Monday, July 11, 2016



ಬಿಜೆಪಿ ಯುವ ಮೋಚರ್ಾ ವತಿಯಿಂದ ಪ್ರತಿಭಟನೆ  

ಚಿಕ್ಕನಾಯಕನಹಳ್ಳಿ,ಜು.11 : ಮಂಗಳೂರು ಡಿ.ವೈ.ಎಸ್.ಪಿ ಗಣಪತಿಯವರ ಆತ್ಮಹತ್ಯೆಯ ಹಿಂದೆ ಸಚಿವ ಕೆ.ಜೆ.ಜಾಜರ್್ ಕೈವಾಡವಿದೆ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು, ಪ್ರಕರಣವನ್ನು ಸಿ.ಬಿ.ಐಗೆ ವಹಿಸುವಂತೆ ತಾ.ಬಿ.ಜೆ.ಪಿ.ಮಾಜಿ ಅಧ್ಯಕ್ಷ ಶ್ರೀನಿವಾಸ್ಮೂತರ್ಿ ಆಗ್ರಹಿಸಿದ್ದಾರೆ.
ಪಟ್ಟಣದ ಯುವ ಮೂಚರ್ಾ ವತಿಯಿಂದ ನಡೆದ ರಸ್ತೆ ತಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಕರ್ಾರದಲ್ಲಿ ಪ್ರಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ ಸಕರ್ಾರದಲ್ಲಿ ಭ್ರಷ್ಠ ಅಧಿಕಾರಿಗಳು ಪ್ರಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಇದರಿಂದ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸಕರ್ಾರವೇ ಕಾರಣ ಎಂದ ಅವರು ರಾಜ್ಯ ಸಕರ್ಾರದ ಅಧೀನದಲ್ಲಿರುವ ಸಿ.ಐ.ಡಿಗೆ ವಹಿಸುವ ಬದಲು ಸಿಬಿಐಗೆ ಪ್ರಕರಣವನ್ನು ವಹಿಸುವಂತೆ ಆಗ್ರಹಿಸಿದರು.
ತಾಲ್ಲೂಕು ಅಧ್ಯಕ್ಷ ಎಮ್.ಎಮ್ ಜಗಧೀಶ ಮಾತನಾಡಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ, ಸಚಿವ ಕೆ.ಜೆ.ಜಾಜರ್್ರವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ, ಗೃಹ ಸಚಿವರು ರಾಜ್ಯದಲ್ಲಿ ನಿವೃತ್ತ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಹೈಕಮಾಂಡಿಗೆ ದೂರು ನೀಡಿದ್ದಾರೆ ಎಂದ ಅವರು ಸಿದ್ದರಾಮಯ್ಯ ಸಕರ್ಾರದಲ್ಲಿ ಅನೇಕ ಪ್ರಮಾಣಿಕ ಅಧಿಕಾರಿಗಳು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು. 
ಪ್ರತಿಭಟನೆಯಲ್ಲಿ ಯುವ ಮೂಚರ್ಾ ಅಧ್ಯಕ್ಷ ಚೇತನ್ಪ್ರಸಾದ್, ನಗರ ಅಧ್ಯಕ್ಷ ನರಸಿಂಹಮೂತರ್ಿ, ಮಲ್ಲಿಕಾಜರ್ುನ, ಶಿವಕುಮಾರ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಯರ ಮೇಲೆ ಕರಡಿ ದಾಳಿ 
