Tuesday, December 23, 2014


ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ 


ಚಿಕ್ಕನಾಯಕನಹಳ್ಳಿ,: ಸುಪ್ರಿಂ ಕೋಟರ್್ನ ನೇಮಿಸಿದ ಸಿ.ಇ.ಸಿ.ಶಿಫಾರಸ್ಸಿನಂತೆ, ತಾಲ್ಲೂಕಿನ ಗಣಿ ಭಾದಿತ ಪ್ರದೇಶಗಳಿಗೆ ಕೇಂದ್ರ ಸಕರ್ಾರ 94.77 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಕೃಷಿ ಇಲಾಖೆಗೆ 3.54 ಕೋಟಿ ರೂ ನೀಡಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕೃಷಿ ಇಲಾಖಾ ವತಿಯಿಂದಿ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ರೈತರಿಗಾಗಿ ರೈತರಿಂದ ರೈತರಿಗೋಸ್ಕರ 2014ನೇ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಅನುದಾನ ಒಂದು ವರ್ಷದ ಅವಧಿಗೆ ನೀಡಿದ್ದು, ಈ ಹಣದಲ್ಲಿ ಕೃಷಿ ಇಲಾಖೆಯಿಂದ ಚೆಕ್ಡ್ಯಾಂ, ಹಿಂಗುಗುಂಡಿ, ತಡೆಅಣೆ ನಿಮರ್ಿಸುವ ಮೂಲಕ ಬಿದ್ದ ಮಳೆಯನ್ನು  ಹಿಂಗಿಸಲು ಸಹಾಯವಾಗುತ್ತದೆ ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ ಎಂದರು.
ರೈತರು ದೇಶದ ಬೆನ್ನೆಲುಬು ರೈತರಿಲ್ಲದೆ ಬದುಕಲು ಸಾಧ್ಯವಿಲ್ಲ, ಶೇ.80ರಷ್ಟು ರೈತರು ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಡಿಸಿಕೊಂಡಿದ್ದಾರೆ ಸಕರ್ಾರ ರೈತರು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಯಂತ್ರೋಪಕರಣ ಹಾಗೂ ಔಷಧಿ, ರಸಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದ್ದು ಇದರ ಉಪಯೋಗ ಪಡೆಯುವಂತೆ ಸಲಹೆ ನೀಡಿದ ಅವರು, ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ, ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ನಮ್ಮ ಹಿಂದಿನ ಕೃಷಿ ಪದ್ದತಿಯನ್ನು ಅವಲಂಬಿಸಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದು ಸಕರ್ಾರ ರೈತರಿಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮೂಲಕ ಶೇ.75ರಷ್ಟು ಹಣ ನೀಡುತ್ತಿದೆ ಉಳಿದ ಶೇ.25 ರಷ್ಟು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ವಿನಿಯೋಗಿಸಿ ರೈತರಿಗೆ ಯಂತ್ರೋಪಕರಣವನ್ನು ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆಗೆ ನೀಡುತ್ತಿದೆ, ರೈತರು ಇದರ ಉಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಹೇಮಾವತಿ ನಾಲೆಯಿಂದ ತಾಲ್ಲೂಕಿಗೆ ನೀರು ಹರಿಯುವುದರಿಂದ ಶಟ್ಟಿಕೆರೆ, ಹಂದನಕೆರೆ, ಕಸಬಾ ಹೋಬಳಿಗಳಿಗೆ ಕುಡಿಯುವ ನೀರು ಲಭಿಸಲಿದೆ ಮಹಿಳೆಯರಿಗೆ ಕೃಷಿ ಹಾಗೂ ಡೈರಿ ನಡೆಸಲು ಹಸುಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳಲಾಗುತ್ತದೆ, ಇದರಿಂದ ಮಹಿಳೆಯರು ತಮ್ಮ ಕುಟುಂಬಗಳ ಆಥರ್ಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಕರ್ಾರ ರಾಗಿ, ಭತ್ತಕ್ಕೆ ಬೆಂಬಲ ಬೆಲೆ ನೀಡಲು ತೀಮರ್ಾನಿಸಿದೆ, ಬಿಳಿಗೆರೆ, ದೊಡ್ಡ ಎಣ್ಣೆಗೆರೆ, ಕಾತ್ರಿಕೆಹಲ್ನಲ್ಲಿ ವಿದ್ಯುತ್ ಉಪಸ್ಥಾವರಗಳನ್ನು ನಿಮರ್ಿಸಿ ಕಾಯರ್ಾರಂಭ ಮಾಡಿದ್ದು ಸಾಲ್ಕಟ್ಟೆ ಬಳಿ ವಿದ್ಯುತ್ ಸೆಬ್ ಸ್ಟೇಷನ್ ಮಾಡಲು ಸಕರ್ಾರ ಮಂಜೂರಾತಿ ನೀಡಿದೆ ಇದರಿಂದ ತಾಲ್ಲೂಕಿನಲ್ಲಿ ವಿದ್ಯುತ್ ಅಭಾವ ಕಡಿಮೆಯಾಗಲಿದೆ ಎಂದರು.
ಕೃಷಿ ತಜ್ಞಾ ಡಾ||ಕೆ.ಜಿ.ಬೋರಯ್ಯ ಮಾತನಾಡಿ ರೈತರು ಬೇಸಾಯ ಮಾಡುವಾಗ ನಾಲ್ಕು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಮಾಗಿ ಉಳುಮೆ ಮಾಡಿ,  ಬಿಜೋಪಚಾರ, ನೀರು ಸಂರಕ್ಷಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು. ಬಿಜೋಪಚಾರ ಮಾಡಿದರೆ ಫಸಲಿಗೆ ಮುಂದೆ ಬರುವಂತಹ ರೋಗ ಹಾಗೂ ಮಳೆ ಕಡಿಮೆಯಾದರೂ ಸಹ ಪೈರು ತಡೆಯುತ್ತದೆ. ಮಳೆ ನೀರು ಸಂರಕ್ಷಣೆ ಮಾಡುವುದರಿಂದ ಭೂಮಿಯಲ್ಲಿ ನೀರು ಹಿಂಗಿ ಅಂತರ್ಜಲ ಹೆಚ್ಚುತ್ತದೆ. ರೈತರು ತಮ್ಮ ಹೊಲಗಳಲ್ಲಿ ಬೆಳೆದ ಮಣ್ಣು ಕೊಚ್ಚಿಕೊಂಡು ಹೋಗದಂತೆ ನೋಡಿಕೋಳ್ಳಬೇಕು ಇದಕ್ಕೆ ರೈತರಿಗೆ ಆಸಕ್ತಿ ಇರಬೇಕು ಎಂದರು.
ಕೃಷಿ ತಜ್ಞ ಡಾ.ಪಾಲಣ್ಣ ಮಾತನಾಡಿ ರೈತರು ತಾವು ಬೆಳೆದ ಬೆಳೆಗೆ ರೋಗ ಬಂದಾಗ ಔಷಧಿ ಸಿಂಪಡಿಸುವುದು. ಮುಖ್ಯವಾಗಿ ಅದು ಹೇಗೆ ಬಂದಿದೆ ಇದ್ಕಕೆ ಪರಿಹಾರವೇನು ಎಂದು ಕೃಷಿ ತಜ್ಞರ ಜೊತೆಯಲ್ಲಿ ಚಚರ್ಿಸಿ ಪರಿಹಾರ ಪಡೆದುಕೊಳ್ಳುವಂತೆ ಸೂಚಿಸಿದರು, ರೈತರು ಬೆಳೆ ಬೆಳೆಯುವ ಮುನ್ನ ತಮ್ಮ ಜಮೀನಿನಲ್ಲಿರುವ ಮಣ್ಣನ್ನು ಪರಿಕ್ಷಿಸಿ ಬೆಳೆ ಬೆಳೆಯುವುದರಿಂದ ರೈತರಿಗೆ ಅನೂಕೂಲದ ಜೊತೆಯಲ್ಲಿ ಆಥರ್ಿಕವಾಗಿ ಲಾಭ ಹೊಂದಬಹುದು ಎಂದರಲ್ಲದೆ  ಕೃಷಿ ಭೂಮಿ ಕಡಿಮೆಯಾಗುತ್ತಿದ್ದು ಹೆಚ್ಚು ಹೆಚ್ಚು ಆಹಾರ ಬೆಳೆಯುವ ರಭಸದಲ್ಲಿ ರಸಗೊಬ್ಬರವನ್ನು ಹಾಕುವುದರಿಂದ ಭೂಮಿ ಬರಡಾಗುವುದರ ಜೊತೆಯಲ್ಲಿ ಬೆಳೆಗಳಿಗೆ ರೋಗಗಳು ಹೆಚ್ಚಾಗುತ್ತವೆ ಸಾವಯವ ಗೊಬ್ಬರ ಬಳಕೆ ಕಡಿಮೆಯಾಗುವುದರಿಂದಲೂ ಬೆಳೆಗಳಿಗೆ ಕೀಟಬಾಧೆ ಜಾಸ್ತಿಯಾಗುತ್ತದೆ ಎಂದರು.
     ಸಹಾಯಕ ಕ್ಷéಷಿ ಉಪನಿದರ್ೇಶಕ ಹೆಚ್.ಹೊನ್ನೇದಾಸೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿ,  ಚೌದ್ರಿ ಚರಣ್ಸಿಂಗ್ ಭೂ ಸುಧಾರಣೆಯಂತಹ ಕಾರ್ಯಕ್ರಮಗಳನ್ನು ತಂದಿದ್ದಾರೆ,  ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಅನೇಕ ಕೃಷಿಗೆ ಸಂಭಂದಿಸಿದ ಪುಸ್ತಕಗಳನ್ನು ರಚಿಸಿದ್ದಾರೆ, ಇವರ ಜನ್ಮ ದಿನಾಚರಣೆ ಅಂಗವಾಗಿ ಕೃಷಿ ಉತ್ಸವ ಹಾಗೂ ರೈತರ ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ ಎಂದರು.
     ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಾನಮ್ಮ ರಾಮಚಂದ್ರಯ್ಯ, ಎನ್.ಜಿ.ಮಂಜುಳ, ನಿಂಗಮ್ಮರಾಮಯ್ಯ, ತಾಲ್ಲೂಕ್ ಪಂಚಾಯ್ತಿ ಸದಸ್ಯರಾದ ಚೇತನಗಂಗಾಧರ್, ಹೇಮಾವತಿ ,ಲತಾ ವಿಶ್ವೇಶ್ವರಯ್ಯ, ಕವಿತಾಪ್ರಕಾಶ್, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಟರಾಜ್, ಉಪಾದ್ಯಕ್ಷ ನಾಗರಾಜಪ್ಪ, ಜಿಲ್ಲಾ ಪ್ರತಿನಿಧಿಸಿ.ಬಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. 
  ಈ ಸಂದರ್ಭದಲ್ಲಿ ಪ್ರಗತಿ ಪರ ರೈತರಾದ ಕಾಂತರಾಜ್, ಬಿ.ಎನ್.ಲೋಕೇಶ್, ಜಗದಾಂಬ, ಬಸವರಾಜುರವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಎ.ಪಿ.ಎಂ.ಸಿ ಸದಸ್ಯರ  ಉತ್ತರ ಭಾರತದ ರಾಜ್ಯದ ಎ.ಪಿ.ಎಂ.ಸಿ. ಸ್ಥಳಗಳಿಗೆ ಪ್ರವಾಸ 

ಚಿಕ್ಕನಾಯಕನಹಳ್ಳಿ,ಡಿ.23 : ತಾಲ್ಲೂಕಿನ ಎ.ಪಿ.ಎಂ.ಸಿ ಸದಸ್ಯರು ಸಕರ್ಾರದ ವತಿಯಿಂದ  ಉತ್ತರ ಭಾರತದ ರಾಜ್ಯದ ಎ.ಪಿ.ಎಂ.ಸಿ. ಸ್ಥಳಗಳಿಗೆ ಪ್ರವಾಸ ತೆರಳುವ ಮುನ್ನ  ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿರವರ ಮಾರ್ಗದರ್ಶನ ಪಡೆಯಲು ಅವರ ನಿವಾಸಕ್ಕೆ ತೆರಳಿದ್ದರು. 
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಉತ್ತರ ಭಾರತದಲ್ಲಿನ ಕೃಷಿ ಮಾರುಕಟ್ಟೆಗಳು ಉತ್ತಮವಾಗಿವೆ ಅಲ್ಲಿನ ಸೇವೆಗಳು ಜನರಿಗೆ ಹತ್ತಿರವಾಗಿದ್ದು ಅಲ್ಲಿನ ಸೇವೆಗಳನ್ನು, ಆಡಳಿತವನ್ನು ತಿಳಿದು ಉತ್ತಮವಾಗಿರುವುದನ್ನು ಚಿಕ್ಕನಾಯಕನಹಳ್ಳಿಗೆ ಜನತೆಗೆ ನೀಡುವಂತೆ ಎ.ಪಿ.ಎಂ.ಸಿ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಎ.ಪಿ.ಎಂ.ಸಿ ಸದಸ್ಯ ಶಿವರಾಜು ಮಾತನಾಡಿ, ಕೃಷಿ ಮಾರುಕಟ್ಟೆ ಸಮಿತಿಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಎರಡು ವರ್ಷಗಳಾಗಿದ್ದು ಜನತೆಗೆ ಉತ್ತಮ ಆಡಳಿತ ನೀಡುತ್ತಿದ್ದೇವೆ, ಉತ್ತರ ಭಾರತ ರಾಜ್ಯಗಳಾದ ದೆಹಲಿ, ಚಂಡಿಗಡ, ಜೈಪುರ, ರಿಶಿಕೇಶ, ಆಗ್ರ, ಹರಿದ್ವಾರ, ಅಮೃತಸರ, ಪ್ರದೇಶಗಳ ಕೃಷಿ ಮಾರುಕಟ್ಟೆಗಳ ಅಧ್ಯಯನಕ್ಕಾಗಿ ಹಾಗೂ ಪ್ರವಾಸವಕ್ಕಾಗಿ 15ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು ಈ ಪ್ರವಾಸಕ್ಕಾಗಿ ಮಾಜಿ ಶಾಸಕರು ಹೆಚ್ಚು ಬೆಂಬಲ ವ್ಯಕ್ತಪಡಿಸಿದ್ದರಲ್ಲದೆ ಅವರ ಮಾರ್ಗದರ್ಶನ ಪಡೆಯುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಸಣ್ಣಯ್ಯ, ದ್ರಾಕ್ಷಾಯಣಮ್ಮ, ಸಿಂಗದಹಳ್ಳಿ ರಾಜ್ಕುಮಾರ್  ಮತ್ತಿತರರು ಉಪಸ್ಥಿತರಿದ್ದರು

Monday, December 22, 2014

ಜಿಲ್ಲೆಗೆ 2014-15, 2016-17ನೇ ಸಾಲಿಗೆ ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಸಿ.ಇ.ಸಿ.ವರದಿಯ ಅದಾರದ ಮೇಲೆ 157ಕೋಟಿ 88 ಲಕ್ಷ
ಚಿಕ್ಕನಾಯಕನಹಳ್ಳಿ,ಡಿ.22 :  ಜಿಲ್ಲೆಯ ಮೂರು ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲ್ಲೂಕುಗಳಿಗೆ 2014-15, 2016-17ನೇ ಸಾಲಿಗೆ ಗಣಿ ಬಾದಿತ ಪ್ರದೇಶಗಳ ಅಭಿವೃದ್ದಿಗಾಗಿ ಸಿ.ಇ.ಸಿ.ವರದಿಯ ಅದಾರದ ಮೇಲೆ 157ಕೋಟಿ 88 ಲಕ್ಷ ರೂಪಾಯಿ ಬಿ  
ಡುಗಡೆಯಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
    ಪಟ್ಟಣದ ತಾಲ್ಲೂಕು ಕಛೇರಿಯ ಸಭಾಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ 157.88 ಕೋಟಿ ರೂಪಾಯಿಗಳಲ್ಲಿ ಚಿಕ್ಕನಾಯಕನಹಳ್ಳಿಗೆ ಶೇಕಡ 60 ರಷ್ಟು ಅಂದರೆ 95.77ಲಕ್ಷ ರೂಗಳು ಬರಲಿದೆ. ತಿಪಟೂರು ಹಾಗೂ ಗುಬ್ಬಿ ತಾಲ್ಲೂಕುಗಳಿಗೆ ತಲಾ ಶೇಕಡ 20 ರಷ್ಷು ಹಣ ಬಿಡುಗಡೆಯಾಗಿದೆ ಎಂದರು.
ಅಧಿಕಾರಿಗಳು ತಾಲ್ಲೂಕಿನ ಅಭಿವೃದ್ದಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುವಂತೆ  ಅಧಿಕಾರಿಗೆ ಸಲಹೆ ನೀಡಿದರಲ್ಲದೆ  ಸಮಯಕ್ಕೆ ಸರಿಯಾಗಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಸರಿಯಾದ ವರದಿ ನೀಡಿದರೆ ಪ್ರತಿ ವರ್ಷ 400 ರಿಂದ 500 ಕೋಟಿ ರೂ ಜಿಲ್ಲೆಗೆ ಬಿಡುಗಡೆಯಾಗಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಗೆ  5 ಕೋಟಿ 74 ಲಕ್ಷ ಬಿಡುಗಡೆಯಾಗಿದ್ದು ಈ ಹಣದಲ್ಲಿ ಹೆಚ್ಚುವರಿ ಶಾಲಾ ಕೊಟ್ಟಡಿ ನಿಮರ್ಾಣಕ್ಕೆ 3ಕೋಟಿ 80 ಲಕ್ಷ ರೂಪಾಯಿ, ಶೌಚಾಲಯ ನಿಮರ್ಾಣಕ್ಕೆ 56.22 ಲಕ್ಷ.ರೂ,  ಶಾಲೆಗಳ ಸುತ್ತ ಮುತ್ತ ಕಾಂಪೌಂಡ್ ನಿಮರ್ಾಣಕ್ಕೆ 78.5.ರೂ ಲಕ್ಷ ಶಾಲಾ ಮಕ್ಕಳ ಶುದ್ದ ಕುಡಿಯುವ ನೀರಿನ ಆರ್.ಓ.ಯೋಜನೆಗೆ  84.ಲಕ್ಷ.ರೂ ಹಾಗೂ ದೊಡ್ಡ ಕೊಠಡಿಗಳ ರಿಪೇರಿಗೆ 58.5 ಲಕ್ಷ.ರೂ ಬಿಡುಗಡೆಯಾಗಿದೆ. 
    ಕೃಷಿ ಇಲಾಖೆಯ ವಿವಿಧ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ 3 ಕೋಟಿ 54 ಲಕ್ಷ ಬಿಡುಗಡೆಯಾಗಿದ್ದು 9 ಗ್ರಾಮ ಪಂಚಾಯ್ತಿಗಳ 17 ಹಳ್ಳಿಗಳ 1565 ಹೆಕ್ಟರ್ ಪ್ರದೇಶಗಳಲ್ಲಿ ಕೃಷಿ ಜಲನಯನ ಅಭಿವೃದ್ದಿ ಕಾಮಗರಿಗಳಾದ ಕೃಷಿ ಜಮೀನುಗಳಲ್ಲಿ ಸ್ಥಳದಲ್ಲೇ ಮಣ್ಣು, ನೀರು ಸಂರಕ್ಷಣೆ, ಕೃಷಿ ಹೊಂಡ, ತಡೆಹಣೆಗಳು, ಹಳೇ ಕಟ್ಟಡಗಳ ದುರಸ್ತಿ, ನಾಲ ಬದು ಕಾಮಗರಿಗಳು ಕೈಗೆತ್ತಿಕೋಳ್ಳಲಾಗುವುದು ಎಂದು ಕೃಷಿ ಅಧಿಕಾರಿ ಸಣ್ಣಹೊನ್ನೇಗೌಡ ತಿಳಿಸಿದರು.
    ಪಶು ಸಂಗೋಪನಾ ಇಲಾಖೆಗೆ 81 ಲಕ್ಷ ರೂಪಾಯಿಗಳು ಬಿಡುಗಡೆಯಾಗಿದ್ದು ಪಶು ಆರೋಗ್ಯ ಶಿಬಿರಗಳಿಗೆ ಕುರಿ, ಮೇಕೆ, ಜಂತುಹುಳ ನಾಶ ಔಷದಿಗೆ, ಜಾನುವಾರಗಳಿಗೆ ಚಿಕಿತ್ಸೆ ಮಾಡುವ ಪಿಲ್ಟರ್ ಕಟ್ಟಡಗಳ ದುರಸ್ಥಿ ಹಾಗೂ ಕಾಂಪೌಂಡ್ ನಿಮರ್ಾಣಕ್ಕೆ ಹಣ ಉಪಯೋಗಿಸಲಾಗುವುದು ಎಂದು ಪಶು ವೈದ್ಯಾಧಿಕಾರಿ ಶಶಿಕುಮಾರ್ ತಿಳಿಸಿದರು. 
    ಸಾರಿಗೆ ಮತ್ತು ಸಂಪರ್ಕ ರಸ್ತೆ ನಿಮರ್ಾಣಕ್ಕೆ 60 ಕೋಟಿ ಹಣ ಬಿಡುಗಡೆಯಾಗಿದ್ದು ಕಾಂಕ್ರಿಟ್ ರಸ್ತೆ ಅಭಿವೃದ್ದಿ ಕಾಮಗಾರಿಗಳ ನಿಮರ್ಾಣಕ್ಕೆ ಹಣ ಬಿಡುಗಡೆಯಾಗಿದ್ದು ಜೋಗಿಹಳ್ಳಿಯಿಂದ ಹೋನ್ನೆಬಾಗಿ, ಬುಳ್ಳೆನಹಳ್ಳಿ ಮೂಲಕ ಗುಡ್ಡದ ಪಾಳ್ಯದ ಗ್ರಾಮದವರೆಗೆ 12 ಕಿ.ಮಿವರೆಗೆ ಕಾಕ್ರೆಟ್ ರಸ್ತೆ,  ಗೋಡೆಕೆರೆ, ಬಾಣದೇವರಹಟ್ಟಿ ಮೂಲಕ ಸೋಂಡೆನಹಳ್ಳಿಗೊಲ್ಲರಹಟ್ಟಿ, ಹಾಗೂ ಸೊಂಡೆನಹಳ್ಳಿಯವರಿಗೆ ಗೋಡೆಕೆರೆ, ರಂಗನಾಥಪುರ, ನಡುವನಹಳ್ಳಿ, ಬಗ್ಗನಹಳ್ಳಿಯವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ ಜೋಗಿಹಳ್ಳಿಯಿಂದ ಗೊಲ್ಲರಹಳ್ಳಿ ಮುಖಾಂತರ ಗಣಿಗಾರಿಕೆ ನಡೆಯುವ ಅಬ್ಬಿಗೆ ಗುಡ್ಡ ರಸ್ತೆ ನಿಮರ್ಾಣ. ಹಾಗೂ                  ತೀರ್ಥಪುರ, ದೊಡ್ಡರಾಂಪುರ, ಯರೇಕಟ್ಟೆ ಮೂಲಕ ತೀರ್ಥರಾಮೇಶ್ವರ ದೇವಾಲಯದವರೆಗೆ ಕಾಕ್ರಿಂಟ್ ರಸ್ತೆ, ಬರಸಿಡ್ಲಹಳ್ಳಿಯಿಂದ ಚಿಕ್ಕರಾಂಪುರದ ಮೂಲಕ ಎಲ್.ಎಸ್.ಕೋರೆಯವರೆಗೆ ಕಾಂಕ್ರೇಟ್ ರಸ್ತೆ ನಿಮರ್ಾಣಕ್ಕೆ ಹಣ ಉಪಯೋಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರು.. 
    ಪರಿಸರ ಹಾಗೂ ಅರಣ್ಯ ಇಲಾಖೆಗೆ 18 ಕೋಟಿ ಬಿಡುಗಡೆಯಾಗಿದ್ದು ಜಾಣೇಹಾರ್,  ಕಾಮನಹಳ್ಳಿ, ತೀರ್ಥರಾಮೇಶ್ವರ ದೇವಾಲಯ ಭಾಗಗಳ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಸಸಿ ನೆಡುವ ಕಾರ್ಯಕ್ರಮ ಜಾಣೇಹಾರ್ ಬಳಿ ಮಿನಿ ಮೃಗಾಲಯ ಹಾಗೂ ಜಾಣೇಹಾರ್ ಬಳಿ ಇರುವ ಬೆಟ್ಟದ ಮೇಲೆ ಪ್ರವಾಸಿ ಮಂದಿರ ನಿಮರ್ಿಸಲು ರೂಪುರೇಶೆ ರಚಿಸಲಾಗುವುದು ಎಂದು ಅರಣ್ಯ ಇಲಾಖಾ ಅಧಿಕಾರಿ ಕೃಷ್ಣ ನಾಯಕ್ ತಿಳಿಸಿದರು. 
ಜಾಣೇಹಾರ್ ಬೆಟ್ಟದ ಮೇಲೆ ಉತ್ತಮ ಪರಿಸರ ಇರುವುದರಿಂದ ಆ ಸ್ಥಳದಲ್ಲಿ ಪ್ರವಾಸಿ ಮಂದಿರ ನಿಮರ್ಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅರಣ್ಯ ಇಲಾಖೆ ಅಧಿಕಾರಿ ಕೃಷ್ಣನಾಯ್ಕ್ ಸೂಚಿಸದ ಶಾಸಕರು ಗಣಿ ಭಾಗ ಗುಡ್ಡ ಪ್ರದೇಶವಾಗಿರುವುದರಿಂದ ಗುಡ್ಡ ಭಾಗಗಳ ಮಧ್ಯೆ ಅಣೆಕಟ್ಟು (ಡ್ಯಾಂ) ನಿಮರ್ಿಸಿದರೆ ಹೇಮಾವತಿ ನಾಲೆಯಿಂದ ನೀರನ್ನು ಹರಿಸಿದರೆ ಎರಡು ಹೋಬಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಲಿದೆ ಎಂದರು .
ಹಾಗೂ ಹೊಸಹಳ್ಳಿಯಿಂದ ಗೊಲ್ಲರಹಳ್ಳಿ, ದಿಬ್ಬದಹಳ್ಳಿ, ಭಾವನಹಳ್ಳಿ ಮುಖಾಂತರ ಹೊನ್ನೆಬಾಗಿ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೈಗೆತ್ತಿಕೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಅಧಿಕಾರಿಗೆ ಸೂಚಿಸಿದ ಅವರು ತಾಲ್ಲೂಕಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಚಾರಿ ಆಸ್ಪತ್ರೆ, ಹೊನ್ನೆಬಾಗಿಯಲ್ಲಿ ನೂತನ ಸಕರ್ಾರಿ ಆಸ್ಪತ್ರೆ  ಹಾಗೂ ಪ್ರಯೋಗ ಶಾಲೆ ಮಾಡಲು ಕ್ರಮಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ರವರಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾಲೇಜು ಹೆಣ್ಣು ಮಕ್ಕಳ ಹಾಸ್ಟಲ್, ನಿವೇಶನ, ಕಟ್ಟಡ ನಿಮರ್ಾಣಕ್ಕೆ ಹಾಗೂ ದುರಸ್ತಿ, ಮೂಲಭೂತ ಸೌಕರ್ಯಗಳಿಗೆ ಮತ್ತು ಕಾತ್ರಿಕೆಹಾಲ್ ಭಾಗದಲ್ಲಿ ಶಾಲೆ ತೆರೆಯಲು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಕೆಪಿಟಿಸಿಎಲ್ ಅಧಿಕಾರಿ ರಾಜಶೇಖರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Saturday, December 20, 2014

ಪೋಲಿಸರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿಡಿ. : ಅಪರಾಧ ತಡೆ ಮಾಸಾಚರಣೆಯ ಹಿನ್ನೆಲೆಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿರವರು ಕರೆ ನೀಡಿದ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಪೋಲಿಸ್ ಇಲಾಖೆ ವತಿಯಿಂದ ತಾಲ್ಲೂಕಿನ ದುಗಡಿಹಳ್ಳಿ ಗ್ರಾಮ ಪಂಚಾಯ್ತಿಯ ಹರಿಜನ ಕಾಲೋನಿಯ ಗ್ರಾಮವನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ತಿಳಿಸಿದರು.
   ಚಿಕ್ಕನಾಯಕನಹಳ್ಳಿಯ 23ಮಂದಿ ಪೋಲಿಸ್ ಸಿಬ್ಬಂದಿ, ಗ್ರಾಮದ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮ ಪಂಚಾಯ್ತಿಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮರವರ ನೇತೃತ್ವದಲ್ಲಿ ದುಗಡಿಹಳ್ಳಿ ಗ್ರಾಮವನ್ನು ಪೋಲಿಸ್ ಸಿಬ್ಬಂದಿಗಳು ಸ್ವಪ್ರೇರಿತರಾಗಿ ಸ್ವಚ್ಛಗಳಿಸಿದರು.
  ದುಗಡಿಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಪೋಲಿಸ್ ಸಿಬ್ಬಂದಿ ಮತ್ತು ಗ್ರಾಮಸ್ಥರೊಂದಿಗೆ ಗ್ರಾಮದ ಚರಂಡಿ, ದೇವಸ್ಥಾನ, ಬೀದಿಗಳಲ್ಲಿದ್ದ ಕಸವನ್ನು ತೆಗೆದು ಸ್ವಚ್ಚಗೊಳಿಸುತ್ತಿದ್ದು ಈ ಬಗ್ಗೆ ತಾಲ್ಲೂಕಿನ ಕಾರ್ಯನಿರ್ವಹಣಾಧಿಕಾರಿರವರಿಗೂ ತಿಳಿಸಿದ್ದು ಅವರೂ ಗ್ರಾಮದ ಸ್ವಚ್ಛತೆಯನ್ನು ಕಾಪಾಡುವದರ ಬಗ್ಗೆ ತಿಳಿಸಿದ್ದಾರೆ ಎಂದರು.
 ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಗಾಯಿತ್ರಿ, ಕಲಾವತಿ, ಮಲ್ಲಿಕಾಜರ್ುನ್, ವೆಂಕಟೇಶ್, ಬಾಲ್ಕುಮಾರ್, ಮಂಜುನಾಥ್, ನರಸಿಂಹಸ್ವಾಮಿ, ಚನ್ನೆಗೌಡ, ಕುಮಾರ್, ರಮೇಶ್, ಹೋಂ ಗಾಡರ್್ ರವಿಕುಮಾರ್, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಕೆ.ಜಿ.ಬಸವೇಗೌಡ, ಸದಸ್ಯೆ ಶಾರದಮ್ಮ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.


ನಿವೃತ್ತ ನೌಕರರ ದಿನಾಚಾರಣೆ
ಚಿಕ್ಕನಾಯಕನಹಳ್ಳಿ,ಡಿ.20 ; ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿವೃತ್ತ ನೌಕರರ ಸಂಘಟನೆಯು ಬಲಿಷ್ಠವಾಗಿದ್ದು, ಸಂಘಟನೆಯು ಜನಸಾಮಾನ್ಯರ ವಿಶ್ವಾಸ ಗಳಿಸಿ ಜನಮೆಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಬಾಬಡೆ ಹೇಳಿದರು.
ಪಟ್ಟಣದಲ್ಲಿ ನೆಡೆದ ನಕರ ರವರ ನಿವೃತ್ತ ನೌಕರರ ದಿನಾಚಾರಣೆ ಹಾಗೂ 29ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿ, ನಿವೃತ್ತ ನೌಕರರು ಸಂಘಟನೆಗಳನ್ನು ಮಾಡುವುದರ ಜೊತೆಗೆ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು, ನಿವೃತ್ತ ನೌಕರರಲ್ಲಿ ಬಹುಪಾಲು ಮಂದಿ ಶಿಕ್ಷಕರಿದ್ದು ನಿವೃತ್ತ ಶಿಕ್ಷಕರು ಕಮಿಟಿಯೊಂದನ್ನು  ರಚಿಸಿ ಹಿಂದುಳಿದ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಯ ಜನಕ್ಕೆ ಶಿಕ್ಷಣ, ಮಾರ್ಗದರ್ಶನ, ನೀಡಿ ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದರು. ನಕರ ರವರು ನಿವೃತ್ತ ನೌಕರರ ಪಿಂಚಣೆಯ ವಿಷಯವಾಗಿ ಕೇಂದ್ರ ಸಕರ್ಾರದ ವಿರುದ್ದ ಸುಪ್ರೀಂ ಕೋಟರ್್ನಲ್ಲಿ ಹೋರಾಟ ನೆಡಸಿದರ ಪರಿಣಾಮ ನ್ಯಾಯಾಲಯವು ಸಕರ್ಾರಿ ನಿವೃತ್ತರಿಗೆ ಪಿಂಚಣಿ ಒಂದು ಹಕ್ಕು ಇದು ಪ್ರತಿಯೊಬ್ಬರಿಗೂ ಸಿಗಬೇಕೆಂದು ತೀಪರ್ು ನೀಡಿದ್ದು ಈ ತೀಪರ್ಿನ ಕೀತರ್ಿ ನಕರರವರಿಗೆ ಸಲ್ಲುತ್ತದೆ ಎಂದರಲ್ಲದೆ ಈ ಕುರುಹಾಗಿ ನಕರ ಮತ್ತು ನಿವೃತ್ತ ನೌಕರರ ದಿನಾಚಾರಣೆಯನ್ನು ನೆಡಸಲಾಗುತ್ತದೆ ಎಂದರು.
  ತುಮಕೂರಿನ ಸ.ಶಿ.ಇಲಾಖೆಯ ಉಪನಿದರ್ೇಶಕರಾದ ಈಶ್ವರಪ್ಪ ಮಾತನಾಡಿ ವಯಸ್ಸು ದೇಹಕ್ಕೆ ಮತ್ರ ಮನಸಿಗೆ ಅಲ್ಲ, ನಿವೃತ್ತಿ ಹೊದಿದ್ದರು ಸಮಾಜಮುಖಿಯಾಗಿ ಕೆಲಸ ಮಾಡುವ ಹುಮ್ಮುಸ್ಸನ್ನು ನಿವೃತ್ತ ನೌಕರರು ಹೊಂದಿದ್ದಾರೆ, ಗ್ರಾಮೀಣಾ ಭಾಗದಲ್ಲಿರುವ ಪ್ರಾಥಮಿಕ ಮತ್ತು ಪ್ರೌಡಶಾಲೆಯ ಆವರಣಗಳು ಸ್ವಚ್ಛತೆಯಿಂದ ದೂರವಿದ್ದು ಆ ಭಾಗದ ಪಿ.ಡಿ.ಒ. ಮತ್ತು ಎಸ್.ಡಿ.ಎಮ್.ಸಿ. ಹಾಗೂ ಶಿಕ್ಷಕರು ಜವಾಬ್ದಾರಿ ವಹಿಸಿ ಸ್ವಚ್ಛತೆಯನ್ನು ಕಾಪಾಡಿ ಮಕ್ಕಳಿಗೆ ಸುಂದರ ಪರಿಸರವನ್ನು ರೂಪಿಸಬೇಕು ಎಂದರು. 
ಕಾರ್ಯಕ್ರಮದಲ್ಲಿ 75ವರ್ಷ ತುಂಬಿದ ನಿವೃತ್ತ ಹಿರಿಯ ನೌಕರರಿಗೆ ಮತ್ತು ಎಸ್.ಎಸ್.ಎಲ್.ಸಿ ಹಾಗು ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾಥರ್ಿಗಳಿಗೆ ಸನ್ಮಾನಿಸಲಾಯಿತು.
ತಾ.ನಿ.ನೌ.ಸಂಘದ ಅಧ್ಯಕ್ಷ ಸಿ.ರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಂ.ವಿ.ನಾಗರಾಜರಾವ್, ಗುಬ್ಬಿಯ ಸಂಘದ ಅಧ್ಯಕ್ಷ ರಾಮಯ್ಯ, ಸಂಘದ ಉಪಾಧ್ಯಕ್ಷೆ ಶಾರದಮ್ಮ, ಸಹ ಕಾರ್ಯದಶರ್ಿ ರಾಜಪ್ಪ, ಕಾಸಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ , ಜಿ.ಪಂ.ಮಾಜಿ ಅಧ್ಯಕ್ಷೆ ಜಯಮ್ಮದಾನಪ್ಪ, ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು. ಕಾರ್ಯದಶರ್ಿ ಸಿ.ಡಿ.ರುದ್ರಮುನಿ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ರಂಗನಾಥ್ ನಿರೂಪಿಸಿದರು. ಸಿ.ಕೆ.ವಿಶ್ವೇಶ್ವರಯ್ಯ ವಂದಿಸಿದರು.


Friday, December 19, 2014


ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮನವಿ 
ಚಿಕ್ಕನಾಯಕನಹಳ್ಳಿ,: ತಾಲ್ಲೂಕಿನ 28 ಗ್ರಾಮ ಪಂಚಾಯ್ತಿಗಳಲ್ಲಿ ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳಾದ ಕುರಿಶೆಡ್, ದನದ ಕೊಟ್ಟಿಗೆ, ಕೋಳಿಫಾರಂ ಹಾಗೂ ಶೌಚಾಲಯಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಾಧಿಕಾರಿ ಗೋವಿಂದರಾಜುರವರನ್ನು ಫಲಾನುಭವಿಗಳು ಮನವಿ ಸಲ್ಲಿಸಿದರು.
ಪಟ್ಟಣದ  ತಾ.ಪಂ.ಸಭಾಂಗಣದಲ್ಲಿ ನಡೆದ ತಿಪಟೂರು ಉಪವಿಭಾಗದ ಗ್ರಾಮ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಗೆ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಭೇಟಿ ಮಾಡಿದ ಫಲಾನುಭವಿಗಳು, ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ನಿಮರ್ಿಸಿಕೊಂಡು ಒಂದು ವರ್ಷ ಕಳೆದರೂ ಹಣ ಬಿಡುಗಡೆ ಯಾಗಿಲ್ಲವೆಂದು ಒತ್ತಾಯಿಸಿದರು ಇದಕ್ಕೆ   ಪ್ರತಿಕ್ರಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಜಿಲ್ಲೆಯ 82 ಗ್ರಾಮ ಪಂಚಾಯ್ತಿಗಳಲ್ಲಿ ಶೌಚಾಲಯಗಳು ನಿಮರ್ಿಸಿಕೊಳ್ಳಲು ಗುತ್ತಿಗೆದಾರರು ಕೂಲಿ ಕಾಮರ್ಿಕರಿಗೆ ಉದ್ಯೋಗ ಖಾತ್ರಿ ಕಾಡರ್್ನ್ನು ತಮ್ಮ ಬಳಿಯೇ ಇಟ್ಟುಕೊಂಡು ಜೆ.ಸಿ.ಬಿ ಮತ್ತಿತರ ಯಂತ್ರಗಳ ಮೂಲಕ ಕಾಮಗಾರಿಗಳನ್ನು ಮಾಡಿರುವುದರಿಂದ 60 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ವರದಿಯ ಹಿನ್ನಲೆಯಲ್ಲಿ ಸಕರ್ಾರ ಎನ್.ಆರ್.ಇ.ಜಿ ಯೋಜನೆಯಲ್ಲಿ ಕಂಪ್ಯೂಟರ್ನ್ನು ಸ್ಥಗಿತಗೊಳಿಸಿದೆ ಆದ್ದರಿಂದ ಈಗ ವೈಯಕ್ತಿಕವಾಗಿ ನಿಮರ್ಿಸಿಕೊಂಡಿರುವ ಶೌಚಾಲಯಗಳು, ಕುರಿಶೆಡ್, ಕೊಟ್ಟಿಗೆ, ಕೋಳಿಫಾರಂಗಳ ಬಗ್ಗೆ ಪಟ್ಟಿ ನೀಡಿದರೆ ಪರಿಶೀಲಿಸಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆ.ಸಿ.ಪುರ ಗ್ರಾ.ಪಂ.ಉಪಾಧ್ಯಕ್ಷ ಶಿವಾನಂದ್, ಮುದ್ದೇನಹಳ್ಳಿ ಮಾಜಿ ಗ್ರಾ.ಪಂ.ಅಧ್ಯಕ್ಷ ಸಾಲ್ಕಟ್ಟೆಸ್ವಾಮಿ, ನಾಗರಾಜನಾಯ್ಕ, ಎಂ.ಎಲ್.ಗಂಗಾಧರಯ್ಯ, ದಲಿತ ಮುಖಂಡ ಗೋವಿಂದರಾಜು, ತಾ.ಬಂಜಾರ ಸಮಾಜದ ಸಂಘದ ಕಾರ್ಯದಶರ್ಿ ಶಶಿಧರನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.



