Tuesday, May 31, 2011

ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳು






ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಚಿಕ್ಕನಾಯಕನಹಳ್ಳಿ

,ಮೇ.31: ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಜೂನ್ 3ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ತಾ.ಪಂ ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಡಾ.ಎಂ.ಸಿ ಮೋದಿ ಚಾರಿಟಬಲ್ ಕಣ್ಣಿನ ಆಸ್ಪತ್ರೆ, ಮತ್ತು ಕೆ.ಟಿ.ಗೋವಿಂದಪ್ಪನವರ ಅಭಿಮಾನಿ ಬಳಗದ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ಸ್ಥಳೀಯ ವೈದ್ಯಾಧಿಕಾರಿಗಳು ಮತ್ತು ನೇತ್ರ ಪರೀಕ್ಷಕರ ಸಂಯುಕ್ತಾಶ್ರಯದಲ್ಲಿ ಕುಪ್ಪೂರು ಗದ್ದಿಗೆ ಮಠದ ಆವರಣದಲ್ಲಿ ಶಿಬಿರವನ್ನು ಹಮ್ಮಿಕೊಂಡಿದ್ದು ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ, ಡಾ.ಅಭಿನವ ಮಲ್ಲಿಕಾಜರ್ುಸದೇಶೀಕೇಂದ್ರಸ್ವಾಮಿರವರ ದಿವ್ಯ ಸಾನಿದ್ಯದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪರವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಅಧ್ಯಕ್ಷತೆ ವಹಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಡಾ.ಚನ್ನಮಲ್ಲಯ್ಯ, ಮೈನ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ಉದಯವಾಣಿ ಜಿಲ್ಲಾ ವರದಿಗಾರ ಚಿ.ನಿ.ಪುರಷೋತ್ತಮ್ರವರಿಗೆ ಸನ್ನಾನಿಸಲಿದ್ದು ಮುಖ್ಯ ಅತಿಥಿಗಳಾಗಿ ಡಾ.ಅಮರನಾಥ ಎಂ.ಮೋದಿ, ಡಾ.ಎಸ್.ಜಿ.ಪರಮೇಶ್ವರಪ್ಪ, ಕೆ.ಜಿ.ಶ್ರೀಧರ್, ಎನ್.ಎಂ.ಶಿವಕುಮಾರ್, ಕೆ.ಆರ್.ಲಕ್ಷ್ಮೀನಾರಾಯಣ್, ಎಸ್.ಎಲ್.ಶಾಂತಕುಮಾರ್, ಡಾ.ಮಹೇಂದ್ರ, ಎನ್.ಎನ್.ಶ್ರೀಧರ್, ಶಶಿಕಿರಣ್, ಸಿ.ಎನ್.ಮರುಳಾರಾಧ್ಯ, ಕೆ.ಜಿ.ರಾಜೀವ್, ಸಿ.ಗುರುಮೂತರ್ಿ ಕೊಟಿಗೆಮನೆ, ವಾಗೀಶ್ ಪಂಡಿತಾರಾಧ್ಯ ಉಪಸ್ಥಿತರಿರುವರು.
.

Monday, May 30, 2011



ರೈತರ ಏಳಿಗೆಗಾಗಿ ಸಹಾಯ ಧನ : ಟಿ.ಸಿ.ಕಾಂತರಾಜುಚಿಕ್ಕನಾಯಕನಹಳ್ಳಿ,

ಮೇ.30: ಸಣ್ಣ ಮತ್ತು ಅತಿಸಣ್ಣರೈತರ ಏಳಿಗೆಗಾಗಿ ಸುವರ್ಣ ಭೂಮಿ ಯೋಜನೆಯಡಿ ಸಹಾಯ ಧನ ನೀಡುವ ಮೂಲಕ ರೈತರ ಏಳಿಗೆಯನ್ನು ಕಾಣಲು ಸಕರ್ಾರ ಪ್ರಯತ್ನಿಸುತ್ತಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಾವಯುವ ಕೃಷಿ, ಜೈವಿಕ ಇಂಧನ, ಜೇನುಸಾಕಾಣಿಕೆ ಚಟುವಟಿಕೆಗಳ ಎಲ್ಲಾ ಫಲಾನುಭವಿಗಳು ಆಯ್ಕೆಯಾಗಿದ್ದು ಕೃಷಿ ಕಾರ್ಯಗಳ ಸಹಾಯಧನಕ್ಕೆ ಹೆಚ್ಚು ಅಜರ್ಿ ಸಲ್ಲಸಿದ್ದು ಈ ಚಟುವಟಿಕೆಯ ಫಲಾನುಭವಿಗಳ ಆಯ್ಕೆಗೆ ಮಾತ್ರ ಲಾಟರಿ ಎತ್ತಲಾಗುತ್ತಿದೆ ಎಂದು ತಿಳಿಸಿದರು.ಯೋಜನ ನಿದರ್ೇಶಕ ಆಂಜನಪ್ಪ ಮಾತನಾಡಿ 5ಎಕರೆ ಒಳಪಟ್ಟ ರೈತರಿಗೆ 10ಸಾವಿರವರೆಗೆ ಸಹಾಯ ಧನ ನೀಡಲಿದ್ದು ಆಯ್ಕೆಯಾದ ಅಭ್ಯಥರ್ಿಗಳಿಗೆ ಇರುವ ಜಮೀನಿನ ಆಧಾರದ ಮೇಲೆ ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದರು. ಸಮಾರಮಭದಲ್ಲಿ ತಾ.ಪಂ.ಸದಸ್ಯೆ ಲತಾ, ಸಿ.ಡಿ.ಪಿ.ಓ ಅನೀಸ್ ಖೈಸರ್, ಇ.ಓ ದಯಾನಂದ್, ಕೃಷಿ ಸಹಾಯಕ ಅಧಿಕಾರಿ ರಂಗಸ್ವಾಮಿ, ರಾಜಸ್ವ ನಿರೀಕ್ಷಕ ಚಿಂತಾಮಣಿ ಉಪಸ್ಥಿತರಿದ್ದರು.
ಯೋಗಾಂಜನೇಯಸ್ವಮಿಗೆ ವಿಶೇಷ ಬೆಣ್ಣೆ ಅಲಂಕಾರಚಿಕ್ಕನಾಯಕನಹಳ್ಳಿ,

ಮೇ.30: ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿನ ಯೋಗಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಬೆಣ್ಣೆ ಅಲಂಕಾರ ಏರ್ಪಡಿಸಲಾಗಿತ್ತು.ಇಲ್ಲಿನ ಯೋಗಾಂಜನೇಯಸ್ವಾಮಿ ಯೋಗ ಮುದ್ರೆಯನ್ನು ಹೊತ್ತು ಗಂಭೀರವಾಗಿ ಕುಳಿತಿರುವುದು ವಿಶೇಷವಾಗಿದೆ ಮತ್ತು ದೇವಸ್ಥಾನದಲ್ಲಿ ಗಣಪತಿ, ಸುಬ್ರಹ್ಮಣ್ಯಸ್ವಾಮಿ ಮೂತರ್ಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಬಡಾವಣೆಯ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.ಸಂಘದ ಅಧ್ಯಕ್ಷ ರಾಜಣ್ಣ, ಕೃಷ್ಣೆಗೌಡ, ದಿನರಾಜು, ಗುರುಮೂತರ್ಿ, ಜಯರಾಮಯ್ಯ, ನಾರಾಯಣಪ್ಪ ಮತ್ತು ಸದಸ್ಯರು ಜಯಂತಿಯಂದು ಪಾಲ್ಗೊಂಡಿದ್ದರು.
ರಂಭಾಪುರಿ ಜಗದ್ಗುರುಗಳ ಪುರಪ್ರವೇಶ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಚಿಕ್ಕನಾಯಕನಹಳ್ಳಿ,ಮೇ.30: ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀಮದ್ರಂಭಾಪುರೀ ಜಗದ್ಗುರುಗಳವರ ಪುರಪ್ರವೇಶ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧಾಮರ್ಿಕ ಸಮಾರಂಭವನ್ನು ಜೂನ್ 5ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ಸಾಸಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ರಾಜದೇಶೀಕೇಂದ್ರ ಶಿವಚಾರ್ಯ ಭಗವತ್ಪಾದರು ದಿವ್ಯ ಸಾನಿದ್ಯ ವಹಿಸಲಿದ್ದು, ಯತೀಶ್ಚರ ಶಿವಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಜಲಸಂಪನ್ಮೂಲ ಸಚಿವ ಬಸವರಾಜು ಬೊಮ್ಮಾಯಿ ಉದ್ಘಾಟನೆ ನೆರವೇರಿಸಲಿದ್ದಾರೆ.ವಸತಿ ಸಚಿವ ವಿ.ಸೋಮಣ್ಣ ಉದ್ಯಾನವನ ಶಂಕುಸ್ಥಾಪನೆ ನೆರವೇರಿಸಲಿದ್ದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಭಾವಚಿತ್ರ ಅನಾವರಣ ಮಾಡಲಿದ್ದಾರೆ.ಕರಿವೃಷಭ ಶಿವಯೋಗೀಶ್ವರ ಸ್ವಾಮಿ ನಾಂದಿನುಡಿಯನ್ನಾಡಲಿದ್ದು, ಅಭಿನವ ಮಲ್ಲಿಕಾಜರ್ುನಸ್ವಾಮಿ ಬೋದಾಮೃತ, ಸಾಹಿತಿ ಡಾ.ಸಾ.ಶಿ.ಮರುಳಯ್ಯ ಉಪನ್ಯಾಸ ನೀಡಲಿದ್ದಾರೆ.ಶಿವಪ್ರಕಾಶ ಶಿವಚಾರ್ಯಸ್ವಾಮಿ, ರುದ್ರಮುನಿಸ್ವಾಮಿ, ಮಲ್ಲಿಕಾಜರ್ುನ ಶಿವಚಾರ್ಯಸ್ವಾಮಿ ರೇವಣಸಿದ್ದೇಶ್ವರ ಶಿವಚಾರ್ಯಸ್ವಾಮಿ ನುಡಿನಮನಗಳನ್ನಾಡಲಿದ್ದು ಸಿ.ಮೃಂತ್ಯುಂಜಯಸ್ವಾಮಿ ಸನ್ಮಾನಿತರಾಗಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿ.ಪಂ.ಅಧ್ಯಕ್ಷ ಡಾ.ರವಿ, ಮಾಜಿ ಶಾಸಕರಾದ ಎಸ್.ಪಿ.ಗಂಗಾಧರಪ್ಪ, ಕಿರಣ್ಕುಮಾರ್, ಜೆ.ಸಿ.ಮಾಧುಸ್ವಾಮಿ, ಬಿ.ಲಕ್ಕಪ್ಪ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ, ಜಿ.ಪಂ.ಸದಸ್ಯ ಪಂಚಾಕ್ಷರಿ, ಪಿ.ಎಲ್.ಡಿ ಬ್ಯಾಂಕ್ ನಿದರ್ೇಶಕ ಬಿ.ಎನ್.ಶಿವಪ್ರಕಾಶ್, ಜೆ.ಸಿ.ಪುರ ಜಗದೀಶ್, ನಟರಾಜ್ ರಂಗಕಮರ್ಿ ನಾಗರಾಜ್ಮೂತರ್ಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಉಪಸ್ಥಿತರಿರುವರು.

