Tuesday, June 18, 2013


ಗ್ರಾಮೀಣ ಜನರ ಆರೋಗ್ಯ ಕಾಪಾಡಿದರೆ ವೈದ್ಯ ಜನರ ಪಾಲಿನ ದೇವರಾಗುತ್ತಾನೆ.

ಚಿಕ್ಕನಾಯಕನಹಳ್ಳಿ,ಜೂ.81 : ಸೇವೆ ಪರಮಾತ್ಮ ನಿಯೋಜಿಸಿದ ಕರ್ತವ್ಯ ಎಂದು ಹಳ್ಳಿಗಾಡಿನ ಪ್ರದೇಶದಲ್ಲಿ ಹಲವಾರು ವರ್ಷಗಳ ಕಾಲ ಗ್ರಾಮೀಣ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ಸೇವೆ ಸಲ್ಲಿಸಿದಂತಹ ಉತ್ತಮ ವ್ಯಕ್ತಿಗೆ ಅಭಿನಂದಿಸುವುದರಿಂದ ಗ್ರಾಮದವರ ಮನಸ್ಥಿತಿ ಬದಲಾಗಲಿದೆ, ಅಂತಹ ಕಾರ್ಯವನ್ನು ಗೋಡೆಕೆರೆ ಗ್ರಾಮದ ಯುವಕರು ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರಸ್ವಾಮಿ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯ ಸಕರ್ಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 15ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಡಾ.ಗಣೇಶ್ರವರು ಉನ್ನತ ಶಿಕ್ಷಣ ನಿಮಿತ್ತ ವಗರ್ಾವಾಗಿರುವುದರಿಂದ ಗೋಡೆಕೆರೆಯ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಸೇವೆ ಸಲ್ಲಿಸಿದಂತಹ ವ್ಯಕ್ತಿಗಳಿಗೆ ಗ್ರಾಮಸ್ಥರು ಇತ್ತೀಚೆಗೆ ನಡೆಸುತ್ತಿರುವ ಸನ್ಮಾನ ಕಾರ್ಯಕ್ರಮವು ಇತರರಿಗೆ ಮಾದರಿಯಾಗಿದೆ, ತಮ್ಮ ನಿಷ್ಠಾವಂತ ಸೇವೆಯನ್ನು ಗ್ರಾಮದ ಎಲ್ಲರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಿದವರಿಗೆ ಇಂತಹ ಕಾರ್ಯಕ್ರಮ ಇನ್ನೂ ಆದರ್ಶ ಪ್ರಜೆಗಳ ಸಾಲಿಗೆ ಕೊಂಡೊಯ್ಯುತ್ತದೆ ಎಂದ ಅವರು ಈ ಕಾರ್ಯಕ್ರಮದಿಂದ ಗ್ರಾಮದ ಯುವಕರ ಮನಸ್ಥಿತಿಯೂ ಬದಲಾಗಲಿದೆ ಎಂದರು.
ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರ ಸ್ವಾಮಿರವರ ಮಾತನಾಡಿ ಡಾ.ಗಣೇಶ್ರವರು ತಮ್ಮ ಬದುಕಿನ ಸೇವೆಯನ್ನು ಹೆಚ್ಚಿನದಾಗಿ ಗೋಡೆಕೆರೆ ಗ್ರಾಮದಲ್ಲಿಯೇ ಸಲ್ಲಿಸಿ ಬದುಕಿನ ಸಾಕಷ್ಟು ತಮ್ಮ ಅನುಭವವನ್ನು ಇಲ್ಲಿನ ಜನರಿಗೆ ನೀಡಿದ್ದಾರೆ, ಗೋಡೆಕೆರೆ ಗ್ರಾಮದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಊರಿನ ಜನತೆಯಲ್ಲೂ ಡಾ.ಗಣೇಶ್ ಉತ್ತಮ ವೈದ್ಯಾಧಿಕಾರಿಯಾಗಿ ಚಿಕಿತ್ಸೆ ನೀಡಿದ್ದಾರೆ ಎಂದರಲ್ಲದೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರು ಡಾ.ಗಣೇಶ್ರವರನ್ನು ಮಾದರಿಯಾಗಿಸಿಕೊಂಡರೆ ಉತ್ತಮ ಸೇವೆ ಸಲ್ಲಿಸಬಹುದು ಎಂದು ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಗಣೇಶ್, ಕಡುಬಡತನದಿಂದ ಬಂದಂತಹ ನಾನು ವೈದ್ಯನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ, ಸಿದ್ದರಾಮನ ಕೃಪೆಯಿಂದ ವೈದ್ಯನಾಗಿದ್ದೇನೆ,  ಇಷ್ಟು ವರ್ಷಗಳ ಕಾಲ ಗ್ರಾಮದ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದ ಜೊತೆಗೆ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದೆನು, ಹದಿನೈದು ವರ್ಷಗಳ ಕಾಲ ಗ್ರಾಮದ ಆಸ್ಪತ್ರೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ನಾನು ಗ್ರಾಮದವರು ತೋರಿಸುತ್ತಿರುವ ಆತ್ಮೀಯತೆಗೆ ಚಿರಋಣಿಯಾಗಿದ್ದು, ತನ್ನ ಉನ್ನತ ಶಿಕ್ಷಣ ಹೋಗುತ್ತಿರುವುದಾಗಿ ತಿಳಿಸಿದರು.
ಮಾಜಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಡಾ.ಗಣೇಶ್ರವರು ಗೋಡೆಕೆರೆ ಆಸ್ಪತ್ರೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿರುವುದರಿಂದ 2011-12ನೇ ಸಾಲಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹೆರಿಗೆ ಮಾಡಿಸಿದ ಕೀತರ್ಿ ಗೋಡೆಕೆರೆ ಆಸ್ಪತ್ರೆಗೆ ಬಂದಿದೆ ಎಂದರಲ್ಲದೆ ಈ ಆಸ್ಪತ್ರೆಗೆ ಬೇಕಾಗಿರುವ ಹೆಚ್ಚಿನ ಕೊಠಡಿಯೊಂದಕ್ಕೆ ಅಜರ್ಿ ಸಲ್ಲಿಸಿದ್ದು, ಅದಕ್ಕೆ ಅನುಮೋದನೆ ದೊರಕಬೇಕಿದೆ ಎಂದರು.
ಸಮಾರಂಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮರಿಸ್ವಾಮಿ, ವ್ಯವಸಾಯೋತ್ಪನ್ನ ಸಹಕಾರ ಸಂಘದ ಸದಸ್ಯ ಸಿದ್ದರಾಮಣ್ಣ, ಗ್ರಾ.ಪಂ.ಸದಸ್ಯ ಲೋಕೇಶ್, ಪ್ರಾಂಶುಪಾಲ ಪಾಂಡುರಂಗಪ್ಪ ಉಪಸ್ಥಿತರಿದ್ದರು.

ಗ್ರಾಮೀಣ ಜನರಿಗೆ ಶುದ್ದ ನೀರು, ಉತ್ತಮ ಆರೋಗ್ಯ ನೀಡಲು ಗ್ರಾ.ಪಂ.ಗಳಿಗೆ ಸೂಚನೆ:


ಚಿಕ್ಕನಾಯಕನಹಳ್ಳಿ,ಜೂ.18 : ತಾಲ್ಲೂಕಿನಲ್ಲಿ ಡೆಂಗ್ಯೂ, ಚಿಕನ್ಗುನ್ಯಾ ಹರಡದಂತೆ ಫಾಗಿಂಗ್ ಮಾಡಲು ಹಾಗೂ ಬಡವರುಗೆ ಸರಿಯಾಗಿ ಪಡಿತರ ಚೀಟ ವಿತರಿಸಲು, ಕುಡಿಯುವ ನೀರು ಸರಬರಾಜು ಮಾಡಲು ಗ್ರಾ.ಪಂ.ಅಧ್ಯಕ್ಷ ಹಾಗೂ ಪಿಡಿಓಗಳಿಗೆ ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಸಲಹೆ ನೀಡಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಪಡಿತರ ಚೀಟಿ ವಿತರಣೆ ಸಂಬಂಧ ತಾಲ್ಲೂಕು ಗ್ರಾ.ಪಂ.ಅಧ್ಯಕ್ಷ, ಪಿಡಿಓ, ಹಾಗೂ ಕಾರ್ಯದಶರ್ಿಗಳ ತುತರ್ುಸಭೆಯಲ್ಲಿ ಮಾತನಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಪಡಿತರ ಚೀಟಿಗೆ 50ರೂ ಸಕರ್ಾರ ನಿಗಧಿ ಪಡಿಸಿದ್ದು ಖಾಸಗಿ ಕಂಪ್ಯೂಟರ್ ಸೆಂಟರ್ಗಳಲ್ಲಿ 100ರಿಂದ 150ರೂ ವಸೂಲು ಮಾಡಿ ಜನರನ್ನು ಸುಲಿಗೆ ಮಾಡುತ್ತಿವೆ ಎಂಬ ದೂರುಗಳು ಬಂದಿದ್ದು ಗ್ರಾ.ಪಂ. ಪಿಡಿಓಗಳು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 
