Friday, September 30, 2016



ಸಿಡಿಪಿಓ ಕಛೇರಿಯಿಂದ ಮಕ್ಕಳಿಗೆ ಆಧಾರ್ ನೊಂದಣಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುವ ಆಧಾರ್ ನೊಂದಣಿ ಕಾರ್ಯದಿಂದ ತಾಲ್ಲೂಕಿನ ಮಕ್ಕಳ ಸಂಖ್ಯೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಈ ಮೂಲಕ ಆರಂಭದಿಂದಲೇ ಮಕ್ಕಳ ದೊರಕುತ್ತದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಪ್ಪಯ್ಯ ಹೇಳಿದರು.
ಪಟ್ಟಣದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಸಂಖ್ಯೆ ನೊಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧಾರ್ ನೊಂದಣಿ ದೇಶದ ಯಾವುದೇ ಮೂಲೆಯಲ್ಲಿದ್ದರು ಇಂತಹ ವ್ಯಕ್ತಿಯೇ ಎಂಬುದು ಪತ್ತೆಯಾಗುವ ಸಾಧನ, ಈ ನೊಂದಣಿಯಿಂದ ಸಕರ್ಾರಿ ಸೌಲಭ್ಯಗಳಿಗೂ ಸಹಾಯವಾಗುತ್ತದೆ ಇದನ್ನು ಪ್ರತಿ ಮಗುವು ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕು ಎಂದರು.
ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ ಮಾತನಾಡಿ, ಸಕರ್ಾರ ನೀಡಿರುವ ಟ್ಯಾಬ್ ಮೂಲಕ ಮಕ್ಕಳ ನೊಂದಣಿ ಮಾಡುವುದರಿಂದ ಸಮಗ್ರ ವರದಿ ಲಭ್ಯವಾಗುತ್ತದೆ, ಈ ನೊಂದಣಿಯಿಂದ ಯಾವುದೇ ಮಾಹಿತಿಯ ಕೊರತೆ ಉಂಟಾಗಲಾರದು ಎಂದರು. 
ಈ ಸಂದರ್ಭದಲ್ಲಿ ಮಕ್ಕಳಿಂದ ಹೆಬ್ಬೆಟ್ಟು ಗುರುತು ಪಡೆಯುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೇಲ್ವಚಾರಕಿ ಅನುಸೂಯಮ್ಮ, ಮಹದೇವಮ್ಮ, ಲಕ್ಷ್ಮಯ್ಯ, ಶಾರದಮ್ಮ, ಪ್ರಮೀಳಾ, ಚೌಗತಿ ಹಾಜರಿದ್ದು ನೊಂದಣಿ ಕಾರ್ಯ ನೆರವೇರಿಸಿದರು.


ಎಪಿಎಂಸಿ ರೈತ ಸಂಜೀವಿನಿ ಯೋಜನೆ ವತಿಯಿಂದ ಮೃತ

ರೈತನ ಕುಟುಂಬಕ್ಕೆ 1ಲಕ್ಷ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ, : ಮೃತ ರೈತ ಕುಟುಂಬಕ್ಕೆ ಸಕರ್ಾರ ನೀಡುವ ಪರಿಹಾರದ ಹಣವನ್ನು ಬದುಕು ಕಟ್ಟಿಕೊಳ್ಳಲು ತೊಡಗಿಸಿಕೊಂಡು ಜೀವನವನ್ನು ಸದೃಡ ಮಾಡಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಸವರಾಜು ಹೇಳಿದರು.
ಕೆಲವು ತಿಂಗಳ ಹಿಂದೆ ಚುಂಗನಹಳ್ಳಿ ಗ್ರಾಮದ ರೈತ ಮಧುಸೂದನ್ ಟ್ಯಾಕ್ಟರ್ನಲ್ಲಿ ತೆಂಗಿನಕಾಯಿ ತುಂಬಿಕೊಂಡು ಬರುವ ವೇಳೆ ಟ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಬಗ್ಗೆ ಸೂಕ್ತ ದಾಖಲಾತಿ ಪಡೆದು ಸಕರ್ಾರಕ್ಕೆ ವರದಿ ಸಲ್ಲಿಸಿದ ಪ್ರಸ್ಥಾವನೆಯಿಂದಾಗಿ ಮೃತ ವ್ಯಕ್ತಿಯ ಪತ್ನಿ ಆಶಾರಾಣಿ ರವರಿಗೆ ರೈತ ಸಂಜೀವಿನಿ ಯೋಜನೆಯಡಿ 1 ಲಕ್ಷ.ರೂ ಮೊತ್ತದ ಚೆಕ್ ನೀಡಲಾಗಿದೆ ಈ ಹಣವನ್ನು ನಿಮ್ಮ ಆಥರ್ಿಕ ಭದ್ರತೆಗೆ ತೊಡಗಿಸಿಕೊಳ್ಳುವಂತೆ ಹೇಳಿದರು. 
ಎ.ಪಿ.ಎಂ.ಸಿ ಕಾರ್ಯದಶರ್ಿ ಶ್ರೀನಿವಾಸ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ರೈತ ಭಾಗಿಯಾಗಿದ್ದಾಗ ಅಪಘಾತ ಅಥವಾ ಸಾವು ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ವಸ್ತು ಸ್ಥಿತಿಯ ದಾಖಲೆ ಸಂಗ್ರಹಿಸಿ ರೈತ ಸಂಜೀವಿನಿ ವಿಮಾ ಯೋಜನೆಯಡಿ ಪರಿಹಾರ ಹಣ ನೀಡಲಾಗುತ್ತದೆ ಇದರಿಂದ ಸಂಕಷ್ಟಕ್ಕೊಳಗಾದವರ ಆಥರ್ಿಕ ಸಮಸ್ಯೆ ದೂರ ಮಾಡುವ ಪ್ರಯತ್ನ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ಶಿವರಾಜು, ಈಶಣ್ಣ ಹಾಜರಿದ್ದರು.

Saturday, September 24, 2016


ಭಾರತದ ಸ್ವಾತಂತ್ರ್ಯ ಚಳುವಳಿಯ ಜೊತೆಗೆ ಶಿಕ್ಷಣಕ್ಕಾಗಿ  ಹೋರಾಟವಾಗಿತ್ತು
ಚಿಕ್ಕನಾಯಕನಹಳ್ಳಿ,ಸೆ.24: ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸ್ವಾತಂತ್ರ್ಯ ಚಳುವಳಿಯ ಜೊತೆಯಲ್ಲಿ ನೋಡಬೇಕು ಆಗಲೇ ಶಿಕ್ಷಣ ಪಡೆಯಲು ನಡೆದ ಹೋರಾಟ, ಚಳುವಳಿ, ಚಚರ್ೆಗಳು ತಿಳಿಯುವುದು ಎಂದು ಕನರ್ಾಟಕ ಜನಶಕ್ತಿಯ ಡಾ.ವಾಸು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ನಗರ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಆಯ್ದ ಶಿಕ್ಷಕರಿಗಾಗಿ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂವಿಧಾನದ ಆಶಯ ವಿಷಯದ ಕುರಿತು ಮಾತನಾಡಿದರು.
ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿದೆ, ಇದನ್ನು ಪಡೆಯಲು ಹಲವರು ಹೋರಾಟ ಮಾಡಿದ್ದಾರೆ, ಸ್ವಾತಂತ್ರ್ಯ ಚಳುವಳಿಗಾಗಿ ನಡೆದ ಹೋರಾಟದಂತೆ ಮಧ್ಯಮ ವರ್ಗದ ಜನತೆ, ಶೋಷಿತ ಸಮುದಾಯ ಶಿಕ್ಷಣಕ್ಕಾಗಿ ಹಾಗೂ ಹಕ್ಕುಗಳಿಗಾಗಿ ಹೋರಾಟ ಮಾಡಿದರು, ಬ್ರಿಟೀಷ್ ಸಕರ್ಾರ ಎಲ್ಲರಿಗೂ ಶಿಕ್ಷಣ ನೀಡಲಿಲ್ಲ ಆಗಿನ ಮಿಷನಿರಿಗಳು ಮಾತ್ರ ಶಿಕ್ಷಣ ನೀಡಿದವು, ಬ್ರಿಟೀಷ್ ಗವರ್ನರ್ ಮೆಕಾಲೆ ಗೋಪಾಲಕೃಷ್ಣ, ಗಾಂಧೀಜಿ ಮತ್ತಿತರರು ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲು ಮುಂದಾಗಿದ್ದರು, ಶಿಕ್ಷಣ, ಆರೋಗ್ಯ, ಜನರ ಹಕ್ಕುಗಳಿಗಾಗಿ ಚಚರ್ೆಗಳನ್ನು ನಡೆಸಿದರು ಎಂದ ಅವರು, ಶಿಕ್ಷಣ ಮೂಲಭೂತ ಹಕ್ಕು ಆಗಬೇಕು ಎಂದು ಸಂವಿಧಾನ ರಚನಾ ಸಭೆಯಲ್ಲಿ ನಿಧರ್ಾರವಾಗಿತ್ತು ಆದರೂ ಈ ಬಗ್ಗೆ ಹಲವರು ವಿರೋಧಿಸಿದರು, ದೇಶದಲ್ಲಿ 2006ರ ವರದಿಯಂತೆ 100ಕ್ಕೆ 20ರಷ್ಟು ಮಕ್ಕಳು ಶಾಲೆಗೆ ದಾಖಲಾಗುತ್ತಿಲ್ಲ, ಎಸ್.ಎಸ್.ಎಲ್.ಸಿ ನಂತರ ಶೇ.45%ರಷ್ಟು ಪಿ.ಯು.ಸಿ ನಂತರ ಶೇ.8% ಪರಿಶಿಷ್ಠ ಜಾತಿ ಹಾಗೂ ಶೇ.7%ರಷ್ಟು ಪರಿಶಿಷ್ಟ ಪಂಗಡದ ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುತ್ತಿಲ್ಲ ಎಂದು ವಿಷಾಧಿಸಿದರು.
ಅಸಮಾನತೆ ಹೋಗಲಾಡಿಸಲು ಸಮಾನ ಶಾಲಾ ನೀತಿ ಜಗತ್ತಿನಲ್ಲಿ ಇದೆ, ಆದರೆ ಅಸಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಸಮಸ್ಯೆ ಹೆಚ್ಚುತ್ತಿದೆ, ಶಿಕ್ಷಕರಿಗೆ ಬೋಧನೆಯ ಜೊತೆಗೆ ಸಕರ್ಾರ ಹೇರುತ್ತಿರುವ ಒತ್ತಡಗಳಿಂದಲೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿಲ್ಲ ಎಂದು ಹೇಳಿದರು. 
ಮಂಡ್ಯದ ಮಹಿಳಾ ಮುನ್ನಡೆಯ ಮಲ್ಲಿಗೆಯವರು  ಮಾತನಾಡಿ, ಮಕ್ಕಳ ಕಲಿಕಾಮಾದ್ಯಮ ಮಾತೃಭಾಷೆಯಲ್ಲಿರಬೇಕು ನಂತರದಲ್ಲಿ ಅವರಿಗೆ ಅನ್ಯಭಾಷೆಗಳ ಪರಿಚಯವನ್ನು ಮಾಡಬೇಕು ಈ ನಿಟ್ಟಿನಲ್ಲಿ ಇಂಗ್ಲೀಷ್ ಭಾಷೆ ನಮಗೆ ಭಾಷೆಯಾಗಿ ಬೇಕಾಗಿದೆ ವಿನಃ ಕಲಿಕಾಮಾದ್ಯಮವಾಗಿ ಅಲ್ಲ ಎಂದರು.
ಇಂದು ನಮ್ಮ ದೇಶದ ಒಟ್ಟು ಮಕ್ಕಳಲ್ಲಿ ಶೇಕಡ27ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮದಲ್ಲಿ ವ್ಯಾಸಾಂಗಮಾಡುತ್ತಿದ್ದಾರೆ ಅದರೆ ಕೆಲವೊಂದು ಪ್ರಯೋಗಗಳ ಮೂಲಕ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದಂತಹ ಮಕ್ಕಳಿಗೆ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ, ಖಿನ್ನತೆಗೆ ಒಳಗಾಗುತ್ತಾರೆ, ಬಹುತೇಕ ಆತ್ಮಹತ್ಯಾ ಪ್ರೌವೃತ್ತಿ ಈ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ ಹಾಗೂ ಸಾಮಾಜಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸುವಂತಹ ಧೈರ್ಯವಾಗಲಿ ಇವರಿಗಿರುವುದಿಲ್ಲ ಹಾಗೂ ಇಂತಹ ಮಕ್ಕಳು ವೃತ್ತಿ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗುವುದು ಕಷ್ಟಕರ ಅದ್ದರಿಂದ ನಾವು ಸುಭದ್ರವಾದ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಮಾತೃಭಾಷೆಯ ಅಗತ್ಯತೆ ಹೆಚ್ಚಾಗಿದ್ದು ಅನ್ಯಭಾಷೆಯನ್ನು ಮಾತೃಭಾಷೆಯಮೂಲಕ ಕಲಿಯುವುದು ಸೂಕ್ತ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಸಂವಿಧಾನದ ಆಶಯವೇ ಶಿಕ್ಷಣವಾಗಿದೆ, ಆಥರ್ಿಕವಾಗಿ, ಸಾಮಾಜಿಕವಾಗಿ ಮುಂದುವರಿಯುವದರ ಜೊತೆಗೆ ಮುಖ್ಯವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕು.
ಕೆ.ಆರ್.ಪೇಟೆಯ ನಾಗೇಶ್.ಎ ಇಲಾಖೆಯ ಒತ್ತಡಗಳ ನಡುವೆ ಶಿಕ್ಷಕ ಎಂಬ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎನ್.ಇಂದಿರಮ್ಮ, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕಸಾಪ ನಗರ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಪದಾಧಿಕಾರಿಗಳಾದ ರಾಮಕೃಷ್ಣಪ್ಪ, ಕಂಟಲಗೆರೆ ಗುರುಪ್ರಸಾದ್, ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.
27ರಂದು ಸಕರ್ಾರಿ ಪಿ.ಯು.ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಚಟುವಟಿಕೆಗಳ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಸೆ.24 : ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇದೇ 27ರ ಮಂಗಳವಾರ ನಡೆಯಲಿದೆ.
ಸಮಾರಂಭ ಅಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ಕೃಷ್ಣಸ್ವಾಮಿ, ಸಾಹಿತಿ ಹಾಗೂ ಲೋಕೋಪಯೋಗಿ ಎಇಇ ಗಂಗಾಧರ ಕೊಡ್ಲಿಯವರ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಮತ್ತಿತರರು ಉಪಸ್ಥಿತರಿರುವರು.