Sunday, May 29, 2011

Saturday, May 28, 2011




ರೈತರ ಬೆಲೆಯುಳ್ಳ ಜಮೀನುಗಳು ಗೃಹ ನಿಮರ್ಾಣ ಮಂಡಳಿಯ ಬಾಯಿಗೆ ?
ಸಂಕಷ್ಟದಲ್ಲಿರುವ ರೈತರು
ತಕರಾರು ಅಜರ್ಿ ಸಲ್ಲಿಸಿರುವ ಹೋರಾಟಗಾರರು
ಕವಲು ದಾರಿಯಲ್ಲಿರುವ ಸಣ್ಣ ಪುಟ್ಟ ಜಮೀನಿನವರು

(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಮೇ.28: ತಾಲೂಕಿನ ನಾಲ್ಕು ಜನ ವಿಚಾರವಂತ ರೈತರು ಎಲ್ಲೇ ಕುಳಿತು ಕುಶೋಲಪರಿ ಶುರು ಮಾಡಿದರು ಎಂದರೆ ಕೊನೆಯಲ್ಲಿ ಮಾತು ಮುಗಿಯುವುದು ಸಕರ್ಾರ ತಾಲೂಕಿನಲ್ಲಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಡಿಸಿರುವ ಆದೇಶದ ಬಗ್ಗೆ ಚಚರ್ೆಯ ನಂತರವೇ.
ಪಟ್ಟಣದ ಹುಳಿಯಾರು ಗೇಟ್ ಬಳಿ ರಾಜ್ಯ ಗೃಹ ನಿಮರ್ಾಣ ಮಂಡಳಿಯವರು 80 ಎಕರೆ 10 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವುದು ಒಂದೆಡೆಯಾದರೆ, ಸಾಲ್ಕಟ್ಟೆಯ ಬಳಿ ಕೈಗಾರಿಕೆಯ ಉದ್ದೇಶದಿಂದ ಕೆ.ಎ.ಐ.ಡಿ.ಬಿ. ಯವರು ಮೂರು ಸಾವಿರ ಎಕರೆ ಪ್ರದೇಶವನ್ನು ವಶ ಪಡಿಸಿಕೊಳ್ಳಲು ಹೊರಟಿರುವ ವಿಷಯ ಮತ್ತೂ ಚಚರ್ೆಗೆ ಗ್ರಾಸವಾಗಿದೆ. ಕೆ.ಎ.ಐ.ಡಿ.ಬಿ.ನವರು ಜಮೀನಿಗೆ ಕನಿಷ್ಟ 20 ಲಕ್ಷ ರೂಗಳನ್ನಾದರೂ ಕೊಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಎರಡರ ಪೈಕಿ ಪಟ್ಟಣದ ಹುಳಿಯಾರು ಗೇಟ್ ಬಳಿ ಗೃಹ ನಿಮರ್ಾಣ ಮಂಡಳಿ, ಬ್ಯಾಲಕೆರೆ ಹಾಗೂ ದಾಸಿಹಳ್ಳಿ ಸವರ್ೆ ನಂಬರ್ಗಳಲ್ಲಿ ಒಟ್ಟು 80 ಎಕರೆ 10 ಗುಂಟೆ ಜಮೀನನ್ನು ಭೂ ಸ್ವಾಧೀನ ಕಾಯ್ದೆ ಕಲಂ 4(1)ರ ಅಡಿಯಲ್ಲಿ, ದಿನಾಂಕ 7.1.2011ರಂದು ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆ ಈಗಾಗಲೇ ಕನರ್ಾಟಕ ರಾಜ್ಯ ಪತ್ರದಲ್ಲಿ ಭಿತ್ತರಗೊಂಡಿದೆ ಅಲ್ಲದೆ, ಸಾರ್ವಜನಿಕರ ಮಾಹಿತಿಗಾಗಿ ಪುರಸಭೆಯ ನೋಟಿಸ್ ಬೋಡರ್್ನಲ್ಲೂ ಪ್ರಚುರ ಪಡಿಸಲಾಗಿದೆ.
ಪುರಸಭೆಯ ನೋಟಿಸ್ ಬೋಡರ್್ಗೆ ಈ ವಿಷಯ ಬರುವವರೆಗೆ ಯಾವುದೇ ರೈತರಿಗೆ ಈ ಬಗ್ಗೆ ಸಣ್ಣ ಸುಳಿವೂ ದೊರೆತಿರಲಿಲ್ಲ, ಈ ಮುಂಚೆ ಹುಳಿಯಾರ್ ಗೇಟ್ ಬಳಿ ಜಮೀನಿರುವ ಹಲವರಿಗೆ ಕೆಲವು ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಧಿಕ ಹಣದ ರುಚಿ ತೋರಿಸಿ ಜಮೀನನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆ ಭಾಗದ ಕೆಲವು ಸಣ್ಣ ಪುಟ್ಟ ರೈತರು ತಮ್ಮ ಸಂಕಷ್ಟಕೆಂದು ಜಮೀನು ಮಾರಲು ಪ್ರಯತ್ನಿಸುತ್ತಿದ್ದರು, ಇಂತಹ ಸಮಯಕ್ಕೆ ಸರಿಯಾಗಿ ಗೃಹ ನಿಮರ್ಾಣ ಮಂಡಳಿ ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿಸೂಚನೆಯನ್ನು ಹೊರಡಿಸಿ ರೈತರಲ್ಲಿ ಗೊಂದಲ ಮೂಡಿಸಿರುವುದು ಒಂದೆಡೆಯಾದರೆ, ಇರುವ ಚೂರು ಪಾರು ಜಮೀನು ಕಳೆದುಕೊಂಡು ಮುಂದಿನ ಮಕ್ಕಳಿಗೆ ಜಮೀನಿಲ್ಲದೆ 'ಬರಿಗೈ' ಮಾಡಿ ಹೋಗುತ್ತೆವೇನಪ್ಪ ಎಂಬ ಚಿಂತೆಯಲ್ಲಿದ್ದವವರು ಕೆಲವರು. ಜುಮೀನಿದ್ದರೆ ಕೊನೆ ಪಕ್ಷ ರಾಗಿ ಕಾಳನ್ನಾದರೂ ಬೆಳೆದು ತಿನ್ನುತ್ತಾರೆ, ಜಮೀನು ಮಾರಿದರೆ ಅವರು ಕೊಡುವ ಅಷ್ಟೋ ಇಷ್ಟೋ ದುಡ್ಡು ತಮ್ಮ ಸಂಕಷ್ಟಗಳನ್ನು ತೀರಿಸಿಕೊಂಡು ಮುಂದಿನ ಜೀವನಕ್ಕೆ ಪರದಾಡುವ ಸ್ಥಿತಿ ನಿಮರ್ಾಣವಾಗುತ್ತದೆಯೇ ಎಂಬ ಚಿಂತಿಯಲ್ಲಿ ದಿನ ದೂಡುವಂತಾಗಿರುವುದು ಮತ್ತೊದೆಡೆಯ ಚಿತ್ರಣ.
ಆಥರ್ಿಕವಾಗಿ ಸಬಲರಾಗಿರುವವರು, ಹೆಚ್ಚು ಜಮೀನು ಉಳ್ಳವರು ಮಾತ್ರ ಏನಾದರೂ ಸರಿಯೇ ನಮ್ಮ ಜಮೀನನ್ನು ಉಳಿಸಿಕೊಂಡೇ ತೀರುತ್ತೇವೆಂದು ಈಗಾಗಲೇ ಎರಡು ಭಾರಿ ಬೆಂಗಳೂರಿನ ಗೃಹ ನಿಮರ್ಾಣ ಮಂಡಳಿಯ ಕಛೇರಿ ಹೋಗಿ ಬಂದು ಹೋರಾಟದ ಹಾದಿಗೆ ಸಜ್ಜುಗೊಳ್ಳುತ್ತಿದ್ದಾರೆ.
ತಕರಾರು ಅಜರ್ಿ: ಬ್ಯಾಲಕೆರೆ ಹಾಗೂ ದಾಸಿಹಳ್ಳಿಯ ಸವರ್ೆ ನಂಬರಿನಲ್ಲಿ ಜಮೀನುಳ್ಳ ಸುಮಾರು 37 ಜನರು ಗೃಹ ನಿಮರ್ಾಣ ಮಂಡಳಿಗೆ ಈಗಾಗಲೇ ತಕರಾರು ಅಜರ್ಿ ಹಾಕಿಕೊಂಡಿದ್ದಾರೆ.
ಗೃಹ ನಿಮರ್ಾಣ ಮಂಡಳಿ ಈ ಸಂಬಂಧ ಹೊರಡಿಸಿರುವ ಸವರ್ೆ ನಂಬರ್ಗಳಲ್ಲಿ ಫಲವತ್ತಾದ ತೆಂಗಿನ ತೋಟಗಳಿವೆ, ಹಣ್ಣು ಬಿಡುವ ತೋಟಗಾರಿಕೆ ಗಿಡಗಳಿವೆ, ತಮ್ಮ ಪೂವರ್ಿಕರ ಸಮಾಧಿಗಳಿವೆ ಇವ್ಯಾವನ್ನು ನೋಡದ ಮಂಡಳಿ, ಬೆಂಗಳೂರಿನಲ್ಲಿ ಕುಳಿತು ಭೂ ಮಾಪನ ಇಲಾಖೆಯಲ್ಲಿನ ನಕ್ಷೆ ಹಿಡಿದುಕೊಂಡು ಒಟ್ಟಾರೆ ಇಂತಿಷ್ಟು ಜಾಗ ಎಂಬಂತೆ ಗುತರ್ಿಸಿ ಅಧಿಸೂಚನೆ ಹೊರಡಿಸಿದೆ, ಈಗ ಈ ಭಾಗದ ರೈತರು ಮೇಲಿನ ಅಂಶಗಳ ಆಧಾರದ ಮೇಲೆ ತಕರಾರು ಅಜರ್ಿ ಹಾಕಿಕೊಂಡಿದ್ದಾರೆ.
ಇನ್ನೂ ಕೆಲವರು ಅಜರ್ಿ ಹಾಕುವ ಹಂತದಲ್ಲಿದ್ದಾರೆ. ಒಟ್ಟಾರೆ ಅಜರ್ಿ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇನ್ನೂ ಕೆಲವರು 5(1) ಘೋಷಣೆ, 6(1) ಘೋಷಣೆ ಯಾಗವ ವರೆಗೆ ಕಾದು ನೋಡುವ ತಂತ್ರವನ್ನು ಬಳಸುತ್ತಿದ್ದಾರೆ.
ಆಸೆಗೆ ಬಿದ್ದಿರುವ ಕೆಲವರು ; ಉಳುಮೆ ಮಾಡದಿರುವ ಕೆಲವು ರೈತರು ಹೋಗಲಿ ಬಿಡು, ಗೃಹ ನಿಮರ್ಾಣ ಮಂಡಳಿಯವರು ಒಂದು ಎಕರೆ ಜಮೀನಿನಲ್ಲಿ 60 * 40 ಸೈಟ್ಗಳನ್ನು ಕನಿಷ್ಟವೆಂದರೂ 15 ನಿವೇಶನಗಳನ್ನು ನಿಮರ್ಿಸಿ, ರಸ್ತೆ, ಚರಂಡಿ, ನೀರಿ, ಬೆಳಕಿನ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ಜೊತೆಗೆ ಭೂ ಪರಿವರ್ತನೆಯನ್ನು ಅವರೇ ಮಾಡಿಸಿಕೊಡುತ್ತಾರೆ, 15ರ ಪೈಕಿ ನಮಗೆ 5 ಸೈಟ್ ಕೊಡುತ್ತಾರೆ ಆಗ ನಮ್ಮ ಸೈಟಿಗೆ ಚಿನ್ನದಂತಹ ಬೆಲೆ ಬರುತ್ತದೆ ನಾವ್ಯಾಕೆ ಕಷ್ಟು ಪಡಬೇಕು ಎಂಬ ಧೋರಣೆಯ ಜನರು ಇಲ್ಲದಿಲ್ಲ. ಈಗಾಗಿ ಹೋರಾಟ ತೀವ್ರ ಸ್ವರೂಪ ಪಡೆಯುವಲ್ಲಿ ಇನ್ನೂ ನಿಧಾನ ಗತಿಯನ್ನು ಪಡೆಯುತ್ತಿದೆ.
ಈಗಾಗಲೇ ರೈತ ಸಂಘದ ನೇತೃತ್ವದಲ್ಲಿ ಹಲವರು ತಹಶೀಲ್ದಾರ್ ಕಛೇರಿಗೆ ತೆರಳಿ ತಮ್ಮ ವಿರೋಧದ ಹೇಳಿಕೆಯ ಜೊತೆಗೆ ತಮಗೆ ನ್ಯಾಯ ಒದಗಿಸುವ ಸಂಬಂಧ ಸಕರ್ಾರಕ್ಕೆ ಮನವಿಕೊಟ್ಟು ಬಂದಿದ್ದಾರೆ. ಈ ಬಗ್ಗೆ ಪಟ್ಟಣದ ಮಾವುರದಮ್ಮ ದೇವಸ್ಥಾನದ ಬಳಿ ಸಭೆಗಳು ನಡೆದಿವೆ. ಅಲ್ಲಿಯ ತೀಮರ್ಾನದಂತೆ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಸಿ.ಎಸ್.ಕೋದಂಡರಾಮಯ್ಯ, ದಯಾನಂದ್, ಸಂತೋಷ ಬೆಂಗಳೂರಿನ ಗೃಹ ನಿಮರ್ಾಣ ಮಂಡಳಿಯ ಕಛೇರಿಗೆ ಹೋಗಿ ಬಂದಿದ್ದಾರೆ. ಹೋರಾಟಗಾರರು ಇನ್ನೂ ಮಾಹಿತಿ ಕಲೆ ಹಾಕುವ ಹಂತದಲ್ಲಿದ್ದಾರೆ ನಿಜವಾದ ಹೋರಾಟವಿನ್ನು ಪ್ರಖರ ರೀತಿಯಲ್ಲಿ ಆರಂಭವಾಗಿಲ್ಲ.
ಹೋರಾಟಗಾರರು ತುಸು ಚಿಂತನೆಯಲ್ಲಿದ್ದಾರೆ, ಶಾಸಕರನ್ನು ಕಂಡು ಅವರು ನೀಡುವ ಮಾರ್ಗದರ್ಶನಲ್ಲಿ ನಡೆಯಬೇಕೆಂದು ಕೆಲವರ ಯೋಚನೆಯಾದರೆ, ಇನ್ನೂ ಕೆಲವರು ನಾವು ಮುಂದೆ ನುಗ್ಗಿ ಹೋರಾಟದ ಆದಿ ಹಿಡಿಯುವುದು, ನಮ್ಮಲ್ಲಿಯೇ ಕೆಲವರು ಯಾವುದೋ ಪ್ರಲೋಭನೆಗೆ ಬಿದ್ದು ಗೃಹ ನಿಮರ್ಾಣ ಮಂಡಳಿಗೆ ಭೂ ಸ್ವಾಧೀನಕ್ಕೆ ಒಪ್ಪಿಗೆ ಪತ್ರ ಕೊಡುವುದು ಆಗ ಇಲ್ಲದ ರಾದ್ದಾಂತಗಳಾಗುವುದರ ಜೊತೆಗೆ, ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯಗಳು ಹೇಳುತ್ತವೆ ಎಂಬ ಕಾರಣಕ್ಕೆ ಕೆಲವರು ಹಿಂದೇಟು ಆಕುತ್ತಿದ್ದರೆ. ಮುಂದಿನ ನಡೆ ಎತ್ತ ಕಡೆ ಇರಬೇಕೆಂಬುದರ ಬಗ್ಗೆ ಚಚರಿಸಲು ಸೋಮವಾರ ಬೆಳಗ್ಗೆ 10ಕ್ಕೆ ಮತ್ತೇ ಮಾವುರದಮ್ಮನ ದೇವಾಲಯದ ಬಳಿ ಸಭೆ ಸೇರುತ್ತಿದ್ದಾರೆ, ಸಭೆಗೆ ಎಲ್ಲಾ ರೈತ ಪರ ಹೋರಾಟಗಾರರಿಗೆ ಸ್ವಾಗತವಿದೆ.



