Thursday, July 28, 2016


ಕಾನೂನು ಸಂಚಾರಿ ಸಾಕ್ಷರಥ ರಥಕ್ಕೆ ಚಾಲನೆ
ಚಿಕ್ಕನಾಯಕನಹಳ್ಳಿ,ಜು.28 : ಮನುಷ್ಯ ತನ್ನ ದಿನನಿತ್ಯದ ಬದುಕನ್ನು ಕಾನೂನಿನ ಮಿತಿಯ ಒಳಗಡೆಯೇ ನಡೆಸಬೇಕು, ನಿಯಮಗಳ ಸೂಕ್ಷ್ಮ ವಿಷಯಗಳನ್ನು ಅರಿತುಕೊಳ್ಳುವುದು ಅವಶ್ಯಕ  ಎಂದು ಪ್ರಧಾನ ಸಿವಿಲ್ ನ್ಯಾಯಾಧಿಶ ಸೋಮನಾಥ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಚಾಲನೆ ನೀಡಲಾಯಿತು.
 ದುಗಡಿಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಗ್ರಾಮಸ್ಥರಿಗೆ ಕಾನೂನು ಅರಿವು ನೆರವು ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ಕಾನೂನು ಸಂಚಾರಿ ರಥ ಸಂಚರಿಸುವ ಮೂಲಕ ಜನರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಹುಟ್ಟಿನಿಂದ ಸಾಯುವ ತನಕ ಕಾನೂನು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಮರಣ ಹೊಂದಿದ 7ದಿನಗಳ ಒಳಗೆ ಮರಣ ಪತ್ರವನ್ನು ಸಂಬಂದಪಟ್ಟ ಪುರಸಭೆ, ಗ್ರಾಮ ಪಂಚಾಯಿತಿಗೆ ನೀಡಿ ದೃಢೀಕರಣ ಪತ್ರ ಪಡೆಯಬೇಕು, ಅಪಘಾತವಾದ ಸಮಯದಲ್ಲಿ ವ್ಯಕ್ತಿಯನ್ನು ಬದುಕಿಸಲು ಕೈಲಾದ ಸಹಾಯ ಮಾಡಿ ಜೊತೆಗೆ ಅಪಘಾತವೆಸಗಿದ ಚಾಲಕನ ವಾಹನದ ಸಂಖ್ಯೆ  ಹಾಗೂ ವಾಹನ ಮಾಲೀಕರ ವಿವರವನ್ನು ಮುಚ್ಚಿಡದಂತೆ ಕಾನೂನಿನ ಗಮನಕ್ಕೆ ತರಬೇಕು ಎಂದರು.
ಸಹಾಯಕ ಸಕರ್ಾರಿ ಅಭಿಯೋಜಕ ಆರ್.ರವಿಚಂದ್ರ ಮಾತನಾಡಿ, ಯಾವುದೇ ವ್ಯಕ್ತಿ ಕಾನೂನು ತಿಳುವಳಿಕೆ ನನಗಿಲ್ಲ ಅಂತ ಅಪರಾದ ಕೃತ್ಯಗಳನ್ನು ಮಾಡಬಾರದು, ಬದುಕಿನ ನಿಯಮದಲ್ಲೇ ಕಾನೂನು ಅಳವಡಿಕೆಯಾಗಿರುತ್ತದೆ, ಮನುಷ್ಯನ ದುರಾಸೆಯಿಂದ ಹಣಗಳಿಸಿ  ಕಾನೂನಿಗೆ ಒಳಪಟ್ಟರೆ ದಂಡ ಕಟ್ಟಬೇಕಾಗುತ್ತದೆ, ವ್ಯವಹಾರ ಏನೇ ಮಾಡಲಿ ಅದಕ್ಕೆ ಸಂಬಂಧಿಸಿದ ಕಾನೂನು ಕಾಯ್ದೆಯ ನಿಯಮಗಳಿರುತ್ತವೆ ಅದನ್ನು ತಿಳಿಯಲು ಎಲ್ಲರೂ ವಿದ್ಯಾವಂತರಾಗಬೇಕು, ಮಕ್ಕಳಿಗೂ ಶಿಕ್ಷಣ ಕಡ್ಡಾಯವಾಗಿ ನೀಡಿ, ಶಿಕ್ಷಣ ಕೊಡಿಸಲು ಸಾಧ್ಯವಾಗದ ಕುಟುಂಬಸ್ಥರು ಉಚಿತ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಶಿಕ್ಷಣ ಪಡೆಯಲು ಸಹಕಾರ ಕೊರಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿಗಳಿಂದ ನಾಗರೀಕ ಸೌಲಭ್ಯ ಪಡೆಯುವುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎನ್.ಕೃಷ್ಣಮೂತರ್ಿ, ಸಹಾಯಕ ಸಂಚಾರಿ ಅಭಿಯೋಜಕ ಸಿ.ಬಿ.ಸಂತೋಷ್, ವಕೀಲ ಸಂಘದ ಅಧ್ಯಕ್ಷ ಟಿ.ಎಸ್.ಸೋಮಶೇಖರ್, ಕಾರ್ಯದಶರ್ಿ ಕೆ.ಎಂ.ಷಡಾಕ್ಷರಿ, ಬಿ.ಇ.ಓ ಕೃಷಮೂತರ್ಿ, ಸಿ.ಡಿ.ಪಿ.ಓ ತಿಪ್ಪಯ್ಯ, ಸಿ.ಪಿ.ಐ ಮಾರಪ್ಪ, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ವಿಜಿಯಮ್ಮ, ಉಪಾಧ್ಯಕ್ಷೆ ಪಾರ್ವತಮ್ಮ ದಯಾನಂದ್, ಮಲ್ಲೇಶಪ್ಪ ವಕೀಲರಾದ ಹೆಚ್.ಟಿ.ಹನುಮಂತಯ್ಯ, ಸಿ.ರಾಜಶೇಖರ್, ರತ್ನರಂಜಿನಿ, ಕಾರ್ಯದಶರ್ಿ ಗಂಗಾಧರ್, ರವಿಕುಮಾರ್, ದಿಲೀಪ್ ಮುಂತಾದವರು ಉಪಸ್ಥಿತರಿದ್ದರು. ಮಹದೇವಮ್ಮ ಪ್ರಾಥರ್ಿಸಿದರು. ಷಡಕ್ಷರಿ ಸ್ವಾಗತಿಸಿದರು. ಹನುಮಂತಯ್ಯ ನಿರೂಪಿಸಿದರು.
ಮಕ್ಕಳಿಗೆ ಸರಳ ಬೋಧನೆ ಅಗತ್ಯ : ಬಿಇಓ ಕೃಷ್ಣಮೂತರ್ಿ 
 ಚಿಕ್ಕನಾಯಕನಹಳ್ಳಿ,ಜು.28: ಶಿಕ್ಷಕರು ತಾವು ತಿಳಿದ ವಿಷಯವನ್ನು ಸರಳವಾಗಿ ವಿದ್ಯಾಥರ್ಿಗಳಿಗೆ ತಲುಪಿಸುವ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು.ಅದರಲ್ಲೂ ಗ್ರಾಮಾಂತರ ಮಕ್ಕಳಿಗೆ ಇಂಗ್ಲೀಷ್ ಬೋಧಿಸುವ ಶಿಕ್ಷಕರು ಸರಳ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.
  ತಾಲ್ಲೂಕಿನ ಹಂದನಕೆರೆ ಹೋಬಳಿ ದೊಡ್ಡೆಣ್ಣೆಗೆರೆ ಗವಿರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ತಾಲ್ಲೂಕು ಆಂಗ್ಲಭಾಷಾ ಶಿಕ್ಷಕರಿಗಾಗಿ ನಡೆದ ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಅನಿವಾರ್ಯವಾಗಿದೆ. ಅಂತೆಯೇ ಕಲಿಕಾ ತಂತ್ರಗಳೂ ವಿಪುಲವಾಗಿವೆ. ಆಧುನಿಕ ತಂತ್ರಜ್ಞಾನವನ್ನು ಬೋಧನೆಯಲ್ಲಿ ಬಳಸಿಕೊಳ್ಳುವ ಮೂಲಕ ಸರಳವಾಗಿ ಭಾಷೆ ಕಲಿಸಬಹುದು ಎಂದರು.
  ಸಂಪನ್ಮೂಲ ವ್ಯಕ್ತಿ ಎಂ.ಪಿ.ಬಾಲಾಜಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಶಿಕ್ಷಕರು ಮಕ್ಕಳಲ್ಲಿ ಇರುವ ಇಂಗ್ಲಿಷ್ ಭಯವನ್ನು ಹೋಗಲಾಡಿಸಬೇಕು. ಭಾಷೆ ಭಯ ಹೋಗಲಾಡಿಸಲು ಪೂರಕ ವಾತಾವರಣ ನಿಮರ್ಿಸಿಕೊಳ್ಳಬೇಕು. ಭಾಷಾ ಶುದ್ಧತೆಕಡೆ ಗಮನ ಕೊಡಬೇಕು. ದಿನ ನಿತ್ಯ ಬಳಕೆಯಾಗುವ ಪದ ಸಂಪತ್ತಿನ ಬಗ್ಗೆ ಗಮನ ಹರಿಸಬೇಕು. ಸಂದಭರ್ೋಚಿತವಾಗಿ ಮಕ್ಕಳ ಜತೆ ಸಂವಹನ ನಡೆಸಬೇಕು ಎಂದರು.
  ಕಾರ್ಯಕ್ರಮದಲ್ಲಿ ತಾಲ್ಲೂಕು ಇಂಗ್ಲಿಷ್ ಭಾಷಾ ಬೊಧಕರ ಸಂಘದ ಅಧ್ಯಕ್ಷ ಬಿ.ಎಸ್.ನಟರಾಜ್, ಖಜಾಂಚಿ ದೇವರಾಜ್, ಮುಖ್ಯೋಪಾಧ್ಯಾಯ ಬಸವಲಿಂಗಪ್ಪ,ಸಂಘದ ಪದಾಧಿಕಾರಿಗಳಾದ  ಮಾಧವ್, ಕೆ.ವಿ.ನಟರಾಜ್, ಓಂಕಾರ್ ಮುಂತಾದವರು ಹಾಜರಿದ್ದರು.











Friday, July 22, 2016


ಅಕ್ರಮ ಮರಳು ಗಣಿಗಾರಿಕೆ ತಡೆಯಲು ರೈತರ ಒತ್ತಾಯ
ಚಿಕ್ಕನಾಯಕನಹಳ್ಳಿ,ಜು.22 : ಅಕ್ರಮ ಮರಳು ಗಣಿಗಾರಿಕೆಯಿಂದ ಅಂರ್ತಜಲ ನಾಶವಾಗಿ, ನೈಸಗರ್ಿಕ ಸಂಪತ್ತು ಹಾಳು ಮಾಡುತ್ತಿರುವ ದಂದೆಕೋರರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ನಗರ ಘಟಕ ಶಾಖೆ ಪದಾಧಿಕಾರಿಗಳು ಸರ್ಕಲ್ ಇನ್ಸ್ಪೆಕ್ಟರ್ ನರಸಿಂಹಮೂತರ್ಿ ಮನವಿ ಸಲ್ಲಿಸಿದರು.
ರೈತ ಸಂಘದ ಟೌನ್ ಶಾಖೆ ಅಧ್ಯಕ್ಷ ಸಿ.ಕೆ.ಮೈಲಾರಪ್ಪ ಮಾತನಾಡಿ, ಪಟ್ಟಣದ ಕುಡಿಯುವ ನೀರಿಗೆ ಆಸರೆಯಾಗಿರುವ ಕೆರೆ ಅಕ್ರಮ ಮರಳುಗಣಿಗಾರಿಕೆಯಿಂದ ವಿರೂಪಗೊಂಡಿದೆ. 85ಎಕ್ಟರ್ ಪ್ರದೇಶಕ್ಕೂ ಹೆಚ್ಚೂ ಭೂ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ಮರಳು ನಿಕ್ಷೇಪವನ್ನು ದಂಧೆಕೋರರು ದೋಚುತ್ತಿದ್ದಾರೆ. ಅಕ್ರಮ ಮರಳು ಸಾಕಣೆಯನ್ನು ತಕ್ಷಣ ತಡೆಯದಿದ್ದರೆ ಉಗ್ರ ಗಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
   ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹೇಮಾವತಿ ನೀರನ್ನು ಏತ ನೀರಾವರಿ ಮೂಲಕ ಕೆರೆಗೆ ಹರಿಸಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ಕೆರೆ ನೀರು ಹಿಡಿದಿಡುವ ಸಾಮಥ್ರ್ಯ ಕಳೆದುಕೊಂಡಿದ್ದು ಮಳೆಗಾಲದಲ್ಲೂ ಪಟ್ಟಣ ವಾಸಿಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.
    ಪ್ರತಿನಿತ್ಯ ನೂರಾರು ಟ್ರ್ಯಾಕ್ಟರ್ಗಳು ನಿರಂತರವಾಗಿ ಮರಳು ಎತ್ತುತ್ತಿವೆ. ಹಗಲು ರಾತ್ರಿ ಅವ್ಯಹತವಾಗಿ ಮರಳು ಸಾಗಣಿಕೆ ನಡೆಯುತ್ತಿದೆ. ಇದರಿಂದ ಅಂರ್ತಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಸುತ್ತ ಮುತ್ತಲ ಹಲವು ಹಳ್ಳಿಗಳ ಸಾವಿರಾರು ಹೆಕ್ಟೇರ್ ರೈತರ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗುತ್ತಿವೆ ಎಂದರು.
ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲೀಸ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ. ಅಕ್ರಮ ಮರಳು ದಂದೆಕೋರರ ವಿರುದ್ದ ಕ್ರಮ ಜರುಗಿಸಿ, ರೈತರ ನೀರಿನ ಬವಣೆ ನೀಗಿಸಬೇಕು. ಇಲಾಖೆಗಳು ಎಚ್ಚೇತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 
ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್, ರೈತ ಸಂಘದ ಕಾರ್ಯದಶರ್ಿ ಸಿ.ಕೆ.ಸತೀಶ್, ಸಿ.ಎಸ್.ಬಸವರಾಜು, ಮುಖಂಡರುಗಳಾದ ತಿಪ್ಪಯ್ಯ, ಪುಟ್ಟಹನುಮಯ್ಯ, ಈಶ್ವರಯ್ಯ, ಡಿ.ರಾಮಯ್ಯ, ಗೋಪಾಲಯ್ಯ. ಸಿ.ಆರ್, ಬಾಸ್ಕರ್ಬಾಬು, ಶಶಿಧರ್, ಬಸವಯ್ಯ, ಅನಿಲ್ಕುಮಾರ್, ಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.

ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸಿ 
ಚಿಕ್ಕನಾಯಕನಹಳ್ಳಿ,ಜು.22 : ಗಿಡಮರಗಳನ್ನು ನಾವು ಬೆಳೆಸುವುದರ ಜೊತೆಗೆ ಅಕ್ಕಪಕ್ಕದಲ್ಲಿರುವವರಿಗೂ ಪರಿಸರ ಜಾಗೃತಿ ಮೂಡಿಸಬೇಕು ಎಂದು ಅಂಬೇಡ್ಕರ್ ಪ್ರೌಢಶಾಲೆಯ ಕಾರ್ಯದಶರ್ಿ ಗೋ.ನಿ.ವಸಂತ್ಕುಮಾರ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಡೆದ 2016-17ನೇ ಶೈಕ್ಷಣಿಕ ಸಾಲಿನ ವಿದ್ಯಾಥರ್ಿ ಸಂಘದ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಿಸರದಿಂದ ಆಗುವ ಅನುಕೂಲಗಳ ಬಗ್ಗೆ ಸಾರ್ವಜನಿಕರು ಒಬ್ಬರಿಂದ ಒಬ್ಬರು ಪ್ರಚಾರ ಮಾಡಬೇಕು, ಕಾಡು ಉಳಿದರೆ ಕಾಡುಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬರುವುದು ತಪ್ಪಲಿದೆ ಎಂದರು.
ಡಿಎಸ್ಎಸ್ ಮುಖಂಡ ಲಿಂಗದೇವರು ಮಾತನಾಡಿ, ಚಿ.ನಾ.ಹಳ್ಳಿಯಲ್ಲಿ ಗಣಿಕಾರಿಕೆಯಿಂದ ಪರಿಸರಕ್ಕೆ ಹಾನಿಯಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಆಗಮಿಸಿ ಜನರಿಗೆ ತೊಂದರೆ ಕೊಡುವ ಸ್ಥಿತಿ ಎದುರಾಗಿದೆ. ಈಗಲಾದರೂ ಸಾರ್ವಜನಿಕರು ತಾಲ್ಲೂಕಿನ ಕಾಡು ಕಣಿವೆಗಳನ್ನು ಉಳಿಸುವ ಕಡೆ ಗಮನ ಹರಿಸಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಮನುಷ್ಯ ಸಂಘ ಜೀವಿ, ಒಬ್ಬರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ, ಪರಿಸರ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು.ಮನೆಗೊಂದು ಮರದಂತೆ ಶಾಲೆಗೊಂದು ವನ ರೂಪುಗೊಳ್ಳಬೇಕು ಎಂದರು.
ಶಿಕ್ಷಕ ದಿನಕರ್ ಮಾತನಾಡಿ, ತಾಲ್ಲೂಕಿಗೆ ಸಾಲು ಮರದ ತಿಮ್ಮಕ್ಕನವರು ಆಗಮಿಸಿದ ಸಂದರ್ಭದಲ್ಲಿ ಸಾವಿರಾರು ಗಿಡ ನೆಟ್ಟಿದ್ದರ ಪರಿಣಾಮ ಇಂದು ತಾಲ್ಲೂಕಿನಲ್ಲಿ ಮರಗಳು ದೊಡ್ಡದಾಗಿ ಬೆಳೆದು ಉತ್ತಮ ಗಾಳಿ ದೊರಕುತ್ತಿದೆ ಎಂದರು.
 ಕಾರ್ಯಕ್ರಮದಲ್ಲಿ ಡಿಎಸ್ಎಸ್ ಮುಖಂಡ ಜೆ.ಸಿ.ಪುರ ಗೋವಿಂದರಾಜು, ಮುಖ್ಯೋಪಾಧ್ಯಾಯರಾದ ರಾಮ್ಕುಮಾರ್, ದೇವರಾಜು, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.


ಜನಸಂಪರ್ಕ ಸಭೆ ಜುಲೈ 30
ಚಿಕ್ಕನಾಯಕನಹಳ್ಳಿ,ಜು.22 : ತಾಲ್ಲೂಕಿನ ಹಂದನಕೆರೆ ಹೋಬಳಿ ಚೌಳಕಟ್ಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಜುಲೈ 30ರಂದು ಬೆಳಗ್ಗೆ 11ಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.
ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ತಹಶೀಲ್ದಾರ್ ಗಂಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, July 12, 2016

ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸದವ ಪ್ರಯುಕ್ತ ಮೂರು ದಿನಗಳ ಕಾಲ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ
ಎಂಟು ನೂರು ವರ್ಷಗಳಿಂದ ನಡೆಯುತ್ತಿರುವ ಜಾತ್ರೆ, ಜುಲೈ 15ರಂದು ಬೆಳ್ಳಿಪಲ್ಲಕ್ಕಿ ಉತ್ಸವ.
ಜುಲೈ 16 ರಂದು ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ಚಿತ್ರಕಲಾ ಪ್ರದರ್ಶನ,  ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ. ಸಮೂಹ ಚಿತ್ರಕಲಾ ಪ್ರದರ್ಶನ.
17 ರಂದು ನವದಂಪತಿಗಳ ಸ್ಪಧರ್ೆ, ಕುಸ್ತಿ ಪಂದ್ಯಾವಳಿ, ನಗೆಹಬ್ಬ.

ಚಿಕ್ಕನಾಯಕನಹಳ್ಳಿ,ಜು.12 : ಎಂಟು ನೂರು ವರ್ಷಗಳ ಇತಿಹಾಸವಿರುವ ಪಟ್ಟಣದ ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ರಥೋತ್ಸವ ಜುಲೈ 15 ರಿಂದ 17 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ, ಜಾತ್ರೆಯ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 
. ಜುಲೈ 15ರಂದು ಬೆಳ್ಳಿಪಲ್ಲಕ್ಕಿ ಉತ್ಸವ, 16ರಂದು ಬ್ರಹ್ಮರಥೋತ್ಸವ, 17ರಂದು ರಥೋತ್ಸವ ನಡೆಯಲಿದೆ. ಈ ಜಾತ್ರೆಗೆ ಎಂಟು ನೂರು ವರ್ಷಗಳ ಇತಿಹಾಸವಿದೆ.
ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ: 16ರಂದು ಅನ್ನಪೂಣರ್ೇಶ್ವರಿ ಕಲಾ ಸಂಘ ಹಾಗೂ ಸಿಬಿಎಸ್ ಅಭಿಮಾನಿ ಬಳಗ ವತಿಯಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. 
ವಿಜೇತರಿಗೆ ಒಟ್ಟು 1ಲಕ್ಷದ 70ಸಾವಿರ ರೂಪಾಯಿ ಬಹುಮಾನ ವಿತರಿಸಲಿದ್ದು, ಸ್ಪಧರ್ೆಯ ಸೀನಿಯರ್ ಗ್ರೂಪ್ ಪ್ರಥಮ ಸ್ಥಾನ 70ಸಾವಿರ ರೂಪಾಯಿ, ದ್ವಿತಿಯ 30ಸಾವಿರ, ತೃತೀಯ 15ಸಾವಿರ ಬಹುಮಾನ ನೀಡಲಿದ್ದು ಸ್ಪಧರ್ೆಯಲ್ಲಿ ಭಾಗವಹಿಸುವ ಗ್ರೂಪ್ಗಳಗೆ 1500ಸಾವಿರ ರೂ ಪ್ರವೇಶ ಶುಲ್ಕವಿದೆ.
ಜೂನಿಯರ್ಗ್ರೂಪ್ಗೆ ಭಾಗವಹಿಸುವವರಿಗೆ ಪ್ರಥಮ ಬಹುಮಾನ 20ಸಾವಿರ, ದ್ವಿತಿಯ ಬಹುಮಾನ 10ಸಾವಿರ, ತೃತಿಯ ಬಹುಮಾನ 5ಸಾವಿರ ರೂ ಇದ್ದು ಭಾಗವಹಿಸುವ ತಂಡಗಳಿಗೆ 500ರೂ ಪ್ರವೇಶ ಶುಲ್ಕವಿದೆ. 
ಸೀನಿಯರ್ ಸೋಲೋದಲ್ಲಿ ಭಾಗವಹಿಸುವ ತಂಡಗಳಿಗೆ ಪ್ರಥಮ ಬಹುಮಾನ 5ಸಾವಿರ, ದ್ವಿತಿಯ ಬಹುಮಾನ 3ಸಾವಿರ, ತೃತಿಯ ಬಹುಮಾನ 2ಸಾವಿರವಿದೆ, ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ 200ರೂವಿದೆ.
ಜೂನಿಯರ್ ಸೋಲೋ ಪ್ರಥಮ ಬಹುಮಾನ 5ಸಾವಿರ, ದ್ವಿತಿಯ ಬಹುಮಾನ 3ಸಾವಿರ,  ತೃತಿಯ 2ಸಾವಿರ ಹಾಗೂ ಪ್ರವೇಶ ಶುಲ್ಕ 200ರೂಗಳಾಗಿದೆ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಿದ್ದಾರೆ.
ಸಮೂಹ ಚಿತ್ರಕಲಾ ಪ್ರದರ್ಶನ : ಕುಂಚಾಂಕುರ ಕಲಾ ಸಂಘದ ವತಿಯಿಂದ 14ನೇ ವರ್ಷದ ಸಮೂಹ ಚಿತ್ರಕಲಾ ಪ್ರದರ್ಶನ ಜುಲೈ 16 ಮತ್ತು 17ರಂದು ಪಟ್ಟಣದ ಕಲ್ಪವೃಕ್ಷ ಕೋ ಆಪರೇಟೀವ್ ಬ್ಯಾಂಕ್ ಆವರಣದಲ್ಲಿ ನಡೆಯಲಿದೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾಲ್ಲೂಕು ರಂಗಭೂಮಿ ಕಲಾವಿದರಾದ ಮಹೇಶ್ ಉದ್ಘಾಟಿಸುವರು. 
ತೇರಿನ ಕಳಸಕ್ಕೆ ಬಾಳೇಹಣ್ಣು ಎಸೆಯುವ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ 23ನೇ ವರ್ಷದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಜುಲೈ 16ರ ಶನಿವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕಾಯರ್ಾಲಯದ ಮುಂಭಾಗದಲ್ಲಿ ನಡೆಯಲಿದೆ.  ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಅಧ್ಯಕ್ಷತೆ ವಹಿಸುವರು.
ನವದಂಪತಿಗಳ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ 25ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನ ಹಮ್ಮಿಕೊಂಡಿದೆ.
25ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನು ಜುಲೈ 17ರ ಭಾನುವಾರ ಮಧ್ಯಾಹ್ನ 2.30ಕ್ಕೆ ಕೋಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್ ಉದ್ಘಾಟಿಸುವರು. ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸಾಸಲು ಸತೀಶ್, ಉಪ ಪೋಲಿಸ್ ವರಿಷ್ಠಾಧಿಕಾರಿ ಸಿ.ಆರ್.ರವೀಶ್, ಬಿಬಿಎಂಪಿ ಉಪ ಆಯುಕ್ತ ಸಿ.ಟಿ.ಮುದ್ದುಕುಮಾರ್ ಉಪಸ್ಥಿತರಿರುವರು.   ಅದೇ ದಿನ ಸಂಜೆ 8ಕ್ಕೆ ನವದಂಪತಿಗಳ ಸ್ಪಧರ್ೆ ಹಾಗೂ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ದಿವ್ಯಜ್ಯೋತಿ ಹ್ಯವಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ನಗೆಹಬ್ಬ : ಪಟ್ಟಣದ ಕನ್ನಡ ಸಂಘದ ವೇದಿಕೆ ಬಳಿ ಜುಲೈ 17ರ ಭಾನುವಾರ ಮಧ್ಯಾಹ್ನ 3.30ಕ್ಕೆ ಕನ್ನಡ ಸಂಘದ ಸಾಂಸ್ಕೃತಿಕ ವೇದಿಕೆಯಿಂದ ನಗೆಹಬ್ಬ ಏರ್ಪಡಿಸಲಾಗಿದೆ.
ಕುಸ್ತಿ ಸ್ಪಧರ್ೆ: ಜುಲೈ 17ರ ಭಾನುವಾರ ಪಟ್ಟಣದ ಶ್ರೀ ಮಾರುತಿ ವ್ಯಾಯಾಮ ಶಾಲೆ ಮತ್ತು ಗರಡಿ ಕುಸ್ತಿ ಸಂಘದ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪಧರ್ೆಯ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.  ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಸಿ.ಬಸವರಾಜು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಬಹುಮಾನ ವಿತರಣೆ ಮಾಡಲಿದ್ದಾರೆ.
ನಾಟಕ :  ರಾಮಾಂಜನೇಯಯುದ್ದ ನಾಟಕ, ಲವಕುಶ ನಾಟಕ, ಅನ್ನಸಂತರ್ಪಣೆ ನಡೆಯುವುದು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ,ಜು.12 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸುಜ್ಞಾನ ಶಿಷ್ಯವೇತನ, ನಿರ್ಗತಿಕರಿಗೆ ಮಾಶಾಸನ, ಶುದ್ದಗಂಗಾ ಘಟಕ, ಸಿಎಹ್ಸಿಇ ಯಂತ್ರಗಳ ಧಾರೆ ಹಾಗೂ ಮತ್ತಿತರ ಹಲವು ಯೋಜನೆಗಳನ್ನು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಹೇಳಿದರು.
ತಾಲ್ಲೂಕಿನ ಗೋಡೆಕೆರೆ ಶ್ರೀ ಬಸವಲಿಂಗಪ್ರಭು ಸಭಾಭವನದಲ್ಲಿ ನಡೆದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿದ ಪ್ರಗತಿಸಾಲ ಮಾತ್ರವಲ್ಲದೆ ಹಲವಾರು ರೀತಿಯ ಸೌಲಭ್ಯ ನೀಡುತ್ತಿದೆ ಎಂದರು.
ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಹಾಗೂ ಜನರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕಾಯಕ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗೋಡೆಕೆರ ಮಠದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷ ಕೆ.ಆರ್.ಶಿವಾನಂದಯ್ಯ, ಸಾಸಲು ಚಂದ್ರಶೇಖರ್, ಎ.ಎಲ್.ಚಂದ್ರಶೇಖರ್, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮೇಲ್ವಿಚಾರಕ ವಿಜಯ್ಕುಮಾರ್ ನಿರೂಪಿಸಿದರು. ಸಹಾಯಕ ನರಸಿಂಹಮೂತರ್ಿ ಸ್ವಾಗತಿಸಿದರು. ಪದ್ಮ ವಂದಿಸಿದರು.


ಅಖಿಲ ಕನರ್ಾಟಕ ಛಲವಾದಿ ಸಮಾಜಭಿವೃದ್ದಿ ಮಹಾಸಂಘದ ತಾಲ್ಲೂಕು ಶಾಖೆ ಅಸ್ಥಿತ್ವಕ್ಕೆ 

ಚಿಕ್ಕನಾಯಕನಹಳ್ಳಿ,ಜು.12 : ಅಖಿಲ ಕನರ್ಾಟಕ ಛಲವಾದಿ ಸಮಾಜಭಿವೃದ್ದಿ ಮಹಾಸಂಘದ ತಾಲ್ಲೂಕು ಶಾಖೆ ಅಸ್ಥಿತ್ವಕ್ಕೆ ಬಂದಿದೆ.
ತಾಲ್ಲೂಕು ಅಧ್ಯಕ್ಷರಾಗಿ ದಬ್ಬಗುಂಟೆ ಡಿ.ಆರ್.ರುದ್ರೇಶ್, ಗೌರವಾಧ್ಯಕ್ಷರಾಗಿ ಯಳ್ಳೇನಹಳ್ಳಿ ನಿರಂಜನಮೂತರ್ಿ, ಉಪಾಧ್ಯಕ್ಷರಾಗಿ ಗೋಡೆಕೆರೆ ವಸಂತ್ಕುಮಾರ್, ಕಾರ್ಯಧ್ಯಕ್ಷ ಕಾತ್ರಿಕೆಹಾಳ್ ಜಯಣ್ಣ, ಪ್ರಧಾನ ಕಾರ್ಯದಶರ್ಿ ಡಿ.ಕೆ.ರುದ್ರಯ್ಯ, ಜಂಟಿಕಾರ್ಯದಶರ್ಿಗಳಾಗಿ ತಿಮ್ಮನಹಳ್ಳಿಬಾಲಾಜಿ, ಬಾಚಿಹಳ್ಳಿಶಿವಕುಮಾರ್, ಸೋಮನಹಳ್ಳಿ ನರಸಿಂಹಮೂತರ್ಿ, ಹೊಯ್ಸಳಕಟ್ಟೆ ದೇವರಾಜು, ಹುಳಿಯಾರು ಮೂತರ್ಿ, ಆಶ್ರೀಹಾಳ್ ರಾಮಯ್ಯ, ಅರಳೀಕೆರೆ ಕರಿಯಪ್ಪ ಹಾಗೂ ಖಜಾಂಚಿಗಳಾಗಿ ಅಗಸರಹಳ್ಳಿ ನರಸಿಂಹಮೂತರ್ಿ ಆಯ್ಕೆಯಾಗಿದ್ದಾರೆ.


