Thursday, November 17, 2011




ಗ್ರಾ.ಪಂ ಇಲಾಖಾ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳು 
ಚಿಕ್ಕನಾಯಕನಹಳ್ಳಿ,ನ.17 : ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖಾ ನೌಕರರ ಸಂಘದ ನೂತನ ಅಧ್ಯಕ್ಷರನ್ನಾಗಿ ಶೆಟ್ಟಿಕೆರೆ ಗ್ರಾಮ ಪಂಚಾಯಿತಿ ಕಾರ್ಯದಶರ್ಿ ಅಡವೀಶ್ಕುಮಾರ್ರವರನ್ನು ಆಯ್ಕೆಮಾಡಲಾಗಿದೆ.
ಸಂಘದ ನೂತನ ಕಾರ್ಯದಶರ್ಿಯನ್ನಾಗಿ ಹೊಯ್ಸಳಕಟ್ಟೆ ಗ್ರಾ.ಪಂ.ಕಾರ್ಯದಶರ್ಿ ನೀಲಕಂಠಯ್ಯರವರನ್ನು, ಹಾಗೂ ಖಜಾಂಚಿಯಾಗಿ ಗೋಡೆಕೆರೆ ಕಾರ್ಯದಶರ್ಿ ಸೀತಾರಾಮುರವರನ್ನು ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಗ್ರಾ.ಪಂ ಪಿ.ಡಿ.ಓ ಮತ್ತು ಕಾರ್ಯದಶರ್ಿಗಳು ಹಾಜರಿದ್ದರು.

ರೈತರ ಜಮೀನು ರಕ್ಷಿಸಲು ರಸ್ತೆಗಿಳಿಯಲಿರುವ ಮಠಾಧೀಶರು
ಚಿಕ್ಕನಾಯಕನಹಳ್ಳಿ,ನ.17 : ತಾಲ್ಲೂಕಿನ ಸೋಮಲಾಪುರದಿಂದ ದುಗಡಿಹಳ್ಳಿಯವರೆಗೆ ರೈತರ ಜಮೀನುಗಳಲ್ಲಿ ಹಾದುಹೋಗುವಂತೆ ಸವರ್ೆ ಕಾರ್ಯ ಮಾಡಿರುವುದನ್ನು ಖಂಡಿಸಿ ರಸ್ತೆ ತಡೆ ಚಳುವಳಿಯನ್ನು ಇದೇ 21ರ ಸೋಮವಾರ ಬೆಳಗ್ಗೆ 9 ಗಂಟೆಗೆ ಪಟ್ಟಣದ ನೆಹರು ಸರ್ಕಲ್ನಲ್ಲಿ ನಡೆಯಲಿದೆ.
ರಾಜ್ಯ ರೈತ ಸಂಘ , ಹಸಿರು ಸೇನೆ, ರೈತ ಹೋರಾಟ ಸಮಿತಿ ವತಿಯಿಂದ ಚಳುವಳಿ ಹಮ್ಮಿಕೊಂಡಿದ್ದು ಕಾಗಿನೆಲೆ ಗುರುಪೀಠಶಾಖಾ ಮಠದ ಈಶ್ವರಾನಂದಪುರಿಸ್ವಾಮಿ, ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ, ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ, ಬಾಚೀಹಳ್ಳಿ ಇಂಜನಿಯರ್ ವೇದಾನಂದಮೂತರ್ಿ ಉಪಸ್ಥಿತರಿರುವರು.