Tuesday, October 30, 2012


ಅಲ್ಲಿದೆ ನಮ್ಮನೆ, ಇಲ್ಲಿರಿವೆ ಸುಮ್ಮನೆ: ಸಚಿವ ಪುಟ್ಟಸ್ವಾಮಿ
ಚಿಕ್ಕನಾಯಕನಹಳ್ಳಿ,ಅ.30 : ಯಡಿಯೂರಪ್ಪ ನಮ್ಮ ನಾಯಕರು, ಅವರು ಎಲ್ಲಿರುತ್ತಾರೋ ನಾನು ಅಲ್ಲಿರುತ್ತೇನೆ, ಜಗದೀಶ್ ಶೆಟ್ಟರ್ ನಮಗೆ ಸಭಾ ನಾಯಕರು ಅವರ ಕ್ಯಾಬಿನೇಟ್ನಲ್ಲಿರುವವರೆಗೆ ಮಾತ್ರ ನಾನು ಅವರಿಗೆ ನಿಷ್ಠನಾಗಿರುತ್ತೇನೆ ಎಂದು ಸಹಕಾರ ಸಚಿವ ಪುಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯಡಿಯೂರಪ್ಪನವರ ಅಭಿಮಾನಿ, 24 ವರ್ಷಗಳಿಂದ ರಾಜಕೀಯವಾಗಿ ಅಜ್ಞಾತವಾಸವಾಗಿದ್ದ ನನ್ನನ್ನು ಮುಖ್ಯವಾಹಿನಿಗೆ ತರುವುದಷ್ಟೇ ಅಲ್ಲ, ನನ್ನ ಗಾಣಿಗ ಸಮಾಜ ಎಂದು ಮರೆಯಲಾರದಷ್ಟು ಸಹಾಯ ಮಾಡಿದ್ದಾರೆ, ಬೆಂಗಳೂರಿನಲ್ಲಿ 10 ಎಕರೆ ಜಾಗವನ್ನು ಕೊಟ್ಟಿದ್ದಾರೆ ಅದು ಈಗ 150 ಕೋಟಿ ರೂಗಳಷ್ಟು ಬೆಲೆ ಬಾಳುವಂತಹ ಜಾಗ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ 5 ಕೋಟಿ ರೂಗಳಷ್ಟು ಹಣವನ್ನು ನೀಡಿದ್ದಾರೆ, ನಮ್ಮ ಸಮಾಜ ಅಲ್ಲೊಂದು ಗುರುಪೀಠವನ್ನು ಸ್ಥಾಪಿಸಿ, ಶಾಲೆಗಳನ್ನು ತೆರೆಯುವುದಲ್ಲದೆ, ವಿದ್ಯಾಥರ್ಿಗಳಿಗೆ ವಸತಿ ನಿಲಯವನ್ನು ಪ್ರಾರಂಭಿಸುವುದಾಗಿ ತಿಳಿಸಿದರು. ನಮ್ಮ ಸಮಾಜದ ಹೆಸರನ್ನು ಹೇಳಿಕೊಂಡ ವೈಯಕ್ತಿಕ ಲಾಭ ಮಾಡಿಕೊಂಡ ಸುದರ್ಶನ್, ದೊಡ್ಡ ಮಟ್ಟದ  ಒಂದು ಸಮಾವೇಶವನ್ನು ಮಾಡಲಿಲ್ಲ ಎಂದರಲ್ಲದೆ, ಗಾಣಿಗ ಸಮಾಜ ಇತಿಹಾಸದಲ್ಲೇ ಕಂಡರಿಯದಷ್ಟು ಸಹಕಾರವನ್ನು ನೀಡಿರುವ ಯಡಿಯೂರಪ್ಪನವರನ್ನು ಸದಾ ಸ್ಮರಿಸುತ್ತದೆ ಎಂದರು.
ದೊಡ್ಡವರು ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಿ:  ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಬಡ್ಡಿ ಇಲ್ಲದಂತೆ ಸಾಲ ನೀಡುತ್ತಿರುವುದನ್ನು ಇತರರು ದುರುಪಯೋಗ ಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದ ಎಲ್ಲಾ ರೈತರು ಸಹಕಾರ ಕ್ಷೇತ್ರದಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು  
ಇತ್ತೀಚೆಗೆ ಸಕರ್ಾರ ರೈತರು ಪಡೆದಿದ್ದ 25ಸಾವಿರ ಸಾಲವನ್ನು ಮನ್ನಾ ಮಾಡಿದೆ ಆದರೆ ಇದರಿಂದ ತೀರ ಹಿಂದುಳಿದ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಯಾವ ಉಪಯೋಗವೂ ಆಗಿಲ್ಲ ಎಂದರಲ್ಲದೆ ಈಗ ನೀಡುವ ಬಡ್ಡಿ ರಹಿತ ಸಾಲದ ಅನಕೂಲವನ್ನು ನಿಜವಾದ ಫಲಾನುಭವಿಗಳು ಪಡೆದುಕೊಳ್ಳಲು ಸದಸ್ಯತ್ವ ಪಡೆದುಕೊಳ್ಳಬೇಕೆಂದು ತಿಳಿಸಿದ ಅವರು 10 ಗುಂಟೆ ಜಮೀನು ಪಡೆದಿರುವ ಎಲ್ಲರು ರೈತ ಸಹಕಾರ ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು ಹಾಗೂ ಇದರಿಂದ ಫಲಾನುಭವಿಗಳು ಸಾಲ ಪಡೆಯಬಹುದು ಎಂದರಲ್ಲದೆ, ಸಣ್ಣ ಹಿಡುವಳಿದಾರರಿಗೆ  ಸಾಲ ಕೊಡದಿದ್ದರೆ ನನಗೆ ದೂರವಾಣಿ ಮೂಲಕ ತಿಳಿಸಿ ಎಂದರು.
ಸಹಕಾರ ಇಲಾಖೆ ಬಡವರ ಪರವಾಗಿದೆ ಸಹಕಾರ ಬ್ಯಾಂಕ್ಗಳಲ್ಲಿ  ಸಾಲ ಪಡೆಯದವರು ಮೊದಲ ಸಂಘದ ಸದಸ್ಯರಾಗಿ ಎಂದ ಅವರು, ಯಾರಿಗೆ ಜಮೀನು ಇರುವುದಿಲ್ಲ ಅಂತಹವರು ಹೈನುಗಾರಿಕೆಗೆ ಮುಂದಾಗಿ ಅಂತಹವರಿಗೆ ಜಿಲ್ಲಾ ಕೋ ಆಪರೇಟಿವ್ನಿಂದ ಸಹಾಯ ಸಿಗಲಿದೆ ಎಂದರು.
ಈಗಾಗಲೇ ಹೈನುಗಾರಿಕೆಯ ಮೂಲಕ ಹಾಲಿನ ಉತ್ಪಾದನೆಯಲ್ಲಿ ತೊಡಗಿರುವವರಿಗೆ ನೇರವಾಗಿ ಪ್ರತಿ ವಾರ ಸಂಬಳ ಸಿಗುತ್ತಿದೆ, 2006-07ರಲ್ಲಿ ಹಾಲಿಗೆ 8.5ರೂ ಇತ್ತು 2012ರಲ್ಲಿ 22.5ರೂ ಆಗಿದ್ದು ಇದರಲ್ಲಿ ನೇರವಾಗಿ ರೈತರಿಗೆ 19.5ರೂ ಸಿಗುತ್ತಿದೆ ಅಲ್ಲದೆ 2ರೂ ಸಬ್ಸಿಡಿ ಹಣವಾಗಿ ಯಡಿಯೂರಪ್ಪನವರು ನೀಡಿದ್ದಾರೆ ಇದರ ಪರಿಣಾಮ ಜಮೀನು ಇಲ್ಲದವರು ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ಆಥರ್ಿಕವಾಗಿ ಸುಧಾರಿಸುತ್ತಿದ್ದಾರೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಹಕಾರಿ ಮುಖಂಡ ಸಿಂಗದಹಳ್ಳಿ ರಾಜ್ಕುಮಾರ್, ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರೇವಣ್ಣ ಶೆಟ್ಟಿ, ಗಾಣಿಗ ಸಮಾಜದ ಮುಖಂಡ, ಪುರಸಭಾ ಮಾಜಿ ಸದಸ್ಯ ಮುದ್ದವೀರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Sunday, October 28, 2012