Monday, July 11, 2016



ಬಿಜೆಪಿ ಯುವ ಮೋಚರ್ಾ ವತಿಯಿಂದ ಪ್ರತಿಭಟನೆ  

ಚಿಕ್ಕನಾಯಕನಹಳ್ಳಿ,ಜು.11 : ಮಂಗಳೂರು ಡಿ.ವೈ.ಎಸ್.ಪಿ ಗಣಪತಿಯವರ ಆತ್ಮಹತ್ಯೆಯ ಹಿಂದೆ ಸಚಿವ ಕೆ.ಜೆ.ಜಾಜರ್್ ಕೈವಾಡವಿದೆ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು, ಪ್ರಕರಣವನ್ನು ಸಿ.ಬಿ.ಐಗೆ ವಹಿಸುವಂತೆ ತಾ.ಬಿ.ಜೆ.ಪಿ.ಮಾಜಿ ಅಧ್ಯಕ್ಷ ಶ್ರೀನಿವಾಸ್ಮೂತರ್ಿ ಆಗ್ರಹಿಸಿದ್ದಾರೆ.
ಪಟ್ಟಣದ ಯುವ ಮೂಚರ್ಾ ವತಿಯಿಂದ ನಡೆದ ರಸ್ತೆ ತಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಕರ್ಾರದಲ್ಲಿ ಪ್ರಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ ಸಕರ್ಾರದಲ್ಲಿ ಭ್ರಷ್ಠ ಅಧಿಕಾರಿಗಳು ಪ್ರಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಇದರಿಂದ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸಕರ್ಾರವೇ ಕಾರಣ ಎಂದ ಅವರು ರಾಜ್ಯ ಸಕರ್ಾರದ ಅಧೀನದಲ್ಲಿರುವ ಸಿ.ಐ.ಡಿಗೆ ವಹಿಸುವ ಬದಲು ಸಿಬಿಐಗೆ ಪ್ರಕರಣವನ್ನು ವಹಿಸುವಂತೆ ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ಎಮ್.ಎಮ್ ಜಗಧೀಶ ಮಾತನಾಡಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ, ಸಚಿವ ಕೆ.ಜೆ.ಜಾಜರ್್ರವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ, ಗೃಹ ಸಚಿವರು ರಾಜ್ಯದಲ್ಲಿ ನಿವೃತ್ತ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಹೈಕಮಾಂಡಿಗೆ ದೂರು ನೀಡಿದ್ದಾರೆ ಎಂದ ಅವರು ಸಿದ್ದರಾಮಯ್ಯ ಸಕರ್ಾರದಲ್ಲಿ ಅನೇಕ ಪ್ರಮಾಣಿಕ ಅಧಿಕಾರಿಗಳು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು. 
ಪ್ರತಿಭಟನೆಯಲ್ಲಿ ಯುವ ಮೂಚರ್ಾ ಅಧ್ಯಕ್ಷ ಚೇತನ್ಪ್ರಸಾದ್, ನಗರ ಅಧ್ಯಕ್ಷ ನರಸಿಂಹಮೂತರ್ಿ, ಮಲ್ಲಿಕಾಜರ್ುನ, ಶಿವಕುಮಾರ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಯರ ಮೇಲೆ ಕರಡಿ ದಾಳಿ 
ಚಿಕ್ಕನಾಯಕನಹಳ್ಳಿ,ಜು.11 : ತಾಲ್ಲೂಕಿನ ನಂದಿಹಳ್ಳಿಯಲ್ಲಿ ಕರಡಿ ದಾಳಿ ಮಾಡಿ ಮಂಜುಳ(28) ಹಾಗೂ ದ್ರಾಕ್ಷಾಯಿಣಮ್ಮ (45)ವರ್ಷ ತೀವ್ರವಾಗಿ ಗಾಯಗೊಂಡು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ ಮಂಜುಳ ತಮ್ಮ ತೋಟಕ್ಕೆ ಹೋಗಿ ನೀರುಹಾಯಿಸಲು ಮೋಟ್ರು ಚಾಲನೆ ಮಾಡಿ ಮನೆಗೆ ಹಿಂತಿರುಗುವಾಗ,  ಗ್ರಾಮದ ಪಕ್ಕದಲ್ಲಿ ಹೋಗುತ್ತಿರುವ ಸಮಯದಲ್ಲಿ 3ಕರಡಿಗಳು ಮಂಜುಳ ಮೇಲೆ ದಾಳಿ ಮಾಡಿ ಬೆನ್ನು ಹಾಗೂ ಬೆನ್ನಿನ ಕೆಳ ಭಾಗದಲ್ಲಿ ಪರಚಿದುದರಿಂದ ತೀವ್ರಗಾಯಗಳಾಗಿದೆ, ನಂದಿಹಳ್ಳಿ ಸುತ್ತಮುತ್ತಲು ಮೂರು ಕರಡಿಗಳು ನಿತ್ಯ ಸಂಚರಿಸುತ್ತವೆ, ಇದರಿಂದ ರೈತರು ತೋಟಗಳಿಗೆ ಹೋಗಲು ಭಯಭೀತರಾಗಿದ್ದಾರೆ, ಕೂಡಲೇ ಅರಣ್ಯ ಇಲಾಖೆ ಕರಡಿಗಳನ್ನು ಹಿಡಿದು ಈ ಭಾಗದ ಜನರಿಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಷಯ ತಿಳಿದ  ಅರಣ್ಯಾಧಿಕಾರಿಗಳು ನಂದಿಹಳ್ಳಿಗೆ  ಆಗಮಿಸಿ ಕರಡಿ ಹಿಡಿಯುವ ಕಾರ್ಯಚರಣೆ ಕೈಗೊಳ್ಳುವ ಸಲುವಾಗಿ  ಟ್ರ್ಯಾಕ್ಟರ್ನಿಂದ ಬೋನ್ ಇಳಿಸುವ ಸಂದರ್ಭದಲ್ಲಿ ಉಂಟಾದ ಗೌಜುಗದ್ದಲದಿಂದ ಗಾಬರಿಗೊಂಡ ಕರಡಿಗಗಳು ಪಕ್ಕದ  ದಾಳಿಂಬೆ ಗಿಡದಲ್ಲಿ ಇದ್ದ ಕರಡಿಗಳು ದ್ರಾಕ್ಷಾಯಣಮ್ಮನ ಮೇಲೆ  ಏಕಾಏಕಿ ದಾಳಿ ನಡೆಸಿವೆ,   ಈ ಸಂದರ್ಭದಲ್ಲಿ ದ್ರಾಕ್ಷಾಯಣಮ್ಮನ ಕಿರಿಚಾಟ ಕೇಳಿ ದಾರಿ ಹೋಕರು ಬಂದು ಕರಡಿಗಳನ್ನು ಓಡಿಸಿದರು ಎಂದು ತಿಳಿದು ಬಂದಿದೆ.  ಕರಡಿ ದಾಳಿಯಿಂದ ಕೈ ಮುರಿದಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು ಆರು ಹೊಲಗೆಗಳನ್ನು ಹಾಕಿದ್ದಾರೆ. 
ಆಸ್ಪತ್ರೆಗೆ ಗಾಯಾಳಗಳನ್ನು ಕರೆತಂದಿದ್ದ ನಂದಿಹಳ್ಳಿ ಮಲ್ಲೇಶಯ್ಯ ಮಾತನಾಡಿ, ನಮ್ಮ ಗ್ರಾಮದ  ಸುತ್ತಮುತ್ತಾ ಈಗಾಗಲೇ ಮೂರು ನಾಲ್ಕು ಜನ ಕರಡಿ ದಾಳಿಗೆ ತುತ್ತಾಗಿದ್ದಾರೆ,  ಹುಳಿಯಾರು ಸಕರ್ಾರಿ ಆಸ್ಪತ್ರೆಯಲ್ಲಿ ವೈದ್ಯಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಇಂತಹ ಘಟನೆಗಳಲ್ಲಿ ಚಿಕಿತ್ಸೆ ನೀಡಲಾಗದೇ ಇರುವುದರಿಂದ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಬೇಕಾಗಿದೆ.  ಕೂಡಲೇ ಕರಡಿಗಳನ್ನು ಹಿಡಿದು ಬೇರೆ ಕಡೆ ಸಾಗಿಸುವಂತೆ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಆರ್.ಎಫ್.ಓ. ಲಕ್ಷ್ಮೀನಾರಾಯಣ ಭೇಟಿ ನೀಡಿ ಸಕರ್ಾರದಿಂದ ಗಾಯಾಳುವಿಗೆ ಚಿಕಿತ್ಸೆಯ ಖಚರ್ುವೆಚ್ಚಗಳನ್ನು ನೀಡಲಾಗುವುದು ಎಂದರು.

ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ 
                                       
ಚಿಕ್ಕನಾಯಕನಹಳ್ಳಿ,ಜು.11 : ಅಂಗನವಾಡಿ ಕಾರ್ಯಕರ್ತರನ್ನು ಸಕರ್ಾರಿ ನೌಕರರಂತೆ ಪರಿಗಣಿಸಬೇಕು ಹಾಗೂ  ವೇತನವನ್ನು ಹೆಚ್ಚಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕಗಳನ್ನು  ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಛೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್ರವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಗುರುಭವನ ಬಳಿಯಿಂದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಮೆರವಣಿಗೆ ಹೊರಟು ತಾಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಅಧ್ಯಕ್ಷೆ ಪೂರ್ಣಮ್ಮ, ಅಂಗನವಾಡಿ ನೌಕರರನ್ನು ಸಕರ್ಾರಿ ನೌಕರರೆಂದು ಪರಿಗಣಿಸಬೇಕು, ಅಂಗನವಾಡಿ ಸಹಾಯಕರಿಗೆ, ಕಾರ್ಯಕರ್ತರಿಗೆ ವೇತನ ಸಹಿತ ವೈದ್ಯಕೀಯ ರಜೆ ನೀಡಬೇಕು, ಪರಿಣಿತ ಕೆಲಸಗಾರರಿಗೆ 20ಸಾವಿರ ರೂ  ಅಪರಿಣಿತ ಕೆಲಸಗಾರರಿಗೆ 17ಸಾವಿರ ರೂಗಳನ್ನು ಆರಂಭದ ವೇತನ  ನೀಡಬೇಕು ಹಾಗೂ  ಅಂಗನವಾಡಿ ಕಾರ್ಯಕರ್ತರನ್ನು ಮೂರನೇ ದಜರ್ೆ ನೌಕರರು, ಸಹಾಯಕರನ್ನು 4ನೇ ದಜರ್ೆ ನೌಕರರೆಂದು ಪರಿಗಣಿಸುವಂತೆ,  ಪ್ರತಿ ವರ್ಷ ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಚುಟಿ, ಪಿಂಚಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಹಸಿರು ಸೇನೆಯ ಸತೀಶ್ಕೆಂಕೆರೆ ಮಾತನಾಡಿ, ಹದಿನೈದು ವರ್ಷಗಳಿಂದಲೂ ರಾಜ್ಯಸಕರ್ಾರವಾಗಲಿ, ಕೇಂದ್ರ ಸಕರ್ಾರವಾಗಲಿ ಅಂಗನವಾಡಿ ನೌಕರರಿಗೆ ವೇತನ ನೀತಿಯಂತೆ ಸೌಲಭ್ಯಗಳನ್ನು ನೀಡಿಲ್ಲ, ಇತರ ಇಲಾಖೆ ನೌಕರರಿಗೆ ಮಾತ್ರ 25ರಿಂದ 30 ಸಾವಿರದವರೆಗೂ ವೇತನ ಹೆಚ್ಚಿಸಿ ಹಲವು ಸೌಲಭ್ಯ ನೀಡುತ್ತಿವೆ, ಅಂಗನವಾಡಿ ನೌಕರರು ಬಾಣಂತಿಯರಿಗೆ, ಮಕ್ಕಳಿಗೆ ಸೇವೆ ಸಲ್ಲಿಸುತ್ತಿದ್ದಾರೆಮ ಇವರೂ ಇತರ ಸಕರ್ಾರಿ ನೌಕರರಂತೆ ಗ್ರಾಮಗಳಲ್ಲಿ  ಕೆಲಸ ನಿರ್ವಹಿಸುತ್ತಾರೆ ಆದರೂ ಸಕರ್ಾರ ತಾರತಮ್ಯ ಮಾಡುತ್ತಿರುವುದು ವಿಷಾದನೀಯ ಎಂದರು.
ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದಶರ್ಿ ಸುನಂದ, ಪುಷ್ಪಾವತಮ್ಮ, ಶಾರದ, ಶಕುಂತಲ, ಮುಂತಾದವರು ಉಪಸ್ಥಿತರಿದ್ದರು.




