Friday, June 3, 2011

ಸದಸ್ಯರ ಗಮನಕ್ಕೆ ತಾರದೆ ಸಭೆ : ಮುಂದೂಡಲು ಪಟ್ಟು
ಚಿಕ್ಕನಾಯಕನಹಳ್ಳಿ,ಜೂ.3: ಗ್ರಾಮ ಪಂಚಾಯಿತಿ ಪಿಡಿಓಗಳು ಮತ್ತು ಕಾರ್ಯದಶರ್ಿಗಳು ಸದಸ್ಯರ ಗಮನಕ್ಕೆ ತಾರದೆ ಗ್ರಾಮ ಸಭೆಗಳನ್ನು ನಡೆಸುತ್ತಿದ್ದಾರೆ, ಇದರ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಪಿ.ಡಿ.ಓ ಹಾಗೂ ಕಾರ್ಯದಶರ್ಿಗಳನ್ನು ಈ ಸಭೆಗೆ ಕರೆಸುವವರೆಗೆ ಸಭೆಯನ್ನು ಮುಂದೂಡಿ ಎಂದು ತಾ.ಪಂ. ಸದಸ್ಯ ಶಶಿಧರ್ ಪಟ್ಟು ಹಿಡಿದರು.ವಿರೋಧ ಪಕ್ಷದ ಸದಸ್ಯರ ಹಠ ಅಧಿಕಗೊಂಡ ಹಂತದಲ್ಲಿ ಅಧ್ಯಕ್ಷ ಜಿ.ಆರ್.ಸೀತರಾಮಯ್ಯ, ಸಭೆಯನ್ನು ನಡೆಸಿಯೇ ತೀರುತ್ತೇಗೆ, ಬೇಕಾದರೆ ಸಭೆಯಿಂದ ನೀವು ಹೊರಹೋಗಬಹುದು ಎಂದರು, ಇದರಿಂದ ಕುಪಿತರಾದ ತಾ.ಪಂ.ಸದಸ್ಯ ನಿರಂಜನಮೂತರ್ಿ ಹಾಗೂ ಶಶಿಧರ ತೀವ್ರವಾಗಿ ಪ್ರತಿಭಟಿಸಿ, ನಾವು ಹೊರಗೆ ಹೋಗಲು ಬಂದಿಲ್ಲ ನಮ್ಮನ್ನು ಜನ ಅಭಿವೃದ್ದಿ ಕಾರ್ಯ ಮಾಡಲು ಚುನಾಯಿಸಿ ಕಳುಹಿಸಿದ್ದಾರೆ, ಅಧ್ಯಕ್ಷರಿಗೆ ಸಭೆಯಿಂದ ಹೊರಗೆ ಹೋಗಿ ಎನ್ನುವ ಅಧಿಕಾರವಿಲ್ಲ ಎಂದು ಪ್ರತಿಭಟನೆ ಮಾಡಿದರು. ಈ ಮಾತನ್ನು ವಾಪಸ್ ತೆಗೆದುಕೊಳ್ಳಿರಿ ಎಂದು ಒತ್ತಾಯಿಸಿದರು. ನಂತರ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆದು ನಂತರ ಕಾರ್ಯನಿರ್ವಹಣಾಧಿಕಾರಿಗಳು, ಪಿಡಿಓ ಮತ್ತು ಕಾರ್ಯದಶರ್ಿಗಳನ್ನು ಸಭೆಗೆ ಮಧ್ಯಾಹ್ನದ ಸಭೆಗೆ ಕರೆಸುವುದಾಗಿ ಆಶ್ವಾಸನೆ ನೀಡಿದ ನಂತರ ಸಭೆ ಮುಂದುವರಿಯಿತು.ನಂತರ ಇಲಾಖಾವಾರು ಕ್ರಿಯಾ ಯೋಜನಾ ವರದಿಯನ್ನು ತಾಲ್ಲೂಕು ಅಧಿಕಾರಿಗಳು ಸಭೆ ಮಂಡಿಸಿದರು.ಪಿಡಿಓಗಳು ಹಾಗೂ ಕಾರ್ಯದಶರ್ಿಗಳು ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಗೌರವಿಸುವುದಿಲ,್ಲ ಗ್ರಾಮ ಸಭೆಗಳಿಗೆ ಆಹ್ವಾನಿಸುವುದಿಲ,್ಲ ಅಭಿವೃದ್ದಿ ಕಾರ್ಯಗಳ ವಿವರವನ್ನು ಗಮನಕ್ಕೆ ತರದೇ ತಿರಸ್ಕಾರ ಮಾಡುತ್ತಾರೆ, ಕಳೆದ 5ತಿಂಗಳಿನಿಂದ ಪಿಡಿಓಗಳ ಸಭೆಯನ್ನೆ ಕರೆದಿಲ್ಲ, ಮೊದಲು ಸಭೆ ಕರೆಯುವಂತೆ ಒತ್ತಾಯಿಸಿದರು. ಯಾವ ಸಮಯದಲ್ಲೇ ಕಾರ್ಯನಿರ್ವಹಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪಕರ್ಿಸಲು ಪ್ರಯತ್ನಿಸಿದರೂ, ನಾನು ಮೀಟಿಂಗ್ನಲ್ಲಿ ಇದ್ದೇನೆ ಎಂದು ಉತ್ತರಿಸುತ್ತಾರೆ, ಮೀಟಿಂಗ್ ಮುಗಿದ ನಂತರ ಸೌಜನ್ಯಕ್ಕಾದರೂ ಪೋನ್ ಮಾಡವುದಿಲ್ಲ್ಲ, ಉದ್ಯೋಗ ಖಾತ್ರಿ ಯೋಜನಾ ಕಾಮಗಾರಿಗಳ ಸ್ಥಳ ತನಿಖೆಗೆ ಹೋಗುವಾಗ ತಾ.ಪಂ.ಸದಸ್ಯರ ಗಮನಕ್ಕೆ ತರದೆ ನಿರ್ಲಕ್ಷ್ಯಸುತ್ತಾರೆ ಎಂದು ಅಪಾದಿಸಿದರು. ದೊಡ್ಡೆಣ್ಣೆಗೆರೆ ಗ್ರಾ.ಪಂ. ಪಿಡಿಓ ರಜಾ ಹಾಕದೇ ಉದ್ಯೋಗ ಖಾತ್ರಿ ಯೋಜನೆಯ ಹಣ ದುರುಪಯೋಗ ಮಾಡಿಕೊಂಡು ಯಾವುದೇ ಮಾಹಿತಿ ನೀಡದೆ ಗ್ರಾ.ಪಂ. ಕಛೇರಿಯಲ್ಲಿದ್ದ ನಡಾವಳಿ ಪುಸ್ತಕ, ಚೆಕ್ ಪುಸ್ತಕ ಸೇರಿದಂತೆ ಇತರೆ ದಾಖಲಾತಿಗಳನ್ನು ತೆಗೆದುಕೊಂಡು ಕಾಣೆಯಾಗಿದ್ದಾರೆ, ಈ ಬಗ್ಗೆ ಏನು ಕ್ರಮಕೈಗೊಂಡಿದ್ದೀರೆಂದು ಸದಸ್ಯೆ ಹೇಮಾವತಿ ಇ.ಓ.ರವರನ್ನು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಉತ್ತರಿಸಿದ ತಾ.ಪಂ.ಕಾರ್ಯನಿರ್ವಹಾಣಾಧಿಕಾರಿ ದಯಾನಂದ್, ಗ್ರಾಮ ಪಂಚಾಯಿತಿಯ ಕಾರ್ಯಗಳಿಗೆ ಅಡ್ಡಿಯಾಗದಂತೆ ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚನಾಮ ಮಾಡಿ ಕಛೇರಿಯ ಬೀಗ ತೆರೆಸಿ ಬೇರೆ ಕಾರ್ಯದಶರ್ಿಯನ್ನು ನಿಯೋಜನೆಗೊಳಿಸಲಾಯಿತು ಎಂದರು.ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಕರ್ಾರದ ಕ್ರಿಯಾ ಯೋಜನೆಯನ್ನು ರೈತರಿಗೆ ಅಗತ್ಯವಾದ ಇಂಗುಗುಂಡಿ, ಉದಿಬದ, ಜಲಸಂಗ್ರಹಣೆ ಕಾಮಗಾರಿಗಳನ್ನು ಕೈಗೊಳ್ಳ್ಲದೇ ಕಾರ್ಯದಶರ್ಿಗಳು ಹಾಗೂ ಪಿ.ಡಿ.ಓಗಳು ಮನಬಂದಂತೆ ಕಾಮಗಾರಿಗಳನ್ನು ಮಾಡಲು ಹೊರಟಿರುವುದು ಅಕ್ರಮ ಹಾಗೂ ನಿಯಮ ಬಾಹಿರ ಎಂದು ಸದಸ್ಯ ನಿರಂಜನಮೂತರ್ಿ ಹಾಗೂ ಶಶಿಧರ ಆಕ್ಷೇಪಿಸಿದರು.ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ಹಿಂದೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಕ್ರಿಯಾ ಯೋಜನೆ ತಯಾರಿಸಿದ್ದೇವೆ ಎಂದು ಕಾರ್ಯದಶರ್ಿ ಪಿಡಿಓಗಳು ತಿಳಿಸಿದ್ದಾರೆ ಎಂದಾಗ, ಸದಸ್ಯ ನಿರಂಜನಮೂತರ್ಿ ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ ಆದ್ದರಿಂದ ಸ್ಪಿಲ್ಓವರ್ ಕಾಮಗಾರಿಗಳನ್ನು ತೆಗೆದುಕೊಳ್ಳಬಾರದು ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಬೀಬಿಫಾತಿಮಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಚೇತನ ಗಂಗಾಧರ್, ತಾ.ಪಂ.ಸದಸ್ಯರುಗಳಾದ ಎಂ.ಎಂ.ಜಗಧೀಶ್, ಕೆ.ಎಂ.ನವೀನ್, ಲತಾ ವಿಶ್ವನಾಥ್, ಜಯಣ್ಣ, ಸುಮಿತ್ರಮ್ಮ, ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಾಹಿತ್ಯ ಸಮ್ಮೇಳನದಲ್ಲಿ ಹಲವು ಗೋಷ್ಠಿ ಮತ್ತು ಉಪನ್ಯಾಸಗಳುಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಉಪನ್ಯಾಸ-ಗೋಷ್ಠಿಯನ್ನು ಜೂನ್ 10ರಂದು ಮಧ್ಯಾಹ್ನ 1ನೇ ಗೋಷ್ಥಿ 12.45ಕ್ಕೆ ಮತ್ತು 2ನೇ ಗೋಷ್ಠಿ 2.45ಕ್ಕೆ , 3ನೇ ಗೋಷ್ಠಿ 5ಕ್ಕೆ ಏರ್ಪಡಿಸಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.1ನೇ ಗೋಷ್ಠಿಯು ತಾಲ್ಲೂಕಿನ ಮರೆಯಲಾರದ ಮಹಾನುಭಾವರು ವಿಷಯದಡಿ ಆಚಾರ್ಯ ತೀ.ನಂ.ಶ್ರೀರವರ ಬಗ್ಗೆ ತಾಲ್ಲೂಕಿನ ಮೊದಲನೇ ಕಸಾಪ ಸಮ್ಮೇಳನಾಧ್ಯಕ್ಷರಾದ ಡಾ.ತೀ.ನಂ.ಶಂಕರನಾರಾಯಣ, ಹರಿದಾಸ ಸಾಹಿತ್ಯದ ಅಗ್ರಗಣ್ಯ ಚಿ.ನಾ.ಹಳ್ಳಿಯ ವೆಂಕಟದಾಸರು ಬಗ್ಗೆ ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕಲಾ ತಪಸ್ವಿ ಬಿ.ಕೆ.ಈಶ್ವರಪ್ಪನವರ ಬಗ್ಗೆ ತಾ.ಎರಡನೇ ಕಸಾಪ ಸಮ್ಮಳನಾಧ್ಯಕ್ಷರಾದ ಆರ್.ಬಸರವಾಜು ಮಾತನಾಡಲಿದ್ದು ವಿಶೇಷ ಆಹ್ವಾನಿತರಾಗಿ ಕನ್ನಡ ಸಂಘದ ಅದ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ದಲಿತ ಮುಖಂಡ ಚನ್ನಬಸವಯ್ಯ ಭೇವಿನಹಳ್ಳಿ ಉಪಸ್ಥಿತರಿರುವರು, ಗೋಷ್ಠಿಯಲ್ಲಿ ಎ.