Thursday, January 31, 2013


ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮ


ಚಿಕ್ಕನಾಯಕನಹಳ್ಳಿ,ಜ.31 : ರಾಜ್ಯ ಮಟ್ಟದ ಪತ್ರಿಕೆಗಳು ತನ್ನ ಪ್ರಸಾರ ಸಂಖ್ಯೆ ಹೆಚ್ಚಿಸಲು ನಿಗಧಿಪಡಿಸಿದ್ದ ಬೆಲೆಯಷ್ಟೇ ಪ್ರಜಾಪ್ರಗತಿ ಪತ್ರಿಕೆ ನಿಗಧಿ ಪಡಿಸಿದಾಗಲೂ  ಜನ ಕೊಳ್ಳುತ್ತಿದ್ದ ಪತ್ರಿಕೆ ಪ್ರಜಾಪ್ರಗತಿ ಎಂದು ಕವಿ-ಲೇಖಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ನಡೆದ ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸ್ಥಳೀಯ ಪತ್ರಿಕೆಯೊಂದು 25ವರ್ಷಗಳಿಂದ ಪತ್ರಿಕೆಯನ್ನು ಉತ್ತಮವಾಗಿ ನಡೆಸುವುದು ಸಣ್ಣ ವಿಷಯವಲ್ಲ, ಜಾತಿ ಪತ್ರಿಕೆಯಾಗಿ ಉಳಿಯದೆ ಸಮಾಜದ ಜನ ಒಪ್ಪುವ ರೀತಿಯಲ್ಲಿ ಸುದ್ದಿಗಳನ್ನು ನೀಡುತ್ತ  ರಾಜ್ಯ ಮಟ್ಟದ ಪತ್ರಿಕೆಗಳ ಸಮನಾಗಿ ಪ್ರಜಾಪ್ರಗತಿ ಪತ್ರಿಕೆ ಮುಂದಾಗುತ್ತಿದೆ.
ಗಂಟೆಗಟ್ಟಲೆ ಓದುವ ಸುದ್ದಿಗಿಂತ ಜನರಿಗೆ ಪತ್ರಿಕೆಯನ್ನು ಜನ ಬಯಸುವುದು ಸುದ್ದಿಯ ಪ್ರಮಾಣದ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಎಷ್ಠಿರುತ್ತದೆ ಎಂಬ ಅಂಶದಿಂದ ಎಂದರಲ್ಲದೆ ಸುದ್ದಿಯನ್ನು ಜನರಿಗೆ ಮುಟ್ಟಿಸುವಾಗ ಔಚಿತ್ಯ ಇರಬೇಕು, ಲೇಖನಿಗಳು ಜನರಲ್ಲಿ ಅರಿವನ್ನು ಮೂಡಿಸುವಂತಾಗಬೇಕು ಈ ಅಂಶವನ್ನು ಪ್ರಜಾಪ್ರಗತಿ ಪತ್ರಿಕೆ ಆರಂಭ ದಿನದಿಂದಲೂ ಹೊಂದಿದೆ ಎಂದರು.
ಅಪರಾಧಿ ಆಧಾರಿತ ಪತ್ರಿಕೆಗಳು ಸಮಾಜದ ಪ್ರಭಾವವನ್ನು ಬದಲಾಯಿಸುತ್ತಿದೆ, ಪತ್ರಿಕೆಗಳಿಗೆ ಸುದ್ದಿಗಳ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಅವಶ್ಯ, ರಾಜ್ಯಮಟ್ಟದ ಪತ್ರಿಕೆಗಳು ಪಕ್ಷಗಳಿಗೆ ಮಾರಿಕೊಂಡಿವೆ, ಪತ್ರಿಕೆಗಳು ರಾಜಕಾರಣವನ್ನು ಸ್ವಾಗತಿಸದೆ, ರಾಜಕಾರಣಿಗಳನ್ನು ದೂರ ಇಟ್ಟಾಗಲೇ ಪತ್ರಿಕಾ ಧರ್ಮ ಉಳಿಯುವುದು ಎಂದರಲ್ಲದೆ 1970ರ ದಶಕದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಲಕೇಶ್ ಪತ್ರಿಕೆ ಬಂಡಾಯ, ರೈತ ಚಳುವಳಿಗಳಿಂದಾಗಿ ಪತ್ರಿಕೆ ಬೆಳೆದ ಕಾಲ ಎಂದು ತಿಳಿಸಿದರು.
ಸಂಪಾದಕ ಎಸ್.ನಾಗಣ್ಣ ಮಾತನಾಡಿ ಸ್ಥಳೀಯ ಪತ್ರಿಕೆಗಳು ಅಮ್ಮನಂತೆ, ರಾಜ್ಯಪತ್ರಿಕೆಗಳು ಚಿಕ್ಕಮ್ಮನಿದ್ದಂತೆ, ಸ್ಥಳೀಯ ಪತ್ರಿಕೆ ಸ್ಥಳೀಯ ಪ್ರದೇಶಗಳನ್ನು ಅಭಿವೃದ್ದಿ ಪಡಿಸಲು ಮಗುವಿಗೆ ಶಿಕ್ಷೆ ನೀಡುವಂತೆ ಕಠಿಣ ನಿಧರ್ಾರ ತಾಳುತ್ತದೆ, ರಾಜ್ಯಮಟ್ಟದ ಪತ್ರಿಕೆಗಳು ಈ ನಿಟ್ಟಿನಲ್ಲಿ ಮೃದುಧೋರಣೆಯನ್ನು ತೆಳೆಯುತ್ತವೆ ಎಂದರಲ್ಲದೆ, ಪತ್ರಿಕೆಗಳು ಬರವಣಿಗೆ ಮತ್ತು ಬವಣೆಯನ್ನು ಎರಡು ಸಮನಾಗಬೇಕು ಎಂದರು. ಪತ್ರಿಕೆಗಳು ದರ ನಿಗಧಿಪಡಿಸುವ ಸಮಯದಲ್ಲಿ ಪತ್ರಿಕೆಗಳು ಮೌಲ್ಯವನ್ನು ಕಳೆದುಕೊಂಡವು ಎಂದರಲ್ಲದೆ ಪತ್ರಿಕೆಗಳಿಗೆ ಜಾಹಿರಾತುಗಳಿಲ್ಲದಿದ್ದರೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
 ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ಬಿಳಿಗೆರೆ ಶಿವಕುಮಾರ್ ಪತ್ರಿಕೆಯನ್ನು ಕೊಂಡು ಓದುವ ರೂಡಿ ಬೆಳೆಸಿಕೊಳ್ಳಬೇಕು, ಇತರರು ಕೊಂಡಿರುವ ಪತ್ರಿಕೆಯನ್ನು ಅವರ ನಂತರ ಓದ ಬಹುದು ಎಂಬ ಸಂಪ್ರದಾಯವನ್ನು ಬಿಡಬೇಕು ಎಂದರು. 

Tuesday, January 29, 2013


ಜಾತಿವರು ಜನಗಣತಿ ನಡೆಯಲು ಸಕರ್ಾರಕ್ಕೆ ಮನವಿ
ಚಿಕ್ಕನಾಯಕನಹಳ್ಳಿ,ಜ.28 : 2004-05ರಲ್ಲಿ ಜಾತಿವಾರು ಜನಗಣತಿಗೆ ಕೇಂದ್ರ ಸಕರ್ಾರ ಅನುಮತಿ ನೀಡಿತ್ತು, ಆದರೆ ಅಲ್ಲಿಂದ ಇಲ್ಲಿಯವರೆಗೆ ಎರಡು ಮೂರು ಆಯೋಗ ವರದಿ ನೀಡಿದರೂ ಸಕರ್ಾರದ ನಿರ್ಲಕ್ಷತನದಿಂದ ಅನುಷ್ಠಾನಗೊಂಡಿಲ್ಲ, ನಾನು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಮತ್ತೊಮ್ಮೆ ಜಾತಿವರು ಜನಗಣತಿ ನಡೆಯಲು ಸಕರ್ಾರಕ್ಕೆ ನನ್ನ ಮೊದಲನೆ ಆಯೋಗದ ಸಭೆಯಲ್ಲಿಯೇ ವರದಿ ನೀಡಿರುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಜಾತಿವಾರು ಜನಗಣತಿ ವಗರ್ೀಕರಣದ ಬಗ್ಗೆ ಹಿಂದುಳಿದ ವರ್ಗಗಳ  ವಿಚಾರವಾಗಿ ಹೊಸದಾಗಿ ಸೇರಿಸುವಿಕೆ ಅಥವಾ ತೆಗೆಯುವಿಕೆಯ ಸಮಸ್ಯೆಯಿದ್ದರೆ ಕಾನೂನು ಮಿತಿಯಲ್ಲಿ ಸಮಸ್ಯೆ ಬಗೆಹರಿಸುವುದಾಗಿಯೂ,  ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಲ್ಲಿ ಈ ವರ್ಗಗಳಿಗೆ ತೊಂದರೆ ಉಂಟಾಗಿ, ಆ ಬಗ್ಗೆ ನಮ್ಮ ಗಮನಕ್ಕೆ ತಂದರೆ ಪರಿಶೀಲಿಸಿ ನ್ಯಾಯ ಒದಗಿಸುವುದಾಗಿ ತಿಳಿಸಿದರು.
ಹಿಂದುಳಿದ ವರ್ಗದ ಜಾತಿಗಳ ಸಮಸ್ಯೆ ಬಗೆಹರಿಸಲು ಸಮೀಕ್ಷೆ ಮಾಡಿ ಮುಖ್ಯಂತ್ರಿಗಳಿಗೆ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದಶರ್ಿಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ ಅವರು, 1972ರಲ್ಲಿ ಆರಂಭಗೊಂಡ ಆಯೋಗದಿಂದ ಇಲ್ಲಿಯವರೆಗೂ ಬೇರೆ ಯಾವ ಅಧ್ಯಕ್ಷರುಗಳು ಇಷ್ಟು ಬೇಗ ವರದಿ ನೀಡಿರುವುದಿಲ್ಲ ಎಂಬ ಬಗ್ಗೆ 
ಹಿಂದುಳಿದ ವರ್ಗಗಳ ಆಥರ್ಿಕ ಹಿನ್ನಲೆ, ಶೈಕ್ಷಣಿಕ ಹಿನ್ನಲೆ, ಆಚಾರ ವಿಚಾರ, ಪದ್ದತಿ, ಸಾಮಾಜಿಕ, ಸಂಸ್ಕಾರ ಹಿನ್ನಲೆಗಳನ್ನು ಅರಿತು ಮತ್ತೊಮ್ಮೆ ಜಾತಿ ಪುನರ್ವಿಂಗಡನೆ ಮಾಡಲು ತಿಳಿಸಿರುವುದಾಗಿ ಹಾಗೂ ಈಗಿನ ಪರಿಸ್ಥಿತಿ ಬದಲಾಗಿರುವುದರಿಂದ ಬ್ರಿಟೀಷ್ ಅಧಿಕಾರಿಗಳು ಬಹಳ ವರ್ಷದ ಹಿಂದೆ ಬರೆದಿದ್ದ ತಷ್ಟರ್ ಪುಸ್ತಕವನ್ನು ಬದಲಾಯಿಸಲು ಕುಲಶಾಸ್ತ್ರಜ್ಞರನ್ನು ಭೇಟಿ ಮಾಡಿ ವಿಶೇಷವಾಗಿರುವಂತಹ ಗ್ರಂಥವನ್ನು ರಚಿಸಲು ಮುಂದಾಗಿದ್ದು ಉನ್ನತ ಅಧ್ಯಯನ ಮಾಡಲು  ಈ ಗ್ರಂಥದಿಂದ ಪ್ರತಿಯೊಬ್ಬ ವಿದ್ಯಾಥರ್ಿಗಳಿಗೂ ಅನುಕೂಲವಾಗಲಿದೆ, ಈ ಗ್ರಂಥ ಸಿದ್ದವಾಗಲು 2ಕೋಟಿಯಷ್ಟು ಹಣ ವೆಚ್ಚವಾಗಲಿದ್ದು ಗ್ರಂಥ ಸಿದ್ದವಾಗಿ ಮಾರಾಟವಾದರೆ ಸುಮಾರು 6ಕೋಟಿಯಷ್ಟು ಲಾಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಮಡಿವಾಳ ಜನಾಂಗದ ಅಧ್ಯಕ್ಷ ಹಾಗೂ ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ,  ಎಂ.ಎಲ್.ಮಲ್ಲಿಕಾರ್ಜನಯ್ಯ, ನಾಗರಾಜು ಸೇರಿದಂತೆ ಹಲವರಿದ್ದರು.
ಆಧಾರ್ ಕಾಡರ್್ ಬಗ್ಗೆ ತಿಳಿಸಲು ಬೃಹತ್ ಪಾದಯಾತ್ರೆ
ಚಿಕ್ಕನಾಯಕನಹಳ್ಳಿ,ಜ.29:  ಆಧಾರ್ ಕಾಡರ್್ ಸವಲತ್ತುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಾದಯಾತ್ರೆಯು ಫೆಬ್ರವರಿ 3ರಿಂದ ಆರಂಭಗೊಳ್ಳುವುದು, ತಿಪಟೂರಿನಲ್ಲಿ ಉದ್ಘಾಟನೆಗೊಂಡು, ಶೆಟ್ಟಿಕೆರೆ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ಬರುತ್ತದೆ, 4ನೇ ತಾರೀಖು ಕಿಬ್ಬನಹಳ್ಳಿ ಮಾರ್ಗವಾಗಿ ದೊಡ್ಡಗುಣಿಯಲ್ಲಿ ತಂಗಿದ ನಂತರ 5ರಂದು ಗುಬ್ಬಿ, 6ರಂದು ಹೆಗ್ಗರೆಯಲ್ಲಿರುವ  ಗಂಗಾಧರಯ್ಯ ಮೆಮೋರಿಯಲ್ ಹಾಲ್ನಲ್ಲಿ ಸಭೆ ನಡೆಯಲಿದ್ದು ಕೇಂದ್ರದ ಹಲವಾರು ಮುಖಂಡರು ಭಾಗವಹಿಸಲಿದ್ದಾರೆ.
ಸಕರ್ಾರದಿಂದ ಜನ ಸಾಮಾನ್ಯರಿಗೆ ತಲುಪುತ್ತಿರುವ ಅನುದಾನಗಳು ಮಾಸಾಶನ ಇನ್ನಿತರ ಸಹಾಯಧವನ್ನು ನೇರವಾಗಿ ತಲುಪಲು ಮಹತ್ವಾಕಾಂಕ್ಷಿ ವ್ಯವಸ್ಥೆಯೊಂದನ್ನು ಕಾಂಗ್ರೇಸ್ ಸಕರ್ಾರ ಜಾರಿಗೊಳಿಸಿದೆ. ಇನ್ನು ಮುಂದೆ ಫಲನುಭಾವಿಗಳು ಆಧಾರ್ ಕಾಡರ್್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ವಿವರಗಳನ್ನು ಅವರ ಬ್ಯಾಂಕ್ ಖಾತೆಗೆ ಸಮೀಕರಿಸಿ ಅದರ ಮೂಲಕ ಫಲಾನುಭವಿಗಳಿಗೆ ತಲುಪಬೇಕಾದ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಬಹುದಾಗಿದೆ, ಉದ್ಯೋಗ ಖಾತ್ರಿ ಯೋಜನೆಯಡಿ ಸವಲತ್ತು ಪಡೆಯುತ್ತಿರುವವರು, ವೃದ್ದಾಪ್ಯ ವೇತನ, ವಿಧವಾ ವೇತನಾ, ಅಂಗವಿಕಲರ ವೇತನ, ಶಾಲಾ ಶಿಕ್ಷಕರು ಮತ್ತು ವಿದ್ಯಾಥರ್ಿಗಳ ವಿದ್ಯಾಥರ್ಿ ವೇತನ ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಸೇರಿದಂತೆ ನಿಧರ್ಿಷ್ಟ ಅವಧಿಗೆ ಸಂಬಳದ ರೂಪದಲ್ಲಿ ಹಣ ಪಡೆಯುತ್ತಿರುವವರು ಹಾಗೂ ಇತರ ಸೌಲಭ್ಯ ಪಡೆಯಲು ಆಧಾರ್ ಅವಶ್ಯಕತೆಯಾಗಿದ್ದು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸಕರ್ಾರ ದಿಟ್ಟ ಹೆಜ್ಜೆ ಇಟ್ಟಿದ್ದು ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಆರ್.ನಾರಾಯಣ್, ಬಿ.ಲಕ್ಕಪ್ಪ, ಕಾಂಗ್ರೆಸ್ ಪಕ್ಷದ ವಿಧಾನಸಭಾ ವೀಕ್ಷಕ ಕ್ಯಾಪ್ಟನ್ ಸೋಮಶೇಖರ್, ಆರ್.ರಾಜೇಂದ್ರ, ತುಮಕೂರು ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಆರ್.ರಾಜೇಂದ್ರ,  ಯುವ  ಮುಖಂಡರುಗಳಾದ ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ, ವಾಸು ಸೇರಿದಂತೆ ಹಲವರಿದ್ದರು.
aPÀÌ£ÁAiÀÄPÀ£ÀºÀ½îAiÀÄ MPÀÌ°UÀ ¸ÀªÀÄÄzÁAiÀÄzÀªÀgÀÄ D¢ZÀÄAZÀ£ÀVj ªÀĺÁ¸ÀA¸ÁÜ£À ¦ÃoÁzsÀåPÀëgÁzÀ ¨Á®UÀAUÁzsÀgÀ£ÁxÀ¸Áé«ÄUÀ¼À ¨sÀPÀÛ ¸ÀAUÀªÀÄ ¥ÀÄuÁågÁzsÀ£À ¸ÀªÀÄgÀA¨sÀPÉÌ vÉgÀ¼À®Ä ±Á¸ÀPÀ ¹.©.¸ÀÄgÉñï¨Á§Ä 30§¸ïUÀ¼À ªÀåªÀ¸ÉÜ PÀ°à¹zÀÝgÀÄ.  D¢ZÀÄAZÀ£ÀVjUÉ vÉgÀ¼ÀªÀ ¨sÀPÀÛjUÉ ©¼ÉÆÌqÀĪÀ ¸ÀAzÀ¨sÀðzÀ°è  MPÀÌ°UÀ ¸ÀªÀÄÄzÁAiÀÄzÀªÀgÁzÀ ªÀiÁf f.¥ÀA.¸ÀzÀ¸Àå ¤AUÀ¥Àà, ªÀiÁf. UÁæ.¥ÀA.¸ÀzÀ¸Àå £ÁUÀgÁdÄ, ©.J¸ï.¤AUÀ¥Àà, ºÉZï.©.J¸ï.£ÁgÁAiÀÄtUËqÀ, mË£ï ¨ÁåAPï ªÀiÁf CzsÀåPÀë ¹.J¸ï.£ÀlgÁeï G¥À¹ÜvÀjzÀÝgÀÄ.



ಪ್ರಜಾಪ್ರಗತಿಗೆ 25ರ ಸಂಭ್ರಮ
ಚಿಕ್ಕನಾಯಕನಹಳ್ಳಿ,ಜ.29: ಪ್ರಜಾಪ್ರಗತಿ ಓದುಗರ ಬಳಗ ಹಾಗೂ ರೋಟರಿ ಕ್ಲಬ್ ವತಿಯಿಂದ ಇದೇ30ರಂದು(ಇಂದು) ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮವನ್ನು ಸಂಜೆ 6ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು,  ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ವಹಿಸಲಿದ್ದು, ಉದ್ಘಾಟನೆಯನ್ನು ಕವಿ-ಲೇಖಕ ಎಸ್.ಜಿ.ಸಿದ್ದರಾಮಯ್ಯ ನೆರವೇರಿಸಲಿದ್ದಾರೆ, ಸಮಾರಂಭದಲ್ಲಿ  ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣನವರಿಗೆ ಗೌರವಾಭಿನಂದನೆ ಸಲ್ಲಿಸಲಿದ್ದು, 'ಓದುಗನೆ ಪತ್ರಿಕೆಯ ವಾರಸುದಾರ' ವಿಷಯವಾಗಿ  ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ಬಿಳಿಗೆರೆ ಶಿವಕುಮಾರ್ ಮಾತನಾಡಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ 'ಓದುಗನೆ ಪತ್ರಿಕೆಯ ವಾರಸುದಾರ' ವಿಷಯವಾಗಿ  ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಎಂ.ಸಿ.ಲಲಿತ, ಬಿ.ಇ.ಓ ಸಾ.ಚಿ.ನಾಗೇಶ್, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ಉಪಸ್ಥಿತರಿರುವರು.

