Wednesday, August 31, 2011



ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು ತಮ್ಮ ಬದುಕಿಗಾಗಿ ಅಳವಡಿಸಿಕೊಳ್ಳಿ : ಕೆ.ಎನ್.ರಂಗನಾಥ್ಚಿಕ್ಕನಾಯಕನಹಳ್ಳಿ,ಆ.31 ; ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು ಅದನ್ನು ಕೇವಲ ವೃತ್ತಿಗಾಗಿ ಅವಲಂಬಿಸದೆ ತಮ್ಮ ಜೀವನದ ಬದುಕಿಗಾಗಿ ಅಳವಡಿಸಿಕೊಳ್ಳಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ಆರ್.ರಂಗನಾಥ್ ಹೇಳಿದರು. ತಾಲ್ಲೂಕಿನ ಕಾತ್ರಿಕೆಹಾಳ್ ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾಸಂಘ ಹಾಗೂ ಇಕೋಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಿಗೆ ವಿದ್ಯಾಥರ್ಿಗಳೇ ದೇವರು, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದೇ ನಿಜವಾದ ಸೇವೆಯಾಗಿದೆ, ಗ್ರಾಮಾಂತರ ಪ್ರದೇಶದ ವಿದ್ಯಾಥರ್ಿಗಳು ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು, ಈ ದಿನಗಳಲ್ಲಿ ಹಳ್ಳಿಗಾಡಿನ ವಿದ್ಯಾಥರ್ಿಗಳೇ ಹೆಚ್ಚಿನ ಪ್ರಗತಿ ಸಾಧಿಸುತ್ತಿರುವುದು. ವಿದ್ಯಾಥರ್ಿಗಳಿಗೆ ಜ್ಞಾನಾರ್ಜನೆ ಅತ್ಯಂತ ಮುಖ್ಯವಾಗಿದ್ದು ಅದರ ಜೊತೆಗೆ ಕ್ರೀಡಾ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪರಿಸರವನ್ನು ಹಾಳುಮಾಡಬೇಡಿ, ಸಂರಕ್ಷಿಸಿ ಎಂದು ಕರೆ ನೀಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣಪ್ಪ ಮಾತನಾಡಿ ಮರಗಳನ್ನು ಕಡಿದರೆ ನಮ್ಮ ಉಸಿರೇ ನಿಂತು ಹೋದಂತೆ. ಗಾಳಿಗಾಗಿ, ಮಳೆಗಾಗಿ, ಬದುಕಿಗಾಗಿ ಕಾಡುಗಳು ಬೇಕು. ಇಲ್ಲಿನ ಬೆಟ್ಟಗುಡ್ಡಗಳು ಅಮೂಲ್ಯ ಖನಿಜ ಸಂಪತ್ತಿನ ಗಣಿಗಳು ಇವುಗಳ ರಕ್ಷಣೆಯ ಜವಾಬ್ದಾರಿ ನಮ್ಮದು, ಪರಿಸರವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳೋಣ ಎಂದರು. ಮಾಜಿ ಪುರಸಭಾ ಸದಸ್ಯ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪರಿಸರ ಕುರಿತು ಇಡೀ ಜಗತ್ತೇ ಚಿಂತಿಸುವ ಕಾಲ ಬಂದಿದೆ, ಗಣಿಗಾರಿಕೆ ಸ್ಥಗಿತಕ್ಕೆ ಸುಪ್ರೀಂ ಕೋಟರ್್ ಆದೇಶಿಸಿರುವುದು ಸಮಾಧಾನಕರ ವಿಷಯ ಎಂದರಲ್ಲದೆ ಸ್ಥಳೀಯ ಪರಿಸರ ಅಭಿವೃದ್ದಿಗೆ ಕೂಡಿ ಶ್ರಮಿಸೋಣ ಎಂದರು. ತೀರ್ಥಪುರ ಪಂಚಾಯ್ತಿಯ ಅಧ್ಯಕ್ಷ ಮಂಜುನಾಥ್ ಮಾತನಾಡಿ ಕಾಲೇಜಿನ ಕೆಲಸಗಳಿಗೆ ನಾವು ಎಂದೆಂದಿಗೂ ಸಹಕರಿಸುತ್ತೇವೆ ಎಂದರು. ಸಮಾರಂಭದಲ್ಲಿ ಪಂಚಾಯ್ತಿಯ ಉಪಾಧ್ಯಕ್ಷ ಗೋವಿಂದರಾಜು, ಪ್ರಾಚಾರ್ಯರಾದ ಎನ್.ಇಂದಿರಮ್ಮ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಪನ್ಯಾಸಕ ಲಕ್ಷ್ಮಯ್ಯ ಸ್ವಾಗತಿಸಿದರೆ ಮೇ.ನಾ.ತರಂಗಿಣಿ ನಿರೂಪಿಸಿ, ನಾಗಮ್ಮ ವಂದಿಸಿದರು.

Tuesday, August 30, 2011



ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟಚಿಕ್ಕನಾಯಕನಹಳ್ಳಿ,ಆ.30 : ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 3ರ ಶನಿವಾರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ. ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ನರಸಿಂಹಮೂತರ್ಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಪ್ರೌ.ಶಾ.ಮು.ಶಿ ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.
ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಿಚಿಕ್ಕನಾಯಕನಹಳ್ಳಿ,ಆ.30 : ಸಾರ್ವಜನಿಕರು ನೈಸಗರ್ಿಕ ಬಣ್ಣಗಳಿಂದ ಕೂಡಿದ ಚಿಕ್ಕ ಗಣೇಶ ಮೂತರ್ಿಗಳನ್ನು ಪೂಜಿಸಿ ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಬೇಕೆಂದು ಪುರಸಭಾ ಕಾಯರ್ಾಲಯ ಪ್ರಕಟಣೆಯಲ್ಲಿ ಕೋರಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಲು ಪುರಸಭಾ ಕಾಯರ್ಾಲಯ ಕೆಲವು ಮಾರ್ಗಸೂಚಿಗಳನ್ನು ತಿಳಿಸಿದ್ದು ಪ್ಲಾಷ್ಪರ್ ಆಫ್ ಪ್ಯಾರೀಸ್ನಿಂದ ನಿಮರ್ಾಣಗೊಂಡ ಗಣೇಶ ಮೂತರ್ಿಗಳನ್ನು ಬಳಕೆ ಮಾಡದೆ ಜೇಡಿ ಮಣ್ಣಿಿನಿಂದ ತಯಾರಿಸಿದ ಗಣೇಶ ಮೂತರ್ಿಗಳನ್ನು ಉಪಯೋಗಿಸುವುದು, ಗಣೇಶ ಮೂತರ್ಿಗಳನ್ನು ವಿಸಜರ್ಿಸುವ ಮುನ್ನ ಹೂವು, ವಸ್ತ್ರ ಮುಂತಾದ ಪೂಜಾ ಸಾಮಗ್ರಿಗಳನ್ನು ಮತ್ತು ಅಲಂಕಾರಿಕ ವಸ್ತುಗಳು( ಕಾಗದ ಮತ್ತು ಪ್ಲಾಸ್ಟಿಕ್) ಮುಂತಾದವುಗಳನ್ನು ತೆಗೆಯಬೇಕು, ಜೈವಿಕ ಕ್ರಿಯೆಗೆ ಒಳಪಡುವ ವಸ್ತುಗಳನ್ನು ಪ್ರತ್ಯೇಕಿಸಬೇಕು, ಗಣೇಶ ವಿಗ್ರಹಕ್ಕೆ ಬಳಸಿರುವ ರಾಸಾಯನಿಕ ಬಣ್ಣಗಳಲ್ಲಿ ಕ್ರೋಮಿಯಂ, ಸೀಸ, ಸತು ಮತ್ತು ತಾಮ್ರದ ಅಂಶಗಳಿದ್ದು ಗಣೇಶ ಮೂತರ್ಿಗಳನ್ನು ಕರೆ ಬಾವಿ, ಜಲಮೂಲಗಳಿಗೆ ಹಾಕಿದರೆ ನೀರಿನ ಗುಣ ಮಟ್ಟ ಕಲುಷಿತಗೊಳ್ಳುತ್ತದೆ, ನೀರಿನ ಮಾಲಿನ್ಯ ಉಂಟಾಗಿ ನೀರಿನ ಜಲಚರ ಜೀವಿಗಳಿಗೆ ತೊಂದರೆ ಉಂಟಾಗಲಿದ್ದು ಆದ್ದರಿಂದ ಚಿಕ್ಕನಾಯಕನಹಳ್ಳಿ ಕೆರೆಯ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿರುವುದರಿಂದ ಗಣೇಶ ವಿಸರ್ಜನೆಯನ್ನು ಕೆರೆಯಲ್ಲಿ ಮಾಡಬಾರದೆಂದು ಕೋರಿದ್ದಾರೆ.

Monday, August 29, 2011



ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಕೊಳ್ಳಿ : ತಹಶೀಲ್ದಾರ್ ಉಮೇಶ್ಚಂದ್ರ
ಚಿಕ್ಕನಾಯಕನಹಳ್ಳಿ,ಆ.29 : ಗ್ರಾಮೀಣ ಪ್ರದೇಶಗಳ ಪಡಿತರ ಚೀಟಿಗಳನ್ನು ಪಂಚಾಯ್ತಿಗಳಲ್ಲಿನ ಪಂಚತಂತ್ರ ವ್ಯವಸ್ಥೆಯಲ್ಲಿ, ಮನೆ ಸಂಖ್ಯೆಗೆ ಪಡಿತರ ಚೀಟಿ ಹೊಂದಾಣಿಕೆ ಮಾಡುವ ಕಾರ್ಯ ನಡೆಯುತ್ತಿದ್ದು ಪಡಿತರ ಚೀಟಿದಾರರು ಸೆಪ್ಟಂಬರ್ 4ರೊಳಗೆ ಈ ವ್ಯವಸ್ಥೆ ಹೊಂದಾಣಿಕೆ ಮಾಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ಉಮೇಶ್ಚಂದ್ರ ತಿಳಿಸಿದ್ದಾರೆ. ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಹೋಗಿ ಆಸ್ತಿ ತೆರಿಗೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಅಂತಹ ಪಡಿತರ ಚೀಟಿಗಳಿಗೆ ಸೆಪ್ಟಂಬರ್ 2011ರ ಮಾಹೆಯಿಂದ ಪಡಿತರ ಹಾಗೂ ಸೀಮೆಎಣ್ಣೆ ಹಂಚಿಕೆ ಸ್ಥಗಿತಗೊಳಿಸಲಾಗುತ್ತದೆ ಆದ್ದರಿಂದ ಪಡಿತರ ಚೀಟಿದಾರರು ಸೆಪ್ಟಂಬರ್ 4ರೊಳಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಹೋಗಿ ಮನೆ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Sunday, August 28, 2011



ಜೈ ಹೋ, ಅಣ್ಣಾ ಜೈ ಹೋ

ಮಹಾತ್ಮ ಗಾಂಧೀಜಿಯಂತಾದ ಅಣ್ಣಾ ಹಜಾರೆ
ಪಾಂಡುರಂಗ.ಜೆ

ಚಿಕ್ಕನಾಯಕನಹಳ್ಳಿ :ಭಾರತಕ್ಕೆ ದೊರಕಿದ ಎರಡನೇ ಮಹಾತ್ಮ ಗಾಂಧೀ, ಎರಡನೇ ಸ್ವತಂತ್ರ ಸಂಗ್ರಾಮ ಸೃಷ್ಠಿಸಿದ ಕತೃ ಅಣ್ಣಾ ಹಜಾರೆರವರಿಗೆ ಜೈ ಹೋ, ಜೈ ಹೋ ಎಂಬ ಕೂಗು ದೇಶದಲ್ಲೆಲ್ಲಾ ಮೊಳಗುತ್ತಿದೆ.ಗಾಂಧೀಜಿಯವರ ತತ್ವಗಳಂತೆ ಶಾಂತಿ, ಅಹಿಂಸೆಯನ್ನು ಪಾಲಿಸಿ ಭ್ರಷ್ಠಾಚಾರ ನಿಮರ್ೂಲನೆಗಾಗಿ ಜನಲೋಕಪಾಲ್ ಮಸೂದೆ ಜಾರಿಗೆ ತರಲು ಉಪವಾಸ ಸತ್ಯಾಗ್ರಹ ನಡೆಸಿ ಗಾಂಧೀಯವರಂತೆ ಉತ್ತಮ ನಾಯಕತ್ವದೊಂದಿಗೆ ಭ್ರಷ್ಠಾಚಾರದ ವಿರುದ್ದ ಸಮಾಜವನ್ನು ಕಟ್ಟಿ ಜನಸಮಾನ್ಯರ ಮುಂದಿನ ದಿನಗಳ ಭವಿಷ್ಯಕ್ಕೆ ದಿಕ್ಕು ತೋರಿಸಿದ ಗಾಂದಿವಾಧಿ ಹಜಾರೆರವರ ಜೀವನವನ್ನು ಅವಲೋಕಿಸಿ ಅವರಂತೆ ನಾಯಕತ್ವದ ಗುಣಗಳನ್ನು ಹೊಂದುವುದು ನಮ್ಮೆಲ್ಲರ ಕರ್ತವ್ಯ. ಕಿಶನ್ ಬಾಬರೋ ಹಜಾರೆರವರು ಮಹಾರಾಷ್ಟ್ರ ರಾಜ್ಯ ಅಹಮದ್ನಗರದ ಬಿನ್ಗಾರ್ನಲ್ಲಿ ಜನವರಿ 15 1940ರಂದು ಜನಿಸಿದರು. ಅವರು 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ಭಾರತೀಯ ಸೇನೆಯ ಟ್ರಕ್ ಚಾಲಕನಾಗಿ ಕಾರ್ಯ ನಿರ್ವಹಿಸಿದರು. ಸೇನೆಯಲ್ಲಿದ್ದಾಗಲೇ ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಆಚಾರ್ಯ ವಿನೊಬಾಬಾವೆರವರ ಲೇಖನ, ಪುಸ್ತಕಗಳನ್ನು ಓದಿ ಸ್ಪೂತರ್ಿಗೊಂಡು 1975ರಲ್ಲಿ ಸೇನೆಕಾರ್ಯಕ್ಕೆ ಸ್ವಯಂ ನಿವೃತ್ತಿ ಹೊಂದಿ ತಮ್ಮ ಗ್ರಾಮಕ್ಕೆ ಮರಳಿದರು. ಗ್ರಾಮಕ್ಕೆ ಮರಳಿದ ಅವರು ಗ್ರಾಮದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಮುಂದಾದರು, ಅಲ್ಲಿನ ಗ್ರಾಮಸ್ಥರನ್ನು ಒಗ್ಗೂಡಿಸಿ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸತ್ಯಾಗ್ರಹ ಆರಂಭಿಸಿದರು, ಇಲ್ಲಿಂದ ಹಜಾರೆರವರು ಸತ್ಯಾಗ್ರಹ ಆರಂಭಿಸಿ ಆ ಗ್ರಾಮದಲ್ಲಿ ಮಧ್ಯಪಾನ, ಧೂಮಪಾನ ನಿಷೇಧಿಸಿ ಗ್ರಾಮಗಳಿಗೆ ಮಾದರಿಯದರು, ಈ ಮೂಲಕ ಸತ್ಯಾಗ್ರಹ ಆರಂಭಿಸಿದ ಅವರು ದೇಶದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನು ತೊಲಗಿಸಲು ಕೇಂದ್ರ ಸಕರ್ಾರದ ವಿರುದ್ದ ನಿಂತು ಭ್ರಷ್ಠಾಚಾರವನ್ನು ಹೋಗಲಾಡಿಸಲು ಮೊದಲ ಬಾರಿ ಸತ್ಯಾಗ್ರಹ ನಡೆಸಿದರು ಈ ಸಂದರ್ಭದಲ್ಲಿ ಅಣ್ಣಾರವರಿಗೆ ಲಕ್ಷಗಟ್ಟಲೆ ಬೆಂಬಲ ಸೂಚಿಸಿದರೂ ಕೇಂದ್ರ ಸಕರ್ಾರಕ್ಕೆ ಆಗಷ್ಟ್ 15ನೇ ತಾರೀಖಿನೊಳಗೆ ಜನಲೋಕಪಾಲ ಮಸೂದೆ ಜಾರಿಗೆ ತರಬೇಕೆಂದು ಕಾಲವಕಾಶ ನೀಡಿದ್ದರು. ಅಣ್ಣಾರವರು ನೀಡಿದ್ದ ಕಾಲವಕಾಶ ಮುಗಿದರೂ ಸಕರ್ಾರ ಮಸೂದೆಯನ್ನು ಅಂಗೀಕರಿಸದಿದ್ದಾಗ ಹಜಾರೆರವರು ಶಾಂತಿಯುತವಾಗಿ 13 ದಿನ 288 ಗಂಟೆಯ ವರೆಗೆ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಕಿರಣ್ಬೇಡಿ, ಸಂತೋಷ್ಹೆಗಡೆ ಇನ್ನಿತರರ ಅಣ್ಣಾ ಬೆಂಬಲಿಗರು ದೇಶದಲ್ಲೆಲ್ಲ ಹಜಾರೆರವರ ನಾಯಕತ್ವದೊಂದಿಗೆ ಬೆಂಬಲಿಸಿ ಸಕರ್ಾರಕ್ಕೆ ನಡುಕ ಹುಟ್ಟಿಸಿ ಮಸೂದೆ ಅಂಗೀಕಾರವನ್ನು ಜಾರಿಗೆ ತರಲು ಒತ್ತಾಯಿಸಿ ಅದರಲ್ಲಿ ವಿಜಯಶಾಲಿಯಾದರು. ಇವುಗಳನ್ನೆಲ್ಲ ಗಮನಿಸಿದರೆ ಗಾಂಧಿ ತತ್ವಗಳ ಅಹಿಂಸೆ, ಶಾಂತಿ ಮಂತ್ರ ಹಾಗೂ ಜನಶಕ್ತಿಯಿಂದ ಯಾವುದೇ ಅನ್ಯಾಯದ ವಿರುದ್ದ ಹೋರಾಡಿದರೆ ಗೆಲುವು ಸಾಧಿಸಬಹುದು ಎಂಬುದನ್ನು ಮತ್ತೊಮ್ಮೆ ಹಜಾರೆರವರು ಸಾಬೀತುಪಡಿಸಿದ್ದಾರೆ, ಏನಾದರೂ ಸರಿ ಮಹಾತ್ಮ ಗಾಂಧಿಜಿಯಂತೆ, ಎರಡನೇ ಗಾಂಧಿಯಾಗಿ ಪ್ರಬಲ ಅಣ್ವಸ್ತ್ರದಂತೆ ಅಣ್ಣಾ ಹಜಾರೆರವರ ನಾಯಕತ್ವ ದೇಶದ ಜನತೆಗೆ ದೊರಕಿ ಭ್ರಷ್ಟಚಾರಿಗಳಿಗೆ ನಡುಕ ಹುಟ್ಟಿಸಿರುವ ಅಣ್ಣಾರವರಿಗೆ ಇದುವೇ ನಮ್ಮ ಜೈ ಹೋ.

