Wednesday, September 10, 2014

ಪೋಷಕರು ತಮ್ಮ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಹಕರಿಸಿ

ಚಿಕ್ಕನಾಯಕನಹಳ್ಳಿ,ಸೆ.10 : ಪೋಷಕರು ತಮ್ಮ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಹಕಾರ ನೀಡಬೇಕು, ಮಕ್ಕಳ ಪ್ರತಿಭೆಯನ್ನು ಪ್ರಾಥಮಿಕ ಹಂತದಲ್ಲೇ ಗುತರ್ಿಸಿ ಬೆಳೆಸಿದರೆ ಮುಂದೆ ಅವರಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂದು ಪುರಸಭಾ ಸದಸ್ಯ ಸಿ.ಆರ್.ತಿಮ್ಮಪ್ಪ ಹೇಳಿದರು.
ಪಟ್ಟಣದ ಎಂ.ಪಿ.ಜಿ.ಎಸ್ ಶಾಲಾ ಆವರಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದ ಅವರು,
ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಲಿದ್ದು ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಾಲ್ಲೂಕಿನಿಂದ ಜಿಲ್ಲೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆ ಹಾಗೂ ತಂದೆ, ತಾಯಿಗೆ ಹೆಸರು ತರುವಂತೆ ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ,  ಎಂ.ಪಿ.ಜಿ.ಎಸ್ ಶಾಲೆಯ ಎದುರಿನಲ್ಲಿರುವ ವಿದ್ಯುತ್ ಪರಿವರ್ತಕದಿಂದ ಮಕ್ಕಳ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗೆ  ತೊಂದರೆಯಾಗುತ್ತಿದ್ದು ಎರಡು ಭಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಈ ಭಾಗದ ಜನರು ನನ್ನೊಂದಿಗೆ  ಕೈ ಜೋಡಿಸಿದರೆ ಪರಿವರ್ತಕ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಈ ಭಾಗದಲ್ಲಿ ಎರಡು ಬಾರಿ ಪುರಸಭಾ ಸದಸ್ಯನಾಗಿದ್ದಾಗ ಶಾಲಾ ಮುಂಭಾಗದಲ್ಲಿರುವ ವಿದ್ಯುತ್ ಪರಿವರ್ತಕವನ್ನು ತೆರವುಗೊಳಿಸಲು ಮುಂದಾದರೂ ಹಲವರ ವಿರೋಧದಿಂದ ಪರಿವರ್ತಕವನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ, ಈಗ ಪಕ್ಕದ ವಾಡರ್್ನ ಸದಸ್ಯನಾಗಿದ್ದರೂ ಮಕ್ಕಳ ಹಿತದೃಷ್ಠಿಯಿಂದ ಆ ಕೆಲಸಕ್ಕೆ ಜೊತೆಯಲ್ಲಿರುವುದಾಗಿ ತಿಳಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ, ಮಕ್ಕಳ ಸುಪ್ತ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು ಈ ಕಾರ್ಯಕ್ರಮಗಳ ಮೂಲಕ ಸಾಹಿತ್ಯ, ಸಾಂಸ್ಕೃತಿಕ, ಕಲೆ ಮುಂತಾದ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ಬಿ.ಆರ್.ಪಿ. ಪ್ರದೀಪ್ ಮಾತನಾಡಿ ಸಕರ್ಾರಿ ಮತ್ತು ಖಾಸಗಿ ಶಾಲೆಯವರೆಂದು ಯಾರಿಗೂ ತಾರತಮ್ಯ ಮಾಡದೆ ತೀಪರ್ುಗಾರರು ನೈಜ ತೀಪರ್ು ನೀಡಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಿ ಎಂದರಲ್ಲದೆ ಎಂ.ಪಿ.ಜಿ.ಎಸ್ ಶಾಲಾ ಮುಂಭಾಗದಲ್ಲಿರುವ ಟಿ.ಸಿ.ಯನ್ನು ತೆರವುಗೊಳಿಸುವುದು ಅವಶ್ಯಕತೆಯಿದೆ ಮತ್ತು ಶಾಲೆಗೆ ಕಾಂಪೌಂಡ್ ವ್ಯವಸ್ಥೆಯಾಗಬೇಕಿದೆ ಎಂದರು.
ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶ್, ಶಿಕ್ಷಕ ಶಿವಕುಮಾರ್, ಸಿ.ಆರ್.ಪಿ.ಸುರೇಶ್ ಕೆಂಬಾಳ್ ಉಪಸ್ಥಿತರಿದ್ದರು.


Monday, September 8, 2014

ಸೋಲೆ ಗೆಲುವಿನ ಮೆಟ್ಟಿಲು : ನಿ.ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ
ಚಿಕ್ಕನಾಯಕನಹಳ್ಳಿ : ಶ್ರೇಷ್ಠ ಸಾಧಕರನೇಕರು ಹಲವು ಸೋಲುಗಳನ್ನು ಕಂಡಿದ್ದರೂ ಎಡಬಿಡದೆ ಸಾಧನೆಯ ಬೆನ್ನು ಹತ್ತಿದ್ದರಿಂದಾಗಿ ಇಂದು ಸಾಧಕರೆನಿಸಿಕೊಂಡಿದ್ದಾರೆ, ಹಾಗೆಯೇ ವಿದ್ಯಾಥರ್ಿಗಳಾದ ನೀವು ಸೋಲಿಗೆ ಅಂಜದೆ ಮುನ್ನಡೆದರೆ ನೀವು ಸಾಧಕರನೆಸಿಕೊಳ್ಳಬಹುದು ಎಂದು  ಪ್ರಥಮ ದಜರ್ೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ 2014-15ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುತ್ ಬಲ್ಪ್ ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಅಂಗವಿಕಲನಾದರೂ ಶ್ರೇಷ್ಠ ಸಾಧನೆ ಮಾಡಿದವರು  ಅಮೆರಿಕಾದಲ್ಲಿ ಮೂರು ಬಾರಿ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್, ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ ಡಾ.ಅಬ್ದುಲ್ಕಲಾಂ ಹಾಗೂ ಇನ್ನಿತರ ಹಲವು ಸಾಧಕರು ಸೋಲುಗಳ ನಂತರ ಗೆಲುವು ಪಡೆದವರಾಗಿದ್ದು, ಜೀವನದಲ್ಲಿ ಸೋಲನ್ನು ಅನುಭವಿಸಿದೆ ಎಂದು ಹಿಂಜರಿಯುವುದಕ್ಕಿಂತ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿದರೆ ನೀವೂ ಸಾಧಕರ ಸಾಲಿನಲ್ಲಿ ನಿಲ್ಲುತ್ತೀರ ಎಂದರಲ್ಲದೆ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹಲವರು ತಮ್ಮ ಸಾಧನೆಗಾಗಿ ಶ್ರಮ ಪಟ್ಟಿದ್ದಾರೆ, ಆ ಸಮಯದಲ್ಲಿ ಸಾಧಕರಿಗೆ ಎದುರಾಗುವ ಹಲವು ತೊಂದರೆಗಳನ್ನು ಧೈರ್ಯ, ಶ್ರಧ್ದೆ, ಆಸಕ್ತಿ ಮೂಲಕ ಸಾಧಿಸುವ ಛಲ ಹೊಂದಿದ್ದರಿಂದಲೇ ಅವರ ಹೆಸರು ನಾವು ಇಂದು ಬಳಸುತ್ತಿರುವುದು, ಆ ಸಾಧಕರಂತೆ ಮನಸ್ಸಿದ್ದರೆ ಮಾರ್ಗದ ದಾರಿಯಲ್ಲಿ ಮುಂದಾಗಬೇಕು ಆಗಲೇ ತಮ್ಮ ಸಾಧನೆಗೆ ಯಾವ ತೊಂದರೆ ಎದುರಾದರೂ ಗೆಲುವು ನಮ್ಮದಾಗುತ್ತದೆ ಎಂದರು.
ಯಾವುದೇ ವಿಷಯದಲ್ಲಿ ಗೆಲುವು ಸಾಧಿಸಲು ಶ್ರದ್ದೆ, ಆಸಕ್ತಿ ಬಹಳ ಮುಖ್ಯವಾಗಿದೆ, ಶ್ರದ್ಧೆಯಿದ್ದರೆ ಗೆದ್ದೆ ಇಲ್ಲದಿದ್ದರೆ ಬಿದ್ದೆ ಎಂದು ಭಾವಿಸಿಕೊಂಡು ಇಡುವ ಪ್ರತಿ ಹೆಜ್ಜೆಯಲ್ಲೂ ಶ್ರದ್ದೆಗೆ ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದ ಅವರು, ಹೂವು ಅರಳಿ ಒಂದೇ ದಿನದಲ್ಲಿ ತನ್ನ ಸೇವೆಯನ್ನೂ ಎಲ್ಲರಿಗೂ ನೀಡುತ್ತದೆ ನಾವು ಹುಟ್ಟಿದ ಮೇಲೆ ಎಂದಾದರೂ ಮಣ್ಣಾಗಲೇ ಬೇಕು ಆ ಮಧ್ಯದಲ್ಲಿ ಏನಾದರೂ ಸಾಧಿಸಬೇಕು ಛಲ ಹೊಂದಬೇಕು ಎಂದರು.
ಪ್ರಾಂಶುಪಾಲ ವಿ.ವರದರಾಜು ಮಾತನಾಡಿ ಮನುಷ್ಯನ ದೇಹ ಹಾಗೂ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಾಗ ಮಾತ್ರ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಕೇರಳದಲ್ಲಿ ಹುಟ್ಟಿದ ಗ್ರಾಮೀಣ ಭಾಗದ ಹುಡುಗಿ ಪಿ.ಟಿ.ಉಷಾ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಅಭಿವೃದ್ದಿ ಸಮಿತಿಯ ಧನಪಾಲ್, ಟಿ.ಆರ್.ವಾಸುದೇವ್, ಪ್ರಥಮ ದಜರ್ೆ ಸಹಾಯಕ ಬಸವರಾಜ್ ಉಪಸ್ಥಿತರಿದ್ದರು.
  ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಸನ್ನ ನಿರೂಪಿಸಿದರೆ, ಶಿವರಾಮಯ್ಯ ಸ್ವಾಗತಿಸಿದರು. 