Sunday, January 27, 2013


ಸಮಾನತೆಯ ಭಾತೃತ ಕಾಪಾಡಿ : ಸಿ.ಬಿ.ಸುರೇಶ್ಬಾಬು

ಚಿಕ್ಕನಾಯಕನಹಳ್ಳಿ,ಜ.26 : ಸಮಜದಲ್ಲಿ ನಡೆಯುತ್ತಿರುವ ದುರ್ಘಟನೆಗಲು ತಪ್ಪಿ, ಸಮಾಜ ಸಮಾನತೆಯ ಭಾತೃತ್ವದಿಂದ ಬಾಳಿದಾಗ ಡಾ.ಬಿ.ಆರ್.ಅಂಭೇಡ್ಕರ್ ರಚಿಸಿರುವ ಸಂವಿಧಾನದ ಸಾರ್ಥಕತೆ ಹೆಚ್ಚುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 64ನೇ ಗಣರಾಜ್ಯೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಸಮಾಜವನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು, ಸಂವಿದಾನದಲ್ಲಿರುವ ಅಂಶವನ್ನು ಅರ್ಥಪೂರ್ಣವಾಗಿ ಆಚರಿಸಿ ಅದರ ಗೌರವ ಹೆಚ್ಚಿಸಬೇಕು ಎಂದರಲ್ಲದೆ ಯುವಶಕ್ತಿ ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದರು.  
ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮಾತನಾಡಿ ಸಂವಿಧಾನದ ತತ್ವದ ಮೂಲಕ ಸಕರ್ಾರ ಆಡಳಿತ ವ್ಯವಸ್ಥೆ ಹೊಂದಿದೆ ಈ ಮೂಲಕ ಸಮಾಜದ ಐಕ್ಯತೆಯನ್ನು ಎಲ್ಲರ ಸಹಯೋಗದ ವಿಶ್ವಾಸಗಳಿಸಿದೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಸಮಾಜದ ಎಲ್ಲರೂ ಭ್ರಾತೃತ್ವ, ಐಕ್ಯತೆಯಿಂದ ಬಾಳುವಂತೆ ಕರೆ ನೀಡಿದರು.
ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ 64ನೇ ಗಣರಾಜ್ಯೋತ್ಸವವನ್ನು ಇಡೀ ದೇಶಾದ್ಯಂತ ಆಚರಿಸುತ್ತಿದ್ದು, ಸಂವಿಧಾನದ ತತ್ವದಂತೆ ಎಲ್ಲರು ತಲೆಭಾಗಬೇಕು ಎಂದರು.
ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾಲಯದ 2011-12ನೇ ಸಾಲಿನ ಘಟಿಕೋತ್ಸವದಲ್ಲಿ ಸಮಾಜ ಕಾರ್ಯ ವಿಭಾಗದಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಚಿಕ್ಕನಾಯಕನಹಳ್ಳಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳಾದ ನಂದಿನಿ, ನೇತ್ರಾವತಿ, ಪ್ರತಿಭಾನಾಯಕಿ, ನಂದಿನಿ ಹಾಗೂ ಷಟಲ್ ಮತ್ತು ಜಾವೆಲಿನ್  ಸ್ಪಧರ್ೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ತೀರ್ಥಪುರ ಸಕರ್ಾರಿ ಪ್ರೌಡಶಾಲೆಯ  ಉಷಾ,  ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಬಾಲ ವಿಜ್ಞಾನಿ ಪ್ರಶಸ್ತಿ ಪಡೆದ ಅಂಭೇಡ್ಕರ್ ಪ್ರೌಡಶಾಲೆಯ ಡಿ.ಭವ್ಯ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ ಉಪಸ್ಥಿತರಿದ್ದರು.


ಸಂಗೊಳ್ಳಿರಾಯಣ್ಣರ ಬಗ್ಗೆ ಅರಿಯುವುದು ಅಗತ್ಯ 
ಚಿಕ್ಕನಾಯಕನಹಳ್ಳಿ,ಜ.26 : ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಸಂಗೊಳ್ಳಿರಾಯಣ್ಣರ ಬಗ್ಗೆ ಇಡೀ ದೇಶಕ್ಕೆ ತಿಳಿಸುವ ಸಲುವಾಗಿ ಸಂಗೊಳ್ಳಿರಾಯಣ್ಣರ ಚಿತ್ರಕ್ಕೆ ಶ್ರಮಪಟ್ಟಿರುವುದಾಗಿ ಚಿತ್ರದ ಸಂಭಾಷಣಾಕಾರ ಕೇಶವಾದಿತ್ಯ ತಿಳಿಸಿದರು.
ಪಟ್ಟಣದ ರೇವಣಪ್ಪನ ಮಠದಲ್ಲಿ ನಡೆದ  ಸಂಗೊಳ್ಳಿರಾಯಣ್ಣರ 182ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಸಂಗೊಳ್ಳಿರಾಯಣ್ಣ ಮಾಡಿದ ತ್ಯಾಗದ ಬಗ್ಗೆ ಅಲ್ಲಿನ ಜನತೆಗೆ ಮಾತ್ರ ತಿಳಿದಿತ್ತು, ಈ ಬಗ್ಗೆ ಇಡೀ ಪ್ರಪಂಚದ ಜನತೆಗೆ ತಿಳಿಯಬೇಕು ಎಂಬ ಉದ್ದೇಶದಿಂದ ಹಾಗೂ ರಾಯಣ್ಣನವರಿಗೆ ದೇಶದ ಬಗ್ಗೆ ಇದ್ದ ಭಕ್ತಿಯನ್ನು ತಿಳಿಸಲು ಚಿತ್ರಕ್ಕೆ ಶ್ರಮಿಸಿರುವುದಾಗಿ  ತಿಳಿಸಿದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಸಂಗೊಳ್ಳಿರಾಯಣ್ಣ ದೇಶಕ್ಕಾಗಿ ಇತಿಹಾಸ ನಿಮರ್ಿಸಿದವರು, ಅಂತಹ ಇತಿಹಾಸ ಪುರುಷರನ್ನು ಈಗಿನ ಯುವಶಕ್ತಿ ಆದರ್ಶವಾಗಿಟ್ಟುಕೊಳ್ಳಬೇಕು ಎಂದರಲ್ಲದೆ ಸಿ.ಎಲ್.ರವಿಕುಮಾರ್ರವರು ಸಂಗೊಳ್ಳಿರಾಯಣ್ಣನವರು ಸುಮಾರು 15ವರ್ಷದಿಂದ ಈ ರಾಯಣ್ಣರ ನೆನಪು ಮಾಡಿಕೊಂಡು ಮಕ್ಕಳಲ್ಲಿ ಸ್ಪೂತರ್ಿ ತುಂಬುತ್ತಿರುವ ಬಗ್ಗೆ ಶ್ಲಾಘಿಸಿದರು.
ಸಮಾರಂಭದಲ್ಲಿ ಮಾಜಿ ಪುರಸಭಾಧ್ಯಕ್ಷ ಕೆ.ರಾಮಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್, ಸಿ.ಎಲ್.ರವಿಕುಮಾರ್, ಕೆ.ಜಿ.ಕೃಷ್ಣೆಗೌಡ, ಸಿ.ಎಂ.ಬೀರಲಿಂಗಯ್ಯ,  ತುರುವೇಕೆರೆ ನರಸಿಂಹಮೂತರ್ಿ, ಪ್ರೊ.ಧನಪಾಲ್ ಉಪಸ್ಥಿತರಿದ್ದರು.

aPÀÌ£ÁAiÀÄPÀ£ÀºÀ½î vÁ®ÆèQ£À zÉÆqÉØuÉÚUÉgÉ ¸À«ÄÃ¥À«gÀĪÀ ¨É®UÀÆj£À°è £ÀqÉAiÀÄÄwÛgÀĪÀ PÉÆÃn gÀÄzÀæ ªÀĺÁAiÀiÁUÀ PÁAiÀÄðPÀæªÀÄzÀ°è PÀÄ¥ÀÆàj£À qÁ.AiÀÄwñÀégÀ²ªÁZÁAiÀÄð¸Áé«Ä ¨sÁUÀªÀ»¹ gÀÄzÁæQë ²ªÀ°AUÀPÉÌ ¨sÀQÛ ¸ÀªÀĦð¹zÀgÀÄ.

aPÀÌ£ÁAiÀÄPÀ£ÀºÀ½îAiÀÄ §£À±ÀAPÀj zÉêÁ®AiÀÄzÀ°è §£ÀzÀ ºÀÄtÂÚªÉÄ ¥ÀæAiÀÄÄPÀÛ zÉëUÉ «±ÉõÀ C®APÁgÀzÉÆA¢UÉ ¥ÀlÖtzÀ ¥ÀæªÀÄÄR ©Ã¢AiÀÄ°è §£À±ÀAPÀj CªÀÄä£ÀªÀgÀ gÀxÉÆÃvÀìªÀªÀÅ «dÈA¨sÀuɬÄAzÀ £ÉgÀªÉÃjvÀÄ. 

aPÀÌ£ÁAiÀÄPÀ£ÀºÀ½îAiÀÄ ²°à «±Àé£ÁxïgÀªÀgÀ£ÀÄß vÀĪÀÄPÀÆj£À°è £ÀqÉzÀ UÀtgÁeÉÆåÃvÀìªÀ ¸ÀAzÀ¨sÀðzÀ°è f¯Áè DqÀ½vÀ ªÀw¬ÄAzÀ ¸À£Á䤸À¯Á¬ÄvÀÄ. F ¸ÀAzÀ¨sÀðzÀ°è ¸ÀaªÀ ¸ÉÆUÀqÀÄ ²ªÀtÚ, «zsÁ£À ¥ÀjµÀvï ¸ÀzÀ¸Àå qÁ.JA.Dgï.ºÀÄ°£ÁAiÀÄÌgï, f.¥ÀA.CzsÀåPÉë ¥ÉæêÀĪÀĺÁ°AUÀ¥Àà, £ÀUÀgÀ¸À¨sÉAiÀÄ ¥Àæ¨sÁgÀ CzsÀåPÀë C¸ÀèA¥ÁµÀ ¸ÉÃjzÀAvÉ UÀtågÀÄ ºÁdjzÀÝgÀÄ.

Thursday, January 24, 2013


ಗುಳೇ ಹೋಗುವುದನ್ನು ಬಿಟ್ಟು ಉಪ ಕಸಬುಗಳಿಗೆ ಮಾರುಹೋಗಿ
ಚಿಕ್ಕನಾಯಕನಹಳ್ಳಿ,ಜ.23 : ರೈತರಿಗೆ ಕೃಷಿ ಕೈಕೊಟ್ಟಾಗ ಪಟ್ಟಣದ ಪ್ರದೇಶಕ್ಕೆ ಗುಳೇ ಹೋಗಿ ಕಷ್ಟ ಪಡುವುದಕ್ಕಿಂತ ಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ ಸಾಲವನ್ನು ಪಡೆದುಕೊಂಡು ಹಳ್ಳಿಯಲ್ಲೇ ಸಣ್ಣಪುಟ್ಟ ವ್ಯಾಪಾರ ಅಥವಾ ಉಪಕಸುಬುಗಳನ್ನು ಮಾಡಿ, ಆ ಮೂಲಕ ರೈತರು ತಮ್ಮ ಆಥರ್ಿಕ ಮಟ್ಟ ಸುಧಾರಿಸಿಕೊಳ್ಳಿ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು.
 ತಾಲ್ಲೂಕಿನ ರಾಮನಹಳ್ಳಿಯಲ್ಲಿ ನಡೆದ ರೈತರಿಗೆ ಸಾಲ ಸೌಲಭ್ಯದ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿ ಬಿಟ್ಟು ನಗರ ಪ್ರದೇಶಕ್ಕೆ ತೆರಳುವವರ ಜೀವನ ಕಷ್ಟಕರವಾಗಿರುತ್ತದೆ, ತಮ್ಮ ಹುಟ್ಟಿದ ಊರಿನಲ್ಲೇ ಕೃಷಿ ಜೊತೆಗೆ ಸಣ್ಣಪುಟ್ಟ ವ್ಯಾಪಾರ ಮಾಡಿದರೆ ತಮ್ಮ ತಂದೆ, ತಾಯಿ, ಕುಂಟುಂಬವನ್ನು ನೋಡಿಕೊಂಡು  ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂದರಲ್ಲದೆ ತಾಲ್ಲೂಕಿನ ಎಲ್ಲಾ ರೈತರಿಗೂ ನನ್ನ ನಿದರ್ೇಶಕನ ಅವಧಿಯಲ್ಲಿ ಸಾಲ ಕೊಡಿಸಿದ್ದು ಈ ರೈತರು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿದರೆ ಅವರಿಗೆ ಪುನಃ ಬಡ್ಡಿ ರಹಿತ ಸಾಲ ಕೊಡಿಸುತ್ತಿರುವುದಾಗಿಯೂ ಹಾಗೂ ಹಲವು ರೈತರಿಗೆ ಸಾಲ ಮನ್ನ ಆಗಿರುವ ಬಗ್ಗೆಯೂ ತಿಳಿಸಿದರು.
ಈ ಭಾಗದ ರೈತರ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ, ಶೆಟ್ಟಿಕೆರೆಯ ಸಾಸಲಿನ ಮೂಲಕ ತಾಲ್ಲೂಕಿನ ಹಲವು ಕೆರೆಗಳಿಗೆ ಕುಡಿಯುವ ನೀರು ದೊರಕಲಿದೆ, ಆ ನೀರನ್ನು ಗುಡ್ಡಗಾಡು ಪ್ರದೇಶಗಳಿಗೂ ಹರಿಸಲು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿರುವುದಾಗಿ ತಿಳಿಸಿದರು. ಈ ಭಾಗಕ್ಕೆ ನೀರನ್ನು ಹರಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ರೈತರೊಂದಿಗೆ ಹೋರಾಟ ಮಾಡುವುದಾಗಿಯೂ ತಿಳಿಸಿದರು.
ರೈತರಿಗೆ ನೀಡುತ್ತಿರುವ ಸಾಲದ ಹಣವನ್ನು ಡಿಸಿಸಿ ಬ್ಯಾಂಕ್ನ ಠೇವಣಿ ಹಣದಲ್ಲಿ ನೀಡುತ್ತಿದ್ದು ರೈತರು ತಮ್ಮ ಠೇವಣಿಗಳನ್ನು ಬೇರೆ ಬ್ಯಾಂಕ್ಗಳಲ್ಲಿ ಇಡುವ ಬದಲು ನಮ್ಮ ಬ್ಯಾಂಕಿನಲ್ಲೇ ಇಟ್ಟರೆ ರೈತರಿಗೂ ಅನುಕೂಲವಾಗುತ್ತದೆ ಎಂದರು.
ಗುಡ್ಡಗಾಡು ಪ್ರದೇಶಗಳ ಸಹಕಾರ ಬ್ಯಾಂಕ್ಗಳಿಗೆ ಮಾತ್ರ ರಾಜ್ಕುಮಾರ್ ಸಾಲ ಸೌಲಭ್ಯವನ್ನು ಕೊಡಿಸುತ್ತಾರೆ ಇತರೆ ಬ್ಯಾಂಕ್ಗಳಿಗೆ  ಆ ಸೌಲಭ್ಯ ನೀಡುವುದಿಲ್ಲ ಎಂಬ ಆರೋಪ ನನ್ನ ಮೇಲಿದೆ ಆದರೆ ತಾಲ್ಲೂಕಿನ ಹೋಬಳಿಗಳ ಹಲವು ಸಹಕಾರ ಬ್ಯಾಂಕ್ಗಳಿಗೆ ಸಾಲಸೌಲಭ್ಯ ಕೊಡಿಸಿರುವುದಾಗಿ ತಿಳಿಸಿದರು.
ರಾಮನಹಳ್ಳಿ ಸಹಕಾರ ಬ್ಯಾಂಕ್ಗೆ ಮೊದಲು 75ಸಾವಿರ ಸಾಲ ಕೊಡಿಸಿದ್ದು, ಈಗ ಈ ಬ್ಯಾಂಕ್ಗೆ 20ಲಕ್ಷರೂ ಸಾಲ ಪಡೆದಿದೆ. ಒಟ್ಟಾರೆ ಈ ಸಂಸ್ಥೆ ಅಭಿವೃದಿಯಾಗಿ 3ಕೋಟಿಯಷ್ಟು ವ್ಯವಹಾರ ನಡೆಸುತ್ತಿದ್ದು ಈ ಭಾಗದಲ್ಲಿ 96ಲಕ್ಷರೂ ಗಳಷ್ಟು ರೈತರ ಸಾಲ ಮನ್ನಾ ಆಗಿದೆ ಎಂದರು.
 ಟಿ.ಎ.ಪಿ.ಸಿ.ಎಂ.ಎಸ್ ನಿದರ್ೇಶಕ ಆರ್.ಬಿ.ಕುಮಾರ್ ಮಾತನಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗಿರುವ ಸಾಲವನ್ನು ರೈತರು ದುರುಪಯೋಗ ಪಡಿಸಿಕೊಳ್ಳದೆ ಸಾಲದಿಂದ ಲಾಭ ಪಡೆಯುವ ಬಗ್ಗೆ ತಿಳಿಸಿದರು.
ಸ್ಥಳೀಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜೋಗಣ್ಣ ಮಾತನಾಡಿ  ಈ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚು ಬಡವರು ಇರುವುದರಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ನಿದರ್ೇಶಕ ರಾಜ್ಕುಮಾರ್ರವರ ನೆರವಿನಿಂದ ಬೆಳೆಸಾಲ, ವ್ಯಾಪಾರ ಸಾಲದ ಸೌಲಭ್ಯ ನೀಡಿ ರೈತರಿಗೆ ನೆರವು ನೀಡಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ರಾಮನಹಳ್ಳಿ ನಿದರ್ೇಶಕ ಆರ್.ಕೇಶವಮೂತರ್ಿ, ಆರ್.ಜಿ.ಕುಮಾರಸ್ವಾಮಿ, ಉಮಾದೇವಿ, ರಘು, ನರಸಿಂಹಮೂತರ್ಿ ಉಪಸ್ಥಿತರಿದ್ದರು.