Saturday, August 27, 2011



ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶವನ್ನು ಕಟ್ಟಬೇಕು ಚಿಕ್ಕನಾಯಕನಹಳ್ಳಿ,ಆ.26: ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶವನ್ನು ಕಟ್ಟುವ ಹೊಣೆ ಹೊತ್ತಿರುವ ನಾವು, ಶಿಕ್ಷಣವನ್ನು ನೀಡುವ ಜೊತೆಗೆ ಮಕ್ಕಳ ಭವಿಷ್ಯದ ಬದುಕಿಗೆ ಅಗತ್ಯವಿರುವ ಉದ್ಯೋಗದ ಭದ್ರತೆಯನ್ನು ನೀಡುವುದು ಅವಶ್ಯವೆಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ಮೇಲನಹಳ್ಳಿ ಮೊರಾಜರ್ಿ ದೇಸಾಯಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಇಲಾಖೆಯ ಮೊರಾಜರ್ಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಶಾಲೆಗಳ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.94 ರಷ್ಟು ಬಂದಿರುವುದು ಸಕರ್ಾರಿ ವಸತಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ನೀಡಿದೆ ಎಂದರಲ್ಲದೆ, ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವಲ್ಲಿ ಸಕರ್ಾರ ಸಾಕಷ್ಟು ಶ್ರಮಿಸುತ್ತಿದೆ ಎಂದರು. ಈ ಶಾಲೆಗಳಿಗೆ ಅಗತ್ಯವಿರುವ ಒಳಾಂಗಣ ಕ್ರೀಡಾಂಗಣ ಹಾಗೂ ಸುಸಜ್ಜಿತ ಗ್ರಂಥಾಲಯವನ್ನು ಮಂಜೂರು ಮಾಡುವುದಾಗಿ ತಿಳಿಸಿದರು.ನಾವು ಓದುವ ಕಾಲದಲ್ಲಿ ಶಾಲೆಗಳಲ್ಲಿ ಇಷ್ಟೋಂದು ಸವಲತ್ತುಗಳಿರಲಿಲ್ಲ, ಶಾಲೆಗಳಲ್ಲಿ ಕುಳಿತುಕೊಳ್ಳಲು ಮಣಿಗಳಾಗಲಿ, ಶಿಕ್ಷಕರಿಗೆ ಖುಚರ್ಿಗಳಿಗೂ ತತ್ವಾರವಿತ್ತು. ಈಗ ಆಗಿಲ್ಲ ಸರ್ವಶಿಕ್ಷಣ ಯೋಜನೆಯಿಂದಾಗಿ ಎಲ್ಲಾ ಸಕರ್ಾರಿ ಶಾಲೆಗಳು ಉತ್ತಮವಾಗಿವೆ ಎಂದರಲ್ಲದೆ, ಸಕರ್ಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಇಷ್ಟೇಲ್ಲಾ ಸೌಲಭ್ಯ ನೀಡುತ್ತಿದೆ ಎಂದರು, ಅಬ್ದುಲ್ ಕಲಾಂರವರು ತಮ್ಮ ಶಿಕ್ಷಣ ಸಂದರ್ಭದಲ್ಲಿ ಮನೆಗಳಿಗೆ ಪತ್ರಿಕೆಯನ್ನು ಸರಬರಾಜು ಮಾಡುವ ಮೂಲಕ ಅದರಲ್ಲಿ ಬಂದ ಹಣದಲ್ಲಿ ತಮ್ಮ ಶಿಕ್ಷಣವನ್ನು ನಡೆಸುತ್ತಿದ್ದರು ಎಂದರಲ್ಲದೆ, ಇಂದಿನ ಮಕ್ಕಳು ಮುಂದಿನ ದಿನಗಳಲ್ಲಿ ಅಬ್ದುಲ್ ಕಲಾಂರಂತಹ ವ್ಯಕ್ತಿತ್ವ ಉಳ್ಳವರಾಗಬೇಕೆಂದರು,ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಈ ಶಾಲೆಯ ವಾತಾವರಣ ಸುಂದರವಾಗಿದೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಪಟ್ಟಣದ ಹೊರವಲಯದಲ್ಲಿರುವುದು ಮತ್ತು ಕೆರೆ ಪಕ್ಕದಲ್ಲಿರುವುದರಿಂದ ಮಕ್ಕಳ ಭದ್ರತೆಗೂ ಹೆಚ್ಚು ಒತ್ತು ನೀಡಬೇಕೆಂದರು. ಚಿಕ್ಕನಾಯಕನಹಳ್ಳಿಗೆ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಪ್ರಾರಂಭಿಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಇದಕ್ಕೆ ಸಚಿವರು ಅನುಮತಿ ನೀಡಬೇಕೆಂದರಲ್ಲದೆ, ಹಂದನಕೆರೆ, ಕಾತ್ರಿಕೆಹಾಳ್ ಮತ್ತು ಶೆಟ್ಟೀಕೆರೆಗಳಿಗೆ ವಿದ್ಯಾಥರ್ಿ ನಿಲಯವನ್ನು ಆರಂಭಿಸಲು ಸಚಿವರು ಒಪ್ಪಿಗೆ ನೀಡಬೇಕೆಂದರು.ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಬರುವ ಹೆಚ್ಚಿನ ಸವಲತ್ತುಗಳನ್ನು ನೀಡಬೇಕೆಂದರು.ಕಾರ್ಯಕ್ರಮದಲ್ಲಿ ತಿಪಟೂರು ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯರುಗಳಾದ ಜಿ. ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ತಾ.ಪಂ. ಉಪಾಧ್ಯಕ್ಷೆ ಬಿಬಿ ಫಾತಿಮಾ, ತಾ.ಪಂ.ಸದಸ್ಯರುಗಳಾದ ಚೇತನ ಗಂಗಾಧರ್, ಎಚ್.ಆರ್.ಶಶಿಧರ್, ಎಂ.ಎಂ.ಜಗಧೀಶ್, ನಿರಂಜನಮೂತರ್ಿ, ಹೊನ್ನೆಬಾಗಿ ಅಧ್ಯಕ್ಷರಾದ ಕಲ್ಪನಾ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರುಗಳಾದ ಶರತ್ಕುಮಾರ್, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ.ಮುದ್ದುಕುಮಾರ್ ಸ್ವಾಗತಿಸಿದರೆ, ಶ್ಯಾಮ್ ಸುಂದರ್ ವಂದಿಸಿದರು.

Friday, August 26, 2011


ಇಂದು ಮೊರಾಜರ್ಿ ದೇಸಾಯಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ
  • ನಾಲ್ಕುವರೆ ಎಕರೆ ಪ್ರದೇಶದಲ್ಲಿ 4.60 ಕೋಟಿ ರೂಗಳ ಕಟ್ಟಡ
  • ಶೌಚಾಲಯದ ನೀರು ಪುನರ್ ಬಳಕೆಯ ತಂತ್ರಜ್ಞಾನ
  • ಸಮಾಜ ಕಲ್ಯಾಣ ಇಲಾಖೆಯ ಸಚಿವರಿಂದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಆ.26 : ಆರರಿಂದ ಎಸ್.ಎಸ್.ಎಲ್.ಸಿ ವರೆಗಿನ ಬಡ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಸತಿ ಸಹಿತ ಶಾಲೆಯಾಗಿ ರೂಪುಗೊಂಡಿರುವ ಮೊರಾಜರ್ಿ ದೇಸಾಯಿ ವಸತಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೊಸ ಭರವಸೆಯನ್ನು ಮೂಡಿಸುತ್ತಿದೆ
ಈ ನಿಟ್ಟಿನಲ್ಲಿ ಸಕರ್ಾರ ತಾಲ್ಲೂಕಿಗೆ ಒಂದರಂತೆ ಇಂತಹ ಶಾಲೆಗಳನ್ನು ಆರಂಭಿಸಿದೆ, ಈ ಪೈಕಿ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊರವಲಯದ ಮೇಲನಹಳ್ಳಿ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನರ್ಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿಮರ್ಿಸಿರುವ ಮೊರಾಜರ್ಿದೇಸಾಯಿ ವಸತಿ ಶಾಲೆ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ.
ಸಮಾಜ ಕಲ್ಯಾಣ ಹಾಗೂ ಬಂಧಿಖಾನೆ ಸಚಿವ ಎ.ನಾರಾಯಣಸ್ವಾಮಿ ಈ ಕಟ್ಟಡವನ್ನು ಇದೇ 27ರಂದು (ಇಂದು) ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಸುಮಾರು 250 ವಿದ್ಯಾಥರ್ಿಗಳ ವಾಸ್ತವ್ಯಕ್ಕೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಿಮರ್ಿಸಿರುವ ಸುಸಜ್ಜಿತ ಈ ಕಟ್ಟಡ ನಾಲ್ಕುವರೆ ಎಕರ ಪ್ರದೇಶದಲ್ಲಿ ಹರಡಿಕೊಂಡಿದೆ. ಒಂದುವರೆ ಎಕರೆ ಪ್ರದೇಶದಲ್ಲಿ 6 ಬ್ಲಾಕ್ಗಳಲ್ಲಿ ಕಟ್ಟಡ ರೂಪುಗೊಂಡಿದ್ದರೆ 3 ಎಕರೆ ಪ್ರದೇಶದಲ್ಲಿ ಆಟದ ಮೈದಾನ ಸಿದ್ದವಾಗಿದೆ.
ನಾಲ್ಕು ಕೋಟಿ ಅರವತ್ತು ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಿರುವ ಈ ಶಾಲೆ ಆರು ಬ್ಲಾಕ್ಗಳನ್ನು ಹೊಂದಿದೆ. ಶಾಲಾ ಸಂಕಿರ್ಣ, ಬಾಲಕರ ವಸತಿ ಗೃಹ, ಅಡುಗೆ ಮತ್ತು ಭೋಜನ ಶಾಲೆ, ಬಾಲಕಿಯರ ಗೃಹ, ಬೋಧಕ ವಸತಿ ಗೃಹ, ಬೋಧಕೇತರ ವಸತಿ ಗೃಹಗಳೆಂದು ವಿಂಗಡಿಸಲಾಗಿದೆ.
ಶಾಲಾ ಸಂಕಿರ್ಣವು ಒಂದು ನೂರು ಚದುರದ ವಿಶಾಲ ಕಟ್ಟಡದಲ್ಲಿ ಹರಡಿಕೊಂಡಿದ್ದು 12 ವಿಶಾಲ ಕೊಠಡಿಗಳಿವೆ. 4 ದೊಡ್ಡ ಕ್ಲಾಸ್ ರೂಂಗಳಿವೆ ಒಂದು ಪ್ರಯೋಗಾಲಯ, ಒಂದು ಗ್ರಂಥಾಲಯ ಒಂದು ಕಂಪ್ಯೂಟರ್ ಹಾಲ್, ಒಂದು ಯೋಗ ಕೊಠಡಿ, ಪ್ರಿನ್ಸಿ ಆಫೀಸ್, ಸ್ಟಾಪ್ ರೂಂ, ಸ್ಟೋರ್ ರೂಂಗಳನ್ನು ಒಳಗೊಂಡಿದೆ.
ಬಾಲಕರ ವಸತಿ ಗೃಹವು 80 ಚದುರ ಕಟ್ಟಡವೊಂದಿದ್ದು 12 ರೂಂಗಳನ್ನು ಹೊಂದಿದೆ, ಬಾಲಕರು ಓದಲು ಹಾಗೂ ಮಲಗಲು ವಿಶಾಲವಾದ ಪ್ರದೇಶ ಇದಾಗಿದೆ. ಅಡುಗೆ ತಯಾರಿಸಲು ಹಾಗೂ ಊಟ ಮಾಡಲು 35 ಚದುರದಲ್ಲಿ ಕಟ್ಟಲಾಗಿರುವ ಈ ಕಟ್ಟಡದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಕುಳಿತು, ಊಟ ಮಾಡುವ ವ್ವವಸ್ಥೆ ಇದೆ.
ಬಾಲಕಿಯರ ವಸತಿ ಗೃಹವು 80 ಚದುರ ಇದ್ದು 12 ಕೊಠಡಿಗಳಿವೆ, ಇದರ ಪಕ್ಕ ಬೋಧಕರ ವಸತಿ ಗೃಹಗಳಿವೆ ಡಬಲ್ ಬೆಡ್ ರೂಂನ 4 ಮನೆಗಳ 28 ಚದುರ ವಿಶಾಲತೆಯನ್ನು ಹೊಂದಿದೆ. ಬೋಧಕೇತರರ ವಸತಿಗಾಗಿ ಸಿಂಗಲ್ ಬೆಡ್ರೂಂನ 4 ಮನೆಗಳು 15 ಚದುರದಲ್ಲಿದೆ.
ಶೌಚದ ನೀರು ಪುನರ್ ಬಳಕೆ : ಈ ಕಟ್ಟಡದ ಮತ್ತೊಂದು ವಿಶೇಷವೆಂದರೆ ಶೌಚಾಲಯಕ್ಕೆ ಬಳಸುವ ನೀರನ್ನು ಪುನ: ಬಳಸಲು ಯೋಗ್ಯವಾಗುವಂತೆ ಮಾಡುವ ಡಿವ್ಯಾಟ್ ತಂತ್ರಜ್ಞಾನವನ್ನು ಬಳಸಿದ್ದು ಈ ತಂತ್ರಜ್ಞಾನವನ್ನು ಅಳವಡಿಸಲು ನ್ಯೂಜಿಲೆಂಡ್ನ ಇಂಜನಿಯರ್ರವರನ್ನು ಇಲ್ಲಿಗೆ ಕರೆಯಿಸಿ ಈ ವ್ಯವಸ್ಥೆಯನ್ನು ಅಳವಡಿಸಿರುವುದು ಈ ಕಟ್ಟಡದ ವಿಶೇಷವಾಗಿದೆ. ಮೊರಾಜರ್ಿ ಶಾಲೆಗಳ ಕಟ್ಟಡಗಳ ಪೈಕಿ ರಾಜ್ಯದ ಯಾವುದೇ ಭಾಗದಲ್ಲಿ ಈ ತರಹದ ತಂತ್ರಜ್ಞಾನವನ್ನು ಅಳವಡಿಸಿಲ್ಲ, ಇದೇ ಮೊದಲು ಮೇಲನಹಳ್ಳಿ ಶಾಲೆಗೆ ಅಳವಡಿಸಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾಧಿಕಾರಿ ಸಿ.ಟಿಮುದ್ದುಕುಮಾರ್ ತಿಳಿಸಿದ್ದಾರೆ.
ಮಳೆ ನೀರು ಜಲ ಮರು ಪೂರ್ಣ, ಸೋಲಾರ್ ಅಳವಡಿಕೆಯಂತಹ ಪರಿಸರ ಸ್ನೇಹಿ ಕ್ರಮಗಳನ್ನು ಈ ಕಟ್ಟಡ ಹೊಂದಿದೆ.
ಇಷ್ಟು ಚೆಂದದ ಕಟ್ಟಡವನ್ನು ಇದೇ 27ರಂದು ಮಧ್ಯಾಹ್ನ 3ಕ್ಕೆ ಮಕ್ಕಳ ಉಪಯೋಗಕ್ಕೆ ಸಚಿವ ಎ.ನಾರಾಯಣಸ್ವಾಮಿ ವಿನಿಯೋಗಿಸಲು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ಜಿ.ಪಂ.ಅಧ್ಯಕ್ಷ ಡಾ.ಬಿ.ಎನ್.ರವಿನಾಗರಾಜಯ್ಯ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯರುಗಳು ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ. ಜನಪ್ರತಿನಿಧಿಗಳು ಈ ಶಾಲೆಗೆ ಸಂಬಂಧಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Thursday, August 25, 2011

ಕಂಬಳಿ ನೇಯ್ಗೆಯಲ್ಲಿ ತಾಲ್ಲೂಕಿಗೆ ಉತ್ತಮ ಹೆಸರಿದೆ ಚಿಕ್ಕನಾಯಕನಹಳ್ಳಿ,ಆ.25 :

ರಾಜ್ಯಕ್ಕೆ ತಾಲ್ಲೂಕಿನ ಕಂಬಳಿ ನೇಯ್ಗೆಯ ನೇಕಾರರು ಉತ್ತಮ ಕೊಡುಗೆ ನೀಡಿದ್ದು ಅದನ್ನು ಉಳಿಸಲು ನೇಕಾರರು ತರಬೇತಿ ಮೂಲಕ ಇತರರಿಗೆ ನೇಕಾರಿಕೆಯ ಬಗ್ಗೆ ತಿಳಿಸಿ ನೇಕಾರಿಕೆಯನ್ನು ಉಳಿಸಬೇಕು ಎಂದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ಹೇಳಿದರು. ಪಟ್ಟಣದ ಕಂಬಳಿ ಸೊಸೈಟಿಯಲ್ಲಿ ನಡೆದ ಕ್ಲಸ್ಟರ್ ಯೋಜನೆಯ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನೇಕಾರಿಕೆ ಉಳಿಯಬೇಕೆಂದರೆ ನೇಕಾರರು ಇತರರಿಗೆ ನೇಯ್ಗೆಯ ಬಗ್ಗೆ ತರಬೇತಿ ನೀಡಿ ಜವಳಿ ಉದ್ಯಮವನ್ನು ಉಳಿಸಿ ಮುಂದಿನ ಪೀಳಿಗೆಗೆ ನೇಯ್ಗೆಯ ಬಗ್ಗೆ ತಿಳುವಳಿಕೆ ನೀಡಬೇಕು ಎಂದ ಅವರು ನೇಕಾರರಿಗೆ ಸಕರ್ಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳು ತಿಳಿಸಬೇಕು ಎಂದರು. ಜವಳಿ ಇಲಾಖೆಯ ಉಪನಿದರ್ೇಶಕ ಸುನಿಲ್ಕುಮಾರ್ ಮಾತನಾಡಿ ಇಲಾಖೆಯವರು ಜಿಲ್ಲಾದ್ಯಂತ ನೇಕಾರರನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ, ಆದ್ದರಿಂದ ನೇಕಾರರು ಈ ಸೌಲಭ್ಯದ ಬಗ್ಗೆ ಗಮನಿಸಿ ಆಥರ್ಿಕವಾಗಿ ಸದೃಡರಾಗಬೇಕು ಆಗ ಮಾತ್ರ ಯೋಜನೆಗೆ ಬೆಲೆ ಬರುತ್ತದೆ ಎಂದರು. ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮುಂದಿನ ದಿನಗಳಲ್ಲಿ ಗುಡಿ ಕೈಗಾರಿಕೆಗಳು ನಂಬಿರುವ ಕುಟುಂಬಗಳಿಗೆ ಆಥರ್ಿಕ ಭದ್ರತೆ ಒದಗಿಸುವಂತಹ ಕಾರ್ಯಕ್ರಮಗಳನ್ನು ಸಕರ್ಾರ ಜಾರಿಗೆ ತರಲು ಪ್ರೋತ್ಸಾಹ ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದ ಅವರು ಸಕರ್ಾರಿ ಸೌಲಭ್ಯ ಪಡೆಯುವುದು ಈ ಸಮಾಜದ ಪ್ರತಿಯೊಬ್ಬರ ಹಕ್ಕು ಎಂದರು. ಸಮಾರಂಭದಲ್ಲಿ ಕಂಬಳಿ ಸೊಸೈಟಿ ಉಪಾಧ್ಯಕ್ಷ ಲೋಕೇಶ್, ಬನಶಂಕರಿ ಸೊಸೈಟಿ ಅಧ್ಯಕ್ಷ ಕಿರಣ್ಕುಮಾರ್ ಕಂಬಳಿ ಸೊಸೈಟಿ ನಿದರ್ೇಶಕರುಗಳಾದ ಗೋವಿಂದಪ್ಪ, ಅಳವೀರಪ್ಪ, ಬೀರಪ್ಪ ಮುಂತಾದವರಿದ್ದರು.
ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ 26ಸಾವಿರ ಸಂಘ ಸ್ಥಾಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಚಿಕ್ಕನಾಯಕನಹಳ್ಳಿ,ಆ.25 : ಕೇವಲ ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಲ್ಲಿ 26ಸಾವಿರ ಸಂಘ ಸ್ಥಾಪಿಸಿ ಹಲವಾರು ಜನರಿಗೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನಿದರ್ೇಶಕ ಪುರುಷೋತ್ತಮ್ ಹೇಳಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಡೆದ ಗ್ರಾಮ ಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ 1500 ಸಂಘ ಸ್ಥಾಪಿಸಿ ಪಟ್ಟಣದಲ್ಲಿ 180 ಸಂಘವನ್ನು ಸ್ಥಾಪಿಸಿ ಸಂಘದ ಸದಸ್ಯರಿಗೆ ಸಾಲ ಹಾಗೂ ಅವರಿಗೆ ಆಥರ್ಿಕ ಸಹಾಯವನ್ನು ಯೋಜನೆಯ ವತಿಯಿಂದ ಮಾಡಲಾಗಿದೆ ಎಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳವು 800 ವರ್ಷಗಳ ಇತಿಹಾಸವಿದ್ದು ಸವಧರ್ಮ ಸಮಾನತೆಯಿಂದ ಚತರ್ುದಾನವನ್ನು ಕ್ಷೇತ್ರದಲ್ಲಿ ನೀಡಲಾಗುತ್ತಿದೆ ಎಂದರು.ಪುರಸಭಾ ಸದಸ್ಯೆ ಶಾರದ ಶಂಕರ್ಬಾಬು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಡಾ.ವೀರೇಂದ್ರಹೆಗ್ಗಡೆರವರು ತಂದಿರುವ ಈ ಯೋಜನೆಯ ಸವಲತ್ತುಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದ ಅವರು ಸಂಘಟನೆಯ ಪ್ರತಿಯೊಬ್ಬರು ಸಂಘದ ಅಭಿವೃದ್ದಿಗಾಗಿ ಸಂಘದ ಒಗ್ಗಟ್ಟಾಗಿ ಸಂಘದ ಬೆಳವಣಿಗೆಯನ್ನು ಮುಂದುವರಿಸಲು ತಿಳಿಸಿದರು. ಸಮಾರಂಭದಲ್ಲಿ ತಾ.ಪತ್ರಕರ್ತರ ಸಂಘದ ಸಹಕಾರ್ಯದಶರ್ಿ ಸಿ.ಬಿ.ಲೋಕೇಶ್, ಮೇಲ್ವಿಚಾರಕರಾದ ರವಿಕುಮಾರ್, ಸೇವಾ ಪ್ರತಿನಿಧಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.




