Thursday, May 26, 2011



ಮನುಷ್ಯರಿಗೆೆ ಮರಣಾ ನಂತರ ನೆರವೇರಿಸುವಂತೆ ಕೋತಿಗೆ ಅಂತ್ಯಕ್ರಿಯೆಚಿಕ್ಕನಾಯಕನಹಳ್ಳಿ,

ಮೇ.26 : ಮನುಷ್ಯರಿಗೆ ಮರಣಾ ನಂತರ ನಡೆಯುವ ಅಂತ್ಯಕ್ರಿಯೆಯಂತೆ ಮರಣವನ್ನಪ್ಪಿದ ಕೋತಿಯೊಂದಕ್ಕೆ ಅಂತ್ಯಕ್ರಿಯೆ ನಡೆಸಿರುವ ಘಟನೆ ತಾಲ್ಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.ವಯಸ್ಸಾಗಿದ್ದ ಕೋತಿಯನ್ನು ಕಾಯಿಲೆಯಿಂದ ನರಳುತ್ತಿದ್ದುದನ್ನು ನೋಡಿ ಅಲ್ಲಿನ ಗ್ರಾಮಸ್ಥರು ಹಣ್ಣುಗಳನ್ನು ತಿನ್ನಿಸಿದಾಗ ಛೇತರಿಸಿಕೊಂಡು ಸ್ವಲ್ಪ ಹೊತ್ತು ಗ್ರಾಮದ ಸುತ್ತ ಓಡಾಡಿ ಪುನಃ ಅದೇ ಜಾಗಕ್ಕೆ ಬಂದು ನರಳಿ ಮರಣವನ್ನಪಿತು, ಗ್ರಾಮಸ್ಥರು ಎಲ್ಲಾ ಸೇರಿ ಮೀನಾಕ್ಷಮ್ಮಸಿದ್ದರಾಮಯ್ಯನ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ಮಾಡಿಸಿದರು. ಅಂತ್ಯಕ್ರಿಯೆಯ ನಂತರ ಪಾನಕ ಫಲಹಾರ ಹಂಚಲಾಯಿತು, ಗ್ರಾಮಸ್ಥರೆಲ್ಲಾರ ಹಣ ಸಹಾಯದೊಂದಿಗೆ ಅಂತ್ಯಕ್ರೀಯ ಜಾಗದಲ್ಲಿ ಮಂಟಪ ಕಟ್ಟಲಾಗಿದೆ ನಾಳೆ ಹನುಮಜ್ಜಯಂತಿ ಪ್ರಯಕ್ತ ಹಲವು ದೇವರು ಆಗಮಿಸಲಿದ್ದು ವಿಶೇಷ ಪೂಜೆಯನ್ನು ನಡೆಸಲು ಗ್ರಾಮಸ್ಥರು ತೀಮರ್ಾನಿಸಿದ್ದಾರೆ.
ಬುದ್ದಿವಂತಿಕೆಯಿಂದ ಕೆಲಸ ನಿರ್ವಹಿಸಿದರೆ ನ್ಯಾಯಾಲಯದಲ್ಲಿ ಗೆಲವುಚಿಕ್ಕನಾಯಕನಹಳ್ಳಿ,

ಈ.26: ನ್ಯಾಯಾಲಯಗಳಲ್ಲಿ ಶ್ರಮ ವಹಿಸಿ ಕೆಲಸ ಮಾಡುವ ಅಗತ್ಯವಿರುವುದಿಲ್ಲ, ಬುದ್ದಿವಂತಿಕೆಯಿಂದ ಕೆಲಸ ನಿರ್ವಹಿಸಬೇಕು, ಎಂದು ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಕೆ.ಜಿ.ಎಫ್ನಿಂದ ವಗರ್ಾವಣೆಗೊಂಡು ಬಂದಿರುವ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘ ಮತ್ತು ನ್ಯಾಯಾಲಯ ಸಿಬ್ಬಂದಿ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನ್ಯಾಯಾಧೀಶರು ನ್ಯಾಯಾಲಯದಲ್ಲಿ ತೀಪರ್ು ಬರೆಯುವಾಗ ಪುಟಗಟ್ಟಲೆ ತೀಪರ್ಿನ ವಿವರಣೆ ಬರೆಯುವ ಅಗತ್ಯತೆ ಇಲ್ಲ, ಮೊಕದ್ದಮೆಯ ಸರಳತೆಗೆ ತಕ್ಕಂತೆ ಒಂದೆರಡು ಪುಟಗಳಲ್ಲಿ ತೀಪರ್ು ಬರೆಯಬಹುದು ಎಂದರಲ್ಲದೆ ನನ್ನ ಮೊದಲ ಆದ್ಯತೆ ಹಳೆಯ ಮೊಕದ್ದಮೆಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸುವುದು, ಹೊಸ ಮೊಕದ್ದಮೆಗಳಿಗೆ ಕಾಲಾವಕಾಶ ನೀಡುವುದು, ಈ ನಿಟ್ಟಿನಲ್ಲಿ ಸ್ಥಳೀಯ ವಕೀಲರುಗಳು ಸಹಕಾರ ನೀಡಬೇಕು ವಕೀಲರು ಜಟಿಲವಾಗಿರುವ ಹಳೆಯ ಮೊಕದ್ದಮೆಗಳ ಬಗ್ಗೆ ವೈಯಕ್ತಿಕವಾಗಿ ಭೇಟಿ ಮಾಡಿ ಸಮಸ್ಯೆ ಇತ್ಯರ್ಥ ಪಡಿಸಲು ಸಹಕರಿಸಬೇಕು ಎಂದರು. ನ್ಯಾಯಾಧೀಶೆ ಎ.ಜಿ.ಶಿಲ್ಪರವರು ಮಾತನಾಡಿ ಶಿಸ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ ನ್ಯಾಯಾಧೀಶರು ಕೆ.ಎಂ.ರಾಜಶೇಖರ್ ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್ ಇಲ್ಲಿಗೆ ಹೊಸದಾಗಿ ಬರುವ ನ್ಯಾಯಾಧೀಶರನ್ನು ಸ್ವಾಗತಿಸುವುದು ಸಂಘದ ಸಂಪ್ರದಾಯ, ತಾಲೂಕು ಆಥರ್ಿಕವಾಗಿ ಹಿಂದುಳಿದ ತಾಲ್ಲೂಕು, ಇಲ್ಲಿ ಬಡ ಕಕ್ಷಿದಾರರಿಗೆ ವಕೀಲರುಗಳೇ ತಮ್ಮ ಸ್ವಂತ ಖಚರ್ಿನಲ್ಲಿ ಕಕ್ಷಿದಾರರನ್ನು ನ್ಯಾಯಾಲಯಕ್ಕೆ ಕರೆತಂದಿರುವ ಉದಾಹರಣೆಗಳಿವೆ ಆದುದರಿಂದ ನ್ಯಾಯಾಲಯವು ಕೆಲವು ವಿಷಯಗಳಲ್ಲಿ ಕಕ್ಷಿದಾರರಿಗೆ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದರು. ಹಿರಿಯ ವಕೀಲರಾದ ಎಂ.ಮಹಲಿಂಗಯ್ಯ, ಜಿ.ಎಸ್.ಚನ್ನಬಸಪ್ಪ, ಸಿ.ಕೆ.ಸೀತಾರಾಮಯ್ಯ, ಸಿದ್ದನಕಟ್ಟೆ ಚಂದ್ರಶೇಖರ್ ಮಾತನಾಡಿದರು.ಸಮಾರಂಭದಲ್ಲಿ ವಕೀಲರಾದ ಹನುಮಂತಪ್ಪ ಪ್ರಾಥರ್ಿಸಿ, ಸಿ.ರಾಜಶೇಖರ್ ಸ್ವಾಗತಿಸಿ ಲೋಕೇಶ್ ನಿರೂಪಿಸಿ, ಎನ್.ಎನ್.ಶ್ರೀಧರ್ ವಂದಿಸಿದರು.
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಜರ್ಿ ಆಹ್ವಾನಚಿಕ್ಕನಾಯಕನಹಳ್ಳಿ,ಮೇ

.26: ಅಂಗನವಾಡಿ ಸಹಾಯಕಿಯರ ನಿವೃತ್ತಿಯಿಂದ 13 ಅಂಗನವಾಡಿ ಕೇಂದ್ರಗಳಿಗೆ ಅರ್ಹ ಅಭ್ಯಥರ್ಿಗಳಿಂದ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅಜರ್ಿಗಳನ್ನು ಆಹ್ವಾನಿಸಲಾಗಿದೆ.ತಾಲ್ಲೂಕು ಶಿಶು ಅಭಿವೃದ್ದಿ ಯೋಜನೆಯ ಅಡಿಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿಯಾಗಿದ್ದು ತಾಲ್ಲೂಕಿನ ನಡುವನಹಳ್ಳಿ, ಚಟ್ಟಸಂದ್ರ, ಇಂದಿರಾನಗರ ಹುಳಿಯಾರು, ಲಕ್ಮಗೊಂಡನಹಳ್ಳಿ, ಸಾಸಲ.ಎ, ಹೊಸಹಳ್ಳಿ, ಕೇದಿಗೆಹಳ್ಳಿ, ಬುಳ್ಳೇನಹಳ್ಳಿ, ಮಾರಸಂದ್ರ ಪಾಳ್ಯ, ಕುರಿಹಟ್ಟಿ, ಬಾಲದೇವರಹಟ್ಟಿ, ಕೆಂಕೆರೆ, ದೊಡ್ಡರಾಂಪುರ, ಗ್ರಾಮಗಳಿಗೆ ಮೇ 24ರಂದು ಪ್ರಕಟಣೆ ಹೊರಡಿಸಿದ್ದು ಸಂಬಂಧಪಟ್ಟ ಗ್ರಾಮ, ಗ್ರಾಮಪಂಚಾಯ್ತಿ, ಗ್ರಾಮದ ಶಾಲೆಗಳಲ್ಲಿ ಪ್ರಕಟಣೆಯನ್ನು ಪ್ರಚಾರಪಡಿಸಲಾಗಿದೆ, ಭತರ್ಿ ಮಾಡಿದ ಅಜರ್ಿಗಳನ್ನು ಜೂನ್ 6ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸಬಹುದಾಗಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ ಖೈಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, May 21, 2011













ಸಕರ್ಾರಿ ಸವಲತ್ತುಗಳನ್ನು ಪಡೆಯಲು ಕರೆಚಿಕ್ಕನಾಯಕನಹಳ್ಳಿ,







ಮೇ.21: ಸಕರ್ಾರಿ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಕಂಬಳಿ ನೇಕಾರರು ಆಥರ್ಿಕವಾಗಿ ಅಭಿವೃದ್ದಿ ಹೊಂದುವಂತೆ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಕರೆ ನೀಡಿದರು. ಶ್ರೀ ರೇವಣಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರಿ ಸಂಘ(ನಿ) ದಲ್ಲಿ ಕಂಬಳಿ ನೇಕಾರರಿಗೆ ಜವಳಿ ಮತ್ತು ಕೈಮಗ್ಗ ಇಲಾಖೆಯಿಂದ ಮಂಜೂರಾದ ಮನೆ ನಿಮರ್ಾಣದ ಸಹಾಯಧನ, ಗ್ರಾಮೀನ ಮತ್ತು ನಗರ ವ್ಯಾಪ್ತಿಯ ಕಾರ್ಯಗಾರ ಹಾಗೂ ಕಂಬಳಿ ನೇಕಾರರ ಮಕ್ಕಳಿಗೆ ವಿದ್ಯಾಥರ್ಿ ವೇತನದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ ಸಂಘಗಳು ಏಕಮುಖಿಯಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಮತ್ತು ಉತ್ತಮವಾಗಿ ಕೆಲಸ ಮಾಡುವವರನ್ನು ಕಾಲಿಡಿದು ಎಳೆಯುವ ಪ್ರವೃತ್ತಿಯನ್ನು ಬಿಡಬೇಕು ಆಗ ಮಾತ್ರ ಸಂಘಗಳು ಅಭಿವೃದ್ದಿ ಹೊಂದುತ್ತವೆ ಎಂದು ಹೇಳಿದರು.ಸಮಾರಂಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು, ಜಿ.ಪಂ.ಸದಸ್ಯೆ ಮಂಜುಳ ಗವಿರಂಗಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಉಪಾಧ್ಯಕ್ಷ ಸಿ.ಕೆ.ಲೋಕೇಶ್, ಸಿ.ಪಿ.ಗಿರೀಶ್, ಸಿ.ಎಸ್.ದೇವರಾಜು , ಸಂಘದ ನಿದರ್ೇಶಕರುಗಳು ಹಾಜರಿದ್ದರು.

