Thursday, January 20, 2011

ಪುರಸಭಾ ಆಡಳಿತ ಪಕ್ಷದ ಸದಸ್ಯನಿಗೆ ಕಪಾಳ ಮೋಕ್ಷ
ಚಿಕ್ಕನಾಯಕನಹಳ್ಳಿ,ಜ.19: ಇಲ್ಲಿನ ವಿರೋಧ ಪಕ್ಷದ ಸದಸ್ಯರೊಬ್ಬರು ಆಡಳಿತ ಪಕ್ಷದ ಸದಸ್ಯರಿಗೆ ಕಪಾಳ ಮೋಕ್ಷ ಮಾಡಿದ ಪೂರ್ಣ ಸರಿಹೊಂದಿಸುಅಪರೂಪದ ಘಟನೆ ನಡೆಯಿತು.
ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಂತಹ ಅಪರೂಪದ ಘಟನೆ ಕಪ್ಪು ಚುಕ್ಕಿಯಾಗಿ ಉಳಿಯಿತು. ಸಭೆಯ ಅಜಾಂಡಾದಲ್ಲಿ ಸೇರ್ಪಡೆಯಾಗದಿರುವ ಆಶ್ರಯದ ಸಮಿತಿಯ ಹಕ್ಕು ಮತ್ತು ಜವಬ್ದಾರಿಯ ಬಗ್ಗೆ ಬಂದ ವಿಷಯದ ಮೇಲೆ ವಿರೋಧ ಪಕ್ಷವಾದ ಕಾಂಗ್ರೆಸ್ನ ಸಿ.ಬಸವರಾಜು ಮಾತನಾಡುತ್ತಾ, ನಾವು ಚುನಾಯಿತರಾಗುವ ಮುನ್ನ ಜನರಿಗೆ ಸೈಟ್ ಕೊಡಿಸುತ್ತೇವೆ, ಮನೆ ಕೊಡಿಸುತ್ತೇವೆ ಎಂದೆಲ್ಲಾ ಭರವಸೆ ನೀಡಿ ಗೆದ್ದು ಬಂದಿರುತ್ತೇವೆ. ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಜವಬ್ದಾರಿ ನಮ್ಮದು, ಆದರೆ ಆಶ್ರಯ ಸಮಿತಿಯಲ್ಲಿ ನಮ್ಮ ಮಾತು ನಡೆಯದಿದ್ದರೆ ಹೇಗೆ ?. ಆ ಸಮಿತಿಯಲ್ಲಿ ಶಾಸಕರು ತಹಶೀಲ್ದಾರ್ ಪುರಸಭಾ ಅಧ್ಯಕ್ಷರು ಅಷ್ಟೇ ಜನರು ನಿಧರ್ಾರ ತೆಗೆದುಕೊಂಡರೆ ಹೇಗೆ ನಮ್ಮ ಮಾತಿಗೂ ಅಲ್ಲಿ ಬೆಲೆ ಇರಬೇಕು, ಆಗಾಗಿ ಆಶ್ರಯ ಸಮಿತಿ ಸಭೆ ಸೇರುವುದಕ್ಕಿಂತ ಮೊದಲು ಶಾಸಕರು ಮತ್ತು ಪುರಸಭಾ ಅಧ್ಯಕ್ಷರು ಸದಸೆರೆಲ್ಲರ ಸಭೆ ಕರೆದು ಸಭೆಯಲ್ಲಿ ಪ್ರತಿ ವಾಡರ್್ಗೆ ಇಂತಿಷ್ಟು ಸೈಟ್ಗಳೆಂದು ಎತ್ತಿಡಿ, ನಾವು ಫಲಾನುಭವಿಗಳ ಪಟ್ಟಿ ಕೊಡುತ್ತೇವೆ, ನಮ್ಮ ಈ ಸಭೆಯಲ್ಲಿ ಸಿದ್ದ ಪಡಿಸಿದ ಪಟ್ಟಿಯನ್ನು ಪುರಸಭಾಧ್ಯಕ್ಷರು ಆಶ್ರಯ ಸಮಿತಿಯ ಸಭೆಯಲ್ಲಿ ಮಂಡಿಸಲಿ ಸಭೆ ಅದಕ್ಕೆ ಅನುಮೋದನೆ ನೀಡಿದರೆ ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಂತಾಗುತ್ತದೆ ಎಂದು ಕಾಂಗ್ರೆಸ್ನ ಸದಸ್ಯ ಸಿ.ಬಸವರಾಜು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ ಹಾಗೂ ಕೆಲವು ಆಡಳಿತ ಪಕ್ಷದ ಸದಸ್ಯರು ಸಭೆಯ ಗಮನಕ್ಕೆ ತಂದರು ಈ ಸಂದರ್ಭದಲ್ಲಿ ಜೆ.ಡಿ.ಯುನ ಸದಸ್ಯ ಸಿ.ಡಿ.ಚಂದ್ರಶೇಖರ್ ತನ್ನ ಕುಚರ್ಿಯಿಂದ ಎದ್ದು ಬಂದು ನೇರ ಅಧಿಕಾರಿ ವರ್ಗ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದ ಟೇಬಲ್ ಬಳಿ ಬಂದು, ಎಲ್ರಿ ಕೊಡ್ರಿ ಇಲ್ಲಿ ಆಶ್ರಯ ಸಮಿತಿ ನಡಾವಳಿ ಪುಸ್ತಕವನ್ನು ಎನ್ನುತ್ತಲೆ ಪುಸ್ತಕವನ್ನು ತೆಗೆದು ಎತ್ತಿ ತೋರಿಸಿದರು. ಮತ್ತೋರ್ವ ಕಾಂಗ್ರೆಸ್ ಸದಸ್ಯ ಸಿ.ಪಿ ಮಹೇಶ್ ಈ ಪುಸ್ತಕದಲ್ಲಿ ಸಮಿತಿಯಲ್ಲಿದ್ದವರ್ಯಾರು ಸಹಿಯನ್ನೇ ಹಾಕಿಲ್ಲ ನೋಡಿ ಎಂದು ತೋರಿಸಿದರು.