ಡಿಸಂಬರ್ 23ರಂದು ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ, : 2014-15 ನೇ ಸಾಲಿನ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ಕಾರ್ಯಕ್ರಮವನ್ನು ಡಿಸಂಬರ್ 23ರಂದು ಬೆಳಗ್ಗೆ 11ಕ್ಕೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಲಾಗಿದೆ ಎಂದು ಕೃಷಿ ಅಧಿಕಾರಿ ಹೆಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಸಮಗ್ರ ಕೃಷಿ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಾಗೂ ಕೃಷಿ ನಿದರ್ೇಶಕರ ಕಛೇರಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು  ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದು ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲ್ಲೂಕಿನ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪೆಡದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜ ಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಪ್ರಶಂಸೆಗೆ ಅರ್ಹ : ಡಾ|| ಜಿ. ಪರಮೇಶ್ವರ್  

ಚಿಕ್ಕನಾಯಕನಹಳ್ಳಿ:  ಸಮಾಜ ಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಪ್ರಶಂಸೆಗೆ ಅರ್ಹರಾಗಿರುತ್ತೇವೆ ಇಲ್ಲದಿದ್ದರೆ ಏಕಮುಖಿ ಜೀವನ ಅನುಭವಿಸಬೇಕಾಗುತ್ತದೆ ಎಂದು ಹೃದ್ರೋಗ ತಜ್ಞ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಡಾ|| ಜಿ. ಪರಮೇಶ್ವರ್ ಹೇಳಿದರು.
ಪಟ್ಟಣದಲ್ಲಿ ತಾ|| ಒಕ್ಕಲಿಗ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಬದುಕಿನ ದಿನನಿತ್ಯದಾಟದಲ್ಲಿ ಕೇವಲ ತಮ್ಮ ಬದುಕಿಗೆ ಒತ್ತು ನೀಡುವ ಜೊತೆಗೆ ಸಮಾಜದಲ್ಲಿನ ನಿರ್ಗತಿಕರಿಗೆ ಸ್ವಲ್ಪ ಮಟ್ಟಿನ ಸೇವೆ ಸಲ್ಲಿಸಿ ಸಮಾಜದ ಏಳಿಗೆಗೆ ಒತ್ತು ನೀಡಬೇಕು ಆಗ ನಮ್ಮನ್ನು ಅನ್ಯ ಸಮಾಜದವರು ಕೂಡ ಗೌರವಿಸುತ್ತಾರೆ ನಮ್ಮನ್ನು ಪುರಸ್ಕಾರ ಭಾವದಿಂದ ನೋಡುತ್ತಾರೆ  ಎಂದರು.
ಕೃಷಿ ಬದುಕನ್ನೇ ಅವಲಂಬಿಸಿಕೊಂಡು ಬಂದಿದ್ದ ಒಕ್ಕಲಿಗ ಸಮಾಜ ಬೇರೆ ಬೇರೆ ಕ್ಷೇತ್ರದಲ್ಲೂ ದುಡಿಯುತ್ತಾ ಬರುತ್ತಿದೆ ಅದಕ್ಕೆ ಸಾಮಾಜಿಕ ಸೇವೆ ಕೃಷಿಕ್ಷೇತ್ರ ಶಿಕ್ಷಣ ಕ್ಷೇತ್ರದ ಈ ಮೂಲಕ ಗುರುತಿಸಿಕೊಂಡಿರುವ ನಮ್ಮ ಸಮಾಜದ ಬಂಧುಗಳನ್ನು ಸನ್ಮಾನಿಸುತ್ತಿರುವುದು ಖುಷಿ ತಂದಿದೆ. ತಾಲ್ಲೂಕಿನಲ್ಲಿ ನಮ್ಮ ಸಂಘ ಅಸ್ತಿತ್ವಕ್ಕೆ ಬಂದು 1 ವರ್ಷವಾಗಿದ್ದು ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಸದಸ್ಯತ್ವದ ನೊಂದಣಿ ಕಾರ್ಯ ಆಗಬೇಕಿದೆ ಮುಂದಿನ ದಿನದಲ್ಲಿ ಕೆಂಪೇಗೌಡ ಬಡಾವಣೆ ಸಮುದಾಯ ಭವನ ನಿಮರ್ಾಣಕಾರ್ಯಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.
ತಾ|| ಒಕ್ಕಲಿಗ ಸಂಘದ ಕಾರ್ಯದಶರ್ಿ ಬಿ.ಜಿ.ರಾಜಣ್ಣ ಮಾತನಾಡಿ,  ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆವುಳ್ಳ ಸಮಾಜವಾದರೂ ಸಂಘ ಅಸ್ಥಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ನಮ್ಮ ಸಮಾಜದ ಬಂಧುಗಳಾದ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಬಿ.ಪ್ರಕಾಶ್ , ಜಿಲ್ಲಾ ಕೃಷಿ ಪ್ರಶಸ್ತಿ ಪಡೆದ ಬಿ.ಎನ್.ಲೋಕೇಶ್ ತಾ|| ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಹೆಚ್.ಪ್ರಕಾಶ್ ಇವರುಗಳನ್ನು ಉತ್ತಮ ಸ್ಥಾನಕ್ಕೇರಿಸಲು ಸಹಕರಿಸಿದ ಎಲ್ಲರನ್ನೂ ನಾವು ಸ್ಮರಿಸಬೇಕು ಇವರನ್ನು ನಮ್ಮ ಸಂಘ ಸನ್ಮಾನಿಸುತ್ತಿರುವುದು ಕೂಡ ಇವರುಗಳ ಜವಬ್ದಾರಿಯನ್ನು ಹೆಚ್ಚಿಸುವ ಕರೆ ಗಂಟೆ ಎಂದು ಭಾವಿಸಿ ಇವರಿಂದ ಎಲ್ಲಾ ಸಮಾಜದ ಬಂದುಗಳಿಗೆ ಸೇವೆ ಲಭಿಸಲಿ ಎಂದರು.
ಈ ಸಮಾರಂಭದಲ್ಲಿ ಜಿ.ಶಾಂತ್ರಾಜು, ಪುರಸಭಾ ಸದಸ್ಯ ರಾಜಶೇಖರ್, ವಕೀಲ ಶ್ರೀನಿವಾಸಮೂತರ್ಿ, ಕೆ.ಜಿ.ಕೃಷ್ಣೇಗೌಡ ಮೊದಲಾದವರು ಉಪಸ್ಥಿತರಿದ್ದರು.


Thursday, December 11, 2014

ಆಟೋ ಚಾಲಕರು ತಮ್ಮ ವಾಹನದ ಹಿಂಭಾಗ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಸರು ನಮೂದಿಸಿ : ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್

                                
ಚಿಕ್ಕನಾಯಕನಹಳ್ಳಿ,ಡಿ.11 : ಆಟೋ ಚಾಲಕರು ತಮ್ಮ ವಾಹನದ ಹಿಂಭಾಗ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಹೆಸರು ನಮೂದಿಸಿದರೆ ಅವಸರದಲ್ಲಿ ತಮ್ಮ ವಸ್ತುಗಳನ್ನು ಬಿಟ್ಟು ಹೋಗಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ಹಿಂಪಡೆಯಲು ಸಹಾಯವಾಗುತ್ತದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಪೋಲಿಸ್ ಇಲಾಖೆ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಹನ ಚಾಲನೆ ಮಾಡುವವರು ಡಿ.ಎಲ್, ಇನ್ಸುರೆನ್ಸ್, ರಿಜಿಸ್ಟ್ರೇಷನ್ ಮಾಡಿಸುವುದು ಕಡ್ಡಾಯವಾಗಿದೆ ಇದರಿಂದ ವಾಹನ ಚಾಲಕರಿಗೆ ಹೆಚ್ಚಿನ ಅನುಕೂಲವಿದೆ ಎಂದರಲ್ಲದೆ, ವಾಹನ ಚಾಲನೆ ಮಾಡುವವರು ಡಿ.ಎಲ್ ಹೊಂದಿರದಿದ್ದರೆ ಆಕಸ್ಮಿಕವಾಗಿ ಅಪಘಾತವಾದಾಗ ವಾಹನ ಚಾಲನೆ ಮಾಡುತ್ತಿದ್ದವನ ಹಾಗೂ ವಾಹನದ ಮಾಲೀಕನ ಮೇಲೆ ಪ್ರಕರಣ ದಾಖಲಾಗುತ್ತದೆ ಹಾಗೂ ವಾಹನಕ್ಕೆ ಇನ್ಸುರೆನ್ಸ್ ಮತ್ತು ರಿಜಿಸ್ಟ್ರೇಷನ್ ಮಾಡಿಸಿದ್ದರೆ ಅಪಘಾತವಾದಾಗ ನೊಂದ ವ್ಯಕ್ತಿಯ ಚಿಕಿತ್ಸೆಗೆ ಇನ್ಸುರೆನ್ಸ್, ರಿಜಿಸ್ಟ್ರೇಷನ್ ಸಹಾಯವಾಗಲಿದೆ ಎಂದರು. 
ಇನ್ಸುರೆನ್ಸ್ ಮಾಡಿಸುವವರು ಪೂತರ್ಿ ಮಾಡಿಸಿದರೆ ವಾಹನವು ಜಖಂಗೊಂಡಾಗ, ಸ್ಪೋಟಗೊಂಡಾಗ  ಚಾಲಕರಿಗೆ ಇನ್ಸುರೆನ್ಸ್ ಪೂತರ್ಿ ಹಣ ದೊರಯಲಿದೆ ಅಲ್ಲದೆ ಎಲ್ಲಾ ರೀತಿಯಲ್ಲೂ  ಅನುಕೂಲವಾಗಲಿದೆ ಎಂದರಲ್ಲದೆ ಆಟೋ ಚಾಲಕರು ಶಾಲಾ ಮಕ್ಕಳನ್ನು ಆಟೋದಲ್ಲಿ ಶಾಲೆಗೆ ಕರೆದಯ್ಯುವಾಗ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಒಂದು ಬಾರಿಯಲ್ಲದಿದ್ದರೆ ಎರಡು ಬಾರಿ ಟ್ರಿಪ್ ಮಾಡಿರಿ ಆದರೆ ಮಕ್ಕಳಿಗೆ ತೊಂದರೆ ಮಾಡಬೇಡಿ ಎಂದರು.
ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಲು ಪೈಪೋಟಿ ಮಾಡದೆ ತಮ್ಮ ವಾಹನವನ್ನು ನಿಲುಗಡೆ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿ ಒಬ್ಬರ ನಂತರ ಒಬ್ಬರಂತೆ ಪ್ರಯಾಣಿಕರನ್ನು ಕರೆದಯ್ಯಲು ಸಲಹೆ ನೀಡಿದ ಅವರು ತಾಲ್ಲೂಕು ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ತಾಲ್ಲೂಕಿನ ರಸ್ತೆಯ ಮೂಲಕ ಯಾರು ಸಂಚರಿಸುತ್ತಾರೆ ಎಂಬುದು ನಮಗೆ ತಿಳಿಯುವುದಿಲ್ಲ ಸದಾ ಸಂಚರಿಸುತ್ತಿರುವ ವಾಹನ ಚಾಲಕರು ಶಂಕಿತ ವ್ಯಕ್ತಿಗಳ ಮಾಹಿತಿಯನ್ನು ಪೋಲಿಸರಿಗೆ ನೀಡುವಂತೆ ತಿಳಿಸಿದರು.
ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪ್ರತಿ ಇಲಾಖೆಗಳಿಗೂ ಸಾರ್ವಜನಿಕರ ಸಹಾಯ ಅಗತ್ಯವಾಗಿದ್ದು ಸಾರ್ವಜನಿಕರು ಅಧಿಕಾರಿಗಳ ಜೊತೆ ಕೈಜೋಡಿಸುವ ಮೂಲಕ ಅವರ ಕರ್ತವ್ಯಕ್ಕೆ ನೆರವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಬ್ ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ, ಪುರಸಭಾ ಸದಸ್ಯ ಸಿ.ರಾಜಶೇಖರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.


Wednesday, November 12, 2014



ಬೆಂಗಳೂರು ಮೆಟ್ರೋಗೆ ಕರಾಟೆಕಿಂಗ್ ಶಂಕರ್ನಾಗ್ ಹೆಸರಿಡಲು ಆಗ್ರಹ
ಚಿಕ್ಕನಾಯಕನಹಳ್ಳಿ,ನ.12: ಬೆಂಗಳೂರು ನಗರಕ್ಕೆ ಮೆಟ್ರೋ ಬರಬೇಕು ಎಂಬುದು ಶಂಕರ್ನಾಗ್ ಕನಸಾಗಿತು. ಈಗ ಆ ಕನಸು ನನಸಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು  ಬೆಂಗಳೂರು ಮೆಟ್ರೋಗೆ ಕರಾಟೆ ಕಿಂಗ್ ಶಂಕರ್ನಾಗ್ ಹೆಸರಿಡಬೇಕು ಎಂದು ಪಟ್ಟಣದ ಶಂಕರ್ನಾಗ್ ಅಭಿಮಾನಿ ಬಳಗದ ಮೊಹಮದ್ ಹುಸೇನ್ ಆಗ್ರಹಿಸಿದರು.
   ಪಟ್ಟಣದ ಶಂಕರ್ನಾಗ್ ಅಭಿಮಾನಿ ಬಳಗದ, ಜೈ ಮಾರುತಿ ಲಘು ವಾಹನಗಳ ಚಾಲಕ ಹಾಗೂ ಮಾಲೀಕರ ಸಂಘದ ಸಹಕಾರದೊಂದಿಗೆ ಕರಾಟೆ ಕಿಂಗ್ ಶಂಕರ್ನಾಗ್ರ 60ನೇ ಹುಟ್ಟು ಹಬ್ಬವನ್ನು ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಎದುರು ಸಂಭ್ರಮದಿಂದ ಆಚರಿಸಿದರು.    ಈ ಸಂದರ್ಭದಲ್ಲಿ ಮಾತನಾಡಿದ ಅವರು ನಂದಿಬೆಟ್ಟಕ್ಕೆ ರೋಪ್ ವೇ ಹಾಕಬೇಕು ಎಂಬುದೂ ಶಂಕರ್ನಾಗ್ ಕನಸಾಗಿತ್ತು ಅದನ್ನೂ ಮುಖ್ಯಮಂತ್ರಿಗಳು ಸಾಕಾರಗೊಳಿಸಬೇಕು ಎಂದರು.
   ಕೆಎಸ್ಆರ್ಟಿಸಿ ನಿಲ್ದಾಣದ ಒಳಗೆ ಬಸ್ಗಳು ಬಾರದೆ ನೆಹರು ಸರ್ಕಲ್ನಲ್ಲಿ ನಿಲ್ಲುತ್ತಿವೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಹಾಗೂ ಲಘು ವಾಹನಗಳು ರಸ್ತೆ ಬದಿಯಲ್ಲೇ ನಿಲ್ಲುತ್ತಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದೆ ಆದ್ದರಿಂದ ಶಾಸಕರು ನಿಲ್ದಾಣಕ್ಕೆ ಸ್ಥಳ ಕೊಡಿಸಿಕೊಡಬೇಕು ಮತ್ತು ಸಂಸದರ ನಿಧಿಯಲ್ಲಿ ನಿಲ್ದಾಣ ನಿಮರ್ಿಸಿ ಕೊಡಬೇಕು ಎಂದು ಮನವಿ ಮಾಡಿದರು.
  ಕಾರ್ಯಕ್ರಮದಲ್ಲಿ ಜೈ ಮಾರುತಿ ಲಘು ವಾಹನಗಳ ಚಾಲಕ ಹಾಗೂ ಮಾಲೀಕರ ಸಂಘ ಹಾಗೂ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ,ಉಪಾಧ್ಯಕ್ಷ ಮೊಹಮದ್ ಗೌಸ್,ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್,ನಿವೃತ್ತ ಶಿಕ್ಷಕ ಹನುಮಂತರಾಯಪ್ಪ,ಪುರಸಭೆ ಸದಸ್ಯ ಖಲಂದರ್ ಸೇರಿದಂತೆ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು. ಸಾರ್ವಜನಿಕರಿಗೆ ಕೇಕ್ ಹಾಗೂ ಲಘು ಉಪಾಹಾರ ನೀಡಲಾಯಿತು. 
  ನಮಗೆ ಶಂಕರ್ ನಾಗ್ ಪ್ರೇರಣೆ: ಚಾಲಕ ಮೊಹಮದ್ ಹುಸೇನ್, ಚಾಲಕ ಹಾಗೂ ಮಾಲೀಕರನ್ನು ಸಂಘಟಿಸಿ ಶಂಕರ್ನಾಗ್ ಅಭಿಮಾನಿ ಬಳಗ ಕಟ್ಟಿದ್ದಾರೆ. ಬಳಗದ ಗೆಳೆಯರು ಕಳೆದ 3ವರ್ಷಗಳಿಂದ ಶಂಕರ್ನಾಗ್ ಹುಟ್ಟು ಹಬ್ಬವನ್ನು ತಮ್ಮ ಮನೆಯ ಹಬ್ಬ ಎನ್ನುವಂತೆ ಕಾಳಜಿ ವಹಿಸಿ ಆಚರಿಸುತ್ತಾಬರುತ್ತಿದ್ದಾರೆ. ಅಲ್ಲದೆ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಹಾಗೂ ಹದಗೆಟ್ಟ ರಸ್ತೆಗಳ ಬಗ್ಗೆ ಇಲಾಖೆಗಳಿಗೆ ಎಚ್ಚರಿಸುತ್ತ ಬರುತ್ತಿದ್ದಾರೆ. ಈ ಎಲ್ಲಾ ಉಸಾಬರಿ ನಿಮಗೆ ಯಾಕೆ? ಎಂದು ಕೇಳಿದರೆ 'ಆಟೋರಾಜ ಶಂಕರ್ನಾಗ್ ಮೇಲಿನ ಅಭಿಮಾನದಿಂದ, ಅವರು ಚಾಲಕರಿಗೆ ಘನತೆ ತಂದುಕೊಟ್ಟವರು. ಅವರ ಅಭಿಮಾನಿಗಳಾಗಿ ಒಳ್ಳೆಯದು ಮಾಡದಿದ್ದರೆ ಹೇಗೆ? ಜನರ ಒಳಿತಿಗಾಗಿ  ಕೈಲಾದ ಕೆಲಸ ಮಾಡುತ್ತಿದ್ದೇವೆ' ಎನ್ನುತ್ತಾರೆ.

ಮಕ್ಕಳ ದಿನಾಚಾರಣೆ ವಿಶೇಷವಾಗಿ ಆಚರಿಸಲು ಸಿದ್ದತೆ
ಚಿಕ್ಕನಾಯಕನಹಳ್ಳಿ,ನ.12 : ನವಂಬರ್ 14ರಂದು ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಜವಹರ್ಲಾಲ್ ನೆಹರೂರವರ ಹುಟ್ಟುಹಬ್ಬದಂದು ಮಕ್ಕಳ ದಿನಾಚಾರಣೆಯನ್ನು ತಾಲ್ಲೂಕಿನಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು ಅಂದು ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಮಕ್ಕಳ ಜಾನಪದ ಹಾಗೂ ಕಲಾಮೇಳವನ್ನು ಸಂಘಟಿಸಲಾಗಿದೆ, ಶಾಲಾ ಮಕ್ಕಳೇ  ಸಮಾರಂಭದ ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಿ.ಬಿ.ಸುರೇಶ್ಬಾಬು ಅಭಿಮಾನಿಗಳ ಬಳಗದ ಸಿ.ಎಸ್.ನಟರಾಜ್ ತಿಳಿಸಿದ್ದಾರೆ.
ಮಕ್ಕಳ ದಿನಾಚಾರಣೆ ಅಂಗವಾಗಿ ನವಂಬರ್ 14ರಂದು ಬೆಳಗ್ಗೆ 11ಗಂಟೆಗೆ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ಪ್ರತಿಭಾನ್ವಿತ ಮಕ್ಕಳಿಂದ ಮಕ್ಕಳ ಜಾನಪದ ಹಾಗೂ ಕಲಾಮೇಳ ನಡೆಯಲಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ಹಾಗೂ ಶಿಕ್ಷಣ ಇಲಾಖೆ ಮತ್ತು ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ ಹಾಗೂ ತಾಲ್ಲೂಕು ಶಿಕ್ಷಕರ ಸಂಘದ  ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚಾರಣೆ ಕಾರ್ಯಕ್ರಮ ನಡೆಯಲಿದೆ. 
ಕಾರ್ಯಕ್ರಮದ ಉದ್ಘಾಟನೆಯನ್ನು ಕಿರುತೆರೆ ಕಲಾವಿದೆ ಪುಟ್ಟಗೌರಿ ಖ್ಯಾತಿಯ ಕುಮಾರಿ ಸಾನಿಯಾ ಅಯ್ಯರ್ ನೆರವೇರಿಸಲಿದ್ದು,  ಜಾನಪದ ಕಲಾಮೇಳದ ಉದ್ಘಾಟನೆಯನ್ನು ಪುಟಾಣಿ ಪಂಟ್ರು ಖ್ಯಾತಿಯ ಕಿರಿಯ ಕಲಾವಿದ ಮಧುಸೂಧನ್ ಉದ್ಘಾಟಿಸುವರು. ಪಟ್ಟಣದ ಪ್ರೌಢಶಾಲಾ ಹತ್ತನೇ ತರಗತಿ ವಿದ್ಯಾಥರ್ಿ ಹೆಚ್.ಕೆ.ದೀಪು ರಾಜಕುಮಾರ್ ಅಧ್ಯಕ್ಷತೆ ವಹಿಸುವರು. 
ಮುಖ್ಯ ಅತಿಥಿಗಳಾಗಿ ವಿದ್ಯಾಥರ್ಿಗಳಾದ ಶರತ್ ಹಳೇಮನೆ, ಡಿ.ಎಸ್.ಅಂಬಿಕಾ, ಗಗನ್, ಎಲ್.ಎನ್.ಸಂಜಯ್, ಚೈತ್ರ, ಸುಷ್ಮಾ ಚೌಡಿಕೆ ಸುದರ್ಶನ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 3ಕ್ಕೆ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮವನ್ನು ಹುಲಿಕಲ್ ನಟರಾಜ್ ಹಾಗೂ ತೇಜಸ್ವಿ ನಟರಾಜ್ರವರಿಂದ ಕಾರ್ಯಕ್ರಮ ನಡೆಯಲಿದೆ.

