Monday, September 5, 2011







ಮೌಢ್ಯತೆಯಿಂದ ದೂರವಾಗಿ, ಶಿಕ್ಷಣ ಪಡೆಯುವುದರೊಂದಿಗೆ ಮುಖ್ಯವಾಹಿನಿಗೆ ಬನ್ನಿ
ಚಿಕ್ಕನಾಯಕನಹಳ್ಳಿ,ಸೆ.05 : ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವ ಮೂಲಕ ಇಂದಿನ ಸ್ಪಧರ್ಾತ್ಮಕ ಯುಗಕ್ಕೆ ಸಮಾಜದ ಮಕ್ಕಳನ್ನು ಅಣಿಗೊಳಿಸುವ ಮೂಲಕ ಭವಿಷ್ಯದ ಯಾದವ ಸಮಾಜವನ್ನು ಕಟ್ಟಲು ಮುಂದಾಗಿರಿ ಎಂದು ಚಿತ್ರದುರ್ಗ ಕೃಷ್ಣ ಯಾದವ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣಯಾದವಾನಂದಸ್ವಾಮಿ ಹೇಳಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಯಾದವ ವಿದ್ಯಾಥರ್ಿ ನಿಲಯದ ಶಂಕುಸ್ಥಾಪನೆ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಹು ವರ್ಷಗಳಿಂದ ಮೌಢ್ಯತೆ ಆವರಿಸಿಕೊಂಡಿರುವ ಈ ಸಮಾಜಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಸುವ ಜೊತೆಗೆ ಶಿಕ್ಷಣದಿಂದ ಅಭಿವೃದ್ದಿ ಹೊಂದಿರುವ ಯುವಕ ಪಡೆಯನ್ನು ಮಾದರಿಯಾಗಿಟ್ಟುಕೊಂಡು ಸಮಾಜವನ್ನು ಕಟ್ಟಲು ಅಣಿಯಾಗುವುದಾಗಿ ತಿಳಿಸಿದ ಅವರು ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗುವ ಮೂಲಕ ಸಂಘ ಶಕ್ತಿಯನ್ನು ಪ್ರದಶರ್ಿಸುವ ಕಾಲ ಬಂದೊದಗಿದೆ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಸಮಾಜವನ್ನು ಕಟ್ಟಲು ಶ್ತಮಿಸುತ್ತೇನೆ ಎಂದರು. ಹಾಸ್ಟಲ್ ಕಟ್ಟಲು ಶಾಸಕರಾದ ಸಿ.ಬಿ.ಸುರೇಶ್ ಬಾಬು ಮೂರು ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದ್ದು ಅವರ ಸಕರ್ಾರಿ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಕೊಡುವಂತೆ ಕೋರಲಾಗುವುದು ಎಂದರು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಎರಡು ಲಕ್ಷ ರೂಗಳನ್ನು ಕೊಡುವುದಾಗಿ ವಾಗ್ದಾನವನ್ನು ನೀಡಿದ್ದಾರೆ ಇಲ್ಲಿನ ಸಮಾಜದ ಮುಖಂಡರು ಘೋಷಿಸಿರುವ ಹಣವನ್ನು ಸಂಗ್ರಹಿಸುವ ಜೊತೆಗೆ ಅದನ್ನು ಯೋಗ್ಯ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಹೋಗಬೇಕು ಎಂದರಲ್ಲದೆ ಪಾದಯಾತ್ರೆ ಮೂಲಕ ಇನ್ನಷ್ಟು ಹಣ ಸಂಗ್ರಹಿಸಲಾಗುವುದು ಎಂದರು. ಮಾಜಿ ಸಚಿವ ಎ.