Wednesday, January 23, 2013



ಸಕರ್ಾರಿ ಕ್ಯಾಮರಗಳ ದುರ್ಬಳಕೆ: ಗ್ರಾಮೀಣ ಪೊಟೋಗ್ರಾಫರ್ಗಳ ಕೆಲಸಕ್ಕೆ ಕುತ್ತು
                            
ಚಿಕ್ಕನಾಯಕನಹಳ್ಳಿ,ಜ.23 : ಗ್ರಾಮ ಪಂಚಾಯಿತಿಗಳ ಕೆಲಸಗಳಿಗೆ ಪೋಟೋ ತೆಗೆಯಲು ಸಕರ್ಾರದವರು ನೀಡಿರುವ ಕ್ಯಾಮಾರಗಳು ದುರ್ಬಳಕೆಯಾಗುತ್ತಿದೆ ಎಂದು ತಾ.ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ  ಆರೋಪಿಸಿದೆ.
  ಸಕರ್ಾರ ವಿವಿಧ ಇಲಾಖೆಗಳಿಗೆ ಕ್ಯಾಮಾರ ನೀಡಿರುವುದು ತಮ್ಮ ಇಲಾಖೆಗಳ ಕೆಲಸಕ್ಕೆ ಮಾತ್ರ  ಆದರೆ ಈ ಕ್ಯಾಮಾರದಿಂದ ಕೆಲವರು ತಮ್ಮ ಹಳ್ಳಿಗಳಲ್ಲಿ ನಡೆಯುವ ಸಣ್ಣ ಪುಟ್ಟ ಶುಭ ಸಮಾರಂಭಗಳ ಪೋಟೋ ಮತ್ತು ವಿಡಿಯೋಗಳನ್ನು ತೆಗೆದು ಕೈಯಿಗೆ ಬಂದಷ್ಟು ಕಾಸು ಮಾಡಿ ಗ್ರಾಮಾಂತರ ಛಾಯಾಗ್ರಹಕರ ಕೆಲಸಕ್ಕೆ ತೊಂದರೆ ಪಡಿಸುತ್ತಿದ್ದಾರೆ ಅದನ್ನು ತಪ್ಪಿಸಬೇಕೆಂದು  ತಾ.ಪಂ.ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯರವರಿಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ಅಪರ್ಿಸಿದರು.
ಗ್ರಾಮಾಂತರ ಛಾಯಾಗ್ರಹಹಕರು ಹಳ್ಳಿಗಳಿಗೆ ಹೋಗಲಾರದಂತಹ ಸ್ಥಿತಿಯನ್ನು ಗ್ರಾಮ ಪಂಚಾಯಿತಿ ನೌಕರರು ಮಾಡುತ್ತಿರುವುದು ದಿನ ನಿತ್ಯ ನಡೆಯುವ ವಿಚಾರವಾಗಿದೆ, ಅಲ್ಲದೆ ಬಡ ಛಾಯಾಗ್ರಾಹಕರುಗಳು ಪರಿಚಯವಿರುವವರ ಗ್ರಾಂಟ್ ಮನೆ ಪೋಟೋಗಳನ್ನು ತೆಗೆದರೆ ನಾವು ಸ್ವೀಕರಿಸುವುದಿಲ್ಲ, ನಮ್ಮ ಕ್ಯಾಮರಾದಲ್ಲಿಯೇ ಪೋಟೋ ತೆಗೆಸಿಕೊಳ್ಳಬೇಕು ಇಲ್ಲವಾದರೆ ನಿಮಗೆ ಬಿಲ್ ಕೊಡುವುದಿಲ್ಲ ಎಂದು ಫಲಾನುಭವಿಗಳಿಗೆ ಹೆದರಿಸುತ್ತಿದ್ದಾರೆ, ಗ್ರಾಮ ಪಂಚಾಯ್ತಿ ನೌಕರುಗಳು ಸಕರ್ಾರಿ ಸಂಬಳ ತೆಗೆದುಕೊಂಡು  ಜೊತೆಗೆ ಕ್ಯಾಮರಾ ಬಳಸಿ ಎಲ್ಲಾ ವ್ಯವಹಾರವನ್ನು ನೌಕರರೆ ಮಾಡುತ್ತ ನಮ್ಮ ಛಾಯಾಗ್ರಾಹಕರ ಕೆಲಸ ಮತ್ತು ಜೀವನಕ್ಕೆ ತೊಂದರೆ ಪಡಿಸುತ್ತಿದ್ದಾರೆ ಆದ್ದರಿಂದ ಇಂದಿನಿಂದಲೇ ಆದೇಶವನ್ನು ಜಾರಿ ಮಾಡಿ ಗ್ರಾಮ ಪಂಚಾಯ್ತಿಯ ನೌಕರರಿಗೆ ಸಕರ್ಾರಿ ಕೆಲಸದ ಹೊರತು ಬೇರೆ ಪೋಟೋಗಳು, ವಿಡಿಯೋಗಳನ್ನು ಚಿತ್ರಿಕರಿಸಿದರೆ ಕ್ರಮ ಕೈಗೊಳ್ಳುತ್ತೇವೆಂದು ಆದೇಶ ಹೊರಡಿಸಬೇಕೆಂದು ಹಾಗೇನಾದರೂ ನಿಮ್ಮ ಆದೇಶವನ್ನು ಮೀರಿ ತಮ್ಮ ಕೈಚಳಕ ತೋರಿದರೆ ಸಂಘ ಗಂಬೀರವಾಗಿ ಪರಿಗಣಿಸಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದು ತಾ.ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಮನವಿ ಪತ್ರದಲ್ಲಿ ತಿಳಿಸಿದೆ. 
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೃತ್ಯಂಜಯ, ಸದಸ್ಯರುಗಳಾದ ಸಿದ್ದು.ಜಿ.ಕೆರೆ, ಮಂಜುನಾಥ್, ಸಂಜಯ್, ರಂಗನಾಥಬಾಬು, ಗೋಪಾಲಚಾರ್, ವಿಜಿ.ಪ್ರಭು, ಹಂಪೇಶ್, ಈಶ್ವರ್, ಹರೀಶ್, ನವೀನ್, ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.

ಸುಭಾಷ್ ಚಂದ್ರ ಬೋಸ್ರವರ 116ನೇ ಜನ್ಮಾಚರಣೆ ಆಚರಿಸಿದ ಆಟೋಚಾಲಕರು
ಚಿಕ್ಕನಾಯಕನಹಳ್ಳಿ,ಜ.23 : ದೇಶ ಭಕ್ತ, ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ರವರ 116ನೇ ಜನ್ಮಾಚರಣೆಯನ್ನು ಆಚರಿಸುತ್ತಿರುವುದು ಹಾಗೂ  ಆಟೋ ಚಾಲಕರು ತಮ್ಮ ಸಂಘಟನೆಯ ಶಕ್ತಿಯಾಗಿ ಬೋಸ್ರವರ ಹೆಸರನ್ನು ಬಳಿಸಿಕೊಳ್ಳುವ ಮೂಲಕ  ಶ್ರಮಿಕ ವರ್ಗದವರು ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ರೋಟರಿ ಅಧ್ಯಕ್ಷ ಹಾಗೂ ಸಾಹಿತಿ ಎಂ.ವಿ.ನಾಗರಾಜ್ರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸುಭಾಷ್ ಚಂದ್ರಬೋಸ್ ಆಟೋಚಾಲಕರ ಮತ್ತು ಮಾಲೀಕರ ಸಂಘ ಮತ್ತು ರೋಟರಿ ಕ್ಲಬ್ ವತಿಯಿಂದ ನಡೆದ ಸುಭಾಷ್ ಚಂದ್ರಬೋಸ್ ಜನ್ಮದಿನಾಚಾರಣೆ, ರಸ್ತೆಸುರಕ್ಷತಾ ಸಪ್ತಾಹ ಹಾಗೂ ವಿಕಲಚೇತನರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 
ಅಶಕ್ತರಿಗೆ ಮತ್ತು ಆಥರ್ಿಕ ಬಲಹೀನರ ಅನಾರೋಗ್ಯಕ್ಕೆ ಸ್ಪಂದಿಸುತ್ತಾ, ಮಾನವೀಯತೆಯ ನೆಲೆಗಟ್ಟಿನಲ್ಲಿ ನಡೆದುಕೊಳ್ಳುವ ಮೂಲಕ ಆಟೋ ಚಾಲಕರು ತಮ್ಮ ಸಂಘಕ್ಕೆ ಇಟ್ಟಿರುವ ಹೆಸರನ್ನು ಸಾರ್ಥಕ ಪಡಿಸಿಕೊಳ್ಳಬೇಕು, ಆ ಮೂಲಕ ಸುಭೋಷ್ ಚಂದ್ರ ಬೋಸ್ರವರ ಆಶಯಗಳಿಗೆ ಸ್ಪಂದಿಸುತ್ತಾ ಸಂಘಟಿತರಾಗಬೇಕು  ಎಂದರು.
ಇಪ್ಪತ್ತು ವರ್ಷಗಳ ಹಿಂದೆ ಎರಡು ಆಟೋಗಳನ್ನು ಹೊಂದಿದ್ದ ಪಟ್ಟಣ, ಈಗ ಇನ್ನೂರ ಐವತ್ತಕ್ಕೂ ಹೆಚ್ಚು ಆಟೋಗಳನ್ನು ಹೊಂದುವ ಮೂಲಕ  ಸಂಘಟನೆಗೊಂಡಿರುವುದು ಪಟ್ಟಣ ಬೆಳೆಯುತ್ತಿರುವ ವೇಗಕ್ಕೊಂದು ಮಾಪನವಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಆಟೋ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕು, ಚಾಲನೆ ಮಾಡುವಾಗ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವತರ್ಿಸಿದರೆ ಪ್ರಯಾಣಿಕರು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ ಎಂದರಲ್ಲದೆ, ಪುರಸಭೆ ವತಿಯಿಂದ ನಿವೇಶನ ಹಂಚಿಕೆಯ ಚಚರ್ೆ ನಡೆಯುತ್ತಿದೆ, ಆಥರ್ಿಕವಾಗಿ ಹಿಂದುಳಿದವರು ನಿವೇಶನಗಳಿಗೆ ಅಜರ್ಿ ಹಾಕಿಕೊಂಡರೆ ಇಂತಹ ಅಜರ್ಿಗಳನ್ನು ಪರಿಗಣಿಸಲಾಗುವುದು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ರಸ್ತೆ ಸುರಕ್ಷತೆ ಸಪ್ತಾಹದ ಬಗ್ಗೆ ಮಾತನಾಡಿ, ಚಾಲಕರು ರಸ್ತೆ ಸುರಕ್ಷೆಯನ್ನು ಪಾಲಿಸದೆ ಚಾಲನೆ ಮಾಡಿದ್ದರಿಂದ ಒಂದು ವರ್ಷದಲ್ಲಿ  ತಾಲ್ಲೂಕಿನಲ್ಲಿ 27ಅಪಘಾತಗಳು ನಡೆದು 34ಜನರ ಪ್ರಾಣಹಾನಿಯಾಗಿದೆ, ಚಾಲನೆ ಮಾಡುವವರು ಆರ್.ಟಿ.ಓ ಕಛೇರಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದ್ದು ತಮ್ಮ ವಾಹನಕ್ಕೆ ವಿಮೆ ಮಾಡಿಸಿದರೆ ಅಪಘಾತವಾದರೆ ಅದರಿಂದ ಸಹಾಯವಾಗಲಿದೆ ಎಂದರಲ್ಲದೆ ಆಟೋ ಚಾಲಕರು ಸಮವಸ್ತ್ರವನ್ನು ಧರಿಸಲು ತಿಳಿಸಿದರು.
ಆರಕ್ಷಕ ಉಪನಿರೀಕ್ಷಕ ಬಿ.ಟಿ.ಗೋವಿಂದ್ ಮಾತನಾಡಿ ಸಾರ್ವಜನಿಕರು ಪೋಲಿಸರು ಮತ್ತು ಚಾಲಕರು ಧರಿಸುವ ಯೂನಿಫಾರಂನಲ್ಲಿ ನಂಬಿಕೆ ಇಟ್ಟಿದ್ದಾರೆ, ಈ ನಂಬಿಕೆಯಿಂದಲೇ ಮಹಿಳೆಯರು ಆಟೋಗಳಲ್ಲಿ ಪ್ರಯಾಣಿಸುವುದು ಎಂದರಲ್ಲದೆ ಚಾಲಕರು ರಾತ್ರಿ ಸಮಯದಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ವಿಚಾರಿಸಿ ಪ್ರಯಾಣಿಸಬೇಕು, ಪೋಲಿಸರಿಗೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಪ್ರತಾಪ್ ಹಾಗೂ ಡಿ.ಎಸ್.ಎಸ್.ಮುಖಂಡ,ಆಟೊ ಚಾಲಕ ಲಿಂಗದೇವರು ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಕೃಷ್ಣಮುತರ್ಿ, ಬಿ.ಇ.ಓ ಸಾ.ಚಿ.ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರ್, ರೋಟರಿ ಕ್ಲಬ್ ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು. 

Monday, January 21, 2013


ಮಧುಮೇಹ ನಿವಾರಣೆಗೆ ಆರ್ಕ ಬೆಳೆ ರಾಮಬಾಣ: ಡಾ.ಖಾದರ್

ಚಿಕ್ಕನಾಯಕನಹಳ್ಳಿ,ಜ.20 : ರೋಗ ನಿವಾರಕ, ಮಧುಮೇಹ ನಿವಾರಣೆಗೆ  ರಾಮಬಾಣವಾಗಿರುವ ಆರ್ಕ ಬೆಳೆಗೆ ನಗರ ಪ್ರದೇಶಗಳಲ್ಲಿ ಒಳ್ಳೆಯ ಬೇಡಿಕೆ ಕೇಳಿಬರುತ್ತಿದೆ, ಕೆಲವು ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಈ ಬೆಳೆಗೆ ಮುಂದಿನ ಹತ್ತು ವರ್ಷದಲ್ಲಿ ಉತ್ತಮ ಬೆಲೆ ಸಿಗಲಿದ್ದು ರೈತರು ಆರ್ಕ ಬೆಳೆಯನ್ನು ಹೆಚ್ಚು ಬೆಳೆಯಬೇಕು  ಎಂದು ವಿಜ್ಞಾನಿ ಡಾ.ಖಾದರ್ ತಿಳಿಸಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ನಡೆದ ಸಿರಿಧಾನ್ಯ ಮಹತ್ವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಆರ್ಕ ಬೆಳೆಯು ರೋಗ ನಿವಾರಣೆ ಮಾಡುವ ಬೆಳೆ, ಈ ಬೆಳೆಯನ್ನು ಜೀವಿಯು ತನ್ನ ದೇಹದಲ್ಲಿ ಹೆಚ್ಚಾಗುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತ ಎಂದರು.
ಹಲವು ಟಿ.ವಿ ಮಾಧ್ಯಮಗಳು ಜಾಹಿರಾತುಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತವೆ ಆದರೆ ಈ ಜಾಹಿರಾತುಗಳು ಕೇವಲ ಕಂಪನಿಗಳ ಅಭಿವೃದ್ದಿಗಾಗಿಯೇ ಹೊರತು ಜೀವಿಯ ಆರೋಗ್ಯ ವೃದ್ದಿಸುವುದಕ್ಕಾಗಿಯಲ್ಲ ಎಂದು ತಿಳಿಸಿದರು.
ಬೇಕರಿ ಅಂಗಡಿಗಳು ನಗರದಿಂದ ಹಳ್ಳಿಗಳಿಗೂ ಬಂದಿವೆ, ಈ  ಉತ್ಪನ್ನಗಳು ಹೆಚ್ಚು ವೈರಾಣು, ಬ್ಯಾಕ್ಟೀರಿಯಗಳನ್ನು ಹೊಂದಿರುತ್ತವೆ ಇದರಿಂದ ಆರೋಗ್ಯ ಹದಗೆಟ್ಟು ಹಳ್ಳಿಯ ಮಕ್ಕಳು ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ ಎಂದರು..
ಆರ್ಕ ಬೆಳೆಗೆ ಕಿರುಧಾನ್ಯ ಎಂಬ ಪದವನ್ನು ಕರೆಯುವುದನ್ನು ಬಿಟ್ಟು ಅದಕ್ಕೆ ಸಿರಿಧಾನ್ಯ ಎಂಬ ಪದ ಬಳಸಿದರೆ ಆರ್ಕ ಬೆಳೆಗೆ ನೀಡುವ ಮಹತ್ವ ಹೆಚ್ಚುತ್ತದೆ ಎಂದರು. 
ಸಮಾರಂಭದಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ಯತಿರಾಜು, ಕಾರ್ಯದಶರ್ಿ ರಾಮಕೃಷ್ಣಪ್ಪ, ಪ್ರಾಂಶುಪಾಲರಾದ ಎನ್.ಇಂದಿರಮ್ಮ, ರಘುಗೋಪಾಲನಹಳ್ಳಿ, ಚಂದ್ರಶೇಖರ್ಬಾಳೆ, ಆರ್ಕ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಎಮ್.ಬಸವರಾಜು, ಜಗದೀಶ್ವರ್ ಸೇರಿದಂತೆ ಆರ್ಕ ಬೆಳೆಗಾರರ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ವಿ.ಎಸ್.ಎಸ್.ಎನ್.ಗಳು ಡಿ.ಸಿ.ಸಿ.ಬ್ಯಾಂಕ್ಗೆ ಠೇವಣಿ ಸಂಗ್ರಹಿಸಲು ಮುಂದಾಗಬೇಕು:
ಚಿಕ್ಕನಾಯಕನಹಳ್ಳಿ,ಜ.21 : ರೈತರು, ಸಂಘ ಸಂಸ್ಥೆಗಳು ಡಿಸಿಸಿ ಬ್ಯಾಂಕ್ನ್ನು ಕೇವಲ ಸಾಲ ಕೊಡುವ ಸಂಸ್ಥೆಯನ್ನಾಗಿಸಿಕೊಳ್ಳದೆ ಠೇವಣಿಯನ್ನು ನಮ್ಮ ಬ್ಯಾಂಕಿನಲ್ಲಿ ಇಡುವಂತೆ  ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಕರೆ ನೀಡಿದರು.
ತಾಲ್ಲೂಕಿನ ಶೆಟ್ಟಿಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಸಾಲ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣನವರ ನಿದರ್ೇಶನದಂತೆ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ 32ಲಕ್ಷದ 25ಸಾವಿರ ರೂ ಸಾಲವನ್ನು ಇಂದು ವಿತರಿಸಲಾಗಿದೆ. ಸಂಘದ 216ಸದಸ್ಯರಿಗೆ ಈ ಸೌಲಭ್ಯ ದೊರಕಲಿದೆ ಎಂದರು.
ರೈತರು ಹಾಗೂ ಸಂಘ ಸಂಸ್ಥೆಗಳವರು, ತಮ್ಮ ಸಂಸ್ಥೆ ಅಭಿವೃದ್ದಿ ದೃಷ್ಠಿಯಿಂದ ಸಾಲ ಪಡೆದುಕೊಳ್ಳುವ ಜೊತೆಗೆ ಠೇವಣಿಯನ್ನು ಸಂಗ್ರಹಿಸಬೇಕು, ನೀವು ಇಡುವ ಠೇವಣಿಯಿಂದಲೇ ಬ್ಯಾಂಕ್ ಸಾಲ ವಿತರಿಸುತ್ತಿದೆ ಎಂದರಲ್ಲದೆ ಸಾಲ ವಿತರಣೆಯನ್ನು ವಿಸ್ತರಿಸುವ ದೃಷ್ಠಿಯಿಂದ ಚಿನ್ನಾಭರಣಗಳ ಸಾಲ, ಅಡಕೆ ಅಡಮಾನ ಸಾಲವನ್ನು ನೀಡಲು ಸಂಘಗಳಿಗೆ ತಿಳಿಸುತ್ತಿದ್ದು ಈ ರೀತಿಯ ಸಾಲವನ್ನು ಡಿಸಿಸಿ ಬ್ಯಾಂಕ್ನಿಂದ ಸಾಲ ಪಡೆದ ಹಲವು ಸಂಘಗಳು ನೀಡುತ್ತಿವೆ ಎಂದರು.
  ಶೆಟ್ಟೀಕೆರೆ ಪ್ರಾಥಮಕ ಸಹಕಾರ ಸಂಘಕ್ಕೆ ಈಗ ನೀಡುತ್ತಿರುವ ಸಾಲದ ಜೊತೆಗೆ ಜೂನ್ ತಿಂಗಳಿನಲ್ಲಿ ಇನ್ನಷ್ಟು ಸಾಲ ನೀಡುವ ಹಾಗೂ ಸಂಘಕ್ಕೆ  ಸೇಫ್ ಲಾಕರ್ ನೀಡುವುದಾಗಿ ಭರವಸೆ ನೀಡಿದರು.
ಶೆಟ್ಟಿಕೆರೆ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ ನಮ್ಮ ಸಂಘಕ್ಕೆ ಈ ಹಿಂದೆ 18ಲಕ್ಷ ರೂ ನೀಡಿದ್ದ ಸಾಲದ ನಂತರ ರಾಜ್ಕುಮಾರ್ ರವರ ಸಹಾಯದಿಂದ 32ಲಕ್ಷ 25ಸಾವಿರ ರೂ ದೊರಕಿರುವುದು ಸಂಘಕ್ಕೆ ಹೆಗ್ಗಳಿಕೆ ಎಂದರು.
ರಾಮನಹಳ್ಳಿ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಆರ್.ಕೇಶವಮೂತರ್ಿ ಮಾತನಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ಇಡೀ ತಾಲ್ಲೂಕಿನಲ್ಲಿ ನೀಡಿರುವ 11ಕೋಟಿ ರೂ ನಷ್ಟು ಸಾಲ ಮನ್ನವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬ್ಯಾಂಕ್ನ ನಿದರ್ೇಶಕರಾದ ನಾಗರಾಜು, ರಾಜಣ್ಣ, ಭೈರೇಶ್, ಎಂ.ಎನ್.ನಾಗರಾಜು, ಕಮಲಮ್ಮ ಸೇರಿದಂತೆ ಹಲವರಿದ್ದರು.


aPÀÌ£ÁAiÀÄPÀ£ÀºÀ½î vÁ®ÆPÀÄ ¸Á¸À®Ä UÁæªÀÄzÀ°è £ÀqÉzÀ ¥ËæqsÀ±Á¯Á EAVèÃµï ¨sÁµÁ ¨ÉÆÃzsÀPÀgÀ PÁAiÀiÁðUÁgÀªÀ£ÀÄß ©EN ¸Á.a. £ÁUÉñï GzÁÏn¹zÀgÀÄ. ²PÀët vÀdÕ UÀÄgÀÄ£Áxï §rUÉÃgï, «µÀAiÀÄ ¥Àj«ÃPÀëPÀgÁzÀ gÀÆ¥À, ¸Á¸À®Ä ZÀAzÀætÚ G¥À¹ÜvÀjzÀÝgÀÄ.


