Thursday, January 27, 2011


ಚಿಕ್ಕನಾಯಕನಹಳ್ಳಿ,ಜ.27: ಹಿಂದುಳಿದ ವರ್ಗಗಳ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬೇಕೆಂದರೆ ಮೊದಲು ಸಂಘಟಿತರಾಗಬೇಕೆಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು ತಿಳಿಸಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರ ಉಣ್ಣೆ ಮತ್ತು ಕಂಬಳಿ ಉತ್ಪಾದನಾ ಸಹಕಾರ ಸಂಘದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೊಳ್ಳಿರಾಯಣ್ಣನ 180ನೇ ಪುಣ್ಯಸ್ಮರಣೆ ಜಿ.ಪಂ. ಹಾಗೂ ತಾ.ಪಂನಲ್ಲಿ ಜಯಗಳಿಸಿದ ತಾಲೂಕಿನ ನೇಕಾರ ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ, ನೇಕಾರರಿಗೆ ಗುರುತು ಪತ್ರ ವಿತರಣೆ ಹಾಗೂ ಷೇರು ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕೆಂದರೆ ಮೊದಲು ತಮ್ಮೊಳಗಿನ ಭಿನ್ನಭೇದಬಿಟ್ಟು ಎಲ್ಲರೂ ಒಂದು ಎಂಬ ಮನೋಭಾವ ಬೆಳಸಿಕೊಂಡು ಅಸಾಹಯಕರನ್ನು ಮೇಲುತ್ತುವ ಕೆಲಸ ಮಾಡಬೇಕೆಂದರು.
ಕಾಳಿದಾಸ ಬ್ಯಾಂಕ್, ಕಾಳಿದಾಸ ವಿದ್ಯಾವರ್ದಕ ಸಂಘಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿನ ದುರ್ಬಲವರ್ಗದವರಿಗೆ ಆಥರ್ಿಕವಾಗಿ ಹಾಗೂ ಶೈಕ್ಷಣಿಕವಾಗಿ ನೆರವು ನೀಡಿದ ಎನ್ ಮಲ್ಲಪ್ಪನವರು ನಮ್ಮ ತಂದೆ ಎಂಬುದು ಹೆಮ್ಮೆಯ ವಿಷಯ ಎಂದ ಅವರು, ಕೇಂದ್ರ ಉಣ್ಣೆ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಹಲವು ಉಣ್ಣೆ ಸಂಘಗಳ ಸ್ಥಾಪನೆಗೆ ಪ್ರೇಕರಕರಾಗಿದ್ದರು, ಅವರ ಶತಮಾನೋತ್ಸವದ ವಷರ್ಾಚರಣೆಯ ಸಂದರ್ಭದಲ್ಲಿ ಈ ವೇದಿಕೆಗೆ ನಮ್ಮ ತಂದೆಯ ಹೆಸರನ್ನಿಟ್ಟಿರುವುದು ಹರ್ಷ ತಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಗೊಳ್ಳಿರಾಯಣ್ಣನ 180ನೇ ಪುಣ್ಯ ಸ್ಮರಣೆಯನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಬೆಳಗಾಂ ಜಿಲ್ಲೆಯ ನಂದಗಡದಲ್ಲಿರುವ ಅವರ ಸಮಾಧಿಯನ್ನು ಅಭಿವೃದ್ದಿ ಪಡಿಸಬೇಕೆಬುದು ನಮ್ಮ ಒತ್ತಾಯ, ಈ ಬಗ್ಗೆ ಸಕರ್ಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದೇವೆ ಎಂದರಲ್ಲದೆ, ಈ ಬಜೆಟ್ನ ಮಂಡನೆಯ ಈ ಸಂದರ್ಭದಲ್ಲಾದರೂ ರಾಯಣ್ಣನ ಸಮಾಧಿ ಅಭಿವೃದ್ದಿಗೆ ಹಣವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ನಮ್ಮ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿನ ಅಮಾಮ್ ಕೋಮಿನ ಜನರಿಗೆ ತಮಾಮ್ ಆಗಿ ಜಮೀನು ಹಂಚಿದವರು ಮಲ್ಲಪ್ಪನವರು, ಅವರು ಅಧಿಕಾರದಲ್ಲಿದ್ದಾಗ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲ ಮಡಿಕೊಟ್ಟರು ಎಂದರು.