Saturday, September 6, 2014



30 ವರ್ಷ ವಯಸ್ಸು ತುಂಬಿದವರು ಲೈಸೆನ್ಸ್ನ್ನು ನವೀಕರಣ ಮಾಡಿಸಿ : ಆರ್.ಟಿ.ಓ ಮಂಜುನಾಥ್
                           

                     
ಚಿಕ್ಕನಾಯಕನಹಳ್ಳಿ,ಸೆ.06 : ವಾಹನದ ಪರವಾನಗಿ ಪಡೆಯಲು 18ವರ್ಷವಾಗಿರಬೇಕು, 30 ವರ್ಷ ವಯಸ್ಸು ತುಂಬಿದವರು ಲೈಸೆನ್ಸ್ನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ತಿಪಟೂರು ಆರ್.ಟಿ.ಓ ಮಂಜುನಾಥ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಆವರಣದಲ್ಲಿ ರೋಟರಿ ಸಂಸ್ಥೆ, ರೋಟರಾಕ್ಟ್ ಸಂಸ್ಥೆ, ತಿಪಟೂರು ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ರಸ್ತೆ ಸುರಕ್ಷತಾ ಹಾಗೂ ಸಂರಕ್ಷತಾ ವಾಹನ ಚಾಲನ ನಿಯಮಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 50ವರ್ಷ ಮೇಲ್ಪಟ್ಟ ನಾಗರೀಕರು ಪ್ರತಿ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಬೇಕಾಗುತ್ತದೆ, ವಾಹನಗಳನ್ನು ಓಡಿಸಲು ರಿಜಿಸ್ಟ್ರೇಷನ್ ಕಡ್ಡಾಯವಾಗಿದ್ದು ವಾಹನಗಳು 40ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ಮಾತ್ರ ಸುರಕ್ಷಿತವಾಗಿರುತ್ತಾರೆ, ಅತಿ ವೇಗದಿಂದ ಚಲಾಯಿಸಿದರೆ ಜೀವಕ್ಕೆ ಅಪಾಯ ಎಂದು ತಿಳಿಸಿದರು.
ವಾಹನ ಚಲಾಯಿಸುವವರು ಕುಡಿದು ಹಾಗೂ ಮೊಬೈಲ್ಗಳಲ್ಲಿ ಮಾತನಾಡುತ್ತಾ ಮತ್ತು ದ್ವಿಚಕ್ರ ವಾಹನದಲ್ಲಿ ಮೂರು ಜನ ತೆರಳುವುದು ಕಾನೂನು ಪ್ರಕಾರ ಅಪರಾಧ ಎಂದರಲ್ಲದೆ, ವಾಹನ ಚಾಲಕನು ಅಗ್ನಿಶಾಮಕದಳದ ವಾಹನಗಳು ಮತ್ತು ತುತರ್ು ಚಿಕಿತ್ಸಾ ವಾಹನ, ಪೋಲಿಸ್ ವಾಹನ, ಕೆಂಪುದೀಪ ಹೊತ್ತ ವಾಹನಗಳನ್ನು ಕಂಡಾಗ ಸಾಧ್ಯವಾದಷ್ಟು ರಸ್ತೆಯ ಎಡಪಕ್ಕದಲ್ಲಿ ನಿಂತು ಅವುಗಳಿಗೆ ಚಲಿಸಲು ಆದ್ಯತೆ ನೀಡಬೇಕು, ವಾಹನವನ್ನು ನಿಲುಗಡೆ ತಾಣದಲ್ಲೇ ನಿಲ್ಲಿಸಿ ಪ್ರತಿ ಸೂಚನ ಫಲಕವನ್ನು ಗಮನಿಸುವಂತೆ ಸಲಹೆ ನೀಡಿದರು.
ಸಿ.ಪಿ.ಐ ಜಯಕುಮಾರ್ ಮಾತನಾಡಿ ಇತ್ತೀಚೆಗೆ ಪಟ್ಟಣದಲ್ಲಿ ರೋಟರಿ ಶಾಲೆಯ ಬಾಲಕ ಅತಿ ವೇಗವಾಗಿ ಚಾಲನೆ ಮಾಡಿ ಕಂಬಕ್ಕೆ ಡಿಕ್ಕೆ ಹೊಡೆದ ಪರಿಣಾಮ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ, ಪಟ್ಟಣದಲ್ಲಿ ಅಪ್ರಾಪ್ತರು, ವಾಹನ ಪರವಾನಿಗೆ ಪಡೆಯದವರ ವಿರುದ್ದ ದಂಡ ವಿಧಿಸಿ, ಎಚ್ಚರಿಕೆ ನೀಡಿ, ಲೈಸೆನ್ಸ್ ಪಡೆದು ವಾಹನ ಚಲಾಯಿಸಲು ಸೂಚನೆ ನೀಡಲಾಗಿದೆ. ಕಾಲೇಜು ಆವರಣದಲ್ಲಿ ಅಪರಿಚಿತರು ಹೆಣ್ಣು ಮಕ್ಕಳಿಗೆ ದ್ವಿಚಕ್ರ ವಾಹನದಲ್ಲಿ ಬಂದು ಕೀಟಲೆ ಮಾಡುತ್ತಿರುವವರ ಬಗ್ಗೆ ವಿದ್ಯಾಥರ್ಿನಿಯರು ಮಾಹಿತಿ ನೀಡಿದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ವಾಹನ ನಿಯಮ ಉಲ್ಲಂಘಿಸುತ್ತಿರುವುದರಿಂದಲೇ ದೇಶದಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿದ್ದು ಇದರಿಂದ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ ಎಂದರು.
ವಾಹನ ಚಾಲಕರು ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿರುವ ವರದಿಗಳು ಬರುತ್ತಿರುವುದರಿಂದ ಅಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ದ ಕಾನೂನು ಪ್ರಕಾರ ಪೋಸ್ಕೋ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾಥರ್ಿಗಳು ಹಾಗೂ ಶಾಲಾ ವಿದ್ಯಾಥರ್ಿಗಳು ರಸ್ತೆ ಸುರಕ್ಷತೆ ಪಾಲನೆಯ ಬಗ್ಗೆ ಪ್ರಶ್ನಿಸಿ ಆರ್.ಟಿ.ಓ ಅಧಿಕಾರಿಯಲ್ಲಿ ಮಾಹಿತಿ ಪಡೆದಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಸಿ.ಎನ್.ಮರುಳಾರಾಧ್ಯ, ಪ್ರಾಂಶುಪಾಲ ವಿ.ವರದರಾಜು, ಪಿ.ಎಸ್.ಐಗಳಾದ ಮಹಾಲಕ್ಷ್ಮಮ್ಮ ಹಾಗೂ ಸುನಿಲ್ ರೋಟರಿ ಸದಸ್ಯರಾದ ಸಿ.ಎಸ್.ಪ್ರದೀಪ್ಕುಮಾರ್, ದೇವರಾಜು ಅಶ್ವತ್ಥ್ನಾರಾಯಣ್, ಮಿಲ್ಟ್ರಿಶಿವಣ್ಣ, ದಾನಪ್ಪ ಉಪಸ್ಥಿತರಿದ್ದರು. 