ರೋಟರಿ ಸಂಸ್ಥೆ, ಆಟೋ ಚಾಲಕರ ಸಂಘದ ವತಿಯಿಂದ ನಾಳೆ ವಿವಿಧ ಕಾರ್ಯಕ್ರಮಗಳು
ಚಿಕ್ಕನಾಯಕನಹಳ್ಳಿ,ಜ.21 : ಸುಭಾಷ್ ಚಂದ್ರಭೋಸ್ ಜನ್ಮದಿನಾಚರಣೆ, ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ವಿಕಲಚೇತನರ ದಿನಚಾರಣೆ ಸಮಾರಂಭವನ್ನು ಇದೇ 23ರ ಬುಧವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಮತ್ತು ರೋಟರಿ ಕ್ಲಬ್ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ವಿ.ಪ್ರತಾಪ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಬೆಂಗಳೂರಿನ ಸಿಪಿಐ ಸಿ.ಆರ್.ರವೀಶ್ ಹಾಗೂ ಚಿ.ನಾ.ಹಳ್ಳಿ ಸಿಪಿಐ ಕೆ.ಪ್ರಭಾಕರ್  ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಲಿದ್ದು ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಬಿ.ಇ.ಓ ಸಾ.ಚಿ.ನಾಗೇಶ್ ಆಟೋ ಚಾಲಕರಿಗೆ ಸನ್ಮಾನ ಮಾಡಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಎನ್.ಆರ್.ಉಮೇಶ್ಚಂದ್ರ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ರೋಟರಿ ಕಲ್ಬ್ ಕಾರ್ಯದಶರ್ಿ ಎಂ.ದೇವರಾಜು, ಆರಕ್ಷಕ ಉಪನಿರೀಕ್ಷಕ ಬಿ.ಟಿ.ಗೋವಿಂದ್, ವೈದ್ಯಾಧಿಕಾರಿ ಡಾ.ಶಿವಕುಮಾರ್, ಕನ್ನಡ ಸಂಘ ವೇದಿಕೆಯ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಹಾಗೂ ತಾಲ್ಲೂಕಿನ ಸಮಸ್ತ ಆಟೋ ಚಾಲಕರು ಮತ್ತು ಸಂಘದ ಅಧ್ಯಕ್ಷ , ಪದಾಧಿಕಾರಿಗಳು ಉಪಸ್ಥಿತರಿರುವರು.

Saturday, January 19, 2013


ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ 125 ಸ್ಥಾನ: ಸಂತೋಷ್ಲಾಡ್
                                           
ಚಿಕ್ಕನಾಯಕನಹಳ್ಳಿ,ಜ19 : ಜೆ.ಡಿ.ಎಸ್ನ 20ತಿಂಗಳ ಅವಧಿ, ಬಿಜೆಪಿಯ ನಾಲ್ಕುವರೆವರ್ಷದ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಯಾವ ಅಭಿವೃದ್ದಿ ಕಾರ್ಯಗಳು ಆಗದೆ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ, ಬರೀ ಇವರ  ಕಿತ್ತಾಟವನ್ನು ನೋಡಿ ಜನತೆ ಬೇಸತ್ತಿದ್ದಾರೆ ಆದ್ದರಿಂದ  ರಾಜ್ಯದ ಜನತೆ ಮುಂದೆ ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು 125ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದಶರ್ಿ ಸಂತೋಷ್ಲಾಡ್ ತಿಳಿಸಿದರು.
ತಾಲೂಕಿನ  ಕಾಂಗ್ರೆಸ್ ಕಾರ್ಯಕರ್ತರ ಮನೆಬಾಗಿಲಿಗೆ ರಾಜ್ಯ ಪ್ರಧಾನ ಕಾರ್ಯದಶರ್ಿ ಸಂತೋಷ್ಲಾಡ್ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜುರವರ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ನೂತನವಾಗಿ ಉದಯಿಸಿರುವ ಕೆಜೆಪಿ ಮತ್ತು ಬಿಎಸ್ಆರ್ ಪಕ್ಷಗಳು ಏಕ ವ್ಯಕ್ತಿಗಳ  ಸ್ವಹಿತಾಸಕ್ತಿಗಾಗಿ ಆರಂಭವಾಗಿದೆ, ರಾಜ್ಯದ ಜನರ ಹಿತರಕ್ಷಣೆಗಾಗಿ ಅಲ್ಲ ಇದರಿಂದ ಈ ಬಾರಿಯ ಚುನಾವಣೆಯ ನಂತರ ಕೆಜೆಪಿ ಮತ್ತು ಬಿಎಸ್ಆರ್ ಎರಡೂ ಪಕ್ಷವು ರಾಜ್ಯದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವುದಿಲ್ಲವೆಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆನ್ನುವ ಬಯಕೆ ರಾಜ್ಯದ ಜನತೆಯಲ್ಲಿದೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿಯೂ ಪ್ರವಾಸ ಮಾಡಿದಾಗ ಇಲ್ಲಿಯೂ ಕಾಂಗ್ರೆಸ್ ಪಕ್ಷದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾರ್ಯಕರ್ತರುಗಳ ಮನೆಗೆ ಭೇಟಿ ನೀಡಿದಾಗ ಬಂದ  ಅಭಿಪ್ರಾಯಗಳು ಇವು  ಎಂದರು.
ಸ್ಥಳೀಯ ಯುವ ಆಕಾಂಕ್ಷಿಗೆ ಪಕ್ಷದ ಟಿಕೆಟ್: ತಾಲ್ಲೂಕಿನಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ ಹೊರಗಡೆಯ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರ ಕಾರಣದಿಂದಾಗಿ ಪಕ್ಷ ಹಿಂದುಳಿದಿರವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ಲಾಡ್, ಈ ಬಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಥಳೀಯ ಯುವ ಆಕಾಂಕ್ಷಿಗೆ ಪಕ್ಷದ ಟಿಕೆಟ್ ನೀಡಲು ಹೈಕಮಾಂಡ್ಗೆ ಮನವಿ ಮಾಡುವುದಾಗಿ ತಿಳಿಸಿದ ಅವರು ರಾಹುಲ್ಗಾಂಧಿರವರು ದೇಶಾದ್ಯಂತ ಯುವಶಕ್ತಿಗೆ ಆದ್ಯತೆ ನೀಡುತ್ತಿದ್ದು, ರಾಜ್ಯದಲ್ಲೂ ಯುವಶಕ್ತಿಗೆ ಹೆಚ್ಚಿನ ಪ್ರಾತಿನಿಧ್ಯತೆ ಸಿಗುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಮುಖಂಡರಾದ ಸತೀಶ್ಸಾಸಲು ಉಪಸ್ಥಿತರಿದ್ದರು.

ತೆಂಗು ಅಭಿವೃದ್ದಿ ತರಬೇತಿ ಕಾಯರ್ಾಗಾರದಲ್ಲಿ ಸಲಕರಣೆಯ ಪರಿಕರಗಳ ವಿತರಣೆ
ಚಿಕ್ಕನಾಯಕನಹಳ್ಳಿ,ಜ.19 : ರೈತರು ಉತ್ಪಾದಿಸಿದ ಬೆಳೆಯನ್ನು ವಿದ್ಯಾವಂತರು ಮಾರುಕಟ್ಟೆಗೆ ತಂದು ಮಾರುಕಟ್ಟೆಯಲ್ಲಿರುವ ಬೆಲೆಯ ಸ್ಥಿತಿಗತಿ ತಿಳಿದು ಮಾರಾಟ ಮಾಡಿದರೆ ರೈತರು ತಮಗೆ ಆಗುವ ನಷ್ಟವನ್ನು ತಪ್ಪಿಸಿಕೊಂಡು ತಮ್ಮ ಆಥರ್ಿಕ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ತೆಂಗು ಅಭಿವೃದ್ದಿ ಮಂಡಳಿ ಯೋಜನೆಯಡಿ ಹಮ್ಮಿಕೊಂಡಿದ್ದ ತರಬೇತಿ ಕಾಯರ್ಾಗಾರ ಕಾರ್ಯಕ್ರಮದಲ್ಲಿ ಹಂದನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಫಲಾನುಭವಿ ರೈತರಿಗೆ ಗೊಬ್ಬರ, ಸಲಕರಣೆಯ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಗಡಿ ಭಾಗದಲ್ಲಿರುವ ರೈತರಿಗೆ ಅನುಕೂಲವಾಗಲೆಂದು 60ಜನ ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಗಿದೆ, ಎಲ್ಲಾ ಬೆಳೆಗಳಿಗಿಂತ ತೋಟಗಾರಿಕೆ ಬೆಳೆಗೆ ಹೆಚ್ಚಿನ ಸವಲತ್ತು ನೀಡಿದ್ದು, ಈ ಬೆಳೆಯಲ್ಲಿ ತೆಂಗು ಜೀವನಾಡಿಯ ಬೆಳೆಯಾಗಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾದರೆ ಹಂದನಕೆರೆ ಹೋಬಳಿಗೆ ಪಂಚನಹಳ್ಳಿ ಭಾಗದಿಂದ ಶಾಶ್ವತವಾದ ನೀರನ್ನು ತರಿಸಲಾಗುವುದು ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು.
ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಮಾತನಾಡಿ ರೈತರು ತೆಂಗು ಬೆಳೆಯನ್ನು ಅಭಿವೃದ್ದಿ ಪಡಿಸಿಕೊಳ್ಳುವ ಮೂಲಕ ಆಥರ್ಿಕವಾಗಿ ಸದೃಡರಾಗಿ ತೋಟಗಾರಿಕೆ ಇಲಾಖೆ ಯೋಜನೆಯಡಿ ನೀಡಿರುವ ಸವಲತ್ತನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ಎ.ಪಿ.ಎಂ.ಸಿ ಸದಸ್ಯ ರುದ್ರೇಶ್, ರಾಮಚಂದ್ರಣ್ಣ, ದುಗಡಿಹಳ್ಳಿ ಗಂಗಾಧರಪ್ಪ ಉಪಸ್ಥಿತರಿದ್ದರು.


ಚಿ.ನಾ.ಹಳ್ಳಿಯಲ್ಲಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.19: ಪಕ್ಷ ಸಂಘಟನೆಗಾಗಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು  ತಿಪಟೂರಿನಿಂದ  ಶೆಟ್ಟಿಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯಲ್ಲಿ ಏರ್ಪಡಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗಾಗಿ ಬೂತ್ ಮಟ್ಟದ ಸಭೆಯನ್ನು ನಡೆಸಲಿದ್ದು, ಸಂಘಟನೆಯಲ್ಲಿರುವ ಲೋಪದೋಷಗಳನ್ನು ಕಾರ್ಯಕರ್ತರು ಸರಿಪಡಿಸಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ನಾರಾಯಣ್, ಬಿ.ಲಕ್ಕಪ್ಪ,   ಕ್ಯಾಪ್ಟನ್ ಸೋಮಶೇಖರ್, ಆರ್.ರಾಜೇಂದ್ರ, ಸೀಮೆಣ್ಣೆ ಕೃಷ್ಣಯ್ಯ,  ಕೃಷ್ಣೇಗೌಡ ಉಪಸ್ಥಿತರಿದ್ದರು. 


ಶ್ರೀ.ಕ್ಷೇ.ಧ.ಗ್ರಾ.ಯೋ ವತಿಯಿಂದ   ತಾಲೂಕು  ಕೃಷಿ ಉತ್ಸವ:
ಚಿಕ್ಕನಾಯಕನಹಳ್ಳಿ,ಜ.19 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ತಾಲ್ಲೂಕು ಮಟ್ಟದ ಕೃಷಿ ಉತ್ಸವವದ ಕೃಷಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ವಕೀಲ ಎಮ್.ಬಿ.ನಾಗರಾಜ್ ಆಯ್ಕೆಯಾಗಿದ್ದಾರೆ ಎಂದು ಶ್ರೀ.ಕ್ಷೇ.ಧ.ಯೋ. ಯೋಜನಾಧಿಕಾರಿ ರೋಹಿತಾಕ್ಷ ತಿಳಿಸಿದರು.
ಫೆಬ್ರವರಿ 10, 11 ರಂದು ಪಟ್ಟಣದಲ್ಲಿ ನಡೆಯುವ ಕೃಷಿ ಉತ್ಸವದ ಯಶಸ್ವಿಗೆ  ಸಮಿತಿಯನ್ನು ರಚಿಸಿದ್ದು,  ಉಪಾಧ್ಯಕ್ಷರುಗಳಾಗಿ ಸಿ.ಡಿ.ಚಂದ್ರಶೇಖರ್, ಶಶಿಧರ್, ವಿಶ್ವನಾಥ್ಅಣೆಕಟಟೆ, ಅರುಣ್ಕುಮಾರ್, ಬಸವರಾಜು, ಮಲ್ಲೇಶಯ್ಯ, ಸಿ.ವಿ.ಚಂದ್ರಣ್ಣ, ಗಂಗಾಧರ್, ಸತೀಶ್ಕೆಂಕೆರೆ, ಗುರುಪ್ರಸಾದ್, ಸುರೇಶ್, ನಿರಂಜನಮೂತರ್ಿ, ನಾಗೇಶಪ್ಪ, ರಾಮಚಂದ್ರಯ್ಯ, ರಾಜಕುಮಾರ್, ಲಿಂಗರಾಜು, ಪ್ರಕಾಶ್, ಶಶಿಕುಮಾರ್, ಕೃಷ್ಣಮೂತರ್ಿ, ನವನಾಜು, ನರಸಿಂಹಮೂತರ್ಿ, ಕೃಷ್ಣಪ್ಪ, ಗೌರವ ಸಲಹೆಗಾರರಾಗಿ ಕ್ಷೇ.ಧ.ಗ್ರಾ.ಯೋಜನೆಯ ನಿದರ್ೇಶಕ ಪುರುಷೋತ್ತಮ್, ಮುಖ್ಯ ಸಲಹೆಗಾರರಾಗಿ ರಾಜಕುಮಾರ್ಸಿಂಗದಹಳ್ಳಿ, ಗುರುಪ್ರಸಾದ್ ಕಂದಿಕೆರೆ, ಪ್ರಧಾನ ಕಾರ್ಯದಶರ್ಿಯಾಗಿ ಕ್ಷೇ.ಧ.ಗ್ರಾ.ಯೋ.ಯೋಜನಾಧಿಕಾರಿ ರೋಹಿತಾಕ್ಷ, ಕಾರ್ಯದಶರ್ಿಯಾಗಿ ರವಿಕುಮಾರ್, ಕೋಶಾಧಿಕಾರಿಯಾಗಿ ಪ್ರಕಾಶ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, January 17, 2013


ಯುವಶಕ್ತಿಗೆ ಆದರ್ಶ ಪುರುಷ ಸ್ವಾಮಿವಿವೇಕಾನಂದ
                                         
ಚಿಕ್ಕನಾಯಕನಹಳ್ಳಿ,ಜ.17 : ಯುವಶಕ್ತಿಗೆ ಆದರ್ಶ ಪುರುಷನಾಗಿ ಸಾದನೆಯ ಛಲವನ್ನು ಮೈಗೂಡಿಸಿಕೊಂಡು ಯುವಕರಿಗೆ ಗೆಲುವಿನ ಉತ್ಸಾಹ ತುಂಬುತ್ತಿದ್ದ ಸ್ವಾಮಿವಿವೇಕಾನಂದರಂತಹ ಆದರ್ಶ ಪುರಷನ ಅವಶ್ಯಕತೆ ಇಂದಿಗೂ ಅಗತ್ಯವಿದೆ ಎಂದು  ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
  ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ವತಿಯಿಂದ ವಿವೇಕಾನಂದರ 150ನೇ ಜನ್ಮದಿನಚಾರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿವೇಕಾನಂದರು ತಮ್ಮ ಭಾಷಣಗಳಲ್ಲಿ ಯುವಕರಿಗೆ ಸ್ಪೂತರ್ಿ ತುಂಬಿ ದೇಶವನ್ನು ಸದೃಡವಾಗಿ ಕಟ್ಟುತ್ತಿದ್ದರು ಎಂದರಲ್ಲದೆ, ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ, ಪಾಕಿಸ್ತಾನದ ಸೈನ್ಯದಿಂದ ನಡೆಯುತ್ತಿರುವ ಕೃತ್ಯಗಳನ್ನು ತಡೆಗಟ್ಟಲು ವಿವೇಕಾನಂದರ ವಾಣಿಯನ್ನು ಯುವಕರು ಅಥರ್ೈಸಿಕೊಳ್ಳಬೇಕಿದೆ ಎಂದರಲ್ಲದೆ, ಶಿಸ್ತು, ಸಂಯಮದ ಭಾವನೆಯನ್ನು ರೂಪಿಸುವುದು, ದೇಶಭಕ್ತಿ ಮೂಡಿಸುವುದರ ಜೊತೆಗೆ ಸಮಾಜ ತಿದ್ದುವಲ್ಲಿ ಯುವಶಕ್ತಿ ಮುಂದಾಗಬೇಕು ಎಂದರು. ಮಹಿಳೆ ವಿದ್ಯಾವಂತರಾದರೆ  ಸಮಾಜ ತಿದ್ದುವಕಾರ್ಯ ನಡೆಯುತ್ತದೆ ಎಂದರು.
 ಕಳೆದ ಬಾರಿ ನಡೆದ ಉದ್ಯೋಗಮೇಳದಲ್ಲಿ ತಾಲ್ಲೂಕಿನ 2600 ವಿದ್ಯಾವಂತರಿಗೆ ಉದ್ಯೋಗ ದೊರಕಿದ್ದು, ಈ ಬಾರಿಯೂ ಫೆ.16ರಂದು ಉದ್ಯೋಗ ಮೇಳ ನಡೆಯಲಿದೆ ನಿರುದ್ಯೋಗಿ ಯುವಕರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಅಭಾವಿಪ ಜಿಲ್ಲಾ ಸಂಘಟನಾ ಕಾರ್ಯದಶರ್ಿ ವೆಂಕಟೇಶ್ ಉಪನ್ಯಾಸ ನೀಡಿ, ಸಿಡಿಲ ಸಂತನಾಗಿ ಧಾಮರ್ಿಕ ಗುರುವಾಗಿ ಯುವಶಕ್ತಿಯನ್ನು ಎಚ್ಚರಗೊಳಿಸಿದವರು ವಿವೇಕಾನಂದರು, ಸಾಮಾನ್ಯ ಸನ್ಯಾಸಿಯಾಗಿ ಅಮೇರಿಕದ ಚಿಕಾಗೋದಲ್ಲಿ ನಡೆದ ಧಾಮರ್ಿಕ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಪಂಚವೇ ಮೆಚ್ಚುವಂತೆ ಬದಲಾದ ವಿವೇಕಾನಂದರು ಭಾರತ ದೇಶದ ಆಸ್ತಿ, ಇವರು ಇತಿಹಾಸ ಬದಲಾವಣೆ ಮಾಡಿದ ಸಂತ ಎಂದರಲ್ಲದೆ ವಿವೇಕಾನಂದರ ವಾಣಿಯಿಂದ ಸ್ವಾತಂತ್ರ ಹೋರಾಟಗಾರರಿಗೆ ಪ್ರೇರಣೆಯಾಗಿ ಸ್ವಾತಂತ್ರ್ಯಕ್ಕೆ ಧುಮುಕಿದರು, ಅಣ್ಣ ಹಜಾರೆರವರು ಭ್ರಷ್ಠಾಚಾರದ ವಿರುದ್ದ ಹೋರಾಟ ಮಾಡಿದರು, ವಿವೇಕಾನಂದರು ಯುವಶಕ್ತಿಯನ್ನು ಕಬ್ಬಿಣದ ಮಾಂಸಖಂಡ ಹಾಗೂ ಉಕ್ಕಿನ ವ್ಯಕ್ತಿಗಳಾಗುವಂತೆ ಕರೆ ನೀಡಿದ್ದರು.
ಎ.ಬಿ.ವಿ.ಪಿ. ತಾಲ್ಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಯುವಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದ ವಿವೇಕಾನಂದರು ದೇಶದ ಅಭಿವೃದ್ದಿಯನ್ನು ಅವರಿಂದ ಮನಗಂಡಿದ್ದರು, ವಿವೇಕಾನಂದರು ಹೇಳುವಂತೆ ನಿಂದಿಸುವವರು ಇದ್ದರೆ ಅಭಿವೃದ್ದಿ ಸಾಧ್ಯ ಎಂಬ ಮಾತು ನಿಜವಾದದ್ದು ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ 1863ರಲ್ಲಿ ಜನಿಸಿದ ವಿವೇಕಾನಂದರು ತಮ್ಮ 39 ವರ್ಷದ ಅಲ್ಪಾವದಿಯಲ್ಲೇ ಮಹತ್ತರ ಸಾದನೆ ಮಾಡಿ ಇಂದಿಗೂ ಯುವಶಕ್ತಿಗೆ ಮಾದರಿಯಾಗಿರುವ ವಿವೇಕಾನಂದರ ವಿಚಾರಧಾರೆ ಉತ್ತಮವಾದುದು, ರಾಮಕೃಷ್ಣ ಪರಮಹಂಸರ ಶಿಷ್ಯನಾಗಿ ಉತ್ತಮ ವ್ಯಕ್ತಿಯಾಗಿ ಬದುಕಿದರು ಎಂದರು.
ಸಮಾರಂಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ತಾ.ಎ.ಬಿ.ವಿ.ಪಿ. ಅಧ್ಯಕ್ಷ ನಂದೀಶ್ಬಟ್ಲೇರಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಭಾವಿಪ ಕಾರ್ಯಕರ್ತರಾದ ರವಿ ಸ್ವಾಗತಿಸಿದರೆ, ನಗರ ಕಾರ್ಯದಶರ್ಿ ದಿಲೀಪ್ ನಿರೂಪಿಸಿದರೆ, ಲಕ್ಷ್ಮೀಶ್ ವಂದಿಸಿದರು.

