Thursday, March 22, 2012


ನೀರಿಗಾಗಿ ಹಾಹಾಕಾರ: ಖಾಲಿ ಕೊಡ ಹಿಡಿದ ಜನತೆಯ ಪರದಾಟ 
  • ನೀರು ಬಿಡಲು ಆಗ್ರಹಿಸಿ ಗ್ರಾ.ಮ ಪಂಚಾಯಿತಿಗೆ ಬೀಗ ಜಡಿದ ಗ್ರಾಮಸ್ಥರು. 
  • ಅಧಿಕಾರಸ್ಥರಿಗೆ ಧಿಕ್ಕಾರ ಕೂಗಿದ ಮಹಿಳೆಯರು  
  • ಖಾಲಿ ಕೊಡ ಹಿಡಿದು 2ನೇ ದಿನವೂ ಗ್ರಾ.ಪಂ. ಕಾಯರ್ಾಲಯಕ್ಕೆ ಬೀಗ. 
  • ಅಕ್ಕಪಕ್ಕದ ತೋಟಗಳಲ್ಲಿ ನೀರಿಗಾಗಿ ಕಾಡಿಬೇಡಿ ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳುತ್ತಿರುವ     ಜನರು .

ಚಿಕ್ಕನಾಯಕನಹಳ್ಳಿ,ಮಾ.22 : ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ, ಇದೇ ಸಮಯದಲ್ಲಿ ಬೇಸಿಗೆಗಾಲ ಶುರುವಾಗಿ ಹಲವು ದಿನಗಳು ಕಳೆದಿವೆ, ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ, ಜನರು ನೀರಿಗಾಗಿ  ಅಕ್ಕಪಕ್ಕದ ತೋಟಗಳಲ್ಲಿ ಕಾಡಿಬೇಡಿ ತಮ್ಮ ದಿನನಿತ್ಯ ಕರ್ಮಗಳನ್ನು ಪೂರೈಸುವಲ್ಲಿ ನಿರತರಾಗಿರುವುದು ಸಾಮಾನ್ಯ ದೃಷ್ಯವಾಗಿದೆ, ಆದರೆ ಇದರಿಂದ ರೋಸಿಹೋಗಿರುವ  ದುಗಡಿಹಳ್ಳಿ ಗ್ರಾಮದ ಜನ ಅಂತಿಮ ಪ್ರಯತ್ನವಾಗಿ  ಗ್ರಾ.ಪಂ.ಕಾಯರ್ಾಲಯಕ್ಕೆ ಬೀಗ ಜಡಿಯುವ ಮೂಲಕ ತಮ್ಮ ರೋಷವನ್ನು ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ದುಗಡಿಹಳ್ಳಿ, ಸಿದ್ದರಾಮನಗರ ಗ್ರಾಮಗಳಲ್ಲಿ ಕಳೆದ 6ತಿಂಗಳಿನಿಂದಲೂ ನೀರಿಗಾಗಿ ಪರದಾಡುತ್ತಿದ್ದರು, ಈ ಬಗ್ಗೆ ಅಧಿಕಾರದಲ್ಲಿರುವ ಎಲ್ಲ ವರ್ಗದ ಜನರ ಬಳಿಯೂ ಗೋಳು ಹೇಳಿಕೊಂಡರು ಕುಡಿಯಲು ನೀರು ಸಿಗದಿರುವುದರಿಂದ  ಸಿಟ್ಟಿಗೆದ್ದ ಜನರು ಮಾ.21ರಂದು   ಗ್ರಾಮ ಪಂಚಾಯಿತಿ ಕಾಯರ್ಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದ್ದಾರೆ, ಮೊದಲನೆ ದಿನ ಗ್ರಾಮ ಪಂಚಾಯಿತಿ ಕಾಯರ್ಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದಕ್ಕೆ ಗ್ರಾ.