Thursday, May 19, 2011
















ಭೂ ಸ್ವಾಧೀನದ ಪ್ರಕ್ರಿಯೆಯನ್ನು ಕೈ ಬಿಡುವಂತೆ ಒತ್ತಾಯಚಿಕ್ಕನಾಯಕನಹಳ್ಳಿ,

ಮೇ.19: ಕೇವಲ ಜೀವನಾದಾರಕ್ಕೆ 5, 10 ಗುಂಟೆ ಭೂ ಪ್ರದೇಶ ಹೊಂದಿರುವವರೆ ಹೆಚ್ಚು, ಈ ಭೂ ಒಡೆಯರ ಭೂಮಿ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಸಕರ್ಾರದ ಕ್ರಮ ಖಂಡಿಸಿ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಕರ್ಾರವನ್ನು ಎಚ್ಚರಿಸಿದೆ. ಪಟ್ಟಣದ ಎಲ್ಲಮ್ಮದೇವಿಯ ದೇವಾಲಯದ ಆವರಣದಲ್ಲಿ ದಾಸೀಹಳ್ಳಿ ಹಾಗೂ ಬ್ಯಾಲದಕೆರೆಯ ಆಜುಬಾಜಿನಲ್ಲಿರುವ 80 ಎಕರೆ 10ಗುಂಟೆ, ಗೃಹಮಂಡಳಿಯ ಭೂ ಸ್ವಾಧೀನಕ್ಕೆ ಒಳಪಡುವ 107 ಮಂದಿ ರೈತರು ಸಭೆ ಸೇರಿ ಭೂ ಸ್ವಾಧೀನ ಕಾಯಿದೆ ಕಲಂ 4(1) ಅಡಿಯಲ್ಲಿ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು ಕಲಂ 6(1)ಎ ಕಾಯಿದೆಗೆ ಒಳಪಟ್ಟರೆ ರೈತರು ಭೂಮಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಸಕರ್ಾರಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿ ಬಡ ರೈತರನ್ನು ರಕ್ಷಿಸುವ ಹೊಣೆ ಎಲ್ಲರ ಜವಾಬ್ದಾರಿಯಾಗಿದೆ. ಈ ಹೋರಾಟದಲ್ಲಿ ಮಾನ್ಯ ಶಾಸಕರು ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು.ರೈತ ಮುಖಂಡ ಸಿ.ಬಿ.ತಿಪ್ಪೇಸ್ವಾಮಿ ಮಾತನಾಡಿ ಬದ್ದತೆಯ ಮೂಲಕ ಹೋರಾಟ ಕೈಗೆತ್ತಿಕೊಳ್ಳಬೇಕು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಡುವ ಹೋರಾಟದಲ್ಲಿ ಯಶಸ್ಸು ಕಾಣುವವರೆಗೂ ಸಂಘಟಿತರಾಗಿರಬೇಕು ಎಂದರು.ಸಭೆಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಸಿ.ಡಿ.ರಾಜಣ್ಣ, ಪುರಸಭೆ ಸದಸ್ಯ ಸಿ.ಪಿ.ಮಹೇಶ್, ಸಿ.ಪಿ.ಚಂದ್ರಶೇಖರಶೆಟ್ಟಿ, ಟಿ.ಕುಮಾರಯ್ಯ, ಸಿ.ಎನ್.ಕುಮಾರ್, ಪುಟ್ಟಯ್ಯ, ರಾಮಚಂದ್ರಯ್ಯ, ಸಿ.ವಿ.ದಯಾನಂದ, ಸಿ.ಬಿ.ರೇಣುಕಸ್ವಾಮಿ, ಸಿ.ಎಸ್.ಮಲ್ಲಿಕಾಜರ್ುನಯ್ಯ, ಬ್ಯಾಲದಕೆರೆ ನಂಜಪ್ಪ ಉಪಸ್ಥಿತರಿದ್ದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳಿಗೆಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲು ಆಗ್ರಹಿಸಿ ತಾಲೂಕು ದಂಡಾದಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ರಾಜ್ಯ ರಕ್ಷಣಾ ವೇದಿಕೆಯ ದಶಮಾನೋತ್ಸವ ಸಮಾರಂ

ಚಿಕ್ಕನಾಯಕನಹಳ್ಳಿ,ಮೇ.19 : ರಾಜ್ಯ ರಕ್ಷಣ ವೇದಿಕೆ ದಶಮಾನೋತ್ಸವವು ಬೆಂಗಳೂರು ಅರಮನೆಯ ಮೈದಾನದಲ್ಲಿ ಇದೇ ತಿಂಗಳ 28-29ರಂದು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕರವೇ ಅಧ್ಯಕ್ಷ ಎನ್.ಎಸ್. ವಿಷ್ಣುವರ್ಧನ್ ಹೇಳಿದರು. ಪಟ್ಟಣದ ಸಕರ್ಾರಿ ನೌಕರರ ಸಂಘದ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಕ್ಷಣ ವೇದಿಕೆಗೆ 10ನೇ ವರ್ಷ ದಾಟಿ 11ನೇ ವರ್ಷಕ್ಕೆ ಕಾಲಿಟ್ಟಿದೆ. ಕರವೇ ಒಗ್ಗೂಡಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭಕ್ಕೆ ನಮ್ಮ ಜಿಲ್ಲೆಯಿಂದ 10.000 ಕಾರ್ಯಕರ್ತರು ಆಗಮಿಸುವ ನೀರಿಕ್ಷೆಯಿದೆ ಎಂದರು. ಎರಡು ದಿನಗಳ ಕಾಲ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಏರ್ಪಡಿಸಿರುವ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಗಳ ಜನಪದ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪ್ರದಶರ್ಿಸುವ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದ್ದು ರಾಜ್ಯದ ಅಭಿವೃದ್ಧಿಯ ಚಿಂತನೆ ಜಾನಪದದ ವಿಚಾರವಾಗಿ ರಾಜ್ಯಮಟ್ಟದಲ್ಲಿ ವಿಚಾರ ಗೋಷ್ಟಿಗಳ ಹಾಗೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರು ನಾಡಿನ ಮಠಾಧೀಶರುಗಳು ಜನ ಪ್ರತಿನಿಧಿಗಳು ಅನಿವಾಸಿ ಕನ್ನಡಿಗರು ಸಾಹಿತಿಗಳು ಹಾಗೂ ನಾಡಪರ ಚಿಂತಕರ ಸಮ್ಮುಖದಲ್ಲಿ ನೆಡೆಯಲಿರುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.ತಾಲೂಕು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಪ್ರತಿಯೊಂದು ಹೋಬಳಿ &ಗ್ರಾಮಗಳಲ್ಲಿ ನಮ್ಮ ಕರವೇ ಶಾಖೆಗಳನ್ನು ತೆಗೆಯಬೇಕು ಮುಖಂಡರುಗಳು ಜನಪರ ರೈತರಿಗಾಗಿ ಅನ್ಯಾಯ ಆಗದಂತೆ ಹೋರಾಟ ಮಾಡಿ ಒಳ್ಳೆಯ ಕೆಲಸ ಮಾಡಬೇಕು ನಮ್ಮ ರಾಜ್ಯದಲ್ಲಿ ಭ್ರಷ್ಟಚಾರ ಜಾಸ್ತಿಯಗಾಗಿದೆ ಬಳ್ಳಾರಿ ಜಿಲ್ಲೆ ಮೊದಲನೆಯದಾದರೆ ಎರಡನೇಯದಾಗಿ ತುಮಕುರು ಜಿಲ್ಲೆ ಇವುಗನ್ನು ಹೋಗಲಾಡಿಸಲು ಪ್ರಯತ್ನಿಸೋಣ ಎಂದರು.ಸಭೆಯಲ್ಲಿ ಕೃಷ್ಣಮೂತರ್ಿ ಪ್ರಾಥರ್ಿಸಿ, ಲಕ್ಷ್ಮೀಶ್ ಸ್ವಾಗತಿಸಿ, ಸಿ.ಟಿ.ಗುರುಮೂತರ್ಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಮರ್ಿಕರ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ವಿದ್ಯಾಥರ್ಿ ಘಟಕದ ಅಧ್ಯಕ್ಷ ರಾಜೇಶ್ ಹಾಗೂ ಕರವೇ ಕಾರ್ಯಕರ್ತರು ಹಾಜರಿದ್ದರು.