ಸತ್ಯಗಣಪತಿ ಸಾರ್ವಜನಿಕ ತರುಣರ ಸಂಘದ ಸುವರ್ಣ ಸಂಚಿಕೆಯನ್ನು ಬಿಡುಗಡೆ
aPÀÌ£ÁAiÀÄPÀ£ÀºÀ½îAiÀÄ ²æà ¸ÀvÀåUÀt¥Àw ¸ÁªÀðd¤PÀgÀ vÀgÀÄtgÀ ¸ÀAWÀzÀ LªÀvÀÛ£Éà ªÀµÁðZÀgÀuÉ ¸ÀªÀiÁgÀA¨sÀzÀ°è ¸ÀAWÀzÀ K½UÉUÉ zÀÄrzÀ ¸ÀAWÀzÀ PÁAiÀÄðzÀ²ð ¹.PÉ.«±ÉéñÀégÀAiÀÄå, gÀvÀߪÀÄ䧸ÀªÀAiÀÄå, ¹.§¸ÀªÀgÁdÄgÀªÀgÀ£ÀÄß ¸À£Á䤸À¯Á¬ÄvÀÄ. F ¸ÀAzÀ¨sÀðzÀ°è ±Á¸ÀPÀ ¹.©.¸ÀÄgÉñï¨Á§Ä, ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð, ¸ÁÜ¬Ä ¸À«Äw CzsÀåPÀë JA.J£ï.¸ÀÄgÉñï, mË£ï ¨ÁåAPï CzsÀåPÀë ¹.J¸ï.gÀªÉÄñï, J.¦.JA.¹ ¸ÀzÀ¸Àå ¹.JªÀiï.gÀAUÀ¸Áé«Ä ºÁdjzÀÝgÀÄ.

ಚಿಕ್ಕನಾಯಕನಹಳ್ಳಿ,ಜ.17 :  ಶ್ರೀ ಸತ್ಯಗಣಪತಿ ಸಾರ್ವಜನಿಕ ತರುಣರ ಸಂಘದ ವತಿಯಿಂದ 1962 ರಲ್ಲಿ ಪ್ರಾರಂಭವಾದ ಸಂಘ 50 ವರ್ಷಗಳನ್ನು ಪೂರೈಸಿದ ಸವಿ ನೆನಪಿಗಾಗಿ  ಸಂಘ ಸುವರ್ಣ ಸಂಚಿಕೆಯನ್ನು ಬಿಡುಗಡೆ ಮಾಡಿತು.
 ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಿ ಮಾತನಾಡಿ, ಕಳೆದ 50 ವರ್ಷಗಳಿಂದ ವಿಘ್ನೇಶ್ವರನನ್ನು ಪ್ರತಿ ವರ್ಷವೂ ಗಣೇಶ ಚತುಥರ್ಿಯಂದು ಪ್ರತಿಷ್ಟಾಪಿಸಿ 20 ದಿನಗಳ ವರೆಗೆ ನಡೆಯುತ್ತಿದ್ದ ಘತವೈಭವವನ್ನು ಸ್ಮರಿಸಿಕೊಂಡರಲ್ಲದೆ, ಈ ಕಾರ್ಯಕ್ಕೆ ದುಡಿದ 50 ಜನ ಹಿರಿಯ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಮ್ಮದಾನಪ್ಪ ನೆರವೇರಿಸಿದರು. 

ಕಾರ್ಯಕ್ರಮದಲ್ಲಿ ಸುವರ್ಣ ಸಂಚಿಕೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಬಿಡುಗಡೆಮಾಡಿದರು.
 ಸಮಾರಂಭದಲ್ಲಿ ಪುರಸಭಾಧ್ಯಕ್ಷರಾದ ಸಿ.ಕೆ.ಕೃಷ್ಣಮೂತರ್ಿ, ಉಪಾಧ್ಯಕ್ಷೆ ಗಾಯಿತ್ರದೇವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಸುರೇಶ್. ಪುರಸಭೆ ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಎಲ್.ದೊಡ್ಡಯ್ಯ, ಸಿ.ಟಿ.ವರದರಾಜು, ಮಹಮದ್ ಖಲಂದರ್ ಸಂಸ್ಥೆಯ ಕಾರ್ಯದಶರ್ಿ ಸಿ.ಟಿ.ವಿಶ್ವೇಶ್ವರಯ್ಯ  ಸದಸ್ಯರಾದ ಚಂದ್ರಶೇಖರ ಗುಪ್ತ, ರಾಮಯ್ಯ, ಆನಂದ್, ಹಾಜರಿದ್ದರು. 
ಸಮಾರಂಭದಲ್ಲಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿ, ಸಿ.ಎಸ್.ನಟರಾಜ್ ನಿರೂಪಿಸಿದರೆ, ಕಣ್ಣಯ್ಯ ವಂದಿಸಿದರು.

Wednesday, January 16, 2013


ಸಿಲಿಂಡರ್ ಸೋರಿಕೆ, ಸುಟ್ಟು ಕರಕಲಾದ ಪಾತ್ರೆಪಗಡ, ಬಿರುಕು ಬಿಟ್ಟ ಗೋಡೆ
ಚಿಕ್ಕನಾಯಕನಹಳ್ಳಿ,ಜ.16: ವಿದ್ಯಾಥರ್ಿ ವಸತಿ ನಿಲಯವೊಂದರಲ್ಲಿ ಅಡುಗೆ ಮನೆಯಲ್ಲಿನ ಸಿಲಿಂಡರ್ನಲ್ಲಿದ್ದ ಅನಿಲ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು ಪಾತ್ರೆ,ಪಡಗಗಳು ಸುಟ್ಟು ಕರಕಲಾಗಿದ್ದು ಗೋಡೆಗೆ ಹಾನಿಯಾಗಿರುವ ವರದಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾಥರ್ಿ ನಿಲಯದಲ್ಲಿ ವರದಿಯಾಗಿದೆ.


ಪಟ್ಟಣದ ಸಕರ್ಾರಿ ಪಿ.ಯು.ಕಾಲೇಜು ಹಿಂಭಾಗದಲ್ಲಿದ್ದ ಪರಿಶಿಷ್ಟ ಜಾತಿ ಪಂಗಡಗಳಿಗೆ ಸೇರಿದ ಕಾಲೇಜು ಹಾಸ್ಟಲ್ನಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಷಾತ್ ಯಾರದೇ ಜೀವಕ್ಕೆ ತೊಂದರೆಯಾಗಿಲ್ಲ. 
ಬೆಳಗ್ಗೆ 11ಗಂಟೆ ಸುಮಾರಿನಲ್ಲಿ ಹಾಸ್ಟಲ್ನಲ್ಲಿ ಅಡುಗೆ ಮಾಡುವಾಗ ಸಿಲಿಂಡರ್ ಸೋರಿಕೆಗೊಂಡ ಪರಿಣಾಮ ರೆಗ್ಯೂಲೇಟರ್ನಲ್ಲಿ ಬೆಂಕಿ ಕಾಣಿಸಿಕೊಂಡು ಕೋಣೆಯ ವಸ್ತುಗಳು ಸುಟ್ಟು ಕರಕಲಾಗಿದೆ, ಗೋಡೆ ಬಿರುಕುಗೊಂಡಿದ್ದು ಮಿಕ್ಸಿ, ಯು.ಪಿ.ಎಸ್, ಸ್ವಿಚ್ ಬೋಡರ್್ ಹಾಗೂ ಕೊಣೆಯಲ್ಲಿದ್ದ ವಸ್ತುಗಳು  ಬೆಂಕಿಗಾಹುತಿಯಾಗಿದೆ. ಘಟನೆ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ವಾರ್ಡನ್ ಮಹೇಶ್ ಪತ್ರಿಕೆಗೆ ತಿಳಿಸಿದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಭೇಟಿ ನೀಡಿ ಪರಿಶೀಲಿಸಿದರು.
aPÀÌ£ÁAiÀÄPÀ£ÀºÀ½îAiÀÄ «zsÁ£À¸À¨sÁ PÉëÃvÀæ ªÁå¦ÛAiÀÄ PÁAUÉæ¸ï ¥ÀPÀëzÀ ¸ÀAWÀl£Á G¸ÀÄÛªÁj ªÀÄvÀÄÛ «ÃPÀëPÀgÀ PÀbÉÃjAiÀÄ£ÀÄß ¥ÀlÖtzÀ ²æà ¥ÀgÀ±ÀÄ £É®ªÀĺÀrAiÀÄ°è DgÀA©ü¸À¯Á¬ÄvÀÄ. ªÀÄÄRAqÀgÁzÀ PÁå¥ÀÖ£ï¸ÉÆêÀıÉÃRgï, PÉ.f.PÀȵÉÚUËqÀ, ¹.¦.ªÀĺÉñï, ¹.PÉ.UÀÄgÀĹzÀÝAiÀÄå, ²ªÀtÚ, UÉÆëAzÀgÁdÄ, ²ªÀtÚ, ªÀĺÀªÀÄzïC£Àégï, gÀ«, §¸ÀªÀgÁdÄ  ªÀÄÄAvÁzÀªÀjzÀÝgÀÄ.

Tuesday, January 15, 2013


ಗುರುವಿನ ಆಶೀವರ್ಾದ ಶಿಷ್ಯನಿಗೆ ಅವಶ್ಯಕ 
ಚಿಕ್ಕನಾಯಕನಹಳ್ಳಿ:ಜ.15 : ಪ್ರತಿಯೊಬ್ಬರಿಗೂ ಗುರುವಿನ ಅವಶ್ಯಕತೆ ಇದೆ, ಗುರುವಿನ ಆಶೀವರ್ಾದವು ಶಿಷ್ಯರಿಗೆ ತಲುಪಿದಾಗ ಶಿಷ್ಯನು ತಾನು ಅಂದುಕೊಂಡಿರುವ ಗುರಿಗಿಂತ ಮಹತ್ವದಾದ ಸಾಧನೆ ಮಾಡುಬಲ್ಲನು ಎಂದು ತಿಪಟೂರು ಷಡಾಕ್ಷರಿ ಮಠದ ರುದ್ರಾಮುನಿಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಮ್ಮಡಿಹಳ್ಳಿ ಮಠದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜನ ದೇಶಿ ಕೇಂದ್ರ ಸ್ವಾಮೀಜಿಯವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಹಾಗೂ ಧಾಮರ್ಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಾವು ಮಾಡುವ ಕೆಲಸ ಶಾಶ್ವತವಾಗಿರಬೇಕು, ಎಲ್ಲಾ ಮಠಧೀಶ್ವರರು ಓಗ್ಗೂಡಿ ಸಮಾಜವನ್ನು ಮುನ್ನುಡೆಸುವ ಜವಾಬ್ದಾರಿ ಇದೆ, ಲಿಂಗೈಕ್ಯ ಮಲ್ಲಿಕಾರ್ಜನದೇಶಿಕೇಂದ್ರ ಸ್ವಾಮೀಜಿಯವರ ಆಶೀವರ್ಾದ ನಮ್ಮೆಲ್ಲರಲ್ಲೂ ಇದೆ, ಸಜ್ಜನರಿಗೆಯ ಬದುಕನ್ನು ಸವೆಸಿದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮೀಜಿಯವರ ಬದುಕು ನಮಗೆ ದಾರಿದೀಪ ಎಂದರಲ್ಲದೆ ಮಠ ಮಾನ್ಯರು ಸಮಾಜಕ್ಕಾಗಿ, ಜನಸಾಮಾನ್ಯರ ಸೇವೆಗಾಗಿ ಶ್ರಮಿಸಲು ತಮ್ಮ ಆಸೆಗಳನ್ನೆಲ್ಲ ತೊರೆದು ಬರುತ್ತಾರೆ ಅವರ ಬಗ್ಗೆ ಕೀಳರಿಮೆ ತೋರುವುದು ಸರಿಯಲ್ಲ ಎಂದು ಹೇಳಿದರು,
    ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮೀಜಿ ನಲವತ್ತು ವರ್ಷಗಳ ಹಿಂದೆ ಭಕ್ತರ ಮನೆಗಳಿಗೆ ಬಸ್ಸಿನಲ್ಲಿ ತೆರಳುತ್ತಿದ್ದರು. ಸ್ವಾಮೀಜಿಯವರಿಗೆ ಅಪಾರ ಜ್ಞಾನಭಂಡಾರವಿದ್ದು ತಮ್ಮ ಶಿಷ್ಯರಿಗೆ ಉತ್ತಮ ದಾರಿ ನೀಡುತ್ತಿದ್ದರು. ನಾಡಿನ ಗುರುಹಿರಿಯರಿಗೆ ಹಾಗೂ ಮಠಾಧೀಶ್ವರರಿಗೆ ಮಾದರಿಯಾಗಿದ್ದರು, ಸ್ವಾಮೀಜಿಗಳ ಗದ್ದಿಗೆಯಲ್ಲಿ ದೇವಾಲಯ ನಿಮರ್ಿಸಲು ಒಂದು ಕೋಟಿ ರೂ ಹಣ ವೆಚ್ಚವಾಗಲಿದ್ದು. ಭಕ್ತಾದಿಗಳ ಸಹಕಾರ ಅಗತ್ಯ ಸ್ವಾಮಿ ವಿವೇಕಾನಂದರ 150ನೇ ವರ್ಷಚಾರಣೆಯಲ್ಲಿ ಯುವ ಪೀಳಿಗೆಗೆ  ಹೋರಾಟದ ಚಿಂತನೆ ಹಾಗೂ ಮಾರ್ಗದರ್ಶನ ಅಗತ್ಯ ಆದ್ದರಿಂದ ಯುವಕರು ನಿತ್ಯ ಸ್ವಾಮಿವಿವೇಕಾನಂದರ ವಾಣಿಯನ್ನು ಪ್ರತಿದಿನ ಓದಲು ಸಲಹೆ ನೀಡಿದರು. 
      ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜನ ದೇಶೀಕೇಂದ್ರ ಸ್ವಾಮೀಜಿಯವರು ಮಠಕ್ಕೆ ಬರುವ ಭಕ್ತರನ್ನು ಬಡವ ಬಲಿಗ ಎಂಬ ಬಾವನೆ ತೋರಿಸದೆ ಎಲ್ಲರು ಒಂದೇ ಎನ್ನುವ ಭಾವನೆ ಹೊಂದಿದ್ದರು. ನಾಡಿನ ಉದ್ದಗಲಕ್ಕೂ ಸಂಚರಿಸಿ ದೇವಾಲಯಗಳ  ಜೀಣರ್ೋಧ್ಧಾರ ಕಳಸ ಪ್ರತಿಷ್ಠಾಪನೆ ನೂತನ ದೇವಾಲಯಗಳ ಸ್ಥಾಪನೆ ಮಾಡಲು ಶ್ರೀಗಳನ್ನು  ಆಹ್ವಾನಿಸುತ್ತಿದ್ದರು. ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಯ ಹೋರಾಟಕ್ಕೆ ಸಹಕರಿಸಿದ ಮಠಧೀಶ್ವರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಮಂಜೂರಾತಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆಯೂ ಹಾಗೂ ಭಾರಿ ನೀರಾವರಿ ಸಚಿವ ಬಸವರಾಜು ಬೊಮ್ಮಯಿ ಹಾಗೂ ನೀರಾವರಿ ತಜ್ಞ ಪರಮಶಿವಯ್ಯ ನವರಿಗೆ ಮಾಜಿ ಶಾಸಕರು ಬೆಂಬಲ ನೀಡಿರುವುದರಿಂದ ಯೋಜನೆ ಯಶಸ್ವಿಯಾಗಿದೆ ಎಂದರು. 
    ಕಾರ್ಯಕ್ರಮದಲ್ಲಿ ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಗೋಡೇಕೆರೆಯ ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಎಂ.ಎಸ್.ಎಲ್. ಅಧ್ಯಕ್ಷ ನಂದೀಶ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಜಿ. ಪಂ.ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ ಹೆಚ್.ಬಿ. ಪಂಚಾಕ್ಷರಯ್ಯ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ.ನ್.ಶಿವಪ್ರಕಾಶ್ ಕೆ.ಜಿ.ಪಿ. ಮುಖಂಡ ಲೋಕೇಶ್ವರ, ಮಸಾಲೆ ಜಯರಾಂ ಕೆ.ಮಂಜು ತಾ.ಪಂ.ಅಧ್ಯಕ್ಷ ಎಂ.ಎಂ. ಜಗದೀಶ್, ಮಾಜಿ ತಾ.ಪಂ.ಅಧ್ಯಕ್ಷ ಎಚ್.ಎಂ.ಸುರೇಂದ್ರಯ್ಯ,  ಮುಂತಾದವರು ಉಪಸ್ಥಿತರಿದ್ದರು.



aPÀÌ£ÁAiÀÄPÀ£ÀºÀ½îAiÀÄ PÁ¼ÀªÀÄä£ÀUÀÄr ±Á¯ÉAiÀÄ°è ¸Áé«Ä «ªÉÃPÁ£ÀAzÀgÀ 150£Éà dAiÀÄAw ¥ÀæAiÀÄÄPÀÛ ±Á¯Á ªÀÄPÀ̽AzÀ bÀzÀäªÉõÀ¨sÀƵÀt K¥Àðr¸À¯ÁVvÀÄÛ. F ¸ÀAzÀ¨sÀðzÀ°è ²PÀëPÀgÀÄUÀ¼ÁzÀ JªÀiï.dAiÀĪÀÄä, ¹.n.gÉÃSÁ, ¸ÀĪÀtð, zÉêÀgÁdÄ, ªÀÄÄzÀÝgÀAUÀ¥Àà G¥À¹ÜvÀjzÀÝgÀÄ. 


aPÀÌ£ÁAiÀÄPÀ£ÀºÀ½îAiÀÄ ¸ÀPÁðj ¥ÀæxÀªÀÄ zÀeÉð PÁ¯ÉÃf£À «zÁåyðUÀ¼ÀÄ vÀĪÀÄPÀÆgÀÄ «±Àé«zÁ央AiÀÄzÀ ©.J¸ï.qÀ§Æèöå ¥ÀzÀ«AiÀÄ°è  ¹.J£ï.£ÉÃvÁæªÀw ¥ÀæxÀªÀÄ ¸ÁÜ£À, £ÀA¢¤ ¢éwAiÀÄ ¸Áé£À, ¹.J¸ï.¥Àæw¨sÁ£ÁAiÀÄQ vÀÈwAiÀĸÁÜ£À, ªÀÄvÀÄÛ ²ªÀªÀÄä JA LzÀ£Éà ¸ÁÜ£À ¥ÀqÉ¢zÁÝgÉ EªÀgÀ£ÀÄß PÁ¯ÉÃf£À ¥ÁæA±ÀÄ¥Á®gÀÄ, G¥À£Áå¸ÀPÀgÀÄ C©ü£ÀA¢¹zÁÝgÉ.
ಶ್ರೀ ಬಾಲಗಂಗಾಧರನಾಥಸ್ವಾಮಿಯವರಿಗೆ ಶೋಕ ಸಂತಾಪ
aPÀÌ£ÁAiÀÄPÀ£ÀºÀ½î vÁ®ÆèPÀÄ MPÀÌ°UÀgÀ £ËPÀgÀgÀ ªÉâPÉ ºÁUÀÆ MPÀÌ°UÀ ¸ÀªÀÄÄzÁAiÀÄ D¢ZÀÄAZÀ£ÀVj ªÀÄoÀzÀ ²ªÉÊPÀå ²æà ¨Á®UÀAUÁzsÀgÀ£ÁxÀ¸Áé«ÄAiÀĪÀjUÉ ±ÀæzÁÝAd° C¦ð¹vÀÄ. 
ಚಿಕ್ಕನಾಯಕನಹಳ್ಳಿ,ಜ.15 : ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥಸ್ವಾಮಿಯವರು ಶಿವೈಕ್ಯರಾಗಿದ್ದು ಅವರಿಗೆ ಶಾಸಕ ಸಿ.ಬಿ.ಸುರೇಶ್ಬಾಬು, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಎಸ್.ನಟರಾಜು, ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಡಾ.ಎಸ್.ಜಿ.ಪರಮೇಶ್ವರಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಎಸ್.ನಾರಾಯಣಗೌಡ, ಕೆ.ಜಿ.ಕೃಷ್ಣೆಗೌಡ ಶೋಕ ವ್ಯಕ್ತಪಡಿಸಿದ್ದಾರೆ.


