾಣಿಕೆ ಅಷ್ಟೇನು ಜಿ.ಎಸ್.ಬಿ. ಪರವಾಗಿ ಕೆಲಸ ಮಾಡಿಲ್ಲವೆನಿಸುತ್ತದೆ, ಕಾರಣ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಸಿ.ಎಂ. 49.620 ಮತಗಳನ್ನು ಪಡೆದಿದ್ದರು, ಕೆ.ಎಸ್.ಕಿರಣ್ಕುಮಾರ್ 29.150 ಮತಗಳನ್ನು ಪಡೆದಿದ್ದರು ಇವರಿಬ್ಬರ ಮತಗಳು ಸೇರಿಸಿದರೆ 78.770 ಮತಗಳಾಗುತ್ತವೆ ಆದರೆ ಇದರಲ್ಲಿ ಶೇ.60 ರಷ್ಟು  ಮತಗಳು ಜಿ.ಎಸ್.ಬಿ. ಬೀಳದಿರುವುದು ಇವರಿಬ್ಬರ ಹೊಂದಾಣಿಕೆ  ಮತದಾರರಿಗೂ  ಸಮಾಧಾನ ತಂದಿಲ್ಲವೆಂಬುದನ್ನು  ಸ್ಪಷ್ಟ ಪಡಿಸುತ್ತದೆ.
ಇನ್ನೂ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೆತ್ರ ವಾಲುತ್ತಿದೆ ಎಂಬುದಕ್ಕೆ ಈ ಫಲಿತಾಂಶ ಒಂದು ಒಳನೋಟವನ್ನು ಕೊಡುತ್ತದೆ. ಅಲ್ಲದೆ ಚುನಾವಣೆಯಲ್ಲಿ ವಿಜಿಯಿಯಾಗಿರುವ ಮುದ್ದುಹನುಮೇಗೌಡರು ಹಲವು ಸಲ ತಮ್ಮ ಪತ್ರಿಕಾಗೋಷ್ಠಿಗಳಲ್ಲಿ ಈ ಕ್ಷೇತ್ರವನ್ನು ನಾನು ದತ್ತು ಪಡೆಯುತ್ತೇನೆ, ಈ ಕ್ಷೇತ್ರಕ್ಕೆ ಆಗಬೇಕಾಗಿರುವ ಜನೋಪಯೋಗಿ ಕೆಲಸಗಳಿಗೆ ಒತ್ತುಕೊಟ್ಟಂತೆ  ಸಕರ್ಾರದ ಮಟ್ಟದಲ್ಲಿ ಕೆಲಸ ಮಾಡಿ ಹೆಚ್ಚಿನ ಅಭಿವೃದ್ದಿ ಕೆಲಸಕ್ಕೆ ಅನುದಾನ ತರುತ್ತೇನೆ.  ನನ್ನೆಲ್ಲಾ ಕಾರ್ಯಗಳಿಗೆ ಹೆಗಲಿಗೆ ಹೆಗಲು ಕೊಟ್ಟಿರುವ ಕಾಂಗ್ರೆಸ್ನ ಯುವ ಮುಂದಾಳು ಎಸ್.ಎನ್.ಸತೀಶ್ ಈ ಕ್ಷೇತ್ರದ ಅಭಿವೃದ್ದಿಗೆ ದುಡಿಯಲು ತೋರಿಸುತ್ತಿರುವ ಉತ್ಸಾಹ ಈ ಕ್ಷೇತ್ರವನ್ನು ಹೆಚ್ಚು ಹೆಚ್ಚು ಅಭಿವೃದ್ದಿ ಪಡಿಸಲು ಸ್ಫೂತರ್ಿ ನೀಡಿದೆ ಎನ್ನುವ ಮಾತಗಳನ್ನಾಡಿದ್ದಾರೆ.  ಈ ಎಲ್ಲವನ್ನು ಅವಲೋಕಿಸಿದಾಗ ಇಲ್ಲಿನ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಗೊಳುವ ವಿಶ್ವಾಸ ಮೂಡುತ್ತಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಗುಂಪುಗಾರಿಕೆ ಮಾಡದೆ ಒಟ್ಟಾಗಿ ಕೆಲಸ ಮಾಡಿದರೆ ಮುಂದೆ ಭವಿಷ್ಯವಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.