Wednesday, August 24, 2011

ಅರಸುರವರು ತಂದ ಮೀಸಲಾತಿಯಿಂದ ಹಿಂದುಳಿದ ವರ್ಗಗಳ ಅಭಿವೃದ್ದಿ : ಸಿ.ಟಿ.ಮುದ್ದುಕುಮಾರ್ಚಿಕ್ಕನಾಯಕನಹಳ್ಳಿಆ.24: ದೇವಾರಾಜ್ ಅರಸರವರು ಅಂದು ಹಿಂದುಳಿದ ವರ್ಗಗಳ ಪರವಾಗಿ ನಿಂತು ಮೀಸಲಾತಿ ತರದೇ ಹೋಗಿದ್ದರೆ ಈಗಿರುವ ನೌಕರರ ಪೈಕಿ ಶೇ.10 ರಷ್ಟು ಹಿಂದುಳಿದ ಜನಾಂಗದವರು ಸಕರ್ಾರಿ ನೌಕರಿಯನ್ನು ಕಾಣಲಾಗುತ್ತಿರಲಿಲ್ಲ ಎಂದು ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ. ಮುದ್ದುಕುಮಾರ್ ವಿಶ್ಲೇಷಿಸಿದರು. ಪಟ್ಟಣದ ಹಳ್ಳಿಕಾರ ಬೀದಿ ಸಕರ್ಾರಿ ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಿ.ಬಿ. ಎಸ್. ಅಭಿಮಾನಿ ಬಳಗ ಹಾಗೂ ತಾಲ್ಲೂಕು ಪತ್ರಕರ್ತರ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಸಕರ್ಾರಿ ಸವಲತ್ತುಗಳು ಸಿಗಬೇಕೆಂಬ ಆಶಯ ಅರಸುರವದಾಗಿತ್ತು ಎಂದರು. ಇಂದು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಾಕಷ್ಟು ಸವಲತ್ತುಗಳು ಸಿಗುತ್ತಿದೆ, ದೇವರಾಜ್ ಅರಸ್ ನಿಗಮವು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಗಮನದಲ್ಲಿಟ್ಟು ಕೊಂಡು ಅವರಿಗೆ ಹೆಚ್ಚಿನ ಒತ್ತು ನೀಡಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು ಈ ಬಗ್ಗೆ ಹೆಚಿನ ಮಾಹಿತಿ ಪಡೆಯಲು ದೇವರಾಜ್ ಅರಸ್ ಅಭಿವೃದ್ಧಿ ನಿಗಮವನ್ನು ಸಂಪಕರ್ಿಸಲು ಕೋರಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಕಣ್ಣಯ್ಯ ಮಾತನಾಡಿ ಅರಸು ರವರು ತಮ್ಮ ಮಂತ್ರಿ ಮಂಡಲದಲ್ಲಿ ಮಾಜಿ ಶಾಸಕ ದಿ ಎನ್. ಬಸವಯ್ಯನವರನ್ನು ಕರೆದು ಮಂತ್ರಿ ಪದವಿಯನ್ನು ನೀಡಿದ್ದರು. ಅರಸುರವರು ಅಂದು ಬಸವಯ್ಯನರಿಗೆ ಮಂತ್ರಿ ಪದವಿ ಕೊಡದೆ ಇದಿದ್ದರೆ ಸ್ವತಂತ್ರಾ ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಂತ್ರಿಗಿರಿ ಈ ತಾಲ್ಲೂಕಿಗೆ ಇಂದಿನ ವರೆಗೆ ದೊರಕದೆ ಗಗನ ಕುಸುಮವಾಗಿ ಉಳಿದಿರುವುದು ಎಂದರು. ದಿಬಸವಯ್ಯನವರೂ ಅರಸುರವರ ಮೇಲೆ ಅಷ್ಠೇ ನಿಷ್ಠೆಯನ್ನು ಇಟ್ಟಿದ್ದರು ಎಂದರು. ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ. ರೇಣುಕಸ್ವಾಮಿ ಮಾತನಾಡಿ ದೇವರಾಜ್ ಅರಸ್ ರವರನ್ನು ಚಿ.ನಾ.ಹಳ್ಳಿಗೆ ಕರೆಸಿದ್ದ ನಮ್ಮ ಸಂಘ, ರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದ ಅವಕಾಶ ನಮ್ಮ ಸಂಘಕ್ಕೆ ದೊರೆತಿತ್ತು ಎಂದು ಸ್ಮರಿಸಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷ ಸಿ ಎಲ್. ದೊಡ್ಡಯ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಿ.ಬಿ.ಎಸ್. ಅಭಿಮಾನಿ ಬಳಗದ ಸಂಚಾಲಕ ಸಿ.ಎಸ್.ನಟರಾಜ್ ಕ.ರ. ವೇ. ಅಧ್ಯಕ್ಷ ಸಿ.ಟಿ. ಗುರುಮೂತರ್ಿ ತಾ ಪತ್ರಕರ್ತರ ಸಂಘದ ಕಾರ್ಯದಶರ್ಿ ಸಿ ಹೆಚ್ ಚಿದಾನಂದ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಾಲೆಯ ಬಡ ವಿದ್ಯಾಥರ್ಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.ಶಾಲೆಯ ಮು.ಶಿ. ಜಯಲಕ್ಷ್ಮಮ್ಮ ಸ್ವಾಗತಿಸಿದರೆ ಶಶಿಕಲಾ ನಿರೂಪಿಸಿ ಶಂಷದ್ ಉನ್ನೀಸ್ ವಂದಿಸಿದರು.

ಕೇಂದ್ರ ಸಕರ್ಾರವು ಮಸೂದೆ ಜಾರಿಗೆ ತರುವುದು ಅನಿವಾರ್ಯ : ಎಂ.ವಿ.ನಾಗರಾಜ್ರಾವ್ ಚಿಕ್ನಾಯಕನಹಳ್ಳಿ,ಆ.24: ಜನಲೋಕಪಾಲ್ ಮಸೂಸೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಇಟೀ ಭಾರತದ ಒಂದು ನೂರು ಕೋಟಿ ಜನ ಬೆಂಬಲಿಸಿರುವುದನ್ನು ಕೇಂದ್ರ ಸಕರ್ಾರ ಅರಿತು ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಭಿಪ್ರಾಯಪಟ್ಟರು. ಪಟ್ಟಣದ ನೆಹರು ವೃತ್ತದಲ್ಲಿ ಕುಂಚಾಂಕುರ ಕಲಾ ಸಂಘ ಹಾಗೂ ವಾಣಿ ಚಿತ್ರಕಲಾ ಕಾಲೇಜ್ ಸಂಯುಕ್ತವಾಗಿ ಅಣ್ಣಾ ಹಜಾರೆರವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಚಿತ್ರ ಬಿಡಿಸುವ ಮೂಲಕ ಧರಣಿ ಸತ್ಯಾತಗ್ರಹವನ್ನು ಏರ್ಪಡಿಸಿತ್ತು. ದೇಶದಲೆಲ್ಲಾ ಸಾಮೂಹಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ವೃತ್ತಿ ನಿರತರೂ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದು ವಿದ್ಯಾಥರ್ಿಗಳ ಭಾಗವಹಿಸುವಿಕೆ ಉತ್ತಮವಾಗಿದೆ, ನಮ್ಮ ತಾಲ್ಲೂಕಿನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕುಂಚಾಂಕುರ ಕಲಾ ಸಂಘ ಹಾಗೂ ವಾಣಿ ಚಿತ್ರಕಲಾ ಕಾಲೇಜ್ನವರು ಭ್ರಷ್ಠಾಚಾರತೆಯನ್ನು ಖಂಡಿಸಿ ಅಣ್ಣಾ ಹಜಾರೆರವರನ್ನು ಬೆಂಬಲಿಸಿ ಬರೆದಿರುವ ಚಿತ್ರಗಳು ಮನೋಜ್ಞಾವಾಗಿದೆ ಎಂದರು. ಈ ಸಂದರ್ಭದಲ್ಲಿ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕರ್ಾರದಿಂದ ಅನುಕೂಲ ಪಡೆಯುವ ಎಲ್ಲರನ್ನೂ ಈ ಕಾಯಿದೆ ಅಡಿ ಸೇರಿಸಬೇಕೆಂದರಲ್ಲದೆ ಇತ್ತೀಚಿಗೆ ಸಕರ್ಾರದಿಂದ ಮಠಗಳು ಪ್ರಯೋಜನ ಪಡೆಯುತ್ತಿದ್ದು ಮಠಾಧೀಶರನ್ನು ಈ ವ್ಯಾಪ್ತಿಗೆ ಒಳಪಡಿಸಬೇಕೆಂದರು. ಕಲಾವಿದ ಸಿದ್ದು ಜಿ.ಕೆರೆ, ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದ ಮನೆ ಮಾತನಾಡಿದರು.
ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯಂತೆ ಅಧಿಕಾರಿಗಳು ಕೆಲಸ ನಿರ್ವಹಿಸಿ
ಚಿಕ್ಕನಾಯಕನಹಳ್ಳಿ,ಆ.24 : ಅಧಿಕಾರಿಗಳು ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಅಧಿಕಾರವನ್ನು ನಡೆಸಿ ಎಂದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ಸಲಹೆ ನೀಡಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತಾ.ವೀರಶೈವ ಸಮಾಜ ಅಕ್ಕಮಹಾದೇವಿ ಮಹಿಳಾ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಸಾಸಲು ಗ್ರಾಮದ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿ.ಸೌಮ್ಯ ಸುಧಾಕರ್ರವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ನೊಂದು, ಬೆಂದವರಿಗೆ ಧ್ವನಿಯಾಗಿ ಬದುಕಿ , ವ್ಯಕ್ತಿಗಳಿಗೆ ನಂಬಿಕೆ, ಕರ್ತವ್ಯ ಆತ್ಮವಿಶ್ವಾಸ ಸಮಯ ಪಾಲನೆ, ಪ್ರಾಮಾಣಿಕ ನಿಷ್ಠೆ ಆದರ್ಶಗಳ ಮೂಲಕ ಬಡವರಿಗೆ ತಮ್ಮ ಅಧಿಕಾರದಿಂದ ನೆರವಾದವರು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಅಧಿಕಾರ ಬಂದಾಗ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದ ಅವರು ಗ್ರಾಮೀಣ ಪ್ರದೇಶದಿಂದ ಉನ್ನತದಜರ್ೆಗೆ ಏರಿದ ಸೌಮ್ಯರವರ ಪೋಷಕರು ಹಾಗೂ ಪತಿಯವರ ಪ್ರೋತ್ಸಾಹ ಮೆಚ್ಚುವಂತಹದು, ಶಕ್ತಿ ಇಲ್ಲದ ಹಿಂದುಳಿದವರ ಪೋಷಕರಿಗೆ ರಕ್ಚಣೆ ನೀಡಿದರೆ ಭಗವಂತನ ಸೇವೆ ಮಾಡಿದಂತೆ ಕಷ್ಠ ಇರುವವರು ಅನ್ಯಾಯಕ್ಕೆ ಒಳಗಾದವರು ನ್ಯಾಯ ಕೋರಿ ತಮ್ಮ ಬಳಿಗೆ ಬಂದಾಗ ಅವರಿಗೆ ಸ್ಪಂದಿಸಿ ಪ್ರಾಮಾಣಿಕತೆ ತೋರ್ಪಡಿಸಬೇಕು ಎಂದರು.

Tuesday, August 23, 2011












ಆಥರ್ಿಕವಾಗಿ ಹಿಂದುಳಿದವರಿಗೆ ನೆರವಾಗಲು ಸಿದ್ದವಾಗಿರುವ ಡಿಸಿಸಿ ಬ್ಯಾಂಕ್ಚಿಕ್ಕನಾಯಕನಹಳ್ಳಿ,ಆ.23 :

ಆಥರ್ಿಕವಾಗಿ ಹಿಂದುಳಿದು ಬೇರೆಯವರ ಮನೆಯಲ್ಲಿ ಜೀತಕ್ಕಿರುವ ಬಡವರ್ಗದವರಿಗೆ ಬಡ್ಡಿರಹಿತ ಸಾಲನೀಡುವುದಾಗಿ ಕೆ.ಎನ್.ರಾಜಣ್ಣನವರು ತಿಳಿಸಿರುವುದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು. ಪಟ್ಟಣದ ಮಾರುತಿ ನಗರದಲ್ಲಿ ನಡೆದ ದಿ.ದೇವರಾಜ ಅರಸು ನೆನಪು ದಿನದ ಹಾಗೂ ಸಾಲಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಅರಸುರವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ದಾರ್ಶನಿಕರು ಅವರ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಿಂದುಳಿದ ವರ್ಗವಾದ ದಕ್ಕಲಿಗರು, ಸುಡುಗಾಡು ಸಿದ್ದರು ಇಂತಹ ಜನಾಂಗದ ಅಭಿವೃದ್ದಿಗಾಗಿ ಜಿಲ್ಲಾ ಬ್ಯಾಂಕ್ ಶ್ರಮಿಸುತ್ತಿದೆ ಅಲ್ಲದೆ ಈ ಜನಾಂಗಗಳಿಗೆ ಸಂಘಗಳನ್ನು ರಚಿಸಿ ಸಾಲಸೌಲಭ್ಯ ನೀಡುವ ಮೂಲಕ ಈ ಜನಾಂಗದ ಸಂಘಟನೆಗೆ ಶ್ರಮಿಸುತ್ತಿರುವುದಾಗಿ ಹಾಗೂ ಈ ಜನಾಂಗದಲ್ಲಿ 24 ಕುಟುಂಬಗಳಿದ್ದು 2 ಸಂಘ ರಚಿಸಿ ಕುಟುಂಬಕ್ಕೆ ತಲಾ ಹತ್ತುಸಾವಿರದಂತೆ ನೀಡಿ ಅವರಿಗೆ ಆಥರ್ಿಕವಾಗಿ ಸಹಾಯ ಮಾಡುತ್ತಿರುವದಾಗಿ ತಿಳಿಸಿದ ಅವರು ತಾಲ್ಲೂಕಿನಾದ್ಯಂತ ಸುಮಾರು 6 ಕೋಟಿರೂಗಳಷ್ಠು ಸ್ವಸಹಾಯ ಸಂಘಗಳಿಗೆ ಜಿಲ್ಲಾ ಬ್ಯಾಂಕಿನಿಂದ ಸಾಲ ಕೊಡಿಸಿರುವುದಾಗಿ ತಿಳಿಸಿದರು. ಅಲೆಮಾರಿ ಜನಾಂಗದ ಮುಖಂಡ ಡಾ.ರಘುಪತಿ ಮಾತನಾಡಿ ಭಾರತ ದೇಶದಲೆಲ್ಲಾ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ ದೇವರಾಜು ಅರಸುರವರು ಧ್ವನಿ ಇಲ್ಲದ, ಹಿಂದುಳಿದ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸಿದವರು ಎಂದ ಅವರು ಜಿಲ್ಲಾ ಬ್ಯಾಂಕ್ ಅಲೆಮಾರಿ ಮಹಿಳೆಯರಿಗೆ ಆಥರ್ಿಕವಾಗಿ ಸಹಾಯ ಮಾಡುತ್ತಿರುವುದು ಈ ಸಮಾಜದ ಸಂಘಟನೆಯ ಬಲವರ್ಧನೆಗೆ ಮೆಟ್ಟಿಲಾಗಿದ್ದು ಸಂಘಟನೆಯವರು ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿ ಜ್ಞಾನಾರ್ಜನೆ ಮಾಡುವ ಮೂಲಕ ಸಂಘಟಿಸಬೇಕು ಎಂದರು. ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಅಲೆಮಾರಿ ಜನಾಂಗಕ್ಕೆ ಶಾಸಕರು 40 ಮನೆ ನಿಮರ್ಿಸಲು ತಿಳಿಸಿದ್ದು ಮುಂದಿನ ದಿನಗಳಲ್ಲಿ ಅಲೆಮಾರಿ ನಿವೇಶನದ ಮನೆಗಳ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ, ಪುರಸಭಾ ಸದಸ್ಯ ರಾಜು, ಗೋ.ನಿ.ವಸಂತ್ಕುಮಾರ್, ಕೇಶವಮೂತರ್ಿ, ಶಾಮ್ ಮುಂತಾದವರಿದ್ದರು.

