Friday, November 25, 2011







ಪಡಿತರ ಅಜರ್ಿ ಸಲ್ಲಿಸುವವರಿಗೆ ಸಲಹೆ: ಆಹಾರ ಶಿರಸ್ತೆದಾರ್
ಚಿಕ್ಕನಾಯಕನಹಳ್ಳಿ,ನ.25 : ಗ್ರಾಮೀಣ ಪ್ರದೇಶದಲ್ಲಿ ಪಡಿತರ ಚೀಟಿ ಬಯಸುವವರು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಆನ್ಲೈನ್ ಮೂಲಕ ಅಗತ್ಯ ಮಾಹಿತಿಯನ್ನು ನೀಡಿ ಅಜರ್ಿ ಪಡೆದು ಪಡಿತರ ಚೀಟಿಗೆ ನೊಂದಣಿಯಾಗಬೇಕು ಎಂದು ಆಹಾರ ಶಿರಸ್ತೆದಾರ್ ಮಂಜುನಾಥ್ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ಮಾಹಿತಿಯನ್ನು ಪಂಚತಂತ್ರ ಕಂಪ್ಯೂಟರ್ ವ್ಯವಸ್ಥೆ ಮೂಲಕ ಸಂಸ್ಕರಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಪಂಚಾಯಿತಿಗಳಿಗೆ ವಹಿಸಿದ್ದು ಪ್ರತಿ ಪಂಚಾಯಿತಿಗೆ ತನ್ನದೇ ಆದ ಲಾಗಿನ್ ಐಡಿ ನೀಡಲಾಗಿದೆ. ಪಟ್ಟಣದವರು ಖಾಸಗಿ ಇಂಟರ್ನೆಟ್ ಸೆಂಟರ್ಗಳಲ್ಲಿ ಅಜರ್ಿಗಳನ್ನು ಸಲ್ಲಿಸಬಹುದಾಗಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ, ನಿಖರತೆ, ಸಾಮಾಜಿಕ ನ್ಯಾಯಗಳು ಮುಖ್ಯವಾಗಿ ಅರ್ಹ ಕುಟುಂಬಗಳು, ಪಡಿತರ ಚೀಟಿ ಪಡೆಯುವಲ್ಲಿ ಇರುವ ತೊಂದರೆಗಳನ್ನು ನಿವಾರಿಸಬಹುದಾಗಿದೆ.
ಗ್ರಾಮೀಣ ಭಾಗದ ಅಜರ್ಿದಾರರು ಪಡಿತರ ಚೀಟಿಯ ಅಜರ್ಿ ದಾಖಲಿಸಲು ತಮಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಯಲ್ಲಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಥವಾ ಗ್ರಾಮ ಪಂಚಾಯಿತಿ ಕಾರ್ಯದಶರ್ಿಯನ್ನು ವಿನಂತಿಸಬೇಕು, ಈ ಬಗ್ಗೆ ಪಂಚತಂತ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು ಗ್ರಾಮ ಪಂಚಾಯಿತಿಗಳಲ್ಲಿ ಹೊಸದಾಗಿ ಪಡಿತರ ಚೀಟಿ ಅಜರ್ಿಗಳನ್ನು ದಾಖಲಿಸುವವರು ಕುಟುಂಬದ ಸದಸ್ಯರ ಮಾಹಿತಿಗಳನ್ನು ಪಂಚತಂತ್ರಕ್ಕೆ ದಾಖಲಿಸುವುದು, ಗ್ರಾಮೀಣ ಪ್ರದೇಶಗಳ ಕುಟುಂಬಗಳ ಆಥರ್ಿಕ ಸ್ಥಿತಿಯನ್ನು ನಿರ್ಧರಿಸಿ ಅಂತ್ಯೋದಯ ಅನ್ನ ಯೋಜನೆ (ಎಎವೈ), ಬಿಪಿಎಲ್ ಮತ್ತು ಎಪಿಎಲ್ ವಗರ್ೀಕರಣವನ್ನು ಕಂಪ್ಯೂಟರ್ಗೆ ದಾಖಲಿಸುವುದು. ಅನರ್ಹ ಪಡಿತರ ಚೀಟಿ ಗುರುತಿಸುವುದು. ಪಡಿತರ ಚೀಟಿ ಹೊಂದಿದವರ ಕೃಷಿ ಜಮೀನು ಹಿಡುವಳಿಯ ಮಾಹಿತಿ ದಾಖಲಿಸುವುದು ಮತ್ತು ಫಲಾನುಭವಿಗಳ ಕುಟುಂಬದ ಸದಸ್ಯರ ಹೆಸರು ಇತ್ಯಾದಿ ಸೇರಿಸುವುದು/ಕಡಿಮೆ ಮಾಡಬಹುದಾಗಿದೆ.