ಭೋವಿ ಸಮಾಜಕ್ಕೆ ಆದ್ಯತೆ ನೀಡಿದವರನ್ನು  ಬೆಂಬಲಿಸಿ: ಶಾಸಕ ವೆಂಕಟರಮಣಪ್ಪ
ಚಿಕ್ಕನಾಯಕನಹಳ್ಳಿ,ಅ.27 : ಭೋವಿ ಜನಾಂಗವನ್ನು ನಿರ್ಲಕ್ಷ್ಯ ಮಾಡುವ ರಾಜಕಾರಣಿಗಳನ್ನು ತಿರಸ್ಕರಿಸುವ ಮೂಲಕ ಅವರಿಗೆ  ಬುದ್ದಿ ಕಲಿಸಬೇಕೆಂದು ಪಾವಗಡ ಶಾಸಕ ವೆಂಕಟರಮಣಪ್ಪ ಹೇಳಿದ್ದಾರೆ.
ತಾಲ್ಲೂಕಿನ ಬಡಕೇಗುಡ್ಲು ಬೋವಿ ಕಾಲೋನಿಯಲ್ಲಿ ನೂತನವಾಗಿ ನಿಮರ್ಿಸಿರುವ ರೇಣುಕಾ ಯಲ್ಲಮ್ಮದೇವಿ ದೇವಾಲಯದ ಪ್ರಾರಂಭೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಒಗ್ಗಟ್ಟು ನಮ್ಮ ಏಳಿಗೆಗೆ ರಹದಾರಿ, ನಿಮ್ಮ ಒಂದು ಕ್ಷಣದ ತಪ್ಪು ನಿಧರ್ಾರ ಐದು ವರ್ಷ ನೀವು ಅವರ ಮುಂದೆ ಕೈ ಕಟ್ಟಿಕೊಂಡು ನಿಲ್ಲುವಂತೆ ಮಾಡುತ್ತದೆ ಎಂದ ಅವರು ಚುನಾವಣೆಯಲ್ಲಿ ಕೈ ಮುಗಿದು ನಿಮ್ಮ ಮತಗಳನ್ನು ಪಡೆದು ಆಯ್ಕೆಯಾದ ಮೇಲೆ ನಿಮ್ಮನ್ನು ನಿರ್ಲಕ್ಷಿಸುವವರರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕಿದೆ ಎಂದರಲ್ಲದೆ, ಜನಾಂಗದ ಶಕ್ತಿ ಏನೆಂಬುದನ್ನು ಮತಗಳ ಮೂಲಕ ತೋರಿಸಿ, ನನ್ನ ಕ್ಷೇತ್ರದಲ್ಲಿ ಎಲ್ಲಾ ವರ್ಗದ, ಜಾತಿಯ ಜನರ ದೇವಾಲಯಗಳಿಗೆ ನೆರವು ನೀಡುವ ಸಲುವಾಗು 3 ಕೋಟಿ ವಿನಿಯೋಗಿಸಿದ್ದೇನೆ ಎಂದಿದ್ದಾರೆ.
ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಸುಮಾರು 30ಕಡೆ ಕಲ್ಯಾಣ ಮಂಟಪಗಳ ರೀತಿಯಲ್ಲಿ ಸಮುದಾಯ ಭವನಗಳನ್ನು ನಿಮರ್ಿಸಿದ್ದೇನೆ. ಇದರಿಂದ ಬಡ ಜನರ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತಿದೆ.
ಮೊದಲಿನಿಂದಲೂ ಕೊಕ್ಕರೆಗೊಂದು ಕೆರೆಯಿಲ್ಲ, ವಡ್ಡರಿಗೊಂದು ಊರಿಲ್ಲ ಎಂಬಂತೆ ನಮ್ಮ ಜನಾಂಗ ಎಂದೂ ಒಂದು ಕಡೆ ನೆಲೆ ನಿಂತಿಲ್ಲ. ಆದ್ದರಿಂದ ನಮ್ಮ ಜನಾಂಗ ಶೈಕ್ಷಣಿಕವಾಗಿ ಹಿಂದುಳಿದಿದೆ. ವಿದ್ಯವಾವಂತರಾಗದಿದ್ದರೆ ಬಡತನ ನಿವಾರಣೆಯಾಗುವುದಿಲ್ಲ. ಬೋವಿ ಜನಾಂಗ ಎಂದೂ ಕಷ್ಠಜೀವಿಗಳು. ವಿಧಾನಸೌಧ, ಕನ್ನಂಬಾಡಿ, ಅಷ್ಟೇ ಏಕೆ ಇಲ್ಲಿನ ಬೋರನಕಣಿವಯನ್ನು ಕಟ್ಟಿದಾರೆ. ಆದರೆ ಅದರಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದರು.
ಇಂದು ಸಹ ಅವರು ಕೂಲಿಯಿಂದಲೇ ಜೀವನ ನಿರ್ವಹಣೆ ಮಾಡಬೇಕಾಗಿದೆ, ನೂರು ರೂಗೆ ದುಡಿದರೆ 150 ಖಚರ್ು ಮಾಡುವ ಮನೋಭಾವನೆಯಿಂದ ಹಿಂದುಳಿದಿದ್ದೀರಿ. ಮುಂದಾದರು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿ ಎಂದರಲ್ಲದೆ, ಮದುವೆಗೆ ಅದ್ದೂರಿ, ಆಡಂಬರ ಬೇಡ. ಮದುವೆಗೆ ಪ್ರೀತಿಯೊಂದೇ ಸಾಕು. ಮುಂದಿನ ನಿಮ್ಮ ಜೀವನ ಬಹಳ ದೂರಸಾಗಬೇಕಿದೆ. ಆದ್ದರಿಂದ ಯಾವುದನ್ನೇ ಆದರೂ ಯೋಚಿಸಿ ನಿಧರ್ಾ ಕೈಗೊಳ್ಳಿ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಶಿಕ್ಷಿತರಲ್ಲೇ ಅದ್ದೂರಿ ವಿವಾಹಗಳು ಹೆಚ್ಚುತ್ತಿದ್ದು ಅದೇ ರೀತಿ ವಿಚ್ಛೇದನಗಳು ಸಹ ವಿದ್ಯಾವಂತರಲ್ಲೇ ಹೆಚ್ಚುತ್ತಿವೆ, ಇದು ಇಂದಿನ ನಮ್ಮ ಸಮಾಜಕ್ಕೆ ಆತಂಕಕಾರಿಯಾಗಿದೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಇಲ್ಲಿನ ಜನರಿಗೆ ಬಡತನವಿದ್ದರು ಭಕ್ತಿಗೆ ಬಡತನವಿಲ್ಲ ಎಂಬುದಕ್ಕೆ ನೀವು ನಿಮರ್ಿಸಿರುವ ದೇವಾಲಯವೇ ಸಾಕ್ಷಿ. ಈ ಭಾಗದ ಜನರ ನೀರಿನ ಕೊರತೆಯನ್ನು ನೀಗಿಸುವುದಕ್ಕೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿಗಾಗಿ 102ಕೋಟಿ ಮೊತ್ತದ ಯೋಜನೆ ಮಂಜೂರಾಗಿದೆ ಎಂದರು,
ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಬೋವಿ ಸಮಾಜದವರು ಶ್ರಮ ಜೀವಿಗಳು, ಪ್ರತಿ ಗ್ರಾಮಗಳ ಕೆರೆ,ಕಟ್ಟೆ, ದೇವಸ್ಥಾನಗಳನ್ನು ಕಟ್ಟಿದವರು ಬೋವಿ ಜನಾಂಗದವರೇ ಎಂದ ಅವರು, ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸ ನೀಡಿ ಅವರ ಮುಂದಿನ ಭವಿಷ್ಯಕ್ಕೆ ದಾರಿಯಾಗಿ ಎಂದರಲ್ಲದೆ ಸಾಮೂಹಿಕ ವಿವಾಹದಿಂದ ಆಥರ್ಿಕ ಸಂಕಷ್ಟಗಳನ್ನು ನಿವಾರಿಸಬಹುದು ಎಂದರು.
ಸಮಾರಂಭದಲ್ಲಿ ತಿಮ್ಮನಹಳ್ಳಿ ಲೋಕೇಶ್ ಮಾತನಾಡಿದರು. ಜಿ.ಪಂ.ಸದಸ್ಯೆ ಲೋಹಿತಬಾಯಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಗ್ರಾ.ಪಂ.ಅಧ್ಯಕ್ಷೆ ಅನಸೂಯಮ್ಮ, ಬೋವಿ ಜನಾಂಗದ ಮುಖಂಡರಾದ ಕೆ.ಕೆ.ಹನುಮಂತಪ್ಪ, ನಾಗರಾಜು ಮುಂತಾದವರಿದ್ದರು.

ಚಿ.ನಾ.ಹಳ್ಳಿಯಲ್ಲಿ ಅ.29ರಂದು ವಾಲ್ಮೀಕಿ ಜಯಂತಿ
ಚಿಕ್ಕನಾಯಕನಹಳ್ಳಿ,ಅ.27 : ಶ್ರೀ ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಇದೇ 29ರ ಸೋಮವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್          ಮಹಷರ್ಿ ವಾಲ್ಮೀಕಿ ಭಾವಚಿತ್ರ ಅನಾವರಣಗೊಳಿಸಲಿದ್ದು ನಿವೃತ ಮುಖ್ಯೋಪಾಧ್ಯಾಯ ಸೋಮಶೇಖರಯ್ಯ ಮಹಷರ್ಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಧ್ಯಯನದ ವಿಭಾಗದ ಮುಖ್ಯಸ್ಥ ಡಾ.ಸಿದ್ದಗಂಗಮ್ಮ,  ಅಸಿಸ್ಟೆಂಟ್ ಪ್ರೊಫೆಸರ್ ಡಾ.ಪಿ.ಪರಮೇಶ್ವರ, ಕಲಾವಿದ ಶಂಕರಪ್ಪ,  ಸಮಾಜ ಸೇವಾಕರ್ತ ಶ್ರೀನಿವಾಸಶೆಟ್ಟಿರವರಿಗೆ ಸನ್ಮಾನಿಸಲಾಗುವುದು.

ಚಿ.ನಾ.ಹಳ್ಳಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ.
ಚಿಕ್ಕನಾಯಕನಹಳ್ಳಿ,ಅ27 :    ಕನ್ನಡ ರಾಜ್ಯೋತ್ಸವ  ಸಮಾರಂಭವನ್ನು ಇದೇ ನವಂಬರ್ 1ರ ಗುರುವಾರ ಬೆಳಗ್ಗೆ 9-00 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ  ಏರ್ಪಡಿಸಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ. ಸುರೇಶ್ಬಾಬು  ವಹಿಸಲಿದ್ದು ತಹಸೀಲ್ದಾರ್ ಎನ್.ಆರ್. ಉಮೇಶಚಂದ್ರ ಧ್ವಜಾರೋಹಣವನ್ನು ನೆರವೇರಿಸುವರು.
ಸಮಾರಂಭದಲ್ಲಿ ಜಾನಪದ ಕಲಾವಿದರಾದ ಕದುರಮ್ಮ,  ಹಾಮರ್ೋನಿಯಂ ಮಾಸ್ಟರ್ ಸಿ.ಎಸ್.ಗಂಗಾಧರಯ್ಯ ಮತ್ತು ರಂಗಭೂಮಿ ಕಲಾವಿದ ಶ್ರೀಬೋರಯ್ಯ ರವರಿಗೆ ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು,  ವಿಧಾನ ಪರಿಷತ್ ಮುಖ್ಯ ಸಚೇತಕ  ಎ.ಹೆಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ.ರಂ.ಆರ್.ಹುಲಿನಾಯ್ಕರ್, ವೈ.ಎ.ನಾಆಯಣಸ್ವಾಮಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಯ್ಯ ಸೇರಿದಂತೆ ಹಲವರು ಉಪಸ್ಥಿತರಿರುವರು.

