Saturday, July 17, 2010

ಏಕದಶಿ ಜಾತ್ರೆಯ ಅಂಗವಾಗಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಜು.18: ಅನ್ನಪೂಣರ್ೇಶ್ವರಿ ಕಲಾ ಸಂಘದ ವತಿಯಿಂದ 12ನೇ ವರ್ಷದ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು ಇದೇ ಜುಲೈ 23ರ ಬೆಳಿಗ್ಗೆ 10-30ಕ್ಕೆ ಏರ್ಪಡಿಸಲಾಗಿದೆ ಎಂದು ಸಿ.ಎಸ್.ರೇಣುಕಮೂತರ್ಿ ತಿಳಿಸಿದ್ದಾರೆ.
ಸ್ಪಧರ್ೆಯನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಸಪ್ತತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಉದ್ಘಾಟನಾ ಸಮಾರಂಭವನ್ನು ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ್ಶಿವಾಚಾರ್ಯಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಅಬಕಾರಿ ಗುತ್ತಿಗೆದಾರ ಎನ್.ಜಿ.ನಾಗರಾಜು, ಕುಶಾಲ್ ಗಾಮರ್ೆಟ್ಸ್ ಮಾಲೀಕ ಶಾಂತಕುಮಾರ್ ಉಪಸ್ಥಿತರಿರುವರು.
ಸ್ಪಧರ್ೆಗೆ ಭಾಗವಹಿಸುವವರು ಜುಲೈ 22ಗುರುವಾರ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರನ್ನು ನೊಂದಾಯಿಸಿಬೇಕು ಹೆಚ್ಚಿನ ವಿವರಗಳಿಗಾಗಿ ಸಿ.ಎಸ್.ರೇಣುಕಮೂತರ್ಿ(9980163152), ಸಿ.ಎನ್.ರಾಮು(9742796001) ಮತ್ತು 9880311961, 9916815000 ಈ ದೂರವಾಣಿಗಳಲ್ಲಿ ಸಂಪಕರ್ಿಸಲು ಕೋರಿದ್ದಾರೆ.
ಕಲಾವಿದರನ್ನು ಬೆಳಸಿ ಕಲೆಯನ್ನು ಉಳಿಸಿ: ತಾ.ಪಂ.ಅಧ್ಯಕ್ಷ
ಚಿಕ್ಕನಾಯಕನಹಳ್ಳಿ,ಜು.18: ಇಂದಿನ ಎಲೆಕ್ಟ್ರಾನಿಕ್ ಯುಗದ ಮಧ್ಯೆಯೂ ರಂಗಕಲೆ ಮತ್ತು ಜನಪದ ಕಲೆಗಳು ಜೀವಂತವಾಗಿರುವುದು ವಿಶೇಷವಾಗಿದೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಗುಡ್ಡಗಾಡು ಪ್ರದೇಶವಾದ ಕೆಂಪರಾಯನಹಟ್ಟಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದುಳಿದ ಗ್ರಾಮಗಳಲ್ಲಿ ಕಾರ್ಯಕ್ರಗಳನ್ನು ನಡೆಸಿ ಯಶಸ್ವಿಯಾಗುತ್ತಿರುವ ಇಲಾಖೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಜಾನಪದ, ರಂಗಕಲೆಗಳನ್ನು ಉಳಿಸುವಲ್ಲಿ ಶ್ರಮಿಸುತ್ತಿರುವ ಜನಪದ ಕಲಾವಿದರ ಸಂಘದವರಿಗೆ ಮತ್ತು ಪಾರಂಪರಿಕ ಕಲೆಗಳನ್ನು ಉಳಿಸಿಕೊಂಡು ಬರುತ್ತಿರುವ ಯಾದವ ಜನಾಂಗವನ್ನು ಶ್ಲಾಘಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಶೋದಮ್ಮಮಹದೇವಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಿ ರಂಗಕಲೆ ಮತ್ತು ಜಾನಪದ ಕಲೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ದೊರೆತು ಅದರ ಉಳಿವಿಕೆಯನ್ನು ಬೆಳಸಬೇಕು ಎಂದರು.
ತಾಲೂಕು ಜಾನಪದ ಕಲಾವಿದರ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಮಾತನಾಡಿ ಸಂಘಟನೆಯನ್ನು ಬೆಳೆಸಲು ಕಲಾವಿದರೆಲ್ಲರೂ ಐಕ್ಯತೆಯಿಂದ ಸಹಕಾರ ನೀಡಬೇಕೆಂದು ಕೋರುತ್ತಾ ಜಾನಪದ ಕಲಾವಿದರ ಸ್ಥಿತಿಗತಿಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ರಾತ್ರಿ ಇಡೀ ನಡೆದ ಕಾರ್ಯಕ್ರಮದಲ್ಲಿ ಕೋಲಾಟ, ಸೋಬಾನಪದ, ದೇವರ ಪದಗಳು, ಚಟ್ಟಿಮೇಳ, ಕರಡೇವುವಾದ್ಯ, ಭಜನೆ, ಮೊದಲಾದ ಕಾರ್ಯಕ್ರಮಗಳು ನಡೆದವು.
ಸಮಾರಂಭದಲ್ಲಿ ಗ್ರಾ.ಪಂ ಸದಸ್ಯ ಎನ್.ಕುಮಾರಯ್ಯ, ಉಪನ್ಯಾಸಕ ಶಿವಲಿಂಗಮೂತರ್ಿ, ಎಂ.ರಂಗಯ್ಯ, ಸಿ.ಎನ್.ಹನುಮಯ್ಯ, ಮಹಾಲಿಂಗಯ್ಯ, ಸಿ.ಎಂ.ಸೋಮಶೇಖರ್, ಸಿ.ಎ.ಚಿಕ್ಕನಾರಾಯಣಸ್ವಾಮಿ, ಉಪಸ್ಥಿತರಿದ್ದರು.