2011-12ನೇ ಸಾಲಿನ ಬಸವ ಇಂದಿರಾ ವಸತಿ ಯೋಜನೆ ಅಡಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಮನೆಗಳನ್ನು ಮಂಜೂರಾತಿ ನೀಡಿದ್ದು 390 ಮನೆಗಳು ಬ್ಲಾಕ್ ಆಗಿದ್ದು ಈಗ ಈ ಮನೆಗಳನ್ನು ಕಟ್ಟಲು ಸಕರ್ಾರ ಹಸಿರು ನಿಶಾನೆ ನೀಡಿದೆ. ಸಂಬಂಧಪಟ್ಟ ಗ್ರಾ.ಪಂ.ಅಧ್ಯಕ್ಷರು ಪಿಡಿಓ ಹಾಗೂ ಕಾರ್ಯದಶರ್ಿಗಳು ಜೂನ್ 25ರ ಒಳಗಾಗಿ ವರದಿ ನೀಡುವಂತೆ ನಂತರ ನೀಡುವ ಮನೆಗಳಿಗೆ ಸಕರ್ಾರ ಮಂಜೂರಾತಿ ನೀಡುವುದಿಲ್ಲ, ಎರಡನೇ ಹಂತದಲ್ಲಿರುವ ಮನೆಗಳಗೆ ಮಾತ್ರ ಹಣ ಬಿಡುಗಡೆ ಆಗುವುದೆಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ ಸಭೆಯಲ್ಲಿ ತಿಳಿಸಿದರು.
ಜೂನ್ ಕೊನೆ ವಾರ ಸಕರ್ಾರ ಎನ್.ಆರ್.ಇ.ಜಿ ಹಣ ಬಿಡುಗಡೆ ಮಾಡುತ್ತಿದ್ದು ಎನ್.ಆರ್.ಇ.ಜಿಯಲ್ಲಿ ಕೆಲಸ ಮಾಡುವ ಕೂಲಿ ಕಾಮರ್ಿಕರಿಗೆ ಹಣ ಪಡೆಯಲು ಆಧಾರ್ ಕಾಡರ್್ ಕಡ್ಡಾಯ ಇದರ ಬಗ್ಗೆ ಪಿಡಿಓಗಳು ಕೂಲಿ ಕಾಮರ್ಿಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯುವ ಗುತ್ತಿಗೆದಾರರು ಪಂಪ್ಸೆಟ್ ಅಳವಡಿಸುತ್ತಾರೆ ಆದರೆ ಗ್ರಾಮ ಪಂಚಾಯ್ತಿ ವಶಕ್ಕೆ ನೀಡುವುದಿಲ್ಲ ಎಂದು ಗ್ರಾ.ಪಂ.ಕಾರ್ಯದಶರ್ಿಗಳು ದೂರಿದರು.
ಪಡಿತರ ಚೀಟಿ ವಿತರಣೆಯಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗಳಿಂದಲೇ ಗೊಂದಲ ಸೃಷ್ಠಿಯಾಗುತ್ತಿದೆ ಎಂದು ತಾ.ಪಂ.ಅಧ್ಯಕ್ಷ ದೂರಿದರು. ಗ್ರಾ.ಪಂ.ಗಳಲ್ಲಿ ಪಡಿತರ ಚೀಟಿ ವಿತರಿಸಲು ಸಕರ್ಾರ ಕ್ರಮ ಕೈಗೊಂಡಿರುವುದರಿಂದ ಗ್ರಾ.ಪಂ.ಗಳ ಸಾರ್ವಜನಿಕರ ಕೆಲಸಗಳೇ ಮಾಡಲಾಗುತ್ತಿಲ್ಲ ಎಂದು ಪಿಡಿಓಗಳು ತಮ್ಮ ಅಳಲನ್ನು ತೋಡಿಕೊಂಡರು.
ಒಂದು ಕುಟುಂಬಕ್ಕೆ ಒಂದೇ ಪಡಿತರ ಚೀಟಿ ನೀಡಬೇಕು, ಆದರೆ ಒಂದೇ ಪಡಿತರ ಚೀಟಿ ಆರು ಬಾರಿ ಮುದ್ರಣವಾಗಿದ್ದು ಎಲ್ಲಾ ಕಾಡರ್ುಗಳನ್ನು ಹಿಂದಿರುಗಿಸಲಾಗಿದೆ ಎಂದು ಪಿಡಿಓ ಶಿವಕುಮಾರ್ ತಿಳಿಸಿದರು.
