Wednesday, February 2, 2011





ರೈತರು ತಮ್ಮ ಹೆಸರಗಳನ್ನು ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಲು ಸೂಚನೆ
ಚಿಕ್ಕನಾಯಕನಹಳ್ಳಿ. ಫೆ.2: ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ದೊರೆಯುವ ಸವಲತ್ತುಗಳನ್ನು ನೀಡಲು ತಾಲ್ಲೂಕಿನಾದ್ಯಂತ ಇರುವ ರೈತರ ಸಮಗ್ರ ಮಾಹಿತಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿದರ್ೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ನಲ್ಲಿ ದಾಖಲಿಸುವ ಈ ಕಾರ್ಯವನ್ನು ಉಚಿತವಾಗಿ ಇಲಾಖೆ ಕೈಗೊಂಡಿದ್ದು, ರೈತರಿಗೆ ಯಾವುದೇ ಆಥರ್ಿಕ ಹೊರೆ ಇರುವುದಿಲ್ಲ, ಆದ್ದರಿಂದ ಎಲ್ಲಾ ರೈತಬಾಂಧವರು ಇಲಾಖೆಯಲ್ಲಿ ಮುಂದೆ ಸಕರ್ಾರ ನೀಡುವ ಸವಲತ್ತುಗಳನ್ನು ಪಡೆಯಲು ತಮ್ಮ ಹೆಸರಗಳನ್ನು ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಮೊದಲ ಹಂತವಾಗಿ ತಾಲೂಕಿನ ಕಸಬ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಣಿ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದಿರುವ ಅವರು, ಸಂಬಂಧಪಟ್ಟ ಹೋಬಳಿಯ ರೈತರುಗಳು ತಮ್ಮ ಜಮೀನಿನ (ಪಟ್ಟೆ ಪಹಣಿ ಜಮೀನಿಗೆ ಸೇರಿದ) ದಾಖಲಾತಿಗಳನ್ನು ತಂದು ದಾಖಲಿಸುವಂತೆ ಸಹಾಯಕ ಕೃಷಿ ನಿದರ್ೇಶಕರು ಮನವಿ ಮಾಡಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಇಲಾಖೆಯ ಯಾವುದೇ ಸವಲತ್ತುಗಳನ್ನು ಈ ದಾಖಲೆಯ ಆಧಾರದ ಮೇಲೆ ವಿತರಣೆ ಕೈಗೊಳ್ಳುವುದರಿಂದ ಸದರಿ ಪ್ರ್ರಕ್ರಿಯೆಯನ್ನು ಅರಿತು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.
ಗ್ರಾಮಸ್ಥರ ಮನವಿಗೆ ಶೀಘ್ರ ಸ್ಪಂಧಿಸಿದ ತಹಶೀಲ್ದಾರ್ರವರೆಗೆ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಫೆ.2: ತಾಲೂಕಿನ ಶೆಟ್ಟೀಕೆರೆಯ ಗ್ರಾಮಸ್ಥರ ಮನವಿಯ ಮೇರೆಗೆ ಸ್ಥಳಕ್ಕೆ ಆಗಮಿಸಿ ದೊಡ್ಡಕೆರೆ ತೂಬನ್ನೆತ್ತಲು ಅವಕಾಶ ಮಾಡಿಕೊಟ್ಟ ತಹಶೀಲ್ದಾರ್ ಟಿ.ಸಿ.ಕಾಂತರಾಜು ರವರ ಕಾರ್ಯಶೈಲಿಗೆ ಶೆಟ್ಟೀಕೆರೆ ಗ್ರಾ.