Friday, September 23, 2016


ಪೌರ ಕಾಮರ್ಿಕರ ಮಕ್ಕಳು ಶಿಕ್ಷಣ ಪಡೆಯಿರಿ : ಸಿಡಿಸಿ 
ಚಿಕ್ಕನಾಯಕನಹಳ್ಳಿ : ಪೌರ ಕಾಮರ್ಿಕರು ತಮ್ಮ ಮಕ್ಕಳನ್ನು ಕಾಮರ್ಿಕರನ್ನಾಗಿ ಮಾಡದೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ  ಇಂಜನಿಯರ್, ಡಾಕ್ಟರ್, ಅಧಿಕಾರಿ ಯಾವುದೇ ವೃತ್ತಿಯಾದರೂ  ಸರಿ ಸತ್ಪ್ರಜೆಯನ್ನಾಗಿ  ಮಾಡಿ ಎಂದು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಸಲಹೆ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿರುವ ಸಮುದಾಯ ಭವನದಲ್ಲಿ ಪೌರ ಕಾಮರ್ಿಕರ ಮತ್ತು ಅವರ ಕುಟುಂಬ ಸದಸ್ಯರಿಗೆ ಹೆಪಟೈಟಿಸ್ ಬಿ ಚುಚುಮದ್ದು ನೀಡಿ ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಮರ್ಿಕರ ಮಕ್ಕಳು ಕಾಮರ್ಿಕರಾಗಿಯೇ ಇರಬೇಕು ಎಂಬ ತತ್ವ ತೊಲಗಬೇಕು, ಅವರೂ ವಿದ್ಯಾವಂತರಾಗಿ ಸಮಾಜದ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುವಂತೆ ಆಗಬೇಕು ಆ ನಿಟ್ಟಿನಲ್ಲಿ ಅವರ ಪೋಷಕರು ಶ್ರಮಿಸಬೇಕು, ಪೌರ ಕಾಮರ್ಿಕರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು, ಆರೋಗ್ಯವಿದ್ದರೆ ಎಲ್ಲಿ ಬೇಕಾದರೂ ಸಮರ್ಥವಾಗಿ ದುಡಿಯಬಲ್ಲೇ ಎಂಬ ಆತ್ಮವಿಶ್ವಾಸ ಮೂಡುತ್ತದೆ  ಅದಕ್ಕಾಗಿ ಪುರಸಭೆ ವತಿಯಿಂದ ನೀಡುವ ಗ್ಲೌಸ್ಗಳನ್ನು ಬಳಸಿ ಕರ್ತವ್ಯ ನಿರ್ವಹಿಸಿ ಎಂದ ಅವರು,  ಆಮ್ಟೆ ಎಂಬ ವ್ಯಕ್ತಿಯ ದಿನವನ್ನೇ ಪೌರಕಾಮರ್ಿಕರ ದಿನಾಚಾರಣೆಯನ್ನಾಗಿ ಆಚರಿಸುತ್ತಾರೆ, ಆಮ್ಟೆ 1952ರಲ್ಲಿ ಕಲ್ಕತ್ತಾ ಪುರಸಭೆಯ ಉಪಾಧ್ಯಕ್ಷರಾಗಿದ್ದವರು, ಪೌರ ಕಾಮರ್ಿಕರು ಕೆಲಸ ಮಾಡುತ್ತಿದ್ದ ಕೊಳಚೆ ಪ್ರದೇಶಗಳು ಹಾಗೂ ಚರಂಡಿಗಳ ಸ್ಥಿತಿಗತಿ ಕಂಡು ಅವರಲ್ಲಿ ಮರುಕ ಉಂಟಾಗಿ ಪೌರ ಕಾಮರ್ಿಕರಿಗೆ ಇದರಿಂದ ಆಗುತ್ತಿದ್ದ ತೊಂದರೆಯನ್ನು ಕಣ್ಣಾರೆ ಕಾಣಲು ಖದ್ದು ಕಾಲೋನಿಗೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ಕೊಳಚೆ ಪ್ರದೇಶದಲ್ಲಿ ಬದುಕುತ್ತಿರುವುದರಿಂದ ಕುಷ್ಟ ರೋಗ ಹಾಗೂ ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ಕಂಡು ಅವರ ಮನಪರಿವರ್ತನೆಯಾಗಿ ತಮ್ಮ ಸ್ವಂತ ಒಂದು ನೂರ ಐವತ್ತು  ಎಕರೆ ಜಮೀನಲ್ಲಿ ಐವತ್ತು ಎಕರೆ ಜಮೀನನ್ನು  ಕುಷ್ಟ ರೋಗ ನಿವಾರಣೆ ಮಾಡಲು ಆಸ್ಪತ್ರೆಗೆ ದಾನ ನೀಡಿದ ದಿನವನ್ನೇ ಪೌರಕಾಮರ್ಿಕರ ದಿನಾಚಾರಣೆಯನ್ನಾಗಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವೈದ್ಯ ಪ್ರದೀಪ್ ಮಾತನಾಡಿ, ಪಟ್ಟಣವನ್ನು ಸ್ವಚ್ಛವಾಗಿಡುವ ಕಾಮರ್ಿಕರು ತಾವೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು, ಪುರಸಭೆ ವತಿಯಿಂದ ನೀಡುವ ಸಲಕರಣೆಗಳನ್ನು ಉಪಯೋಗಿಸಿ ಸ್ವಚ್ಛತೆ ಕಡೆ ಪಾಲ್ಗೊಳ್ಳಬೇಕು, ಮಲಿನತೆಯನ್ನು ಸ್ವಚ್ಛ ಮಾಡುವಾಗ ವೈರಸ್ನ ಸೋಂಕು ತಗುಲಬಹುದು ಅದಕ್ಕಾಗಿಯೇ ಕಾಮರ್ಿಕರು ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಅಶೋಕ್, ಆಶ್ರಯ ಸಮಿತಿ ಸದಸ್ಯ ಶಿವಕುಮಾರ್, ಆರೋಗ್ಯ ಇಲಾಖೆಯ ಮಧು, ಪರಿಸರ ಇಂಜನಿಯರ್ ಚಂದ್ರಶೇಖರ್, ಆರೋಗ್ಯ ನಿರೀಕ್ಷಕ ಜಯರಾಂ ಉಪಸ್ಥಿತರಿದ್ದರು.

