Thursday, May 19, 2011
















ಭೂ ಸ್ವಾಧೀನದ ಪ್ರಕ್ರಿಯೆಯನ್ನು ಕೈ ಬಿಡುವಂತೆ ಒತ್ತಾಯಚಿಕ್ಕನಾಯಕನಹಳ್ಳಿ,

ಮೇ.19: ಕೇವಲ ಜೀವನಾದಾರಕ್ಕೆ 5, 10 ಗುಂಟೆ ಭೂ ಪ್ರದೇಶ ಹೊಂದಿರುವವರೆ ಹೆಚ್ಚು, ಈ ಭೂ ಒಡೆಯರ ಭೂಮಿ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಸಕರ್ಾರದ ಕ್ರಮ ಖಂಡಿಸಿ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಕರ್ಾರವನ್ನು ಎಚ್ಚರಿಸಿದೆ. ಪಟ್ಟಣದ ಎಲ್ಲಮ್ಮದೇವಿಯ ದೇವಾಲಯದ ಆವರಣದಲ್ಲಿ ದಾಸೀಹಳ್ಳಿ ಹಾಗೂ ಬ್ಯಾಲದಕೆರೆಯ ಆಜುಬಾಜಿನಲ್ಲಿರುವ 80 ಎಕರೆ 10ಗುಂಟೆ, ಗೃಹಮಂಡಳಿಯ ಭೂ ಸ್ವಾಧೀನಕ್ಕೆ ಒಳಪಡುವ 107 ಮಂದಿ ರೈತರು ಸಭೆ ಸೇರಿ ಭೂ ಸ್ವಾಧೀನ ಕಾಯಿದೆ ಕಲಂ 4(1) ಅಡಿಯಲ್ಲಿ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು ಕಲಂ 6(1)ಎ ಕಾಯಿದೆಗೆ ಒಳಪಟ್ಟರೆ ರೈತರು ಭೂಮಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಸಕರ್ಾರಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿ ಬಡ ರೈತರನ್ನು ರಕ್ಷಿಸುವ ಹೊಣೆ ಎಲ್ಲರ ಜವಾಬ್ದಾರಿಯಾಗಿದೆ. ಈ ಹೋರಾಟದಲ್ಲಿ ಮಾನ್ಯ ಶಾಸಕರು ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.ರೈತ ಮುಖಂಡ ಸಿ.ಬಿ.ತಿಪ್ಪೇಸ್ವಾಮಿ ಮಾತನಾಡಿ ಬದ್ದತೆಯ ಮೂಲಕ ಹೋರಾಟ ಕೈಗೆತ್ತಿಕೊಳ್ಳಬೇಕು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಡುವ ಹೋರಾಟದಲ್ಲಿ ಯಶಸ್ಸು ಕಾಣುವವರೆಗೂ ಸಂಘಟಿತರಾಗಿರಬೇಕು ಎಂದರು.ಸಭೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸಿ.ಡಿ.ರಾಜಣ್ಣ, ಪುರಸಭೆ ಸದಸ್ಯ ಸಿ.ಪಿ.ಮಹೇಶ್, ಸಿ.ಪಿ.ಚಂದ್ರಶೇಖರಶೆಟ್ಟಿ, ಟಿ.ಕುಮಾರಯ್ಯ, ಸಿ.ಎನ್.ಕುಮಾರ್, ಪುಟ್ಟಯ್ಯ, ರಾಮಚಂದ್ರಯ್ಯ, ಸಿ.ವಿ.ದಯಾನಂದ, ಸಿ.ಬಿ.ರೇಣುಕಸ್ವಾಮಿ, ಸಿ.ಎಸ್.ಮಲ್ಲಿಕಾಜರ್ುನಯ್ಯ, ಬ್ಯಾಲದಕೆರೆ ನಂಜಪ್ಪ ಉಪಸ್ಥಿತರಿದ್ದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಿಗೆಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲು ಆಗ್ರಹಿಸಿ ತಾಲೂಕು ದಂಡಾದಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ರಾಜ್ಯ ರಕ್ಷಣಾ ವೇದಿಕೆಯ ದಶಮಾನೋತ್ಸವ ಸಮಾರಂ