Friday, October 26, 2012



ಕೃಷಿ ಇಲಾಖೆಯ ನಿರ್ಲಕ್ಷ್ಯ: ನೂರಾರು ಎಕರೆ ರಾಗಿ ಫಸಲು ಹುಳುಗಳ ಪಾಲು, ಬೆಳೆದವನ ಹೊಟ್ಟೆಗೆ ತಣ್ಣೀರು ಬಟ್ಟೆ.
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಸೆ.26 : ಬರದಿಂದ ಬದುಕು ಮೂರಾಬಟ್ಟೆಯಾಗಿದೆ, ಹೆಂಗೋ ಅಂಗದಲ್ಲಿ ಭಂಗದಲ್ಲಿ ಉಸಿರಿಟ್ಟಕೊಂಡು ಜೀವನಕ್ಕೆ ಅಂತ ಅಷ್ಟೊ ಇಷ್ಟೋ ರಾಗಿ ಬೆಳೆಕೊಳ್ಳುತ್ತಿದಿವಿ, ಅದನ್ನೂ ಈ ಹುಳುಗಳು ಮಣಪಾಲು ಮಾಡ್ಯಾಕ್ಯಾವೆ, ನಮಗೀಗ ಹೊಟ್ಟೆಗೆ ತಣ್ಣೀರ ಬಟ್ಟೇನೇ ಗತಿ. ಇಷ್ಟಾದ್ರೂ ಕೃಷಿ ಇಲಾಖೆಯವರು ನಮ್ಮ ಹೊಲಗಳಿಗೆ ಬಂದು ನೋಡಿಲ್ಲ, ನಮ್ಮ ಕಷ್ಟ ಕೇಳಿಲ್ಲ. ನಾವೇ ಆಫೀಸ್ಗೆ ಹೋಗಿ ಹೇಳಿದ್ರೂವೇ ಎಂತಂದೊ ಒಂದಿಷ್ಟು ಔಷಧಿ ಕೊಟ್ಟು ಸಾಗ ಆಕ್ಯಾವರೇ, ನೋಡಿ ಸ್ವಾಮಿ ನಮ್ಮ ಜೀವನ ಹಿಂಗೆ ಬೀದಿ ಬಿದ್ದೋಗದೆ ಎಂದು ಗದ್ಗದಿತ ಧ್ವನಿಯಲ್ಲಿ ಹೇಳ್ತಾರೆ ಸಾಲ್ಕಟ್ಟೆ ಎ.ಕೆ.ಕಾಲೋನಿಯ ಸಣ್ಣ ಹಿಡುವಳಿದಾರ ಕರಿಯಪ್ಪ.
ಈ ನೊಂದ ಮಾತುಗಳು ಕೇವಲ ಒಬ್ಬರದ್ದಲ್ಲ, ತಾಲೂಕಿನ ಆಲದಕಟ್ಟೆ ಭಾಗದಿಂದ ಸಾಲ್ಕಟ್ಟೆವರೆಗಿನ ಸುಮಾರು 500 ಎಕರೆಗೆ ಹೆಚ್ಚು ಜಮೀನುಗಳ ನೂರಾರು ಬಡ ರೈತರ ಗೋಳು. ಮಳೆಯ ಅಭಾವದಿಂದಲೇ ಸುಮಾರು 2ತಿಂಗಳ ಹಿಂದಷ್ಟೇ ಬಿದ್ದ ಅಲ್ಪಸ್ವಲ್ಪ ಮಳೆಯಲ್ಲಿ  ಉಳುಮೆ ಮಾಡಿ ಬೆಳೆಯುತ್ತಿದ್ದ 500 ಎಕರೆಯಲ್ಲಿನ ರಾಗಿ ಬೆಳೆಯು ಹುಳುವಿನ ಹಸಿವಿಗೆ ನಾಶವಾಗಿ ರೈತರ ಹೊಟ್ಟೆಪಾಡಿನ ಬೆಳೆಗೆ ಕೊಡಲಿಪೆಟ್ಟು ಬಿದ್ದಿದೆ.
 ತಾಲ್ಲೂಕಿನ ಸಾಲ್ಕಟ್ಟೆ ಗ್ರಾಮದ ಬಸವರಾಜು, ಶ್ರೀರಂಗಯ್ಯ ಹಾಗೂ ಅಕ್ಕಪಕ್ಕದಲ್ಲಿನವರ ಜಮೀನಿನವರು, ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆಯವರ ಬಳಿ ತಮಗಾಗಿರುವ ನಷ್ಟವನ್ನು ವಿವರಿಸಿದರು. ಹೆಕ್ಟೇರ್ಗಟ್ಟಲೆ ರಾಗಿ ಬೆಳೆಗೆ ಹುಳುಗಳು ದಾಳಿ ಇಟ್ಟು ರಾಗಿ ಫಸಲನ್ನು ನಾಶಗೊಳಿಸಿ ರೈತರಿಗೆ ಸಿಗಬೇಕಿದ್ದ ಲಕ್ಷಾಂತರ ರೂಗಳಿಗೂ ಹೆಚ್ಚಿನ ಬೆಳೆಯನ್ನು ಹುಳು ನಾಶ ಮಾಡಿದೆ.
ರೈತಾಪಿ ವರ್ಗ ತಮ್ಮಲ್ಲಿರುವ ಅಲ್ಪ ಪ್ರಮಾಣದ ಸವಲತ್ತುಗಳಿಂದ ಬೆಳೆದ ಬೆಳೆಯು ನಾಶವಾಗಿರುವುದರಿಂದ ಬೆಳೆಯನ್ನೇ ನಂಬಿರುವ ರೈತರು ಮುಂದಿನ ಪರಿಸ್ಥಿತಿ ಬಗ್ಗೆ ಯೋಚಿಸುತ್ತಿದ್ದಾರೆ, ಅವರು ಹೇಳುವಂತೆ ಮುಂಜಾನೆ ಹೊತ್ತು ಇಂತಹ ಹುಳುಗಳು ರಸ್ತೆಯಲ್ಲೇ ಹರಿದುಕೊಂಡು ಹೋಗುತ್ತವೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ತಾಳದೆ ಹೊಲದ ಬದುಗಳಲ್ಲಿ ಹರಿದಾಟಿ ಅಲ್ಲಿರುವ ಹುಲ್ಲನ್ನು ತಿನ್ನುತ್ತಿವೆ, ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಹುಳುಗಳು ಬೆಳೆಯನ್ನು ನಾಶ ಮಾಡುತ್ತವೆ ಎಂದ ಅವರು ಈ ಬಗ್ಗೆ ಕೃಷಿ ಇಲಾಖೆಗೆ ತಿಳಿಸಿದರೂ ಅವರು ನಿರ್ಲಕ್ಷದಿಂದಿದ್ದಾರೆ  ಎಂದು ತಿಳಿಸಿದರಲ್ಲದೆ ಸಕರ್ಾರ ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ ರೈತರ ಆಥರ್ಿಕ ಪರಿಸ್ಥಿತಿ ಸುಧಾರಿಸುವಂತೆ ಆ ಭಾಗದ ಮುಖಂಡ ಸಾಲ್ಕಟ್ಟೆ ಶ್ರೀನಿವಾಸ ಆಗ್ರಹಿಸಿದ್ದಾರೆ. 





ನೇಕಾರರ ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಜನ ಹೊರಡಲು ದೇವಾಂಗ ಸಂಘದ ಮನವಿ.

                                  
ಚಿಕ್ಕನಾಯಕನಹಳ್ಳಿ,ಅ.26 :  ತುಮಕೂರಿನಲ್ಲಿ ಇದೇ 28ರ ಭಾನುವಾರದಂದು ನಡೆಯಲಿರುವ ಜಿಲ್ಲಾ ನೇಕಾರರ ಸಮಾವೇಶಕ್ಕೆ ತಾಲ್ಲೂಕಿನ ಎಲ್ಲಾ ನೇಕಾರ ಬಂಧುಗಳು ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಪುರಸಭಾಧ್ಯಕ್ಷ  ಹಾಗೂ ದೇವಾಂಗ ಸಮುದಾಯದ ಮುಖಂಡ ಸಿ.ಟಿ.ವರದರಾಜು ಮನವಿ ಮಾಡಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೇಕಾರರಲ್ಲಿ 27 ಒಳಪಂಗಡಗಳಿದ್ದು ಈ ಎಲ್ಲಾ ಪಂಗಡಗಳು ಸಕರ್ಾರಿ ಸವಲತ್ತುಗಳಿಂದ ಹಾಗೂ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾವೆ, ಈ ಸೌಲಭ್ಯಗಳನ್ನು ಪಡೆಯಲು ನೇಕಾರರ ಸಮುದಾಯ ಸಮಾವೇಶ ನಡೆಸುತ್ತಿದೆ, ಅದಕ್ಕಾಗಿ ನೇಕಾರ ಸಮುದಾಯದವರಾದ ದೇವಾಂಗ ಸಮಾಜ, ಪದ್ಮಶಾಲಿ ಸಮಾಜ, ತೊಗಟವೀರ ಸಮಾಜ, ಕುರುಹಿನಶೆಟ್ಟಿ ಸಮಾಜ, ಪಟ್ಟಸಾಲೆ ಸಮಾಜ ಸೇರಿದಂತೆ  ಎಲ್ಲಾ ನೇಕಾರರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು, 
 ಆಥರ್ಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯ ಸೌಲಭ್ಯಗಳಲ್ಲಿ ಹಿಂದುಳಿದಿರುವ ನಾವು ಈ ಸಮಾವೇಶದ ಮುಖಾಂತರ ಸಂಘಟನೆಗೊಂಡು ಸಕರ್ಾರದ ಸೌಲಭ್ಯಗಳನ್ನು ಪಡೆಯಬೇಕಾಗಿದೆ ಎಂದು ತಿಳಿಸಿದ ಅವರು ಸಮಾವೇಶದ ದಿವ್ಯ ಸಾನಿಧ್ಯ್ಯವನ್ನು ದಯಾನಂದಪುರಿಸ್ವಾಮಿಜಿ, ಪ್ರಭುಲಿಂಗಸ್ವಾಮಿಜಿ, ದಿವ್ಯಜ್ಞಾನಾನಂದಪುರಿ ಸ್ವಾಮಿ, ಶಂಕರಶಿವಾಚಾರ್ಯಸ್ವಾಮಿ, 1008 ಜಗದ್ಗುರು ಬಸವರಾಜಪಟ್ಟದಾರ್ಯಸ್ವಾಮಿರವರು ವಹಿಸಲಿದ್ದು ಸಮಾಜದ ಮುಖಂಡ ಎಂ.ಡಿ.ಲಕ್ಷೀನಾರಾಯಣ ಸಮಾವೇಶದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
ದೇವಾಂಗ ಸಂಘದ ಕಾರ್ಯದಶರ್ಿ ಸಿ.ಎ.ಕುಮಾರಸ್ವಾಮಿ ಮಾತನಾಡಿ  ರಾಜ್ಯದಲ್ಲಿ 80ಲಕ್ಷ ಹಾಗೂ ಜಿಲ್ಲೆಯಲ್ಲಿ 2ಲಕ್ಷದಷ್ಟು ಜನರಿರುವ ನೇಕಾರ ಸಮುದಾಯ ಒಗ್ಗಟ್ಟಾಗಿ ಸಮಾವೇಶಗೊಂಡು ನೇಕಾರರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದ ಅವರು ಸಮಾವೇಶಕ್ಕೆ ತಾಲ್ಲೂಕಿನಿಂದ ಹತ್ತು ಜನಪದ ಕಲಾತಂಡಗಳನ್ನು ಕೊಂಡೊಯ್ಯುವುದಾಗಿ ತಿಳಿಸಿದರು.
ದೇವಾಂಗ ಸಂಘದ ಮುಖಂಡ ಬನಶಂಕರಯ್ಯ ಮಾತನಾಡಿ ತಾಲ್ಲೂಕಿನಲ್ಲಿ 10ಸಾವಿರಕ್ಕೂ ಹೆಚ್ಚು ಜನರಿರುವ ಇರುವ ನೇಕಾರರು ಸಮಾವೇಶಕ್ಕೆ ಪಾಲ್ಗೊಂಡು ನೇಕಾರ ಸಮುದಾಯದ ಸಮಸ್ಯೆಗಳನ್ನು ತಿಳಿಸಬೇಕು ಎಂದ ಅವರು ಆ ಮೂಲಕ ನೇಕಾರರು ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಂಗ ಸಂಘದ ಅಧ್ಯಕ್ಷ ಕೋದಂಡರಾಮಯ್ಯ, ಸಹಕಾರ್ಯದಶರ್ಿ ಅಶೋಕ್, ಕುರುಹೀನಶೆಟ್ಟಿ ಸಮಾಜದ ನಾಗರಾಜು, ಪ್ರಮೋದ್, ನೇಕಾರ ಧನಪಾಲ್, ರಂಗನಾಥ್ ಉಪಸ್ಥಿತರಿದ್ದರು.