ಸುಡಗಾಡು ಸಿದ್ದ ಯುವಕರ ಮೇಲೆ ಪಿ.ಎಸ್.ಐ. ಹಲ್ಲೆ: ತಹಶೀಲ್ದಾರ್ಗೆ ದೂರು.
ಚಿಕ್ಕನಾಯಕನಹಳ್ಳಿ,ಸೆ.06 : ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ವಾಸವಿರುವ ಸುಡುಗಾಡು ಸಿದ್ಧರು ಹಾಗೂ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ  ನುಗ್ಗಿ ಅಕ್ರಮವಾಗಿ ನಾಲ್ವರನ್ನು ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡಿದ ಪಿ.ಎಸ್.ಐ ರವರು ಮಾನವ ಹಕ್ಕು ಉಲ್ಲಂಘನೆ ಮಾಡಿರುವುದರಿಂದ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಕಾಮಾಕ್ಷಮ್ಮನವರಿಗೆ ಅಲೆಮಾರಿ ಬುಡಕಟ್ಟು ಮಹಾಸಭಾ ಮನವಿ ಅಪರ್ಿಸಿದರು.
ಪಟ್ಟಣದ 6ನೇ ವಾಡರ್್ನಲ್ಲಿರುವ ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಾಗಿರುವ ಸುಡುಗಾಡು ಸಿದ್ದ ಜನಾಂಗದ ಯುವಕರಾದ ಕುಮಾರ್, ಮಾರಣ್ಣ ನರಸಿಂಹ, ಮಂಜಣ್ಣ ಎಂಬುವವರನ್ನು ವಿನಾಕಾರಣವಾಗಿ ಬಂಧಿಸಿ ಹಲ್ಲೆ ಮಾಡಿ ಗಾಯಗೊಳಿಸಿದರು. ನಮ್ಮನ್ನು ಬಂಧಿಸಿರುವುದು ಏಕೆ ಎಂದು ಪ್ರಶ್ನಿಸಿದರೆ ನಿಮ್ಮ ಮೇಲೆ ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುವುದಲ್ಲದೆ ಯಾವ ಮಾಧ್ಯಮದವರಿಗೂ ತಿಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ, ಇದರಿಂದ ಕೇದಿಗೆಹಳ್ಳಿ ಗುಂಡುತೋಪಿನ ಗುಡಿಸಿಲಿನಲ್ಲಿ ಇರುವ ನಮಗೆ ಜೀವ ಬೆದರಿಕೆಯಿಂದ ಕುಟುಂಬಗಳು ಭಯಭೀತರಾಗಿದ್ದು ಯಾವಾಗ ಬಂಧಿಸುತ್ತಾರೋ ಎಂಬ ಭಯದಲ್ಲಿ ಬದುಕ ಬೇಕಾಗಿದೆ, ವೈದರ ಬಳಿ ಪೋಲಿಸ್ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಚಿಕಿತ್ಸೆ ನೀಡಿ ವೈದ್ಯಕೀಯ ದೃಢೀಕರಣ ಪತ್ರ ನೀಡುವಂತೆ ಕೇಳಿದರೂ ವೈದ್ಯರು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ವಿನಃ ದೃಢೀಕರಣ ಪತ್ರ ಮಾತ್ರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾ ಸಭಾದ ಪದಾಧಿಕಾರಿಗಳಾದ ರಾಜಪ್ಪ, ಡಿ.ಶಾಂತಕುಮಾರ್, ವೆಂಕಟೇಶಯ್ಯ, ರಂಗನಾಥ್ ಸೇರಿದಂತೆ ಹಲವರಿದ್ದರು.


ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಸಹಕಾರಿ

ಚಿಕ್ಕನಾಯಕನಹಳ್ಳಿ,ಸೆ.06 : ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳು ಸಹಕಾರಿ ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಡಾ.ಅಂಭೇಡ್ಕರ್ ಪ್ರೌಢಶಾಲೆಯ ಆವರಣದಲ್ಲಿ 2014-15ನೇ ಸಾಲಿನ ಪರೌಢಶಾಲಾ ಹಂತದ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭಾ ಸದಸ್ಯೆ ರೇಣುಕಾ ಮಾತನಾಡಿ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ, ತೀಪರ್ುಗಾರರು ಪ್ರಾಮಾಣಿಕವಾಗಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೆ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕೆಂಬಾಳ್ ಸುರೇಶ್ ಸ್ವಾಗತಿಸಿದರು. ದೇವರಾಜ್ ನಿರೂಪಿಸಿದರು. ರಾಂಪ್ರಸಾದ್ ವಂದಿಸಿದರು.

Friday, September 5, 2014

ಸಾಮಾಜಿಕ  ತಾರತಮ್ಯ ಹೊಗಲಾಡಿಸಿ ಹಳ್ಳಿಗಳ ಅಭಿವೃದ್ದಿಗೆ ಶಿಕ್ಷಕರು ಶ್ರಮಿಸುವುದು ಅಪೇಕ್ಷಣೀಯ: ಶಾಸಕ ಸಿ.ಬಿ.ಎಸ್.