ಕೋ ಆಪರೇಟಿವ್ ಬ್ಯಾಂಕ್ ವಾಷರ್ಿಕ ಸಭೆ

ಚಿಕ್ಕನಾಯಕನಹಳ್ಳಿ,ಸೆ.23 : ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ 2015-16ನೇ ಸಾಲಿನಲ್ಲಿ 33 ಕೋಟಿ ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸಿ 7 ಲಕ್ಷ 30 ಸಾವಿರ ರೂಪಾಯಿಗಳು ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಎಲ್ ದೊಡ್ಡಯ್ಯ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟೀವ್ ಬ್ಯಾಂಕ್ ಸಭಾಂಗಣದಲ್ಲಿ  ನಡೆದ 2015-16ನೇ ಸಾಲಿನ ವಾಷರ್ಿಕ ಸಭೆ ಹಾಗೂ ಷೇರುದಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ಮಾತನಾಡಿ, ಬ್ಯಾಂಕಿನಲ್ಲಿ ಒಟ್ಟು 5937 ಸದಸ್ಯರನ್ನು ಹೊಂದಿದ್ದು ಷೇರು ಬಂಡವಾಳ 87 ಲಕ್ಷ 85 ಸಾವಿರ ರೂಗಳಿದ್ದು ಬ್ಯಾಂಕಿನ ಆಪತ್ ನಿಧಿ ಹಾಗೂ ಇತರೆ ನಿಧಿಗಳು ಸೇರಿ 1 ಕೊಟಿ  47 ಲಕ್ಷಕ್ಕೆ ಹೆಚ್ಚು ಠೇವಣಿಗಳಿವೆ,  ಈ ಸ್ಟಾಂಪಿಂಗ್ ಹಾಗೂ ಡಿ.ಡಿಗಳಿಂದ 3 ಲಕ್ಷದ 14 ಸಾವಿರ ರೂ ಕಮಿಷನ್ ಬಂದಿದೆ ಎಂದರು. 
ನನ್ನ ಅಧ್ಯಕ್ಷಾವಧಿಯ 3 ತಿಂಗಳಲ್ಲಿ  75 ಲಕ್ಷ ಸಾಲ ವಸೂಲು ಮಾಡಿರುವುದಾಗಿ  ಹೇಳಿದ ಅವರು,  2015-16ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು 651 ಜನ ಷೇರುದಾರರು 3 ಕೊಟಿ 57 ಲಕ್ಷ 94 ಸಾವಿರ ರೂ ಸುಸ್ತಿಯಾಗಿದ್ದಾರೆ. ಪ್ರತಿವರ್ಷ ಬ್ಯಾಂಕಿನ ಷೇರುದಾರರಿಗೆ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತುಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಬ್ಯಾಂಕಿನ ಷೇರುದಾರರು ನಿಧನ ಹೊಂದಿದರೆ,  1 ಸಾವಿರ ರೂ ಸಂಸ್ಕಾರ ನಿಧಿಯನ್ನು. 5000ರೂ ಹೆಚ್ಚಿಸಲು ಅನುಮತಿ ನಿಡುವಂತೆ ಸಭೆಯಲ್ಲಿ ಕೋರಿದ್ದಾರೆ.
ವಾಷರ್ಿಕ ಸಭೆ ಉದ್ಘಾಟಿಸಿದ ಸಾಹಿತಿ ಎಮ್.ವಿ.ನಾಗರಾಜರಾವ್ ಮಾತನಾಡಿ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕಿನ ಸಪ್ತತಿ ಸಭಾಂಗಣವನ್ನು ನವೀಕರಿಸಿ ಷೇರುದಾರರ ಮಕ್ಕಳ ಮದುವೆ ಸಮಾರಂಭಗಳಿಗೆ ನೀಡಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಯಾವುದಾದರೂ ತೊಡಕುಗಳಿದ್ದರೆ ಗಣ್ಯರ ಸಮಿತಿಯನ್ನು ರಚಿಸಿ ಬಾಡಿಗೆ ನೀಡುವಂತೆ ಸಲಹೆ ನೀಡಿದರು.
 ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಲವಕುಮಾರ್, ಸದಸ್ಯರಾದ ಸಿ.ಪಿ.ಚಂದ್ರಶೇಖರ್ಶೆಟ್ಟಿ. ಮಹಮದ್ ಖಲಂದರ್, ರಂಗಸ್ವಾಮಯ್ಯ, ಪಾಪಯ್ಯ, ಹೆಚ್.ಬಿ.ಪ್ರಕಾಶ್, ಸಿ.ಹೆಚ್ ದೊರೆಮುದ್ದಯ್ಯ, ಸಿ.ಎಸ್.ರಮೇಶ್, ಪುಷ್ಪ, ಟಿ.ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಣ್ಣ ಕಥೆಗಳ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಸೆ.23:  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾಸ್ತಿಯವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಸಣ್ಣ ಕಥೆಗಳ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ ಎಂದು 
ಸ್ಪಧರ್ೆಯಲ್ಲಿ ಭಾಗವಹಿಸುವರು ತಾಲ್ಲೂಕಿನ ವ್ಯಾಪ್ತಿಯಲ್ಲಿರಬೇಕು. ಸ್ಪಧರ್ೆಯಲ್ಲಿ ಎರಡು ವಿಭಾಗಗಳಲಿದ್ದು,  ವಿದ್ಯಾಥರ್ಿಗಳ ವಿಭಾಗ ಹಾಗೂ ಸಾರ್ವಜನಿಕರ ವಿಭಾಗ ಎಂಬುದಾಗಿದೆ.  ವಿದ್ಯಾಥರ್ಿ ವಿಭಾಗದಲ್ಲಿ ಯಾವುದಾದರೂ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವರಾಗಿದ್ದರೂ ಸಹ ಸ್ಪಧರ್ೆಯಲ್ಲಿ ಪಾಲ್ಗೋಳ್ಳಬಹುದು.
 ಸಾರ್ವಜನಿಕ ವಿಭಾಗದಲ್ಲಿ 18 ರಿಂದ 50 ವಯೋಮಾನದವರು ಭಾಗವಹಿಸಬಹುದು. ಕಥೆಯನ್ನು ಕಳುಹಿಸುವವರು ಎ4 ಅಳತೆಯ ಹಾಳೆಯಲ್ಲಿ ಕೈಬರಹದಲ್ಲಿ 4 ಪುಟಗಳು ಮೀರದಂತೆ ಬರೆದಿರಬೇಕು. ಕಥೆ ಯಾವುದೇ ಭಾಷೆಯ ಅನುವಾಗಿರದೆ ಸ್ವಂತ ರಚಿಸಿರಬೇಕು ಕಸಾಪ ಪಧಾಧಿಕಾರಿಗಳು ಭಾಗವಹಿಸುವಂತಿಲ್ಲ. ಒಬ್ಬರಿಗೆ ಒಂದು ಕಥೆ ಬರೆಯಲು ಅವಕಾಶವಿದೆ ಆಯ್ದ ಕತೆಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಅಕ್ಟೋಬರ್ 30ರೊಳಗೆ ಮಾಸ್ತಿಯವರ ಸಣ್ಣಕಥೆಗಳನ್ನು ತಾಲ್ಲೂಕು ಕಸಾಪ ಅಧ್ಯಕ್ಷೆ ಇಂದಿರಮ್ಮ ದಶಾವತರ ದೇವಾಲಯದ ಬಳಿ ಚಿಕ್ಕನಾಯಕನಹಳ್ಳಿ ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9900538918, 8970430264.ಸಂಪಕರ್ಿಸಿ.
ಬ್ರಹ್ಮಶ್ರೀ ನಾರಾಯಣ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸೆ.26ರಂದು 


ಚಿಕ್ಕನಾಯಕನಹಳ್ಳಿ,ಸೆ.23:  ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕಿನ ವಿವಿಧ ಸಂಘಗಳ ಸಂಯ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಹಾಗೂ ವಿಶ್ವ ಕರ್ಮ ಜತಂತೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು 10.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ದೇವರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಕಛೇರಿಯಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ ಅಧ್ಯಕ್ಷೆ ಕೆ.ಹೊನ್ನಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಭಾವಚಿತ್ರ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಗೃಹ ಸಚಿವ ಡಾ||ಜಿ.ಪರಮೇಶ್ವರ ತಾ.ಪಂ ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಪುರಸಭಾ ಉಪಾಧ್ಯಕ್ಷೆ ಬಿ.ಇಂದಿರಾಪ್ರಕಾಶ್, ಜಿ.ಪಂ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ವೈ.ಸಿ ಸಿದ್ದರಾಮಯ್ಯ,ಎಸ್.ಟಿ ಮಹಾಲಿಂಗಯ್ಯ, ಮಂಜುಳ ಭಾಗವಹಿಸಲಿದ್ದಾರೆ, ವಿಶೇಷ ಆಹ್ವಾನಿತರಾಗಿ ಕನರ್ಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ,ತುಮಕೂರು ಜಿಲ್ಲಾಧ್ಯಕ್ಷ ಅಜಯಕುಮಾರ್, ಹಾಗೂ ತುಮಕೂರು ವಿವಿ ಪ್ರಾಧ್ಯಾಪಕ ಪ್ರೋ.ರಮೇಶ್ ಸಾಲಿಯಾನ್, ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡುವರು. ವಿರ್ಶವ ಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅರೆಮಾದನಹಳ್ಳಿಯ ಶ್ರೀಗುರು ಶಿವಸುಜ್ಞಾನ ಸ್ವಾಮೀಜಿ, ಹಾಗೂ ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ನೀಲಕಂಠಸ್ವಾಮೀಜಿ ಭಾಗವಹಿಸಲಿದ್ದಾರೆ. ತುಮಕೂರು ವಿಶ್ವಕರ್ಮ ಸಮಾಜದ ಹೆಚ್.ಬಿ.ನಾಗರಾಜಚಾರ್, ಬೆಂಗಳೂರು ಬಿ.ಬಿ.ಎಮ್.ಪಿ ಸದಸ್ಯೆ ಹೇಮಲತಾ ಸತೀಶ್, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್ಯಈಡಿಗ ಸಮಾಜದ ಅಧ್ಯಕ್ಷ ಎನ್.ಜಿ.ನಾಗರಾಜು, ವಿಶ್ವಕರ್ಮ ಜನಾಂಗದ ಅಧ್ಯಕ್ಷ ನಾಗರಾಜಾಚಾರ್, ಈಡಿಗ ಸಮಾಜದ ಮುಖಂಡ ಹಾಗೂ ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಸೋಮಶೇಖರ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.