ಸೋಮಶೇಖರ್ ಸ್ವಾಗತಿಸಲಿದ್ದು ಸಿ.ಎಚ್.ಗಂಗಾಧರ್ ವಂದಿಸಲಿದ್ದು ಸಿ.ಡಿ.ಚಂದ್ರಶೇಖರ್ ನಿರೂಪಿಸಲಿದ್ದಾರೆ.2ನೇ ಗೋಷ್ಠಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ದರ್ಶನ ವಿಷಯದಡಿ ಕೃಷಿ ತಜ್ಞ ಜಿ.ಶಿವನಂಜಪ್ಪ ಬಾಳೆಕಾಯಿ, ಪ್ರಾಚಾರ್ಯ ಕೆ.ಸಿ.ಬಸಪ್ಪ ಪ್ರಚಲಿತ ಪೇಟೆ ವ್ಯವಸ್ಥೆಯಲ್ಲಿ ಚಿ.ನಾ.ಹಳ್ಳಿ ತಾಲ್ಲೂಕನ್ನು ಸಜ್ಜುಗೊಳಿಸುವ ಮಾರ್ಗಗಳು, ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣ ತಾಲ್ಲೂಕಿನ ಜೀವವೈವಿಧ್ಯಗಳು, ವರದಕ್ಷಿಣೆ ವಿರೋಧಿ ವೇದಿಕೆಯ ಸಾ.ಚಿ.ರಾಜ್ಕುಮಾರ್ ತಾಲ್ಲೂಕಿನ ಮಹಿಳಾ ಪ್ರತಿನಿಧೀಕರಣದ ಬಗ್ಗೆ ಮಾತನಾಡಲಿದ್ದು ಪ್ರಾಚಾರ್ಯ ಎ.ಎನ್.ವಿಶ್ವೇಶ್ವರಯ್ಯ, ಎಂ.ಬಿ.ಶಿವಕುಮಾರ್, ಜಿ.ಸ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು ಉಪಸ್ಥಿತರಿರುವರು.3ನೇ ಗೋಷ್ಠಿಯು ಕವಿ ಮಿಲನ ಗೋಷ್ಠಿಯ ಬಗ್ಗೆ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿರವರು ಅಧ್ಯಕ್ಷತೆ ವಹಿಸಲಿದ್ದು ಪ್ರಸೂತಿ ತಜ್ಞ ಡಾ.ರಮೇಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಕ.ಸಾಪ ಮಾಜಿ ಅಧ್ಯಕ್ಷ ಟಿ.ಎಲ್.ರಂಗನಾಥಶೆಟ್ಟಿರವರು ಬರೆದಿರುವ ಕಾವ್ಯಶ್ರೀ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ.ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಮು.ಸಂಘದ ಅದ್ಯಕ್ಷ ಕೃಷ್ಣಯ್ಯ, ರಾ.ಸ.ನೌ.ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ತಾ.ಶಿ.ಸಂಘದ ಅಧ್ಯಕ್ಷ ಎಚ್.ಎಂ.ಸುರೇಶ್, ತಾ.ಶಿ.ಶಿಸಂಘದ ಬಿ.ಎಲ್.ಬಸವರಾಜು ಉಪಸ್ಥಿತರಿರುವರು. ನರೇಂದ್ರಬಾಬು ಸ್ವಾಗತಿಸಲಿದ್ದು ಸಿ.ಎಸ್.ರೇಣುಕಮೂತರ್ಿ ವಂದಿಸಲಿದ್ದು ಶಶಿಭೂಷಣ್, ಕೆ.ಎನ್.ರಂಗನಾಥ್ ನಿರೂಪಿಸಲಿದ್ದಾರೆ.

ಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಜೂನ್ 10ರ ಶುಕ್ರವಾರ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದೆ.ಅಂದು ಬೆಳಗ್ಗೆ 8.15ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ ನೆರವೇರಿಸಲಿದ್ದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಬಿ.ಪಂಚಾಕ್ಷರಿ, ಎನ್.ಜಿ.ಮಂಜುಳ, ಜಿ.ಲೋಹಿತಾಬಾಯಿ, ನಿಂಗಮ್ಮ, ಜಾನಮ್ಮರಾಮಚಂದ್ರಯ್ಯ ಉಪಸ್ಥಿತರಿರುವರು.ಸಮ್ಮೇಳನಾದ್ಯಕ್ಷರ ಮೆರವಣಿಗೆ ನಂತರ ಬೆಳಗ್ಗೆ 10.45ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಕ.ಸಾ.ಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಕಾರ್ಯಕ್ರಮದ ಪ್ರಸ್ತಾವನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕಾರ್ಯಕ್ರಮದ ಸ್ವಾಗತ ಕೋರಲಿದ್ದಾರೆ. ತಾ.ಕಸಾಪ ಅಧ್ಯಕ್ಷ ಎಂ.ವಿ. ನಾಗರಾಜರಾವ್ ನಿಕಟ ಪೂರ್ವ ಮಾತಗಳನ್ನಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ. ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಭಿನವ ಭಕ್ತಶಿರೋಮಣಿ ಸಿ.ಬಿ. ಮಲ್ಲಪರವರ -ಸಿ.ಡಿ. ಬಿಡುಗಡೆ ಮತ್ತು ಹಿರಿಯ ಸಾಹಿತಿ ಡಾ.ಅಬ್ದುಲ್ಹಮೀದ್ ಪುಸ್ತಕ ಮಳಿಗೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ ರಂಗಾಯಣದ ನಿದರ್ೇಶಕ ಹಾಗೂ ಸಮ್ಮೇಳನಾಧ್ಯಕ್ಷ ಲಿಂಗದೇವರು ಹಳೆಮನೆರವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಕವಿ,ಲೇಖಕ ಡಾಸಾ.ಶಿ.ಮರುಳಯ್ಯ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಿ.ಚಂದ್ರಪ್ಪ ಸನ್ಮಾನಿತರಾಗುವ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನ ರಾವ್, ಸೃಜನಾ ಅಧ್ಯಕ್ಷೆ ಜಯಮ್ಮ, ಅಕ್ಕಮಹಾದೇವಿ ಮಹಿಳಾ ಸಮಾಜ ಅಧ್ಯಕ್ಷೆ ಭಾರತಿ ನಟರಾಜ್, ವಾಸವಿ ಮಹಿಳಾ ಸಮಾಜದ ಅಧ್ಯಕ್ಷೆ ಸರಸ್ವತಮ್ಮ, ಬನಶಂಕರಿ ಮಹಿಳಾ ಸಮಾಜ ಅಧ್ಯಕ್ಷೆ ಪದ್ಮ ವರದರಾಜು, ಕನಕ ಮಹಿಳಾ ಸಮಾಜ ಅಧ್ಯಕ್ಷೆ ಸುಲೋಚನಮ್ಮ, ಯೋಗಿನಾರಾಯಣ ಬಲಿಜ ಮಹಿಳಾ ಸಮಾಜ ಅಧ್ಯಕ್ಷೆ ಜಯಮ್ಮವೇದಮೂತರ್ಿ, ಅಂಗವಿಕಲರ ಸೇವೆಗಾಗಿ ನಾಗರಾಜು, ಸೋಬಾನೆ ಪದಗಳಿಗಾಗಿ ಲಕ್ಕಮ್ಮ, ಸ್ವತಂತ್ರ ಹೋರಾಟಗಾರರಾದ ಜೋಡಿಕಲ್ಲೇನಹಳ್ಳಿ ಶಿವಪ್ಪ ಬಿ.ಪಿ.ಚನ್ನಪ್ಪ, ಕಲಾವಿದರಾದ ಜಿ.ಎಲ್.ಮಹೇಶ್, ಬಿ.ಮರುಳಪ್ಪ, ಶ್ರಮಜೀವಿ ಅನ್ಸರ್ಪಾಷ, ಹರಿಕಥೆ ಕೆ.ಎನ್.ಶಂಕರಲಿಂಗಯ್ಯ, ಗೃಹ ಕೈಗಾರಿಕೆ ಬಿ.ಎಲ್.ಪಂಕಜ ಚಂದ್ರಶೇಖರ್, ಕೋಲಾಟ ರಂಗಪ್ಪರವರಿಗೆ ಸನ್ಮಾನಿಸಲಿದ್ದಾರೆ.