Wednesday, November 23, 2011



ಜಾತಿ ಗಣತಿಯಲ್ಲಿ  ನೈಜ, ಪೂರ್ಣ ಹಾಗೂ ನಿಖರ ಮಾಹಿತಿಗೆ ಒತ್ತು ನೀಡಿ: ಸಿ.ಟಿ.ಎಂ.

ಚಿಕ್ಕನಾಯಕನಹಳ್ಳಿ,ನ.23 : ಸಕರ್ಾರಿ ಸೌಲಭ್ಯ ವಂಚಿತ ಫಲಾನುಭವಿಗಳಿಗೆ, ಸೌಲಭ್ಯವನ್ನು ದೊರಕಿಸಿಕೊಡಲು ಕೇಂದ್ರ ಸಕರ್ಾರ ಚಿಂತಿಸಿ ಜಾತಿಗಣತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗಣತಿ ಕಾರ್ಯ ನೆರವೇರಿಸುವವರು ಜನಸಾಮಾನ್ಯರಲ್ಲಿ ನೇರವಾಗಿ ಸಂಪರ್ಕ ಬೆಳೆಸಿಕೊಂಡು ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿ ಎಂದು ತಾಲೂಕು ನೋಡಲ್ ಅಧಿಕಾರಿ  ಸಿ.ಟಿ.ಮುದ್ದುಕುಮಾರ್ ತಿಳಿಸಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ನಡೆದ ಸಾಮಾಜಿಕ ಆಥರ್ಿಕ ಮತ್ತು ಜಾತಿಗಣತಿ 2011 ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ ಬಂದ 10 ವರ್ಷಗಳ ನಂತರ ಜನಗಣತಿ ಕಾರ್ಯಕ್ರಮ ಆರಂಭವಾಗಿ ದೇಶದ ಜನತೆಯ ಗಣತಿ ದೊರಕಿತು,  ಅದೇ ರೀತಿಯ ದೇಶದಲ್ಲೇ ಪ್ರಥಮ ಬಾರಿಗೆ ಜಾತಿಗಣತಿ ಕಾರ್ಯ ಆರಂಭವಾಗಿದ್ದು ಅತಿ ಜಾಗರೂಕತೆಯಿಂದ  ಗಣತಿ ಕಾರ್ಯವನ್ನು ಆರಂಭಿಸಿ ಉತ್ತಮವಾಗಿ ಗಣತಿ ಮಾಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.
 ಈ ಮೊದಲು  ಜನಗಣತಿ ಕಾರ್ಯವನ್ನು ಶಿಕ್ಷಕರಿಗೆ ವಹಿಸಲಾಗಿತ್ತು, ಈಗ ಜಾತಿಗಣತಿ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತರಿಗೆ ವಹಿಸಿದ್ದು ಈಗ ನಡೆಯುತ್ತಿರುವ 3 ದಿನಗಳ ತರಬೇತಿಗೆ ಆಗಮಿಸಿ ಅಲ್ಲಿ ತಿಳಿಸುವ ಮಾಹಿತಿಯೊಂದಿಗೆ ಜನಸಾಮಾನ್ಯರಲ್ಲಿ ವಿನಯದಿಂದ ಚಚರ್ೆಗೆ ಅವಕಾಶ ನೀಡದೆ ಗಣತಿಕಾರ್ಯ ಯಶಸ್ವಿಗೊಳಿಸಿ ಎಂದು ಹೇಳಿದರು.
ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮಾತನಾಡಿ ಗಣತಿಕಾರ್ಯದ ತರಬೇತಿ ಪಡೆದವರಿಗೆ,  ಅವರು ಕೆಲಸ ನಿರ್ವಹಿಸುವ ಭಾಗದಲ್ಲೇ  ಗಣತಿಕಾರ್ಯ ನಡೆಸಲು ಸೂಚಿಸಲಾಗುವುದು, ಇದಕ್ಕಾಗಿ ಸೂಪರ್ವೈಸರ್ಗಳನ್ನು ನೇಮಿಸಲಾಗುವುದು ಕಾರ್ಯ ನಡೆಸುವಾಗ ಸಂಶಯಗಳು ಎದುರಾದಲ್ಲಿ ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳು, ಸೆಕ್ರೆಟರಿಗಳನ್ನು ಸಂಪಕರ್ಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಪೂರ್ಣಮಾಹಿತಿ ಪಡೆಯದೇ ಗಣತಿಕಾರ್ಯ ಮುಂದುವರೆಸಬೇಡಿ ಎಂದರು. ಗಣತಿ ಕಾರ್ಯವನ್ನು ನಿಗದಿತ ದಿನಾಂಕದೊಳಗೆ ಪೂರ್ಣಗೊಳಿಸಿ ಎಂದರು.
ತುಮಕೂರು ತಾ.ಪಂ. ಇ.ಓ ವೆಂಕಟೇಶಯ್ಯ ಮಾತನಾಡಿ ಗಣತಿಕಾರ್ಯ ಆರಂಭಿಸಿದಾಗ ಸಾರ್ವಜನಿಕರ ವಿರುದ್ದವಾಗಿ ನಡೆದುಕೊಳ್ಳದೆ ಅವರು ಕೊಡುವ ಮಾಹಿತಿ ಪಡೆದು ಗಣತಿಕಾರ್ಯವನ್ನು ಯಶಸ್ವಿಗೊಳಿಸಿ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಗಣತಿಕಾರ್ಯದ ಮೇಲ್ವಿಚಾರಕ ಗುರುಸಿದ್ದಪ್ಪ, ವೇಣುಗೋಪಾಲ್, ಚಂದ್ರಶೇಖರ್ ಜಯಣ್ಣ ಮುಂತಾದವರಿದ್ದರು.