Thursday, September 22, 2016


ಪುರಸಭೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೊಳಪಡಿಸಿ : 
  ಚಿಕ್ಕನಾಯಕನಹಳ್ಳಿ,: ಪುರಸಭೆಯಲ್ಲಿ ಲೆಕ್ಕಪತ್ರ ಹಾಗೂ ಚೆಕ್ ವಿತರಣೆಯಲ್ಲಿ ನಡೆದಿರವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಆಗ್ರಹಿಸಿದರು.
ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಬಿಟ್ಟಿರುವ ಪೈಪ್ಲೈನ್ ಇಳಿಸುವ ಕಾಮಗಾರಿ ಕೂಲಿಗೆ 70ಸಾವಿರ ರೂಪಾಯಿ ನೀಡಿರುವುದರ ಹಿಂದೆ ಅವ್ಯವಹಾರ ನಡೆರುವ ಶಂಕೆ ಇದೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಸದಸ್ಯರು ಇರುವಂತಹ ವಾಡರ್ಿನಲ್ಲಿ ಕೊರೆದಿರುವಂತಹ ಕೊಳವೆ ಬಾವಿಗಳಿಗೆ  ಶಿಘ್ರವಾಗಿ ಮೋಟಾರ್ ಪಂಪ್ಆಳವಡಿಸಿ ವಿದ್ಯುತ್ಸಂಪರ್ಕ ಕೊಡಿಸುತ್ತೀರಾ ಆದರೆ ನಮ್ಮ ವಾಡರ್ಿನಲ್ಲಿ ಕೊಳವೇ ಬಾವಿ ಕೊರೆದು ತಿಂಗಳುಗಳು ಕಳೆದರೂ ಮೋಟಾರ್ ಪಂಪ್ ಆಳವಡಿಸುವುದಿಲ್ಲವೆಂದು ಹಾಗೂ ನಾವು ಸಭೆಯಲ್ಲಿ ಹೇಳಿದಂತಹ ವಿಚಾರಗಳನ್ನು ದಾಖಲಿಸುತ್ತಿಲ್ಲ ಎಂದು ಸಿ.ಪಿ.ಮಹೇಶ್ ಆರೋಪಿಸಿದರು.
ಅಧ್ಯಕ್ಷ ಸಿ.ಟಿ.ದಯಾನಂದ್ ಉತ್ತರಿಸಿ ತುತರ್ು ನೀರಿನ ಸಮಸ್ಯೆ ತಲೆದೂರಿದ್ದರಿಂದ ಪಂಪ್ ಆಳವಡಿಸಿ ನೀರನ್ನು ನೀಡಬೇಕಾಗುತ್ತದೆ ನಮಗೆ ಎಲ್ಲಾ ವಾಡರ್ಿನ ಜನರು ಒಂದೇ ನಾವು ಯಾವುದೇ ಕಾರಣಕ್ಕೂ ಪಕ್ಷಬೇದ ಮಾಡುವುದಿಲ್ಲ ಎಂದು ಉತ್ತರಿಸಿದರು.
2013-14ನೇ ಸಾಲಿನಲ್ಲಿ ಪುರಸಭೆಯಿಂದ ಸಾರ್ವಜನಿಕರ ಮನೆಮನೆಗಳಿಗೆ ಕಸದಬುಟ್ಟಿ ನೀಡಲು ಸಭೆಯಲ್ಲಿ ಅಂಗೀಕರಿಸಲಾಗಿತ್ತು ಆದರೆ ಇದುವರೆಗೂ ಕಸದಬುಟ್ಟಿಗಳನ್ನು ನೀಡದೇ ಇರಲು ಕಾರಣವೇನು ಎಂದು ಸಿ.ಎಸ್.ರಮೇಶ್ ಪರಿಸರ ಇಂಜನಿಯರ್ ಚಂದ್ರಶೇಖರ್ರವರನ್ನು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳಿಂದ ಅನುಮೋದನೆಯಾಗಿದೆ ಟೆಂಡರ್ ಕರೆಯುವುದಾಗಿ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಗೆ ಸಂಬಂಧ ಪಟ್ಟ ಆಸ್ತಿ ಎಲ್ಲೆಲ್ಲಿ ಇದೆ ಇದರ ಬಗ್ಗೆ ಪಟ್ಟಿ ಮಾಡಿ ನೀಡುವಂತೆ ಅನೇಕ ಬಾರಿ ಸಭೆಯಲ್ಲಿ ಚಚರ್ಿಸಿದರೂ ಇದುವರೆಗೂ ಅಧಿಕಾರಿಗಳು ಪಟ್ಟಿ ನೀಡಿಲ್ಲ ಎಂದು ಮುಖ್ಯಾಧಿಕಾರಿ ಮಂಜುಳಾದೇವಿಯನ್ನು ಸದಸ್ಯ ಸಿ.ಎಸ್.ರಮೇಶ್ ಪ್ರಶ್ನಿಸಿದರು. ಪುರಸಭೆಯ ಆಸ್ತಿ ಪಟ್ಟಿ ನೀಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಪುರಸಭೆಯ ಮಳಿಗೆಗಳ ಅವಧಿ ಮುಗಿದಿದ್ದು ಪುಃನ ಟೆಂಡರ್ ಕರೆಯುವಂತೆ ಸದಸ್ಯರು ಆಗ್ರಹಿಸಿ ಬಾಡಿಗೆ ಇರುವ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ನೀಡಿದರೆ ಅಂಗಡಿಗಳನ್ನು ತೆರವುಗೊಳಿಸಲು ಬರುವುದಿಲ್ಲ, ಎಷ್ಟು ಅಂಗಡಿಯಿಂದ ಟ್ರೇಡ್ ಲೈಸೆನ್ಸ್ ನೀಡಿದ್ದೀರಿ ಎಂದು ಮುಖ್ಯಾಧಿಕಾರಿ ಮಂಜುಳದೇವಿ ರವರನ್ನು ಸಿ.ಎಸ್.ರಮೇಶ್ ಪ್ರಶ್ನಿಸಿದರು. ಇದಕ್ಕೆ ಆರೋಗ್ಯ ನಿರೀಕ್ಷಕ ಜಯರಾಂ ಮಾತನಾಡಿ ಯಾರಿಗೂ ಟ್ರೇಡ್ ಲೈಸೆನ್ಸ್ ನೀಡಿಲ್ಲ ಎಂದರು.
ಪಟ್ಟಣದ ಸ್ವಚ್ಛತೆಯನ್ನು ಕಾಪಾಡಲು ಕ್ರಿಮಿನಾಶಕ ಔಷದಿಯ ಖರೀದಿಯಲ್ಲಿ 62555 ರೂ ಪಾವತಿಸಿದ್ದೀರಿ, ಎಲ್ಲಿ ಔಷಧಿಯನ್ನು ಸಿಂಪಡಿಸಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದಾಗ ಆರೋಗ್ಯ ನಿರೀಕ್ಷಕ ಜಯರಾಂ ಸದಸ್ಯರ ಮಾತಿಗೆ ತಬ್ಬಿಬ್ಬಾಗಿ ಹೋದರು, ಎಲ್ಲಾ ಚರಂಡಿಗಳಿಗೆ ಔಷಧಿ, ಫಿನಾಯಿಲ್ ಮತ್ತು ಡಿ.ಡಿ.ಟಿ ಫೌಡರ್ ಹಾಕಿದ್ದೇನೆ ಎಂದರು.
ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಲಾರ್ವ ಸವರ್ೆ ಕಾರ್ಯ ನಡೆಸಿದುದರಿಂದ ಆಶಾ ಕಾರ್ಯಕತರ್ೆಯರಿಗೆ  6ಸಾವಿರ ಊಟದ ಬಿಲ್ಲು ಪಾವತಿಸಿದ್ದೀರ ಎಂದ ಸದಸ್ಯರು, ಪಟ್ಟಣದಲ್ಲಿ ಎಷ್ಟು ಕಡೆ ಡೆಂಗ್ಯೂ, ಚಿಕನ್ಗುನ್ಯಾ ಬಂದಿದೆ ಎಂಬ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಂಜುಳಾದೇವಿ ಯಾವುದೇ ಪ್ರಕರಣಗಳಿಲ್ಲ ಎಂದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, 18ನೇ ವಾಡರ್್ನಲ್ಲಿ ಡೆಂಗ್ಯೂ ಜ್ವರದಿಂದ ಒಬ್ಬರು ನಿಧನರಾಗಿದ್ದಾರೆ ಎಂದ ಸದಸ್ಯರು ಸಭೆಗೆ ಬರುವಾಗ ಸರಿಯಾದ ಮಾಹಿತಿ ತೆಗೆದುಕೊಂಡು ಬನ್ನಿ ಎಂದರು.
ಪುರಸಭೆಯ ಆಸ್ತಿ ಸಂ:98/92/1982ರಲ್ಲಿರುವ 173*116ಆಳತೆಯ ಜಾಗವನ್ನು ಅಂಜುಮನ್ ಮಫೀದುಲ್ಲಾ ಇಸ್ಲಾಂ ಜಮೀಯಾ ಮಸೀದಿಗೆ ಕಿಮ್ಮತ್ತಿನ ಬೆಲೆಗೆ ಮಂಜೂರಾತಿ ನೀಡುವ ಬಗ್ಗೆ ಶಾಸಕರ ಹಾಜರಿದ್ದ ಸಭೆಯಲ್ಲಿ ತೀಮರ್ಾನಿಸಲಾಗಿತ್ತು ಎಂಬುದು ಒಂದು ಕಡೆಯ ವಾದವಾದರೆ, ಮತ್ತೊಂದು ಕಡೆಯವರು  ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ದಾಖಲಿಸಿಲ್ಲ ಹಾಗೂ ಈ ಜಾಗದ ಬಗ್ಗೆ ಈ ಹಿಂದೆ ಇದ್ದ ಮುಖ್ಯಾಧಿಕಾರಿ ಹೊನ್ನಪ್ಪನವರು ನೀಡಲು ಬರುವುದಿಲ್ಲ ಎಂದು ಅಜರ್ಿಯನ್ನು ವಜಾಮಾಡಿದ್ದರೂ ಪುನಃ ಈ ಜಾಗದ ವಿಷಯ ಪ್ರಸ್ತಾಪವಾಗುತ್ತಿದೆ, ಈ ಬಗ್ಗೆ ಸಂಬಂಧ ಪಟ್ಟ ಕಡತವನ್ನು ಸಭೆಯ ಮುಂದಿಡಲು ಒತ್ತಾಯಿಸಿದಾಗ ಸಂಬಂಧ ಪಟ್ಟ ಕಡತವು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಅದರೆ ಆಡಳಿತ ಪಕ್ಷದ ಸದಸ್ಯರು ಈ ಬಗ್ಗೆಯಾವುದೇ ಚಕಾರ ಎತ್ತಲಿಲ್ಲ ಈ ಬಗ್ಗೆ ಕೇಲವು ಸದಸ್ಯರಲ್ಲಿ ಅನುಮಾನಗಳು ಹರಿದಾಡತೊಡಗಿದವು.
ಸದಸ್ಯ ಮಹಮದ್ಖಲಂದರ್ ಮಾತನಾಡಿ ಸಭೆಯಲ್ಲಿ ಸೂಚನಾ ಪತ್ರದ ವಿಷಯಗಳನ್ನು ಚಚರ್ಿಸದೆ ಬೇರೆ ವಿಷಯಗಳ ಚಚರ್ೆ ಮಾಡಿ ಕಾಲ ಹರಣ ಮಾಡುವುದು ಸರಿಯಲ್ಲ ಸೂಚನಾ ಪತ್ರದಲ್ಲಿರುವ ವಿಷಯಗಳನ್ನು ಚಚರ್ಿಸಿದ ನಂತರ ಬೇರೆ ವಿಷಯಗಳ ಬಗ್ಗೆ ಗಮನ ಹರಿಸಿ ಎಂದರು.
ಎಸ್.ಎಫ್.ಸಿ.2016-17ನೇ ಸಾಲಿನ ಕ್ರೀಯಾ ಯೋಜನೆಯಡಿ ಇತರೆ ಬಡ ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿರುವ ಶೇ 7.25 ರಡಿಯಲ್ಲಿ ಒಟ್ಟು ಎಂಟು ಲಕ್ಷದ ಐವತ್ತೊಂದು ಸಾವಿರ ರೂಪಾಯಿಗಳನ್ನು ಮೀಸಲಿಡಲಾಗಿದೆ,  ಸವಿತಾ ಸಮಾಜ ಹಾಗೂ ಮಡಿವಾಳ ಸಮಾಜದ ವೃತ್ತಿ ಮಾಡುತ್ತಿರುವವರಿಗೆ ಅಗತ್ಯವಾದ ಪೂರಕ ಸಾಮಾಗ್ರಿಗಳನ್ನು ನೀಡುವುದಾಗಿ ಮೂರು ಲಕ್ಷದ ನಲವತ್ತು ಸಾವಿರ ರೂಪಾಯಿಗಳನ್ನು ಮೀಸಲಿಡಲು ತೀಮರ್ಾನಿಸಲಾಯಿತು,  ಜೊತೆಗೆ  ಇತರೆ ಸಮುದಾಯದವರಿಗೂ ಹಣವನ್ನು ಮೀಸಲಿಡಬೇಕೆಂದು ತಿಳಿಸಿದರು. 
ಸಮುದಾಯ ಕಾರ್ಯಕ್ರಮಗಳಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಥರ್ಿ ನಿಲಯಕ್ಕೆ ಶೌಚಾಲಯ ನಿಮರ್ಾಣಕ್ಕೆ ಒಂದು ಲಕ್ಷ ಅನುದಾನ ನೀಡುವುದನ್ನು ಸದಸ್ಯರು ವಿರೋದ ವ್ಯಕ್ತಪಡಿಸಿ ಹಾಸ್ಟೆಲ್ಗಳಲ್ಲಿ ಪಟ್ಟಣದ ವಿದ್ಯಾಥರ್ಿಗಳು ಇಲ್ಲ ಅದ್ದರಿಂದ ಅನುದಾನವನ್ನು ನೀಡಬಾರದು ಎಂದು ಸದಸ್ಯರಾದ ರೇಣುಕಾಗುರುಮೂತರ್ಿ, ಸಿ.ಪಿ.ಮಹೇಶ್ ಸೇರಿದಂತೆ ಇತರೆ ಸದಸ್ಯರು ವಿರೋಧಿಸಿದರು.
ಪುರಸಭೆಗೆ ಸಕರ್ಾರದಿಂದ ವಿವಿಧ ಯೋಜನೆಗಳಿಗೆ ಮಂಜೂರಾತಿಯಾಗಿರುವ ನಿಧಿಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಇದುವರೆಗೂ ಮಾಹಿತಿ ನೀಡಿಲ್ಲ ಎಂದು ಎಂದು ಸದಸ್ಯ ಎಂ.ಕೆ.ರವಿಚಂದ್ರ ಹೇಳಿದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ಗೀತಾರಮೇಶ್, ಧರಣಿ.ಬಿ.ಲಕ್ಕಪ್ಪ, ರೂಪಶಿವಕುಮಾರ್, ನೇತ್ರಾವತಿ ಶಿವಕುಮಾರ್, ಅಶೋಕ್, ಸಿ.ಡಿ.ಚಂದ್ರಶೇಖರ್, ಸಿ.ರಾಜಶೇಖರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಕೆ.ಕೃಷ್ಣಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಸೆ.22 : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಿ ಅವರ ಮುಂದಿನ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿಲಿ ಎಂಬ ಉದ್ದೇಶದಿಂದ ಪ್ರತಿವರ್ಷ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಬಿಇಓ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘವತಿಯಿಂದ 2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾಥರ್ಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರೋತ್ಸಾಹದ ನೆಪದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಕೇವಲ ಹಣ ನೀಡಿದರೆ ಮಾತ್ರ ಸಾಲದು, ವಿದ್ಯಾಥರ್ಿಗಳನ್ನು ವೇದಿಕೆಗೆ ಆಹ್ವಾನಿಸಿ ಪ್ರತಿಭಾ ಪುರಸ್ಕಾರ, ಸನ್ಮಾನ ನೀಡುವ ಕಾರ್ಯಕ್ರಮಗಳು ನಡೆಯಬೇಕು ಇದರಿಂದ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡುತ್ತದೆ, ಇಂದಿನ ಜಗತ್ತು ಸ್ಮಧರ್ಾತ್ಮಕ ಯುಗವಾಗಿದೆ, ಒಂದೊಂದು ಅಂಕಗಳಿಂದ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ಹೆಚ್ಚಿರುತ್ತದೆ, ಇಂಜನಿಯರಿಂಗ್ ಮಾಡುವ ವಿದ್ಯಾಥರ್ಿಗಳು ಶೇ.1ರಷ್ಟು ಅಂಕ ಕಡಿಮೆಯಾದರೂ ಅವರಿಗೆ ಒಳ್ಳೆಯ ಕಾಲೇಜುಗಳು ಸಿಗದಂತಾಗಿದೆ ಎಂದರು.
 ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೂ ಕೆಲವೊಮ್ಮೆ ಇಂಜನಿಯರಿಂಗ್ ಮಾಡಿದ ವಿದ್ಯಾಥರ್ಿಗಳಿಗೆ ಕ್ಯಾಂಪಸ್ ಸೆಲಕ್ಷನ್ನಲ್ಲಿ ಉದ್ಯೋಗ ಸಿಗುವಂತಹ ಕಾಲೇಜುಗಳಲ್ಲಿ ಸೀಟುಗಳು ಸಿಗುವುದಿಲ್ಲ ಅದಕ್ಕೆ ಅಂಕಗಳ ಕೊರತೆಯೇ ಕಾರಣವಾಗಿದೆ, ಇಂದು ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಹಲವರು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ, ಹಲವರು ಕಡಿಮೆ ಸಂಬಳಕ್ಕೆ ಉದ್ಯೋಗದಲ್ಲಿ ನಿರತರಾಗಿದ್ದಾರೆ, ಕ್ಯಾಂಪಸ್ನಲ್ಲಿ ಆಯ್ಕೆಯಾದ ವಿದ್ಯಾಥರ್ಿಗಳು ಉತ್ತಮ ಕೆಲಸದಲ್ಲಿ ತೊಡಗಿದ್ದಾರೆ ಅವರಂತೆ ಇಂಜನಿಯರಿಂಗ್ ವಿದ್ಯಾಭ್ಯಾಸ ಆಯ್ಕೆ ಮಾಡಿದ ವಿದ್ಯಾಥರ್ಿಗಳು ಒಳ್ಳೆಯ ಕಂಪನಿಗಳ ಉದ್ಯೋಗಸ್ಥರಾಗಲು ಅಂಕಗಳು ಪಡೆಯುವ ಅವಶ್ಯಕತೆ ಇದೆ ಎಂದರು.  ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಶಾಸಕರು ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಶಿಕ್ಷಣವೇ ವಿದ್ಯಾಥರ್ಿಗಳನ್ನು ಮುಂದೆ ಕರೆದೊಯ್ಯಲು ಸಾಧ್ಯ, ಉತ್ತಮ ಅಂಕ ಪಡೆದ ವಿದ್ಯಾಥರ್ಿಗಳು ತನ್ನ ಮುಂದಿನ ವಿದ್ಯಾಭ್ಯಾಸದಲ್ಲೂ ಹೆಚ್ಚಿನ ಅಂಕ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಸಿದ್ದರಾಮಯ್ಯ, ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ಅಕ್ಷರ ಇಲಾಖೆ ಸಹಾಯಕ ನಿದರ್ೇಶಕ ತಿಮ್ಮರಾಜು, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ನಾರಾಯಣಪ್ಪ, ಸಿ.ಗವಿರಂಗಯ್ಯ ಮತ್ತಿತರರರು ಉಪಸ್ಥಿತರಿದ್ದರು.

