Sunday, September 4, 2011









. ಹೊಂಗೆ ಬೆಳೆದು ಬಂಗಾರದ ಬೆಲೆ ಪಡೆಯಿರಿ್ಡ ಹೊಂಗೆಬೀಜದ ಎಣ್ಣೆ ಉತ್ಪಾದನಾ ಘಟಕದಲ್ಲಿ ತಜ್ಞರ ಅಭಿಮತ್ಡ ಸ್ವಾವಲಂಭನೆಗಾಗಿ ಜೈವಿಕ ಇಂಧನಕ್ಕೆ ಮೊರೆ ಹೊಗಲು ಕರೆ್ಡ ಪೆಟ್ರೋಲಿಯಂ ಉತ್ಪನ್ನಗಳಿಗೆ ಪಯರ್ಾಯವಾಗಿ ಜೈವಿಕ ಇಂಧನಚಿಕ್ಕನಾಯಕನಹಳ್ಳಿ,ಸೆ.3 : ಹೊಂಗೆಬೀಜವನ್ನು ತೆರೆದ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಕೇವಲ 8ರೂಗಳಿಗೆ ಮಾರುವ ಬದಲು ಬೀಜದಿಂದ ಎಣ್ಣೆ ತೆಗೆಯುವ ಮೂಲಕ ಜೈವಿಕ ಇಂಧನವಾಗಿ ಪರಿವತರ್ಿಸಿ ಮಾರಾಟ ಮಾಡಿದರೆ ಅತಿಹೆಚ್ಚು ಲಾಭವನ್ನು ಪಡೆದು ಆಥರ್ಿಕವಾಗಿ ಸದೃಡರಾಗಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಶ್ಯಾಮಸುಂದರ ಜೋಶಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಹಾಲುಗೊಣ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಜೈವಿನ ಇಂದನ ಉದ್ಯಾನ ಹಾಗೂ ಭಾರತೀಯ ಜೈವಿಕ ತಂತ್ರಜ್ಞಾನ ಸಂಸ್ಥೆ ವತಿಯಿಂದ ನಡೆದ ಜೈವಿನ ಎಣ್ಣೆ ಉತ್ಪಾದನಾ ಘಟಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ನೈಸಗರ್ಿಕ ವಸ್ತು ಹೊಂಗೆಬೀಜದಿಂದ ಹೆಚ್ಚು ಲಾಭ ಪಡೆಯುವುದು ಕಷ್ಠವಿದೆ, ಕಚ್ಚಾ ಬೀಜನವನ್ನು ಯಂತ್ರದ ಬಳಸಿ ಎಣ್ಣೆ ತೆಗೆದರೆ ಅಷ್ಠೇ ಲಾಭವನ್ನು ಇನ್ನು ಮುಂದೆ ರೈತರು ಪಡೆಯಬಹುದು, ತಾವು ಉತ್ಪಾದಿಸಿದ ಹೊಂಗೆಬೀಜವನ್ನು ಈ ರೀತಿ ತಯಾರಿಸಿದ ಎಣ್ಣೆಯನ್ನು ವಿದ್ಯುತ್ ಬಳಕೆಯಲ್ಲಿ, ವಾಹನ ಚಲಿಸಲು ಇನ್ನಿತರ ಇಂಧನ ವಸ್ತುವಾಗಿ ಬಳಸಬಹುದಾಗಿದ್ದು ತಮಗೆ ಬೇಕಾದಷ್ಟು ಇಂಧನ ಶಕ್ತಿಯನ್ನು ಉಪಯೋಗಿಸಬಹುದು ಎಂದರು. ಈ ಶಕ್ತಿಯ ಉಪಯೋಗಕ್ಕಾಗಿ ಇನ್ನು 5 ವರ್ಷದಲ್ಲಿ ಸುಮಾರು 15ಟನ್ ಹೆಚ್ಚು ಹೊಂಗೆಬೀಜ ಉತ್ಪಾದನೆಯನ್ನು ಮಾಡಿದರೆ ದೇಶದಲ್ಲಿ ವಿದ್ಯುತ್ ಸಮಸ್ಯೆಯೇ ಇಲ್ಲದಂತಾಗಲಿದೆ, ಅಲ್ಲದೆ ಬೇರೆ ಬೇರೆ ದೇಶಗಳಿಂದ ತರುವ ಪೆಟ್ರೋಲಿಯಂ ವಸ್ತುಗಳ ಬೆಲೆಯೂ ಸಹ ಕಡಿಮೆಯಾಗಲಿದೆ ಎಂದರು. ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಜಿ.ಚಂದ್ರಕಾಂತ್ ಮಾತನಾಡಿ ಈ ಯಂತ್ರದ ಮೂಲಕ ಜೈವಿನ ಇಂಧನವು ದೈನಿಕ ಇಂಧನವಾಗಬೇಕು ಆಗ ಪ್ರತಿಯೊಬ್ಬರಿಗೂ ಇಂಧನ ಕೊರತೆ ಉಂಟಾಗದೆ ದೇಶ ಆಥರ್ಿಕವಾಗಿ ಮುಂದುವರಿಯಲಿದೆ ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು. ತು.ಹಾ.ಒ.ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಮಾತನಾಡಿ ಇತ್ತೀಚಿಗೆ ಕಲೆಬೆರಕೆ ವಸ್ತುಗಳು ಹೆಚ್ಚಾದರೂ ಅವುಗಳಿಗೆ ಬೆಲೆ ಹೆಚ್ಚುತ್ತಿದೆ ಇದರಿಂದ ಬಡವರು ತೀರಾ ಸಂಕಷ್ಠಕ್ಕೆ ದೂಡಲ್ಪಡುತ್ತಿದ್ದಾರೆ ಇಂತಹವುಗಳನ್ನು ಹೋಗಲಾಡಿಸಬೇಕಾದರೆ ಗ್ರಾಮಸ್ಥರು ಒಗ್ಗಟ್ಟಾಗಿ ಕೈಜೋಡಿಸಿ ತಮ್ಮಲ್ಲಿರುವ ಬೆಳೆಯ ಉತ್ಪಾದನೆಯನ್ನು ಹೆಚ್ಚಾಗಿ ತಯಾರಿಸಿ ತಮ್ಮ ಸಮಸ್ಯೆಗಳನ್ನು ಯಾರ ಹಂಗಿಲ್ಲದೆ ತಾವೇ ಪರಿಹರಿಸಿಕೊಂಡರೆ ತಮ್ಮ ಗ್ರಾಮವೇ ದೇಶಕ್ಕೆ ಮಾದರಿಯಾಗುತ್ತದೆ ಎಂದರಲ್ಲದೆ, ತುಮಕೂರು ಹಾಲು ಒಕ್ಕೂಟವು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುತ್ತಿದ್ದು ಅದರಿಂದಲೇ ಇಂದು 4ಲಕ್ಷಕ್ಕೂ ಹೆಚ್ಚು ಹಾಲು ಜಿಲ್ಲೆಯಲ್ಲಿ ಸರಬರಾಜಾಗುತ್ತಿದ್ದು 5ಕೋಟಿಯಷ್ಠು ಬಡವಾಡಿ ನೀಡುತ್ತಾ 400 ಕೋಟಿ ವ್ಯವಹಾರ ನಡೆಯುತ್ತಿದ್ದು ಇದನ್ನು ಇನ್ನು ಹೆಚ್ಚಿಸುವ ಗುರಿ ಹೊಂದಿದೆ ಒಕ್ಕೂಟ ಎಂದರು.ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಉದ್ಘಾಟನೆಗೊಂಡಿರುವ ಯಂತ್ರಗಳನ್ನು ರೈತರು ಒಳ್ಳೆಯ ನಿಟ್ಟಿನಲ್ಲಿ ಉಪಯೋಗಿಸಿದರೆ ಯಾರನ್ನು ಅವಲಂಬಿಸದೆ ತಮಗೆ ತಾವೇ ಸ್ವಾವಲಂಬಿಗಳಾಗುತ್ತೇವೆ, ಇದಕ್ಕಾಗಿ ಸಹಕಾರಿ ಸಂಘಗಳು ಮುಂದೆ ಬಂದು ಇಂತಹ ಯಂತ್ರಗಳನ್ನು ಒಗ್ಗಟ್ಟಿನಿಂದ ಕೊಂಡು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಗ್ರಾಮದಲ್ಲಿರುವ ತೊಳಲಾಟಗಳನ್ನು ಗ್ರಾಮಸ್ಥರೇ ಒಗ್ಗಟ್ಟಾಗಿ ನಿಂತು ಪರಿಹರಿಸಿಕೊಂಡರೆ ತಾವು ಗ್ರಾಮದ ಅಭಿವೃದ್ದಿಗೆ