Monday, August 22, 2011















ತುತರ್ು ಪರಿಸ್ಥಿತಿ ಬೇಡ, ಜನ ಲೋಕ ಪಾಲ್ ಜಾರಿಯಾಗಲಿ: ಕೆ.ಎಸ್.ಕೆ.ಚಿಕ್ಕನಾಯಕನಹಳ್ಳಿ,ಆ.22 : ಪ್ರತಿಭಟನೆ, ಧರಣಿಗಳನ್ನು ತನ್ನ ಸ್ವತ್ತು ಎನಿಸಿಕೊಂಡು ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷಕ್ಕೆ ಅಣ್ಣಾ ರವರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ಪಕ್ಷದ ದಯಾನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಆರೋಪಿಸಿದರು. ಪಟ್ಟಣದ ನೆಹರು ಸರ್ಕಲ್ನಲ್ಲಿ ಭಾಜಪ ತನ್ನ ಪ್ರತಿಭಟನೆಯನ್ನು ಭಜನೆ ಕಾರ್ಯಕ್ರಮದ ಮೂಲಕ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುತರ್ು ಪರಿಸ್ಥಿತಿ ಜಾರಿಗೆ ಬರುವುದು ಬೇಡ, ಜನಲೋಕಪಾಲ ಮಸೂದೆ ಜಾರಿಗೆ ಬರಲಿ ಎಂಬ ಘೋಷಣೆಯೊಂದಿಗೆ ಧರಣಿ ನಡೆಸಿತ್ತಿದೆ ಎಂದರು. ಕೇಂದ್ರ ಸಕರ್ಾರದ ದ್ವಿಮುಖ ನೀತಿಯಿಂದ ಭ್ರಷ್ಠಾಚಾರ ನೀತಿ ಹೆಚ್ಚುತ್ತಿದೆ, ಬಾಬಾರಾಮ್ದೇವ್ರವರು ರಾಮಲೀಲ ಮೈದಾನದಲ್ಲಿ ಭ್ರಷ್ಠಾಚಾರ ನೀತಿ ವಿರೋಧಿಸಿ ಸತ್ಯಾಗ್ರಹ ನಡೆಸಿದಾಗ ಕೇಂದ್ರ ಸಕರ್ಾರ ಬಂಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತಂದಿದ್ದು, ಅಣ್ಣಾ ಹಜಾರೆ ರವರು ಭ್ರಷ್ಠಾಚಾರ ವಿರೋಧಿಸಲು ಪ್ರತಿಭಟನಾಕಾರರಿಗೆ ಕರೆ ನೀಡಿದ ತಕ್ಷಣ ಕೇಂದ್ರ ಸಕರ್ಾರ ಬಂಧಿಸಿದ್ದು, ದೇಶದಲ್ಲಿ ಅನ್ಯಾಯದ ಕ್ರಾಂತಿ ಮೊಳಗುತ್ತಿದೆ ಎಂದ ಅವರು ಮಸೂದೆ ಜಾರಿಯಾಗುವ ಮೂಲಕ ಪ್ರದಾನಿ, ಪ್ರದಾನಿಯವರ ಕಾಯರ್ಾಲಯಮ, ನ್ಯಾಯಮೂತರ್ಿಗಳು ಸೇರಿದಂತೆ ಪ್ರತಿಯೊಬ್ಬರನ್ನೂ ಕಾನೂನಿನ ಕಾಯ್ದೆ ಒಳಗೆ ಬರುವಂತೆ ಒತ್ತಾಯಿಸುತ್ತಿದ್ದೇವೆ ಈ ಮೂಲಕ ಕೇಂದ್ರ ಸಕರ್ಾರ ಮಸೂದೆ ಜಾರಿಯಾಗಲು ಸ್ಪಂದಿಸಬೇಕು ಇಲ್ಲವಾದಲ್ಲಿ ಕ್ರಾಂತಿಕಾರಿ ಹೋರಾಟ ನಡೆಸಬೇಕಾಗುತ್ತದೆ ಎಂದರು. ಸತ್ಯಾಗ್ರಹದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮ್ಯಯ, ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಕಾರ್ಯದಶರ್ಿ ಹಳೆಮನೆ ಸುರೇಶ್, ಪಕ್ಷದ ಕಾರ್ಯಕರ್ತರಾದ ಮೈಸೂರಪ್ಪ, ವಿ.ಆರ್.ಮೇರುನಾಥ್, ಶ್ರೀನಿವಾಸಮೂತರ್ಿ, ಶರತ್ ಕುಮಾರ್ ಲಕ್ಷ್ಮಯ್ಯ, ಈಶ್ವರ್ಭಾಗವತ್, ಹನುಮಂತಪ್ಪ, ವಸಂತಯ್ಯ, ಮಮತ ಮುಂತಾದವರಿದ್ದರು.
ಅಂದು ಅರಸು ತೆಗೆದುಕೊಂಡ ನಿಧರ್ಾರಗಳಿಂದ ಇಂದಿಗೂ ಅವರು ಅಜರಾಮರಚಿಕ್ಕನಾಯಕನಹಳ್ಳಿ,ಆ.22: ಇಂದಿರಾ ಗಾಂಧಿಯವರ 20 ಅಂಶಗಳ ಯಶಸ್ವಿ ಅನುಷ್ಠಾನ, ಭಾಗ್ಯಜ್ಯೋತಿ, ಮಲ ಹೊರುವ ಪದ್ದತಿ ರದ್ದು ಸೇರಿದಂತೆ ಬಡವರ ಏಳಿಗೆಗೆ, ತುಳಿತಕ್ಕೆ ಒಳಗಾದ ಜನರಿಗೆ ನೇರವಾಗಿ ನೆರವಾದ ಧೀಮಂತ ನಾಯಕ ದೇವರಾಜ್ ಅರಸು ರವರು ಅಜರಾಮರಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ ಹಂದನಕೆರೆ ಹೋಬಳಿ ಸೈಯದ್ ಸಾಬ್ ಪಾಳ್ಯದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ್ ಅರಸ್ ರವರ 96ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಸು ರವರು ಉಳ್ಳವರ ಹಾಗೂ ಮೇಲ್ವರ್ಗಗಳ ವಿರೋಧ ಕಟ್ಟಿಕೊಂಡರು ಅಂಜದೇ ಅಂದು ತೆಗೆದುಕೊಂಡ ನಿಧರ್ಾರಗಳಿಂದಾಗಿ ಇಂದು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶತಮಾನಗಳಿಂದ ಸಮಾಜದಿಂದ ತುಳಿತಕ್ಕೆ ಒಳಗಾದ ಜನರು ಇಂದು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರಲ್ಲದೆ, ಇಂದಿರಾಗಾಂಧಿಯವರು ಘೋಷಿಸಿದ 20 ಅಂಶಗಳ ಕಾರ್ಯಕ್ರಮವನ್ನು ಅರಸು ರವರು ಯಶಸ್ವಿಯಾಗಿ ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿದರು ಎಂದರು. ಇಂತಹ ನಾಯಕನನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ನಮ್ಮ ವೇದಿಕೆ 1988 ರಿಂದಲೂ ಅರಸು ರವರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ, ಅವರ ಹೆಸರಿನಲ್ಲಿ ಕಳೆದ 23 ವರ್ಷಗಳಿಂದಲೂ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಸಲಕರಣೆಗಳನ್ನು ವಿತರಿಸುತ್ತಿದೆ ಎಂದರು. ಅರಸು ರವರಿಗೆ ನುಡಿ ನಮನ ಸಲ್ಲಿಸಿದ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಅರಸು ರವರು ತಮ್ಮ 21ನೇ ವರ್ಷದಲ್ಲಿ ಎಂ.ಎಲ್.ಎ ಆಗಿದ್ದಲ್ಲದೆ, ಒಮ್ಮೆ ವಿಧಾನ ಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ತನ್ನ ಜನಪ್ರಿಯತೆಯನ್ನು ಇಡೀ ದೇಶಕ್ಕೆ ತಿಳಿಸಿದರು ಎಂದರು. ಉಳುವವನೇ ಭೂಮಿಯ ಒಡೆಯ ಎಂಬ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಅವರು ಬಹುದೊಡ್ಡ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದರು. ಕಾರ್ಯಕ್ರಮದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ರಾಜಕೀಯದ ಕನಸನ್ನು ಕಾಣದ ಹಲವು ಜನಪರ ವ್ಯಕ್ತಿಗಳನ್ನು ಅಧಿಕಾರಕ್ಕೆ ತರುವ ಮೂಲಕ ತನ್ನ ಪ್ರಭಾವವನ್ನು ಬೆಳಿಸಿಕೊಂಡಿದ್ದಲ್ಲದೆ, ಯುವ ಸಮೂಹವನ್ನು ಮುಖ್ಯವಾಹಿನಿಗೆ ತಂದರು ಅವರು ಅಂದು ಬೆಳೆಸಿದ ಕುಡಿಗಳು ಇಂದಿಗೂ ಸಂಸತ್ತು, ವಿಧಾನ ಸಭೆಗಳಲ್ಲಿ ದೊಡ್ಡ ಶಕ್ತಿಯಾಗಿ ಕಾಣಸಿಗುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಹಂದನಕೆರೆ ಜಿ.ಪಂ.ಸದಸ್ಯ ಜಾನಮ್ಮ ರಾಮಚಂದ್ರಯ್ಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು, ತಾ.ಪಂ.ಸದಸ್ಯ ನಿರಂಜನಮೂತರ್ಿ, ತಾಲೂಕು ಅರಸು ಸಮಾಜದ ಅಧ್ಯಕ್ಷ ನಾಗರಾಜ್ ಅರಸ್, ಮತ್ತಿಘಟ್ಟ ಗ್ರಾ.ಪ. ಅಧ್ಯಕ್ಷ ಎಂ.ಎಸ್.ಉಮೇಶ್, ಗ್ರಾ.ಪಂ.ಸದಸ್ಯ ಸಿದ್ದರಾಮಯ್ಯ, ಉಪನ್ಯಾಸಕ ಸದಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲ್ಲಿಗೆರೆ ಗ್ರಾ.ಪಂ. ಸದಸ್ಯ ತಾತಯ್ಯ, ಶಿವಲಿಂಗಯ್ಯ, ಮಹಬೂಬ್ ಸಾಬ್, ನಿಂಗರಾಜ್, ಲಕ್ಷ್ಮಣ್, ಮನ್ಸೂರ್ ಪಾಷ, ರಾಮಚಂದ್ರಯ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಶಿವಮ್ಮ ಪ್ರಾಥರ್ಿಸಿದರೆ, ಗಾಂಧಿನಗರ ಅನಂತು ಸ್ವಾಗತಿಸಿ, ಶಿಕ್ಷಕ ಎ.ಸೋಮಶೇಖರ್ ನಿರೂಪಿಸಿ ಶಿಕ್ಷಕ ನಾಗರಾಜ್ ವಂದಿಸಿದರು.

Thursday, August 18, 2011










ಡಿ.ದೇವರಾಜು ಅರಸು ರವರ 96ನೇ ಜಯಂತಿ ಸಂಭ್ರಮೋತ್ಸವಚಿಕ್ಕನಾಯಕನಹಳ್ಳಿ,

ಆ.18 : ಡಿ.ದೇವರಾಜು ಅರಸು ರವರ 96ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಸಮಾರಂಭವನ್ನು ಇದೇ 20ರ ಶನಿವಾರ ಬೆಳಗ್ಗೆ 11 ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ತಾಲ್ಲೂಕಿನ ಹಂದನಕೆರೆ ಹೋಬಳಿ ಸೈಯದ್ಸಾಬ್ಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಸಾಹಿತಿ ಬಿಳಿಗೆರೆ ಕೃಷ್ಣಮೂತರ್ಿ ಉದ್ಘಾಟನೆ ನೆರವೇರಿಸಲಿದ್ದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ನುಡಿನಮನಗಳನ್ನಾಡಲಿದ್ದು ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯ ನಿರಂಜನಮೂತರ್ಿ ಸಮವಸ್ತ್ರ ವಿತರಣೆ ಮಾಡಲಿದ್ದು ತಾ.ಕಸಾಪ ಪ್ರಧಾನ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟ್ಟಿಗೆಮನೆ , ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್ ಪುಸ್ತಕ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷೆ ಎಂ.ಎಸ್.ಮಹೇಶ್, ಸದಸ್ಯ ಸಿದ್ದರಾಮಯ್ಯ, ವಿಶ್ವಕರ್ಮ ಸಮಾಜದ ಯುವಮುಖಂಡ ಶ್ರೀಧರಚಾರ್, ಸವಿತಾ ಸಮಾಜದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಗ್ರಾ.ಪಂ.ಸದಸ್ಯರಾದ ತಾತಯ್ಯ, ಪರಮೇಶ್, ಅರಸು ಸಮಾಜದ ಅಧ್ಯಕ್ಷ ನಾಗರಾಜರಸು, ಶಿವಲಿಂಗಯ್ಯ, ಮಹಬೂಬ್ಸಾಬ್, ಹನುಮಂತಯ್ಯ, ಆನಂದ್ ಉಪಸ್ಥಿತರಿರುವರು.

ಮುಂದುವರೆದ ಅಣ್ಣಾ ಹಜಾರೆರವರ ಬೆಂಬಲಿಗರ ಹೋರಾಟಚಿಕ್ಕನಾಯಕನಹಳ್ಳಿ,ಆ.18 :

ಕೇಂದ್ರ ಸಕರ್ಾರ ಅಣ್ಣಾ ಹಜಾರೆರವರಿಗೆ ಉಪವಾಸ ಸತ್ಯಾಗ್ರಹ ಮಾಡಲು ಅವಕಾಶ ನೀಡದಿರುವುದು ಖಂಡನೀಯವಾಗಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ ಎಂದು ಜನಪರ ವೇದಿಕೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಖಂಡಿಸಿದರು.ಪಟ್ಟಣದಲ್ಲಿ ಜನಪರ ವೇದಿಕೆ, ಕುಂಚಾಂಕುರ ಕಲಾ ಸಂಘ, ದಿವ್ಯಜ್ಯೋತಿ ಕಲಾ ಸಂಘ, ಕರವೇ ಸಂಘಗಳು ಅಣ್ಣಾ ಹಜಾರೆರವರ ಬಂಧನ ವಿರೋಧಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾಥರ್ಿಗಳೊಂದಿಗೆ ಸೈಕಲ್ ಜಾಥದಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಲ್ಲಾ ಪಕ್ಷಗಳಲ್ಲಿ ಭ್ರಷ್ಠರಿದ್ದು ಜನಲೋಕ ಪಾಲ ಮಸೂದೆ ಜಾರಿಗೆ ಬಂದರೆ ಭ್ರಷ್ಠಚಾರವನ್ನು ರಾಷ್ಟ್ರಮಟ್ಟದಲ್ಲಿ ಸ್ವಲ್ಪ ಕಡಿಮೆ ಮಾಡಬಹುದು ಇಲ್ಲದಿದ್ದರೆ ಸಂಪತ್ತು ಒಂದೇ ಕಡೆ ಕೇಂದ್ರೀಕೃತವಾಗಿ ಬಡವರು ಬಡವರಾಗಿಯೇ ಉಳಿಯುತ್ತಾರೆ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕುಂಚಾಂಕುರ ಕಲಾ ಸಂಘದ ಸಿ.ಹೆಚ್.ಗಂಗಾಧರ್, ಕರವೇ ನಿಂಗರಾಜು, ಸುರೇಶ್ಸಾಲ್ಕಟ್ಟೆ, ಮನ್ಸೂರ್ಪಾಷ ಮುಂತಾದವರು ಭಾಗವಹಿಸಿದ್ದರು.
ಸರಿಯಾದ ಮಾಹಿತಿ ನೀಡದ ಅಧಿಕಾರಿಗಳು, ಏಜನ್ಸಿಯವರುಚಿಕ್ಕನಾಯಕನಹಳ್ಳಿ,ಆ.18 :

el.ಪಿ.ಜೆ ಗ್ಯಾಸ್ ವಿತರಣೆಯ ವ್ಯವಸ್ಥೆಯು ಸಮಪರ್ಕವಾಗಿಲ್ಲ, ಜನಸಾಮಾನ್ಯರು ಗ್ಯಾಸ್ ಮುಗಿದು ತಿಂಗಳು ಕಳೆದರೂ ಸರಿಯಾಗಿ ಗ್ರಾಹಕರಿಗೆ ತಕ್ಷಣ ನೀಡದೆ, ಮುಂಚಿತವಾಗಿಯೇ ಗ್ಯಾಸ್ ಬುಕ್ ಮಾಡಿ 15ದಿನ ಕಳೆದು ಬನ್ನಿ ಎಂಬ ಬೇಜಾವಬ್ದಾರಿ ಸಬೂಬನ್ನು ಏಜನ್ಸಿಯವರು ನೀಡುತ್ತಾರೆಂದು ತಾ.ಪಂ.ಸದಸ್ಯ ಶಶಿಧರ್ ಆರೋಪಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಏಜನ್ಸಿಯವರು ಸಾಮಾನ್ಯ ಜನರಿಗೆ ಗ್ಯಾಸ್ ನೀಡಲು ಬೇಜಾವಬ್ದಾರಿತನ ತೋರುವುದಲ್ಲದೆ ಅವರೇ ಸುಪ್ರೀಂನಂತೆ ವತರ್ಿಸುತ್ತಾರೆ ಎಂದರು.ಆರೋಪಿಸುತ್ತಾ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಚಚರ್ಿಸಿದ ಅವರು ಹೊನ್ನೆಬಾಗಿ ತಾಲ್ಲೂಕು ಪಂಚಾಯಿತಿ ಮೇಲನಹಳ್ಳಿ ವ್ಯಾಪ್ತಿಗೆ ಸೇರಿದ ಮಸಾಲ್ತಿಗುಡ್ಲು, ಕರಿಯಪ್ಪನಗುಡ್ಲು ಗ್ರಾಮಗಳಿಗೆ ನಗರದ ಕೊಳಚೆ ನೀರು ಹರಿದು ಅಲ್ಲಿನ ತೋಟಗಳ ಮೂಲಕ ಕೊಳವೆಬಾವಿಗಳಿಂದ ಕುಡಿಯುವ ನೀರಿಗೆ ಸೇರಿಕೊಂಡು ಇಲ್ಲದ ಕಾಯಿಲೆಗಳು ಉತ್ಪತ್ತಿಯಾಗುತ್ತಿವೆ, ಇದೇ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿವೆ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ತಮಗೆ ಸಂಬಂಧಿಸಿಲ್ಲವೆಂದು ಇಲಾಖೆಯಿಂದ ಇಲಾಖೆಗೆ ದೂರು ನೀಡಿದ ಗ್ರಾಮಸ್ಥರನ್ನು ತಿರುಗಿಸುತ್ತಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ಮೇಲೆ ಕಿಡಿಕಾರಿದರು. ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರೇ ಖುದ್ದು ಸಭೆಗೆ ಅಭಿವೃದ್ದಿ ಬಗ್ಗೆ ಮಾಹಿತಿ ಕೇಳಿದರೆ ಸರಿಯಾಗಿ ಮಾಹಿತಿ ನೀಡುತ್ತಿಲ ತಾ.ಪಂ.ಸಭೆಗೆ ಕರೆದರೂ ಸರಿಯಾಗಿ ಬರುವುದಿಲ್ಲ ಎಂದು ತಾ.ಪಂ.ಸದಸ್ಯರಾದ ನಿರಂಜನ್, ಜಗದೀಶ್ ಆರೋಪಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಪಂಚಾಯಿತಿಯ ಸದಸ್ಯರು ಸವರ್ಾನುಮತದಿಂದ ತಾಲ್ಲೂಕು ಪತ್ರಕರ್ತರ ಭವನ ನಿಮರ್ಾಣಕ್ಕೆ ಹಳೆಯ ಪ್ರವಾಸಿ ಮಂದಿರದ ಪಕ್ಕದಲ್ಲಿ ನಿವೇಶನ ನೀಡಲು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿಪಾತೀಮ, ತಹಶೀಲ್ದಾರ್ ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್, ಹಾಗೂ ತಾ.ಪಂ.ಸದಸ್ಯರುಗಳು, ಗ್ರಾ.ಪಂ.ಅಧ್ಯಕ್ಷರುಗಳು, ಇಲಾಖಾಧಿಕಾರಿಗಳು ಹಾಜರಿದ್ದರು.