Saturday, July 9, 2016



ದಿ.ರೇವಣ್ಣನವರ ಹಾಗೂ ಕೆ.ಬಸವಯ್ಯನವರ 10ನೇ ವರ್ಷದ ವಾಷಿಕೋತ್ಸವ 
ಚಿಕ್ಕನಾಯಕನಹಳ್ಳಿ,ಜು.09 : ದಿ.ರೇವಣ್ಣನವರು ನಿಸ್ವಾರ್ಥ ಸೇವೆಗೆ ಹೆಸರಾಗಿದ್ದರು, ಜಾತಿ ಬೇದ ಮರೆತು ತಮ್ಮ ಬಳಿ ಸಹಾಯಕ್ಕಾಗಿ ಬಂದವರೆಲ್ಲರಿಗೂ ಶಿಕ್ಷಣದ ನೆರವು ನೀಡಿ, ಸಕರ್ಾರಿ ಕೆಲಸ ದೊರಕಿಸಿ, ಸಮಾಜದ ಉತ್ತಮ ವ್ಯಕ್ತಿಗಳಾಗುವಂತೆ ಮಾಡಿದರು ಎಂದು ತುಮಕೂರು ಶ್ರೀದೇವಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಿ.ಎಂ.ಗುರುಮೂತರ್ಿ ಹೇಳಿದರು.
ಪಟ್ಟಣದ ಕಂಬಳಿ ಸೊಸೈಟಿ ಮುಂಭಾಗದಲ್ಲಿ ಸ್ಥಾಪಿಸಿರುವ ದಿವಂಗತ ನಿವೃತ್ತ ಅಪರ ಕೃಷಿ ನಿದರ್ೇಶಕರಾಗಿದ್ದ ಸಿ.ಎಂ.ರೇವಣ್ಣ ಹಾಗೂ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಕೆ.ಬಸವಯ್ಯನವರ ಪುತ್ಥಳಿ ಪ್ರತಿಷ್ಠಾಪನೆಯ 10ನೇ ವರ್ಷದ ಪೂಜಾ ಕಾರ್ಯಕ್ರಮ ಹಾಗೂ ಕನಕ ಭವನದಲ್ಲಿ ನಡೆದ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
   ಪುತ್ಥಳಿ ಅನಾವರಣ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಬಡವಿದ್ಯಾಥರ್ಿಗಳ ಶಿಕ್ಷಣಕ್ಕೆ ನೆರವು ನೀಡಿದ ಮಹಾನ್ ವ್ಯಕ್ತಿ ರೇವಣ್ಣ. ಸುಮಾರು 300ಕ್ಕೂ ಹೆಚ್ಚು ಜನರಿಗೆ ಸಕರ್ಾರಿ ಕೆಲಸ ದೊರಕುವಂತೆ ಮಾಡಿ, ಸಮಾಜದ ಏಳಿಗೆಗೆ ಶ್ರಮಿಸಿದವರು. ಅವರು ಹಾಕಿಕೊಟ್ಟ ದಾರಿಯಲ್ಲಿ ಕೆಲಸ ಮಾಡಿದವರು ಇಂದು ಸಮಾಜದ ಬಡ ವಿದ್ಯಾಥರ್ಿಗಳ ಶೈಕ್ಷಣಿಕ ಅಭಿವೃದ್ದಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಪುತ್ಥಳಿ ಅನಾವರಣ ಸಮಿತಿ ಗೌರವಾಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಮಾತನಾಡಿ, ರೇವಣ್ಣನವರ ಹಾಗೂ ಬಸವಯ್ಯ ಅವರ ನೆನಪಿಗಾಗಿ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಹಾಗೂ ಸೇವಾ ಸಮಿತಿ ರಚಿಸಿಕೊಂಡು ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿರುವುದು, ಬಡವಿದ್ಯಾಥರ್ಿಗಳಿಗೆ ನೋಟ್ಬುಕ್, ಕನ್ನಡ ಇಂಗ್ಲಿಷ್ ನಿಘಂಟನ್ನು ನೀಡುತ್ತಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟ್ಬುಕ್ ವಿತರಿಸಲಾಯಿತು. ಪುತ್ಥಳಿ ಅನಾವಾರಣ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗೂ ನಿವೃತ್ತ ಸಹಾಯಕ ಕೃಷಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. 
ಸಮಿತಿ ಅಧ್ಯಕ್ಷ ದೊರೆಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಂಟಿ ಕೃಷಿ ನಿದರ್ೇಶಕ ಪಿ.ಮೋಹನ್, ಪತ್ರಿಕೋದ್ಯಮಿ ಸಿ.ಜಿ.ಮುದ್ದುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪಟ್ಟಣದಲ್ಲಿ ಸ್ವಚ್ಛತೆಗೆ ಪುರಸಭೆ ಮುಂದಾಗುವರೇ ? 
ಚಿಕ್ಕನಾಯಕನಹಳ್ಳಿ,ಜು.09 : ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ ಬಸ್ನಿಲ್ದಾಣ ನೆಹರು ವೃತ್ತ ದೇವಾಂಗ ಬೀದಿ ಸೇರಿದಂತೆ ಪಟ್ಟಣದ 23 ವಾಡರ್್ಗಳಲ್ಲಿ ಕಸದ ರಾಶಿಯೇ ಹರಡಿದ್ದು ಇದರಿಂದ ಪಟ್ಟಣದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಪಟ್ಟಣದ  ಹೊಸ ಬಸ್ ನಿಲ್ದಾಣದ ಸುತ್ತಮುತ್ತಲ ಹೂವಿನ ಅಂಗಡಿಗಳು ಕಾಫಿ, ಟೀ, ಬಾಳೆ ಹಣ್ಣಿನ ಅಂಗಡಿಗಳಲ್ಲಿ ಬರುವ ತ್ಯಾಜ್ಯ ರಸ್ತೆ ಬದಿ ಚೆಲ್ಲಾಡುತ್ತಿದ್ದರೂ ಪುರಸಭೆ ತಲೆ ಕೆಡಿಸಿಕೊಂಡಿಲ್ಲ,  ಹೊಸ ಬಸ್ನಿಲ್ದಾಣದ ಹೈಮಾಸ್ಟ್ ಲೈಟ್ ಬಳಿ ಇಟ್ಟಿರುವ ಕಂಟೇನರ್ಗೆ ಕಸ ಹಾಕದೇ ಅಂಗಡಿ ಮಾಲೀಕರುಗಳು ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದರಿಂದ ಈ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ.
 ಖಾಸಗಿ ಬಸ್ ನಿಲ್ದಾಣದಲ್ಲಿರುವ ಚರಂಡಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ, ಅಕ್ಕಪಕ್ಕದ ಪೆಟ್ಟಿಗೆ ಅಂಗಡಿಯವರು ಟೀ, ಕಾಫಿ, ಲೋಟಗಳನ್ನು ಚರಂಡಿಯಲ್ಲಿ ಹಾಕುತ್ತಿರುವುದರಿಂದ ಚರಂಡಿ ಘನತ್ಯಾಜ್ಯದಿಂದ ತುಂಬಿಕೊಂಡು ದುನರ್ಾತ ಬೀರುತ್ತಿದೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆ ನೀರು ಚರಂಡಿಯಲ್ಲಿ ನಿಂತು, ತ್ಯಾಜ್ಯ ಕೊಳೆಯುತ್ತಿದೆ. ಕೆಲವರು ಚರಂಡಿಯ ಮೇಲೆ ಹಾಕಿರುವ ಹಾಸು ಕಲ್ಲುಗಳನ್ನು ಅಪಹರಣವಾಗಿದ್ದು ಪಾದಚಾರಿಗಳು ತೀವ್ರ  ತೊಂದರೆ ಅನುಭವಿಸುತ್ತಿದ್ದಾರೆ.
 ಪಾದಾಚಾರಿಗಳು ನಡೆದು ಹೋಗುವಾಗ ಚರಂಡಿಯಲ್ಲಿ ಬಿದ್ದು ಕೈಕಾಲು ಮುರಿದು ಆಸ್ಪತ್ರೆ ಸೇರಿರುವ ಉದಾಹರಣೆಗಳೂ ಇವೆ. ಪುರಸಭೆ ಅಧಿಕಾರಿಗಳು, ಸದಸ್ಯರು ಚರಂಡಿಗಳಲ್ಲಿ ಹಾಕಿರುವ ತ್ಯಾಜ್ಯವನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮಕೈಗೊಳ್ಳಬೇಕು ಹಾಗೂ ಕಳುವಾಗಿರುವ ಚಪ್ಪಡಿಗಳನ್ನು ಹಾಕಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಧರ್ಮಸ್ಥಳ ಸಂಸ್ಥೆಯ ಒಕ್ಕೂಟ ಪದಗ್ರಹ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜು.09 : ಧರ್ಮಸ್ಥಳ ಸಂಸ್ಥೆ ರೈತರಲ್ಲಿನ ಜ್ಞಾನವನ್ನು ಗುರುತಿಸಿಕೊಳ್ಳಲು ಹಾಗೂ ಕೌಶಲ್ಯಗಳನ್ನು ವೃದ್ದಿಸಿಕೊಳ್ಳಲು  ಹಲವು ರೀತಿಯಲ್ಲಿ ಸಹಕಾರ ನೀಡುತ್ತಿದೆ. ಸಂಸ್ಥೆಯ ನೆರವು ಬಳಸಿಕೊಂಡು ಆಥರ್ಿಕ ಪ್ರಗತಿ ಸಾಧಿಸಿಕೊಳ್ಳಿ ಎಂದು ಮಾಜಿ ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಹೇಳಿದರು.
ತಾಲ್ಲೂಕಿನ ಸಿದ್ದರಾಮನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಶನಿವಾರ ನಡೆದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ದುಗಡಿಹಳ್ಳಿ ಮತ್ತು ಹೆಸರಹಳ್ಳಿ ಕಾರ್ಯಕ್ಷೇತ್ರಗಳ ನೂತನ ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ವತಿಯಿಂದ ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯುತ್ತವೆ. ಆದರೆ ಸಾಲ ಪಡೆದವರು ಕೃಷಿ ಕೆಲಸಗಳಿಗೆ ಹಣ ಹೂಡಿದರೆ ಆಥರ್ಿಕವಾಗಿ ಲಾಭ ಪಡೆಯಬಹುದು ಎಂದರು.
ತಾ.ಪಂ.ಸದಸ್ಯೆ ಶೈಲಾ ಮಾತನಾಡಿ, ಯುವಕರು ಸಂಸ್ಕೃತಿ ಮರೆಯಬಾರದು. ದೇಶದ ಕಲೆ, ಸಾಂಸ್ಕೃತಿಯನ್ನು ಯುವಪೀಳಿಗೆ ಬೆಳೆಸಿ ಮುಂದೆ ಬರುವಂತಹ ಜನಾಂಗಕ್ಕೆ ಮಾದರಿಯಾಗಿ ನೀಡಬೇಕು. ಮಹಿಳೆಯರು ಅಭಿವೃದ್ಧಿ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಮಾತನಾಡಿ, ಗ್ರಾಮಗಳ ಕಲ್ಯಾಣ ರೈತರ ಅಭ್ಯೂದಯದಿಂದ ಮಾತ್ರ ಸಾಧ್ಯ ಎಂಬ ಆಶಯವನ್ನಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ರಾಜಶೇಖರ್, ಸಾವಿತ್ರಮ್ಮ, ಶಿಕ್ಷಕ ಶ್ಯಾಮಸುಂದರ್ ಮತ್ತಿತರರು ಉಪಸ್ಥಿತರಿದ್ದರು.



ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ಿಸುವೆ ಟಿ.ದಾಸೇಗೌಡ 

ಚಿಕ್ಕನಾಯಕನಹಳ್ಳಿ,ಜು.09 : ಸಕರ್ಾರ ಶಿಕ್ಷಕರನ್ನು ಜೀತದಾಳುಗಳಂತೆ ಕಾಣುತ್ತಿದೆ, ಘನತೆಯ ವೇತನ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡದೆ ಶಿಕ್ಷಕ ಸಮುದಾಯವನ್ನು ವಂಚಿಸುತ್ತಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಪಕ್ಷೇತರವಾಗಿ ಸ್ಪಧರ್ಿಸಿರುವ ಟಿ.ದಾಸೇಗೌಡ ಆರೋಪಿಸಿದರು.
  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಕುಮಾರ್ ನಾಯಕ್ ವರದಿಯನ್ನು ಯಥಾವತ್ ಅನುಷ್ಠಾನಗೊಳಿಸಿ ವೇತನ ತಾರತಮ್ಯ ನಿವಾರಿಸಬೇಕು. ಹೊಸ ಪಿಂಚಣಿ ನೀತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು. ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭತರ್ಿ ಮಾಡಬೇಕು ಎಂದು ಒತ್ತಾಯಿಸಿದರು.
    ಅನುದಾನ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಆರೋಗ್ಯ ವಿಮೆ ವಿಸ್ತರಣೆ, ಅರೆಕಾಲಿಕ ಉಪನ್ಯಾಸಕರುಗಳ ಖಾಯಮಾತಿ, ಅನುದಾನ ರಹಿತ ಶಾಲೆ ಶಿಕ್ಷಕರುಗಳಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಸಂಬಳ ಹಾಗೂ ಸೇವಾ ಭದ್ರತೆ ಒದಗಿಸುವುದು, ಮಹಿಳಾ ಸಿಬ್ಬಂದಿಗೆ ವಿಶೇಷ ರಜೆ ಹಾಗೂ ಶಾಲೆಗಳ ಉನ್ನತೀಕರಣ ತಮ್ಮ ಗುರಿ ಎಂದರು.
  ಗೋಷ್ಠಿಯಲ್ಲಿ ಪಟೇಲ್ ಗರುಡೇಗೌಡ ಅಧ್ಯಯನ ಕೇಂದ್ರದ ಸಂಯೋಜಕ ಜಿ.ಶಾಂತರಾಜು, ಎಸ್.ಎಂ.ಎಸ್, ಕಾಲೇಜ್ ಪ್ರಿನ್ಸಿಪಾಲ್ ಸ್ವಾಮಿಗೌಡ ಉಪಸ್ಥಿತರಿದ್ದರು.