ಚಿಕ್ಕನಾಯಕನಹಳ್ಳಿ,ಸೆ.05 : ಸಮಾಜದ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ, ತಾವು ಹೋಗುವ ಹಳ್ಳಿಗಳ ಅಭಿವೃದ್ದಿ, ಪರಿಸರ ಹಾಗೂ ಹಳ್ಳಿಗಳಲ್ಲಿ ಇರುವ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಲು ಶ್ರಮಿಸುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಕರೆ ನೀಡಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ಡಾ.ರಾಧಾಕೃಷ್ಣನ್ರವರ 127ನೇ ಜನ್ಮದಿನಾಚಾರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚಾರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಶಿಕ್ಷಕರು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು, ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರನ್ನು ಹೊಂದಿದ್ದು ಸಮಾಜ ಶಿಕ್ಷಕರ ಮೇಲೆ ಅಪಾರ ನಂಬಿಕೆ ಇಟ್ಟಿದೆ, ಶಿಕ್ಷಕರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ದಿಯ ಕಡೆ ಗಮನ ಹರಿಸಿ ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ, ಶಿಕ್ಷಕಣ ತಜ್ಞರಾಗಿ, ರಾಷ್ಟ್ರಪತಿಗಳಾಗಿ ಕರ್ತವ್ಯ ನಿರ್ವಹಿಸಿದ್ದರೂ ತಮ್ಮ ಜನ್ಮದಿನಾಚಾರಣೆ ಬದಲಾಗಿ ಶಿಕ್ಷಕರ ದಿನಾಚಾರಣೆ ಆಚರಿಸುವಂತೆ ಹೇಳಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ, ಭಾರತದ ಸಂಸ್ಕೃತಿ ಆದರ್ಶಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಎಂದ ಅವರು ಮಕ್ಕಳ ಸರಿತಪ್ಪುಗಳನ್ನು ತಿದ್ದುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ.ಅಧ್ಯಕ್ಷೆ ಲತಾ ಕೇಶವಮೂತರ್ಿ ಮಾತನಾಡಿ ಶಿಕ್ಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಹೇಳುವ ಮೂಲಕ ಮಕ್ಕಳ ಸವರ್ಾಂಗೀಣ ಅಭಿವೃದ್ದಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಿ, ಸರಿಯಾಗಿ ಕರ್ತವ್ಯ ನಿಭಾಯಿಸದೆ ಹೋದರೆ ಮಕ್ಕಳಿಗೆ ದ್ರೋಹ ಮಾಡಿದಂತಾಗುತ್ತದಲ್ಲದೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತೊಡೆದು ಹಾಕುವುದು ಶಿಕ್ಷಕರ ಕರ್ತವ್ಯ ಎಂದರು.
ಪುರಸಭಾಧ್ಯಕ್ಷೆ ಪುಷ್ಟ.ಟಿ.ರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯೆ ಹೇಮಾವತಿ, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಜಿ.ಪ್ರಾ.ಶಾ.ಶಿ.ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ದೈ.ಶಿ.ಸಂಘದ ಅಧ್ಯಕ್ಷ ಚಿ.ನಾ.ಪುರುಷೋತ್ತಮ್, ಸಿಡಿಪಿಓ ಅನೀಸ್ಖೈಸರ್, ತಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಶಿಕ್ಷಕರಾದ ಹೆಚ್.ಎಂ.ಸುರೇಶ್, ತಿಮ್ಮರಾಯಪ್ಪ, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.
ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿದರೆ ಎಸ್.ಸಿ. ನಟರಾಜ್ ನಿರೂಪಿಸಿದರು. ಕೃಷ್ಣಯ್ಯ ವಂದಿಸಿದರು.
ತಾಲ್ಲೂಕು ಪ್ರವಾಸಿ ಮಂದಿರದಿಂದ ಹೊರಟ ಸರ್ವಪಲ್ಲಿ ರಾಧಾಕೃಷ್ಣನ್ರವರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಬಿ.ಹೆಚ್.ರಸ್ತೆ ನೆಹರು ವೃತ್ತದ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಕರ್ಾರಿ ಪ್ರೌಢಶಾಲಾ ಆವರಣಕ್ಕೆ ತೆರಳಿತು.
ಸಮಾರಂಭದಲ್ಲಿ ನಿವೃತ್ತಿ ಹೊಂದಿದ 33 ಶಿಕ್ಷಕರನ್ನು ಹಾಗೂ 13ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ 26ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.

ರೈತರ ನೆರವಿಗೆ ಡಿ.ಸಿ.ಸಿ.ಬ್ಯಾಂಕ್ನಿಂದ ನೂತನ ಯೋಜನೆ: ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ,ಸೆ.05 : ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರು ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ನೆರವಾಗಲು ಸಾಲ ನೀಡಿದ ಸಹಕಾರ ಸಂಸ್ಥೆಗಳಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಒಂದು ಲಕ್ಷ ರೂಗಳನ್ನು ತುಂಬಿ ಕೊಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲ್ಲೂಕಿನ ಮತಿಘಟ್ಟದ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಡಿಸಿಸಿ ಬ್ಯಾಂಕ್ನ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು ಯೋಜನೆಯೂ ಈ ವರ್ಷದಿಂದಲೇ ಆರಂಭವಾಗಲಿದೆ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘದ ಸದಸ್ಯರುಗಳ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದೇ ಸೆಪ್ಟಂಬರ್ 10ನೇ ತಾರೀಖಿನೊಳಗೆ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅಜರ್ಿ ಸಲ್ಲಿಸುವಂತೆ ತಿಳಿಸಿದರು.
ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳಿಗೆ ಮಾತ್ರ ಸಾಲ ನೀಡುತ್ತಿದ್ದ ಡಿಸಿಸಿ ಬ್ಯಾಂಕ್, ಆರಂಭಿಸಿರುವ ಯೋಜನೆಯಲ್ಲಿ ಜಂಟಿ ಭದ್ರತಾ ಯೋಜನೆಯೂ ಒಂದಾಗಿದ್ದು ವ್ಯಾಪಾರ ಮಾಡುತ್ತಿರುವವರು ಸಂಘ ರಚಿಸಿಕೊಂಡರೆ ಅವರಿಗೂ ಸಾಲದ ನೆರವು ನೀಡುವ ಮೂಲಕ ವ್ಯಾಪಾರಸ್ಥರ ಏಳಿಗೆಗೂ ಮುಂದಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗಾಗಿ ಕಿಸಾನ್ ಕ್ರೆಡಿಟ್ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ ಎಂದರಲ್ಲದೆ ಮತಿಘಟ್ಟ ಸಹಕಾರ ಸಂಘಕ್ಕೆ ಸಾಲವಾಗಿ 12.90ಲಕ್ಷ ರೂ ಸಾಲವನ್ನು ವಿತರಿಸಲಾಗಿದೆ ಎಂದರು. ಹಿಂದಿನಿಂದಲೂ ಮತಿಘಟ್ಟ ಸಹಕಾರ ಸಂಘ ಉತ್ತಮ ರೀತಿಯಲ್ಲಿ ಆಡಳಿತವನ್ನು ನಡೆಸಿಕೊಂಡು ಬಂದಿದ್ದು, ಒಂದಕ್ಕೊಂದು ಸಂಘ ಸಂಸ್ಥೆಗಳು ಸಹಕಾರ ನೀಡಿದಾಗ ಆ ಭಾಗದ ಸಂಘ, ಸಂಸ್ಥೆಗಳು ರೈತರು, ಬಡವರನ್ನು ಆಥರ್ಿಕವಾಗಿ ಮೇಲೆತ್ತಲು ಸಹಾಯ ಮಾಡುತ್ತವೆ ಎಂದರು.
ಮತಿಘಟ್ಟ ಭಾಗದ ಎಲ್ಲಾ ಹಳ್ಳಿಗಳ ರೈತರಿಗೂ ಸಾಲದ ಯೋಜನೆ ಅನುಕೂಲವಾಗಲು ಮುಂದೆಯೂ ಹೊಸ ಸಾಲ ನೀಡಲಾಗುವುದು, ಸಾಲ ಪಡೆದವರು ಮರು ಪಾವತಿ ಮಾಡಿದರೆ ಇನ್ನಷ್ಟು ಸಾಲವನ್ನು ನೀಡಬಹುದು ಎಂದರಲ್ಲದೆ ಹೊಸದಾಗಿ ಬಂದಂತಹ ಸಕರ್ಾರಗಳು ಸಾಲ ಪಡೆದ ರೈತರಿಗೆ ನೆರವಾಗಲೂ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ನೆರವಾಗುತ್ತಿವೆ, ಅದೇ ರೀತಿ ಪ್ರತಿ ರೈತರಿಗೂ ಬ್ಯಾಂಕ್ ವತಿಯಿಂದ ಸಾಲ ನೀಡಿ ಅವರಿಗೆ ಸಕರ್ಾರದಿಂದ ಸಿಗುವ ಅನುಕೂಲ ನೀಡುವುದು ಬ್ಯಾಂಕಿನ ಗುರಿಯಾಗಿದೆ ಎಂದರಲ್ಲದೆ ಸಾಲ ಪಡೆದವರು ವ್ಯವಸಾಯದ ಜೊತೆ ಉಪಕಸುಬುಗಳನ್ನು ಮಾಡುವಂತೆ ಅದಕ್ಕೆ ಬೇಕಾದ ಸಹಾಯವನ್ನು ಬ್ಯಾಂಕ್ ಹಾಗೂ ಸೊಸೈಟಿಯಿಂದ ನೀಡುವುದಾಗಿಯೂ ತಿಳಿಸಿದರು.
ಮತಿಘಟ್ಟ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ರೈತರು ಆಥರ್ಿಕವಾಗಿ ಸದೃಢವಾಗಲು ಜಿಲ್ಲಾ ಬ್ಯಾಂಕ್ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಸಾಲ ಪಡೆದವರು ಮರುಪಾವತಿ ಮಾಡಿದರೆ ಮತ್ತಷ್ಟು ಹೆಚ್ಚಿನ ಸಾಲ ಪಡೆಯಬಹುದು ಎಂದು ತಿಳಿಸಿದ ಅವರು ಕಾಮಲಾಪುರದಲ್ಲಿ ಸಹಕಾರ ಸಂಘದ ಕಟ್ಟಡ ಕಟ್ಟಿಸುವ ಯೋಜನೆಯಿದ್ದು ಇದಕ್ಕೆ ಡಿ.ಸಿ.ಸಿ.ಬ್ಯಾಂಕ್ನ ಸಹಕಾರದ ಅಗತ್ಯವಿದೆ ಎಂದು ತಿಳಿಸಿದರು.
ತಾ.ಪಂ.ಸದಸ್ಯ ನಿರಂಜನಮೂತರ್ಿ ಮಾತನಾಡಿ ಸಹಕಾರ ಸಂಘಗಳು ಅಕ್ಕಿ, ಗೋಧಿ ಕೊಡಲು ಮಾತ್ರ ಸೀಮಿತವಲ್ಲ, ರೈತರ ಸಂಕಷ್ಟಕ್ಕೆ ನೆರವಾಗಲು ಸಾಲ ಸೌಲಭ್ಯವನ್ನು ನೀಡುತ್ತದೆ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಸಹಕಾರದಿಂದ ಮತಿಘಟ್ಟ ಸಹಕಾರ ಸಂಘ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದರಲ್ಲದೆ ರೈತರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಪರದಾಡುತ್ತಾರೆ ಆದರೆ ಜಿಲ್ಲಾ ಬ್ಯಾಂಕ್ ಮೂಲಕ ಸಹಕಾರ ಸಂಘಗಳಲ್ಲಿ ಬಡ್ಡಿರಹಿತ ಸಾಲವನ್ನು ಸುಲಭವಾಗಿ ಪಡೆಯತ್ತಿರುವ ಬಗ್ಗೆ ತಿಳಿಸಿದ ಅವರು ಸಾಲ ಪಡೆದಂತೆ ಮರುಪಾವತಿ ಮಾಡುವುದು ರೈತರ ಕರ್ತವ್ಯವಾಗಿದೆ ಎಂದರು.
ರೈತ ಕರಿಯಪ್ಪ ಮಾತನಾಡಿ ಜಿಲ್ಲಾ ಬ್ಯಾಂಕಿನಿಂದ ರೈತರಿಗೆ ಪ್ರತಿ ವರ್ಷ ನೀಡುವ ಸಾಲದ ಯೋಜನೆಯು ವಿಸ್ತಾರವಾಗುತ್ತಿದೆ, ಸಹಕಾರ ಸಂಘಗಳು ನೀಡುತ್ತಿರುವ ಸಾಲದಿಂದ ಹಲವು ಕುಟುಂಬಗಳು ಆಥರ್ಿಕವಾಗಿ ಸದೃಢವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ.ಬ್ಯಾಂಕ್ನ  ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಸ್ಥಳೀಯ ಸಹಕಾರ ಬ್ಯಾಂಕಿನ ನಿದರ್ೇಶಕರಾದ ಮಲ್ಲಿಕಣ್ಣ, ಸಿ.ಇ.ಓ ಹನುಮಂತಪ್ಪ, ಮತ್ತಿತರರು ಉಪಸ್ಥಿತರಿದ್ದರು.