Wednesday, August 17, 2011























ಅಣ್ಣಾ ಹಜಾರೆ ಬಂಧನ ವಿರೋಧಿಸಿ ಬೀದಿಗಳಿದ ನಾನಾ ಸಂಘಟನೆಗಳು ್ಡ ವಕೀಲರ ಸಂಘ, ಬಿ.ಜೆ.ಪಿ, ಎ.ಬಿ.ವಿ.ಪಿ. ಕರವೇ, ದಿವ್ಯಜ್ಯೋತಿ ಕಲಾ ಸಂಘ, ಕುಂಚಾಕುರ ಸಂಘ, ಜನಪರ ವೇದಿಕೆಯ ಬೆಂಬಲ್ಡ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿದ ವಕೀಲರ ಸಂಘ್ಡ ಉಪವಾಸ ಕುಳಿತ ತಾ.ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ (ಮಿಲ್ಟ್ರಿ)ಚಿಕ್ಕನಾಯಕನಹಳ್ಳಿ,ಆ.17 : ಅಣ್ಣಾ ಹಜಾರೆರವರು ಒತ್ತಾಯಿಸಿರುವಂತೆ ಪ್ರಧಾನಿಗಳು ಸೇರುವಂತಹ ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಕರ್ಾರ ಹಜಾರೆರವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದವು.ಅಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್, ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ, ವಕೀಲರ ಸಂಘ, ಕುಂಚಾಂಕುರ ಕಲಾ ಸಂಘ, ಕನ್ನಡ ರಕ್ಷಣಾ ವೇದಿಕೆ ಹಾಗೂ ಭಾಜಾಪ ಪಕ್ಷದ ಮುಖಂಡರುಗಳು ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ಕೇಂದ್ರ ಸಕರ್ಾರದ ವಿರುದ್ದ ಘೋಷಣೆಗಳನ್ನು ಕೂಗಿದರು.ವಕೀಲರ ಸಂಘ ನ್ಯಾಯಾಲಯ ಕಲಾಪವನ್ನು ಸ್ಥಗಿತಗೊಳಿಸಿ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿತು ಈ ಸಂದರ್ಭದಲ್ಲಿ ವಕೀಲ ಎಂ. ಮಹಾಲಿಂಗಯ್ಯ ಮಾತನಾಡಿ, ಮಹಾತ್ಮ ಗಾಂಧಿ ನಂತರ ದೇಶದ ಜನತೆಗೆ ಒಳ್ಳೆಯ ನಾಯಕತ್ವ ಅಣ್ಣಾ ಹಜಾರೆರವರಿಂದ ದೊರತಿದೆ, ಅವರು 2ನೇ ಗಾಂಧಿಯಾಗಿ ಜನಲೋಕಪಾಲ್ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದಾರೆ ಇದಕ್ಕೆ ದೇಶದ ಎಲ್ಲಾ ಜನತೆಯ ಬೆಂಬಲ ಅವರಿಗೆ ಬೇಕು ಎಂದು ತಿಳಿಸಿದರು. ವಕೀಲ ಬಿ.ಕೆ.ಸದಾಶಿವಯ್ಯ ಮಾತನಾಡಿ ಎಲ್ಲಾ ರಾಜಕಾರಣಿಗಳು ಭ್ರಷ್ಠಾಚಾರದಲ್ಲಿ ಭಾಗಿಯಾಗಿದ್ದಾರೆ, ಇವರ ವಿರುದ್ದ ಸಿಡಿದೆದ್ದು ಶಾಂತಿಯುತವಾಗಿ ಸತ್ಯಾಗ್ರಹ ನಡೆಸುತ್ತಿದ್ದ ಹಜಾರೆರವರ ಬಂಧನ ಕ್ರೂರವಾಗಿದೆ ಎಂದು ತಿಳಿಸಿದ ಅವರು ಅಣ್ಣಾರವರು ನ್ಯಾಯಕ್ಕಾಗಿ ಹೋರಾಡುತ್ತಿರುವುದರಿಂದ ದೇಶದ ಎಲ್ಲಾ ಸಂಘ ಸಂಸ್ಥೆಗಳು ಅಣ್ಣಾರವರಿಗೆ ಬೆಂಬಲಿಸಬೇಕು ಎಂದರು. ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ಸಕರ್ಾರಕ್ಕೆ ಮನವಿ ಪತ್ರವನ್ನು ಅಪರ್ಿಸಿದರು, ಶಿರಸ್ತೆದ್ದಾರ್ ಬೊಮ್ಮಣ್ಣ ಮನವಿ ಪತ್ರ ಸ್ವೀಕರಿಸಿದರು. ಅಣ್ಣಾ ಹೋರಾಟ ಬೆಂಬಲಿಸಿ ಉಪವಾಸ: ಸಂಕೇತಕವಾಗಿ ಒಂದು ದಿನ ಉಪವಾಸ ಕುಳಿತಿರುವ ತಾ.ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ ಮಾತನಾಡಿ, ಅಣ್ಣಾರವರ ಜೊತೆ ಕೋಟ್ಯಂತರ ಭಾರತೀಯರು ಜನಲೋಕಪಾಲ ಮಸೂದೆ ಜಾರಿಯಾಗುವಂತೆ ಕೇಂದ್ರ ಸಕರ್ಾರದ ಮೇಲೆ ಒತ್ತಡ ಹೇರುತ್ತಿದ್ದು ಜನ ಲೋಕಪಾಲ ಮಸೂದೆ ಜಾರಿಯಾಗುವವರೆಗೆ ಎಲ್ಲಾ ಸಂಘಟನೆಗಳು ಭಾಗಿಯಾಗುವ ಮೂಲಕ ಅಣ್ಣಾ ರವರ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು. ಅಭಾವಿಪ ತಾಲ್ಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಅಣ್ಣಾ ಹಜಾರೆ ಬಂಧನ ಮಾಡಿರುವ ಸಕರ್ಾರಕ್ಕೆ ದೇಶ ಹಾಳುವ ನೈತಿಕ ಹಕ್ಕಿಲ್ಲ, ಸ್ವಾತಂತ್ರ ಪೂರ್ವದಲ್ಲಿ ವಿದೇಶಿಗರೂ ದೇಶದ ಸಂಪತ್ತನ್ನು ಲೂಟಿ ಮಾಡಿದರು ಇಂದು ನಮ್ಮ ದೇಶದ ಭ್ರಷ್ಠ ರಾಜಕಾರಣಿಗಳು ಕೋಟಿ ಕೋಟಿ ಹಣ ಲೂಟಿ ಮಾಡಿ ಸ್ವಿಸ್ ಬ್ಯಾಂಕ್ನಲ್ಲಿ ಇಟ್ಟಿದ್ದಾರೆ ಇವುಗಳನ್ನೆಲ್ಲ ದೇಶಕ್ಕೆ ಹಿಂತಿರುಗಿಸಬೇಕು ಎಂದರು. ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಭ್ರಷ್ಠ ಅಧಿಕಾರಿ, ಭ್ರಷ್ಠ ರಾಜಕಾರಣಿಗಳು ಇರಬೇಕಾದ ತಿಹಾರ್ ಜೈಲಿನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆರವರನ್ನು ಬಂದಿಸಿರುವುದು ಖಂಡನೀಯವಾಗಿದ್ದು ಹಜಾರೆರವರ ಜನಲೋಕಪಾಲ್ ಮಸೂದೆ ಜಾರಿಗೆ ತರಲು ನಾವೆಲ್ಲ ಜೊತೆಯಾಗಿರುತ್ತೇವೆ ಎಂದರು. ಅಣ್ಣಾ ಹಜಾರೆರವರ ಹೋರಾಟಕ್ಕೆ ಬೆಂಬಲಿಸಿ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್, ವಕೀಲರಾದ ಜಿ.ಎಸ್.ಚನ್ನಬಸಪ್ಪ, ಸಿ.ಕೆ.ಸೀತಾರಾಮಯ್ಯ, ವೀವೇಕಾನಂದಸ್ವಾಮಿ, ಕೆ.ಆರ್.ಚನ್ನಬಸಪ್ಪ, ವೆಂಕಟೇಶ್, ರಾಜಶೇಖರ್, ಜ್ಞಾನಮೂತರ್ಿ, ಭಾಜಪ ಮುಖಂಡರಾದ ಶ್ರೀನಿವಾಸಮೂತರ್ಿ, ರವಿಕುಮಾರ್, ಬರಗೂರು ಬಸವರಾಜು, ಕುಂಚಾಕುರ ಕಲಾ ಸಂಘದ ಸಿ.ಎಚ್. ಗಂಗಾಧರ್, ಅಭಾವಿಪ ಕಾರ್ಯಕರ್ತರಾದ ರಾಕೇಶ್, ಮನು, ರವೀಂದ್ರ, ಮಧು, ಉಮೇಶ್, ನಂದನ್, ಗುರು ಮುಂತಾದವರಿದ್ದರು.
ಕ್ರೀಡೆಗೆ ದೈಹಿಕ ಶಕ್ತಿಯೊಂದಿಗೆ ಮಾನಸಿಕ ಬಲವು ಮುಖ್ಯಚಿಕ್ಕನಾಯಕನಹಳ್ಳಿ,ಆ.17 : ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ಅದರ ಬಗ್ಗೆ ಗಮನಿಸದೆ ಎದುರಾಳಿ ಸ್ಪಧರ್ಿ ಜೊತೆಗೆ ಒಡನಾಡಿಯಾಗಬೇಕು ಹಾಗೂ ಆಟದಲ್ಲಿ ಯಾವುದೇ ಅನ್ಯಾಯವಾದರೆ ಆ ಕ್ಷಣದಲ್ಲಿಯೇ ನ್ಯಾಯ ಸಮಿತಿಯಲ್ಲಿ ಅಫೀಲ್ ಮಾಡಿಕೊಳ್ಳಿ ಎಂದು ಬಿ.ಇ.ಓ. ಸಾ.ಚಿ.ನಾಗೇಶ್ ಸಲಹೆ ನೀಡಿದರು.ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸ್ಪಧರ್ೆ ಆರೋಗ್ಯಕರವಾಗಿರ ಬೇಕೆಂದರಲ್ಲದೆ, ಸ್ಪಧರ್ೆಗಳು ನಡೆಯುವಾಗ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡಬಾರದು, ಈ ಬಗ್ಗೆ ಟೀಂ ಮ್ಯಾನೇಜರ್ ನೇರ ಹೊಣೆಯಾಗುತ್ತಾರೆ ಎಂದರು.ಸಾಹಿತಿ ಆರ್.ಬಸವರಾಜು ಮಾತನಾಡಿ ಕ್ರಿಡೆಗೆ ದೈಹಿಕ ಶಕ್ತಿಯೊಂದಿಗೆ ಮಾನಸಿಕ ಬಲ ಮುಖ್ಯವಾಗಿದೆ ಎಂದರು. ಕ್ರೀಡೆಯಲ್ಲಿ ಭಾಗವಹಿಸುವ ವಿದ್ಯಾಥರ್ಿಗಳು ಶಾರೀರವಾಗಿ ಹಾಗೂ ದೈಹಿಕವಾಗಿ ಸದೃಡರಾಗಬೇಕು ಅವರು ವ್ಯಾಯಾಮದ ಮೂಲಕ ದೇಹವನ್ನು ಗಟ್ಟಿಗೊಳಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲ ಹೊಂದಬೇಕು ಎಂದರು. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ ವಿದ್ಯಾರ್ಜನೆ ಜೊತೆಗೆ ಮಕ್ಕಳಿಗೆ ಕ್ರೀಡಾ ಸ್ಪೂತರ್ಿಯನ್ನು ಪೋಷಕರು ಬೆಳೆಸಬೇಕು, ಅವರಿಗೆ ಕ್ರೀಡೆಯ ಮೂಲಕ ಪ್ರೋತ್ಸಾಹ ನೀಡಿ ಅವರ ಬೆಳವಣಿಗೆಗೆ ಸಹಕರಿಸಬೇಕು ಎಂದರು. ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ ಮಕ್ಕಳಿಗೆ ಬುದ್ದಿಶಕ್ತಿ ಜೊತೆಗೆ ದೈಹಿಕ ಶ್ರಮ ಮುಖ್ಯಾವಾಗಿದೆ ಇದರಿಂದ ಗೆಲುವು ಸಾಧಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪ್ರತಿಭೆಗಳು ಬೆಳೆಯಲಿ ಎಂದ ಆಶಿಸಿದರು. ಇ.ಓ ಎನ್.ಎಂ.ದಯಾನಂದ್, ಇ.ಸಿ.ಓ ಮರುಳಾನಾಯ್ಕ, ಶಿಕ್ಷಕರ ಸಂಘದ ಕಾರ್ಯದಶರ್ಿ ಶಶಿಧರ್ ಉಪಸ್ಥಿತರಿದ್ದರು.

Tuesday, August 16, 2011







ಸೆ.17ರಂದು ಚಿ.ನಾ.ಹಳ್ಳಿ ತಾ.4ನೇ ಸಾಹಿತ್ಯ ಸಮ್ಮೇಳನಚಿಕ್ಕನಾಯಕನಹಳ್ಳಿ,ಆ.16 : ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೆಪ್ಟಂಬರ್ 17ರ ಶನಿವಾರದಂದು ಪಟ್ಟಣದಲ್ಲಿ ನಡೆಸಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ನಾ.ದಯಾನಂದರವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.ಇತ್ತೀಚಿಗೆ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮತಿಯಲ್ಲಿ ಸಂತ ಜೋಸೆಫರ ಕಾಲೇಜು ಬೆಂಗಳೂರಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ.ನಾ.ದಯಾನಂದರವರನ್ನು ಆಯ್ಕೆ ಮಾಡಿದ್ದು ಇವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಮಾನ ಪ್ರಭುತ್ವವುಳ್ಳವರಾಗಿದ್ದು ಎರಡೂ ಭಾಷೆಯಲ್ಲಿ ಸುಮಾರು 26 ಕೃತಿಗಳನ್ನು ರಚಿಸಿದ್ದಾರೆ. ಕವಿ ಹೃದಯದ ದಯಾನಂದರವರು 10 ಕವನ ಸಂಕಲನಗಳಲ್ಲದೆ, ಅನುವಾದ ಮತ್ತು ಮೂಲ ಜೀವನ ಚಿತ್ರಣವನ್ನು ರಚಿಸಿ ಖ್ಯಾತರಾಗಿದ್ದು ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಮೇಜರ್ ಡಿ.ಚಂದ್ರಪ್ಪರವರು ಉಪಸ್ಥಿತರಿದ್ದು ಇವರನ್ನು ಆಯ್ಕೆಗೆ ಅನುಮೋದಿಸಿ ಶುಭಾಷಯಗಳನ್ನು ತಿಳಿಸಿದ್ದಾರೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.






ಚಿಕ್ಕನಾಯಕನಹಳ್ಳಿ,ಆ.16 : ರಾಷ್ಟ್ರದ ಮುಂದಿರುವ ಸವಾಲುಗಳನ್ನು ಎದುರಿಸುವಲ್ಲಿ ಸತ್ಯ ಅಹಿಂಸೆ ಮತ್ತು ನ್ಯಾಯ ಪ್ರತಿಪಾದಿಸಬೇಕೆಂದು ಪ್ರೊ.ಸಿ.ಚನ್ನಬಸಪ್ಪ ಹೇಳಿದರು. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇನಲ್ಲಿ 64ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಪ್ರಾಂಶುಪಾಲ ಕೆ.ಸಿ.ಬಸಪ್ಪರವರು ಮಾತನಾಡಿ ಸ್ವಾತಂತ್ರದ ಅಗತ್ಯತೆ ಮತ್ತು ಅದರ ಪ್ರಭಾವವನ್ನು ವಿವರಿಸಿದರು.ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಘಟಕದಿಂದ ವಿದ್ಯಾಥರ್ಿಗಳು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶ್ರಮದಾನ ಕಾರ್ಯವನ್ನು ಎನ್.ಎಸ್.ಎಸ್ ಅಧಿಕಾರಿಗಳಾದ ಸಿ.ಚನ್ನಬಸಪ್ಪ, ಡಿ.ಎಸ್.ಲೋಕೇಶ್ರವರ ಮಾರ್ಗದರ್ಶನದಲ್ಲಿ ನೆರವೇರಿಸಿದರು.

Monday, August 15, 2011







ಸಾಂಸ್ಕೃತಿಕ, ಕ್ರೀಡಾ, ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆ ಸಮಾರಂಭಚಿಕ್ಕನಾಯಕನಹಳ್ಳಿ,ಆ.15 : ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಪರಂಪರಾಕೂಟ ಹಾಗೂ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ 18ರ ಗುರುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದು ರಾಮಕೃಷ್ಣ ವಿವೇಕಾನಂದಾಶ್ರಮದ ಮುಖ್ಯಸ್ಥರಾದ ವೀರೇಶಾನಂದ ಸರಸ್ವತಿ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ಆರ್.ರವಿ(ಮೈನ್ಸ್) ಆಗಮಿಸುವರು.ಈ ಸಂದರ್ಭದಲ್ಲಿ ಪಾಂಡವಪುರ ವಿಜ್ಞಾನ ಕೇಂದ್ರದ ಜೆ.ಬಿ.ಸಂತೋಷ್ಕುಮಾರ್ ಪವಾಡ ರಹಸ್ಯ ಬಯಲು ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಚಿಕ್ಕನಾಯಕನಹಳ್ಳಿ,ಆ.15 : ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಡಶಾಲೆಗಳ ಕ್ರೀಡಾಕೂಟ ಸಮಾರಂಭವನ್ನು ಇದೇ 17 ಮತ್ತು 18 ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲ್ಲೂಕು ಕ್ರೀಡಾಂಗಣ ಹಾಗೂ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಧ್ವಜಾರೋಹಣ ನೆರವೇರಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದು ಇ.ಓ ಎನ್.ಎಂ.ದಯಾನಂದ್ ವಂದನಾ ಸ್ವೀಕರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾ.ಶಿ.ಇ ಉಪನಿದರ್ೇಶಕ ಬಿ.ಮೋಹನ್ಕುಮಾರ್, ಜಿ.ಪಂ.ಸದಸ್ಯರಾದ ಮಂಜುಳ ಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾರಂಗಸ್ವಾಮಿ, ನಿಂಗಮ್ಮರಾಮಯ್ಯ, ಎಚ್.ಬಿ.ಪಂಚಾಕ್ಷರಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿಪಾತಿಮ, ಪುರಸಭಾ ಉಪಾಧ್ಯಕ್ಷ ಆರ್.ರವಿ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ಪ್ರೌ,ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಸಿ.ಪಿ.ಐ ಕೆ.ಪ್ರಭಾಕರ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ತಿಮ್ಮರಾಜು, ಶೋಭಾ ಸಿ.ಬಸವರಾಜು, ಉಪಸ್ಥಿತರಿರುವರು.

Saturday, August 13, 2011



ಸಂಘಟನೆ ಹಿಂದುಳಿವಿಕೆಗೆ ಸಂಘಟನೆಯ ಮುಖಂಡರೇ ಕಾರಣಚಿಕ್ಕನಾಯಕನಹಳ್ಳಿ,ಆ.13 :