Friday, July 8, 2016

ಅಣೆಕಟ್ಟೆಗೆ ಆರೋಗ್ಯ ಸಚಿವ ರಮೇಶ್ಕುಮಾರ್ ಭೇಟಿ, ಚಿಕನ್ಗುನ್ಯಾ ಬಗ್ಗೆ ಪರಿಶೀಲನೆ
ಚಿಕ್ಕನಾಯಕನಹಳ್ಳಿ08: ಥೂ...ತ್ತೇರಿ ಹೋಡೆದುಬಿಡ್ತಿನಿ, ಎಲ್ಲಾ ತಿಳಿದುಕೊಂಡೆ ಬಂದಿದ್ದೇನೆ. ಮೂನ್ನೂರು ಜನ ಖಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ನೀವು ಮುವಾತ್ತಾರು ಜನ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಿರಾ. ಏನ್ ಅವತಾರ ನಿಮ್ದು ಬಹಿರಂಗವಾಗಿ ಈ ರೀತಿ ಸುಳ್ಳು ಹೇಳಿದರೆ ಜನ ಕಾಪಾಳಕ್ಕೆ ಭಾರಿಸಿದರೆ ಗತಿ ಏನು ಎಂದು ಆರೋಗ್ಯ ಸಚಿವ ರಮೇಶ್ಕುಮಾರ್ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಅಣೇಕಟ್ಟೆ ಗ್ರಾಮದ ಚಿಕೂನ್ಗುನ್ಯಾ ರೋಗಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ದಿಢೀರ್ಭೇಟಿ ನೀಡಿ ಪರೀಶಿಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿ,  ಸುಳ್ಳು ಹೇಳಿದರೆ ಸಸ್ಪೆಂಡ್ ಆಗ್ತಿರಾ. ಸುಳ್ಳು ಹೇಳಿದರೆ ಒಂದು ತಪ್ಪು ನಿರಾಕರಿಸಿದರೆ ಇನ್ನೊಂದು ತಪ್ಪುಮಾಡಿದಂತಾಗುತ್ತದೆ  ಎಚ್ಚರವಿರಲಿ ಎಂದು ಗದರಿದರು.
ನೀವು ಅಧಿಕಾರಿಗಳು ನಮಗೆ ಸುಳ್ಳು ಮಾಹಿತಿ ನೀಡಿ ಸಕರ್ಾರವನ್ನು ಕತ್ತಲಲ್ಲಿಟ್ಟಿದ್ದೀರಿ.  ನಿಮ್ಮ ವರದಿಗಳನ್ನು ಇಟ್ಟುಕೊಂಡು ಮುಂದಿನ ವಿಧಾನಸಭೆಯಲ್ಲಿ ನಾನು ಯಾವರೀತಿ ಮಾತನಾಡಲಿ,  ನಮಗೆ ತಪ್ಪು ಮಾಹಿತಿಗಳನ್ನು ನೀಡಿ ನಮ್ಮ ಬಾಯಲ್ಲಿ ಸುಳ್ಳು ಹೇಳಿಸುತ್ತೀರಿ. ಮನುಷ್ಯನಿಗೆ ಹೃದಯವಿರಬೇಕು ಕೇವಲ ಮನುಷ್ಯನಂತೆ ಕಂಡರೆ ಸಾಲದು. ಜನರು ನಮ್ಮನ್ನು ಆರಿಸಿ ಕಳುಹಿಸಿದ್ದು ಅವರ ಸೇವೆ ಮಾಡಲು ನೀವು ಕೇವಲ ಓದಿನಿಂದ ಅಧಿಕಾರ ಪಡೆದಿದ್ದು, ನಾವು ಜನರ ಕಷ್ಟ ನಷ್ಟಗಳನ್ನು ಕಂಡು ನೋಡಿ ತಿಳಿದು ಅವರಿಂದ ಆರಿಸಿ ಬಂದಿರುತ್ತೇವೆ. ಇದುವರೆವಿಗೂ ನಿಮಗೆ ಏನು ಖಾಯಿಲೆ ಎಂದು ದೃಢಪಡಿಸಿಕೊಳ್ಳಲು ಸಾಧ್ಯವಿಲ್ಲ 9 ಜನ ಮಲೆರಿಯಾ ಪೀಡಿತರಿದ್ದಾರೆ ಎಂದು ಹೇಳುತ್ತೀದ್ದಿರಿ, ಉಳಿದ 293ಜನರಿಗೆ ಬಂದಿರುವ ಖಾಯಿಲೆ ಯಾವುದು ಎಂಬುದರ ಬಗ್ಗೆ ಪರೀಕ್ಷೇ ನಡೆಸಿದ್ದಾರಾ ಎಂದ ಅವರು ಜನರಿಗೆ ಯಾವ ಖಾಯಿಲೆ ಎಂದು ತಿಳಿಯದೇ ಏನು ಚಿಕಿತ್ಸೆ ನೀಡುತ್ತಿದ್ದೀರಿ ಎಂದು ಪ್ರೇಶ್ನಿಸಿದರು.
ಗ್ರಾಮದ ಸ್ವಚ್ಛತೆಯ ಬಗ್ಗೆ ತಕ್ಷಣ ಕ್ರಮವಹಿಸಿ ಫಾಗಿಂಗ್ ಹಾಗೂ ರಕ್ತಪರೀಕ್ಷೆ, ನೀರಿನ ಪರೀಕ್ಷೆಯನ್ನು ತುತರ್ಾಗಿ ಮಾಡಿ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಿ ಒಂದು ತಿಂಗಳಾದರೂ ಪರವಾಗಿಲ್ಲ, ಸಮಸ್ಯೆ ಬಗೆಹರಿಸಿಯೇ ವೈದ್ಯರ ತಂಡ ಗ್ರಾಮವನ್ನು ತೊರೆಯಬೇಕು ಎಂದು ತಾಕಿತು ಮಾಡಿದರು. ಯಾವುದೇ ತಾರತಮ್ಯಮಾಡದೇ ಬಂದ ಎಲ್ಲರಿಗೂ ಇಲ್ಲವೇ ಅವರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡಬೇಕು ಸಕರ್ಾರದ ವತಿಯಿಂದ ಯಾವುದೇ ಸವಲತ್ತು ಬೇಕಾದರೂ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ರಾಜ್ಯ ಸಾಂಕ್ರಾಮಿಕ ರೋಗಗಳ ನಿಗಾವಣೆ ನಿದರ್ೇಶಕಿ ಡಾ|| ಲೋಲಾಪಾಟೀಲ್ ಇವರ ನಿದರ್ೇಶನದ ನಂತರ ಸ್ಥಳಕ್ಕೇ ಭೇಟಿ ನೀಡಿದ್ದೀರಿ,  ನಿಘಂಟನ್ನು ನೋಡಿ ಸವರ್ೇಲೆನ್ಸ್ ಎಂಬ ಪದಕ್ಕೆ ಅರ್ಥ ತಿಳಿದುಕೊಂಡು ಕೆಲಸ ಮಾಡಿ ಸಮಸ್ಯೆ ಮಾಧ್ಯಮದಲ್ಲಿ ಬಿತ್ತರಗೊಂಡ ನಂತರ ಸ್ಥಳಕ್ಕೆ ಭೇಟಿ ನೀಡಿರುವ ನೀವು ಈ ಬಗ್ಗೆ ಯಾವುದೇ ರೀತಿಯ ವರದಿಯನ್ನು ಸಂಗ್ರಹಿಸಿಲ್ಲ ಯಾಕೆ  ಇದರಿಂದ ನಿಮ್ಮ ಬೇಜಾವಾಬ್ದಾರಿ ಎಷ್ಟು ಎಂಬುದು ತಿಳಿಯುತ್ತದೆ ಎಂದರು.
ಜನಸಾಮಾನ್ಯರಿಗೆ ಇದು ಚಿಕೂನ್ಗುನ್ಯ ಎಂದು ಗೊತ್ತು, ನೀವು ಮಾತ್ರ ಪರೀಕ್ಷೆಯನ್ನೇ ನಡೆಸದೇ ಶಂಕಿತ ಖಾಯಿಲೆ ಎಂದು ಹೇಳುತ್ತಿದ್ದೀರಿ ನಿಮಗೆ ಈ ಖಾಯಿಲೆ ಬಂದಿದ್ದರೆ ತಿಳಿಯುತ್ತಿತ್ತು. ಜನರನ್ನು ನಿಮ್ಮ ಕುಟುಂಬದವರಂತೆ ಕಂಡು ಸಮಸ್ಯಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಜನರ ಋಣ ತೀರಿಸಿ ಎಂದರು.
ಊರು ಕಾಯುವವನು ಬಂದೂಬಸ್ತ್ ಮಾಡಿದ್ದರೆ ದನ ನುಗ್ಗುತ್ತಿರಲಿಲ್ಲ,  ಆಶಾ ಕಾರ್ಯಕರ್ತರಿಂದ ಹಿಡಿದು ಜಿಲ್ಲಾ ಆರೋಗ್ಯಾಧಿಕಾರಿಗಳ ವರೆಗೆ ಎಲ್ಲಾ ಹಂತದ ಅಧಿಕಾರಿಗಳೂ ವರದಿಯನ್ನು ನೀಡದೇ ದೊಡ್ಡತಪ್ಪು ಮಾಡಿದ್ದೀರಿ ಇದರ ಪರಿಣಾಮ ಮುಂದೆ ನೋಡುತ್ತಿರಿ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಗ್ರಾ,ಪಂ.ಅಧ್ಯಕ್ಷ ಚಿಕ್ಕೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ, ಡಿಎಸ್ಒ ಡಾ||ಪುರುಷೋತ್ತಮ್, ಎನ್ವಿಬಿಡಿಸಿಪಿ ಯ ಡಾ||ವೀಣಾ, ತಾಲ್ಲೂಕು ವೈದ್ಯಾಧೀಕಾರಿ ಡಾ||ಶಿವಕುಮಾರ್, ಇಒ ಕೃಷ್ಣಮೂತರ್ಿ, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಎಚ್ಚರವಹಿಸಿ : ಪುರಸಭೆ ಸಭೆಯಲ್ಲಿ ಚಚರ್ೆ
ಚಿಕ್ಕನಾಯಕನಹಳ್ಳಿ,ಜು.08: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ವಹಿಸಬೇಕಾದ ಎಚ್ಚರ, ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ನಿಗಧಿಗೆ ಸಂಬಂಧಿಸಿದ ತೀಮರ್ಾನ, ಮುಸ್ಲಿಂ ಸಮುದಾಯದವರಿಗೆ ನೀಡುತ್ತಿರುವಂತೆ ನಮಗೂ ಪುರಸಭಾ ನಿವೇಶನಗಳನ್ನು ನೀಡುವಂತೆ ವಿವಿಧ ಸಮಾಜದವರು ನೀಡಿರುವ  ಅಜರ್ಿಯ ಮೇಲೆ ಚಚರ್ೆ, ಪುರಸಭಾ ಆಸ್ತಿಗಳಿಗೆ ತಂತಿಬೇಲಿ ಹಾಕುವುದು  ಸೇರಿದಂತೆ ಒಟ್ಟು ಎಂಟು ಪ್ರಮುಖ ವಿಷಯಗಳ ಮೇಲೆ ಪುರಪಿತೃಗಳು ನಿರ್ಣಯ ಕೈಗೊಂಡಿದ್ದಾರೆ.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿನ ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ,  ಪಟ್ಟಣದಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿದ್ದು ಮುನ್ನೇಚ್ಚರಿಕೆಯಾಗಿ ಕಸ, ಕೊಳಚೆ ನೀರು ನಿಲ್ಲದಂತೆ ಸ್ವಚ್ಛತೆಯನ್ನು ಕಾಪಾಡಬೇಕು, ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಚರಂಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಮನೆಗಳ ಸುತ್ತುಮುತ್ತ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು ಹಾಗೂ ಬಿದ್ದಿರುವ ಹಳೆಮನೆಗಳಿಗೆ ಹೊಸದಾಗಿ ಕಟ್ಟಲು ಲೈಸೆನ್ಸ್ ನೀಡದ ಬಗ್ಗೆ ಸದಸ್ಯ ಸಿ.ಡಿ.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ಸದಸ್ಯೆ ರೇಣುಕಮ್ಮ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ಪಟ್ಟಣದಲ್ಲಿ ಸಮರ್ಪಕವಾಗಿ ನೀರು ಬೀಡುತ್ತಿಲ್ಲ ಎಂದರಲ್ಲದೆ  ಪಟ್ಟಣದಲ್ಲಿ ಬೋರೆವೆಲ್ಗಳು ಎಷ್ಟು ಕೆಟ್ಟು ನಿಂತಿವೆ ಎಂದು ತಿಳಿಸಿಲ್ಲ ಹಾಗೂ 577 ಪೈಪ್ ಲೆಂತ್ಗಳ ಬಗ್ಗೆ ದಾಖಲೆ ನೀಡಿಲ್ಲ ಎಂದು ಆರೋಪಿಸಿದರು. 
  ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಮಾತನಾಡಿ, ಪಟ್ಟಣದಲ್ಲಿ ಬಡವರು ನಿವೇಶನಕ್ಕಾಗಿ ಅಜರ್ಿ ಹಾಕಿದ್ದರೂ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ನಿವೇಶನಗಳನ್ನು ನೀಡಿಲ್ಲ ಎಂದ ಅವರು, ಮೊದಲು ಲೈಸೆನ್ಸ್ ಗೊಂದಲ ನಿವಾರಿಸಿ  ಹಾಗೂ ವಾಡರ್್ಗಳಲ್ಲಿ ಸರಿಯಾಗಿ ನೀರು ಸರಬರಾಜು ಮಾಡಬೇಕೆಂದು ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, ಡೆಂಗ್ಯೂ ಜ್ವರದ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ಿಸಿ ಮುನ್ನೇಚ್ಚರಿಕೆ ವಹಿಸಲಾಗುವುದು, ಇನ್ನು ಮುಂದೆ ಬೋರ್ವೆಲ್ಗಳ ವಿವರ ಹಾಗೂ ಹೊಸದಾಗಿ ಕೊರಿಸಿದ ಬೋರ್ವೆಲ್ಗೆ ಎಷ್ಟು ವೆಚ್ಚವಾಯಿತು, ಮಾಸಿಕ ಜಮಾ ಖಚರ್ುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರಲ್ಲದೆ,  ಪುರಸಭಾ ಆಡಳಿತದಲ್ಲಿ ಲೋಪ ದೋಷಗಳೂ ಆಗದಂತೆ ಎಚ್ಚರವಹಿಸುತ್ತಿದ್ದೇನೆ ಎಂದರು. ಪಟ್ಟಣದಲ್ಲಿ 61ಬೋರೆವೆಲ್ಗಳಿದ್ದು 32 ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರಲ್ಲದೆ, ಹೊಸ ಬೋರ್ವೆಲ್ಗಳಿಗೆ ಮೋಟರ್ ಅಳವಡಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಮನೆ ಕಟ್ಟಲು ಅಗತ್ಯವಿರವ  ಲೈಸೆನ್ಸ್ ಸಮಸ್ಯೆಯನ್ನು ಮೇಲಾಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಹಾಗೂ ಪ್ರತಿ ವಾಡರ್್ಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಅರಿತು ಬಗೆಹರಿಸುತ್ತೇನೆ ಎಂದರು. ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ ಏನೇ ಸಮಸ್ಯೆ ಇದ್ದರೂ ಅಧಿಕಾರಿ ಹಾಗೂ ಸದಸ್ಯರ ಮುಖಾಂತರ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷರು ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ರೂಪ, ನೇತ್ರಾವತಿ, ಧರಣಿ.ಬಿ.ಲಕ್ಕಪ್ಪ, ಪ್ರೇಮದೇವರಾಜು, ಗೀತಾರಮೇಶ್, ಸಿ.ಎಸ್.ರಮೇಶ್, ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ, ರಾಜಶೇಖರ್, ಪುರಸಭಾಮುಖ್ಯಾಧಿಕಾರಿ ಶ್ರೀಕಾಂತ್ ಉಪಸ್ಥಿತರಿದ್ದರು. 






