Monday, October 17, 2011







ಬರಗೂರು ಪಿ.ಡಿ.ಓ. ಅಮಾನತ್ತಿಗೆ ಒತ್ತಾಯಿಸಿ ತಾ.ಪಂ.ಕಛೇರಿ ಮುಂದೆ ಪ್ರತಿಭಟನೆಚಿಕ್ಕನಾಯಕನಹಳ್ಳಿ,ಅ.17: ಬರಗೂರು ಪಂಚಾಯಿತಿ ಪಿ.ಡಿ.ಓ. ಶಿವಕುಮಾರ್ರವರನ್ನು ಕರ್ತವ್ಯದಿಂದಲೇ ವಿಮುಕ್ತಿಗೊಳಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷ ಬಸವರಾಜು ರವರ ನೇತೃತ್ವದಲ್ಲಿ ಹಲವು ಪಂಚಾಯಿತಿಗಳ ಅಧ್ಯಕ್ಷರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳನ್ನು ಒತ್ತಾಯಿಸಿದರು. ತಾಲೂಕಿನ ಬರಗೂರು ಗ್ರಾ.ಪಂ.ಯಲ್ಲಿ ಗಾಂಧಿಜಯಂತಿಯಂದು ನಡೆದ ಸ್ವಚ್ಚತಾ ಕಾರ್ಯಕ್ರಮದ ಗ್ರಾಮ ಸಭೆಯಲ್ಲಿ ಪಿ.ಡಿ.ಓ. ಶಿವಕುಮಾರ್ ಹಾಗೂ ಅಧ್ಯಕ್ಷ ಬರಗೂರು ಬಸವರಾಜು ಇಬ್ಬರೂ ಕೈ ಕೈ ಮೀಲಾಯಿಸಿದ್ದರು, ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಈಗ ಅಧ್ಯಕ್ಷ ಬಸವರಾಜು, ಸದಸ್ಯರು, ತಾಲೂಕಿನ ವಿವಿಧ ಗ್ರಾ.ಪಂ.ಅಧ್ಯಕ್ಷರು ಹಾಗೂ ಗ್ರಾಮಸ್ಥರು ತಾ.ಪಂ. ಕಛೇರಿ ಮುಂದೆ ಪಿ.ಡಿ.ಓ. ಶಿವಕುಮಾರ್ ರವರ ದೌರ್ಜನ್ಯ ಖಂಡಿಸಿ ಮತ್ತು ಅಮಾನತ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಬಸವರಾಜು, ಪಿ.ಡಿ.ಓ. ಶಿವಕುಮಾರ್ ರವರ ಮೇಲೆ 8 ಗುರುತರ ಆರೋಪಗಳಿದ್ದು, ಆರೆ, ಗುದ್ದಲಿ, ಸಿ.ಎಫ್.ಎಲ್ ಬಲ್ಪ್ಗಳ ಖರೀದಿಯಲ್ಲಿ, ವಸತಿ ಯೋಜನೆಗಳಲ್ಲೂ ಭ್ರಷ್ಟಾಚಾರ ನಡೆಸಿದ್ದರು, ಈ ಬಗ್ಗೆ ಸಾರ್ವಜನಿಕರೆದರು ಕೇಳಿದಾಗ ಏಕಾಏಕಿ ನನ್ನ ಮೇಲೆರಗಿದರು ಎಂದು ಆರೋಪಿಸಿದರಲ್ಲದೆ, ಜನಪ್ರತಿನಿಧಿಗಳಿಗೆ ಗೌರವವನ್ನು ಕೊಡುವ ಪ್ರವೃತ್ತಿಯನ್ನು ಬೆಳಿಸಿಕೊಂಡಿದ್ದಾರೆ ಎಂದರು.ತಾಲೂಕು ಗ್ರಾ.ಪಂ.ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷೆ ಹಾಗೂ ಗೋಡೆಕೆರೆ ಗ್ರಾ.ಪಂ. ಅಧ್ಯಕ್ಷೆ ಕುಶಲ ಮರಿಸ್ವಾಮಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಸದಾ ಜನರ ಬಳಿಯೇ ಇರುವುದರಿಂದ ನೀರು, ಸ್ವಚ್ಚತೆ ಹಾದಿಯಾಗಿ ಎಲ್ಲಾ ಸಮಸ್ಯೆಗಳಿಗೆ ನಾವು ತಕ್ಷಣ ಪ್ರತಿಕ್ರಿಯಿಸಿ ಸಮಸ್ಯೆ ಬಗೆಹರಿಸಬೇಕು, ಇಂತಹ ಸಂದರ್ಭಗಳಲ್ಲಿ ಪಿ.ಡಿ.ಓ.ಗಳು ಸ್ಥಳದಲ್ಲಿ ವಾಸ್ತವ್ಯವಿದ್ದರೆ ಜನರ ಸಮಸ್ಯೆಗಳನ್ನು ನಾವು ಶೀಘ್ರ ಪರಿಹರಿಸಲು ಸಹಾಯಕವಾಗುತ್ತದೆ ಇದನ್ನು ಅರಿತು ಕೆಲಸ ಮಾಡಬೇಕು ಎಂದರಲ್ಲದೆ, ಸಕರ್ಾರದಿಂದ ಬರುವ ಪ್ರತಿಯೊಂದು ಆದೇಶವನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು ಆದರೆ, ಅನುದಾನಗಳ ಬಗ್ಗೆ ಬರುವ ಆದೇಶವನ್ನು ಪಿ.