ಚಿ.ನಾ.ಹಳ್ಳಿ: ಕಾಂಗ್ರೇಸ್ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಅ.26 : ಕಾಂಗ್ರೆಸ್ನೊಂದಿಗೆ ಬನ್ನಿ-ಬದಲಾವಣೆ ತನ್ನಿ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ನವಂಬರ್ 6ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಏರ್ಪಡಿಸಿದ್ದು ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪೂರ್ವಭಾವಿ ಸಭೆಯನ್ನು ಇದೇ 29ರ ಸೋಮವಾರ ಮಧ್ಯಾಹ್ನ 12ಕ್ಕೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಸಂಘಟನಾ ಉಸ್ತುವಾರಿ  ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಮಾಜಿ ಶಾಸಕ ಆರ್.ನಾರಾಯಣ್, ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು  ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 


Wednesday, October 24, 2012




ತಾಲೂಕು ಹಾಗೂ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಗಳ ದಿನಾಂಕಗಳ ನಿಗಧಿ
ಚಿಕ್ಕನಾಯಕನಹಳ್ಳಿ,ಅ.24 : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ 5ನೇ ಸಮ್ಮೇಳನವನ್ನು ಹಂದನಕೆರೆ ಹೋಬಳಿಯಲ್ಲಿ ನಡೆಸಲು ಹಾಗೂ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲೂ ಹೋಬಳಿ ಮಟ್ಟದ ಸಮ್ಮೇಳನ ನಡೆಸಲು ಸಮಿತಿ ತೀಮರ್ಾನಿಸಿದೆ ಎಂದು  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕು ಸಮ್ಮೇಳನವನ್ನು ಹಂದನಕೆರೆಯಲ್ಲಿ ಮುಂದಿನ ಡಿಸೆಂಬರ್ 29 ರಂದು ಹಾಗೂ ನಗರ ಕೇಂದ್ರಿತ ಹೋಬಳಿ ಘಟಕ ಸಮ್ಮೇಳನವನ್ನು ಕೇದಿಗೆಹಳ್ಳಿ ಪಾಳ್ಯದಲ್ಲಿ ನವಂಬರ್ 24ರಂದು, ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆಯಲ್ಲಿ ಕಡೆ ಕಾತರ್ಿಕದ ಮುಂದಿನ ಶನಿವಾರದಂದು, ಹುಳಿಯಾರಿನ ಬೋರನಕಣಿವೆಯಲ್ಲಿ ನವಂಬರ್ 30ರಂದು, ಕಂದಿಕೆರೆಯಲ್ಲಿ ಡಿಸೆಂಬರ್ 8ರಂದು ಸಮ್ಮೇಳನಗಳನ್ನು ನಡೆಸಲಾಗುವುದು ಎಂದ ಅವರು, ಸಮ್ಮೇಳನದ ದಿನಾಂಕವನ್ನು ಈಗ ನಿಗಿಧಿ ಮಾಡಿದ್ದು ತಾಲ್ಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಸಮ್ಮೇಳನಾಧ್ಯಕ್ಷರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು  ಎಂದರು.
ಸಮ್ಮೇಳನಕ್ಕಾಗಿ ಈಗಾಗಲೇ ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದಲ್ಲಿ ತಾಲೂಕಿನ  ಪ್ರಸ್ತುತ ಸಮಸ್ಯೆಗಳ ಬಗ್ಗೆ ಚಚರ್ಿಸಲಾಗುವುದು ಎಂದರಲ್ಲದೆ, ಸಮ್ಮೇಳನಗಳಲ್ಲಿ  ಯಾವುದೇ ರಾಜಕೀಯ ಸೇರಿಸದಂತೆ ಮನವಿ ಮಾಡಿದ ಅವರು ಸಮ್ಮೇಳನದಲ್ಲಿ ಮೂರು ಗೋಷ್ಠಿಗಳನ್ನು ಏರ್ಪಡಿಸಲಾಗುವುದು ಹಾಗೂ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ 6 ಜನ ಗಣ್ಯರಿಗೆ ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಮ್ಮೇಳನ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಾ.ಚಿ.ರಾಜಕುಮಾರ್, ಕನ್ನಡ ಸಾಹಿತ್ಯ ಪರಿಷತ್ನ ಸದಸ್ಯರಾದ ಬೆಳಗುಲಿ ಶಶಿಭೂಷಣ್, ಹುಳಿಯಾರ್ ಷಬ್ಬೀರ್, ನಂದೀಶ್ಬಟ್ಲೇರಿ, ರವಿಕುಮಾರ್, ಎಸ್.ಬಿ.ಕುಮಾರ್ ಉಪಸ್ಥಿತರಿದ್ದರು.

Monday, October 22, 2012


ಉಮೇಶ್ಕತ್ತಿ ರಾಜೀನಾಮೆಗೆ ಆಗ್ರಹ 


ಚಿಕ್ಕನಾಯಕನಹಳ್ಳಿ,ಅ.22 :  ಸಚಿವ ಉಮೇಶ್ಕತ್ತಿ ರಾಜ್ಯವನ್ನು ಇಬ್ಭಾಗ ಮಾಡುವ ಹೇಳಿಕೆ ಖಂಡನೀಯ, ಇವರು ಕೂಡಲೇ ರಾಜೀನಾಮೆ ನೀಡಬೇಕೆಂದು ತಾಲ್ಲೂಕು ಕನ್ನಡಪರ ಸಂಘಟನೆಗಳು ಒತ್ತಾಯಿಸಿದವು.
ಪಟ್ಟಣದ ನೆಹರು ಸರ್ಕಲ್ ಬಳಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಸಚಿವ ಉಮೇಶ್ಕತ್ತಿ ನೀಡಿರುವ ಕನರ್ಾಟಕ ಇಬ್ಬಾಗ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ ರಾಜ್ಯದ ಏಕೀಕರಣಕ್ಕಾಗಿ ಲಕ್ಷಾಂತರ ಜನ ಶ್ರಮಿಸಿ, ಕನರ್ಾಟಕ ರಾಜ್ಯ ರಚಿಸಿ ರಾಜ್ಯದ ಏಕತೆ, ಐಕ್ಯತೆಯನ್ನು ಎತ್ತಿ ಹಿಡಿದಿರುವ ಸಂದರ್ಭದಲ್ಲಿ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ಖಂಡನೀಯವಾದುದು, ಆಲೂರು ವೆಂಕಟರಾಯರು, ಗಂಗಾಧರ್ರಾವ್ ದೇಶಪಾಂಡೆಯಂತಹ ಹಲವರು ರಾಜ್ಯದ ಏಕೀಕರಣಕ್ಕಾಗಿ ದುಡಿದು ಅಖಂಡ ಕನರ್ಾಟಕ ಸೃಷ್ಠಿಸಿದ್ದಾರೆ, ಆದರೆ ಸಚಿವರಾಗಿ ರಾಜ್ಯವನ್ನು ಇಬ್ಬಾಗ ಮಾಡುವ ಹೇಳಿಕೆ ಸರಿಯಲ್ಲ ಅವರ ಸಚಿವ ಸ್ಥಾನದ ರಾಜೀನಾಮೆ ಪಡೆಯಬೇಕೆಂದು ತಿಳಿಸಿದರು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದ ಘನತೆಯನ್ನು ಎತ್ತಿ ಹಿಡಿದು ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತೇನೆಂದು ತಿಳಿಸಿ  ಈಗ ಪ್ರತ್ಯೇಕ  ರಾಜ್ಯದ ಕೂಗು ಹರಿಸಿರುವುದು ಅವರ ಮೂರ್ಖತನದ ಪರಮಾವಧಿ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕನರ್ಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿ.ಟಿ.ಗುರುಮೂತರ್ಿ , ತಾ.ಅಭಾವಿಪ ಪ್ರಮುಖ್ ಚೇತನ್ಪ್ರಸಾದ್, ಕರವೇಯ ವಾಸು, ಎಸ್.ಬಿ.ಕುಮಾರ್, ಶಿವಣ್ಣ  ಮುಂತಾದವರಿದ್ದರು.