ಚಿತ್ರಕಲಾಕಾರರಿಂದ ಸಂವಾದ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಸೆ.22 : ತನ್ನ ಜನರ್ಿಯಲ್ಲಿ ದೊರಕಿದಂತಹ ಅನುಭವಗಳು, ಮನಸ್ಸಿನಲ್ಲಿ ಮೂಡುವಂತಹ ಕಲಾಕೃತಿಗಳು ಕುಂಚದ ಮೂಲಕ ರಚನೆಯಾಗಿವೆ ಎಂದು ಚಿತ್ರ ಕಲಾವಿದ ಗುಬ್ಬಿ ರವೀಶ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವರ್ಣಕಲ್ಪ ಚಿತ್ರಕಲಾ ಶಿಬಿರದ ಮೂರನೇ ದಿನ ಕಲಾವಿದರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನರ್ಾಟಕ ಲಲಿತಕಲಾ ಅಕಾಡೆಮಿ ಹಾಗೂ ಕುಂಚಾಂಕುರ ಕಲಾಸಂಘ ಚಿತ್ರ ಕಲಾಕಾರರಿಗೆ  ವೇದಿಕೆ ರೂಪಿಸಿ ಕಲಾಕೃತಿ ಪ್ರದಶರ್ಿಸಲು ಅನುಕೂಲ ಮಾಡಿರುವುದಕ್ಕೆ ಶ್ಲಾಘನೀಯ ಎಂದರು.
ತುಮಕೂರಿನ ಕಲಾವಿದ ರವಿ ಮಾತನಾಡಿ, ಶಿಬಿರದಲ್ಲಿ ಸಮಕಾಲೀನ, ಪ್ರಚಲಿತ ವಿದ್ಯಮಾನಗಳು ಹಾಗೂ ರಾಜ್ಯದಲ್ಲಿ ಉಂಟಾಗಿರುವ ಕಾವೇರಿ ಸಮಸ್ಯೆಗಳ ಬಗ್ಗೆ ಚಿತ್ರಗಳು ಬಿತ್ತರವಾಗುತ್ತಿವೆ, ಚಿತ್ರ ಕಲಾವಿದರು ಈಗಿನ ದಿನಮಾನಕ್ಕೆ ತಕ್ಕಂತೆ ಆಧುನಿಕ ಹಾಗೂ ತಂತ್ರಜ್ಞಾನ ಬಳಸಿ ಚಿತ್ರಕಲೆಯನ್ನು ರೂಪಿಸುವಂತೆ ಸಲಹೆ ನೀಡಿದರು.
ಚಿತ್ರಕಲೆಗಳು ಜನಸಮುದಾಯಕ್ಕೆ ತಲುಪಬೇಕು ಎಂಬ ನಿಧರ್ಾರದಿಂದ ಹೊರಾಂಗಣ ಪ್ರದೇಶದಲ್ಲಿ ಚಿತ್ರಕಲೆಯನ್ನು ಪ್ರದರ್ಶನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲಾ ಶಿಬಿರಗಳು ನಡೆಯುತ್ತಿರಬೇಕು, ನಾಲ್ಕು ಗೋಡೆ ಮಧ್ಯೆ ಬರೆಯುವ ಕಲೆಗಿಂತ ಜನರ ನಡುವಿನ ಪ್ರದೇಶಗಳಲ್ಲಿನ ಕಲೆಗಳು ರಚಿತವಾಗಬೇಕು, ಹಣಕ್ಕೋಸ್ಕರ ಶಿಬಿರದಲ್ಲಿ ಭಾಗವಹಿಸುವುದಕ್ಕಿಂತ ತಮ್ಮ ಪ್ರತಿಭೆಗಳ ಅಭಿವೃದ್ದಿಗಾಗಿ ಹಾಗೂ ಬದಲಾವಣೆಗಾಗಿ ಶಿಬಿರಗಳಲ್ಲಿ ಭಾಗವಹಿಸಬೇಕು ಎಂಬ ಮಾತುಗಳು ಭಾಗವಹಿಸಿದ್ದ ಕಲಾವಿದರು, ಶಿಬಿರಾಥರ್ಿಗಳಿಂದ ವ್ಯಕ್ತವಾಯಿತು.
ಕಲಾವಿದರ ಸಂವಾದದಲ್ಲಿ ಕುಂಚಾಂಕುರ ಕಲಾಸಂಘದ ಗೌರವಾಧ್ಯಕ್ಷ ಸಿದ್ದು.ಜಿ.ಕೆರೆ, ತಾ.ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕುಂಚಾಂಕುರ ಕಲಾಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್, ನಿರೂಪ್ರಾವತ್, ಎಂ.ಎಸ್.ರವಿಕುಮಾರ್, ಸಿ.ರವಿಕುಮಾರ್ ಸಿ.ಬಿ.ಲೋಕೇಶ್, ಮತ್ತಿತರರು ಉಪಸ್ಥಿತರಿದ್ದರು.