ಕೃಷ್ಣಪ್ಪ ಮಾತನಾಡಿ ಪ್ರತಿಯೊಂದು ಸಮಾಜ ಬೆಳೆಯಲು ಶಿಕ್ಷಣ ಅತ್ಯಗತ್ಯವಾಗಿದ್ದು ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಪ್ರತಿಯೊಬ್ಬರು ಮುಂದಾಗಬೇಕಾಗಿದೆ, ನಮ್ಮ ಜನಾಂಗದವರಿಗೆ ಶಿಕ್ಷಣಕ್ಕಾಗಿ ಕೇವಲ ಭಾರತದಾದ್ಯಂತ 16ರಷ್ಟು ಹಾಸ್ಟಲ್ಗಳಿವೆ ಎಂದರಲ್ಲದೆ, ಜಿಲ್ಲಾ ಮಟ್ಟದಲ್ಲಿ ಸಮಾಜದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ ಒಂದು ಲಕ್ಷರೂ ತಾಲ್ಲೂಕು ಮಟ್ಟದಲ್ಲಿ ರೂಪುಗೊಳ್ಳುವ ಹಾಸ್ಟಲ್ಗಳಿಗೆ 50ಸಾವಿರ ರೂ ನೀಡಲಿದ್ದು ಈಗ ರೂಪುಗೊಳ್ಳುತ್ತಿರುವ ಹಾಸ್ಟಲ್ಗೆ ತಾನು ಒಂದು ಲಕ್ಷ ಹಣ ನೀಡುವುದಾಗಿ ಆ ಹಣವನ್ನು ಹಾಸ್ಟಲ್ ಕಾಮಗಾರಿಯ ಅಭಿವೃದ್ದಿ ನೋಡಿ ನೀಡುತ್ತೇನೆ ಎಂದರು. ಕನರ್ಾಟಕ ರಾಜ್ಯದಲ್ಲಿ ಮಠಗಳು ನೀಡುತ್ತಿರುವ ಶಿಕ್ಷಣಾಸಕ್ತಿಯಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು ಮಠ ಮಾನ್ಯಗಳು ಈ ರೀತಿಯಲ್ಲಿ ಮಾಡುತ್ತಿರುವ ಸೇವೆಯನ್ನು ನಾವು ಪ್ರಶಂಸಿಸಲೇ ಬೇಕಾಗಿದೆ ಎಂದರಲ್ಲದೆ ಭಾರತದಾದ್ಯಂತ ಯಾದವ ಸಮಾಜ ಅತಿ ಹೆಚ್ಚು ಜನಸಂಖ್ಯೆಯಲ್ಲಿದ್ದು ಇವರೆಲ್ಲಾ ಒಗ್ಗೂಡಿದರೆ ಸಮಾಜ ಅಭಿವೃದ್ದಿ ಸಾಧ್ಯ ಎಂದರು.ವಿರೋದ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಯಾದವ ಸಮಾಜದಲ್ಲಿ ಗುರಿ ಮತ್ತು ಗುರು ಒಟ್ಟಿಗೆ ದೊರಕಿರುವುದು ಉತ್ತಮ ಸಂಗತಿ, ಸಮಾಜವನ್ನು ಬೆಳಸಬೇಕಾದರೆ ಸ್ವಾಮೀಜಿಯ ಮಾರ್ಗದರ್ಶನದಂತೆ ಮುನ್ನೆಡೆಯಬೇಕಾಗಿದ್ದು ಜನಾಂಗದಲ್ಲಿರುವ ಮೂಲಭೂತ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಒಗ್ಗಟ್ಟಾಗಬೇಕು ಎಂದರು. ಯಾದವ ಸಮಾಜದ ಬಗ್ಗೆ ಮೈಸೂರು ವಿಶ್ವವಿದ್ಯಾಲಯ ಕುಲ ಶಾಸ್ತ್ರ ಅಧ್ಯಯನ ನಡೆಸುತ್ತಿದ್ದು, ಸಕರ್ಾರಕ್ಕೆ ಈ ವರದಿ ಬಂದನಂತರ ಸದನದಲ್ಲಿ ಚಚರ್ಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ಅರಿವನ್ನು ಮೂಡಿಸುವವರೇ ನಮ್ಮ ಗುರು ಅವರ ಮಾರ್ಗದರ್ಶನದಂತೆ ಸಂಘಟನೆಯನ್ನು ಬೆಳೆಸಿದಾಗ ಸಮಾಜದ ಛಾಪನ್ನು ಮೂಡಿಸಬಹುದಾಗಿದೆ, ಹಲವು ವರ್ಷಗಳ ಹಿಂದೆಯೇ ಶಿಕ್ಷಣದ ಬಗ್ಗೆ ಚಿಂತಿಸಬೇಕಾಗಿದ್ದು ಈಗಲಾದರೂ ನಾವೆಲ್ಲರೂ ಶಿಕ್ಷಣ ಕ್ರಾಂತಿಯನ್ನು ಮೊಳಗಿಸೋಣ ಎಂದರು.ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಹಾಸ್ಟಲ್ ಸೌಲಭ್ಯಕ್ಕೆ ಈಗ ದೊರಕಿರುವ ಸಹಾಯ ಧನವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.. ಸಮಾರಂಭದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಅಕ್ಕಲಪ್ಪಯಾದವ್, ಜಿ.ಪಂ.ಸದಸ್ಯರಾದ ಹೆಚ್. ಬಿ.ಪಂಚಾಕ್ಷರಿ, ಲೋಹಿತಾಬಾಯಿ, ನಿಂಗಮ್ಮ ರಾಮಯ್ಯ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ತಾ.ಪಂ.ಸಸ್ಯರುಗಳಾದ ಜಗದೀಶ್, ಲತಾಕೇಶವಮೂತರ್ಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಡಿ.ಸಿ.ಸಿ. ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸತೀಶ್ಸಾಸಲು, ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಗೋವಿಂದಯ್ಯ ಸ್ವಾಗತಿಸಿದರು.

ಶಿಕ್ಷಕ ಎಸ್.ಕೆ.ವಿಜಯ ಕುಮಾರ್ ನಿರೂಪಿಸಿದರು.ದೇಶದ ಭವಿಷ್ಯವನ್ನು ಶಾಲಾ ಕೊಠಡಿಯಲ್ಲಿ ಯೋಜಿಸುವವನೆ ಶಿಕ್ಷಕ: ಎನ್.ಎನ್.

ಚಿಕ್ಕನಾಯಕನಹಳಳಿ,ಸೆ.05: ಶಿಕ್ಷಕರು ಶಾಲೆಗಳಲ್ಲಿ ಬೋಧನೆ ಜೊತೆಗೆ ಮಕ್ಕಳ ಮನಸ್ಸನ್ನು ಕಟ್ಟಲು ಮುಂದಾದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬಹುದು ಎಂದು ಚಿಕ್ಕನಹಳ್ಳಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ನಾಗಪ್ಪ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಪಟ್ಟಣದ ಸಕರ್ಾರಿ ಪ್ರೌಡಾಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಕೃಷ್ನನ್ರವರ 123ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚಾರಣೆಯಲ್ಲಿ ಮಾತನಾಡಿ 5,6 ನೇ ವರ್ಷದ ಮಕ್ಕಳಲ್ಲಿ ಅಗಾದವಾದ ಜ್ಞಾಪನಾಶಕ್ತಿ ಇದ್ದು 2000 ಪದಗಳನ್ನು ಸಂಗ್ರಹಿಸುವ ಶಕ್ತಿ ಇರುತ್ತದೆ. ಇಂತಹ ಮಕ್ಕಳಿಗೆ ನಮ್ಮ ನೆಲದ ಸಂಸ್ಕೃತಿಯಾದ ಜಾನಪದ ಕಲೆಗಳು, ನೃತ್ಯ, ಕೋಲಾಟ ಸುಗ್ಗಿ ಕುಣಿತ ಇವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ, ಟಿ.