Tuesday, March 29, 2016

ಪೌರಕಾಮರ್ಿಕರಿಗೆ ನಿವೇಶನ ಕೊಡಿಸಲು ಮುಂದಾಗುವೆ : ಮುಖ್ಯಾಧಿಕಾರಿ ಪಿ.ಶಿವಪ್ರಸಾದ್
ಚಿಕ್ಕನಾಯಕನಹಳ್ಳಿ : ಪೌರಕಾಮರ್ಿಕರಿಗೆ ಪುರಸಭಾ ವತಿಯಿಂದ ನಿವೇಶನ ನೀಡಲು ಪುರಸಭಾ ವ್ಯಾಪ್ತಿಯಲ್ಲಿ ಒಂದೆರಡು ಎಕರೆ ಜಮೀನನ್ನು ಖರೀದಿಸಿ ನಿವೇಶವನವನ್ನು ನೀಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪುರಸಭಾ ಕಾಯರ್ಾಲಯ, ರಾಜ್ಯ ಹರಿಜನ-ಗಿರಿಜನ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ನಡೆದ ಪೌರಕಾಮರ್ಿಕರಿಗೆ ಕಾನೂನು ಅರಿವು ಮತ್ತು ಆರೋಗ್ಯ ಶುಚಿತ್ವ ಹಾಗೂ ನೈರ್ಮಲ್ಯ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿವೇಶನದಲ್ಲಿ ಮನೆಗಳನ್ನು ಕಟ್ಟಲು ಈಗಾಗಲೇ 60ಲಕ್ಷ ಹಣ ಮಂಜೂರಾಗಿದ್ದು ಟೆಂಡರ್ ಕರೆಯುವ ಮೂಲಕ ಕಾಮರ್ಿಕರಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದ ಅವರು,  1ರಿಂದ 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಪೌರಕಾಮರ್ಿಕರ ಮಕ್ಕಳಿಗೆ ಪುರಸಭಾ ವತಿಯಿಂದ ಪ್ರೋತ್ಸಾಹಧನ ನೀಡಲಾಗುವುದು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಪೌರಕಾಮರ್ಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅಧಿಕಾರಿಗಳನ್ನಾಗಿ, ಉನ್ನತ ಸ್ಥಾನಕ್ಕೆ ಬರುವ ಹಾಗೆ ನೋಡಿಕೊಳ್ಳುವಂತೆ ಸಲಹೆ ನೀಡಿದರು, ಪೌರ ಕಾಮರ್ಿಕರು ಸಹ ಸ್ವತಂತ್ರ ದಿನಾಚಾರಣೆ, ಗಣರಾಜ್ಯೋತ್ಸವ, ಕನ್ನಡರಾಜ್ಯೋತ್ಸವ  ಇಂತಹ ಕಾರ್ಯಕ್ರಮಗಳನ್ನು ಮೂಲಕ ಸಂಘಟನೆಯಾಗಿ ತಮ್ಮ ಹಕ್ಕುಗಳು ಕೇಳುವ ಮೂಲಕ ಸಂಘಟನೆ ಬಲಪಡಿಸಿ ಹಾಗೂ ಹೋರಾಟದ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವಂತೆ ತಿಳಿಸಿದ ಅವರು ಪೌರಕಾಮರ್ಿಕರು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ, ಸ್ವಚ್ಛತೆ ಕಾಪಾಡುವ ಪೌರಕಾಮರ್ಿಕರು 40-50ವರ್ಷದ ವಯಸ್ಸಿನವರಿದ್ದು ಇವರ್ಯಾರು ಆಥರ್ಿಕವಾಗಿ, ಸಾಮಾಜಿಕವಾಗಿ ಸದೃಢವಾಗಿಲ್ಲ ಇದುವರೆಗೂ ಖಾಯಂ ಆಗದೆ ಇರುವುದರಿಂದ ಸಕರ್ಾರ ಕೂಡಲೇ ಪೌರಕಾಮರ್ಿಕರನ್ನು ಖಾಯಂ ಮಾಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ಪುರಸಭಾ ಸದಸ್ಯ ಅಶೋಕ್ ಮಾತನಾಡಿ, ಪೌರಕಾಮರ್ಿಕರಿಗೆ ನಿವೇಶನ ಹಾಗೂ ವಸತಿಯನ್ನು ಪುರಸಭೆ ವತಿಯಿಂದ ನೀಡುವಂತೆ ಮನವಿ ಮಾಡಿದ ಅವರು ಪೌರಕಾಮರ್ಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಂತೆ ಸಲಹೆ ನೀಡಿದರು.
ಪುರಸಭ ಸದಸ್ಯೆ ಪುಷ್ಪ.ಟಿ.ರಾಮಯ್ಯ ಮಾತನಾಡಿ, ಪೌರಕಾಮರ್ಿಕರು ತಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ, ಪುರಸಭೆಯ ಮೂಲಕ ದೊರೆಯುವಂತಹ ಸೌಲಭ್ಯವನ್ನು ಬಳಸಿಕೊಂಡು ಆಥರ್ಿಕವಾಗಿ ಸದೃಢರಾಗಲು ಮುಂದಾಗಿ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎಂ.ಬಿ.ನಾಗರಾಜು, ಡಾ.ರಂಗನಾಥ್, ಪುರಸಭಾ ಅಭಿಯಂತರ ಚಂದ್ರಶೇಖರ್, ಆರೋಗ್ಯ ನಿರೀಕ್ಷಕ ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿಯಲ್ಲಿ ಉಚಿತ ಸಿಇಟಿ ತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಮಾ.29 : ಸಿ.ಬಿ.ಸುರೇಶ್ಬಾಬು ಮತ್ತು ಸಂಗಡಿಗರ ವತಿಯಿಂದ ಪಿ.ಯು.ಸಿ.ವಿದ್ಯಾಥರ್ಿಗಳಿಗೆ ಉಚಿತ ಸಿಇಟಿ ತರಬೇತಿ ಶಿಬಿರ  ಏಪ್ರಿಲ್1 ರಿಂದ 28ರವರೆಗೆ ನಡೆಯಲಿದೆ.. 
ತರಬೇತಿಯ ಉದ್ಘಾಟನೆಯನ್ನು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಏಪ್ರಿಲ್ 1ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು  ತುಮಕೂರು ವಿ.ವಿ.ಉಪಕುಲಪತಿ ಪ್ರೊ.ಎ.ಹೆಚ್.ರಾಜಾಸಾಬ್ ಉದ್ಘಾಟಿಸುವರು,  ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಮೈಸೂರಿನ ಎನ್.ಐ.ಇ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪರಮೇಶ್ವರ್ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ನೀಡುವರು. ಚಿ.ನಾ.ಹಳ್ಳಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಎಂ.ವಿ.ಸಿದ್ದಗಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುವರು. 
ಉಚಿತ ಸಿಇಟಿ ಶಿಬಿರವು ಪಟ್ಟಣದ ಸಕರ್ಾರಿ ಪದವಿಪೂರ್ವ ಕಾಲೇಜ್ನಲ್ಲಿ  ಏಪ್ರಿಲ್1ರಿಂದ 28ರವರೆಗೆ ನಡೆಯಲಿದೆ. ವಿದ್ಯಾಥರ್ಿಗಳು ಶಿಬಿರದ ಉಪಯೋಗವನ್ನು ಬಳಸಿಕೊಳ್ಳುವಂತೆ ಹಾಗೂ ಈ ಶಿಬಿರದಲ್ಲಿ ವಿದ್ಯಾಥರ್ಿಗಳ ಹೆಚ್ಚಿನ ಶಿಕ್ಷಣಕ್ಕೆ ಸಾಲ ದೊರೆಯುವ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳು  ಮಾಹಿತಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.


