Wednesday, December 30, 2015


2015ನೇ ವರ್ಷದಲ್ಲಿನ ಚಿಕ್ಕನಾಯಕನಹಳ್ಳಿಯ ಹೈಲೈಟ್ಸ್
ಚಿಕ್ಕನಾಯಕನಹಳ್ಳಿ,ಡಿ.30 : 2015ನೇ ವರ್ಷ ತಾಲ್ಲೂಕಿಗೆ ಸಿಹಿಗಿಂತ ಕಹಿಯೇ ಹೆಚ್ಚಾಗಿತ್ತು, ಈ ವರ್ಷದಲ್ಲಿ ಸಂಘ ಸಂಸ್ಥೆಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ನಡೆಸಿ ಸಾರ್ವಜನಿಕರಿಗೆ ಮನರಂಜನೆ ನೀಡಿದವು, ತಾಲ್ಲೂಕಿಗೆ ರಾಜ್ಯ ಮಟ್ಟದ ನಾಯಕರು ಆಗಮಿಸಿದ್ದರು, ಕಳ್ಳತನ, ಕೊಲೆ ಅಪರಾಧಗಳು, ಜಾತಿ ವೈಷಮ್ಯದಿಂದಾದ ಗಲಭೆ ಪ್ರಕರಣಗಳು ನಡೆದವು, ಕುರಿಗಳಿಗೆ ಉಂಟಾದ ನೀಲಿನಾಲಿಗೆ ರೋಗ, ಇಪ್ಪತ್ತು ದಿನಗಳ ಕಾಲ ಸುರಿದ ಮಳೆಯಿಂದಾಗಿ ರಾಗಿ ಬೆಳೆ ನಾಶವಾಗಿ ರೈತರಿಗೆ ಆಥರ್ಿಕ ಸಮಸ್ಯೆ ಎದುರಾಯಿತು. 
ಜನವರಿ-2015 : ಜನವರಿಯಲ್ಲಿ ಅಂತರ್ಜಿಲ್ಲಾ ಹೊನಲು ಬೆಳಕಿನ ಚಿಕ್ಕನಾಯಕ ಕಪ್ ಕಬಡ್ಡಿ ಲೀಗ್ ನಡೆದು ಅತ್ಯುತ್ತಮವಾಗಿ ನಡೆದು ಬೆಂಗಳೂರಿನ ಹೆಚ್.ಎ.ಎಲ್. ತಂಡ ಪ್ರಶಸ್ತಿ ಗಳಿಸಿತು, ರೈತರ ಬೇಡಿಕೆ ಈಡೇರಿಸುವಂತೆ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ, ಸಾಹಿತಿಗಳು, ಪ್ರಗತಿಪರ ಹೋರಾಟಗಾರರ ಬೆಂಬಲ, ಸಚಿವ ಜಯಚಂದ್ರರ ಭರವಸೆ ನಂತರ ಹಿಂಪಡೆದ ಧರಣಿ,  ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಕಲಾಸಂಘದ ವತಿಯಿಂದ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಯಶಸ್ವಿ, ಗಣರಾಜ್ಯೋತ್ಸವದಲ್ಲಿ ಪ್ರತಿಭಾವಂತರಿಗೆ ಸನ್ಮಾನ, 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್.ಗಂಗಾಧರಯ್ಯ ಆಯ್ಕೆ, ಯಶಸ್ವಿಯಾದ ಸಮ್ಮೇಳನ.
ಫೆಬ್ರವರಿ-2015 : ತಾಲ್ಲೂಕಿನ ರೈತರ ಮನೆಗಳಿಗೆ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವಿರೇಂದ್ರಹೆಗ್ಗಡೆ ಭೇಟಿ, ಬೆಳೆಯ ಪರಿಶೀಲನೆ, ಪಟ್ಟಣದ ಕಂಬಳಿ ಸೊಸೈಟಿಯ ಬಳಿಯಲ್ಲಿರುವ ತಂಗುದಾಣದಲ್ಲಿ ವ್ಯಕ್ತಿಯ ನಿಗೂಡ ಕೊಲೆ, ಬ್ರಾಹ್ಮಣರ ಬೀದಿಯ ವೃದ್ದೆಯ ಮೇಲಿದ್ದ ವಡವೆಗಳ ಕಳ್ಳತನ, ತಾಲ್ಲೂಕು ಪಂಚಾಯ್ತಿಯಲ್ಲಿ ತಾ.ಪಂ.ಸದಸ್ಯರ ಕೋರಂ ಕೊರತೆಯಿಂದಾಗಿ ಸಭೆ ನಡೆಯದೇ ಹೋಳಿಗೆ ಊಟ ಮಾಡಿ ವಾಪಾಸದ ತಾ.ಪಂ.ಸದಸ್ಯರು, ಜಾತಿ ಧರ್ಮಗಳ ಆಚೆಗಿನ ವಿಚಾರ ಎಂಬ ಕಾರ್ಯಕ್ರಮ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಕಾರ್ಯಕ್ರಮದಲ್ಲಿ ಭಾಗಿ, 
ಮಾಚರ್್-2015 : ಗೋಡೆಕೆರೆಯ ಸಿದ್ದರಾಮೇಶ್ವರ ದೇವಾಲಯದಲ್ಲಿ ವ್ಯಕ್ತಿ ಕೊಲೆ, ಹುಂಡಿ ಹಣ ಕಳ್ಳತನ, ಸಹಕಾರಿ ಸಂಘಗಳ ಚುನಾಯಿತ ಸದಸ್ಯರಿಗೆ ಅಭಿನಂದನಾ ಸಮಾರಂಭ, ಪಂಡಿತ್ ಪುಟ್ಟರಾಜಗವಾಯಿಗಳವರ ಜನ್ಮಶತಮಾನೋತ್ಸವ ಕಾರ್ಯಕ್ರಮ, ಸಿ.ಡಿ.ರವಿ ಹತ್ಯೆ ಖಂಡಿಸಿ ಹಲವು ಸಂಘ ಸಂಸ್ಥೆಗಳ ಪ್ರತಿಭಟನೆ. ಹಂದನಕೆರೆಯಲ್ಲಿ ಅಕ್ರಮ ಮರಳು ಸಾಗಾಣಿಕೆ.
ಏಪ್ರಿಲ್-2015 : ಕುರುಬರಹಳ್ಳಿಯಲ್ಲಿ ವಿದ್ಯುತ್ ಶಾಕ್ನಿಂದ ಲೈನ್ಮೆನ್ ಸಾವು, ನಾನು ಅವನಲ್ಲ ಅವಳು ಖ್ಯಾತಿಯ ನಟ ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಜಯ್ ಮತ್ತು ಬಿ.ಎಸ್.ಲಿಂಗದೇವರಿಗೆ ನವೋದಯ ಕಾಲೇಜ್ನಲ್ಲಿ ಸನ್ಮಾನ, ಹೇಮಾವತಿ ನೀರಿಗಾಗಿ ದಬ್ಬೆಘಟ್ಟ ಬಸವರಾಜುರವರಿಂದ ಅರೆಬೆತ್ತಲೆ ಪ್ರತಿಭಟನೆ, ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ, ಕನ್ನಡ ಸಂಘದ ವೇದಿಕೆಗೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಅನುದಾನದಲ್ಲಿ ಮೇಲ್ಚಾವಣಿ ನಿಮರ್ಾಣ.
ಮೇ-2015 : ತಿಮ್ಮನಹಳ್ಳಿಯಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಎಸ್.ಪಿ.ಕಾತರ್ಿಕ್ರೆಡ್ಡಿ ಭೇಟಿ, ಸೋಮನಹಳ್ಳಿಗೆ ಆನಂದಗುರೂಜಿ ಭೇಟಿ, ವೃದ್ದೆ ಮೇಲೆ ಕರಡಿ ದಾಳಿ, ತಾಲ್ಲೂಕಿನ ರೋಟರಿ ಶಾಲೆಯ ಹಾಗೊ ಮೊರಾಜರ್ಿ ಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ಕೇಂದ್ರ ವಲಯ ಐಜಿಪಿ ಅರುಣ್ಚಕ್ರವತರ್ಿ ತಾಲ್ಲೂಕಿನ ಪೋಲಿಸ್ ಠಾಣೆಗಳಿಗೆ ಭೇಟಿ, ಪರಿಶೀಲನೆ, ಪಟ್ಟಣದ ದೇವಾಲಯಗಳಲ್ಲ ಸರಣಿ ಕಳ್ಳತನ.
ಜೂನ್-2015 : ಗ್ರಾಮ ಪಂಚಾಯಿತಿ ಚುನಾವಣೆ, ಕಂದಿಕೆರೆಯಲ್ಲಿ ಸಮರ್ಪಕ ವಿದ್ಯುತ್ಗಾಗಿ ಪ್ರತಿಭಟನೆ, ಜಿಲ್ಲಾ ಡಿಸಿಸಿ ಬ್ಯಾಂಕ್ಗೆ ಅವಿರೋಧವಾಗಿ ಸಿಂಗದಹಳ್ಳಿರಾಜ್ಕುಮಾರ್ ಪುನರಾಯ್ಕೆ, ಸಾಲ್ಕಟ್ಟೆಯಲ್ಲಿ ಮೀನುಗಳ ಮಾರಣ ಹೋಮ, ತಿಮ್ಮನಹಳ್ಳಿಯಲ್ಲಿ ಮಾನಸಿಕ ಅಸ್ವಸ್ಥೆ ಯುವತಿಯನ್ನು ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಚಿಕಿತ್ಸೆಗೆ , ಹಂದನಕೆರೆಯಲ್ಲಿ ಕುರಿಆಡು ಸಾಕಾಣಿಕೆ ಸವಾಲುಗಳ ಕಾರ್ಯಕ್ರಮ, ಪಟ್ಟಣದ ಕುರುಬರಹಳ್ಳಿಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ ಕುರಿಗಳ ಮಾರಣ ಹೋಮ, ಚಿಕ್ಕನಾಯಕ ಪ್ರೀಮಿಯರ್ ಲೀಗ್ ಗೆದ್ದ ಯದುಯಾಕರ್್ಸರ್್ ಕ್ರಿಕೆಟ್ ಟೀಮ್, ಸಮಾಜ ಸೇವಕ ಕಣ್ಣಯ್ಯ ನಿಧನ, ಗಣ್ಯರ ಸಂತಾಫ, ಹಳೆಕುರುಬರಶ್ರೇಣಿ ಶಾಲೆ ಬೀದಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರಸ್ತೆ ನಾಮಕರಣ. 
ಜುಲೈ-2015 : ಗ್ರಾಮ ಪಂಚಾಯಿತಿಗೆ ನೂತನ ಸದಸ್ಯರ ಆಯ್ಕೆ, ಮಳೆಗಾಗಿ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಕೆಂಕೆರೆ ಪುರದ ಮಠದಲ್ಲಿ ಡಾ.ಯತೀಶ್ವರಶಿವಾಚಾರ್ಯಸ್ವಾಮಿಗಳ ವಿಶೇಷ ಪೂಜೆ, ಬಿಜೆಪಿ ಕಾರ್ಯಕರ್ತರ ಸಭೆಗೆ ಯಡಿಯೂರಪ್ಪ ಭೇಟಿ, ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ, ಸಂಘ-ಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮ. 
ಆಗಸ್ಟ್-2015 : ಎ.ಪಿ.ಜೆ ಅಬ್ದುಲ್ ಕಲಾಂ ನಿಧನಕ್ಕೆ ಸಂಘ, ಸಂಸ್ಥೆಗಳ ಸಂತಾಪ, ಪಟ್ಟಣದ ಶಿಕ್ಷಕ ಶಿವಣ್ಣರವರ ಮನೆ ಕಳ್ಳತನ, ಜೆ.ಸಿ.ಪುರದಲ್ಲಿ ಪೈಲ್ಲೈನ್ ರಂದ್ರಕ್ಕೆ ಪಟ್ಟಣದ ಪುರಸಭೆಯಲ್ಲಿ ಗದ್ದಲ, ಸ್ವಾಮೀಜಿಗಳ ನೇತೃತ್ವದಲ್ಲಿ ಹೇಮಾವತಿ ನಾಲಾ ಕಾಮಗಾರಿ ಪ್ರಾರಂಭಿಸಲು ಚಿ.ನಾ.ಹಳ್ಳಿಯಿಂದ ಕೆ.ಬಿ.ಕ್ರಾಸ್ವರೆಗೆ ಪಾದಯಾತ್ರೆ, ಬೈಪಾಸ್ ರಸ್ತೆ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಾರ್ವಜನಿಕರ ಸಭೆ, ಎಂ.ವಿ.ನಾಗರಾಜ್ರಾವ್ರವರ ಅಮೃತಮಹೋತ್ಸವ ಕಾರ್ಯಕ್ರಮ.  
ಸೆಪ್ಟೆಂಬರ್-2015 : ಶ್ರೀ ಕೃಷ್ಣ ಜಯಂತಿ ಅಂಗವಾಗಿ ಯುವಕರಿಗೆ ಮಡಕೆ ಹೊಡೆಯುವ ಸ್ಪಧರ್ೆ, ಮಕ್ಕಳ ಕೃಷ್ಣ ವೇಷ ಸ್ಪಧರ್ೆ, ಮಹಾಲಕ್ಷ್ಮೀ ಬಡಾವಣೆಯಲ್ಲಿ ರಸ್ತೆಗೆ ಅಡ್ಡಲಾಗಿ ಸುರಿದಿದ್ದ ಮಣ್ಣನ್ನು ತೆರವುಗೊಳಿಸಿದ ಅಧಿಕಾರಿಗಳು, ಕನರ್ಾಟಕ ಸಾಹಿತ್ಯ ಅಕಾಡೆಮಿ ನೀಡುವ ಮಧುರ ಚೆನ್ನ ದತ್ತಿ ನಿಧಿ ಪ್ರಶಸ್ತಿಯನ್ನು ತಾಲ್ಲೂಕಿನ ಮಾಕಳ್ಳಿ ಗ್ರಾಮದ ಯುವ ಬರಹಗಾತರ್ಿ ಸ್ಮಿತರವರಿಗೆ ನೀಡಲಾಗಿತ್ತು. ಪೋಲಿಸ್ ಸಮುದಾಯ ಭವನ ಉದ್ಘಾಟನೆ ಐಜಿಪಿ ಅರುಣ್ಚಕ್ರವತರ್ಿ ಭೇಟಿ, ಜೆ.ಸಿ.ಪುರದಲ್ಲಿ ಹೊಡೆದಿದ್ದ ಹೇಮಾವತಿ ಪೈಪ್ಲೈನ್ಗೆ ಪುರಸಭೆಯಿಂದ ವೆಲ್ಡಿಂಗ್, ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಬಂಧನ, ನಾನು ಅವನಲ್ಲ ಅವಳು ಚಿತ್ರ ವೀಕ್ಷಿಸಿದ ತಾಲ್ಲೂಕಿನ ಸ್ವಾಮಿಜಿಗಳು.
ಅಕ್ಟೋಬರ್-2015 : ತುಮಕೂರಲ್ಲಿ ಕೊಲೆಯಾದ ವ್ಯಕ್ತಿಯ ಪೋಸ್ಟ್ಮಾಟಂ ಆಗದೆ ಚಿ.ನಾ.ಹಳ್ಳಿಯಲ್ಲಿ ಸಮಾಧಿ ಮಾಡಿದ್ದ ಶವವನ್ನು ಹೊರತೆಗೆದ ಪೋಲಿಸರು, ಪಟ್ಟಣದಲ್ಲಿ ದೇವರ ಮೆರವಣಿಗೆ ಕೊಂಡೊಯ್ಯಲು ಕುರುಬ-ಬಲಿಜ ಜನಾಂಗದ ನಡುವೆ ಘರ್ಷಣೆ, ಗಲಭೆ ವ್ಯಕ್ತಿಗಳ ಬಂಧನ, ಎರಡು ಸಮಾಜಗಳ ನಡುವೆ ಪೋಲಿಸರ ಶಾಂತಿ ಸಭೆ, ರೈತ ಅನುವುಗಾರರ ಪ್ರತಿಭಟನೆ, ಸರ್ವಧಮರ್ೋತ್ಸವ ಸಮ್ಮೇಳನ, ಲೋಕಾಯುಕ್ತರ ಕುಂದುಕೊರತೆ ಸಭೆ.
ನವಂಬರ್-2015 : ಹಂದನಕೆರೆಯಲ್ಲಿ ವೃದ್ದ ದಂಪತಿ ನಿಗೂಡ ಕೊಲೆ, ತಾಲ್ಲೂಕಿನ ಗ್ರಾಮ ರಸ್ತೆ ಡಾಂಬರೀಕರಣಕ್ಕೆ ಚಾಲನೆ, ಮಕ್ಕಳ ದಿನಾಚಾರಣೆ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಮಕ್ಕಳಿಂದ ಭಾಷಣ, ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಮುಖಂಡರುಗಳಿಂದ ತಾಲ್ಲೂಕು ಭೇಟಿ, ಅಗ್ನಿಶಾಮಕ ಸಿಬ್ಬಂದಿಯಿಂದ ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ, ಹೆಚ್ಚು ಮಳೆ ರಾಗಿ ಬೆಳೆ ನಾಶ.
ಡಿಸಂಬರ್-2015 :  ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ತಾಲ್ಲೂಕಿನ ಮಕ್ಕಳು ಆಯ್ಕೆ, ವ್ಯಾಪಕವಾಗಿ ಹರಡಿದ ಕುರಿಗಳಿಗೆ ನೀಲಿನಾಲಗೆ ರೋಗ, ವಿಧಾನ ಪರಿಷತ್ ಚುನಾವಣೆಯ ಅಭ್ಯಥರ್ಿಗಳಿಂದ ಪ್ರಚಾರ ಭರಾಟೆ, ಕಾತರ್ಿಕಮಾಸದ ಅಂಗವಾಗಿ ದೇವಾಲಯಗಳಲ್ಲಿ ದೀಪೋತ್ಸವ, ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವ, ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ , ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಚುನಾವಣಾ ಪ್ರಚಾರ, ಕುಪ್ಪೂರು ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯಿತು. ಜೆಡಿಎಸ್ ಅಭ್ಯಥರ್ಿ ಬೆಮೆಲ್ ಕಾಂತರಾಜು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು.


ರೈತರು ಮೇವು ಸ್ವಾವಲಂಬನೆ ಸಾಧಿಸಬೇಕು
ಚಿಕ್ಕನಾಯಕನಹಳ್ಳಿ,ಡಿ.30 : ರೈತರು ಮೇವು ಸ್ವಾವಲಂಭನೆ ಸಾಧಿಸಿದಾಗ ಮಾತ್ರ ಹೈನುಗಾರಿಕೆ ಲಾಭದಾಯಕ ಕಸುಬು ಆಗಬಲ್ಲದು ಎಂದು ಕೇಂದ್ರೀಯ ಮೇವು ಬೀಜ ಉತ್ಪಾಧನಾ ಕೇಂದ್ರ ನಿದರ್ೇಶಕ ಎ.ಬಾಲಸುಬ್ರಮಣ್ಯನ್ ಹೇಳಿದರು.
  ತಾಲ್ಲೂಕಿನ ಮುದ್ದೇನಹಳ್ಳಿ ರೈತ ವಿರಭದ್ರಯ್ಯ ಅವರ ತೋಟದಲ್ಲಿ ಬುಧವಾರ ಸುಧಾರಿತ ಮೇವು ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ರೈತರು ಹಾಲು ಉತ್ಪಾಧನೆಯಿಂದ ಬರುವ ಆಧಾಯದ ಶೇ.70 ಭಾಗ ಕೃತಕ ಆಹಾರ ಕಂಪನಿಗಳ ಪಾಲಾಗುತ್ತಿದೆ, ರಾಸುಗಳ ಲಾಲನೆ-ಪಾಲನೆ, ರೈತರ ಶ್ರಮ ಲೆಕ್ಕ ಹಾಕಿದರೆ ರೈತರು ಶೇ.15ರಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದರು.
  1979ರಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿ ಸ್ಥಾಪಿತವಾಗಿರುವ ಕೇಂದ್ರೀಯ ಮೇವು ಬೀಜ ಉತ್ಪಾಧನೆ ಕೇಂದ್ರ ಮೇವು ಸ್ವಾವಲಂಭನೆ ಸಾಧಿಸಲು ರೈತರಿಗೆ ನೆರವು ಆಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ, ಈ ವರ್ಷ ದಕ್ಷಿಣ ಭಾರತದ 5 ರಾಜ್ಯಗಳಾದ ಕನರ್ಾಟಕ, ಕೇರಳ, ತಮಿಳುನಾಡು, ಆಂದ್ರ ಮಧ್ಯಪ್ರದೇಶಗಳಲ್ಲಿ 1200 ಮಾಧರಿ ಮೇವು ತಾಕುಗಳನ್ನು ನಿಮರ್ಾಣ ಮಾಡುವ ಗುರಿ ಹೊಂದಿದೆ. ಕನರ್ಾಟಕದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಈ ಯೋಜನೆಗೆ ಆಯ್ಕೆಯಾಗಿದ್ದು 200 ಮಾಧರಿ ತಾಕುಗಳನ್ನು ತಾಲ್ಲೂಕಿನಲ್ಲಿ ನಿಮರ್ಿಸಲಾಗಿದೆ ಎಂದರು.
   ಮಳೆ ಆಶ್ರಿತ ಪ್ರದೇಶಕ್ಕೆ ಸೂಕ್ತವಾದ ಗಿನಿಯಾ ಮೆಕುನಿ ಹಾಗೂ ಕೆಲಿಡಿ ಕೊತ್ತಂಬರಾ ಜಾತಿಯ ಮೇವಿನ ಬೀಜವನ್ನು ತಾಲ್ಲೂಕಿನ ಮಾಧರಿ ತಾಕುಗಳಲ್ಲಿ ಬಿತ್ತಲಾಗಿದೆ. ಬಿತ್ತನೆ ಮಾಡಿದ 50 ದಿವಸಕ್ಕೆ ಕಟಾವಿಗೆ ಬರುತ್ತದೆ. ಕಟಾವು ಮಾಡಿದಂತೆ ಮತ್ತೆ ಚಿಗುರುವ ಗುಣ ಇರುವ ಈ ಪ್ರಬೇಧ ನಿರಂತರವಾಗಿ 15ರಿಂದ 20 ವರ್ಷ ರಾಸುಗಳಿಗೆ ಮೇವ ಒದಗಿಸಬಲ್ಲದು. ನೀರಾವರಿ ಹಾಗೂ ಮಳೆ ಆಶ್ರಿತ ತಾಕುಗಳಲ್ಲಿ ಬೆಳೆಯಬಲ್ಲ ಈ ಮೇವು ಬಯಲು ನಾಡಿನ ರೈತರ ಮೇವು ಸ್ವಾವಲಂಭನೆಗೆ ಸಹಕಾರಿಯಾಗಲಿದೆ ಎಂದರು. 
   ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಶು ಇಲಾಖೆ ಸಹಾಯಕ ನಿದರ್ೇಶಕ ಡಾ.ಜಿ.ಕೆ.ನಾಗರಾಜು ಮಾತನಾಡಿ, ಮೇವಿನ ಕ್ರಾಂತಿ ಕ್ಷೀರಕ್ರಾಂತಿಯ ತಾಯಿ, ಈ ಯೋಜನೆಯನ್ನು ಪಶು ಇಲಾಖೆ ಹಾಗೂ ಹಂದನಕೆರೆ ರೇವಣಸಿದ್ಧೇಶ್ವರ ಕುರಿಗಾಹಿಗಳ ಸಹಕಾರ ಸಂಘ ಸೋಯುಕ್ತವಾಗಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುತ್ತಿವೆ ಎಂದರು.
 ಈ ಸಂದರ್ಭದಲ್ಲಿ ರೈತ ವೀರಭದ್ರಪ್ಪ, ಡಾ.ಅಜಿತ್, ಡಾ.ಸಂಜಯ್, ಡಾ.ತಿಮ್ಮರಾಜು, ಡಾ.ರಘುಪತಿ, ಹುಳಿಯಾರ್ ರಾಜಪ್ಪ ಮುಂತಾದವರು ಇದ್ದರು.