ಚಿಕ್ಕನಾಯಕನಹಳ್ಳಿ,ಮೇ.19 : ರಾಜ್ಯ ರಕ್ಷಣ ವೇದಿಕೆ ದಶಮಾನೋತ್ಸವವು ಬೆಂಗಳೂರು ಅರಮನೆಯ ಮೈದಾನದಲ್ಲಿ ಇದೇ ತಿಂಗಳ 28-29ರಂದು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕರವೇ ಅಧ್ಯಕ್ಷ ಎನ್.ಎಸ್. ವಿಷ್ಣುವರ್ಧನ್ ಹೇಳಿದರು. ಪಟ್ಟಣದ ಸಕರ್ಾರಿ ನೌಕರರ ಸಂಘದ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಕ್ಷಣ ವೇದಿಕೆಗೆ 10ನೇ ವರ್ಷ ದಾಟಿ 11ನೇ ವರ್ಷಕ್ಕೆ ಕಾಲಿಟ್ಟಿದೆ. ಕರವೇ ಒಗ್ಗೂಡಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭಕ್ಕೆ ನಮ್ಮ ಜಿಲ್ಲೆಯಿಂದ 10.000 ಕಾರ್ಯಕರ್ತರು ಆಗಮಿಸುವ ನೀರಿಕ್ಷೆಯಿದೆ ಎಂದರು. ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಗಳ ಜನಪದ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪ್ರದಶರ್ಿಸುವ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದ್ದು ರಾಜ್ಯದ ಅಭಿವೃದ್ಧಿಯ ಚಿಂತನೆ ಜಾನಪದದ ವಿಚಾರವಾಗಿ ರಾಜ್ಯಮಟ್ಟದಲ್ಲಿ ವಿಚಾರ ಗೋಷ್ಟಿಗಳ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರು ನಾಡಿನ ಮಠಾಧೀಶರುಗಳು ಜನ ಪ್ರತಿನಿಧಿಗಳು ಅನಿವಾಸಿ ಕನ್ನಡಿಗರು ಸಾಹಿತಿಗಳು ಹಾಗೂ ನಾಡಪರ ಚಿಂತಕರ ಸಮ್ಮುಖದಲ್ಲಿ ನೆಡೆಯಲಿರುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.ತಾಲೂಕು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಪ್ರತಿಯೊಂದು ಹೋಬಳಿ &ಗ್ರಾಮಗಳಲ್ಲಿ ನಮ್ಮ ಕರವೇ ಶಾಖೆಗಳನ್ನು ತೆಗೆಯಬೇಕು ಮುಖಂಡರುಗಳು ಜನಪರ ರೈತರಿಗಾಗಿ ಅನ್ಯಾಯ ಆಗದಂತೆ ಹೋರಾಟ ಮಾಡಿ ಒಳ್ಳೆಯ ಕೆಲಸ ಮಾಡಬೇಕು ನಮ್ಮ ರಾಜ್ಯದಲ್ಲಿ ಭ್ರಷ್ಟಚಾರ ಜಾಸ್ತಿಯಗಾಗಿದೆ ಬಳ್ಳಾರಿ ಜಿಲ್ಲೆ ಮೊದಲನೆಯದಾದರೆ ಎರಡನೇಯದಾಗಿ ತುಮಕುರು ಜಿಲ್ಲೆ ಇವುಗನ್ನು ಹೋಗಲಾಡಿಸಲು ಪ್ರಯತ್ನಿಸೋಣ ಎಂದರು.ಸಭೆಯಲ್ಲಿ ಕೃಷ್ಣಮೂತರ್ಿ ಪ್ರಾಥರ್ಿಸಿ, ಲಕ್ಷ್ಮೀಶ್ ಸ್ವಾಗತಿಸಿ, ಸಿ.ಟಿ.ಗುರುಮೂತರ್ಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಮರ್ಿಕರ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ವಿದ್ಯಾಥರ್ಿ ಘಟಕದ ಅಧ್ಯಕ್ಷ ರಾಜೇಶ್ ಹಾಗೂ ಕರವೇ ಕಾರ್ಯಕರ್ತರು ಹಾಜರಿದ್ದರು.