Friday, January 11, 2013


ರಸ್ತೆ ಅಭಿವೃದ್ದಿಗೆ ಅನುಧಾನ ನೀಡುವಲ್ಲಿ ರಾಜ್ಯಕ್ಕೆ  ಕೇಂದ್ರ ಸಕರ್ಾರದಿಂದ ಮಲತಾಯಿ ಧೋರಣೆ: ಸಿ.ಎಂ.ಜಗಧೀಶ್ ಶೆಟ್ಟರ್
ಚಿಕ್ಕನಾಯಕನಹಳ್ಳಿ,ಜ.: ಪ್ರಧಾನ ಮಂತ್ರಿಗಳ  ಗ್ರಾಮ ಸಡಕ್ ಯೋಜನೆಯಲ್ಲಿ ಅನುಧಾನ ಹಂಚಿಕೆ ಮಾಡುವ ವಿಷಯದಲ್ಲಿ ಕೇಂದ್ರಸಕರ್ಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ರಾಜ್ಯಕ್ಕೆ ಇಲ್ಲಿವರೆಗೆ ರಸ್ತೆ ಅಭಿವೃದ್ದಿಗೆ ಅನುಧಾನ ನೀಡಿಲ್ಲವೆಂದು ಮುಖ್ಯಮಂತ್ರಿ ಜಗಧೀಶ್ ಶೆಟ್ಟರ್ ಆರೋಪಿಸಿದರು.
ತಾಲೂಕಿನ ಶೆಟ್ಟೀಕೆರೆಯಲ್ಲಿ ರಾಜ್ಯ ಸಕರ್ಾರ 102 ಕೋಟಿ ರೂಗಳ ಅಂದಾಜಿನಲ್ಲಿ ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಶಿಲಾನ್ಯಾಸ ನೆರವೇರಿಸಿದ ನಂತರ ಭಾಜಪ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ರಾಜ್ಯದ ಪ್ರತಿ ವಿಧಾನ ಸಭೆಯ ಗ್ರಾಮಗಳ ರಸ್ತೆಗಳ ಅಭಿವೃದ್ದಿಗೆ ನಮ್ಮ ಸಕರ್ಾರ ಹೆಚ್ಚಿನ ಒತ್ತು ನೀಡಿ ಈ ಹಿಂದೆ 20 ಕಿ.ಮೀ.ರಸ್ತೆಗಳ ಅಭಿವೃದ್ದಿ ಪಡಿಸಿತ್ತು, ಈಗ ನಮ್ಮ ಸಂಪುಟ ಸಭೆಯ ತೀಮರ್ಾನದಂತೆ ಮತ್ತೆ 30 ಕಿ.ಮೀ.ರಸ್ತೆಗಳ ಅಭಿವೃದ್ದಿಗೆ ಚಾಲನೆ ನೀಡಲಾಗುವುದು ಎಂದರು.
ಕುಡಿಯುವ ನೀರಿಗಾಗಿ ತಾಲೂಕಿಗೆ ಹೇಮಾವತಿ ನೀರು ಹರಿಸಲು ಈಗ ಶಿಲಾನ್ಯಾಸ ನೆರವೇರಿಸುತ್ತಿದ್ದು, ಇಲ್ಲಿನ ಕೆರೆಗಳಿಗೆ ನೀರು ಹರಿಸುವ ಯೋಜನೆಯ ಉದ್ಘಾಟನೆಯನ್ನು ನಾವೇ ಮಾಡುವಂತೆ ಜನತೆ ಆಶೀರ್ವದಿಸಬೇಕೆಂದರಲ್ಲದೆ, ಕೆ.ಎಸ್.ಕಿರಣ್ಕುಮಾರ್ ಈ ಕಾರ್ಯವನ್ನು ಕೈಗೂಡುವಂತೆ ಮಾಡುವಲ್ಲಿ ಸಾಕಷ್ಟು ಶ್ರಮವಹಿಸಿದ್ದು ಅವರಿಗೆ ನೀವು ಹೆಚ್ಚಿನ ಶಕ್ತಿ ಕೊಡಬೇಕು ಎಂದರು.
ನಮ್ಮ ಅಧಿಕಾರ ಅವಧಿ ಮೇ ತಿಂಗಳಿಗೆ ಮುಗಿಯಲಿದ್ದು ಪೂಣರ್ಾವಧಿವರೆಗೆ ಅಧಿಕಾರ ನಡೆಸಲಿದ್ದೇನೆ ಎಂದರಲ್ಲದೆ, ಫೆಬ್ರವರಿಯಲ್ಲಿ ನಾನೇ ರೈತ ಪರ ಬಜೆಟ್ ಮಂಡಿಸಲಿದ್ದು, ಆ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಅಗತ್ಯವಿರುವ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವುದಾಗಿ ತಿಳಿಸಿದರು.
ಬಿ.ಜೆ.ಪಿ. ಸಕರ್ಾರ ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಸುವರ್ಣಭೂಮಿ ಯೋಜನೆ, ಕೆರೆ ಹೂಳೆತ್ತುವ ಯೋಜನೆ, ಅಶಕ್ತ ಜನರಿಗೆ ವಿವಿಧ ರೀತಿಯ ಮಾಸಿಕ ವೇತನ ಯೋಜನೆಯನ್ನು ಯಶಸ್ವಿಗೆ ಅನುಷ್ಠಾನಗೋಳಿಸಲಾಗಿದೆ ಎಂದರು.
ಸಹಕಾರ ಬ್ಯಾಂಕ್ಗಳಿಂದ ಸಣ್ಣ ರೈತರಿಗೆ ನೀಡಿದ್ದ ಸಾಲ ಮನ್ನಾ ಮಾಡಲು 3600 ಕೋಟಿ ರೂಗಳನ್ನು   ಸಹಕಾರ ಇಲಾಖೆಗೆ ನೀಡಿರುವುದಾಗಿ ತಿಳಿಸಿದರಲ್ಲದೆ, ಗ್ರಾಮ ಸಹಾಯಕರಿಗೆ ನೀಡುತ್ತಿದ್ದ ಮಾಸಿಕ ಸಂಬಳವನ್ನು ಮೂರೂವರೆ ಸಾವಿರ ರೂಗಳಿಂದ ಏಳು ಸಾವಿರ ರೂಗಳವರೆಗೆ ಹೆಚ್ಚಿಸಲಾಗಿದೆ ಎಂದರು. 
ಸಮಾರಂಭದಲ್ಲಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ, ತಾಲೂಕಿಗೆ ಹೇಮಾವತಿ ನೀರು ಹರಿಸಲು ಸಾಕಷ್ಟು ವಿಘ್ನಗಳು ಬಂದವು ಆದರೆ ಅವ್ಯಾವುಗಳನ್ನು ಲೆಕ್ಕಿಸದೆ,  ಈ ತಾಲೂಕಿಗೆ ನೀರು ಕೊಡಲೇ ಬೇಕೆಂಬ ಉದ್ದೇಶದಿಂದ ಹಠ ಬಿಡದ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನಮ್ಮ ಕೈಯಲ್ಲಿ ಈ ಕೆಲಸ ಮಾಡಿಸಿದ್ದಾರೆ. ಈ ಕಾರ್ಯಕ್ಕೆ ಮೂವರು ಮುಖ್ಯಮಂತ್ರಿಗಳೂ ಸಹಕರಿಸಿದ್ದು, ಯಡಿಯೂರಪ್ಪನವರು ಯೋಜನೆಯ ಸವರ್ೆಗೆ ಆದೇಶ ಮಾಡಿದರೆ, ಸದಾನಂದ ಗೌಡರವರು ಸಂಪುಟ ಸಭೆಯಲ್ಲಿ ಅನುಷ್ಠಾನಗೊಳಿಸಿದರು, ಜಗದೀಶ್ ಶೆಟ್ಟರ್ರವರು ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದರು. 
ಪಶ್ಚಿಮ ಘಟ್ಟದಿಂದ ಬಯಲು ಸೀಮೆಗೆ ನೀರು ತರುವ ಯೋಜನೆಗೆ ಪರಮಶಿವಯ್ಯನವರ ನೇತೃತ್ವದಲ್ಲಿ ಸಮತಿಯನ್ನು ರಚಿಸಿಸಲಾಗಿದೆ, ಅದೇರೀತಿ ಎತ್ತಿನಹೊಳೆ ಯೋಜನೆಗೂ ಶ್ರಮಿಸಲಾಗುವುದು ಎಂದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ರವರು, 2006 ರಿಂದಲೂ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ಅಂದಿನಿಂದ ಇದರ ಹಿಂದೆ ಬಿದ್ದು ಹೋರಾಡಿದ ಫಲ ಇಂದು ಸಾರ್ಥಕವಾಗಿದೆ ಎಂದರಲ್ಲದೆ, ಇದಕ್ಕೆ ಸಾಕಷ್ಟು ವಿಘ್ನಗಳು ಬಂದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹೋರಾಡಿರುವುದಾಗಿ ತಿಳಿಸಿದರಲ್ಲದೆ, ಯಡಿಯೂರಪ್ಪನವರು 2008ರಲ್ಲಿ ಈ ತಾಲೂಕಿನ ಮತಿಘಟ್ಟದ ಸಮಾರಂಭದಲ್ಲಿ ಕೊಟ್ಟ ಮಾತಿನಮೂಲಕ ಈ ಕಾರ್ಯಕ್ಕೆ ಚಾಲನೆ ಸಿಕ್ಕಿದಂತಾಗಿತ್ತು ಎಂದು ಸ್ಮರಿಸಿಕೊಂಡರಲ್ಲದೆ,  ಶೀಘ್ರವಾಗಿ ಈ ಕೆಲಸವನ್ನು ಮುಗಿಸಿ ನಂತರ ತಾಲೂಕಿನ ಬಡಕೆಗುಡ್ಲು, ಹಂದನಕೆರೆ, ತೀರ್ಥಪುರ, ಹಾಗೂ ಗುಬ್ಬಿ ತಾಲೂಕಿನ ಹಾಗಲ್ವಾಡಿ ಮೂಲಕ ಬುಕ್ಕಾಪಟ್ಟಣಕ್ಕೂ   ಕುಡಿಯುವ ನೀರು ಕೊಡುವಂತೆ ಒತ್ತಾಯಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಡಲ ಬಿ.ಜೆ.ಪಿ.ಅಧ್ಯಕ್ಷ ಮಿಲಿಟರಿ ಶಿವಣ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ, ಕುಪ್ಪೂರು ಗದ್ದಿಗೆಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ವಾಲ್ಮೀಕಿ ಮಹಾಸಂಸ್ಥಾನ ಪೀಠದ ವಾಲ್ಮೀಕ ಸಂಜಯಕುಮಾರ ಸ್ವಾಮಿ ದಿವ್ಯ ಸಾನಿಧ್ಯವಹಿಸಿದ್ದರು.
ಸಮಾರಂಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಬೆಳ್ಳುಬ್ಬಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಮುಖ್ಯ ಸಚೇತಕ ಎ.ಎಚ್.ಶಿವಯೋಗಸ್ವಾಮಿ,  ಎಂ.ಎಸ್.ಐ.ಎಲ್ ಎಂ.ಬಿ.ನಂದೀಶ್, ಶಾಸಕ ಬಿ.ಸಿ.ನಾಗೇಶ್, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಶಿವಪ್ರಸಾದ್, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯೆ ನಿಂಗಮ್ಮ ರಾಮಯ್ಯ, ತಾ.ಪಂ.ಸದಸ್ಯರಾದ ರಮೇಶ್, ಆರ್.ಪಿ.ವಸಂತಯ್ಯ, ಕೆ.ಎಂ.ನವೀನ್, ಸೀತಾರಾಮಯ್ಯ, ಜಯಲಕ್ಷ್ಮಮ್ಮ, ತಿಮ್ಮರಾಜಮ್ಮ, ನೀರಾವರಿ ಸವರ್ೆಯರು ವೇದಾನಂದಮೂತರ್ಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾವಾರಧಿ ಶಾಲೆಯ ಮಕ್ಕಳು ಪ್ರಾಥರ್ಿಸಿದರೆ, ಕವಿತಾ ಕಿರಣ್ಕುಮಾರ್ ನಿರೂಪಿಸಿದರು, ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ ಸ್ವಾಗತಿಸಿದರು.
ಸುದ್ದಿ:2:




ನಿಗದಿತ ಕಾಲಾವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಾಕೀತು: ಸಿ.ಎಂ.ಶೆಟ್ಟರ್
ಚಿಕ್ಕನಾಯಕನಹಳ್ಳಿ.ಜ.11: ಒಂದು ವರ್ಷದೊಳಗೆ ತಾಲೂಕಿನ 26 ಕೆರೆಗಳಿಗೂ ನೀರು ಹರಿಸುವ ಕಾಮಗಾರಿಯನ್ನು  ಪೂರ್ಣಗೊಳಿಸುವ ಮೂಲಕ ಈ ಭಾಗದ ಜನ ಶುದ್ದ ನೀರನ್ನು ಕುಡಿಯುವಂತೆ ಮಾಡಲು ಅಧಿಕಾರಿಗಳಾಗಿ ತಾಕೀತು ಮಾಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರು ತಿಳಿಸಿದರು.  
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ವಿವಿಧ 19 ಶಾಲಾ ಕೊಠಡಿಗಳ ಶಂಕುಸ್ಥಾಪನೆ ಮಾಡಿ ಮಾತನಾಡಿ, ಫೆಬ್ರವರಿಯಲ್ಲಿ ನಾನು ಮಂಡಿಸುವ ಬಜೆಟ್ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸದರಲ್ಲದೆ, ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಅಗತ್ಯವಿರುವ ಅನುದಾನವನ್ನು ಮೀಸಲಿಡುವುದಾಗಿ ತಿಳಿಸಿದರು.
ನನಗೆ ಜನರ ಆಶೀವರ್ಾದ ಇರುವವರೆಗೂ ಯಾರಿಗೂ ಅಂಜುವುದಿಲ್ಲವೆಂದ ಅವರು, ಅಧಿಕಾರ ಶಾಶ್ವತವಲ್ಲ, ಜನರ ಆಶಯವನ್ನು ಈಡೇರಿಸುವುದು ಮುಖ್ಯ ಎಂದ ಅವರು, ರಾಜ್ಯದ ಸಿ.ಎಂ.ಗಳು ಹೋಗದ ಊರುಗಳಿಗೆ ನಾನು ಹೋಗಿದ್ದು, ಕಿತ್ತೂರು ಉತ್ಸವ, ಸವದತ್ತಿ, ಚಾಮರಾಜನಗರಕ್ಕೆ ಹೋದ ಮೇಲೆ ನನಗೆ ಹೆಚ್ಚಿನ ಅನುಕೂಲಗಳಾಗಿವೆ ಎಂದ ಅವರು, ಚಿಕ್ಕನಾಯಕನಹಳ್ಳಿಗೆ ಬರುವಾಗಲೂ ಈ ರೀತಿಯ ಮಾತುಗಳು ಕೇಳಿ ಬಂದವೂ ಆದರೆ ನಾನು ಅದನ್ನು ಕಡೆಗಣಿಸಿ ಇಲ್ಲಿಗೆ ಬಂದಿದ್ದೇನೆ ಎಂದರು. 
ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ನೀರು ರೈತರು ದೇಶದ ಸಂಪತ್ತು ಯಾವುದೇ ಪಕ್ಷದ ಸ್ವತ್ತಲ್ಲ ಎಂದರಲ್ಲದೆ. ಬದುಕಿಗೆ ಬೇಕಾದ ಕುಡಿಯುವ ನೀರಿನ ಯೋಜನೆಗೆ ಯಾವುದೇ ಅಡೆ ತಡೆಗಳಿದ್ದರೂ ಇವುಗಳನ್ನು ನಿವಾರಿಸಿಕೊಂಡು ತಾಲ್ಲೂಕಿನ ಬಹುದಿನಗಳ ಬೇಡಿಕೆಯಾದ 26 ಕೆರೆಗಳಿಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ನೇತ್ರಾವತಿ ತಿರುವು ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತ ಗೊಳಿಸಲು ನೀರಾವರಿ ತಜ್ಞ ಪರಮಶಿವಯ್ಯನವರ ನೇತೃತ್ತದಲ್ಲಿ ಸಮಿತಿ ರಚಿಸಲಾಗಿದ್ದರು ಪ್ರಗತಿಯಲ್ಲಿದೆ ಎಂದರು. ಬಿ.ಜೆ.ಪಿ.ಸಕರ್ಾರದ ಅವಧಿಯಲ್ಲಿ ಕಾಮಗಾರಿಗಳು ಪ್ರಾರಂಭಿಸಲು ಶಂಕುಸ್ಥಾಪನೆ ಮಾಡಿ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಂಡು ನಾವೇ ಉದ್ಘಾಟನೆ ಮಾಡುತ್ತಿದ್ದೇವೆ ಕುಡಿಯುವ ನೀರಿನ ಯೋಜನೆಗೆ ಅಧಿಕಾರಿಗಳು ಪ್ರಾರಂಬಿಸಿ ಒಂದು ವರ್ಷದಲ್ಲಿ ಪೂರೈಸುವಂತೆ ಆದೇಶ ನೀಡಲಾಗಿದೆ ಎಂದರು.
ಸಂಸದ ಜಿ.ಎಸ್.ಬಸವರಾಜು ತಾಲ್ಲೂಕಿನ 26 ಕೆರೆಗಳಿಗೆ ಕುಡಿಯುವ ನೀರಿ ಯೋಜನೆಗೆ ಚಾಲನೆ ನೀಡಲಾಗಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದು, ಬಸವರಾಜು ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಇದರಿಂದ 137 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು, ಮಠಾದೀಶರು ಬಾಗಿಯಾಗಿದ್ದಾರೆ. ನೇತ್ರಾವತಿ 25 ರಿಂದ 30 ಟಿ.ಎಂ.ಸಿ. ನೀರು ತರುವುದರಿಂದ 8 ಜಿಲ್ಲೆಗಳ 46 ತಾಲ್ಲೂಕುಗಳ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿಗಳು ಮಂಜೂರು ಮಾಡುವಂತೆ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಿದ್ದು, ತಾಲ್ಲೂಕಿನ ಗಡಿ ಬಾಗಗಳಾದ ಹಂದನಕೆರೆ, ಕಂದಿಕೆರೆ , ರಾಮನಹಳ್ಳಿ, ಬುಕ್ಕಾಪಟ್ಟಣ ಹೋಬಳಿ ಭಾಗಗಳಿಗೂ ಕುಡಿಯುವ ನೀರು ಒದಗಿಸಲು ನೀರಾವರಿ ಸಚಿವರು ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಪಟ್ಟಣದ ತೀ.ನಂ.ಶ್ರೀ ಭವನಕ್ಕೆ ಹೆಚ್ಚು ಅನದಾನ ಬಿಡುಗಡೆ ಮಾಡುವಂತೆ ಸಿ.ಎಂ.ರವರನ್ನು  ಒತ್ತಾಯಿಸಿದರು. 
ಕಾರ್ಯಕ್ರಮದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ||ಯತೀಶ್ವರಶಿವಾಚಾರ್ಯಸ್ವಾಮಿಗಳು ಮುಖ್ಯ ಸಚೇತಕ ಡಾ|| ಶಿವಯೋಗಿಸ್ವಾಮಿ, ಸಚಿವರಾದ ಬೆಳ್ಳುಬ್ಬಿ, ಎಸ್.ಶಿವಣ್ಣ, ಜಿ.ಪಂ. ಅಧ್ಯಕ್ಷೆ ಪ್ರೇಮಾ ಮಹಾಲಿಂಗಯ್ಯ, ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ, ಕೆ.ಎಸ್. ಕಿರಣ್ಕುಮಾರ್, ಬಿ. ಲಕ್ಕಪ್ಪ, ಜಿ.ಪಂ.ಸದಸ್ಯ ಪಂಚಾಕ್ಷರಿ ಜೆ.ಸಿ.ಪುರ ಗ್ರಾ.ಪಂ. ಅಧ್ಯಕ್ಷೆ ಲಲಿತಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Wednesday, January 9, 2013



