Friday, July 8, 2016

ಅಣೆಕಟ್ಟೆಗೆ ಆರೋಗ್ಯ ಸಚಿವ ರಮೇಶ್ಕುಮಾರ್ ಭೇಟಿ, ಚಿಕನ್ಗುನ್ಯಾ ಬಗ್ಗೆ ಪರಿಶೀಲನೆ
ಚಿಕ್ಕನಾಯಕನಹಳ್ಳಿ08: ಥೂ...ತ್ತೇರಿ ಹೋಡೆದುಬಿಡ್ತಿನಿ, ಎಲ್ಲಾ ತಿಳಿದುಕೊಂಡೆ ಬಂದಿದ್ದೇನೆ. ಮೂನ್ನೂರು ಜನ ಖಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ನೀವು ಮುವಾತ್ತಾರು ಜನ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಿರಾ. ಏನ್ ಅವತಾರ ನಿಮ್ದು ಬಹಿರಂಗವಾಗಿ ಈ ರೀತಿ ಸುಳ್ಳು ಹೇಳಿದರೆ ಜನ ಕಾಪಾಳಕ್ಕೆ ಭಾರಿಸಿದರೆ ಗತಿ ಏನು ಎಂದು ಆರೋಗ್ಯ ಸಚಿವ ರಮೇಶ್ಕುಮಾರ್ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಅಣೇಕಟ್ಟೆ ಗ್ರಾಮದ ಚಿಕೂನ್ಗುನ್ಯಾ ರೋಗಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ದಿಢೀರ್ಭೇಟಿ ನೀಡಿ ಪರೀಶಿಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿ,  ಸುಳ್ಳು ಹೇಳಿದರೆ ಸಸ್ಪೆಂಡ್ ಆಗ್ತಿರಾ. ಸುಳ್ಳು ಹೇಳಿದರೆ ಒಂದು ತಪ್ಪು ನಿರಾಕರಿಸಿದರೆ ಇನ್ನೊಂದು ತಪ್ಪುಮಾಡಿದಂತಾಗುತ್ತದೆ  ಎಚ್ಚರವಿರಲಿ ಎಂದು ಗದರಿದರು.
ನೀವು ಅಧಿಕಾರಿಗಳು ನಮಗೆ ಸುಳ್ಳು ಮಾಹಿತಿ ನೀಡಿ ಸಕರ್ಾರವನ್ನು ಕತ್ತಲಲ್ಲಿಟ್ಟಿದ್ದೀರಿ.  ನಿಮ್ಮ ವರದಿಗಳನ್ನು ಇಟ್ಟುಕೊಂಡು ಮುಂದಿನ ವಿಧಾನಸಭೆಯಲ್ಲಿ ನಾನು ಯಾವರೀತಿ ಮಾತನಾಡಲಿ,  ನಮಗೆ ತಪ್ಪು ಮಾಹಿತಿಗಳನ್ನು ನೀಡಿ ನಮ್ಮ ಬಾಯಲ್ಲಿ ಸುಳ್ಳು ಹೇಳಿಸುತ್ತೀರಿ. ಮನುಷ್ಯನಿಗೆ ಹೃದಯವಿರಬೇಕು ಕೇವಲ ಮನುಷ್ಯನಂತೆ ಕಂಡರೆ ಸಾಲದು. ಜನರು ನಮ್ಮನ್ನು ಆರಿಸಿ ಕಳುಹಿಸಿದ್ದು ಅವರ ಸೇವೆ ಮಾಡಲು ನೀವು ಕೇವಲ ಓದಿನಿಂದ ಅಧಿಕಾರ ಪಡೆದಿದ್ದು, ನಾವು ಜನರ ಕಷ್ಟ ನಷ್ಟಗಳನ್ನು ಕಂಡು ನೋಡಿ ತಿಳಿದು ಅವರಿಂದ ಆರಿಸಿ ಬಂದಿರುತ್ತೇವೆ. ಇದುವರೆವಿಗೂ ನಿಮಗೆ ಏನು ಖಾಯಿಲೆ ಎಂದು ದೃಢಪಡಿಸಿಕೊಳ್ಳಲು ಸಾಧ್ಯವಿಲ್ಲ 9 ಜನ ಮಲೆರಿಯಾ ಪೀಡಿತರಿದ್ದಾರೆ ಎಂದು ಹೇಳುತ್ತೀದ್ದಿರಿ, ಉಳಿದ 293ಜನರಿಗೆ ಬಂದಿರುವ ಖಾಯಿಲೆ ಯಾವುದು ಎಂಬುದರ ಬಗ್ಗೆ ಪರೀಕ್ಷೇ ನಡೆಸಿದ್ದಾರಾ ಎಂದ ಅವರು ಜನರಿಗೆ ಯಾವ ಖಾಯಿಲೆ ಎಂದು ತಿಳಿಯದೇ ಏನು ಚಿಕಿತ್ಸೆ ನೀಡುತ್ತಿದ್ದೀರಿ ಎಂದು ಪ್ರೇಶ್ನಿಸಿದರು.