ಡಿ.ಓ.ಗಳು ತಮ್ಮ ಬಳಿ ಇಟ್ಟುಕೊಂಡು ನಮ್ಮನ್ನು ಕತ್ತಲಿಯಲ್ಲಿಟ್ಟಿರುತ್ತಾರೆ ಎಂದರು. ಕುಪ್ಪೂರು ಗ್ರಾ.ಪಂ. ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ ತಾಲೂಕಿನ ಪಿ.ಡಿ.ಓ. ಗಳು ಸರಿಯಾದ ಸಮಯಕ್ಕೆ ಗ್ರಾ.ಪಂ.ಕಾಯರ್ಾಲಯಕ್ಕೆ ಬರುವುದಿಲ್ಲ ಸದಾ ತಾ.ಪಂ. ಕಛೇರಿಯಲ್ಲಿ ಬೀಡುಬಿಟ್ಟಿರುತ್ತಾರೆ, ಕೇಳಿದರೆ ಆ ಸಭೆ, ಈ ಸಭೆ ಇತ್ತು ಎಂದು ಸಬೂಬು ಹೇಳುತ್ತಾರೆ ಎಂದರು. ಮತ್ತಿಘಟ್ಟ ಗ್ರಾ.ಪಂ.ಅಧ್ಯಕ್ಷ ಮಹೇಶ್ ಮಾತನಾಡಿ ಅಧಿಕಾರ ವಿಕೆಂದ್ರೀಕರಣದಿಂದ ಗ್ರಾಮ ಮಟ್ಟಕ್ಕೆ ಅಧಿಕಾರ ಬಂದಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಸೇವೆ ಮಾಡಲು ಮುಂದಾದರೆ ನಮ್ಮನ್ನು ನಿಯಂತ್ರಿಸುವವರು ಹಲವು ಮಂದಿ ಅದರ ಜೊತೆಗೆ ಅಧಿಕಾರ ಶಾಹಿಯೂ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ನಾವು ಅಧಿಕಾರದಲ್ಲಿದ್ದು ಜನರಿಗೆ ಯಾವ ರೀತಿಯ ಸೇವೆಯನ್ನು ಕೊಟ್ಟಂತಾಗುತ್ತದೆ ಎಂದರು. ಕೆಂಕೆರೆ ತಾ.ಪಂ.ಸ್ಯದಸ್ಯ ನವೀನ್ ಮಾತನಾಡಿ, ಪಿ.ಡಿ.ಓಗಳು ಹಾಗೂ ಕಾರ್ಯದಶರ್ಿಗಳನ್ನು ಗ್ರಾ.ಪಂ.ಯಲ್ಲಿ ಹುಡುಕಿದರೂ ಸಿಗುವುದಿಲ್ಲ, ಅವರನ್ನು ನೋಡಬೇಕೆಂದರೆ ಚಿ.ನಾ.ಹಳ್ಳಿ.ಯ ಮಿಲ್ಟ್ರಿ ಹೋಟೆಲ್ ಹಾಗೂ ಬಾರ್ಗಳ ಬಳಿ ಬಂದರೆ ತಕ್ಷಣವೇ ಸಿಗುತ್ತಾರೆ ಎಂದರು. ಪ್ರತಿಭಟನಾಕಾರರ ನೇತೃತ್ವವಹಿಸಿದ್ದ ಬಸವರಾಜು ತಮ್ಮ ಮನವಿ ಪತ್ರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ದಯಾನಂದ ರವರಿಗೆ ಸಲ್ಲಿಸಿದರು. ಇ.ಓ.ದಯಾನಂದ ಮನವಿ ಸ್ವೀಕರಿಸಿ ಮಾತನಾಡಿ, ಪಿ.ಡಿ.ಓ.ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಇ.ಓ.ಗಳಿಗೆ ಅಧಿಕಾರವಿರುವುದಿಲ್ಲ, ನಾನು ನಿಮ್ಮ ಮನವಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ.ಸದಸ್ಯೆ ಬಿ.ಎನ್.ಶಿವಪ್ರಕಾಶ್, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಹುಳಿಯಾರ್ ಗ್ರಾ.ಪಂ.ಅಧ್ಯಕ್ಷ ಮಹಮದ್ ಸಯದ್ ಅನ್ಸರ್ ಆಲಿ ಸೇರಿದಂತೆ ಹಲವು ಗ್ರಾ.ಪಂ. ಅಧ್ಯಕ್ಷರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.