 ಕೆಂಕೆರೆಯಲ್ಲಿ ನೀರಿನ ಅಭಾವವಿದ್ದು ಕೊಡಲೇ 2ಕೊಳವೆ ಬಾವಿಗಳನ್ನು ಕೊರೆಸುವಂತೆ  ಪಿಡಿಓ ಶಿವಕುಮಾರ್ ಸಭೆಯಲ್ಲಿ ಮನವಿ ಮಾಡಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಸಮಸ್ಯೆಗಳ ಬಗ್ಗೆ ಪಿ.ಡಿ.ಓಗಳ ಗಮನಕ್ಕೆ ತರಲು ದೂರವಾಣಿ ಮಾಡಿದರೂ ಕೆಲವು ಪಿಡಿಓಗಳು ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಹೀಗೆ ಮಾಡಿದರೆ ಹೇಗೆ ಎಂದು ಗ್ರಾ.ಪಂ.ಅಧ್ಯಕ್ಷರುಗಳು ಪ್ರಶ್ನಿಸಿದ್ದಾರೆ. 
 ಹೊಸ ಮೋಟಾರುಗಳಿಗೆ ಕಾಯದೇ ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ಮೋಟಾರು ಅಳವಡಿಸಲು ನಿಧಾನವಾದರೆ ಹಳೆ ಬೋರ್ವೆಲ್ಗಳಲ್ಲಿ ಇರುವ ಮೋಟಾರುಗಳನ್ನು ತೆಗೆದು ಅಳವಡಿಸುವಂತೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಿರಂಜನಮೂತರ್ಿ ಸಲಹೆ ನೀಡಿದರು. ಇದರಿಂದ ಗ್ರಾಮಗಳ ಜನತೆಯ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು, ಕಾರ್ಯದಶರ್ಿಗಳು ಚಿಂತಿಸಿ ಎಂದರು.
ತಾಲ್ಲೂಕಿನ ದುಗಡಿಹಳ್ಳಿ, ಮಲ್ಲಿಗೆರೆಹಟ್ಟಿ, ಕಾಮಲಾಪುರ ಗೊಲ್ಲರಹಟ್ಟಿ, ಮಾದೀಹಳ್ಳಿ, ಅಜ್ಜೇನಹಳ್ಳಿ, ಗಂಟಗನಪಾಳ್ಯ, ಸಾಲಕಟ್ಟೆ, ವಡೇರಹಳ್ಳಿ, ಗೌಡನಹಳ್ಳಿ, ಚುಂಗನಹಳ್ಳಿ, ಜೋಡಿಕಲ್ಲೇನಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೊರತೆ ಇದ್ದು ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ತಹಶೀಲ್ದಾರ್ರವರಿಗೆ ಪಿಡಿಓಗಳು ಮನವಿಸಲ್ಲಿಸಿ ನಂತರ ನೀರು ಸರಬರಾಜು ಮಾಡುವಂತೆ ಇ.ಓ ತಿಮ್ಮಯ್ಯ ತಿಳಿಸಿದರು.
ತಿಮ್ಮಲ್ಲಾಪುರ ಗ್ರಾ.ಪಂ.ಯ ಹೊಸಹಳ್ಳಿ ಗ್ರಾಮದ ಕುಡಿಯುವ ನೀರಿನ ತೊಟ್ಟ ತೊಳೆಯುತ್ತಿಲ್ಲ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ, ಇದರ ಬಗ್ಗೆ ಪಿಡಿಓಗೆ ತರಾಟೆಗೆ ತೆಗೆದುಕೊಂಡ ತಾ.ಪಂ.ಅಧ್ಯಕ್ಷ ಶಶಿಧರ್ ಕೂಡಲೇ ತೊಟ್ಟಿಯನ್ನು ಸ್ವಚ್ಛಗೊಳಿಸುವಂತೆ ಸಲಹೆ ನೀಡಿದರು. 
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಆಹಾರ ಶಿರಸ್ತೆದಾರ್ ಮಂಜುನಾಥ್, ಇ.ಓ ಎ.ಜಿ.ತಿಮ್ಮಯ್ಯ, ಎಇಇ ಚಿಕ್ಕದಾಸಪ್ಪ, ಗ್ರಾ.ಪಂ.ಅಧ್ಯಕ್ಷರುಗಳಾದ ಎಂಜಯ್ಯ, ಸಿದ್ದರಾಮಯ್ಯ, ಅಜ್ಜಿಗುಡ್ಡೆಕುಮಾರ್ ಮತ್ತಿತರರು ಉಪಸ್ಥಿತರಿದ್ದರು.