Wednesday, May 18, 2016


ಕುಗ್ರಾಮಗಳ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಟಾಪರ್
ಚಿಕ್ಕನಾಯಕನಹಳ್ಳಿ : ಕನಿಷ್ಟ ಮನೆಪಾಠದ ಸೌಲಭ್ಯವೂ ಇಲ್ಲದ ಕುಗ್ರಾಮಗಳ ವಿದ್ಯಾಥರ್ಿಗಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದು ಸವಲತ್ತುಗಳು ಇರುವ ಪಟ್ಟಣದ ಮಕ್ಕಳಿಗೆ ಸೆಡ್ಡು ಹೊಡೆದಿದ್ದಾರೆ.
 ತಾಲ್ಲೂಕಿನ ಗಡಿ ಗ್ರಾಮ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿನಿ ಎಸ್.ಲಕ್ಷ್ಮಿದೇವಿ ಹಾಗೂ ಶೆಟ್ಟಿಕೆರೆ ಜನತಾ ಪ್ರೌಢಶಾಲೆ ವಿದ್ಯಾಥರ್ಿ ಧನಂಜಯಕುಮಾರ್ ತಲಾ 611 ಅಂಕಗಳನ್ನು ಪಡೆದು ಶೇ.97.76 ಫಲಿತಾಂಶ ಪಡೆಯುವ ಇಬ್ಬರೂ ವಿದ್ಯಾಥರ್ಿಗಳು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.
 ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿನಿ ವಿದ್ಯಾಶ್ರೀ 609 ಶೇ.97.44 ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. 
  ಕೃಷಿ ಕೂಲಿ ಕಾಮರ್ಿಕ ದಂಪತಿ ಶಿವಣ್ಣ ಹಾಗೂ ಶೋಭಾ ಇವರ ಮಗಳಾದ ಲಕ್ಷ್ಮೀದೇವಿ ಬಡತನದ ನಡುವೆಯೂ ಶೇ.97.76 ಫಲಿತಾಂಶ ಪಡೆದಿದ್ದಾರೆ.ಕನ್ನಡ-125.ಇಂಗ್ಲಿಷ್-95,ಹಿಂದಿ-98,ಗಣಿತ-95,ವಿಜ್ಞಾನ-100 ಮತ್ತು ಸಮಾಜ ವಿಜ್ಞಾನ 98 ಅಂಕ ಗಳಿಸಿದ್ದಾರೆ.
 ಪತ್ರಿಕೆಯೊಂದಿಗೆ ಮಾತನಾಡಿದ ಎಸ್.ಲಕ್ಷ್ಮಿದೇವಿ, ಶಾಲೆಯಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಬಡತನದ ಮಧ್ಯೆಯೂ ಓದಿಗೆ ಬೆಂಬಲ ನೀಡಿದ ತಂದೆ ತಾಯಿಗೆ ಋಣಿ. ಮುಂದೆ ಕೃಷಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ರೈತ ಸಮುದಾಯಕ್ಕೆ ನೆರವಾಗುವುದು ನನ್ನ ಗುರಿ ಎಂದ


ರು.
 ಪ್ರಥಮ ಸ್ಥಾನವನ್ನು ಲಕ್ಷ್ಮಿದೇವಿ ಜತೆ ಹಂಚಿಕೊಂಡಿರುವ ಶೆಟ್ಟಿಕೆರೆ ಜನತಾ ಗ್ರಾಮಾಂತರ ಪ್ರೌಢಶಾಲೆ ವಿದ್ಯಾಥರ್ಿ ಎಚ್.ಆರ್.ಧನಂಜಯ್ಕುಮಾರ್ ,ರಾಜಣ್ಣ ಮತ್ತು ಗಂಗಮ್ಮ ದಂಪತಿ ಪುತ್ರ. ತಾಯಿ ಅಸು ನೀಗಿದ್ದು ಸಾಕು ತಾಯಿ ಸಿದ್ದಮ್ಮ ಅವರ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ. ಕನ್ನಡ 123, ಹಿಂದಿ-100, ಗಣಿತ-100, ಇಂಗ್ಲಿಷ್-95, ವಿಜ್ಞಾನ-97 ಹಾಗೂ ಸಮಾಜ ವಿಜ್ಷಾನ-96 ಪಡೆದಿದ್ದಾರೆ.
ಶಾಲೆಯಲ್ಲಿ ನಡೆಯುವ ಪಾಠಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದೆ. ಪಠ್ಯ ಪುಸ್ತಕಗಳನ್ನು ಓದುತ್ತಿದ್ದೆ. ಗೈಡ್ ಹಾಗೂ ಮನೆಪಾಠ ಇಲ್ಲ. ಪ್ರತೀ ದಿನ 5 ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಶಾಲೆಯ ಶಿಕ್ಷಕರ ಮಾರ್ಗದರ್ಶ ಉತ್ತಮ ಅಂಕ ಗಳಿಸಲು ನೆರವಾಯಿತು. ಮುಂದಿನ ಗುರಿ ಐಎಎಸ್ ಎಂದು ಪತ್ರಿಕೆಗೆ ತಿಳಿಸಿದರು.
  ದ್ವಿತೀಯ ಸ್ಥಾನ ಗಳಿಸಿರುವ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿನಿ ಜಿ.ಕೆ.ವಿದ್ಯಾಶ್ರೀ ಪಡೆದಿರುವ ಒಟ್ಟು ಅಂಕಗಳು 609.ಕನ್ನಡ-124,ಇಂಗ್ಲಿಷ್-98,ಹಿಂದಿ-99,ಗಣಿತ-93,ವಿಜ್ಞಾನ 97 ಹಾಗೂ ಸಮಾಜ ವಿಜ್ಞಾನ-98.
 ಹೆಚ್ಚು ಅಂಕ ಗಳಿಸುವ ಮೂಲಕ ತಾಲ್ಲೂಕಿನ ಕೀತರ್ಿ ಹೆಚ್ಚಿಸಿರುವ ಕೃಷಿ ಕೂಲಿ ಕಾಮರ್ಿಕರ ಮಕ್ಕಳನ್ನು ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷ ಬಿ.ಎನ್.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಸದರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.