ಈ ಸಮಯಕ್ಕೆ ಸರಿಯಾಗಿ ಅಧ್ಯಕ್ಷರ ಟೇಬಲ್ ಬಳಿ ಇದ್ದ ಇನ್ನೊಂದು ನಡಾವಳಿ ಪುಸ್ತಕವನ್ನು ಕೈಗೆತ್ತಿಕೊಂಡ ಆಡಳಿತ ಪಕ್ಷದ ಸದಸ್ಯ ಎಂ.ಎನ್.ಸುರೇಶ್ ಈ ಪುಸ್ತಕದಲ್ಲಿ ಸಹಿ ಇದೆ ನೋಡಿ ಎನ್ನುತ್ತಾ ಇನ್ನೊಂದು ಪುಸ್ತಕವನ್ನು ಎತ್ತಿ ತೋರಿಸುತ್ತಾ ರೀ ಅಧ್ಯಕ್ಷಕರೆ ಸದಸ್ಯರಿಗೆ ಸರಿಯಾಗಿ ಮಾಹಿತಿ ಕೊಡಿ ಎನ್ನುವ ಮಾತು ಪ್ರೆಸ್ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ರಕರ್ತರಾದಿಯಾಗಿ ಮುಂದೆ ಕುಳಿತಿದ್ದವರಿಗೆ ಕೇಳಿಸಿದ ಮಾತು.
ಆದರೆ ವಿರೋಧ ಪಕ್ಷದವರ ಕಡೆ ಕುಳಿತಿದ್ದ ನಾಮಿನಿ ಸದಸ್ಯರೊಬ್ಬರು ಕುರಿ ಕಾಯೋರಿಗೆ ಅಧ್ಯಕ್ಷಗಿರಿ ಕೊಟ್ರೆ ಹೀಗೆ ಎಂದು, ಸುರೇಶ್ ಹೇಳಿದರು ಎಂದು ಚಿತಾವಣೆ ಮಾಡಿ ಸಿ.ಬಸವರಾಜು ಸಿಟ್ಟಿಗೇಳುವಂತೆ ಮಾಡಿದರು. ಈ ಹಂತದಲ್ಲಿ ಕುಪಿತರಾದ ಸಿ.ಬಸವರಾಜು ನಿನ್ನ ಅಧ್ಯಕ್ಷ ಮಾಡಿದವರು ಕುರಿಕಾಯೋರು ಗೊತ್ತಾ! ನಮಗೆ ಆದೇಶ ನೀಡಲು ಬರುತ್ತೀಯ ಎನ್ನುತ್ತಲೇ ಸುರೇಶ್ ಮೇಲೆ ಎರಗಿ ಕಪಾಳಕ್ಕೆ ಒಂದು ತಟ್ಟೆ ಬಿಟ್ರು, ಈ ಸಂದರ್ಭದಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷದವರು ಕೆಲಕಾಲ ವಾದ ವಿವಾದ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ಎರಡೂ ಪಕ್ಷದವರನ್ನು ಸಮಾಧಾನ ಪಡಿಸಿದರು. ಈ ಸಭೆಯ ಅಜಾಂಡದಲ್ಲಿ ಇಲ್ಲದ ವಿಷಯ ಚಚರ್ಿಸೋದು ಬೇಡ ಮುಂದಿನ ದಿನ ಈ ವಿಷಯವಾಗಿ ಚಚರ್ಿಸೋಣ ಎಂದು ಎಲ್ಲರನ್ನು ಸಮಾಧಾನಿಸಿ ಸಭೆ ನಡೆಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್ ವಿರೋಧ ಪಕ್ಷದ ಬಾಬು ಸಾಹೇಬ್, ನಾಮಿನಿ ಸದಸ್ಯರುಗಳು ಇಂತಹ ದುರ್ಘಟನೆಗೆ ಸಾಕ್ಷಿಯಾಗಿದ್ದರು.