ಸಿಇಸಿಯ ಮೂರನೇ ತಂಡ ಚಿ.ನಾ.ಹಳ್ಳಿ ಗಣಿ ಪ್ರದೇಶಕ್ಕೆ ಭೇಟಿಚಿಕ್ಕನಾಯಕನಹಳ್ಳಿ,

ಅ.17: ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಪರಿಣಾಮ/ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲು ಸುಪ್ರೀಂಕೋಟರ್್ ನೇಮಿಸಿರುವ ಸಿಇಸಿ ತಂಡದ ಸದಸ್ಯರು ಸೋಮವಾರ ಚಿಕ್ಕನಾಯಕನಹಳ್ಳಿ ತಾಲೂಕಿನ ಗಣಿ ಪ್ರದೇಶಕ್ಕೆ ಭೇಟಿ, ನೀರಿನ ಮೂಲಗಳ ಮೇಲೆ ಆಗಿರುವ ಪರಿಣಾಮ ಶೋಧಿಸಿತು.ಬೆಳಗ್ಗೆ 11.30ರ ಸುಮಾರಿಗೆ ಸಿಇಸಿ ತಂಡದ ನಾಲ್ಕೈದು ಮಂದಿ ಸದಸ್ಯರು ಚಿಕ್ಕನಾಯಕನಹಳ್ಳಿ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಬಳಿಕ ಗಣಿ ಹೊನ್ನೆಬಾಗಿ, ಬುಳ್ಳೇನಹಳ್ಳಿ ಮಾರ್ಗದಲ್ಲಿ ಗಣಿ ಪ್ರದೇಶಕ್ಕೆ ತೆರಳಿದರು. ಅಬ್ಬಿಗೆ ಗುಡ್ಡದಲ್ಲಿ ನಡೆದಿರುವ ಗಣಿಗಳಿಗೆ ಭೇಟಿ ನೀಡಿದ ಸದಸ್ಯರು, ಪುನಾಃ ಪ್ರವಾಸಿ ಮಂದಿರಕ್ಕೆ ಆಗಮಿಸಿ ವಾಪಸಾದರು.ಇದರಿಂದಾಗಿ ಸಿಇಸಿ ತಂಡದ ಪೈಕಿ 3ನೇ ಉಪ ತಂಡ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶಕ್ಕೆ ಭೇಟಿ ನೀಡಿದಂತಾಗಿದೆ. ನೀರಿನ ಮೂಲ ಶೋಧ:ಸೋಮವಾರ ಭೇಟಿ ನೀಡಿದ್ದ ತಂಡ ಕೇವಲ ನೀರಿನ ಮೂಲದ ಮೇಲಾಗಿರುವ ಪರಿಣಾಮ ಶೋಧಿಸಿತು. ಬುಳ್ಳೇನಹಳ್ಳಿ, ಹೊನ್ನೆಬಾಗಿ ಸೇರಿದಂತೆ ಈ ಬೆಟ್ಟದ ತಳ ಭಾಗದಲ್ಲಿರುವ ಕೆರೆ, ಕೊಳವೆ ಬಾವಿಗಳ ನೀರು ಸಂಗ್ರಹಿಸಿದ ತಂಡ, ಗಣಿಗಾರಿಕೆಯಿಂದ ನೀರಿನ ಮೇಲೆ ದುಷ್ಪರಿಣಾಮವಾಗಿದೆಯೇ ಎಂದು ತಲೆ ಕೆಡಿಸಿಕೊಂಡಿತು. ತುಮಕೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಿಇಸಿ ತಂಡದ ಜೊತೆಯಲ್ಲಿದ್ದರು.