ಹಾಡುಹಗಲೇ ಮನೆ ಬಾಗಿಲು ಹೊಡೆದು ಮೂರುವರೆ ಲಕ್ಷ ರೂಗಳಿಗೂ ಅಧಿಕ ಮೌಲ್ಯದ ನಗದು ಆಭರಣ ಕಳವು.
ಚಿಕ್ಕನಾಯಕನಹಳ್ಳಿ,ಸೆ.05:  ಪಟ್ಟಣದ ಕೋಟರ್್ ಹಿಂಭಾಗದಲ್ಲಿನ ನಸರ್್ ಮನೆಯೊಂದರಲ್ಲಿ ಹಾಡುಹಗಲೇ ಸುಮಾರು 3.5ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಹಾಗೂ ಬಂಗಾರದ ಆಭರಣಗಳು ಕಳವಾಗಿರುವ ಪ್ರಕರಣ ನಡೆದಿದೆ.
ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ನಸರ್್ ಆಗಿರುವ ವಿಶಾಲಕ್ಷಮ್ಮ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರು ಸೆ.5ರಂದು ಮಧ್ಯಾಹ್ನ ಸಹದ್ಯೋಗಿಯ ಮಗಳ ನಿಶ್ಚಿಥಾರ್ತಗೆಂದು  ತೆರಳಿದ್ದ ಸಂದರ್ಭದಲ್ಲಿ ಮನೆಯ ಹಿಂಭಾಗಿಲನ್ನು ಬಲವಾದ ಆಯುಧದಿಂದ ಮೀಟಿ ಬಾಗಿಲಿನ ಡೋರ್ ಲಾಕ್ ಹೊಡೆದು ಕೊಠಡಿಯಲ್ಲಿಟ್ಟಿದ್ದ ಬೀರುವಿನಲ್ಲಿದ್ದ ಎರಡುವರೆ ಲಕ್ಷ ರೂ ನಗದು ಹಾಗೂ ನಾಲ್ಕು ಜೊತೆ ಬಂಗಾರದ ಓಲೆಗಳನ್ನು ಕಳವು ಮಾಡಿದ್ದಾರೆ ಎಂದು ಮನೆಯ ಮಾಲೀಕ ಶಿವನಂದಯ್ಯ ತಿಳಿಸಿದರು.
ಈಗಿರುವ ಮನೆಯ ಮಹಡಿ ಮೇಲೆ  ಮೇಲೆ ನೂತನ ಮನೆಯನ್ನು ಕಟ್ಟಲೆಂದು ತಮ್ಮ ಉಳಿತಾಯದ ಹಣವನ್ನು  ನಿನ್ನೆಯಷ್ಟು ತಂದು ಮನೆಯಟ್ಟುಕೊಂಡಿದ್ದಾಗಿ ವಿಶಾಲಮ್ಮ ಹೇಳಿದ್ದರೆ, ಸ್ಥಳಕ್ಕೆ ಸಿ.ಪಿ.ಐ.ಜಯಕುಮಾರ್, ಪಿ.ಎಸ್.ಐ.ಮಹಾಲಕ್ಷ್ಮಮ್ಮ ಹಾಗೂ ಶ್ವಾನ ದಳ ಭೇಟಿ ನೀಡಿತ್ತು. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Thursday, September 4, 2014


