Monday, November 28, 2011



ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ, ವೈಜ್ಞಾನಿಕ ತಿಳುವಳಿಕೆ ಮೂಡಿಸುವುದು ಮೆಟ್ರಿಕ್ ಮೇಳದ ಉದ್ದೇಶ

ಚಿಕ್ಕನಾಯಕನಹಳ್ಳಿ,ನ,28 : ಮಕ್ಕಳಿಗೆ ಬುದ್ದಿಶಕ್ತಿ ಹೆಚ್ಚಿಸಲು ಚಿಕ್ಕ ವಯಸ್ಸಿನಲ್ಲೇ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಲು  ಮೆಟ್ರಿಕ್ ಮೇಳಗಳಂತಹ ಕಾರ್ಯಕ್ರಮಗಳು ಉತ್ತೇಜನಕಾರಿ  ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಮೆಟ್ರಿಕ್ ಮೇಳ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ  ಮಕ್ಕಳು ಸಂತೆಗೆ ತಂದಿದ್ದ ವಸ್ತುಗಳನ್ನು ಕೊಳ್ಳುವ ಮೂಲಕ ಮೇಳಕ್ಕೆ ಬಿ.ಇ.ಓ.ಚಾಲನೆ ನೀಡಿದರು.
ಮಕ್ಕಳ ವ್ಯಾಪಾರದ ಜ್ಞಾನ ಬುದ್ದಿಶಕ್ತಿ ಹೆಚ್ಚಿಸಲು ಇಲಾಖೆ ಮೆಟ್ರಿಕ್ ಮೇಳಗಳಂತಹವುಗಳನ್ನು ಹಮ್ಮಿಕೊಂಡಿದ್ದು ತೀಪರ್ುಗಾರರು ಮಕ್ಕಳ ಮೇಲೆ ಯಾವುದೇ ವಿರೋಧ ಏರದೆ ಪ್ರತಿಭೆ ಇರುವಂತಹ ಮಕ್ಕಳಿಗೆ ಅವಕಾಶ ಮಾಡಿಕೊಡಿ ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮೆಟ್ರಿಕ್ಮೇಳಗಳಂತಹವುಗಳಲ್ಲಿ ಮಕ್ಕಳ ವೈಜ್ಞಾನಿಕ ಪ್ರತಿಭೆ ಹೊರಹೊಮ್ಮುವುದಲ್ಲದೆ ಅವರ ಜ್ಞಾನ ಹೆಚ್ಚುತ್ತದೆ ಎಂದರು.
ಸಮಾರಂಭದಲ್ಲಿ ಇ.ಓ. ಎನ್.ಎಂ.ದಯಾನಂದ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಬಿ.ಲೋಕೇಶ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಿ.ಆರ್.ಪಿ ದುರ್ಗಯ್ಯ ಸ್ವಾಗತಿಸಿದರು. ಪಾಂಡುರಂಗ್ಯಯ ನಿರೂಪಿಸಿದರು.