Wednesday, May 18, 2011


ರಾಜ್ಯಪಾಲರನ್ನು ವಾಪಸ್ ಕೇಂದ್ರಕ್ಕೆ ಕರೆಸಿಕೊಳ್ಳಲು ಆಗ್ರಹ
ಚಿಕ್ಕನಾಯಕನಹಳ್ಳಿ,ಮೇ.18: ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ರವರು ಬಿ.ಜೆ.ಪಿ ನೇತೃತ್ವದ ಸಕರ್ಾರವನ್ನು ರಾಜ್ಯದಲ್ಲಿ ವಜಾ ಮಾಡಬೇಕೆಂದು ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ತಾಲೂಕು ಬಿಜೆಪಿ ಘಟಕ ಕಾರ್ಯಕರ್ತರೊಂದಿಗೆ ನಗರದ ನೆಹರು ಸರ್ಕಲ್ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡ ಶ್ರೀನಿವಾಸಮೂತರ್ಿ ಮಾತನಾಡಿ ಸಂವಿಧಾನ ವಿರೋದಿ ರಾಜ್ಯಪಾಲರ ಅಸಂವಿಧಾನಿಕ ಕುತಂತ್ರ ವರದಿಯನ್ನು ಕೇಂದ್ರ ಸಕರ್ಾರ ತಿರಸ್ಕರಿಸಬೇಕು ಹಾಗೂ ಕಾಂಗ್ರೆಸ್ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವ ಇವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು ಎಂದರು.
ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಜನರಿಂದ ಆಯ್ಕೆಯಾದ ಬಿಜೆಪಿ ಸಕರ್ಾರಕ್ಕೆ ಕಿರುಕುಳ ನೀಡುತ್ತಲಿದ್ದಾರೆ, ಸಕರ್ಾರಕ್ಕೆ 121 ಸದಸ್ಯರ ಬಲವಿದ್ದರೂ ಸಕರ್ಾರವನ್ನು ಅಮಾನತ್ತಿನಲ್ಲಿಡಲು ಶಿಫಾರಸ್ಸು ಮಾಡಲು ರಾಜ್ಯಪಾಲರ ಕ್ರಮ ಪ್ರಜಾತಂತ್ರಕ್ಕೆ ಮಾಡಿದ ಅಪಮಾನ ಇಂತಹ ಕೃತ್ಯಗಳನ್ನು ಎಸಗುತ್ತಿರುವ ರಾಜ್ಯಪಾಲರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವುದು ಸೂಕ್ತ ಎಂದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ (ಮಿಲ್ಟ್ರೀ)ಶಿವಣ್ಣ, ಹಳೇಮನೆ ಸುರೇಶ್, ಶ್ರೀನಿವಾಸಮೂತರ್ಿ, ರವಿಕುಮಾರ್, ಎಚ್.ಎಲ್.ಜಯದೇವ್, ಹುಳಿಯಾರ್ ಮೋಹನ್, ರಾಜಣ್ಣ, ರೇವಣ್ಣ ಮಧುಸೂಧನ, ಚಿತ್ತಯ್ಯ, ಕೆ.ಕೆ.ಹನುಮಂತಪ್ಪ ರೋಜೆಗೌಡ, ಈಶ್ವರ್ಭಾಗವತ್ ಕಾರ್ಯಕರ್ತರು ಹಾಜರಿದ್ದರು.ಕವಿಗಳು ಹಾಗೂ ಲೇಖಕರು ಹೆಸರು ನೊಂದಾಯಿಸಿಕೊಳ್ಳಲು ಮನವಿ
ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕು ನಾಲ್ಕನೇಯ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 10 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕವಿಗೋಷ್ಠಿ ಮತ್ತು ಲೇಖಕರ ಹೊಸ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಗುವುದು, ತಾಲೂಕಿನ ಆಸಕ್ತ ಕವಿಗಳು ತಮ್ಮ ಸ್ವರಚಿತ ಒಂದು ಕವನವನ್ನು ವಾಚಿಸಲು ಅವಕಾಶವಿದೆ, ಲೇಖಕರು ತಮ್ಮ ಹೊಸ ಪುಸ್ತಕದ ಒಂದು ಪ್ರತಿಯನ್ನು ಕಳಿಸಲು ಕೋರಿದೆ.
ಕವಿಗಳು ಹಾಗೂ ಲೇಖಕರು, ಸಿ.ಗುರುಮೂತರ್ಿ ಕೋಟಿಗೆಮನೆ ಕಾರ್ಯದಶರ್ಿ ತಾ.ಕ.ಸಾ.ಪ ಇವರಲ್ಲಿ ದಿ. 31.05.2011ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ವಿನಂತಿ, ಹೆಚ್ಚಿನ ಮಾಹಿತಿಗೆ ಮೊ.9448659573. ಸಂಪಕರ್ಿಸಲು ಕೋರಿದೆ.
ಡಿ.ವಿ.ಪಿ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 71.96 ಪಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.18: ಪಟ್ಟಣದ ದೇಶೀಯ ವಿದ್ಯಾಪೀಠ ಬಾಲಕರ ಪ್ರೌಢಶಾಲೆಯು 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಶೇ.71.96ರಷ್ಟು ಪಲಿತಾಂಶ ಪಡೆದಿದೆೆ.
ಶಾಲೆಯಲ್ಲಿ ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾದವರೆಂದರೆ ಮೇಘನ. ಎಮ್. 597, ಶ್ರೀನಿವಾಸ್. ಟಿ. - 594. ಯೋಗೀಶ್. .ಆರ್. 575, ಪೂಜಾ .ಕೆ.ಜೆ. 563, ಅನುಶ್ರೀ 543, ಮನೋಜ್ ಕುಮಾರ್ 535 ಅಂಕಗಳನ್ನು ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ರೋಟರಿ ಶಾಲೆಗೆ ಎಸ್.ಎಸ್.ಎಲ್.ಸಿಯಲ್ಲಿ 92.72 ಪಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.18: ಪಟ್ಟಣದ ರೋಟಾರಿ ಇಂಗ್ಲೀಷ್ ಪ್ರೌಡಶಾಲೆಯು 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.92.72ರಷ್ಟು ಪಲಿತಾಂಶ ಪಡೆದಿದೆೆ.
55 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು 11 ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿ, 22 ವಿದ್ಯಾಥರ್ಿಗಳು ಪ್ರಥಮ ದಜರ್ೆ, 5 ವಿದ್ಯಾಥರ್ಿಗಳು ದ್ವೀತೀಯ ದಜರ್ೆ, 13 ವಿದ್ಯಾಥರ್ಿಗಳು ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶಾಲೆಯಲ್ಲಿ ಅತ್ಯುನ್ನತ ಶೇಣಿಯಲ್ಲಿ ತೇರ್ಗಡೆಯಾದವರೆಂದರೆ ಶಿಲ್ಪ ಎಸ್. (585) 93.6, ಅಮೂಲ್ಯ ಜಿ.ಎಸ್.(582) 93.12, ಪ್ರಿಯಾ ಬಿ.(582)93.12, ಭವ್ಯ ಆರ್.(579)92.64, ದಿಲೀಪ ಎಮ್. ಬಿ.(578)92.48, ಚಿದಾನಂದ(563) 90.08, ಮೇಘನ ಹೆಚ್.(557)89.12, ಬಿಂದುಶ್ರೀ(552)88.32, ಅಪೇಕ್ಷ ಜೆ.ಎಮ್.(549)87.84, ನಂದೀನಿ ಕೆ.(546)87.36. ಹಷರ್ಿತ ಎಸ್.ವಿ.(537) 85.94 ಅಂಕಗಳನ್ನು ಪಡೆದು ಶಾಲೆಗೆ ಕೀತರ್ಿ ತಂದಿದ್ದಾರೆ.
ಭಾರಿ ಮಳೆಗೆ 1ಲಕ್ಷಕ್ಕೂ ಹೆಚ್ಚು ಹಾನಿ
ಚಿಕ್ಕನಾಯಕನಹಳ್ಳಿ,ಮೇ18: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ 34.8ರಷ್ಟು ಮಿ.ಮೀ ಭಾರಿ ಮಳೆಯಿಂದಾಗಿ ತೆಂಗಿನ, ಅಡಿಕೆ, ರಸ್ತೆಬದಿಯ ಮರ ಹಾಗೂ 17 ಮನೆಗಳು ಕುಸಿದು 1ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ.
ಕಂದಿಕೆರೆ ಹೋಬಳಿಯ ಆಶ್ರಹಾಳ್ನಲ್ಲಿ 16 ಮನೆಗಳು ಕುಸಿತಗೊಂಡು, ಕಂದಿಕೆರೆಯಲ್ಲಿ 1 ಮನೆ ಕುಸಿದಿದೆ, ಚಿ.ನಾ.ಹಳ್ಳಿಯಲ್ಲಿ 65.ಮಿ.ಮೀ, ಶೆಟ್ಟಿಕೆರೆಯಲ್ಲಿ 22.ಮಿ.ಮೀ, ಮತಿಘಟ್ಟದಲ್ಲಿ 14.1 ಮಿ.ಮೀ, ದೊಡ್ಡೆಣ್ಣೆಗೆರೆ 9.3 ಮಿ.ಮೀ, ಹುಳಿಯಾರು 40.6 ಮಿ.ಮೀ, ಬೋರನಕಣಿವೆ 46.2 ಮಿ.ಮೀ, ಸಿಂಗದಹಳ್ಳಿ 49.2 ಮಿ.ಮೀ.ನಷ್ಠು ಮಳೆಯಾಗಿದ.

























Wednesday, May 11, 2011





ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಲಿಂಗದೇವರು ಹಳೇಮನೆ
ಚಿಕ್ಕನಾಯಕನಹಳ್ಳಿ,ಮೇ.11: ತಾಲೂಕಿನ ನಾಲ್ಕನೇ ಸಾಹಿತ್ಯ ಸಮ್ಮೇಳನ ಜೂನ್ 10ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದು, ಸಮ್ಮೇಳನಾಧ್ಯಕ್ಷರಾಗಿ ರಂಗಾಯಣ ನಿದರ್ೇಶಕ ಲಿಂಗದೇವರು ಹಳೇಮನೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ..ಸಾ.. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹತ್ತಕ್ಕು ಹೆಚ್ಚು ಸಾಹಿತಿಗಳು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗುವ ಅರ್ಹತೆ ಇರುವ ಸಾಹಿತಿಗಳಿದ್ದು, ಇವರಲ್ಲಿ ಅಂತಿಮವಾಗಿ ಮೂವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದು ನಮ್ಮ ಕಾರ್ಯಕಾರಿ ಸಮಿತಿ ಜಿಲ್ಲಾ .ಸಾ. ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪನವರ ನೇತೃತ್ವದಲ್ಲಿ ಸಭೆ ಸೇರಿ ಲಿಂಗದೇವರು ಹಳೇಮನೆಯವರನ್ನು ಒಮ್ಮತದಿಂದ ತೀಮರ್ಾನಿಸಲಾಯಿತು ಎಂದರು.
ಸಮ್ಮೇಳನವನ್ನು ಒಂದು ದಿನ ನಡೆಸಲು ತೀಮರ್ಾನಿಸಿದ್ದು, ಜೂನ್ 10 ಬೆಳಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಆರಂಭಗೊಳ್ಳುವ ಸಮ್ಮೇಳನ, ಉದ್ಘಾಟನೆ, ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕವಿ ಗೋಷ್ಠಿ,ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಗುವುದಲ್ಲದೆ, ತಾಲೂಕಿನ ಮೂಲದವರಾಗಿದ್ದು ಹೊರಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ತಾ. .ಸಾ.. ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.

ನೆಲಮೂಲದ ಸಂಸ್ಕೃತಿ ನೈಜವಾಗಿರುವುದು ರಂಗಭೂಮಿ, ಜಾನಪದ ಕಲೆಗಳಲ್ಲಿ ಮಾತ್ರ : ಎಸ್.ಜಿ.ಎಸ್
ಚಿಕ್ಕನಾಯಕನಹಳ್ಳಿ,ಮೇ.11: ನಮ್ಮ ನೆಲದ ಪುರಾಣ ಪರಂಪರೆಯನ್ನು ಉಳಿಸಿ ಬೆಳಸಿಕೊಳ್ಳುವುದು ಅಗತ್ಯವಾಗಿದ್ದು, ನೆಲಮೂಲ ಸಂಸ್ಕೃತಿಯನ್ನು ಉಳಿಸಬೇಕಾದರೆ ಬೇರು ಮೂಲದ ಕಲೆಗಳಾದ ರಂಗಭೂಮಿ ಮತ್ತು ಜಾನಪದ ಕಲೆಗಳನ್ನು ಬೆಳಸಬೇಕೆಂದು ಕವಿ, ವಿಮರ್ಶಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಮ್ಮ ಯುವ ಜನಾಂಗದಲ್ಲಿ ಪುರಾಣದ ತಿಳುವಳಿಕೆ ಕಡಿಮೆಯಾಗಿದೆ, ಪಠ್ಯಪುಸ್ತಕದಲ್ಲಿ ಪುರಾಣಗಳಿಗೆ ಸಂಬಂಧಿಸಿದ ಪಾತ್ರಗಳನ್ನು ಪರಚಯಿಸುವುದು ಅವಶ್ಯವಾಗಿದೆ ಎಂದರು. ದೃಶ್ಯಮಾಧ್ಯಮಗಳ ದಾಳಿಯ ಕಾಲದಲ್ಲೂ ಯಕ್ಷಗಾನ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಪುರಾಣ ಪಾತ್ರಗಳಿಗೆ ಜೀವತುಂಬವ ಕೆಲಸವನ್ನು ಅನುಚಾನವಾಗಿ ನಡೆಸಿಕೊಂಡು ಬಂದಿದೆ ಎಂದರು.
ಜಿಲ್ಲಾಧಿಕಾರಿ ಡಾ. ಸಿ.ಸೋಮಶೇಖರ್ ಮಾತನಾಡಿ ಕಿರು ತೆರೆಯಲ್ಲಿ ಕಲಾವಿದ ಕುಬ್ಜನಾಗಿ ಕಾಣುತ್ತಾನೆ, ಬೆಳ್ಳಿ ತೆರೆಯಲ್ಲಿ ಹಿರಿದಾಗಿ ಕಾಣುತ್ತಾನೆ ಆದರೆ ರಂಗ ಭೂಮಿಯಲ್ಲಿ ಕಲಾವಿದ ನೈಜವಾಗಿ ಕಾಣುತ್ತಾನೆ, ಇದೇ ರಂಗಭೂಮಿಯ ವಿಶೇಷತೆ ಎಂದರಲ್ಲದೆ, ಹಿರಿ ತೆರೆ, ಕಿರು ತೆರೆ ನಡುವೆ ಅನುಸಂಧಾನ ಕಾರ್ಯವನ್ನು ಮಾಡುತ್ತಿರುವುದು ರಂಗ ಕಲೆ ಎಂದರು.
ರಂಗಭೂಮಿಯಲ್ಲಿ ಸ್ಪಂದನ, ಸಂವೇದನೆ ಎರಡಕ್ಕೂ ಸೂಕ್ತ ಅವಕಾಶವಿರುತ್ತದೆ ಆದ್ದರಿಂದಲೇ ಇಲ್ಲಿ ಪ್ರೇಕ್ಷಕನ ಆಸಕ್ತಿಯನ್ನು ನೇರವಾಗಿ ಏಕ ಕಾಲದಲ್ಲಿ ಸಮಗ್ರವಾಗಿ ಕಾಣುವ ಕಲೆ ಇದಾಗಿದೆ ಎಂದರು.
ಕುಪ್ಪೂರು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ರಂಗ ಕಲೆ ಇಂದಿಗೂ ಜೀವಂತವಾಗಿರುವುದು ಗ್ರಾಮೀಣ ಭಾಗದಲ್ಲಿ ಅದಕ್ಕೆ ಕಾರಣ ನಮ್ಮಲ್ಲಿ ಇನ್ನೂ ಜಾನಪದ ಕಲೆಗಳ ಬಗ್ಗೆ ಜನರಲ್ಲಿರುವ ಆಸಕ್ತಿ ಮತ್ತು ಒಲವು ಎಂದರಲ್ಲೆ, ಪ್ರತಿ ಮನುಷ್ಯನಲ್ಲೂ ಒಂದೊಂದು ಕಲೆ ಸುಪ್ತವಾಗಿರುತ್ತದೆ ಅದಕ್ಕೆ ಅಗತ್ಯವಿರುವ ವೇದಿಕೆಗಳನ್ನು ಒದಗಿಸಿದರೆ ಹೊರ ಹೊಮ್ಮಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಸಮಾರಂಭದಲ್ಲಿ ಚಿತ್ರ ನಿದರ್ೇಶಕ ಲಿಂಗದೇವರು ಬ್ಯಾಲಕೆರೆ ಮಾತನಾಡಿದರು, .ಸಿ. ಪಾಟೀಲ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿದರ್ೇಶಕ ಚಂದ್ರಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಗೋವಿಂದಗೌಡ, ಚಿ.ನಿ.ಪುರಷೋತ್ತಮ್ ಉಪಸ್ಥಿತರಿದ್ದರು.
ದಿವ್ಯ ಜ್ಯೋತಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಗೌರವಾಧ್ಯಕ್ಷ ಗುರುಲಿಂಗಯ್ಯ, ಕಲಾವಿದರಾದ ಕೆ.ಪಿ.ಕೃಷ್ಣಪ್ಪ, ಕೃಷ್ಣಾಚಾರ್ ರವರನ್ನು ಸನ್ಮಾನಿಸಲಾಯಿತು.


