Friday, September 23, 2016


ಪೌರ ಕಾಮರ್ಿಕರ ಮಕ್ಕಳು ಶಿಕ್ಷಣ ಪಡೆಯಿರಿ : ಸಿಡಿಸಿ 
ಚಿಕ್ಕನಾಯಕನಹಳ್ಳಿ : ಪೌರ ಕಾಮರ್ಿಕರು ತಮ್ಮ ಮಕ್ಕಳನ್ನು ಕಾಮರ್ಿಕರನ್ನಾಗಿ ಮಾಡದೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ  ಇಂಜನಿಯರ್, ಡಾಕ್ಟರ್, ಅಧಿಕಾರಿ ಯಾವುದೇ ವೃತ್ತಿಯಾದರೂ  ಸರಿ ಸತ್ಪ್ರಜೆಯನ್ನಾಗಿ  ಮಾಡಿ ಎಂದು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಸಲಹೆ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿರುವ ಸಮುದಾಯ ಭವನದಲ್ಲಿ ಪೌರ ಕಾಮರ್ಿಕರ ಮತ್ತು ಅವರ ಕುಟುಂಬ ಸದಸ್ಯರಿಗೆ ಹೆಪಟೈಟಿಸ್ ಬಿ ಚುಚುಮದ್ದು ನೀಡಿ ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಮರ್ಿಕರ ಮಕ್ಕಳು ಕಾಮರ್ಿಕರಾಗಿಯೇ ಇರಬೇಕು ಎಂಬ ತತ್ವ ತೊಲಗಬೇಕು, ಅವರೂ ವಿದ್ಯಾವಂತರಾಗಿ ಸಮಾಜದ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುವಂತೆ ಆಗಬೇಕು ಆ ನಿಟ್ಟಿನಲ್ಲಿ ಅವರ ಪೋಷಕರು ಶ್ರಮಿಸಬೇಕು, ಪೌರ ಕಾಮರ್ಿಕರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು, ಆರೋಗ್ಯವಿದ್ದರೆ ಎಲ್ಲಿ ಬೇಕಾದರೂ ಸಮರ್ಥವಾಗಿ ದುಡಿಯಬಲ್ಲೇ ಎಂಬ ಆತ್ಮವಿಶ್ವಾಸ ಮೂಡುತ್ತದೆ  ಅದಕ್ಕಾಗಿ ಪುರಸಭೆ ವತಿಯಿಂದ ನೀಡುವ ಗ್ಲೌಸ್ಗಳನ್ನು ಬಳಸಿ ಕರ್ತವ್ಯ ನಿರ್ವಹಿಸಿ ಎಂದ ಅವರು,  ಆಮ್ಟೆ ಎಂಬ ವ್ಯಕ್ತಿಯ ದಿನವನ್ನೇ ಪೌರಕಾಮರ್ಿಕರ ದಿನಾಚಾರಣೆಯನ್ನಾಗಿ ಆಚರಿಸುತ್ತಾರೆ, ಆಮ್ಟೆ 1952ರಲ್ಲಿ ಕಲ್ಕತ್ತಾ ಪುರಸಭೆಯ ಉಪಾಧ್ಯಕ್ಷರಾಗಿದ್ದವರು, ಪೌರ ಕಾಮರ್ಿಕರು ಕೆಲಸ ಮಾಡುತ್ತಿದ್ದ ಕೊಳಚೆ ಪ್ರದೇಶಗಳು ಹಾಗೂ ಚರಂಡಿಗಳ ಸ್ಥಿತಿಗತಿ ಕಂಡು ಅವರಲ್ಲಿ ಮರುಕ ಉಂಟಾಗಿ ಪೌರ ಕಾಮರ್ಿಕರಿಗೆ ಇದರಿಂದ ಆಗುತ್ತಿದ್ದ ತೊಂದರೆಯನ್ನು ಕಣ್ಣಾರೆ ಕಾಣಲು ಖದ್ದು ಕಾಲೋನಿಗೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ಕೊಳಚೆ ಪ್ರದೇಶದಲ್ಲಿ ಬದುಕುತ್ತಿರುವುದರಿಂದ ಕುಷ್ಟ ರೋಗ ಹಾಗೂ ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ಕಂಡು