Thursday, July 7, 2016



ಅಣೆಕಟ್ಟೆಯಲ್ಲಿ ಶಂಕಿತ ಚಿಕನ್ಗುನ್ಯಾ 
ಚಿಕ್ಕನಾಯಕನಹಳ್ಳಿ,ಜು.6: ತಾಲ್ಲೂಕಿನ ಅಣೇಕಟ್ಟೆ ಗ್ರಾಮದಲ್ಲಿ ಅಂಗನವಾಡಿ ಓದುವ ಮಗುವಿನಿಂದ ಹಿಡಿದು ಮುದುಕರವರೆಗೆ ವಿವಿಧ ವಯೋಮಾನದವರು ಕಾಯಿಲೆಗೆ ತುತ್ತಾಗಿದ್ದಾರೆ. ಊರಿಗೆ ಊರೇ ಶಂಕಿತ ಚಿಕೂನ್ಗುನ್ಯ ಕಾಯಿಲೆಯಿಂದ ಬಳಲುತ್ತಿದೆ. ಗ್ರಾಮದಲ್ಲಿ ಚಟುವಟಿಕೆಗಳು ಸ್ಥಬ್ಧವಾಗಿದ್ದು, ಜನರು ಕಾಯಿಲೆಯಿಂದ ಬಳಲುತ್ತಿದ್ದಾರೆ.
    180 ಕುಟುಂಬ,550 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಚಿಕೂನ್ಗುನ್ಯದಿಂದ ನರಳುತ್ತಿದ್ದಾರೆ. 100ಕ್ಕೂ ಹೆಚ್ಚು ಮನೆಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಕಾಯಿಲೆಗೆ ತುತ್ತಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲೂ ಯಾರೂ ಇಲ್ಲದಂತಾಗಿದೆ. ಕೆಲವರು ಪರ ಊರಿನ ನೆಂಟರ ಮನೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಪಟ್ಟಣಗಳಲ್ಲಿ ಇರುವ ಗ್ರಾಮದವರನ್ನು ಊರಿಗೆ ಬಾರದಂತೆ ದೂರವಾಣಿ ಮೂಲಕ ತಿಳಿಸುತ್ತಿದ್ದಾರೆ.
   ಗ್ರಾಮಸ್ಥ ಮಲ್ಲಿಕಾಜರ್ುನಯ್ಯ ಮಾತನಾಡಿ ಕಳೆದ ಎರಡು ತಿಂಗಳಿಂದ ಕಾಯಿಲೆ ಉಲ್ಬಣಿಸುತ್ತಿದ್ದು ಒಬ್ಬರಿಂದೊಬ್ಬರಿಗೆ ಹರಡುತ್ತಿದೆ. ಕುಪ್ಪೂರು ಹಾಗೂ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗಳಿಗೆ ಎಷ್ಟು ಬಾರಿ ಎಡತಾಕಿದ್ದರೂ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಹಲವಾರು ಬಾರಿ ರಕ್ತದ ಮಾದರಿಯನ್ನು ಆಸ್ಪತ್ರೆಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ ಹೊರತು ಯಾವ ಕಾಯಿಲೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಕೆಲವರು ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಎಂಟರಿಂದ ಹತ್ತುಸಾವಿರ ಹಣ ಖಚರ್ುಮಾಡಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗಳ ಧಾಖಲೆಗಳ ಪ್ರಕಾರ ಚಿಕೂನ್ಗುನ್ಯಾ ಎಂಬುದು ದೃಢಪಟ್ಟಿದೆ ಎಂದು ವಿವರಿಸಿದರು.
ರೋಗದಿಂದ ಬಳಲುತ್ತಿರುವ ಗ್ರಾಮದ ತಾಯವ್ವ ಮಾತನಾಡಿ, ಒಮ್ಮೆ ಜ್ವರ ಬಂದರೆ ಚೇತರಿಸಿಕೊಳ್ಳಲು ತಿಂಗಳುಗಳು ಹಿಡಿಯುತ್ತವೆ. ತೀವ್ರ ಕೀಲುನೋವು ಕಾಣಿಸಿಕೊಂಡಿದ್ದು ವಾರಾನುಗಟ್ಟಲೆ ಹಾಸಿಗೆಯ ಮೇಲೆ ಮಲಗುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಗ್ರಾಮದಲ್ಲಿ ಸಂಪೂರ್ಣವಾಗಿ ನಿಂತುಹೊದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಚಿಕಿತ್ಸಾಶಿಬಿರ ಏರ್ಪಡಿಸ ಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಮಟ್ಟದ ಅಧಿಕಾರಿಗಳ ಭೇಟಿ:ಗ್ರಾಮಸ್ಥರು ದೂರವಾಣಿ ಕರೆಮಾಡಿ ಪರಿಸ್ಥಿತಿಯನ್ನು ವಿವರಿಸಿದ ಹಿನ್ನೇಲೆಯಲ್ಲಿ ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಚೇರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ತಾಲ್ಲೂಕು ಹಂತದ ಆರೋಗ್ಯಾಧಿಕಾರಿಗಳು ಬುಧವಾರ ಗ್ರಾಮಕ್ಕೆ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜಿಲ್ಲಾ ತಂಡದಲ್ಲಿ ಹಿರಿಯ ಅಧಿಕಾರಿಗಳಾದ ರಾಮಚಂದ್ರಪ್ಪ ಹಾಗೂ ಚಂದ್ರಪ್ಪ ಇದ್ದರು.
ಕೋಟ್-1
'ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಡೆಂಗೆ ಪ್ರಕರಣಗಳು ವರದಿಯಾಗಿದ್ದರಿಂದ ಪಟ್ಟಣದ ಸಮೀಕ್ಷೆಗೆ ಬಂದಿದ್ದಾಗ ಗ್ರಾಮಸ್ಥರು ಕರೆಮಾಡಿ ಪರಿಸ್ಥಿತಿ ಬಗ್ಗೆ ವಿವರಿಸಿದರು.ಆ ಹಿನ್ನೆಲೆಯಲ್ಲಿ ಜಿಲ್ಲಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ.'
            -- ಚಂದ್ರಪ್ಪ.ಹಿರಿಯ ಅಧಿಕಾರಿ,ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಛೇರಿ,ತುಮಕೂರು.
ಕೋಟ್-2
'ಗ್ರಾಮಸ್ಥರು ಹೇಳುವ ಲಕ್ಷಣಗಳನ್ನು ಆಧರಿಸಿ ಚಿಕೂನ್ಗುನ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ, ವೈದ್ಯಕೀಯವಾಗಿ ದೃಢಪಟ್ಟಿಲ್ಲ.'
ಡಾ. ಶಿವಕುಮಾರ್. ತಾಲ್ಲೂಕು ವೈದ್ಯಾಧಿಕಾರಿ ಚಿಕ್ಕನಾಯಕನಹಳ್ಳಿ.
ಕೋಟ್-3
'2 ತಿಂಗಳಿನಿಂದ ಗ್ರಾಮದ ಜನ ಸಾಂಕ್ರಾಮಿಕ ರೂಗದಿಂದ ಬನಳಲುತ್ತಿದ್ದಾರೆ ಆದರೂ ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯ್ತಿ ತಲೆ ಕೆಡಿಸಿಕೊಳ್ಳುತ್ತಿಲ್ಲ.ಸಕರ್ಾರಿ ವೈದ್ಯರು ಕಾಯಿಲೆ ಇಂತಹದ್ದೇ ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ.'
                                -ಕುಮಾರಯ್ಯ,ಗ್ರಾಮಸ್ಥ. 

ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ 
ಚಿಕ್ಕನಾಯಕನಹಳ್ಳಿ,ಜು.07 : ತಾಲ್ಲೂಕಿನ ಅಣೇಕಟ್ಟೆ ಗ್ರಾಮದಲ್ಲಿ ಶಂಕಿತ ಚಿಕೂನ್ಗುನ್ಯ ಕಾಯಿಲೆ ಕಳೆದ ಒಂದೂವರೆ ತಿಂಗಳಿನಿಂದ ಉಲ್ಬಣಗೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳದ ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಗುರುವಾರ ಪ್ರಕಟವಾಗಿದ್ದ ವರದಿ ಆಧರಿಸಿ ಅಣೇಕಟ್ಟೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.    ಕಳೆದ ಒಂದುವರೆ ತಿಂಗಳಿನಿಂದ ನಿರಂತರ ಜ್ವರ, ಕೈ ಕಾಲು, ಕೀಲು ನೋವಿನಿಂದ ಊರಿನ ಜನ ಬಳಲುತ್ತಿದ್ದಾರೆ. ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭೇಟಿಯ ಸಂದರ್ಭದಲ್ಲೂ 70 ರಿಂದ 80 ರೋಗಿಗಳು ಕಂಡು ಬಂದಿದ್ದಾರೆ. ಕೆಲ ರೋಗಿಗಳನ್ನು ಪರ ಊರುಗಳ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂಬುದು ಗ್ರಾಮಸ್ಥರಿಂದ ತಿಳಿದು ಬಂದಿದೆ, ಆದರೂ ಪ್ರಾಥಮಿಕ ವರದಿ ತಯಾರಿಸದೆ ಏನು ಮಾಡುತ್ತಿದ್ದೀರಿ ಎಂದು ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಹಾಗೂ ಅವರ ಸಿಬ್ಬಂದಿಯನ್ನು ಪ್ರಶ್ನಿಸಿದರು. ವೈದ್ಯಾಧಿಕಾರಿ ಉತ್ತರ ನೀಡಲು ತಡಬಡಾಯಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಸ್ಥಳದಲ್ಲಿದ್ದ ತಾ.ವೈದ್ಯಾಧಿಕಾರಿಗಳಿಗೆ ಗ್ರಾಮದಲ್ಲಿ ಇರುವ 868 ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ಪೂರ್ಣ ಮಾಹಿತಿ ನೀಡಿ ಸೂಚನೆ ನೀಡಿದರು.
ಗ್ರಾಮಸ್ಥ ವಿಶ್ವನಾಥ್ ಮಾತನಾಡಿ, ಕಳೆದ ಅರವತ್ತು ದಿನಗಳಿಂದ ಕಾಯಿಲೆ ನಿರಂತರವಾಗಿ ವ್ಯಾಪಿಸುತ್ತಿದೆ. ಈಗಾಗಲೆ ರೋಗ ಹರಡುವ ಸೊಳ್ಳೆಗಳ ಜೀವನ ಚಕ್ರ 2ನೇ ಸುತ್ತಿಗೆ ಪ್ರವೇಶ ಆಗಿದ್ದು ಮುಂದಿನ 20 ದಿನಗಳಲ್ಲಿ ಕಾಯಿಲೆಯ ತೀವ್ರತೆ ಹೆಚ್ಚಾಗಲಿದ್ದು, ಸುತ್ತಮುತ್ತಲಿನ ಹಳ್ಳಿಗಳಿಗೆ ಹಬ್ಬುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ತೀವ್ರತೆಯನ್ನು ಮನವರಿಕೆ ಮಾಡಿಕೊಟ್ಟರು.
   ತಕ್ಷಣ ಕ್ರಮಕ್ಕೆ ಮುಂದಾಗಿ; ನಾಳೆಯಿಂದ ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್ ಪ್ರಾರಂಭಿಸಿ. ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ಹಾಕಿ, ಊರಿನಲ್ಲಿರುವ ಸಿಸ್ಟನ್ಗಳು ಹಾಗೂ ಚರಂಡಿ ಸ್ವಚ್ಛಗೊಳಿಸಿ, ಸ್ವಚ್ಛತೆ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸಲು ಆದೇಶ ಹೊರಡಿಸಿ ಎಂದು ತಹಶಿಲ್ದಾರ್ ಆರ್.ಗಂಗೇಶ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು,  ಸಮಸ್ಯೆ ಇಷ್ಟು ತೀವ್ರವಾಗಿದ್ದರೂ ಇಲಾಖೆ ಸಮಸ್ಯೆಯನ್ನು ಸಕರ್ಾರದ ಗಮನಕ್ಕೆ ತಂದಿಲ್ಲ, ಎಲ್ಲವನ್ನೂ ಕುಲಂಕುಶವಾಗಿ ಪರಿಶೀಲಿಸಲಾಗುವುದು. ಹೇಳಿದರು.
    ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭ: ಸೋಕು ಪೀಡಿತ ಗ್ರಾಮ ಅಣೇಕಟ್ಟೆಯಲ್ಲಿ ಗುರುವಾರದಿಂದಲೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭವಾಗಿದ್ದು ವೈದ್ಯರ ದಂಡು ಗ್ರಾಮದಲ್ಲಿ ಬೀಡು ಬಿಟ್ಟಿದೆ.
ಗೈರು ಹಾಜರಿ: ಗ್ರಾಮದ ಆಶಾ ಕಾರ್ಯಕತರ್ೆ, ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಗೈರು ಹಾಜರಾಗಿದ್ದಕ್ಕೆ ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು.  
ಜಿಲ್ಲಾಧಿಕಾರಿ ಭೇಟಿ ವೇಳೆ ಡಿ.ಎಚ್.ಓ. ಡಾ.ಎನ್.ಶಶಿಕಲಾ,  ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ, ತಾಲ್ಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ಆರ್.ಗಂಗೇಶ್, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು. 

ರಂಜಾನ್ ಆಚರಣೆಗೆ ಸಾಮೂಹಿಕ ಪ್ರಾರ್ಥನೆ
 
ಚಿಕ್ಕನಾಯಕನಹಳ್ಳಿ,ಜು.07 : ರಂಜಾನ್ ಹಬ್ಬ ಆಚರಣೆಯಿಂದ ಬಡವ ಬಲ್ಲಿದ ಎಂಬ ಅಂತರ ಅಳಿದು ಪರಸ್ಪರ ಸ್ನೇಹದ ಬೆಸುಗೆಯಾಗಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ, ಮುಸ್ಲಿಂ ಜನಾಂಗದ ಪವಿತ್ರ ಕುರಾನ್ ಅವತರಿಸಿದ ಮಾಸವಿದು. ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಹೆಚ್ಚು ಸತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳುತ್ತಾರೆ,  ದಾನಧರ್ಮದಂತಹ ಪುಣ್ಯ ಆಚರಣೆಯಲ್ಲಿ ತೊಡಗುತ್ತಾರೆ, ಧರ್ಮಕ್ಕೆ ಅನುಗುಣವಾಗಿ ದೇವರನ್ನು ಪ್ರಾಥರ್ಿಸುತ್ತಾರೆ ಎಂದರು.
ಪಟ್ಟಣದಲ್ಲಿರುವ ಐದು ಮಸೀದಿಗಳಾದ ಜಾಮಿಯಾ, ನೂರಾನಿ, ಮದೀನ, ಬಲಾಲ, ಅಸ್ಸಾ ಮಸೀದಿಗಳಿಗೆ ತೆರಳಿ ಅಲ್ಲಾನ ಅನುಯಾಯಿಗಳು ಅಲ್ಲಿ ಪ್ರಾರ್ಥನೆ ನೆರವೇರಿಸಿದರು. ನಂತರ ಆಯಾ ಮಸೀದಿಗಳಿಂದ ಹೊರಟ ಸಮೂಹ, ಒಟ್ಟಾಗಿ ಈದ್ಗ ಮೈದಾನಕ್ಕೆ ತೆರಳಿದರು. ಒಟ್ಟಾಗಿ ಸೇರಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಈದ್ ಮುಬಾರಕ್ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುತುವಲ್ಲಿಗಳಾದ ಮಹಬೂಬ್ ಅಲಂ,  ಜಹಿರ್ಅಹಮದ್, ಅನ್ಸರ್ಪಾಷ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಸದಸ್ಯರಾದ  ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ಸಿ.ಎಂ.ರಂಗಸ್ವಾಮಿ, ಮಹಮದ್ಖಲಂದರ್, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಸದಸ್ಯ ಸಿ.ಎಸ್.ನಟರಾಜು, ಪುರಸಭಾ ಆಶ್ರಯ ಸಮಿತಿ ಸದಸ್ಯರಾದ ಸಿ.ಬಸವರಾಜು ಬಾಬುಸಾಹೇಬ್, ಮತ್ತಿತರರು ಉಪಸ್ಥಿತರಿದ್ದರು.