ಪ್ರತಿಯೊಂದು ಸಮಾಜದಲ್ಲೂ ಸಂಘಟನೆ ಬೆಳೆದಿದೆ ಆದರೆ ಸಂಘಟನೆಯಲ್ಲಿನ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ತಳ ಮಟ್ಟದಲ್ಲಿ ಸಂಘಟನೆ ಬೆಳೆಸುತ್ತಿಲ್ಲ ಎಂದು ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ವಿಷಾಧಿಸಿದರು. ಪಟ್ಟಣದ ಕನಕ ಭವನದಲ್ಲಿ ನಡೆದ ಕನಕ ಭವನದ ಮೊದಲನೇ ಹಂತದ ಕಾಮಗಾರಿ ಚಾಲನಾ ಸಮಾರಂಭ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 215ನೇ ಜಯಂತ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆಯ ಮೇಲ್ವಿಚಾರಣೆ ವಹಿಸಿಕೊಳ್ಳುವವರು, ಸಂಘಟನೆಯ ನಿರ್ವಹಣೆ ನೆರವೇರಿಸುವವರು ಸ್ವಾರ್ಥವನ್ನು ಬಿಟ್ಟು ಸಮಾಜದ ಸಂಘಟನೆಗಾಗಿ ಶ್ರಮಿಸಿದರೆ ಸಂಘಟನೆ ತಾನಾಗಿಯೇ ಒಗ್ಗೂಡುತ್ತದೆ, ಅವರು ಅಸೂಹೆ, ದ್ವೇಷ, ಕೆಡುಕುಗಳನ್ನು ಬಿಡಬೇಕು ಎಂದರಲ್ಲದೆ, ಸ್ವಾಥರ್ಿಗಳು ಹೆಚ್ಚಾಗಿ ಕೆಡುಕುಗಳನ್ನು ಉಂಟು ಮಾಡುತ್ತಾರೆ ಅವರು ಸರಿದಾರಿಯಲ್ಲಿ ನಡೆದರೆ ಸಂಘಟನೆಯು ಸಮಾಜದ ಎಲ್ಲರೊಂದಿಗೆ ಬೆರೆಯುತ್ತದೆ ಎಂದ ಅವರು ಕನಕ ಭವನವು ತಾಲ್ಲೂಕಿನಲ್ಲಿ ಬಿಟ್ಟರೆ ಜಿಲ್ಲೆಯ ಬೇರೆ ಯಾವ ಭಾಗದಲ್ಲೂ ಇಲ್ಲದಿರುವುದು ತಾಲ್ಲೂಕುಗಳಲ್ಲಿನ ಸಂಘಟನೆಯ ಕೊರತೆಯನ್ನು ಎತ್ತಿತೋರುತ್ತದೆ ಎಂದು ವಿಷಾದಿಸಿದರು. ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಸಂಗೊಳ್ಳಿರಾಯಣ್ಣನು ಸ್ವಾಮಿನಿಷ್ಠೆ, ದೇಶಭಿಮಾನದಿಂದ ಸ್ವಾತಂತ್ರಕ್ಕಾಗಿ ದುಡಿದವರು, ರಾಯಣ್ಣ ಸ್ವಾರ್ಥವನ್ನು ಮೈಗೂಡಿಸಿಕೊಳ್ಳದೆ ತಮ್ಮ ಸ್ವಂತ ಛಲ, ನಂಬಿಕೆಯಿಂದ ಹೋರಾಡಿದವರು, ಅವರಂತೆ ಆತ್ಮಸ್ಥೈರ್ಯದಿಂದ ದುಡಿದಾಗಲೇ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿ ವ್ಯಕ್ತಿ ಏಳಿಗೆ ಕಾಣಲು ಸಾಧ್ಯ ಎಂದ ಅವರು ಕನಕ ಭವನದ ಕಾಮಗಾರಿಗೆ 5 ಲಕ್ಷ ರೂಗಳನ್ನು ಕೊಡುವುದಾಗಿ ತಿಳಿಸಿದ ಅವರು, ಮೊದಲ ಕಂತಿನಲ್ಲಿ 3 ಲಕ್ಷ ರೂ ಹಾಗೂ ಡಿಸಂಬರ್ ನಂತರ 2 ಲಕ್ಷ ರೂಗಳನ್ನು ಕೊಡುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ ಜವಳಿ ಉದ್ಯಮದಲ್ಲಿ ಬಟ್ಟೆಗೆ ಸಿಗುವ ಬೆಲೆಯಂತೆ ಉಣ್ಣಗೆ ಸಿಗುತ್ತಿಲ್ಲ ಇದರಿಂದ ಉಣ್ಣೆ ಉತ್ಪಾದನೆ ಮಾಡುವವರು ಆಥರ್ಿಕ ಸಬಲತೆಯಿಂದ ದೂರವಿದ್ದಾರೆ, ನೇಕಾರರು ತಮ್ಮ ಏಳಿಗೆಗಾಗಿ ಸಂಘಟನೆಯ ಮೂಲಕ ಹೋರಾಡಬೇಕು ಎಂದರು. ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ ಮಾತನಾಡಿ ಸಮಾಜದಲ್ಲಿ ಸಂಘಟನೆ ಹಿಂದುಳಿದಿರುವುದಕ್ಕೆ ಮುಖ್ಯ ಕಾರಣ ಕೀಳರಿಮೆ, ಹಿಂಜರಿತನ ಇವುಗಳನ್ನು ಮೀರಿ ನಮ್ಮನ್ನು ನಾವು ಮೇಲು ಎಂದು ಭಾವಿಸಿದಾಗಲೇ ಸಂಘಟನೆ ಬೆಳೆಯುತ್ತದೆ ಎಂದ ಅವರು ತಾಲ್ಲೂಕಿನಲ್ಲಿ ಸಾಂಘಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಜಾತಿ ವಿಷಯಗಳು ಬಂದಾಗ ಸಂಘಟನೆ ಹಿಂದುಳಿಯುತ್ತದೆ ಎಂದ ಅವರು, ಜಾತಿ ಸಂಘಟನೆ ಮಾಡಬೇಕೆಂದಾಗ ಬೇರೆ ಜಾತಿಯನ್ನು ಹಿಂದಿಕ್ಕಬೇಕು ಎಂಬ ಭಾವನೆ ಬರಬಾರದು ಬೇರೆ ಜಾತಿಯ ಜೊತೆಗೆ ಅವರವರ ಜಾತಿಯನ್ನು ಮುಖ್ಯವಾಹಿನಿಗೆ ತರುವ ಮಾರ್ಗಗಳನ್ನು ಸಂಘಟನೆಯ ಮೂಲಕ ಬೆಳಸಬೇಕು ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಂಘಟನೆ ಎಂದ ಮೇಲೆ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಅಭಿವೃದ್ದಿಯತ್ತ ಕೊಂಡೊಯ್ಯಬೇಕಾಗಿದೆ, ಕನಕ ಭವನದ ಕಾಮಗಾರಿಗಾಗಿ ತಮ್ಮ ಅನುದಾನದಲ್ಲಿ 10 ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಭಾಜಪ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಜಿ.ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಭೈರವ ಮೈನ್ಸ್ ಮಾಲೀಕ ಸಿ.ಡಿ.ಸುರೇಶ್, ಬಿ.ಎನ್.ಶಿವಪ್ರಕಾಶ್, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ರಾಜಣ್ಣ, ರಂಗಸ್ವಾಮಯ್ಯ , ರೇವಣ್ಣ ಒಡೆಯರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪಲ್ಲಕ್ಕಿ ಬಸವರಾಜು ಸ್ವಾಗತಿಸಿದರೆ, ರವಿಕುಮಾರ್ ನಿರೂಪಿಸಿ, ವಂದಿಸಿದರು.

Friday, August 12, 2011

ವೀರಶೈವನೌ.ಕ್ಷೇ.ಸಂಘದಿಂದಪ್ರತಿಭಾ ರಸ್ಕಾರಚಿಕ್ಕನಾಯಕನಹಳ್ಳಿ,ಆ.12 : ತಾಲ್ಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವೀರಶೈವ ವಿದ್ಯಾಥರ್ಿಗಳಿಗೆ 2010-11ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ , ದ್ವಿತೀಯ ಪಿಯುಸಿ, ಹಾಗೂ ಬಿ.ಎ, ಬಿಎಸ್.ಸಿ. ಬಿಕಾಂಗಳಲ್ಲಿ ಶೇ.80 ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅಜರ್ಿ ಆಹ್ವಾನಿಸಲಾಗಿದೆ.ತಾಲ್ಲೂಕಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದವರು ಮಾತ್ರ ಆಗಸ್ಟ್ 20ರೊಳಗೆ ಅಜರ್ಿಗಳನ್ನು ಜೆರಾಕ್ಸ್ ಅಂಕಪಟ್ಟಿಯನ್ನು ಮುಖ್ಯ ಶಿಕ್ಷಕರ ದೃಡೀಕರಣದೊಂದಿಗೆ ಟಿ.ಬಿ.ಮಲ್ಲಿಕಾಜರ್ುನಯ್ಯ ಸಂಸ್ಕೃತ ಶಿಕ್ಷಕರು, ಜ್ಞಾನಪೀಠ ಪ್ರೌಡಶಾಲೆ, ಚಿಕ್ಕನಾಯಕನಹಳ್ಳಿ ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ 9880672343, 9448049821 ದೂರವಾಣಿಗೆ ಸಂಪಕರ್ಿಸಲು ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾ.ಅ.ಯೋಜನೆ ರೈತರಿಗೆ ಆಥರ್ಿಕ ಶಿಸ್ತು ಮೂಡಿಸುತ್ತಿದೆ.ಚಿಕ್ಕನಾಯಕನಹಳ್ಳಿ,ಆ.12 : ಗ್ರಾಮಗಳ ಅಭಿವೃದ್ದಿಯ ಜೊತೆಗೆ ಜನರಲ್ಲಿ ಶಿಸ್ತು, ಬದ್ದತೆ, ವ್ಯವಹಾರ ಚಟುವಟಿಕೆ ಹಾಗೂ ಬದುಕುವ ಕಲೆಯನ್ನು ಬದಲಾಯಿಸುವ ಗುರಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಯೋಜನೆಯಾಗಿದೆ ಎಂದು ಸಂಘದ ಯೋಜನೆಯ ಮೇಲ್ವಿಚಾರಕರಾದ ನಾಗರಾಜ್ ಹೇಳಿದರು.ತಾಲ್ಲೂಕಿನ ಮತಿಘಟ್ಟ ಗ್ರಾಮದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಧರ್ಮಸ್ಥಳದ ಧಮರ್ಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು ಸಾಮಾಜಿಕ ಬದುಕಿನಲ್ಲಿ ಆಥರ್ಿಕ ಅಭಿವೃದ್ದಿಯೊಂದಿಗೆ ಸರ್ವತೋಮುಖ ಬೆಳವಣಿಗೆ ಹೊಂದಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಸಮಾರಂಭದಲ್ಲಿ ತಾ.ಪಂ.ಸದಸ್ಯ ನಿರಂಜನಮೂತರ್ಿ, ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರವಿಚಂದ್ರ ನಿರೂಪಿಸಿದರೆ ಸೇವಾ ಪ್ರತಿನಿಧಿ ಶಂಕರಪ್ಪ ವಂದಿಸಿದರು.

ಸ್ವತಂತ್ರ ದಿನಾಚರಣೆ ಸಂಭ್ರಮಚಿಕ್ಕನಾಯಕನಹಳ್ಳಿ,ಆ.12 : ಸ್ವಾತಂತ್ರ್ಯ ದಿನಾಚರಣಾ ಸಮಾರಂಭವನ್ನು ಆಗಸ್ಟ್ 15ರ ಬೆಳಗ್ಗೆ 8.30ಕ್ಕೆ ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಧ್ವಜಾರೋಹಣದ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ರೈತ ಮುಖಂಡ ಸತೀಶ್ ಕೆಂಕೆರೆ, ಆಂಜನೇಯ ದೇವಾಸ್ಥನದ ಕನ್ವೀನರ್ ಚಂದ್ರಶೇಖರಶೆಟ್ಟರು, ಶ್ರಮಿಕ ಜೀವಿ ಶಿವಣ್ಣರವರಿಗೆ ಸನ್ಮಾನಿಸಲಾಗುವುದು.ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷ ಬಿಬಿಪಾತೀಮ, ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಸಿ.ಎಸ್.ನಾರಾಯಣರಾವ್ ಉಪಸ್ಥಿತರಿರುವರು.ವಿ
ಕನಕ ಭವನದ ಕಾಮಗಾರಿ ಚಾಲನೆ, ಸಂಗೊಳ್ಳಿ ರಾಯಣ್ಣನ 215ನೇ ಜಯಂತೋತ್ಸವಚಿಕ್ಕನಾಯಕನಹಳ್ಳಿ,ಆ.12: ಕನಕ ಸೇವಾ ಸಮಿತಿಯ ವತಿಯಿಂದ ಕನಕ ಭವನದ ಮೊದಲನೇ ಹಂತದ ಕಾಮಗಾರಿ ಚಾಲನಾ ಸಮಾರಂಭ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 215 ಜಯಂತೋತ್ಸವವನ್ನು ಇದೇ 13 ರ ಶನಿವಾರ ಬೆಳಿಗ್ಗೆ 10.30ಕ್ಕೆ ಕನಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದಶರ್ಿ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.ಸಮಾರಂಭದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದ ಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದಾರೆ, ಉದ್ಘಾಟನೆಯನ್ನು ಸಂಸದ ಜಿ.ಎಸ್.ಬಸವರಾಜು ನೆರವೇರಿಸಲಿದ್ದಾರೆ.ಬಡಮಕ್ಕಳಿಗೆ ವಸ್ತ್ರವಿತರಣೆಯನ್ನು ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್ ನೆರವೇರಿಸಲಿದ್ದು, ಎಂ.ಎಲ್.ಸಿ. ಡಾ. ಎಂ.ಆರ್.ಹುಲಿನಾಯ್ಕರ್ ಪುಸ್ತಕ ವಿತರಣೆ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ರಾಜ್ಯ ಕುರುಬರ ಸಂಘದ ಕಾರ್ಯದಶರ್ಿ ಕೆ.ಎಂ.ರಾಮಚಂದ್ರಪ್ಪ, ಕೋಶಾಧಿಕಾರಿ ಆರ್.ರಾಮಕೃಷ್ಣಪ್ಪ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ರಂಗಸ್ವಾಮಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು, ಸಂಪಾದಕ ಎಸ್.ನಾಗಣ್ಣ, ಆನಂದ್ ಬಿ. ಅಪ್ಪುಗೋಳ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

Thursday, August 11, 2011







ಜಾಗತೀಕರಣ ಶೋಷಣೆ ಆಧಾರಿತ ಸಮಾಜವನ್ನು ಕಟ್ಟುತ್ತಿದೆ.ಚಿಕ್ಕನಾಯಕನಹಳ್ಳಿ,ಆ.11 : ಜಾಗತೀಕರಣ ಹುಟ್ಟು ಹಾಕುತ್ತಿರುವುದು ಹಣಕಾಸು ಬಂಡವಾಳಶಾಹಿಯೇ ವಿನಾಃ, ವಿಸ್ತೃತ ನೆಲೆಯ ಬಂಡವಾಳ ಶಾಹಿಯಲ್ಲ, ಅದು ದುಡಿಯುವ ವರ್ಗವನ್ನು ನಿರ್ಲಕ್ಷಿಸಿ ಅಧಿಕಾರದ ಶ್ರೇಣೀಕರಣವನ್ನು ಒಳಗೊಂಡು ಅಸಮಾನತೆಯ ಆಧಾರವನ್ನು ಎತ್ತಿಹಿಡಿದಿದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಹೇಳಿದರು. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಾಗತಿಕ ವೇದಿಕೆಯಲ್ಲಿ ಸ್ಥಳೀಯ ಸಾಹಿತ್ಯ ಹಾಗೂ ಸಂಸ್ಕೃತಿಯ ಅನಾವರಣ ಉಳಿವಿನ ಸಾಧ್ಯತೆ ಹಾಗೂ ಸವಾಲುಗಳು ಎಂಬ ವಿಷಯವಾಗಿ ಯು.ಜಿ.ಸಿ. ಪ್ರಾಯೋಜಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಅವರು, ಜಾಗತೀಕರಣದಲ್ಲಿ ಸಂಪತ್ತು, ಹಣ, ಉತ್ಪಾದನೆಗಳು ಮಾತ್ರ ಅಭಿವೃದ್ದಿಯೆನಿಸಿಕೊಂಡಿವೆ, ಇದರಿಮದ ಸಾಮಾಜಿಕ ನ್ಯಾಯವು ದೂರವಾಗುತ್ತಿದೆ ಎಂದರಲ್ಲದೆ, ಎನ್.ಆರ್.ನಾರಾಯಣಮೂತರ್ಿ, ಅಜೀಮ್ ಪ್ರೇಮ್ಜಿ, ವಿಜಯಮಲ್ಯ, ಅಶೋಕ್ಖೇಣಿ, ಪಿಈಎಸ್ ದೊರೆಸ್ವಾಮಿ ಮುಂತಾದವರಿಗೆ ಸಾಮಾಜಿಕ ನ್ಯಾಯದ ಅರ್ಥ ತಿಳಿಯಬೇಕಿದ್ದು ಸಾಮಾಜಿಕ ನ್ಯಾಯವು ಮೀಸಲಾತಿಗಿಂತ ವಿಸ್ತೃತವಾದ ಸಂಗತಿಯಾಗಿದೆ ಎಂದರು. ಮನುಷ್ಯ ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಕ್ರಮ ಸಾಮಾಜಿಕ ನ್ಯಾಯವಾಗಿದೆ, ಅಂತಹ ಸಮಾಜವನ್ನು ನಾವು ಕಟ್ಟಬೇಕು ಆದರೆ ಜಾಗತೀಕರಣ ಸ್ಥಳೀಯತೆಯನ್ನು ನಾಶಮಾಡಿ ಶೋಷಣೆಯನ್ನು ಆಧರಿಸಿದ ಸಮಾಜವನ್ನು ಕಟ್ಟುತ್ತಿದೆ ಎಂದು ವಿಷಾದಿಸಿದರಲ್ಲದೆ ಸ್ಥಳೀಯತೆ ಮತ್ತು ಜಾಗತೀಕರಣಗಳು ಸೇರಿ ಮಹಿಳೆಯರನ್ನು ಶೋಷಿಸುತ್ತಿವೆ ಇದರಿಂದ ದುಡಿಮೆಯು ಮಹಿಳೀಕರಣಕ್ಕೆ ಒಳಗಾಗಿದೆ ಎಂದರು. ಉದ್ದಿಮೆಗಳು ಮಹಿಳೆಯರನ್ನು ಹೆಚ್ಚು ಹೆಚ್ಚು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಬಯಸುತ್ತವೆ, ಇದರ ಹಿಂದಿನ ಉದ್ದೇಶ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡುವುದಲ್ಲ, ಅವರು ಸಂಘಟಿತರಾಗುವುದಿಲ್ಲ, ಅವರಿಗೆ ದುಡಿಮೆಯೆನ್ನುವುದು ಪೂರಕವಾದ ಸಂಗತಿಯಾಗಿದ್ದು ಅವರ ಕುಟುಂಬದಲ್ಲಿ ವರಮಾನ ಗಳಿಸುವವರಲ್ಲ, ಇದರಿಂದಾಗಿ ಉದ್ದಿಮೆಗಳು ಅವರಿಗೆ ಎಷ್ಟು ಕೂಲಿ ನೀಡಿದರೂ, ಎಷ್ಟು ಗಂಟೆಗಳ ಕಾಲ ದುಡಿಸಿಕೊಂಡರೂ ನಡೆಯುತ್ತದೆ, ಅವರು ಮುಷ್ಕರ ಮಾಡುವುದಿಲ್ಲ ಇದರಿಂದ ಲಿಂಗ ಅಸಮಾನತೆ ವ್ಯವಸ್ಥೆ ಸಾಮಾನ್ಯವಾಗಿದೆ ಎಂದ ಅವರು ಜಾಗತೀಕರಣದಿಂದ ಬದಲಾವಣೆಗಳು ತೀವ್ರಗತಿಯಲ್ಲಿ ನೆಡೆಯುತ್ತಿದೆ, ಸ್ಥಳೀಯತೆಗೆ ಅಪಾಯ ಬಂದಿದ್ದು ಕನ್ನಡ ಅಂದರೆ ಸ್ಥಳೀಯ ಭಾಷೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ, ಈಗ ಜಾಗತೀಕರಣ ತಡೆಯುವುದು ಅಸಾಧ್ಯವಾಗಿದೆ ಈಗ ನಮ್ಮ ಮುಂದಿರುವ ದಾರಿಯೆಂದರೆ ಅದನ್ನು ಅರ್ಥ ಮಾಡಿಕೊಳ್ಳುವುದು, ಅದರಿಂದ ಉಂಟಾಗುತ್ತಿರುವ ಬದಲಾವಣೆಯ ಗತಿ ಸ್ವರೂಪವನ್ನು ತಿಳಿದುಕೊಳ್ಳವುದಕ್ಕೆ ಪ್ರಯತ್ನಿಸುವುದಾಗಿದೆ ಎಂದರು. ಜಾಗತೀಕರಣದಿಂದ ಸ್ಥಳೀಯ ಸಂಸ್ಕೃತಿ ಸಾಹಿತ್ಯ ನಮ್ಮ ಭಾಷೆ ಕಳೆದುಹೋಗುವುದಿಲ್ಲ ಅದರ ಬಗ್ಗೆ ನಾವು ನಿರಾಶಾವಾದಿಗಳಾಗುವ ಅಗತ್ಯವಿಲ್ಲ ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸ್ಥಳೀಯತೆಯನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಬಗ್ಗೆ ನಾವು ಜಾಗೃತರಾಗಬೇಕು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಜಾಗತಿಕ ವೇದಿಕೆಯ ಮೂಲಕ ಪ್ರಬಲರು ದುರ್ಬಲರ ಮೇಲೆ ತಮ್ಮ ಆಕ್ರಮಣವನ್ನು ಹೇರುತ್ತಿದ್ದಾರೆ, ಏಷ್ಯನ್ ಜನರ ಮೇಲೆ ಯೂರೋಪ್ ಜನರು ಹೇರುವ ಆಕ್ರಮಣವನ್ನು ನಾವು ಕಣ್ಣಾರೆ ನೋಡಿರುವುದಾಗಿದೆ ಎಂದ ಅವರು ವಿದೇಶದಲ್ಲಿರುವ ಭಾರತೀಯ ಹೆಣ್ಣು ಮಕ್ಕಳ ಸಮಸ್ಯೆಯನ್ನು ವಿವರಿಸಿದರು.ಕೆಲವು ಸಾಹಿತಿಗಳು ತೆಲುಗು, ಇಂಗ್ಲೀಷ್ ಕಲಿತ ನಂತರ ಕನ್ನಡಕ್ಕೆ ಅನುವಾದ ಮಾಡಿಕೊಂಡು ಬರುತ್ತಿದ್ದಾರೆ ಇದಕ್ಕೆ ಕಾರಣ ಕನ್ನಡ ಭಾಷೆ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಇರುವ ಧೋರಣಾ ಮನೋಭಾವವಾಗಿದೆ ಎಂದ ಅವರು, ಸಾಹಿತಿಗಳಾದ ಲಿಂಗದೇವರು ಹಳೇಮನೆ, ಸಾ.ಶಿ.ಮರುಳಯ್ಯರವರು ಕನ್ನಡದಲ್ಲಿ ಸಾಹಿತ್ಯವನ್ನು ಬರೆದರೂ ಸರಿಯಾದ ಸ್ಥಾನಮಾನ ಅವರಿಗೆ ಸಿಗಲಿಲ್ಲ ಎಂದರಲ್ಲದೆ ಇಂದು ಎಲೆಕ್ಟ್ರಾನಿಕ್ ವಸ್ತುಗಳಿಂದಲೇ ಹೆಚ್ಚಾಗಿ ಜಾಗತಿಕ ವ್ಯವಸ್ಥೆ ಬದಲಾಗಿರುವುದು, ಕೇವಲ ಬಣ್ಣದಿಂದ ಯಾರನ್ನು ಅಳೆಯಬಾರದು ಅವರ ಗುಣದ ಬಗ್ಗೆ ಅರಿಯಬೇಕು ಎಂದರು. ಸಮಾರಂಭದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಕರೀಗೌಡ ಬೀಚನಹಳ್ಳಿ, ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ಸಂಘಟನಾ ಕಾರ್ಯದಶರ್ಿ ಬಿ.ಎಸ್.ಬಸವಲಿಂಗಯ್ಯ ಉಪಸ್ಥಿತರಿದ್ದರು.