ಚಿ.ನಾ.ಹಳ್ಳಿ ತಾಲೂಕಿನ ಮೂರು ಹೋಬಳಿಯ 26 ಕೆರೆಗಳ ಒಡಲ ತಣಿಸಲಿರುವ ಹೇಮೆ.
                           (ಸಿ.ಗುರುಮೂತರ್ಿ ಕೊಟಿಗೆಮನೆ)
aPÀÌ£ÁAiÀÄPÀ£ÀºÀ½î vÁ®ÆQ£À°è ºÉêÉÄ ºÀjAiÀÄĪÀ 26 PÉgÉUÀ¼À ªÀiÁUÀðzÀ £ÀPÉë
ಚಿಕ್ಕನಾಯಕನಹಳ್ಳಿ,ಜ.8: ತಾಲೂಕಿನ ಜನತೆಯ ಬಹುದಿನಗಳ ಕನಸು, ಹಲವು ವರ್ಷಗಳ ಹೋರಾಟದ ಫಲ, ಸಾವಿರಾರು ಜನರ ಬಾಯಾರಿಕೆಯನ್ನು ನೀಗಿಸಲು ಹೇಮೆಯನ್ನು ತಾಲೂಕಿಗೆ ಹರಿಸಲು ಸಿದ್ದತೆ ನಡೆಯುತ್ತಿದೆ.
ಕೆರೆಗಳ ಒಡಲು ಬರಿದಾಗಿ ಬಾಯಿತೆರೆದುಕೊಂಡಿದ್ದ ಕೆರೆಯ ಅಂಗಳಗಳು ಇನ್ನು ಮುಂದಾದರೂ ನೀರು ಕಾಣುತ್ತಾವಲ್ಲವೆಂಬ ಸಂತೋಷ, ಜೊತೆಗೆ ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ, ಪ್ಲೋರೈಡ್ ನೀರನ್ನೇ ಕುಡಿದು ಹಲವು ರೋಗಳಿಗೆ ತುತ್ತಾಗುತ್ತಿದ್ದ ಜನಕ್ಕೆ ರೋಗಗಳಿಂದ ದೂರ ಉಳಿಯಬಹುದೆಂಬ ಸ್ವಲ್ಪಮಟ್ಟಿನ  ನಿಟ್ಟುಸಿರು ಬಿಡುವ ಕಾಲ ಸನ್ನಿಹಿತವಾಗುತ್ತಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ನೀರು ಬಿಡಲು ಜಲ ಸಂಪನ್ಮೂಲ ಇಲಾಖೆಯು ಕಾವೇರಿ ನೀರಾವರಿ ನಿಗಮ ಮೂಲಕ 0.4 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಿದ್ದು, ಈ ನೀರು ತಾಲೂಕಿನಲ್ಲಿ ಮೂರು ರಿಂದ ಐದು ತಿಂಗಳ ವರೆಗೆ ಹರಿಯುತ್ತದೆ, ತಾಲೂಕಿನ 26 ಕೆರೆಗಳು ತುಂಬಲು ಕನಿಷ್ಟ ಪಕ್ಷ ಮುನ್ನೂರು ಕ್ಯೂಸಿಕ್ಸ್ ನೀರಾದರೂ ಅಗತ್ಯವಿದ್ದು, ಈ ಮಟ್ಟದ ನೀರು ನಮ್ಮ ತಾಲೂಕಿಗೆ ಸಿಗುತ್ತದೆ ಎಂಬುದೇ ಹರ್ಷದ ಸಂಗತಿ, ಈ ನೀರಿನಿಂದಾಗಿ ಹೇಮೆ ಹರಿಯುವ 26 ಕೆರೆಗಳ ಭಾಗದಲ್ಲಿನ ಜನ ಶುದ್ದ ನೀರನ್ನು ಕುಡಿಯುವುದರ ಜೊತೆಗೆ ತಮ್ಮ ಭಾಗದ ಬೋರ್ವೆಲ್ಗಳ ಅಂತರ್ಜಲವನ್ನು ಅಭಿವೃದ್ದಿ ಪಡಿಸಿಕೊಳ್ಳುತ್ತಾರೆ.
ತಾಲೂಕಿಗೆ ಹೇಮೆ ಹರಿಯುವ ದಾರಿ: ಹೇಮಾವತಿ ಮುಖ್ಯ ನಾಲೆಯಿಂದ  ನೀರು ಬರುವ ದ್ವಾರವೆಂದರೆ ಕೆ.ಬಿ.ಕ್ರಾಸ್-ಬಿಳಿಗೆರೆ ಬಳಿ ಇರುವ ಗಡಬನಹಳ್ಳಿಯ ಬಳಿಯಿಂದ,  ಗುರುತ್ವಾಕರ್ಷಣ ಬಲದಿಂದ ತಾಲೂಕಿನೊಳಕ್ಕೆ ಬರುವ ಹೇಮೆ ಪೆಮ್ಮಲದೇವರಹಳ್ಳಿ  ಮಾರು ದೂರವಿದೆ ಎನ್ನುವ ಸ್ಥಳದಿಂದ ಎರಡು ಮಾರ್ಗಗಳಾಗಿ ವಿಂಗಡಣೆಗೊಂಡು ಒಂದು ಶಾಖಾನಾಲೆ ಚಿಕ್ಕನಾಯಕನಹಳ್ಳಿ ಕಡೆಗೆ ಹರಿದರೆ, ಮತ್ತೊಂದು ಶಾಖಾನಾಲೆ ಹಾಲ್ಕುರಿಕೆಯ ಕಡೆಗೆ ಹರಿಯುತ್ತದೆ. ಈ ಎರಡೂ ಶಾಖಾನಾಲೆಗಳಿಂದ ನೈಸಗರ್ಿಕ ಹಳ್ಳಕೊಳ್ಳಗಳಿಂದ  22 ಕೆರೆಗಳು ತುಂಬಿಕೊಂಡರೆ, 4 ಕೆರೆಗಳು ಲಿಫ್ಟ್ ಮೂಲಕ ಒಟ್ಟು 26 ಕೆರೆಗಳು,  ಹತ್ತಾರು ಕಟ್ಟೆಗಳು ತುಂಬಿಕೊಂಡು 50ಕ್ಕೂ ಹೆಚ್ಚು  ಗ್ರಾಮಗಳ ಜನರು ಉಪಯೋಗವನ್ನು ಪಡೆದುಕೊಳ್ಳುತ್ತಾರೆ.
ಗುರುತ್ವಾಕರ್ಷಣ ಬಲದಿಂದ ನೀರು ಹರಿದಾಗ ತುಂಬವ ಕೆರೆಗಳೆಂದರೆ ಪೆರಮಲದೇವರಹಳ್ಳಿ, ಸಾಸಲು, ಪಟ್ಟದೇವರಕೆರೆ, ಶೆಟ್ಟೀಕೆರೆ, ತಿಮ್ಲಾಪುರ, ಹುಳಿಯಾರು, ಅಜ್ಜೇನಹಳ್ಳಿ, ಹೊಸೂರು, ಮಂಚಸಂದ್ರ, ಕೊಡ್ಲಾಗರ, ಚುಂಗನಹಳ್ಳಿ, ದಬ್ಬೇಗಟ್ಟ, ಮೇಲನಹಳ್ಳಿ, ಮಾರಸಂದ್ರ, ಚಿಕ್ಕನಾಯಕನಹಳ್ಳಿ, ಕಂದಿಕೆರೆ, ತಮ್ಮಡಿಹಳ್ಳಿ, ದಾಸೀಹಳ್ಳಿ, ಕುಪ್ಪೂರು ಇವಷ್ಟೇ ಅಲ್ಲದೆ, ಈ ಮಾರ್ಗವಾಗಿ ಹರಿಯುವ ಕಟ್ಟೆಗಳು, ಹಳ್ಳ-ಕೊಳ್ಳಗಳು ತುಂಬಿ ಈ ಭಾಗದಲ್ಲಿ ಬರುವ ಲಕ್ಷಾಂತರ ಗಿಡ ಮರಗಳು ಹಸಿರಿನಿಂದ ನಳನಳಿಹಿಸುತ್ತವೆ.
ಲಿಫ್ಟ್ ಮೂಲಕ ನೀರು ಪಡೆಯುವ ಕೆರೆಗಳು:  ಹೇಮಾವತಿ ನೀರು ಗುರುತ್ವಾಕರ್ಷಣೆ ಅಲ್ಲದೆ, ನಾಲ್ಕು ಕೆರೆಗಳಿಗೆ ಲಿಫ್ಟ್ ಮೂಲಕ ನೀರು ಹರಿಸಬೇಕಾಗುತ್ತದೆ, ಅವುಗಳೆಂದರೆ ನಾಗೇನಹಳ್ಳಿ, ಬ್ಯಾಡರಹಳ್ಳಿ, ಜೆ.ಸಿ.ಪುರ, ನಡುವನಹಳ್ಳಿ ಕೆರೆಗಳೂ ನೀರನ್ನು ಪಡೆಯುತ್ತವೆ.
ಈ ಯೋಜನೆಗೆ ಸಕರ್ಾರ ಈಗಾಗಲೇ 102 ಕೋಟಿ ರೂಗಳನ್ನು ಬಜೆಟ್ನಲ್ಲಿ ಹಂಚಿಕೆ ಮಾಡಿದ್ದು ಹಣಕ್ಕೇನು ತೊಂದರೆ ಇಲ್ಲ, ಈ ಯೋಜನೆಯ ಕಾಮಗಾರಿಯನ್ನು ಹೈದ್ರಾಬಾದ್ ಮೂಲದ ಎಂ.ಇ.ಐ ಎಂಬ ಸಂಸ್ಥೆಗೆ ಸಕರ್ಾರ ಗುತ್ತಿಗೆ ನೀಡಿದೆ. ಈ ಕಾರ್ಯವನ್ನು ಪೂರೈಸಲು ಸಕರ್ಾರ ಒಂದು ವರ್ಷದೊಳಗೆ ಕಾಲಾವಕಾಶವನ್ನು ನೀಡಿದೆ, ಈ ಕಾರ್ಯಕ್ಕೆ ಶಿಲಾನ್ಯಾಸ ಮಾಡಲು ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ರವರು ಇದೇ ತಿಂಗಳ 11ಕ್ಕೆ ತಾಲೂಕಿಗೆ ಬರಲಿದ್ದಾರೆ ಅವರ ಜೊತೆ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿಯವರು ಬರುವವರಿದ್ದು ಅವರನ್ನೇಲ್ಲಾ  ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಗೌರವಿಸಲಿದ್ದಾರೆ. ಇಲಾಖೆ ಅಂದುಕೊಂಡ ವೇಗದಲ್ಲಿ ಕೆಲಸವಾದರೆ  ಈ ಭಾಗದ ಜನ ಒಂದರಿಂದ ಎರಡು ವರ್ಷಗಳೊಳಗೆ ಹೇಮಾವತಿ ನೀರು ಕುಡಿಯುತ್ತಾರೆ, ಇಷ್ಟೊ ಅಷ್ಟೊ ಬೋರ್ವೆಲ್ಗಳಿಂದ ನೀರು ಪಡೆದು ತಮ್ಮ ಮರಗಿಡಗಳನ್ನು ಉಳಿಸಿಕೊಳ್ಳಬಹದು ಎಂಬುದು ದೂರದ ಆಶಯ. ಆದರೆ ಅಂದುಕೊಂಡಂತೆ ಆಗುತ್ತದೆಯೇ. . . . . !? 
 

ಹೈದ್ರಾಬಾದ್ ಮುಸ್ಲಿಂ ಶಾಸಕನ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಒತ್ತಾಯ
ಚಿಕ್ಕನಾಯಕನಹಳ್ಳಿ,:  ಹೈದ್ರಾಬಾದ್ ಮುಸ್ಲಿಂ ಶಾಸಕ ಸಾರ್ವಜನಿಕ ಸಭೆಯಲ್ಲಿ ಹಿಂದೂಗಳ ಭಾವೈಕೆತೆಗೆ ದಕ್ಕೆ ತರುವಂತಹ ಹೇಳಿಕೆ ನೀಡಿದನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನೆಡೆಸಿ ಖಂಡಿಸಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಕಾರ್ಯಕರ್ತರು ಆ ಶಾಸಕನ ವಿರುದ್ದ ಘೋಷಣೆ ಕೂಗುತ್ತ ತಾಲ್ಲೂಕು ಕಛೇರಿಗೆ ತೆರಳಿ ಮನವಿ ಪತ್ರವನ್ನು ತಹಶಿಲ್ದಾರರಿಗೆ  ಸಲ್ಲಿಸಿದ್ದರು. 
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಸಂಚಾಲಕ ಜಯಸಿಂಹ ಮಾತನಾಡಿ ಈ ದೇಶದ ಮುಸ್ಲಿಂ ಸಮುದಾಯದ ಮಾನಸಿಕತೆ ಏನೂ ಎಂಬುದು ತಿಳಿಯುತ್ತದೆ, ನಮ್ಮ ದೇಶದಲ್ಲಿ ಇಂತಹ ಮುಸ್ಲಿಂ ಜನಾಂಗದವರು ಹಿಂದೂಗಳು ಒಂದಾಗಿ ದೇಶದ ರಕ್ಷಣೆ ಮಾಡಬೇಕು ಎಂದರು.
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ಮಾತನಾಡಿ ಕೀಳು ಮಟ್ಟದ ರಾಜಕಾರಣ ಮಾಡುವ ಉದ್ದೇಶದಿಂದ ಈ ಮುಸ್ಲಿಂ ಶಾಸಕ ಈ ಹೇಳಿಕೆ ನೀಡಿದ್ದರೆ, ನಮ್ಮ ದೇಶ ಸಂಸ್ಕೃತಿಯ ತವರು ಭೂಮಿ ಎಲ್ಲಾ ಧರ್ಮದವರನ್ನು ಪ್ರೀತಿಸುವ ಸಮುದಾಯ, ಯಾರೋ ಒಬ್ಬ ಇಂತಹ ನೀಚ ಬುದ್ದಿಯವನಿಂದ ಹಿಂದೂ ಮುಸ್ಲಿಂ ಜನಾಂಗದವರ ನಡುವೇ ದ್ವೇಶ ಉಂಟುಮಾಡುತ್ತಿದ್ದರೆ ಇಂತವರನ್ನು ಜೈಲಿಗೆ ತಳ್ಳಬೇಕು ಎಂದು ಆಗ್ರಹಿಸಿದ್ದರು.
ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ನಮ್ಮ ದೇಶದ ರಾಜಕಾರಣಿಗಳು ಅಲ್ಪ ಸಂಖ್ಯಾತರನ್ನು ಓಟು ಬ್ಯಾಂಕಿಗೊಸ್ಕರ ಅವರನ್ನು ಎತ್ತಿ ಮೆರೆಸಿದ ಪರಿಣಾಮ ಈ ಹೇಳಿಕೆಗಳು ಬರುತ್ತಿವೆ ಆಗಾಗಿ ಎಲ್ಲಾ ಹಿಂದೂ ರಾಜಕಾರಣಿಗಳು ಜಾಗೃತರಾಗಬೇಕು ಎಂದರು
ಈ ಸಂದರ್ಭದಲ್ಲಿ ಹಳೇಮನೆ ಸುರೇಶ್, ಮಲ್ಲಿಕಾಜರ್ುನ ಮಾತನಾಡಿದ್ದರು. ತಾಲ್ಲೂಕು ಕ.ರ.ವೇ ಅಧ್ಯಕ್ಷ ಸಿ.ಟಿ ಗುರುಮೂತರ್ಿ, ದಿಲೀಪ, ಜಗದೀಶ್ ಸ್ವಾಮಿ ಪ್ರತಿಭಟನೆಯಲ್ಲಿ ಭಾಗವಯಿಸಿದ್ದರು.

ಹೈದ್ರಾಬಾದ್ ಮುಸ್ಲಿಂ ಶಾಸಕನ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಒತ್ತಾಯ
ಚಿಕ್ಕನಾಯಕನಹಳ್ಳಿ,:  ಹೈದ್ರಾಬಾದ್ ಮುಸ್ಲಿಂ ಶಾಸಕ ಸಾರ್ವಜನಿಕ ಸಭೆಯಲ್ಲಿ ಹಿಂದೂಗಳ ಭಾವೈಕೆತೆಗೆ ದಕ್ಕೆ ತರುವಂತಹ ಹೇಳಿಕೆ ನೀಡಿದನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನೆಡೆಸಿ ಖಂಡಿಸಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಕಾರ್ಯಕರ್ತರು ಆ ಶಾಸಕನ ವಿರುದ್ದ ಘೋಷಣೆ ಕೂಗುತ್ತ ತಾಲ್ಲೂಕು ಕಛೇರಿಗೆ ತೆರಳಿ ಮನವಿ ಪತ್ರವನ್ನು ತಹಶಿಲ್ದಾರರಿಗೆ  ಸಲ್ಲಿಸಿದ್ದರು. 
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಸಂಚಾಲಕ ಜಯಸಿಂಹ ಮಾತನಾಡಿ ಈ ದೇಶದ ಮುಸ್ಲಿಂ ಸಮುದಾಯದ ಮಾನಸಿಕತೆ ಏನೂ ಎಂಬುದು ತಿಳಿಯುತ್ತದೆ, ನಮ್ಮ ದೇಶದಲ್ಲಿ ಇಂತಹ ಮುಸ್ಲಿಂ ಜನಾಂಗದವರು ಹಿಂದೂಗಳು ಒಂದಾಗಿ ದೇಶದ ರಕ್ಷಣೆ ಮಾಡಬೇಕು ಎಂದರು.
ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ಮಾತನಾಡಿ ಕೀಳು ಮಟ್ಟದ ರಾಜಕಾರಣ ಮಾಡುವ ಉದ್ದೇಶದಿಂದ ಈ ಮುಸ್ಲಿಂ ಶಾಸಕ ಈ ಹೇಳಿಕೆ ನೀಡಿದ್ದರೆ, ನಮ್ಮ ದೇಶ ಸಂಸ್ಕೃತಿಯ ತವರು ಭೂಮಿ ಎಲ್ಲಾ ಧರ್ಮದವರನ್ನು ಪ್ರೀತಿಸುವ ಸಮುದಾಯ, ಯಾರೋ ಒಬ್ಬ ಇಂತಹ ನೀಚ ಬುದ್ದಿಯವನಿಂದ ಹಿಂದೂ ಮುಸ್ಲಿಂ ಜನಾಂಗದವರ ನಡುವೇ ದ್ವೇಶ ಉಂಟುಮಾಡುತ್ತಿದ್ದರೆ ಇಂತವರನ್ನು ಜೈಲಿಗೆ ತಳ್ಳಬೇಕು ಎಂದು ಆಗ್ರಹಿಸಿದ್ದರು.
ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ನಮ್ಮ ದೇಶದ ರಾಜಕಾರಣಿಗಳು ಅಲ್ಪ ಸಂಖ್ಯಾತರನ್ನು ಓಟು ಬ್ಯಾಂಕಿಗೊಸ್ಕರ ಅವರನ್ನು ಎತ್ತಿ ಮೆರೆಸಿದ ಪರಿಣಾಮ ಈ ಹೇಳಿಕೆಗಳು ಬರುತ್ತಿವೆ ಆಗಾಗಿ ಎಲ್ಲಾ ಹಿಂದೂ ರಾಜಕಾರಣಿಗಳು ಜಾಗೃತರಾಗಬೇಕು ಎಂದರು
ಈ ಸಂದರ್ಭದಲ್ಲಿ ಹಳೇಮನೆ ಸುರೇಶ್, ಮಲ್ಲಿಕಾಜರ್ುನ ಮಾತನಾಡಿದ್ದರು. ತಾಲ್ಲೂಕು ಕ.ರ.ವೇ ಅಧ್ಯಕ್ಷ ಸಿ.ಟಿ ಗುರುಮೂತರ್ಿ, ದಿಲೀಪ, ಜಗದೀಶ್ ಸ್ವಾಮಿ ಪ್ರತಿಭಟನೆಯಲ್ಲಿ ಭಾಗವಯಿಸಿದ್ದರು.