ಬಾಲಾಜಿ ಮೈನ್ಸ್ ಸಮೀಕ್ಷೆ:ಈ ಹಿಂದೆ ಎಲ್ಲ ಗಣಿಗಳ ಸವರ್ೆ ಕಾರ್ಯ ನಡೆದಿತ್ತು. ಅಬ್ಬಿಗೆ ಗುಡ್ಡದ ತುದಿಯಲ್ಲಿರುವ ಬಾಲಾಜಿ ಮೈನ್ಸ್ ಸವರ್ೆ ಕಾರ್ಯ ಮಾತ್ರ ಉಳಿದಿತ್ತು. ಸೋಮವಾರ ಅರಣ್ಯ, ಗಣಿ ಇಲಾಖೆ, ಜಿಲ್ಲಾಡಳಿತ ಜಂಟಿಯಾಗಿ ಸವರ್ೆ ಕಾರ್ಯ ನಡೆಸಿದವು.ಬಾಕ್ಸ್-1ಮಳೆಗಾಲದಲ್ಲಿ ಶೋಧ ಸರಿಯೇ?ಕಳೆದ ಜೂನ್ ಅಂತ್ಯದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆ ಆರಂಭವಾಗಿದೆ. ಈವರೆಗೂ ವಾಡಿಕೆ ಮಳೆ ಸಂಪೂರ್ಣವಾಗಿ ಆಗಿಲ್ಲ. ಆದರೂ ಶೇ.40ರಷ್ಟು ಮಳೆಯಾಗಿದೆ.ಗಣಿಗಾರಿಕೆ ಪ್ರದೇಶವಾದ ಅಬ್ಬಿಗೆ ಗುಡ್ಡ, ಸೊಪ್ಪಿನ ಗುಡ್ಡ ಪ್ರದೇಶಗಳ ಸುತ್ತಮುತ್ತಲ ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳ ನೀರು ಮಳೆಯಿಂದಾಗಿ ಹೊಸ ನೀರು ಬಂದು ತಿಳಿಯಾಗಿದೆ. ಅದರಲ್ಲೂ ತಾಲೂಕಿನೆಲ್ಲೆಡೆಗಿಂತ ಈ ಗಣಿ ಗುಡ್ಡಗಳ ಪ್ರದೇಶದಲ್ಲೇ ಅತಿ ಹೆಚ್ಚು ಮಳೆಯಾಗುತ್ತದೆ. ಇದರಿಂದ ಗಣಿ ಗುಡ್ಡದ ಧೂಳೆಲ್ಲ ಜೂನ್ ಅಂತ್ಯದಿಂದ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿವೆ. ಪರಿಸರ, ಗಿಡ, ಮರ, ಗಣಿ ಲಾರಿಗಳು ಸಾಗುವ ದಾರಿಗಳ ಇಕ್ಕೆಗಳ ಹಸಿರು ಗಿಡಗಳೆಲ್ಲ ಮಳೆ ನೀರಿನಿಂದ ತೊಳೆದು ಸ್ವಚ್ಛ ಪರಿಸರ ಉಂಟಾಗಿದೆ.ಮೊದಲ ಮಳೆಗೇ ಎಲ್ಲ ಧೂಳು ಕೊಚ್ಚಿಕೊಂಡು ಹೋಗಿದ್ದು, ಆ ಬಳಿಕ ಸುರಿದ ಮಳೆಯ ತಿಳಿಯಾದ, ಸ್ವಚ್ಛ ನೀರು ಈಗ ಕೆರೆ, ಕಟ್ಟೆಗಳಲ್ಲಿವೆ. ಬೇಸಿಗೆಯಲ್ಲಿ ಧೂಳು ಹಿಡಿದು ಕೆರೆ ನೀರು ಹಾಳಾಗಿರುತ್ತವೆ. ಆಗ ನೀರಿನ ಮೇಲಾಗಿರುವ ಪರಿಣಾಮ ಶೋಧಿಸದೇ ಮಳೆಗಾಲದಲ್ಲಿ ನೀರಿನ ಮೇಲಾಗಿರುವ ಪರಿಣಾಮ ಶೋಧಿಸುತ್ತಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.ಆದರೆ ಮಳೆ ನೀರು ಅಂತರ್ಜಲ ಸೇರುವುದರಿಂದ ಅಂತರ್ಜಲದ ಮೇಲಾಗಿರುವ ಪರಿಣಾಮವನ್ನು ಶೋಧಿಸಲು ಈಗ ಸಕಾಲ ಎಂಬ ಅಭಿಪ್ರಾಯವೂ ಸ್ಥಳೀಯರಿಂದ ಕೇಳಿ ಬರುತ್ತಿದೆ.