ವಿ. ಮಾಧ್ಯಮಗಳು ನಮ್ಮ ಯುವ ಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಿನಿಮಾ ಹಾಗೂ ಟಿವಿ ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳನ್ನು ಪ್ರತಿಭೆಯ ಹೆಸರಿನಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದ್ದರೂ ಇದನ್ನು ಪ್ರತಿಭಟಿಸುವ ಶಕ್ತಿ ನಮ್ಮ ಹೆಣ್ಣು ಮಕ್ಕಳಲ್ಲಿ ಕಡಿಮೆಯಾಗಿದೆ ಎಂದು ವಿಷಾಧಿಸಿದ ಅವರು ಮನುಷ್ಯ ಮನುಷ್ಯರಲ್ಲಿರುವ ಸಂಬಂಧಗಳು ಕಡಿಮೆಯಾಗುತ್ತಿವೆ, ಶಿಕ್ಷಕರು ಪ್ರತಿ ದಿನ ಪ್ರತಿ ಕ್ಷಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಡೆ ಆತ್ಮ ವಿಮಷರ್ೆ ಮಾಡುವಂತಹವರು ಮಾತ್ರ ಶಿಕ್ಷಕ ವೃತ್ತಿಗೆ ಅರ್ಹರು ಎಂದ ಅವರು, ಶಿಕ್ಷರು ತಾವು ಮಕ್ಕಳಿಗೆ ಪಾಠ ಹೇಳುವ ಮುನ್ನ ಪುಸ್ತಕಗಳನ್ನು ಅಭ್ಯಸಿಸಿದ ನಂತರ ಭೋದಿಸಿ, ದುಶ್ಚಟಗಳಿಂದ ದೂರವಿದ್ದು ಮಕ್ಕಳಲ್ಲಿ ಉತ್ತಮ ಗುಣಗಳನ್ನು ಕಲಿಸುವ ಕಡೆ ಗಮನ ಹರಿಸಬೇಕಾಗಿದೆ. ರಾಧಾಕೃಷ್ಣನ್ರವರನ್ನು ಅವರ ಜಯಂತಿ ದಿನದಂದು ಮಾತ್ರ ಸ್ಮರಿಸುವುದಲ್ಲ ಶಿಕ್ಷಕರಾದವರು ಪ್ರತಿಕ್ಷಣ ನೆನಪಿಸಿಕೊಳ್ಳುವುದು ಶಿಕ್ಷಕನ ಕರ್ತವ್ಯ, ಶಿಕ್ಷಕ ಸದಾ ಅಧ್ಯಯನ ಶೀಲರಾಗಬೇಕು, ಸಭೆ ಸಮಾರಂಭಗಳು ಹೂವಿನ ಹಾರದ ಬದಲು ಡಾ.ರಾಧಕೃಷ್ಣರವರ ಜೀವನ ಚರಿತ್ರೆಯ ಪುಸ್ತಕಗಳನ್ನು ನೀಡಿ ಎಂದು ಸಲಹೆ ನೀಡಿದರು. ಸಮಾಜ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಕೃಕಜ್ಞತೆಯಿಂದ ಸ್ಮರಿಸಬೇಕು, ಅವರೆ ಅಕ್ಷರವನ್ನು ಕಲಿಸುವವರು ಶಿಕ್ಷಕರು ವಿದ್ಯಾಥರ್ಿಗಳು ಕೇಳುವ ಪ್ರಶ್ನೆಗೆ ಉತ್ತರ ತಿಳಿಯದಿದ್ದಲ್ಲಿ ಗದರಿಸದೆ ತಿಳಿದು ಹೇಳಬೇಕು. ಸಮಾರಂಭದಲಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಧ್ವಜಾರೋಹಣ ನೆರವೇರಿಸಿದರು. ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಡಾ.ರಾಧಕೃಷ್ಣನ್ರವರ ಭಾವಚಿತ್ರ ಅನಾವರಣಗೊಳಿಸಿದರು. ತಾ.ಪಂ.ಉಪಾಧ್ಯಕ್ಷ ಬಿ.ಬಿ.ಪಾತೀಮ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರೌಡಶಾಲಾ ಹಾಗೂ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದರು. ಸಮಾರಂಭದಲ್ಲಿ ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮ, ನಿಂಗಮ್ಮ, ಮಂಜುಳ, ತಹಶೀಲ್ದಾರ್ ಉಮೇಶ್ಚಂದ್ರ, ಇ.ಓ ದಯಾನಂದ್, ಜಿ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಬಿ.ಇ.ಓ ಸಾ.ಚಿ.ನಾಗೇಶ್ ಉಪಸ್ಥಿತರಿದ್ದರು.