ಅವರ ಮನಪರಿವರ್ತನೆಯಾಗಿ ತಮ್ಮ ಸ್ವಂತ ಒಂದು ನೂರ ಐವತ್ತು  ಎಕರೆ ಜಮೀನಲ್ಲಿ ಐವತ್ತು ಎಕರೆ ಜಮೀನನ್ನು  ಕುಷ್ಟ ರೋಗ ನಿವಾರಣೆ ಮಾಡಲು ಆಸ್ಪತ್ರೆಗೆ ದಾನ ನೀಡಿದ ದಿನವನ್ನೇ ಪೌರಕಾಮರ್ಿಕರ ದಿನಾಚಾರಣೆಯನ್ನಾಗಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವೈದ್ಯ ಪ್ರದೀಪ್ ಮಾತನಾಡಿ, ಪಟ್ಟಣವನ್ನು ಸ್ವಚ್ಛವಾಗಿಡುವ ಕಾಮರ್ಿಕರು ತಾವೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು, ಪುರಸಭೆ ವತಿಯಿಂದ ನೀಡುವ ಸಲಕರಣೆಗಳನ್ನು ಉಪಯೋಗಿಸಿ ಸ್ವಚ್ಛತೆ ಕಡೆ ಪಾಲ್ಗೊಳ್ಳಬೇಕು, ಮಲಿನತೆಯನ್ನು ಸ್ವಚ್ಛ ಮಾಡುವಾಗ ವೈರಸ್ನ ಸೋಂಕು ತಗುಲಬಹುದು ಅದಕ್ಕಾಗಿಯೇ ಕಾಮರ್ಿಕರು ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಅಶೋಕ್, ಆಶ್ರಯ ಸಮಿತಿ ಸದಸ್ಯ ಶಿವಕುಮಾರ್, ಆರೋಗ್ಯ ಇಲಾಖೆಯ ಮಧು, ಪರಿಸರ ಇಂಜನಿಯರ್ ಚಂದ್ರಶೇಖರ್, ಆರೋಗ್ಯ ನಿರೀಕ್ಷಕ ಜಯರಾಂ ಉಪಸ್ಥಿತರಿದ್ದರು.

ಕೋ ಆಪರೇಟಿವ್ ಬ್ಯಾಂಕ್ ವಾಷರ್ಿಕ ಸಭೆ

ಚಿಕ್ಕನಾಯಕನಹಳ್ಳಿ,ಸೆ.23 : ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ 2015-16ನೇ ಸಾಲಿನಲ್ಲಿ 33 ಕೋಟಿ ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸಿ 7 ಲಕ್ಷ 30 ಸಾವಿರ ರೂಪಾಯಿಗಳು ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಎಲ್ ದೊಡ್ಡಯ್ಯ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟೀವ್ ಬ್ಯಾಂಕ್ ಸಭಾಂಗಣದಲ್ಲಿ  ನಡೆದ 2015-16ನೇ ಸಾಲಿನ ವಾಷರ್ಿಕ ಸಭೆ ಹಾಗೂ ಷೇರುದಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ಮಾತನಾಡಿ, ಬ್ಯಾಂಕಿನಲ್ಲಿ ಒಟ್ಟು 5937 ಸದಸ್ಯರನ್ನು ಹೊಂದಿದ್ದು ಷೇರು ಬಂಡವಾಳ 87 ಲಕ್ಷ 85 ಸಾವಿರ ರೂಗಳಿದ್ದು ಬ್ಯಾಂಕಿನ ಆಪತ್ ನಿಧಿ ಹಾಗೂ ಇತರೆ ನಿಧಿಗಳು ಸೇರಿ 1 ಕೊಟಿ  47 ಲಕ್ಷಕ್ಕೆ ಹೆಚ್ಚು ಠೇವಣಿಗಳಿವೆ,  ಈ ಸ್ಟಾಂಪಿಂಗ್ ಹಾಗೂ ಡಿ.ಡಿಗಳಿಂದ 3 ಲಕ್ಷದ 14 ಸಾವಿರ ರೂ ಕಮಿಷನ್ ಬಂದಿದೆ ಎಂದರು. 