                     ಪರಿಸರ ಉಳಿಸಿ : ಶಾಸಕ ಸಿ.ಬಿ.ಸುರೇಶ್ಬಾಬು 
ಚಿಕ್ಕನಾಯಕನಹಳ್ಳಿ,ಜು.07 : ಪರಿಸರದ ವೈಪರಿತ್ಯ ತಡೆಯಲು ಹಾಗೂ ಭೂಮಿಯ ಮೇಲೆ ಹಸಿರು ಹೊದಿಕೆ ಹೆಚ್ಚಿಸಲು ಜನತೆ ತಮ್ಮ ತೋಟ ಹಾಗೂ ಜಮೀನುಗಳಲ್ಲಿ ಸಸಿಗಳನ್ನು ನೆಡುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸಸಿ ನೆಡುವ ಮೂಲಕ ಕೋಟಿ ವೃಕ್ಷ ಅಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಿಡಮರಗಳ ನಾಶದಿಂದ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಮರಗಳನ್ನು ಕಡಿಯುವುದರಿಂದ ಮಳೆ ಕಡಿಮೆಯಾಗುತ್ತಿದೆ ಆದ್ದರಿಂದ ಜನತೆ ಸಸಿಗಳನ್ನು ಹಾಕಿ ಪೋಷಿಸಿಕೊಂಡು ಹೋಗುವಂತೆ ಹೇಳಿದರು.
ವಲಯ ಅರಣ್ಯಾಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಪರಿಸರ ಸಮತೋಲನದಿಂದ ಕೂಡಿರಬೇಕಾದರೆ ಭೂಮಿಯ ಮೇಲೆ ಶೇ.33% ಅರಣ್ಯವಿರಬೇಕು, ಮನುಷ್ಯ ವಿವಿಧ ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ ಈಗ ಶೇ21%  ರಷ್ಟು ಮಾತ್ರ ಅರಣ್ಯವಿದ್ದು ಇದನ್ನು ಹೆಚ್ಚಿಸಲು ಶೇ 33%ರಷ್ಟು ಅರಣ್ಯ ಬೆಳೆಸಲು ಕೋಟಿ ವೃಕ್ಷ ಅಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಒಂದು ಮರ ತನ್ನ ಜೀವಿತಾವಧಿಯಲ್ಲಿ ಪರಿಸರಕ್ಕೆ 15.70 ಲಕ್ಷದಷ್ಟು ಬೆಲೆಯ ಉತ್ಪನ್ನಗಳನ್ನು ಪರಿಸರಕ್ಕೆ ನೀಡುತ್ತದೆ ಅದರೆ ಮನುಷ್ಯ ಕೆಲವೇ ಸಾವಿರಕ್ಕೆ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ ಎಂದರು. ಕೋಟಿ ವೃಕ್ಷ ಅಂದೋಲನದ ಅಡಿಯಲ್ಲಿ ರೈತರಿಗೆ ಅರಣ್ಯ ಇಲಾಖಾ ವತಿಯಿಂದ ರಿಯಾಯ್ತಿ ದರದಲ್ಲಿ ಸಸಿಗಳನ್ನು ನೀಡುತ್ತಿದ್ದು ರೈತರು ತೋಟಗಳಲ್ಲಿ ಹಾಕಿಸಿ ಬೆಳೆಸಿದರೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಒಂದು ಸಸಿಗೆ ಪ್ರಥಮ ವರ್ಷ ಹತ್ತು ರೂಪಾಯಿ ಎರಡನೇ ವರ್ಷ 15ರೂ 3 ನೇ ವರ್ಷ 20ರೂ ಸಹಾಯ ಧನ ನೀಡಲಾಗುತ್ತಿದೆ ಇದರ ಉಪಯೋಗವನ್ನು ರೈತರು ಪಡೆಯುವಂತೆ ಮನವಿ ಮಾಡಿದರು.
ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಪುರಸಭಾ ಸದಸ್ಯರಾದ ಎಮ್.ಕೆ.ರವಿಚಂದ್ರ, ಸಿ.ಡಿ ಚಂದ್ರಶೇಖರ್, ಹೆಚ್,ಬಿ,ಪ್ರಕಾಶ್, ಅಶೋಕ್, ಸಿ.ಎಸ್.ರಮೇಶ್, ರಾಜಶೇಖರ್, ಮಹಮದ್ ಖಲಂದರ್, ಸಿ.ಕೆ.ಕೃಷ್ಣಮೂತರ್ಿ, ಜೆ.ಡಿ.ಎಸ್ ಮುಖಂಡ ಸಿ.ಎಸ್.ನಟರಾಜ್ ಉಪಸ್ಥಿತರಿದ್ದರು.



Wednesday, July 6, 2016



ವನಮಹೋತ್ಸವ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜು.06 : ಪಟ್ಟಣ, ಗ್ರಾಮ, ಹಳ್ಳಿಗಳಲ್ಲಿ ಮತ್ತಿತರ ರಸ್ತೆ ಬದಿ, ಊರಿನೊಳಗೆ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸಿದರೆ ನೆರಳಿನ ಜೊತೆಗೆ ಉತ್ತಮವಾದ ಮಳೆ, ಬೆಳೆ ಲಭಿಸಲಿದೆ ಎಂದು ತಾ.ಪಂ.ಸದಸ್ಯೆ ಶೈಲಾಶಶಿಧರ್ ಹೇಳಿದರು.
ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರವಿದ್ದರೆ ಉತ್ತಮವಾದ ಗಾಳಿ, ನೀರು, ಬೆಳಕು ದೊರಕುತ್ತದೆ, ಗಿಡ-ಮರಗಳನ್ನು ಬೆಳೆಸುವುದು ಇಲಾಖೆಯ ಜವಬ್ದಾರಿ ಮಾತ್ರವಲ್ಲ ಜಗತ್ತಿನ ಪ್ರತಿಯೊಬ್ಬರ ಕರ್ತವ್ಯ, ಶಾಲೆಗಳಲ್ಲಿ ಈಗಿನಿಂದಲೇ ಸಸಿಗಳನ್ನು ಬೆಳೆಸುವ ಅದರಿಂದ ಆಗುವ ಅನುಕೂಲಗಳು ತಿಳಿದರೆ ಪರಿಸರ ಉಳಿಸಲು ಅವರಲ್ಲಿ ಉತ್ತಮ ಪ್ರೇರೇಪಣೆ ದೊರಕಿದಂತಾಗುತ್ತದೆ ಎಂದ ಅವರು, ರೈತ ದೇಶದ ಬೆನ್ನೆಲುಬು ಅವರಿಲ್ಲದೆ ದೇಶಕ್ಕೆ ಅನ್ನ ನೀಡುವವೇ ಇಲ್ಲವಾಗುತ್ತಾರೆ, ರೈತರು ಒಂದೇ ಬೆಳೆ ಬೆಳೆಯುವುದರ ಬದಲು ಮಿಶ್ರ ಬೆಳೆ ಬೆಳೆಯಿರಿ, ಈಗಾಗಲೇ ತೆಂಗಿನ ಮರಗಳಿಗೆ ನುಸಿರೋಗ, ರಸ ಸೋರುವ ರೋಗ ಬರುತ್ತಿದೆ ಈ ಬಗ್ಗೆ ರೈತರು ವಿಜ್ಞಾನಿಗಳು, ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಮರಗಳನ್ನು ಉಳಿಸಿಕೊಳ್ಳಲು ಮುಂದಾಗಿ ಎಂದು ಸಲಹೆ ನೀಡಿದರು.
ಅರಣ್ಯ ಇಲಾಖಾಧಿಕಾರಿ ತಾರಕೇಶ್ವರಿ ಮಾತನಾಡಿ, ಜೀವ ಸಂಕುಲಕ್ಕೆ ಆಸರೆಯಾಗಿರುವ ಭೂಮಿ ಮಾನವನ ದುರಾಸೆಯಿಂದ ಜೈವಿಕ ಹಾಗೂ ಅಜೈವಿಕ ಘಟಕಗಳಲ್ಲಿ ಸಮತೋಲನೆ ತಪ್ಪಿ ಹೋಗುತ್ತಿದೆ, ಪರಿಸರ ವಿನಾಶದ ಅಂಚಿನಲ್ಲಿ ತಲುಪುತ್ತಿದೆ ರೈತರ ಬೆನ್ನೆಲುಬು ಎರೆಹುಳು ಮಣ್ಣಿನಲ್ಲಿ ಕಣ್ಮರೆಯಾಗಿದ್ದು ನಾವೆಲ್ಲರೂ ಜಾಗೃತರಾಗಿ ಅದಕ್ಕೆ ಗಿಡಮರಗಳ ಬೆಳೆಸಿ, ಸಂರಕ್ಷಿಸಿ ಹೊಸ ಕಾಡುಗಳನ್ನು ನಿಮರ್ಾಣ ಮಾಡಿ ನೀರು, ಗಾಳಿ, ಆಹಾರವನ್ನು ಶುದ್ದೀಕರಿಸಬೇಕು ಎಂದರು.
ಕಸಾಪ ಅಧ್ಯಕ್ಷೆ ಹಾಗೂ ಪರಿಸರ ತಜ್ಞೆ ಎನ್.ಇಂದಿರಮ್ಮ, ಗ್ರಾ.ಪಂ.ಅಧ್ಯಕ್ಷೆ ಲೋಕಮ್ಮ, ಮುಖ್ಯಶಿಕ್ಷಕ ಮೂಡಲಯ್ಯ ಮತ್ತಿತರರು ಭಾಗವಹಿಸಿದ್ದರು.

ಸಾಸಲು ಗ್ರಾಮದಲ್ಲಿ ನೂತನ ರೈತ ಸಂಘ
 
ಚಿಕ್ಕನಾಯಕನಹಳ್ಳಿ,ಜು.07 : ಪ್ರಧಾನಮಂತ್ರಿ ನರೇಂದ್ರಮೋದಿಯವರು ವಿದೇಶಗಳಿಂದ ಬಂಡವಾಳ ಹೂಡಿಕೆಗೆ ಒತ್ತು ಕೊಡುತ್ತಾರೆಯೇ ಹೊರತು ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದಶರ್ಿ ಕೆಂಕೆರೆ ಸತೀಶ್ ಆರೋಪಿಸಿದರು.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನೂತನ ರೈತ ಸಂಘದ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸ್ವತಂತ್ರ್ಯ ಬಂದಾಗಿನಿಂದಲೂ ಎಲ್ಲಾ ಸಕರ್ಾರಗಳು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾರೆಯೇ ಹೊರತು ರೈತರ ಬಗ್ಗೆ ಕಾಳಜಿ ಇಲ್ಲ, ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ರೈತರು ವಕ್ಕಲುತನದ ಬೆಲೆ, ಕೂಲಿನಾಲಿಗಳು ಹೆಚ್ಚಾದರೂ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ಸಿದ್ದರಾಮಯ್ಯನವರ ಸಕರ್ಾರ 3ವರ್ಷ ಕಳೆದರೂ ಸ್ವತಹ ಮುಖ್ಯಮಂತ್ರಿಗಳು ರೈತರಾದರೂ ರೈತರ ಬಗ್ಗೆ ಕಾಳಜಿ ಇಲ್ಲ, ಹೇಮಾವತಿ ನಾಲೆಯಿಂದ ತಾಲ್ಲೂಕಿಗೆ ನೀರು ಹರಿಸಲು 102 ಕೋಟಿ ರೂಪಾಯಿಗಳು ಬಿಡುಗಡೆಯಾದರೂ ಅಧಿಕಾರಿಗಳ, ರಾಜಕಾರಣಿಗಳ ನಿರ್ಲಕ್ಷದಿಂದ ಕಾಮಗಾರಿ ಕುಂಠಿತವಾಗಿದೆ ಎಂದರಲ್ಲದೆ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ, ಇದರ ವಿರುದ್ದ ರಾಜ್ಯಾದ್ಯಂತ ಬಂದ್ ಮಾಡಿದರೂ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಷಾಧಿಸಿದರು.
ಜಿಲ್ಲಾಧ್ಯಕ್ಷ ತಿಮ್ಲಾಪುರ ಶಂಕರಪ್ಪ ಮಾತನಾಡಿ, ಮಳೆ ಇಲ್ಲ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ, ಹೇಮಾವತಿ ನಾಲಾ ಕಾಮಗಾರಿ ಕುಂಠಿತಗೊಂಡಿದ್ದು ಇದರಿಂದ ತಾಲ್ಲೂಕಿನ ಜನ ನಗರಗಳಿಗೆ ಗುಳೇ ಹೋಗುತ್ತಿದ್ದಾರೆ ಆದ್ದರಿಂದ ಸಕರ್ಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗಧಿಪಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಲೋಕಣ್ಣ ಬಂಡಿಮನೆ, ದಭ್ಭೆಘಟ್ಟ ಜಗದಿಶ್,  ಮಲ್ಲಿಕಾಜರ್ುನಯ್ಯ, ಹೊನ್ನೇಬಾಗಗಿ ಉಮೇಶ್, ಸಾಸಲು ರೈತ ಸಂಘದ ಅಧ್ಯಕ್ಷ ಮರುಳಸ್ವಾಮಿ, ಪ್ರಕಾಶ್, ಕಾರ್ಯದಶರ್ಿ ಶಿವಾನಂದಯ್ಯ, ನಾಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಶನಿವಾರ ರೋಟರಿ ಕ್ಲಬ್ ಕಾರ್ಯಕ್ರಮ
  
ಚಿಕ್ಕನಾಯಕನಹಳ್ಳಿ,ಜು.06 : 41ನೇ ವರ್ಷದ ರೋಟರಿ ಸಂಭ್ರಮ ಮತ್ತು 41ನೇ ಪದವಿ ಪ್ರಧಾನ ಸಮಾರಂಭವನ್ನು ಜುಲೈ 9ರ ಶನಿವಾರ ಸಂಜೆ 6.40ಕ್ಕೆ ನಡೆಯಲಿದೆ ಎಂದು ನೂತನ ಅಧ್ಯಕ್ಷ  ದೇವರಾಜು(ಅನು) ತಿಳಿಸಿದರು.
ಪಟ್ಟಣದ ರೋಟರಿ ಕನ್ವೆಷನ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಚಿತ್ರದುರ್ಗದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ 3190ರ ಗವರ್ನರ್ ಪಿಡಿಜಿ ಎಂ.ಎನ್.ಸುರೇಶ್ ಪದವಿ ಪ್ರಧಾನ, ಹೊಸ ಸದಸ್ಯರ ಸೇರ್ಪಡೆ ಮಾಡಲಿದ್ದಾರೆ. ಹಿರೇಮಗಳೂರು ಕಣ್ಣನ್ ಶುಭಾಂಸನೆ ನುಡಿಯಲಿದ್ದು ಜಿಲ್ಲಾ 3190ರ ಜೋನಲ್ ಗವರ್ನರ್ ಹೆಚ್.ವಿ.ವೀರೇಶ್ ನಾಯಕ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ರೊ.ಜಿಲ್ಲಾ ಯೂತ್ ಸವರ್ಿಸ್ ಡೈರೆಕ್ಟರ್ ಸಿ.ಎಸ್.ಪ್ರದೀಪ್ಕುಮಾರ್, ಅಸಿಸ್ಟೆಂಟ್ ಗವರ್ನರ್ ಎ.ನಟರಾಜು ವಿವಿಧ ಸೇವಾಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
ರೋಟರಿ ಜಿಲ್ಲಾ 9190ರ ಹೆಚ್.ಆರ್.ಶ್ರೀನಾಥ್ಬಾಬು ಎಂ.ವಿ.ನಾಗರಾಜ್ರಾವ್ ಅವರ ಆತಂಕದ ಕ್ಷಣಗಳು ಕಾದಂಬರಿ ಬಿಡುಗಡೆ ಮಾಡಲಿದ್ದು ರೋಟರಿ ಎಜುಕೇಷನ್ ಟ್ರಸ್ಟ್ನ ಡಾ.ಸಿ.ಎಂ.ಸುರೇಶ್ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ 2015-16ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಪಟ್ಟಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಹಾಗೂ ತಾಲ್ಲೂಕಿನಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರೊಟೇರಿಯನ್ಗಳಾದ ಕೆ.ಪ್ರಕಾಶ್, ಎಂ.ವಿ.ನಾಗರಾಜ್ರಾವ್, ಪ್ರಸನ್ನ, ಜಯದೇವ್, ಎಮ್.ಎಲ್.ಮಲ್ಲಿಕಾಜರ್ುನಯ್ಯ, ಮಿಲ್ಟ್ರೀಶಿವಣ್ಣ, ದಾನಪ್ಪ, ಕೆ.ಆರ್.ಚನ್ನಬಸವಯ್ಯ, ಉಪಸ್ಥಿತರಿರುವರು.