Saturday, October 20, 2012


ಚಿಕ್ಕನಾಯಕನಹಳ್ಳಿ,ಅ.16 : ತಾಲ್ಲೂಕಿನ ಹಂದನಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಜಮೀನಿನ ಸಂಬಂಧ ಪ್ರಕರಣದ ನಡೆದಿದ್ದ ಗಲಾಟೆಯಲ್ಲಿ ಕೆಂಪಣ್ಣ ಎಂಬ ವ್ಯಕ್ತಿಗೆ ಇಲ್ಲಿನ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ವೀಣಾ.ಎನ್ರವರು ಒಂದು ವರ್ಷ ಜೈಲುವಾಸ ಮತ್ತು ಐದುನೂರು ರೂಪಾಯಿ ದಂಡ ವಿಧಿಸಿ ತೀಪರ್ು ನೀಡಿದ್ದಾರೆ.
  2010, ಜೂನ11ರಂದ ದಾಖಲಾಗಿದ್ದ ಪ್ರಕರಣದ ಆರೋಪಿಗಳಾದ ಕೆಂಪಣ್ಣ, ಈತನ ಹೆಂಡತಿ ಸುಶೀಲಮ್ಮ, ಇವರ ಮಗಳು ಗೌರಮ್ಮ, ಹಾಗೂ ಗೌರಮ್ಮನ ಗಂಡ ಕೆಂಪಯ್ಯ ಇವರುಗಳು ಜಮೀನಿನ ದ್ವೇಷದಿಂದ ಸರೋಜಳಮ್ಮನನ್ನು ಹೊಡೆಯಬೇಕೆಂಬ ಉದ್ದೇಶದಿಂದ ಅವ್ಯಾಚ್ಯಾ ಶಬ್ದಗಳಿಂದ ಬೈದು, ಆರೋಪಿ ಕೆಂಪಣ್ಣ ದೊಣ್ಣೆಯಿಂದ ಆಕೆಯ ಬಲಗೈಗೆ ಹೊಡೆದು ಬಲಗೈ ಮುರಿದಿದ್ದು ಸುಶೀಲಮ್ಮ, ಗೌರಮ್ಮ, ಸರೋಜಳಮ್ಮನ ಮೇಲೆ ಆರೋಪಿತರು ಹಲ್ಲೆ ಮಾಡಿ ಸರೋಜಮ್ಮಳಿಗೆ ಪ್ರಾಣ ಬೆದರಿಕೆ ಹಾಕಿದ್ದರ ಮೇರೆಗೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರಿಗೆ ಭಾರತೀಯ ದಂಡ ಸಂಹಿತಿ ಕಲಂ 504, 506, 324ರ ಅಡಿಯಲ್ಲಿ ತಲಾ 6ತಿಂಗಳು ಜೈಲುವಾಸ ಇಲ್ಲವೇ 500ರೂ ದಂಡ ವಿಧಿಸಿ ನ್ಯಾಯಾಲಯ ತೀಪರ್ು ನೀಡಿದೆ.
ರಾಜ್ಯ ಸಕರ್ಾರದ ಪರವಾಗಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ ವಾದಿಸಿದ್ದರು.
ತೆಂಗು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ ನಿಗಧಿಗೆ ಒತ್ತಾಯ: ಸಂಸದ ಜಿ.ಎಸ್.ಬಿ.
ಚಿಕ್ಕನಾಯಕನಹಳ್ಳಿ,ಅ.14 : ತೆಂಗು ಬೆಳೆಯು ದೇಶದಲ್ಲಿ ಶೇ. 47ರಷ್ಟು ಮಾತ್ರ ಉತ್ಪಾನೆಯಾಗುತ್ತಿದೆ, ಉಳಿದ ಶೇ.53ರಷ್ಟು ತೆಂಗನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಇದರಿಂದ ಕೊಬ್ಬರಿ ಬೆಲೆಗಿಂತ ಪಾಮಾಯಿಲ್(ತಾಳೆ ಎಣ್ಣೆ)ನ ಬೆಲೆ ಹೆಚ್ಚುತ್ತಿದೆ ಇದನ್ನು ತಡೆಗಟ್ಟಲು ತೆಂಗು ಬೆಳೆಗಾರರು ಒಗ್ಗಟ್ಟಾಗಿ ಬೆಳೆಯನ್ನು ಹೆಚ್ಚಿಸಿ ಕೊಬ್ಬರಿಗೆ ಉತ್ತಮ ಬೆಲೆ ದೊರಕುವಂತೆ ಮಾಡಬೇಕು ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ತೆಂಗು ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೆಂಗು ಬೆಳೆಗಾರರ ಅಭಿವೃದ್ದಿಗಾಗಿ ಕೇಂದ್ರ ಸಕರ್ಾರ ನೀಡುತ್ತಿರುವ ಸವಲತ್ತನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಆದರೆ ಬೆಳೆಗಾರರು ಸವಲತ್ತನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದರೆ ಎಂದ ಅವರು ಕೇರಳ, ಕನರ್ಾಟಕ, ಆಂದ್ರಪ್ರದೇಶ, ತಮಿಳುನಾಡಿನ ರೈತರಿಗೆ ತೆಂಗು ಬೆಳೆ ಉತ್ಪಾದಿಸಲು ಅಲ್ಲಿನ ಸಕರ್ಾರಗಳು ಉತ್ತಮ ಅವಕಾಶ ಕಲ್ಪಿಸುತ್ತಿವೆ ಎಂದರು.
ಬೆಳೆಗಾರರು ಉತ್ತಮ ತೆಂಗನ್ನು ಬೆಳೆಯಲು  ತಾವು ಮಾಡುವ ಪರಾಂಪರಿಕ ಕೃಷಿಯೊಂದಿಗೆ ಸಾವಯುವ ಕೃಷಿ, ರಾಸಾಯನಿಕಗಳನ್ನು ಬಳಸಿ ಕೃಷಿ ಮಾಡಿದರೆ ಹೆಚ್ಚು ಬೆಳೆ ಬೆಳೆಯಬಹುದು ಎಂದರಲ್ಲದೆ ತೆಂಗಿನ ಬೆಳೆಯಲ್ಲಿ ರಸಸೋರುವ ರೋಗ, ಕೆಂಪುಮೂತಿ ರೋಗವನ್ನು ತಡೆಗಟ್ಟಬೇಕು, ಇಲ್ಲವಾದರೆ ಈ ರೋಗದಿಂದ ಬೆಳೆಗೆ ಹೆಚ್ಚು ತೊಂದರೆಯಾಗುತ್ತದೆ, ರಾಜ್ಯದಲ್ಲಿ ತೆಂಗುಬೆಳೆಯಲ್ಲಿ ರಸಸೋರುವ ರೋಗ ಹೆಚ್ಚಾಗಿ ಕಂಡ ಬರುತ್ತಿದೆ ಆದ್ದರಿಂದ ರೈತರು ಈ ರೋಗ ತಡೆಗಟ್ಟಲು ಕಾಳಜಿವಹಿಸಬೇಕು ಎಂದರು.
 ಹುಳಿಯಾರಿನಲ್ಲಿ ನೆಫೆಡ್ ಕೇಂದ್ರ ಇರುವಂತೆ ಚಿಕ್ಕನಾಯಕನಹಳ್ಳಿಯಲ್ಲಿ ಹಾಗೂ   ಇತರೆಡೆಗಳಲ್ಲೂ  ಕೊಬ್ಬರಿ ನೆಫೆಡ್ ಕೇಂದ್ರ ತೆರೆಯಬೇಕು ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಇಂತಹ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಈಡೀ ರಾಜ್ಯಾದ್ಯಾಂತ ತೆಂಗು ಬೆಳೆಗಾರರು, ತೆಂಗು ಮಾರಾಟಗಾರರಿಗೆ ಹಲವಾರು ಸ್ಫಧರ್ಿಗಳಿದ್ದಾರೆ ಇಂತಹ ಸಂದರ್ಭದಲ್ಲಿ ಉತ್ಪಾದನೆ, ಮಾರಾಟ ಮಾಡುವಾಗ ಮೋಸ ಮಾಡುವ ವರ್ತಕರಿರುತ್ತಾರೆ ಇದನ್ನು ಗಮನದಲ್ಲಿಟ್ಟುಕೊಂಡು ರೈತರು ವ್ಯವಹಾರ ನಡೆಸಬೇಕು ಎಂದರು.
ಸಮಾರಂಭದಲ್ಲಿ ತಾಲ್ಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಿಂಗರಾಜು, ತೆಂಗು ಬೆಳೆಗಾರರ ಜಿಲ್ಲಾ ಸಂಚಾಲಕ ಎಂ.ಬಿ.ಸಿದ್ದಪ್ಪ, ತಿಪಟೂರು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಸ್ವಾಮಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ರೈತ ಮುಖಂಡ ಸತೀಶ್ಕೆಂಕೆರೆ ಮತ್ತಿತರರು ಉಪಸ್ಥಿತರಿದ್ದರು.