ಗರ್ಭದಿಂದ ಘೋರಿಯವರಿಗೆ ಕಾನೂನು ಅನ್ವಯಿಸುತ್ತದೆ
ಚಿಕ್ಕನಾಯಕನಹಳ್ಳಿ,ಸೆ.04 : ಗರ್ಭದಿಂದ ಘೋರಿಯವರಿಗೆ ಕಾನೂನು ಅನ್ವಯಿಸುತ್ತದೆ ಆದ್ದರಿಂದ ಕಾನೂನಿನ ಬಗ್ಗೆ ಎಲ್ಲರೂ ಅರಿವು ಪಡೆದುಕೊಳ್ಳುವುದು ಅವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ಎನ್.ಆರ್.ಲೋಕಪ್ಪ ಹೇಳಿದರು.
   ಪಟ್ಟಣದ ತಾಲ್ಲೂಕ್ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಂಯುಕ್ತ ಆಶ್ರಯದಲ್ಲಿ ಅಪೌಷ್ಠಿಕತೆ ಮತ್ತು ಮರಳಿ ಬಾ ಶಾಲೆಗೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ನಮ್ಮ ದೇಶದ ಅತ್ಯುನ್ನತ ಸಂವಿದಾನ ಪಡೆದಿದ್ದು ಪ್ರತಿಯೊಬ್ಬ ಪ್ರಜೆಯು ಗೌರವದಿಂದ ಜೀವಿಸುವ ಹಕ್ಕನ್ನು ಹೊಂದಿದ್ದು ಜಾತಿ, ಬೇದ, ಪಂಥ, ಹೆಣ್ಣು, ಗಂಡು ಎಂಬ ಬೇದಬಾವವಿಲ್ಲದೇ ಜೀವಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ತಾಯಿ ಗರ್ಭದಿಂದ ಹಿಡಿದು ಸಾಯುವವರೆಗೂ ಕಾನೂನು ನಮಗೆ ಅನ್ವಯವಾಗುತ್ತದೆ. ತಾಯಂದಿರು ಸರಿಯಾದ ಪೌಷ್ಠಿಕಾಂಶದ ಅಹಾರ ಸೇವಿಸದೆ ಹೋದರೆ ಹುಟ್ಟಿದ ಮಕ್ಕಳು ಅಂಗವಿಕಲತೆ, ಬುದ್ದಿಮಾಂದ್ಯ ಮಕ್ಕಳು ಹುಟ್ಟುವುದರಿಂದ ತಂದೆ-ತಾಯಿ ಹಾಗೂ ಸಮಾಜಕ್ಕೂ ಹೊರೆಯಾಗುತ್ತಾರೆ. 
ಉಚ್ಚನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಅಪೌಷ್ಠಿಕತೆಯಿಂದ ನರಳುತ್ತಿರುವ ಗಭರ್ಿಣಿ ಸ್ರೀಯರಿಗೆ ಮಕ್ಕಳಿಗೆ ಪೌಷ್ಠಿಕಾಂಶವಿರುವ ಅಹಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತರಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಗಭರ್ಿಣಿ ಸ್ತ್ರೀಯರಿಗೆ ಮೊಳಕೆಕಾಳು ಹಾಗೂ ಪೌಷ್ಠಿಕಾಂಶವಿರುವ ಹಣ್ಣುಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಮಕ್ಕಳು ಹುಟ್ಟುತ್ತಾರೆ. ಹುಟ್ಟಿದ ಮಗುವಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿ ಉತ್ತಮ ವ್ಯಕ್ತಿಗಳಾಗುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಸರಿಯಾಗಿ ಪೋಷಿಸಿ ಇಲ್ಲದೇ ಹೋದರೆ ಮಕ್ಕಳು ಸಮಾಜ ಘಾತುಕರಾಗುತ್ತಾರೆ ಎಂದ ಅವರು ಕೆಲವರು ಹಣ ಮಾಡುವ ದೃಷ್ಠಿಯಿಂದ ಕಲಬೆರಕೆ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಅರೋಗ್ಯದ ಮೇಲೆ ದುಶ್ಟಪರಿಣಾಮ ಉಂಟಾಗುತ್ತದೆ  ಎಂದು ತಿಳಿಸಿದರು. 
ನ್ಯಾಯಾದೀಶರಾದ ಎನ್. ವೀಣಾ ಮಾತಾನಾಡಿ ಎರಡು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯ ಅಪೌಷ್ಠಿಕ ಮಕ್ಕಳ ಬಗ್ಗೆ ವರದಿ ಬಂದ ಹಿನ್ನಲೆಯಲ್ಲಿ ಕೆಲವು ಎನ್.ಜಿ.ಒ. ಸಂಘಟನೆಗಳು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿದ ನಂತರ ಉಚ್ಚನ್ಯಾಯಾಲಯ ನ್ಯಾಯಾಧೀಶರ ಸಮಿತಿ ರಚಿಸಿ ವರದಿಯನ್ನು ತರಿಸಿಕೊಂಡ ನಂತರ ವಿವಿಧ ಇಲಾಖೆಗಳ ಸಮಿತಿಯನ್ನು ರಚಿಸಿ ಗಭರ್ೀಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ನೀಡುವಂತೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಸಕರ್ಾರ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನ್ಯಾಯಂಗ ಇಲಾಖೆ ಕೈಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
   ಸಿ.ಡಿ.ಪಿ.ಓ. ಅನಿಸ್ ಖೈಸರ್ ಮಾತನಾಡಿ ತಾಲ್ಲೂಕಿನಲ್ಲಿ 205 ಮಕ್ಕಳು ಅಪೌಷ್ಠಿಕತೆಯಿಂದ ನರಳಿದ್ದು ಇವರಿಗೆ ಉತ್ತಮ ಪೌಷ್ಠಿಕಾಂಶದ ಅಹಾರ ಹಾಗೂ ಸಲಹೆ ಹಾಗೂ ಚಿಕಿತ್ಸೆ ನೀಡುವುದರಿಂದ ಮಕ್ಕಳು ಗುಣಮುಖಾರಾಗಿದ್ದು ಇನ್ನು 85 ಮಕ್ಕಳಿಗೆ ಚಿಕಿತ್ಸೆ ಹಾಗೂ ಪೌಷ್ಠಿಕ ಅಹಾರ ನೀಡಲಾಗುತ್ತಿದೆ, ಗಬರ್ಿಣಿ ಸ್ರೀಯರು ಮೂಢ ನಂಬಿಕೆಗೆ ಮಾರು ಹೋಗದೇ ಉತ್ತಮ ಅಹಾರ ಸೇವಿಸಿ, ಹುಟ್ಟಿದ ಮಗು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಸ್ತ್ರೀಯರ ಕರ್ತವ್ಯ  ಎಂದರಲ್ಲದೆ ಜಿಲ್ಲೆಯಲ್ಲಿ 1000 ಗಂಡು ಮಕ್ಕಳು 977 ಜನ ಹೆಣ್ಣುಮಕ್ಕಳಿದ್ದಾರೆ ಇದರಿಂದ ಹೆಣ್ಣು ಮಕ್ಕಳ ಕೊರತೆಯಿದೆ ಅದ್ದರಿಂದ  ತಂದೆ ತಾಯಂದಿರಿಗೆ ಹೆಣ್ಣುಮಕ್ಕಳ ಬಗ್ಗೆ ಇರುವ ತಾತ್ಸಾರ ಮನೋಭಾವ ಹೋಗಬೇಕು ಎಂದರು.
  ಕಾರ್ಯಕ್ರಮದಲ್ಲಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ, ಸಿ.ಬಿ.ಸಂತೋಷ್, ವಕೀಲರ ಸಂಘದ ಉಪಾದ್ಯಾಕ್ಷ ಹೆಚ್.ಎಸ್.ಜ್ಞಾನಮೂತರ್ಿ, ಬಿ.ಇ.ಒ.ಸಾ.ಚಿ.ನಾಗೇಶ್, ಸಿ.ಪಿ.ಐ.ಜಯಕುಮಾರ್, ಉಪತಹಸೀಲ್ದಾರ್ ದೊಡ್ಡಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.
    ಮಾಲತಿ ಪ್ರಾಥರ್ಿಸಿದರು. ವಕೀಲ ಲೋಕೇಶ್ ನಿರೂಪಿಸಿದರು. ವಕೀಲ ದಿಲೀಪ್ ಸ್ವಾಗತಿಸಿ ವಂದಿಸಿದರು.