ಗ್ರಾಮದ ಸ್ವಚ್ಛತೆಯ ಬಗ್ಗೆ ತಕ್ಷಣ ಕ್ರಮವಹಿಸಿ ಫಾಗಿಂಗ್ ಹಾಗೂ ರಕ್ತಪರೀಕ್ಷೆ, ನೀರಿನ ಪರೀಕ್ಷೆಯನ್ನು ತುತರ್ಾಗಿ ಮಾಡಿ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಿ ಒಂದು ತಿಂಗಳಾದರೂ ಪರವಾಗಿಲ್ಲ, ಸಮಸ್ಯೆ ಬಗೆಹರಿಸಿಯೇ ವೈದ್ಯರ ತಂಡ ಗ್ರಾಮವನ್ನು ತೊರೆಯಬೇಕು ಎಂದು ತಾಕಿತು ಮಾಡಿದರು. ಯಾವುದೇ ತಾರತಮ್ಯಮಾಡದೇ ಬಂದ ಎಲ್ಲರಿಗೂ ಇಲ್ಲವೇ ಅವರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡಬೇಕು ಸಕರ್ಾರದ ವತಿಯಿಂದ ಯಾವುದೇ ಸವಲತ್ತು ಬೇಕಾದರೂ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ರಾಜ್ಯ ಸಾಂಕ್ರಾಮಿಕ ರೋಗಗಳ ನಿಗಾವಣೆ ನಿದರ್ೇಶಕಿ ಡಾ|| ಲೋಲಾಪಾಟೀಲ್ ಇವರ ನಿದರ್ೇಶನದ ನಂತರ ಸ್ಥಳಕ್ಕೇ ಭೇಟಿ ನೀಡಿದ್ದೀರಿ,  ನಿಘಂಟನ್ನು ನೋಡಿ ಸವರ್ೇಲೆನ್ಸ್ ಎಂಬ ಪದಕ್ಕೆ ಅರ್ಥ ತಿಳಿದುಕೊಂಡು ಕೆಲಸ ಮಾಡಿ ಸಮಸ್ಯೆ ಮಾಧ್ಯಮದಲ್ಲಿ ಬಿತ್ತರಗೊಂಡ ನಂತರ ಸ್ಥಳಕ್ಕೆ ಭೇಟಿ ನೀಡಿರುವ ನೀವು ಈ ಬಗ್ಗೆ ಯಾವುದೇ ರೀತಿಯ ವರದಿಯನ್ನು ಸಂಗ್ರಹಿಸಿಲ್ಲ ಯಾಕೆ  ಇದರಿಂದ ನಿಮ್ಮ ಬೇಜಾವಾಬ್ದಾರಿ ಎಷ್ಟು ಎಂಬುದು ತಿಳಿಯುತ್ತದೆ ಎಂದರು.