ತಾ.ಪಂ. ಗದ್ದುಗೆಗೆ ಚುನಾವಣೆ: ಬಿ.ಜೆ.ಪಿ.ಯ.ಜಗದೀಶ್ ಅಧ್ಯಕ್ಷ, ಜೆ.ಡಿ.ಯು.ನ.ಲತಾ ಉಪಾಧ್ಯಕ್ಷೆ
ಚಿಕ್ಕನಾಯಕನಹಳ್ಳಿ,ಅ.19: ತಾ.ಪಂ. ಅಧ್ಯಕ್ಷರಾಗಿ ಬಿ.ಜೆ.ಪಿ.ಯ ಜೆ.ಸಿ.ಪುರ ಕ್ಷೇತ್ರದ ಸದಸ್ಯ ಎಂ.ಎಂ.ಜಗದೀಶ್ 12 ಮತಗಳನ್ನು ಪಡೆದು ಆಯ್ಕೆಯಾದರೆ, ತೀರ್ಥಪುರ ಕ್ಷೇತ್ರದ ಎಂ.ಇ.ಲತಾ ಕೇಶವಮೂತರ್ಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಶಿಲ್ಪ ತಿಳಿಸಿದರು.
ಒಟ್ಟು 19 ಸದಸ್ಯ ಬಲವಿರುವ ತಾ.ಪಂ.ಸಮಿತಿಯಲ್ಲಿ ಜೆ.ಡಿ.ಎಸ್.ನ 7ಸದಸ್ಯರು  ಬಿ.ಜೆ.ಪಿ.6 ಹಾಗೂ ಜೆ.ಡಿ.ಯು 6 ಸಂಖ್ಯಾಬಲಹೊಂದಿದೆ, ಅಧ್ಯಕ್ಷರ ಹುದ್ದೆಗೆ ಇಬ್ಬರು ಸ್ಪಧರ್ೆಗಿಳಿದಿದ್ದರು, ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದ ಅಧ್ಯಕ್ಷರ ಹುದ್ದೆಗೆ ಬಿ.ಜೆ.ಪಿ.ಯಜಗದೀಶ್ 12 ಮತಗಳನ್ನು ಪಡೆದರೆ, ಜೆ.ಡಿ.ಎಸ್.ನ ಎ.ಜಿ.ಕವಿತ 7 ಮತಗಳಿ ತೃಪ್ತಿ ಪಡೆದುಕೊಳ್ಳಬೇಕಾಯಿತು.
ಹೊಂದಾಣಿಕ ಸೂತ್ರದಂತೆ ಅಧ್ಯಕ್ಷ ಹುದ್ದೆ:  ಪತ್ರಕರ್ತರೊಂದಿಗೆ ಮಾತನಾಡಿದ ಅಧ್ಯಕ್ಷ ಎಂ.ಎಂ.ಜಗದೀಶ್, ಈ ಚುನಾವಣೆಯಲ್ಲಿ ಬಿ.ಜೆ.ಪಿ ಹಾಗೂ ಜೆ.ಡಿ.ಯು ಹೊಂದಾಣಿಕೆ ಮಾಡಿಕೊಂಡಿದ್ದು, ಅದರ ಪ್ರಕಾರ ನಾನು 6 ತಿಂಗಳ ಅವಧಿಗೆ ಅಧ್ಯಕ್ಷನಾಗಿರುವುದಾಗಿ ತಿಳಿಸಿದರಲ್ಲದೆ, ಮುಂದಿನ ಆರು ತಿಂಗಳನಂತರ  ಅಧ್ಯಕ್ಷ ಗಾಧಿಯನ್ನು  ಜೆ.ಡಿ.ಯು.ಗೆ ಬಿಟ್ಟುಕೊಡಲು ಸಿದ್ದ ಎಂದರು.
ಉಪಾಧ್ಯಕ್ಷೆ ಲತಾ ಕೇಶವಮೂತರ್ಿ ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ಮುಖಂಡ ಹಾಗೂ ಡಿ.ಸಿ.ಸಿ.ಬ್ಯಾಂಕ್ನ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ರವರ ಸಹಕಾರದಿಂದ ನಾನು ಈ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು ಎಂದ ಅವರು, ಈ ಮೂಲಕ ಕಾಡು ಗೊಲ್ಲ ಸಮಾಜದ ಮಹಿಳೆಯೊಬ್ಬಳು ಪ್ರಥಮ ಬಾರಿಗೆ ತಾ.ಪಂ. ಉಪಾಧ್ಯಕ್ಷರ ಹುದ್ದೆ ಅಲಂಕರಿಸಿದಂತಾಗಿದೆ ಎಂದರು.
ರಸ್ತೆಗಿಳಿದ ಜೆ.ಡಿ.ಎಸ್. ಸದಸ್ಯರು: ಬಿ.ಜೆ.ಪಿ. ಸದಸ್ಯರು ಮೋಸ ಮಾಡಿದ್ದಾರೆ, ಕೆ.ಎಸ್.ಕಿರಣ್ಕುಮಾರ್ ವಚನ ಭ್ರಷ್ಟರಾಗಿದ್ದಾರೆ ಎಂಬ ಘೋಷಣೆಗಳ ಮೂಲಕ ರಸ್ತೆಗಿಳಿದ ಜೆ.ಡಿ.ಎಸ್.ನ ಚೇತನ ಗಂಗಾಧರ್, ಲತಾ, ಹೇಮಾವತಿ, ಕವಿತಾ, ಬೀಬಿ ಫಾತೀಮಾ, ಶಿವರಾಜ್ ಸೇರಿದಂತೆ ಅವರ ಬೆಂಬಲಿಗರು ಐ.ಬಿ.ಮುಂಭಾಗದಲ್ಲಿ ರಸ್ತೆಗಿಳಿದು ಪ್ರತಿಭಟಿಸಲು ಮುಂದಾದರು, ಕಳೆದ ಅವಧಿಯಲ್ಲಿ ನಮ್ಮೊಂದಿಗೆ ಅಧಿಕಾರ ಹಂಚಿಕೊಂಡ ಬಿ.ಜೆ.ಪಿ.ಯವರು  ಅಧ್ಯಕ್ಷರಾಗಿ ಮೆರೆದು, ಈಗ ನಮ್ಮ ಕಡೆಯವರು  ಅಧ್ಯಕ್ಷರಾಗುವ ಹಂತದಲ್ಲಿ ನಮ್ಮಿಂದ ದೂರವಾಗಿ ಜೆ.ಡಿ.ಯು ಸದಸ್ಯರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಕೆಲಕಲ ರಸ್ತೆ ಮಧ್ಯೆ ಕುಳಿತುಕೊಂಡರಾದರೂ ಪೊಲೀಸರ ಮಧ್ಯೆ ಪ್ರವೇಶದಿಂದ ಜೆ.ಡಿ.ಎಸ್.ನವರು ರಸ್ತೆಯನ್ನು ತೆರವುಗೊಳಿಸಿ ವಾಹನಗಳು ಓಡಾಡಲು ಅನವು ಮಾಡಿದರು.
ಹಲವು ಕುತೂಹಲಗಳನ್ನಿಟ್ಟುಕೊಂಡಿದ್ದ ಬಿ.ಜೆ.ಪಿ, ಜೆ.ಡಿ.ಎಸ್ ಹಾಗೂ ಜೆ.ಡಿ.ಯು ಪಕ್ಷದ ಬೆಂಬಲಿಗರು, ಭಾರಿ ಸಂಖ್ಯೆಯಲ್ಲಿ ತಾ.ಪಂ.ಯ ಸುತ್ತಾಮುತ್ತಾ ಸೇರಿದ್ದರು. ಹಲವು ಗೊಂದಲಗಳಿಗೆ ಕಾರಣವಾಗಿದ್ದ ಚುನಾವಣೆಯ ಫಲಿತಾಂಶವನ್ನು ತಿಳಿಯಲು ಸೇರಿದ್ದ ಜನರನ್ನು ಸಮರ್ಥರೀತಿಯಲ್ಲಿ ಹತೋಟಿಗೆ ತೆಗೆದುಕೊಂಡಿದ್ದ ಪೊಲೀಸರು,  ಶಾಂತರೀತಿಯಿಂದ ಚುನಾವಣೆ ನಡೆಯುವಂತೆ ನೋಡಿಕೊಂಡರಲ್ಲದೆ, ವಿಜಯೋತ್ಸವದ ಮೇರವಣಿಗೆಯನ್ನು ದಕ್ಷರೀತಿಯಲ್ಲಿ ನಿಭಾಯಿಸಿದರು.   