Tuesday, December 29, 2015


ಓದು, ಬರಹ ಅಭಿವ್ಯಕ್ತಿಗೆ ಪೂರಕವಾದ ವಾತಾವರಣ ಅಗತ್ಯ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಡಿ.29 : :ಶಾಲಾ ಕಲಿಕೆ ಓದು, ಬರಹ ಹಾಗೂ ಅಭಿವ್ಯಕ್ತಿಗೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸಲು ಶಿಕ್ಷಕರು ಸೃಜನಾತ್ಮಕವಾಗಿ ಚಿಂತಿಸುವ ಅಗತ್ಯ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಬಿಆರ್ಸಿ ಸಭಾಂಗಣದಲ್ಲಿ ನಡೆದ ಓದು ಬರಹ ಮತ್ತು ಅಭಿವ್ಯಕ್ತಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಮಾಹಿತಿ ತುಂಬುವುದಕ್ಕಿಂತ ಭಾವನಾತ್ಮಕ ವಾತಾವರಣ ನಿಮರ್ಿಸಿವುದು ಮುಖ್ಯ, ಚಿಕ್ಕಂದಿನಲ್ಲೇ ಭಾವನೆಗಳನ್ನು ಸಂಭಾಳಿಸುವ ಕಲೆ ಕರಗತ ಮಾಡಿಕೊಂಡ ಮಕ್ಕಳು ಉನ್ನತ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಎಂದರು.
ಸಕರ್ಾರ ಜಾರಿಗೆ ತಂದಿರುವ ನಲಿ-ಕಲಿ ಪದ್ದತಿ ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ಒತ್ತು ಕೊಡಲು ರೂಪಿಸಿರುವ ಪದ್ದತಿ, ಪ್ರಾಥಮಿಕ ಹಂತದಲ್ಲಿ ಕಲಿಸುವ ಜವಾಬ್ಧಾರಿ ಹೊತ್ತಿರುವ ಶಿಕ್ಷಕರು ಇದನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು. 
     ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಪರಶಿವಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.


ರೈತ ಅನುವುಗಾರರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳಿಗೆ ಮನವಿ
ಚಿಕ್ಕನಾಯಕನಹಳ್ಳಿ,ಡಿ.29 : ಕೃಷಿ ಇಲಾಖೆ ಮತ್ತು ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ ಅನುವುಗಾರರ ಜೀವನ ಮತ್ತು ಅವರ ಕುಟುಂಬಗಳ ಪರಿಸ್ಥಿತಿ ಅತಂತ್ರವಾಗಿದೆ ಎಂದು ರೈತ ಅನುವುಗಾರರ ಸಂಘದ ಜಿಲ್ಲಾ ಕಾರ್ಯದಶರ್ಿ ಗಂಗಪ್ಪ ಹೇಳಿದರು.
ಇತ್ತೀಚೆಗೆ ತಾಲ್ಲೂಕಿನ ಹುಳಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತ ಅನುವಾಗರರ ಸಂಘ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು. 
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸದಸ್ಯ ಪುಟ್ಟರಾಜು ಮಾತನಾಡಿ ರಾಜ್ಯದಲ್ಲಿ 9617 ರೈತ ಅನುವುಗಾರರಿದ್ದು ಇಲಾಖೆಯ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿ ರೈತರಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಅನುವುಗಾರರನ್ನು ತೆಗೆದುಹಾಕಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಮುಂದಾಗಿರುವ ಸಕರ್ಾರದ ಕ್ರಮದಿಂದ ರೈತ ಅನುವುಗಾರರ ಸ್ಥಿತಿ ಅತಂತ್ರಗೊಂಡಿದೆ ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಇತ್ತ ಗಮನ ಹರಿಸಿ ಅನುವುಗಾರರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಅನುವುಗಾರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಸಿ.ನಾಗರಾಜು, ಕಾರ್ಯದಶರ್ಿ ಶ್ರೀನಿವಾಸ್, ಖಜಾಂಚಿ ಜಯಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಗುರುಸ್ಪಂದನ ಕಾರ್ಯಕ್ರಮ ಜನವರಿ 2
ಚಿಕ್ಕನಾಯಕನಹಳ್ಳಿ,ಡಿ.29 : ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಿಆರ್ಸಿ ಸಭಾಂಗಣದಲ್ಲಿ ಜನವರಿ,2 ಶನಿವಾರ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಗುರುಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದ್ದಾರೆ.
  ತಾಲ್ಲೂಕಿನ ಕಂದಿಕೆರೆ, ತೀರ್ಥಪುರ, ಬರಗೂರು ಹಾಗೂ ಮತಿಘಟ್ಟ ಕ್ಲಸ್ಟರ್ಗಳ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಗುರುಸ್ಪಂದನ ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಅಹವಾಲುಗಳನ್ನು ಸಂಬಂಧಿಸಿದ ಕಾರ್ಯನಿವರ್ಾಕರಿಗೆ ಸಲ್ಲಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಶೈವ ಧರ್ಮದಲ್ಲಿನ ವೈಚಾರಿಕತೆ ಪಾಲಿಸುತ್ತಿರುವ ಪಂಚಪೀಠಗಳು
ಚಿಕ್ಕನಾಯಕನಹಳ್ಳಿ,ಡಿ.29 : ಪಂಚಪೀಠಗಳಾದ ಬಾಳೆ ಹೊನ್ನೂರು ಮಠ, ಶ್ರೀಶೈಲ ಮಠ, ಕಾಶಿ ಮಠ, ಉಜ್ಜಯನಿ ಮಠ ಹಾಗೂ ಕೇದಾರ ಮಠಗಳು ವೀರಶೈವ ಧರ್ಮದಲ್ಲಿನ ವೈಚಾರಿಕತೆಯನ್ನು ಪಾಲಿಸುತ್ತಾ ಬರುತ್ತಿವೆ ಎಂದು ಹಿಮಾಚಲ ಪ್ರದೇಶದ ಕೇದಾರ ಪೀಠದ ಹಿಮವಂತ್ ರಾವಲ್ ಭೀಮಾಶಂಕರ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಈಚೆಗೆ ನಡೆದ ವಿಶೇಷ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿ ಮಾತನಾಡಿ, ಸಕಲ ಜೀವ ರಾಶಿಗಳಲ್ಲೇ ಮನಷ್ಯನ ಮೇಲೆಯೆ ಶಿವನ ಒಲುಮೆಯು ಹೆಚ್ಚಾಗಿದೆ, ಗಂಡಾಗಲಿ ಹೆಣ್ಣಾಗಲಿ ಬಾಳಿನಲ್ಲಿ ಸುಖ ಶಾಂತಿಯನ್ನು ಪಡೆಯಲು ಹಣ, ಅಧಿಕಾರದಿಂದ ಸಾದ್ಯವಾಗುವುದಿಲ್ಲ ಎಂದ ಅವರು ಇಷ್ಟಲಿಂಗ ಪೂಜೆ ಪಂಚಾಚಾರ್ಯ ಪರಂಪರೆ ಅಡಿಪಾಯ, ಪಂಚಾಚಾರ್ಯ ಪರಂಪರೆ ರಕ್ಷಣಾ ಸಮಿತಿ ರಚಿಸುವ ಮೂಲಕ ಶರಣ ತತ್ವವನ್ನು ಪಸರಿಸುವ ಕೆಲಸ ಆಗಬೇಕು ಎಂದರು. 
ವಿಭೂತಿಪುರ ಮಠಾಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಧರ್ಮವಿರುವವರೆಗೂ ದೇಶ ಮೃತ್ಯುಂಜಯವಾಗಿರುತ್ತದೆ, ಧರ್ಮವನ್ನು ಬಿಟ್ಟ ದೇಶ ನಾಶವಾಗುತ್ತದೆ ಎಂದರು.
  ಕುಪ್ಪೂರು ಗದ್ದಿಗೆಯ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠಾಧ್ಯಕ್ಷ ಚನ್ನ ಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮೀಜಿ, ಹೊನ್ನವಳ್ಳಿ ಮಠಾಧ್ಯಕ್ಷ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.




Thursday, December 24, 2015


ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವಿಕೇಂದ್ರಿಕರಣಕ್ಕೆ ಬದ್ಧವಾಗಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ



ಚಿಕ್ಕನಾಯಕನಹಳ್ಳಿ : ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹಾಗೂ ಅಧಿಕಾರ ವೀಕೇಂದ್ರಿಕರಣಕ್ಕೆ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪಕ್ಷದ ಕಾಂಗ್ರೆಸ್ ಅಭ್ಯಥರ್ಿ ಆರ್.ರಾಜೇಂದ್ರ ಪರವಾಗಿ ಚುನಾವಣಾ ಪ್ರಚಾರದ ಸಮಾವೇಶವನ್ನು ಉದ್ಘಾಟಸಿ ಮಾತನಾಡಿ, ಬಿ.ಜೆ.ಪಿ, ಜೆ.ಡಿ.ಎಸ್ ಪಕ್ಷಗಳು ಬಂದು ದಿನವಾದರೂ ಸಾಮಾಜಿಕ ನ್ಯಾಯ ಅಧಿಕಾರ ವೀಕೇಂದ್ರಿಕರಣದ ಬಗ್ಗೆ ಚಕಾರವೆತ್ತಿಲ್ಲ ಎಂದ ಅವರು ದಿ.ರಾಜೀವ್ಗಾಂಧಿಯವರು ಪ್ರಧಾನಮಂತ್ರಿಗಳಾದ ಸಂದರ್ಭದಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳನ್ನು ತರುವ ಮೂಲಕ ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿಯನ್ನು ತಂದು ಸ್ಥಳಿಯ ಸಂಸ್ಥೆಗಳಲ್ಲಿ ಅಧಿಕಾರ ಸಿಗಲು ಕಾರಣವಾದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮಾಜೋಯಿಸ್ರವರು ಮೀಸಲಾತಿ ತಿದ್ದುಪಡಿ ವಿರೋಧಿಸಿ ಸುಪ್ರೀಂ ಕೋಟರ್್ಗೆ ರಿಟ್ ಅಜರ್ಿ ಸಲ್ಲಿಸಿದರು ಇದರಿಂದ ಅಲ್ಪಸಂಖ್ಯಾಂತರು. ಮಹಿಳೆಯರು, ದಲಿತರು ಹಿಂದುಳಿದ ವರ್ಗಗಳು. ಸಾಮಾಜಿಕ ನ್ಯಾಯದಲ್ಲಿ ಸಮಾನತೆ ಮೂಲಕ ಪರಿವರ್ತನೆ ಆಗಬಾರದು ಎಂಬ ಉದ್ದೇಶವಿತ್ತು ಆ ಸಂದರ್ಭದಲ್ಲಿ ಈ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರು, ಜಗದೀಶಶೆಟ್ಟರು ಇದರ ಬಗ್ಗೆ ಚಕಾರವೆತ್ತಲಿಲ್ಲ, ಅದೃಷ್ಠವಶಾತ್ ಅಜರ್ಿ ತಿರಸ್ಕೃತಗೊಂಡ ಪರಿಣಾಮ ಮೀಸಲಾತಿ ಉಳಿಯಿತು. 
ಬಿ.ಜೆ.ಪಿ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದೆ, ಜೆ.ಡಿ.ಎಸ್. ಕುಟುಂಬ ರಾಜಕಾರಣಕ್ಕೆ ಒತ್ತು ನೀಡುತ್ತಿದ್ದಾರೆ, ದೇವೇಗೌಡರು ಹೋರಾಟಗಾರರು ಆದರೆ ಆ ಹೋರಾಟವೆಲ್ಲಾ ಅವರ ಕುಟುಂಬಕ್ಕೆ ರಾಜಕೀಯ ಅಧಿಕಾರ ಕೊಡಿಸುವುದಕ್ಕೆ ಸೀಮಿತವಾಗಿದೆ ಎಂಬುದರಲ್ಲಿ ಯಾವುದೇ ಭಿನ್ನಭಿಪ್ರಾಯವಿಲ್ಲ ಎಂದ ಅವರು, ಹಣವಿಲ್ಲದೆ ರಾಜಕಾರಣ ಮಾಡುವುದಿಲ್ಲ, ಹಣದಿಂದಲೇ ಎಲ್ಲವನ್ನು ಗೆಲ್ಲಲ್ಲು ಸಾಧ್ಯವಿಲ್ಲ. ಜೊತೆಗೆ ಈ ಎರಡು ಪಕ್ಷಗಳೂ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿವೆ, ಈ ಪಕ್ಷಗಳು ಪಂಚಾಯಿತಿ ವ್ಯವಸ್ಥೆ ಅಡಿಯಲ್ಲಿ ಮತ ಕೇಳಲು ನೈತಿಕತೆ ಇಲ್ಲ ಅದು ಕಾಂಗ್ರೇಸ್ಗೆ ಮಾತ್ರ ಇದೆ ಎಂದರು.
ಡಾ||ಎಂ.ಆರ್ ಹುಲಿನಾಯ್ಕರ್ ನಮ್ಮ ಜೊತೆಯಲ್ಲಿದ್ದು, ನಂತರ ಜೆ.ಡಿ.ಎಸ್. ಸೇರಿ ವಿಧಾನ ಪರಿಷತ್ ಸದಸ್ಯರಾದರು, ನಂತರ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಬಿ.ಜೆ.ಪಿ ಸೇರಿದ್ದಾರೆ ಎಂದರು. ಕಾಂಗ್ರೇಸ್ ಸಕರ್ಾರ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾಗಿದೆ ವಿಧಾನ ಸಭೆಯಲ್ಲಿ ಬಹುಮತಬೇಕಾಗಿದೆ,  25 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ನಡೆಯುವ 20 ಸ್ಥಾನಗಳಿಗೆ ಸ್ಪಧರ್ಿಸಿದ್ದೇವೆ 20ಸ್ಥಾನಗಳಲ್ಲೂ ಕಾಂಗ್ರೇಸ್ ಅಭ್ಯಥರ್ಿಗಳು ಗೆಲ್ಲಲಿದ್ದಾರೆ ಎಂಬ ಭರವಸೆ ಇದೆ. ಬಿ.ಜೆ.ಪಿಯ ವಿರೋದ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಹರಕು ನಾಲಿಗೆಯ ನಾಯಕ. ಇವರ ಮೆದುಳು ಮತ್ತು ನಾಲಿಗೆಗೆ ಸಂಪರ್ಕವೆ ಇಲ್ಲ ನಾನು ಏನು ಮಾತಾನಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಹೇಳುವ ಅವರು, ತಪ್ಪೊಪು ಕೊಳ್ಳವಲ್ಲಿಯೂ ನಿಸ್ಸೀಮರು, ಅವರೊಬ್ಬ ಮೂರ್ಖ, ಅವಿವೇಕಿ ಎಂದು ಜರಿದರು,  ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಬಿ.ಜೆ.ಪಿಗಿಂತ ಹೆಚ್ಚು ಸ್ಥಾನ ಪಡೆದು ನೂರಕ್ಕೆ ನೂರು ರಾಜಕೀಯ ಸನ್ಯಾಸತ್ವ ಪಡೆಯುವುದು ಗ್ಯಾರಂಟಿ ಎಂದರು.
10 ಸಾವಿರ ಜನಸಂಖ್ಯೆಗೆ ಕಡಿಮೆ ಇರುವ ಪಂಚಾಯಿತಿಗಳಿಗೆ 6 ಲಕ್ಷ ಅನುದಾನವನ್ನು 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ, ದೇಶದಲ್ಲಿ ಶೇ.50% ರಷ್ಟು ಮೀಸಲಾತಿಯನ್ನು  ಹೆಚ್ಚಿಸಲು ಸೋನಿಯಾ ಗಾಂಧಿ ಕಾಂಗ್ರೇಸ್ ಕಾರಣ. ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ನಿಯಮಗಳನ್ನು  ಮಾಡುವ ಅಧಿಕಾರ ನೀಡಿದೆ ರಾಜ್ಯದಲ್ಲಿ ಕಾಂಗ್ರೇಸ್ ಜನತೆಗೆ ಅಧೀಕಾರ ನೀಡಿದರೆ 165 ಭರವಸೆಗಳನ್ನು ನೀಡಿತ್ತು ಇದರಲ್ಲಿ 100ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಕಾಂಗ್ರೇಸ್ ಸಕರ್ಾರ ಬಂದ ಮೇಲೆ ಅನ್ನಭಾಗ್ಯ, ಕ್ಷೀರಭಾಗ್ಯದ ಮೂಲಕ 1 ಕೋಟಿ ಮಕ್ಕಳಿಗೆ ಶಾಲೆಗಳಲ್ಲಿ ಹಾಲು ನೀಡುತ್ತಿದ್ದೇವೆ. ರೈತರಿಗೆ ಸಾಲ ಮನ್ನಾ ರೈತರಿಗೆ 3 ಲಕ್ಷದವರಿಗೆ ಬಡ್ಡಿ ರಹಿತ ಸಾಲ,  ಮೈತ್ರಿ,  ಮನಸ್ವಿನಿ ಕಾರ್ಯಕ್ರಮವನ್ನು ಎಲ್ಲ ವರ್ಗದವರಿಗೂ ನೀಡಿದ್ದೇವೆ. ಕಾಂಗ್ರೇಸ್ ಸಕರ್ಾರ ನೀರಾವರಿ  ಹಾಗೂ ರಸ್ತೆ ನಿಮರ್ಾಣಕ್ಕೆ ಆದ್ಯತೆ ನೀಡಿದ್ದೇವೆ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಬೇಕು ಆದ್ದರಿಂದ ಜಿ.ಪಂ ಗ್ರಾ.ಪಂ ತಾ.ಪಂ, ಸದಸ್ಯರು ಕಾಂಗ್ರೇಸ್ ಅಭ್ಯಥರ್ಿ ಆರ್.ರಾಜೇಂದ್ರ ಅವರಿಗೆ ಮತ ಚಲಾಯಿಸಿ ಅವರನ್ನು ಗೆಲ್ಲಿಸಿ ವಿಧಾನ ಪರಿಷತ್ಗೆ  ಕಳಿಸಿ ಎಂದರು.
ಗೃಹ ಸಚಿವ ಡಾ|| ಜಿ. ಪರಮೇಶ್ವರ್ ಮಾತನಾಡಿ,  ದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೇಂದ್ರ  ಸಕರ್ಾರ ಬಿಡಿಕಾಸನ್ನು  ಬಿಡುಗಡೆ ಮಾಡಿಲ್ಲ ಇದರ ಬಗ್ಗೆ ಚಕಾರವೆತ್ತಿಲ್ಲ ಎಂದ ಅವರು,  ಕೇಂದ್ರ ಸಕರ್ಾರ ಬರಗಾಲ ಪರಿಹಾರಕ್ಕೆ 1500 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ, ಆದರೂ ಬಿಡುಗಡೆ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಮುಂದುವರೆಸಲು 10 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ದೇಶದಲ್ಲಿನ ರೈತರ ಸಾಲ 72 ಸಾವಿರ ಕೋಟಿಗಳನ್ನು ಮನ್ನಾ ಮಾಡಿದ್ದಾರೆ. ಮುಖ್ಯಮಂತ್ರಿಗಳು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ವಿಧಾನ ಸಭೆಯ ಜೊತೆಯಲ್ಲಿ ವಿಧಾನ ಪರಿಷತ್ನಲ್ಲೂ ಸಂಖ್ಯಾಬಲ ಅಗತ್ಯ ಆದ್ದರಿಂದ ಯುವಕರಾದ ಆರ್,ರಾಜೇಂದ್ರರವರಿಗೆ ಮತ ನೀಡಿಗೆಲುವಿಗೆ ಶ್ರಮಿಸಿ ಎಂದು ಹೇಳಿದರು.
ಜಿಲ್ಲಾ ಉಸುವಾರಿ ಸಚಿವ ಟಿ.ಬಿ ಜಯಚಂದ್ರ ಮಾತನಾಡಿ,  ರಾಜ್ಯದಲ್ಲಿ ಅಂತರ್ಜಲ ಕಡಿಮೆಯಾಗಿ ಕುಡಿಯಲು ನೀರಿಲ್ಲ ಸಮಸ್ಯೆ ಜಾಸ್ತಿಯಾಗಿದೆ ಆದರಿಂದ ಹುಳಿಯಾರು ಭಾಗಕ್ಕೆ ಬೋರನ ಕಣಿವೆ ಜಲಾಶಯದಿಂದ  4 ಕೋಟಿ ವೆಚ್ಚದಲ್ಲಿ ಹುಳಿಯಾರಿಗೆ  ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಆದರೆ ಅಧಿಕಾರಿಗಳೂ ಅಥವಾ ಗ್ರಾಮ ಪಂಚಾಯಿತಿ ನೀರನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಗಿದೆ. ಹಸಿದ ಹೊಟ್ಟೆಗೆ ಅನ್ನ ಬರಡು ಭೂಮಿಗೆ  ನೀರುಬೇಕಾಗಿದೆ ಆದ್ದರಿಂದ ಭದ್ರಮೆಲ್ದಂಡೆ ಯೋಜನೆಗೆ ಒತ್ತು ನೀಡಿದ್ದೇವೆ ಎಂದರಲ್ಲದೆ,  ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜು ಅರಸ್ ಚಾಲನೆ ನೀಡಿದರು 12360ಕೋಟಿ ರೂ ವೆಚ್ಚದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸಕರ್ಾರ ಹಣ ಬಿಡುಗಡೆ ಮಾಡಿದೆ ಎಂದರು, ಕಾಂಗ್ರೆಸ್ ನಡಿಗೆ, ಕೃಷ್ಣೆ ಕಡೆಗೆ ಎಂಬ ಪಾದಯಾತ್ರೆಯಲ್ಲಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯನವರು ಪ್ರತಿ ವರ್ಷ ನೀರಿಗಾಗಿ ಬಜೆಟ್ನಲ್ಲಿ 10 ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗುತ್ತಿದೆ ಎಂದರು.
ಇಂದನ ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ,  ಕಾಂಗ್ರೇಸ್ ಪಕ್ಷ ಜಾತ್ಯಾತೀತ ಪಕ್ಷ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಎಲ್ಲ ಜಾತಿಗಳು ಅಧಿಕಾರಕ್ಕೆ ಬಂದ ಹಾಗೆ ಎಂದ ಅವರು ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗ ಜಿಲ್ಲಾ ಪಂಚಾಯಿತ್ ತಾಲ್ಲೂಕು ಪಂಚಾಯಿತ್ಗಳಿಗೆ  ಅಧಿಕಾರ ನೀಡಿದ್ದೇವೆ. ಜೆ.ಡಿ.ಎಸ್, ಬಿ.ಜೆ.ಪಿ ಸಕರ್ಾರಗಳು  ಗ್ರಾಮ ಪಂಚಾಯಿತ್ಗಳಿಗೆ ಅಧಿಕಾರ ನೀಡಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಚಿಕ್ಕನಾಯಕನಹಳ್ಳಿ ಕ್ಷೇತ್ರ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತದಾರರಿವವ ಕ್ಷೇತ್ರ, ಇಲ್ಲಿ ಪಕ್ಷವನ್ನು ಕಟ್ಟಲು ಸಾಕಷ್ಟು ಅವಕಾಶವಿದೆ, ಮೊದಲು ನಾವು ಇಲ್ಲಿಯ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಇಲ್ಲಿನ ಮೊದಲ ಸಮಸ್ಯೆ ತಾಲೂಕಿಗೆ ಹೇಮಾವತಿ ಕುಡಿಯುವ ನೀರು ಯೋಜನೆಗೆ ಪುನರ್ ಚಾಲನೆ ನೀಡುವುದು, ರಸ್ತೆಗಳ ಅಭಿವೃದ್ದಿ, ಹುಳಿಯಾರನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದಜರ್ೆಗೇರಿಸುವುದು, ಬುಕ್ಕಾಪಟ್ಟಣ ಹೋಬಳಿಯ ಅಭಿವೃದ್ದಿಗೆ ಒತ್ತು ನೀಡುವುದು ಸೇರಿದಂತೆ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೀರಿಸಿದರೆ ಹಾಗೂ  ಜಿಲ್ಲಾ ಸಚಿವರು ನಮಗೆ ಹೆಚ್ಚು ಒತ್ತು ನೀಡಿವುದು ಸೇರಿದಂತೆ ಕಾಂಗ್ರೆಸ್ ಪಕ್ಷದವರು ಜೆ.ಡಿ.ಎಸ್.ಪಕ್ಷ ಬೆಳೆಸುವುದನ್ನು ಬಿಟ್ಟರೆ ನಾವು ಇಲ್ಲಿ ಜೆ.ಡಿ.ಎಸ್.ಗೆ ಬಾವುಟ ಕಟ್ಟಲು ಜನವಿಲ್ಲದಂತೆ ಮಾಡಬಹುದು ಎಂದರು.
ಸಂಸದ ಎಸ್.ಪಿ ಮುದ್ದಹನುಮೇಗೌಡ ಮಾತನಾಡಿ ಬಿ.ಜೆ.ಪಿ. ಮುಖಂಡರಾದ ಸುಬ್ರಮಣ್ಯ ಸ್ವಾಮಿಯವರನ್ನು ಮುಂದಿಟ್ಟುಕೊಂಡು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಯ ಮೇಲೆ ರಾಹುಲ್ಗಾಂಧಿ ಹಾಗೂ ಸೋನಿಯಾಗಾಂಧಿಯವರ ಮೇಲೆ ಸುಳ್ಳು ಮೊಖದ್ದಮೆ ದಾಖಲಿಸಿದ್ದಾರೆ. ಇದರ ವಿರುದ್ದ ದೇಶಾದ್ಯಾಂತ ಮುಷ್ಕರ ನಡೆಸಿದ್ದೇವೆ ತಾಲ್ಲೂಕಿನ ಹೇಮಾವತಿ ನಾಲೆ ಕಾಮಗಾರಿ ಪೂರ್ಣಗೊಳಿಸಲು ಇರುವ ಅಡೆತಡೆಗಳನ್ನು ತೊಲಗಿಸಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿಮಾಡಿದರು,
 ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಚಂದ್ರಪ್ಪ ವಿಧಾನ ಸಭಾ ಸದಸ್ಯರಾದ ಬಿ.ಜಿ.ಗೋವಿಂದಪ್ಪ, ಕೆ.ಷಡಾಕ್ಷರಿ, ರಫೀಕ್ ಅಹಮದ್, ಕೆ.ಎನ್ ರಾಜಣ್ಣ, ವಿಧಾನ ಪರಿಷತ್ ಸದಸ್ಯ ಎಮ್ ಡಿ. ಲಕ್ಷ್ಮೀನಾರಾಯಣ್, ಮಾಜಿ ಶಾಸಕರಾದ ಹೆಚ್ ಲಿಂಗಪ್ಪ, ಕಾಂಗ್ರೇಸ್ ಮುಂಖಡ ಸಾಸಲು ಸತೀಶ್, ಬಿ.ಲಕ್ಕಪ್ಪ, ಅಭ್ಯಾಥರ್ಿ ಆರ್.ರಾಜೇಂದ್ರ, ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ರಿಜ್ವಾನ್ಹರ್ಷದ್ ಕಾಂಗ್ರೆಸ್ ಮುಖಂಡರುಗಳಾದ ಜಿ.ರಘುನಾಥ್ .ಸಿ. ಬಸವರಾಜು, ವೈ.ಸಿ ಸಿದ್ದರಾಮಯ್ಯ. ಅಶೋಕ, ಮತ್ತಿತ್ತರರು ಉಪಸ್ಥಿತರಿದ್ದರು.