Wednesday, August 10, 2011













ಹೊಯ್ಸಳ ಶಿಲ್ಪ ಕೇಂದ್ರದ ವತಿಯಿಂದ ಬಿ.ಎಫ್.ಎ. ಪದವಿಗೆ ಅಜರ್ಿ ಆಹ್ವಾನಚಿಕ್ಕನಾಯಕನಹಳ್ಳಿ,ಆ.10 : ಜಕಣ ಶಿಲ್ಪ ಗುರುಕುಲ ಶಿಲ್ಪಕಲಾ ಕಾಲೇಜು ವತಿಯಿಂದ ಆಸಕ್ತ ಚಿತ್ರಕಲಾ ಹಾಗೂ ಕಲಾ ವಿದ್ಯಾಥರ್ಿಗಳಿಗೆ ಬಿ.ಎಫ್.ಎ. ಕೋಸರ್್ಗೆ ಅಜರ್ಿ ಆಹ್ವಾನಿಸಲಾಗಿದೆ.ಹೊಯ್ಸಳ ಶಿಲ್ಪಕೇಂದ್ರ ಹಾಗೂ ಕನರ್ಾಟಕ ಸಕರ್ಾರದ ಸಹಯೋಗದೊಂದಿಗೆ ಪ್ರಾರಂಭವಾಗಿರುವ ಕಾಲೇಜಿಗೆ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾಥರ್ಿಗಳು ಅಜರ್ಿ ಸಲ್ಲಿಸಬಹುದಾಗಿದೆ, ಬಿ.ಎಫ್.ಎ. ಕೋಸರ್್ ಮೂರು ವರ್ಷದ ಅವಧಿಯಾಗಿದ್ದು ಈ ಕೋಸರ್್ನಲ್ಲಿ ಚಾಲುಕ್ಯ, ಚೋಳ, ಹೊಯ್ಸಳ ಶೈಲಿಯ ಶಿಲ್ಪಕೆತ್ತನೆಯ ತರಬೇತಿ ನೀಡಲಾಗುವುದು, ಆಸಕ್ತರು ಶಿಲ್ಪಿ ವಿಶ್ವನಾಥ್ ಹೊಯ್ಸಳ ಶಿಲ್ಪಿಕೇಂದ್ರ ಕೃಷಿ ಇಲಾಖೆ ಹಿಂಭಾಗ ದೂರವಾಣಿ ಸಂಖ್ಯೆ 9845279517, 9141092238ಗೆ ಸಂಪಕರ್ಿಸಲು ಕೋರಲಾಗಿದೆ.

Tuesday, August 9, 2011







ಚಿ.ನಾ.ಹಳ್ಳಿಗೆ ಸಿ.ಇ.ಸಿ ತಂಡ ಭೇಟಿ
ಚಿಕ್ಕನಾಯಕನಹಳ್ಳಿ,ಆ.09 : ಸುಪ್ರೀಂ ಕೋಟರ್್ ಆದೇಶದ ಮೇರೆಗೆ ರಾಜ್ಯದ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಆಗಮಿಸಿರುವ ಕೇಂದ್ರದ ಉನ್ನತಾಧಿಕಾರಿಗಳ ತನಿಖಾ ಸಮಿತಿಯ (ಸಿ.ಇ.ಸಿ)ತಂಡ ಮಂಗಳವಾರ ತಾಲ್ಲೂಕಿಗೆ ಭೇಟಿ ನೀಡಿತು.ಈ ಸಂದರ್ಭದಲ್ಲಿ ಗಣಿ ಪ್ರದೇಶಗಳಿಗೆ ತೆರಳಿದ ತಂಡ ಕನರ್ಾಟಕ ಮೈನ್ಸ್, ಸುದರ್ಶನ್ಸಿಂಗ್ ಮೈನ್ಸ್, ಗಣಪತಿ ಸಿಂಗ್ ಮೈನ್ಸ್, ಪೋಧಾರ್ ಮೈನ್ಸ್ಗಳಿಗೆ ಭೇಟಿ ನೀಡಿ ವಿವರವನ್ನು ಪಡೆದರು. ತಾಲ್ಲೂಕಿನ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲಿಸಲು ತನಿಖಾ ತಂಡದ ಛೇರ್ಮನ್ ಪಿ.ವಿ.ಜಯಕೃಷ್ಣನ್, ತಂಡದ ಸದಸ್ಯ ಮಹೇಂದ್ರ ವ್ಯಾಸನ್, ದೀಪಕ್ ಶಮರ್ಾ, ರಾಜ್ಯದ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಯು.ವಿ.ಸಿಂಗ್ ಒಳಗೊಂಡ ತಂಡ ಮಧ್ಯಾಹ್ನ 3.30ರ ಸುಮಾರಿಗೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಕೆಲ ಕಾಲ ವಿಶ್ರಾಂತಿ ತೆಗೆದುಕೊಂಡು ನಂತರ ಗಣಿ ಪ್ರದೇಶಗಳಿಗೆ ತೆರಳಿದರು. ಸಿ.ಇ.ಸಿ ತಂಡದೊಂದಿಗೆ ತೆರಳಲು ಮುಂದಾದ ಮಾಧ್ಯಮದವರಿಗೆ ಗಣಿ ಮಾಲೀಕರು ನೇಮಿಸಿಕೊಂಡ ಬಾಡಿಗೆ ಬಂಟರು ಹಾಗೂ ಪೋಲಿಸಿನವರು ತಡೆಯೊಡ್ಡಿದರು.

Monday, August 8, 2011







ತಾತಯ್ಯನ ಗೋರಿಯನ್ನು ಅಭಿವೃದ್ದಿಗೊಳಿಸುವ ಮೂಲಕ ಪ್ರವಾಸಿ ತಾಣವನ್ನಾಗಿಸಿಚಿಕ್ಕನಾಯಕನಹಳ್ಳಿ,ಆ.08 : ಕೋಮು ಸೌಹಾರ್ಧತೆಗೆ ಹೆಸರುವಾಸಿಯಾಗಿರುವ ನಮ್ಮ ತಾಲೂಕಿನಲ್ಲಿ ಶಾದಿ ಮಹಲ್ ಕಾಮಗಾರಿಗೆ ಅಲ್ಪಸಂಖ್ಯಾತರ ಇಲಾಖೆ ನೀಡಿರುವ ಇಪ್ಪತ್ತು ಲಕ್ಷ ಅನುದಾನದ ಜೊತೆಗೆ ಶಾಸಕರ ನಿಧಿಯಿಂದಲೂ ಅನುದಾನ ನೀಡಲಿದ್ದು, ಇಲ್ಲೊಂದು ಸುಂದರ ಕಲ್ಯಾಣ ಭವನ ನಿಮರ್ಾಣವಾಗಬೇಕೆಂದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ ದಗರ್ಾ(ತಾತಯ್ಯನ ಗೋರಿ) ಕಮಿಟಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶಾದಿ ಮಹಲ್ ಕಟ್ಟಡದ ಶಂಖುಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನವು ತಾಲ್ಲೂಕಿನ ಅಲ್ಪಸಂಖ್ಯಾತ ಜನತೆಯ ಅಲ್ಪ ಭಾಗದ ಆಸೆ ಮಾತ್ರ ನೆರವೇರಿದಂತಾಗಿದೆ ಎಂದರಲ್ಲದೆ, ಸಾರ್ವಜನಿಕರು ಈ ಭವನವನ್ನು ಉತ್ತಮ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದರಲ್ಲದೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಲವು ಅನುದಾನಗಳು ಬಿಡುಗಡೆಯಾಗಲಿವೆ, ನಾನೂ ಸಹ ಈ ಇಲಾಖೆ ಸಮಿತಿಯ ಸದಸ್ಯನಾಗಿರುವುದರಿಂದ ತಾಲ್ಲೂಕಿನ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದರು. ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಶಂಖುಸ್ಥಾಪನೆಗೊಂಡ ಶಾದಿಮಹಲ್ ಸರ್ವಧಮರ್ಿಯರು ಕೋಮುಸೌಹಾರ್ಧತೆಯಿಂದ ಬಳಸಿಕೊಳ್ಳಿ ಎಂದರಲ್ಲದೆ, ಇದೊಂದು ಪುಣ್ಯಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ತಾತಯ್ಯನವರ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಪರ್ಾಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದ ಅವರು, ಶಾದಿ ಮಹಲ್ಗೆ 20ಲಕ್ಷರೂ ಇಲಾಖೆಯಿಂದ ಬಿಡುಗಡೆಯಾಗಿದ್ದು 5ಲಕ್ಷರೂಗಳ ಚೆಕ್ಕನ್ನು ಈ ಸಂದರ್ಭದಲ್ಲಿ ನೀಡುತ್ತಿದ್ದೇವೆ ಎಂದರು.ಜಿಲ್ಲಾ ವಕ್ಪ್ ಬೋಡರ್್ ಮಾಜಿ ಅಧ್ಯಕ್ಷ ಮುಸ್ತಾಕ ಅಹಮದ್ ಮಾತನಾಡಿ ವಿಭಿನ್ನತೆಯಲ್ಲಿ ಐಕ್ಯತೆ ಹೊಂದಿರುವ ತಾಲ್ಲೂಕಿನಲ್ಲಿ ಹಲವು ಧರ್ಮದವರು ಸಮಾನತೆಯಿಂದ ಕಾರ್ಯನಿರ್ವಹಿಸುತ್ತಿರುವುದು ತಾಲ್ಲೂಕಿನ ಹೆಮ್ಮೆಯ ವಿಷಯವಾಗಿದೆ ಎಂದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಕನ್ನಡ ಸಂಘದ ವೇದಿಕೆಯ ಸೀಮೆಎಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಬಾಬುಸಾಹೇಬ್, ಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಉಪಾಧ್ಯಕ್ಷ ರವಿ(ಮೈನ್ಸ್), ಗೋರಿ ಕಮಿಟಿ ಕಾಯರ್ಾಧ್ಯಕ್ಷ ಟಿ.ರಾಮಯ್ಯ, ಗೋರಿ ಕೆಲಸಗಳ ಉಸ್ತುವಾರಿ ಸಿ.ಕೆ.ಘನ್ನಿಸಾಬ್, ಮಹಮದ್ ಖಲಂದರ್, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಮರ ಕಡಿಯುವುದನ್ನು ನಿಲ್ಲಿಸಿ,ಸಸಿ ಬೆಳೆಸಲು ಪ್ರೋತ್ಸಾಹಿಸಿಚಿಕ್ಕನಾಯಕನಹಳ್ಳಿ,ಆ.08 : ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಗೂ ಆಹಾರ, ನೀರು ಮುಖ್ಯವಾಗಿದ್ದು ಆಹಾರ ನೀರು ಇಲ್ಲದೆ ವಾರಗಟ್ಟಲೆ ಬದುಕಿರುವವರಿದ್ದಾರೆ ಆದರೆ ಗಾಳಿ ಇಲ್ಲದೆ ಯಾರೊಬ್ಬರು ಬದುಕಲಾರರು ಎಂದು ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವದಿಕೆಯ ಮುಂಭಾಗದಲ್ಲಿ ಸವರ್ೋದಯ ಪೈನ್ಸಾನ್ಸ್ ಪ್ರಾರೋಂಭೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವಿಗೆ ಆಮ್ಲಜನಕ ಅವಶ್ಯವಾಗಿದ್ದು ಉಸಿರಾಡುವುದಕ್ಕಾಗಿಯಾದರೂ ಗಿಡಗಳನ್ನು ಬೆಳೆಸಿ ಪರಿಸರವನ್ನು ಉಳಿಸಿಬೇಕಿದೆ ಮರಗಳನ್ನು ಕಡಿಯುತ್ತಿರುವುದು ಇತ್ತೀಚಿಗೆ ಹೆಚ್ಚಿದ್ದು ಮರಗಳ ರಕ್ಷಣೆಗಾಗಿ ನಾವು ಮುಂದಾಗಬೇಕು ಎಂದರಲ್ಲದೆ ಗಣಿಗಾರಿಕೆಯಿಂದ ಗಿಡಮರಗಳು ನಾಶವಾಗುತ್ತಿದ್ದು ಪ್ರತಿಯೊಬ್ಬರು ಗಿಡನೆಟ್ಟುಬೆಳೆಸಬೇಕಾಗಿದೆ ಎಂದ ಅವರು ಈ ಸಂಘವು ಯಶಸ್ವಿಯಾಗಿ ಬೆಳೆಯಲಿ ಬಡವರಿಗೆ ಅನೂಕೂಲವಾಗಿರಲಿ ಯಾರೇ ಆಗಿರಲಿ ನಮಗೆ ಸಹಾಯಮಾಡಿದವರನ್ನು ಕೊನೆಯವರೆಗೆ ಮರೆಯಾಬಾರದು ಎಂದರು. ಪುರಸಭೆಯ ಸದಸ್ಯರಾದ ರೇಣುಕಾ ಗುರುಮೂತರ್ಿ ಮಾತನಾಡುತ್ತಾ ಅತಿ ಹೆಚ್ಚು ಮಹಿಳೆಯರೆ ಸಂಘ ಸಂಸ್ಥೆಗಳಲ್ಲಿ ಹೆಚ್ಚಾಗಿದ್ದಾರೆ, ಸಂಘವು ಮೊದಲು ಸ್ವಸಹಾಯ ಸಂಘದಿಂದ ನೆಡೆದುಕೊಂಡು ಬಂದು ಮೂರನೇ ವರ್ಷದ ನಂತರ ಸವರ್ೋದಯ ಪೈನ್ಸಾನ್ಸ್ ಮಾಡಿರುವುದು ಬಡವರಿಗೆ ಅನೂಕೂಲವಾಗಬೇಕಾಗಿದೆ ಎಂದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಧ್ಯಕ್ಷ ರವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್ ನಟರಾಜು, ಸಹಕಾರಭಿವೃದ್ದಿ ಅಧಿಕಾರಿ ಮುಕುಂದಯ್ಯ ರಾಮಕೃಷ್ಣಯ್ಯ, ಮಹಲಿಂಗಯ್ಯ ,ಮಂಜುನಾಥ್ ಉಪಸ್ಥಿತರಿದ್ದರು.

Sunday, August 7, 2011

ಚಿಕ್ಕನಾಯಕನಹಳ್ಳಿ,ಆ.07 : ಜಾಗತಿಕ ವೇದಿಕೆಯಲ್ಲಿ ಸ್ಥಳೀಯ ಸಾಹಿತ್ಯ ಹಾಗೂ ಸಂಸ್ಕೃತಿಯ ಅನಾವರಣ ಉಳಿವಿನ ಸಾಧ್ಯತೆ ಹಾಗೂ ಸವಾಲುಗಳು ಎಂಬ ಕಾರ್ಯಕ್ರಮವನ್ನು ಇದೇ 11ರ ಗುರುವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಸಮನ್ವಯ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿದರ್ೇಶಕ ಹೆಚ್.ಕೆ.ಕುಮಾರರಾಜ್ ಅರಸ್ ಉದ್ಘಾಟನೆ ನೆರವೇರಿಸಲಿದ್ದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಆಶಯ ಭಾಷಣ ಮಂಡಿಸಲಿದ್ದಾರೆ. ಗೋಷ್ಠಿ 1 : ಬೆಳಗ್ಗೆ 11ರಿಂದ 12.30ರವರೆಗೆ ನಡೆಯುವ ಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಚಂದ್ರಶೇಖರ ನಂಗಲಿ ಜಾಗತೀಕರಣ ಮತ್ತು ಗ್ರಾಮೀಣ ಸ್ತ್ರೀ ಸ್ವಾಯತ್ತತೆಯ ನೆಲೆಗಳು, ಹಂಪಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾದ್ಯಾಪಕ ಡಾ.ಬಿ.ಎಂ.ಪುಟ್ಟಯ್ಯ ಬಹುಸ್ತರೀಯ ವಸಾಹತು ಶಾಹಿಗಳಿಂದ ಸ್ಥಳೀಯ ನೆಲೆಗಳ ಉಳಿವಿನ ಸಾಧ್ಯತೆಗಳ ವಿಷಯದ ಬಗ್ಗೆ ಪ್ರಬಂಧ ಮಂಡಿಸಲಿದ್ದು ಡಾ.ಎಸ್.ಗುರುಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಷ್ಠಿ2: ಮಧ್ಯಾಹ್ನ 12.30ರಿಂದ 2ರವರೆಗೆ ನಡೆಯುವ ಗೋಷ್ಠಿಯಲ್ಲಿ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಡಾ.ವಿಜಯ್ ಅಂಗಡಿ ನಮ್ಮ ಅನ್ನ ಆರಂಬ ಪ್ರಸ್ತುತ ಪರಿಸ್ಥಿತಿ ಬಗ್ಗೆ, ಡಾ.ನಟರಾಜ್ ಬೂದಾಳ್ ಈ ನೆಲದ ಕಾವ್ಯ ಮೀಮಾಂಸೆಯ ಹೊಸ ಸಾಧ್ಯತೆಗಳು ಬಗ್ಗೆ ಪ್ರಬಂದ ಮಂಡಿಸಲಿದ್ದು ಡಾ.ಬಿ.ಎಸ್.ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.ಗೋಷ್ಠಿ 3 : 2.30ರಿಂದ ನಡೆಯಲಿದ್ದು ಪ್ರತಿನಿಧಿಗಳಿಂದ ಪ್ರಬಂಧ ಮಂಡನೆ ನಡೆಯಲಿದ್ದು ಅಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಹಂಪಿ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ಡಾ.ಕರೀಗೌಡ ಬೀಚನಹಳ್ಳಿ ಸಮಾರೋಪ ಭಾಷಣ ಮಾಡಲಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಚಿಕ್ಕನಾಯಕನಹಳ್ಳಿ,ಆ.07 : ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಹಾಗೂ ರಾಷ್ಟ್ರೀಯ ಸೇವಾ ಘಟಕದ ಉದ್ಘಾಟನಾ ಸಮಾರಂಭವನ್ನು ಇದೇ 9ರ ಮಂಗಳವಾರ ಬೆಳಗ್ಗೆ 11ಕ್ಕೆಏರ್ಪಡಿಸಲಾಗಿದೆ.ಸಮಾರಂಭವನ್ನು ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಯವರು ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ.ಪೂ.ಶಿ ಉಪನಿದರ್ೇಶಕ ಕೆ.ಎನ್.ರಂಗನಾಥ್, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ವಿಶೇಷ ಆಹ್ವಾನಿತರಾಗಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಮಾಜಿ ಪುರಸಭಾಧ್ಯಕ್ಷ ಮಹಮದ್ ಇಕ್ಬಾಲ್, ಪುರಸಭೆ ಸದಸ್ಯೆ ಕವಿತಾಚನ್ನಬಸವಯ್ಯ, ಇಂದಿರಪ್ರಕಾಶ್ ಉಪಸ್ಥಿತರಿರುವರು.