ಪಂ. ಅಧ್ಯಕ್ಷ ಶಶಿಧರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಶೆಟ್ಟೀಕೆರೆ ದೊಡ್ಡಕೆರೆ ತುಂಬಿ ಕಾಲುವೆಯಲ್ಲಿ ಸೀಪೆಜ್ ಹೋಗುತ್ತಿದ್ದು, ತೂಬನ್ನೆತ್ತಲು ಗ್ರಾಮಸ್ಥರು ಹಲವು ಸಲ ಸಕರ್ಾರದ ಮೊರೆಹೊಗಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆರೆಯ ಅಚ್ಚುಕಟ್ಟುದಾರರು ಹಾಗೂ ಗ್ರಾಮಸ್ಥರು ಕೆರೆಯ ಕಾಲುವೆಯ ಬಳಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ತಹಶೀಲ್ದಾರ್ರವರು ಆಗಮಿಸಿ ತೂಬೆತ್ತಲು ಅವಕಾಶ ಕೊಡುವವರೆಗೆ ಸ್ಥಳವನ್ನು ಬಿಟ್ಟು ಕದಲುವುದಿಲ್ಲವೆಂದು ಹಠ ಹಿಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಾಂತರಾಜು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವಿಯನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಶಶಿಧರ್ ಈ ಭಾಗದಲ್ಲಿ 250 ಹೆಕ್ಟೇರ್ಗೂ ಅಧಿಕ ಜಮೀನಿನ ರೈತರು ಈ ಕೆರೆಯ ತೊಬನ್ನೆತ್ತುವುದರಿಂದ ಭತ್ತ ಬೆಳೆಯಲು ಅವಕಾಶವಾಗುತ್ತದೆ, ಯಾರದೋ ಕೆಲವೇ ಬೆರಳಿಕೆಯಷ್ಟು ಜನರ ಹಿತಾಸಕ್ತಿಗೋಸ್ಕರ ನೂರಾರು ಜನರಿಗೆ ಆಗುವ ಅನುಕೂಲವನ್ನು ತಪ್ಪಿಸುವುದು ಸರಿಯಲ್ಲ, ನಮ್ಮ ಮನವಿಯನ್ನು ಪರಿಗಣಿಸಿ ತೊಬನ್ನೆತ್ತಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರ ಹಾಗೂ ಕೆರೆ ಅಚ್ಚುಕಟ್ಟುದಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರವರು, ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಈ ನೀರು ಬಳಕೆಯ ಬಗ್ಗೆ ತೀಮರ್ಾನಿಸಲು ಎ.ಸಿ.ಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ಇದೆ, ಆ ಸಮಿತಿಯ ಸದಸ್ಯನಾಗಿರುವ ನಾನು, ಸಮಿತಿಯ ತೀಮರ್ಾನದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ತಕ್ಷಣವೇ ಪ್ರತಿಭಟನಾಕಾರರು ತಿಪಟೂರು ಎ.ಸಿ.ಯವರನ್ನು ದೂರವಾಣಿಯಲ್ಲಿ ಸಂಪಕರ್ಿಸಿದ ಹಿನ್ನೆಲೆಯಲ್ಲಿ ಎ.ಸಿ.ಯವರು ಜಿಲ್ಲಾಧಿಕಾರಿಗಳ ಸಭೆಯೊಂದರ ನಡಾವಳಿಯಂತೆ ತಹಶೀಲ್ದಾರ್ರವರೆಗೆ ಸೂಚಿಸಿದ್ದಾರೆ. ತಹಶೀಲ್ದಾರ್ರವರು ಅಚ್ಚುಕಟ್ಟುದಾರರು ಕೆರೆ ನೀರನ್ನು ಉಪಯೋಗಿಸಿಕೊಳ್ಳಲು ತಿಳಿಸಿದ್ದಾರೆ.
ಈ ಕೆರೆಯ ಕಾಲುವೆಯ ದುರಸ್ಥಿಗಾಗಿ ತಂದಿದ್ದ ಪರಿಕರಗಳನ್ನು ಕಿಡಿಗೇಡಿಗಳು ಕದ್ದು ಹೋಯ್ದಿದ್ದಾರೆಂದು ಈ ಸಂದರ್ಭದಲ್ಲಿ ಗ್ರಾಮಸ್ಥರು ತಹಶೀಲ್ದಾರ್ರವರೆಗೆ ದೂರಿದರು.
ತಹಶೀಲ್ದಾರ್ರವರ ಶೀಘ್ರ ಸ್ಪಂದನೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ, ಈ ಪ್ರತಿಭಟನೆಯಲ್ಲಿ ಭೈರೇಶ್, ಅರುಣ, ರಾಮಕೃಷ್ಣ ಜೋಯಿಸ್, ತೋಂಟಧಾರ್ಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.