Wednesday, December 23, 2015


ರಸ್ತೆ ಗುಂಡಿ ಮುಚ್ಚುತ್ತಿರುವುದು ಕಳಪೆಯಾಗಿದೆ ಸಾರ್ವಜನಿಕರ ಆಕ್ರೋಶ
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಹುಳಿಯಾರಿಗೆ ಚುನಾವಣಾ ಪ್ರಚಾರಕ್ಕಾಗಿ ಡಿ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತು ತರಾತುರಿಯಲ್ಲಿ ಪಟ್ಟಣದಲ್ಲಿನ ಮುಖ್ಯರಸ್ತೆಯ ಗುಂಡಿಗಳನ್ನು ಮುಚ್ಚುತ್ತಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಿಂದ ಕೆ.ಬಿ.ಕ್ರಾಸ್, ಚಿಕ್ಕನಾಯಕನಹಳ್ಳಿ, ಹುಳಿಯಾರು ಮಾರ್ಗವಾಗಿ ಬೀದರ್ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯಲ್ಲಿ ಬರುವ ಚಿಕ್ಕನಾಯಕನಹಳ್ಳಿ ಪಟ್ಟಣದ ಮುಖ್ಯ ರಸ್ತೆ ಗುಂಡಿ ಬಿದ್ದಿದ್ದು ಕಳೆದ ತಿಂಗಳು ಡಾಂಬರು ಹಾಕಿ ಗುಂಡಿಗಳನ್ನು ಮುಚ್ಚಲಾಗಿತ್ತು ಕಳಪೆ ಕಾಮಗಾರಿಯಿಂದ ಡಾಂಬರು ಕಿತ್ತು ಹೋಗಿ ರಸ್ತೆ ಪ್ರಯಾಣಕ್ಕೆ ತೊಂದರೆಯಾಗಿತ್ತು, ಗುತ್ತಿಗೆದಾರರು ರಸ್ತೆಗೆ ಜೆಲ್ಲಿಕಲ್ಲು ಹಾಕಿ ಹದಿನೈದು ದಿನಗಳ ಹಿಂದೆ ಮುಚ್ಚಿದ್ದರು ವಾಹನ ದಟ್ಟಣೆಯಿಂದ ಜೆಲ್ಲಿಕಲ್ಲುಗಳು ಚೆಲ್ಲಾಪಿಲ್ಲಿಯಾಗಿತ್ತು,  ಪುನಹ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ, ಜೆಲ್ಲಿಕಲ್ಲುಗಳು ರಸ್ತೆ ತುಂಬೆಲ್ಲಾ ಬಿದ್ದಿರುವುದರಿಂದ ಸಾರ್ವಜನಿಕರಿಗೆ, ದ್ವಿಚಕ್ರ ವಾಹನ, ಭಾರಿ ವಾಹನ ಹೋಗುವಾಗ ಕಲ್ಲುಗಳು ಟೈರಿಗಳಿಗೆ ಸಿಲುಕಿ ಚಿಮ್ಮುವುದರಿಂದ ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ, ಈಗ ಮುಖ್ಯಮಂತ್ರಿ ಆಗಮನ ಹಿನ್ನಲೆಯಲ್ಲಿ ರಾಜ್ಯ ಸಚಿವರು ಚಿಕ್ಕನಾಯಕನಹಳ್ಳಿ ಮೂಲಕ ಹುಳಿಯಾರಿಗೆ ತೆರಳುವುದರಿಂದ ಗುತ್ತಿಗೆದಾರರು ನಾಮಕಾವಸ್ತೆ ಡಾಂಬರು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ ಈ ಬಗ್ಗೆ ಸಾರ್ವಜನಿಕರು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ತಮಗೆ ಇಷ್ಟ ಬಂದಂತೆ ಗುಂಡಿಗಳನ್ನು ಮುಚ್ಚುತ್ತೇವೆ ಇದರ ಬಗ್ಗೆ ಕೇಳಲು ನಿಮಗೆ ಸಂಬಂದವೇನು ಎಂದು ಗುತ್ತಿಗೆದಾರರು ವಿಚಾರಣೆ ಮಾಡಿದ ನಾಗರೀಕರಿಗೆ ಧಮಕಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಹಗಲು ಸಮಯದಲ್ಲಿ ಮಾಡದೆ ರಾತ್ರಿ ವೇಳೆಯಲ್ಲಿ ಕಾಮಗಾರಿ ಮಾಡುತ್ತಿರುವುದರಿಂದ ಕಾಮಗಾರಿಯ ಬಗ್ಗೆ ಶಂಕೆಯಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ, ಅಧಿಕಾರಿಗಳು ಮಾತ್ರ ಡಾಂಬರೀಕರಣ ಮಾಡುವ ಸ್ಥಳಕ್ಕೆ ಬಾರದೆ ತುಮಕೂರಿನಲ್ಲಿ ಕುಳಿತೇ ದೂರವಾಣಿ ಮೂಲಕ ಗುತ್ತಿಗೆದಾರರಿಗೆ ಸೂಚನೆಗಳನ್ನು ನೀಡುತ್ತಿರುವುದು ಸಾರ್ವಜನಿಕರನ್ನು ಕೆರಳಿಸಿದೆ.


ರೈತರ ಆತ್ಮಹತ್ಯೆ ತಡೆಯುವ ಸಲುವಾಗ ಜಾಗೃತಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,: ರೈತರ ಆತ್ಮಹತ್ಯೆ ತಡೆ ಜಾಗೃತಿ ಅಂಗವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಬ್ಧಚಿತ್ರ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಕೃಷಿ ನಿದರ್ೇಶಕ ಹೊನ್ನದಾಸೇಗೌಡ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯ ಸಂಭಾಗಣದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಕುಟುಂಬದವರಿಗೆ ಪರಿಹಾರ ನೀಡಿದ್ದೇವೆ ಹಾಗೂ ಎರಡು ಸಾವಿರ ಮಾಶಾಸನ ನೀಡಲು ಸಕರ್ಾರ ಆದೇಶಿಸಿದೆ ಎಂದರು.  
ರಾಜ್ಯ ರೈತ ಸಂಘದ ಕೆಂಕೆರೆ ಸತೀಶ್ ಮಾತನಾಡಿ, ರೈತರು ಕೃಷಿ ಮಾಡಿ ಒಳ್ಳೆಯ ಬೆಳೆ ಬಂದಾಗ ಖುಷಿ ಪಡುತ್ತಾರೆ ಆದರೆ ಮಾರುಕಟ್ಟೆಗೆ ತಮ್ಮ ಬೆಳೆ ಮಾರಲು ಹೋದಾಗ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರ ಕಣ್ಣಿನಲ್ಲಿ ನೀರು ಬರುತ್ತದೆ ಎಂದು ವಿಷಾದಿಸಿದರು. 
ರೈತ ಸಂಘದ ಜಿಲ್ಲಾ ಕಾರ್ಯದಶರ್ಿ ತಿಮ್ಲಾಪುರ ಶಂಕರಪ್ಪ ಮಾತನಾಡಿ ರೈತರಲ್ಲಿ ಇಚ್ಛಾಶಕ್ತಿ ಕೊರತೆಯಿಂದಲೇ ಸಕರ್ಾರಗಳು ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ, ಸಕರ್ಾರ ಹಾಗೂ ರಾಜಕಾರಣಿಗಳು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆಯೇ ಹೊರತು ರೈತರ ಅಭಿವೃದ್ದಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದರಲ್ಲದೆ ತಾಲ್ಲೂಕಿನ ಹೇಮಾವತಿ ನಾಲೆಯಿಂದ 26 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರೂ ಸಹ ಕಾಮಗಾರಿ ಕುಂಟುತ್ತ ಸಾಗಿ ಸ್ಥಗಿತಗೊಂಡಿದೆ ಆದರೆ ರಾಜಕಾರಣಿಗಳು ಮಾತ್ರ ಕಾಮಗಾರಿ ನಡೆಯುತ್ತಿದೆ ಎಂದು ಸುಳ್ಳು ಹೇಳಿ ವಂಚಿಸುತ್ತಿದ್ದಾರೆ ಎಂದರು.
ಕಾಖರ್ಾನೆಗಳು ತಯಾರಿಸಿದ ಪದಾರ್ಥಗಳಿಗೆ ತಾವೇ ಬೆಲೆ ಕಟ್ಟುತ್ತಾರೆ ಆದರೆ ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆ ಕಟ್ಟಲಾಗದೆ ಸಕರ್ಾರಗಳು ನಿಗದಿ ಪಡಿಸಿದ ಬೆಲೆಗಳಿಗೆ ಮಾರಬೇಕಾಗಿದೆ ಎಂದು ವಿಷಾಧಿಸಿದ ಅವರು ಸ್ವಾತಂತ್ರ್ಯ ಬಂದು 60ವರ್ಷ ಕಳೆದರು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ರೈತರಿಗೆ ಬೆಂಬಲ ಬೆಲೆ ನಿಗದಿ ಪಡಿಸದೇ ಅನ್ಯಾಯ ಮಾಡುತ್ತಿವೆ ಇದರಿಂದ ರೈತರು ಪಟ್ಟಣಗಳಿಗೆ ವಲಸೇ ಹೋಗುತ್ತಿದ್ದಾರೆ ಇದನ್ನು ತಡೆಗಟ್ಟಲು ಸಕರ್ಾರಗಳು ಮುಂದಾದರೇ ಮಾತ್ರ  ಗುಳೇ ಹೋಗುವುದು ತಪ್ಪಿಸಬಹುದು ಎಂದರು. 
ರೈತರು ದೇಶದ ಮಾಲೀಕರು ಅನ್ನದಾತ ಎಂದೆಲ್ಲಾ ಹೊಗಳುತ್ತಾರೆ ರೈತರಿಗೆ ಯಾವುದೇ ಸವಲತ್ತು ನೀಡುತ್ತಿಲ್ಲ ಇದರಿಂದ ರೈತರು ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ರೈತರ ದಿನಾಚಾರಣೆಯನ್ನು ತಾಲ್ಲೂಕು ಮಟ್ಟದಲ್ಲಿ ಮಾಡದೇ ಹಳ್ಳಿ ಹಳ್ಳಿಗಳಲ್ಲೂ ಮಾಡುವ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ತುಂಬಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರೆ ರೈತರು ಸಹಕಾರ ನೀಡುತ್ತಾರೆ ಎಂದರು.
ಕೃಷಿಕ ಸಮಾಜದ ಕಾರ್ಯದಶರ್ಿ ಶಂಕರಪ್ಪ ಮಾತನಾಡಿ, ರಾಜಕಾರಣಿಗಳು ಚುನಾವಣೆಗಳು ಬಂದಾಗ ರೈತರ ಮನೆಗೆ ಬಂದು ಹೋಗುತ್ತಾರೆಯೇ ವಿನಹ ಗೆದ್ದ ನಂತರ ಹಳ್ಳಿಗಳ ಕಡೆ ತಿರುಗಿಯೂ ನೋಡುವುದಿಲ್ಲ, ರೈತರು, ಗೆದ್ದ ಪ್ರತಿನಿಧಿಗಳನ್ನು ಹುಡುಕಿಕೊಂಡು ಹೋಗುವ ಬದಲು ಅವರೇ ರೈತರನ್ನು ಹುಡುಕಿಕೊಂಡು ಬರುವಂತೆ ಮಾಡಿದರೆ ರೈತರಿಗೆ ಬೆಲೆ ಬರುತ್ತದೆ, ತಾಲ್ಲೂಕು ಕೃಷಿಕ ಸಮಾಜಕ್ಕೆ ಹದಿನೆಂಟು ಸಕರ್ಾರಿ ಇಲಾಖೆಗಳನ್ನು ಪ್ರಶ್ನಿಸುವ ಹಕ್ಕಿದೆ ಆದರೆ ರೈತರಿಗೆ ಅಧಿಕಾರ ಚಲಾಯಿಸಲು ಬರುತ್ತಿಲ್ಲ ಎಲ್ಲಾ ರೈತರು ಒಗ್ಗಟ್ಟಾದರೆ ಮಾತ್ರ ಅಧಿಕಾರಿಗಳನ್ನು ಪ್ರಶ್ನಿಸಬಹುದು ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲೋಕೇಶಪ್ಪ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಮ್ಮದು ರೈತರ ಸಕರ್ಾರ, ಗ್ರಾಮೀಣ ಜನರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ನಂತರ ರೈತರ ಮೇಲೆ ಪ್ರಮಾಣವಚನ ಸ್ವೀಕರಿಸುತ್ತಾರೆ ಆದರೆ ರಾಜಕಾರಣಿಗಳು ಅಧಿಕಾರ ಬಂದ ತಕ್ಷಣ ರೈತರನ್ನು ಕಡೆಗಣಿಸುತ್ತಾರೆ, ಈ ವರ್ಷ ಮಳೆ ಹೆಚ್ಚಾಗಿ ರೈತರು ಬೆಳೆದ ರಾಗಿ, ನವಣೆ, ಸಾವೆ ಬೆಳೆಗಳು ಮಣ್ಣು ಪಾಲಾಗಿದ್ದು ಇದರ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ರೈತರಿಗೆ ಬೆಳೆ ವಿಮೆ ಬರುವಂತೆ ನೋಡಿಕೊಳ್ಳಬೇಕು ಎಂದರಲ್ಲದೆ ರೈತ ಸಂಘದ ಮೂಲಕ ತಾಲ್ಲೂಕು ಕಛೇರಿ ಬಳಿ ಹನ್ನೊಂದು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿ ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವ ಕಾಮಗಾರಿ ಪ್ರಾರಂಭಿಸಲು ಒತ್ತಾಯಿಸಿದರೂ ಸಾವಿರಾರು ಸಂಖ್ಯೆಯಲ್ಲಿ ಬರಬೇಕಾದ ರೈತರು ಕೇವಲ ಬೆರಳಣಿಕಯಷ್ಟೇ ಬಂದರು ಈಗಾದರೇ ರೈತರಿಗೆ ನ್ಯಾಯ ದೊರಕುವುದೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




Thursday, December 17, 2015


                        ಡಿ.24 ಹುಳಿಯಾರಿಗೆ ಮುಖ್ಯಂತ್ರಿಗಳ ಆಗಮನ
                           
ಚಿಕ್ಕನಾಯಕನಹಳ್ಳಿ,  : ಚುನಾವಣಾ ಸಮಯದಲ್ಲಿ ಜೆಡಿಎಸ್ ಪಕ್ಷ ಅಭ್ಯಥರ್ಿಗಳನ್ನು ವ್ಯಾಪಾರ ಮಾಡುವಂತಹ ವ್ಯಕ್ತಿಗಳನ್ನು ಹೊರಗಿನಿಂದ ಕರೆತಂದು ಚುನಾವಣೆಗೆ ನಿಲ್ಲಿಸುತ್ತಿದೆ ಇದರಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರ ಪಾತ್ರ ಹೆಚ್ಚಾಗಿದೆ ಎಂದು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು. 
  ಪಟ್ಟಣದ ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ರವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಎ.ಕೃಷ್ಣಪ್ಪರವರನ್ನು ನಿಲ್ಲಿಸಿದ್ದರು ಈಗ ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿರುವ ಜೆಡಿಎಸ್ ಪಕ್ಷದ ಅಭ್ಯಥರ್ಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ, ಜೆಡಿಎಸ್ ಪಕ್ಷದಲ್ಲಿ ಸಮರ್ಥವಾದ ಅಭ್ಯಥರ್ಿಗಳಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಸ್ಪಧರ್ಿಸಿರುವ ಡಾ.ಹುಲಿನಾಯ್ಕರ್ ಸಭ್ಯ ವ್ಯಕ್ತಿ ಆದರೆ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಜಿಲ್ಲೆಯಲ್ಲಿ ಯಾವ ಅಭಿವೃದ್ದಿಯನ್ನೂ ಮಾಡಿಲ್ಲ, ಚುನಾವಣಾ ಸಮಯದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ತಮ್ಮ ಹಿತಾಸಕ್ತಿಗಾಗಿ ಹಾರುತ್ತಾರೆ ಎಂದರು.
ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತ ನೀಡಿ ಎಸ್.ಪಿ.ಮುದ್ದಹನುಮೇಗೌಡರವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ, ಇದೇ ರೀತಿ ಈ ಬಾರಿಯೂ ಜನಪ್ರತಿನಿಧಿಗಳು ಹೆಚ್ಚು ಮತ ನೀಡಿ ಆರ್.ರಾಜೇಂದ್ರರವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ, ರಾಜೇಂದ್ರ ತಮ್ಮ ಮಗ ಎಂಬ ಕಾರಣದಿಂದ ವಿಧಾನ ಪರಿಷತ್ ಚುನಾವಣೆಗೆ ಟೀಕೆಟ್ ನೀಡಿಲ್ಲ ಅವರು 10 ವರ್ಷಗಳ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದರಿಂದ ಟಿಕೆಟ್ ನೀಡಲಾಗಿದೆ. ತಾಲ್ಲೂಕಿನಲ್ಲಿ ಕಾಂಗ್ರೇಸ್ ಗುಂಪುಗಾರಿಕೆ ಇಲ್ಲ, ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಎಲ್ಲರೂ ಒಂದಾಗಿ ಪಕ್ಷದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜೇಂದ್ರರವರನ್ನು ಮತದಾರರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಷಫಿ ಅಹಮದ್ ಮಾತನಾಡಿ,  ಡಿಸೆಂಬರ್ 24ರಂದು ಹುಳಿಯಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಪರಿಷತ್ ಅಭ್ಯಥರ್ಿ ಆರ್.ರಾಜೇಂದ್ರರವರ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ 5976 ಜನ ಪ್ರತಿನಿಧಿಗಳಲ್ಲಿ ಹೆಚ್ಚಿನ ಪ್ರತಿನಿಧಿಗಳು ಕಾಂಗ್ರೇಸ್ ಅಭ್ಯಥರ್ಿ ಆರ್.ರಾಜೇಂದ್ರ ಅವರಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
 ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆಯುವ ಸಮಾವೇಶಕ್ಕೆ ಬೇಟಿ ನೀಡಿ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶದಲ್ಲಿ  ಸಂಸದ ಮುದ್ದೇಹನುಮೇಗೌಡ,  ಚಿತ್ರದುರ್ಗ ಸಂಸದ ಚಂದ್ರಯ್ಯ ಹಾಗೂ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ ಎಂದರು. 
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ರಾಹುಲ್ಗಾಂಧಿ ಯುವಕರಾಗಿದ್ದು ಯುವಕರಿಗೆ ಆಧ್ಯತೆ ನೀಡಬೇಕೇಂಬ ಕಾರಣದಿಂದ ಆರ್.ರಾಜೇಂದ್ರ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪಧರ್ಿಸಲು ಟಿಕೆಟ್ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸಕರ್ಾರವಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್.ರಾಜೇಂದ್ರ ಜಯಗಳಿಸಿದರೆ ಗ್ರಾ.ಪಂ, ಜಿ.ಫಂ,  ತಾ.ಪಂ.ಗಳಿಗೆ ಹೆಚ್ಚಿನ ಅನುದಾನ ಬರುವುದರಿಂದ ಹಳ್ಳಿಗಳು ಅಭಿವೃದ್ದಿ ಹೊಂದಲು  ಆರ್.ರಾಜೇಂದ್ರ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೇಸ್ ಮುಖಂಡ ಸಾಸಲು ಸತೀಶ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನ ಜನತೆ ಕಾಂಗ್ರೆಸ್ ಪರವಾಗಿ ಸ್ಪಧರ್ಿಸಿದ್ದ ಎಸ್.ಪಿ ಮುದ್ದಹನುಮೇಗೌಡರಿಗೆ ಹೆಚ್ಚು ಮತ ನೀಡಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ ಅದೇ ರೀತಿ ಈ ಬಾರಿಯು ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ  ಮತ ನೀಡಿ ರಾಜೇಂದ್ರರವರನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ ಆರ್.ರಾಜೇಂದ್ರ ಎರಡು ಬಾರಿ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಯುವಕರನ್ನು ಸಂಘಟಿಸಿ ಪಕ್ಷದ ಬಲವರ್ದನೆಗೆ ಶ್ರಮಿಸಿದ ಪ್ರಯುಕ್ತ ರಾಜೀವ್ ಗಾಂಧಿಯವರು ರಾಜೇಂದ್ರರವರಿಗೆ ವಿಧಾನ ಪರಿಷತ್ಗೆ ಟಿಕೆಟ್ ನೀಡಿದ್ದಾರೆ, ರಾಜೇಂದ್ರರವರ ಗೆಲುವಿಗೆ ಯುವಕರು ಹೆಚ್ಚಿನದಾಗಿ ಶಕ್ತಿ ಮೀರಿ ಇವರ ಗೆಲುವಿಗೆ ಶ್ರಮಿಸುತ್ತಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಜಿ.ರಘುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಎ.ಪಿ.ಎಂ.ಸಿ.ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ,  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಶೇಷಾನಾಯ್ಕ, ವೆಂಕಟೇಶ್ , ದಸೂಡಿ ರಂಗಸ್ವಾಮಿ, ಅಶೋಕ, ಪುರಸಭಾ ಸದಸ್ಯರಾದ ರೇಣುಕಮ್ಮ. ಸಿ.ಪಿ.ಮಹೇಶ್, ಮುಖಂಡ ಕೆ.ಜಿ.ಕೃಷ್ಣಗೌಡ ಮತ್ತಿತರರು  ಉಪಸ್ಥಿತರಿದ್ದರು. 

 ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚು ಪಡೆದರೆ ರಾಜಕೀಯ ನಿವೃತ್ತಿ : ಕೆ.ಎಸ್.ಈಶ್ವರಪ್ಪ
ಚಿಕ್ಕನಾಯಕನಹಳ್ಳಿ, : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಗೆ ಪಡೆದರೂ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ, ದೇವರೇ ಅಡ್ಡ ಬಂದರೂ ಡಾ.ಹುಲಿನಾಯ್ಕರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
   ಪಟ್ಟಣದ ಬಳಿ ಇರುವ ದಬ್ಬೆಘಟದ ಶ್ರೀ ಮರಳುಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ವಿಧಾನ ಪರಿಷತ್ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್ ಪರ ಪ್ರಚಾರ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿ ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಅತ್ಯಾಚಾರ, ಮರಳುದಂದೆ, ಕೊಲೆಗಳು ನಡೆಯುತ್ತಿದ್ದರೂ ತಲೆ ಕೆಡಸಿಕೊಳ್ಳದ ಕಾಂಗ್ರೇಸ್ ಸಕರ್ಾರ ನಾಚಿಕೆ ಗೇಡಿನ ಆಡಳಿತ ನಡೆಸುತ್ತಿದೆ ಎಂದರು.
  ಮೊದಲು ತಲೆ ಕೆಟ್ಟಿತ್ತು: ಮೊದಲು ನಮಗೆ ತಲೆ ಕೆಟ್ಟಿತ್ತು ಹಾಗಾಗಿ ಕೆಜೆಪಿ,ಬಿಜೆಪಿ ಎಂದು ಛಿದ್ರವಾಗಿದ್ದೆವು ಈಗ ಬುದ್ಧಿ ಬಂದಿದೆ ಒಂದಾಗಿದ್ದೇವೆ. ಈಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಮುಂದಿನ ಬಿಜೆಪಿ ಸಕರ್ಾರದ ಅಧಿಕಾರಕ್ಕೆ ಅಡಿಗಲ್ಲು ಆಗಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ 20 ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ 10ಕ್ಕಿಂತ ಹೆಚ್ಚು ಸ್ಥಾನ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. 
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೇ ಇಡೀ ವಿಶ್ವವೇ ಕೊಂಡಾಡುತ್ತಿದೆ. ಪಾಕಿಸ್ಥಾನ ಮತ್ತು ಸಿದ್ಧರಾಮಯ್ಯ ಇಬ್ಬರು ಮಾತ್ರ ಟೀಕಿಸುತ್ತಿದ್ದಾರೆ ಎಂದರು.
   ಈಗ ಮುಖ್ಯಮಂತ್ರಿ ತಲೆ ಕೆಟ್ಟಿದೆ : ಬರಪೀಡಿತ ಕನರ್ಾಟಕಕ್ಕೆ  ಕೇಂದ್ರ ಸಕರ್ಾರ ರೂ.1650 ಕೋಟಿ ಹಣ ಬಿಡುಗಡೆ ಮಾಡಿದೆ. 40 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಸಕರ್ಾರ ರೂ.500 ಕೋಟಿಗಿಂತ ಹೆಚ್ಚು ಹಣವನ್ನು ರಾಜ್ಯಕ್ಕೆ ಎಂದೂ ಎಂದು ನೀಡಿಲ್ಲ.ಬಂದಿರುವ ಹಣವನ್ನು ಬಳಸಿಕೊಳ್ಳಲಾಗದ  ಕನರ್ಾಟಕ ಸಕರ್ಾರ ಮೋದಿರವರ ಮೇಲೆ ಗೂಬೆ ಕೂರಿಸುತ್ತಿದೆ. ಈಗ ಸಿದ್ಧರಾಮಯ್ಯ ಅವರ ತಲೆ ಕೆಟ್ಟಿದರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಮರಳುದಂಧೆ ವ್ಯಾಪಕವಾಗಿ ನಡೆಯುತ್ತಿದೆ, ಪ್ರಾಮಾಣಿಕ ಅಧಿಕಾರಿಗಳ ಕಗ್ಗೊಲೆಯಾಗುತ್ತಿದೆ ಇದರಿಂದ ಅಧಿಕಾರಿಗಳಲ್ಲಿ ಆತ್ಮಸ್ಥೈರ್ಯ ಕುಗ್ಗುತ್ತಿದೆ. ಕಾಂಗ್ರೆಸ್ ಸಕರ್ಾರದಲ್ಲಿ ಗೂಂಡಾಗಳು, ಸಮಾಜ ಘಾತುಕ ಶಕ್ತಿಗಳು ತಲೆಯುತ್ತುತ್ತಿವೆ ಎಂದು ಆರೋಪಿಸಿದರು.
ಹುಲಿನಾಯ್ಕರ್ ಬಿಜೆಪಿಯ ಕೃಷ್ಣಪರಮಾತ್ಮ : ಶಾಸಕ ಸುರೇಶ್ಗೌಡ ಮಾತನಾಡಿ, ವಿಧಾನ ಪರಿಷತ್ ಚುನಾವಣೆಗೆ ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿಯವರಿಗೆ ಟಿಕೆಟ್ ನೀಡುವುದು ಎಂದು ನಿಧರ್ಾರವಾಗಿತ್ತು. ಜೆಸಿಎಂ ಕಡೆ ಕ್ಷಣದಲ್ಲಿ ಹಿಂದೆ ಸರಿದರು ಇದರಿಂದ ನಮಗೆ ದಿಕ್ಕು ತೋಚದಂತಾಗಿತ್ತು. ಕಷ್ಟದಲ್ಲಿರುವ ಪಾಂಡವರಿಗೆ ಕೃಷ್ಣಪರಮಾತ್ಮ ಆಸರೆ ನೀಡಿದಂತೆ ಡಾ.ಹುಲಿನಾಯ್ಕರ್ ಕಮಲದ ಕೈ ಹಿಡಿದರು. ದುಡ್ಡಿನ ಥೈಲಿ ಇದೆ ಎಂಬ ಕಾರಣಕ್ಕೆ ಜೆಡಿಎಸ್ ಹೊರಗಿನವರಿಗೆ ಮಣೆ ಹಾಕಿದೆ.ಹುಲಿನಾಯ್ಕರ್ ಕೂಡ ಇವರಿಗಿಂತ ಹತ್ತುಪಟ್ಟು ಸ್ಟ್ರಾಂಗ್ ಎಂದರಲ್ಲದೆ  ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಭಾಗಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ನಾಲ್ಕು ತಾಲ್ಲೂಕುಗಳಲ್ಲಿ ಜೆಸಿಎಂ ಸಂಚರಿಸಿ, ಅಭ್ಯಥರ್ಿ ಎಂ.ಆರ್.ಹುಲಿನಾಯ್ಕರ್ ಪರ ಮತ ಕ್ರೂಡೀಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆ ದುಡ್ಡಿಗೆ ಹಡ : ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಪ್ರತೀ ಚುನಾವಣೆಯಲ್ಲೂ ದೇವೇಗೌಡರು ಹೊರಗಿನವರನ್ನು ಕಣಕ್ಕಿಳಿಸುವ ಮೂಲಕ ತುಮಕೂರು ಜಿಲ್ಲೆಯನ್ನು  ದುಡ್ಡಿಗೆ ಹಡವಿಟ್ಟಿದೆ ಎಂದರು. 
ಮುಖ್ಯಮಂತ್ರಿ ಸುತ್ತ ಭಟ್ಟಂಗಿಗಳು :ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ನೋಡಿ ಸಹಿಸಲಾರದ ಕಾಂಗ್ರೆಸ್ ಕ್ಷುಲ್ಲಕ ನೆಪವೊಡ್ಡಿ ಸಂಸತ್ ಕಲಾಪ ನಡೆಯದಂತೆ ಗಲಾಟೆ ಎಬ್ಬಿಸುತ್ತಿರುವುದು ವಿಷಾದದ ಸಂಗತಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸುತ್ತಮುತ್ತ ಕೆಲವು ಭಟ್ಟಂಗಿಗಳನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ, ತಾಲ್ಲೂಕಿಗೆ ಹೇಮಾವತಿ ನಾಲಾ ಕಾಮಗಾರಿ ಕಳೆದ 2 ವರ್ಷದಿಂದ ನೆನೆಗುದಿಗೆ ಬಿದ್ದಿದೆ ಶಾಸಕರು ಹಾಗೂ ಉಸ್ತುವಾರಿ ಸಚಿವರಿಗೆ ಕಾಮಗಾರಿ ಪೂರ್ಣಗೊಳಿಸುವ ಇಚ್ಚಾಶಕ್ತಿ ಇಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಹಾಗೂ ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ರಾಜಣ್ಣ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ಪರಿಶಿಷ್ಠಜಾತಿ ಮೋಚರ್ಾ ರಾಜ್ಯ ಘಟಕದ ಉಪಾಧ್ಯಕ್ಷ ಗಂಗರಾಜು, ಜಿಲ್ಲಾ ಘಟಕದ ಅಧ್ಯಕ್ಷ ರಾಮಾಂಜಿನಯ್ಯ,  ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷೆ ಜಯಕ್ಷ್ಮಮ್ಮ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ತಾ.ಪಂ.ಉಪಾಧ್ಯಕ್ಷ ನಿರಂಜನಮೂತರ್ಿ, ಶ್ರೀನಿವಾಸಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.

ಕಳಸಾ ಬಂಡೂರಿ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆ ಮೂಲಕ                           ಇತ್ಯರ್ಥಗೊಳಿಸಲಿ : ಕೆ.ಎಸ್.ಈಶ್ವರಪ್ಪ
                             
ಚಿಕ್ಕನಾಯಕನಹಳ್ಳಿ,ಡಿ.16 : ಮಹದಾಯಿ ಕಳಸಾ ಬಂಡೂರಿ ವಿಚಾರವನ್ನು ಕಾಂಗ್ರೆಸ್ ಸಕರ್ಾರ ಪ್ರಚಾರಕ್ಕೆ ಬಳಸಿಕೊಳ್ಳದೆ ನಾಲ್ಕು ರಾಜ್ಯಗಳ ಸರ್ವಪಕ್ಷಗಳ ಸಭೆ ಕರೆದು ಇತ್ಯರ್ಥಗೊಳಿಸಲಿ  ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಧಾನ ಪರಿಷತ್ ಬಿಜೆಪಿ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್ ಪರ ಚುನಾವಣಾ ಪ್ರಚಾರಕ್ಕೆಂದು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಇಟ್ಟಿಗೆ ರಂಗಸ್ವಾಮಯ್ಯನವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಕಳಸಾ ಬಂಡೂರಿ ಸಮಸ್ಯೆ ನೆನ್ನೆ ಮೊನ್ನೆದಲ್ಲ  35ವರ್ಷಗಳ ಸಮಸ್ಯೆ ರಾಜ್ಯದಲ್ಲಿ ಜೆ.ಡಿ.ಎಸ್, ಬಿ.ಜೆಪಿ. ಸಮ್ಮಿಶ್ರ ಸಕರ್ಾರವಿದ್ದಾಗ ನಾನು ನೀರಾವರಿ ಸಚಿವನಾಗಿ ಶಂಕುಸ್ಥಾಪನೆ ನೆರವೇರಿಸಿದ್ದೇನೆ, ಕೇಂದ್ರಾಡಳಿತ ಪ್ರದೇಶ ಸೇರಿದಂತೆ 4 ರಾಜ್ಯಗಳಲ್ಲೂ ಕಾಂಗ್ರೆಸ್ ಸಕರ್ಾರವಿದ್ದಾಗಲೂ ಕೂಡ ಕಳಸಾ ಬಂಡೂರಿ ಚಚರ್ೆ ಕೂಡ ಮಾಡಲಿಲ್ಲ, ಯು.ಪಿ.ಎ ಸಕರ್ಾರದ ನಾಯಕಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರಕ್ಕಾಗಿ ಕನರ್ಾಟಕದಲ್ಲಿ ಗೋವಾಕ್ಕೆ ಒಂದು ಹನಿ ನೀರು ಬಿಡಲ್ಲ ಅಂತಲೂ ಗೋವಾದಲ್ಲಿ ಕನರ್ಾಟಕಕ್ಕೆ ಒಂದನಿ ನೀರು ಬಿಡುವುದಿಲ್ಲ ಎಂಬ ಒಳಗಡೆ ಒಂದು ರೀತಿ ಹೊರಗಡೆ ಮತ್ತೊಂದು ರೀತಿ ಮಾತುಗಳನ್ನು ಹೇಳುತ್ತಾ ರಾಜಕೀಯ ಮಾಡುತ್ತಿದ್ದಾರೆ, ನಮ್ಮ ಪಾಲಿನ ಮಹದಾಯಿ ನೀರು ಹಂಚಿಕೆ ವಿಚಾರ ಸುಪ್ರಿಂಕೋಟರ್್ ಮೆಟ್ಟಿಲೇರುವಂತೆ ಮಾಡಿದ್ದು ಕಾಂಗ್ರೇಸ್ನವರೇ ಈಗ ನ್ಯಾಯಾಧೀಕರಣದ ಹೊರಗಿಟ್ಟು ಮಾತಾಡೋಣ ಅಂತ ಹೇಳುತ್ತಿರುವವರೂ ಕಾಂಗ್ರೇಸ್ನವರೇ.
ಸರ್ವ ಪಕ್ಷ ಪ್ರಧಾನಿ ಬಳಿ ನಿಯೋಗ ಕೊಂಡೊಯ್ದ ವೇಳೆ ನರೇಂದ್ರ ಮೋದಿಯವರೇ ನ್ಯಾಯಾಧಿಕರಣದಲ್ಲಿದ್ದರು ಈ ವಿಚಾರವಾಗಿ ಹೊರಗಿಟ್ಟು ಮಾತಾಡೋಣ ಅಂತ ಹೇಳಿದ್ದ ಅವರು ಎಲ್ಲಾ ಪಕ್ಷಗಳು ಬಿ.ಜೆ.ಪಿ. ಜೆ.ಡಿ.ಎಸ್ ಕಾಂಗ್ರೆಸ್ ಸೇರಿ ಕುಳಿತು ಬಗೆಹರಿಸಬೇಕಾಗುತ್ತದೆ ಎಂದು ಮೋದಿಯವರ ಮಾತಿಗೆ ಒಪ್ಪಿದ ಸಿ.ಎಂ ಮಾಧ್ಯಮಗಳ ಮುಂದೆ ಬಂದು ಪ್ರಧಾನಿ ಆಸಕ್ತಿ ತೋರುತ್ತಿಲ್ಲ ಅಂತ ಕೀಳು ಮಟ್ಟದ ರಾಜಕೀಯ ಮಾಡುತ್ತಾರೆ, ರಾಜಕೀಯ ಮಾಡೋಕು ಒಂದು ಲಿಮಿಟ್ ಬೇಕು, ನಾವು ಗೋವಾ ಮಹಾರಾಷ್ಟ್ರ ಸಕರ್ಾರಗಳನ್ನು ಕರೆಯುತ್ತೇವೆ ಕಾಂಗ್ರೇಸ್ನವರು ಅ ರಾಜ್ಯಗಳ ವಿರೋಧ ಪಕ್ಷಗಳನ್ನು ಸಹ ಸೇರಿಸಬೇಕು ಎಲ್ಲಾ ಪಕ್ಷಗಳು ಇಚ್ಛಾಶಕ್ತಿ ಹೊಂದಿದ್ದರೆ ಸಮಸ್ಯೆ ಇರುವುದಿಲ್ಲ ಎಂದ ಅವರು ಈಗ ಮುಖ್ಯಮಂತ್ರಿಗಳು ಸಭೆ ಕರೆದು ಗೋವಾ ಮಹಾರಾಷ್ಟ್ರಕ್ಕೆ ಹೋಗೋಣ ಅಂತ ಹೇಳಿದ್ದಾರೆ ಅಲ್ಲಿ ಎಲ್ಲಾ ಪಕ್ಷಗಳು ಕುಳಿತು ಚಚರ್ಿಸಿದ ನಂತರ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
ತಾಲ್ಲೂಕಿನ 26ಕೆರೆಗಳಿಗೆ ನೀರು ಹರಿಸುವ ಯೋಜನೆ ಸೇರಿದಂತೆ ಕನರ್ಾಟಕದಲ್ಲಿ ನಾವು ಉಪಮುಖ್ಯಮಂತ್ರಿಯಾಗಿದ್ದಾಗ ಅಡಿಗಲ್ಲು ಹಾಕಿದ ಯಾವುದೇ ನೀರಾವರಿ ಯೋಜನೆಗಳು ಚಾಲನೆಯಾಗುತ್ತಿಲ್ಲ ಎಂದರು.
 ತುಮಕೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಬಂದಂತಹ ಹುಲಿನಾಯ್ಕರ್ರವರಿಗೆ ಟಿಕೆಟ್ ನೀಡಿದ್ದರ ಬಗ್ಗೆ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಂತಹ ಸಮರ್ಥಕವಾದ ವ್ಯಕ್ತಿ ಇಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪನವರು, ರಾಜಕೀಯ ನಿಂತ ನೀರಲ್ಲ, ಮೊದಲು ನಮಗೆ ರಾಜಕೀಯ ಮಾಡಲು ಬರುತ್ತಿರಲಿಲ್ಲ, ಈಗ ರಾಜಕೀಯದಲ್ಲಿ ಪಕ್ಷಕ್ಕೆ ಯಾರು ಅಗತ್ಯ ಪಕ್ಷಕ್ಕೆ ಯಾರನ್ನು ಕರೆಯಬೇಕು, ಯಾರನ್ನು ಸ್ಪಧರ್ೆಗೆ ನಿಲ್ಲಿಸಬೇಕು ಎಂಬುದು ನಮಗೂ ತಿಳಿದಿದೆ, ಬಿಜೆಪಿ ಪಕ್ಷ ಎಲ್ಲಾ ಕಡೆಯಲ್ಲೂ ಗೆಲ್ಲುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಸುರೇಶ್ಗೌಡ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ವಿಧಾನ ಪರಿಷತ್ ಅಭ್ಯಥರ್ಿ ಡಾ.ಎಂ.ಆರ್.ಹುಲಿನಾಯ್ಕರ್, ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ನೀಲಿ ನಾಲಗೆ ರೋಗ 
                               

ಚಿಕ್ಕನಾಯಕನಹಳ್ಳಿ,ಡಿ.16 : ನೀಲಿನಾಲಗೆ ರೋಗ ತಾಲ್ಲೂಕಿನಾಧ್ಯಂತ ವ್ಯಾಪಕವಾಗಿ ಹರಡುತ್ತಿದ್ದರೂ,ಪಶು ವೈದ್ಯ ಸಿಬ್ಬಂದಿ ರೊಗನಿಯಂತ್ರಣಕ್ಕೆ ಮುಂದಾಗುತ್ತಿಲ್ಲ. ಸತ್ತ ಕುರಿಗಳನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಿಮೆ ಪಡೆಯಲೂ ವೈದ್ಯರು ಸಿಗುತ್ತಿಲ್ಲ ಎಂದು ತಾಲ್ಲೂಕಿನ ಕುರಿಗಾಹಿಗಳು ಇಲಾಖೆ ಹಾಗೂ ಪಶು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.
   ರೇವಣಸಿದ್ಧೇಶ್ವರ ಕುರಿಸಾಕಣೆದಾರರ ಸಂಘದ ಅಧ್ಯಕ್ಷ ಹಂದನಕೆರೆ ಸಿದ್ಧಣ್ಣ ಮಾತನಾಡಿ, ರೋಗವ್ಯಾಪಕವಾಗಿ ಹರಡುತ್ತಿದೆ. ಸಾಲು ಸಾಲಾಗಿ ಕುರಿಗಳು ಸಾಯುತ್ತಿವೆ. ಒದೊಂದು ಹಟ್ಟಿಯಲ್ಲೂ ಪ್ರತಿನಿತ್ಯ ಹತ್ತಾರು ಕುರಿಗಳು ರೊಗಕ್ಕೆ ತುತ್ತಾಗುತ್ತಿವೆ. ಸತ್ತ ಕುರಿಗಳನ್ನು ಒಂದೆಡೆ ಗುಂಡಿ ತೋಡಿ ಸಾಮೂಹಿಕವಾಗಿ ಮಣ್ಣು ಮುಚ್ಚುತ್ತಿದ್ದಾರೆ. ಇದರಿಂದ  ರೋಗಾಣುಗಳು ಆರೋಗ್ಯವಂತ ಕುರಿಗಳಿಗೂ ಹರಡುತ್ತಿವೆ. ತಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಈಗಾಗಲೇ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದರ ಜೊತೆಯಲ್ಲಿ ಕುರಿಗಾಹಿಗಳು ಸಹ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ  ಎಂದರು.
    ಕುರಿಗಾಹಿ ಗಂಗಾಭೋವಿ ಮಾತನಾಡಿ, ಸಕರ್ಾರ ಕುರಿಗಳಿಗೆ ನೀಲಿ ನಾಲಿಗೆ ರೋಗಕ್ಕೆ ಔಷಧಿ ಒದಗಿಸಿದ್ದೇವೆ ಎಂದು ಹೇಳುತ್ತಿದೆ, ಆಸ್ಪತ್ರೆಯಲ್ಲಿ ವಿಚಾರಿಸಿದರೆ  ಔಷಧಿ ಸರಬರಾಜು ಆಗಿಲ್ಲ ಎಂದು ಹೇಳುತ್ತಾರೆ. ನಾವು ಯಾರನ್ನು ನಂಬುವುದು? ಕುರಿ ಸತ್ತರೆ ಪರಿಹಾರ ನೀಡಲು ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುತ್ತಾರೆ. ಸತ್ತ ಕುರಿಯ ಭಾವಚಿತ್ರ ಬೇಕು ಎನ್ನುತ್ತಾರೆ. ಆಸ್ಪತ್ರೆ ಬಳಿ ತೆಗೆದುಕೊಂಡು ಹೋದರೆ ವೈದ್ಯರು ಇರುವುದಿಲ್ಲ ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಅಸಹಾಯಕತೆ ತೊಡಿಕೊಂಡರು.
  ಈ ಕುರಿತು ಹೆಸರು ಬಹಿರಂಗಪಡಿಸಲಿಚ್ಚಿಸದ ಪಶುವೈದ್ಯಾಧಿಕಾರಿಯೊಬ್ಬರು ಮಾತನಾಡಿ,ಕಳೆದ ಒಂದೂವರೆ ತಿಂಗಳಿಗೆ ಮುಂಚಿತವಾಗಿಯೇ ತಾಲ್ಲೂಕಿನಲ್ಲಿ ನೀಲಿ ನಾಲಿಗೆ ರೋಗದ ಲಕ್ಷಣ ಕಂಡುಬಂದಿದ್ದು ಸೂಕ್ತ ಔಷಧಿ ಒದಗಿಸುವಂತೆ ಇಲಾಖೆಗೆ ಮನವಿ ಮಾಡಿಕೊಂಡಿದ್ದೆವು. ಪ್ರಾಥಮಿಕ ಹಂತದಲ್ಲೇ ಉನ್ನತ ಅಧಿಕಾರಿಗಳು ಸ್ಪಂದಿಸಿದ್ದರೆ ಸಮಸ್ಯೆ ಇಷ್ಟು ಬಿಗಡಾಯಿಸುತ್ತಿರಲಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
    ಪಶು ವೈದ್ಯಾಧಿಕಾರಿ ಕಾಂತರಾಜು ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು1.6ಲಕ್ಷ ಕುರಿಗಳಿವೆ.ಶೇ.60ರಷ್ಟು ಕುರಿಗಳಿಗೆ ರೋಗಲಕ್ಷಣ ಕಾಣಿಸಿಕೊಂಡಿದೆ. ಇಲಾಖೆಯಿಂದ ತಾಲ್ಲೂಕಿಗೆ 32 ಸಾವಿರ ಡೋಸ್ ಔಷಧಿ ವಿತರಣೆಯಾಗಿದೆ. ಇದು ಶೇ.20ರಷ್ಟು ಕುರಿಗಳಿಗೂ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ರೋಗ ಬಂದಿರುವ ಕುರಿಗಳಿಗೆ ಲಸಿಕೆ ಹಾಕಿದರೆ ಔಷಧಿಗೆ ಸ್ಪಂದಿಸುವುದಿಲ್ಲ. ರೊಗದಿಂದ ಮುಕ್ತವಾಗಿರುವ ಕುರಿಗಳನ್ನು ಬೇರ್ಪಡಿಸಿ ಸಾಮೂಹಿಕವಾಗಿ ರಿಂಗ್ ವ್ಯಾಕ್ಸಿನೇಷನ್ ನೀಡಬೇಕು ಆದರೆ ಕುರಿಗಾಹಿಗಳು ಇದನ್ನು ಒಪ್ಪುತ್ತಿಲ್ಲ. ಈ ಗೊಂದಲದಿಂದಾಗಿ ಲಸಿಕೆ ಪ್ರಾರಂಭಿಸಿಲ್ಲ. ಉನ್ನತ ಮಟ್ಟದ ಅಧಿಕಾರಿಗಳ ಜತೆ ಚಚರ್ಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
  ತಾಲ್ಲೂಕಿನಲ್ಲಿ ಪಶು ವೈದ್ಯ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆಯಿಂದಾಗಿ ಸಾವನ್ನಪ್ಪುತ್ತಿರುವ ಕುರಿಗಳ ಮರಣೋತ್ತರ ಪರೀಕ್ಷೆ ಹಾಗೂ ದಾಖಲೀಕರಣ ಸವಾಲಾಗಿ ಪರಿಣಮಿಸಿದೆ. ಹುಳಿಯಾರು ಹಾಗೂ ಹಂದನಕೆರೆ ಭಾಗದಲ್ಲಿ ಹೆಚ್ಚು ಕುರಿಗಳಿಗೆ ನೀಲಿ ನಾಲಿಗೆ ರೋಗದ ಲಕ್ಷಣ ಕಂಡುಬಂದಿದೆ, ಆದರೆ ಎಲ್ಲಾ ಕುರಿಗಳು ದಾಖಲೆಗೆ ಸಿಕ್ಕಿಲ್ಲ. ಈ ವರೆಗೆ ಕೇವಲ 183 ಪ್ರಕರಣಗಳು ದಾಖಲಾಗಿವೆ. ಬಹಳಷ್ಟು ಕುರಿಗಾಹಿಗಳು ಸತ್ತಕುರಿಗಳನ್ನು ಮರಣೋತ್ತರಪರೀಕ್ಷೆಗೆ ಒಳಪಡಿಸದೇ ಮಣ್ಣು ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದರು.
   ತಾಲ್ಲೂಕಿನ ಆಲದಕಟ್ಟೆ ಬಳಿ ಕುರಿ ಹಿಂಡಿನೊಂದಿಗೆ ಸಾಗುತ್ತಿದ್ದ ಕುರಿಗಾಹಿ ದಬ್ಬಕುಂಟೆ ಲೋಕೇಶ್ ಮಾತನಾಡಿ, ಪ್ರತೀ ವರ್ಷ ಸುಗ್ಗಿ ಮುಗಿಸಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದು, ಈ ಬಾರಿ ಕುರಿಗಳಿಗೆ ರೋಗ ಬಂದೈತೆ ಅದುಕ್ಕೆ 1ತಿಂಗಳು ಮುಂಚಿತವಾಗೇ ಹಾಸನದ ಕಡೆ ಹೋಗುತ್ತಿದ್ದೇವೆ,  ಆಸ್ಪತ್ರೆಯಲ್ಲಿ  ವೈದ್ಯರನ್ನು ನಂಬಿಕೊಂಡರೆ ಅಷ್ಟೇ. ಒಂದು ಕುರೀನೂ ಉಳಿಯೋದಿಲ್ಲ. ಔಷಧಿ ಅಂಗಡಿನಲ್ಲಿ ರೂ.4000 ಔಷಧಿ ತೆಗೆದುಕೊಂಡು, ಈಗ ನಮ್ಮಲ್ಲಿರೋ 400 ಕುರಿಗಳಿಗೂ ಇಂಜೆಕ್ಷನ್ ಮಾಡಿಸಿದ್ದೇನೆ ಕುರಿಗೆ ಕಾಯಿಲೆ ಬಂದರೆ ಮುಂಚಿತವಾಗಿಯೇ ಇನ್ನೂ ಎರಡು ಸಾವಿರ ರೂಪಾಯಿಗಳ ಔಷದಿಯನ್ನು ಸಂಗ್ರಹಿಸಿದ್ದೇನೆ ಎಂದು ರೋಗದ ಕಾರಣಕ್ಕಾಗಿ ಅಕಾಲಿಕ ಗುಳೆ ಹೊರಟಿರುವುದನ್ನು ವಿವರಿಸಿದರು.
  ಪಶು ವೈದ್ಯಾಧಿಕಾರಿ ಡಾ.ರಘುಪತಿ ಮಾತನಾಡಿ,ಸಾಮಾನ್ಯ ಕುರಿಗಾಹಿಗಳು ಜಂತುನಾಶಕ ಔಷಧಿಗಳೇ ಸರ್ವರೋಗಕ್ಕೂ ಮದ್ದು ಎಂದು ಭಾವಿಸಿದ್ದಾರೆ. ಕಾಯಿಲೆಗೆ ತುತ್ತಾಗಿರುವ ಕುರಿಗಳಿಗೆ ಕುರಿಗಾಹಿಗಳೇ ಸ್ವತಃ ಔಷದಿ ನೀಡುವ ಪರಿಪಾಟ ಇಟ್ಟುಕೊಂಡಿದ್ದಾರೆ. ಇದು ಕೆಲವೊಮ್ಮೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯರ ಸಲಹೆ ಮೇರಗೇ ಔಷದೋಪಚಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಿಬ್ಬಂದಿ ಕೊರತೆ:ತಾಲ್ಲೂಕು ಪಶು ಇಲಾಖೆಯಲ್ಲಿ ಶೇ.38 ಭಾಗ ಸಿಬ್ಬಂದಿ ಕೊರತೆ ಇದೆ. ಒಟ್ಟು 22 ಪಶುಚಿಕಿತ್ಸಾ ಕೇಂದ್ರಗಳಿದ್ದು 82 ಹುದ್ದೆಗಳು ಮುಂಜೂರಾಗಿವೆ. 43ಸಿಬ್ಬಂದಿ ಮಾತ್ರ ಇದ್ದು 39 ಹುದ್ದೆಗಳು ಖಾಲಿ ಇವೆ. 2 ಪಶು ಆಸ್ಪತ್ರೆ, 11ಪಶು ಚಿಕಿತ್ಸಾಲಯಗಳು ಹಾಗೂ 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 1 ಸಹಾಯಕ ನಿದರ್ೇಶಕರ ಹುದ್ದೆ, 6 ಪಶುವೈದ್ಯಾಧಿಕಾರಿಗಳ ಹುದ್ದೆ, 1 ಪಶು ಪರೀಕ್ಷಕ, 22 ಸಹಾಯಕ ಹುದ್ದೆಗಳು ಖಾಲಿ ಇವೆ.
ಲಸಿಕೆ ಕಾರ್ಯಕ್ರಮ ಆರಂಭ: ಡಿ.16 ರಿಂದ ನೀಲಿ ನಾಲಿಗೆ ರೋಗಕ್ಕೆ ಲಸಿಕಾ ಕಾರ್ಯಕ್ರಮ ಆರಂಭವಾಗುತ್ತಿದೆ. ಲಸಿಕೆ ಕೊಡಿಸುವಾಗ ಕುರಿಗಾಹಿಗಳು ರೋಗಪೀಡಿತ ಕುರಿಗಳನ್ನು ಪ್ರತ್ಯೇಕಿಸಿ ಲಸಿಕೆ ಹಾಕಿಸಬೇಕು .ಇದರಿಂದ ಆರೋಗ್ಯವಂತ ಕುರಿಗಳಿಗೆ ರೋಗ ಹರಡದಂತೆ ಕಾಯ್ದುಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ. 
ಖಡ್ಡಾಯವಾಗಿ ದಾಖಲಿಸಿ: ಮರಣಹೊಂದಿದ ಕುರಿಗಳನ್ನು ಸಮೀಪವಿರುವ ಪಶು ವೈದ್ಯ ಆಸ್ಪತ್ರೆಯಲ್ಲಿ ಖಡ್ಡಾಯವಾಗಿ ದಾಖಲಿಸಿ .6 ತಿಂಗಳು ಮೇಲ್ಪಟ್ಟ ಕುರಿಗಳಿಗೆ ಸಕರ್ಾರ ರೂ.5000 ಪರಿಹಾರ ಘೋಷಿಸಿದೆ. ಉದಾಸೀನ ಮಾಡದೆ ದಾಖಲಿಸುವುದರಿಂದ ಪರಿಹಾರದ ಮೊತ್ತ ಲಭಿಸಲಿದ್ದು ನಷ್ಟವನ್ನು ಸ್ವಲ್ಪಮಟ್ಟಿಗಾದರೂ ತುಂಬಿಕೊಳ್ಳಬಹುದು ಎಂದು ಪಶು ವೈದ್ಯಾಧೀಕಾರಿ ಕಾಂತರಾಜು ಮನವಿ ಮಾಡಿದ್ದಾರೆ.