ಮಲ್ಲಿಗೆರೆ ಗ್ರಾ.ಪಂ.ನ ಸಮಸ್ಯೆ ಬಗೆಹರಿಸಲು ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ನ.12: ತಾಲೂಕಿನ ಮಲ್ಲೀಗೆರೆ ಗ್ರಾ.ಪಂ ನಲ್ಲಿ ಕಾರ್ಯದಶರ್ಿ ಕಳೆದ ಒಂದು ತಿಂಗಳಿಂದ ಕೆಲಸಕ್ಕೆ ಬಂದಿಲ್ಲ ಮತ್ತು ಇಲ್ಲಿ ಪಿಡಿಒ ಹುದ್ದೆ ಖಾಲಿ ಇದೆ ಒಂದು ತಿಂಗಳಿಂದ ಅಧಿಕಾರಿಗಳಿಲ್ಲದೆ ಯಾವುದೆ ಗ್ರಾಪಂ ಕಾರ್ಯಗಳು ಆಗದೆ, ಕುಡಿಯುವ ನೀರು, ವಾಸಸ್ಥಳ ಧೃಢೀಕರಣ ಪತ್ರ್ರ, ಕಸ ನಿಮರ್ೂಲನೆಯಂತಹ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲದೆ  ಜನರು ರೊಸಿ ಹೊಗಿದ್ದಾರೆ ಎಂದು ಗ್ರಾ.ಪಂ.ಸದಸ್ಯರೇ ಪ್ರತಿಭಟಿಸಿದ್ದಾರೆ.
  ಗ್ರಾ.ಪಂ ನಲ್ಲಿ ಕಾರ್ಯಗಳು ಕುಂಟಿತವಾಗಿವೆ, ಕಾರ್ಯ ನಿರ್ವಹಿಸುವಲ್ಲಿ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ  ವಿಫಲವಾಗಿದೆ,  ಈ ಕುರಿತು ಗ್ರಾಪಂ ಅಧ್ಯಕ್ಷೆಯಾದ ಗಿರಿಜಮ್ಮನವರಿಗೆ ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು ಹಲವಾರು ಭಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ  ಎಂದಿದ್ದಾರೆ.
ಆದ್ದರಿಂದ ಈ ಕೊಡಲೆ ಸಂಬಂದಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಅಧಿಕಾರಿಯನ್ನು ನಿಯೋಜಿಸಿ ಕ್ರೀಯಾ ಯೋಜನೆಯನ್ನು ಚಾಲ್ತಿಗೆ ತರುವಂತೆ ಆಗ್ರಹಿಸಿ ಗ್ರಾಪಂ ಮುಂದೆ ಗ್ರಾಪಂ ಸದಸ್ಯರಾದ ನಾಗಭೂಷಣ್, ಮತ್ತು ವಿಶ್ವನಾಥ್, ಹಾಗೂ ಗ್ರಾಮಸ್ಥರು ಪ್ರತಿಭಟಿಸಿ ಅಧ್ಯಕ್ಷರಿಗೆ ಮನವಿಸಲ್ಲಿದರು. ಇನ್ನು ಮುಂದೆಯು ಸಮಸ್ಯೆ ಸರಿಯಾಗದಿದ್ದರೆ ಗ್ರಾಪಂಗೆ ಬೀಗ ಜಡಿದು ಉಗ್ರ ವಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.
ಹಂದನಕೆರೆ ಹೋಬಳಿಯ ಮಲ್ಲಿಗೆರ ಗ್ರಾಪಂ ನಲ್ಲಿ ಸುಮಾರು 1 ತಿಂಗಳಿದ ಅಧಿಕಾರಿಗಳೆ ಇಲ್ಲದೆ ಯಾವುದೆ ಕೆಲಸಗಳು ಆಗುತ್ತಿಲ್ಲ, ಕೇಳಿದರೆ ಕಾರ್ಯದಶರ್ಿ ಗಂಗಾಧರಯ್ಯ ಬಂದಿಲ್ಲ ಯಾವುದೆ ಕಾರಣ ಕೊಡದೆ ಕೀಗಳನ್ನು ಕೊಡದೆ 1 ತಿಂಗಳಿದ ರಜೆ ಹಾಕಿದ್ದಾರೆ ಎಂದು ಬೀಲ್ ಕಲೆಕ್ಟರ್ ಬಂದವರಿಗೆ ಉತ್ತರಿಸಿ ಕಳುಹಿಸುತ್ತಿದ್ದಾರೆ.
 ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 10 ಗ್ರಾಮಗಳು ಇದ್ದು ಒಟ್ಟು 7500-8000 ಜನಸಂಖ್ಯೆಯನ್ನು ಹೋದಿದೆ. ಒಟ್ಟು 17 ಸದಸ್ಯರಿರವುವ ಗ್ರಾಪಂ ಕುಡಿಯುವ ನೀರಿನ ಸಮಸ್ಯೆ, ಕಸದ ಸಮಸ್ಯೆ, ಗ್ರಾಮ ನೈರ್ಮಲ್ಯದ ಸಮಸ್ಯೆ ಎದುರಾಗಿದೆ ಹಾಗೆಯೇ ಹಲವರಿಗೆ ಶೌಚಾಲಯದ ಬೀಲ್ ಹಾಗಿಲ್ಲ ಹಲವಾರು ಕಾಮಗರಿಗಳು ಅರ್ಧಕ್ಕೆ ನಿಂತಿವೆ ಸರ್ವಜನಿಕರು ಸಣ್ಣ ಕೆಲಸಗಳಿಗೂ ಕಾಯುವಂತಹ ಸ್ಥಿತಿ ಉದ್ಭಯಿಸಿದೆ. 
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮನವರ ಹೇಳಿಕೆ: ಮಲ್ಲಿಗೆರೆ ಗ್ರಾಪಂ ನಲ್ಲಿ ಕಾರ್ಯದಶರ್ಿ 1 ತಿಂಗಳಿದ ರಜೆಯಲ್ಲಿದ್ದು ಯಾರಿಗೂ ಚಾಜರ್ು ಹಾಕಾದೆ ಇರುವುದರಿಂದ ಈ ರಿತಿಯ ಸಮಸ್ಯಗಳು ಉಧ್ಬವಿಸಿವೆ ನಾನು ಈ ಕುರಿತು ತಾ.ಪಂ.ಇ.ಒ ಅವರಿಗೆ ಮನವಿಯನ್ನು ಮಾಡಿದ್ದೆನೆ ಆದರೆ ಅವರು ಯಾರನ್ನು ನಿಯೋಜಿಸದೆ ಇರುವುದು ಸಮಸ್ಯೆಯಾಗಿದೆ. ಅವರು ಯಾವ ಅಧಿಕಾರಿಯನ್ನು ನಿಯೋಜಿಸದೆ ಹೋದರೆ ನಾನು ಕೊಡ ಪ್ರತಿಭಟನೆಯ ಹಾದಿಯನ್ನೆ ಹಿಡಿದು ಜನರಿಗೆ ನ್ಯಾಯವನ್ನು ಒದಗಿಸ ಬೇಕಾಗುತ್ತದೆ ಎಂದರು.






  



Tuesday, November 11, 2014

ಬಸ್ಪ್ರಯಾಣ ದರ ಕಡಿಮೆ ಮಾಡಲು ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ನ.11 :-ಕೇಂದ್ರ ಸಕರ್ಾರ ಪೆಟ್ರೋಲ್ ಹಾಗೂ ಡಿಸೆಲ್ ದರವನ್ನು ಕಡಿಮೆ ಮಾಡಿದರೂ ರಾಜ್ಯ ಸಕರ್ಾರ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಿಲ್ಲ ಅದ್ದರಿಂದ ಕೂಡಲೇ ಪ್ರಯಾಣದರ ಕಡಿಮೆ ಮಾಡುವಂತೆ ಒತ್ತಾಯಿಸಿ ರಾಜ್ಯ ಸಕರ್ಾರವನ್ನು ಒತ್ತಾಯಿಸಿ ತಾಲ್ಲೂಕು ಬಿಜೆಪಿ ಘಟಕ ರಸ್ತೆ ತಡೆದು ಪ್ರತಿಭಟನೆ ನಡೆಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್ ಮಾತನಾಡಿ,  ಕೇಂದ್ರದ ಬಿಜೆಪಿ ಸಕರ್ಾರ ಪ್ರಧಾನಿ ಮೋದಿಯವರ ಸಕರ್ಾರ ಸತತವಾಗಿ ಪೆಟ್ರೋಲ್ದರಲ್ಲಿ ಲೀಟರ್ಗೆ 9ರೂಪಾಯಿ ಹಾಗೂ ಡಿಸೇಲ್ ದರದಲ್ಲಿ 7ರೂಪಾಯಿಗಳನ್ನು ಅಧಿಕಾರಕ್ಕೆ ಬಂದ ಆರು ತಿಂಗಳಿಂದಲೂ ಕಡಿಮೆ ಮಾಡುತ್ತಾ ಬಂದಿದೆ, ಆದರೆ ಇಲ್ಲಸಲ್ಲದ ನೆಪ ಹೇಳುತ್ತಾ ರಾಜ್ಯ ಸಕರ್ಾರ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರವನ್ನು ಕಡಿಮೆಮಾಡುವಲ್ಲಿ ಯಾವುದೇ ದೋರಣೆ ತಾಳಿಲ್ಲ ಇದು ಖಂಡನೀಯವಾಗಿದ್ದು ಕೇವಲ ಒಂದು ರೂಪಾಯಿಗೆ ಅಕ್ಕಿ ನೀಡಿದ್ದನ್ನೇ ತನ್ನ ಸಾಧನೆ ಎಂದು ಬಿಂಬಿಸುತ್ತಿರುವ ರಾಜ್ಯ ಸಕರ್ಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಇಂದು ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸುವುದರಲ್ಲಿ ಚಿಂತೆಮೂಡುತ್ತಿದೆ ಈ ನಿಟ್ಟಿನಲ್ಲಿ ನೈತಿಕ ಹೊಣೆಹೊತ್ತ ಕಾನೂನು ಸಚಿವರು ರಾಜಿನಾಮೆ ನೀಡಬೇಕು ಎಂದರು.
ಮುಂದಿನ ಒಂದು ತಿಂಗಳಳೊಗೆ ಬಸ್ಪ್ರಯಾಣದರ ಕಡಿಮೆ ಮಾಡದಿದ್ದರೆ ಇನ್ನೂ ಉಗ್ರವಾದ ಹೋರಾಟ ಮಾಡಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮದ್ಯಮವರ್ಗದ ಹಾಗೂ ಬಡವರು ಓಡಾಡುವಂತಹ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡುವಲ್ಲಿ ಸಕರ್ಾರ ನಷ್ಟವನ್ನು ತೋರಿಸುತ್ತಿದ್ದು ಇದು ಅವರ ದುರಾಡಳಿತವನ್ನು ತೊರಿಸುತ್ತಿದೆ ಎಂದರಲ್ಲದೆ,  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದೇ ಇರುವುದು ವಿಷಾದನೀಯವಾಗಿದ್ದು ಕೂಡಲೇ ಇದಕ್ಕೆ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ.ನ ಉಪಾದ್ಯಕ್ಷ ವಸಂತ್ಕುಮಾರ್, ಸದಸ್ಯ ಸೀತರಾಮಯ್ಯ, ಬಿಜೆಪಿ ಮುಖಂಡ ಚೇತನ್ಪ್ರಸಾದ್ ಮಾತನಾಡಿದರು.ಪ್ರತಿಭಟನೆಯಲ್ಲಿ ತಾ.ಪಂ ಸದಸ್ಯರಾದ ಕೆಂಕೆರೆ ನವೀನ್, ತಾ||ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮಿಲ್ಟ್ರೀಶಿವಣ್ಣ, ಘಟಕದ ಪ್ರ.ಕಾರ್ಯದಶರ್ಿ ಹನುಮಜಯ, ಮುಖಂಡರಾದ ನವಿಲೆ ಮಧು, ನರಸಿಂಹಮೂತರ್ಿ, ಗಂಗಾಧರಯ್ಯ, ರಾಮಲಿಂಗಯ್ಯ, ಮಹಿಳಾ ಮೋಚರ್ಾದ ಮಾಲ ಮುಂತಾದವರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ದೊಡ್ಡಮಾರಯ್ಯ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವಿಕರಿಸಿದರು.

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ಬಗ್ಗೆ ಸಭೆ
ಚಿಕ್ಕನಾಯಕನಹಳ್ಳಿ,ನ.11 : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಭಾವೈಕ್ಯ ಧರ್ಮ ಸಮಾರಂಭವನ್ನು ಇದೇ 13 ಮತ್ತು 14ರಂದು ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಏರ್ಪಡಿಸಲಾಗಿದೆ ಎಂದು ಮಹೋತ್ಸವದ ಸ್ವಾಗತ ಕಮಿಟಿ ಅಧ್ಯಕ್ಷ ಹಾಗೂ ಪುರೋಹಿತರಾದ ಶಿವಶಂಕರಶಾಸ್ತ್ರಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹೋತ್ಸವಕ್ಕೆ ಸುಮಾರು 10 ಸಾವಿರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಬರುವ ಭಕ್ತರಿಗೆಲ್ಲರಿಗೂ ದಾಸೋಹದ ವ್ಯವಸ್ಥೆಯಿದೆ ಎಂದರು.
 13ರಂದು ಸಂಜೆ 4.30ಕ್ಕೆ ಗ್ರಾಮದೇವತೆ ಉಡುಸಲಮ್ಮ ದೇವಿಯ ಆಗಮನ ಹಾಗೂ ಗಂಗಾಪೂಜೆ ನೆರವೇರಲಿದೆ. ಅಂದೇ ಪ್ರಾತಃಕಾಲಕ್ಕೆ ಗ್ರಾಮದ ಸರ್ವದೇವತೆಗಳಿಗೆ ರುದ್ರಾಭಿಷೇಕ ವಿಶೇಷ ಅಲಂಕಾರ ಅಷ್ಠೋತ್ತರ ಮಹಾಮಂಗಳಾರತಿ ನಡೆಯಲಿದೆ, ಬೆಳಗ್ಗೆ 9.30ಕ್ಕೆ ರಂಭಾಪುರಿ ಮಹಾಸನ್ನಿಧಿಯವರ ಅಡ್ಡಪಲ್ಲಕ್ಕಿ ಮಹೋತ್ಸವ, ಪುರಪ್ರವೇಶೋತ್ಸವವು ಗ್ರಾಮದ ಕೆರೆಕೋಡಿಯಿಂದ ಪ್ರಾರಂಭಗೊಂಡು ಪೂರ್ಣಕುಂಭದ ಸ್ವಾಗತದೊಂದಿಗೆ ವೇದಘೋಷ, ಮಂಗಳವಾದ್ಯ, ಸಾಂಸ್ಕೃತಿಕ ಕಲಾತಂಡಗಳ ಸಮೇತ ಗ್ರಾಮದ ರಾಜಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆಯು ಸಾಗಿ ಮಾನವ ಧರ್ಮ ಮಂಟಪಕ್ಕೆ ಆಗಮಿಸುವದು.
ಮಧ್ಯಾಹ್ನ 12ಕ್ಕೆ ಭಾವೈಕ್ಯಧರ್ಮ ಸಮಾರಂಭ ನಡೆಯಲಿದ್ದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸಾನಿಧ್ಯ ವಹಿಸಲಿದ್ದಾರೆ. ಗಂಡಸಿ ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿರುವರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು.
ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿಜಿ, ನೊಣವಿನಕೆರೆ ಕಾಡಸಿದ್ದೇಶ್ವರಸ್ವಾಮಿ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮಿಜಿ, ತಮ್ಮಡಿಹಳ್ಳಿ ವಿರಕ್ತಮಠದ ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪದೇಶಾಮೃತ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮಿ, ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮಿ, ಅಂಬಲದೇವರಹಳ್ಳಿ ಮಠದ ಉಜ್ಜನೀಶ್ವರಶಿವಾಚಾರ್ಯಸ್ವಾಮಿ, ಚನ್ನಬಸವೇಶ್ವರ ಗದ್ದುಗೆ ಮಠದ ಗೋಸಲ ಚನ್ನಬಸವೇಶ್ವರಶಿವಾಚಾರ್ಯಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಜಿಲ್ಲಾಧಿಕಾರಿ ಸತ್ಯಮೂತರ್ಿ, ನಿವೃತ್ತ ಪೋಲಿಸ್ ಆಯುಕ್ತ ಜ್ಯೋತಿಪ್ರಕಾಶ್ಮಿಜರ್ಿ ಸೇರಿದಂತೆ ಹರಗುರು ಚರಮೂತರ್ಿಗಳು, ಸಾಹಿತಿಗಳು, ಕಲಾವಿದರು, ಗಣ್ಯವಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರವಿಕುಮಾರಶಾಸ್ತ್ರಿ, ಕುಮಾರಸ್ವಾಮಿ, ಹೊನ್ನೆಬಾಗಿ ಕಾತರ್ಿಕ್, ಮೋಹನ್ಕುಮಾರ್ ಉಪಸ್ಥಿತರಿದ್ದರು.

 ಸ್ತ್ರೀಶಕ್ತಿ ಮಹಿಳಾ ಸಮಾವೇಶಕ್ಕೆ ಪಾಲ್ಗೊಳ್ಳಲು ಸಿದ್ದರಿರುವ ಮಹಿಳೆಯರು 
ಚಿಕ್ಕನಾಯಕನಹಳ್ಳಿ,ನ.11:-ಸುಮಾರು 250 ಸಂಘಗಳಿಂದ 550ಜನ ಸ್ತ್ರೀಯರು ನಮ್ಮ ತಾಲ್ಲೂಕಿನಿಂದ ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅನೀಸ್ಖೈಸರ್ ತಿಳಿಸಿದರು.
 ಚಿತ್ರದುರ್ಗದ ಸಕರ್ಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಸ್ತ್ರೀಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋರಟಿದ್ದ ತಾಲ್ಲೂಕಿನ ಸ್ತ್ರೀಶಕ್ತಿ ಸಂಘಗಳ ಸದಸ್ಯರ ಬಸ್ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿ, ಸಮಾವೇಶದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸುತ್ತು ನಿಧಿಯನ್ನು ವಿತರಿಸಲಿದ್ದು ನಮ್ಮ ತಾಲ್ಲೂಕಿಗೆ 22ಲಕ್ಷದ 50ಸಾವಿರ ರೂಪಾಯಿಗಳಷ್ಟು ಸುತ್ತು ನಿಧಿ ಬರಲಿದ್ದು ತಲ ಒಂದು ಸಂಘಕ್ಕೆ 5ಸಾವಿರದಂತೆ ಸ್ತ್ರೀ ಶಕ್ತಿ ಸಂಘಗಳಿಗೆ ವಿತರಣೆ ಮಾಡುತ್ತಿದ್ದು ಅದರ ಉದ್ದೇಶದಿಂದ ಚಿತ್ರ ದುರ್ಗದಲ್ಲಿ ಸ್ತ್ರೀಶಕ್ತಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.
 ಈ ಸಮಾವೇಶದಲ್ಲಿ ನಮ್ಮ ತಾಲ್ಲೂಕಿನಿಂದ 250ಸಂಘಗಳಿಂದ ಸುಮಾರು 550ಜನ ಸ್ತ್ರೀಯರು ಪಾಲ್ಗೋಳ್ಳುತ್ತಿದ್ದಾರೆ ಮೊದಲ ಹಂತದಲ್ಲಿ ಸಕರ್ಾರ ಸಮಾವೇಶದಲ್ಲಿ ಸುತ್ತುನಿದಿ ವಿತರಿಸುತ್ತಿದ್ದು ನಂತರದಲ್ಲಿ  ಎಲ್ಲಾ ಸಂಘಗಳಿಗೂ ಇದನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸಿಡಿಪಿಒ ಪರಮೇಶ್ವರಪ್ಪ ಹಾಗೂ ತಾಲ್ಲೂಕಿನ ಎಲ್ಲಾ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಇದ್ದರು.



 ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಕನಕ ಜಯಂತ್ಯೋತ್ಸವದ ಮೆರವಣಿಗೆಯಲ್ಲಿ ಯುವಕರೊಂದಿಗೆ  ನೃತ್ಯಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಹೆಜ್ಜೆ ಹಾಕಿದರು.  
 