ಮಾತಿಗೆ ತಪ್ಪಿದ ಬಿ.ಜೆ.ಪಿ.: ಶಾಸಕ ಸಿ.ಬಿ.ಎಸ್. ಆರೋಪ
ಚಿಕ್ಕನಾಯಕನಹಳ್ಳಿ,ಅ.19: ತಾಲೂಕು ಪಂಚಾಯಿತಿ ಚುನಾವಣೆಯ ಅಧಿಕಾರಕ್ಕಾಗಿ ತಾಲೂಕು ಬಿ.ಜೆ.ಪಿ. ಮಾತಿಗೆ ತಪ್ಪಿ, ವಚನ ಭ್ರಷ್ಟತನವನ್ನು ಪ್ರದಶರ್ಿಸುವ ಮೂಲಕ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ರವರು ಒಂದು ಸಮಾಜಕ್ಕೆ ಸೀಮಿತವೆಂಬುದನ್ನು ಪ್ರದಶರ್ಿಸಿದ್ದಾರೆ ಶಾಸಕ ಸಿ.ಬಿ.ಸುರೇಶ್ ಬಾಬು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅವಧಿಯ ಅಧ್ಯಕ್ಷರ ಅವಧಿಯಲ್ಲಿ ಜೆ.ಡಿ.ಎಸ್.ನೊಂದಿಗೆ ಒಪ್ಪಂದ ಮಾಡಿಕೊಂಡ ಬಿ.ಜೆ.ಪಿ.ಯವರು ಅವರು ಅಧ್ಯಕ್ಷ ಪದವಿ ಇಟ್ಟುಕೊಂಡು ನಮಗೆ ಉಪಾಧ್ಯಕ್ಷ ಪದವಿಯನ್ನು ಕೊಟ್ಟರು. ಬಿ.ಜೆ.ಪಿಯವರ ಒಪ್ಪಂದಂತೆ ಈ ಅವಧಿಯಲ್ಲಿ ಜೆ.ಡಿ.ಎಸ್.ಗೆ  ಅಧ್ಯಕ್ಷ ಪದ ವಿ ಕೊಡಬೇಕಾಗುತ್ತದೆ ಎಂಬ ಧೋರಣೆಯಿಂದ ಜೆ.ಡಿ.ಯು.ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಮತ್ತೇ ಬಿ.ಜೆ.ಪಿ.ಯವರು ಅದರಲ್ಲೂ ಅವರ ಸಮಾಜದವರೇ ಅಧ್ಯಕ್ಷರಾಗುವಂತೆ ನೋಡಿಕೊಳ್ಳುವ ಮೂಲಕ ಬಿ.ಜೆ.ಪಿ.ಯವರ ಕೋಮುವಾದಿತನವನ್ನು ಮತ್ತೇ ಪ್ರದಶರ್ಿಸಿದ್ದಾರೆ, ಇದಕ್ಕೆ ಮುಂದಿನ ಚುನಾವಣೆಗಳಲ್ಲಿ ಬಿ.ಜೆ.ಪಿ.ಗೆ ತಕ್ಕ ಪಾಠ ಜನರೇ ಕಲಿಸಲಿದ್ದಾರೆ ಎಂದರು.
ತಾ.ಪಂ.ಚುನಾವಣೆ ಸಂಬಂಧ ಹಿಂದಿನ ಒಪ್ಪಂದದ ಬಗ್ಗೆ ನೆನಪಿಸಲು ನಾನು ದೂರವಾಣಿ ಮೂಲಕ ಸಂಪಕರ್ಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಅವರ ಮೊಬೈಲ್ನ ಸ್ವಿಚ್ ಆಫ್ ಮಾಡಿಕೊಳ್ಳುವ ಮೂಲಕ ತಮ್ಮ ಅಸಹಕಾರವನ್ನು ಪ್ರದಶರ್ಿಸಿದರು ಎಂದರು.
ಇನ್ನು ಮುಂದೆ ಜೆ.ಡಿ.ಎಸ್ ಯಾವುದೇ ಸಂದರ್ಭದಲ್ಲೂ ಬಿ.ಜೆ.ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟ ಪಡಿಸಿದ ಅವರು, ಈ ವಿಷಯವನ್ನು ನಮ್ಮ ಕಾರ್ಯಕರ್ತರು ಜನರ ಮುಂದಿಟ್ಟು ಮುಂದಿನ ಚುನಾವಣೆಗಳಿಗೆ ಹೋಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆ.ಡಿ.ಎಸ್.ನ ತಾ.ಪಂ.ಸದಸ್ಯರುಗಳಾದ ಚೇತನ ಗಂಗಾಧರ್, ಲತಾ, ಹೇಮಾವತಿ, ಕವಿತಾ, ಬೀಬಿ ಫಾತೀಮಾ, ಶಿವರಾಜ್ ಸೇರಿದಂತೆ ಕಲ್ಪವೃಕ್ಷ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ರಮೇಶ್, ಜೆ.ಡಿ.ಎಸ್.ಮುಖಂಡ ರಾಮಚಂದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾ.ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ ನಿಧನ
ಚಿಕ್ಕನಾಯಕನಹಳ್ಳಿ,ಅ.19 : ತಾಲ್ಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ 15ವರ್ಷಗಳ ಕಾಲ ಹಾಗೂ ಕಾರ್ಯದಶರ್ಿಯಾಗಿ 10ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕ ಎಂ.ನರಸಿಂಹಯ್ಯನವರು(86) ವಿಧಿವಶರಾಗಿದ್ದಾರೆ.
ಎಂ.ನರಸಿಂಹಯ್ಯನವರು ಬಿ.ಎ.ಪಧವೀದರರಾಗಿದ್ದು, ಇವರು ಶಿಕ್ಷಕ ವೃತ್ತಿಯನ್ನು ತಿಮ್ಮನಹಳ್ಳಿಯಿಂದ ಪ್ರಾರಂಭಿಸಿ, ಚಿಕ್ಕನಾಯಕನಹಳ್ಳಿ, ಕಿಬ್ಬನಹಳ್ಳಿಯಲ್ಲಿ ವೃತ್ತಿ ನಿರ್ವಹಿಸಿ ಚಿಕ್ಕನಾಯಕನಹಳ್ಳಿಯ ಕುರುಬರಶ್ರೇಣಿಯಲ್ಲಿ ನಿವೃತ್ತಿ ಹೊಂದಿರುತ್ತಾರೆ. ನಂತರ ಚಿಕ್ಕನಾಯಕನಹಳ್ಳಿಯ ತಾಲ್ಲೂಕು ನಿವೃತ್ತಿ ಶಿಕ್ಷಕರ ಸಂಘದಲ್ಲಿ ಸೇವೆ ಸಲ್ಲಿಸಿ ಅವರ ಅವಧಿಯಲ್ಲಿ ಸಂಘಕ್ಕೆ ಕೆಳ ಮತ್ತು ಮೊದಲ ಅಂತಸ್ಥಿನ ಕಟ್ಟಡ ನಿಮರ್ಾಣ ಮಾಡಿದ್ದಾರೆ.
ಮೈಸೂರಿನಲ್ಲಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಇವರ ಕಾರ್ಯವೈಖರಿಯನ್ನು ಮೆಚ್ಚಿ ಅಭಿನಂದಿಸಲಾಗಿತ್ತು. ಇವರು ಕಳೆದ  ಹದಿನೈದು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಇವರು ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಾದ ವಿಜ್ಞಾನ ಸಂಘದ ಅಧ್ಯಕ್ಷೆ ಹಾಗೂ ತೀರ್ಥಪುರ ಸಕರ್ಾರಿ ಕಾಲೇಜ್ನ ಪ್ರಾಚಾಯರ್ಾರಾದ  ಎನ್.ಇಂದಿರಮ್ಮ ನವರನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರವನ್ನು ಕಂದಿಕೆರೆಯ ಅವರ ಜಮೀನಿನಲ್ಲಿ ಮಾಡಲಾಯಿತು.
ಪಾಥರ್ೀವ ಶರೀರಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಮುಷ್ಕರ
ಚಿಕ್ಕನಾಯಕನಹಳ್ಳಿ,ಅ.19 : ಖಾಯಮಾತಿ, ಕನಿಷ್ಟಕೂಲಿ, ಪಿಂಚಣಿ ಹಾಗೂ ಉಪಧನ(ಗ್ರಾಚ್ಯುಯಿಟಿ) ಮುಂತಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಇಲ್ಲಿನ ಅಂಗನವಾಡಿ ಕಾರ್ಯಕತರ್ೆಯರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿಯವರೆಗೆ ಹೊರಟ ಪ್ರತಿಭಟನಾ ಮೆರವಣಿಯಲ್ಲಿ ಅಂಗನವಾಡಿ ನೌಕರರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶಿರಸ್ತೆದಾರ್ ಬೊಮ್ಮಾಯ್ಯರವರಿಗೆ ಮನವಿ ಪತ್ರ ಸಲ್ಲಿಸಿದರು.
ಮಿನಿ ಅಂಗನವಾಡಿ ಕೇಂದ್ರದಲ್ಲಿರುವ ಕಾರ್ಯಕತರ್ೆಯರಿಗೂ ಮೈನ್ ಅಂಗನವಾಡಿ ಕಾರ್ಯಕತರ್ೆಯರ ಸೌಲಭ್ಯ ನೀಡಬೇಕು, ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು, ಅಂಗನವಾಡಿ ಕಾರ್ಯಕತರ್ೆರಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಲ ಕಿರುಕುಳ ನಿಲ್ಲಬೇಕು. ಗ್ರಾಮ ನೈರ್ಮಲ್ಯ ಸಮಿತಿಯಲ್ಲಿ ಆಶಾ ಕಾರ್ಯಕತರ್ೆ ಇಲ್ಲದ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕತರ್ೆಯರು ಕಾರ್ಯದಶರ್ಿಯಾಗಿ ಸಮಿತಿ ನಡೆಸುತ್ತಿದ್ದು ಇದರಲ್ಲಿ ಪಂಚಾಯಿತಿಯ ಸದಸ್ಯರು ಅಧ್ಯಕ್ಷರಾಗಿದ್ದು ಇವರು ಇದರಲ್ಲಿ ಪಂಚಾಯಿತಿಯ ಸದಸ್ಯರು ಅಧ್ಯಕ್ಷರಾಗಿದ್ದು ಇವರು ಕಾರ್ಯಕತೆರ್ಯರಿಗೆ ಕಿರುಕುಳ ನೀಡುವುದು ತಪ್ಪಬೇಕು, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಸಹಾಯಕಿಯರಿಗೆ ಕೊಟ್ಟಿರುವ ಸಮವಸ್ತ್ರ ಸರಿ ಇಲ್ಲದಿರುವುದರಿಂದ ಕ್ಷೇತ್ರ ಮಟ್ಟದ ಸಭೆ ಮತ್ತು ವೃತ್ತ ಮಟ್ಟದ ಸಭೆ ಹಾಕಬಾರೆಂದು ಅನುಮತಿ ನೀಡಬೇಖು, ಅಂಗನವಾಡಿ ಕೇಂದ್ರದಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಮುಜೀಬ್, ಅಧ್ಯಕ್ಷೆ ಪೂರ್ಣಮ್ಮ, ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯದಶರ್ಿ ಶಾರದ ಕೆ.ಜಿ, ಖಜಾಂಚಿ ಯಶೋಧ, ಸಾವಿತ್ರಮ್ಮ, ಲಕ್ಷ್ಮಮ್ಮ, ಸುನಂದ ಹಾಗೂ ಕಾರ್ಯಕತರ್ೆಯರು ಉಪಸ್ಥಿತರಿದ್ದರು.



Wednesday, October 10, 2012


  1. ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿರುವಾಗ ಅಲ್ಲಿನ ಬೆಳೆಗೆ ನೀರು ಬಿಡುಎನ್ನುವುದು  ಎಂತಹ ನ್ಯಾಯ: ಡಾ.ಯತೀಶ್ವರಶಿವಾಚಾರ್ಯಸ್ವಾಮಿ

  • ವಿದ್ಯಾಥರ್ಿಗಳಿಗೂ ತಟ್ಟಿದ ಕಾವೇರಿ ಹೋರಾಟದ ಕಾವು
  • ಮಾನವ ಸರಪಳಿ ರಚಿಸಿ,  ರಸ್ತೆತಡೆ.