ಜಿ.ಪಂ, ತಾ.ಪಂ. ಚುನಾವಣೆ ಬಗ್ಗೆ ಪಂಚಾಯ್ತಿ ಕಟ್ಟೆಗಳಲ್ಲಿ ಮಾತುಕತೆ 
ಚಿಕ್ಕನಾಯಕನಹಳ್ಳಿ,ಡಿ.16 : ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಮೀಸಲಾತಿ ಘೋಷಣೆಯಾಗಿದೆ ಆದರೆ ಇನ್ನು ಅಜರ್ಿ ಸಲ್ಲಿಸಲು ದಿನಾಂಕ ನಿಗಧಿಯಾಗಿಲ್ಲ, ಆದರೂ ಆಕಾಂಕ್ಷಿಗಳ ಬೆಂಬಲಿಗರು ಟೀ ಅಂಗಡಿ, ಹೋಟೆಲ್, ಪಂಚಾಯ್ತಿ ಕಟ್ಟೆ, ಅರಳೀಮರದ ಕಟ್ಟೆಗಳಲ್ಲಿ ಮಾತುಕತೆ ನಡೆಸುವ ಮೂಲಕ ಇಂತಹವರು ಸ್ಪಧರ್ಿಸಿದರೆ ಗೆಲುವು ನಿಶ್ಚಿತ ಎಂಬ ಊಹಾಪೋಹಗಳು ಮಾತುಗಳು ಬರುತ್ತಿವೆ.
ಆಯಾ ಪಕ್ಷದ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಮೂರು ಪಕ್ಷಗಳಲ್ಲೂ ನಾಯಕರ ಮೇಲೆ ಮುಖಂಡರ ಬೆಂಬಲಿಗರು ಒತ್ತಡ ತರುತ್ತಿದ್ದಾರೆ, ಕೆಲವು ಪಕ್ಷಗಳಲ್ಲಿ ಹೊಸಬರು, ಹಳಬರು ಎಂದು ವಿಂಗಡಿಸಿ ಟಿಕೆಟ್ಗೆ ಲಾಭಿ ನಡೆಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚು ಖಚರ್ು ಮಾಡುವ ಅಭ್ಯಥರ್ಿಗಳನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ಮುಂದಾಗುತ್ತಿದ್ದಾರೆ. ಇದರಿಂದ ಪಕ್ಷಗಳಲ್ಲಿ ನಿಷ್ಠಾವಂತ ಕಾರ್ಯಕರ್ತರು ಚುನಾವಣೆಗೆ ಸ್ಪಧರ್ಿಸಲು ಟಿಕೆಟ್ ಸಿಗದೆ ನಿರಾಸೆಯಿಂದ ಬೇರೆ ಪಕ್ಷಗಳಿಗೆ ಹೋಗಲು ಸಿದ್ದತೆ ನಡೆಸುತ್ತಿದ್ದಾರೆ.
ಕಳೆದ ಬಾರಿ ಜಿಲ್ಲಾ ಪಂಚಾಯಿತಿಗೆ ಇದ್ದ ಮೀಸಲಾತಿ ಈ ಬಾರಿ ಇಲ್ಲದೇ ಇರುವುದರಿಂದ ಚುನಾವಣೆಗೆ ತಯಾರಿ ನಡೆಸಿದ್ದ ಕೆಲವು ಆಕಾಂಕ್ಷಿ ಅಭ್ಯಥರ್ಿಗಳು ಮೀಸಲಾತಿ ಬರದೇ ನಿರಾಸೆಯಾಗಿದ್ದು ಇದರಿಂದ ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಯ ಕೆಲವು ಕ್ಷೇತ್ರಗಳಲ್ಲಿ ಹೊಸ ಮೀಸಲಾತಿಯಿಂದ ಎಲ್ಲಾ ಪಕ್ಷಗಳಲ್ಲೂ ಸಮರ್ಥವಾದ ಅಭ್ಯಥರ್ಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಜಿಲ್ಲಾ ಪಂಚಾಯ್ತಿಯಲ್ಲಿ ಹುಳಿಯಾರು ಸಾಮಾನ್ಯ ವರ್ಗ, ಹೊಯ್ಸಳಕಟ್ಟೆ ಅನುಸೂಚಿತ ಜಾತಿ, ಕಂದಿಕೆರೆ ಸಾಮಾನ್ಯ ಮಹಿಳೆ, ಹಂದನಕೆರೆ ಸಾಮಾನ್ಯ, ಶೆಟ್ಟಿಕೆರೆ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ.
ಜಿ.ಪಂ. ಚುನಾವಣೆಯಲ್ಲಿ ಸ್ಪಧರ್ಿಸಲು ಮೂರು ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು : 
ಕಂದಿಕೆರೆ ಜಿ.ಪಂ.ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಶಶಿಕಲಾಸ್ವಾಮಿನಾಥ್, ಲಕ್ಷ್ಮೀದೇವಮ್ಮಸಣ್ಣಯ್ಯ, ಬಿಜೆಪಿಯಿಂದ : ತಿಮ್ಮನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಂಜುಳಮ್ಮ, ತಾ.ಪಂ.ಮಾಜಿ ಅಧ್ಯಕ್ಷೆ ಲತಾಕೇಶವಮೂತರ್ಿ, ಮೀನಾ ಪಾನಿಪುರಿಶ್ರೀನಿವಾಸ್, ಕಮಲಮ್ಮ ರಾಜಕುಮಾರ್, ಜೆಡಿಎಸ್ ಪಕ್ಷದಿಂದ : ಸವಿತಾಸತೀಶ್ ಸಿದ್ದನಕಟ್ಟೆ, ಕನಕಮ್ಮ ಮೋಹನ್ಕುಮಾರ್ ಅಜ್ಜಿಗುಡ್ಡೆ, ಪದ್ಮಮ್ಮಲಿಂಗರಾಜು, ಸುನಿತಾಮಂಜುನಾಥ್ ಆಕಾಂಕ್ಷಿಗಳಾಗಿದ್ದಾರೆ.
ಶೆಟ್ಟಿಕೆರೆ ಹಿಂದುಳಿದ ಅ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಮಾಜಿ ಶಾಸಕ ಬಿ.ಲಕ್ಕಪ್ಪ, ಬಿಜೆಪಿ ಪಕ್ಷದಿಂದ : ಮಾಜಿ ತಾ.ಪಂ.ಸದಸ್ಯ ಶಿವಣ್ಣ, ತಾ.ಪಂ.ಸದಸ್ಯ ಎ.ಬಿ.ರಮೇಶ್ಕುಮಾರ್, ವಕೀಲ ಶಶಿಧರ, ಜೆಡಿಎಸ್ಪಕ್ಷದಿಂದ ಬಿಜೆಪಿಗೆ ತೆರಳಿ ಆಕಾಂಕ್ಷಿಯಾದ ಸಿ.ಆರ್.ಗಿರೀಶ್, ಜೆಡಿಎಸ್ಪಕ್ಷದಿಂದ : ರಿಯಲ್ ಎಸ್ಟೇಟ್ ವ್ಯವಹಾರದ ಕಲ್ಲೇಶ್, ದಾಸೀಹಳ್ಳಿ ಗಂಗಾಧರಪ್ಪ, ಆಕಾಂಕ್ಷಿಗಳಾಗಿದ್ದಾರೆ.
ಹುಳಿಯಾರು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಎ.ಪಿ.ಎಂ.ಸಿ ಅಧ್ಯಕ್ಷ ವೈ.ಸಿ.ಸಿದ್ದರಾಮಯ್ಯ, ಧನುಷ್ ರಂಗನಾಥ್, ಬಿಜೆಪಿ ಪಕ್ಷ : ದಿಂದ ಮಾಜಿ ತಾ.ಪಂ.ಸದಸ್ಯ ವೈ.ಆರ್.ಮಲ್ಲಿಕಾಜರ್ುನಯ್ಯ, ಬ್ಯಾಂಕ್ ಮರುಳಪ್ಪ, ತಾ.ಪಂ.ಸದಸ್ಯ ಹೊಸಹಳ್ಳಿ ಜಯಣ್ಣ, ವಕೀಲ ರಮೇಶ್ಬಾಬು, ಹನುಮಂತಯ್ಯ, ಕೆಂಕೆರೆ ನವೀನ್, ಜೆಡಿಎಸ್ ಪಕ್ಷದಿಂದ : ಪಟಾಕಿ ಶಿವಣ್ಣ, ಪೆಟ್ರೋಲ್ ಬಂಕ್ ರೇಣುಕಪ್ಪ, ನಂದಿಹಳ್ಳಿ ಶಿವಣ್ಣ, ವಕೀಲ ಬಿ.ಕೆ.ಸದಾಶಿವು, ಜಹೀರ್ಸಾಬ್, ಶಿವನಂಜಪ್ಪ ಆಕಾಂಕ್ಷಿಗಳಾಗಿದ್ದಾರೆ.
ಹೊಯ್ಸಳಕಟ್ಟೆ ಅನುಸೂಚಿತ ಜಾತಿಗೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ರೇವಾನಾಯ್ಕ್, ದೊಡ್ಡಬಿದರೆ ತಾಂಡ್ಯದ ವೀರಸಿಂಗ್ ಬಿಜೆಪಿಯಿಂದ : ಲಚ್ಚಾನಾಯ್ಕ, ಯರೇಹಳ್ಳಿ ಮೂತರ್ಿನಾಯ್ಕ, ದಬ್ಬಗುಂಟೆ ಗಂಗಣ್ಣ, ರಾಜಶೇಖರನಾಯ್ಕ, ಜೆಡಿಎಸ್ ಪಕ್ಷದಿಂದ : ಮಾಜಿ ಜಿ.ಪಂ.ಸದಸ್ಯ ಈರಣ್ಣ, ದಸೂಡಿ ಮರಿಯಪ್ಪ ಆಕಾಂಕ್ಷಿಗಳಾಗಿದ್ದಾರೆ.
ಹಂದನಕೆರೆ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು : ಕಾಂಗ್ರೆಸ್ ಪಕ್ಷದಿಂದ : ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್, ಜೆ.ಡಿ.ಎಸ್ ಪಕ್ಷದಿಂದ :  ಜಿ.ಪಂ.ಮಾಜಿ ಉಪಾಧ್ಯಕ್ಷೆ ಜಾನಮ್ಮ ಪತಿ ರಾಮಚಂದ್ರಯ್ಯ, ಬಿಜೆಪಿ ಪಕ್ಷದಿಂದ : ಕೋಡಿಹಳ್ಳಿ ಶಿವಕುಮಾರ್, ಉಪ್ಪಿನಕಟ್ಟೆ ಶಿವಕುಮಾರ್, ಕಾಂಕೆರೆ ಪರಮೇಶ್, ಮೈಸೂರಪ್ಪ, ಬರಗೂರು ಬಸವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ವಕೀಲ ಶ್ರೀಧರ್ ಆಕಾಂಕ್ಷಿಗಳಾಗಿದ್ದಾರೆ.
ತಾಲ್ಲೂಕಿನಲ್ಲಿ ಜಿ.ಪಂ.ಟಿಕೆಟ್ ಸಿಗದೇ ಇರುವ ಆಕಾಂಕ್ಷಿಗಳು ಮಾತ್ರ ಪಕ್ಷವನ್ನು ತೊರೆದು ಪಕ್ಷಾಂತರ ತಯಾರಿ ನಡೆಸಿದ್ದು ಇದರಿಂದ ತಾಲ್ಲೂಕಿನಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.



Monday, December 14, 2015

ಅಪರಾಧ ತಡೆಗೆ ಸಾರ್ವಜನಿಕರೂ ಸಹಕರಿಸಬೇಕು :     ಡಿವೈಎಸ್ಪಿ ಕೆ.ಪಿ.ರವಿಕುಮಾರ್



ಚಿಕ್ಕನಾಯಕನಹಳ್ಳಿ : ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಮೈಗುಡಿಸಿಕೊಂಡು ಅಪರಾಧ ತಡೆಯುವಲ್ಲಿ ಸಾರ್ವಜನಿಕರು ಹಾಗೂ ವಿದ್ಯಾಥರ್ಿಗಳು ಪೋಲಿಸರೊಂದಿಗೆ ಸಹಕರಿಸಿದರೆ ಮಾತ್ರ ಉತ್ತಮ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಪಟೂರು ಉಪವಿಭಾಗದ ಡಿವೈಎಸ್.ಪಿ ಕೆ.ಪಿ ರವಿಕುಮಾರ್ ಹೇಳಿದರು. 
ಪಟ್ಟಣದಲ್ಲಿ ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ನಡೆದ ಪೋಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಚರಣೆ ಅಂಗವಾಗಿ ವಿದ್ಯಾಥರ್ಿಗಳಿಗೆ ಅಪರಾಧ ತಡೆಗಟ್ಟಲು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಲೀಸ್ ಇಲಾಖೆ ಒಂದು ಶಿಸ್ತು ಬದ್ದವಾಗಿರುತ್ತದೆ, ವಿದ್ಯಾಥರ್ಿ ಜೀವನದಲ್ಲಿ ಮಕ್ಕಳು ಶಿಸ್ತು ಮೈಗೂಡಿಸಿಕೊಂಡು ಉನ್ನತ ಹುದ್ದೆಗಳಾದ ಐ.ಎ.ಎಸ್. ಐ.ಪಿ.ಎಸ್ಗಳಂತ ಹುದ್ದೆಗಳಿಗೆ ಆರಿಸಿಕೊಂಡು ಉತ್ತಮ ಅಧಿಕಾರಗಳಾಗಿ ಸೇವೆ ಮಾಡಿ ಎಂದರಲ್ಲದೆ ಪೋಲಿಸ್ ಇಲಾಖೆಯಲ್ಲಿ ಮುಂದಿನ ಎರಡು ವರ್ಷದಲ್ಲಿ ರಾಜ್ಯದಲ್ಲಿ 8 ಸಾವಿರ ಪೋಲೀಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಅವಕಾಶವಿದ್ದು ವಿದ್ಯಾಥರ್ಿಗಳು ಹೆಚ್ಚಿನದಾಗಿ ಸೇರಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾಥರ್ಿಗಳು ಜೀವನದಲ್ಲಿ ಗುರಿಯನ್ನಟ್ಟುಕೊಂಡು ಸಾಧನೆ ಮಾಡುವ ಆತ್ಮಸ್ಥೆರ್ಯ ಬೆಳಸಿಕೊಳ್ಳಬೇಕು ಅದಕ್ಕಾಗಿ ಶಿಸ್ತು ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕ, ಅಪರಾಧ ನಡೆಯುವುದನ್ನು ಪೋಲಿಸ್ ಇಲಾಖೆಯಿಂದ ಮಾತ್ರ ಸಾದ್ಯವಿಲ್ಲ, ಸಾರ್ವಜನಿಕರು, ಸಮಾಜದಲ್ಲಿ ಸಾಮಾನ್ಯ ಜ್ಞಾನ ಹೊಂದಿರುವವರು, ವಿದ್ಯಾಥರ್ಿಗಳು ಪೋಲಿಸರೊಂದಿಗೆ ಸಹಕರಿಬೇಕು, ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಪೋಲಿಸರಿಗೆ ಮಾಹತಿ ನೀಡುವ ಕೆಲಸವನ್ನು ಸಾರ್ವಜನಿಕರು ಮಾಡಬೇಕು ಎಂದರು.
ವೃತ್ತ ನೀರಿಕ್ಷಣಾಧಿಕಾರಿ ಎ.ಮಾರಪ್ಪ ಮಾತನಾಡಿ, ಅಪರಾಧ ತಡೆಯುವ ಕೆಲಸ ಪೋಲೀಸರಿಗೆ ಮಾತ್ರ ಸೀಮಿತವಲ್ಲ ಸಾರ್ವಜನಿಕರಾದ ನಿಮ್ಮಗಳ ಜವಬ್ದಾರಿಯೂ ಹೌದು,  ನಿಮ್ಮಗಳ ಮನೆಯ ಸುತ್ತಮುತ್ತ ಅಪರಿಚಿತರು ಅನುಮಾನಸ್ಪದವಾಗಿ ಓಡಾಡುವುದು, ಪರಿಚಯಸ್ಥರಂತೆ ಮನೆಗೆ ಬರುವುದು. ಮುಂಜಾನೆ ಮನೆ ಬಾಗಿಲಿನಲ್ಲಿ ರಂಗೋಲೆ ಹಾಗೂ ನೀರು ಹಾಕುವಾಗ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಮೇಲೆ ನೀಗ ವಹಿಸುವುದು ಸಾರ್ವಜನಿಕರ ಜವಬ್ದಾರಿಯಾಗಿದೆ, ಕಾಖರ್ಾನೆ ಹಾಗೂ ಗಾಮರ್ೇಂಟ್ಸ್ ಇತರೆ ಕಡೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡುವಂತಹ ಅಪರಿಚಿತ ವ್ಯಕ್ತಿಗಳೊಂದಿಗೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವುದು ಇವೆಲ್ಲವೂ ಅಪರಾಧಗಳು ಇಂತಹ ಕಾರ್ಯಗಳಲ್ಲಿ ಅನುಮಾನಸ್ಪದ ವ್ಯಕ್ತಿಗಳ ಮೇಲೆ ನೀಗಾ ವಹಿಸಿ ಸುತ್ತ ಮುತ್ತ ಹಾಗೂ ನೆರೆ ಹೊರೆ ಜನರಿಗೆ ತಿಳಿಸುವುದಾಗಲಿ ಅಥವಾ ಹತ್ತಿರದ ಪೋಲೀಸರಿಗೆಗಾಗಲಿ ತಿಳಿಸುವುದರಿಂದ ಮಾತ್ರ ಅಪರಾಧಗಳನ್ನು ತಡೆಯಲು ಸಾದ್ಯವಾಗುತ್ತದೆ ಇಂತಹ ಕೆಲಸಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಕ್ರಿಯಾಶೀಲರಾಗಬೇಕು ಎಂದರು.
ಪಿಎಸ್.ಐ ಮಹಾಲಕ್ಷ್ಮಮ್ಮ ಮಾತನಾಡಿ ಪೋಲಿಸರೊಂದಿಗೆ ಸಾರ್ವಜನಿಕರು ಪೋಲಿಸರ ಬಗ್ಗೆ ಹೊಂದಿರುವ ಆತಂಕ ಹಾಗೂ ಭಯವನ್ನು  ದೂರ ಮಾಡುವ ಉದ್ದೇಶದಿಂದ ಅಪರಾಧ ತಡೆ ಮಾಸಚಾರಣೆ ಹಮ್ಮಿಕೊಂಡಿರುವುದು ಇದರ ಸದುದ್ದೇಶವನ್ನು ಸಾರ್ವಜನಿಕರು ಹೊಂದಬೇಕು ಎಂದು ಕರೆ ನೀಡಿದರು.
 ಈ ಸಂದರ್ಭದಲ್ಲಿ ಹುಳಿಯಾರು ಪೋಲಸ್ ಠಾಣೆ ಪಿ.ಎಸ್.ಐ ಪ್ರವೀಣ್ಕುಮಾರ್, ಶಿಕ್ಷಕರುಗಳಾದ ವೇಣುಗೊಪಾಲ್, ಗುರುಸ್ವಾಮಿ, ರಂಗಸ್ವಾಮಿ, ಕೋದಂಡರಾಮು. ಶಿವಾನಂದ್ ಮತ್ತಿತ್ತರರು ಉಪಸ್ಥಿತರಿದ್ದರು. 