Saturday, November 8, 2014


ದಾಸ ಸಾಹಿತ್ಯದಲ್ಲಿ 'ಕನಕ'ರದ್ದು ತಳ ಸಮುದಾಯಗಳ ಒಂಟಿಧ್ವನಿಯಾದರೂ ಗಟ್ಟಿ ಧ್ವನಿ: ಸಂಶೋಧಕ ಗಂಗಾಧರ ಕೊಡ್ಲಿಯವರ
ಚಿಕ್ಕನಾಯಕನಹಳ್ಳಿನ. : ಕನಕದಾಸರು ತಳಸಮುದಾಯದ ಒಂಟಿ ಧ್ವನಿಯಾಗಿ ಹೋರಾಟ ಮಾಡಿದರು, ಆಗಿನ ಕಾಲದಲ್ಲಿ ಮೇಲ್ವರ್ಗದವರು ನೀಡಿದ ಕಿರುಕುಳಗಳಿಗೆ ತಮ್ಮ ಕೀರ್ತನೆ, ಮುಂಡಗಿ, ಒಡಪುಗಳ ಮೂಲಕ ಉತ್ತರ ನೀಡುತ್ತಾ ಅವರ ವಿದ್ಯತ್ತಿಗೆ ಸೆಡ್ಡು ಹೊಡೆದರು, ಅವರು ವಿಶ್ವ ಮಾನವಾರಗಬೇಕೆ ಹೊರತು, ಜಾತಿಗೆ ಸೀಮಿತವಾಗಬಾರದು ಎಂದು ಸಂಶೋಧಕ ಗಂಗಾಧರ ಕೊಡ್ಲಿಯವರು ಅಭಿಪ್ರಾಯಪಟ್ಟರು.  
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ತಾಲ್ಲೂಕು ಆಡಳಿತ, ಕನಕ ಯುವಕ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನಕ ದಾಸರು ಕನರ್ಾಟಕದಲ್ಲಷ್ಟೇ ಅಲ್ಲದೆ ಆಂಧ್ರ, ತಮಿಳುನಾಡು, ರಾಜಾಸ್ಥಾನಗಳಲ್ಲೂ ಸಂಚರಿಸಿ ತಮ್ಮ ಸಾಮಾಜಿಕ ಚಿಂತೆನಗಳನ್ನು ಸಾರಿದ್ದಾರೆ ಎಂದರು. ತಮಿಳುನಾಡಿನಲ್ಲಿ ಕನಕರ 175 ಕೀರ್ತನೆಗಳು ದೊರೆತಿದೆ ಎಂದರಲ್ಲದೆ, ಪದ ಪುಂಜಗಳಿಂದ ಕಾವ್ಯವನ್ನಾಗಿಸದೆ, ಸಮಾಜ ಮುಖಿಯಾದ ಜನಪದರ ಅನುಭವಗಳನ್ನು ಕಟ್ಟಿಕೊಡುವ ಕಾವ್ಯಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಸಮಾಜಿಕ ಚಿಂತನೆಗೆ ಆಧ್ಯಾತ್ಮಿಕ ನೆಲೆಯನ್ನು ತಮ್ಮ ಕೀರ್ತನೆಗಳ ಮೂಲಕ ಕೊಟ್ಟ ಕೀತರ್ಿ ಕನಕದಾಸರಿಗೆ ಸಲ್ಲುತ್ತದೆ ಎಂದರು. 
ಕನಕದಾಸರು ರಾಮಧಾನ್ಯ ಚರಿತೆ, ನಳಚರಿತ್ರೆ, ಹರಿದಾಸ ಚರಿತೆ ರಚಿಸಿ ಪ್ರಸಿದ್ದಿ ಪಡೆದಿದ್ದಾರೆ. ಕನಕದಾಸರು ಸಂತನಾಗಿ ಕವಿಯೋಗಿ ಸಮಾಜಮುಖಿ ಚಿಂತನೆಗಳನ್ನು ಇಟ್ಟುಕೊಂಡ ಅವರು,  ಹುಟ್ಟು 1495-1593ರ ಕಾಲದಲ್ಲಿದ್ದವರು ಎಂದು ಇತಿಹಾಸದ ದಾಖಲೆಗಳಲ್ಲಿವೆ ವ್ಯಾಸರಾಯರ ಮಠದಲ್ಲಿ ದಾಸದೀಕ್ಷೆ ಪಡೆದರು  ಉಡುಪಿಯಲ್ಲಿದ್ದ ವ್ಯಾಸಕೂಟ ಹಾಗೂ ದಾಸಕೂಟವೆಂಬ ಪಂಗಡದಲ್ಲಿ ದಾಸಕೂಟವನ್ನು ಇವರು ಸೇರಿಕೊಂಡರು  ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತಿ ವಿನಾಶಕ್ಕೆ ಯುವಕರು ಮುಂದಾಗಬೇಕು, ಅಂತಜರ್ಾತಿ ವಿವಾಹಗಳಿದ ಇದು ಸಾಧ್ಯ. ಎಂದರಲ್ಲದೆ, ಸಾರ್ವಜನಿಕ ಜೀವನದಲ್ಲಿರುವವರು ಮೇಲ್ಪಂಕ್ತಿ ಹಾಕಬೇಕು, ನಮ್ಮ ಮನೆಯಲ್ಲಿ ನನಗೆ ಇಂದಿಗೂ ಊಟ ಕೊಡುವವನು ಪರಿಶಿಷ್ಟ ಜಾತಿಗೆ ಸೇರಿದವರು, ಅವನಂತೆ ಇಲ್ಲಿನ ಹೆಂಗಸರಿಗೂ ರೊಟ್ಟಿ ಮಾಡಲು ಬರುವುದಿಲ್ಲ, ನನ್ನ ಆಪ್ತ ಸಹಾಯಕರೆಲ್ಲಾ ತಳ ಸಮುದಾಯಕ್ಕೆ ಸೇರಿದವರೆ ಎಂದು ತಮ್ಮದೇ ಬದುಕನ್ನು ಉದಾಹರಣೆಯಾಗಿ ನೀಡಿದ ಶಾಸಕರು, ಮುಂದಿನ ತಲೆ ಮಾರಿಗೆ ಜಾತಿ ವ್ಯವಸ್ಥೆಯ ತೀವ್ರತೆ ಕಡಿಮೆಯಾಗುತ್ತದೆ ಎಂದು ಭವಿಷ್ಯ ನುಡಿದರು.
ಜಾತಿ ಹಾಗೂ ಹಣದಿಂದ ಯಾರನ್ನೂ ಆಳಲು ಸಾಧ್ಯವಿಲ್ಲ ದಾಸಶ್ರೇಷ್ಠ ಕನಕದಾಸರ ನಡೆನುಡಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದರ ಜೊತೆಯಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ, ಕನಕದಾಸರನ್ನು ಜಾತಿಗೆ ಸೀಮಿತ ಮಾಡದೇ ಎಲ್ಲರಿಗೂ ಒಂದೇ ಎಂಬ ಭಾವನೆ ನಮ್ಮಲ್ಲಿ ಬರಬೇಕಾಗಿದೆ, ಸಕರ್ಾರ ಎಲ್ಲಾ ಜಾತಿಗಳನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ತಳಸಮುದಾಯದಲ್ಲಿ ಹುಟ್ಟಿದ ಕೀರ್ತನಕಾರ ಸಂತ ಕನಕದಾಸರು ಜಾತೀಯ ಬೇರುಗಳನ್ನು ಕಿತ್ತೊಗೆಯಲು ಶ್ರಮಿಸಿದರು ಎಂದರು.
ಪುರಸಭೆಯಿಂದ ಹೋರಾಟ ಕನಕದಾಸರ ಮೆರವಣಿಗೆ ಪಟ್ಟಣದ ನೆಹರು ವೃತ್ತ ಬಿ.ಹೆಚ್.ರಸ್ತೆ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ  ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳಾದ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಚಿಟ್ಟಿಮೇಳ, ಪಾಳೇಗಾರರ ವೇಷ, ಜಾನಪದ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಭಕ್ತಕನಕದಸರ ವೇಷ ಜನರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಕಾರ್ಯಕ್ರಮ ಉದ್ಘಾಟಿಸಿರು. ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ತಹಶೀಲ್ದಾರ್ ಕಾಮಾಕ್ಷಮ್ಮ, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಲೋಹಿತಬಾಯಿ, ಎನ್.ಜಿ.ಮಂಜುಳಗವಿರಂಗಯ್ಯ,, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿಶಿವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಬಿ.ಇ.ಓ ಸಾ.ಚಿ.ನಾಗೇಶ್, ಜಿ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪಂ.ಸದಸ್ಯರಾದ ಹೇಮಾವತಿ, ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಪುರಸಭಾ ಸದಸ್ಯರಾದ ರೇಣುಕಾಗುರುಮೂತರ್ಿ, ಮಹಮದ್ಖಲಂದರ್, ರಂಗಸ್ವಾಮಿ, ಸಿ.ಎಸ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಉಪನ್ಯಾಸಕ ಹೆಚ್.ಕೆ.ರಾಮಣ್ಣ, ಸಾಹಿತಿ ವೇಣುಗೋಪಾಲ್, ವಾದ್ಯಗಾರ ಸಿದ್ದಲಿಂಗಯ್ಯ, ಆರೋಗ್ಯ ಕ್ಷೇತ್ರದ ರಾಧಮ್ಮ, ಸಬ್ಬೇನಹಳ್ಳಿ ಜ್ಯೋತಿಷಿ ಲಕ್ಷ್ಮಣಶೆಟ್ಟಿ, ಕೃಷಿ ಕ್ಷೇತ್ರದಲ್ಲಿ ಗೋಪಾಲನಹಳ್ಳಿ ರಘು ಮುಂತಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಬಸವರಾಜ್ ನಿರೂಪಿಸಿದರು. ಶಿಕ್ಷಕ ರಾಜ್ಕುಮಾರ್ ಪ್ರಾಥರ್ಿಸಿದರು. 



ತೆಂಗು ಪುನಶ್ಚೇತನಾ ಯೋಜನೆಯನ್ನು ಅನುಷ್ಠಾನಕ್ಕೆ 
ಚಿಕ್ಕನಾಯಕನಹಳ್ಳಿ, : ತೋಟಗಾರಿಕಾ ಇಲಾಖಾ ವತಿಯಿಂದ ತೆಂಗು ಪುನಶ್ಚೇತನಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು ಈ ಯೋಜನೆಯಡಿ ಪ್ರತಿ ಹೆಕ್ಟೇರಿಗೆ 20ಸಾವಿರ ರೂಪಾಯಿಗಳ ಸಹಾಯಧನ ನೀಡುವ ಅವಕಾಶವಿದ್ದು ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ಇಲಾಖಾ ಅಧಿಕಾರಿ ಮಹಾಲಕ್ಷ್ಮಮ್ಮ ತಿಳಿಸಿದ್ದಾರೆ.
ತೆಂಗಿನ ತೋಟಗಳು 10 ವರ್ಷಕ್ಕೆ ಮೇಲ್ಪಟ್ಟ ಕನಿಷ್ಟ 10 ತೆಂಗಿನ ಮರಗಳು ಒಣಗಿರುವ ರೈತರಿಗೆ ತೆಂಗಿನ ಮರಗಳನ್ನು ತೆರವುಗೊಳಿಸಿ ಹೊಸ ಹೈಬ್ರಿಡ್ ಹಾಗೂ ಎಳೆನೀರು ಸ್ಥಳೀಯ ತಳಿಗಳ ತೆಂಗಿನ ಗಿಡಗಳನ್ನು ಮರುನಾಟಿ ಮಾಡಬೇಕು ಹಾಲಿ ಇರುವ ತೆಂಗಿನ ಮರಗಳಿಗೆ ತೇವಾಂಶ ಕಾಪಾಡಲು ಗಿಡಗಳು ಸುತ್ತಾ ಪಾತಿ ಮಾಡುವುದು, ಪಾತಿಗಳ ಸುತ್ತ ತೆಂಗಿನ ಮಟ್ಟೆ ಅಥವಾ ಕೃಷಿ ತ್ಯಾಜ್ಯಗಳನ್ನು ಹಾಕಿ ತೆಂಗಿನ ಗರಿಗಳನ್ನು ಹೊಂದಿಸುವುದು ಮತ್ತು ತೆಂಗಿನ ಮರಗಳ ಸಾಲುಗಳ ನಡುವೆ ಕಾಲುವೆಗಳನ್ನು ತೆಗೆದು ಮಟ್ಟೆಯನ್ನು ತುಂಬಿ ತೇವಾಂಶ ರಕ್ಷಣೆ ಮಾಡುವುದು. ಹಾಗೂ ತೆಂಗಿನ ತೋಟಗಳಲ್ಲಿ ಆಯಾ ವಾತಾವರಣಕ್ಕೆ ಸೂಕ್ತವಾಗಿರುವ  ಮಿಶ್ರತಳಿ ತೋಟಗಾರಿಕಾ ಬೆಳೆಗಳನ್ನು ಹಾಕುವುದಲ್ಲದೆ, ತೆಂಗಿನ ಮರಗಳಿಗೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಮತ್ತು ರಾಸಾಯನಿಕ ಗೊಬ್ಬರ ಹಾಕುವುದು, ರೈತರು ಮೊದಲು ಸ್ವಂತ ಖಚರ್ಿನಲ್ಲಿ ಈ  ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ಸಿದ್ದರಿರಬೇಕು ನಂತರ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿಗಳನ್ನು ಕಛೇರಿಗೆ ಸಲ್ಲಿಸಿ, ಇಲಾಖಾ ಅಧಿಕಾರಿಗಳಿಂದ ತಾಂತ್ರಿಕ ಸಲಹೆ ಪಡೆಯಬೇಕು, ನಂತರ ಸ್ಥಳ ಪರಿಶೀಲಿಸಿ ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಯ ಮುಖಾಂತರ ವಿತರಿಸಲಾಗುವುದು ಆದ್ದರಿಂದ ತಾಲ್ಲೂಕಿನ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಇಲಾಖಾ ಅಧಿಕಾರಿಗಳನ್ನು ಸಂಪಕರ್ಿಸಲು ಕೋರಿದ್ದಾರೆ.

Saturday, October 18, 2014

ಕೋಟ್ಯಾಂತರ ರೂ ಅನುದಾನ: ತಾಲೂಕಿನ ಅಭಿವೃದ್ದಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲು ಅಧಿಕಾರಿಗಳಿಗೆ ಸೂಚನೆ:
  • ಪ್ರತಿವರ್ಷ 400 ಕೋಟಿ ಅನುದಾನ ಮುಂದಿನ 10 ವರ್ಷದವರೆಗೆ
  • ಇಡೀ ದೇಶದಲ್ಲಿ ತಾಲೂಕಿನ ಅಭಿವೃದ್ದಿಗೆ ಇಷ್ಟೋಂದು ಹಣ ಪಡೆದ ತಾಲೂಕು ಇನ್ನೊಂದಿಲ್ಲವೆಂದ ಸಚಿವರು.
  • ತಾಲೂಕಿನಲ್ಲಿ ಮತ್ತೇ ಗಣಿ ಆರಂಭದ ಸೂಚನೆ ನೀಡಿದ ಸಚಿವರು.
  • ಹಣಕ್ಕೆ ಯೋಚನೆ ಮಾಡಬೇಡಿ, ಕ್ರಿಯಾ ಯೋಜನೆ ಸರಿಯಾಗಿ ತಯಾರಿ ಮಾಡಿ.
  • ವಕೀಲರ ಸಂಘದ ಕಟ್ಟಡಕ್ಕೂ ಗಣಿ ಹಣದಲ್ಲಿ ಐವತ್ತು ಲಕ್ಷ ರೂಗಳನ್ನು ಮೀಸಲಿಡಲು ಸೂಚನೆ
  • ಸಭಿಕರು ಏನೇ ಕೇಳಿದರೂ ಕ್ರಿಯಾ ಯೋಜನೆಗೆ ಸೇರಿಸಲು ಅಧಿಕಾರಿಗಳಿಗೆ ಸೂಚನೆ.
  • ಸರಿಯಾದ ಮಾಹಿತಿ ನೀಡದ ಡಿ.ಡಿ.ಮೈನಿಂಗ್ ಮೇಲೆ ಕೆಂಡಾಮಂಡಲವಾದ ಶಾಸಕ ಸಿ.ಬಿ.ಸುರೇಶ್ಬಾಬು
  • ಹೈಟೆಕ್ ಆಸ್ಪತ್ರೆಗೆ ಯೋಜನೆ ರೂಪಿಸಲು ಶಾಸಕ ಸಿ.ಬಿ.ಎಸ್. ಸೂಚನೆ


ಚಿಕ್ಕನಾಯಕನಹಳ್ಳಿ,ಅ.18 :  ತಾಲೂಕಿನ ಅಭಿವೃದ್ದಿಗೆ ರೂಪಿಸುತ್ತಿರುವ ಕ್ರಿಯಾ ಯೋಜನೆಗೆ ಮಂಜೂರು ಆಗುವ ಅನುದಾನ ಅಧಿಕವಾಗಿದ್ದು, ಇಡೀ ದೇಶದಲ್ಲಿ ಒಂದು ತಾಲೂಕಿನ ಅಭಿವೃದ್ದಿಗೆ ಇಷ್ಟು ಹಣವನ್ನು ಯಾವ ತಾಲೂಕು ಪಡೆಯಲು ಸಾಧ್ಯವಿಲ್ಲ ಅಷ್ಟು ಹಣ ಮೀಸಲಿದೆ, ಆದ್ದರಿಂದ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ  ನಡೆದ ಜಿಲ್ಲಾ, ತಾಲೂಕು ಮಟ್ಟದ  ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ  ಸಭೆಯಲ್ಲಿ ಮಾತನಾಡಿ, ಇನ್ನೂ ಹತ್ತು ದಿನಗಳಲ್ಲಿ ಈ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಬೇಕು, ಈ ಯೋಜನೆಯನ್ನು ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಕೆ.ಡಿ.ಪಿ ಸಭೆಯಲ್ಲಿ ಚಚರ್ಿಸಿ ನಂತರ ಅಂತಿಮಗೊಳಿಸಬೇಕು ಎಂದರು.
ಈ ಹಂತದಲ್ಲಿ ಗಣಿಬಾಧಿತ ಹಳ್ಳಿಗಳ ಪಟ್ಟಿಯ ವಿಷಯವಾಗಿ ಗಣಿ ಮತ್ತು ಭೂ ವಿಜ್ಞಾನ ಉಪನಿದರ್ೇಶಕ ಸಿದ್ದಗಂಗಯ್ಯ ನೀಡಿದ ಉತ್ತರಕ್ಕೆ ಕೆಂಡಾಮಂಡಲವಾದ ಶಾಸಕ ಸಿ.ಬಿ.ಸುರೇಶ್ಬಾಬು, ಜಿಲ್ಲೆಯ ಗಣಿ ಪ್ರದೇಶಗಳ ಬಗ್ಗೆ ಮಾಹಿತಿ ಇಲ್ಲದ ಇಂತಹ ಅಧಿಕಾರಿಗಳನ್ನು ಏಕೆ ಇಟ್ಟುಕೊಂಡಿದ್ದೀರಾ ಎಂದರಲ್ಲದೆ, ಕೊನೆ ಪಕ್ಷ ಈ ಸಭೆಗೆ ಬರುವ ಮೊದಲು ಸರಿಯಾದ ಮಾಹಿತಿಯನ್ನು ಇಟ್ಟುಕೊಂಡಿಲ್ಲದಿರುವುದನ್ನು ಕಂಡು ಬೇಸರ ವ್ಯಕ್ತಪಡಿದರು. 
ಅಂತಿಮವಾಗಿ ವಿಧಾನ ಸಭೆಯಲ್ಲಿ ಶಾಸಕರು ಲಿಖಿತವಾಗಿ ಸಕರ್ಾರದಿಂದ ಪಡೆದಿದ್ದ ಗಣಿ ಬಾಧಿತ ಹಳ್ಳಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಸಕರ್ಾರದ ಪ್ರಕಾರ ತಾಲೂಕಿನ 22 ಹಳ್ಳಿಗಳು ಗಣಿ ಬಾಧಿತ ಪ್ರದೇಶವಾಗಿದ್ದು ಹೊನ್ನೇಬಾಗಿ, ಗೊಲ್ಲರಹಳ್ಳಿ, ಬುಳ್ಳೇನಹಳ್ಳಿ, ಬೆಳವಾಡಿ, ಜಾಣೇಹಾರ್, ಭೈರಲಿಂಗನಹಳ್ಳಿ, ಮತಿಘಟ್ಟ, ಗುರುವಾಪುರ, ಅಗ್ರಹಾರ, ಸೋಮನಹಳ್ಳಿ, ಯರೇಕಟ್ಟೆ, ಸೊಂಡೇನಹಳ್ಳಿ, ಮಂಚೇಕಟ್ಟೆ, ಕೆಂಕೆರೆ, ರಾಮನಹಳ್ಳಿ, ಸಾದರಹಳ್ಳಿ, ದೊಡ್ಡರಾಂಪುರ, ಆಶ್ರಿಹಾಲ್, ತೊನ್ನಲಾಪುರ, ಕಾತ್ರಿಕೆಹಾಳ್, ಹೊಂಬಳಘಟ್ಟ, ಬೆಳ್ಳಾರ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 
ತಾಲ್ಲೂಕಿನ ಗಣಿಬಾಧಿತ ಪ್ರದೇಶಗಳ 22 ಹಳ್ಳಿಗಳ ರಸ್ತೆಯನ್ನು ಕಾಂಕ್ರೇಟ್ ರಸ್ತೆಗಳು ಹಾಗೂ ಎರಡೂ ಬದಿಯಲ್ಲಿ ಚರಂಡಿ ಹಾಗೂ ಸಸಿಗಳನ್ನು ನಡೆಸಬೇಕು ಎಂದಾಗ ಸ್ಥಳದಲ್ಲಿದ್ದ ತುಮಕೂರು ಕಾರ್ಯನಿವರ್ಾಹಕ ಇಂಜನಿಯರ್ ಶಿವಕುಮಾರ್ ಮಾತನಾಡಿ, ತಾಲ್ಲೂಕಿನ ಗಡಿಭಾಗಗಳಲ್ಲಿ ಪಿಡಬ್ಯೂಡಿ ಇಲಾಖೆಗೆ ಸೇರಿದ ಗಣಿ ಬಾಧಿತ ಪ್ರದೇಶಗಳ   ಕಾಂಕ್ರಿಟ್ ರಸ್ತೆಗೆ 118 ಕೋಟಿ ರೂಪಾಯಿ ವೆಚ್ಚದಲ್ಲಿ ನಿಮರ್ಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು. 
ಜಿಲ್ಲಾ ಪಂಚಾಯ್ತಿ ಇಂಜನಿಯರಿಂಗ್ ವಿಭಾಗದ ರಾಜಶೇಖರ್ ಮಾತನಾಡಿ,  ಈ ವ್ಯಾಪ್ತಿಯಲ್ಲಿ ಬರುವ 36.95 ಕಿ.ಮೀ ರಸ್ತೆ, ಚರಂಡಿ ನಿಮರ್ಿಸಲು 42 ಕೋಟಿ ರೂ ವೆಚ್ಚ ಮಾಡಲಾಗುತ್ತಿದ್ದು ಈ ಎಲ್ಲಾ ಕಾಂಕ್ರಿಟ್ ರಸ್ತೆಗಳ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ತಾಲ್ಲೂಕಿನಲ್ಲಿನ ವಸತಿಶಾಲೆ, ಹಾಸ್ಟಲ್ಗಳು, ಶುದ್ದ ಕುಡಿಯುವ ನೀರು ಘಟಕಗಳು,  ಶಾಲಾ ಕಟ್ಟಡಗಳು, ಆಟದ ಮೈದಾನದ ಅಭಿವೃದ್ದಿ,  ಶಾಲಾವನ, ಕಾಲೇಜು ಕಟ್ಟಡಗಳು, ಗ್ರಂಥಾಲಯ, ಪ್ರತಿ ಹಳ್ಳಿಗಳಲ್ಲಿ ಗ್ರಂಥಾಲಯ ಕಟ್ಟಡಗಳು, ಶಾಲಾ ಕಾಂಪೌಂಡ್ಗಳು, ಶೌಚಾಲಯಕ್ಕೆ ಕ್ರಿಯಾಯೋಜನೆ ತಯಾರಿಸಲು ಅಧಿಕಾರಿಗಳು ಸೂಚಿಸಿದರು.
ಗೋಡೆಕೆರೆ, ತೀರ್ಥಪುರ, ಬೋರನಕಣಿವೆ, ಬೆಳ್ಳಾರದಲ್ಲಿ ಸಮುದಾಯ ಭವನ ನಿಮರ್ಿಸಲು ಕ್ರಿಯಾ ಯೋಜನೆ ತಯಾರಿಸುವಂತೆ ಸಲಹೆ ನೀಡಿದರು. 
ಪ್ರತಿ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಪಶುಸಂಗೋಪನಾ ಇಲಾಖೆ ಕಟ್ಟಡಗಳನ್ನು ನಿಮರ್ಿಸಲು ಕ್ರಿಯಾ ಯೋಜನೆ ರೂಪಿಸುವಂತೆ ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕೆರೆಗಳ ಜೀಣರ್ೋದ್ದಾರ, ಕೆರೆಗಳಲ್ಲಿನ ಊಳು ತೆಗೆಯುವುದು ಸೇರಿದಂತೆ ಸಮಗ್ರ ಅಭಿವೃದ್ದಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಕ್ರಿಯಾ ಯೋಜನೆ ರೂಪುಗೊಳ್ಳಬೇಕು ಎಂದರು. ಇದೊಂದು ತಾಲೂಕಿನ ಅಭಿವೃದ್ದಿಯ ಮಾಸ್ಟರ್ ಪ್ಲ್ಯಾನ್ ಆಗಬೇಕು ಎಂದು ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದರು.
ಹೇಮಾವತಿ ಕಾಲುವೆ ಅಗಲೀಕರಣಕ್ಕೆ ಕ್ರಿಯಾ ಯೋಜನೆ. ಗೋರೂರು ಡ್ಯಾಂನಿಂದ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲು ನಾಲೆ ಅಗಲೀಕರಣ ಹಾಗೂ ನಾಲೆಗಳ ಅಭಿವೃದ್ದಿಗೆ ಸಕರ್ಾರ 562 ಕೋಟಿ ರೂಪಾಯಿ ಕ್ರಿಯಾ ಯೋಜನೆ ತಯಾರಿಸಿ ಸಕರ್ಾರಕ್ಕೆ ವರದಿ ನೀಡಿದ್ದು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು ಶೀಘ್ರವೇ ಸಂಪುಟದಲ್ಲಿ ಚಚರ್ೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿದ್ದರು, ತಿಪಟೂರು ಶಾಸಕ ಕೆ.ಷಡಾಕ್ಷರಿ, ಜಿ.ಪಂ.ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಜಿಲ್ಲಾಧಿಕಾರಿ ಕೆ.ಸತ್ಯಮೂತರ್ಿ, ಜಿ.ಪಂ. ಸಿ.ಇ.ಓ.ಗೋವಿಂದರಾಜು, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ.ಕೃಷ್ನಮೂತರ್ಿ,  ತಾ.ಪಂ. ಅಧ್ಯಕ್ಷೆ ಲತಾ ಕೇಶವಮೂತರ್ಿ, ಪುರಸಭಾ ಅಧ್ಯಕ್ಷೆ ಪುಷ್ಪಾ ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ,  ಜಿ.ಪಂ.ಸದಸ್ಯರಾದ ಲೋಹಿತಾಬಾಯಿ, ಮಂಜುಳಾ, ಜಾನಮ್ಮ, ನಿಂಗಮ್ಮ, ತಾ.ಪಂ ಸದಸ್ಯರುಗಳು, ಗ್ರಾ.ಪಂ.ಸದಸ್ಯರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Friday, October 10, 2014