ಬಾಳಠಾಕ್ರೆಯ ನಾಲಿಗೆಯನ್ನು ತುಂಡರಿಸಿಚ: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ನ.28 : ಕನ್ನಡದ ವ್ಯಕ್ತಿತ್ವಗಳ ಬಗ್ಗೆ ಹಾಗೂ  ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತನಾಡುವವರ ನಾಲಿಗೆಯನ್ನು ತುಂಡು ತುಂಡಾಗಿ ಕತ್ತರಿಸಬೇಕು, ಅಲ್ಲದೆ ಕನ್ನಡ ಸಾಹಿತಿ ಡಾ.ಚಂದ್ರಶೇಖರ ಕಂಬಾರರವರ ವಿರುದ್ದ ಮಾತನಾಡಿದ ಬಾಳಠಾಕ್ರೆಯನ್ನು ರಾಜ್ಯಕ್ಕೆ ಕರೆತಂದು ನೇಣುಹಾಕಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ, ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳು,  ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರ ವಿರುದ್ದ ಅವಹೇಳನಕಾರಿ ಮಾತುಗಳನ್ನಾಡಿರುವ ಮಹಾರಾಷ್ಟ್ರದ ಬಾಳಠಾಕ್ರೆಯ ವಿರುದ್ದ ಘೋಷಣೆಗಳು ಕೂಗಿದದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ವಿ.ನಾಗರಾಜ್ ರಾವ್,  ಬಾಳಠಾಕ್ರೆಗೆ ಕನ್ನಡಕ್ಕೆ ಬಂದಿರುವ 8ಜ್ಞಾನಪೀಠ ಪ್ರಶಸ್ತಿ ಬಗ್ಗೆ ಹೊಟ್ಟೆಕಿಚ್ಚಿದೆ, ಮಹಾರಾಷ್ಟ್ರದಲ್ಲಿ 8ಕೋಟಿ ಜನರಿದ್ದರೂ ಅವರಿಗೆ ಬಂದಿರುವುದು 2 ಜ್ಞಾನಪೀಠ ಪ್ರಶಸ್ತಿ ಮಾತ್ರ,  ಆದರೆ ಕನ್ನಡಿಗರಿಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂಬ ಹೊಟ್ಟೆಕಿಚ್ಚಿನಿಂದಲೇ  ಕಂಬಾರರ ವಿರುದ್ದ ಮಾತನಾಡಿರುವುದು. ಠಾಕ್ರೆ ಒಬ್ಬ ಬೊಗಳುವ ನಾಯಿಯೇ ಹೊರತು ಕಚ್ಚುವ ನಾಯಿಯಲ್ಲ, ಅವನು ಬೇರೆಯವರನ್ನು ಬಿಟ್ಟು ಆಟ ಆಡುತ್ತಾನೆ, ತಾನು ಮುಂದೆ ಬರುವುದಿಲ್ಲ ಎಂದ ಅವರು ಬೆಳಗಾವಿ ನಗರಪಾಲಿಕೆಯವರು ಕನ್ನಡ ನಾಡಿನ ನೀರು, ಆಹಾರ ಸೇವಿಸುವ ಆ ಜನ ಇಲ್ಲಿಯ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಿದ್ದಾರೆ,  ಆ ಪಾಲಿಕೆಯನ್ನು ವಜಾ ಮಾಡಿ ಅಲ್ಲಿಯ ಪೌರನನ್ನು ಜೈಲಿಗೆ ಕಳುಹಿಸಬೇಕು ಎಂದು  ಆಗ್ರಹಿಸಿದರು.
ಸಾಹಿತಿ ಆರ್.ಬಸವರಾಜು ಮಾತನಾಡಿ  ಕನ್ನಡಿಗರು ವಿನಯ ಶೀಲತೆಗೆ ಹೆಸರುವಾಸಿ ಅವರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಂತಹ ಕಂಬಾರರ ವಿರುದ್ದ ಈ ರೀತಿ ಅವಹೇಳನಕಾರಿ ಹೇಳಿಕೆಗೆ ಕನ್ನಡನಾಡಿನ ಜನತೆ ವಿರೋಧಿಸುತ್ತದೆ ಎಂದ ಅವರು, ಠಾಕ್ರೆಗೆ ಕನ್ನಡ ಸಾಹಿತ್ಯದ ಬಗ್ಗೆಯಾಗಲಿ, ಇಲ್ಲಿನ ಸಾಹಿತಿಗಳ  ಬಗ್ಗೆಯಾಗಲಿ  ತಿಳುವಳಿಕೆಯೂ ಇಲ್ಲದಿರುವ ಠಾಕ್ರೆಗೆ ಸಾಹಿತಿ ಕಂಬಾರರ ವಿರುದ್ದ ಮಾತಿನಾಡುವ ಯಾವ ಹಕ್ಕೂಇಲ್ಲ ಎಂದು ಖಂಡಿಸಿದರು.
ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ನವಂಬರ್ 1ರಂದು ಈಡೀ ರಾಜ್ಯ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಬೆಳಗಾವಿ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಕರಾಳ ದಿನಾಚಾರಣೆ ಆಚರಿಸಿ ಕನ್ನಡತನಕ್ಕೆ ದ್ರೋಹವೆಸಗಿದ್ದಾರೆ, ಕನ್ನಡ ನೆಲ, ಜಲವನ್ನು ಅನುಕರಿಸಿ ಕನ್ನಡತನದ ವಿರುದ್ದ ತಿರುಗಿರುವುದು ಖಂಡನೀಯ, ಇದರ ಬಗ್ಗೆ ಸಕರ್ಾರ ತೀವ್ರ ನಿಗಾವಹಿಸಿ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ರವರನ್ನು ವಜಾ ಮಾಡಬೇಕೆಂದರು,  ಕನ್ನ್ನಡ ನೆಲ  ಸಾಹಿತಿಗಳಿಗೆ ಹೆಸರುವಾಸಿ ಅಂತಹ ನೆಲದ ಸಾಹಿತಿ ಕಂಬಾರರ ಸೊಂಟ ಮುರಿಯಬೇಕು ಎಂಬ ಅವಹೇಳನಕಾರಿ ತನದ ಮಾತನ್ನು  ನಾಡಿನ 6ಕೋಟಿ ಕನ್ನಡಿಗರೂ ವಿರೋಧಿಸುತ್ತಾರೆ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ದಲಿತ ಸಂಘದ ಮುಖಂಡ ಲಿಂಗದೇವರು, ಕಲಾ ಕುಂಚಾಂಕರ ಸಂಘದ ಸಿ.ಎಚ್.ಗಂಗಾಧರ್, ಕೆ.ಜಿ.ಕೃಷ್ಣೆಗೌಡ, ಕರವೇಯ ವಾಸು, ನವೀನ್, ಉಮೇಶ್,  ನಾಗರಾಜು ಪ್ರಸಾದ್, ಭಾಸ್ಕರ್, ಮನ್ಸೂರ್ಪಾಷ ಮುಂತಾದವರಿದ್ದರು.