ನನ್ನ ಅಧ್ಯಕ್ಷಾವಧಿಯ 3 ತಿಂಗಳಲ್ಲಿ  75 ಲಕ್ಷ ಸಾಲ ವಸೂಲು ಮಾಡಿರುವುದಾಗಿ  ಹೇಳಿದ ಅವರು,  2015-16ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು 651 ಜನ ಷೇರುದಾರರು 3 ಕೊಟಿ 57 ಲಕ್ಷ 94 ಸಾವಿರ ರೂ ಸುಸ್ತಿಯಾಗಿದ್ದಾರೆ. ಪ್ರತಿವರ್ಷ ಬ್ಯಾಂಕಿನ ಷೇರುದಾರರಿಗೆ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತುಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಬ್ಯಾಂಕಿನ ಷೇರುದಾರರು ನಿಧನ ಹೊಂದಿದರೆ,  1 ಸಾವಿರ ರೂ ಸಂಸ್ಕಾರ ನಿಧಿಯನ್ನು. 5000ರೂ ಹೆಚ್ಚಿಸಲು ಅನುಮತಿ ನಿಡುವಂತೆ ಸಭೆಯಲ್ಲಿ ಕೋರಿದ್ದಾರೆ.
ವಾಷರ್ಿಕ ಸಭೆ ಉದ್ಘಾಟಿಸಿದ ಸಾಹಿತಿ ಎಮ್.ವಿ.ನಾಗರಾಜರಾವ್ ಮಾತನಾಡಿ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕಿನ ಸಪ್ತತಿ ಸಭಾಂಗಣವನ್ನು ನವೀಕರಿಸಿ ಷೇರುದಾರರ ಮಕ್ಕಳ ಮದುವೆ ಸಮಾರಂಭಗಳಿಗೆ ನೀಡಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಯಾವುದಾದರೂ ತೊಡಕುಗಳಿದ್ದರೆ ಗಣ್ಯರ ಸಮಿತಿಯನ್ನು ರಚಿಸಿ ಬಾಡಿಗೆ ನೀಡುವಂತೆ ಸಲಹೆ ನೀಡಿದರು.
 ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಲವಕುಮಾರ್, ಸದಸ್ಯರಾದ ಸಿ.ಪಿ.ಚಂದ್ರಶೇಖರ್ಶೆಟ್ಟಿ. ಮಹಮದ್ ಖಲಂದರ್, ರಂಗಸ್ವಾಮಯ್ಯ, ಪಾಪಯ್ಯ, ಹೆಚ್.ಬಿ.ಪ್ರಕಾಶ್, ಸಿ.ಹೆಚ್ ದೊರೆಮುದ್ದಯ್ಯ, ಸಿ.ಎಸ್.ರಮೇಶ್, ಪುಷ್ಪ, ಟಿ.ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಣ್ಣ ಕಥೆಗಳ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಸೆ.23:  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾಸ್ತಿಯವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಸಣ್ಣ ಕಥೆಗಳ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ ಎಂದು 
ಸ್ಪಧರ್ೆಯಲ್ಲಿ ಭಾಗವಹಿಸುವರು ತಾಲ್ಲೂಕಿನ ವ್ಯಾಪ್ತಿಯಲ್ಲಿರಬೇಕು. ಸ್ಪಧರ್ೆಯಲ್ಲಿ ಎರಡು ವಿಭಾಗಗಳಲಿದ್ದು,  ವಿದ್ಯಾಥರ್ಿಗಳ ವಿಭಾಗ ಹಾಗೂ ಸಾರ್ವಜನಿಕರ ವಿಭಾಗ ಎಂಬುದಾಗಿದೆ.  ವಿದ್ಯಾಥರ್ಿ ವಿಭಾಗದಲ್ಲಿ ಯಾವುದಾದರೂ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವರಾಗಿದ್ದರೂ ಸಹ ಸ್ಪಧರ್ೆಯಲ್ಲಿ ಪಾಲ್ಗೋಳ್ಳಬಹುದು.