ಚಿ.ನಾ.ಹಳ್ಳಿ ಜಿ.ಜೆ.ಸಿ.ಯ 2ನೇ ಪಿ.ಯು.ಸಿ.ಯಲ್ಲಿ ಶೇ. 60ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.11: ಇಲ್ಲಿನ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜ್ನ ಎರಡನೇ ವರ್ಷದ ಪಿ.ಯು.ಸಿ.ಯಲ್ಲಿ ಎಲ್ಲಾ ವಿಭಾಗಗಳಿಂದ ಶೇ. 60 ರಷ್ಟು ಫಲಿತಾಂಶ ಬಂದಿದೆ, ಇದರಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 78, ಕಲಾ ವಿಭಾಗದಲ್ಲಿ ಶೇ.62, ವಿಜ್ಞಾನ ವಿಭಾಗದಲ್ಲಿ ಶೇ 40ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸಪ್ತಗಿರಿ ಎಂಬ ವಿದ್ಯಾಥರ್ಿ 500 ಅಂಕ ಪಡೆದು ಕಾಲೇಜಿಗೆ ಪ್ರಥಮ ನೆನಿಸಿಕೊಂಡಿದ್ದರೆ, ಪೂಜಾ ಎಸ್.ಆರ್. 487 ಅಂಕಪಡೆದು ಎರಡನೇ ಸ್ಥಾನದಲ್ಲಿದ್ದಾರೆ,
500ಕ್ಕಿಂತ ಹೆಚ್ಚು ಅಂಕ ಪಡೆದವರು, ಪವಿತ್ರ ಎಸ್ 502, ಮೇನಕಮ್ಮ ಬಿ.ಎನ್.504, ವರಧೀಶ ಕೆ. 510, ಲಾವಣ್ಯ ಡಿ.ಸಿ 517, ಪ್ರಿಯಾ ಎಚ್.ವೈ 505, ಶ್ರೀ ದೇವಿ 506, ಸುಪ್ರೀತ ಟಿ.ಎನ್. 512, ಕಾವ್ಯಶ್ರೀ ಬಿ.ಜೆ 530 ಅಂಕಗಳಿಸಿದ್ದಾರೆ.
ಯೋಗಾಂಜನೇಯಸ್ವಾಮಿ ದೇವಾಲಯ ಪ್ರಾರಂಭೋತ್ಸವ
ಚಿಕ್ಕನಾಯಕನಹಳ್ಳಿ,ಮೇ.11 : ಶ್ರೀ ಮಹಾಗಣಪತಿ, ಯೋಗಾಂಜನೇಯಸ್ವಾಮಿ, ಸುಬ್ರಹ್ಮಣ್ಯಸ್ವಾಮಿಯವರ ನೂತನ ದೇವಾಲಯ ಪ್ರಾರಂಭೋತ್ಸವ, ಕಳಸ ಪ್ರತಿಷ್ಠಾಪನಾ ಮತ್ತು ಧಾಮರ್ಿಕ ಸಭೆಯನ್ನು ಇದೇ 12 13 ಮತ್ತು 14ರಂದು ಏರ್ಪಡಿಸಲಾಗಿದೆ.
ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ನೂತನ ದೇವಾಲಯದಲ್ಲಿ 12ರಂದು ಹಳೆಯೂರು ಆಂಜನೇಯಸ್ವಾಮಿಯವರ ಆಗಮನದೊಂದಿಗೆ ಗಂಗಾಪೂಜೆ ದೇವಾಲಯ ಪ್ರವೇಶ, ನವಗ್ರಹ ಪೂಜೆ, 13ರಂದು ಸುದರ್ಶನ ಹೋಮ, ಜಯಾದಿಹೋಮ, ರಾಮತಾರಕಹೋಮ ಸಂಜೆ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಮ್ಮಿಕೊಂಡಿದ್ದು 14ರಂದು ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭವನ್ನು ಏರ್ಪಡಿಸಿದ್ದು ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರಸ್ವಾಮಿ, ಕಾಗಿನೆಲೆ ಗುರುಪೀಠದ ಈಶ್ವರಾನಂದಪುರಿಸ್ವಾಮಿ, ತಮ್ಮಡಿಹಳ್ಳಿ ಮಠದ ಶ್ರೀ ಅಭಿನವಮಲ್ಲಿಕಾಜರ್ುನಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಚಾರ್ಯಸ್ವಾಮಿ, ಗೋಡೆಕೆರೆ ಮಠದ ಮೃಂತ್ಯುಂಜಯಸ್ವಾಮಿ ಉಪಸ್ಥಿತರಿರುವರು.

Tuesday, May 10, 2011

ದಲಿತ ರಂಗಯ್ಯನನ್ನು ಕೊಲೆಮಾಡಿರುವವರನ್ನು ಕೂಡಲೇ ಬಂಧಿಸಿ ಹುಳಿಯಾರ್ ಎಸ್.ಐ.ರವರನ್ನು ಅಮಾನತ್ತು ಪಡಿಸಿ ರಂಗಯ್ಯನ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರಕ್ಕೆ ಒತ್ತಾಯಚಿಕ್ಕನಾಯಕನಹಲ್ಲಿ,

ಮೇ.11: ಕಲ್ಲಹಳ್ಳಿ ದಲಿತ ರಂಗಯ್ಯನನ್ನು ಅಮಾನುಷವಾಗಿ ಕೊಲೆ ಮಾಡಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಎಫ್.ಐ.ಆರ್.ನಲ್ಲಿ ಕಠಿಣವಾದ ಕಾಲಂಗಳನ್ನು ನಮೂದಿಸಬೇಕು, ಹುಳಿಯಾರು ಎಸ್.ಐ.ರವರನ್ನು ಅಮಾನತ್ತುಗೊಳಿಸಬೇಕು ಹಾಗೂ ಮೃತ ರಂಗಯ್ಯನ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ನೀಡಬೇಕೆಂದು ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಹುಳಿಯಾರು ಹೋಬಳಿಯ ಕಲ್ಲಹಳ್ಳಿ ರಂಗಯ್ಯನನ್ನು ಗವಿರಂಗಯ್ಯ, ಅನಂತಯ್ಯ, ಯೋಗೀಶ್, ಶಿವಣ್ಣ, ನಿರುವಗಲ್ ಆಟೋ ಗುರು ಎಂಬುವರು ಔತಣಕೂಟಕ್ಕೆಂದು ಕರೆದುಕೊಂಡು ಹೋಗಿ ಅವನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಬೇವಿನಹಳ್ಳಿ ಚನ್ನಬಸವಯ್ಯ, ಮೂರು ಕುಂಟೆ ಜಮೀನಿಗಾಗಿ ಒಂದು ಪ್ರಾಣವನ್ನೆ ತೆಗೆದಿರುವ ಆರೋಪಿಗಳನ್ನು ಕಠಿಣ ಕಾನೂನಿ ಅಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಹಿಂದೆ ದಲಿತ ಮಹಿಳೆ ಹೊನ್ನಮ್ಮನ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಕಠಿಣ ಕಾನೂನಿನಡಿಯಲ್ಲಿ ಬಂಧಿಸದೇ, ಅವರಲ್ಲಿ ಬಹುತೇಕರು ಜೈಲಿನಿಂದ ಹೊರಬಂದಿರುವುದು ದಲಿತರ ಮೇಲಿನ ದೌರ್ಜನ್ಯಕ್ಕೆ ಕುಮ್ಮುಕ್ಕು ನೀಡಿದೆ ಎಂದಿರುವ ಚನ್ನಬಸವಯ್ಯ, ಈ ಪ್ರಕರಣದಲ್ಲಿ ಮತ್ತೇ ಇಂತಹದೇ ತಪ್ಪು ಮಾಡದೇ ರಂಗಯ್ಯನನ್ನು ಕೊಲೆ ಮಾಡಿರುವ ಆರೋಪಿಗಳಿಗೆ ಬಿಗಿಯಾದ ಕಾನೂನಿನಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದಶರ್ಿ ಗೋಪಾಲಪುರ ಮಹದೇವ್, ಡಿ.ಕುಮಾರ್, ಈಚನೂರು ಮಹದೇವ್, ಜಿಲ್ಲಾ ಅಧ್ಯಕ್ಷ ಮಣಿವಿನ ಕುರಿಕೆ ಶಿವಕುಮಾರ್, ಸಿಂಗದಹಳ್ಳಿ ಗಿರಿಯಪ್ಪ, ಮಾರುಹೊಳೆ ನಾಗರತ್ನಮ್ಮ, ತಿಮ್ಮಯ್ಯ, ಹನುಮಯ್ಯ, ಹೊನ್ನೆಬಾಗಿ ಕೃಷ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೆ.ಸಿ.ಪುರ ಗ್ರಾ.ಪಂ. ಪಿ.ಡಿ.ಓ. ಅಮಾನತ್ತುಚಿಕ್ಕನಾಯಕನಹಳ್ಳಿ,

ಮೇ.11: ತಾಲೂಕಿನ ಜೆ.ಸಿ.ಪುರ ಗ್ರಾ.ಪಂ.ಯ ಪಿ.ಡಿ.ಓ. ಸುಭಾಷ್ ಚಂದ್ರ ಅವರನ್ನು ಜಿ.ಪಂ. ಸಿ.ಇ.ಓ.ರವರು ಸೇವೆಯಿಂದ ಅಮಾನತ್ತು ಗೊಳಿಸಿದ್ದಾರೆ ಎಂದು ಇ.ಓ. ದಯಾನಂದ ತಿಳಿಸಿದ್ದಾರೆ. ಜೆ.ಸಿ.ಪುರ ಗ್ರಾ.ಪಂ.ವ್ಯಾಪ್ತಿಯ ಅಭಿವೃದ್ದಿ ಅಧಿಕಾರಿ ಸಾರ್ವಜನಿಕರೊಂದಿಗೆ ಬೇಜವಬ್ದಾರಿ ವರ್ತನೆ ಹಾಗೂ 3.5 ಲಕ್ಷ ರೂಗಳ ಕಾಮಗಾರಿ ಒಂದರ ಓಚರ್ ನಿರ್ವಹಣೆ ಹಾಗೂ ಕ್ಯಾಷ್ ಬುಕ್ ಬರೆದಿಲ್ಲದಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು ತನಿಖೆಯನ್ನು ಕಾಯ್ದಿರಿಸಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿ.ಪಂ. ಸಿ.ಇ.ಓ. ಅಮಾನತ್ತು ಆದೇಶ ಹೊರಡಿಸಿದ್ದಾರೆ ಎಂದರು.
ರೇವಣ್ಣ ಮಠ ಶಾಲೆಯ 11ವಿದ್ಯಾಥರ್ಿಗಳು ವಸತಿ ಶಾಲೆಗೆ ಆಯ್ಕೆಚಿಕ್ಕನಾಯಕನಹಳ್ಳಿ,ಮೇ.10: ಪಟ್ಟಣದ ರೇವಣ್ಣ ಮಠ ಸಕರ್ಾರಿ ಹೆಚ್.ಪಿ.ಎಸ್ ಶಾಲೆಯ 11 ವಿದ್ಯಾಥರ್ಿಗಳು ಸಕರ್ಾರಿ ವಸತಿ ಶಾಲೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಶಾಲೆಯ ಸಿ.ಆರ್.ಸವಿತ 98 ಅಂಕ 4ನೇ ರ್ಯಾಂಕ್, ಸಿ.ಆರ್.ಚೈತನ್ಯ 95 ಅಂಕ 17ನೇ ರ್ಯಾಂಕ್, ಎ.ಎಚ್.ರೂಪ 90 ಅಂಕ 125ನೇ ರ್ಯಾಂಕ್, ಕೋಕಿಲ 90 ಅಂಕ126ನೇ ರ್ಯಾಂಕ್, ಸಿ.ಕೆ.ಭೂಮಿಕ 85 ಅಂಕ, ಸಿ.ಎನ್.ವೀಣಾ 85, ಹೆಚ್.ಎಂ.ದೇವರಾಜು 83, ಸಿ.ಎನ್.ಶ್ವೇತ 81, ಸಿ.ಆರ್.ಹೇಮಲತ 81, ಸಿ.ಪಿ.ಹಷರ್ಿತ 76, ಸಿ.ಡಿ.ಮಧು 75ಅಂಕ ಪಡೆದಿದ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಜಿ. ರೇವಣ್ಣ, ಮುಖ್ಯೋಪಾಧ್ಯಾಯನಿ ತಿಲೋತ್ತಮೆ, ಶಿಕ್ಷಕ ಬಸವರಾಜು ಸೇರಿದಂತೆ ಶಿಕ್ಷಕ ವೃಂದ ಮಕ್ಕಳನ್ನು ಅಭಿನಂದಿಸಿದ್ದಾರೆ.