ತಾ.ಪಂ ಸಾಮಾನ್ಯ ಸಭೆ 

                             
ಚಿಕ್ಕನಾಯಕನಹಳ್ಳಿ,ಅ.10:  ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ  ರೈತರಿಗೆ ಬರುವ ಸವಲತ್ತುಗಳ ಬಗ್ಗೆ ತಿಳಿಸದೆ,  ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ತಾ.ಪಂ.ಸದಸ್ಯರು ಆರೋಪಿಸಿದ್ದಾರೆ. 
ಪಟ್ಟಣದ ತಾಲ್ಲೂಕೂ ಸಭಾಂಗಣದಲ್ಲಿ ಅಧ್ಯಕ್ಷ ಲತಾ ಕೇಶವಮೂತರ್ಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚಚರ್ಿಸಿದ ಸದಸ್ಯರು, ತಾಲೂಕಿನ 28 ಗ್ರಾ.ಪಂ.ಗಳಿಗೂ ಸೂಕ್ತ ರೀತಿಯ ಸುತ್ತೋಲೆ ಹಾಗೂ ವಿವಿಧ ಮಾಧ್ಯಮಗಳಿಗೆ ರೈತರಿಗೆ ಸವಲತ್ತುಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕೆಂದು ಸಲಹೆ ನೀಡಿದರು, ಇದಕ್ಕೆ ಪ್ರತಿಕ್ರಯಿಸಿದ ತೋಟಗಾರಿಕಾ ಇಲಾಖಾ ಅಧಿಕಾರಿ ಮಹಾಲಕ್ಷ್ಮಮ್ಮ,  ಇನ್ನು ಮುಂದೆ ಗ್ರಾಮಪಂಚಾಯ್ತಿಗಳಿಗೆ ರೈತರಿಗೆ ಬರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ಸದಸ್ಯ ಎಂ.ಎಂ.ಜಗದೀಶ್ ಮಾತನಾಡಿ, ತಾಲೂಕಿನ ಅಧಿಕಾರಿಗಳ ನಿರ್ಲಕ್ಷದಿಂದ  ನಮ್ಮ ತಾಲೂಕನ್ನು  ಬರಪೀಡಿತ ಪ್ರದೇಶವೆಂದೆ ಸಕರ್ಾರ ಘೋಷಿಸದಿರಲು ಕಾರಣ ವಾಗಿದೆ ಎಂದು  ಆರೋಪಿಸಿದರು 
ತಾಲ್ಲೂಕ್ ಪಂಚಾಯ್ತಿ ಸದಸ್ಯ ಸೀತಾರಾಮಯ್ಯ ಮಾತಾನಾಡಿ ತಾಲ್ಲೂಕು ಪಂಚಾಯ್ತಿಯ ಶೇಕಡ 3 ರ ಅನುದಾನದ ಅಡಿಯಲ್ಲಿ ಮೈಕ್ಸೇಟ್ಕೊಳ್ಳಲು 3 ಬಾರಿ ಬಿಲ್ಲು ಮಾಡಿಕೊಂಡಿದ್ದಾರೆ.ಹಾಗೂ ತಾಲ್ಲೂಕು ಪಂಚಾಯ್ತಿಗೆ ಪೀಠೋಪಕರಣಗಳು ತೆಗೆದುಕೊಳ್ಳುವಾಗ ಸದಸ್ಯರ  ಗಮನಕ್ಕೆ ಬರುವುದಿಲ್ಲ ಅಧಿಕಾರಿಗಳು ನೀವೇ ಬಿಲ್ಲು ಮಾಡಿಕೊಂಡರೇ  ಸದಸ್ಯರ ಗಮನಕ್ಕೆ ಏಕೆ ತೆಗೆದುಕೊಂಡು ಬರುತ್ತಿಲ್ಲ ಆಗಾದರೆ ತಾ,ಪಂ ಸದಸ್ಯರು ಸಭೆಗೆ ಏಕೆ ಬರಬೇಕು ಎಂದು ಇ.ಒ ಅವರನ್ನು ಪ್ರಶ್ನಿಸಿದರು.
ಇ.ಒ.ಉತ್ತರಿಸಿ ನಾನು ಹೊಸದಾಗಿ ಬಂದಿದ್ದು ನನಗೆ ಇದರ ಬಗ್ಗೆ ಯಾವುದೆ ಮಾಹಿತಿ ಇಲ್ಲ, ತಿಳಿದ ನಂತರ ಉತ್ತರಿಸುವುದಾಗಿ ಹೇಳಿದರು.
ಕೃಷಿ ಇಲಾಖೆಗೆ ಸಂಬಂದಿಸಿದಂತೆ  ಸಹಾಯಕ ನಿದರ್ೇಶಕ ಹೆಚ್. ಹೊನ್ನದಾಸೇಗೌಡ ಮಾತಾನಾಡಿ, ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ  ಪಾಲಿಹೌಸ್ ಹಾಗೂ ನಾನ್ ಪಾಲಿಹೌಸ್ ಯೋಜನೆ ಜಾರಿಗೆ ಬಂದಿದ್ದು ಪಾಲಿಹೌಸ್ ತರಕಾರಿ ಹಾಗೂ ತೋಟಗಾರಿಕ ಬೆಳೆಗಳನ್ನು ಎನ್.ಹೆಚ್.ಎಂ,ಯೋಜನೆ ಅಡಿಯಲ್ಲಿ ಶೇಕಡ 50 ರಷ್ಷು ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ ಈವರೆಗೆ 10 ಅಜರ್ಿ ಬಂದಿದ್ದು ಇನ್ನು ಹೆಚ್ಚು ಅಜರ್ಿಗಳು ಬಂದರೆ ಲಾಟರಿ ಎತ್ತುವ ಮೂಖಾಂತರ ಪಲಾನುಭವಿಗಳನ್ನು  ಆಯ್ಕೆಮಾಡಲಾಗುವುದು.
 ನಾನ್ ಪಾಲಿಹೌಸ್ ಯೋಜನೆ ಅಡಿಯಲ್ಲಿ 2.5 ಎಕರೆ ಜಮೀನು ಹೊಂದಿರುವ ರೈತರಿಗೆ ನಾನ್ ಪಾಲಿಹೌಸ್ ಯೋಜನೆ ಅಡಿಯಲ್ಲಿ 1.2 5 ಲಕ್ಷದಿಂದ 2.5 ಲಕ್ಷದವರೆಗೆ ಸಹಾಯ ದನ ನೀಡಲಾಗುತ್ತದೆ ಈ ಯೋಜನೆ ಅಡಿಯಲ್ಲಿ ರೈತರು ಬದು, ಪಾಲಿಥಿನ್ ಸಹಿತ ಕೃಷಿ ಹೊಂಡ, ಡೀಜೆಲ್ ಪಂಪ್ಸೆಟ್, ಹಾಗೂ ಸ್ಪಿಂಕ್ಲರ್ ಅಳವಡಿಸಿಕೊಳ್ಳಬಹುದು ಎಂದರು.
ತಾಲ್ಲೂಕು ಪಂಚಾಯ್ತಿಯ ಹಣಕಾಸು ಸಭೆ ನಡೆಯುವಾಗ ಸಮಾಜ ಕಲ್ಯಾಣಾಧಿಕಾರಿಗಳು ಸಭೆಗೆ ಹಾಜರಾಗಿ ಪುಸ್ತಕಕ್ಕೆ ಸಹಿ ಹಾಕಿ ಹೇಳದೆ ಕೇಳದೆ ಹೊರಗೆ ಏಕೆ ಹೊಗಿದ್ದಿರಿ ಇದರಿಂದ ತಾ.ಪಂ ಅಧ್ಯಕ್ಷರು ಹಾಗೂ ಸದಸ್ಯರ ಮೇಲೆ ಎಷ್ಟು ಗೌರವ ಇದೆ ಎಂದು ಸೂಚಿಸುತ್ತದೆ. ಎಂದು ತಾ.ಪಂ ಅಧ್ಯಕ್ಷೆ ಲತಾಕೇಶವಮೂತರ್ಿ ಸಮಾಜ ಕಲ್ಯಾಣಾಧಿಕಾರಿ ರಾಮಣ್ಣನವರನ್ನು ಖಾರವಗಿ ಪ್ರಶ್ನಿಸಿದರು ಅನಿವಾರ್ಯ ಕಾರಣಗಳು ಇದ್ದರೆ ಮಾತ್ರ ಸಭೆಯಿಂದ ಅನುಮತಿ ಪಡೆದು ಹೊರಗೆ ಹೊಗಬೇಕೆವರತು ಸಣ್ಣಪುಟ್ಟ ವಿಷಯಗಳಿಗೆಲ್ಲಾ ಹೊರಗೆ ಹೋದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ  ಅಧಿಕಾರಿ ಮೌನದಿಂದ್ದಿದ್ದರು.
    ಸಮಾಜ ಕಲ್ಯಾಣಾ ಇಲಾಖಾಯ ವಸತಿ ನಿಲಯದಲ್ಲಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದಾಗ ವಸತಿ ನಿಲಯದ ಸಮಸ್ಯೆಗಳನ್ನು ಕಾಲೇಜು ವಿದ್ಯಾಥರ್ಿಗಳು ಹೇಳಿದರೆ ಹಾಸ್ಟೆಲ್ ವರ್ಡನ್ ವಿದ್ಯಾಥರ್ಿಗಳನ್ನು ಗದರಿಸಿ ಬೈಯುತ್ತಾರೆ ಎಂಬ ದೂರಿದೆ ಆ  ವಾರ್ಡನನ್ನು  ಸಭೆಗೆ ಕರೆಸುವಂತೆ ಸದಸ್ಯ ನಿರಂಜನ್ ಅಧಿಕಾರಿಗಳನ್ನು ಆಗ್ರಹಿಸಿದರು. 
   ಇನ್ನು ಮುಂದೆ ಈಗಾಗದಂತೆ ನೋಡುಕೊಳ್ಳುವುದಾಗಿ ಸಮಾಜ ಕಲ್ಯಾಣಾಧಿಕಾರಿ ರಾಮಯ್ಯ ತಿಳಿಸಿದರು. 
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ವಸಂತಯ್ಯ ಸಾಮಾಜಿ ನ್ಯಾಯ ಸ್ಥಾಯಿ ಸಮಿತಿ ಚಿಕ್ಕಮ್ಮ, ಸದಸ್ಯರಾದ ಜಯಣ್ಣ, ಚೇತನ ಗಂಗಾಧರ್, ಹೇಮಾವತಿ, ಲತಾ ವಿಶ್ವೇಶ್ವರ್, ಉಮಾದೇವಿ, ಶಿವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚೆಕ್ ವಿತರಣೆ: ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ವತಿಯಿಂದ ಆಕಸ್ಮಿಕವಾಗಿ ಮರಣಹೊಂದಿದ ಕುರಿ ಮಾಲೀಕರಿಗೆ ತಲಾ ಐದು ಸಾವಿರದಂತೆ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. 

Wednesday, September 10, 2014

ಪೋಷಕರು ತಮ್ಮ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಹಕರಿಸಿ

ಚಿಕ್ಕನಾಯಕನಹಳ್ಳಿ,ಸೆ.10 : ಪೋಷಕರು ತಮ್ಮ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಹಕಾರ ನೀಡಬೇಕು, ಮಕ್ಕಳ ಪ್ರತಿಭೆಯನ್ನು ಪ್ರಾಥಮಿಕ ಹಂತದಲ್ಲೇ ಗುತರ್ಿಸಿ ಬೆಳೆಸಿದರೆ ಮುಂದೆ ಅವರಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂದು ಪುರಸಭಾ ಸದಸ್ಯ ಸಿ.ಆರ್.ತಿಮ್ಮಪ್ಪ ಹೇಳಿದರು.
ಪಟ್ಟಣದ ಎಂ.ಪಿ.ಜಿ.ಎಸ್ ಶಾಲಾ ಆವರಣದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದ ಅವರು,
ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಲಿದ್ದು ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಾಲ್ಲೂಕಿನಿಂದ ಜಿಲ್ಲೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆ ಹಾಗೂ ತಂದೆ, ತಾಯಿಗೆ ಹೆಸರು ತರುವಂತೆ ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ,  ಎಂ.ಪಿ.ಜಿ.ಎಸ್ ಶಾಲೆಯ ಎದುರಿನಲ್ಲಿರುವ ವಿದ್ಯುತ್ ಪರಿವರ್ತಕದಿಂದ ಮಕ್ಕಳ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗೆ  ತೊಂದರೆಯಾಗುತ್ತಿದ್ದು ಎರಡು ಭಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಈ ಭಾಗದ ಜನರು ನನ್ನೊಂದಿಗೆ  ಕೈ ಜೋಡಿಸಿದರೆ ಪರಿವರ್ತಕ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಈ ಭಾಗದಲ್ಲಿ ಎರಡು ಬಾರಿ ಪುರಸಭಾ ಸದಸ್ಯನಾಗಿದ್ದಾಗ ಶಾಲಾ ಮುಂಭಾಗದಲ್ಲಿರುವ ವಿದ್ಯುತ್ ಪರಿವರ್ತಕವನ್ನು ತೆರವುಗೊಳಿಸಲು ಮುಂದಾದರೂ ಹಲವರ ವಿರೋಧದಿಂದ ಪರಿವರ್ತಕವನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ, ಈಗ ಪಕ್ಕದ ವಾಡರ್್ನ ಸದಸ್ಯನಾಗಿದ್ದರೂ ಮಕ್ಕಳ ಹಿತದೃಷ್ಠಿಯಿಂದ ಆ ಕೆಲಸಕ್ಕೆ ಜೊತೆಯಲ್ಲಿರುವುದಾಗಿ ತಿಳಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ, ಮಕ್ಕಳ ಸುಪ್ತ ಪ್ರತಿಭೆ ಹೊರಹೊಮ್ಮಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದ್ದು ಈ ಕಾರ್ಯಕ್ರಮಗಳ ಮೂಲಕ ಸಾಹಿತ್ಯ, ಸಾಂಸ್ಕೃತಿಕ, ಕಲೆ ಮುಂತಾದ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ಬಿ.ಆರ್.ಪಿ. ಪ್ರದೀಪ್ ಮಾತನಾಡಿ ಸಕರ್ಾರಿ ಮತ್ತು ಖಾಸಗಿ ಶಾಲೆಯವರೆಂದು ಯಾರಿಗೂ ತಾರತಮ್ಯ ಮಾಡದೆ ತೀಪರ್ುಗಾರರು ನೈಜ ತೀಪರ್ು ನೀಡಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಿ ಎಂದರಲ್ಲದೆ ಎಂ.ಪಿ.ಜಿ.ಎಸ್ ಶಾಲಾ ಮುಂಭಾಗದಲ್ಲಿರುವ ಟಿ.ಸಿ.ಯನ್ನು ತೆರವುಗೊಳಿಸುವುದು ಅವಶ್ಯಕತೆಯಿದೆ ಮತ್ತು ಶಾಲೆಗೆ ಕಾಂಪೌಂಡ್ ವ್ಯವಸ್ಥೆಯಾಗಬೇಕಿದೆ ಎಂದರು.
ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶ್, ಶಿಕ್ಷಕ ಶಿವಕುಮಾರ್, ಸಿ.ಆರ್.ಪಿ.ಸುರೇಶ್ ಕೆಂಬಾಳ್ ಉಪಸ್ಥಿತರಿದ್ದರು.


Monday, September 8, 2014

ಸೋಲೆ ಗೆಲುವಿನ ಮೆಟ್ಟಿಲು : ನಿ.ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ
ಚಿಕ್ಕನಾಯಕನಹಳ್ಳಿ : ಶ್ರೇಷ್ಠ ಸಾಧಕರನೇಕರು ಹಲವು ಸೋಲುಗಳನ್ನು ಕಂಡಿದ್ದರೂ ಎಡಬಿಡದೆ ಸಾಧನೆಯ ಬೆನ್ನು ಹತ್ತಿದ್ದರಿಂದಾಗಿ ಇಂದು ಸಾಧಕರೆನಿಸಿಕೊಂಡಿದ್ದಾರೆ, ಹಾಗೆಯೇ ವಿದ್ಯಾಥರ್ಿಗಳಾದ ನೀವು ಸೋಲಿಗೆ ಅಂಜದೆ ಮುನ್ನಡೆದರೆ ನೀವು ಸಾಧಕರನೆಸಿಕೊಳ್ಳಬಹುದು ಎಂದು  ಪ್ರಥಮ ದಜರ್ೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ 2014-15ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುತ್ ಬಲ್ಪ್ ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಅಂಗವಿಕಲನಾದರೂ ಶ್ರೇಷ್ಠ ಸಾಧನೆ ಮಾಡಿದವರು  ಅಮೆರಿಕಾದಲ್ಲಿ ಮೂರು ಬಾರಿ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್, ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ ಡಾ.ಅಬ್ದುಲ್ಕಲಾಂ ಹಾಗೂ ಇನ್ನಿತರ ಹಲವು ಸಾಧಕರು ಸೋಲುಗಳ ನಂತರ ಗೆಲುವು ಪಡೆದವರಾಗಿದ್ದು, ಜೀವನದಲ್ಲಿ ಸೋಲನ್ನು ಅನುಭವಿಸಿದೆ ಎಂದು ಹಿಂಜರಿಯುವುದಕ್ಕಿಂತ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿದರೆ ನೀವೂ ಸಾಧಕರ ಸಾಲಿನಲ್ಲಿ ನಿಲ್ಲುತ್ತೀರ ಎಂದರಲ್ಲದೆ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹಲವರು ತಮ್ಮ ಸಾಧನೆಗಾಗಿ ಶ್ರಮ ಪಟ್ಟಿದ್ದಾರೆ, ಆ ಸಮಯದಲ್ಲಿ ಸಾಧಕರಿಗೆ ಎದುರಾಗುವ ಹಲವು ತೊಂದರೆಗಳನ್ನು ಧೈರ್ಯ, ಶ್ರಧ್ದೆ, ಆಸಕ್ತಿ ಮೂಲಕ ಸಾಧಿಸುವ ಛಲ ಹೊಂದಿದ್ದರಿಂದಲೇ ಅವರ ಹೆಸರು ನಾವು ಇಂದು ಬಳಸುತ್ತಿರುವುದು, ಆ ಸಾಧಕರಂತೆ ಮನಸ್ಸಿದ್ದರೆ ಮಾರ್ಗದ ದಾರಿಯಲ್ಲಿ ಮುಂದಾಗಬೇಕು ಆಗಲೇ ತಮ್ಮ ಸಾಧನೆಗೆ ಯಾವ ತೊಂದರೆ ಎದುರಾದರೂ ಗೆಲುವು ನಮ್ಮದಾಗುತ್ತದೆ ಎಂದರು.
ಯಾವುದೇ ವಿಷಯದಲ್ಲಿ ಗೆಲುವು ಸಾಧಿಸಲು ಶ್ರದ್ದೆ, ಆಸಕ್ತಿ ಬಹಳ ಮುಖ್ಯವಾಗಿದೆ, ಶ್ರದ್ಧೆಯಿದ್ದರೆ ಗೆದ್ದೆ ಇಲ್ಲದಿದ್ದರೆ ಬಿದ್ದೆ ಎಂದು ಭಾವಿಸಿಕೊಂಡು ಇಡುವ ಪ್ರತಿ ಹೆಜ್ಜೆಯಲ್ಲೂ ಶ್ರದ್ದೆಗೆ ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದ ಅವರು, ಹೂವು ಅರಳಿ ಒಂದೇ ದಿನದಲ್ಲಿ ತನ್ನ ಸೇವೆಯನ್ನೂ ಎಲ್ಲರಿಗೂ ನೀಡುತ್ತದೆ ನಾವು ಹುಟ್ಟಿದ ಮೇಲೆ ಎಂದಾದರೂ ಮಣ್ಣಾಗಲೇ ಬೇಕು ಆ ಮಧ್ಯದಲ್ಲಿ ಏನಾದರೂ ಸಾಧಿಸಬೇಕು ಛಲ ಹೊಂದಬೇಕು ಎಂದರು.
ಪ್ರಾಂಶುಪಾಲ ವಿ.ವರದರಾಜು ಮಾತನಾಡಿ ಮನುಷ್ಯನ ದೇಹ ಹಾಗೂ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಾಗ ಮಾತ್ರ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಕೇರಳದಲ್ಲಿ ಹುಟ್ಟಿದ ಗ್ರಾಮೀಣ ಭಾಗದ ಹುಡುಗಿ ಪಿ.ಟಿ.ಉಷಾ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಅಭಿವೃದ್ದಿ ಸಮಿತಿಯ ಧನಪಾಲ್, ಟಿ.ಆರ್.ವಾಸುದೇವ್, ಪ್ರಥಮ ದಜರ್ೆ ಸಹಾಯಕ ಬಸವರಾಜ್ ಉಪಸ್ಥಿತರಿದ್ದರು.
  ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಸನ್ನ ನಿರೂಪಿಸಿದರೆ, ಶಿವರಾಮಯ್ಯ ಸ್ವಾಗತಿಸಿದರು. 