ಇತ್ತೀಚಿಗೆ ಸಕರ್ಾರ ನೇಕಾರರ ನೆರವಿಗೆ ಬರುವಂತಹ ಯೋಜನೆಯನ್ನು ರೂಪಿಸುತ್ತಿದ್ದು ಕ್ಲಷ್ಟರ್ ಯೋಜನೆಯಲ್ಲಿ 5ವರ್ಷಗಳ ಅವಧಿಗೆ 50 ಲಕ್ಷರೂಗಳನ್ನು ನಮ್ಮ ಸೊಸೈಟಿಗೆ ನೀಡಿದೆ ಎಂದರಲ್ಲದೆ, ಉಣ್ಣೆಯಲ್ಲಿ ಮೌಲ್ಯವಧರ್ಿತ ಉತ್ಪನ್ನಗಳ ತರಬೇತಿಗೆ ಪುರಸಭೆಯವರು ಹಣ ಮೀಸಲಿಟ್ಟಿರುವುದು ನೇಕಾರಿಕೆಯಲ್ಲಿ ನವೀನ ರೀತಿಯ ವಸ್ತುಗಳ ಉತ್ಪಾದನಾ ತರಬೇತಿಗೆ ಅನುಕೂಲಕರವಾಗಲಿದೆ ಎಂದರು.
ಕಂಬಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಕರ್ಾರ ಮುಂದಾಗಬೇಕು ಅದಕ್ಕಾಗಿ ಎಲ್ಲಾ ಸಕರ್ಾರಿ ಆಸ್ಪತ್ರೆ ಹಾಗೂ ಹಾಸ್ಟಲ್ಗಳಿಗೆ ಬೆಡ್ಶೀಟ್ ಬದಲಾಗಿ ಕಂಬಳಿಗಳನ್ನು ವಿತರಿಸಬೇಕೆಂದರು.
ಬಿ.ಸಿ.ಎಂ ಇಲಖೆಯಲ್ಲಿ ನಮ್ಮ ಸೊಸೈಟಿಯ ಕಟ್ಟಡದಕ್ಕಾಗಿ 5ಲಕ್ಷರೂ ಅನುದಾನ ನೀಡಲು ಅವಕಾಶವಿದ್ದು ಈ ಹಣವನ್ನು ಪಡೆಯುವುದಕ್ಕೆ ನಮ್ಮ ಸೊಸೈಟಿಯ 5ಲಕ್ಷ ರೂಗಳನ್ನು ತುಂಬಿದರೆ 10ಲಕ್ಷ ರೂಗಳಲ್ಲಿ ಕಟ್ಟಡವನ್ನು ಕಟ್ಟಲು ಅವಕಾಶವಿದೆ, ಈ ನಿಟ್ಟಿನಲ್ಲಿ ನಮ್ಮ ಸೊಸೈಟಿ ಕಾಯರ್ೋನ್ಮುಕವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿದರ್ೇಶಕ ಕುಮಾರಸ್ವಾಮಿ, ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ, ಅಹಿಂದ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಕಾರ್ಯದಶರ್ಿ ಸಿ.ಪಿ.ಗಿರೀಶ್ ಸ್ವಾಗತಿಸಿದರೆ, ಶಿಕ್ಷಕ ದೇವರಾಜು ನಿರೂಪಿಸಿದರು, ಸಿ.ಎಚ್.ಗಂಗಾಧರ್ ವಂದಿಸಿದರು.