Friday, August 26, 2016

ಚಿ.ನಾ.ಹಳ್ಳಿ ಕಡೆಗೆ ಆನೆಗಳು
ಚಿಕ್ಕನಾಯಕನಹಳ್ಳಿ,ಆ.26: ತಾಲ್ಲೂಕಿನ ಕಂದಿಕೆರೆ ಹೋಬಳಿ ಗಂಟೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಒಂಟಿಸಲಗ ಬೀಡು ಬಿಟ್ಟಿದ್ದು ಸುತ್ತಮುತ್ತಲಿನ ಜನ ಜಾಗರೂಕರಾಗಿರಬೇಕು ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಸಾವನದುರ್ಗ ಅರಣ್ಯ ಪ್ರದೇಶದಿಂದ ಹಿಂಡನ್ನು ಅಗಲಿ ಬಂದಿರುವ ಒಂಟಿಸಲಗ ಜಿಲ್ಲೆಯಲ್ಲಿ ಇಬ್ಬರನ್ನು ಬಲಿತೆಗೆದುಕೊಂಡಿದ್ದು ಜನರ ಭೀತಿಗೆ ಕಾರಣವಾಗಿದೆ. ಶುಕ್ರವಾರ ಸಂಜೆ ಗಂಟೇನಹಳ್ಳಿ ಕೆರೆಯಲ್ಲಿ ವಿಹರಿಸುತ್ತಿದೆ. ಹನುಮಂತನಹಳ್ಳಿ, ಸಿದ್ದನಕಟ್ಟೆ, ರಾಮನಹಳ್ಳಿ, ತೀರ್ಥಪುರ, ದೊಡ್ಡರಾಂಪುರ, ಬೆಳವಾಡಿ ಗ್ರಾಮಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿಯಿಂದ ಇರಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೆ.ಎಂ.ಎಚ್.ಪಿ.ಎಸ್ ಶಾಲೆ ವಿದ್ಯಾಥರ್ಿಗಳು ಸಮಗ್ರ ಪ್ರಶಶ್ತಿ 
ಚಿಕ್ಕನಾಯಕನಹಳ್ಳಿ,ಆ.26 : ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಕೆಎಂಎಚ್ಪಿಎಸ್)ಯ ವಿದ್ಯಾಥರ್ಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ ವಿದ್ಯಾಥರ್ಿಗಳನ್ನು ಶ್ಲಾಘಿಸಿದ್ದಾರೆ.
ಬಾಲಕರ ವಿಭಾಗ : ಅಭಿಷೇಕ್-600.ಮೀ.ದ್ವಿತೀಯ, ಶ್ರೀನಿವಾಸ.ಎ-ಲಾಂಗ್ಜಂಪ್ ತೃತೀಯ, ಶ್ರೀನಿವಾಸ-ಶಾಟ್ಪುಟ್-ದ್ವಿತೀಯ, ವಿಜಯ್-ಡಿಸ್ಕಸ್ಥ್ರೋ-ತೃತೀಯ, ವಿಜಯ್.ಆರ್.ಮತ್ತು ತಂಡ-ಕಬಡ್ಡಿ-ಪ್ರಥಮ, ಶ್ರೀನಿವಾಸ ಮತ್ತು ತಂಡ-ವಾಲಿಬಾಲ್-ಪ್ರಥಮ, ಆರ್ಯ ಮತ್ತು ತಂಡ-ಷಟಲ್-ಪ್ರಥಮ, ದರ್ಶನ್.ಪಿ.ಕೆ ಮತ್ತು ತಂಡ-ಥ್ರೋಬಾಲ್-ಪ್ರಥಮ ಸ್ಥಾನಗಳಿಸಿದ್ದಾರೆ.
ಬಾಲಕಿಯರ ವಿಭಾಗ : ಸುಮಿತ್ರ.ಎ-100.ಮೀ ಪ್ರಥಮ, ಅಮೂಲ್ಯ.ಕೆ.-400.ಮೀ-ಪ್ರಥಮ, ಶಿವಮ್ಮ-600.ಮೀ-ದ್ವಿತೀಯ, ಸ್ವಾತಿ.ಎಂ.ಎಸ್-600.ಮೀ-ತೃತೀಯ, ಸುಮಿತ್ರ,ಅಮೂಲ್ಯ, ಶಿವಮ್ಮ, ರಮ್ಯ 4*100.ಮೀ-ಪ್ರಥಮ, ಮಮತ.ಸಿ ಮತ್ತು ತಂಡ ಕಬಡ್ಡಿ-ಪ್ರಥಮ, ಸುಮಿತ್ರ ಮತ್ತು ತಂಡ ಷಟಲ್-ದ್ವಿತೀಯ, ರಮ್ಯ ಮತ್ತು ತಂಡ-ಥ್ರೋಬಾಲ್-ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ.
ಶಾಲೆಯ ವಿದ್ಯಾಥರ್ಿಗಳು ಈ ಎಲ್ಲಾ ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿರುವುದಕ್ಕೆ ಶಾಲೆಯ ದೈಹಿಕ ಶಿಕ್ಷಕರಾದ ಜಗದಾಂಬ ಹಾಗೂ ಶಿಕ್ಷಕರುಗಳು ಅಭಿನಂದಿಸಿದ್ದಾರೆ.

ಚಿ.ನಾ.ಹಳ್ಳಿಯಲ್ಲಿ ತಿರಂಗಾ ರ್ಯಾಲಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಆ.26 : ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಆಗಸ್ಟ್ 29ರಂದು ಬೆಳಗ್ಗೆ 11ಕ್ಕೆ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಿರಂಗಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
74ನೇ ವರ್ಷದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿಗಾಗಿ ದೇಶದ ರಕ್ಷಣೆ ಮಾಡುತ್ತಿರುವ ವಿವಿಧ ಯೋಧರ ಹಾಗೂ ಹುತಾತ್ಮರಾದ ಯೋಧರ ಸ್ವಾಭಿಮಾನದ ಸಂಕೇತಿಕವಾಗಿ ನಗರದ ಪ್ರಮುಖ ಬೀದಿಗಳಲ್ಲಿ ತಿರಂಗಾ ರ್ಯಾಲಿಯನ್ನು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಭಾಗವಹಿಸುವಂತೆ ತಾಲ್ಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶ್ರೀನಿವಾಸಮೂತರ್ಿ ತಿಳಿಸಿದ್ದಾರೆ.


ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ಹರೇನಹಳ್ಳಿ ಗೇಟ್ ಚಿತ್ರಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ನಂದಿಹಳ್ಳಿ ಸಕರ್ಾರಿ ಪ್ರೌಢಶಾಲೆಯ ಮಕ್ಕಳು ಡೊಳ್ಳುಕುಣಿತ ಪ್ರದರ್ಶನ ನೀಡಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳಗುಲಿಯ ಶ್ರೀ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಮಕ್ಕಳು ಹಂದನಕೆರೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

   ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳ ಕೋಲಾಟ ಆಕರ್ಷಣೀಯವಾಗಿತ್ತು.
ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟಿಸಿದರು, ಜಿ.ಪಂ.ಸದಸ್ಯರುಗಳಾದ ರಾಮಚಂದ್ರಯ್ಯ, ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್, ಪುರಸಭಾ ಅಧ್ಯಕ್ಷ ಸಿ.ಟಿ.ದಯಾನಂದ್, ತೀರ್ಥಪರು ಜಿ.ಎಚ್.ಪಿ.ಎಸ್.ನ ಎಸ್.ಡಿ.ಎಂ.ಸಿ.ಅಧ್ಯಕ್ಷೆ ದೇವಾಂಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.