Saturday, September 6, 2014



30 ವರ್ಷ ವಯಸ್ಸು ತುಂಬಿದವರು ಲೈಸೆನ್ಸ್ನ್ನು ನವೀಕರಣ ಮಾಡಿಸಿ : ಆರ್.ಟಿ.ಓ ಮಂಜುನಾಥ್
                           

                     
ಚಿಕ್ಕನಾಯಕನಹಳ್ಳಿ,ಸೆ.06 : ವಾಹನದ ಪರವಾನಗಿ ಪಡೆಯಲು 18ವರ್ಷವಾಗಿರಬೇಕು, 30 ವರ್ಷ ವಯಸ್ಸು ತುಂಬಿದವರು ಲೈಸೆನ್ಸ್ನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ತಿಪಟೂರು ಆರ್.ಟಿ.ಓ ಮಂಜುನಾಥ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಆವರಣದಲ್ಲಿ ರೋಟರಿ ಸಂಸ್ಥೆ, ರೋಟರಾಕ್ಟ್ ಸಂಸ್ಥೆ, ತಿಪಟೂರು ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ರಸ್ತೆ ಸುರಕ್ಷತಾ ಹಾಗೂ ಸಂರಕ್ಷತಾ ವಾಹನ ಚಾಲನ ನಿಯಮಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 50ವರ್ಷ ಮೇಲ್ಪಟ್ಟ ನಾಗರೀಕರು ಪ್ರತಿ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಬೇಕಾಗುತ್ತದೆ, ವಾಹನಗಳನ್ನು ಓಡಿಸಲು ರಿಜಿಸ್ಟ್ರೇಷನ್ ಕಡ್ಡಾಯವಾಗಿದ್ದು ವಾಹನಗಳು 40ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ಮಾತ್ರ ಸುರಕ್ಷಿತವಾಗಿರುತ್ತಾರೆ, ಅತಿ ವೇಗದಿಂದ ಚಲಾಯಿಸಿದರೆ ಜೀವಕ್ಕೆ ಅಪಾಯ ಎಂದು ತಿಳಿಸಿದರು.
ವಾಹನ ಚಲಾಯಿಸುವವರು ಕುಡಿದು ಹಾಗೂ ಮೊಬೈಲ್ಗಳಲ್ಲಿ ಮಾತನಾಡುತ್ತಾ ಮತ್ತು ದ್ವಿಚಕ್ರ ವಾಹನದಲ್ಲಿ ಮೂರು ಜನ ತೆರಳುವುದು ಕಾನೂನು ಪ್ರಕಾರ ಅಪರಾಧ ಎಂದರಲ್ಲದೆ, ವಾಹನ ಚಾಲಕನು ಅಗ್ನಿಶಾಮಕದಳದ ವಾಹನಗಳು ಮತ್ತು ತುತರ್ು ಚಿಕಿತ್ಸಾ ವಾಹನ, ಪೋಲಿಸ್ ವಾಹನ, ಕೆಂಪುದೀಪ ಹೊತ್ತ ವಾಹನಗಳನ್ನು ಕಂಡಾಗ ಸಾಧ್ಯವಾದಷ್ಟು ರಸ್ತೆಯ ಎಡಪಕ್ಕದಲ್ಲಿ ನಿಂತು ಅವುಗಳಿಗೆ ಚಲಿಸಲು ಆದ್ಯತೆ ನೀಡಬೇಕು, ವಾಹನವನ್ನು ನಿಲುಗಡೆ ತಾಣದಲ್ಲೇ ನಿಲ್ಲಿಸಿ ಪ್ರತಿ ಸೂಚನ ಫಲಕವನ್ನು ಗಮನಿಸುವಂತೆ ಸಲಹೆ ನೀಡಿದರು.
ಸಿ.ಪಿ.ಐ ಜಯಕುಮಾರ್ ಮಾತನಾಡಿ ಇತ್ತೀಚೆಗೆ ಪಟ್ಟಣದಲ್ಲಿ ರೋಟರಿ ಶಾಲೆಯ ಬಾಲಕ ಅತಿ ವೇಗವಾಗಿ ಚಾಲನೆ ಮಾಡಿ ಕಂಬಕ್ಕೆ ಡಿಕ್ಕೆ ಹೊಡೆದ ಪರಿಣಾಮ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ, ಪಟ್ಟಣದಲ್ಲಿ ಅಪ್ರಾಪ್ತರು, ವಾಹನ ಪರವಾನಿಗೆ ಪಡೆಯದವರ ವಿರುದ್ದ ದಂಡ ವಿಧಿಸಿ, ಎಚ್ಚರಿಕೆ ನೀಡಿ, ಲೈಸೆನ್ಸ್ ಪಡೆದು ವಾಹನ ಚಲಾಯಿಸಲು ಸೂಚನೆ ನೀಡಲಾಗಿದೆ. ಕಾಲೇಜು ಆವರಣದಲ್ಲಿ ಅಪರಿಚಿತರು ಹೆಣ್ಣು ಮಕ್ಕಳಿಗೆ ದ್ವಿಚಕ್ರ ವಾಹನದಲ್ಲಿ ಬಂದು ಕೀಟಲೆ ಮಾಡುತ್ತಿರುವವರ ಬಗ್ಗೆ ವಿದ್ಯಾಥರ್ಿನಿಯರು ಮಾಹಿತಿ ನೀಡಿದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ವಾಹನ ನಿಯಮ ಉಲ್ಲಂಘಿಸುತ್ತಿರುವುದರಿಂದಲೇ ದೇಶದಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿದ್ದು ಇದರಿಂದ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ ಎಂದರು.
ವಾಹನ ಚಾಲಕರು ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಇತ್ತೀಚೆಗೆ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿರುವ ವರದಿಗಳು ಬರುತ್ತಿರುವುದರಿಂದ ಅಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ದ ಕಾನೂನು ಪ್ರಕಾರ ಪೋಸ್ಕೋ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾಥರ್ಿಗಳು ಹಾಗೂ ಶಾಲಾ ವಿದ್ಯಾಥರ್ಿಗಳು ರಸ್ತೆ ಸುರಕ್ಷತೆ ಪಾಲನೆಯ ಬಗ್ಗೆ ಪ್ರಶ್ನಿಸಿ ಆರ್.ಟಿ.ಓ ಅಧಿಕಾರಿಯಲ್ಲಿ ಮಾಹಿತಿ ಪಡೆದಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಸಿ.ಎನ್.ಮರುಳಾರಾಧ್ಯ, ಪ್ರಾಂಶುಪಾಲ ವಿ.ವರದರಾಜು, ಪಿ.ಎಸ್.ಐಗಳಾದ ಮಹಾಲಕ್ಷ್ಮಮ್ಮ ಹಾಗೂ ಸುನಿಲ್ ರೋಟರಿ ಸದಸ್ಯರಾದ ಸಿ.ಎಸ್.ಪ್ರದೀಪ್ಕುಮಾರ್, ದೇವರಾಜು ಅಶ್ವತ್ಥ್ನಾರಾಯಣ್, ಮಿಲ್ಟ್ರಿಶಿವಣ್ಣ, ದಾನಪ್ಪ ಉಪಸ್ಥಿತರಿದ್ದರು. 


ಸುಡಗಾಡು ಸಿದ್ದ ಯುವಕರ ಮೇಲೆ ಪಿ.ಎಸ್.ಐ. ಹಲ್ಲೆ: ತಹಶೀಲ್ದಾರ್ಗೆ ದೂರು.
ಚಿಕ್ಕನಾಯಕನಹಳ್ಳಿ,ಸೆ.06 : ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ವಾಸವಿರುವ ಸುಡುಗಾಡು ಸಿದ್ಧರು ಹಾಗೂ ಅಲೆಮಾರಿ ಜನಾಂಗದ ಗುಡಿಸಲುಗಳಿಗೆ  ನುಗ್ಗಿ ಅಕ್ರಮವಾಗಿ ನಾಲ್ವರನ್ನು ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡಿದ ಪಿ.ಎಸ್.ಐ ರವರು ಮಾನವ ಹಕ್ಕು ಉಲ್ಲಂಘನೆ ಮಾಡಿರುವುದರಿಂದ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಕಾಮಾಕ್ಷಮ್ಮನವರಿಗೆ ಅಲೆಮಾರಿ ಬುಡಕಟ್ಟು ಮಹಾಸಭಾ ಮನವಿ ಅಪರ್ಿಸಿದರು.
ಪಟ್ಟಣದ 6ನೇ ವಾಡರ್್ನಲ್ಲಿರುವ ಕೇದಿಗೆಹಳ್ಳಿ ಗುಂಡುತೋಪಿನಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಾಗಿರುವ ಸುಡುಗಾಡು ಸಿದ್ದ ಜನಾಂಗದ ಯುವಕರಾದ ಕುಮಾರ್, ಮಾರಣ್ಣ ನರಸಿಂಹ, ಮಂಜಣ್ಣ ಎಂಬುವವರನ್ನು ವಿನಾಕಾರಣವಾಗಿ ಬಂಧಿಸಿ ಹಲ್ಲೆ ಮಾಡಿ ಗಾಯಗೊಳಿಸಿದರು. ನಮ್ಮನ್ನು ಬಂಧಿಸಿರುವುದು ಏಕೆ ಎಂದು ಪ್ರಶ್ನಿಸಿದರೆ ನಿಮ್ಮ ಮೇಲೆ ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುವುದಲ್ಲದೆ ಯಾವ ಮಾಧ್ಯಮದವರಿಗೂ ತಿಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ, ಇದರಿಂದ ಕೇದಿಗೆಹಳ್ಳಿ ಗುಂಡುತೋಪಿನ ಗುಡಿಸಿಲಿನಲ್ಲಿ ಇರುವ ನಮಗೆ ಜೀವ ಬೆದರಿಕೆಯಿಂದ ಕುಟುಂಬಗಳು ಭಯಭೀತರಾಗಿದ್ದು ಯಾವಾಗ ಬಂಧಿಸುತ್ತಾರೋ ಎಂಬ ಭಯದಲ್ಲಿ ಬದುಕ ಬೇಕಾಗಿದೆ, ವೈದರ ಬಳಿ ಪೋಲಿಸ್ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಚಿಕಿತ್ಸೆ ನೀಡಿ ವೈದ್ಯಕೀಯ ದೃಢೀಕರಣ ಪತ್ರ ನೀಡುವಂತೆ ಕೇಳಿದರೂ ವೈದ್ಯರು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ವಿನಃ ದೃಢೀಕರಣ ಪತ್ರ ಮಾತ್ರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾ ಸಭಾದ ಪದಾಧಿಕಾರಿಗಳಾದ ರಾಜಪ್ಪ, ಡಿ.ಶಾಂತಕುಮಾರ್, ವೆಂಕಟೇಶಯ್ಯ, ರಂಗನಾಥ್ ಸೇರಿದಂತೆ ಹಲವರಿದ್ದರು.


ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಸಹಕಾರಿ

ಚಿಕ್ಕನಾಯಕನಹಳ್ಳಿ,ಸೆ.06 : ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳು ಸಹಕಾರಿ ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಡಾ.ಅಂಭೇಡ್ಕರ್ ಪ್ರೌಢಶಾಲೆಯ ಆವರಣದಲ್ಲಿ 2014-15ನೇ ಸಾಲಿನ ಪರೌಢಶಾಲಾ ಹಂತದ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುರಸಭಾ ಸದಸ್ಯೆ ರೇಣುಕಾ ಮಾತನಾಡಿ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ, ತೀಪರ್ುಗಾರರು ಪ್ರಾಮಾಣಿಕವಾಗಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೆ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕೆಂಬಾಳ್ ಸುರೇಶ್ ಸ್ವಾಗತಿಸಿದರು. ದೇವರಾಜ್ ನಿರೂಪಿಸಿದರು. ರಾಂಪ್ರಸಾದ್ ವಂದಿಸಿದರು.

Friday, September 5, 2014

ಸಾಮಾಜಿಕ  ತಾರತಮ್ಯ ಹೊಗಲಾಡಿಸಿ ಹಳ್ಳಿಗಳ ಅಭಿವೃದ್ದಿಗೆ ಶಿಕ್ಷಕರು ಶ್ರಮಿಸುವುದು ಅಪೇಕ್ಷಣೀಯ: ಶಾಸಕ ಸಿ.ಬಿ.ಎಸ್.

ಚಿಕ್ಕನಾಯಕನಹಳ್ಳಿ,ಸೆ.05 : ಸಮಾಜದ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ, ತಾವು ಹೋಗುವ ಹಳ್ಳಿಗಳ ಅಭಿವೃದ್ದಿ, ಪರಿಸರ ಹಾಗೂ ಹಳ್ಳಿಗಳಲ್ಲಿ ಇರುವ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಲು ಶ್ರಮಿಸುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಕರೆ ನೀಡಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ಡಾ.ರಾಧಾಕೃಷ್ಣನ್ರವರ 127ನೇ ಜನ್ಮದಿನಾಚಾರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚಾರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಶಿಕ್ಷಕರು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು, ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರನ್ನು ಹೊಂದಿದ್ದು ಸಮಾಜ ಶಿಕ್ಷಕರ ಮೇಲೆ ಅಪಾರ ನಂಬಿಕೆ ಇಟ್ಟಿದೆ, ಶಿಕ್ಷಕರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ದಿಯ ಕಡೆ ಗಮನ ಹರಿಸಿ ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ, ಶಿಕ್ಷಕಣ ತಜ್ಞರಾಗಿ, ರಾಷ್ಟ್ರಪತಿಗಳಾಗಿ ಕರ್ತವ್ಯ ನಿರ್ವಹಿಸಿದ್ದರೂ ತಮ್ಮ ಜನ್ಮದಿನಾಚಾರಣೆ ಬದಲಾಗಿ ಶಿಕ್ಷಕರ ದಿನಾಚಾರಣೆ ಆಚರಿಸುವಂತೆ ಹೇಳಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ, ಭಾರತದ ಸಂಸ್ಕೃತಿ ಆದರ್ಶಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಎಂದ ಅವರು ಮಕ್ಕಳ ಸರಿತಪ್ಪುಗಳನ್ನು ತಿದ್ದುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ.ಅಧ್ಯಕ್ಷೆ ಲತಾ ಕೇಶವಮೂತರ್ಿ ಮಾತನಾಡಿ ಶಿಕ್ಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಹೇಳುವ ಮೂಲಕ ಮಕ್ಕಳ ಸವರ್ಾಂಗೀಣ ಅಭಿವೃದ್ದಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಿ, ಸರಿಯಾಗಿ ಕರ್ತವ್ಯ ನಿಭಾಯಿಸದೆ ಹೋದರೆ ಮಕ್ಕಳಿಗೆ ದ್ರೋಹ ಮಾಡಿದಂತಾಗುತ್ತದಲ್ಲದೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತೊಡೆದು ಹಾಕುವುದು ಶಿಕ್ಷಕರ ಕರ್ತವ್ಯ ಎಂದರು.
ಪುರಸಭಾಧ್ಯಕ್ಷೆ ಪುಷ್ಟ.ಟಿ.ರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯೆ ಹೇಮಾವತಿ, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಜಿ.ಪ್ರಾ.ಶಾ.ಶಿ.ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ದೈ.ಶಿ.ಸಂಘದ ಅಧ್ಯಕ್ಷ ಚಿ.ನಾ.ಪುರುಷೋತ್ತಮ್, ಸಿಡಿಪಿಓ ಅನೀಸ್ಖೈಸರ್, ತಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಶಿಕ್ಷಕರಾದ ಹೆಚ್.ಎಂ.ಸುರೇಶ್, ತಿಮ್ಮರಾಯಪ್ಪ, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.
ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿದರೆ ಎಸ್.ಸಿ. ನಟರಾಜ್ ನಿರೂಪಿಸಿದರು. ಕೃಷ್ಣಯ್ಯ ವಂದಿಸಿದರು.
ತಾಲ್ಲೂಕು ಪ್ರವಾಸಿ ಮಂದಿರದಿಂದ ಹೊರಟ ಸರ್ವಪಲ್ಲಿ ರಾಧಾಕೃಷ್ಣನ್ರವರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಬಿ.ಹೆಚ್.ರಸ್ತೆ ನೆಹರು ವೃತ್ತದ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಕರ್ಾರಿ ಪ್ರೌಢಶಾಲಾ ಆವರಣಕ್ಕೆ ತೆರಳಿತು.
ಸಮಾರಂಭದಲ್ಲಿ ನಿವೃತ್ತಿ ಹೊಂದಿದ 33 ಶಿಕ್ಷಕರನ್ನು ಹಾಗೂ 13ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ 26ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.