Thursday, December 10, 2015


ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾವಳಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವಂತಾಗಲಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಂಗಳೂರು ಬಿವೈಎಸ್ ತಂಡಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಬಹುಮಾನ ಹಾಗೂ ಜಗೋಸಿರಾ-2015 ಟ್ರೋಫಿ ವಿತರಿಸಿದರು.
 ಚಿಕ್ಕನಾಯಕನಹಳ್ಳಿ, : ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವ ಅಂಗವಾಗಿ ಪ್ರತಿ ವರ್ಷ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ ಹಾಗೂ ಈ ಕಬಡ್ಡಿ ಪಂದ್ಯಾವಳಿ ಅಖಿಲ ಭಾರತ ಮಟ್ಟದಲ್ಲಿ ನಡೆಸಲು  ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಸಲಹೆ ನೀಡಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೋಡೆಕೆರೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಸಂಘ ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಸಹಯೋಗದೊಂದಿಗೆ ನಡೆಯುತ್ತಿರುವ ಜಗೋಸಿರಾ-2015 ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕ್ರಿಕೆಟ್ಗಿಂತಲೂ ಅಪ್ಪಟ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಲಕ್ಷಾಂತರ ಮಂದಿ ನೋಡುತ್ತಿದ್ದಾರೆ, ಮುಂದೆ ಪುರುಷರ ತಂಡಗಳ ಜೊತೆ ಮಹಿಳಾ ಕಬಡ್ಡಿ ತಂಡಗಳನ್ನು ರಚಿಸುವಂತೆ ಸಲಹೆ ನೀಡಿದರು.
ರಾಜ್ಯದಿಂದ 8ಕಬಡ್ಡಿ ತಂಡಗಳು ಭಾಗವಹಿಸಿದ್ದು ರಾಜ್ಯದಲ್ಲಿ ಒಟ್ಟು 23 ಜಿಲ್ಲೆಗಳಲ್ಲಿ ಬಲಿಷ್ಠ ಕಬಡ್ಡಿ ತಂಡಗಳಿದ್ದು ಮುಂದೆ ಎಲ್ಲಾ ತಂಡಗಳು ಕಬಡ್ಡಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು ಎಂದ ಅವರು ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಶೇ.70% ರಷ್ಟು ಕಬಡ್ಡಿ ಆಟಗಾರರು ಹರಿಯಾಣದವರಾಗಿದ್ದು ಮಹರಾಷ್ಟ್ರದವರು ಶೇ.15% ರಷ್ಠಿದ್ದು ಕನರ್ಾಟಕ ಶೇ.5ರಿಂದ 6% ರಷ್ಠಿದ್ದಾರೆ. ರಾಜ್ಯದ ಯುವಕರು ಹೆಚ್ಚಾಗಿ ಕಬಡ್ಡಿ ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಶೇ.35%ರಷ್ಟಾದರೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಯುವಕರು ಉತ್ಸಾಹ ತೋರುವಂತೆ ಹೇಳಿದರು. 
ಉತ್ತಮ ಆಟಗಾರರಿಗೆ ಕೇಂದ್ರ ಹಾಗೂ ರಾಜ್ಯ ಸಕರ್ಾರದ ಉದ್ಯೋಗಗಳಲ್ಲಿ ಮೀಸಲಾತಿ ಇರುತ್ತದೆ ಅದೇ ರೀತಿ ವಿದ್ಯಾಭ್ಯಾಸದಲ್ಲೂ ಕ್ರೀಡೆಗೆ ಮೀಸಲಾತಿ ಇದ್ದು ಇದರ ಪ್ರಯೋಜನ ಪಡೆಯಲು ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಎಂದರು.
ಯುವಕರು ದುಷ್ಠಟಗಳಿಂದ ಬಲಿಯಾಗುತ್ತಿದ್ದು ಇದರಿಂದ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ ಅವರು ಯುವಕರು ಕ್ರೀಡೆ ಹಾಗೂ ಸೇನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಬಿ.ಸುರೇಶ್ಬಾಬು, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಅಭ್ಯಥರ್ಿ ಎಂ.ಎಲ್.ಕಾಂತರಾಜು, ಜಿ.ಪಂ.ಮಾಜಿ ಸದಸ್ಯ ಬಿ.ಎನ್.ಶಿವಪ್ರಕಾಶ್, ರಾಜ್ಯ ಅಮೆಚೂರ್ ಕಬಡ್ಡಿ ಕ್ಲಬ್ ಉಪಾಧ್ಯಕ್ಷ ಶಿವಮೂತರ್ಿ ಹಾಗೂ ಕಾರ್ಯದಶರ್ಿ ಜಯರಾಂ, ಬೆಂಗಳೂರು ಕಬಡ್ಡಿ ಅಮೆಚೂರ್ ಆಟಗಾರ ಷಣ್ಮುಗಂ, ನಿವೃತ್ತ ಸಿಇಓ ಸಿದ್ದರಾಮಣ್ಣ, ಜೆಡಿಎಸ್ ಮುಖಂಡ ಕಲ್ಲೇಶ್, ಜೆಟ್ಟಿ ಗಂಗಾಧರ ಸಿದ್ದರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಪುರುಷ ಕಬಡ್ಡಿಯಲ್ಲಿ ಗೆಲುವು ಸಾಧಿಸಿದ ತಂಡಗಳು : ಬೆಂಗಳೂರಿನ ಬಿವೈಎಸ್ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು 40ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ಪಡೆಯಿತು. ಮಂಡ್ಯ ಬಾಯ್ಸ್ ಕಬಡ್ಡಿ ತಂಡ ದ್ವಿತಿಯ ಸ್ಥಾನ ಪಡೆದು 25ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ತೃತೀಯ ಬಹುಮಾನ ಬೆಂಗಳೂರು ಹೂಡಿ ಸ್ಪೋಟ್ಸ್ ಕ್ಲಬ್, ಕೇಶವ ಕ್ಲಬ್ ಬೆಂಗಳೂರು ತಂಡ ತಲಾ 10ಸಾವಿರ ನಗದು ಹಾಗೂ ಟ್ರೋಪಿ ಪಡೆಯಿತು.
ಮಹಿಳಾ ಕಬಡ್ಡಿಯಲ್ಲಿ ಗೆಲುವು ಸಾಧಿಸಿದ ತಂಡಗಳು : ಬೆಂಗಳೂರು ಬಿವೈಎಸ್ ಹೆಣ್ಣುಮಕ್ಕಳ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು 12ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಬೆಂಗಳೂರು ಮಾತಾ ಕಬಡ್ಡಿ ತಂಡ 8ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ಶಿವಮೊಗ್ಗ ಜಿಲ್ಲಾ ಕಬಡ್ಡಿ ತಂಡ ತೃತೀಯ ಬಹುಮಾನ 4ಸಾವಿರ, ಟ್ರೋಫಿ, ಬೆಂಗಳೂರು ವಿಜಯನಗರ ಕ್ಲಬ್ ಕಬಡ್ಡಿ ತಂಡ 4ಸಾವಿರ ನಗದು ಟ್ರೋಪಿ ಪಡೆಯಿತು.
ಕಬಡ್ಡಿ ತಂಡದ ಉತ್ತಮ ದಾಳಿಕಾರನಾಗಿ ಬಿವೈಎಸ್ ತಂಡದ ಗೋಪಾಲ್ ಪಡೆದರು. ಉತ್ತಮ ಹಿಡಿತಗಾರನಾಗಿ(ಬೆಸ್ಟ್ ಕ್ಯಾಚರ್) ಹೂಡಿ ಕ್ಲಬ್ನ ಕಬಡ್ಡಿ ತಂಡದ ರಘು ಪಡೆದರು. ಆಲ್ರೌಂಡರ್ ಆಗಿ ಮಂಡ್ಯದ ಅಜರ್ುನ್ ಹೊರ ಹೊಮ್ಮಿದರು. 
ತಾಲ್ಲೂಕಿನ ಗೋಡೆಕೆರೆಯಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು, ಕೊಡಗು, ಬೆಳಗಾಂ ಸೇರಿದಂತೆ ಒಟ್ಟು 30 ತಂಡಗಳು ಭಾಗವಹಿಸಿದ್ದವು. ಮಹಿಳಾ ತಂಡದಲ್ಲಿ ಶಿವಮೊಗ್ಗ, ಬೆಂಗಳೂರು ಸೇರಿದಂತೆ 5ಕಬಡ್ಡಿ ತಂಡಗಳು ಭಾಗವಹಿಸಿದ್ದವು.

ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಬದುಕುವ ಹಕ್ಕು ಇದೆ 
ಚಿಕ್ಕನಾಯಕನಹಳ್ಳಿಡಿ.10 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದಲ್ಲಿರುವ ಕಟ್ಟಕಡೆಯ ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಬದುಕುವ ಹಕ್ಕು ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿ, ಜಾತಿ, ಮತ, ಧರ್ಮ ಎಲ್ಲವನ್ನೂ ಮರೆತು ಮನುಷ್ಯರಲ್ಲಿ ವರ್ಗಬೇದವಾಗಲಿ, ಬಡವ ಬಲ್ಲಿದ ಎಂಬ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ನೋಡಬೇಕೆಂಬ ಉದ್ದೇಶದಿಂದಲೇ ಮಾನವ ಹಕ್ಕುಗಳು ರಚನೆಯಾಯಿತು. ದೇಶದಲ್ಲಿ ಹಸಿವಿನಿಂದ ಯಾರು ಸಾಯಬಾರದು, ಎಲ್ಲರೂ ಸಮಾನರು, ಪ್ರತಿಯೊಬ್ಬ ವ್ಯಕ್ತಿಗೂ ಸ್ಥಾನಮಾನ, ಗೌರವ ನೀಡುವಂತಹ ಮಾನವ ಹಕ್ಕುಗಳು ನಿರಂತರವಾಗಿ ಜಾರಿಯಲ್ಲಿರುತ್ತವೆ, ಇದರ ಜವಬ್ದಾರಿಯನ್ನು ನ್ಯಾಯಾಂಗಕ್ಕೆ ನೀಡಿದ್ದು ನ್ಯಾಯಾಂಗ ಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದರು.
ವಕೀಲ ಹನುಮಂತಪ್ಪ ಮಾತನಾಡಿ, ನಮ್ಮ ದೇಶದ ಸಂವಿಧಾನದಡಿಯಲ್ಲಿ ರಚನೆಯಾದ ಮಾನವ ಹಕ್ಕು ಉಲ್ಲಂಘನೆಯಾಗುವುದನ್ನು ತಡೆಯಲೆಂದೇ ಕಾನೂನು ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಆದರೆ ಸಮಾಜದಲ್ಲಿ ಬದುಕುವ ನಾವುಗಳು ನಮ್ಮ ಜವಬ್ದಾರಿಯನ್ನು ಅರಿಯದೇ ಜಾತಿ, ಮತ, ಧರ್ಮ, ಪಂಥ ಎಲ್ಲವನ್ನು ಮೀರಿ ಕಟ್ಟಕಡೆಯ ವ್ಯಕ್ತಿಯೂ ಸಹ ಎಲ್ಲರಂತೆ ಬದುಕುವ ಹಕ್ಕಿದೆ, ಧರ್ಮ, ಧರ್ಮಗಳ ನಡುವಿನಲ್ಲಿ ಸಂಘರ್ಷ ಉಂಟುಮಾಡುವ ಮೂಲಕ ಪ್ರತಿಯೊಂದು ಪಕ್ಷಗಳು ಮುಗ್ಧ ಜನರನ್ನು ಸಂಘರ್ಷಕ್ಕೆ ತಳ್ಳುವ ಮೂಲಕ ಅಧಿಕಾರ ಮಾಡಲು ಪ್ರಯತ್ನಿಸುತ್ತಿವೆ ಎಂದು ವಿಷಾಧಿಸಿದರು ಎಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಕರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ಅನ್ಯಾಯ ನಡೆದಾಗ ನಮಗೆ ಸಂಬಂದವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ, ಜವಬ್ದಾರಿಯುತ ನಾಗರೀಕರಾದ ನಾವು ಕಾನೂನನ್ನು ಅರಿತು ಬಾಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ್ನಾಯಕ್, ಸೋಮನಾಥ್, ಸಕರ್ಾರಿ ಅಭಿಯೋಜಕರಾದ ರವಿಚಂದ್ರ, ವಕೀಲರ ಸಂಘದ ಉಪಾಧ್ಯಕ್ಷ ಆರ್.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.



Wednesday, December 9, 2015


ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ
ಚಿಕ್ಕನಾಯಕನಹಳ್ಳಿ, : ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಗೋಡೆಕೆರೆ ಸಿದ್ದರಾಮೇಶ್ವರಸ್ವಾಮಿ ಕಾತರ್ಿಕ ಮಾಸದ ಲಕ್ಷದೀಪೋತ್ಸವದ ಅಂಗವಾಗಿ ನಡೆಯುತ್ತಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ, ಜಗೋಸಿರಾ ಕಪ್ 2015ರ ಪಂದ್ಯಾವಳಿಗಳು ರೋಚಕ ಘಟ್ಟ ತಲುಪಿತು.
ಕನರ್ಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಯೋಗದೊಂದಿಗೆ ಗೋಡೆಕೆರೆಯ ಶ್ರೀ ಲಾಲ್ಬಹದ್ದೂರ್ ಶಾಸ್ತ್ರಿ ಕ್ರೀಡಾ ಸಂಘ 3ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಒಟ್ಟು 30 ಪುರುಷ ಹಾಗೂ 7 ಮಹಿಳಾ ತಂಡಗಳು ಭಾಗವಹಿಸಿವೆ.
 ಆಡಿದ ಎಲ್ಲಾ ತಂಡಗಳ್ಲಲೂ ಗೆಲುವು ಸಾಧಿಸುವ ಮೂಲಕ 2ನೇ ದಿನದ ಅಂತ್ಯಕ್ಕೆ ಮಂಡ್ಯ ತಂಡ ಫೇವರೇಟ್ ತಂಡವಾಗಿ ಹೊರಹೊಮ್ಮಿತು.
  ಉದ್ಘಾಟನಾ ಪಂದ್ಯದಲ್ಲಿ ಹಿರಿಯೂರು ಸ್ಪೋಟ್ಸ್ ಕ್ಲಬ್ ಹಾಗೂ ಮಂಡ್ಯ ಕಬ್ಬಡ್ಡಿ ಕ್ಲಬ್ ಗೆಲುವಿಗಾಗಿ ಹೋರಾಡಿದವು. ಮಂಡ್ಯ ತಂಡ ಗೆಲವು ಸಾಧಿಸಿತು. 
3ಬಾರಿ  ಸತತವಾಗಿ ಜಗೋಸಿರಾ ಕಪ್ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ ಬೆಂಗಳೂರು ಮಾರುತಿ ಕಬಡ್ಡಿ ಬಾಯ್ಸ್ಗೆ ಬೈಸ್ ಸಿಕ್ಕಿತ್ತು. ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ತಂಡವನ್ನು ಮಣಿಸಿ ಮಂಡ್ಯ ತಂಡ ಗೆಲುವಿನ ಓಟವನ್ನು ಮುಂದುವರೆಸಿದೆ.
ದಿನದ ಅಂತ್ಯಕ್ಕೆ ಮಂಡ್ಯ ಕ್ಲಬ್, ಊಡಿ ಸ್ಪೋಟ್ಸ್ ಕ್ಲಬ್, ಕೇಶವ ಸ್ಪೋಟ್ಸ್ ಕ್ಲಬ್ ಬೆಂಗಳೂರು ಹಾಗೂ ವಿಜಯನಗರ ಕ್ಲಬ್ ಬೆಂಗಳೂರು ಸೆಮಿ ಫೈನಲ್ಸ್ ಪ್ರವೇಶಿಸಿವೆ.
ಬುಧವಾರ ಬೆಂಗಳೂರಿನ ಅಮೃತ್ ಹಾಗೂ ಮಂಡ್ಯ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಿತು. ಮೊದಲ ಅರ್ಧದಲ್ಲಿ ಎರಡೂ ತಂಡಗಳು ಸಮಬಲ ಕಾಯ್ದುಕೊಂಡವು. ಮಂಡ್ಯ ತಂಡದ ದಾಂಡಿಗರು ಅಮೃತ್ನ ಸ್ಟಾರ್ ರೈಡರ್ ರವೀಂದ್ರ ಅವರನ್ನು ಕ್ಯಾಚ್ ಹಾಕುವ ಮೂಲಕ ಮುನ್ನಡೆ ಸಾಧಿಸಿದರು. ಕಡೆಯ 2 ನಿಮಿಷಗಳ ಆಟ ಇರುವಾಗ ಅಮೃತ್ ತಂಡದ ಚಂದನ್ ಔಟ್ ಆದರು. ಮಂಡ್ಯ ತಂಡದ ನಾಯಕ ರವಿ ಸೂಪರ್ ಟ್ಯಾಕಲ್ನಲ್ಲಿ 2ಅಂಕ ಗಳಿಸಿದರು. 3-6 ಅಂತರದಲ್ಲಿ ಮಂಡ್ಯ ತಂಡ ಜಯಗಳಿಸಿತು.
ಅತಿಥೇಯ ಲಾಲ್ಬಹದ್ದೂರ್ ಶಾಸ್ತ್ರಿ ಕಬಡ್ಡಿ ತಂಡದ ಹುಡಗರು ಬಲಿಷ್ಠ ಕೊಡಗು ತಂಡವನ್ನು ಮಣಿಸಿದರು. 2ನೇ ಅಂಕಣದಲ್ಲಿ ಬಿವೈಎಸ್ ಬೆಂಗಳೂರು ತಂಡ ಜರಗನಹಳ್ಳಿಯ ವೈಎಪ್ಎ ತಂಡವನ್ನು ಸೋಲಿಸಿ ಗೆಲುವು ಸಾಧಿಸಿತು.
ಮಹಿಳೆಯರ ವಿಭಾಗ : ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಮಾತಾ ಸ್ಪೋಟ್ಸ್ ಕ್ಲಬ್,ಕ್ಲಾಸಿಕ್ ನ್ಯಾಷಿನಲ್ ಸ್ಪೋಟ್ಸ್ ಕ್ಲಬ್, ವಿಜಯನಗರ ಸ್ಪೋಟ್ಸ್ ಕ್ಲಬ್, ಬಿವೈಎಸ್, ಶಿವಮೊಗ್ಗ, ಮೈಸೂರು ಹಾಗೂ ತುಮಕೂರು ತಂಡಗಳು ಭಾಗವಹಿಸಿವೆ. ಆರಂಭಿಕ ಪಂದ್ಯದಲ್ಲಿ ಶಿವಮೊಗ್ಗ ಅಮೆಚ್ಚೂರ್ ಕಬ್ಬಡ್ಡಿ ತಂಡ ಹಾಗೂ ಬೆಂಗಳೂರು ತಂಡಗಳು ಸೆಣಸಿದವು, ಶಿವಮೊಗ್ಗ ತಂಡ ಜಯದ ಮಾಲೆಯನ್ನು ಕೊರಳಿಗೆ ಹಾಕಿಕೊಂಡಿತು.
ಬೆಳ್ಳಿ ಕಡಗ: ಒಮ್ಮೆಲೆ 4ಅಂಕ ತರುವ ಕ್ರೀಡಾಪಟುಗಳಿಗೆ ಬೆಳ್ಳಿ ಕಡಗದ ಆಕರ್ಷಣೆಯಿದ್ದು ಬೆಂಗಳೂರಿನ ಬಿವೈಎಸ್ ತಂಡದ ಕ್ರೀಡಾಪಟುಗಳಾದ ಲೋಕೇಶ್, ಬಸವರಾಜು, ಬೆಂಗಳೂರು ಮಾರುತಿ ತಂಡದ ಮಹೇಶ್ ಹಾಗೂ ಅತಿಥೇಯ ಗೋಡೆಕೆರೆ ತಂಡದ ಮಹೇಶ್ ಬೆಳ್ಳಿ ಕಡಗಗಳನ್ನು ಪಡೆದುಕೊಂಡರು.
45 ವರ್ಷಗಳಿಂದ ಪಂದ್ಯಾವಳಿ ಆಯೋಜನೆ : ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘದ ಸದಸ್ಯ ಮರಿಸ್ವಾಮಿ ಮಾತನಾಡಿ, ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಪ್ರಸಿದ್ದಗೊಳಿಸುವ ಹಂಬಲದಿಂದ ಕಳೆದ 45 ವರ್ಷಗಳ ಹಿಂದೆ ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘವನ್ನು ಸ್ಥಾಪಿಸಿದೆವು, ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಕ್ರೀಡೆಯಲ್ಲಿ ಆಯೋಜಿಸಿದ್ದು ಬರುತ್ತಿದ್ದೇವೆ ಎಂದರು.
ರಾಷ್ಟ್ರಮಟ್ಟದ ಆಟಗಾರರನ್ನು ನೀಡಿದ ಕೀತರ್ಿ : ಹಿರಿಯ ಕ್ರೀಡಾಪಟು ಮಲ್ಲಿಕಾಜರ್ುನ್ ಮಾತನಾಡಿ, ಸ್ಥಳೀಯ ಕ್ರೀಡಾಸಕ್ತರ ನೆರವಿನಿಂದ ಪ್ರಾರಂಭವಾದ ಕ್ಲಬ್ ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ, ಅಲ್ಲದೇ ಕ್ಲಬ್ನ ಕ್ರೀಡಾಪಟುಗಳಾದ ಸಿದ್ದರಾಮಯ್ಯ(ಟೈಸನ್), ಮಲ್ಲಿಕಾಜರ್ುನಯ್ಯ, ವೇದಮೂತರ್ಿ, ಶಾಂತಕುಮಾರ್, ಮರಿಸ್ವಾಮಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಬಡ್ಡಿ ಆಡುವ ಮೂಲಕ ತಾಲ್ಲೂಕಿಗೆ ಹಮ್ಮೆ ತಂದಿದ್ದಾರೆ ಎಂದರು.