Saturday, August 6, 2011

Friday, August 5, 2011







ಧರ್ಮದ ಪವಿತ್ರತೆಯಿಂದಿರಲಿ ರಕ್ಷಾಬಂಧನಚಿಕ್ಕನಾಯಕನಹಳ್ಳಿ,ಆ.05 : ಧರ್ಮದ, ಸದ್ಗುಣ ಬಂಧನವನ್ನು ಪವಿತ್ರತೆಯಿಂದ ಕಂಡುಕೊಂಡಾಗ ಸೋದರ ಸೋದರಿಯರ ರಕ್ಷಾಬಂಧನಕ್ಕೆ ಅರ್ಥಕಂಡುಬರುತ್ತದೆ ಎಂದು ದಾವಣಗೆರೆಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಲೀಲಕ್ಕನವರು ಹೇಳಿದರು. ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ರಕ್ಷಾಬಂಧನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸೋದರ, ಸೋದರಿಯರು ರಕ್ಷಾಬಂಧನವನ್ನು ಕಟ್ಟಿವುದರ ಮೂಲಕ ಕಾಮ, ಕ್ರೋಧ, ಅಹಂಕಾರವನ್ನು ತ್ಯಜಿಸುತ್ತಾ ಉಡುಗೊರೆ ನೀಡಿದರೆ ರಕ್ಷಾಬಂಧನಕ್ಕೆ ರಕ್ಷಣೆಯೆಂಬ ನಿಜವಾದ ಅರ್ಥ ದೊರಕುತ್ತದೆ ಎಂದ ಅವರು ರಕ್ಷಾ ಬಂಧನವು ಕೇವಲ ಒಡ ಹುಟ್ಟಿದವರು ಮಾತ್ರ ಆಚರಿಸುವುದಲ್ಲ ಅದನ್ನು ನೆರೆಹೊರೆಯರ ಜೊತೆಯಲ್ಲಿ ಆಚರಿಸಬೇಕು ಎಂದರು. ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಮಾತನಾಡಿ ರಕ್ಷಾಬಂಧನವು ರಕ್ಷಣೆಯ, ಬಾಂದವ್ಯದ ಸಂಕೇತವಾಗಿದ್ದು ರಕ್ಷಾಬಂಧನವು ಸೋದರ, ಸೋದರಿಯರ ಹಾಗೂ ನೆರೆಹೊರೆಯವರೊಂದಿಗೆ ಆತ್ಮೀಯತೆಯನ್ನು ಬೆಳೆಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಬ್ರಹ್ಮವಿದ್ಯಾಸಮಾಜದ ಅನ್ನಪೂರ್ಣಕ್ಕ, ಸುಹಾಸಿನಿಯವರು ಭಾಗವಹಿಸಿದ್ದರು.
ತಾಯಂದಿರು ಹಾಲುಣಿಸದಿದ್ದರೆ, ದುಶ್ಚಟಗಳಿಗೆ ದಾರಿಚಿಕ್ಕನಾಯಕನಹಳ್ಳಿ,ಆ.04 : ಆಧುನಿಕತೆಗೆ ಮಾರು ಹೋಗಿ ತಮ್ಮ ಮಕ್ಕಳಿಗೆ ತಾಯಂದಿರು ಹಾಲುಣಿಸುತ್ತಿಲ್ಲ ಇದರಿಂದ ಮಗುವು ದುಶ್ಚಟಗಳಿಗೆ ಬಲಿಪಶುವಾಗುವ ಸಂಭವ ಹೆಚ್ಚಾಗಿದೆ ಎಂದು ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಅಭಿಪ್ರಾಯಪಟ್ಟರು. ಪಟ್ಟಣದ ವಿನಾಯಕ ನಗರದ ಅಂಗನವಾಡಿಯಲ್ಲಿ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ತನ್ಯಪಾನ ವಷರ್ಾಚರಣೆಯು 22 ವರ್ಷಗಳಿಂದ ನಡೆದುಕೊಂಡು ಬಂದು ಹಲವರಿಗೆ ಈ ಕಾರ್ಯಕ್ರಮದ ಮೂಲಕ ತಿಳುವಳಿಕೆ ನೀಡಿದರೂ ತಾಯಂದಿರು ಈಗಿನ ಆಧುನಿಕತೆಗೆ ಮಾರು ಹೋಗಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಕ್ಕಳಿಗೆ ಹಾಲುಣಿಸಲು ಬೇಜಾವಬ್ದಾರಿತನ ತೋರುತ್ತಿದ್ದು ಈಗೆ ತಾಯಂದಿರು ಹಾಲುಣಿಸದಿದ್ದರೆ ತಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ತಾವೇ ದುಶ್ಚಟಗಳಿಗೆ ದಾರಿ ತೋರಿದಂತಾಗುತ್ತದೆ ಎಂದ ಅವರು ಮಗುವಾದ ನಂತರ ಸುಮಾರು 6ತಿಂಗಳವರೆವಿಗೂ ತಮ್ಮ ಮಕ್ಕಳಿಗೆ ತಾಯಂದಿರು ಹಾಲುಣಸಬೇಕು ಎಂದು ಸಲಹೆ ನೀಡಿದರು. ಶಿಶು ಅಭಿವೃದ್ದಿ ಮೇಲ್ವಿಚಾರಕಿ ನಾಗರತ್ನ ಮಾತನಾಡಿ ಮಗು ಜನಿಸಿದ ಅರ್ಧ ಗಂಟೆಯೊಳಗೆ ತಾಯಂದಿರು ಮಗುವಿಗೆ ಹಾಲುಣಿಸಿದರೆ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ, ತಾಯಂದಿರು 2ವರ್ಷಗಳ ತನಕ ಮಗುವಿಗೆ ಹಾಲುಣಿಸಿದರೆ ಮಗುವು ಆರೋಗ್ಯವಾಗಿ ಬೆಳೆಯುತ್ತದೆ ಎಂದ ಅವರು ಆಗಷ್ಟ್ 1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು ಇಂತಹ ಕಾರ್ಯಕ್ರಮಗಳಿಗೆ ತಾಯಂದಿರು ಭಾಗವಹಿಸಿ ಸೂಕ್ತ ಸಲಹೆ ಪಡೆಯಬೇಕು ಎಂದರು. ಪುರಸಭೆ ಸದಸ್ಯೆ ಶಾರದ ಶಂಕರಬಾಬು ಮಾತನಾಡಿ ತಾಯಿಯ ಎದೆ ಹಾಲಿನಿಂದ ಮಗುವು ರೋಗ ನಿರೋಧಕ ಶಕ್ತಿ ಪಡೆಯಲಿದೆ ಹಾಗೂ ಮಗುವಿಗೆ ಹಾಲುಣಿಸುವುದರಿಂದ ತಾಯಿಯ ಹಾಗೂ ಮಗುವ ಭಾಂದವ್ಯ ಹೆಚ್ಚತ್ತದೆ ಎಂದರು.ಸಮಾರಂಭದಲ್ಲಿ ಪುರಸಭೆ ಸದಸ್ಯ ಧರಣಿಲಕ್ಕಪ್ಪ ಉಪಸ್ಥಿತರಿದ್ದರು.
ಆರಂಭಗೊಂಡ ದಕ್ಕಲಿಗ ಜಾತಿ ಸಮುದಾಯದ ರಾಜ್ಯ ಸಂಘಟನೆ ಚಿಕ್ಕನಾಯಕನಹಳ್ಳಿ,ಆ.04 : ತಾಲ್ಲೂಕಿನ ಚಿಕ್ಕೇನಹಳ್ಳಿ ಮಠದಲ್ಲಿ ನಡೆದ ಅಲೆಮಾರಿ ಬುಡಕಟ್ಟು ಮಹಾಸಭಾದ ಸಭೆಯಲ್ಲಿ ದಕ್ಕಲಿಗ ಜಾತಿ ಸಮುದಾಯದ ರಾಜ್ಯ ಸಂಘಟನೆ ಆರಂಭಗೊಂಡಿತು.ದಕ್ಕಲಿಗರ ರಾಜ್ಯ ಸಂಘಟನೆಯ ಸಂಚಾಲಕರಾಗಿ ಚಿಕ್ಕನಾಯಕನಹಳ್ಳಿ ಡಿ.ಶಾಂತರಾಜು, ಯಾದಗಿರಿಯ ಜಿಲ್ಲೆಯ ಮಲಕಪ್ಪ, ರಾಯಚೂರು ಜಿಲ್ಲೆಯ ಮಾರುತಿ ಆಯ್ಕೆಯಾದರು.ಬೆಂಗಳೂರಿನಲ್ಲಿ ಆಗಸ್ಟ್ನಲ್ಲಿ ನಡೆಯುವ ದಕ್ಕಲಿಗರ ಮಹಾ ಸಮಾವೇಶವನ್ನು ಸಂಗಟಿಸಲು ಸಭೆಯಲ್ಲಿ ತೀಮರ್ಾನಿಸಿದ್ದು ಜಿಲ್ಲಾ ಸಂಘಟನೆಗೆ ಡಾ.ರಘುಪತಿಯವರನ್ನು ಗೌರವ ಅಧ್ಯಕ್ಷರನ್ನಾಗಿ, ದೊರೈರಾಜ್ರವರನ್ನು ಸಂಘಟನೆಯ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಲಯಿತು.

Wednesday, August 3, 2011

Tuesday, August 2, 2011




ಪ್ರೌಢಶಾಲಾ ಶಿಕ್ಷಣದ ಬಗ್ಗೆ ಹೆಚ್ಚು ಜಾಗೃತರಾಗಿ
ಚಿಕ್ಕನಾಯಕನಹಳ್ಳಿ,ಆ.02: ಪ್ರೌಢಾಶಾಲಾ ಹಂತ ಮಕ್ಕಳ ಶೈಕ್ಷಣಿಕ ಜೀವನದ ಬಹು ಮುಖ್ಯ ಘಟ್ಟ ಇಂತಹ ಸಮಯದಲ್ಲಿ ಪೋಷಕರು, ಶಿಕ್ಷಕರು, ಸಾರ್ವಜನಿಕರು ್ಲ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ತಾಲ್ಲೂಕಿನ ಸಾಸಲು ಪ್ರೌಡಶಾಲಾ ನೂತನ ಕೊಠಡಿ, ಬೈಸಿಕಲ್ ಹಾಗೂ ಶೆಟ್ಟಿಕೆರೆ ಹೋಬಳಿ ಮಟ್ಟದ ಕ್ರೀಡಾ ಕೂಟ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಕರ್ಾರ ಮಕ್ಕಳ ಸವರ್ಾಂಗೀಣ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಮಾತನಾಡಿ ಸಕರ್ಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೇಕ ಯೋಜನೆಗಳನ್ನು ತಂದಿದ್ದು ಇದರ ಪ್ರಯೋಜನ ಪಡೆದು ಜೀವನದಲ್ಲಿ ಪ್ರಗತಿ ಸಾಧಿಸಬೇಕೆಂದರು.
ತಾಲ್ಲೂಕಿಗೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ 26 ಕೆರೆಗಳಿಗೆ ನೀರು ಹರಿಸಲು ಸಕರ್ಾರ 102 ಕೋಟಿ ರೂ ಮಂಜೂರಾತಿ ನೀಡಿದ್ದು ಇದಕ್ಕೆ ಶ್ರಮಿಸಿದ ಸಂಸದ ಜಿ.ಎಸ್.ಬಸವರಾಜು ಹಾಗೂ ಕೆ.ಎಸ್.ಕಿರಣ್ಕುಮಾರ್, ವಿವಿಧ ಮಠಾಧಿಪತಿಗಳಿಗೆ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಈ ಕೀತರ್ಿ ಸಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಇ.ಓ ದಯಾನಂದ್, ತಾ.ಪಂ.ಸದಸ್ಯ ರಮೇಶ್, ಗ್ರಾ.ಪಂ.ಸದಸ್ಯರಾದ ರವಿಕುಮಾರ್, ದಿನೇಶ್, ಕುಮಾರಯ್ಯ, ಲಲಿತಮ್ಮ, ಇಂಜಿನಿಯರ್, ಸಾಸಲು ಮಹೇಶ್, ಶಾಂತಕುಮಾರ್ ಮುಂತಾದವರಿದ್ದರು.
ಹಾಲಿ/ಮಾಜಿ ಯೋಧರ ಸಭೆ
ಚಿಕ್ಕನಾಯಕನಹಳ್ಳಿ,ಆ.02 : ತಾಲ್ಲೂಕು ವ್ಯಾಪ್ತಿಯಲ್ಲಿ ನೆಲಸಿರುವ ಮಾಜಿ ಸೈನಿಕರು ಹಾಗೂ ಹಾಲಿ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರುಗಳಿಗಾಗಿ ಇದೇ 15ರ ಸೋಮವಾರ ಮಧ್ಯಾಹ್ನ 3.30ಕ್ಕೆ ್ಲಜೋಗಿಹಳ್ಳಿ ಗೇಟ್ ದಕ್ಷಿಣ ಬಡಾವಣೆಯಲ್ಲಿರುವ ಮಾಜಿ ಯೋಧರಾದ ಶಿವಣ್ಣನವರ ನಿವಾಸದಲಿ ್ಲ ಚಹಾಕೂಟವನ್ನು ಏರ್ಪಡಿಸಿದ್ದು ಎಲ್ಲಾ ಹಾಲಿ ಮತ್ತು ಮಾಜಿ ಯೋಧರುಗಳು ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಾಜಿ ಯೋಧರ ಸಂಘದ ಅಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಕೋರಿದ್ದಾರೆ.
ಗಣಿಗಾರಿಕೆಗಾಗಿ ಅಕ್ರಮ ರಸ್ತೆ ನಿಮರ್ಾಣ: ಬಿ.ಎಲ್.ಆರೋಪ
ಚಿಕ್ಕನಾಯಕನಹಳ್ಳಿ,ಆ.02: ಹತ್ಯಾಳ್ ಬೆಟ್ಟದಿಂದ ಅಬ್ಬಿಗೆ ಗುಡ್ಡದವರೆಗೆ ಗಣಿಗಾರಿಕೆಗಾಗಿ ಸಕರ್ಾರ ಅಕ್ರಮವಾಗಿ ರಸ್ತೆ ನಿಮರ್ಾಣ ಮಾಡುತ್ತಿದೆ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ಆರೋಪಿಸಿದ್ದಾರೆ.
ಗಣಿ ಧಣಿಗಳ ಅನುಕೂಲಕ್ಕಾಗಿ ಹತ್ಯಾಳ್ ಬೆಟ್ಟದ ತಪ್ಪಲಿನಿಂದ ಅಬ್ಬಿಗೆ ಗುಡ್ಡದ ವರೆಗೆ ಸುಮಾರು 30 ಅಡಿ ಅಗಲದ 12 ಕಿ.ಮೀ. ದೂರ ಈ ರಸ್ತೆ ನಿಮರ್ಿಸುತ್ತಿದ್ದು, ರಸ್ತೆಗಾಗಿ ಹುಲ್ಲುಬಂದಿ ಖರಾಬ್ ಜಮೀನುಗಳು, ಅರಣ್ಯ ಪ್ರದೇಶ, ಗುಂಡುತೋಪುಗಳು ಸೇರಿದಂತೆ ಆ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬಿಟ್ಟಿರುವ ಎಲ್ಲಾ ಜಮೀನುಗಳನ್ನು ರಸ್ತೆ ನಿಮರ್ಾಣ ಕಾರ್ಯಕ್ಕೆ ಬಳಿಸಕೊಳ್ಳಲಾಗುತ್ತಿದ್ದು ಇದು ಸಕರ್ಾರವೇ ಮಾಡುತ್ತಿರುವ ಅಕ್ರಮ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರಿಗೆ ಉಪಯೋಗವಲ್ಲದೆ ರಸ್ತೆ ನಿಮರ್ಾಣಕ್ಕೆ ತಮ್ಮ ವಿರೋಧವಿದೆ ಎಂದರು . ಕನರ್ಾಟಕ ದಲಿತ ಪರಿಸರ ಮತ್ತು ಮೀಸಲಾತಿ ರಕ್ಷಣಾ ಸಮಿತಿಯ ಅಧ್ಯಕ್ಷ ನಾರಾಯಣ್ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈಚೆಗೆ ವಿಶ್ವಪರಿಸರ ದಿನವನ್ನು ಈ ಭಾಗದ ಗಡಿ ಅಕ್ರಮದಲ್ಲಿ ಭಾಗಿಗಳಾದ ಮೈನಿಂಗ್ ಕಂಪನಿಯ ಜೊತೆಗೂಡಿ ಆಚರಿಸಿದೆ ಎಂದು ಆರೋಪಿಸಿದರು.
ತಾ.ಪಂ. ನೂತನ ಮಳಿಗೆಗಳನ್ನು ಬಾಡಿಗೆಗೆ ಕೊಡಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಆ.02 : ತಾಲ್ಲೂಕು ಪಂಚಾಯಿತಿ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಮುಂಬಾಗ 5 ಅಂಗಡಿ ಮಳಿಗೆಗಳನ್ನು ಕಟ್ಟಿದ್ದು ಮಳಿಗೆಗಳು ಉದ್ಘಾಟನೆಯಾಗಿ ಒಂದು ವರ್ಷವಾದರೂ ಯಾರಿಗೂ ಬಾಡಿಗೆ ಕೊಡದೆ ನಿರ್ಲಕ್ಷ ಮಾಡಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕೃಷ್ಣೆಗೌಡ ಆರೋಪಿಸಿದ್ದಾರೆ.
ಈ ಮಳಿಗೆಗಳನ್ನು ಕಟ್ಟಲು ಲಕ್ಷಾಂತರ ರೂಗಳು ಖಚರ್ಾಗಿದೆ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ತಾ.ಪಂ.ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರುಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ್ ಒತ್ತಾಯಿಸಿದ್ದಾರೆ.
ಕ್ರೀಡಾಕೂಟಗಳು ಮುಂದೂಡಿದೆ: ತಾ.ದೈ.ಶಿ.ಸಂಘ
ಚಿಕ್ಕನಾಯಕನಹಳ್ಳಿ,ಆ.02: ದೈಹಿಕ ಶಿಕ್ಷಕರ ಬೇಡಿಕೆ ಈಡೇರುವವರೆಗೆ ತಾಲ್ಲೂಕಿನಲ್ಲಿ ನಡೆಯುವ ಎಲ್ಲಾ ಹಂತಗಳ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಎಸ್.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನಿದರ್ೇಶನದ ಮೇರೆಗೆ ಕ್ರೀಡಾಕೂಟಗಳಲ್ಲಿ ದೈಹಿಕ ಶಿಕ್ಷಕರು ಅಸಹಕಾರ ತೋರಲಿದ್ದಾರೆ ಎಂದಿರುವ ಅವರು ನಮ್ಮ ಬೇಡಿಕೆಗಳಾದ ಪ್ರೊ.ಎಲ್.ಆರ್.ವೈದ್ಯನಾಥನ್ ಸಮಿತಿ ವರದಿ ಅನುಷ್ಠಾನ ಆಗದೇ ಇರುವುದು, 1967ರಿಂದ ಇಲ್ಲಿಯವರೆಗೆ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆಯಾಗದಿರುವ ಕುರಿತು, ದೈಹಿಕ ಶಿಕ್ಷಣ ಶಿಕ್ಷಕರ ಮುಂಬಡ್ತಿಯ ಬಗ್ಗೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ನೇಮಕಾತಿ ಆಗಿರುವುದಿಲ್ಲ ಈ ಬೇಡಿಕೆಗಳು ಅನುಷ್ಠಾನವಾಗಲೆಂದು ಕೋರಿದ್ದಾರೆ.