ರೈತರ ನೆರವಿಗೆ ಡಿ.ಸಿ.ಸಿ.ಬ್ಯಾಂಕ್ನಿಂದ ನೂತನ ಯೋಜನೆ: ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ,ಸೆ.05 : ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರು ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ನೆರವಾಗಲು ಸಾಲ ನೀಡಿದ ಸಹಕಾರ ಸಂಸ್ಥೆಗಳಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಒಂದು ಲಕ್ಷ ರೂಗಳನ್ನು ತುಂಬಿ ಕೊಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲ್ಲೂಕಿನ ಮತಿಘಟ್ಟದ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಡಿಸಿಸಿ ಬ್ಯಾಂಕ್ನ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು ಯೋಜನೆಯೂ ಈ ವರ್ಷದಿಂದಲೇ ಆರಂಭವಾಗಲಿದೆ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘದ ಸದಸ್ಯರುಗಳ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದೇ ಸೆಪ್ಟಂಬರ್ 10ನೇ ತಾರೀಖಿನೊಳಗೆ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅಜರ್ಿ ಸಲ್ಲಿಸುವಂತೆ ತಿಳಿಸಿದರು.
ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳಿಗೆ ಮಾತ್ರ ಸಾಲ ನೀಡುತ್ತಿದ್ದ ಡಿಸಿಸಿ ಬ್ಯಾಂಕ್, ಆರಂಭಿಸಿರುವ ಯೋಜನೆಯಲ್ಲಿ ಜಂಟಿ ಭದ್ರತಾ ಯೋಜನೆಯೂ ಒಂದಾಗಿದ್ದು ವ್ಯಾಪಾರ ಮಾಡುತ್ತಿರುವವರು ಸಂಘ ರಚಿಸಿಕೊಂಡರೆ ಅವರಿಗೂ ಸಾಲದ ನೆರವು ನೀಡುವ ಮೂಲಕ ವ್ಯಾಪಾರಸ್ಥರ ಏಳಿಗೆಗೂ ಮುಂದಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗಾಗಿ ಕಿಸಾನ್ ಕ್ರೆಡಿಟ್ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ ಎಂದರಲ್ಲದೆ ಮತಿಘಟ್ಟ ಸಹಕಾರ ಸಂಘಕ್ಕೆ ಸಾಲವಾಗಿ 12.90ಲಕ್ಷ ರೂ ಸಾಲವನ್ನು ವಿತರಿಸಲಾಗಿದೆ ಎಂದರು. ಹಿಂದಿನಿಂದಲೂ ಮತಿಘಟ್ಟ ಸಹಕಾರ ಸಂಘ ಉತ್ತಮ ರೀತಿಯಲ್ಲಿ ಆಡಳಿತವನ್ನು ನಡೆಸಿಕೊಂಡು ಬಂದಿದ್ದು, ಒಂದಕ್ಕೊಂದು ಸಂಘ ಸಂಸ್ಥೆಗಳು ಸಹಕಾರ ನೀಡಿದಾಗ ಆ ಭಾಗದ ಸಂಘ, ಸಂಸ್ಥೆಗಳು ರೈತರು, ಬಡವರನ್ನು ಆಥರ್ಿಕವಾಗಿ ಮೇಲೆತ್ತಲು ಸಹಾಯ ಮಾಡುತ್ತವೆ ಎಂದರು.
ಮತಿಘಟ್ಟ ಭಾಗದ ಎಲ್ಲಾ ಹಳ್ಳಿಗಳ ರೈತರಿಗೂ ಸಾಲದ ಯೋಜನೆ ಅನುಕೂಲವಾಗಲು ಮುಂದೆಯೂ ಹೊಸ ಸಾಲ ನೀಡಲಾಗುವುದು, ಸಾಲ ಪಡೆದವರು ಮರು ಪಾವತಿ ಮಾಡಿದರೆ ಇನ್ನಷ್ಟು ಸಾಲವನ್ನು ನೀಡಬಹುದು ಎಂದರಲ್ಲದೆ ಹೊಸದಾಗಿ ಬಂದಂತಹ ಸಕರ್ಾರಗಳು ಸಾಲ ಪಡೆದ ರೈತರಿಗೆ ನೆರವಾಗಲೂ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ನೆರವಾಗುತ್ತಿವೆ, ಅದೇ ರೀತಿ ಪ್ರತಿ ರೈತರಿಗೂ ಬ್ಯಾಂಕ್ ವತಿಯಿಂದ ಸಾಲ ನೀಡಿ ಅವರಿಗೆ ಸಕರ್ಾರದಿಂದ ಸಿಗುವ ಅನುಕೂಲ ನೀಡುವುದು ಬ್ಯಾಂಕಿನ ಗುರಿಯಾಗಿದೆ ಎಂದರಲ್ಲದೆ ಸಾಲ ಪಡೆದವರು ವ್ಯವಸಾಯದ ಜೊತೆ ಉಪಕಸುಬುಗಳನ್ನು ಮಾಡುವಂತೆ ಅದಕ್ಕೆ ಬೇಕಾದ ಸಹಾಯವನ್ನು ಬ್ಯಾಂಕ್ ಹಾಗೂ ಸೊಸೈಟಿಯಿಂದ ನೀಡುವುದಾಗಿಯೂ ತಿಳಿಸಿದರು.
ಮತಿಘಟ್ಟ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ರೈತರು ಆಥರ್ಿಕವಾಗಿ ಸದೃಢವಾಗಲು ಜಿಲ್ಲಾ ಬ್ಯಾಂಕ್ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಸಾಲ ಪಡೆದವರು ಮರುಪಾವತಿ ಮಾಡಿದರೆ ಮತ್ತಷ್ಟು ಹೆಚ್ಚಿನ ಸಾಲ ಪಡೆಯಬಹುದು ಎಂದು ತಿಳಿಸಿದ ಅವರು ಕಾಮಲಾಪುರದಲ್ಲಿ ಸಹಕಾರ ಸಂಘದ ಕಟ್ಟಡ ಕಟ್ಟಿಸುವ ಯೋಜನೆಯಿದ್ದು ಇದಕ್ಕೆ ಡಿ.ಸಿ.ಸಿ.ಬ್ಯಾಂಕ್ನ ಸಹಕಾರದ ಅಗತ್ಯವಿದೆ ಎಂದು ತಿಳಿಸಿದರು.
ತಾ.ಪಂ.ಸದಸ್ಯ ನಿರಂಜನಮೂತರ್ಿ ಮಾತನಾಡಿ ಸಹಕಾರ ಸಂಘಗಳು ಅಕ್ಕಿ, ಗೋಧಿ ಕೊಡಲು ಮಾತ್ರ ಸೀಮಿತವಲ್ಲ, ರೈತರ ಸಂಕಷ್ಟಕ್ಕೆ ನೆರವಾಗಲು ಸಾಲ ಸೌಲಭ್ಯವನ್ನು ನೀಡುತ್ತದೆ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಸಹಕಾರದಿಂದ ಮತಿಘಟ್ಟ ಸಹಕಾರ ಸಂಘ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದರಲ್ಲದೆ ರೈತರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಪರದಾಡುತ್ತಾರೆ ಆದರೆ ಜಿಲ್ಲಾ ಬ್ಯಾಂಕ್ ಮೂಲಕ ಸಹಕಾರ ಸಂಘಗಳಲ್ಲಿ ಬಡ್ಡಿರಹಿತ ಸಾಲವನ್ನು ಸುಲಭವಾಗಿ ಪಡೆಯತ್ತಿರುವ ಬಗ್ಗೆ ತಿಳಿಸಿದ ಅವರು ಸಾಲ ಪಡೆದಂತೆ ಮರುಪಾವತಿ ಮಾಡುವುದು ರೈತರ ಕರ್ತವ್ಯವಾಗಿದೆ ಎಂದರು.
ರೈತ ಕರಿಯಪ್ಪ ಮಾತನಾಡಿ ಜಿಲ್ಲಾ ಬ್ಯಾಂಕಿನಿಂದ ರೈತರಿಗೆ ಪ್ರತಿ ವರ್ಷ ನೀಡುವ ಸಾಲದ ಯೋಜನೆಯು ವಿಸ್ತಾರವಾಗುತ್ತಿದೆ, ಸಹಕಾರ ಸಂಘಗಳು ನೀಡುತ್ತಿರುವ ಸಾಲದಿಂದ ಹಲವು ಕುಟುಂಬಗಳು ಆಥರ್ಿಕವಾಗಿ ಸದೃಢವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ.ಬ್ಯಾಂಕ್ನ  ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಸ್ಥಳೀಯ ಸಹಕಾರ ಬ್ಯಾಂಕಿನ ನಿದರ್ೇಶಕರಾದ ಮಲ್ಲಿಕಣ್ಣ, ಸಿ.ಇ.ಓ ಹನುಮಂತಪ್ಪ, ಮತ್ತಿತರರು ಉಪಸ್ಥಿತರಿದ್ದರು.



ಹಾಡುಹಗಲೇ ಮನೆ ಬಾಗಿಲು ಹೊಡೆದು ಮೂರುವರೆ ಲಕ್ಷ ರೂಗಳಿಗೂ ಅಧಿಕ ಮೌಲ್ಯದ ನಗದು ಆಭರಣ ಕಳವು.
ಚಿಕ್ಕನಾಯಕನಹಳ್ಳಿ,ಸೆ.05:  ಪಟ್ಟಣದ ಕೋಟರ್್ ಹಿಂಭಾಗದಲ್ಲಿನ ನಸರ್್ ಮನೆಯೊಂದರಲ್ಲಿ ಹಾಡುಹಗಲೇ ಸುಮಾರು 3.5ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಹಾಗೂ ಬಂಗಾರದ ಆಭರಣಗಳು ಕಳವಾಗಿರುವ ಪ್ರಕರಣ ನಡೆದಿದೆ.
ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ನಸರ್್ ಆಗಿರುವ ವಿಶಾಲಕ್ಷಮ್ಮ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರು ಸೆ.5ರಂದು ಮಧ್ಯಾಹ್ನ ಸಹದ್ಯೋಗಿಯ ಮಗಳ ನಿಶ್ಚಿಥಾರ್ತಗೆಂದು  ತೆರಳಿದ್ದ ಸಂದರ್ಭದಲ್ಲಿ ಮನೆಯ ಹಿಂಭಾಗಿಲನ್ನು ಬಲವಾದ ಆಯುಧದಿಂದ ಮೀಟಿ ಬಾಗಿಲಿನ ಡೋರ್ ಲಾಕ್ ಹೊಡೆದು ಕೊಠಡಿಯಲ್ಲಿಟ್ಟಿದ್ದ ಬೀರುವಿನಲ್ಲಿದ್ದ ಎರಡುವರೆ ಲಕ್ಷ ರೂ ನಗದು ಹಾಗೂ ನಾಲ್ಕು ಜೊತೆ ಬಂಗಾರದ ಓಲೆಗಳನ್ನು ಕಳವು ಮಾಡಿದ್ದಾರೆ ಎಂದು ಮನೆಯ ಮಾಲೀಕ ಶಿವನಂದಯ್ಯ ತಿಳಿಸಿದರು.
ಈಗಿರುವ ಮನೆಯ ಮಹಡಿ ಮೇಲೆ  ಮೇಲೆ ನೂತನ ಮನೆಯನ್ನು ಕಟ್ಟಲೆಂದು ತಮ್ಮ ಉಳಿತಾಯದ ಹಣವನ್ನು  ನಿನ್ನೆಯಷ್ಟು ತಂದು ಮನೆಯಟ್ಟುಕೊಂಡಿದ್ದಾಗಿ ವಿಶಾಲಮ್ಮ ಹೇಳಿದ್ದರೆ, ಸ್ಥಳಕ್ಕೆ ಸಿ.ಪಿ.ಐ.ಜಯಕುಮಾರ್, ಪಿ.ಎಸ್.ಐ.ಮಹಾಲಕ್ಷ್ಮಮ್ಮ ಹಾಗೂ ಶ್ವಾನ ದಳ ಭೇಟಿ ನೀಡಿತ್ತು. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Thursday, September 4, 2014


ಗರ್ಭದಿಂದ ಘೋರಿಯವರಿಗೆ ಕಾನೂನು ಅನ್ವಯಿಸುತ್ತದೆ
ಚಿಕ್ಕನಾಯಕನಹಳ್ಳಿ,ಸೆ.04 : ಗರ್ಭದಿಂದ ಘೋರಿಯವರಿಗೆ ಕಾನೂನು ಅನ್ವಯಿಸುತ್ತದೆ ಆದ್ದರಿಂದ ಕಾನೂನಿನ ಬಗ್ಗೆ ಎಲ್ಲರೂ ಅರಿವು ಪಡೆದುಕೊಳ್ಳುವುದು ಅವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ಎನ್.ಆರ್.ಲೋಕಪ್ಪ ಹೇಳಿದರು.
   ಪಟ್ಟಣದ ತಾಲ್ಲೂಕ್ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಂಯುಕ್ತ ಆಶ್ರಯದಲ್ಲಿ ಅಪೌಷ್ಠಿಕತೆ ಮತ್ತು ಮರಳಿ ಬಾ ಶಾಲೆಗೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ನಮ್ಮ ದೇಶದ ಅತ್ಯುನ್ನತ ಸಂವಿದಾನ ಪಡೆದಿದ್ದು ಪ್ರತಿಯೊಬ್ಬ ಪ್ರಜೆಯು ಗೌರವದಿಂದ ಜೀವಿಸುವ ಹಕ್ಕನ್ನು ಹೊಂದಿದ್ದು ಜಾತಿ, ಬೇದ, ಪಂಥ, ಹೆಣ್ಣು, ಗಂಡು ಎಂಬ ಬೇದಬಾವವಿಲ್ಲದೇ ಜೀವಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ತಾಯಿ ಗರ್ಭದಿಂದ ಹಿಡಿದು ಸಾಯುವವರೆಗೂ ಕಾನೂನು ನಮಗೆ ಅನ್ವಯವಾಗುತ್ತದೆ. ತಾಯಂದಿರು ಸರಿಯಾದ ಪೌಷ್ಠಿಕಾಂಶದ ಅಹಾರ ಸೇವಿಸದೆ ಹೋದರೆ ಹುಟ್ಟಿದ ಮಕ್ಕಳು ಅಂಗವಿಕಲತೆ, ಬುದ್ದಿಮಾಂದ್ಯ ಮಕ್ಕಳು ಹುಟ್ಟುವುದರಿಂದ ತಂದೆ-ತಾಯಿ ಹಾಗೂ ಸಮಾಜಕ್ಕೂ ಹೊರೆಯಾಗುತ್ತಾರೆ. 
ಉಚ್ಚನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಅಪೌಷ್ಠಿಕತೆಯಿಂದ ನರಳುತ್ತಿರುವ ಗಭರ್ಿಣಿ ಸ್ರೀಯರಿಗೆ ಮಕ್ಕಳಿಗೆ ಪೌಷ್ಠಿಕಾಂಶವಿರುವ ಅಹಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತರಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಗಭರ್ಿಣಿ ಸ್ತ್ರೀಯರಿಗೆ ಮೊಳಕೆಕಾಳು ಹಾಗೂ ಪೌಷ್ಠಿಕಾಂಶವಿರುವ ಹಣ್ಣುಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಮಕ್ಕಳು ಹುಟ್ಟುತ್ತಾರೆ. ಹುಟ್ಟಿದ ಮಗುವಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿ ಉತ್ತಮ ವ್ಯಕ್ತಿಗಳಾಗುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಸರಿಯಾಗಿ ಪೋಷಿಸಿ ಇಲ್ಲದೇ ಹೋದರೆ ಮಕ್ಕಳು ಸಮಾಜ ಘಾತುಕರಾಗುತ್ತಾರೆ ಎಂದ ಅವರು ಕೆಲವರು ಹಣ ಮಾಡುವ ದೃಷ್ಠಿಯಿಂದ ಕಲಬೆರಕೆ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಅರೋಗ್ಯದ ಮೇಲೆ ದುಶ್ಟಪರಿಣಾಮ ಉಂಟಾಗುತ್ತದೆ  ಎಂದು ತಿಳಿಸಿದರು. 
ನ್ಯಾಯಾದೀಶರಾದ ಎನ್. ವೀಣಾ ಮಾತಾನಾಡಿ ಎರಡು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯ ಅಪೌಷ್ಠಿಕ ಮಕ್ಕಳ ಬಗ್ಗೆ ವರದಿ ಬಂದ ಹಿನ್ನಲೆಯಲ್ಲಿ ಕೆಲವು ಎನ್.ಜಿ.ಒ. ಸಂಘಟನೆಗಳು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿದ ನಂತರ ಉಚ್ಚನ್ಯಾಯಾಲಯ ನ್ಯಾಯಾಧೀಶರ ಸಮಿತಿ ರಚಿಸಿ ವರದಿಯನ್ನು ತರಿಸಿಕೊಂಡ ನಂತರ ವಿವಿಧ ಇಲಾಖೆಗಳ ಸಮಿತಿಯನ್ನು ರಚಿಸಿ ಗಭರ್ೀಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ನೀಡುವಂತೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಸಕರ್ಾರ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನ್ಯಾಯಂಗ ಇಲಾಖೆ ಕೈಜೋಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
   ಸಿ.ಡಿ.ಪಿ.ಓ. ಅನಿಸ್ ಖೈಸರ್ ಮಾತನಾಡಿ ತಾಲ್ಲೂಕಿನಲ್ಲಿ 205 ಮಕ್ಕಳು ಅಪೌಷ್ಠಿಕತೆಯಿಂದ ನರಳಿದ್ದು ಇವರಿಗೆ ಉತ್ತಮ ಪೌಷ್ಠಿಕಾಂಶದ ಅಹಾರ ಹಾಗೂ ಸಲಹೆ ಹಾಗೂ ಚಿಕಿತ್ಸೆ ನೀಡುವುದರಿಂದ ಮಕ್ಕಳು ಗುಣಮುಖಾರಾಗಿದ್ದು ಇನ್ನು 85 ಮಕ್ಕಳಿಗೆ ಚಿಕಿತ್ಸೆ ಹಾಗೂ ಪೌಷ್ಠಿಕ ಅಹಾರ ನೀಡಲಾಗುತ್ತಿದೆ, ಗಬರ್ಿಣಿ ಸ್ರೀಯರು ಮೂಢ ನಂಬಿಕೆಗೆ ಮಾರು ಹೋಗದೇ ಉತ್ತಮ ಅಹಾರ ಸೇವಿಸಿ, ಹುಟ್ಟಿದ ಮಗು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಸ್ತ್ರೀಯರ ಕರ್ತವ್ಯ  ಎಂದರಲ್ಲದೆ ಜಿಲ್ಲೆಯಲ್ಲಿ 1000 ಗಂಡು ಮಕ್ಕಳು 977 ಜನ ಹೆಣ್ಣುಮಕ್ಕಳಿದ್ದಾರೆ ಇದರಿಂದ ಹೆಣ್ಣು ಮಕ್ಕಳ ಕೊರತೆಯಿದೆ ಅದ್ದರಿಂದ  ತಂದೆ ತಾಯಂದಿರಿಗೆ ಹೆಣ್ಣುಮಕ್ಕಳ ಬಗ್ಗೆ ಇರುವ ತಾತ್ಸಾರ ಮನೋಭಾವ ಹೋಗಬೇಕು ಎಂದರು.
  ಕಾರ್ಯಕ್ರಮದಲ್ಲಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ, ಸಿ.ಬಿ.ಸಂತೋಷ್, ವಕೀಲರ ಸಂಘದ ಉಪಾದ್ಯಾಕ್ಷ ಹೆಚ್.ಎಸ್.ಜ್ಞಾನಮೂತರ್ಿ, ಬಿ.ಇ.ಒ.ಸಾ.ಚಿ.ನಾಗೇಶ್, ಸಿ.ಪಿ.ಐ.ಜಯಕುಮಾರ್, ಉಪತಹಸೀಲ್ದಾರ್ ದೊಡ್ಡಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.
    ಮಾಲತಿ ಪ್ರಾಥರ್ಿಸಿದರು. ವಕೀಲ ಲೋಕೇಶ್ ನಿರೂಪಿಸಿದರು. ವಕೀಲ ದಿಲೀಪ್ ಸ್ವಾಗತಿಸಿ ವಂದಿಸಿದರು.

ಸೃಜನಶೀಲ ಬರವಣಿಗೆ ನೀಡುತ್ತಿದ್ದ ಲೇಖಕ

ಯು.ಆರ್.ಅನಂತಮೂತರ್ಿ
ಚಿಕ್ಕನಾಯಕನಹಳ್ಳಿ,ಆ.04 : ಸೃಜನಶೀಲ ಬರವಣಿಗೆ, ತಮ್ಮ ಕೃತಿಗಳ ಮೂಲಕ ಸಮಕಾಲೀನ ವಾಸ್ತವಗಳನ್ನು ಓದುಗರಿಗೆ ನೀಡಿದ ಲೇಖಕ ಯು.ಆರ್.ಅನಂತಮೂತರ್ಿ ಎಂದು ನವೋದಯ ಪ್ರಥಮ ದಜರ್ೆ ಕಾಲೇಜಿನ ಕನ್ನಡ ಉಪನ್ಯಾಸಕ ರವಿಕುಮಾರ್.ಸಿ. ಹೇಳಿದರು.
ತಾಲ್ಲೂಕಿನ ಹಂದನಕೆರೆ ಜಿವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಹಂದನಕೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅನಂತ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನಾತನ ಪರಂಪರೆಯನ್ನು ಸಮಕಾಲೀನಗೊಳಿಸುವ ಪ್ರಯತ್ನದಲ್ಲಿ ಅನಂತ್ಕುಮಾರ್ರವರು ತಮ್ಮ ಕಾದಂಬರಿಗೆ ಹೊಸತನ ಅಂಶಗಳ ದಾರಿ ಮಾಡಿದರು ಎಂದ ಅವರು ಈ ನೆಲದ ಪ್ರೀತಿ, ದ್ವೇಷ ಎರಡನ್ನೂ ಕಂಡ ಅವರ ಬರವಣಿಗೆ ಪ್ರತಿಯೊಬ್ಬ ವಿದ್ಯಾಥರ್ಿಗೆ ದಾರಿದೀಪವಾಗಬೇಕೆಂದರು. ಬದುಕು ರೂಪಿಸಿಕೊಂಡ ಬಗ್ಗೆ ಅನಂತಮೂತರ್ಿಯವರ ಜೀವನ ಶೈಲಿ, ಆತ್ಮವಿಶ್ವಾಸ ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದು ನುಡಿದರು. ವಿಮರ್ಶಕರಾದ ಮೂತರ್ಿಯವರು ಕನ್ನಡದ ಪಂಪನಿಂದ, ಸಾಹಿತ್ಯದ ಅನೇಕ ಬರಹಗಾರರ ಜೊತೆ ಸಂಬಂಧವಿಟ್ಟುಕೊಂಡು ಅದರ ಪಯಣ ರಾಜಕೀಯವನ್ನು ಬೆಸೆದುಕೊಂಡ ಕೊಂಡಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಸಾಹಿತ್ಯ, ವಿಚಾರಾಧಾರೆಗಳು ಇಂದಿನ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅನಂತಮೂತರ್ಿರವರ ಬರವಣಿಗೆ ಸ್ಮರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಣ್ಣ, ಅನಂತಮೂತರ್ಿ ಈ ನಾಡು ಕಂಡ ಅನನ್ಯ ಚೇತನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೋಬಳಿ ಕಸಾಪ ಅಧ್ಯಕ್ಷ ಅನಂತಯ್ಯ, ಕಾರ್ಯದಶರ್ಿ ಮಂಜುನಾಥ್, ಆರ್.ಶಿವಣ್ಣ, ರಾಜೇಂದ್ರಕುಮಾರ್ ಮತ್ತು ಕಾಲೇಜು, ಪ್ರೌಢಶಾಲಾ ಶಿಕ್ಷಕರು, ವಿದ್ಯಾಥರ್ಿಗಳು ಭಾಗವಹಿಸಿದ್ದರು.