                                            
ಚಿಕ್ಕನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ವಾಹನ ಸಾಲವನ್ನು ನೀಡಲಾಯಿತು. ಬ್ಯಾಂಕಿನ ಅಧ್ಯಕ್ಷ ಗುರುಮೂತರ್ಿ ಹೊನ್ನೆಬಾಗಿ ವಿಶ್ವನಾಥ್ರವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು. ಬ್ಯಾಂಕಿನ ಸಿಇಓ ಮಧು, ಗ್ರಾ.ಪಂ.ಸದಸ್ಯ ಸಂಗಮೇಶ್ ಮತ್ತಿತರರು ಉಪಸ್ಥಿತರಿದ್ದರು.


ನವೋದಯ ಕಾಲೇಜಿನ ಎನ್.ಎಸ್.ಎಸ್ ಶಿಬಿರ ಮಾಚರ್್ 31ರಿಂದ ಏಪ್ರಿಲ್ 6ರವರೆಗೆ
ಚಿಕ್ಕನಾಯಕನಹಳ್ಳಿ,ಮಾ.29 : ನವೋದಯ ಪ್ರಥಮ ದಜರ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ವಾಷರ್ಿಕ ವಿಶೇಷ ಶಿಬಿರ ಮಾಚರ್್ 31ರಿಂದ ಏಪ್ರಿಲ್ 6 ವರೆಗೆ ತಾಲ್ಲೂಕಿನ ಬಗ್ಗನಹಳ್ಳಿಯಲ್ಲಿ ನಡೆಯಲಿದೆ.
ಏಪ್ರಿಲ್31ರಂದು ನಡೆಯುವ ಉದ್ಘಾಟನಾ ಸಮಾರಂಭ ಸಂಜೆ 6ಕ್ಕೆ ಏರ್ಪಡಿಸಿದ್ದು ಕಾಲೇಜಿನ ಸಂಸ್ಥಾಪಕ ಕಾರ್ಯದಶರ್ಿ ಪ್ರೊ.ಎಂ.ರೇಣುಕಾರ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಾಂಶುಪಾಲ ಪ್ರೊ.ಎಸ್.ಎಲ್.ಶಿವಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಹೆಚ್.ಎಸ್.ಶಿವಯೋಗಿ, ಶಿವಪ್ರಸಾದ್, ತಾ.ಪಂ.ಸದಸ್ಯೆ ಹೊನ್ನಮ್ಮ, ಗ್ರಾ.ಪಂ.ಅಧ್ಯಕ್ಷೆ ದ್ರಾಕ್ಷಾಯಣಮ್ಮ, ಚಂದ್ರಶೇಖರಯ್ಯ, ಗ್ರಾಮಸ್ಥರಾದ ಶಂಕರಯ್ಯ, ಚನ್ನಬಸವಯ್ಯ, ಪತ್ರಕರ್ತರಾದ ಗಿರೀಶ್, ಸಿ.ಬಿ.ಲೋಕೇಶ್ ಮತ್ತಿತರರು ಉಪಸ್ಥಿತರಿರುವರು.