ಜ.13ರಂದು ತಮ್ಮಡಿಹಳ್ಳಿ ಹಿರಿಯ ಶ್ರೀಗಳ 4ನೇ ಪುಣ್ಯಗುರು ಸಂಸ್ಮರಣೋತ್ಸವ
ಚಿಕ್ಕನಾಯಕನಹಳ್ಳಿ,ಜ.09: ಲಿಂಗೈಕ್ಯ ಶ್ರೀ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಗಳವರ ಕತರ್ೃಗದ್ದಿಗೆ ಹಾಗೂ ಶ್ರೀಮಠದ ಅಭಿವೃದ್ದಿಗೆ ಮೂರು ಕೋಟಿ ರೂಗಳಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಹಿರಿಯ ಶ್ರೀಗಳ  ನಾಲ್ಕನೇ  ಪುಣ್ಯಗುರು ಸಂಸ್ಮರಣೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 13ರ ಭಾನುವಾರ ಬೆಳಗ್ಗೆ11ಕ್ಕೆ  ತಮ್ಮಡಿಹಳ್ಳಿಯ ವಿರಕ್ತ ಸಂಸ್ಥಾನಮಠದಲ್ಲಿ ಏರ್ಪಡಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ತಿಳಿಸಿದರು.
ಭಾನುವಾರದಂದು ಬೆಳಗ್ಗೆ 8ಗಂಟೆಗೆ ಮಲ್ಲಿಕಾಜರ್ುನಸ್ವಾಮಿಯವರ ಪಲ್ಲಕ್ಕಿ ಉತ್ಸವವು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಆರಂಭವಾಗಲಿದ್ದು 10.30ಕ್ಕೆ ಧ್ವಜಾರೋಹಣ ನೆರವೇರಲಿದೆ. 11ಕ್ಕೆ ಏರ್ಪಡಿಸಿದ್ದು ಗೋಡೆಕೆರೆ ಸ್ಥಿರಪಟ್ಟಾಧ್ಯಕ್ಷರಾದ ಸಿದ್ದರಾಮದೇಶಿಕೇಂದ್ರಸ್ವಾಮಿ, ಷಡಕ್ಷರಮಠದ ರುದ್ರಮುನಿಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದಾರೆ. ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಉಪಸ್ಥಿತರಿರುವರು. ಸಂಸದ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ತು.ಹಾ.ಉ.ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಮಾಜಿ ಶಾಸಕರಾದ ಬಿ.ನಂಜಾಮರಿ, ಕೆ.ಷಡಾಕ್ಷರಿ, ಜಿ.ಪಂ.ಸದಸ್ಯ ಪಂಚಾಕ್ಷರಿ, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಕೆ.ಜೆ.ಪಿ ಮುಖಂಡರಾದ ಲೊಕೇಶ್ವರ್, ಮಸಾಲೆಜಯರಾಮ್, ತಾ.ಪಂ.ಅಧ್ಯಕ್ಷ ಜಗದೀಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶಿವಪ್ರಕಾಶ್, ಮಾಜಿ ಜಿ.ಪಂ.ಸದಸ್ಯ ಸುರೇಂದ್ರಯ್ಯ ಆಗಮಿಸಲಿದ್ದು ಎ.ಪಿ.ಎಂ.ಸಿ ಸದಸ್ಯ ಶಿವರಾಜ್, ಎಸ್.ಎಂ.ಎಸ್ ವಿದ್ಯಾಸಂಸ್ಥೆ ಎಂ.ಬಿ.ಶಿವಣ್ಣ ಉಪಸ್ಥಿತರಿರುವರು.


Tuesday, January 1, 2013



ಜೆ.ಡಿ.ಎಸ್.ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು.ಸಿ.ಬಿ.ಎಸ್
                             
ಚಿಕ್ಕನಾಯಕನಹಳ್ಳಿ,ಜ.01 : ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಮೇಲೆ ಮುಂದಿನ ಚುನಾವಣೆಯ ಜವಬ್ದಾರಿ ಇದೆ, ನಿಮ್ಮ ಮುಖಾಂತರ ನಾವು ಚುನಾವಣೆಗೆ ತೆರಳಬೇಕಿದೆ, ಅದಕ್ಕಾಗಿ ಪಕ್ಷ ಸಂಘಟನೆ ಮಾಡಲು ಈ ತಿಂಗಳ 15ನೇ ತಾರೀಖಿನಿಂದ ರೂಪುರೇಶೆ ರಚಿಸಿ, ಕಾರ್ಯಕರ್ತರನ್ನು ಹುರುದುಂಬಿಸಬೇಕು ಎಂದು  ಶಾಸಕ ಸಿ.ಬಿ.ಸುರೇಶ್ಬಾಬು ಕರೆನೀಡಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಾಗಿ 2ನೇ ಅವಧಿಗೆ ಆಯ್ಕೆಯಾದವರನ್ನು ಅಭಿನಂದಿಸಿ ಮಾತನಾಡಿದರು.
ಪಕ್ಷ ಸಂಘಟನೆ ಮಾಡುವಾಗ ಎಲ್ಲರೂ ತಮ್ಮಲ್ಲಿರುವ ಲೋಪದೋಷಗಳನ್ನು ಸರಿಪಿಡಿಸಿಕೊಳ್ಳಲು ಮುಂದಾಗಬೇಕು ಆ ಕೆಲಸವನ್ನು ನನ್ನಿಂದಲೇ ಆರಂಭಿಸುವುದಾಗಿ ತಿಳಿಸಿದರಲ್ಲದೆ, ಪಕ್ಷದಲ್ಲೇ ಇದ್ದು ಒಳಗೆ ಪಿತೂರಿ ನಡೆಸುವ ಪಕ್ಷಾಂತರಿಗಳು ಈಗಲೇ ಪಕ್ಷ ಬಿಟ್ಟು ತೆರಳುವುದು ಒಳಿತು ಎಂದರು. ನಮ್ಮ ಪಕ್ಷದಲ್ಲಿ ಜಾತಿ ತಾರತಮ್ಯವಿಲ್ಲ ಎಲ್ಲಾ ವರ್ಗದವರಿಗೂ ಪಕ್ಷ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳನ್ನು ನೀಡಿದೆ, ನಮ್ಮನ್ನು ವಿಮರ್ಶ ಮಾಡುವವರು  ಆರೋಪಿಸಿರುವಂತೆ ಪುರಸಭೆಯ ಅಧ್ಯಕ್ಷ ಹುದ್ದೆಗೆ ಆರು ತಿಂಗಳಿಗೊಮ್ಮೆ ಅಧ್ಯಕ್ಷ ಹುದ್ದೆ ಬದಲಾಯಿಸುತ್ತಿರುವುದು ಎಲ್ಲಾ ವರ್ಗದವರಿಗೂ ಅವಕಾಶ ದೊರಕಲಿ, ಅಲ್ಪಸಂಖ್ಯಾತ ಜನಾಂಗ ಬೆಳೆಯಲಿ ಎಂಬ ಉದ್ದೇಶದಿಂದ ಮಾಜಿ ಶಾಸಕರಂತೆ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗುವ ಮನೋಭಾವ ನಮ್ಮಲ್ಲ ಎಂದರು.
ನಮ್ಮ ಪಕ್ಷದಲ್ಲಿ ಎಲ್ಲಾ ಸಮಾಜದವರು ಅಧಿಕಾರ ಹೊಂದಿದ್ದಾರೆ, ಜ್ಯಾತ್ಯಾತೀತ ಭಾವನೆ ಹೊಂದಿರುವ ಪಕ್ಷವು ಎ.ಪಿ.ಎಂ.ಸಿ ಚುನಾವಣೆಯಲ್ಲಿ ಯಾವ ಕಾರಣಕ್ಕೆ ಕಡಿಮೆ ಮತಗಳನ್ನು ಪಡೆಯಿತು ಎಂಬುದರ ಬಗ್ಗೆ ಚಿಂತಿಸುತ್ತಿದೆ, ಪಕ್ಷದಲ್ಲಿ ಸಂಘಟನೆಗಾಗಿ ಈಗಿನಿಂದಲೇ ಎಲ್ಲಾ ಕಾರ್ಯಕರ್ತರು ಸಿದ್ದರಾಗಿ ಎಂದರಲ್ಲದೆ ಪ್ರತಿಯೊಬ್ಬರನ್ನು ಗೌರವವಾಗಿ ಕಾಣುವುದು ನಮ್ಮ ಪಕ್ಷದ ಸಿದ್ದಾಂತವಾಗಿದೆ ಎಂದರು.
ಜೆ.ಡಿ.ಎಸ್. ಪಕ್ಷದಲ್ಲಿ ಸುರೇಶ್ಬಾಬು ಒಬ್ಬ ಕಾರ್ಯಕರ್ತ, ಪಕ್ಷ ಬೆಳೆಯಲು ಸುರೇಶ್ಬಾಬುವಿನಿಂದ ಮಾತ್ರ ಸಾಧ್ಯವಿಲ್ಲ, ಎಲ್ಲಾ ಕಾರ್ಯಕರ್ತರು ಸುರೇಶ್ಬಾಬು ಆಗಿ ಶ್ರಮ ವಹಿಸಿದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರುವುದು ಎಂದರಲ್ಲದೆ ಜಿಲ್ಲೆಯಲ್ಲಿ 9ಕ್ಷೇತ್ರಗಳನ್ನಾದರೂ ಜೆಡಿಎಸ್ ಹೊಂದಿದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜನಹಿತ ಕಾರ್ಯಕ್ರಮ ಮಾಡುವುದರಲ್ಲಿ ಅನುಮಾನವಿಲ್ಲ ಎಂದರು.  
ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಗ್ರಾಮವಾಸ್ತವ್ಯ, ವೇತನ ಹೆಚ್ಚಳ, ಪ್ರತಿ ಶನಿವಾರ ಜನತಾದರ್ಶನ ಅಲ್ಲದೆ ಇತರ ಉತ್ತಮ ಕಾರ್ಯಕ್ರಮ ನಡೆಸಿ ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಟ್ಟಿದ್ದರು, ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಡವರ್ಗದ ಜನತೆಗೆ ಅನುಕೂಲವಾಗಲಿದೆ, ಎಂದರಲ್ಲದೆ ಫೆಬ್ರವರಿ ತಿಂಗಳಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ತಾಲ್ಲೂಕಿಗೆ ಕರೆಸಿ ಅಂಗವಿಕಲರ, ಮಹಿಳೆಯರ ಸಮಾವೇಶ ಹಾಗೂ ಉದ್ಯೋಗ ಮೇಳವನ್ನು ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ ಮಾತನಾಡಿ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಮೂರು ಅಥವಾ ನಾಲ್ಕು ಸಚಿವ ಸ್ಥಾನಗಳು ಖಂಡಿತ ದೊರಕುತ್ತವೆ, ಅದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ, ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಬೇಕು ಎಂದರಲ್ಲದೆ ಶಾಸಕ ಸಿ.ಬಿ.ಸುರೇಶ್ಬಾಬುರವರಿಗೆ  ಸಚಿವ ಸ್ಥಾನ ದೊರಕುವಂತೆ ಆಗಲಿ ಎಂದರು. ನಾನು ಜಿ.ಪಂ.ಅಧ್ಯಕ್ಷೆಯಾಗಲು ಕಾರಣ ಶಾಸಕ ಸಿ.ಬಿ.ಸುರೇಶ್ಬಾಬು, ಅವರು ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಮಾತನಾಡಿ ಹಿಂದುಳಿದವರಿಗೆ ಅಧಿಕಾರ ನೀಡಿದರೆ ದೇಶ ಅಭಿವೃದ್ದಿಯಾಗುತ್ತದೆ ಎಂಬ ಕಾರಣದಿಂದ ಈ ಹುದ್ದೆ ದೊರಕಿಸಿದ್ದಾರೆ ಎಂದರು. 
ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ ಅಲ್ಪಸಂಖ್ಯಾತರ ಬಗ್ಗೆ ಅಭಿಮಾನ ಹೊಂದಿರುವ ಶಾಸಕರು ನನಗೆ ಪುರಸಭಾಧ್ಯಕ್ಷ ಸ್ಥಾನ ನೀಡಿದವರು, ಅವರು ಈ ಬಾರಿ ಶಾಸಕರಾಗಿ ಸಚಿವರಾಗಲು ಎಲ್ಲಾ ಕಾರ್ಯಕರ್ತರು ಚುನಾವಣೆಯಲ್ಲಿ ಸಂಘಟಿತರಾಗಿ ಪಕ್ಷ ಕಟ್ಟಬೇಕು ಎಂದರು.
ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಮಾತನಾಡಿ ಕಳೆದ ಬಾರಿ ಗೆಲುವು ಸಾಧಿಸಿದ ಮತಗಳಿಗಿಂತ ಈ ಬಾರಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಲು ಎಲ್ಲಾ ಕಾರ್ಯಕರ್ತರು ಸಂಘಟಿತರಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ರಘುನಾಥ್, 28ಗ್ರಾಮ ಪಂಚಾಯಿತಿಗಳಲ್ಲಿ 17ಗ್ರಾಮಪಂಚಾಯಿತಿಗಳಲ್ಲಿ  ಜೆ.ಡಿ.ಎಸ್. ಪಕ್ಷದ ಮೇಲುಗೈ ಸಾಧಿಸಿದೆ ಅಧ್ಯಕ್ಷರು ಉಪಾಧ್ಯಕ್ಷರು ತಮ್ಮ ಸ್ವಾರ್ಥಬಿಟ್ಟು ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಸ್ಪಂದಿಸಿ ಎಂದು ಹೇಳಿದರು. 
ಸಭೆಯಲ್ಲಿ ಜಿ.ಪಂ. ಸದಸ್ಯರಾದ ಮಂಜುಳಗವಿರಂಗಯ್ಯ, ತಾ.ಪಂ. ಸದಸ್ಯರಾದ ಹೇಮಾವತಿ, ಚೇತನಾಗಂಗಾಧರ್, ಉಮಾದೇವಿ, ಶಿವರಾಜು, ಜೆ.ಡಿ.ಎಸ್.ಪ್ರಧಾನ ಕಾರ್ಯದಶರ್ಿ ಕೆ.ಟಿ.ಗೋವಿಂದಪ್ಪ, ಸಿ.ಪಿ.ಚಂದ್ರಶೇಖರಪ್ಪಶೆಟ್ಟಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಪುರಸಭಾ ಸದಸ್ಯರಾದ ಎಂ.ಎನ್.ಸುರೇಶ್, ಜೆ.ಡಿ.ಎಸ್.ವಕ್ತಾರ ಸಿ.ಎಸ್.ನಟರಾಜು, ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ರಂಗಸ್ವಾಮಿ, ರುದ್ರೇಶ್. ರೇವಣ್ಣ ಒಡೆಯರ್,  ಗ್ರಾ.ಪಂ. ಮಾಜಿ ಅಧ್ಯಕ್ಷೆ ಕುಶಲ ಮತ್ತಿತರರು ಭಾಗವಹಿಸಿದ್ದರು.
ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರೆ,  ಸಿ.ಎಸ್.ನಟರಾಜ್ ನಿರೂಪಿಸಿ , ಸಾಲ್ಕಟ್ಟೆ ಶ್ರೀನಿವಾಸ ವಂದಿಸಿದರು. 

aPÀÌ£ÁAiÀÄPÀ£ÀºÀ½îAiÀÄ «PÀ® ZÉÃvÀ£ÀgÀÄ ¨É¼ÀUÀÄA§zÀ ¨sÁgÀwÃAiÀÄ gÉqïPÁæ¸ï ¸ÀA¸ÉÜAiÀÄ QªÀÅqÀ ªÀÄvÀÄÛ ªÀÄÆPÀgÀ ±Á¯ÉAiÀÄ°è £ÀqÉAiÀÄĪÀ ¸ÁzsÀ£À ¸À®PÀgÀuÉ ¤ÃqÀĪÀ ¸ÀA§AzsÀ ¥ÀƪÀð¨sÁ« GavÀ vÀ¥Á¸ÀuÁ ²©gÀPÉÌ vÉgÀ¼À®Ä ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð ©Ã¼ÉÆÌlÖgÀÄ. F ¸ÀAzÀ¨sÀðzÀ°è vÁ.«PÀ®ZÉÃvÀ£ÀgÀ ¨É£ÀPÀ£ÀPÀmÉÖ gÀªÉÄñï G¥À¹ÜvÀjzÀÝgÀÄ.

aPÀÌ£ÁAiÀÄPÀ£ÀºÀ½îAiÀÄ ²æà PÀȵÀÚ UɼÉAiÀÄgÀ §¼ÀUÀzÀ ªÀw¬ÄAzÀ K¥Àðr¸À¯ÁVzÀÝ ºÉƸÀ ªÀµÀðzÀ DZÀgÀuÁ ¸ÀªÀiÁgÀA¨sÀzÀ CAUÀªÁV ªÀÄ£ÀgÀAd£Á PÁAiÀÄðPÀæªÀÄ K¥Àðr¸À¯ÁVvÀÄÛ. F ¸ÀAzÀ¨sÀðzÀ°è ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð, dAiÀÄgÁªÀÄAiÀÄå, ¹.Dgï.¦. zÀÄUÀðAiÀÄå, QgÀuï G¥À¹ÜvÀjzÀÝgÀÄ.

aPÀÌ£ÁAiÀÄPÀ£ÀºÀ½î gÉÆÃlj DAUÀè ¥ËæqÀ±Á¯ÉAiÀÄ «zÁåyðUÀ¼ÀÄ vÀĪÀÄPÀÆj£À°è £ÀqÉzÀ f¯Áè ªÀÄlÖzÀ ¥Àæw¨sÁ PÁgÀAfAiÀÄ°è ¨ÁUÀªÀ»¹ ¥ÀæxÀªÀÄ ¸ÁÜ£À ¥ÀqÉzÀÄ gÁdå ªÀÄlÖPÉÌ DAiÀiÁÌAiÀiÁVzÁÝgÉ. ±Á¯ÉAiÀÄ CzsÀåPÀëgÁzÀ qÁ.¹.JªÀiï.¸ÀÄgÉñï, PÁAiÀÄðzÀ²ð JªÀiï.J¯ï.ªÀÄ°èPÁdÄð£ÀAiÀÄå, ªÀÄgÀļÁgÁzsÀå, ±ÀAPÀgÀªÀÄÆwð, C±Àævï¥ÁµÀ, ¸ÀĤvÀ, ¸ËªÀÄå, gÀªÉÄñï, ¹zÉÝÃ±ï ºÁUÀÆ ±Á¯ÉAiÀÄ ²PÀëPÀgÀÄ, DqÀ½vÀ ªÀÄAqÀ½ «zÁåyðUÀ¼À£ÀÄß C©ü£ÀA¢¹zÁÝgÉ.

ಶೀರ್ಷಿಕೆ ಸೇರಿಸಿ
aPÀÌ£ÁAiÀÄPÀ£ÀºÀ½î vÁ®ÆèQ£À zÀ¸ÀÆr UÁæªÀÄzÀ ªÀĮ̥ÀÄgÀzÀ DAd£ÉÃAiÀĸÁé«Ä eÁvÁæ ¥ÀæAiÀÄÄPÀÛ ¤Ãj£À ¸ÀªÀĸÉå ¤ÃV¸À®Ä zÉêÀ¸ÁÜ£ÀPÁÌV PÁAUÉæ¸ï£À AiÀÄĪÀ ªÀÄÄRAqÀ ¸Àwñï¸Á¸À®Ä C°èUÉ ¨ÉÆÃgïªÉ¯ï PÉÆj¹zÁÝgÉ. ¨ÁèPï PÁAUÉæ¸ï CzsÀåPÀë  ¹.§¸ÀªÀgÁdÄ G¥À¹ÜvÀjzÀÝgÀÄ.