ಚಿಕ್ಕನಾಯಕನಹಳ್ಳಿ,ಜು.11 : ತಾಲ್ಲೂಕಿನ ನಂದಿಹಳ್ಳಿಯಲ್ಲಿ ಕರಡಿ ದಾಳಿ ಮಾಡಿ ಮಂಜುಳ(28) ಹಾಗೂ ದ್ರಾಕ್ಷಾಯಿಣಮ್ಮ (45)ವರ್ಷ ತೀವ್ರವಾಗಿ ಗಾಯಗೊಂಡು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ ಮಂಜುಳ ತಮ್ಮ ತೋಟಕ್ಕೆ ಹೋಗಿ ನೀರುಹಾಯಿಸಲು ಮೋಟ್ರು ಚಾಲನೆ ಮಾಡಿ ಮನೆಗೆ ಹಿಂತಿರುಗುವಾಗ,  ಗ್ರಾಮದ ಪಕ್ಕದಲ್ಲಿ ಹೋಗುತ್ತಿರುವ ಸಮಯದಲ್ಲಿ 3ಕರಡಿಗಳು ಮಂಜುಳ ಮೇಲೆ ದಾಳಿ ಮಾಡಿ ಬೆನ್ನು ಹಾಗೂ ಬೆನ್ನಿನ ಕೆಳ ಭಾಗದಲ್ಲಿ ಪರಚಿದುದರಿಂದ ತೀವ್ರಗಾಯಗಳಾಗಿದೆ, ನಂದಿಹಳ್ಳಿ ಸುತ್ತಮುತ್ತಲು ಮೂರು ಕರಡಿಗಳು ನಿತ್ಯ ಸಂಚರಿಸುತ್ತವೆ, ಇದರಿಂದ ರೈತರು ತೋಟಗಳಿಗೆ ಹೋಗಲು ಭಯಭೀತರಾಗಿದ್ದಾರೆ, ಕೂಡಲೇ ಅರಣ್ಯ ಇಲಾಖೆ ಕರಡಿಗಳನ್ನು ಹಿಡಿದು ಈ ಭಾಗದ ಜನರಿಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಷಯ ತಿಳಿದ  ಅರಣ್ಯಾಧಿಕಾರಿಗಳು ನಂದಿಹಳ್ಳಿಗೆ  ಆಗಮಿಸಿ ಕರಡಿ ಹಿಡಿಯುವ ಕಾರ್ಯಚರಣೆ ಕೈಗೊಳ್ಳುವ ಸಲುವಾಗಿ  ಟ್ರ್ಯಾಕ್ಟರ್ನಿಂದ ಬೋನ್ ಇಳಿಸುವ ಸಂದರ್ಭದಲ್ಲಿ ಉಂಟಾದ ಗೌಜುಗದ್ದಲದಿಂದ ಗಾಬರಿಗೊಂಡ ಕರಡಿಗಗಳು ಪಕ್ಕದ  ದಾಳಿಂಬೆ ಗಿಡದಲ್ಲಿ ಇದ್ದ ಕರಡಿಗಳು ದ್ರಾಕ್ಷಾಯಣಮ್ಮನ ಮೇಲೆ  ಏಕಾಏಕಿ ದಾಳಿ ನಡೆಸಿವೆ,   ಈ ಸಂದರ್ಭದಲ್ಲಿ ದ್ರಾಕ್ಷಾಯಣಮ್ಮನ ಕಿರಿಚಾಟ ಕೇಳಿ ದಾರಿ ಹೋಕರು ಬಂದು ಕರಡಿಗಳನ್ನು ಓಡಿಸಿದರು ಎಂದು ತಿಳಿದು ಬಂದಿದೆ.  ಕರಡಿ ದಾಳಿಯಿಂದ ಕೈ ಮುರಿದಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು ಆರು ಹೊಲಗೆಗಳನ್ನು ಹಾಕಿದ್ದಾರೆ. 
ಆಸ್ಪತ್ರೆಗೆ ಗಾಯಾಳಗಳನ್ನು ಕರೆತಂದಿದ್ದ ನಂದಿಹಳ್ಳಿ ಮಲ್ಲೇಶಯ್ಯ ಮಾತನಾಡಿ, ನಮ್ಮ ಗ್ರಾಮದ  ಸುತ್ತಮುತ್ತಾ ಈಗಾಗಲೇ ಮೂರು ನಾಲ್ಕು ಜನ ಕರಡಿ ದಾಳಿಗೆ ತುತ್ತಾಗಿದ್ದಾರೆ,  ಹುಳಿಯಾರು ಸಕರ್ಾರಿ ಆಸ್ಪತ್ರೆಯಲ್ಲಿ ವೈದ್ಯಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಇಂತಹ ಘಟನೆಗಳಲ್ಲಿ ಚಿಕಿತ್ಸೆ ನೀಡಲಾಗದೇ ಇರುವುದರಿಂದ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಬೇಕಾಗಿದೆ.  ಕೂಡಲೇ ಕರಡಿಗಳನ್ನು ಹಿಡಿದು ಬೇರೆ ಕಡೆ ಸಾಗಿಸುವಂತೆ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಆರ್.ಎಫ್.ಓ. ಲಕ್ಷ್ಮೀನಾರಾಯಣ ಭೇಟಿ ನೀಡಿ ಸಕರ್ಾರದಿಂದ ಗಾಯಾಳುವಿಗೆ ಚಿಕಿತ್ಸೆಯ ಖಚರ್ುವೆಚ್ಚಗಳನ್ನು ನೀಡಲಾಗುವುದು ಎಂದರು.

ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ 
                                       
ಚಿಕ್ಕನಾಯಕನಹಳ್ಳಿ,ಜು.11 : ಅಂಗನವಾಡಿ ಕಾರ್ಯಕರ್ತರನ್ನು ಸಕರ್ಾರಿ ನೌಕರರಂತೆ ಪರಿಗಣಿಸಬೇಕು ಹಾಗೂ  ವೇತನವನ್ನು ಹೆಚ್ಚಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕಗಳನ್ನು  ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಛೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್ರವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಗುರುಭವನ ಬಳಿಯಿಂದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಮೆರವಣಿಗೆ ಹೊರಟು ತಾಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಅಧ್ಯಕ್ಷೆ ಪೂರ್ಣಮ್ಮ, ಅಂಗನವಾಡಿ ನೌಕರರನ್ನು ಸಕರ್ಾರಿ ನೌಕರರೆಂದು ಪರಿಗಣಿಸಬೇಕು, ಅಂಗನವಾಡಿ ಸಹಾಯಕರಿಗೆ, ಕಾರ್ಯಕರ್ತರಿಗೆ ವೇತನ ಸಹಿತ ವೈದ್ಯಕೀಯ ರಜೆ ನೀಡಬೇಕು, ಪರಿಣಿತ ಕೆಲಸಗಾರರಿಗೆ 20ಸಾವಿರ ರೂ  ಅಪರಿಣಿತ ಕೆಲಸಗಾರರಿಗೆ 17ಸಾವಿರ ರೂಗಳನ್ನು ಆರಂಭದ ವೇತನ  ನೀಡಬೇಕು ಹಾಗೂ  ಅಂಗನವಾಡಿ ಕಾರ್ಯಕರ್ತರನ್ನು ಮೂರನೇ ದಜರ್ೆ ನೌಕರರು, ಸಹಾಯಕರನ್ನು 4ನೇ ದಜರ್ೆ ನೌಕರರೆಂದು ಪರಿಗಣಿಸುವಂತೆ,  ಪ್ರತಿ ವರ್ಷ ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಚುಟಿ, ಪಿಂಚಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಹಸಿರು ಸೇನೆಯ ಸತೀಶ್ಕೆಂಕೆರೆ ಮಾತನಾಡಿ, ಹದಿನೈದು ವರ್ಷಗಳಿಂದಲೂ ರಾಜ್ಯಸಕರ್ಾರವಾಗಲಿ, ಕೇಂದ್ರ ಸಕರ್ಾರವಾಗಲಿ ಅಂಗನವಾಡಿ ನೌಕರರಿಗೆ ವೇತನ ನೀತಿಯಂತೆ ಸೌಲಭ್ಯಗಳನ್ನು ನೀಡಿಲ್ಲ, ಇತರ ಇಲಾಖೆ ನೌಕರರಿಗೆ ಮಾತ್ರ 25ರಿಂದ 30 ಸಾವಿರದವರೆಗೂ ವೇತನ ಹೆಚ್ಚಿಸಿ ಹಲವು ಸೌಲಭ್ಯ ನೀಡುತ್ತಿವೆ, ಅಂಗನವಾಡಿ ನೌಕರರು ಬಾಣಂತಿಯರಿಗೆ, ಮಕ್ಕಳಿಗೆ ಸೇವೆ ಸಲ್ಲಿಸುತ್ತಿದ್ದಾರೆಮ ಇವರೂ ಇತರ ಸಕರ್ಾರಿ ನೌಕರರಂತೆ ಗ್ರಾಮಗಳಲ್ಲಿ  ಕೆಲಸ ನಿರ್ವಹಿಸುತ್ತಾರೆ ಆದರೂ ಸಕರ್ಾರ ತಾರತಮ್ಯ ಮಾಡುತ್ತಿರುವುದು ವಿಷಾದನೀಯ ಎಂದರು.
ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದಶರ್ಿ ಸುನಂದ, ಪುಷ್ಪಾವತಮ್ಮ, ಶಾರದ, ಶಕುಂತಲ, ಮುಂತಾದವರು ಉಪಸ್ಥಿತರಿದ್ದರು.