ಸೃಜನಶೀಲ ಬರವಣಿಗೆ ನೀಡುತ್ತಿದ್ದ ಲೇಖಕ

ಯು.ಆರ್.ಅನಂತಮೂತರ್ಿ
ಚಿಕ್ಕನಾಯಕನಹಳ್ಳಿ,ಆ.04 : ಸೃಜನಶೀಲ ಬರವಣಿಗೆ, ತಮ್ಮ ಕೃತಿಗಳ ಮೂಲಕ ಸಮಕಾಲೀನ ವಾಸ್ತವಗಳನ್ನು ಓದುಗರಿಗೆ ನೀಡಿದ ಲೇಖಕ ಯು.ಆರ್.ಅನಂತಮೂತರ್ಿ ಎಂದು ನವೋದಯ ಪ್ರಥಮ ದಜರ್ೆ ಕಾಲೇಜಿನ ಕನ್ನಡ ಉಪನ್ಯಾಸಕ ರವಿಕುಮಾರ್.ಸಿ. ಹೇಳಿದರು.
ತಾಲ್ಲೂಕಿನ ಹಂದನಕೆರೆ ಜಿವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಹಂದನಕೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅನಂತ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನಾತನ ಪರಂಪರೆಯನ್ನು ಸಮಕಾಲೀನಗೊಳಿಸುವ ಪ್ರಯತ್ನದಲ್ಲಿ ಅನಂತ್ಕುಮಾರ್ರವರು ತಮ್ಮ ಕಾದಂಬರಿಗೆ ಹೊಸತನ ಅಂಶಗಳ ದಾರಿ ಮಾಡಿದರು ಎಂದ ಅವರು ಈ ನೆಲದ ಪ್ರೀತಿ, ದ್ವೇಷ ಎರಡನ್ನೂ ಕಂಡ ಅವರ ಬರವಣಿಗೆ ಪ್ರತಿಯೊಬ್ಬ ವಿದ್ಯಾಥರ್ಿಗೆ ದಾರಿದೀಪವಾಗಬೇಕೆಂದರು. ಬದುಕು ರೂಪಿಸಿಕೊಂಡ ಬಗ್ಗೆ ಅನಂತಮೂತರ್ಿಯವರ ಜೀವನ ಶೈಲಿ, ಆತ್ಮವಿಶ್ವಾಸ ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದು ನುಡಿದರು. ವಿಮರ್ಶಕರಾದ ಮೂತರ್ಿಯವರು ಕನ್ನಡದ ಪಂಪನಿಂದ, ಸಾಹಿತ್ಯದ ಅನೇಕ ಬರಹಗಾರರ ಜೊತೆ ಸಂಬಂಧವಿಟ್ಟುಕೊಂಡು ಅದರ ಪಯಣ ರಾಜಕೀಯವನ್ನು ಬೆಸೆದುಕೊಂಡ ಕೊಂಡಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಸಾಹಿತ್ಯ, ವಿಚಾರಾಧಾರೆಗಳು ಇಂದಿನ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅನಂತಮೂತರ್ಿರವರ ಬರವಣಿಗೆ ಸ್ಮರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಣ್ಣ, ಅನಂತಮೂತರ್ಿ ಈ ನಾಡು ಕಂಡ ಅನನ್ಯ ಚೇತನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೋಬಳಿ ಕಸಾಪ ಅಧ್ಯಕ್ಷ ಅನಂತಯ್ಯ, ಕಾರ್ಯದಶರ್ಿ ಮಂಜುನಾಥ್, ಆರ್.ಶಿವಣ್ಣ, ರಾಜೇಂದ್ರಕುಮಾರ್ ಮತ್ತು ಕಾಲೇಜು, ಪ್ರೌಢಶಾಲಾ ಶಿಕ್ಷಕರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.

