Thursday, April 21, 2016


ತೋಟಕ್ಕೆ ಆಕಸ್ಮಿಕ ಬೆಂಕಿ
ಚಿಕ್ಕನಾಯಕನಹಳ್ಳಿ,ಏ.21 : ಪಟ್ಟಣದ ಹೊರವಲಯದ ಕೋಡಗಲ್ ರಸ್ತೆಯ ಎರಡು ತೋಟಗಳಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದರಿಂದ ಮಾವಿನ ತೋಟ ಹಾಗೂ ತೆಂಗಿನ ತೋಟದ ಮರಗಳು ಸಂಪೂರ್ಣ ಬೆಂದುಹೋಗಿದೆ.
ಕೋಡುಗಲ್ ರಸ್ತೆಯ ಮೇರುನಾಥ್ ಎನ್ನುವವರ ಮಾವಿನ ತೋಟದಲ್ಲಿನ 40 ಮಾವಿನ ಗಿಡ, 6 ಸಪೋಟದ ಗಿಡ ಬೆಂದು ಹೋಗಿವೆ, ತುಮಕೂರಿನ ಶಿವಣ್ಣ ಎನ್ನುವವರ ತೆಂಗಿನ ತೋಟಕ್ಕೂ ಬೆಂಕಿ ಹರಡಿ 10ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂದು ಹೋಗಿವೆ.
ಸಣ್ಣದಾಗಿ ಹತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ಕಾಡ್ಗಿಚ್ಚಿನಂತೆ ಹರಡಿ ಎರಡು ತೋಟಗಳ ಒಣ ಗರಿಗಳಿಗೆ ಹತ್ತಿಕೊಂಡು ಬೆಂದವು, ಕೂಡಲೇ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರಿಂದ ಅಗ್ನಿಶಾಮಕದವರು ಆಗಮಿಸಿ ಬೆಂಕಿ ನಂದಿಸಿದರು. ಸರಿಯಾದ ಸಮಯಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರಿಂದ ನೂರಾರು ತೆಂಗಿನ ಮರಗಳು ಬೆಂಕಿಯಿಂದ  ಉಳಿಯಿತು.


ಸಂಘ ಅಭಿವೃದ್ದಿಗೆ ಶ್ರಮಿಸಿ : ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ, : ಮಾಳಿಗೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ದಿಯಾಗಲು ಸಂಘ ಚಿನ್ನಾಭರಣ ಸಾಲ, ಅಡಮಾನಸಾಲ, ವಾಹನ ಸಾಲ ಹಾಗೂ ಪಿಗ್ಮಿ ಸಂಗ್ರಹಧಾರಣೆ ಮಾಡಿದರೆ ಆಥರ್ಿಕವಾಗಿ ಅಭಿವೃದ್ದಿಯಾಗಲಿದೆ ಎಂದು ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿರಾಜ್ಕುಮಾರ್ ಸಲಹೆ ನೀಡಿದರು.
ತಾಲ್ಲೂಕಿನ ಮಾಳಿಗೆಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಬೆಳೆ ಸಾಲದ ಸಾಲ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದ ಅವರು, ಸಂಘ ಪಡಿತರ ಧಾನ್ಯ, ಸೀಮೆಎಣ್ಣೆ ಮಾತ್ರ ವಿತರಿಸದರೆ ಅಭಿವೃದ್ದಿಯಾಗದು ಅದರ ಜೊತೆಗೆ ಸಾರ್ವಜನಿಕರು ಸದಾ ವ್ಯವಹಾರ ನಡೆಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಆಗಲೇ ಬ್ಯಾಂಕ್ನಲ್ಲಿ ವ್ಯವಹಾರ ಉತ್ತಮವಾಗಿ ನಡೆದು ಸಂಘವೂ ಅಭಿವೃದ್ದಿಯಾಗುತ್ತದೆ ಹಾಗೂ ಹೆಚ್ಚಿನ ಸಾಲಸೌಲಭ್ಯವನ್ನೂ ವಿತರಿಸಬಹುದು ಎಂದರಲ್ಲದೆ ಸಂಘದಲ್ಲಿ ಅಡಮಾನ ಹಾಗೂ ಚಿನ್ನಾಭರಣ ಸಾಲದ ಸೌಲಭ್ಯ ಮಾಡಿದರೆ ಜಿಲ್ಲಾ ಡಿಸಿಸಿ ಬ್ಯಾಂಕ್ ವತಿಯಿಂದ ಉಚಿತವಾಗಿ ತಿಜೋರಿ ಪೆಟ್ಟಿಗೆ (ಸೇಪ್ಲಾಕರ್)ನ್ನು ನೀಡುತ್ತೇವೆ ಹಾಗೂ ಸಂಘದ ಬೆಳವಣಿಗೆಗೆ ನಾವೂ ಪ್ರಯತ್ನ ಪಡುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದು ರೈತರ ಒಳಿತಿಗಾಗಿ ಅನೇಕ ರೈತಪರ ಯೋಜನೆಗಳನ್ನು ಜಾರಿಗೊಳಿಸಿದೆ, ಸಾಲ ಮಾಡಿ ಸಾವನ್ನಪ್ಪಿದ ರೈತರಿಗೆ ಕುಟುಂಬಗಳಿಗೆ ಹೊರೆಯಾಗಬಾರದೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜಣ್ಣನವರು ಸಾಲಮನ್ನಾ ಯೋಜನೆಯನ್ನೂ ಜಾರಿಗೆ ತಂದು ರೈತ ಪರ ಬ್ಯಾಂಕ್ ಆಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ಕೆಲಸ ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಳಿಗೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಮರುಳಸಿದ್ದಪ್ಪ, ಉಪಾಧ್ಯಕ್ಷ ನಾಗರಾಜನಾಯ್ಕ, ನಿದರ್ೇಶಕರುಗಳಾದ ಗುರುಮೂತರ್ಿ, ಶಿವಣ್ಣ, ಕುಮಾರ್, ಫಾಲಾಕ್ಷಮೂತರ್ಿ, ಮಹದೇವಮ್ಮ, ಕಮಲಮ್ಮ, ಷಡಕ್ಷರಿ, ವಿಶ್ವಣ್ಣ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.





ಚಿಕ್ಕನಾಯಕನಹಳ್ಳಿ ಹೋಂಗಾಡ್ಸರ್್ನ ಪ್ಲಟೂನ್ ಕಮಾಂಡರ್ ಮಂಜುನಾಥರಾಜ್ ಅರಸ್ರವರಿಗೆ ಬೆಂಗಳೂರಿನ ಜಯನಗರ ಅಗ್ನಿಶಾಮಕ ತರಬೇತಿ ಕಛೇರಿಯ ಆವರಣದಲ್ಲಿ ನಡೆದ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭದಲ್ಲಿ  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಳ್ಳಿ ಪದಕ ನೀಡಿ ಗೌರವಿಸಿದರು.









ಚಿಕ್ಕನಾಯಕನಹಳ್ಳಿ ಪಟ್ಟಣದ ಉಡೇವು ಬೀದಿಯಲ್ಲಿ ತಿಂಗಳಮಾಮನ ಆಚರಣೆ ಹಿನ್ನೇಲೆಯಲ್ಲಿ ಸಾರ್ವಜನಿಕರಿಗಾಗಿ ರಂಗೋಲಿ ಸ್ಪದರ್ೇಯನ್ನು ಏರ್ಪಡಿಸಲಾಗಿತ್ತು ರಂಗೋಲಿ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ಮಹಿಳೆಯರು.