 ಚಿಕ್ಕನಾಯಕನಹಳ್ಳಿ,ಅ.08 ; ಹಳೇ ಮೈಸೂರು ಪ್ರಾಂತ್ಯದವರು ಕುಡಿಯುವ ನೀರಿಗಾಗಿ ನಂಬಿರುವುದೇ ಕಾವೇರಿ ನೀರನ್ನು, ನಾವಿಲ್ಲಿ ಕುಡಿಯುವ ನೀರಿಗೇ ಪರಿತಪಿಸುತ್ತಿರುವಾಗ ತಮಿಳುನಾಡಿನ ಜನಕ್ಕೆ  ಬೇಸಾಯಕ್ಕೆ ನೀರು ಬಿಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಕುಪ್ಪೂರು ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಹೇಳಿದರು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ಸಂಘಟನೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ಬಾರಿಯ ಬರಗಾಲದ ಸಂದರ್ಭದಲ್ಲಿ ನೀರಿನ  ವಿಷಯವಾಗಿ ಜಯಲಲಿತಾ ಸಮಸ್ಯೆ ಉಂಟು ಮಾಡುತ್ತಲೇ ಇರುತ್ತಾರೆ, ನಮ್ಮ ರಾಜ್ಯದಲ್ಲಿ ಹುಟ್ಟುವ ಕಾವೇರಿ ನಮ್ಮವಳು, ನಮಗಾಗಿ ಮೀಸಲಿರುವಳು, ಕೇಂದ್ರ ಸಕರ್ಾರ ಕಾವೇರಿ ವಿಚಾರವಾಗಿ ತಮಿಳುನಾಡಿನ ಪರ ವಹಿಸುವ ಮೂಲಕ  ರಾಜ್ಯಕ್ಕೆ ಮೋಸ ಮಾಡುತ್ತಲೇ ಬಂದಿದ್ದಾರೆ ಎಂದರು.
ಭಾಜಪ ಮುಖಂಡ  ಶಿವಣ್ಣ ಮಾತನಾಡಿ, ಕೇಂದ್ರ ಸಕರ್ಾರ ರಾಜಕೀಯ ಉದ್ದೇಶದಿಂದ ಕಾವೇರಿ ನದಿ ನೀರನ್ನು ಬಳಸಿಕೊಂಡಿರುವುದು ಖಂಡನೀಯವಾಗಿದೆ, ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು ಇಲ್ಲವಾದರೆ ನೀರಿಗಾಗಿ ರಾಜ್ಯಾದ್ಯಂತ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.
ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ, ಈಗಾಗಲೇ ತಮಿಳುನಾಡಿಗೆ ಬಿಟ್ಟಿರುವ ನೀರಿನಿಂದ ಕಬಿನಿ ಜಲಾಶಯ ಖಾಲಿಯಾಗುವ ಭೀತಿ ಎದುರಾಗಿದೆ, ಇದರಿಂದ ರೈತರಿಗೆ ತೀವ್ರ ರೀತಿಯ ಸಂಕಷ್ಟ ಎದುರಾಗಿ ಮುಂದಿನ ದಿನಗಳಲ್ಲಿ ಹನಿ ನೀರಿಗೂ ಇಲ್ಲಿನ ಜನ ಪರದಾಡುವ ಸ್ಥಿತಿ ಎದುರಾಗಲಿದೆ ಎಂದರು. 
ತಾ.ಅಭಾವಿಪ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ರಾಜ್ಯದಲ್ಲಿ ಮಳೆ ಕೊರತೆಯಿಂದ ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದರೂ ಸಹ ಕೇಂದ್ರ ಸಕರ್ಾರ ತಮಿಳುನಾಡಿಗೆ ನೀರನ್ನು ಬಿಡಬೇಕು ಎಂದು ಅಧಿಸೂಚನೆ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದರಲ್ಲದೆ,  ಜನವರಿ ನಂತರ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾದರೂ ಆಶ್ಚರ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸಂಚಾಲಕ ಜಾಕಿರ್ ಹುಸೇನ್, ಕಾರ್ಯಕರ್ತರುಗಳಾದ ರವಿ, ಮಧು, ಸುಧಿಂದ್ರ, ಕರವೇ ಕಾರ್ಯಕರ್ತರಾದ ಮಧು, ಸೇರಿದಂತೆ ಕಾಲೇಜು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾಥರ್ಿಗಳು ಪಾಲ್ಗೊಂಡು , ಮಾನವ ಸರಪಳಿ ರಚಿಸಿದರು, ರಸ್ತೆ ತಡೆ ನಡೆಸಿದರು.

Saturday, October 6, 2012


ಕಾವೇರಿಗೆ  ಚಿ.ನಾ.ಹಳ್ಳಿಯಲ್ಲಿ ಬಂದ್ಗೆ ಸಂಪೂರ್ಣ ಬೆಂಬಲ




aPÀÌ£ÁAiÀÄPÀ£ÀºÀ½î §AzïUÁV £ÉºÀgÀÄ ¸ÀPÀð¯ï §½ ¸ÀÛ§Ý
ka,ra,ve strice


memorandam sallike
raitha sangatane strice


ಚಿಕ್ಕನಾಯಕನಹಳ್ಳಿ,ಅ.06 : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು  ವಿರೋಧಿಸಿ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕನರ್ಾಟಕ ಬಂದ್ಗೆ ತಾಲ್ಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಇಲ್ಲಿನ ಕನರ್ಾಟಕ ರಕ್ಷಣ ವೇದಿಕೆ, ಜನಪರ ವೇದಿಕೆ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸ್ಪಂದನ ಪ್ರಗತಿಪರ ಒಕ್ಕೂಟ, ಸ್ನೇಹಕೂಟ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ, ಟಿಪ್ಪುಸುಲ್ತಾನ್ ಯುವಕ ಸಂಘ, ಭುವನೇಶ್ವರಿ ಯುವ ಸಂಘ, ಕುಂಚಾಂಕುರ ಕಲಾ ಸಂಘ, ಕನ್ನಡ ಸಾಹಿತ್ಯ ಪರಿಷತ್, ಛಾಯಾಗ್ರಾಹಕರ ಸಂಘ, ಸುಭಾಷ್ ಚಂದ್ರಬೋಸ್ ಆಟೋಚಾಲಕರ ಸಂಘ, ಕನ್ನಡಭಿಮಾನಿಗಳು ಕನರ್ಾಟಕ ಬಂದ್ಗೆ ಬೆಂಬಲಿಸಿ ಧರಣಿ ಸತ್ಯಾಗ್ರಹ ಹಾಗೂ  ಪ್ರತಿಭಟನೆ ನಡೆಸಿದವು.
ಆಸ್ಪತ್ರೆಗಳು, ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿದರು.
ಪ್ರತಿಭಟನೆಯ ವೇಳೆ ಸಂಚರಿಸುತ್ತಿದ್ದ ವಾಹನಗಳನ್ನು ಕನ್ನಡಪರ ಸಂಘಟನೆಗಳು ತಡೆದು ಬಂದ್ಗೆ ಸಹಕರಿಸುವಂತೆ ಒತ್ತಾಯಿಸಿದವು.
ಈ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಎಸ್.ಮುರುಡಯ್ಯ ಮಾತನಾಡಿ ರಾಜ್ಯದಲ್ಲಿ ಈಗಾಗಲೇ ಮಳೆ ಇಲ್ಲದೆ  ಬರ ಬಂದು ರೈತರು ಕಂಗಾಲಾಗಿದ್ದಾರೆ, ರೈತರು ಬಿತ್ತಿರುವ ಬೆಳೆಗಳು ಅರ್ಧಕ್ಕೆ ಒಣಗಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಸುಪ್ರಿಂಕೋಟರ್್ ಅವೈಜ್ಞಾನಿಕ ತೀಪರ್ು ನೀಡಿದ್ದು ಈ ತೀರ್ಪನ್ನು ಕೂಡಲೇ   ಮರುಪರಿಶೀಲಿಸಿ ಕನರ್ಾಟಕ ರಾಜ್ಯದ ಸಮಸ್ಯೆಯ ಕಡೆಯೂ ಗಮನ ಹರಿಸಿ ತೀಪರ್ು ನೀಡಬೇಕು ಎಂದರು.
ಸಾಹಿತಿ ಎಂ.ವಿ.ನಾಗರಾಜ್ ರಾವ್ ಮಾತನಾಡಿ, ಕಾವೇರಿ ನಮ್ಮವಳು, ಕೇಂದ್ರ ಸಕರ್ಾರ ಯಾರನ್ನೊ ಮೆಚ್ಚುಸುವುದಕ್ಕಾಗಿ ಕನರ್ಾಟಕದವರಿಗೆ ನೋವುಂಟು ಮಾಡಬಾರದು, ನಮ್ಮ ರಾಜ್ಯದಲ್ಲಿ ಬರದ ಈ ಸಂದರ್ಭದಲ್ಲಿ ಕುಡಿಯಲು  ನೀರಿಲ್ಲದೆ ಹಾಹಾಕಾರ ಪಡುತ್ತಿರುವಾಗ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬಿಡುತ್ತಿದ್ದಾರೆ, ಆ ನೀರಾದರೂ ಬೆಳೆಗೆ ಹೋಗುತ್ತಿದೆಯೇ ಎಂದರೆ  ಅದೂ ಇಲ್ಲ. ಪ್ರಾಧಿಕಾರದ ತೀಪರ್ು ಅವೈಜ್ಞಾನಿಕ ಎಂದು ಜರಿದರು.
ಪ್ರತಿಭಟನೆಯಲ್ಲಿ  ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಶೆಟ್ಟೀಕೆರೆ ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರೈತ ಸಂಘದ ಜಿಲ್ಲಾ ಕಾರ್ಯದಶರ್ಿ ದಬ್ಬೆಘಟ್ಟ ಜಗದೀಶ್,  ತಾ.ಭಾಜಪ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಕಾರ್ಯದಶರ್ಿ ಸುರೇಶ್,  ಪುರಸಭಾ ಸದಸ್ಯರುಗಳಾದ ವರದರಾಜು, ದೊರೆಮುದ್ದಯ್ಯ, ಸಿ.ಎಂ.ರಂಗಸ್ವಾಮಯ್ಯ, ಎಂ.ಎನ್.ಸುರೇಶ್, ಸಿ.ಎಸ್.ರಮೇಶ್, ರಾಜಣ್ಣ, ರುಕ್ಮಿಣಮ್ಮ,  ತಾ.ಭಾಜಪ ಹಿಂದುಳಿದ ವರ್ಗಗಳ ಅಧ್ಯಕ್ಷ  ಶ್ರೀನಿವಾಸಮೂತರ್ಿ, ತಾ.ಕ.ಸಾ.ಪ.ಅಧ್ಯಕ್ಷ ಎಂ.ಎಸ್.ರವಿಕುಮಾರ್, ನಗರ ಕೇಂದ್ರಿತ ಘಟಕದ ಅಧ್ಯಕ್ಷ ಸುನಿಲ್ಕುಮಾರ್,  ಕೃಷ್ಣೆಗೌಡ, ಸಿದ್ದರಾಮಯ್ಯ, ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಎಚ್.ಗಂಗಾಧರ್, ಸೇರಿದಂತೆ ಕನ್ನಡ ಪರ ಅಭಿಮಾನಿಗಳು ಪಾಲ್ಗೊಂಡಿದ್ದರು.