 ಸಾರ್ವಜನಿಕ ವಿಭಾಗದಲ್ಲಿ 18 ರಿಂದ 50 ವಯೋಮಾನದವರು ಭಾಗವಹಿಸಬಹುದು. ಕಥೆಯನ್ನು ಕಳುಹಿಸುವವರು ಎ4 ಅಳತೆಯ ಹಾಳೆಯಲ್ಲಿ ಕೈಬರಹದಲ್ಲಿ 4 ಪುಟಗಳು ಮೀರದಂತೆ ಬರೆದಿರಬೇಕು. ಕಥೆ ಯಾವುದೇ ಭಾಷೆಯ ಅನುವಾಗಿರದೆ ಸ್ವಂತ ರಚಿಸಿರಬೇಕು ಕಸಾಪ ಪಧಾಧಿಕಾರಿಗಳು ಭಾಗವಹಿಸುವಂತಿಲ್ಲ. ಒಬ್ಬರಿಗೆ ಒಂದು ಕಥೆ ಬರೆಯಲು ಅವಕಾಶವಿದೆ ಆಯ್ದ ಕತೆಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಅಕ್ಟೋಬರ್ 30ರೊಳಗೆ ಮಾಸ್ತಿಯವರ ಸಣ್ಣಕಥೆಗಳನ್ನು ತಾಲ್ಲೂಕು ಕಸಾಪ ಅಧ್ಯಕ್ಷೆ ಇಂದಿರಮ್ಮ ದಶಾವತರ ದೇವಾಲಯದ ಬಳಿ ಚಿಕ್ಕನಾಯಕನಹಳ್ಳಿ ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9900538918, 8970430264.ಸಂಪಕರ್ಿಸಿ.
ಬ್ರಹ್ಮಶ್ರೀ ನಾರಾಯಣ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸೆ.26ರಂದು 


ಚಿಕ್ಕನಾಯಕನಹಳ್ಳಿ,ಸೆ.23:  ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕಿನ ವಿವಿಧ ಸಂಘಗಳ ಸಂಯ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಹಾಗೂ ವಿಶ್ವ ಕರ್ಮ ಜತಂತೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು 10.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ದೇವರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಕಛೇರಿಯಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ ಅಧ್ಯಕ್ಷೆ ಕೆ.ಹೊನ್ನಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಭಾವಚಿತ್ರ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಗೃಹ ಸಚಿವ ಡಾ||ಜಿ.ಪರಮೇಶ್ವರ ತಾ.ಪಂ ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಪುರಸಭಾ ಉಪಾಧ್ಯಕ್ಷೆ ಬಿ.ಇಂದಿರಾಪ್ರಕಾಶ್, ಜಿ.ಪಂ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ವೈ.ಸಿ ಸಿದ್ದರಾಮಯ್ಯ,ಎಸ್.ಟಿ ಮಹಾಲಿಂಗಯ್ಯ, ಮಂಜುಳ ಭಾಗವಹಿಸಲಿದ್ದಾರೆ, ವಿಶೇಷ ಆಹ್ವಾನಿತರಾಗಿ ಕನರ್ಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ,ತುಮಕೂರು ಜಿಲ್ಲಾಧ್ಯಕ್ಷ ಅಜಯಕುಮಾರ್, ಹಾಗೂ ತುಮಕೂರು ವಿವಿ ಪ್ರಾಧ್ಯಾಪಕ ಪ್ರೋ.ರಮೇಶ್ ಸಾಲಿಯಾನ್, ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡುವರು. ವಿರ್ಶವ ಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅರೆಮಾದನಹಳ್ಳಿಯ ಶ್ರೀಗುರು ಶಿವಸುಜ್ಞಾನ ಸ್ವಾಮೀಜಿ, ಹಾಗೂ ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ನೀಲಕಂಠಸ್ವಾಮೀಜಿ ಭಾಗವಹಿಸಲಿದ್ದಾರೆ. ತುಮಕೂರು ವಿಶ್ವಕರ್ಮ ಸಮಾಜದ ಹೆಚ್.ಬಿ.ನಾಗರಾಜಚಾರ್, ಬೆಂಗಳೂರು ಬಿ.ಬಿ.ಎಮ್.ಪಿ ಸದಸ್ಯೆ ಹೇಮಲತಾ ಸತೀಶ್, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್ಯಈಡಿಗ ಸಮಾಜದ ಅಧ್ಯಕ್ಷ ಎನ್.ಜಿ.ನಾಗರಾಜು, ವಿಶ್ವಕರ್ಮ ಜನಾಂಗದ ಅಧ್ಯಕ್ಷ ನಾಗರಾಜಾಚಾರ್, ಈಡಿಗ ಸಮಾಜದ ಮುಖಂಡ ಹಾಗೂ ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಸೋಮಶೇಖರ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.