Friday, May 6, 2011

Thursday, May 5, 2011





ಬಸವೇಶ್ವರ ಜಯಂತ್ಯೋತ್ಸವ

ಸಮಾರಂಭಚಿಕ್ಕನಾಯಕನಹಳ್ಳಿ,ಮೇ.05: ಮಹಾನ್ ಮಾನವತಾವಾಧಿ, ಸಮಾಜ ಸುಧಾರಕ ಶೇಷ್ಠ ವಚನಕಾರ ಶ್ರೀ ಬಸವೇಶ್ವರರ ಜಯಂತ್ಯೋತ್ಸವ ಸಮಾರಂಭವನ್ನು ಇದೇ 6ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲೂಕು ಆಡಳಿತ ಮತ್ತು ಬಸವ ಸಮಿತಿಯವರ ಸಂಯುಕ್ತಾಶ್ರಯದಲ್ಲಿ, ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.ಈ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಅನಾವರಣಗೊಳಿಸಲಿದ್ದು ಕಾನೂನು ಸಲಹೆಗಾರರಾದ ಶೋಭ ವಿಶೇಷ ಉಪನ್ಯಾಸ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ಶಿವಯೋಗಿಸ್ವಾಮಿ, ಎಂ.ಆರ್.ಹುಲಿನಾಯ್ಕರ್, ವೈ.ಎಂ.ನಾರಾಯಣಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿನಾಗರಾಜು, ಉಪಾಧ್ಯಕ್ಷೆ ಲಲತಿತಮ್ಮ ಮಂಜುನಾಥ್, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತೀಮ, ಪುರಸಭೆ ಉಪಾಧ್ಯಕ್ಷ ಆರ್.ರವಿ, ಮಾಜಿ ಶಾಸಕರಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಜಿ.ಪಂಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ ಉಪಸ್ಥಿತರಿರುವರು.
ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂನರ್ಿಮೆಂಟ್ಚಿಕ್ಕನಾಯಕನಹಳ್ಳಿ,

ಈ.05: ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂನರ್ಿಮೆಂಟ್ನ್ನು ಇದೇ 7 ಮತ್ತು 8ರಂದು ಏರ್ಪಡಿಸಲಾಗಿದೆ.ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಥಮ ಬಾರಿಗೆ ಟೂನರ್ಿಮೆಂಟ್ನ್ನು ಕುರುಬರಹಳ್ಳಿಯ ಬಸವೇಶ್ವರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾ ಸದಸ್ಯ ಎಂ.ಎನ್.ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ತಂಬಾಕು ಸೇವನೆಯ ವ್ಯವಸ್ಥೆ ತೊಲಗಲಿಚಿಕ್ಕನಾಯಕನಹಳ್ಳಿ,ಮೇ.05:

ಆಸ್ಪತ್ರೆಗಳಲ್ಲಿ ಭಯಂಕರ ರೋಗಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ತಂಬಾಕು ಸೇವನೆ ಮಾಡುವವರೆ ಹೆಚ್ಚಾಗಿದ್ದು ಈ ವ್ಯವಸ್ಥೆಯನ್ನು ತೊಡೆದು ಹಾಕುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪ ತಿಳಿಸಿದರು.ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆದ ಕಾಮರ್ಿಕರ ದಿನಾಚರಣೆ ಮತ್ತು ತಂಬಾಕು ಸೇವನೆ ವಿರೋದಿ ದಿನಾಚರಣೆಯಲ್ಲಿ ಮಾತನಾಡಿದ ಅವರು ಕಾಮರ್ಿಕರ ದಿನಾಚರಣೆಯ ಜೊತೆಗೆ ತಂಬಾಕು ಪಾಲನೆಯ ನಿಮರ್ೂಲನೆಯ ದಿನಾಚರಣೆ ಅಗತ್ಯವಾಗಿದೆ, ತಂಬಾಕು ಸೇವಿಸುವ ಹಲವರು ತಮ್ಮ ಸಂಸಾರದ ಸುಖವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಕಾಮರ್ಿಕರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ, ಕಾಮರ್ಿಕರು ಕಾಯರ್ೋನ್ಮುಖರಾಗಿದ್ದಾಗ ಆಗುವ ಆಕಸ್ಮಿಕ ಅವಗಡಗಳಿಗೆ ಹೆಚ್ಚು ಗಮನ ಹರಿಸಬೇಕು ಎಂದ ಅವರು, ತಂಬಾಕು ಸೇವನೆ ನಿಷೇದವಾದದು ಎಂದು ತಂಬಾಕಿನ ಮೇಲೆ ಬರೆದರೂ ಯಾರೂ ಅದರ ಬಗ್ಗೆ ಗಮನ ಹರಿಸದೇ ಅದರಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಅಲ್ಲದೇ ಚಿಕ್ಕ ವಯಸ್ಸಿನ ಮಕ್ಕಳು ತಂಬಾಕು ಸೇವನೆ ಮಾಡುತ್ತಿದ್ದಾರೆ ಇಂತಹ ತಪ್ಪು ವ್ಯವಸ್ಥೆ ಬದಲಾಗಬೇಕು ಎಂದರು.ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್ ಮಾತನಾಡಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಉಂಟಾಗುವುದುದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಸಲುವಾಗಿ ತಂಬಾಕಿನ ಸೇವನೆಯಿಂದ ದೂರು ಉಳಿಯುವುದು ಒಳ್ಳೆಯದು ಎಂದರು.ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಿವಾನಂದ್, ಉಪಾಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಕೀಲ ಶ್ರೀಧರ್ ಸ್ವಾಗತಿಸಿದರೆ, ವಕೀಲ ಹನುಮಂತಪ್ಪ ನಿರೂಪಿಸಿ, ಶಿರಸ್ತೆದಾರ್ ಕೆ.ವಿ.ಕುಮಾರ್ ವಂದಿಸಿದರು.

Wednesday, May 4, 2011







ನಾಟಕೋತ್ಸವದಲ್ಲಿ ವೃತ್ತಿ ರಂಗಭೂಮಿ, ಕಲಾ ಪ್ರಕಾರಗಳ ಬಗ್ಗೆ ವಿಚಾರಗೋಷ್ಠಿ ಚಿಕ್ಕನಾಯಕನಹಗ್ಳ,ಮೇ.04: ನಾಟಕೋತ್ಸವದ ಸಂದರ್ಭದಲ್ಲಿ ವಿಚಾರಗೋಷ್ಠಿಗಳನ್ನು ಹಮ್ಮಿಕೊಂಡಿದ್ದು, ಮೇ 7ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 2 ಮತ್ತು ಮಧ್ಯಾಹ್ನ 2.45ರಿಂದ 5ಗಂಟೆಯವರೆಗೆ ಎರಡು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.ಬೆಳಗ್ಗೆ 11.30ಕ್ಕೆ ಸಾಹಿತಿ ಆರ್.ಬಸವರಾಜುರವರ ಅಧ್ಯಕ್ಷತೆಯಲ್ಲಿ ವೃತ್ತಿ ರಂಗಭೂಮಿ ಮತ್ತು ಗುಬ್ಬಿ ವೀರಣ್ಣನವರ ಬಗ್ಗೆ ಪ್ರೊ.ಟಿ.ಎಸ್.ನಾಗರಾಜಶೆಟ್ಟಿ, ರಂಗಭೂಮಿ ಅಂದು-ಇಂದು ಎಂಬುವುದರ ಬಗ್ಗೆ ಡಾ.ಅಬ್ದುಲ್ ಹಮೀದ್, ಸಿ.ಬಿ.ಮಲ್ಲಪ್ಪ-ನನ್ನ ಪ್ರೀತಿಯ ತಾತ ಎಂಬುವುದರ ಬಗ್ಗೆ ಸಿ.ಎಂ.ಲಿಂಗದೇವರು ಮಾತನಾಡಲಿದ್ದಾರೆ.ಮಧ್ಯಾಹ್ನ 2.45ಕ್ಕೆ ಸಾಹಿತಿ ಎಂ.ವಿ.ನಾಗರಾಜ್ರಾವ್ರವರ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲೆಯ ಕಲಾ ಪ್ರಕಾರಗಳು ವಿಷಯದ ಬಗ್ಗೆ ಕಂಟಲಗೆರೆ ಸಣ್ಣಹೊನ್ನಯ್ಯ, ತುಮಕೂರು ಜಿಲ್ಲೆ ನಾಟಕ ಪರಂಪರೆಯ ಬಗ್ಗೆ ಕೆ.ಎಸ್.ಸತೀಶ್ ಗುಬ್ಬಿ, ಚಿ.ನಾ.ಹಳ್ಳಿ ತಾಲೂಕು ಕಲಾತಂಡಗಳ ಬಗ್ಗೆ ಸಿ.ಎ.ಕುಮಾರಸ್ವಾಮಿ ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಶಿವಲಿಂಗಮೂತರ್ಿ ನಿರೂಪಿಸಲಿದ್ದಾರೆ.
ನೂತನ ದೇವಾಲಯ ಪ್ರಾರಂಭೋತ್ಸವಚಿಕ್ಕನಾಯಕನಹಳ್ಳಿ

,ಮೇ.04 : ಶ್ರೀ ನರಸಿಂಹಸ್ವಾಮಿ ದೇವರ ನೂತನ ದೇವಾಲಯದ ಪ್ರಾರಂಭೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 15ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಜೆ.ಸಿ.ಪುರ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮಿಜಿಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಸುತ್ತೂರು ಕ್ಷೇತ್ರದ ಜಗದ್ಗುರು ಶಿವರಾತ್ರಿದೇಶಿಕೇಂದ್ರ ಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿಕೇಂದ್ರಸ್ವಾಮಿ ಸಮಾರಂಭದಲ್ಲಿ ಆಶೀರ್ವಚನ ನೀಡಲಿದ್ದು ಬಳ್ಳೆಕಟ್ಟೆ ಸಂಸ್ಥಾನದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮಿ, ಗೋಡೆಕೆರೆ ಸ್ಥಿರಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ, ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃಂತ್ಯುಂಜಯ ದೇಶಿಕೇಂದ್ರ ಸ್ವಾಮಿ, ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಯತೀಶ್ವರ ಶಿವಚಾರ್ಯಸ್ವಾಮಿ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರಸ್ವಾಮಿ, ಅಂತರರಾಷ್ಟ್ರೀಯ ಇಸ್ಕಾನ್ ಕೇಂದ್ರದ ನಿದರ್ೇಶಕ ದಯಾರಾಮ್ದಾಸ್ ಉಪಸ್ಥಿತರಿರುವರು.


ಜನಸ್ಪಂದನ ಸಭೆಚಿಕ್ಕನಾಯಕನಹಳ್ಳಿ,ಮೇ.05:

ಹುಳಿಯಾರು ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಇದೇ 7ರ ಶನಿವಾರ ಬೆಳಗ್ಗೆ 11ಗಂಟೆಗೆ ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉಚಿತ ಸಾಮೂಹಿಕ ಉಪನಯನ ಮತ್ತು ರಾಮಾನುಜಾಚಾರ್ಯ ಜಯಂತಿಚಿಕ್ಕನಾಯಕನಹಳ್ಳಿ,ಮೇ.05:

ಉಚಿತ ಸಾಮೂಹಿಕ ಉಪನಯನ ಕಾರ್ಯಕ್ರಮ ಮತ್ತು ಶ್ರೀ ರಾಮಾನುಜಾಚಾರ್ಯ ಜಯಂತಿ ಮಹೋತ್ಸವವನ್ನು ಇದೇ 11ರ ಬುಧವಾರದಂದು ಏರ್ಪಡಿಸಲಾಗಿದೆ ಎಂದು ಸಾಲ್ಕಟ್ಟೆ ಶ್ರೀನಿವಾಸ್ ತಿಳಿಸಿದ್ದಾರೆ.ಕಾರ್ಯಕ್ರಮವನ್ನು ತಾಲೂಕು ವೈಷ್ಣವ ಸಂಘದ ವತಿಯಿಂದ ತಾಲೂಕಿನ ಸಾದರಹಳ್ಳಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು ಭಾಗವಹಿಸುವ ವಟುಗಳಿಗೆ ಪರಿಕರಗಳನ್ನು ಸಂಘವೇ ಒದಗಿಸಲಿದ್ದು ಉಪನಯನ ಮಾಡಿಸುವ ವಟು ಮತ್ತು ತಂದೆ ತಾಯಿ ಇದೇ ತಿಂಗಳ 10ರ ಸಂಜೆ 5 ಗಂಟೆಗೆ ಸಾದರಹಳ್ಳಿ ಗ್ರಾಮಕ್ಕೆ ಆಗಮಿಸಬೇಕಾಗಿ ಮತ್ತು ಉಪನಯನ ಮಾಡಿಸುವವರು ತಾಲ್ಲೂಕು ಶ್ರೀವೈಷ್ಣವ ಸಂಘ ಮತ್ತು , ಹೆಚ್ಚಿನ ವಿವರಗಳಿಗಾಗಿ 9448748206, 9164030784 ಮೊ.ನಂ.ಗೆ ಸಂಪರ್ಿಸಲು ಕೋರಿದ್ದಾರೆ.
ನಾಟಕ ಸ್ಫಧರ್ೆಗಳಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರಚಿಕ್ಕನಾಯಕನಹಳ್ಳಿ,ಮೇ.05: ಸಿ.ಬಿ.ಮಲ್ಲಪ್ಪನವರ 125ನೇ ಜನ್ಮವಷರ್ಾಚರಣೆಗಾಗಿ ಏರ್ಪಡಿಸಿರುವ ರಾಜ್ಯಮಟ್ಟದ ಸ್ಪಧರ್ೆಯಲ್ಲಿ ಗೆಲುವು ಪಡೆದ ತಂಡಗಳಿಗೆ ಪ್ರಥಮ ಬಹುಮಾನವಾಗಿ 15ಸಾವಿರ. ದ್ವಿತೀಯ ಬಹುಮಾನ 10ಸಾವಿರ, ಹಾಗೂ ತೃತೀಯ ಬಹುಮಾನ 7500ರೂ ಸಾವಿರ ರೂಗಳು ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದರು.ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 5ರಂದು ಸಿ.ಬಿ.ಮಲ್ಲಪ್ಪನವರ ಭಾವಚಿತ್ರವನ್ನು ಹೊತ್ತ ವಾಹನದಲ್ಲಿ ಪ್ರವಾಸಿ ಮಂದಿರದಿಂದ ಕನ್ನಡ ಸಂಘದ ವೇದಿಕೆಯವರೆಗೆ ಮೆರವಣಿಗೆಯ ಮೂಲಕ ಆಗಮಿಸಿ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು ತಿಳಿಸಿದ ಅವರು ತಾಲ್ಲೂಕಿನಲ್ಲಿರುವ ಹತ್ತು ಕಲಾವಿದರಾದ ಕುಪ್ಪೂರು ಕೃಷ್ಣಮೂತರ್ಿ, ದೇವರಮನೆ ಆಂಜಿನಪ್ಪ, ಷರಾಪ್ ಶಿವಣ್ಣ, ಅನಂತರಾಮು ಹೊಸಳ್ಳಿ, ಹಂದನಕೆರೆ ಕರಿಯಣ್ಣಶೆಟ್ಟರು, ದೇವಿನಾಟಕದ ಕೆಂಪಣ್ಣ, ಹುಳಿಯಾರಿನ ಮಂಜುಳಮ್ಮ, ಕಂದಿಕೆರೆ ಶಂಕರಲಿಂಗಪ್ಪ, ಎಲ್ಲೇನಹಳ್ಳಿ ಮೂರ್ತಣ್ಣ, ಚಿ.ನಾ.ಹಳ್ಳಿ ಕೃಷ್ಣಾಚಾರ್ರವರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ, ಸದಸ್ಯರಾದ ಸಿದ್ದು ಜಿ.ಕೆರೆ, ಜಯಣ್ಣ, ಶ್ರೀನಿವಾಸ್, ಅನಂತರಾಮು, ಗಂಗಾದರ್, ಸಿದ್ದರಾಮಯ್ಯ, ನಾಗರಾಜು ಉಪಸ್ಥಿತರಿದ್ದರು.

Tuesday, May 3, 2011



ಚಿಕ್ಕನಾಯಕನಹಳ್ಳಿ,ಮೇ.02: ಮಾಲೀಕರ, ಕಾಮರ್ಿಕರ ಭಾಂದವ್ಯವು ಉತ್ತಮವಾಗಿದ್ದರೆ ಕಾಖರ್ಾನೆಗಳಲ್ಲಿ ಯಾವುದೇ ಆಂತರಿಕ, ಬಾಹ್ಯ ಸಮಸ್ಯೆಗಳು ಎದುರಾಗದೆ ಕಾಖರ್ಾನೆಗಳ ಕೆಲಸಗಳು ಶಾಂತಿಯುತವಾಗಿ ನಡೆಯುತ್ತವೆ ಎಂದು ಸಿವಿಲ್ ನ್ಯಾಯಾದೀಶರಾದ ಎ.ಜಿ.ಶಿಲ್ಪ ಅಭಿಪ್ರಾಯಪಟ್ಟರು.ಪಟ್ಟಣದ ಕುಶಾಲ್ ಗಾಮರ್ೆಂಟ್ಸ್ ಆವರಣದಲ್ಲಿ ನಡೆದ ಕಾಮರ್ಿಕ ದಿನಾಚರಣೆ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಖರ್ಾನೆಗಳಲ್ಲಿ ಸ್ವಚ್ಚತೆಯ ವ್ಯವಸ್ಥೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಕಾಮರ್ಿಕರು ಸಂಘಟಿತರಾಗಿ ಕಾನೂನಿನ ಹಿತರಕ್ಷಣೆ ತಿಳಿದುಕೊಂಡು ತಮ್ಮ ಹಕ್ಕುಗಳನ್ನು ಪಡೆಯಬೇಕು. ಮಹಿಳಾ ಕಾಮರ್ಿಕರು ಮಹಿಳಾ ಸಬಲೀಕರಣಕ್ಕಾಗಿ, ತಮಗೆ ಸಿಗಬೇಕಾದ ಸಮಾನ ಸ್ಥಾನಮಾನ ಅವಕಾಶಗಳನ್ನು ತಿಳಿಯಲು ಕಾನೂನಿನ ಅರಿವನ್ನು ತಿಳಿದುಕೊಳ್ಳಬೇಕು ಮತ್ತು ಕಾನೂನಿನಲ್ಲಿರುವ ವಿಷಯಗಳನ್ನು ಪ್ರತಿಯೊಬ್ಬರಿಗೂ ತಿಳಿಸುವುದೇ ಕಾನೂನು ಸೇವಾ ಸಮಿತಿಯ ಉದ್ದೇಶವಾಗಿದೆ. ಕಾನೂನು ಸೇವಾ ಸಮಿತಿಯಡಿಯಲ್ಲಿ ಮಹಿಳೆಯರು ತಮಗೆ ಆಗಿರುವ ಅನ್ಯಾಯದ ಬಗ್ಗೆ ಉಚಿತವಾಗಿ ನ್ಯಾಯ ಪಡೆಯಬಹುದು ಮತ್ತು ಸಂಸಾರದಲ್ಲಿ ಪ್ರತಿ ವಸ್ತುಗಳ ಬೆಲೆಯು ಏರಿಕೆಯಾಗುತ್ತಿರುವುದರಿಂದ ಗಂಡು-ಹೆಣ್ಣು ಖಚರ್ು, ವೆಚ್ಚಗಳಿಗೆ ಸಮಪಾಲು ನೀಡುವ ಮೂಲಕ ಮಹಿಳಾ ಕಾಮರ್ಿಕರು ಸಮಾಜಮುಖಿ ಎಂಬುದು ತಿಳಿಯಬೇಕಾಗಿದೆ ಎಂದ ಅವರು ಭಾರತ ದೇಶವು ಕಾಮರ್ಿಕರಿಂದಲೇ ಆಥರ್ಿಕವಾಗಿ ಸದೃಡವಾಗಿದ್ದು ಕಾನೂನಿನ ಚೌಕಟ್ಟಿನಲ್ಲಿರುವ ಕಾಖರ್ಾನೆಗಳು ಕಾಮರ್ಿಕರ ಹಿತದೃಷ್ಠಿಯನ್ನು ಹೊಂದಿರಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ದಿನನಿತ್ಯದ ಕೂಲಿಗಾಗಿ ಶ್ರಮಿಸುವವರೆ ಕಾಮರ್ಿಕರಾಗಿದ್ದು ಅವರಿಗೆ ಬೇಕಾಗಿರುವ ಸಾಮಾನ್ಯ ಕಾನೂನಿನ ಅರಿವು ತಿಳಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.ಸಕರ್ಾರಿ ಅಭಿಯೋಜಕಾರದ ಆರ್.ಟಿ.ಆಶಾ ಮಾತನಾಡಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾನೂನಿನ ಅರಿವನ್ನು ತಿಳಿದುಕೊಳ್ಳಲು ಕಾನೂನಿನ ಅರಿವು ನಡೆಯುವ ಕಾರ್ಯಗಾರದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದರು.ಕುಶಾಲ್ ಗಾಮರ್ೆಂಟ್ಸ್ ಮಾಲೀಕ ಎಸ್.ಎಲ್.ಶಾಂತಕುಮಾರ್ ಮಾತನಾಡಿ ನಮ್ಮ ಕಂಪನಿಯಲ್ಲಿ ಕಾಮರ್ಿಕರ ದಿನಾಚರಣೆ ನಡೆಸಲು ಸಹಕರಿಸಿದ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದವರಿಗೆ ಧನ್ಯವಾದವನ್ನು ಅಪರ್ಿಸಿದರು.ಸಮಾರಂಭದಲ್ಲಿ ವಕೀಲರರಾದ ವೈ.ಜಿ.ಲೋಕೇಶ್ ಕಾಮರ್ಿಕರ ಕಾಯಿದೆಗಳ ಬಗ್ಗೆ , ಆರ್.ಎ.ಎಲಿಜಬೆತ್ರಾಣಿ ಮಹಿಳಾ ಕಾಮರ್ಿಕರ ಹಿತರಕ್ಷಣೆಯ ಬಗ್ಗೆ ವಿಷಯ ಮಂಡಿಸಿದರು.ಸಮಾರಂಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದಶರ್ಿ ಸಿ.ರಾಜಶೇಖರ್ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಕೀಲರಾದ ಚಿಕ್ಕಣ್ಣ ಸ್ವಾಗತಿಸಿದರೆ, ಹೆಚ್.ಟಿ.ಹನುಮಂತಯ್ಯ ನಿರೂಪಿಸಿ, ದಿಲೀಪ್ ವಂದಿಸಿದರು.
ನಾಟಕೋತ್ಸವದಲ್ಲಿ ವಿಚಾರ ಸಂಕಿರಣ ಮತ್ತು 10ಕಲಾವಿದರಿಗೆ ಸನ್ಮಾನಚಿಕ್ಕನಾಯಕನಹಳ್ಳಿ,ಮೇ.2: ರಾಜ್ಯ ಮಟ್ಟದ ನಾಟಕೋತ್ಸವದ ಅಂಗವಾಗಿ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭವನ್ನು ಮೇ 7ರಂದು ನಾಟಕರತ್ನ ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು ಶ್ರೀ ರಂಗರಂಗ ಹವ್ಯಾಸಿ ಕಲಾತಂಡದ ಅಧ್ಯಕ್ಷ ಎಸ್.ನಾಗಣ್ಣ ಉದ್ಘಾಟನೆ ನೆರವೇರಿಸಲಿದ್ದು ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ಪುರಸ್ಕೃತ ಕಲಾಶ್ರೀ ಡಾ.ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲರಾದ ಹೊನ್ನವಳ್ಳಿ ನಟರಾಜ್, ರಾಜ್ಕುಮಾರ್ ವಿಶ್ವೇಶ್ವರಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಸದಸ್ಯ ವರದರಾಜು, ಈಶ್ವರಭಾಗವತ್, ಕೃಷ್ಣಮೂತರ್ಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವಲೋಚನ, ಬನಶಂಕರಿ ಸೊಸೈಟಿ ಅಧ್ಯಕ್ಷ ಸಿ.ಜಿ.ಕಿರಣ್, ಸಾಹಿತಿ ಎನ್.ನಾಗಪ್ಪ, ಸಿ.ಡಿ.ಪಿ.ಓ ಅನೀಸ್ಖೈಸರ್, ತಾ.ದೇವಾಂಗ ಸಂಘದ ಅಧ್ಯಕ್ಷ ಶೇಷಪ್ಪ, ಉಪಸ್ಥಿತರಿರುವರು.ತಾಲೂಕು ಹತ್ತು ಕಲಾವಿದರಿಗೆ ಸನ್ಮಾನ: ತಾಲೂಕಿನ ಹತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಮೇ 8ರಂದು ಸಂಜೆ 6ಕ್ಕೆ ದಿ.ಕುಪ್ಪೂರು ಗೋಪಾಲರಾವ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ರಂಗಭೂಮಿಯ ಪ್ರಸಿದ್ದ ನಟ ಬಾಬು ಹಿರಣ್ಣಯ್ಯ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಂದರು ಹಾಗೂ ಒಳನಾಡು ಸಾರಿಗೆ ಸಚಿವಾಲಯದ ವಿಶೇಷಾಧಿಕಾರಿ ರಘುಶೆಟ್ಟಿಗಾರ್ ಸನ್ಮಾನಿತರಿಗೆ ಸನ್ಮಾನಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ, ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಕೆ.ಎಸ್.ಲೋಕೇಶ್, ತಾ.ಪಂ.ಮಾಜಿ ಅಧ್ಯಕ್ಷ ಹೆಚ್.ಎಂ.ಸುರೇಂದ್ರಯ್ಯ, ತಾ.ಪಂ.ಸದಸ್ಯ ಶಶಿಧರ್, ನಿವೃತ್ತ ಕೃಷಿ ಅಧಿಕಾರಿ ಸಿ.ಹೆಚ್.ನಾಗರಾಜು, ಪುರಸಭಾ ಸದಸ್ಯೆ ಶುಭಾ ಬಸವರಾಜು, ತಾ.ಕಸಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದಶರ್ಿ ಚಿದಾನಂದ್, ಪಿ.ಎಲ್.ಡಿ.ಟಿ ನಿದರ್ೇಶಕ ಟಿ.ಶಂಕರಲಿಂಗಪ್ಪ, ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಎಸ್.ಆರ್.ರಾಜ್ಕುಮಾರ್, ಟೌನ್ ಬ್ಯಾಂಕ್ ನಿದರ್ೇಶಕ ಶಶಿಕುಮಾರ್ ಉಪಸ್ಥಿತರಿರುವರು.