ಸಾರ್ವಜನಿಕ ಶೌಚಾಲಯ ಸ್ಚಚ್ಛವಾಗಿಡುವಂತೆ ಒತ್ತಾಯ 
ಚಿಕ್ಕನಾಯಕನಹಳ್ಳಿ,ಸೆ.22 : ಪ್ರತಿದಿನ ನೂರಾರು ಜನರು ಬಳಸುವಂತಹ ಖಾಸಗಿ ಬಸ್ ಸ್ಟಾಂಡ್ನ ಶೌಚಾಲಯವನ್ನು ಸ್ವಚ್ಛವಾಗಿಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಖಾಸಗಿ ಬಸ್ನಿಲ್ದಾಣದ ಬಳಿ ಇರುವಂತಹ ಸಾರ್ವಜನಿಕ ಶೌಚಾಲಯ ಬಳಸಲು ಯೋಗ್ಯವಿಲ್ಲದಂತಿದೆ, ಕೆಟ್ಟವಾಸನೆಯಿಂದ ಜನರು ಓಡಾಡಲು ತೊಂದರೆಯಾಗುತ್ತಿದೆ ಕೂಡಲೇ ಇದರ ಸ್ವಚ್ಛತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯವಾಗಿದೆ.
 ಹಣಪಾವತಿ ಮಾಡಿ ಬಳಸುವಂತಹ ಶೌಚಾಲಯದಿಂದ ಪುರಸಭೆಗೆ ಆದಾಯಬರುತ್ತಿದೆ ಆದರೂ ಸ್ವಚ್ಛತೆ ಗಮನಹರಿಸುತ್ತಿಲ್ಲ ಇದರ ನಿರ್ವಹಣೆಯ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬಸ್ನಿಲ್ದಾಣದಲ್ಲಿ ಒಡಾಡುವಂತಹ ಜನರು ಆರೋಪಿಸಿದ್ದಾರೆ.
ಈ ಶೌಚಾಲಯವನ್ನು ಟೆಂಡರ್ ಮೂಲಕ ಗುತ್ತಿಗೆ ಪಡೆದವರು ಇಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿಕೊಳ್ಳಲು ನೇಮಕಮಾಡಿದ್ದು, ಶೌಚಾಲಯ ಬಳಸಿದ ಪ್ರತಿಯೊಬ್ಬರಿಂದಲೂ  ಐದು ರೂಪಾಯಿಗಳನ್ನು ಪಡೆಯುತ್ತಿದ್ದರೂ  ಇದರ ಸ್ವಚ್ಛತೆಯ ಕಡೆ ಮಾತ್ರ ಗಮನಹರಿಸಿಲ್ಲ, ಪ್ರತಿದಿನ ನೂರಾರು ಜನರು ಈ ಶೌಚಾಲಯವನ್ನು ಬಳಸುತ್ತಿದ್ದು ಸಾವಿರಾರು ರೂಪಾಯಿಗಳ ಆದಾಯ ಬರುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆಯ ಮಲ್ಲಿಕಾಜರ್ುನ್ ಪುರಸಭೆಯು ಗುತ್ತಿಗೆ ಆದಾರದ ಮೇಲೆ ಪಡೆದ ಶೌಚಾಲಯದಿಂದ ಲಾಭಮಾಡಿಕೊಳ್ಳುತ್ತಿರುವ ಟೆಂಡರ್ದಾರರು ಇದರ ಸ್ವಚ್ಛತೆಯ ಕಡೆಗಮನಹರಿಸಿಲ್ಲ, ಜನರಿಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ಪುರಸಭೆಯವರು ಈ ಶೌಚಾಲಯಕ್ಕೆ ನೀರನ್ನು ಸರಬರಾಜು ಮಾಡುತ್ತಿದ್ದಾರೆ ಟೆಂಡರ್ದಾರರು ನೀರನ್ನು ಹೊರಗಡೆಯಿಂದ ತಂದು ಇದನ್ನು ಸ್ವಚ್ಛಮಾಡಬೇಕು ಎಂದು ತಿಳಿಸಿದರು.
ಶೌಚಾಲಯದ ಸ್ವಚ್ಛತೆಯ ಬಗ್ಗೆ ಪ್ರತಿಕ್ರಿಯಿಸಿದ ಪರಿಸರ ಇಂಜಿನಿಯರ್ ಚಂದ್ರಶೇಖರ್ ಇದರ ಸ್ವಚ್ಛತೆಯ ಬಗ್ಗೆ ಟೆಂಡರ್ದಾರರಿಗೆ  ಹಲವು ಬಾರಿ ಹೇಳಿದ್ದರು ಕ್ರಮಕೈಗೊಂಡಿಲ್ಲ ಕೂಡಲೇ ಇದರ ಸ್ವಚ್ಛತೆಯ ಕಡೆ ಗಮನಹರಿಸಿ ಪೆನಾಯಿಲ್, ಬ್ಲೀಚಿಂಗ್ ಪೌಡರ್ಗಳನ್ನು ಬಳಸಿ ಸ್ವಚ್ಚಪಡಿಸುವಂತೆ ತಿಳಿಸುವುದಾಗಿ ಹೇಳಿದರು.