ಮುಂದಾಗುತ್ತೇವೆ ಎಂದರು. ಸಮಾರಂಭದಲ್ಲಿ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರಾಜಣ್ಣ, ಶಿವನಂಜಪ್ಪ ಮುಂತಾದವರಿದ್ದರು.

ಚಿ.ನಾ.ಹಳ್ಳಿ.ಯಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಚಿಕ್ಕನಾಯಕನಹಳ್ಳಿ,ಸೆ.3 : ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 124ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಇದೇ 5ರ ಸೋಮವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ.ಸಾ.ಚಿ.ನಾಗೇಶ್ ತಿಳಿಸಿದ್ದಾರೆ. ಸಮಾರಂಭವನ್ನು ಕೆ.ಎಂ.ಹೆಚ್.ಪಿ.ಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.ಡಾ. ರಾಧಕೃಷ್ಣರವರ ಭಾವಚಿತ್ರವನ್ನು ತಾ.ಪಂ.ಅಧ್ಯಕ್ಷ ಜಿ.ಎಸ್.ಸೀತಾರಾಮಯ್ಯ ಅನಾವರಣಗೊಳಿಸಲಿದ್ದು ಪ್ರಾಂಶುಪಾಲ ಎನ್.ನಾಗಪ್ಪ ಸಮಾರಂಭ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಬಹುಮಾನ ವಿತರಣೆ ಮಾಡಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್ ಉತ್ತಮ ಶಿಕ್ಷಕ ಪ್ರಶಸ್ತಿ ಮಾಡಲಿದ್ದಾರೆ. ಸಮಾರಂಭದಲ್ಲಿ ಮಾಜಿ ಶಾಸಕರುಗಳು, ಜಿ.ಪಂ.ಸದಸ್ಯರುಗಳು ಹಾಗೂ ಶಿಕ್ಷಕರ ವಿವಿಧ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿರುವರು.

ಜಾನುವಾರುಗಳ ಮೇವಿಗೂ ತತ್ವಾರಚಿಕ್ಕನಾಯಕನಹಳ್ಳಿ,ಸೆ.3 ; ತಾಲ್ಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿದ್ದು ರೈತರು ಕಂಗಾಲಾಗಿದ್ದಾರೆ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಕುಡಿಯುವ ನೀರಿಗೆ ತೊಂದರೆ ಪಡುತ್ತಿದ್ದು ಸತತ ಬರಗಾಲದಿಂದ ಪರಿತಪಿಸುತ್ತಿದ್ದಾರೆ ಜಾನುವಾರುಗಳಿಗೆ ಮೇವಿಲ್ಲದೆ ಅವುಗಳು ಕಟುಕರ ಪಾಲಾಗಿದ್ದು ತಾಲ್ಲೂಕಿನ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ ಆದ್ದರಿಂದ ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಗ್ರಾ.ಪಂ.ಸದಸ್ಯೆ ಶಶಿಕಲಾ ಆಗ್ರಹಿಸಿದ್ದಾರೆ.