ಜನಸಾಮಾನ್ಯರಿಗೆ ಇದು ಚಿಕೂನ್ಗುನ್ಯ ಎಂದು ಗೊತ್ತು, ನೀವು ಮಾತ್ರ ಪರೀಕ್ಷೆಯನ್ನೇ ನಡೆಸದೇ ಶಂಕಿತ ಖಾಯಿಲೆ ಎಂದು ಹೇಳುತ್ತಿದ್ದೀರಿ ನಿಮಗೆ ಈ ಖಾಯಿಲೆ ಬಂದಿದ್ದರೆ ತಿಳಿಯುತ್ತಿತ್ತು. ಜನರನ್ನು ನಿಮ್ಮ ಕುಟುಂಬದವರಂತೆ ಕಂಡು ಸಮಸ್ಯಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಜನರ ಋಣ ತೀರಿಸಿ ಎಂದರು.
ಊರು ಕಾಯುವವನು ಬಂದೂಬಸ್ತ್ ಮಾಡಿದ್ದರೆ ದನ ನುಗ್ಗುತ್ತಿರಲಿಲ್ಲ,  ಆಶಾ ಕಾರ್ಯಕರ್ತರಿಂದ ಹಿಡಿದು ಜಿಲ್ಲಾ ಆರೋಗ್ಯಾಧಿಕಾರಿಗಳ ವರೆಗೆ ಎಲ್ಲಾ ಹಂತದ ಅಧಿಕಾರಿಗಳೂ ವರದಿಯನ್ನು ನೀಡದೇ ದೊಡ್ಡತಪ್ಪು ಮಾಡಿದ್ದೀರಿ ಇದರ ಪರಿಣಾಮ ಮುಂದೆ ನೋಡುತ್ತಿರಿ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಗ್ರಾ,ಪಂ.ಅಧ್ಯಕ್ಷ ಚಿಕ್ಕೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ, ಡಿಎಸ್ಒ ಡಾ||ಪುರುಷೋತ್ತಮ್, ಎನ್ವಿಬಿಡಿಸಿಪಿ ಯ ಡಾ||ವೀಣಾ, ತಾಲ್ಲೂಕು ವೈದ್ಯಾಧೀಕಾರಿ ಡಾ||ಶಿವಕುಮಾರ್, ಇಒ ಕೃಷ್ಣಮೂತರ್ಿ, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಎಚ್ಚರವಹಿಸಿ : ಪುರಸಭೆ ಸಭೆಯಲ್ಲಿ ಚಚರ್ೆ
ಚಿಕ್ಕನಾಯಕನಹಳ್ಳಿ,ಜು.08: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ವಹಿಸಬೇಕಾದ ಎಚ್ಚರ, ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ನಿಗಧಿಗೆ ಸಂಬಂಧಿಸಿದ ತೀಮರ್ಾನ, ಮುಸ್ಲಿಂ ಸಮುದಾಯದವರಿಗೆ ನೀಡುತ್ತಿರುವಂತೆ ನಮಗೂ ಪುರಸಭಾ ನಿವೇಶನಗಳನ್ನು ನೀಡುವಂತೆ ವಿವಿಧ ಸಮಾಜದವರು ನೀಡಿರುವ  ಅಜರ್ಿಯ ಮೇಲೆ ಚಚರ್ೆ, ಪುರಸಭಾ ಆಸ್ತಿಗಳಿಗೆ ತಂತಿಬೇಲಿ ಹಾಕುವುದು  ಸೇರಿದಂತೆ ಒಟ್ಟು ಎಂಟು ಪ್ರಮುಖ ವಿಷಯಗಳ ಮೇಲೆ ಪುರಪಿತೃಗಳು ನಿರ್ಣಯ ಕೈಗೊಂಡಿದ್ದಾರೆ.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿನ ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ,  ಪಟ್ಟಣದಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿದ್ದು ಮುನ್ನೇಚ್ಚರಿಕೆಯಾಗಿ ಕಸ, ಕೊಳಚೆ ನೀರು ನಿಲ್ಲದಂತೆ ಸ್ವಚ್ಛತೆಯನ್ನು ಕಾಪಾಡಬೇಕು, ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಚರಂಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಮನೆಗಳ ಸುತ್ತುಮುತ್ತ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು ಹಾಗೂ ಬಿದ್ದಿರುವ ಹಳೆಮನೆಗಳಿಗೆ ಹೊಸದಾಗಿ ಕಟ್ಟಲು ಲೈಸೆನ್ಸ್ ನೀಡದ ಬಗ್ಗೆ ಸದಸ್ಯ ಸಿ.ಡಿ.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭಾ ಸದಸ್ಯೆ ರೇಣುಕಮ್ಮ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ಪಟ್ಟಣದಲ್ಲಿ ಸಮರ್ಪಕವಾಗಿ ನೀರು ಬೀಡುತ್ತಿಲ್ಲ ಎಂದರಲ್ಲದೆ  ಪಟ್ಟಣದಲ್ಲಿ ಬೋರೆವೆಲ್ಗಳು ಎಷ್ಟು ಕೆಟ್ಟು ನಿಂತಿವೆ ಎಂದು ತಿಳಿಸಿಲ್ಲ ಹಾಗೂ 577 ಪೈಪ್ ಲೆಂತ್ಗಳ ಬಗ್ಗೆ ದಾಖಲೆ ನೀಡಿಲ್ಲ ಎಂದು ಆರೋಪಿಸಿದರು. 
  ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಮಾತನಾಡಿ, ಪಟ್ಟಣದಲ್ಲಿ ಬಡವರು ನಿವೇಶನಕ್ಕಾಗಿ ಅಜರ್ಿ ಹಾಕಿದ್ದರೂ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ನಿವೇಶನಗಳನ್ನು ನೀಡಿಲ್ಲ ಎಂದ ಅವರು, ಮೊದಲು ಲೈಸೆನ್ಸ್ ಗೊಂದಲ ನಿವಾರಿಸಿ  ಹಾಗೂ ವಾಡರ್್ಗಳಲ್ಲಿ ಸರಿಯಾಗಿ ನೀರು ಸರಬರಾಜು ಮಾಡಬೇಕೆಂದು ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, ಡೆಂಗ್ಯೂ ಜ್ವರದ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ಿಸಿ ಮುನ್ನೇಚ್ಚರಿಕೆ ವಹಿಸಲಾಗುವುದು, ಇನ್ನು ಮುಂದೆ ಬೋರ್ವೆಲ್ಗಳ ವಿವರ ಹಾಗೂ ಹೊಸದಾಗಿ ಕೊರಿಸಿದ ಬೋರ್ವೆಲ್ಗೆ ಎಷ್ಟು ವೆಚ್ಚವಾಯಿತು, ಮಾಸಿಕ ಜಮಾ ಖಚರ್ುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರಲ್ಲದೆ,  ಪುರಸಭಾ ಆಡಳಿತದಲ್ಲಿ ಲೋಪ ದೋಷಗಳೂ ಆಗದಂತೆ ಎಚ್ಚರವಹಿಸುತ್ತಿದ್ದೇನೆ ಎಂದರು. ಪಟ್ಟಣದಲ್ಲಿ 61ಬೋರೆವೆಲ್ಗಳಿದ್ದು 32 ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರಲ್ಲದೆ, ಹೊಸ ಬೋರ್ವೆಲ್ಗಳಿಗೆ ಮೋಟರ್ ಅಳವಡಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಮನೆ ಕಟ್ಟಲು ಅಗತ್ಯವಿರವ  ಲೈಸೆನ್ಸ್ ಸಮಸ್ಯೆಯನ್ನು ಮೇಲಾಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಹಾಗೂ ಪ್ರತಿ ವಾಡರ್್ಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಅರಿತು ಬಗೆಹರಿಸುತ್ತೇನೆ ಎಂದರು. ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ ಏನೇ ಸಮಸ್ಯೆ ಇದ್ದರೂ ಅಧಿಕಾರಿ ಹಾಗೂ ಸದಸ್ಯರ ಮುಖಾಂತರ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷರು ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ರೂಪ, ನೇತ್ರಾವತಿ, ಧರಣಿ.ಬಿ.ಲಕ್ಕಪ್ಪ, ಪ್ರೇಮದೇವರಾಜು, ಗೀತಾರಮೇಶ್, ಸಿ.ಎಸ್.ರಮೇಶ್, ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ, ರಾಜಶೇಖರ್, ಪುರಸಭಾಮುಖ್ಯಾಧಿಕಾರಿ ಶ್ರೀಕಾಂತ್ ಉಪಸ್ಥಿತರಿದ್ದರು.