ಚಿತ್ರಕಲೆಗಳು ದೇಶದ ಇತಿಹಾಸ ಸಾರುತ್ತಿದ್ದವು : ಬಾ.ಹ.ರಮಾಕುಮಾರಿ 
ಚಿಕ್ಕನಾಯಕನಹಳ್ಳಿ,ಸೆ.22 : ಹಿಂದಿನ ದಿನ ಮಾನಗಳಲ್ಲಿ ದೇಶದ ಚಿತ್ರಣವನ್ನು ಬಡತನ, ಕೊಳಗೇರಿಗಳ ಮೂಲಕ ಚಿತ್ರಿಸಿ ಹೊರ ದೇಶಗಳಿಗೆ ಕಳುಹಿಸಿ ಹಣ ಮಾಡುತ್ತಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ವಿಷಾಧಿಸಿದರು.  
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನರ್ಾಟಕ ಲಲಿತಕಲಾ ಅಕಾಡೆಮಿ ಹಾಗೂ ಕುಂಚಾಂಕುರ ಕಲಾಸಂಘದ ವತಿಯಿಂದ ನಡೆದ ವರ್ಣಕಲ್ಪ ರಾಜ್ಯಮಟ್ಟದ ಚಿತ್ರಕಲಾ ಶಿಬಿರದಲ್ಲಿ ಮುಕ್ತಾಯ ಸಮಾರಂಭದಲ್ಲಿ  ಸಮಾರೋಪ ಭಾಷಣ ಮಾಡಿದ ಅವರು, ಈಗ ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಇಲ್ಲ, ಹಿಂದೆ  ಚಿತ್ರಕಲೆಗಳ ಮೂಲಕವೇ ಇತಿಹಾಸದ ಕಥೆಗಳನ್ನು ತಿಳಿಸುತ್ತಿದ್ದರು, ರಾಜ್ಯ ಏಕೀಕರಣದ ಸಂದರ್ಭದಲ್ಲಿ ಚಿತ್ರಕಲೆಯು ಮಹತ್ವಸಾರುತ್ತಿದ್ದವು ಎಂದರು.
ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತರುವ ಲಲಿತಕಲಾ ಶಿಬಿರ ರಾಜ್ಯದಲ್ಲಿ ಹೆಸರು ತಂದುಕೊಟ್ಟಿದೆ, ನಗರಗಳ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯುವ ಇಂತಹ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಮಾಡುತ್ತಿರುವುದು ಸ್ವಾಗತಾರ್ಹ, ಗ್ರಾಮೀಣ ಭಾಗಗಳಲ್ಲಿ ಹಾಗೂ ಕಲಾವಿದ ರಚಿಸಿದ ಚಿತ್ರಕಲೆ ಮೂಲೆ ಸೇರಬಾರದು, ಇವು ಶಾಲಾ, ಕಾಲೇಜುಗಲ್ಲಿ, ಸಂಘ-ಸಂಸ್ಥೆಗಳಲ್ಲಿ, ಕಛೇರಿಗಳಲ್ಲಿ ಪ್ರದರ್ಶನವಾಗಬೇಕು ಎಂದರು.
ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಕರ್ಾರ ಶಿಕ್ಷಣಕ್ಕೆ ಒತ್ತು ನೀಡಿದಂತೆ ಚಿತ್ರಕಲೆಗಳಿಗೂ  ಪ್ರೋತ್ಸಾಹಿಸಬೇಕು ಎಂದರಲ್ಲದೆ, ಕಲಾವಿದರು ಎಲ್ಲಿ ವರ್ಣಚಿತ್ರ ರಚಿಸುತ್ತಾರೋ ಅಲ್ಲಿಯೇ ಮಾರಾಟದ ವ್ಯವಸ್ಥೆ ಮಾಡಿದರೆ ಕಲಾವಿದರು ಬದುಕು ಕಟ್ಟಿಕೊಳ್ಳಬಹುದು, ರಾಜ್ಯದ ಮಂಗಳೂರಿನ ವ್ಯಕ್ತಿಯೊಬ್ಬರು ಹನುಮಂತನ ಮುಖದ ಅರ್ಧ ಚಿತ್ರ ರಚಿಸಿದರೂ ಅದು ಬೆಂಗಳೂರು ಸೇರಿದಂತೆ ನಾನಾ ಕಡೆ ಚಿತ್ರ ಹೆಸರುವಾಸಿ ಪಡೆದಿದೆ ಎಂದ ಅವರು, ಕಲಾವಿದರು ರಚಿಸಿದ ಚಿತ್ರಕಲೆ ವರ್ಣಚಿತ್ರ ಕಲೆಗಳಿಗೆ ಮಾರುಕಟ್ಟೆ ಒದಗಿಸುವುದು ನಮ್ಮ ಕರ್ತವ್ಯ ಎಂದರು.
ಲಲಿತಕಲಾ ಅಕಾಡೆಮಿಯ ಸದಸ್ಯ ಪ್ರಭುಹರಸೂರು ಮಾತನಾಡಿ, ಚಿತ್ರಕಲೆ ಸಾಮಾಜಿಕ ಕಲೆಯ ಪ್ರತಿಬಿಂಬ, ತಮ್ಮದೇ ಆದ ಅನುಭವಗಳ ಮೂಲಕ ಕಲೆ ರಚನೆಯಾಗುತ್ತದೆ ಎಂದ ಅವರು ಪಟ್ಟಣದಲ್ಲಿ ನಡೆಯುತ್ತಿರುವ ವಾಣಿ ಚಿತ್ರಕಲೆ ಶಾಲೆಗೆ ಪ್ರತಿ ತಿಂಗಳು ಕೊನೆಯ ವಾರದಲ್ಲಿ ಭೇಟಿ ನೀಡಿ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸುತ್ತೇವೆ, ಇಲ್ಲಿಗೆ ಬರುವ ಚಿತ್ರಕಲಾವಿದರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬ ಹಂಬಲವಿದೆ ಎಂದರು.
ಮಾಜಿ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಚಿತ್ರಕಲೆಗಳು ಸಾಂಸ್ಕೃತಿಕವಾಗಿ ಪರಿಚಯವಾಗಿ ಅದು ಎಲ್ಲಾ ಭಾಗದ ಮಕ್ಕಳಿಗೆ ಅನುಕೂಲವಾಗಬೇಕು, ಇಲ್ಲಿ ನಡೆದ ಶಿಬಿರ ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ಆಯೋಜನೆಯಾಗಿದೆ, ಶಿಬಿರದಲ್ಲಿ ರಚಿಸಿದ ಕಲಾಕೃತಿಳನ್ನು  ಮೂರು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವರ್ಣಕಲ್ಪ ಚಿತ್ರಕಲಾ ಶಿಬಿರದ ಸಂಚಾಲಕ ಪ್ರಭುಹರಸೂರು, ಕುಂಚಾಂಕುರ ಕಲಾಸಂಘದ ಗೌರವಾಧ್ಯಕ್ಷ ಸಿದ್ದು.ಜಿ.ಕೆರೆ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಚಿತ್ರಕಲಾ ಶಿಕ್ಷಕ ಎನ್.ನಂಜುಂಡಾರಾಧ್ಯ, ಕಲಾವಿದ ರಾಜುಗೌಡ, ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಕಲಾಸಂಘದ ಚಿ.ಲಿಂ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.






Thursday, September 1, 2016

ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮಶತಾಬ್ದಿ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಸೆ.01 : ಬದುಕನ್ನು ಪ್ರೀತಿಸುವವರು ಜೀವನದಲ್ಲಿ ಗೆಲ್ಲುತ್ತಾರೆಂಬ ಮಾತುಗಳು ಕವಿ ಕೆಎಸ್.ನರಸಿಂಹಸ್ವಾಮಿರವರ ಕವಿತೆಗಳಲ್ಲಿ ಮೂಡಿದೆ ಎಂದು ನವೋದಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ರವಿಕುಮಾರ್ ಹೇಳಿದರು.
ಪಟ್ಟಣದ ರೋಟರಿ ಕನ್ವೆಷನ್ಹಾಲ್ನಲ್ಲಿ ರೋಟರಿ ಕ್ಲಬ್, ಇನ್ನರ್ವೀಲ್ ಕ್ಲಬ್, ರೋಟರಾಕ್ಟ್ನ ಸಂಯುಕ್ತಾಶ್ರಯದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಜನ್ಮ ಶತಾಬ್ದಿ ಅಂಗವಾಗಿ ನಡೆದ ಕವಿಗೋಷ್ಠಿ ಹಾಗೂ ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಡಿಗರು ಮತ್ತು ನರಸಿಂಹಸ್ವಾಮಿರವರ ಕಾಲಾನುಘಟ್ಟದಲ್ಲಿ ಮೂಡಿ ಬಂದಂತಹ ಕವಿತೆಗಳು ಹೆಚ್ಚಾಗಿ ಭಾವಗೀತೆಗಳಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು, ಮಗುವಿನ ಆಟೋಟ, ಮುಗ್ಧತೆಗಳನ್ನು ತಮ್ಮ ಕವಿತೆಗಳಲ್ಲಿ ಸುಂದರವಾಗಿ ವಣರ್ಿಸುತ್ತಿದ್ದರು ಎಂದರು.
ನವೋದಯ ಕಾಲಾನುಘಟ್ಟದಲ್ಲಿ ಕೆ.ಎಸ್.ಎನ್ರವರ ಕವಿತೆಗಳ ಬಗ್ಗೆ ಹೆಚ್ಚೆಚ್ಚು ಟೀಕೆಗೆ ಒಳಪಟ್ಟವು, ಅವರು ಗಾಂಧೀಜಿಯ ಬಗ್ಗೆ ಕಟ್ಟಿಕೊಟ್ಟಂತಹ ಸಂದೇಶಗಳು, ಇಲ್ಲಿನ ನೆಲ, ಜಲ, ಮಣ್ಣಿನ ಬಗ್ಗೆ ಪ್ರೀತಿಯಿಂದ ಕವಿತೆ ಕಟ್ಟುತ್ತಿದ್ದರು, 21ನೇ ಶತಮಾನದಲ್ಲಿ ವಿಭಕ್ತ ಕುಟುಂಬಗಳಾಗಿ ಪರಿವರ್ತನೆಯಾಗುತ್ತಿರುವ ಈ ದಿನಮಾನಗಳಲ್ಲಿ ಅವರ ಕವಿತೆ ಅವಿಭಕ್ತ ಕುಟುಂಬದ ಎಳೆಯನ್ನು ನೀಡುತ್ತಿತ್ತು, ಮೈಸೂರು ಮಲ್ಲಿಗೆ, ತೆರದ ಬಾಗಿಲು ಕಾವ್ಯಗಳು ಕೆ.ಎಸ್.ಎನ್ರವರ ಕಾವ್ಯದ ಪ್ರಚಲಿತವಾಗಿ ಜನರನ್ನು ಆಕಷರ್ಿಸುತ್ತದೆ ಎಂದರು.
ಉಪನ್ಯಾಸಕ ಡಾ.ಶಿವಣ್ಣಬೆಳವಾಡಿ ಮಾತನಾಡಿ, ಇಂದಿನ ಕವಿಗಳು ಯಾವ ಚಳುವಳಿಗೂ ಒಳಗಾಗದೆ ಹೊಸ ದೃಷ್ಠಿಕೋನದಿಂದ ಕಾವ್ಯ ಕಟ್ಟುತ್ತಿದ್ದಾರೆ, ಗೋಪಾಲಕೃಷ್ನ ಅಡಿಗರು, ಗಂಗಾಧರ್ ಇವರ ಚಿತ್ತಗಳೆಲ್ಲವೂ ಸಮಾಜದ ಅಸಮಾನತೆ ವಿರುದ್ದ, ನೋವಿನ ಪ್ರತೀಕದ ಅಂಶಗಳು, ದಲಿತ ಬಂಡಾಯದಗಳ ಕವಿತೆಗಳಾಗಿ ಹೊರಬರುತ್ತಿದ್ದವು, ಪ್ರತಿಯೊಬ್ಬ ಕವಿಯೂ ಉತ್ತಮ ಕವಿಯಾಗಬೇಕಾದರೆ ಈ ನೆಲದ ಭಾಷೆ ಮೈಗೂಡಿಸಿಕೊಳ್ಳಬೇಕು, ತನ್ನ ನೆಲದ ಸಂಗತಿಗಳನ್ನು ಅರಿಯಬೇಕು ಅದೇ ರೀತಿ ಕೆ.ಎಸ್.ಎನ್ರವರು ತಮ್ಮ ಬದುಕಿನ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡ್ಡಿದ್ದರು ಎಂದ ಅವರು, ಇಂದಿನ ದಿನಮಾನಗಳಲ್ಲಿ ಶಿಕ್ಷಣ, ಆಸ್ಪತ್ರೆಗಳು ವಾಣಿಜ್ಯಕರಣಗೊಳ್ಳುತ್ತಿವೆ ಎಂದು ವಿಷಾಧಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ದೇವರಾಜು ಮಾತನಾಡಿ, ಉದಯೋನ್ಮುಖ ಕವಿಗಳಿಗೆ ವೇದಿಕೆ ಕಲ್ಪಿಸುವುದು ಅಗತ್ಯ ಅಂತಹ ಕೆಲಸವನ್ನು ನಮ್ಮ ರೋಟರಿ ಸಂಸ್ಥೆ ಮಾಡುತ್ತಿದೆ, ಮುಂದೆಯು ಮಾಡಲಿದೆ, ಕವಿತೆಯ ರಚನೆ ಕೇಳಿದಷ್ಟು ಸುಲಭವಲ್ಲ ಅದಕ್ಕೆ ಪೂರಕವಾದ ವಾತಾವರಣ ಅಗತ್ಯ ಎಂದರು.
ಕವಿಗಳಾದ ಕುಮಾರ್ ಎಸ್.ಬಿ, ಪುಷ್ಪಶಿವಣ್ಣ, ಗುರುಪ್ರಸಾದ್ಕಂಟಲಗೆರೆ, ಚನ್ನಬಸವಯ್ಯ ಬೇವಿನಹಳ್ಳಿ, ಮಂಜುಳ ಪ್ರಕಾಶ್, ಹುಳಿಯಾರ್ಷಬ್ಬೀರ್, ರಾಧಾಕೃಷ್ಣ, ಎಂ.ಎಸ್.ರವಿಕುಮಾರ್ ತಮ್ಮ ಕವಿತೆಯನ್ನು ವಾಚಿಸಿದರು. 
ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚಾರಣೆ ಅಂಗವಾಗಿ ತಾಲ್ಲೂಕಿನ ಹಿರಿಯ ಛಾಯಾಚಿತ್ರಕಾರರಾದ ಕಲ್ಪನಾ ಸ್ಟುಡಿಯೋದ ಎಸ್.ನಾಗರತ್ನಗಂಗಣ್ಣರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದಶರ್ಿ ಎಂ.ವಿ. ನಾಗರಾಜ್ರಾವ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ಕಾರ್ಯದಶರ್ಿ ಡಿ.ಸಿ.ಶಶಿಕಲಜಯದೇವ್, ರೋಟರಾಕ್ಟ್ ಅಧ್ಯಕ್ಷ ಕಾಶಿಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