Wednesday, September 3, 2014



ಗ್ರಾಮ ಪಂಚಾಯ್ತಿಗಳು ಸಬಲೀಕರಣವಾಗಬೇಕು : ಜಿ.ಪಂ.ಅಧ್ಯಕ್ಷ  ವೈ.ಹೆಚ್.ಹುಚ್ಚಯ್ಯ
ಚಿಕ್ಕನಾಯಕನಹಳ್ಳಿ,ಸೆ.01 : ಗ್ರಾಮ ಪಂಚಾಯ್ತಿಗಳು ಸಬಲೀಕರಣವಾಗದೇ  ಗ್ರಾಮಗಳು ಉದ್ಧಾರವಾಗುವುದಿಲ್ಲ ಎಂದು ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಮಾದಿಗ ದಂಡೋರ ಸಮಿತಿ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲಾ ಪಂಚಾಯ್ತಿ ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳ ಜನಪ್ರತಿನಿಧಿಗಳಿಗೆ ಅಧಿಕಾರದ ಅರಿವಿನ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗುವುದು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಶೇ.50ರಷ್ಟು ಮಹಿಳೆಯರಿಗೆ ಮೀಸಲಾಗಿ ನೀಡಿದ್ದು ಹೊರತು ಅಕ್ಷರಸ್ಥರಿಗೆ ಮಾತ್ರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ, ಅನಕ್ಷರಸ್ಥರುಗಳ ಕೆಲಸಗಳಾಗುತ್ತಿಲ್ಲ ಎಂದು ವಿಷಾಧಿಸಿದ ಗ್ರಾಮ ಪಂಚಾಯ್ತಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಬೇಕಾದ ರೀತಿಯ ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳನ್ನು ಹಿಡಿದಿಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ, ಅಧಿಕಾರಿಗಳ ಬಡ, ಅನಕ್ಷರಸ್ಥರ ಅಜರ್ಿಗಳನ್ನು ಕಛೇರಿಗೆ ತೆಗೆದುಕೊಂಡು ಬಂದರೆ ಅವರ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಿಂದ ಸ್ಪಂದಿಸದೇ ಹೋದ ಅಧಿಕಾರಿಗಳ ವಿರುದ್ದ ನಿದರ್ಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಎನ್.ಆರ್.ಇ.ಜಿ.ಎ ಯೋಜನೆ ಅಡಿಯಲ್ಲಿ ಕೋಟ್ಯಾಂತರ ರೂಪಾಯಿ ಲಾಭಕ್ಕಾಗಿ ಕೆಲಸ ಮಾಡಬೇಡಿ ಉದಾಸೀನ ಮಾಡದೆ ಸಕರ್ಾರದ ಅನುದಾನ ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದರು. ಅಧಿಕಾರ ಶಾಶ್ವತವಲ್ಲ ಇರುವ ಅಧಿಕಾರವನ್ನು ಬಡವರ ದೀನ ದಲಿತರ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾದಿಗ ದಂಡೋರ ಸಮಿತಿ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ,  ದಲಿತರ ಜನಾಂಗದಲ್ಲಿ 101 ಜಾತಿಗಳಿದ್ದು ಜನಸಂಖ್ಯೆ ಆಧಾರದ ಮೇಲೆ ವಗರ್ೀಕರಣ ಮಾಡುವಂತೆ 18ವರ್ಷಗಳ ದೀರ್ಘ ಹೋರಾಟದ ಫಲವಾಗಿ ಸಕರ್ಾರ ಎ.ಜಿ.ಸದಾಶಿವ ಆಯೋಗವನ್ನು ರಚಿಸಿ ಸಕರ್ಾರಕ್ಕೆ ವರದಿ ಸಲ್ಲಿಸಿದೆ ಆದರೂ ಸಕರ್ಾರ ಇದುವರೆವಿಗೂ ಮಾದಿಗ ಜನಾಂಗದ ಬೇಡಿಕೆಗಳಿಗೆ ಇದುವರೆವಿಗೇ ಸ್ಪಂದಿಸದೇ ಇರುವುದು ವಿಷಾಧದ ಸಂಗತಿ ಆದ್ದರಿಂದ ಕೂಡಲೇ ಎ.ಜಿ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿದರು. 
ವಗರ್ೀಕರಣವಾಗದೇ ಹೋದರೆ ಮಾದಿಗ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಹಾಗೂ ಸಕರ್ಾರದ ಕೆಲಸ ಸಿಗದೆ ಮಾದಿಗ ಜನಾಂಗಕ್ಕೆ ಅನ್ಯಾಯವಾಗುತ್ತದೆ, ದೇಶದಲ್ಲಿ 6500 ಸಾವಿರ ಜಾತಿಗಳಿದ್ದು ಅವರದೇ ಆದ ಜಾತಿಗಳ ಹೆಸರುಗಳನ್ನು ಸೇರಿಸುತ್ತಾ ಬಂದಿದ್ದರಿಂದಲೇ ಮಾದಿಗ ಜನಾಂಗಕ್ಕೆ ಅನ್ಯಾಯವಾಗಿದೆ, ಹಾವನೂರು ವರದಿಯಲ್ಲಿ ಮಾದಿಗರಿಗೆ ಶೇ.8ರಷ್ಟು ಮೀಸಲಾತಿ ನಂತರ ಎ.ಜೆ.ಸದಾಶಿವ ಆಯೋಗ ಶೇ.6ರಷ್ಟು ಮೀಸಲಾತಿ ನೀಡಿದ್ದರೂ ಇದುವರೆವಿಗೂ ಮೀಸಲಾತಿ ವಗರ್ೀಕರಣವಾಗದೇ ಇರುವುದರಿಂದ ಶೇ1.5ರಷ್ಟು ಮೀಸಲಾತಿ ಲಭಿಸಿದ್ದು ಇದರಿಂದ ಜನಸಂಖ್ಯಾ ಆಧಾರದಲ್ಲಿ ಸ್ಥಾನಮಾನ ಸಿಕ್ಕಿದೆ ಎಂದರಲ್ಲದೆ ಸದಾಶಿವ ಆಯೋಗದ ವರದಿ  ಜಾರಿಗೆ ತರುವಂತೆ ಉರುಳುಸೇವೆ, ಅರೆಬೆತ್ತಲೆ ಸೇವೆ, ಪಂಜಿನ ಮೆರವಣಿಗೆ ಸೇರಿದಂತೆ ಹಲವು ರೀತಿಯ ಪ್ರತಿಭಟನೆ ಮಾಡಿದ್ದೇವೆ, ಸದಾಶಿವ ಆಯೋಗದ ವರದಿಯಂತೆ ವಗರ್ೀಕರಣವಾದರೆ ಎಲ್ಲರಿಗೂ ಸಮಾನ ರೀತಿಯಲ್ಲಿ ಸೌಲಭ್ಯಗಳು ಹಂಚಿಕೆಯಾಗುತ್ತವೆ ಎಂದು ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಕರ್ಾರ ಚುನಾವಣೆಯಲ್ಲಿ ಮೀಸಲಾತಿ ನೀಡಿರುವುದರಿಂದ ನಾವು ಎಲ್ಲಾ ಜನಾಂಗದವರಿಗೂ ಮೀಸಲಾತಿ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ನೀಡುತ್ತಿದ್ದು ಅದೇ ರೀತಿ ಈ ಬಾರಿ ವೈ.ಹೆಚ್.ಹುಚ್ಚಯ್ಯನವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ ಎಂದರು.
ರಾಜ್ಯ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ ಸಕರ್ಾರ ಬೇರೆ ಬೇರೆ ಮಹಾಪುರುಷರ ಜಯಂತಿ ಮಾಡುತ್ತಿದ್ದು ಅದೇ ರೀತಿ ಜಾಂಬುವಂತ ಹುಟ್ಟಿದ ದಿನದಂದು ಸಕರ್ಾರ ಜಯಂತಿಯನ್ನಾಗಿ ಮಾಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ಜಿ.ಪಂ.ಸದಸ್ಯೆ ಜಾನಮ್ಮ ರಾಮಚಂದ್ರಯ್ಯ ಮಾತನಾಡಿ ಪಟ್ಟಣದಲ್ಲಿ ಮಾದಿಗ ದಂಡೋರ ಜನಾಂಗದ ಸಮುದಾಯ ಭವನಕ್ಕೆ ಜಿ.ಪಂ.ಅಧ್ಯಕ್ಷರಾದ ವೈ.ಹೆಚ್.ಹುಚ್ಚಯ್ಯನವರು ಐದು ಲಕ್ಷ ರೂಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ.ಎಸ್.ಅಶೋಕ್, ಮಾ.ದ.ಸ.ಜಿಲ್ಲಾ ಉಪಾಧ್ಯಕ್ಷ ಈಚನೂರು ಮಹಾದೇವ್, ತಾಲ್ಲೂಕು ಅಧ್ಯಕ್ಷ ಜಯಣ್ಣ, ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ದ.ಸಂ.ಸ ಸಂಚಾಲಕ ಸಿ.ಎಸ್.ಲಿಂಗದೇವರು, ಮುಖಂಡ ತೀರ್ಥಪುರ ಆರ್.ಕುಮಾರ್, ಸಿ.ಎನ್.ಹನುಮಯ್ಯ, ರಾಜುಬೆಳಗೀಹಳ್ಳಿ,  ಗೋವಿಂದಯ್ಯ

ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕು ಮಟ್ಟದ ಚಾಂಪಿಯನ್ : ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿ ಸಿ.ಎನ್.ಮಂಜುನಾಥ್

ಚಿಕ್ಕನಾಯಕನಹಳ್ಳಿ,ಸೆ.2 : ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿ ಸಿ.ಎನ್.ಮಂಜುನಾಥ್ ತಾಲ್ಲೂಕ್ ಚಾಂಪಿಯನ್ ಸ್ಥಾನ ಅಲಂಕರಿಸಿದ್ದಾರೆ.
ಸಿ.ಎನ್.ಮಂಜುನಾಥ್ 100.ಮೀ ಓಟ, ಗುಂಡು ಎಸೆತ, ಚಕ್ರ ಎಸೆತ, ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದರೆ, ಕೆ.ಎಂ.ಎಚ್.ಪಿ.ಎಸ್ ಶಾಲಾ ವಿದ್ಯಾಥರ್ಿಗಳಾದ ಸಿ.ಎನ್.ಮಂಜುನಾಥ, ಎ.ಎನ್.ಮಧುಸೂದನ, ಮದನ್, ಸಿ.ಎನ್.ಯೋಗೀಶ್, ಜೆ.ಸಿ.ನವೀನ್, ಸುಹಾಸ್.ಸಿ.ಎಸ್, ನಾಗೇಂದ್ರ.ಕೆ.ಎಸ್, ಅಬ್ದುಲ್ರುಮಾನ್, ಗಣೇಶ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಹಾಗೂ ಭರತ್.ಕೆ.ಎನ್, ಸುದೀಪ್.ಎಲ್ ಚೆಸ್ನಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಟಿ.ಕಮಲಮ್ಮ, ದೈಹಿಕ ಶಿಕ್ಷಕಿ ಜಗದಾಂಭ.ಎ.ಎನ್. ಟೀಂ ಮ್ಯಾನೇಜರ್ ಹನುಮಂತರಾಯ,ಆರ್, ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ.ಯವರು ಅಭಿನಂದಿಸಿದ್ದಾರೆ.

ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ
ಚಿಕ್ಕನಾಯಕನಹಳ್ಳಿ,ಸೆ.2 : ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ 2014-15ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್. ರೆಡ್ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 8ರ ಸೋಮವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು ಪ್ರಾಂಶುಪಾಲ ವಿ.ವರದರಾಜು ಅಧ್ಯಕ್ಷತೆ ವಹಿಸುವರು.