ಪಂ.ಅಧ್ಯಕ್ಷರಾದ ಲಕ್ಷ್ಮೀದೇವಮ್ಮ  ಪ್ರತಿಕ್ರಿಯಿಸಿ ನಾಳೆ ಟ್ಯಾಂಕರ್ ಮೂಲಕ ನೀರನ್ನು ತರಿಸುವುದಾಗಿ ಭರವಸೆ ನೀಡಿದರು, ಈ ಭರವಸೆಗೆ ಒಪ್ಪಿಕೊಂಡ ಗ್ರಾಮಸ್ಥರು ಗ್ರಾ.ಪಂ. ಕಾಯರ್ಾಲಯಕ್ಕೆ ಹಾಕಿದ್ದ ಬೀಗ ತೆಗೆದು ಅಲ್ಲಿನ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅನವು ಮಾಡಿಕೊಟ್ಟರು, ಮರು ದಿನ ಅಂದರೆ ಮಾ.22ರಂದು  1ಗಂಟೆಯಾದರೂ ನೀರು ಬಾರದಿರುವದನ್ನು ಮನಗಂಡು  ಗ್ರಾಮಸ್ಥರು ಮತ್ತೆ ಗ್ರಾ.ಪಂ.ಕಾಯರ್ಾಲಯದ ಮುಂದೆ ಖಾಲಿ ಕೊಡ ಪ್ರದಶರ್ಿಸಿ ಬೀಗ ಜಡಿದು ಪ್ರತಿಭಟಿಸಿದರು.
ಹೊಸದಾಗಿ ಬೋರ್ ಕೊರೆಸಿದ್ದು ಅದಕ್ಕೆ ಮೋಟಾರ್ ಅಳವಡಿಸಿಲ್ಲ,  ಗ್ರಾಮದ ಜನತೆಗೆ ನೀರು ಬಿಡಬೇಕಾದ ನೌಕರ ಅಪಘಾತಕ್ಕೀಡಾಗಿ  ಆಸ್ಪತ್ರೆ ಸೇರಿದ್ದಾನೆ,  ಇವೆಲ್ಲಾ ಕಾರಣಗಳಿಂದ  ಸುಮಾರು ಆರು ತಿಂಗಳಿನಿಂದಲೂ ಸರಿಯಾಗಿ ನೀರಿನ ಸರಬರಾಜು ಇಲ್ಲದೆ ಗ್ರಾಮದ ಜನರು ಅಕ್ಕಪಕ್ಕದಲ್ಲಿನ ತೋಟಗಳಿಗೆ ಹೋಗಿ ತೋಟದ ಮಾಲೀಕರಲ್ಲಿ ವಿನಂತಿಸಿಕೊಂಡು ನೀರನ್ನು ತಂದು ತಮ್ಮ ದಿನನಿತ್ಯ ಕಾರ್ಯಗಳನ್ನು ಪೂರೈಸಿಕೊಳ್ಳುತ್ತಿರುವುದಾಗಿ  ಆ ಭಾಗದ ಗ್ರಾಮಸ್ಥ ಲೋಕೇಶ್  ಪತ್ರಿಕೆಯ ಬಳಿ ಹೇಳಿಕೊಂಡಿದ್ದಾರೆ. ಈ ಕೂಡಲೇ ಗ್ರಾಮಕ್ಕೆ ನೀರು ಬಿಡಲು ಪಯರ್ಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ನಮಗೆ ನೀರು ಸಿಗುವವರೆಗೆ ಗ್ರಾ.ಪಂ.ಗೆ ಬೀಗ ಜಡಿಯುವುದು ಖಂಡಿತವೆಂದು ಆ ಭಾಗದ ಜನರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿ.ಲೋಕೇಶ್ ಬಿಲ್ಲೇಮನೆ, ನಿಜಗುಣಮೂತರ್ಿ, ನಂದೀಶ್, ಷಡಾಕ್ಷರಿ ಸೇರಿಂದತೆ ಮಹಾಲಿಂಗೇಶ್ವರ ಯುವಕ ಸಂಘದ ಸದಸ್ಯರು, ಮಹಿಳಾ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.