ಒಟ್ಟಾರೆ ಅತಿ ಹಿಂದುಳಿದ ತಾಲೂಕಿನ ಪಟ್ಟಿಗೆ ಸೇರಿರುವ ಈ ತಾಲೂಕಿಗೆ ಸಕರ್ಾರದಿಂದ ಹೆಚ್ಚಿನ ಅನುದಾನ ತಂದು, ಇಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿ ಪಡಿಸುವ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ, ಕುಡಿಯಲು ಶುದ್ದ ನೀರು ಕೊಡುವ ಕಾರ್ಯಗಳು ಸೇರಿದಂತೆ ಕ್ಷೇತ್ರದ  ಅಭಿವೃದ್ದಿಗೆ ಎಲ್ಲರೂ  ಒಂದಾಗಿ ಕೆಲಸ ಮಾಡಿದರೆ ಕ್ಷೇತ್ರಕ್ಕೂ ಒಳ್ಳೆಯದು ಜನರು ಮತ ಹಾಕಿದ್ದಕ್ಕೂ ಸಾರ್ಥಕವೆನಿಸುತ್ತದೆ ಆದರೆ ಆಗಾಗುತ್ತದೆಯೇ . . . ?!

ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು  ವಿಜಯೋತ್ಸವ

ಚಿಕ್ಕನಾಯಕನಹಳ್ಳಿ,: ತುಮಕೂರು ಲೋಕಸಭಾ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲೂ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು,  ಈ ಫಲಿತಾಂಶವೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ನಾಂದಿಯಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ನೆಹರು ಸರ್ಕಲ್ನಲ್ಲಿ ಎಂ.ಪಿ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಮುದ್ದುಹನುಮೇಗೌಡರು ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಬಸವರಾಜು, ಎಸ್.ಪಿ.ಮುದ್ದಹನುಮೇಗೌಡರಿಗೆ ಕ್ಷೇತ್ರದಲ್ಲಿ 11999 ಹೆಚ್ಚು ಮತ ಪಡೆದಿರುವುದು ನೋಡಿದರೆ ಮುಂದಿನ ಬಾರಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ, ಮುದ್ದಹನುಮೇವಗೌಡರೇ ನಮಗೆ ಶಾಸಕರು,  ಅವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಬಲಪಡಿಸಲು ಎಲ್ಲರೂ ಒಂದಾಗಿ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾಂಗ್ರೆಸ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು. 
ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಮಾತನಾಡಿ ಮುದ್ದಹನುಮೇಗೌಡರ ಪರವಾಗಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ರಾಜ್ಯದ ನಾಯಕತ್ವ ಹಾಗೂ ರಾಜ್ಯ ಸಕರ್ಾರ ಹಮ್ಮಿಕೊಂಡಿರುವ ಅಭಿವೃದ್ದಿ ಯೋಜನಾ ಕಾಯಕ್ರಮಗಳಿಗೆ ತಾಲ್ಲೂಕಿನ ಹಾಗೂ ಜಿಲ್ಲಯ ಜನತೆ ಕಾಂಗ್ರೆಸ್ನ್ನು ಬೆಂಬಲಿಸಿದ್ದಾರೆ ಎಂದರು. 
ಕಾಂಗ್ರೆಸ್ ಮುಖಂಡರಾದ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ಜನತೆ ಅತಿ ಹೆಚ್ಚು ಮತ ನೀಡಿ  ಕಾಂಗ್ರೆಸ್ ಅಭ್ಯಥರ್ಿ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯ ಯಳನಡು ಸಿದ್ದರಾಮಯ್ಯ, ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಕಾಂಗ್ರೆಸ್ ಮುಖಂಡರುಗಳಾದ ಹೊಸಹಳ್ಳಿ ಅಶೋಕ್, ಸಿ.ಎಂ.ಬೀರಲಿಂಗಯ್ಯ, ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ, ರಾಜಣ್ಣ, ತೀರ್ಥಪುರದ ವಾಸು, ವಕೀಲ ಪರಮೇಶ್ವರ್, ಸಜ್ಜಾದ್, ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತಿದ್ದರು.