ಚಿ.ನಾ.ಹಳ್ಳಿ: ಜು.15 ರಿಂದ 17 ರವರೆಗೆ  ಏಕಾದಶಿ ಜಾತ್ರೆಯೊಂದಿಗೆ  ಸಾಂಸ್ಕೃತಿಕ ಹಬ್ಬ.
ಚಿಕ್ಕನಾಯಕನಹಳ್ಳಿ,ಜು.06 : ಪಟ್ಟಣದಲ್ಲಿ ಆಷಾಡ ಮಾಸದಲ್ಲಿ ನಡೆಯುವ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜುಲೈ 5ರಂದು ಪಟ ಹಾಕುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಇದೇ 23ರವರೆಗೆ ವಿವಿಧ ಧಾಮರ್ಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಆಷಾಡ ಮಾಸದಲ್ಲಿ ನಡೆಯುವ ಹಳೆಯೂರು ಆಂಜನೇಯಸ್ವಾಮಿ ಜಾತ್ರೆಗೆ ನೂತನ ವಧುವರರು ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಸಿದ್ದಿ ಪಡೆದಿರುವ ಆಂಜನೇಯಸ್ವಾಮಿ ಮಾತ್ರೆಗೆ ಜುಲೈ 5ರಿಂದ ಪ್ರಾರಂಭವಾಗುವ ಉತ್ಸವ ರಾತ್ರಿ ಹಾಗೂ ಬೆಳಗ್ಗೆ ನಡೆಯಲಿದೆ. 15ರಂದು ಕೆಂಚರಾಯಸ್ವಾಮಿ ಮಣೇವು, ಬಿರುದಾವಳಿ ಲಾಂಚನಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ, 16ರಂದು ಬ್ರಹ್ಮರಥೋತ್ಸವ, 17ರಂದು ರಥೋತ್ಸವ ಬೆಳಗ್ಗೆ ಹಾಗೂ ಸಂಜೆ ಜೋಗಿಹಳ್ಳಿ ಭಕ್ತ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ 16ರಂದು ನವದಂಪತಿಗಳ ಸ್ಪಧರ್ೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ನಡೆಯಲಿದ್ದು,  ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು ದಿವ್ಯಜ್ಯೋತಿ ಕಲಾ ಸಂಘದವರು ಹಮ್ಮಿಕೊಂಡಿದ್ದಾರೆ.  ಅನ್ನಪೂಣೇಶ್ವರಿ ಕಲಾಸಂಘದ ಹಾಗೂ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗದ ವತಿಯಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಕನ್ನಡ ಸಂಘದ ವೇದಿಕೆಯಲ್ಲಿ ನಡಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಜೇತ ತಂಡಗಳಿಗೆ ಸೀನಿಯರ್ ಗ್ರೂಪ್ ಪ್ರಥಮ ಬಹುಮಾನ 70ಸಾವಿರ, ದ್ವಿತಿಯ ಬಹುಮಾನ 30ಸಾವಿರ, ತೃತಿಯ ಬಹುಮಾನ 15ಸಾವಿರ ರೂಪಾಯಿಗಳು. ಪ್ರವೇಶ ದರ 1500ರೂ ಜೂನಿಯರ್ ಗ್ರೂಪ್. ; ಪ್ರಥಮ ಬಹುಮಾನ 20.000 ಸಾವಿರ ರೂಪಾಯಿಗಳು ದ್ವೀತೀಯ ಬಹುಮಾನ 10.000ಸಾವಿರ ರೂಪಾಯಿ ತ್ಥತೀಯ 5.000ಸಾವಿರ ರೂಪಾಯಿ ಪ್ರವೇಶ ದರ 500 ರೂಪಾಯಿ,ಜೂನಿಯರ್ ಸೋಲೋ: ಪ್ರಥಮ ಬಹುಮಾನ 5.000ರೂ, ದ್ವೀತೀಯ 3.000ರೂ, ತೃತೀಯ ಬಹುಮಾನ 2.000ರೂ ಪ್ರವೇಶ ದರ 200ರೂಪಾಯಿಗಳು, ಸೀನಿಯರ್ ಸೋಲೋ; ಪ್ರಥಮ ಬಹುಮಾನ 5.000ರೂ, ದ್ವೀತೀಯ 3000 ರೂ, ತೃತೀಯ ಬಹುಮಾನ 2000ರೂಪಾಯಿಗಳು ಮಧ್ಯಾಹ್ನ 3 ಗಂಟೆಗೆ ಕನ್ನಡ ಸಂಘದ ಸಾಂಸ್ಕೃತಿಕ ವೇದಿಕೆಯಿಂದ ನಗೆ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕುಂಚಾಕುರ ಕಲಾ ಸಂಘದ ವತಿಯಿಂದ ಕಲ್ಪವೃಕ್ಷ ಕೋ ಆಪರೇಟಿವ್ ಸಭಾಂಗಣದಲ್ಲಿ ಸಮೂಹ ಚಿತ್ರಕಲಾ ಹಾಗೂ ಚಿತ್ರಕಲಾ ಪ್ರದರ್ಶನ ಮಾರಾಟ 16 ಮತ್ತು 17 ರಂದು ನಡೆಯಲಿದೆ. ಜಾತ್ರಯ ಪ್ರಯುಕ್ತ ನಗೆಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.  17ರಂದು ತಾಲ್ಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.




.



Tuesday, July 5, 2016


ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮದಿನೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.05 : ಗ್ರಾಮ ಭಾರತದಲ್ಲಿ ಜಾತಿ ಜಾಡ್ಯ ಇನ್ನೂ ಜೀವಂತವಾಗಿದೆ. ಹಿರಿಯರು ಮಕ್ಕಳಲ್ಲಿ ಮಕ್ಕಳಲ್ಲಿ ಜಾತಿ ತಾರತಮ್ಯದ ಭಾವನೆಗಳು ಬೆಳೆಯುಲು ಕಾರಣರಾಗುತ್ತಿದ್ದಾರೆ ಎಂದು ಪ್ರೊ.ಬಿ.ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ದೊರೈರಾಜು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಮಂಗಳವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮದಿನೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರ ಜೊತೆಯಲ್ಲಿ ಯುವಕರು, ಶಿಕ್ಷಕರು, ಪ್ರಜ್ಞಾವಂತರು ಒಟ್ಟಾಗಿ ಜಾತಿ ವ್ಯವಸ್ಥೆಯನ್ನು ಬದಲಿಸಲು ಪ್ರಯತ್ನಿಸಿದರು ಎಂದರು.
ದಲಿತ ಸಂಘರ್ಷ ಸಮಿತಿ ಒಂದು ಜಾತಿಗೆ ಸೀಮಿತವಾದುದಲ್ಲ. ಬಡವರ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡಲು ಇರುವ ವೇದಿಕೆ ಎಂದರು.
ವಿದ್ಯಾಥರ್ಿಗಳು ಪಠ್ಯ ಪುಸ್ತಕದ ಜೊತೆ ವಿಜ್ಞಾನ, ಸಾಹಿತ್ಯ, ಓದಿಕೊಂಡು ಜಾತೀಯತೆ ಹಾಗೂ ಅಸ್ಪೃಶ್ಯತೆ ವಿರುದ್ದ ಹೋರಾಡಲು ಮುಂದಾಗಬೇಕು.ಮಾನವೀಯ ಸಮಾಜ ಕಟ್ಟುವ ಕೆಲಸ ವಿದ್ಯಾಥರ್ಿಗಳಿಂದ ಆಗಬೇಕು ಎಂದರು.
ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ನವರು ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದವರಲ್ಲೊಬ್ಬರು ಅವರ ಆಶಾಭಾವನೆಯನ್ನು ವಿದ್ಯಾಥರ್ಿಗಳು ಪ್ರೊ.ಬಿ.ಕೃಷ್ಣಪ್ಪ ಕೆಚ್ಚು ಹಾಗೂ ಸೂಕ್ಷ್ಮ ಪ್ರಜೆಯನ್ನು ಮೈಗೂಡಿಸಿಕೊಳ್ಳುವುದು ಅವಶ್ಯಕ ಎಂದರು.
ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರ ಸಂಘಟನಾ ಚಾತುರ್ಯ ಬಡವರ, ದೌರ್ಜನ್ಯಕ್ಕೊಳಗಾದವರ ಪರವಾಗಿ ಕೆಲಸ ಮಾಡಲು ಹಲವರಿಗೆ ಸ್ಪೂತರ್ಿಯಾಯಿತು. ದಲಿತ ಸಂಘರ್ಷ ಸಮಿತಿಗೆ ಕೃಷ್ಣಪ್ಪನವರ ನಂತರ ಸರಿಯಾದ ನಾಯಕತ್ವ ಇಲ್ಲವಾಗಿದೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ,ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರು, ಅಂಬೇಡ್ಕರ್ರವರು ತಂದಂತಹ ಕಾಯಿದೆಗಳನ್ನು ಸಕರ್ಾರ ಯತಾವತ್ತಾಗಿ ಜಾರಿಗೆ ತರಲು ಶ್ರಮಿಸಿದರು.ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟ ಜಗಜೀವನ್ರಾಂ ಅವರಿಗೆ ಸ್ಪೂತರ್ಿಯಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನೋತ್ಸವದ ಅಂಗವಾಗಿ 78 ಬಡ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ  ವಿತರಿಸಲಾಯಿತು. ಕಂಟಲಗೆರೆ ಗುರುಪ್ರಸಾದ್ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ, ಅಂಬೇಡ್ಕರ್ ಪ್ರೌಢಶಾಲೆಯ ಕಾರ್ಯದಶರ್ಿ ಗೋ.ನಿ.ವಸಂತ್ಕುಮಾರ್, ದಸಂಸ ಸಂಚಾಲಕ ಸಿ.ಎಸ್.ಲಿಂಗದೇವರು, ಆರ್.ಗೋವಿಂದಯ್ಯ, ಬೇವಿನಹಳ್ಳಿ ಚನ್ನಬಸವಯ್ಯ, ಬಿ.ಇ.ಓ ಕೃಷ್ಣಮೂತರ್ಿ, ತಾ.ಪಂ.ಇ.ಓ ಕೃಷ್ಣಮೂತರ್ಿ, ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


 ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವ
ಚಿಕ್ಕನಾಯಕನಹಳ್ಳಿ,ಜು.05  : ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವನ್ನಪಿರುವ ಘಟನೆ ತಾಲ್ಲೂಕಿನ  ಶೆಟ್ಟಿಕೆರೆ ಹೋಬಳಿ ಚುಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
 ಮಧುಸೂದನ್ (49) ಮೃತ ದುದರ್ೈವಿ. ಮಂಗಳವಾರ ಬೆಳಗ್ಗೆ 7.45ರ ಸಮಯದಲ್ಲಿ ಕೆ.ಎ35 ಟಿ 5833 ಟ್ರ್ಯಾಕ್ಟರ್ನ ಮುಂಭಾಗದ ಚಕ್ರ ಪಂಚರ್ ಆಗಿದ್ದ ಪರಿಣಾಮ ಪಂಚರ್ ಹಾಕಿಸಲು ಚಿಕ್ಕನಾಯಕನಹಳ್ಳಿಗೆ ತರುವಾಗ ವಾಹನದ ಮುಂಭಾಗದ ಚಕ್ರ ನಿಯಂತ್ರಣಕ್ಕೆ ಇರಲಿ ಎಂದು ಘಟ್ಟ ಕಟ್ಟಿಕೊಂಡು ಬರುವಾಗ ಟ್ರ್ಯಾಕ್ಟರ್ನ ಇಂಜನ್ ಇರುವ ಮುಂಬದಿಯ ಚಕ್ರದ ಅಕ್ಸಲ್  ತುಂಡಾಗಿದೆ. ಈ ಸಂದರ್ಭದಲ್ಲಿ ಕೆರೆಯ ಏರಿಯ ಮೇಲೆ ಬರುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣವಿಲ್ಲದೆ ಆಯತಪ್ಪಿ ಕೆರೆಯ ಕೋಡಿ ಭಾಗದ ಅಂಗಳಕ್ಕೆ ಮುಗುಚಿ ಮದುಸೂದನ್ ಮೇಲೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಚಿ.ನಾ.ಹಳ್ಳಿ ಠಾಣೆಯ ಪಿ.ಎಸ್.ಐ ವಿಜಯ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವಲ್ಪ ಮಳೆಬಿದ್ದರೂ ಸಂಚಾರ ಅಸಾಧ್ಯ



ಚಿಕ್ಕನಾಯಕನಹಳ್ಳಿ,ಜು.05 : ತಾಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳೂ ಹದಗೆಟ್ಟಿದ್ದು ಸ್ವಲ್ಪ ಮಳೆಬಿದ್ದರೂ ಸಂಚಾರ ಅಸಾಧ್ಯ ಎನ್ನುವಂತಾಗಿದೆ.
    1000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಛೇರಿ, ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ ಹಾಗೂ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಾರ್ಯನಿರ್ವಹಿಸುತ್ತಿವೆ . ಮುಖ್ಯ ರಸ್ತೆಯಿಂದ 7 ಕಿಮೀ ದೂರದಲ್ಲಿ ಇರುವ ಗ್ರಾಮದಲ್ಲಿ ಇಷ್ಟೆಲ್ಲಾ ಸವಲತ್ತುಗಳು ಇದ್ದರೂ ಸಂಪರ್ಕ ರಸ್ತೆ ಸರಿಯಿಲ್ಲದೆ ಗ್ರಾಮಸ್ಥರು, ವಿದ್ಯಾಥರ್ಿಗಳು ಪರದಾಡುವಂತಾಗಿದೆ.   ಊರಿಗೆ ಸಂಪರ್ಕ ಕಲ್ಪಿಸಲು ಎರಡು ರಸ್ತೆಗಳು ಇದ್ದೂ ಇರಡೂ ರಸ್ತೆಗಳೂ ಡಾಂಬರ್ ಕಂಡಿಲ್ಲ. ಮಣ್ಣಿನ ರಸ್ತೆಗಳ ತುಂಬ ಗುಂಡಿಗಳು ಇದ್ದು ಸ್ವಲ್ಪ ಮಳೆ ಬಂದರೂ ಕೆಸರುಗದ್ದೆಯಂತಾಗುತ್ತವೆ. ಸಂತೆ ಹಾಗೂ ಪರ ಊರುಗಳಿಗೆ ಹೋಗುವ ಜನ ಅವಳಗೆರೆವರೆಗೆ ಹದಗೆಟ್ಟ ರಸ್ತೆಯಲ್ಲಿ ಸಾಗಿ ಮುಖ್ಯ ರಸ್ತೆಗೆ ತಲುಪಬೇಕು ಅಥವಾ ಪಾಪನಕೋಣದ ವರೆಗೆ ಸಾಗಿ ಭೈಲಪ್ಪನಮಠ-ಶಿಶುವಾಳ ರಸ್ತೆಗೆ ಬಂದು ವಾಹನಗಳನ್ನು ಇಡಿಯಬೇಕು, ಎರಡೂ ರಸ್ತೆಗಳು ಹದಗೆಟ್ಟಿರುವುದರಿಂದ ಸಂಚಾರ ದುಸ್ತರವಾಗಿದೆ ಎಂದು ಗ್ರಾಮಸ್ಥರು ಗೋಳು ತೋಡಿಕೊಳ್ಳುತ್ತಾರೆ.
  ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕೋಟ್ಯಾಂತರ ರೂಪಾಯಿಯನ್ನು ರಸ್ತೆಗಳ ಅಭೀವೃದ್ಧಿಗೆ ವ್ಯಯ ಮಾಡುತ್ತಿವೆ. ಆದರೂ ಈ ಹದಗೆಟ್ಟ ರಸ್ತೆಗಳು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.