 ಅಜರ್ಿದಾರರ ಹೆಸರನ್ನು ಕಂಪ್ಯೂಟರ್ನಲ್ಲಿ ನೊಂದಾಯಿಸಿದ ನಂತರ ಅಧಿಕಾರಿಗಳು ಅಜರ್ಿದಾರರ ಮನೆ ಬಾಗಿಲಿಗೆ ಹೋಗಿ ಅಜರ್ಿದಾರರ ಮುಖ್ಯಸ್ಥರ ಸಹಿಯನ್ನು ಅದರ ಮೇಲೆ ಪಡೆದು, ತನಿಖೆ ಮಾಡಿ ತಮ್ಮ ವರದಿಯನ್ನು ಕಂಪ್ಯೂಟರ್ಗೆ ದಾಖಲಿಸುತ್ತಾರೆ ಎಂದು ತಿಳಿಸಿದ್ದಾರೆ.
ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ ದಸೂಡಿ, ಹೊಯ್ಸಳಕಟ್ಟೆ, ಕೆಂಕೆರೆ, ಯಳನಡು, ಕೊರಗೆರೆ, ದೊಡ್ಡ ಎಣ್ಣೆಗೆರೆ, ಚೌಳಕಟ್ಟೆ, ತಿಮ್ಲಾಪುರ, ದೊಡ್ಡಬಿದರೆ, ಬರಕನಹಾಳು, ರಾಮನಹಳ್ಳಿ, ಬರಗೂರು ಮತಿಘಟ್ಟ, ಮಲ್ಲಿಗೆರೆ, ದುಗಡಿಹಳ್ಳಿ, ಜೆ.ಸಿ.ಪುರ ಗ್ರಾಮ ಪಂಚಾಯಿತಿಗಳಲ್ಲಿಗಳನ್ನು ಬಿಟ್ಟು ಉಳಿದ ಪಂಚಾಯ್ತಿಗಳಲ್ಲಿ ಅಜರ್ಿಗಳು ನೊಂದಾವಣಿಯಾಗಿದ್ದು ಈಗಾಗಲೇ ಪಟ್ಟಣದಲ್ಲಿ 100 ಹಾಗೂ ಗ್ರಾ.ಪಂಗಳಲ್ಲಿ 23 ಅಜರ್ಿಗಳು ನೊಂದಾಯಿತವಾಗಿವೆ ಎಂದು ಆಹಾರ ಶಿರಸ್ತೆದಾರ್ ಮಂಜುನಾಥ್ ತಿಳಿಸಿದ್ದಾರೆ.

29ರಂದು ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ನ.25 : 2011-12ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪಧರ್ೆಯನ್ನು ಇದೇ 29ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ಸ್ಪಧರ್ೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದು ಭಾಗವಹಿಸಲು ಇಚ್ಚಿಸುವ ಆಸಕ್ತ ಶಿಕ್ಷಕರು ನಿಗಧಿತ ದಿನಾಂಕದಂದು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳು ತಿಳಿಸಿದ್ದು ಸ್ಪಧರ್ೆಯನ್ನು ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ನಡೆಸಲಿದ್ದು ಗಾಯನ ಸ್ಪಧರ್ೆ, ಆಶುಭಾಷಣ ಸ್ಪಧರ್ೆ, ಪ್ರಬಂಧ ಸ್ಪಧರ್ೆ, ಸ್ಥಳದಲ್ಲೇ ಪಾಠೋಪಕರಣ ತಯಾರಿಕೆ(ಟಿಎಲ್ಎಮ್), ಸ್ಥಳದಲ್ಲೇ ಚಿತ್ರ ಬರೆಯುವ ಸ್ಪಧರ್ೆಗಳಿದ್ದು ಒಬ್ಬ ಶಿಕ್ಷಕರು  ಯಾವುದಾದರೂ ಒಂದು ಸ್ಪಧರ್ೆಯಲ್ಲಿ ಮಾತ್ರ ಭಾಗವಹಿಸಲು ಅರ್ಹರಾಗಿದ್ದು ಹೆಚ್ಚಿನ ಮಾಹಿತಿಗಾಗಿ ಆಯಾ ವಲಯ ವ್ಯಾಪ್ತಿಯ ಶಿಕ್ಷಣ ಸಂಯೋಜಕರನ್ನು ಸಂಪಕರ್ಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.