ಕಾತರ್ಿಕ ಮಾಸದ ಅಂಗವಾಗಿ ಲಕ್ಷದೀಪೋತ್ಸವ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಗೋಡೆಕೆರೆಯಲ್ಲಿ ಲಿಂಗೈಕ್ಯ ಚಂದ್ರಶೇಖರಾನಂದ ಭಾರತಿ ಸ್ವಾಮೀಜಿಯವರ ಪುಣ್ಯಸ್ಮರಣೆ ನಿಮಿತ್ತ ಮಂಗಳವಾರ ಮುಂಜಾನೆ ಸಾವಿರಾರು ಭಕ್ತರು ಸಂಭ್ರಮದಿಂದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೋಮವಾರ ಸಂಜೆಯೇ ಸನ್ನಿಧಿಗೆ ಆಗಮಿಸುವ ಭಕ್ತರು ದೀಪ ಹಚ್ಚಲು ತಾಲ್ಲೂಕಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ರಾತ್ರಿ ಇಡೀ ಕಾದುಕುಳಿತುಕೊಳಿತಿದ್ದರು. ಹರಕೆ ಹೊತ್ತ ಭಕ್ತರು ಚಂಡುಹೂ ದಂಡೆ ಕಟ್ಟಿ ದೇವಸ್ಥಾನವನ್ನು ಅಲಂಕರಿಸಿದರು.ಸಿದ್ಧರಾಮೇಶ್ವರ ಮೂತರ್ಿಗೆ ಹಣ್ಣಿನ ಅಲಂಕಾರ ಮಾಡಿದ್ದರು. ಭಕ್ತರು ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ಅಣಿಗೊಳಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
    ಸಿದ್ದರಾಮೇಶ್ವರ ದೇವರಮೂತರ್ಿಯ ಅಡ್ಡ ಪಲ್ಲಕ್ಕಿ ನಡೆಮುಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕೊಂಬು, ಕಹಳೆ, ನಗಾರಿ, ನಂದಿಕೋಲು, ಬಿಂಗಿ ಕುಣಿತ ಮತ್ತು ವೀರಭದ್ರನ ಕುಣಿತ ನಡೆಮುಡಿಗೆ ಮೆರಗು ತಂದವು. ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ ಮೆರವಣಿಗೆಯ ಮುಂದಾಳತ್ವ ವಹಿಸಿದ್ದರು.
ಮುಂಜಾನೆ 4ಗಂಟೆಯ ಮಹಾಮಂಗಳಾರತಿಯೊಟ್ಟಿಗೆ ಸಂಭ್ರಮ ಹಿಮ್ಮಡಿಯಾಯಿತು. ಮತಾಪು, ಬಾಣ ಬಿರುಸು ಆಕಾಶದಲ್ಲಿ ಬೆಳಕಿನ ಚಿತ್ತಾರ ಬರೆದವು. ಪಟಾಕಿ ಸದ್ದು ಕಿವಿ ಗಡುಚಿಕ್ಕಿತು. ಭಕ್ತರು ಮಂಟಪದಲ್ಲಿ ಏರಿಸಿಟ್ಟಿದ್ದ ದೀಪಗಳನ್ನು ಹಚ್ಚಲು ಮುಗಿಬಿದ್ದರು. ಸಂಭ್ರಮ ಬೆಳಗ್ಗೆ ವರೆಗೂ ಮುಂದುವರೆಯಿತು.
ಗೋಡೆಕೆರೆ, ಸುಂಟರಮಳೆ ಮತ್ತು ಯಳನಡು ಭಾಗಗಳಲ್ಲಿ ನೆಲೆಸಿ ತಾಲ್ಲೂಕಿನ ನಾನಾ ಭಾಗಗಳಲ್ಲಿ ಸಿದ್ಧರಾಮೇಶ್ವರ ಸಂಚರಿಸಿ ಕೆರೆ ಕಟ್ಟೆ ನಿಮರ್ಿಸಿದ್ದಾರೆ. ಇದರ ಸ್ಮರಣಾರ್ಥವಾಗಿ 16ನೇ ಶತಮಾನದಿಂದಲೇ ಈ ಭಾಗಗಳಲ್ಲಿ ದೀಪೋತ್ಸವ ಮತ್ತು ತೆಪ್ಪೋತ್ಸವಗಳು ನಡೆದುಕೊಂಡು ಬರುತ್ತಿವೆ.  ಚಂದ್ರಶೇಖರಾನಂದ ಭಾರತಿ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಜ್ಞಾಪಕಾರ್ಥವಾಗಿ ಕಳೆದ 13 ವರ್ಷಗಳಿಂದ ಲಕ್ಷದೀಪೋತ್ಸವವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
    ಎಣ್ಣೆ ದೀಪ ತುಂಬಿದ ಕೆರೆಯ ಸಂಕೇತ. ಸೊಡರು ಅರಿವಿನ ಸಂಕೇತ. ಲಕ್ಷದೀಪೋತ್ಸವ ಒಗ್ಗಟ್ಟಿನಿಂದ ಜೀವಜಾಲ ಜಲಮೂಲವನ್ನು ಉಳಿಸೋಣ ಎನ್ನುವ ಸಂದೇಶವನ್ನೂ ಸಾರುತ್ತದೆ. ದೀಪಾರಾಧನೆಯನ್ನು ಬೆಳಗಿನ ಸೂಯರ್ೋದಯದೊಟ್ಟಿಗೆ ನೆರವೇರಿಸುವುದು ತೋಜೋಮಯ ಸೂರ್ಯದೇವನ ಬೆಳಕಿಗೆ ನಮ್ಮ ಅರಿವಿನ ಹಣತೆಯ ಬೆಳಕನ್ನೂ ಸೇರಿಸೋಣ ಎನ್ನುವ ಸಂದೇಶ ಸಾರಲು ಬೆಳಗಿನ ಜಾವವೇ ಲಕ್ಷದೀಪ ಬೆಳಗಿಸಲಾಗುತ್ತದೆ ಎಂದು ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಆಚರಣೆಯ ಹಿನ್ನೆಲೆಯನ್ನು  ವಿವರಿಸಿದರು.
ಕಡೆ ಕಾತರ್ಿಕ ಆಚರಣೆಯ ಅಂಗವಾಗಿ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಮಂಗಳವಾರ ಆರಂಭವಾದವು. ಪಂದ್ಯಾವಳಿಗೆ 31 ತಂಡಗಳು ಭಾಗವಹಿಸಿವೆ ಎಂದು ಲಾಲ್ಬಹದ್ದೂರ್ ಶಾಸ್ತ್ರಿ ಕ್ರೀಡಾ ಸಂಘದ ಅಧ್ಯಕ್ಷ ನಿರಂಜನಮೂತರ್ಿ ತಿಳಿಸಿದರು.
ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಡಿ.09 : ಚಿಕ್ಕನಾಯಕನಹಳ್ಳಿ: ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವಾರು ಜೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಲು ಜಿಲ್ಲಾವಾರು ಹಾಗೂ ವಿಷಯವಾರು ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಆಕ್ಷೇಪಣೆಯಿದ್ದಲ್ಲಿ ಡಿ.19ರ ಒಳಗೆ ಕಛೇರಿಗೆ ಲಿಖಿತವಾಗಿ ಬರೆದು ತಿಳಿಸುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದ್ದಾರೆ. 
ಮಾನವ ಹಕ್ಕು ದಿನಾಚಾರಣೆ ಕಾನೂನು ಅರಿವು ನೆರವು ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ, : ಮಾನವ ಹಕ್ಕು ದಿನಾಚಾರಣೆ ಅಂಗವಾಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಇದೇ 10ರ ಗುರುವಾರ ಬೆಳಗ್ಗೆ 10.30ಕ್ಕೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಸಿವಿಲ್ ನ್ಯಾಯದೀಶ ಎನ್.ಆರ್.ಲೋಕಪ್ಪ ಕಾರ್ಯಕ್ರಮ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಆರ್.ಕರಿಯಣ್ಣ ಅಧ್ಯಕ್ಷತೆ ವಹಿಸುವರು.
ವಕೀಲ ಹೆಚ್.ಟಿ.ಹನುಮಂತಯ್ಯ ಮಾನವ ಹಕ್ಕುಗಳ ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರುಗಳಾದ ಪ್ರಕಾಶ್ನಾಯಕ್, ಸೋಮನಾಥ್, ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್, ವಕೀಲರ ಸಂಘದ ಉಪಾಧ್ಯಕ್ಷ ಆರ್.ರಾಜಶೇಖರ್, ಕಾರ್ಯದಶರ್ಿ ಜೆ.ಬಿ.ಆದರ್ಶ ಉಪಸ್ಥಿತರಿರುವರು.


Monday, December 7, 2015


ರೋಗ ಹೆಚ್ಚಾಗುವ ಮುನ್ನ ತಪಾಸಣೆಗೆ ಒಳಗಾಗಿ : ಡಾ.ಎಸ್.ಜಿ.ಪರಮೇಶ್ವರಪ್ಪ.
ಚಿಕ್ಕನಾಯಕನಹಳ್ಳಿ,: ರೋಗ ಉಲ್ಭಣಿಸುವ ಮುನ್ನ ತಪಾಸಣೆಗೆ ಒಳಗಾಗಿ ರೋಗ ದೂರ ಮಾಡಬೇಕು ಜೊತೆಗೆ ಮನಸ್ಸಿಗೆ ಒತ್ತಡ ಉಂಟಾಗದಂತೆ ಜಾಗೃತಿ ವಹಿಸಿದರೆ ಆರೋಗ್ಯ ವೃದ್ದಿಯಾಗುತ್ತದೆ ಎಂದು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ಪರಮೇಶ್ವರಪ್ಪ ತಿಳಿಸಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಬೆಂಗಳೂರಿನ ಫೋಟರ್ಿಸ್ ಆಸ್ಪತ್ರೆ ಹಾಗೂ ತುಮಕೂರು ಸಿದ್ದಾರ್ಥ ಮೆಡಿಕಲ್ ಆಸ್ಪತ್ರೆ, ಔಷಧಿ ಮಾರಾಟಗಾರರ ಸಂಘ, ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಫೋಟರ್ಿಸ್ ಆಸ್ಪತ್ರೆ ಹಾಗೂ ತುಮಕೂರು ಸಿದ್ದಾರ್ಥ ಮೆಡಿಕಲ್ ಆಸ್ಪತ್ರೆಯ 30ಕ್ಕೂ ಹೆಚ್ಚು ವೈದ್ಯಕೀಯ ತಂಡ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದಲ್ಲಿ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಕರೆದೊಯ್ದು ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ರೋಟರಿ ಶಾಲೆಯಲ್ಲಿ ನಡೆಯುತ್ತಿರುವ ಉಚಿತ ಮೆಘಾ ಆರೋಗ್ಯ ಶಿಬಿರಕ್ಕೆ ಶಾಲಾ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತಿರುವುದು ಸಂತಸದ ವಿಷಯವಾಗಿದ್ದು ರೋಟರಿ ಕ್ಲಬ್ 40 ವರ್ಷಗಳಿಂದ ಹಲವಾರು ಜನಪರ ಸೇವೆ ಸಲ್ಲಿಸುತ್ತಿದ್ದು ಅದೇ ರೀತಿ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ಉಚಿತ ಔಷಧಿಯನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲಾ ರೋಟರಿ ಕ್ಲಬ್ನ ಕಾರ್ಯದಶರ್ಿ ಸಿ.ಎಸ್.ಪ್ರದೀಪ್ಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯ ಎಲ್ಲಾ ಸದಸ್ಯರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಿಬಿರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ರೋಟರಿ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದರಲ್ಲದೆ ಕನರ್ಾಟಕ ಔಷಧಿ ಮಾರಾಟಗಾರರ ಸಂಘ ಈ ಶಿಬಿರಕ್ಕೆ 2ಲಕ್ಷದ 35ಸಾವಿರದಷ್ಟು ಉಚಿತವಾಗಿ ಔಷಧಿಗಳನ್ನು ನೀಡುತ್ತಿದೆ ಎಂದರು.
ಜಿಲ್ಲಾ ರೋಟರಿ ಸಂಸ್ಥೆಯ ಬಿಳಿಗೆರೆ ಶಿವಕುಮಾರ್ ಮಾತನಾಡಿ, ರೋಟರಿ ಸಂಸ್ಥೆ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದಕ್ಕೆ ಎಲ್ಲರಿಂದ ಉತ್ತಮ ಪ್ರಶಂಸೆ ದೊರಕಿದೆ 17ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮವಿದ್ದು ಸಂಸ್ಥೆ ಪೋಲಿಯೋ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದರು.
ಶಿಬಿರದಲ್ಲಿ ಸ್ತ್ರೀರೋಗ ತಜ್ಞರು, ಹೃದಯರೋಗ ತಜ್ಞರು, ಮೂಳೆ ಹಾಗೂ ಕಣ್ಣಿನ ತಜ್ಞರು, ಮಕ್ಕಳ ತಜ್ಞರು, ಚರ್ಮವ್ಯಾಧಿ, ಎಕೋ, ಇಸಿಜಿ, ರಕ್ತದೊತ್ತಡ, ಮಧುಮೇಹ ಸಂಬಂಧಪಟ್ಟ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ 750ಕ್ಕೂ ಹೆಚ್ಚು ರೋಗಿಗಳು ನೊಂದಾಯಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಪೋಟರ್ಿಸ್ ಆಸ್ಪತ್ರೆಯ ಡಾ.ನವೀನ್ ವೈದ್ಯರುಗಳಾದ ಭಾನುಪ್ರಕಾಶ್, ದ್ವಾರಕಿನಾಥ್, ಶ್ರಿನಿವಾಸ್ಅರ್ವ, ಸುದರ್ಶನ್, ಸಂದೀಪ್, ಲೋಕೇಶ್, ಸತ್ಯ.ಕೆ, ಅಶ್ವಿನ್, ಪ್ರೇಮನಾಗರಾಜ್, ಶಿವಕುಮಾರ್, ಹರೀಶ್, ಮಹೇಶ್, ಗೌರಿ, ಡಾ.ನಾಗರಾಜು, ಗುರುನಾಥ್ ಶಿಬಿರದಲ್ಲಿ ಚಿಕಿತ್ಸೆ ನೀಡಿದರು.  
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಚಾಂದ್ಪಾಷ, ಎಂ.ಎಲ್.ಮಲ್ಲಿಕಾಜರ್ುನಯ್ಯ, ದೇವರಾಜು, ಅಶ್ವತ್ಥ್ನಾರಾಯಣ್, ಮಿಲ್ಟ್ರಿಶಿವಣ್ಣ, ಡಾ.ನಾಗರಾಜು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯ ಬಿ.ಕೆ.ಮಂಜುನಾಥ್, ಶಾಲಾ ಶಿಕ್ಷಕರುಗಳು, ವಿದ್ಯಾಥರ್ಿಗಳು ಸಿಬ್ಬಂದಿ ಉಪಸ್ಥತರಿದ್ದರು.


 ಆಡಳಿತದ ಅಧಿಕಾರಕ್ಕಾಗಿ ಅಸಹಿಷ್ಣುತೆ ಸೃಷ್ಠಿಯಾಗುತ್ತಿದೆ : ಲೇಖಕಿ ಕಂಪಾರಹಟ್ಟಿ ಶಾಂತ 
ಚಿಕ್ಕನಾಯಕನಹಳ್ಳಿ,ಡಿ.06 : ಜಾತಿ ರಾಜಕಾರಣ ಹಾಗೂ ಅಧಿಕಾರದ ಆಡಳಿತ ಹಿಡಿಯಲು ಕೆಲವರು ದೇಶದಲ್ಲಿ ಅಸಹಿಷ್ಣುತೆ ಸೃಷ್ಠಿಸುತ್ತಿದ್ದಾರೆ ಎಂದು ಲೇಖಕಿ ಕಂಪಾರಹಟ್ಟಿ ಶಾಂತ ವಿಷಾಧಿಸಿದರು.
ಪಟ್ಟಣದ ಡಿವಿಪಿ ಬಾಲಕಿಯರ ಶಾಲೆಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪರಿ ನಿವರ್ಾಣ ದಿನ, ಬೋಧಿವೃಕ್ಷ ಟ್ರಸ್ಟ್ನ ವಾಷರ್ಿಕ ಸಂಭ್ರಮ ದಿನಾಚಾರಣೆಯಲ್ಲಿ ನಡೆದ ಸಮಕಾಲೀನ ಸಮಾಜ ಮತ್ತು ಅಸಹಿಷ್ಣತೆ ಕುರಿತಾದ ಚಚರ್ೆ ಮತ್ತು ಸಂವಾದದಲ್ಲಿ ಮಾತನಾಡಿದ ಅವರು ಯಾವುದನ್ನು ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ಅಸಹಿಷ್ಣುತೆಯಾಗಿದೆ, ದೇಶದಲ್ಲಿ ಸೃಷ್ಠಿಸಲಾಗುತ್ತಿರುವ ಅಸಹಿಷ್ಣುತೆಯಿಂದ ದೇಶ ತಲ್ಲಣವಾಗುತ್ತಿದೆ, ಒಬ್ಬರನ್ನು ವಿರೋಧಿಸಲು ಇನ್ನೊಬ್ಬರ ಬಗ್ಗೆ ಮಾತನಾಡುವುದು, ಅತ್ತೆ ಸೊಸೆಯರಲ್ಲಿ ನಡೆಯುತ್ತಿರುವ ಜಗಳ ಎಲ್ಲವೂ ಕೂಡ ಅಸಹಿಷ್ಣುತೆಗೆ ತಿರುಚಲಾಗುತ್ತಿದ್ದು ಅಸಹಿಷ್ಣುತೆಗೆ ರಾಜಕೀಯ ಪಿತೂರಿಯೇ ಮುಖ್ಯ ಕಾರಣವಾಗಿದೆ, ಬ್ರಹ್ಮನ ಕಾಲಿನಿಂದ ಹುಟ್ಟಿದವರು ಶೂದ್ರರು ಎಂದು, ರಾಮಧಾನ್ಯ ಚರಿತ್ರೆ ಕಥಾಹಂದರದಲ್ಲಿಯೂ ಭತ್ತ, ರಾಗಿಯ ನಡುವೆ ಇತಹಾಸದಿಂದಲೇ ಅಸಹಿಷ್ಣುತೆ ಸೃಷ್ಠಿಸಿದರು, ಅಂದಿನಿಂದ ಇಂದಿನವರೆವಿಗೂ ಧರ್ಮ, ಜಾತಿ, ಜಯಂತಿಗಳ ನಡುವೆ ರಾಜಕೀಯ ಹಿತಾಸಕ್ತಿಗಾಗಿ ಅಸಹಿಷ್ಣುತೆ ಸೃಷ್ಠಿಸಲಾಗುತ್ತಿದೆ ಎಂದರು. ಪುಸ್ತಕಗಳ ನಡುವೆ ಪ್ರಾಣ ತೊರೆದ ಅಂಬೇಡ್ಕರ್ರವರು ಸಮಾನತೆಗಾಗಿ ಹೋರಾಡಿದವರಲ್ಲಿ ಪ್ರಮುಖರು, ಬಡವರಿಗೆ, ನೊಂದವರಿಗೆ, ದೀನ-ದಲಿತರಿಗೆ, ಅಂಗವಿಕಲರಿಗೆ ಅಂಬೇಡ್ಕರ್ರವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೋಧಿವೃಕ್ಷ ಟ್ರಸ್ಟ್ನ ನಾರಾಯಣರಾಜು, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ನಾಗಕುಮಾರ್, ಕಂಟಲಗೆರೆ ಗುರುಪ್ರಸಾದ್, ಮಲ್ಲಿಕಾಜರ್ುನ್, ಎಂ.ಎಸ್.ರವಿಕುಮಾರ್, ರವಿಕುಮಾರ್ ಸೇರಿದಂತೆ ಪ್ರಗತಿಪರ ಸಂಘಟನೆಯವರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.

ಯಡಿಯೂರಿಗೆ ಚಿ.ನಾ.ಹಳ್ಳಿ ಮೂಲಕ ಪಾದಯಾತ್ರೆ ತೆರಳಿದ ದಾರವಾಡ, ಗದಗ. ಭಾಗಲಕೋಟೆ  ಭಕ್ತರು 
 ಚಿಕ್ಕನಾಯಕನಹಳ್ಳಿ : ಕುಣಿಗಲ್ ತಾಲ್ಲೂಕಿನ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದ ಕಾತರ್ೀಕ ಮಾಸದ ಅಂಗವಾಗಿ ನಡೆಯುವ ಲಕ್ಷದೀಪೋತ್ಸವಕ್ಕೆಂದು ದಾರವಾಡ, ಗದಗ. ಭಾಗಲಕೋಟೆ ಜಿಲ್ಲೆಗಳಿಂದ  ಪಾದಯಾತ್ರೆ ಮೂಲಕ ಸಾಗುತ್ತಿದ್ದ 500ಕ್ಕೂ ಹೆಚ್ಚು ಭಕ್ತಾಧಿಗಳಿಗೆ ಪಟ್ಟಣದ ಜೆ.ಡಿ.ಗ್ರಾಫಿಕ್ಸ್ ಮಾಲೀಕ ರಮೇಶ್ ಮತ್ತವರ ತಂಡದಿಂದ ಪ್ರಸಾದ ಮಜ್ಜಿಗೆ ವಿತರಿಸಲಾಯಿತು.
ಈ ಭಕ್ತರು ಕಳೆದ 40ವರ್ಷಗಳಿಂದ ಪಾದಯಾತ್ರೆ ಮೂಲಕವೇ ತೆರಳಿ ತಮ್ಮಲ್ಲಿರುವ ಅಚಲವಾದ ಭಕ್ತಿಯನ್ನು ಪ್ರದಶರ್ಿಸುತ್ತಲೇ ಇರುವ ಭಕ್ತರು ಗದಗ ಜಿಲ್ಲೆಯ ಡಂಬಳ ಸಂಸ್ಥಾನ ಮಠದ ಡಾ|| ಸಿದ್ದಲಿಂಗಸ್ವಾಮೀಜಿ, ಹರಿಹರದ ಶಲವಡಿ ವಿರಕ್ತಮಠದ ಗುರುಶಾಂತಸ್ವಾಮೀಜಿ, ನವಲಗುಂದ ಹಿಂಗಳೆಯ ಶಿವಯೋಗಿ ಮಂದಿರ ಮೂಲದಿಂದ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದವರೆಗೆ ಪಾದಯಾತ್ರೆ ಮಂಡಳಿ ರಚಿಸಿಕೊಂಡಿದ್ದಾರೆ, ಪಾದಯಾತ್ರೆಗೆ ಇಚ್ಛೆಯಿರುವ ಭಕ್ತರನ್ನು ಒಗ್ಗೂಡಿಸಿಕೊಂಡು ನಿತ್ಯ 35ರಿಂದ 40 ಕಿ.ಮೀ ಪಾದಯಾತ್ರೆ ಕೈಗೊಂಡು 15ದಿನಗಳವರೆಗೆ ನಿರಂತರ ಪಾದಯಾತ್ರೆ ಮೂಲಕ ಎಡೆಯೂರು ಕ್ಷೇತ್ರದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಾರೆ.
ಯಡಿಯೂರಿಗೆ ತೆರಳುತ್ತಿರುವ ಭಕ್ತರಿಗೆ ದಣಿವಾರಿಸಿಕೊಳ್ಳಲು ಭಕ್ತರನ್ನು ಬರಮಾಡಿಕೊಂಡು ಅವರಿಗೆ ಕಡ್ಲೆಕಾಳುಉಸ್ಲಿ. ಮಜ್ಜಿಗೆ, ಬಾಳೆಹಣ್ಣು, ಎಲೆ ಅಡಿಕೆ, ನೀಡಿ ಗೌರವಿಸುವ ಸಂಪ್ರಾದಯವನ್ನು ಮಾಡಿಕೊಂಡು ಬಂದಿರುವ ರಮೇಶ್ರವರ ಪ್ರಸಾದ ಸ್ವೀಕರಿಸಿ ಹತ್ತಿರದ ಚೌಕಿಮಠದಲ್ಲಿ ವಿಶ್ರಾಂತಿ ಪಡೆದು ಸಂಜೆಯಾಗುತ್ತಲೇ ಪಾದಯಾತ್ರೆಯನ್ನು ಆರಂಭಿಸಿ ತುರುವೇಕೆರೆ ಮಾರ್ಗವಾಗಿ ಮಾಯಾಸಂದ್ರ ಮೂಲಕ ಎಡೆಯೂರಿನ ಸಿದ್ದಲಿಂಗೇಶ್ವರಸ್ವಾಮಿಗೆ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ಕೆ ತಲುಪುವರಿದ್ದಾರೆ.