ಸಮಾರಂಭದಲ್ಲಿ ಸಾಹಿತಿ ಆರ್.ಬಸವರಾಜುರವರ ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗಕಲಾವಿದರು ಮತ್ತು ಎಂ.ವಿ.ನಾಗರಾಜ್ರವರ 100 ಕಥೆ ನೂರಾರು ನೀತಿ, ಗಾಂಧೀಜಿ 100 ಆದರ್ಶಗಳು ಎಂಬ ಪುಸ್ತಕಗಳು ಬಿಡುಗಡೆಯಾಗಲಿವೆ.ವಿಶೇಷ ಆಹ್ವಾನಿತರಾಗಿ ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಐ ರವಿಪ್ರಸಾದ್, ಮುಖ್ಯಾಧಿಕಾರಿ ಹೊನ್ನಪ್ಪ, ಕೈಗಾರಿಕೋದ್ಯಮಿ ಎನ್.ಎಂ.ಧೃವಕುಮಾರ್, ಜಿ.ಕಾ.ನಿ.ಪ.ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾ.ಕಾ.ನಿ.ಪ.ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಉಪಸ್ಥಿತರಿರುವರು.ಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕಿನ ಕಂದಿಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಇದೇ 6ರಂದು ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.ಪ್ರತಿ ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಲು ಸಕರ್ಾರಿ ಆದೇಶವಿದ್ದು ಅಂದು ಬೆಳಗ್ಗೆ 11ಗಂಟೆಗೆ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ,ಜೂ.03: ಬುಡಕಟ್ಟು ಪ್ರದೇಶದ ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳಿಗೆ ಜಾಗೃತಿ ಶಿಬಿರ ಹಾಗೂ ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೇಳಗಳನ್ನು ಸರ್ವ ಶಿಕ್ಷಣದ ಅಭಿಯಾನ, ತಾ.ವಿಭಾಗದದ ಮಾಧ್ಯಕ್ಷ ಮತ್ತು ದಾಖಲೀಕರಣದ ವತಿಯಿಂದ ಇದೇ ಜೂನ್ 3ರಿಂದ 10ರವರೆಗೆ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.ಜೂನ್ 3ರಂದು ಪಟ್ಟಣದ ಡಿ.ವಿ.ಪಿ ಬಾಲಕರ ಪ್ರೌಡಶಾಲೆಯಲ್ಲಿ ಚಿ.ನಾ.ಹಳ್ಳಿ ನಗರ, ಬರಗೂರು, ತೀರ್ಥಪುರ ಒಳಪಡುವ ಕ್ಲಸ್ಟರ್ಗಳಿಗೆ, 4ರಂದು ಕಂದಿಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಕಂದಿಕೆರೆ ಕ್ಲಸ್ಟರ್ಗೆ, ಜೂನ್ 5ರಂದು ಹುಳಿಯಾರು ಹೋಬಳಿಯ ಯುಗಚಿಹಳ್ಳಿ ಸ.ಹಿ.ಪ್ರಾ.ಶಾಲೆಯಲ್ಲಿ ಹುಳಿಯಾರು, ಗಾಣದಾಳು, ಹೊಯ್ಸಳಕಟ್ಟೆ ಕ್ಲಸ್ಟರ್ಗೆ, ಹಂದನಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಹಂದನಕೆರೆ, ಮತಿಘಟ್ಟ, ಯಳನಡು ಕ್ಲಸ್ಟರ್ಗಳಿಗೆ, ಶೆಟ್ಟಿಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಜೆ.ಸಿ.ಪುರ ಕ್ಲಸ್ಟ್ರ್ಗೆ ಮೇಳಗಳನ್ನು ನಡೆಸಲು ತೀಮರ್ಾನಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.