ಪಟ್ಟಣಕ್ಕೆ ಆಗಮಿಸಿದ ಗಣೇಶ ಮೂತರ್ಿಗಳು
ಚಿಕ್ಕನಾಯಕನಹಳ್ಳಿ,ಸೆ.01 : ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ತಯಾರಿಸುವ ಗಣಪತಿ ಹಾಗೂ ಗೌರಮ್ಮನವರ ಪ್ರತಿಮೆಗಳನ್ನು ಪಟ್ಟಣದ ಬಿ.ಹೆಚ್.ರಸ್ತೆಯ ಅಂಗಡಿಗಳ ಮುಂಭಾಗಗಳಲ್ಲಿ ಮಾರಾಟ ಮಾಡಲು ವ್ಯಾಪಾರಸ್ಥರು ಸಿದ್ದರಾಗಿದ್ದಾರೆ.
ತಾಲ್ಲೂಕಿನ ಕುಪ್ಪೂರು, ಪಾಪನಕೊಣ ಭಾಗಗಳಲ್ಲಿನ ಗಣಪತಿ ಮೂತರ್ಿಯ ಕಲಾವಿದರು ಗಣೇಶ ಚತುಥರ್ಿಗಾಗಿ ಆರು ತಿಂಗಳ ಹಿಂದೆಯೇ ಮನೆಮಂದಿಯೆಲ್ಲಾ ಕೆರೆಗಳಲ್ಲಿನ ಜೇಡಿಮಣ್ಣನ್ನು ತೆಗೆದುಕೊಂಡು ಬಂದು ಮಕ್ಕಳಾಧಿಯಾಗಿ ಗಣಪತಿ ಹಾಗೂ ಗೌರಮ್ಮನವರ ಮೂತರ್ಿಯನ್ನು ತಯಾರಿಸಿ, ಮೂತರ್ಿಗೆ ವಿವಿಧ ರೀತಿಯ ಬಣ್ಣವನ್ನು ಲೇಪಿಸಿ ಮಾರಾಟಕ್ಕೆ ತಂದಿದ್ದಾರೆ.
ಅರ್ಧ ಅಡಿ ಎತ್ತರದಿಂದ ಹಿಡಿದು ನಾಲ್ಕು ಅಡಿಯವರೆಗೆ ಇರುವ ಮೂತರ್ಿಗಳು ಪಟ್ಟಣದಲ್ಲಿ ಮಾರಾಟಕ್ಕೆ ತಂದಿದ್ದು ವಿವಿಧ ಬಡಾವಣೆ ಹಾಗೂ ಗ್ರಾಮೀಣ ಭಾಗದ ಭಕ್ತರು ಪ್ರತಿಷ್ಠಾಪಿಸುವ ಗಣಪತಿ ಮೂತರ್ಿಗಳನ್ನು ಕಾಯ್ದಿರಿಸಿದ್ದು ಪ್ರತಿಷ್ಠಾಪನಾ ದಿನದಂದು ಟ್ರಾಕ್ಟರ್, ಮೂರು ಚಕ್ರದ ಆಟೋಗಳಲ್ಲಿ ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ.
ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಗಣಪತಿಯನ್ನು ಇಡಲು ಯುವಕರ ತಂಡಗಳು ಈಗಾಗಲೇ ಗಣಪತಿ ಇಡುವ ಸ್ಥಳಗಳಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
 ಚಿಕ್ಕ ಗಣಪತಿ ಮೂತರ್ಿಯ ಬೆಲೆ 50ರಿಂದ 100ರೂಗಳಿದ್ದು ಎರಡು ಅಡಿ ಗಣಪತಿ ಮೂತರ್ಿಗಳು 500ರೂ ರಿಂದ ಎರಡು ಸಾವಿರದವರೆಗೆ ಮಾರಾಟವಾಗುತ್ತಿವೆ.

ಜೇನಿಗಾಗಿ ಮರವೇರಿದ ಕರಡಿ 
ಚಿಕ್ಕನಾಯಕನಹಳ್ಳಿ,ಸೆ.01 : ಜೇನಿನ ಆಸೆಗಾಗಿ ಮರವೇರಿದ ಕರಡಿ ಮರದಿಂದ ಕೆಳಗೆಬಾರಲು ಸಾಧ್ಯವಾಗದೇ ಮರದಲ್ಲೇ ಕುಳಿತುಕೊಂಡು ಸಾರ್ವಜನಿಕರಿಗೆ ದರ್ಶನ ನೀಡಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಹನುಮಂತನಹಳ್ಳಿಗೇಟ್ ಬಳಿಯ ಆಲದಮರದಲ್ಲಿದ್ದ ಜೇನಿನ ಆಸೆಗೆ ಬುಧವಾರ ರಾತ್ರಿ ಮರವನ್ನು ಏರಿದ ಕರಡಿಯೊಂದು ಮರದಿಂದ ಕೆಳಗೆ ಬಾರಲು ಸಾದ್ಯವಾಗದೇ ಅಲ್ಲೇ ಸಮಯವನ್ನು ಕಳೆದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಗ್ರಾಮಸ್ಥರು ತಿಳಿಸಿದರು, ಕೇವಲ ಕರಡಿಯನ್ನು ವೀಕ್ಷಿಸಿದರೆ ವಿನಃ ಅದರ ಸಮಸ್ಯೆಗೆ ಸ್ಪಂದಿಸಿ ಅದರ ರಕ್ಷಣೆಗೆ ಯಾವುದೇ ಕ್ರಮವನ್ನು ತೆಗೆದುಕೊಳದೇ ಇರುವುದು ಕೆಲವು ಪ್ರಾಣಿಪ್ರಿಯರಲ್ಲಿ ಅಸಮದಾನ ಮೂಡಿತು.

ಪಟ್ಟಣಕ್ಕೆ ಟಿಪ್ಪು ಸುಲ್ತಾನ್ ರಾಜ್ಯಧ್ಯಕ್ಷ 


ಚಿಕ್ಕನಾಯಕನಹಳ್ಳಿ,ಸೆ.01 : ಟಿಪ್ಪು ಸುಲ್ತಾನ್ ಪ್ರಾಧಿಕಾರವೂ ಸೇರಿದಂತೆ ಸಂಗೋಳ್ಳಿರಾಯಣ್ಣ, ಕಿತ್ತೂರುರಾಣಿಚೆನ್ನಮ್ಮ ಪ್ರಾಧಿಕಾರ ಸೇರಿದಂತೆ ಮೂರು ಪ್ರಾಧಿಕಾರಗಳನ್ನು ಸ್ಥಾಪಿಸಬೇಕು ಕೇವಲ ಒಂದು ಪ್ರಾಧಿಕಾರವನ್ನು ಸ್ಥಾಪಿಸಿದರೆ ನಾವು ವಿರೋಧಿಸುತ್ತೇವೆ ಎಂದು ಟಿಪ್ಪು ಸುಲ್ತಾನ್ ಸಂಘದ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಆಲಿ ಸಕರ್ಾರಕ್ಕೆ ಒತ್ತಾಯಿಸಿದ್ದಾರೆ.
ಮೈಸೂರಿನ ಟಿಪ್ಪು ಸುಲ್ತಾನ್ ಸಮಾದಿಗೆ ಶ್ರೀಗಂಧ ಲೇಪನಮಾಡಲು ಚಿತ್ರದುರ್ಗದಿಂದ ಶ್ರೀಗಂಧವನ್ನು ತೆಗೆದುಕೊಂಡು ಹೋಗುವಾ ಮಾರ್ಗಮದ್ಯೆ ಪಟ್ಟಣದ ತಾತಯ್ಯನ ಗೋರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಸಂಘಟನೆಯಲ್ಲಿ ಕೇವಲ ಮುಸ್ಲೀಂರಷ್ಟೇ ಅಲ್ಲದೇ ಎಲ್ಲಾ ಸಮುದಾಯದವರೂ ಸೇರಿ ಸಂಘಟನೆ ಮಾಡಲಾಗಿದ್ದು  ತಾಲ್ಲೂಕಿನಲ್ಲೂ ಇಂತಹ ಸಂಘಟನೆಯನ್ನು ರಚಿಸಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು ಈ ನಾಡಿಗಾಗಿ ಬ್ರಿಟೀಷರೊಡನೆ ಹೋರಾಡಿದ ಮಹಾನ್ ವ್ಯಕ್ತಿ ಟಿಪ್ಪು ಇವರ ಹೆಸರಿನಲ್ಲಿ ನಾವು ಸಂಘಟನೆ ಮಾಡಿ ದೇಶಭಕ್ತಿಯ ಬಗ್ಗೆ ತಿಳಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಲಿಂಗದೇವರು, ಶಾಂತಕುಮಾರ್, ಕೃಷ್ಣೇಗೌಡ, ಕನರ್ಾಟಕ ಜಾಗೃತಿ ಸೇನೆಯ ಅಧ್ಯಕ್ಷ ನಿಂಗರಾಜು, ಪೈಲ್ವಾನ್ ಸದ್ದಾಂ, ಸಮೀಉಲ್ಲಾ, ತಾಹಿರಾ, ಸೇರಿದಂತೆ ಹಲವರು ಶುಭಕೋರಿದರು.