ಕಾತರ್ಿಕ ಮಾಸದ ಅಂಗವಾಗಿ ದಶಸಹಸ್ತ್ರ ದೀಪೋತ್ಸವ
                            
ಚಿಕ್ಕನಾಯಕನಹಳ್ಳಿ : ಪಟ್ಟಣದ ಹೊಸಬೀದಿಯ ಶ್ರೀ ರಾಮ ಮಂದಿರ ದೇವಾಲಯದಲ್ಲಿ ಕಾತರ್ಿಕ ಮಾಸದ ಅಂಗವಾಗಿ ಭಕ್ತ ಸಮೂಹದಿಂದ ದಶ ಸಹಸ್ರ ದೀಪೋತ್ಸವ ಏರ್ಪಡಿಸಲಾಗಿತ್ತು.
ದಶಸಹಸ್ತ್ರ ದೀಪೋತ್ಸವ ಕಾರ್ಯಕ್ರಮಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ ನೀಡಿ ಮಾತನಾಡಿದರು. ದೀಪಗಳ ಬೆಳಕು ಜ್ಞಾನದ ಪ್ರತೀಕವಾಗಿದ್ದು, ಅಂದಕಾರವೆಂಬ ಕತ್ತಲೆಯನ್ನು ಸರಿಸಲು ದೀಪಾರಾಧನೆ ಶತ ಶತ ಮಾನಗಳಿಂದ ನಡೆದುಕೊಂಡು ಬರುತ್ತಿದೆ, ಪಟ್ಟಣದಲ್ಲಿ ಕಳೆದ 5ವರ್ಷಗಳಿಂದ ಕಾತರ್ಿಕ ಮಾಸದಲ್ಲಿ ಸುತ್ತಮುತ್ತಲ ನಿವಾಸಿಗಳು ಮಣ್ಣಿನ ದೀಪಗಳನ್ನು ತಂದು ಎಣ್ಣೆ ಬತ್ತಿಗೆ ದೀಪ ಹೆಚ್ಚುವ ಮೂಲಕ ಜ್ಞಾನ ಜ್ಯೋತಿ ಬೆಳಗುವಂತೆ ಮಾಡುತ್ತಿದ್ದಾರೆ  ಇಂತಹ ದಾಮರ್ೀಕ  ಕಾರ್ಯಗಳನ್ನು ಆಚರಿಸುವುದರಿಂದ ಸಮಾಜದಲ್ಲಿ ಗಟ್ಟಿತನ ಮೂಡುತ್ತದೆ ಎಂದರಲ್ಲದೆ ದಶ ಸಹಸ್ರ ದೀಪಗಳನ್ನು ಹಚ್ಚಲು ಶ್ರಮ ವಹಿಸಿದ ಸಕಲ ಭಕ್ತರಿಗೂ ಸಹ ದೀಪ ಬೆಳಗಿಸಿದ ಪ್ರತಿಫಲ ದೊರಕಲಿ ಎಂದು ಆಶಿಸಿದರು.
ಆರ್ಚಕ ರಮೇಶ್ ಮಾತನಾಡಿ ಕಳೆದ 5ವರ್ಷಗಳಿಂದ ದೀಪಗಳನ್ನು ಹಚ್ಚುವ ಮೂಲಕ ಕಾತರ್ಿಕ ಮಾಸಾಚರಣೆ ಮಾಡಿಕೊಂಡು ಬರುತ್ತಿದ್ದೇವೆ ಇಂತಹ ದಾಮರ್ಿಕ ಕಾರ್ಯಕ್ಕೆ ಅನೇಕ ಸಂಘಟನೆಗಳು ಅಡಿಕೆಮರ ತಂದು ಪಟ್ಟಿ ಸಿದ್ದಪಡಿಸಿದ್ದಾರೆ,  ಅನ್ನದಾಸೋಹ ಕಾರ್ಯಕ್ಕೆ ಎಲ್ಲರು ಕೈಜೋಡಿಸಿ ಮುಂದಿನ ದಿನಗಳಲ್ಲಿ ಲಕ್ಷದೀಪೋತ್ಸವ ಆಚರಣೆ ಮಾಡಬೇಕೆಂಬ ಬಯಕೆ ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಾಮರ್ಿಕ ಕಾರ್ಯಗಳಿಗೆ ಶ್ರಮಿಸಿದ ಭಕ್ತಾಧಿಗಳಿಗೆ ಶಾಸಕರು ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು. ದೀಪೋತ್ಸವ ಕಾರ್ಯಕ್ರಮದಲ್ಲಿ  ಮಹಿಳೆಯರು ಹಾಗೂ ಮಕ್ಕಳು ಸೇರಿ ದೀಪ ಬೆಳಗಿಸಿ ಸಂತಸಪಟ್ಟರು. 

ಮೇಲ್ವರ್ಗದ ಸಮುದಾಯಗಳಿಂದ ಅಸಮಾನತೆ ಮೂಲಕ ಅಶಾಂತಿ 
ಚಿಕ್ಕನಾಯಕನಹಳ್ಳಿ,ಡಿ.07  : ಮೆಲ್ವರ್ಗದ  ಸಮುದಾಯಗಳಿಂದ ಅಸಮಾನತೆ ಮೂಡಿಸುವ ಮೂಲಕ ಅಶಾಂತಿ ಉಂಟಾಗುತ್ತಿದೆ ಎಂದು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಿಷಾಧಿಸಿದರು.
ಪಟ್ಟಣದ ಬಿ.ಆರ್ ಅಂಬೇಡ್ಕರ್ ಫ್ರೌಢಶಾಲೆಯಲ್ಲಿ ಬಾಬಾಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ರ ವರ 59ನೇ ಮಹಾಪರಿನಿವರ್ಾಣ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ರಚನೆಯ ರೀತಿಯಲ್ಲಿಯೇ ಮೀಸಲಾತಿ ಎಂಬುದು ಯತಾವತ್ ಜಾರಿಯಾಗಿದ್ದರೆ ಅಸಮಾನತೆ ದೂರಾಗಿ ಎಲ್ಲರಿಗೂ ಸಮಪಾಲು, ಸಮಬಾಳು ಸಿಗುತ್ತಿತ್ತು,  ಶಿಕ್ಷಣ, ಆರೋಗ್ಯ, ವ್ಯಾಪಾರೀಕರಣದಿಂದಾಗಿ ಕೆಲವೇ ಮಂದಿ ಅಥರ್ಿಕವಾಗಿ ಬಲಾಡ್ಯರಾಗುತ್ತಿದ್ದಾರೆ ನಮ್ಮನ್ನಾಳುವ ಸಾಮಾಜಿಕ ನ್ಯಾಯ ನೀಡುವ ಸಕರ್ಾರಗಳು ದಲಿತರಿಗೆ ಇನ್ನೂ ಮುಜರಾಯಿ ದೇವಾಲಯಗಳಲ್ಲಿ ಪ್ರವೇಶ ನೀಡದೆ ಅಸಮಾನತೆ ಹುಟ್ಟಿಹಾಕುತ್ತಿವೆ ಎಂದರು.
 ದಲಿತ ಮುಖಂಡ ಸಿ.ಎಸ್.ಲಿಂಗದೇವರು ಮಾತನಾಡಿ, ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ವಿದ್ಯಾಥರ್ಿ ಜೀವನದುದ್ದಕ್ಕೂ ಅಸೃಶ್ಯತೆಯ ಕರಿನೆಗಳಲ್ಲಿ ಬದುಕಿದವರು, ಇಂದು ಮುಂದುವರಿದ ಸಮಾಜ  ನಮ್ಮ ಆಹಾರ ಪದ್ದತಿ ಕಿತ್ತುಕೊಳ್ಳುವ ಹೊನ್ನಾರ ನಡೆಸುತ್ತಿವೆ, ಸಂವಿಧಾನ ರಚನೆಗೆ ಮುನ್ನ ಕರುಡು ಪ್ರತಿ ರಚನೆಯ ಸಮಿತಿ ಸದಸ್ಯರನ್ನಾಗಿಸುವಲ್ಲಿ ಮೇಲ್ವರ್ಗದವರಿಂದ ಸೋಲಿಸುವ ಮೂಲಕ ಸದಸ್ಯರನ್ನಾಗದಂತೆ ಮಾಡುವಲ್ಲಿ ಪಿತೂರಿ ನಡೆದರೂ ಇವರ ವಿದ್ವತ್ನಿಂದ ಕರಡು ಸಮಿತಿಯ ಸದಸ್ಯರಾಗಿ ಸಂವಿಧಾನವನ್ನು ಈ ದೇಶಕ್ಕೆ ನೀಡುವಂತಾಯಿತು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಹಾಗೂ ಕ್ರಿಯಾತ್ಮಕ ಶಿಕ್ಷಣ ನೀಡದರೆ ಗುಣವುಳ್ಳ ಮಕ್ಕಳನ್ನು ಈ ಸಮಾಜಕ್ಕೆ ನೀಡಬಹುದು ಎಂದರು.
ಸಮಾಜ ಪರಿವರ್ತನಾ ಸಮುದಾಯದ ಮುಖಂಡ ನಂಜುಂಡಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಸೀಮಿತರಲ್ಲ ಅವರಲ್ಲಿದ್ದ ದೂರದೃಷ್ಟಿಯವುಳ್ಳ ಯೋಜನೆಗಳಿಂದ ಸಮಾಜಕ್ಕೆ ಒಳಿತು ಬಯಿಸಿದವರು, ಅಂಬೇಡ್ಕರ್ರವರ ಉದ್ದೇಶಗಳನ್ನು ಈಡೇರಿಸಲು ಶಾಲಾ ಮಕ್ಕಳಿಂದ ಮಾತ್ರ ಸಾಧ್ಯ, ಶಾಲಾ ಮಕ್ಕಳ ಮೊದಲು ಹಿರಿಯರನ್ನು ಗೌರವಿಸುವುದು ಕಲಿಯಬೇಕು, ನಾಡಿನ ಸುತ್ತಮುತ್ತಲಿನ ಪರಿಸರ ಹಾಗೂ ದೇಶದ ಸಂಪತ್ತು ಕಾಪಾಡಲು ಜಾಗೃತಿವಹಿಸಿ ಮುಂದಿನ ಪೀಳಿಗೆ ಉಳಿಯುವಂತೆ ಮಾಡಬೇಕು ನಮ್ಮ ಕುಟುಂಬಗಳ ಸುತ್ತಮುತ್ತ ಮದ್ಯಮಾರಾಟ ತಡೆಯುವಲ್ಲಿ ನಿಯಂತ್ರಿಸಿ ಮದ್ಯ ಕುಡಿಯುವುದು ನಿಲ್ಲಿಸಿ ಸಮಾಜ ಸುಧಾರಿಸಬೇಕು ಎಂದರು.
ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಕಾರ್ಯದಶರ್ಿ ಗೋ.ನಿ.ವಸಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಹುಟ್ಟದಿದ್ದರೆ ದಲಿತ ಸಮಾಜಗಳು ಇನ್ನೂ ಬಹಳಷ್ಟು ಕಷ್ಟ ಅನುಭವಿಸಬೇಕಿತ್ತು, ದಲಿತ ಸಮಾಜಗಳನ್ನು ಹಿಂದುಳಿದ ವರ್ಗಗಳೇ ಅವರ ಸಮಸ್ಯೆಗಳನ್ನು ಹೆಚ್ಚು ಅರಿತಿದ್ದವು. ಅದಕ್ಕೆ 1924ರಲ್ಲಿ ಬರೋಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಸಿದಣ್ಣ ಕಂಬಳಿ ಇವರು ಅಂಬೇಡ್ಕರ್ ಅವರಿಗೆ ಉಪನ್ಯಾಸಕ ವೃತ್ತಿ ನೀಡಿದ್ದರ ಪರಿಣಾಮ ಅವರ ಬದುಕಿನ ವಿವಿದ ಮಜಲು ಅನಾವರಣಗೊಂಡವು ಎಂದರು.
ಸಭೆಯಲ್ಲಿ ರಾಮ್ಕುಮಾರ್, ಮುಖಂಡ ತಿಮ್ಮೆಗೌಡ, ಮುದ್ದರಂಗಪ್ಪ. ಮತ್ತಿತ್ತರರು ಉಪಸ್ಥಿತರಿದ್ದರು.

Thursday, December 3, 2015


ವಿಕಲ ಚೇತನ ಮಕ್ಕಳಿಗೆ ಧೈರ್ಯ, ಆತ್ಮಸ್ಥೈರ್ಯ ತುಂಬಿ : ಬಿ.ಇ.ಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ : ವಿಕಲ ಚೇತನ ಮಕ್ಕಳಲ್ಲಿ ದೈರ್ಯ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಬಿ.ಆರ್.ಸಿ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕರು ಪೋಷಕರು ವಿಕಲಚೇತನ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆ ನೀಡುವುದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ, ಸಕರ್ಾರ  ವಿಕಲಚೇತನರ ಮಕ್ಕಳಿಗೆ ನೀಡುವ ಸೌಲಭ್ಯವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
  ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ ಗ್ರಾಮೀಣ ವಿಕಲಚೇತನ ಮಕ್ಕಳಿಗೆ ರೋಟರಿ ಕ್ಲಬ್ ಮುಖಾಂತರ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದಲ್ಲಿ ವಿಕಲಚೇತನ ಮಕ್ಕಳಿಗೆ ಅನೇಕ ಸೌಲಭ್ಯಗಳು ಸಿಗುತ್ತಿವೆ ಗ್ರಾಮೀಣ ಪ್ರದೇಶ ಮಕ್ಕಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಸಿ.ಡಿ.ಪಿ.ಓ ಅನಿಸ್ ಕೈಸರ್ ಮಾತನಾಡಿ ವಿಕಲಚೇತನ ಮಕ್ಕಳು ಶಾಪವಲ್ಲ ತಾಯಿ ಗರ್ಭದರಿಸಿರುವ ಸಮಯದಲ್ಲಿ ತಮ್ಮ ಆರೋಗ್ಯ ಹಾಗೂ ಉತ್ತಮ ಆಹಾರ ಸೇವಿಸದೆ ಇರುವುದರಿಂದ ವಿಕಲಚೇತನ ಮಕ್ಕಳು ಹುಟ್ಟುತ್ತಾರೆ ಆದ್ದರಿಂದ ತಾಯಂದಿರು ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸಕರ್ಾರಿ ನೌಕರರ ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ತಾ. ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಬಿ.ಆರ್.ಸಿ. ತಿಮ್ಮರಾಯಪ್ಪ, ಆರೋಗ್ಯ ಇಲಾಖೆಯ ಶ್ರೀನಿವಾಸ್ ಹಾಗೂ ಮಧುಸೂಧನ್ ಉಪಸ್ಥಿತರಿದ್ದರು.
ಬೆಂಗಳೂರಿನ ಸೌಭಾಗ್ಯಮ್ಮರವರು ಕ್ರೀಡೆಯಲ್ಲಿ ಭಾಗವಹಿಸಿದ್ದ ವಿಕಲಚೇತನ ಮಕ್ಕಳಿಗೆ ಬಹುಮಾನ ವಿತರಿಸದರು. ಹಿಮಾಲಯ ಗಾಮರ್ೆಂಟ್ಸ್ ಮಾಲೀಕ ಗೀಸೂಲಾಲ್ ಮಕ್ಕಳಿಗೆ ಬಟ್ಟೆ ವಿತರಿಸಿದರು. ಶಿಕ್ಷಕಿ ಸರ್ವಮಂಗಳ ಪ್ರಾಥರ್ಿಸಿದರು, ದಾದಾಪೀರ್ ಸ್ವಾಗರಿಸಿದರು. ವಿಶ್ವೇಶ್ವರ ನಿರೂಪಿಸಿದರು.


ನಿರಂತರವಾಗಿ ಸಾಯುತ್ತಿರುವ ಕುರಿಗಳು : ಬೇಸೆತ್ತ ಕುರಿಗಾಹಿಗಳು ಕುರಿಗಳನ್ನು ಬಾವಿಗೆ ಎಸೆದ ಪ್ರಸಂಗ 
ಚಿಕ್ಕನಾಯಕನಹಳ್ಳಿ : ಕಳೆದ 20 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುರಿ, ಮೇಕೆಗಳಿಗೆ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ, ಇದರಿಂದ ನಿರಂತರವಾಗಿ ಕುರಿಗಳು ಸಾಯುತ್ತಿದ್ದು ಬೇಸತ್ತ ಕುರಿಗಾಹಿಗಳು ಸತ್ತ ಕುರಿಗಳನ್ನು ಬಾವಿಗೆ ಎಸೆದಿರುವ ಪ್ರಸಂಗ ತಾಲ್ಲೂಕಿನ ದೊಡ್ಡ ಬಾಲದೇವರಹಟ್ಟಿಯಲ್ಲಿ ನಡೆದಿದೆ.  
  ಇತ್ತೀಚೆಗೆ ಬಿದ್ದ ಮಳೆಯಿಂದ ವಾತಾವರಣ ಕೂಡ ಶೀತಮಯವಾದ್ದರಿಂದಾಗಿ ಕುರಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿವೆ. ಕೆಲವು ದಿನಗಳಿಂದ ಕುರಿಗಳಿಗೆ ಜ್ವರದ ಬಾದೆಯ ತೀವ್ರತೆಯಿಂದಾಗಿ ನೀಲಿನಾಲಿಗೆ ರೋಗ, ಗೆಣ್ಣುಹುಣ್ಣು ಕುಂಡುರೋಗ, ಗಂಡಲುಬೇನೆ, ಕರಳುಬೇನೆಯಂತಹ ರೋಗಗಳಿಗೆ ತುತ್ತಾಗಿ ದಿನಂಪ್ರತಿ ಕುರಿಗಳು ಸಾವನ್ನಪ್ಪುತ್ತಿವೆ. 
ಕುರಿ, ಆಡು, ಮೇಕೆ ಸಾಕಾಣಿಕೆ ಪ್ರೋತ್ಸಾಹಿಸುತ್ತಿರುವ ಸಕರ್ಾರ ನುರಿತ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳದೆ ಚಿಕಿತ್ಸೆಗೆ ಬೇಕಾದ ಔಷಧಿ ಪೂರೈಸದೆ ಕುರಿಗಾಹಿಗಳನ್ನು ನಿರ್ಲಕ್ಷಿಸಿ ಕುರಿಗಳ ಮಾರಣ ಹೋಮಕ್ಕೆ ಸಕರ್ಾರ ನೇರಕಾರಣ ಎಂದು ಕುರಿಗಾಹಿಗಳು ಆರೋಪಿಸಿದ್ದಾರೆ. 
ತಾಲ್ಲೂಕಿನ ದೊಡ್ಡ ಬಾಲದೇವರಹಟ್ಟಿ ಗ್ರಾಮದ ಕುರಿಗಾಹಿ ಜಗದೀಶ್ ಹೇಳುವಂತೆ ನಮ್ಮ ಗ್ರಾಮದಲ್ಲಿ 60 ಮನೆಗಳಿದ್ದು ಎಲ್ಲರೂ ಕುರಿಗಾಹಿಗಳಾಗಿದ್ದೇವೆ ನಮ್ಮ ಬದುಕು ನಿರ್ವಹಣೆ ಕುರಿ ಸಾಕಾಣಿಕೆಯಿಂದ ನಡೆಯಬೇಕಿದೆ ಒಂದೊಂದು ಕುಟುಂಬದಲ್ಲಿ 100ರಿಂದ 150 ಕುರಿಗಳಿದ್ದು ಇವುಗಳಿಗೆ ರೋಗ ಕಾಣಿಸಿಕೊಂಡಿದೆ, ಈ ವಿಷಯವನ್ನು ಪಶು ಇಲಾಖೆಯ ಗಮನಕ್ಕೂ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಸೂಕ್ತ ಲಸಿಕೆ ಹಾಕುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕುರಿಗಾಯಿ ಬಸವಯ್ಯ ಮಾತನಾಡಿ ನಮ್ಮ ಕುರಿಗಳನ್ನು ರಕ್ಷಿಸಿಕೊಳ್ಳಲು ಹತ್ತಿರದ ಪಶು ಆಸ್ಪತ್ರೆಗೆ  ಹೋದರೆ ವೈದ್ಯರಿರೋಲ್ಲ ಆಸ್ಪತ್ರೆಯಲ್ಲಿ ಔಷಧಿ ಕೇಳಿದರೂ ಬಂದಿಲ್ಲ ಎಂದು ಅಧಿಕಾರಿಗಳು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ,  ಹೆಚ್ಚು ಬೆಲೆ ನೀಡಿ ಖಾಸಗಿ ಔಷಧಿ ಅಂಗಡಿಗಳಲ್ಲಿ ಔಷಧಿ ತರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಕುರಿ ಮತ್ತು ಉಣ್ಣೆ ಸಹಕಾರಿ ಸಂಘದ ಅಧ್ಯಕ್ಷ ಹಾಲ್ದೇವರಹಟ್ಟಿ ಗೋವಿಂದಪ್ಪ ಮಾತನಾಡಿ, ಔಷಧಿ ಬಂದಿದ್ದರೂ ಸಕರ್ಾರದ ಮಟ್ಟದಲ್ಲಿ ಸರಬರಾಜು ಆಗುತ್ತಿಲ್ಲ ಸಕರ್ಾರಗಳ ಪರಿಶಿಷ್ಟ ಜಾತಿ ಪಂಗಡದ ವರ್ಗಗಳಿಗೆ ತಾಲ್ಲೂಕಿನಾದ್ಯಾಂತ 1 ಲಕ್ಷದ 60ಸಾವಿರಕ್ಕೂ ಹೆಚ್ಚು ಕುರಿಗಳಿದ್ದು ಅತಿ ಮಳೆಯಿಂದಾಗಿ ಕುರಿ ಮೇಕೆಗೆ ಕಾಲುಬಾಯಿ ಜ್ವರ ತಾಲ್ಲೂಕಿನಾದ್ಯಂತ ಕಾಣಿಸಿಕೊಂಡಿದೆ, ರೋಗ ನಿಯಂತ್ರಣಕ್ಕೆ ಬೇಕಾದ ಔಷಧಿಯನ್ನು ಸರಬರಾಜು ಮಾಡದೇ ಇರುವುದರಿಂದ ಕುರಿಗಳು ನಿರಂತರವಾಗಿ ಸಾವನ್ನಪ್ಪುತ್ತಿವೆ.
ಸಕರ್ಾರ ನೀಲಿ ನಾಲಿಗೆ ರೋಗ ನಿಯಂತ್ರಣಕ್ಕೆ ರಕ್ಷಾ ಬ್ಲೂವ್ಯಾಕ್ಸಿನ ಎಂಬ ಔಷಧಿ ಸರಬರಾಜು ಮಾಡುತ್ತಿಲ್ಲ, ಜಾನುವಾರುಗಳಿಗೆ ಕೆಚ್ಚಲು ಬಾಯಿ ರೋಗ ಬಂದು ಸಾಯುವಂತಾದರೂ ಇದಕ್ಕೂ ಅಗತ್ಯ ಔಷಧಿಗಳನ್ನು ಪೂರೈಸುತ್ತಿಲ್ಲ, ಪಶು ಆಸ್ಪತ್ರೆಗೆ ಔಷಧಿ ಸರಬರಾಜು ಮಾಡುವುದಾಗಲಿ, ವೈದ್ಯರ ನೇಮಿಸುವುದಾಗಲೀ, ಇದಾವುದನ್ನೂ ಮಾಡದೇ ಕುರಿಗಾಹಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ, ಹೀಗಾಗಿ ರೈತರು ನೆಮ್ಮದಿಯ ಜೀವನ ನಡೆಸುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಸ್ಥಳಕ್ಕೆ ಪಶು ಆಸ್ಪತ್ರೆಯ ವಿಸ್ತರಣಾಧಿಕಾರಿ ಡಾ.ಕಾಂತರಾಜು ಭೇಟಿ ನೀಡಿ, ತಾಲ್ಲೂಕಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಮಳೆ ನೀರಿನಿಂದ ನೀರಿನಿಂದ ಕ್ಯೂಲಿಕೈಡ್ ಮಿಡ್ಜಿಸ್ ಎಂಬ ನೊಣ ಉತ್ಪತ್ತಿಯಾಗಿ ನೀರು ಕುಡಿಯುವುದರಿಂದ ಕುರಿಗಳಿಗೆ ನೀಲಿ ನಾಲಿಗೆ ರೋಗ, ಗಂಟಲುಬೇನೆ, ಗೆಣ್ಣುಹುಣ್ಣು ಮುಂತಾದ ರೋಗ ಕಾಣಿಸಿಕೊಳ್ಳುತ್ತಿದೆ, ರೋಗಗಳಿಗೆ ಲಸಿಕೆ ಕೊರತೆಯಿಂದಾಗಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ, 10 ತಿಂಗಳಿನಿಂದ ಪಶು ವೈದ್ಯ ಆಸಪತ್ರೆಗೆ ಔಷಧಿ  ಸರಬರಾಜಾಗಿಲ್ಲ, ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು ಏಕಕಾಲದಲ್ಲಿ ತಾಲ್ಲೂಕಿನ ಎಲ್ಲಾ ಕಡೆ ಸಂಚರಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ, ರೈತರು ಕೂಡ ನಮ್ಮೊಂದಿಗೆ ಸಹಕರಿಸಬೇಕು, ಜೋಗು ಪ್ರದೇಶದಲ್ಲಿ ಕುರಿಗಳನ್ನು ಮೇಯಿಸುವುದು, ನಿಂತ ನೀರನ್ನು ಕುಡಿಸದಂತೆ ಕುರಿಗಾಯಿಗಳು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

 ರೈತ ಆತ್ಮಹತ್ಯೆ

ಚಿಕ್ಕನಾಯಕನಹಳ್ಳಿ,ಡಿ.03 : ತಾಲ್ಲೂಕಿನ ಪಂಕಜನಹಳ್ಳಿಯಲ್ಲಿ ರೈತ ಮಲ್ಲೇಶ್(33) ಸಾಲ ಭಾದೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಮಲ್ಲೇಶ್ ಜೆ.ಸಿ.ಪರ ಕೆ.ಜಿ.ಬಿ.ಯಲ್ಲಿ 30ಸಾವಿರ ರೂ, ಜೆ.ಸಿ.ಪುರ ವಿ.ಎಸ್.ಎಸ್.ಎನ್ಲ್ಲಿ 15ಸಾವಿರ ಹಾಗೂ ಕೈ ಸಾಲ 75ಸಾವಿರ ಮಾಡಿಕೊಂಡು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಿ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.